ದರ್ಶನ್-ಸುದೀಪ್-ಯಶ್-ಪುನೀತ್‌ಗೆ ಸೆಡ್ಡುಹೊಡೆಯಲಿದ್ದಾರೆ ಶಿವಣ್ಣ; ಹ್ಯಾಟ್ರಿಕ್ ನಿರ್ಧಾರಕ್ಕೆ ನೀವೇನಂತೀರಾ ?

ಸ್ಯಾಂಡಲ್‌ವುಡ್ ಸುಲ್ತಾನ್, ಸ್ಯಾಂಡಲ್‌ವುಡ್ ಬಚ್ಚನ್, ಸ್ಯಾಂಡಲ್‌ವುಡ್ ಷೆಹಜಾದ್, ಸ್ಯಾಂಡಲ್‌ವುಡ್ ಮಿಸ್ಟರ್‌ ಪರ್ಫೆಕ್ಷನಿಸ್ಟ್ ಉಫ್… ಈ ಎಲ್ಲಾ ಸೂಪರ್‌ಸ್ಟಾರ್‌ಗಳಿಗೆ ಗಂಧದಗುಡಿಯ ಅಧಿಪತಿ, ಆರು ಕೋಟಿ ಜನ ಅಪ್ಪಿ-ಒಪ್ಪಿಕೊಂಡ ಕರುನಾಡ ಚಕ್ರವರ್ತಿ ಸೆಡ್ಡು ಹೊಡೆಯುತ್ತಾರೆ ಅಂದರೆ ಎಲ್ಲರ ಕಿವಿ ನೆಟ್ಟಗಾಗುತ್ತೆ . ಅಟ್ ದಿ ಸೇಮ್ ಟೈಮ್ ಕಣ್ಣು ಊರಗಲ ಆಗುತ್ತೆ. ಅಪ್‌ಕೋರ್ಸ್ ಆಗ್ಲೆಬೇಕು. ಯಾಕಂದ್ರೆ, ಗಂಧದಗುಡಿಯ ಸ್ಟಾರ್‌ನಟರುಗಳ ನಡುವೆ ಹೆಲ್ದಿ ಕಾಂಪಿಟೇಷನ್ ಇರುವ ಹೊತ್ತಲ್ಲಿ, ಸೆಡ್ಡು-ಗಿಡ್ಡು ಅಂತ ಕಡ್ಡಿಗೀರೋದಕ್ಕೆ ನೋಡಿದ್ರೆ ಅವರವರ ಫ್ಯಾನ್ಸ್ ಕಣ್ಣು ಕೆಂಪಗಾಗುತ್ತವೆ. ಸೋ, ಫ್ಯಾನ್ಸ್ ಕೆಂಡಉಗುಳೋದಕ್ಕೂ ಮುನ್ನ ಅಸಲಿ ಮ್ಯಾಟರ್ ಏನು ಅಂತ ಹೇಳಿಬಿಡ್ತೀವಿ. ಅಷ್ಟಕ್ಕೂ, ಇದು ಬೆಂಕಿಹಚ್ಚೋ ಕಥೆ ಅಲ್ಲ ಬದಲಾಗಿ ಸ್ಟಾರ್‌ನಟರುಗಳೇ ಶಿವಣ್ಣಂಗೆ ಉಘೇ ಉಘೇ ಎನ್ನುವ ಕಥನ. ದೊಡ್ಮನೆ ಅಭಿಮಾನಿಗಳು ಹಬ್ಬ ಅಲ್ಲ ಊರಬ್ಬ ಮಾಡುವ ಸ್ಟೋರಿಯಿದು.

