Categories
ಸಿನಿ ಸುದ್ದಿ

ಡ್ರೋಣ್ ಪ್ರಥಮ್ ಮೀಟ್ಸ್ ಡ್ರೋಣ್ ಪ್ರತಾಪ್ ; ಅಪೂರ್ವ ಸಂಗಮ ವಂತೆ ಮಾರಾಯ್ರೆ !

ಪ್ರತಾಪ್ ಹಾಗೂ ಪ್ರಥಮ್ ಸಮಾಗಮ ಅಪೂರ್ವ ಸಂಗಮವಂತೆ. ಹೀಗಂತ ಒಳ್ಳೆಹುಡುಗ ಪ್ರಥಮ್ ಬರೆದುಕೊಂಡಿದ್ದಾರೆ. ಮುಂದಿನ ವಾರದಿಂದ ಡ್ರೋಣ್ ಪ್ರಥಮ್ ಚಿತ್ರೀಕರಣವಂತೆ. ನಟನೆ ಜೊತೆಗೆ ನಿರ್ದೇಶನವೂ ಇವರದೇ

ಮೇಲ್ ಐಡಿ ಕೊಟ್ಟರೂ ಡ್ರೋಣ್ ಪ್ರಥಮ್ ಬಗ್ಗೆ ಹಿಂಟ್ ಬಿಟ್ಟುಕೊಡಲ್ಲ… ಬಿಟ್ಟು ಕೊಡಲ್ಲ… ಬಿಟ್ಟುಕೊಡಲ್ಲ…ಹೀಗಂತ ಪಟ್ಟಿಗೆ ಬಿದ್ದರೆ ಹಠಕ್ಕೆ ಬಿದ್ದು ಮತ್ತೇನು ಕೇಳೋದಕ್ಕೆ ಆಗುತ್ತೆ ಹೇಳಿ. ಆಯ್ತು ಬುಡು ಗುರು ನಿನಗೆ ಯಾವಾಗ ಹೇಳಬೇಕು ಅಂತ ಎನಿಸುತ್ತೋ ಆಗಲೇ ಹೇಳು ಅಂತ ಸುಮ್ಮನಾಗಿದ್ವಿ. ಇವತ್ತು, ದಿಢೀರ್ ಅಂತ ಡ್ರೋಣ್ ಪ್ರತಾಪ್ ನ ಮೀಟ್ ಮಾಡಿರುವ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಡ್ರೋಣ್ ಪ್ರಥಮ್ ಸಿನಿಮಾ ಕುರಿತಾಗಿ ಹೇಳಿಕೊಂಡಿದ್ದಾರೆ.

Pick of the year…!
Drone pratham meats @droneprathap !
ಇನ್ಮೇಲೆ ಇವ್ನು ನನ್ನ ತಮ್ಮ!!
#ಅಪೂರ್ವಸಂಗಮ!!
ನನ್ನ ತಮ್ಮ ಸಿಕ್ಬಿಟ್ಟ!!🤗

Dronepratham shoot starts from next week…!!!

ಡ್ರೋಣ್ ಹೆಸರಲ್ಲಿ ಸಿನಿಮಾ ಮಾಡ್ತೀನಿ ಅಂತ ಅನೌನ್ಸ್ ಮಾಡಿದಾಗಲೇ ಡ್ರೋಣ್ ಪ್ರತಾಪ್ ಕುರಿತಾದ ಕಥನ ಎನ್ನುವುದು ಬಹಿರಂಗವಾಗಿತ್ತು. ತೀರಾ ಇತ್ತೀಚಿಗೆ ಖಾಸಗಿ ಮಾಧ್ಯಮದ ಜೊತೆ ಮಾತನಾಡುತ್ತಾ ಡ್ರೋಣ್ ಪ್ರಥಮ್ ಟೈಟಲ್ ನಲ್ಲಿ ಮೂವೀ ಬರಲಿದೆ ಎನ್ನುವ ವಿಷ್ಯ ಹಂಚಿಕೊಂಡಿದ್ದರು. ಇದೀಗ ಕಲರ್ ಫುಲ್ ಡ್ರೋಣ್ ಹಾರಿಸಿದ ಮಂಡ್ಯದ ಹೈದ ಪ್ರತಾಪ್ ರನ್ನ ಭೇಟಿಮಾಡುವುದರ ಮೂಲಕ ‘ ಡ್ರೋಣ್ ಪ್ರಥಮ್ ‘ ಹೆಸರಿನ ಸಿನಿಮಾ ಡ್ರೋಣ್ ಪ್ರತಾಪ್ ಜೀವನ ಕುರಿತಾಗಿದ್ದೇ ಎನ್ನುವುದನ್ನು ಖಚಿತಪಡಿಸಿದ್ದಾರೆ.

ಪ್ರತಾಪ್ ಹಾಗೂ ಪ್ರಥಮ್ ಸಮಾಗಮ ಅಪೂರ್ವ ಸಂಗಮವಂತೆ. ಹೀಗಂತ ಒಳ್ಳೆಹುಡುಗ ಕಮ್ ಸೆನ್ಸೇಷನ್ ಸ್ಟಾರ್ ಪ್ರಥಮ್ ಅವರೇ ಬರೆದುಕೊಂಡಿದ್ದಾರೆ. ಮುಂದಿನ ವಾರದಿಂದ ಡ್ರೋಣ್ ಪ್ರಥಮ್ ಚಿತ್ರೀಕರಣಕ್ಕೆ ಧುಮುಕುವುದಾಗಿ ತಿಳಿಸಿದ್ದಾರೆ. ಪಾತ್ರಕ್ಕೋಸ್ಕರ 15 ಕೆಜಿ ತೂಕ ಇಳಿಸಿಕೊಳ್ತೀನಿ ಎಂದಿದ್ದರು. ಗೌರಿಗಣೇಶ, ಉಂಡುಹೋದ ಕೊಂಡುಹೋದ, ಯಾರಿಗೂ ಹೇಳಬೇಡ ಸಿನಿಮಾ ಶೈಲಿಯಲ್ಲಿ ಡ್ರೋಣ್ ಪ್ರಥಮ್ ಸಿನಿಮಾ ಮೂಡಿಬರುವುದಾಗಿ ಹೇಳಿಕೊಂಡಿದ್ದಾರೆ.ನಟನೆಯ ಜೊತೆಗೆ ನಿರ್ದೇಶನದ
ಹೊಣೆ ಕೂಡ ಹೊತ್ತಿದ್ದಾರೆ.

ದೇವ್ರಂತ ಮನುಷ್ಯ ಪ್ರಥಮ್ ಜೊತೆಗೆ ಡ್ರೋಣ್ ಹಾರ್ಸೋಕೆ ನೀಲಿ ಸುಂದರಿ ಬರುತ್ತಾರಂತೆ. ಮುಂಬೈ ಮತ್ತೊಬ್ಬ ನಟಿ ಪ್ರಥಮ್ ಗೆ ಜೋಡಿಯಾಗಲಿದ್ದಾರೆ. ಆ ಇಬ್ಬರು ತಾರೆಯರು ಯಾರು ಎನ್ನುವ ಸೀಕ್ರೇಟ್ ಇನ್ನೂ‌ ರಿವೀಲ್ ಆಗಿಲ್ಲ.‌ ಡ್ರೋಣ್ ಪ್ರತಾಪ್ ಕಥೆಯನ್ನ ಹಾಸ್ಯರೂಪದಲ್ಲಿ ಕಟ್ಟಿಕೊಡಬೇಕು ಎನ್ನುವ ಕನಸು ಕಂಡಿರುವ ಪ್ರಥಮ್, ಪ್ರಖ್ಯಾತ ರಾಜಕಾರಣಿಯೊಬ್ಬರಿಂದ ಲಾಂಚ್ ಮಾಡಿಸಬೇಕು ಎನ್ನುವ ಮಹದಾಸೆ ಹೊಂದಿದ್ದಾರೆ.

ಇಲ್ಲಿವರೆಗೂ ರಾಜಕೀಯ ಘಟಾನುಘಟಿ ನಾಯಕರಿಂದ ತಮ್ಮ ಸಿನಿಮಾ ಲಾಂಚ್ ಮಾಡಿಸಿರುವ ನಟ ಭಯಂಕರ ಪ್ರಥಮ್ ಅವರು, ಈ ಭಾರಿ ಡ್ರೋಣ್ ಹಾರ್ಸೋಕೆ ಯಾವ ರಾಜಕೀಯ ದಿಗ್ಗಜರನ್ನ ಕರೆತರುತ್ತಾರೆನ್ನುವ ಕೂತೂಹಲ ಇದ್ದೇ ಇದೆ. ಜೊತೆಗೆ ಯುವ ವಿಜ್ಞಾನಿ ಅಂತೆಲ್ಲಾ ಪುಕ್ಸಟ್ಟೆ ಖ್ಯಾತಿ ಪಡೆದ ಪ್ರತಾಪ್ ಈ ಚಿತ್ರದಲ್ಲೇನಾದರೂ ಪಾತ್ರ ಮಾಡುತ್ತಾರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಅದೆಲ್ಲದಕ್ಕೂ ಉತ್ತರ ಅತೀ ಶೀಘ್ರದಲ್ಲೇ ಸಿಗಲಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಆರು ತಿಂಗಳ ವಿಶೇಷ; ಹಾರ್ಟ್ ಹಂಚಿಕೊಂಡು ಖುಷಿಪಟ್ಟರಲ್ಲ ಅರವಿಂದ್- ದಿವ್ಯಾ !

ಹೊಡಿರೀ‌ ಹಲಗಿ ಎನ್ನಬೇಕೋ? ಹಚ್ಚಿ ಪಟಾಕಿ ಅಂತ ಹೇಳಬೇಕೋ ಗೊತ್ತಿಲ್ಲ, ಆದರೆ ‘ಅರ್ವಿಯಾ’ ಹಂಚಿಕೊಂಡಿರುವ ಈ ವಿಶೇಷ ಸುದ್ದಿಯನ್ನ ನಿಮ್ಮೊಟ್ಟಿಗೆ ಹಂಚಿಕೊಳ್ಳಲೆಬೇಕು.‌ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಗಳು, ಕ್ಯೂಟ್ ಜೋಡಿಯಾಗಿ ಕರುನಾಡಿನ ಅಂಗಳದಲ್ಲಿ ಮೆರವಣಿಗೆ ಹೊರಟವರು, ಅಭಿಮಾನಿ ದೇವರುಗಳಿಂದ ‘ಅರ್ವಿಯಾ ‘ ಅಂತ‌ ನಾಮಕರಣ ಮಾಡಿಸಿಕೊಂಡವರು ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ.

