Categories
ಸಿನಿ ಸುದ್ದಿ

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಕೆವಿಎನ್ ಸ್ಪೆಷಲ್ ಗಿಫ್ಟ್: ನ್ಯೂ ಲುಕ್ ನಲ್ಲಿ ಶಿವಣ್ಣ

ಕೆವಿಎನ್-ಪವನ್ ಒಡೆಯರ್-ಶಿವಣ್ಣ ಕಾಂಬಿನೇಷನ್ ಸಿನಿಮಾ ಹೆಸರು ಬೇಲ್

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ನಿರ್ದೇಶಕ ಪವನ್‌ ಒಡೆಯರ್‌ ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಬಹು ನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ನ್ನು ಇಂದು ಅಣ್ಣಾವ್ರ ಜನ್ಮೋತ್ಸವದ ಅಂಗವಾಗಿ ಅನಾವರಣ ಮಾಡಲಾಗಿದೆ.

ವೆಂಕಟ್ ಕೆ ನಾರಾಯಣ್, ಶಿವಣ್ಣ ಹಾಗೂ ಪವನ್ ಒಡೆಯರ್ ಕಾಂಬೋದ ಈ ಸಿನಿಮಾಗೆ ಬೇಲ್ ಎಂಬ ಟೈಟಲ್ ಇಡಲಾಗಿದೆ. ಮಳೆ‌ಯಲ್ಲಿ ಛತ್ರಿ ಹಿಡಿದು ಶಿವಣ್ಣ‌‌ ನಿಂತಿರುವ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.

ಈ ಮಹತ್ವಾಕಾಂಕ್ಷೆ ಪ್ರಾಜೆಕ್ಟ್ ನ್ನು ವೆಂಕಟ್ ಕೆ ನಾರಾಯಣ್ ಅವರು ತಮ್ಮದೇ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ರೇಮೋ ಸೇರಿದಂತೆ ಅನೇಕ‌ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಪವನ್ ಶಿವಣ್ಣಗೆ ಆಕ್ಷನ್ ಕಟ್ ಹೇಳಬೇಕೆಂಬ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಪವನ್ ಒಡೆಯರ್, “ಇದು ನನಗೂ ಮತ್ತು ನಿರ್ಮಾಣ ಸಂಸ್ಥೆಗೂ ಅತ್ಯಂತ ವಿಶೇಷವಾದ ಸಿನಿಮಾವಾಗಲಿದೆ. ನಿಮಗಾಗಿ ನಾವು ಬಹಳಷ್ಟು ಕಾಯ್ದಿರಿಸಿದ್ದೇವೆ ಮತ್ತು ಶೀಘ್ರದಲ್ಲೇ ಟೀಸರ್ ಅನ್ನು ಘೋಷಿಸುತ್ತೇವೆ. ಶಿವಣ್ಣ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸು ನನಸಾಗಿದೆ. ಅವರು ದಶಕಗಳಿಂದ ಐಕಾನ್ ಆಗಿದ್ದಾರೆ ಮತ್ತು ಹಿಂದೆಂದೂ ಮಾಡದ ರೀತಿಯಲ್ಲಿ ಅವರನ್ನು ಪ್ರಸ್ತುತಪಡಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ” ಎಂದರು.

‘ಬೇಲ್’ ನಮಗೆ ಬಹಳ ವಿಶೇಷವಾದ ಯೋಜನೆಯಾಗಿದ್ದು, ಇದು ಬಲವಾದ ಕಥೆ ಹೇಳುವಿಕೆಯನ್ನು ವಿಶಿಷ್ಟ ಸಿನಿಮೀಯ ದೃಷ್ಟಿಕೋನದೊಂದಿಗೆ ಸಮತೋಲನಗೊಳಿಸುತ್ತದೆ. ಪವನ್ ಒಡೆಯರ್ ಅವರಂತಹ ಸಾಬೀತಾದ ಕಥೆಗಾರರೊಂದಿಗೆ ಕೈ ಜೋಡಿಸುವುದು ಮತ್ತು ಶಿವಣ್ಣ ಅವರಂತಹ ಐಕಾನ್ ಜೊತೆಗೆ ಕೆಲಸ ಮಾಡುವುದು ಸಂಪೂರ್ಣ ಗೌರವವಾಗಿದೆ ಮತ್ತು ಅರ್ಥಪೂರ್ಣ ಸಿನಿಮಾವನ್ನು ನೀಡುವ ನಮ್ಮ ಉದ್ದೇಶದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಪ್ರೇಕ್ಷಕರು ಇಲ್ಲಿಯವರೆಗೆ ನೋಡಿರದ ಹೊಸ ದೃಷ್ಟಿಕೋನದಲ್ಲಿ ಶಿವಣ್ಣ ಅವರನ್ನು ಪ್ರಸ್ತುತಪಡಿಸಲು ನಾವು ವಿಶೇಷವಾಗಿ ಎದುರು ನೋಡುತ್ತಿದ್ದೇವೆ’ ವೆಂಕಟ್ ಕೆ‌ ಕೊನಂಕಿ ಹೇಳಿದ್ದಾರೆ.

Categories
ಸಿನಿ ಸುದ್ದಿ

ಅಣ್ಣ from Mexico’ ಟೀಸರ್ ಬಂತು: ಕನ್ನಡ ಚಿತ್ರರಂಗದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೀಗಂದ್ರು

ನಟ ರಾಕ್ಷಸ ಡಾಲಿ ಧನಂಜಯ್ ನಟಿಸುತ್ತಿರುವ ‘ಅಣ್ಣ from Mexico’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಟೀಸರ್ ಬಿಡುಗಡೆಗೊಳಿಸಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಟೀಸರ್ ಥ್ರಿಲ್ಲಿಂಗ್ ಆಗಿದೆ. ಹೊಸತನದಿಂದ ಕೂಡಿದೆ. ಶ್ರೀಮಂತಿಕೆಯಿಂದ ಕಾಣಿಸುತ್ತಿದೆ. ಧನಂಜಯ್ ಆಕ್ಟಿಂಗ್ ಸೂಪರ್. ‌ಅದ್ರಲ್ಲೂ ಕರ್ನಾಟಕ ಲಾಕೆಟ್ ಬಹಳಷ್ಟು ಇಷ್ಟವಾಯ್ತು. ಮನಸ್ಸಿಗೆ ಸಮಾಧಾನವಾಯ್ತು. ಟೀಸರ್ ನೋಡಿದರೆ ಸಿನಿಮಾ ಹೇಗಿರಲಿದೆ ಎಂಬ ಕ್ಯೂರಿಯಾಸಿಟಿ ಹೆಚ್ಚಿಸುತ್ತದೆ.

ನಾವು ಚಿತ್ರರಂಗಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಚಿತ್ರ ನಿರ್ಮಾಣಕ್ಕಿಳಿದಿದ್ದೇವೆ. ಕನ್ನಡ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ಕನ್ನಡ ಚಿತ್ರರಂಗ ಸಾಕಷ್ಟು ಶ್ರೀಮಂತವಾಗಿದೆ. ಈ ಚಿತ್ರದ ಕಥೆ ಕೇಳಿದೆವು ಇಷ್ಟವಾಯ್ತು. ಚಿತ್ರದಲ್ಲಿ ಒಂದೊಳ್ಳೆ ಪ್ರಯೋಗ ಮಾಡುವ ಉದ್ದೇಶದಿಂದ ಚಾಮುಂಡಿ ಆಶೀರ್ವಾದ ಪಡೆದು ಈ ಜರ್ನಿ ಶುರು ಮಾಡಿದೆವು ಎಂದರು.