ಭಗವಂತನ ಸ್ವತ್ತನ್ನ ನಾಶಮಾಡ್ತೀನಿ ಅಂತ ಹೊರಟರೆ ಅದನ್ನ ಕಾಪಾಡೋಕೆ ಅವನೇ ಅವತಾರ ಎತ್ತಿ ಬರಬೇಕಾಗಿಲ್ಲ ಅವನ ರೂಪದಲ್ಲಿ ಇನ್ನೊಬ್ಬ ರಕ್ಷಕ ಹುಟ್ಟಿರ‍್ತಾನೆ. ಅದರಂತೇ, ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಷ್‌ರಂತಹ ಮಹನೀಯರುಗಳು ಕಟ್ಟಿಬೆಳೆಸಿದ ಗಂಧದಗುಡಿ ಶೇಕ್ ಆಗ್ತಿದೆ ಅಂದರೆ, ನಲುಗುತ್ತಿದೆ-ನರಳುತ್ತಿದೆ ಅಂದರೆ, ಪಾತಾಳಕ್ಕೆ ಕುಸಿಯುತ್ತಿದೆ ಅಂದರೆ ಎಷ್ಟು ದಿನ ಅಂತ ನೋಡಿಕೊಂಡು ಕೈಕಟ್ಟಿಕೊಂಡು ಸುಮ್ಮನೇ ಕೂರೋದಕ್ಕೆ ಆಗುತ್ತೆ ಹೇಳಿ. ದಂಡಿಗೆ ಹೆದರಲಿಲ್ಲ-ದಾಳಿಗೆ ಹೆದರಲಿಲ್ಲ ಇನ್ನೂ ಕಾಣದ ಕ್ರಿಮಿಗೆ ಹೆದರ‍್ಬೇಕಾ ಅಂತ ಮೈಕೊಡವಿಕೊಂಡು ಅಖಾಡಕ್ಕೆ ಇಳಿಯಲೇಬೇಕಾಗುತ್ತದೆ. ಧ್ರುವತಾರೆಗಳು ರಕ್ತಬಸಿದು ಕಟ್ಟಿದ ಗಂಧದಗುಡಿ ಸಾಮ್ರಾಜ್ಯಕ್ಕಾಗಿ ಹೋರಾಡಲೆಬೇಕಾಗುತ್ತದೆ. ಆ ಹೋರಾಟಕ್ಕೆ ಹಾಗೂ ದಿಗ್ವಿಜಯ ಸಾಧಿಸುವುದಕ್ಕೆ ಕರುನಾಡ ಚಕ್ರವರ್ತಿ ಸಿದ್ದರಾಗಿದ್ದಾರೆ.

ಈ ಭೂಮಿ ಮೇಲೆ ಅದೆಷ್ಟೋ ಜೀವಿಗಳನ್ನು ಸೃಷ್ಟಿಸಿದ ಭಗವಂತ, ಮನುಷ್ಯನಿಗೆ ಮಾತ್ರ ಎಲ್ಲಾ ಸೌಲಭ್ಯಗಳನ್ನು ಕೊಟ್ಟನು. ಕಾಲ ಕ್ರಮೇಣ ಅದು ಹೆಚ್ಚಾದಂತೆ ರೋಗ ರುಜನಿಗಳು ಹೆಚ್ಚಾದವು. ಮನುಷ್ಯನ ಮೇಲಿದ್ದ ಅಗಾದವಾದ ಪ್ರೀತಿಯಿಂದ ಈ ರೋಗಗಳಿಗೆ ಪರಿಹಾರವನ್ನು ಈ ಪ್ರಕೃತಿಯಲ್ಲಿಯೇ ಇಟ್ಟನು. ಇದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ ʼಭಜರಂಗಿ-2ʼ ಚಿತ್ರದ ಡೈಲಾಗ್. ಈ ಡೈಲಾಗ್‌ನಂತಾಗಿಯೇ ಇದೆ ಭೂಮಂಡಲದ ಪರಿಸ್ಥಿತಿ. ಚೀನಿ ಕ್ರಿಮಿ ಕೊರೊನಾದಿಂದ ಮನುಕುಲವೇ ನರನರ ನಲುಗಿದೆ. ಅದಕ್ಕೆ ಪರಿಹಾರವೂ ಸಿಕ್ಕಿದೆ ಕೋವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್, ಸ್ಪುಟ್ನಿಕ್, ಮೊಡೊರ್ನಾ ಹೀಗೆ ವಿವಿಧ ರೀತಿಯ ವ್ಯಾಕ್ಸಿನೇಷನ್ ಸಿಕ್ಕಿದೆ. ಇದರಿಂದ ಮನುಕುಲ ನಿಟ್ಟುಸಿರು ಬಿಟ್ಟಿದೆ. ಆದರೆ, ಗಂಧದಗುಡಿ ನೆಮ್ಮದಿಯಾಗಿ ಉಸಿರಾಡುವುದಕ್ಕೆ ಇನ್ನೂ ಸಾಧ್ಯವಾಗ್ತಿಲ್ಲ.