ಬಿಗ್ ಬಾಸ್ ಅಂಗಳಕ್ಕೆ ಕಾಲಿಡುವಾಗ ಅಪರಿಚಿತರಾಗಿದ್ದರು. ಅದೇ ದೊಡ್ಮನೆಯಿಂದ ಹೊರಬರುವಷ್ಟರಲ್ಲಿ ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾದರು.ಕೆಲವರ ಕಣ್ಣಲ್ಲಿ ಬೆಸ್ಟ್ ಫ್ರೆಂಡ್ಸ್ ನಂತೆ ಸುಳಿದಾಡಿದರು.ಇನ್ನೂ ಕೆಲವರ ಕಣ್ಣಲ್ಲಿ ಪ್ರಣಯ ಪಕ್ಷಿಗಳಂತೆ ನಲಿದಾಡಿದರು. ಹೀಗಾಗಿ, ಇವರಿಬ್ಬರ ನಡುವಿರುವುದು ಸ್ನೇಹಾನೋ ಪ್ರೀತಿನೋ ಎನ್ನುವುದಕ್ಕೆ ಇನ್ನೂ ಕ್ಲ್ಯಾರಿಟಿ ಸಿಕ್ಕಿಲ್ಲ. ಅಷ್ಟರಲ್ಲಿ ಈ ಜೋಡಿ ಬಿಗ್ ಬಾಸ್ ಪಯಣ ಶುರು ಮಾಡಿ ಆರು ತಿಂಗಳು ಉರುಳಿವೆ. ಆ ಖುಷಿ ಹಾಗೂ ಸಂತೋಷವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ರನ್ನರ್ ಅಪ್ಅರವಿಂದ್ ಕೆಪಿ ಸ್ಪೆಷಲ್ ಸಿಕ್ಸ್ ಅಂತ ಬರೆದುಕೊಂಡು ಮೂರು ಯೆಲ್ಲೋ, ಮೂರು ಬ್ಲಾಕ್ ಹಾರ್ಟ್‌ ಸಿಂಬಲ್ ಹಾಕಿಕೊಂಡಿದ್ದಾರೆ. ಇನ್ನೂ ದಿವ್ಯಾ ಉರುಡುಗ ಕೂಡ ಟ್ವೀಟ್ ಮಾಡಿದ್ದು ಆರು ತಿಂಗಳು ಹಂಗೇ ಕಳೆದೋಗಿದೆ ಇನ್ನೂ ಬಹುದೂರ ಹೋಗಬೇಕಿದೆ.ಪ್ರೀತಿಯಿರಲಿ ಎಂದಿದ್ದಾರೆ. ಕ್ಯೂಟಿ ಪೈ ದಿವ್ಯಾ ಒಂದು ಯೆಲ್ಲೋ ಹಾಗೂ ಒಂದು ಬ್ಲಾಕ್ ಹಾರ್ಟ್ ಕೊಟ್ಟಿದ್ದಾರೆ. ಅರವಿಂದ್ ಗಿಂತ ಕಮ್ಮಿ ಹಾರ್ಟ್ ಹಾಕಿ ಕಂಜೂಸ್ ಮಾಡಿದ್ದಾರೆ ದಿವ್ಯಾ ಮೇಡಂ.

ಅರ್ವಿಯಾ ಜೋಡಿಯ ಈ ಆರು ತಿಂಗಳ ಪಯಣವನ್ನ ಬರೀ ಅರವಿಂದ್ ಹಾಗೂ ದಿವ್ಯಾ ಮಾತ್ರ ಸಂಭ್ರಮಿಸಿಲ್ಲ, ಬದಲಾಗಿ ಇವರಿಬ್ಬರ ಫ್ಯಾನ್ಸ್ ಕೂಡ ಹಬ್ಬದಂತೆ ಸಂಭ್ರಮಿಸಿದ್ದಾರೆ. ಕಾಮನ್ ಡಿಪಿ‌ ರಿಲೀಸ್ ಮಾಡಿ ತಮ್ಮ ಫೀಲಿಂಗ್ಸ್ ನ ಶೇರ್ ಮಾಡಿಕೊಂಡು ಅರ್ವಿಯಾ ಜೋಡಿನಾ ಸೋಷಿಯಲ್ ಲೋಕದಲ್ಲಿ ಹೊತ್ತು ಮೆರೆಸುತ್ತಿದ್ದಾರೆ. ಅರ್ವಿಯಾ ಕೇವಲ ಹೆಸರಲ್ಲ , ಅದೊಂದು ಎಮೋಷನ್ಸ್ ಅಂತೆಲ್ಲಾ ಭಾವುಕರಾಗಿ ಗೀಚುತ್ತಿದ್ದಾರೆ.

ಫ್ಯಾನ್ಸ್ ಸಮೂಹದಲ್ಲಿ ಕೆಲವರು ಅರ್ವಿಯಾ ಜೋಡಿ ಫ್ರೆಂಡ್ಸಾಗಿರಲಿ ಅಂತ ಹೇಳಿಕೊಂಡ್ರೆ, ಇನ್ನೂ ಕೆಲವರು ರಿಯಲ್ ಲೈಫ್ ನಲ್ಲಿ ಇವರಿಬ್ಬರು ಒಂದಾಗಬೇಕು ಅಂತ ಆಸೆಪಡ್ತಿದ್ದಾರೆ. ಅರ್ಧವರ್ಷ ಬಿಗ್ ಬಾಸ್ ಜರ್ನಿ ಕಂಪ್ಲೀಟ್ ಮಾಡಿರುವ ಅರವಿಂದ್ ಹಾಗೂ ದಿವ್ಯಾ ಜೀವನಪೂರ್ತಿ ಜೊತೆಯಾಗಿ ಬದುಕಬೇಕು ಅಂತ ಇಂಗಿತ ವ್ಯಕ್ತಪಡಿಸ್ತಿದ್ದಾರೆ. ಅಷ್ಟಕ್ಕೂ ಅರ್ವಿಯಾ ಜೋಡಿ ನಡುವೆ ಇರುವುದು ಸ್ನೇಹಾನೋ- ಪ್ರೀತಿನೋ ಗೊತ್ತಿಲ್ಲದೇ ಇರೋದ್ರಿಂದ ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರಿಗೆ ಯಾವಾಗ ಫ್ಯಾನ್ಸ್ ಆಸೆ ಈಡೇರಿಸ್ತೀರಾ ಅಂತ ಕೇಳೋದು‌ ಕಷ್ಟ. ಹೀಗಾಗಿ, ಅವರಿಬ್ಬರೇ ಅನೌನ್ಸ್ ಮಾಡುವರೆಗೆ ಕಾಯಬೇಕು.ಅಲ್ಲಿವರೆಗೂ ಬೊಂಬಾಟ್ ಜೋಡಿಯ ಬಿಗ್ ಬಾಸ್ ಕ್ಲಿಪಿಂಗ್ಸ್ ನೋಡಿಕೊಂಡು ಎಂಜಾಯ್ ಮಾಡಿ

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಹಂಗಾದ್ರೆ ಇಲ್ಲಿ ಹೆಣ್ಮಕ್ಕಳು ಹುಟ್ಲೇಬಾರ್ದಾ ; ನಟಿ ಮೇಘಶ್ರೀ ಹೀಗೆ ಸಿಟ್ಟಿನಲ್ಲಿ ಪ್ರಶ್ನಿಸಿದ್ದೇಕೆ ಗೊತ್ತಾ

ನಂಗೆ ಬಾಯಲ್ಲಿ ಒಂದಷ್ಟು ಪದ ಬರ್ತವೆ ಆದ್ರೆ, ಅದೆಲ್ಲ ಹೇಳೋದಿಕ್ಕೆ ಆಗೋದಿಲ್ಲ. ವ್ಯವಸ್ಥೆ ಬಗ್ಗೆ ಅಷ್ಟು ಸಿಟ್ಟು ಬರುತ್ತೆ….!


ಬಿಗ್ ಬಾಸ್ ಖ್ಯಾತಿಯ ನಟಿ ಮೇಘಶ್ರೀ ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದು ಮೈಸೂರು ಘಟನೆಯ ವಿರುದ್ಧ. ಹೌದು, ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸ್ಯಾಂಡಲ್ ವುಡ್ ಕೂಡ ಬೆಚ್ಚಿ ಬಿದ್ದಿದೆ. ಒಂದೆಡೆ ಗ್ಯಾಂಗ್ ರೇಪ್ ಪ್ರಕರಣದ ಬೆನ್ನಲೇ ಮೈಸೂರು ವಿಶ್ವ ವಿದ್ಯಾಲಯವೂ ವಿವಿ ಆವರಣದಲ್ಲಿ ವಿದ್ಯಾರ್ಥಿನಿಯರು ಸಂಜೆ 6.30 ರ ನಂತರ ಹೊರಗಡೆ ತಿರುಗಾಡುವಂತಿಲ್ಲ ಎಂದು ಆದೇಶಹೊರಡಿಸಿದ್ದು, ಇದು ಭಾರೀ ವಿರೋಧಕ್ಕೆ ಮಾಡಿಕೊಟ್ಟಿದೆ. ಅತ್ಯಾಚಾರ ನಡೆಯುತ್ತೆ, ಹೊರಗೆ ಹೋಗ್ಬೇಡಿ ಅಂತ ರೂಲ್ಸ್ ಮಾಡುವ ಮಹಿಳೆಯನ್ನು ಕಟ್ಟಿ ಹಾಕುವ ಹುನ್ನಾರ ನಡೆದಿದೆ. ಇದು ಖಂಡನೀಯ ಎಂದು ಹಲವು ನಟಿಯರು ರಿಯಾಕ್ಟ್ ಮಾಡಿದ್ದಾರೆ. ಅದೇ ರೀತಿ ನಟಿ ಮೇಘಶ್ರೀ ‘ಸಿನಿಲಹರಿ’ಯೊಂ ದಿಗೆ ಮಾತನಾಡುತ್ತಾ, ಮೈಸೂರು ಘಟನೆಯ ವಿರುದ್ಧ ಕೆಂಡಕಾರಿದರು. ಇಂತಹ ಕ್ರೂರಿಗಳಿಗೆ ಕಠಿಣ ಶೀಕ್ಷೆ ಆಗಬೇಕೆಂದು ಆಗ್ರಹಿಸಿದರು. ಹಾಗೆಯೇ ಮೈಸೂರು ವಿಶ್ವ ವಿದ್ಯಾಲಯದ ಆದೇಶದ ವಿರುದ್ಧವೂ ಹರಿಹಾಯ್ದರು.

‘ಹೆಣ್ಣು ಮಕ್ಕಳಿಗೆ ಒಂದು ಮಾತು ಹೇಳೋದಿಕ್ಕೆ ಇಷ್ಟ ಪಡುತ್ತೇನೆ, ದಯವಿಟ್ಟು ನೀವು ಸೇಪ್ ಆಗಿರಿ. ಯಾಕಂದ್ರೆ ಇಂಡಿಯಾದಲ್ಲಿ ಹೆಣ್ಮುಕ್ಕಳು ಸೇಪ್ ಇಲ್ಲ. ಅಟ್ ದ ಸೇಮ್ ಟೈಮ್, ರೇಪಿಸ್ಟ್ ಗಳಿಗೂ ಇಲ್ಲಿ ಸರಿಯಾದ ಶಿಕ್ಷೆ ಇಲ್ಲ. ಕಠಿಣ ಶಿಕ್ಷೆ ಇದಿದ್ದರೆ, ಇದೆಲ್ಲ ಆಗ್ತಿರಲಿಲ್ಲ. ನೀವೇ ನೋಡಿ, ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಒಂದು ಘಟನೆ ನಡೆಯಿತು. ಸಿಟಿ ಬಸ್ ನಲ್ಲಿಯೇ ಒಂದು ಹುಡುಗಿ ಮೇಲೆ ರೇಪ್ ನಡೆಯಿತು. ಆದಾದ ಮೇಲೆ ಏನಾಯ್ತು, ಈ ಪ್ರಕರಣ ದೊಡ್ಡಾಗಿ ಸುದ್ದಿ ಆಯ್ತು, ದೇಶದಲ್ಲಿ ಪ್ರತಿಭಟನೆ ನಡೆದವು. ಅದಕ್ಕೋಸ್ಕರ ಕೆಲವರನ್ನು ಹಿಡಿದ್ರು. ಅಲ್ಲಿಂದ ಅವರನ್ನು ಒಂದಷ್ಟು ವರ್ಷಗಳ ಕಾಲ ಅತ್ಯಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸಿ, ಒಂದಷ್ಟು ಅವರಿಗೆ ಸೌಲಭ್ಯ ಕೊಟ್ಟು, ಒಂದಷ್ಟು ಸಾರ್ವಜನಿಕರ ಹಣ ಖರ್ಚು ಮಾಡಿ ಕೊನೆಗೆ ಗಲ್ಲಿಗೆ ಹಾಕಿದ್ರು. ಇಷ್ಟು ನಿಧಾನಗತಿಯ ಪ್ರಕ್ರಿಯೆಯವೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ. ಕ್ರೂರಿಗಳಿಗೆ ಕಠಿಣ ಶಿಕ್ಷೆ ಅಂತ ಇದಿದ್ದರೆ, ಮಹಿಳೆಯರ ಮೇಲೆ ಇಂತಹ ಅಮಾನುಷ ಘಟನೆಗಳು ನಡೆಯುತ್ತಿರಲಿಲ್ಲ ಎಂದರು ನಟಿ ಮೇಘಶ್ರೀ.