ಡಾಲಿ ಧನಂಜಯ್ ಮಾತನಾಡಿ, ಈ ಸಿನಿಮಾ ಶುರುವಾದ ಪ್ರೊಸೆಸ್ ನನಗೆ ಬಹಳ ಖುಷಿ. ಹೊಯ್ಸಳ ಸಿನಿಮಾ ಬೆಳಗಾವಿಯಲ್ಲಿ ನಡೆಯುವಾಗ ಲಕ್ಷ್ಮೀ ಮೇಡಂ ಮನೆಗೆ ಹೋಗಿ ಊಟ ಮಾಡ್ಕೊಂಡು ಬರುವಾಗ ನಮ್ಮ ಬ್ರದರ್ ಗೆ ಸಿನಿಮಾ ಮಾಡುವ ಇಂಟ್ರೆಸ್ಟ್ ಇದೆ. ಏನು ಮಾಡಬಹುದು ನೋಡಿ ಎಂದಿದ್ದರು. ಆ ಬಳಿಕ ಈ ಜರ್ನಿ ಶುರುವಾಯ್ತು. ಚೆನ್ನಾರಾಜು ಅವರು ಪ್ರೊಡಕ್ಷನ್ ‌ಮಾಡಿದ್ದಾರೆ ಎಂಬುವುದು ಗೊತ್ತಾಯ್ತು. ಅವರಿಗೆ ಸಖತ್ ಸ್ಟೈಲೀಶ್ ಆಗಿ, ಆಕ್ಷನ್ ಈ ರೀತಿ ನನ್ನನ್ನು ತೋರಿಸಬೇಕು ಎಂದುಕೊಂಡಿದ್ದರು. ಆದರೆ ಮೇಡಂ ಬರ್ತಾರೆ ಎಂದಾಗ ಆಕ್ಷನ್. ಮಾತ್ರವಲ್ಲ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಇರಬೇಕು ಎಂದುಕೊಂಡೆವು. ಯಾಕೆಂದರೆ ಅವರು ಜವಾಬ್ದಾರಿಯುವ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ ನಾವು ಬಡವ ರಾಸ್ಕಲ್ ಡೈರೆಕ್ಟರ್ ಅವರನ್ನು ಆಯ್ಕೆ ಮಾಡಿದೆವು. ಹೀಗೆ ಒಳ್ಳೆ ಟೀಂ ಆಯ್ತು ಎಂದರು.

ಚಿತ್ರಕ್ಕೆ ನಿರ್ದೇಶಕ ಶಂಕರ್‌ ಗುರು ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದು, ಸಿನಿಮಾದಲ್ಲಿದ್ದ ರಂಗಾಯಣ ರಘು, ನಾಗಭೂಷಣ, ಪೂರ್ಣ ಮೈಸೂರು ಈ ಚಿತ್ರದ ಮುಖ್ಯ ತಾರಾಗಣದಲ್ಲಿದ್ದು, ವಾಸುಕಿ ವೈಭವ್‌ ಸಂಗೀತ, ಅಜಯ್ ಸಂಕಲನ , ಗುಣ ಕಲಾ ನಿರ್ದೇಶನ ಚಿತ್ರಕ್ಕಿದೆ. ಐರಾ ಫಿಲ್ಮ್ಸ್​ ಹಾಗೂ ರಾಯಲ ಸ್ಟುಡಿಯೋಸ್​​​​ ಬ್ಯಾನರ್​​ ಅಡಿ ಚಿತ್ರ ನಿರ್ಮಾಣವಾಗುತ್ತಿದೆ.

ಈ ಹಿಂದೆ ಬಡವ ರಾಸ್ಕಲ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಅದೇ ತಂಡ ‘ಅಣ್ಣ from Mexico’ಗಾಗಿ ಒಂದಾಗಿದೆ. ಬಹಳ ಅದ್ದೂರಿಯಾಗಿ ಚಿತ್ರವನ್ನು ಕಟ್ಟಿಕೊಡುತ್ತಿದೆ.

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ, ಚಿತ್ರದ ನಾಯಕ ಡಾಲಿ ಧನಂಜಯ್, ನಟಿ ರೀಷ್ಮಾ ನಾಣಯ್ಯ, ಚಿತ್ರದ ನಿರ್ದೇಶಕರಾದ ಶಂಕರ್‌ ಗುರು, ಸಹ ನಿರ್ಮಾಪಕರಾದ ಸತ್ಯ ರಾಯಲ, Z studiosನ ದಿವ್ಯಾ, ಆನಂದ್ ಆಡಿಯೋದ ಶ್ಯಾಮ್, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ನಾಗಭೂಷಣ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ‌

Categories
ಸಿನಿ ಸುದ್ದಿ

ರುದ್ರಕಾಲದಲ್ಲಿ ದಿಗಂತ್: ಬಂಡೆ ಮಹಾಕಾಳಿ ದೇವಾಲಯದಲ್ಲಿ ಪೂಜೆ

ದಿಗಂತ್ ಅಭಿನಯದ “ರುದ್ರ ಕಾಲ” ಚಿತ್ರದ ಮುಹೂರ್ತ ಸಮಾರಂಭ ಬುಧವಾರ ಬೆಳಗ್ಗಿನ ಸುಮುಹೂರ್ತದಲ್ಲಿ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ನಿರ್ದೇಶಕ ಯೋಗರಾಜ್ ಭಟ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು. ನಿರ್ದೇಶಕ ರಾಜ್ ಗುರು ಕ್ಯಾಮೆರಾ ಚಾಲನೆ ಮಾಡಿದರು.

ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಗೋಪಿ, ನಾನು ತೆಲುಗಿನಲ್ಲಿ ಎರಡು, ಕನ್ನಡದಲ್ಲಿ ಒಂದು ಚಿತ್ರ ನಿರ್ದೇಶನ ಮಾಡಿದ್ದೇನೆ‌. “ರುದ್ರ ಕಾಲ” ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಈ ಚಿತ್ರ ಕೂಡ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಇದು ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಎಮೋಷನ್ ಕಥಾಹಂದರ ಹೊಂದಿರುವ ಚಿತ್ರ.

ಇತ್ತೀಚೆಗೆ ಖ್ಯಾತ ನಟಿ ಸಮಂತ ನಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿಕೊಟ್ಟಿದ್ದರು. ನನ್ನ ಸಹೋದರ ರಮೇಶ್ ಅವರೆ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ದಿಗಂತ್ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಅಧ್ಯಕ್ಷ” ಚಿತ್ರದ ನಾಯಕಿ ಹೆಬಾ ಪಟೇಲ್ ಬಹಳ ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ವಂಶಿ, ನಟ ಗೋವಿಂದೇ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ‌.

ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ, ರುದ್ರ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಚನ್ನಯ್ಯ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರವನ್ನು ರಮೇಶ್ ನಾಯ್ಕ ಅವರು ನಿರ್ಮಿಸುತ್ತಿದ್ದಾರೆ. ರಂಜಿತ ನವೀನ್ ಸಹ ನಿರ್ಮಾಪಕರು. ಮೇ ತಿಂಗಳಲ್ಲಿ ಬೆಂಗಳೂರಿನಲ್ಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಚಾಲನೆ ನೀಡಿದ ಯೋಗರಾಜ್ ಭಟ್ ಹಾಗೂ ರಾಜ್ ಗುರು ಅವರಿಗೆ ಧನ್ಯವಾದ ಎಂದರು.