ಜಗತ್ತಿನಲ್ಲಿ ಕೊರೊನಾ ಅಟ್ಟಹಾಸ ಶುರುವಾಗಿ ಹತ್‌ಹತ್ರ ಎರಡು ವರ್ಷ ಆಗುತ್ತಾ ಬಂತು. ಚೀನಾದಿಂದ ಎಗರಿಎಗರಿಕೊಂಡು ಕರ್ನಾಟಕಕ್ಕೆ ಕಾಲಿಟ್ಟ ಕೊರೊನಾ ಬಣ್ಣದ ಲೋಕವನ್ನು ಬಂದ್ ಮಾಡ್ಸಿ ರೌದ್ರನರ್ತನ ಶುರುವಿಟ್ಟುಕೊಂಡ್ತು. ಹೀಗೆ ಶುರುವಾದ ಕಾಣದ ಕ್ರಿಮಿಯ ನರ್ತನಕ್ಕೆ ಚಂದನವನ ಹೈರಣಾಗಿ ಹೋಗಿದೆ. ಸ್ಯಾಂಡಲ್‌ವುಡ್ ಬಳಲಿ ಬೆಂಡಾಗಿ ಬಸವಳಿದಿದೆ. ಬೆಳ್ಳಿತೆರೆ ಮಂಕಾಗಿದೆ, ಬಾಕ್ಸ್ಆಫೀಸ್ ಕೋಮಾಗೆ ಹೋಗಿದೆ. ಇದೆಲ್ಲದರ ಪರಿಣಾಮ ಬಣ್ಣವನ್ನೇ ನಂಬಿಕೊಂಡು ಬದುಕುವ ಸಣ್ಣಪುಟ್ಟ ಕಲಾವಿದರು, ದಿನಗೂಲಿ ಕಾರ್ಮಿಕರು, ಚಿತ್ರಮಂದಿರದಲ್ಲಿ ಕೆಲಸ ನಿರ್ವಹಿಸುವವರು ಸೇರಿದಂತೆ ಥಿಯೇಟರ್ ಮಾಲೀಕರು, ವಿತಕರು, ಪ್ರದರ್ಶಕರು, ಅನ್ನದಾತರು ಹೀಗೆ ಒಬ್ಬಿಬ್ಬರಲ್ಲ ಬಿಡಿ ಸಿನಿಮಾವನ್ನೇ ನಂಬಿಕೊಂಡಿರು ವವರೆಲ್ಲಾ ಅಕ್ಷರಶಃ ಆಕಾಶ ನೋಡಿದರು. ಈಗಲೂ ಅವರ ಪರಿಸ್ಥಿತಿ ಕೊಂಚ ಚಿಂತಾಜನಕ. ಹೀಗಾಗಿ, ಗಂಧದಗುಡಿಯ ಕ್ಯಾಪ್ಟನ್ ಆಫ್ ದಿ ಶಿಪ್ ಉರುಫ್ ಗಂಧದಗುಡಿಯ ಅಧಿಪತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ದೃಢ ನಿರ್ಧಾರಕ್ಕೆ ಬಂದಿದ್ದಾರೆ.