ಆರು ಗಂಟೆಯ ಮೇಲೆ ವಿದ್ಯಾರ್ಥಿನಿಯರು 6.30 ಮೇಲೆ ಹೊರಗಡೆ ಹೋಗಬಾರದು ಅಂದ್ರೆ ಅದರರ್ಥ ಏನು? ಇವ್ರೆಲ್ಲ ಯಾವ್ ಥರ ಯೋಚ್ನೆ ಮಾಡುತ್ತಾರೋ ನಂಗೆ ಅರ್ಥವೇ ಆಗುತ್ತಿಲ್ಲ. ನಿಮ್ಮ ಪ್ರಕಾರ ಬೆಳಗ್ಗೆ ಹೊತ್ತು ಹುಡುಗಿಯರಮೇಲೆ ರೇಪ್ ಕೇಸ್ ನಡೆದಿಲ್ಲವೇ? ಚಿಕ್ಕ ಚಿಕ್ಕ ಮಕ್ಕಳ ಮೇಲೆಯೇ ರೇಪ್ ಆಗಿದೆ. ಹಂಗಂದ್ರೆ ಹೆಣ್ಣು ಮಕ್ಕಳು ಎಲ್ಲಿಗೂ ಹೋಗಬಾರದು ಅಂತನಾ? ನೀವೆಲ್ಲ ಯಾವ ಥರ ಯೋಚ್ನೆ ಮಾಡ್ತಿರೋ ಅರ್ಥ ಆಗ್ತಿಲ್ಲ. ನಂಗೆ ಬಾಯಲ್ಲಿ ಒಂದಷ್ಟು ಪದ ಬರ್ತವೆ ಆದ್ರೆ ಅದೆಲ್ಲ ಹೇಳಿದ್ರೆ ನಾವೇ ಸಣ್ಣವರಾಗ್ತೀವಿ, ಅದಿಲ್ಲ ಬೇಡ, ಮಹಿಳೆಯನ್ನು ರಕ್ಷಣೆ ಮಾಡಬೇಕಾದವರು ನೀವು, ನೀವು ಜವಾಬ್ದಾರಿಗಳನ್ನು ಮರೆತು ಹೆಣ್ಣು ಮಕ್ಕಳದ್ದೇ ತಪ್ಪು, ಅವರು ಎಲ್ಲಿಗೂ ಹೋಗಬಾರದು ಅಂತೆಲ್ಲ ಮಾತನಾಡುತ್ತಾ ಹೊರಟರೆ ಮಹಿಳೆಯರನ್ನು ಇದು ಕಟ್ಟಿ ಹಾಕುವ ಹುನ್ನಾರವೇ ಅಲ್ಲವೇ? ಹೆಣ್ಣು ಮಕ್ಕಳು ಎಲ್ಲಿಗೆ ಹೋಗಬಾರದು ಅಂತ ಹೇಳ್ತಾರೆ ಅಂದ್ರೆ, ಅವರು ಹೋದ್ರೆ ರೇಪ್ ಆಗುತ್ತೆ ಅಂತನಾ? ಹಾಗೆ ಅಲ್ವಾ ಇವ್ರ ಮಾತು? ಎನ್ನುತ್ತಾ ಖಾರವಾಗಿ ಪ್ರಶ್ನಿಸಿದರು ನಟಿ ಮೇಘಶ್ರೀ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕಿಚ್ಚನ ಗೋಲ್ಡನ್ ಜ್ಯೂಬ್ಲಿಗೆ ಡೈಮೆಂಡ್ ಸಪ್ರೈಸ್‌ : ಫ್ಯಾನ್ಸ್‌ ತಯಾರಿ ಹೇಗಿದೆ ಗೊತ್ತಾ?

ಗುಂಪು ಸೇರೋ ಹಾಗಿಲ್ಲ, ಕೇಕ್‌ ಕಟ್‌ ಮಾಡೋ ಹಾಗಿಲ್ಲ, ಹಾರ- ತುರಾಯಿ ಹಾಕೋ ಹಾಗಿಲ್ಲ, ಇಷ್ಟಾಗಿಯೂ ಕಿಚ್ಚನ ಫ್ಯಾನ್ಸ್‌ ಅದ್ದೂರಿ ಬರ್ತ್‌ ಡೇ ಆಚರಣೆಗೆ ಮುಂದಾಗಿದ್ದಾರೆ. ಹಾಗಾದ್ರೆ ಹೇಗೆ, ಈ ಸ್ಟೋರಿ ನೋಡಿ…

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೋಲ್ಡನ್ ಜ್ಯೂಬ್ಲಿ ಸೆಲಬ್ರೇಷನ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಬಾದ್ ಷಾ ಬರ್ತ್‌ ಡೇನಾ ಅದ್ದೂರಿಯಾಗಿ ಆಚರಣೆ ಮಾಡೋದಕ್ಕೆ ಫ್ಯಾನ್ಸ್ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಪ್ರತಿವರ್ಷದಂತೆ ಶಾಂತಿನಿವಾಸದ ಮುಂದೆ ಸಾಗರೋಪಾದಿಯಲ್ಲಿ ಫ್ಯಾನ್ಸ್ ಸೇರುವುದಿಲ್ಲ. ಕೇಕ್ ಕಟ್ ಮಾಡಿ ಕೇಕೆ ಹಾಕುವುದಕ್ಕೆ- ಹಾರ-ತುರಾಯಿ ಹಾಕಿ ಕುಣಿದು ಕುಪ್ಪಳಿಸುವುದಕ್ಕೆ ಕೊರೊನಾ ಅಡ್ಡಿಯಾಗಿದೆ. ಹೀಗಾಗಿ, ಕಿಚ್ಚ ತಾವುಗಳು ಇದ್ದಲಿಂದಲೇ ಶುಭಾಶಯ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮಾಣಿಕ್ಯನ ಮಹದಾಸೆಯಂತೆ ಸುದೀಪಿಯನ್ಸ್ ತಾವಿರುವ ಜಾಗದಿಂದಲೇ ವಿಷಸ್‌ನ ಕಳುಹಿಸಿಕೊಡ್ತಿದ್ದಾರೆ. ಅಟ್ ದಿ ಸೇಮ್ ಟೈಮ್ ಆಲ್ ಇಂಡಿಯಾ ಕಟೌಟ್‌ನ ಡೈಹಾರ್ಡ್ ಅಭಿಮಾನಿಗಳು ತಾವಿರುವ ಜಾಗದಲ್ಲೇ ಭರ್ಜರಿಯಾಗಿ ಕಿಚ್ಚನ ಬರ್ತ್ಡೇನಾ ಸೆಲೆಬ್ರೇಟ್ ಮಾಡೋದಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.

ಕಳೆದ ವರ್ಷವಂತೂ ಕೊರೊನಾದಿಂದ ಕಿಚ್ಚನ ಹುಟ್ಟುಹಬ್ಬ ಆಚರಣೆ ಮಾಡೋದಕ್ಕೆ ಆಗಲಿಲ್ಲ. ಈ ವರ್ಷವಾದರೂ ಶಾಂತಿನಿವಾಸದ ಮುಂದೆ ಹಬ್ಬ ಮಾಡಬೇಕು ಎಂದು ಕಿಚ್ಚನ ಎಲ್ಲಾ ಫ್ಯಾನ್ಸ್ ಫಿಕ್ಸಾಗಿದ್ದರು. ಆದರೆ. ಕೊರಾನಾತಂಕ ಮುಂದುವರೆದಿರುವುದರಿಂದ ಈ ವರ್ಷವೂ ಕೋಟಿಗೊಬ್ಬ ಹುಟ್ಟುಹಬ್ಬ ಆಚರಣೆ ಬೇಡ ಎಂದಿದ್ದಾರೆ. ಇದರಿಂದ ಸಹಜವಾಗಿ ಫ್ಯಾನ್ಸ್ ಗೆ ಕೊಂಚ ಬೇಜಾರಾಗಿದೆ. ಹೀಗೆ ಅಪ್‌ಸೆಟ್ ಆಗಿರುವ ಫ್ಯಾನ್ಸ್‌ ಗೆ ಸುದೀಪ್ ಬಿಗ್ ಸಪ್ರೈಸ್‌ ಕೊಡ್ತಿದ್ದಾರೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ `ವಿಕ್ರಾಂತ್ ರೋಣ’ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗ್ತಿದೆ. ಹೊಸ ಪೋಸ್ಟರ್ ಬಿಡುವ ಮೂಲಕ ನಿರ್ದೇಶಕ ಅನುಪ್ ಭಂಡಾರಿ ವಿಷಯ ತಿಳಿಸಿದ್ದಾರೆ. ವಿಕ್ರಾಂತ್ ರೋಣನ ನಯಾ ಸಮಾಚಾರ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ನಟ ಕಿಚ್ಚ ಸುದೀಪ್ ಅವರಿಗೆ ಈ ವರ್ಷದ ಬರ್ತ್‌ ಡೇ ತುಂಬಾ ಸ್ಪೆಷಲ್. ಭರ್ತಿ ೫೦ನೇ ವರ್ಷಕ್ಕೆ ಕಾಲಿಡುತ್ತಿರುವ ಕಿಚ್ಚನ ಗೋಲ್ಡನ್ ಜ್ಯೂಬಿಲಿ ಸೆಲಬ್ರೇಟ್ ಮಾಡೋದಕ್ಕೆ ಫ್ಯಾನ್ಸ್ ಜೊತೆಗೆ ಅವರ ಕುಟುಂಬಸ್ಥರು ಹಾಗೂ ಆಪ್ತರು ಜೋರಾಗಿಯೇ ತಯಾರಿ ಮಾಡಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ರನ್ನನಿಗೆ ಡೈಮೆಂಡ್ ರೀತಿಯ ಸಪ್ರೈಸ್‌ ಗಳನ್ನು ಕೊಡೋದಕ್ಕೆ ಚಿತ್ರತಂಡಗಳು ಕೂಡ ಪ್ಲ್ಯಾನ್ ಮಾಡಿಕೊಂಡಿವೆ. ವಿಕ್ರಾಂತ್ ರೋಣ ಜೊತೆಗೆ ಕೋಟಿಗೊಬ್ಬ-೩ ಟೀಮ್, ಕಬ್ಜಾ ಫಿಲ್ಮ್ ಟೀಮ್ ಕಡೆಯಿಂದ ಫಸ್ಟ್ ಲುಕ್ ಹಾಗೂ ಪೋಸ್ಟರ್- ಟೀಸರ್‌ಗಳನ್ನ ಫ್ಯಾನ್ಸ್ ನಿರೀಕ್ಷೆ ಮಾಡ್ತಿದ್ದಾರೆ. ಆಲ್ ಇಂಡಿಯಾ ಕಟೌಟ್‌ಗೆ ಯಾವ್ ರೀತಿಯ ಗಿಫ್ಟ್‌ ಗಳು ಹರಿದುಬರಲಿವೆ ವೇಯ್ಟ್ ಅಂಡ್ ಸೀ..

  • ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಹೊಟ್ಟೆಗೆ ಬೆಂಕಿಹಾಕಿಕೊಂಡು ಕಣ್ಣಕ್ಕಿಳಿದ ಗೌರಮ್ಮ; ಮೋಹಕತಾರೆನಾ ಮೆಚ್ಚಲೆಬೇಕು ಕಣ್ರೀ !?

ಮೋಹಕ ತಾರೆ ರಮ್ಯಾ ಸಿಟ್ಟಾಗಿದ್ದಾರೆ. ಮೈಸೂರು ಘಟನೆಯ ಸುದ್ದಿ ಕೇಳಿ ಹೊಟ್ಟೆಗೆ ಬೆಂಕಿಹಾಕಿಕೊಂಡು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಮಹಿಳೆ ಮೇಲೆ ಎಷ್ಟು ದಿನ ಈ ದಬ್ಬಾಳಿಕೆ, ದೌರ್ಜನ್ಯ ಅಂತ ಒಂದೇ ಸಮನೆ ಕಿಡಿಕಾರಿದ್ದಾರೆ. ಹಾಗಾದ್ರೆ ರಮ್ಯಾ ಅವರು ಹೇಳಿದ್ದೇನು ಅಂತ ಇಲ್ಲಿದೆ ನೋಡಿ.

ಸ್ಯಾಂಡಲ್‌ವುಡ್‌ನ ಮೋಹಕತಾರೆ, ರಾಜ್ಯ ರಾಜಕೀಯದ ದಿಲ್ಲಿ ಮೇಡಂಗೆ ಒಂದು ಸೆಲ್ಯೂಟ್ ಹೊಡಿಯಲೇಬೇಕು. ಅದೆಲ್ಲೋ ಫಾರಿನ್‌ನಲ್ಲಿ ಸೆಟಲ್ ಆಗಿ ಐಷರಾಮಿ ಲೈಫ್‌ ಲೀಡ್ ಮಾಡ್ತಿರುವ ಚಂದನವನದ ಗೌರಮ್ಮ ಕಣ್ಮುಚ್ಚಿಕೊಂಡು ಕೂರದೇ ಕರುನಾಡಿನಲ್ಲಿ ಆದಂತಹ ಕ್ರೂರಕೃತ್ಯವನ್ನು ಖಂಡಿಸಿದ್ದಾರೆ. ಸುದ್ದಿ ಕೇಳಿ ಹೊಟ್ಟೆಗೆ ಬೆಂಕಿಹಾಕಿಕೊಂಡ ದಿಲ್ಲಿ ಮೇಡಂ ಕಣ್ಣುಕೆಂಪಗೆ ಮಾಡಿಕೊಂಡು ಫೀಲ್ಡಿಗಿಳಿದಿದ್ದಾರೆ. ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ-ದಬ್ಬಾಳಿಕೆ-ನಿಂದನೆಯನ್ನು ಕುರಿತು ಪ್ರಶ್ನೆ ಮಾಡಿದ್ದಾರೆ.

ಸಿನಿಮಾರಂಗ ಹಾಗೂ ರಾಜಕೀಯ ರಂಗದಿಂದ ದೂರ ಉಳಿದಿರುವ ಮೋಹಕತಾರೆ ರಮ್ಯಾ ಮೇಡಂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಅಖಾಡಕ್ಕೆ ಧುಮ್ಕುತ್ತಾರೆ. ಒಳ್ಳೆಯದ್ದನ್ನು ಪ್ರೋತ್ಸಾಹಿಸುತ್ತಾರೆ ಕೆಟ್ಟದನ್ನು ಪ್ರಶ್ನೆಮಾಡ್ತಾರೆ. ಸಮಾಜಕ್ಕೊಂದು ಸಂದೇಶ ಹಾಗೂ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಂತಹ ಸಾಮೂಹಿಕ ಅತ್ಯಾಚಾರದ ಸುದ್ದಿ ಕೇಳಿ ಬೇಸರಗೊಂಡ ಮೋಹಕತಾರೆ ಹೀನಕೃತ್ಯದ ವಿರುದ್ದ ಧ್ವನಿಎತ್ತಿದ್ದಾರೆ. ಗಂಡಸರು ಏನೇ ತಪ್ಪು ಮಾಡಿದರೂ ಕೊನೆಗೆ ಅದನ್ನು ತಂದು ಹೆಣ್ಣುಮಕ್ಕಳ ತಲೆಗೆ ಕಟ್ಟುವ ಕೆಟ್ಟಪದ್ದತಿ ಹಾಗೂ ಸೊಸೈಟಿ ವಿರುದ್ದ ಪದ್ಮಾವತಿ ತಿರುಗಿ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘ ಪೋಸ್ಟ್ ಹಾಕುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರುಷರು ಏನೇ ತಪ್ಪು ಮಾಡಲಿ ಕೊನೆಗೆ ಅದು ಮಹಿಳೆಯರ ಮೇಲೆ ಬರುತ್ತೆ. ಅತ್ಯಾಚಾರ-ದೈಹಿಕ ಹಲ್ಲೆ-ಮಾನಸಿಕ ಹಿಂಸೆ ಹೀಗೆ ಯಾವುದೇ ಇರಲಿ ಪುರುಷರು ಮಾಡುವ ಈ ಘನಕಾರ್ಯಕ್ಕೆ ಮಹಿಳೆಯರು ನಿಂದನೆಗೊಳಗಾಗಬೇಕಾದ ಪರಿಸ್ಥಿತಿ. ಈಗ ಅತ್ಯಾಚಾರಕ್ಕೊಳಗಾಗಿರುವ ಮೈಸೂರಿನ ವಿಧ್ಯಾರ್ಥಿನಿಯ ಪರಿಸ್ಥಿತಿಯೂ ಇದೇ ಆಗಿದೆ. ರಾತ್ರಿ ವೇಳೆ ಚಾಮುಂಡಿ ಬೆಟ್ಟದ ತಪ್ಪಲಿಗ್ಯಾಕೆ ಹೋಗಬೇಕಾಗಿತ್ತು ಅಂತ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಈ ರೀತಿ ಪ್ರಶ್ನೆ ಮಾಡುವವರ ವಿರುದ್ದ ಕಿಡಿಕಾರಿರುವ ರಮ್ಯ ಮೇಡಂ, ನಿಂದೇ ತಪ್ಪು, ಹೊರಗಡೆ ಹೋಗಬಾರದಿತ್ತು, ನೀನು ಹಂಗೆ ಮಾಡಬಾರದಿತ್ತು, ಹಂಗೆ ಹೇಳಬಾರದಿತ್ತು, ಆ ರೀತಿ ಬಟ್ಟೆ ಧರಿಸಬಾರದಿತ್ತು, ಅದು ತುಂಬಾ ಟೈಟಾಗಿತ್ತು, ಅದು ತುಂಬಾ ಶಾರ್ಟ್ ಆಗಿತ್ತು, ತೀರಾ ಎಕ್ಸ್ಪೋಸಿಂಗ್ ಆಗಿತ್ತು, ಮೇಕಪ್ ಹೆವಿಯಾಗಿತ್ತು, ರೆಡ್‌ ಲಿಪ್‌ಸ್ಟಿಕ್ ಹಚ್ಚಬಾರದಿತ್ತು, ಕಣ್ಣು ಹೊಡೆಯಬಾರದಿತ್ತು, ಹೀಗೆ ಎಲ್ಲದಕ್ಕೂ ಹೆಣ್ಣುಮಕ್ಕಳನ್ನೇ ದೂಷಿಸುತ್ತಾರೆ, ಟಾರ್ಗೆಟ್ ಮಾಡಿ ಮಾತನಾಡುತ್ತಾರೆ.

ಯಾಕಂದ್ರೆ, ಪುರುಷರು ಪುರುಷರಾಗಿಯೇ ಇರುತ್ತಾರೆ. ನಾವು ಮಾತ್ರ ಬದಲಾಗಬೇಕು. ನಾವು ಮಾತ್ರ ಕಾಂಪ್ರಮೈಸ್ ಆಗಬೇಕು. ನಾವು ಮಾತ್ರ ಅಡ್ಜಸ್ಟ್ ಮಾಡಿಕೊಳ್ಳಬೇಕು. ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕು. ಇಲ್ಲ… ಇನ್ನಾಗಲ್ಲ ಈ ನಾನ್‌ಸೆನ್ಸ್ಗೆ ಫುಲ್‌ಸ್ಟಾಪ್ ಬೀಳಲೆಬೇಕು. ಹೀಗಂತ ಟ್ವೀಟ್ ಮಾಡಿ ಮಹಿಳೆಯರ ಪರವಾಗಿ ಧ್ವನಿಎತ್ತಿರುವ ರಮ್ಯಾ ಮೇಡಂ `ಮಹಿಳೆಯರ ಮೇಲಿ ಅಪರಾಧಗಳ ಬಗ್ಗೆ ಕಣ್ಣಿದ್ದು ಕುರುಡರಾಗಬೇಡಿ, ಇನ್ನಾದ್ರೂ ಧ್ವನಿಯೆತ್ತಿ ಎಂದು ಕೋರಿಕೊಂಡಿದ್ದಾರೆ. ಹೀಗೆ ದಿಲ್ಲಿ ಮೇಡಂ ತಮ್ಮ ಆಕ್ರೋಶವನ್ನ ಹೊರಹಾಕ್ತಿದ್ದಂತೆ ಸಕಲ ಹೆಣೈಕ್ಳ ಬಳಗ ಪದ್ಮಾವತಿಗೆ ಉಘೇ ಉಘೇ ಎನ್ನುತ್ತಿದ್ದಾರೆ. ದುರಂತ ಅಂದ್ರೆ ಮೈಸೂರು ಘಟನೆಯ ಬೆನ್ನಲೇ ತುಮಕೂರು ಹಾಗೂ ಬೆಳಗಾವಿಯಲ್ಲೂ ಗ್ಯಾಂಗ್‌ ರೇಪ್‌ ಪ್ರಕರಣ ಬೆಳಕಿಗೆ ಬಂದಿದೆ. ಇದು ಕರುನಾಡೇ ಬೆಚ್ಚಿ ಬೀಳುವಂತೆ ಮಾಡಿದೆ. ಆದರೆ ಗೃಹ ಸಚಿವರು ಮಾತ್ರ, ವಿದ್ಯಾರ್ಥಿನಿಯರು ಅಲ್ಲಿಗೇಕೆ ಹೋಗಬೇಕಿತ್ತು ಎನ್ನುವ ಬೇಜವಾಬ್ದಾರಿ ಹೇಳಿಕೆ ನೀಡಿ, ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕೀಚಕರನ್ನು ಬಲಿ ಹಾಕಲಿ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಹ್ಯಾಟ್ರಿಕ್ ಹೀರೋ ʼವೇದ ʼಸಿನಿಮಾಗೆ ಗೀತಕ್ಕನೇ ಪ್ರೊಡ್ಯೂಸರ್; ಅನ್ನದಾತೆ ಗೀತಮ್ಮನಿಗೆ ಉಘೇ ಉಘೇ !