ನಾನು ಕಳೆದವರ್ಷ ಎರಡು ಹೊಸಚಿತ್ರಗಳನ್ನು ಒಪ್ಪಿಕೊಂಡಿದ್ದೆ. ಆದರೆ ಚಿತ್ರರಂಗದ ಈಗಿನ ಪರಿಸ್ಥಿತಿ ನೋಡಿ ಅವರು ಇನ್ನೂ ಚಿತ್ರ ಆರಂಭ ಮಾಡಿಲ್ಲ. ಆದರೆ ಈ ಚಿತ್ರದ ನಿರ್ಮಾಪಕ ರಮೇಶ್ ನಾಯ್ಕ ಅವರು “ರುದ್ರ ಕಾಲ” ಚಿತ್ರವನ್ನು ಆರಂಭ ಮಾಡಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಜೊತೆಗೆ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ‌‌. ರಮೇಶ್ ಅವರು ಒಳ್ಳೆಯ ಕಥೆ ಬರೆದಿದ್ದಾರೆ.

ನಿರ್ದೇಶಕ ಗೋಪಿ ಅವರು ಕಥೆ ಹೇಳುವಾಗಲೇ ನನಗೆ ಕಥೆ ಬಹಳ ಇಷ್ಟವಾಯಿತು‌. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಯೋಗರಾಜ್ ಭಟ್ ಅವರು ಬಂದು ಚಿತ್ರಕ್ಕೆ ಚಾಲನೆ ನೀಡಿದ್ದು ಬಹಳ ಖುಷಿಯಾಗಿದೆ ಎಂದು ನಾಯಕ ದಿಗಂತ್ ತಿಳಿಸಿದರು.

“ಅಧ್ಯಕ್ಷ” ನಂತರ ಹತ್ತು ವರ್ಷಗಳ ಬಳಿಕ ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೇ‌ನೆ. ಆ ಚಿತ್ರಕ್ಕೆ ಕನ್ನಡಿಗರು ತೋರಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ ಎಂದರು ನಾಯಕಿ ಹೆಬಾ ಪಟೇಲ್.
ನಿರ್ದೇಶಕ ಗೋಪಿ ಅವರು ಹೇಳಿದ ಕಥೆ ಇಷ್ಟವಾಯಿತು. ದಿಗಂತ್ ಅವರೆ ಈ ಚಿತ್ರಕ್ಕೆ ಸೂಕ್ತ ನಾಯಕ ಎನಿಸಿತು. ಇಂದು ನಮ್ಮ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಆಗಮಿಸಿದ ಗಣ್ಯರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ನಾಯ್ಕ. ಸಹ ನಿರ್ಮಾಪಕಿ ರಂಜಿತ ನವೀನ್ ಮಾತನಾಡಿ, ನಮ್ಮ ಹೊಸಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.


ಕಥೆಯ ಬಗ್ಗೆ ರಮೇಶ್ ಮಾಹಿತಿ ನೀಡಿದರು. ಕಾರ್ಯಕಾರಿ ನಿರ್ಮಾಪಕ ಶಿವರಾಜ್, ನಟಿ ವಂಶಿ, ನಟ ಗೋವಿಂದೇಗೌಡ, ಛಾಯಾಗ್ರಾಹಕ ಕ್ರಿಸ್ಟೋಫರ್ ಜೋಸೆಫ್, ಸಾಹಸ ನಿರ್ದೇಶಕ ಚನ್ನಯ್ಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ತಾಯತ ಸ್ಪರ್ಶಕ್ಕೆ ಜೆರಾಕ್ಸ್ ಮೆಶಿನ್ ನ ಅದ್ಭುತ ಪವಾಡ!

ವೆಬ್ ಸೀರಿಸ್ ವಿಮರ್ಶೆ : ವಿಭ

ವೆಬ್ ಸೀರಿಸ್: ಜೆರಾಕ್ಸ್
ನಿರ್ದೇಶನ: ಶ್ರೀನಿಧಿ ಬೆಂಗಳೂರು
ನಿರ್ಮಾಣ: ಡಾಲಿ ಪಿಕ್ಚರ್ಸ್
ತಾರಾಗಣ: ನಾಗಭೂಷಣ್, ಪಾಯಲ್, ಓಂ ಪ್ರಕಾಶ್ ರಾವ್, ಮಂಜು ಪಾವಗಡ, ವಿಜಯ ಪ್ರಸಾದ್, ಉಷಾ ಭಂಡಾರಿ, ಸುಧಾಕರ್, ಜಗ್ಗಪ್ಪ ಇತರರು.

ಇದು ಭ್ರಮೇನಾ…? ಆ ಜೆರಾಕ್ಸ್ ಅಂಗಡಿ ಪ್ರಕಾಶನಿಗೆ ಇಂಥದ್ದೊಂದು ಪ್ರಶ್ನೆ ಎದುರಾಗೋಕೆ ಕಾರಣ ಆ ಜೆರಾಕ್ಸ್ ಮೆಷಿನ್ ಮಾಡುವ ಪವಾಡ!

ಹೌದು, ಜೀ5 ಒರಿಜಿನಲ್ಸ್ ನಲ್ಲಿ ಏಪ್ರಿಲ್ 24ಕ್ಕೆ ಜೆರಾಕ್ಸ್ ವೆಬ್ ಸೀರಿಸ್ ಪ್ರಸಾರವಾಗಲಿದೆ. ಅದಕ್ಕೂ ಮುನ್ನ ಪ್ರದರ್ಶನಗೊಂಡ ಜೆರಾಕ್ಸ್ ವೆಬ್ ಸೀರಿಸ್ ನ ಮೂರು ಎಪಿಸೋಡ್ ಕಂಪ್ಲೀಟ್ಲಿ ಹೊಸತಾಗಿದೆ. ಅಷ್ಟೇ ಅಲ್ಲ, ಇಲ್ಲಿ ಹೊಸ ಐಡಿಯಾ ಇದೆ, ಅಷ್ಟೇ ಜಾಣತನ ಎದ್ದು ಕಾಣುತ್ತೆ ಆ ಕಾರಣಕ್ಕೆ ಜೆರಾಕ್ಸ್ ಪಕ್ಕಾ ಒರಿಜಿನಲ್ ಕಥೆಯಾಗಿ ನೋಡುಗರನ್ನ ಕುತೂಹಲಕ್ಕೆ ಕರೆದೊಯ್ಯುತ್ತೆ.

ವೆಬ್ ಸೀರಿಸ್ ಅಂದರೆ ಅಲ್ಲೊಂದ್ ಥ್ರಿಲ್ ಇರಬೇಕು. ಮಜ ಅನಿಸಬೇಕು. ಏನೋ ಇದೆ ಅನ್ನೋ ಕಾಯುವಿಕೆ ಇರಬೇಕು. ಹೀಗೆ ಇನ್ನು ಹತ್ತು ಹಲವು ಅಂಶಗಳು ಇಲ್ಲಿ ನೋಡುಗರನ್ನ ಸೆಳೆಯುತ್ತಾ ಹೋಗುತ್ತವೆ.