ಯಸ್, ಎಷ್ಟು ದಿನ ಅಂತ ಕಾರ್ಮಿಕರು ಹಾಗೂ ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುವುದನ್ನ ನೋಡಲಿ, ಇನ್ನೆಷ್ಟು ದಿನ ಅಂತ ಕಾಣದ ಕ್ರಿಮಿಗೆ ಹೆದರಿಕೊಂಡು ಕೂರಲಿ. ನೋ ನೋ.. ಇನ್ನೂ ಕೈಕಟ್ಟಿ ಕೂರೋದಕ್ಕೆ ಆಗಲ್ಲ ಭಂಡಧೈರ್ಯ ಮಾಡಿಬಿಡುವ ಅಂತ ಶಿವಣ್ಣ ತಮ್ಮ ಭಜರಂಗಿ ಟೀಮ್‌ಗೆ ಹೊಸ ಹುರುಪು ತುಂಬಿದ್ದಾರೆ. ಆಗಿದ್ದಾಗಲೀ, ಆಕಾಶ ತಲೆಕೆಳಗಾಗಲಿ ಭಜರಂಗಿ-2' ಸಿನಿಮಾನ ಬಿಡುಗಡೆ ಮಾಡೆಬಿಡೋಣ ಅಂತ ಅನ್ನದಾತರನ್ನು ಒಪ್ಪಿಸಿದ್ದಾರೆ.ಟಗರು ಚಿತ್ರದಲ್ಲಿ ಸುಬ್ಬಿ ಅಂಕಲ್‌ನ ಹೊಡೆದ ಹಾಗೇ’ ಕೊರೊನಾನ ಹೊಡೆದು ಬಿಸಾಕಬೇಕು. ಬಿಗ್‌ಸ್ಕ್ರೀನ್ ಗೆ ಲಗ್ಗೆ ಇಡಲೆಬೇಕು, ಸಾಗರೋಪಾದಿಯಲ್ಲಿ ಪ್ರೇಕ್ಷಕ ಮಹಾಶಯರನ್ನ ಚಿತ್ರಮಂದಿರಕ್ಕೆ ಕರೆತರಲೆಬೇಕು, ಬೆಳ್ಳಿತೆರೆಯನ್ನ ನಗಿಸಲೆಬೇಕು, ಬಾಕ್ಸ್ಆಫೀಸ್‌ನ ಬೆಚ್ಚಿಸಲೆಬೇಕು, ಅನ್ನದಾತರ ಖಜಾನೆಗೆ ಭರಪೂರ ಹಣ ಹರಿದುಬರುವಂತೆ ಮಾಡ್ಬೇಕು ಹೀಗಂತ ಭಜರಂಗಿ-2 ಬಳಗ ದೃಢ ಸಂಕಲ್ಪ ಮಾಡಿದೆ.

ಹಾಗಾದ್ರೆ, ಭಜರಂಗಿ ಅಖಾಡಕ್ಕೆ ಇಳಿಯೋದು ಯಾವಾಗ? ಬಿಗ್‌ಸ್ಕ್ರೀನ್ ಮೇಲೆ ಭಜರಂಗಿ-2 ಅಬ್ಬರ ಯಾವಾಗ ಶುರುವಾಗುತ್ತೆ? ಸಿಲ್ವರ್‌ಸ್ಕ್ರೀನ್ ಮೇಲೆ ಹೇಗಿರಲಿದೆ ಭಜರಂಗಿಯ ಘರ್ಜನೆ? ಈ ಪ್ರಶ್ನೆಯ ಜೊತೆಗೆ ಸರ್ಕಾರ ಇನ್ನೂ ಶೇಕಡ 100 ರಷ್ಟು ಅನುಮತಿ ಕೊಟ್ಟಿಲ್ಲವಲ್ಲಾ ಗುರು ಅದ್ಹೇಗೆ ರಿಲೀಸ್ ಮಾಡ್ತಾರೆ. 50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲಿ ಭಜರಂಗಿ-2 ಚಿತ್ರವನ್ನು ತೆರೆಗೆ ತರೋದಕ್ಕೆ ನಿರ್ಧಾರ ಮಾಡಿದ್ದಾರಾ? ಅಪ್‌ಕೋರ್ಸ್ ಸರ್ಕಾರ 100ರಷ್ಟು ಅನುಮತಿ ಕೊಡೋದಕ್ಕೆ ಇನ್ನೂ ತಡಮಾಡಿದ್ರೆ, ಕೊರೊನಾ ಮೂರನೇ ಅಟ್ಟಹಾಸ ನೋಡಿಕೊಂಡು ಚಿತ್ರಮಂದಿರಕ್ಕೆ 100 ರಷ್ಟು ಅನುಮತಿ ಕೊಡ್ತೀವಿ ಅಂತ ಏನಾದರೂ ಹೇಳಿದರೆ ಅಲ್ಲಿವರೆಗೂ ಕಾಯೋದಕ್ಕೆ ಆಗಲ್ಲ. ಹೀಗಾಗಿ50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲಿ ಭಜರಂಗಿ-2 ಚಿತ್ರವನ್ನ ರಿಲೀಸ್ ಮಾಡುತ್ತಾರೆ. ಸೆಪ್ಟೆಂಬರ್ 1 ರಂದು ಟ್ರೇಲರ್ ರಿಲೀಸ್ ಮಾಡಿ ಸೆಪ್ಟೆಂಬರ್ 10 ರಂದು 250 ಥಿಯೇಟರ್ ಹಾಗೂ ಮೆಜೆಸ್ಟಿಕ್‌ನಲ್ಲೇ 3 ಥಿಯೇಟರ್‌ನಲ್ಲಿ ಭಜರಂಗಿ-೨ ಮೂವೀನಾ ಅದ್ದೂರಿಯಾಗಿ ಬಿಡುಗಡೆ ಮಾಡ್ತಾರೆ.