‘ಭಜರಂಗಿ’ ಕಾಂಬೋ ಮತ್ತೆ ಆಖಾಡಕ್ಕೆ ಇಳಿಯಲು ಸಜ್ಜಾಗಿದೆ. ಭಜರಂಗಿ 2 ಚಿತ್ರದ ಬಿಡುಗಡೆಯ ಸಿದ್ಧತೆಯ ನಡುವೆಯೇ ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ನಿರ್ದೇಶಕ ಎ.ಹರ್ಷ ಜೋಡಿಯ ಮತ್ತೊಂದು ಮೋಸ್ಟ್ ಎಕ್ಸ್ ಪೆಕ್ಟೇಷನ್ ಸಿನಿಮಾ ‘ವೇದ’ ಅಧಿಕೃತವಾಗಿ ಸೆಟ್ಟೇರಿದೆ. ಇದು ಶಿವಣ್ಣ ಅಭಿನಯದ 125 ಸಿನಿಮಾ. ಹಾಗೆಯೇ ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬೋ ನಾಲ್ಕನೇ ಚಿತ್ರ. ಭಜರಂಗಿ, ವಜ್ರಕಾಯ ಹಾಗೂ ಭಜರಂಗಿ 2 ನಂತರ ಈಗ ವೇದ.

ಶುಕ್ರವಾರದ ಶುಭ ದಿನದಂದು ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿ ಸಾಂಗ್ ರೆಕಾರ್ಡಿಂಗ್ ಮಾಡಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಆ ಮೂಲಕ ಈ ಚಿತ್ರಕ್ಕೆ ಮೂಹೂರ್ತ ಮುಗಿದಿದೆ. ಸದ್ಯಕ್ಕೆ ಇದು ಚಿತ್ರೀಕರಣಕ್ಕೆ ಹೋಗೋದಿಕ್ಕೆ ಇನ್ನಷ್ಟು ಸಮಯ ಬೇಕಿದೆ. ಸದ್ಯಕ್ಕೆ ಸಾಂಗ್ ರೆಕಾರ್ಡಿಂಗ್ ಶುರು ಮಾಡಿದೆ. ಅನೇಕ ಕಾರಣಕ್ಕೆ ಇದು ವಿಶೇಷತೆ ಹೊಂದಿದೆ. ಶಿವಣ್ಣ ಹಾಗೂ ನಿರ್ದೇಶಕ ಹರ್ಷ ಕಾಂಬೋ ಸಿನ್ಮಾ ಅನ್ನೋದು ಮಾತ್ರವಲ್ಲ, ವೇದ ಸಿನಿಮಾಗೆ ಗೀತಾ ಶಿವರಾಜ್ ಕುಮಾರ್ ಅವರೇ ನಿರ್ಮಾಪಕರು ಅನ್ನೋದು ಇಲ್ಲಿನ ಬಹು ಸ್ಪೆಷಲ್. ಹೌದು, ಶಿವಣ್ಣ ಹಾಗೂ ಹರ್ಷ ಜೋಡಿಯ ಮತ್ತೊಂದು ಸಿನಿಮಾ ಬರುತ್ತಿದೆ ಎನ್ನುವ ಸುದ್ದಿಯ ಬೆನ್ನಲೇ ಆ ಸುದ್ದಿ ಸಾಕಷ್ಟು ಸೌಂಡ್ ಮಾಡಿದ್ದು ಈ ಚಿತ್ರದ ನಿರ್ಮಾಪಕರ ಕಾರಣಕ್ಕೆ. ಯಾಕಂದ್ರೆ ಈ ಸಿನಿಮಾಕ್ಕೆ ಗೀತಾ ಶಿವರಾಜ್ ಕುಮಾರ್ ಅವರೇ ನಿರ್ಮಾಪಕರು.

ಸಿನಿಮಾ ಹೀಗೆ ಬರಬೇಕೆಂದು ಲೆಕ್ಕಚಾರ ಹಾಕಿಕೊಂಡರೆ, ಹಾಗೆಯೇ ತೆರೆಗೆ ತರಲು ಅವರು ರೆಡಿ. ಅದಕ್ಕೆ ಕಾರಣಕ್ಕೆ ವೇದ ಸಿನಿಮಾ ಬಜೆಟ್ ಬಗ್ಗೆಯೂ ದೊಡ್ಡ ಕುತೂಹಲ ಇದೆ. ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ ಆಗಿದ್ದರಿಂದ ಶಿವಣ್ಣ ಕೂಡ ಅದರ ಮೇಕಿಂಗ್ ನಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳಲಾರರು. ಹರ್ಷ ಜತೆಗೆ ಅಭಿನಯಿಸಿದ ಮೂರು ಸಿನಿಮಾಗಳಲ್ಲಿ ಈಗ ಎರಡು ಸಿನಿಮಾ ತೆರೆ ಕಂಡಿವೆ. ಇನ್ನೊಂದು ಈಗ ತೆರೆಗೆ ಸಿದ್ದವಾಗಿದೆ.

ಈಗಾಗಲೇ ತೆರೆ ಕಂಡ ಸಿನಿಮಾಗಳಲ್ಲಿ ಈ ಜೋಡಿ ಭರ್ಜರಿಯಾಗಿಯೇ ಪ್ರೇಕ್ಷಕರನ್ನು ರಂಜಿಸಿದೆ. ಅದರರ್ಥ ಶಿವಣ್ಣ ಅಭಿಮಾನಿಗಳಿಗೂ ಆ ಸಿನಿಮಾ ಹಿಡಿಸಿವೆ. ಅದೇ ನಿರೀಕ್ಷೆ ಈಗ ವೇದ ಸಿನಿಮಾದ ಮೇಲೂ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರಂತೆ ನಿರ್ದೇಶಕ ಎ. ಹರ್ಷ. ಅರ್ಜುನ್ ಜನ್ಯಾ ಸಂಗೀತ ಈ ಚಿತ್ರಕ್ಕಿದೆ. ಶುಕ್ರವಾರ ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿಯೇ ಸಾಂಗ್ ರೆಕಾರ್ಡಿಂಗ್ ಗೆ ಚಾಲನೆ ಸಿಕ್ಕಿದೆ. ಉಳಿದಂತೆ ಶಿವಣ್ಣಗೆ ಇಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುವ ಚೆಲುವೆ ಯಾರು, ಉಳಿದ ಪಾತ್ರಗಳಿಗೆ ಬಣ್ಣ ಹಚ್ಚುವವರು ಯಾರು ಎಲ್ಲವೂ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆಯಂತೆ. ಅಲ್ಲಿವರೆಗೂ ಕೂತೂಹಲದಿಂದ ಕಾಯಲೆಬೇಕು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಜಗ್ಗೇಶ್‌ ಪುತ್ರ ಗುರುರಾಜನ ಕಾಗೆಮೊಟ್ಟೆ ಸೆಪ್ಟೆಂಬರ್‌ನಲ್ಲಿ ರಿಲೀಸ್ ; ಮಗನ ಚಿತ್ರಕ್ಕೆ ಸಾಹಿತ್ಯ ರಚಿಸಿ ಹಾಡಿದ ಅಪ್ಪ!

ಕೊರೊನಾ ಈಗ ಒಂದು ಹಂತಕ್ಕೆ ಮರೆಯಾಗುತ್ತಿದೆ. ಮೆಲ್ಲನೆ ಭಯ ಕಡಿಮೆಯಾಗುತ್ತಿದೆ. ಎಲ್ಲಾ ರಂಗದಲ್ಲೂ ಕಾರ್ಯಚಟುವಟಿಕೆಗಳೂ ಜೋರಾಗಿವೆ. ಸಿನಿಮಾರಂಗ ಮಾತ್ರ ಶೇ.೫೦ರಷ್ಟು ಆಸನ ಭರ್ತಿ ಆದೇಶದಲ್ಲೇ ಇದೆ. ಹೀಗಿದ್ದರೂ, ಈಗ ಒಂದೊಂದೆ ಸಿನಿಮಾ ರಿಲೀಸ್‌ ಆಗೋಕೆ ರೆಡಿಯಾಗಿವೆ. ಶಿವರಾಜಕುಮಾರ್‌ ಅಭಿನಯದ “ಭಜರಂಗಿ ೨” ಸಿನಿಮಾ ರಿಲೀಸ್‌ ಅನೌನ್ಸ್‌ ಮಾಡಿದೆ. ಅದರ ಬೆನ್ನಲ್ಲೇ ಈಗ ಜಗ್ಗೇಶ್‌ ಪುತ್ರ ಗುರುರಾಜ್‌ ಅವರ ಸಿನಿಮಾವೊಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.


ಹೌದು, ನವರಸನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿದ ಚಿತ್ರ “ಕಾಗೆ ಮೊಟ್ಟೆ” ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್‌ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ಪಕ್ಕಾ ಲೋಕಲ್‌ ಹುಡುಗರ ಕಥೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ‌ ಚಂದ್ರಹಾಸ ಅವರು ಈ ಚಿತ್ರ ಮಾಡಿದ್ದಾರೆ. ಕಾಗೆ ಶನೀಶ್ವರನ ವಾಹನ, ಶನಿ ಹೆಗಲೇರಿದರೆ ಕೊನೇವರೆಗೆ ಬಿಡಲ್ಲ ಅನ್ನೋದು ಗೊತ್ತು. ಅದೇ ರೀತಿ ಈ ಮೂರೂ ಜನ ಹುಡುಗರು ಯಾರ ಹಿಂದಾದ್ರೂ ಬಿದ್ದರೆ ಸುಲಭದಲ್ಲಿ ಬಿಡುವವರೇ ಅಲ್ಲ, ಮೊಟ್ಟೆಯಂತಿರುವ ಇವರು ಬೆಳೆದ ಮೇಲೆ ಯಾವ ರೀತಿ ಇರಬಹುದು ಎಂಬ ಪರಿಕಲ್ಪನೆಯೊಂದಿಗೆ ಚಂದ್ರಹಾಸ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.


ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿಕೊಂಡು ರಿಲೀಸ್‌ಗೆ ಸಿದ್ದವಾಗಿರುವ ಕಾಗೆಮೊಟ್ಟೆ ಸೆಪ್ಟೆಂಬರ್ ಎರಡನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಲಾಕ್‌ಡೌನ್‌ಗೂ ಮುಂಚೆಯೇ ರೆಡಿಯಾಗಿದ್ದ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಜೊತೆ ಕೆ.ಮಾದೇಶ್ ಹಾಗೂ ಹೇಮಂತ್ ಇನ್ನಿಬ್ಬರು ಗೆಳೆಯರಾಗಿ ನಟಿಸಿದ್ದಾರೆ. ಕನ್ನಡದವರೇ ಆದ ತನುಜಾ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ, ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಹಾಗೂ ಹೆಚ್.ಎನ್.ಶ್ರೀನಿವಾಸಯ್ಯ ಇವರ ಜೊತೆ ಕೈಜೋಡಿಸಿದ್ದಾರೆ.