ಜೆರಾಕ್ಸ್ ಸಿಂಪಲ್ ಸ್ಟೋರಿ ಅನ್ನುವಂತಿಲ್ಲ. ಇದೊಂದು ಹೊಸ ಕ್ರೇಜಿತನದಿಂದ ಹುಟ್ಟಿಕೊಂಡ ಕಥೆ. ಹಾಗಾಗಿ ಇದು ರುಚಿಸುತ್ತಾ ಹೋಗುತ್ತೆ. ಕಥೆ, ನಿರೂಪಣೆ, ಪಾತ್ರಗಳು, ಮಾತುಗಳು, ದೃಶ್ಯ ವೈಭವ ಎಲ್ಲವೂ ಜೆರಾಕ್ಸ್ ವೇಗಕ್ಕೆ ಹೆಗಲು ಕೊಟ್ಟಿವೆ. ಇಪ್ಪತ್ತು ನಿಮಿಷದ ಎಪಿಸೋಡ್ ಮುಗಿಯೋದೆ ಗೊತ್ತಾಗದಂತೆ ಥ್ರಿಲ್ಲಿಂಗ್ ರೈಡ್ ಮಾಡಿಸುವ ತಾಕತ್ತು ಜೆರಾಕ್ಸ್ ಗಿದೆ.

ಕಥೆ ಏನು?

ಪ್ರಕಾಶ (ನಾಗಭೂಷಣ) ಎಂಬ ಹುಡುಗನಿಗೆ ಆತನ ದೊಡ್ಡಪ್ಪ ( ಓಂಪ್ರಕಾಶ್ ರಾವ್) ಒಂದು ಹಳೆಯ ಜೆರಾಕ್ಸ್ ಮೆಷಿನ್ ಅಂಗಡಿಯೊಂದನ್ನು ಹಾಕಿ ಕೊಟ್ಟಿರುತ್ತಾರೆ. ಹಳೇ ಜೆರಾಕ್ಸ್ ಮೆಷಿನ್ ಜೊತೆ ಒದ್ದಾಡಿ ರೋಸಿ ಹೋಗುವ ಪ್ರಕಾಶನಿಗೆ ಸೂಜಿ ( ಪಾಯಲ್) ಎಂಬ ಹುಡುಗಿ ಮೇಲೆ ಲವ್. ಆಕೆಗೆ ಇನ್ನೊಬ್ಬನ ಮೇಲೆ ಲವ್.

ಈ ನಡುವೆ ಪ್ರಕಾಶನ ಬಾಲ್ಯದ ಫ್ಲ್ಯಾಶ್ ಬ್ಯಾಕ್. ಅಲ್ಲಿ ಅವನ ಅಪ್ಪ ಅಮ್ಮ ಬಾಲಕ ಪ್ರಕಾಶನಿಗೆ ದೇವರೊಂದರ ಬಳಿ ಹೋಗಿ ಆಶೀರ್ವಾದ ಪಡೆದಿರುತ್ತಾರೆ. ಆ ಪೂಜಾರಿ ದೈವದ ಮುಂದೆ ನಿಲ್ಲಿಸಿ ತಾಯತವೊಂದನ್ನು ಕಟ್ಟುತ್ತಾರೆ. ಆ ತಾಯತಕ್ಕೆ ಅಗಾಧ ಶಕ್ತಿ. ಇಪ್ಪತ್ತು ವರ್ಷದವರೆಗೆ ಆ ತಾಯತದ ಶಕ್ತಿ ಅರಿಯದ ಪ್ರಕಾಶನಿಗೆ ಒಂದು ಹಂತದಲ್ಲಿ ಪವಾಡ ನಡೆಯುತ್ತೆ. ಅದೇ ಜೆರಾಕ್ಸ್ ನ ಸಸ್ಪೆನ್ಸ್.

ಇಲ್ಲಿ ಜೆರಾಕ್ಸ್ ಮೆಷಿನ್ ಕೂಡ ಒಂದು ಪಾತ್ರ. ಆ ಮೆಷಿನ್ ವಿಶೇಷತೆ ಏನಪ್ಪಾ ಅಂದರೆ, ಯಾವುದೇ ಫೋಟೋ ಜೆರಾಕ್ಸ್ ಇಟ್ಟರೆ ಆ ಫೋಟೋದಲ್ಲಿ ಇರುವ ವ್ಯಕ್ಯಿ ಪ್ರತ್ಯಕ್ಷನಾಗ್ತಾನೆ. ಅದು ಆ ತಾಯತದ ಶಕ್ತಿ. ಆಮೇಲೆ ಏನೆಲ್ಲಾ ಗೊಂದಲ, ಅವಘಡ ನಡೆಯುತ್ತೆ ಅಂತ ಗೊತ್ತಾಗಬೇಕಾದರೆ ಒಮ್ಮೆ ಜೆರಾಕ್ಸ್ ನೋಡಿ.

ಜೆರಾಕ್ಸ್ ವಾಸ್ತವದ ಕಥೆ ಅಲ್ಲದಿದ್ದರೂ, ವಾಸ್ತವ ಸನ್ನಿವೇಶಗಳನ್ಬು ಸೂಕ್ಷ್ಮವಾಗಿ ಬಿಂಬಿಸಲಾಗಿದೆ.
ಇಲ್ಲಿ ಅಸಹಾಯಕತೆ ಇದೆ, ಗೆಳೆತನವಿದೆ, ಪ್ರೀತಿ ಇದೆ, ಆಸೆ, ದುರಾಸೆ, ಇತ್ಯಾದಿ ವಿಷಯಗಳಿವೆ. ಎಲ್ಲವನ್ನೂ ಪೋಣಿಸಿ ಜೆರಾಕ್ಸ್ ಮಾಡಿರುವ ನಿರ್ದೇಶಕರ ಪ್ರಯತ್ನ ಸಾರ್ಥಕ.

ಯಾರು ಹೇಗೆ?

ನಾಗಭೂಷಣ ಜೆರಾಕ್ಸ್ ಮಾಡುವ ಹುಡುಗನಾಗಿ ಇಷ್ಟ ಆಗ್ತಾರೆ.
ಪಾಯಲ್ ಕೂಡ ತನ್ನ ಫ್ಯಾನ್ಸ್ ಗೆ ಮೋಸ ಮಾಡಿಲ್ಲ. ಉಳಿದಂತೆ ಓಂ ಪ್ರಕಾಶ್ ರಾವ್ , ಸುಧಾಕರ್, ವಿಜಯ ಪ್ರಸಾದ್, ಜಗ್ಗಪ್ಪ ಇತರೆ ಪಾತ್ರಗಳು ಸಾಥ್ ನೀಡಿವೆ.
ಸಂಗೀತ ಪೂರಕವಾಗಿದೆ. ಕ್ಯಾಮರಾ ಕೈಚಳಕ ಕೂಡ ಜೆರಾಕ್ಸ್ ಅಂದವನ್ನು ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಬಂಗಾರದ ಹೆಜ್ಜೆಗೆ ಇಪ್ಪತ್ತು! ಗೋಲ್ಡನ್ ಸ್ಟಾರ್ ಗಣೇಶ್ ಸಿನಿ ಚೆಲ್ಲಾಟಕ್ಕೆ ಎರಡು ದಶಕದ ನಂಟು

ನಟನಾಗಿ ಕನ್ನಡಿಗರ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ನಾಯಕರಾಗಿ ನಟಿಸಿದ್ದ ಮೊದಲ ಚಿತ್ರ “ಚೆಲ್ಲಾಟ” ಬಿಡುಗಡೆಯಾಗಿ ಏಪ್ರಿಲ್ 21ಕ್ಕೆ ಇಪ್ಪತ್ತು ವರ್ಷಗಳಾಗಿದೆ.