ಎ. ಹರ್ಷ ನಿರ್ದೇಶನದ ಭಜರಂಗಿ-2 ಚಿತ್ರದ ಮೇಲೆ ಸಾಗರದಷ್ಟು ನಿರೀಕ್ಷೆಯಿದೆ. ಎಂಟು ವರ್ಷಗಳ ನಂತರ ತಯ್ಯಾರಾಗಿರುವ ಸೀಕ್ವೆಲ್ ಸೆಟ್ಟೇರಿದಾಗಿನಿಂದಲೂ ಕೂತೂಹಲ ಕಾಯ್ದಿರಿಸಿಕೊಂಡು ಬಂದಿದೆ. ಭಜರಂಗಿ ಉರುಫ್ ಶಿವಣ್ಣ ಮಾತ್ರವಲ್ಲ ಸಿಗಾರ್ ಕೈಲಿಡಿದಿರುವ ಶ್ರುತಿ, ಕಾಟನ್ ಸೀರೆಯುಟ್ಟು ಕಣ್ಣಕ್ಕಿಳಿದಿರುವ ಭಾವನಾ, ಸೌರವ್ ಲೋಕಿ ಸೇರಿದಂತೆ ಪ್ರತಿ ಪಾತ್ರವೂ ಕೂಡ ಮೊದಲ ನೋಟದಲ್ಲೇ ಬೆಚ್ಚಿಬೀಳಿಸ್ತಿದೆ. ಟ್ರೈಲರ್ ಹಾಗೂ ಹಾಡು ಮೈ ಜುಮ್ ಎನ್ನಿಸಿದೆ. ಜಯ್ಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ ಕೋಟಿ ವೆಚ್ಚದಲ್ಲಿ ಶಿಲೆಯಂತೆ ತಯ್ಯಾರಾಗಿರುವ ಭಜರಂಗಿ-2 ಚಿತ್ರವನ್ನು ತೆರೆಮೇಲೆ ನೋಡಿ ಆನಂದಿಸಬೇಕಿದೆ. ಆ ಅದ್ಬುತ ಕ್ಷಣ ಕೆಲವೇ ದಿನಗಳಲ್ಲಿ ಬರಲಿದೆ. ದರ್ಶನ್-ಸುದೀಪ್-ಪುನೀತ್-ಯಶ್‌ಗಿಂತ ಮೊದಲೇ ಶಿವಣ್ಣ ಅಖಾಡಕ್ಕೆ ಇಳಿಯಲಿದ್ದಾರೆ. ಕೊರೊನಾದಿಂದ ಪಾತಾಳಕ್ಕೆ ಕುಸಿದಿರುವ ಸ್ಯಾಂಡಲ್‌ವುಡ್‌ನ ಎತ್ತಿಕಟ್ಟಲಿದ್ದಾರೆ. ಇಂಡಸ್ಟ್ರಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಲಿದ್ದಾರೆ ಒನ್ ಅಂಡ್ ಒನ್ಲೀ ಶಿವಣ್ಣ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!