ಅಂದಹಾಗೆ ಈ ಚಿತ್ರಕ್ಕೆ ಪಿಳ್ಳಾ, ಗೋವಿ, ಕೃಷ್ಣನ ಕಥೆ ಎಂಬ ಅಡಿಬರಹವಿದೆ. ಹಳ್ಳಿಯಲ್ಲಿ ಸಣ್ಣಪುಟ್ಟ ರಾಬರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಮೂವರು ಹುಡುಗರು, ಒಮ್ಮೆ ಒಂದು ದೊಡ್ಡ ಉದ್ದೇಶ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ. ಯಾವುದೇ ಹಿನ್ನೆಲೆ ಇಲ್ಲದೆ ಸಿಟಿಗೆ ಬಂದ ಇವರು ತಾವು ಅಂದುಕೊಂಡಿದ್ದನ್ನು ಮಾಡುತ್ತಾರೋ ಇಲ್ಲವೋ ಅನ್ನೋದು ಕಥೆ. ಕೊಳ್ಳೇಗಾಲ, ಚಾಮರಾಜನಗರ ಅಲ್ಲದೆ ಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಮೂವರು ಹುಡುಗರಿಗೆ ನಗರದಲ್ಲಿ ಬೆನ್ನೆಲುಬಾಗಿ ನಿಲ್ಲುವ ವೇಶ್ಯೆಯ ಪಾತ್ರವನ್ನು ಸೌಜನ್ಯ ಎಂಬ ನಟಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ೩ ಹಾಡುಗಳಿದ್ದು, ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ನಟ ಜಗ್ಗೇಶ್ ಸಹ ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದಲ್ಲದೆ ಅದಕ್ಕೆ ತಾವೇ ದನಿಯಾಗಿದ್ದಾರೆ. ಪಿ.ಎಲ್. ರವೀ ಚಿತ್ರದ ಕ್ಯಾಮೆರಾ ಹಿಡಿದರೆ, ರಜನೀಕಾಂತ್‌ ಅವರ ಸ್ನೇಹಿತ ರಾಜ್ ಬಹದ್ದೂರ್‌ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ : ಕೆರಳಿದ ನಟಿ ಶ್ರುತಿ !

ಜಗತ್ತು ಎಷ್ಟೇ ಬದಲಾದರೂ ಕೂಡ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ- ದಬ್ಬಾಳಿಕೆ- ಅತ್ಯಾಚಾರ ಮಾತ್ರ ನಿಲ್ಲುತ್ತಿಲ್ಲ.‌ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಧ್ಯಾರ್ಥಿನಿ ಮೇಲೆ ನಡೆದಂತಹ ಸಾಮೂಹಿಕ ಅತ್ಯಾಚಾರಕ್ಕೆ ಇಡೀ ಕರುನಾಡೇ ಬೆಚ್ಚಿಬಿದ್ದಿದೆ. ಅತ್ಯಾಚಾರವೆಸಗಿ ತಲೆಮರೆಸಿಕೊಂಡಿರುವ ಕೀಚಕರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಘಟನೆಯಿಂದ ಮನನೊಂದು, ಕೀಚಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ʼ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ನಡಿಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ ? ಇಂತ ಪುರುಷರ ಮನಸ್ಥಿತಿ ಬದಲಾಗುವುದೆಂದು? ಇಂತ ಅನಿಷ್ಟ ಕಾಮುಕರನ್ನ ಬಂಧಿಸುವ, ಅವರನ್ನು ಶಿಕ್ಷಿಸುವ ಕಾನೂನು ಮತ್ತಷ್ಟು ಗಟ್ಟಿ ಆಗಬೇಕು ಎನ್ನುವುದು ಎಷ್ಟು ಸತ್ಯವೋ, ಇಂಥಹ ಪುರುಷರು ಬೆಳೆಯುವ ಮನೆಯ ವಾತಾವರಣ, ಸಂಸ್ಕಾರ, ಪೋಷಕರ ಜವಾಬ್ದಾರಿ ಅಲ್ಲಿಯೂ ಕೂಡ ಮತ್ತಷ್ಟು ಗಟ್ಟಿಯಾಗ್ಬೇಕು ಎನ್ನುವುದು ನನ್ನ ಅಭಿಪ್ರಾಯ ಹೌದಲ್ಲವೇ.. ಹುಟ್ಟಿನಿಂದ ಸಾವಿನವರೆಗೆ ಹೆಣ್ಣುಮಕ್ಕಳು ಅನುಭವಿಸುವ ಕಷ್ಟ ನೂರಾರು ಆದರೂ ಹಲವಾರು ಮಹಿಳೆಯರು ಅದನ್ನು ಹಿಮ್ಮೆಟ್ಟಿ ಇಡೀ ಭಾರತವೇ ಮೆಚ್ಚುವಂತ ಸಾಧನೆಯನ್ನು ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆಗಳು ಮಹಿಳೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಹಾಗಾಗದಿರಲಿ ಎಂದು ನಟಿ ಶ್ರುತಿ ಸೋಷಲ್‌ ಮೀರಿಯಾದಲ್ಲಿ ತಮ್ಮ ಅಭಿಪ್ರಾಯ ಷೇರ್‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ದರ್ಶನ್-ಸುದೀಪ್-ಯಶ್-ಪುನೀತ್‌ಗೆ ಸೆಡ್ಡುಹೊಡೆಯಲಿದ್ದಾರೆ ಶಿವಣ್ಣ; ಹ್ಯಾಟ್ರಿಕ್ ನಿರ್ಧಾರಕ್ಕೆ ನೀವೇನಂತೀರಾ ?

ಸ್ಯಾಂಡಲ್‌ವುಡ್ ಸುಲ್ತಾನ್, ಸ್ಯಾಂಡಲ್‌ವುಡ್ ಬಚ್ಚನ್, ಸ್ಯಾಂಡಲ್‌ವುಡ್ ಷೆಹಜಾದ್, ಸ್ಯಾಂಡಲ್‌ವುಡ್ ಮಿಸ್ಟರ್‌ ಪರ್ಫೆಕ್ಷನಿಸ್ಟ್ ಉಫ್… ಈ ಎಲ್ಲಾ ಸೂಪರ್‌ಸ್ಟಾರ್‌ಗಳಿಗೆ ಗಂಧದಗುಡಿಯ ಅಧಿಪತಿ, ಆರು ಕೋಟಿ ಜನ ಅಪ್ಪಿ-ಒಪ್ಪಿಕೊಂಡ ಕರುನಾಡ ಚಕ್ರವರ್ತಿ ಸೆಡ್ಡು ಹೊಡೆಯುತ್ತಾರೆ ಅಂದರೆ ಎಲ್ಲರ ಕಿವಿ ನೆಟ್ಟಗಾಗುತ್ತೆ . ಅಟ್ ದಿ ಸೇಮ್ ಟೈಮ್ ಕಣ್ಣು ಊರಗಲ ಆಗುತ್ತೆ. ಅಪ್‌ಕೋರ್ಸ್ ಆಗ್ಲೆಬೇಕು. ಯಾಕಂದ್ರೆ, ಗಂಧದಗುಡಿಯ ಸ್ಟಾರ್‌ನಟರುಗಳ ನಡುವೆ ಹೆಲ್ದಿ ಕಾಂಪಿಟೇಷನ್ ಇರುವ ಹೊತ್ತಲ್ಲಿ, ಸೆಡ್ಡು-ಗಿಡ್ಡು ಅಂತ ಕಡ್ಡಿಗೀರೋದಕ್ಕೆ ನೋಡಿದ್ರೆ ಅವರವರ ಫ್ಯಾನ್ಸ್ ಕಣ್ಣು ಕೆಂಪಗಾಗುತ್ತವೆ. ಸೋ, ಫ್ಯಾನ್ಸ್ ಕೆಂಡಉಗುಳೋದಕ್ಕೂ ಮುನ್ನ ಅಸಲಿ ಮ್ಯಾಟರ್ ಏನು ಅಂತ ಹೇಳಿಬಿಡ್ತೀವಿ. ಅಷ್ಟಕ್ಕೂ, ಇದು ಬೆಂಕಿಹಚ್ಚೋ ಕಥೆ ಅಲ್ಲ ಬದಲಾಗಿ ಸ್ಟಾರ್‌ನಟರುಗಳೇ ಶಿವಣ್ಣಂಗೆ ಉಘೇ ಉಘೇ ಎನ್ನುವ ಕಥನ. ದೊಡ್ಮನೆ ಅಭಿಮಾನಿಗಳು ಹಬ್ಬ ಅಲ್ಲ ಊರಬ್ಬ ಮಾಡುವ ಸ್ಟೋರಿಯಿದು.

ಭಗವಂತನ ಸ್ವತ್ತನ್ನ ನಾಶಮಾಡ್ತೀನಿ ಅಂತ ಹೊರಟರೆ ಅದನ್ನ ಕಾಪಾಡೋಕೆ ಅವನೇ ಅವತಾರ ಎತ್ತಿ ಬರಬೇಕಾಗಿಲ್ಲ ಅವನ ರೂಪದಲ್ಲಿ ಇನ್ನೊಬ್ಬ ರಕ್ಷಕ ಹುಟ್ಟಿರ‍್ತಾನೆ. ಅದರಂತೇ, ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಷ್‌ರಂತಹ ಮಹನೀಯರುಗಳು ಕಟ್ಟಿಬೆಳೆಸಿದ ಗಂಧದಗುಡಿ ಶೇಕ್ ಆಗ್ತಿದೆ ಅಂದರೆ, ನಲುಗುತ್ತಿದೆ-ನರಳುತ್ತಿದೆ ಅಂದರೆ, ಪಾತಾಳಕ್ಕೆ ಕುಸಿಯುತ್ತಿದೆ ಅಂದರೆ ಎಷ್ಟು ದಿನ ಅಂತ ನೋಡಿಕೊಂಡು ಕೈಕಟ್ಟಿಕೊಂಡು ಸುಮ್ಮನೇ ಕೂರೋದಕ್ಕೆ ಆಗುತ್ತೆ ಹೇಳಿ. ದಂಡಿಗೆ ಹೆದರಲಿಲ್ಲ-ದಾಳಿಗೆ ಹೆದರಲಿಲ್ಲ ಇನ್ನೂ ಕಾಣದ ಕ್ರಿಮಿಗೆ ಹೆದರ‍್ಬೇಕಾ ಅಂತ ಮೈಕೊಡವಿಕೊಂಡು ಅಖಾಡಕ್ಕೆ ಇಳಿಯಲೇಬೇಕಾಗುತ್ತದೆ. ಧ್ರುವತಾರೆಗಳು ರಕ್ತಬಸಿದು ಕಟ್ಟಿದ ಗಂಧದಗುಡಿ ಸಾಮ್ರಾಜ್ಯಕ್ಕಾಗಿ ಹೋರಾಡಲೆಬೇಕಾಗುತ್ತದೆ. ಆ ಹೋರಾಟಕ್ಕೆ ಹಾಗೂ ದಿಗ್ವಿಜಯ ಸಾಧಿಸುವುದಕ್ಕೆ ಕರುನಾಡ ಚಕ್ರವರ್ತಿ ಸಿದ್ದರಾಗಿದ್ದಾರೆ.

ಈ ಭೂಮಿ ಮೇಲೆ ಅದೆಷ್ಟೋ ಜೀವಿಗಳನ್ನು ಸೃಷ್ಟಿಸಿದ ಭಗವಂತ, ಮನುಷ್ಯನಿಗೆ ಮಾತ್ರ ಎಲ್ಲಾ ಸೌಲಭ್ಯಗಳನ್ನು ಕೊಟ್ಟನು. ಕಾಲ ಕ್ರಮೇಣ ಅದು ಹೆಚ್ಚಾದಂತೆ ರೋಗ ರುಜನಿಗಳು ಹೆಚ್ಚಾದವು. ಮನುಷ್ಯನ ಮೇಲಿದ್ದ ಅಗಾದವಾದ ಪ್ರೀತಿಯಿಂದ ಈ ರೋಗಗಳಿಗೆ ಪರಿಹಾರವನ್ನು ಈ ಪ್ರಕೃತಿಯಲ್ಲಿಯೇ ಇಟ್ಟನು. ಇದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ ʼಭಜರಂಗಿ-2ʼ ಚಿತ್ರದ ಡೈಲಾಗ್. ಈ ಡೈಲಾಗ್‌ನಂತಾಗಿಯೇ ಇದೆ ಭೂಮಂಡಲದ ಪರಿಸ್ಥಿತಿ. ಚೀನಿ ಕ್ರಿಮಿ ಕೊರೊನಾದಿಂದ ಮನುಕುಲವೇ ನರನರ ನಲುಗಿದೆ. ಅದಕ್ಕೆ ಪರಿಹಾರವೂ ಸಿಕ್ಕಿದೆ ಕೋವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್, ಸ್ಪುಟ್ನಿಕ್, ಮೊಡೊರ್ನಾ ಹೀಗೆ ವಿವಿಧ ರೀತಿಯ ವ್ಯಾಕ್ಸಿನೇಷನ್ ಸಿಕ್ಕಿದೆ. ಇದರಿಂದ ಮನುಕುಲ ನಿಟ್ಟುಸಿರು ಬಿಟ್ಟಿದೆ. ಆದರೆ, ಗಂಧದಗುಡಿ ನೆಮ್ಮದಿಯಾಗಿ ಉಸಿರಾಡುವುದಕ್ಕೆ ಇನ್ನೂ ಸಾಧ್ಯವಾಗ್ತಿಲ್ಲ.