ಎಂ.ಡಿ.ಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಮೂಲಕ ಗಣೇಶ್ ಅವರು ನಾಯಕರಾಗಿ ಚಿತ್ರರಂಗ ಪ್ರವೇಶಿಸಿ ಇಪ್ಪತ್ತು ವರ್ಷಗಳಾಗಿದೆ. ಅದೇ ವರ್ಷ ಗಣೇಶ್ ಅಭಿನಯದ ಕನ್ನಡದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ “ಮುಂಗಾರು ಮಳೆ” ಸಹ ಬಿಡುಗಡೆಯಾಗಿ, ಭರ್ಜರಿ ಯಶಸ್ಸು ಕಂಡಿತ್ತು.

ಆನಂತರ “ಗಾಳಿಪಟ”, ” ಚೆಲುವಿನ ಚಿತ್ತಾರ”, “ಕೃಷ್ಣ” ದಿಂದ ಹಿಡಿದು ಇತ್ತೀಚೆಗೆ ತೆರೆಕಂಡ “ಕೃಷ್ಣಂ ಪ್ರಣಯ ಸಖಿ”ವರೆಗೂ ಸಾಕಷ್ಟು ಹಿಟ್ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಗಣೇಶ್ ತಮ್ಮ ಅಮೋಘ ಅಭಿನಯದಿಂದ ರಂಜಿಸಿದ್ದಾರೆ.

ಗಣೇಶ್ ನಾಯಕರಾಗಿ ಇಪ್ಪತ್ತು ವರ್ಷಗಳು ಪೂರೈಸಿರುವ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮೆಚ್ಚಿನ ನಾಯಕನಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಬೆಂಗಳೂರಲ್ಲಿ ಡಕಾಯತ್! ಫ್ಯಾನ್ಸ್ ಗೆ ಧನ್ಯವಾದ ಹೇಳಿದ ಟೀಮ್

ತೆಲುಗು ಸ್ಟಾರ್ ಅಡವಿ ಶೇಷ್‍ ಮತ್ತು ಮೃಣಾಲ್‍ ಠಾಕೂರ್ ಅಭಿನಯದ ತೆಲುಗು ಚಿತ್ರ ‘ಡಕಾಯತ್’, ಏಪ್ರಿಲ್‍ 10ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿರೋ ಡಕಾಯತ್‌ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.. ಚಿತ್ರದ ಪ್ರಚಾರಕ್ಕಾಗಿ ಅಡವಿ ಶೇಷ್‍ ಮತ್ತು ಅನುರಾಗ್‍ ಕಶ್ಯಪ್‍, ಶನಿವಾರ ಬೆಂಗಳೂರಿಗೆ ಬಂದಿದ್ದರು. ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದಕ್ಕೆ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸುತ್ತಲೇ, ಚಿತ್ರವನ್ನು ಪ್ರಚಾರ ಮಾಡಿದರು.

ತಮ್ಮ ಪ್ರತಿ ಸಿನಿಮಾಗೂ ಕನ್ನಡಿಗರು ಸಪೋರ್ಟ್‌ ಮಾಡಿದ್ದು ತಾವು ಅಭಿನಯದ ಬಹುತೇಕ ಸಿನಿಮಾದ ಪ್ರಚಾರವನ್ನ ಬೆಂಗಳೂರಿನಲ್ಲಿ ಮಾಡಿರುವುದಾಗಿ ಅಡವಿ ಶೇಷ್‌ ಖುಷಿಯಿಂದ ಹೇಳಿಕೊಂಡರು , ಇನ್ನು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ತಿಂಡಿ ಸವಿದು ಅಭಿಮಾನಿಗಳ ಜೊತೆ ಒಂದಿಷ್ಟು ಸಮಯ ಕಾಲ ಕಳೆದರು..ಅದಾದ ನಂತರ ಸುದ್ದಿಗೋಷ್ಟಿ ಮಾಡಿ ಮಾಧ್ಯಮದ ಮೂಲಕ ಸಿನಿಮಾ ನೋಡಿ ಸಪೋರ್ಟ್‌ ಮಾಡಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.

ನಟ, ನಿರ್ದೇಶಕ, ನಿರ್ಮಾಪಕ ಅನುರಾಗ್‌ ಕಶ್ಯಪ್‌ ಮಾತನಾಡಿ ‘ಈಗ ನಾನು ಬೆಂಗಳೂರಿನವನೇ..ನನ್ನನ್ನು ಸ್ವಾಗತ ಮಾಡುವ ಅವಶ್ಯಕತೆ ಇಲ್ಲ’ ಎಂದರು..ಡಕಾಯತ್‌ ಸಿನಿಮಾ ೫೦ ಕೋಟಿ ಕಲೆಕ್ಷನ್‌ ಮಾಡಿದೆ ಟ್ರೇಲರ್‌ ನೋಡಿದ್ರೆ ಮಾಸ್‌ ಸಿನಿಮಾ ಅನ್ಸುತ್ತೆ ಆದ್ರೆ ಇದೊಂದು ಒಳ್ಳೆ ಲವ್‌ ಸ್ಟೋರಿ ಸಿನಿಮಾ , ಬೆಂಗಳೂರಿನ ಜನತೆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದೀರ ನಮಗೆ ಖುಷಿ ಇದೆ ಎಂದರು.

ನಂತರ ಜಿಟಿ ಮಾಲ್‌ ನಲ್ಲಿ ಸಿನಿಮಾ ನೋಡಲು ಬಂದ ಜನರನ್ನ ಅಡವಿ ಶೇಷ್‌ ಹಾಗೂ ಅನುರಾಗ್‌ ಕಶ್ಯಪ್‌ ಬೇಟಿ ಮಾಡಿ ಖುಷಿ ಪಟ್ಟರು…ಡಕಾಯತ್‌ ಚಿತ್ರದಲ್ಲಿ ಅಡವಿ ಶೇಷ್‍, ಮೃಣಾಲ್‍ ಠಾಕೂರ್, ಅನುರಾಗ್‍ ಕಶ್ಯಪ್‍, ಪ್ರಕಾಶ್‍ ರಾಜ್‍, ಸುನೀಲ್‍, ಅತುಲ್‍ ಕುಲಕರ್ಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಶನೀಲ್‍ ಡಿಯೋ ನಿರ್ದೇಶನ ಮಾಡಿದ್ದಾರೆ

Categories
ಸಿನಿ ಸುದ್ದಿ

ಸೆರಗು ಎಳೆದಷ್ಟೂ ಕೆಂಡ! ಮೌನ ನಾರಿಯ ಯಶೋಗಾಥೆ

ಚಿತ್ರ ವಿಮರ್ಶೆ: ವಿಭ


ರೇಟಿಂಗ್: 5/3


ಚಿತ್ರ: ಕೆಂಡದ ಸೆರಗು
ನಿರ್ದೇಶನ: ರಾಕಿ ಸೋಮ್ಲಿ
ನಿರ್ಮಾಣ: ಕೆ.ಕೊಟ್ರೇಶ್ ಗೌಡ
ತಾರಾಗಣ: ಮಾಲಾಶ್ರೀ, ಭೂಮಿ ಶೆಟ್ಟಿ, ಸಿಂಧು ಲೋಕನಾಥ್, ಯಶ್ ಶೆಟ್ಟಿ, ವರ್ಧನ್, ಪ್ರತಿಮಾ, ಶೋಭಿತಾ, ಹರೀಶ್ ಅರಸು ಇತರರು.