ಜಗತ್ತಿನಲ್ಲಿ ಕೊರೊನಾ ಅಟ್ಟಹಾಸ ಶುರುವಾಗಿ ಹತ್‌ಹತ್ರ ಎರಡು ವರ್ಷ ಆಗುತ್ತಾ ಬಂತು. ಚೀನಾದಿಂದ ಎಗರಿಎಗರಿಕೊಂಡು ಕರ್ನಾಟಕಕ್ಕೆ ಕಾಲಿಟ್ಟ ಕೊರೊನಾ ಬಣ್ಣದ ಲೋಕವನ್ನು ಬಂದ್ ಮಾಡ್ಸಿ ರೌದ್ರನರ್ತನ ಶುರುವಿಟ್ಟುಕೊಂಡ್ತು. ಹೀಗೆ ಶುರುವಾದ ಕಾಣದ ಕ್ರಿಮಿಯ ನರ್ತನಕ್ಕೆ ಚಂದನವನ ಹೈರಣಾಗಿ ಹೋಗಿದೆ. ಸ್ಯಾಂಡಲ್‌ವುಡ್ ಬಳಲಿ ಬೆಂಡಾಗಿ ಬಸವಳಿದಿದೆ. ಬೆಳ್ಳಿತೆರೆ ಮಂಕಾಗಿದೆ, ಬಾಕ್ಸ್ಆಫೀಸ್ ಕೋಮಾಗೆ ಹೋಗಿದೆ. ಇದೆಲ್ಲದರ ಪರಿಣಾಮ ಬಣ್ಣವನ್ನೇ ನಂಬಿಕೊಂಡು ಬದುಕುವ ಸಣ್ಣಪುಟ್ಟ ಕಲಾವಿದರು, ದಿನಗೂಲಿ ಕಾರ್ಮಿಕರು, ಚಿತ್ರಮಂದಿರದಲ್ಲಿ ಕೆಲಸ ನಿರ್ವಹಿಸುವವರು ಸೇರಿದಂತೆ ಥಿಯೇಟರ್ ಮಾಲೀಕರು, ವಿತಕರು, ಪ್ರದರ್ಶಕರು, ಅನ್ನದಾತರು ಹೀಗೆ ಒಬ್ಬಿಬ್ಬರಲ್ಲ ಬಿಡಿ ಸಿನಿಮಾವನ್ನೇ ನಂಬಿಕೊಂಡಿರು ವವರೆಲ್ಲಾ ಅಕ್ಷರಶಃ ಆಕಾಶ ನೋಡಿದರು. ಈಗಲೂ ಅವರ ಪರಿಸ್ಥಿತಿ ಕೊಂಚ ಚಿಂತಾಜನಕ. ಹೀಗಾಗಿ, ಗಂಧದಗುಡಿಯ ಕ್ಯಾಪ್ಟನ್ ಆಫ್ ದಿ ಶಿಪ್ ಉರುಫ್ ಗಂಧದಗುಡಿಯ ಅಧಿಪತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ದೃಢ ನಿರ್ಧಾರಕ್ಕೆ ಬಂದಿದ್ದಾರೆ.

ಯಸ್, ಎಷ್ಟು ದಿನ ಅಂತ ಕಾರ್ಮಿಕರು ಹಾಗೂ ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುವುದನ್ನ ನೋಡಲಿ, ಇನ್ನೆಷ್ಟು ದಿನ ಅಂತ ಕಾಣದ ಕ್ರಿಮಿಗೆ ಹೆದರಿಕೊಂಡು ಕೂರಲಿ. ನೋ ನೋ.. ಇನ್ನೂ ಕೈಕಟ್ಟಿ ಕೂರೋದಕ್ಕೆ ಆಗಲ್ಲ ಭಂಡಧೈರ್ಯ ಮಾಡಿಬಿಡುವ ಅಂತ ಶಿವಣ್ಣ ತಮ್ಮ ಭಜರಂಗಿ ಟೀಮ್‌ಗೆ ಹೊಸ ಹುರುಪು ತುಂಬಿದ್ದಾರೆ. ಆಗಿದ್ದಾಗಲೀ, ಆಕಾಶ ತಲೆಕೆಳಗಾಗಲಿ ಭಜರಂಗಿ-2' ಸಿನಿಮಾನ ಬಿಡುಗಡೆ ಮಾಡೆಬಿಡೋಣ ಅಂತ ಅನ್ನದಾತರನ್ನು ಒಪ್ಪಿಸಿದ್ದಾರೆ.ಟಗರು ಚಿತ್ರದಲ್ಲಿ ಸುಬ್ಬಿ ಅಂಕಲ್‌ನ ಹೊಡೆದ ಹಾಗೇ’ ಕೊರೊನಾನ ಹೊಡೆದು ಬಿಸಾಕಬೇಕು. ಬಿಗ್‌ಸ್ಕ್ರೀನ್ ಗೆ ಲಗ್ಗೆ ಇಡಲೆಬೇಕು, ಸಾಗರೋಪಾದಿಯಲ್ಲಿ ಪ್ರೇಕ್ಷಕ ಮಹಾಶಯರನ್ನ ಚಿತ್ರಮಂದಿರಕ್ಕೆ ಕರೆತರಲೆಬೇಕು, ಬೆಳ್ಳಿತೆರೆಯನ್ನ ನಗಿಸಲೆಬೇಕು, ಬಾಕ್ಸ್ಆಫೀಸ್‌ನ ಬೆಚ್ಚಿಸಲೆಬೇಕು, ಅನ್ನದಾತರ ಖಜಾನೆಗೆ ಭರಪೂರ ಹಣ ಹರಿದುಬರುವಂತೆ ಮಾಡ್ಬೇಕು ಹೀಗಂತ ಭಜರಂಗಿ-2 ಬಳಗ ದೃಢ ಸಂಕಲ್ಪ ಮಾಡಿದೆ.

ಹಾಗಾದ್ರೆ, ಭಜರಂಗಿ ಅಖಾಡಕ್ಕೆ ಇಳಿಯೋದು ಯಾವಾಗ? ಬಿಗ್‌ಸ್ಕ್ರೀನ್ ಮೇಲೆ ಭಜರಂಗಿ-2 ಅಬ್ಬರ ಯಾವಾಗ ಶುರುವಾಗುತ್ತೆ? ಸಿಲ್ವರ್‌ಸ್ಕ್ರೀನ್ ಮೇಲೆ ಹೇಗಿರಲಿದೆ ಭಜರಂಗಿಯ ಘರ್ಜನೆ? ಈ ಪ್ರಶ್ನೆಯ ಜೊತೆಗೆ ಸರ್ಕಾರ ಇನ್ನೂ ಶೇಕಡ 100 ರಷ್ಟು ಅನುಮತಿ ಕೊಟ್ಟಿಲ್ಲವಲ್ಲಾ ಗುರು ಅದ್ಹೇಗೆ ರಿಲೀಸ್ ಮಾಡ್ತಾರೆ. 50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲಿ ಭಜರಂಗಿ-2 ಚಿತ್ರವನ್ನು ತೆರೆಗೆ ತರೋದಕ್ಕೆ ನಿರ್ಧಾರ ಮಾಡಿದ್ದಾರಾ? ಅಪ್‌ಕೋರ್ಸ್ ಸರ್ಕಾರ 100ರಷ್ಟು ಅನುಮತಿ ಕೊಡೋದಕ್ಕೆ ಇನ್ನೂ ತಡಮಾಡಿದ್ರೆ, ಕೊರೊನಾ ಮೂರನೇ ಅಟ್ಟಹಾಸ ನೋಡಿಕೊಂಡು ಚಿತ್ರಮಂದಿರಕ್ಕೆ 100 ರಷ್ಟು ಅನುಮತಿ ಕೊಡ್ತೀವಿ ಅಂತ ಏನಾದರೂ ಹೇಳಿದರೆ ಅಲ್ಲಿವರೆಗೂ ಕಾಯೋದಕ್ಕೆ ಆಗಲ್ಲ. ಹೀಗಾಗಿ50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲಿ ಭಜರಂಗಿ-2 ಚಿತ್ರವನ್ನ ರಿಲೀಸ್ ಮಾಡುತ್ತಾರೆ. ಸೆಪ್ಟೆಂಬರ್ 1 ರಂದು ಟ್ರೇಲರ್ ರಿಲೀಸ್ ಮಾಡಿ ಸೆಪ್ಟೆಂಬರ್ 10 ರಂದು 250 ಥಿಯೇಟರ್ ಹಾಗೂ ಮೆಜೆಸ್ಟಿಕ್‌ನಲ್ಲೇ 3 ಥಿಯೇಟರ್‌ನಲ್ಲಿ ಭಜರಂಗಿ-೨ ಮೂವೀನಾ ಅದ್ದೂರಿಯಾಗಿ ಬಿಡುಗಡೆ ಮಾಡ್ತಾರೆ.

ಎ. ಹರ್ಷ ನಿರ್ದೇಶನದ ಭಜರಂಗಿ-2 ಚಿತ್ರದ ಮೇಲೆ ಸಾಗರದಷ್ಟು ನಿರೀಕ್ಷೆಯಿದೆ. ಎಂಟು ವರ್ಷಗಳ ನಂತರ ತಯ್ಯಾರಾಗಿರುವ ಸೀಕ್ವೆಲ್ ಸೆಟ್ಟೇರಿದಾಗಿನಿಂದಲೂ ಕೂತೂಹಲ ಕಾಯ್ದಿರಿಸಿಕೊಂಡು ಬಂದಿದೆ. ಭಜರಂಗಿ ಉರುಫ್ ಶಿವಣ್ಣ ಮಾತ್ರವಲ್ಲ ಸಿಗಾರ್ ಕೈಲಿಡಿದಿರುವ ಶ್ರುತಿ, ಕಾಟನ್ ಸೀರೆಯುಟ್ಟು ಕಣ್ಣಕ್ಕಿಳಿದಿರುವ ಭಾವನಾ, ಸೌರವ್ ಲೋಕಿ ಸೇರಿದಂತೆ ಪ್ರತಿ ಪಾತ್ರವೂ ಕೂಡ ಮೊದಲ ನೋಟದಲ್ಲೇ ಬೆಚ್ಚಿಬೀಳಿಸ್ತಿದೆ. ಟ್ರೈಲರ್ ಹಾಗೂ ಹಾಡು ಮೈ ಜುಮ್ ಎನ್ನಿಸಿದೆ. ಜಯ್ಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ ಕೋಟಿ ವೆಚ್ಚದಲ್ಲಿ ಶಿಲೆಯಂತೆ ತಯ್ಯಾರಾಗಿರುವ ಭಜರಂಗಿ-2 ಚಿತ್ರವನ್ನು ತೆರೆಮೇಲೆ ನೋಡಿ ಆನಂದಿಸಬೇಕಿದೆ. ಆ ಅದ್ಬುತ ಕ್ಷಣ ಕೆಲವೇ ದಿನಗಳಲ್ಲಿ ಬರಲಿದೆ. ದರ್ಶನ್-ಸುದೀಪ್-ಪುನೀತ್-ಯಶ್‌ಗಿಂತ ಮೊದಲೇ ಶಿವಣ್ಣ ಅಖಾಡಕ್ಕೆ ಇಳಿಯಲಿದ್ದಾರೆ. ಕೊರೊನಾದಿಂದ ಪಾತಾಳಕ್ಕೆ ಕುಸಿದಿರುವ ಸ್ಯಾಂಡಲ್‌ವುಡ್‌ನ ಎತ್ತಿಕಟ್ಟಲಿದ್ದಾರೆ. ಇಂಡಸ್ಟ್ರಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಲಿದ್ದಾರೆ ಒನ್ ಅಂಡ್ ಒನ್ಲೀ ಶಿವಣ್ಣ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲವ್‌ಸ್ಟೋರಿಯಲ್ಲೊಂದು ಕ್ರಾಂತಿಕಾರಿ ಬದಲಾವಣೆ ಡಾರ್ಲಿಂಗ್‌ ಕೃಷ್ಣ ಸಿನಿಮಾಗೆ ಹೊಸ ತೇಜಸ್ಸು!