“ನಾನ್ ಹೂವು ಅನ್ಕೊಂಡ್ ಮುಟ್ಟೋಕ್ ಬಂದೋರಿಗೆ ಗೊತ್ತಾಗ್ ಬೇಕು, ನಾನು ಹೂವು ಅಲ್ಲ ಮುಳ್ಳು ಅಂತ..”

ಆ ಛಲಗಾತಿಯ ಮನದಲ್ಲಿ ಈ ಡೈಲಾಗ್ ಬರುವ ಹೊತ್ತಿಗೆ ಆ ಊರ ಜನ ಅವಳನ್ನ ವೈಶ್ಯೆ ಮಗಳು ಅನ್ನೋ ಪಟ್ಟ ಕಟ್ಟಿರುತ್ತಾರೆ. ಅಪ್ಪನನ್ನು ಕಳಕೊಂಡ ಅವಳ ಅಮ್ಮನನ್ನು ಕೆಲ ಕಿಡಿಗೇಡಿಗಳು ಹಿಂಡಿ ಹಿಪ್ಪೆ ಮಾಡಿರುತ್ತಾರೆ. ಇದು ಮಹಿಳೆಯೊಬ್ಬಳ ಬದುಕಿನ ಕಥೆ- ವ್ಯಥೆ. ಅಲ್ಲಿಗೆ ಇದೊಂದು ಮಹಿಳಾ ಪ್ರಧಾನ ಚಿತ್ರ ಅಂತ ಪ್ರತ್ಯೇವಾಗಿ ಹೇಳಬೇಕಿಲ್ಲ.

ಕನ್ನಡದಲ್ಲಿ ಈಗಾಗಲೇ ಅನೇಕ ಕಾದಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಇದು ಕೂಡ ಕೆಂಡದ‌ ಸೆರಗು ಕಾದಂಬರಿ ಚಿತ್ರ. ಹಾಗಾಗಿ ಹೆಣ್ಣಿಗೆ ಹೆಚ್ಚು‌ ಮಹತ್ವ ಕೊಟ್ಟಿರುವ, ಆಕೆಯ ಬದುಕು-ಬವಣೆ, ಶಕ್ತಿ, ಯುಕ್ತಿ, ಅವಳು ಅಬಲೆಯಲ್ಲ ಅಬಲೆ ಅನ್ನುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.

ಸಿನಿಮಾ ಕಾದಂಬರಿಯ ಕಥೆಯಂತೆಯೇ ನೋಡಿಸಿಕೊಂಡು ಹೋಗುತ್ತಾದರೂ, ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬೇಕಿತ್ತು. ನಿರೂಪಣೆಯಲ್ಲಿ ಚುರುಕುತನ ಇರಬೇಕಿತ್ತು. ಮೊದಲರ್ಧ ನಿಧಾನವೆನಿಸುವ ಚಿತ್ರ ದ್ವಿತಿಯಾರ್ಧ ವೇಗ ಪಡೆದುಕೊಳ್ಳುತ್ತೆ. ಅಲ್ಲಲ್ಲಿ ಟ್ವಿಸ್ಟ್ ಅನಿಸಿದರೂ ನೋಡಗರನ್ನು ಟೆಸ್ಟೂ ಮಾಡುತ್ತೆ.
ಕಥೆ ಚೆನ್ನಾಗಿದೆ. ಅದಕ್ಕೆ ಚಿತ್ರಕಥೆಯ ವೇಗ ಕಡಿಮೆ. ಪಾತ್ರಗಳ ಆಯ್ಕೆ ಚೆನ್ನಾಗಿದೆ. ಆದರೆ, ಕಂಟಿನ್ಯುಟಿ ಕಡೆ ಗಮನಿಸಬೇಕಿತ್ತು. ಕೆಲವು ಕಡೆ ಅನಗತ್ಯ ದೃಶ್ಯಗಳಿವೆ. ಉಳಿದಂತೆ ಸೆರಗೊಳಗೆ ಕೆಂಡ ನಿಗಿ ನಿಗಿ.

ಕಥೆ ಏನು?

ಎರಡು ಟ್ರ್ಯಾಕ್ ನಲ್ಲಿ ಕಥೆ ಸಾಗುತ್ತೆ. ಎರಡು ಕಥೆಯಲ್ಲೂ ಸ್ಪಷ್ಟತೆ ಇದೆ. ಮದ್ವೆಯಾಗಿ ಚೆಂದದ ಬದುಕು ಸವೆಸುವ ನೇತ್ರ ಬಾಳಲ್ಲಿ ಗಂಡ ದೂರವಾಗುತ್ತಾನೆ. ಗಂಡನಿಲ್ಲದ ಹೆಣ್ಣನ್ನು ಈ ಸಮಾಜ ನೋಡುವ ದೃಷ್ಟಿಕೋನ ಬೇರೆ. ನೇತ್ರಳಿಗೆ ಒಂದು ಹೆಣ್ಣು ಮಗು ಇರುತ್ತೆ. ನೇತ್ರಾಳ ಬದುಕು ಕಷ್ಟ. ಮಗಳಿಗಾಗಿ ಬದುಕಲೇಬೇಕು ಅನ್ನೋ ಅನಿವಾರ್ಯ ಬಂದಾಗ, ಆ ಊರ ಗೌಡನ ಜೊತೆ ನೇತ್ರಾ ಸೆರಗು ಹಾಸುತ್ತಾಳೆ. ಅಲ್ಲಿಂದ ಊರಲೆಲ್ಲಾ ನೇತ್ರಾಗೆ ವೈಶೈ ಪಟ್ಟ ಕಟ್ತಾರೆ. ಊರಲ್ಲಿರೋ ಒಂದಷ್ಟು ಜನ ಬಲವಂತವಾಗಿ ನೇತ್ರಾಳ ಮನೆ ಬಾಗಿಲು ಬಡಿತಾರೆ. ರಾತ್ರಿ ಸೆರಗು ಹಾಸುವ ಕೆಲಸ ಮಾಮೂಲಾಗುತ್ತೆ. ಒಂದು ಹಂತದಲ್ಲಿ ರಕ್ಷಣೆ‌ಮಾಡೋ ಪೊಲೀಸ್ ಅಧಿಕಾರಿ ಕೂಡ ನೇತ್ರಾಳ ಸೆರಗು ಎಳಿತಾನೆ. ಅವಳಿಗಿರೋ ಮಗಳ ಮೇಲೂ ಕಣ್ಣಾಕುತ್ತಾನೆ. ಅತ್ತ, ಮಗಳು ಊರು ಬಿಟ್ಟು ಪಟ್ಟಣ ಸೇರುತ್ತಾಳೆ. ಅವಳಿಗೂ ಕೆಟ್ಟ ಘಟನೆ ಎದುರಾಗುತ್ತೆ. ಅಲ್ಲಿಂದ ಆಕೆ ಮೆಟ್ಟಿ ನಿಲ್ಲುವ ಕಥೆಯೇ ರೋಚಕ! ಆ ಕುತೂಹಲ ಇದ್ದರೆ ಸಿನಿಮಾ ನೋಡಿ.

ಇಲ್ಲಿ ನಿರ್ದೇಶಕರು ಸೂಕ್ಷ್ಮ ಸಂವೇದನೆಯ ವಿಷಯ ಹೇಳಿದ್ದಾರೆ. ಜೊತೆಗೆ ಹದಿಹರೆಯದ ಪ್ರೀತಿ ಹೇಗೆಲ್ಲಾ ಬದುಕನ್ನು‌ ಹಾಳು ಮಾಡುತ್ತೆ ಅನ್ನುವುದನ್ನು ತೋರಿಸಿದ್ದಾರೆ. ಲವ್ ಜಿಹಾದ್ ಕುರಿತ ವಿಷಯವೂ ಇಣುಕಿ ಹಾಕುತ್ತೆ. ಒಟ್ಟಾರೆ ವಾಸ್ತವ ಬದುಕಿನ ಚಿತ್ರಣ ಇಲ್ಲಿದೆ.

ಯಾರು ಹೇಗೆ?

ಇಲ್ಲಿ ಮಾಲಾಶ್ರೀ ಅವರು ಹೆಸರಿಗಷ್ಟೇ. ಪೊಲೀಸ್ ಅಧಿಕಾರಿ ಪಾತ್ರ ಅವರದು. ಬಿಲ್ಡಪ್ ಗೆ ಒಂದು ಫೈಟ್ ಇದೆ. ಜನರ್ ದಸ್ತ್ ಫೈಟ್ ಅಂತೂ ಅಲ್ಲ. ಮಾಲಾಶ್ರೀ ಅವರನ್ನು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಉಳಿದಂತೆ ಭೂಮಿಶೆಟ್ಟಿ ಅವರಿಗೆ ದ್ವಿತಿಯಾರ್ಧ ಕೆಲಸ. ಶೋಭಿತ ಸಿನಿಮಾದ ಹೈಲೆಟ್ ಅನ್ನಬಹುದು. ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಯಶ್ ಶೆಟ್ಟಿ, ವರ್ಧನ್, ಬಲರಾಜ್ ವಾಡಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪ್ರತಿಮಾ ಕೊಟ್ಟ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿಂಧು ಲೋಕನಾಥ್ ಒಂದು ಸೀನ್ ಗೆ ಸೀಮಿತ. ಹರೀಶ್ ಅರಸು ತೆರೆ ಮೇಲೆ ಇರುವಷ್ಟು ಕಾಲ ಇಷ್ಟ ಆಗ್ತಾರೆ. ಪಾತ್ರಕ್ಕೆ‌ ಮೋಸ ಮಾಡಿಲ್ಲ.
ವಿಪಿನ್ ಕ್ಯಾಮರಾದಲ್ಲಿ ಸೊಗಸಿದೆ.
ವೀರೇಶ್ ಕಂಬಳಿ ಸಂಗೀತದಲ್ಲಿ ಒಂದು ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು.

ಕೊನೆ‌ ಮಾತು: ಬರೀ ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ ಹೆಣ್ಣಿನ ಅಸಾಹಯಕತೆ ಬಳಸಿಕೊಂಡು ಸಮಾಜ ಹೇಗೆ ಮೃಗವರ್ತನೆ ತೋರಿಸುತ್ತೆ ಎಂಬುದು ಹೈಲೆಟ್.

Categories
ಸಿನಿ ಸುದ್ದಿ

ಲವ್ ಸೀಸನ್ಸ್ ಟೀಸರ್‌ ಬಂತು

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸಬರ ತಂಡದ ಆಗಮನವಾಗಿದೆ. ತಿಂಗಳ ಹಿಂದಷ್ಟೇ ಚಿತ್ರೀಕರಣ ಮುಗಿಸಿಕೊಂಡು ಒಂದಷ್ಟು ಸುದ್ದಿ ಮಾಡಿದ್ದ ಲವ್ ಸೀಸನ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

ರಾಜೇಶ್ ನಟರಂಗ ಈ ಚಿತ್ರದ ಬಹುಮುಖ್ಯ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಬಗ್ಗೆ ಮಾತಾಡಿದ ರಾಜೇಶ್, ನಿರ್ದೇಶಕರ ಕಸುಬುದಾರಿಕೆಯನ್ನು ಮೆಚ್ಚಿಕೊಳ್ಳುತ್ತಲೇ, ತಾನಿಲ್ಲಿ ಜವಾಬ್ದಾರಿಯುತ ತಂದೆಯ ಪಾತ್ರದಲ್ಲಿ ನಟಿಸಿರುವ ಸುಳಿವನ್ನು ಬಿಟ್ಟು ಕೊಟ್ಟರು. ಪ್ರೀತಿಯೆಂಬುದು ಯಾವ ಕಾಲಕ್ಕೂ ಹಳತಾಗದ ವಿಚಾರ. ಈ ಭೂಮಿಕೆಯಲ್ಲಿಯೇ ರೂಪುಗೊಂಡಿರುವ ಈ ಚಿತ್ರವನ್ನು ಬೆಂಬಲಿಸಿ, ಪ್ರೋತ್ಸಾಹಿಸುವಂತೆ ರಾಜೇಶ್ ನಟರಂಗ ಕೇಳಿಕೊಂಡರು.

ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಂಗಭೂಮಿಯಲ್ಲಿ ಪಳಗಿಕೊಂಡು, ಕ್ಷತ್ರಿಯ, ಬುದ್ಧಿವಂತ೨, ಗುರುದೇವ ಹೊಯ್ಸಳ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಕೃತ್ವಿಕ್ ಲವ್ ಸೀಸನ್ಸ್ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರದ ನಾಯಕ, ರಂಗಭೂಮಿ ಕಲಾವಿದ ಮುಕುಂದ ರಾಮಸ್ವಾಮಿ ಹಾಗೂ ನಾಯಕಿಯರಾದ ದಿಯಾ ಕೀರ್ತಿ ಮತ್ತು ಚಂದನಾ ಗೌಡ ಸಹ ತಂತಮ್ಮ ಪಾತ್ರಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಸಿನಿಮಾ ಹಾಡುಗಳು ಭಿನ್ನವಾಗಿವೆ ಎಂಬ ಸುಳಿವನ್ನು ತಮ್ಮ ಮಾತುಗಳ ಮೂಲಕ ಹೊಮ್ಮಿಸಿದರು.

ಟೀಸರ್ ಬಿಡುಗಡೆ ವೇದಿಕೆಯಲ್ಲಿಯೇ ಲವ್ ಸೀಸನ್ಸ್ ಚಿತ್ರ ಜೂನ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿರುವ ಸುಳಿವು ಸಿಕ್ಕಿದೆ. ಇದೀಗ ಮೊದಲನೆಯದ್ದಾಗಿ ಟೀಸರ್ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಗೊಳ್ಳಲಿದೆ. ಇದು ಯಾರು ಯಾರನ್ನೂ ನಂಬಲು ಕಷ್ಟವಾಗುವಂಥಾ ಕಾಲಮಾನ. ನಂಬಿಕೆಯೆಂಬ ಚುಂಬಕ ಶಕ್ತಿಯ ಸುತ್ತ ಹೊಸೆಯಲ್ಪಟ್ಟಿರುವ, ಪ್ರೇಮದ ಪರಾಗ ಮೆತ್ತಿಕೊಂಡಿರುವ ಕಥೆ `ಲವ್ ಸೀಸನ್ಸ್’ನಲ್ಲಿದೆ. ಬೆಂಗಳೂರಿನ ನಾನಾ ಏರಿಯಾಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್‌ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್‌ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ.

ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.