ಶಿವತೇಜಸ್‌ ಹೇಳಿದ ಬ್ಯೂಟಿಫುಲ್‌ ಲವ್‌ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್‌” ಕೃಷ್ಣ, ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಆಗಸ್ಟ್‌ 27ರಂದು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ. ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್‌ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್‌ ಕ್ರಾಂತಿ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ

ಒಂದು ಸಿನಿಮಾ ಮಾಡೋಕೆ ಮುಖ್ಯವಾಗಿ ಬೇಕಾಗಿರೋದು ಸಿನಿಮಾ ಪ್ರೀತಿ. ಅದಷ್ಟೇ ಅಲ್ಲ, ಶ್ರದ್ಧೆ ಮತ್ತು ಪ್ರತಿಭೆ. ಇದನ್ನೇ ನಂಬಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟವರು ನಿರ್ದೇಶಕ ಶಿವತೇಜಸ್.‌ ಈಗಾಗಲೇ ಜೋರು ಪ್ರೀತಿಯ “ಮಳೆ” ಸುರಿಸಿದ ಶಿವತೇಜಸ್‌, ಸಿನಿಪ್ರೇಮಿಗಳ ಮನವನ್ನು ಪ್ರೀತಿಯಿಂದಲೇ ಒದ್ದೆ ಮಾಡಿದವರು. ಆ ನಂತರ “ಧೈರ್ಯಂ” ಮೂಲಕ ಗಾಂಧಿನಗರದಲ್ಲಿ ಗಟ್ಟಿನೆಲೆ ಕಂಡ ಧೈರ್ಯದಲ್ಲೇ ಮತ್ತೊಂದು ಕ್ಯೂಟ್‌ ಅಂಡ್‌ ಪ್ಯೂರ್‌ ಲವ್‌ಸ್ಟೋರಿ ಹಿಂದೆ ನಿಂತಿದ್ದಾರೆ ಶಿವತೇಜಸ್.‌ ಹೌದು, ನಿರ್ದೇಶಕ ಶಿವತೇಜಸ್‌ ಈಗ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಬಾರಿ ಎಂದಿಗಿಂತಲೂ ಜೋರು ಸದ್ದು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆವರ ಆಯ್ಕೆ ಕೂಡ ಹಾಗೆಯೇ ಇದೆ. ಹಾಗಾಗಿ, ಅವರ ಹೊಸ ಚಿತ್ರ ಜೋರು ಸೌಂಡು ಮಾಡುವುದರಲ್ಲಿ ಅನುಮಾನವೇ ಇಲ್ಲ ಬಿಡಿ.

ಅಂದಹಾಗೆ, ಶಿವತೇಜಸ್‌ ಮಾಡ ಹೊರಟಿರುವ ಸಿನಿಮಾದ ಹೀರೋ ಬೇರಾರೂ ಅಲ್ಲ, “ಲವ್‌ ಮಾಕ್ಟೇಲ್‌” ಖ್ಯಾತಿಯ “ಡಾರ್ಲಿಂಗ್‌” ಕೃಷ್ಣ ಅವರದು. ನಿಜ, ಶಿವತೇಜಸ್‌ ಅವರು ಹೇಳಿದ ಬ್ಯೂಟಿಫುಲ್‌ ಲವ್‌ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್‌” ಕೃಷ್ಣ, ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಆಗಸ್ಟ್‌ 27ರಂದು ಚಿತ್ರದ ಪೂಜೆ ನೆರವೇರುತ್ತಿದೆ. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ನಡೆಯುತ್ತಿದೆ ಅನ್ನೋದು ವಿಶೇಷ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೇ ತುಂಬಿವೆ. ಆ ವಿಶೇಷತೆಗಳಲ್ಲಿ ಮೊದಲ ಸ್ಪೆಷಲ್‌ ಅಂದರೆ, ನಿರ್ದೇಶಕ ಶಿವತೇಜಸ್‌ ಅವರನ್ನು ನಂಬಿ, ಅವರು ಮಾಡಿಕೊಂಡಿರುವ ಲವ್‌ಸ್ಟೋರಿಯನ್ನು ಒಪ್ಪಿ, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್‌ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.

ಈ ಸುಮಂತ್‌ ಕ್ರಾಂತಿ ಹೆಸರು ಕೇಳಿದಾಕ್ಷಣ, ಥಟ್ಟನೆ ನೆನಪಾಗೋದೇ “ನಾನಿ” ಎಂಬ ಕಾಡುವ ಚಿತ್ರ. ಹೌದು, ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿಯಾದ ಸುಮಂತ್‌ ಕ್ರಾಂತಿ ಇದೀಗ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅದೀಗ ಬಿಡುಗಡೆಗೆ ಸಜ್ಜಾಗಿದೆ. ಅದರ ಬೆನ್ನ ಹಿಂದೆಯೇ ಅವರು “ಬರ್ಕ್ಲಿ” ಎಂಬ ಮತ್ತೊಂದು ಫೆಂಟಾಸ್ಟಿಕ್‌ ಸಿನಿಮಾ ಕೂಡ ಮಾಡಿದ್ದಾಗಿದೆ. ಅದರ ಹಿಂದೆಯೇ ಅವರು ಪ್ರಜ್ವಲ್‌ ದೇವರಾಜ್‌ ಅವರಿಗೊಂದು ಸಿನಿಮಾ ಮಾಡಲೂ ಮುಂದಾಗಿರೋದು ಹೊಸ ಸುದ್ದಿಯೇನಲ್ಲ. ಈಗ ಶಿವತೇಜಸ್‌ ಅವರಿಗಾಗಿ “ಡಾರ್ಲಿಂಗ್‌” ಕೃಷ್ಣ ಅವರ ನಟನೆಯ ಸಿನಿಮಾಗೆ ನಿರ್ಮಾಪಕರಾಗಿದ್ದಾರೆ. ಇದು ನಿಜಕ್ಕೂ ಮೆಚ್ಚುವ ವಿಷಯ.

ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್‌ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್‌ ಕ್ರಾಂತಿ ಅವರು, ಈಗ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ. ಸುಮಂತ್‌ ಕ್ರಾಂತಿ ಅವರೂ ನಿರ್ದೇಶಕರಾಗಿರುವುದರಿಂದ, ಈ ಚಿತ್ರಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಪೂರೈಸುತ್ತಾರೆ ಎಂಬ ಭವ್ಯ ಭರವಸೆ ಕೂಡ ನಿರ್ದೇಶಕ ಶಿವತೇಜಸ್‌ ಅವರಿಗಿದೆ. ಅದೇನೆ ಇರಲಿ, ಶಿವತೇಜಸ್ ಈ ಬಾರಿ ಒಂದೊಳ್ಳೆಯ ಕಥೆ ಹಿಡಿದು ಬರುತ್ತಿದ್ದಾರೆ. ತಮ್ಮ ಬ್ಯೂಟಿಫುಲ್‌ ಲವ್‌ಸ್ಟೋರಿ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಶಿವತೇಜಸ್‌ ಹೇಳಿದ್ದಿಷ್ಟು.

“ನಾನು “ಮಳೆ” ಬಳಿಕ ಮತ್ತೊಂದು ಪ್ಯೂರ್‌ ಬೊಂಬಾಟ್‌ ಲವ್‌ಸ್ಟೋರಿ ಸಿನಿಮಾ ಮಾಡ್ತಾ ಇದ್ದೇನೆ. ನವೆಂಬರ್‌ನಿಂದ ಸಿನಿಮಾ ಶುರುವಾಗಲಿದೆ. ಧರ್ಮಸ್ಥಳದಲ್ಲಿ ಆಗಸ್ಟ್‌ 27ರಂದು ಪೂಜೆ ನೆರವೇರಲಿದೆ. ಸುಮಂತ್‌ ಕ್ರಾಂತಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮೂಲತಃ ನಿರ್ದೇಶಕರಾಗಿದ್ದರೂ, ನನ್ನ ಕಥೆ ನಂಬಿ ಹಣ ಹಾಕುತ್ತಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ತೀನಿ ಎಂಬ ಮಾತು ಕೊಡ್ತೀನಿ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ನನ್ನದೇ. ಇನ್ನು, ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರೆಂಬುದು ಸದ್ಯ ಗೌಪ್ಯ.

ಅಂತೆಯೇ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣ ಸೇರಿದಂತೆ ಉಳಿದ ತಾಂತ್ರಿಕ ವರ್ಗದ ಆಯ್ಕೆ ಹಾಗು ಕಲಾವಿದರ ಆಯ್ಕೆ ನಡೆಯಬೇಕಿದೆ. ನವೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ ಎನ್ನುವ ಶಿವತೇಜಸ್, “ಮಳೆ” ನೋಡಿದವರಿಗೆ ಒಂದೊಳ್ಳೆಯ ಫೀಲ್‌ ಇತ್ತು. ಈ ಸಿನಿಮಾ ಅದಕ್ಕಿಂತಲೂ ಬೊಂಬಾಟ್‌ ಫೀಲ್‌ ಕೊಡುತ್ತೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಲವ್‌ಸ್ಟೋರಿ ಇಲ್ಲಿದೆ. ಲವ್‌ಸ್ಟೋರಿ ಅಂದರೆ, ಅದೇ ಪ್ರೀತಿ ಗೀತಿ ಇತ್ಯಾದಿ ಇರುತ್ತೆ. ಆದರೆ, ನಮ್‌ ಲವ್‌ಸ್ಟೋರಿಯ ರೇಂಜ್‌ ಬೇರೆ ರೀತಿ ಇರುತ್ತೆ. ಎಲ್ಲವನ್ನೂ ಈಗಲೇ ಹೇಳಿದರೆ, ಕುತೂಹಲ ಇರಲ್ಲ. ಸಿನಿಮಾ ಬಂದಮೇಲೆ ಖಂಡಿತವಾಗಿಯೂ ಎಲ್ಲಾ ವರ್ಗಕ್ಕೆ ಇಷ್ಟವಾಗುತ್ತೆ ಎಂಬ ಭರವಸೆ ಕೊಡ್ತೀನಿ ಅಂತಾರೆ ಶಿವತೇಜಸ್.‌

error: Content is protected !!