Categories
ಸಿನಿ ಸುದ್ದಿ

ರುದ್ರ ಕಾಲ ಚಿತ್ರಕ್ಕೆ ದಿಗಂತ್ ‌ ಹೀರೋ ‌‌‌: ಶೀರ್ಷಿಕೆ ಅನಾವರಣ ಮಾಡಿದ ಸಮಂತ

ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ದಿಗಂತ್ ಅಭಿನಯದ ನೂತನ ಚಿತ್ರ “ರುದ್ರ ಕಾಲ”. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ಸ್ಟಾರ್ ಹಿರೋಯಿನ್ ಸಮಂತ ಬಿಡುಗಡೆ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ರಮೇಶ್ ನಾಯ್ಕ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಗೋಪಿ ಅವರು ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇದೇ ತಿಂಗಳ 22 ರಂದು ನೆರವೇರಲಿದೆ.

ನಮ್ಮ ಡೈರೆಕ್ಟರ್ ಗೋಪಿ ಅವರು ಕಥೆ ಹೇಳುತ್ತಿದ್ದಾಗಲೇ ಈ ಚಿತ್ರದಲ್ಲಿ ನಟಿಸಬೇಕೆಂದು ನಿರ್ಧಾರ ಮಾಡಿದೆ. ಹಾಗೆಯೇ ನಮ್ಮ “ರುದ್ರ ಕಾಲ” ಚಿತ್ರದ ಟೈಟಲ್ ಸಮಂತ ಅವರ ಕೈಯಿಂದ ರಿಲೀಸ್ ಆಗಿರುವುದು ತುಂಬಾ ಸಂತೋಷವಾಗಿದೆ. ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ ಎಂದು ತಿಳಿಸಿರುವ‌ ನಾಯಕ ದಿಗಂತ್, ನಿರ್ದೇಶಕ ಗೋಪಿ, ನಿರ್ಮಾಪಕ ರಮೇಶ್ ನಾಯ್ಕ್ ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ನಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಸಮಂತ ಅವರಿಗೆ ಧನ್ಯವಾದ. ಇದು ನಮ್ಮ ಚಿತ್ರದ ಶುಭಾರಂಭ ಎಂದು ಭಾವಿಸುತ್ತೇನೆ. “ರುದ್ರ ಕಾಲ” ಚಿತ್ರದ ಚಿತ್ರೀಕರಣ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ಒಂದೇ ಹಂತದ ಚಿತ್ರೀಕರಣ ನಡೆಸಿ‌ ಅದಷ್ಟು ಬೇಗ ತೆರೆಗೆ ತರುವ ಯೋಚನೆ ಇದೆ. ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಕಥೆ ಕೇಳಿ ಮೆಚ್ಚಿಕೊಂಡು ನಾಯಕನಾಗಿ ನಟಿಸುತ್ತಿರುವ ದಿಗಂತ್ ಹಾಗೂ ನಿರ್ಮಾಣ ಮಾಡುತ್ತಿರುವ ರಮೇಶ್ ನಾಯ್ಕ್ ಅವರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಿರ್ದೇಶಕ ಗೋಪಿ.

ನಿರ್ಮಾಪಕ ರಮೇಶ್ ನಾಯ್ಕ್ ಚಿತ್ರದ ಬಗ್ಗೆ ಮಾತನಾಡುತ್ತಾ, ಡೈರೆಕ್ಟರ್ ಗೋಪಿ ಹೇಳಿದ ಸ್ಕ್ರಿಪ್ಟ್ ನನಗೆ ಫ್ರೆಶ್ ಆಗಿ ಅನಿಸಿತು. ನಮ್ಮ ಪ್ರೊಡಕ್ಷನ್‌ನಲ್ಲಿ ಇಂಥ ಚಿತ್ರ ಬರುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಟೈಟಲ್ ರಿಲೀಸ್ ಮಾಡಿದ ನಟಿ ಸಮಂತ ಹಾಗೂ ನಾಯಕ ದಿಗಂತ್ ಅವರಿಗೆ ಧನ್ಯವಾದ ಎಂದರು.

ರಮೇಶ್ ಅವರು ಕಥೆ ಬರೆದಿರುವ ಈ ಚಿತ್ರಕ್ಕೆ ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಲೈನ್ ಪ್ರೊಡ್ಯೂಸರ್ ಆಗಿ ನವೀನ್ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಶಿವರಾಜ್ ಕಾರ್ಯ ನಿರ್ವಹಿಸುತ್ತಿದ್ದಾರೆ. ರಮೇಶ್ ಕೆ ಪೂಜಾರಿ ಈ ಚಿತ್ರದ ಸಹ ನಿರ್ದೇಶಕರು.

Categories
ಸಿನಿ ಸುದ್ದಿ

ರಾಕಾ’ ಲುಕ್ ಗಾಗಿ ಅಲ್ಲು ಅರ್ಜುನ್ ಹಾಕಿದ ಶ್ರಮ ಎಷ್ಟು ಗೊತ್ತಾ?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸರಣಿ ಸಿನಿಮಾಗಳ ಬಳಿಕ ಮತ್ತೊಂದು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಬನ್ನಿ, ತಮಿಳು ನಿರ್ದೇಶಕ ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ. ಒಂದಷ್ಟು ಸ್ಯಾಂಪಲ್ ಮೂಲಕ ಕುತೂಹಲ ಹೆಚ್ಚಿಸಿದ್ದ ರಾಕಾ ಸಿನಿಮಾದ ಫಸ್ಟ್ ಲುಕ್ ಅಲ್ಲು ಅರ್ಜುನ್ ಬರ್ತಡೇಗೆ ರಿವೀಲ್ ಮಾಡಲಾಗಿತ್ತು. ಅರ್ಧ ಮೃಗ, ಅರ್ಧ ಮನುಷ್ಯನ ಅವತಾರದಲ್ಲಿ ಸ್ಟೈಲಿಶ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.

ಅಲ್ಲು ಅರ್ಜುನ್ ರಾಕಾ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಲುಕ್ ಗಾಗಿ ಬನ್ನಿ ದಿನಕ್ಕೆ 3 ರಿಂದ 4 ಗಂಟೆ ಶ್ರಮ ಹಾಕಿದ್ದಾರೆ. ಇದು ಐಕಾನ್ ಸ್ಟಾರ್ ಗೆ ಸಿನಿಮಾ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಪ್ರತಿ ಪಾತ್ರಕ್ಕೂ ಅಲ್ಲು ಅರ್ಜುನ್ ಹಾಕುವ ಪರಿಶ್ರಮ ಹೇಗೆ ಇರಲಿದೆ ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆ.

ರಾಕಾ ಪೋಸ್ಟರ್ ನಲ್ಲಿ ಕೈ ಎತ್ತಿ ಅಲ್ಲು ಗೆಸ್ಚರ್ ಒಂದನ್ನು ಮಾಡಿದ್ದು, ಅದನ್ನು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ರೀ ಕ್ರಿಯೇಟ್ ಮಾಡಿದ್ದಾರೆ. ಆರ್ ಸಿಬಿ ವರ್ಸಸ್ ಮುಂಬೈ ಇಂಡಿಯನ್ ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ರಾಕಾ ಚಿತ್ರದ ಸಿಗ್ನೇಚರ್ ಹ್ಯಾಂಡ್ ಗೆಸ್ಚರ್ ಮಾಡಿದ್ದಾರೆ.

ರಾಕಾ ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. ಹಾಲಿವುಡ್ ಗ್ರಾಫಿಕ್ಸ್ ಸ್ಟುಡಿಯೋ ಕೈ ಜೋಡಿಸಿದೆ. ಈ ಚಿತ್ರ ಫ್ಯಾಂಟಸಿ ಕತೆಯನ್ನು ಒಳಗೊಂಡಿದೆ. ಭಾರಿ ಬಜೆಟ್ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

error: Content is protected !!