Categories
ಸಿನಿ ಸುದ್ದಿ

ಬರಗಾಲದಲ್ಲೂ ಬೆಳೆ ತೆಗೆದ ಆಕ್ಟ್‌ 1978

 ಟೆನೆಟ್‌ ಗೂ ಟಾಂಟ್‌ ಕೊಟ್ಟ ಕನ್ನಡ ಸಿನಿಮಾ

ಆಕ್ಟ್‌ 1978 ಚಿತ್ರ ತೆರೆ ಕಂಡು ಯಶಸ್ವಿ 25 ದಿನಗಳ ಪ್ರದರ್ಶನ ಕಂಡಿದೆ. ಕೊರೋನಾ ಆತಂಕದ ನಡುವೆಯೇ ಈ ಚಿತ್ರ ಇಷ್ಟು ದಿನಗಳೂ ಯಶಸ್ವಿ ಪ್ರದರ್ಶನ ಕಂಡಿದ್ದು ಒಂದ್ರೀತಿ ಮಿರಾಕಲ್.‌ ಹಾಗೆ ನೋಡಿದರೆ ಉತ್ತಮ ಕಲೆಕ್ಷನ್‌ ಜತೆಗೆಯೇ ೨೫ ದಿನಗಳ ಪ್ರದರ್ಶನ ಎನ್ನುವುದು ಬರಗಾಲದಲ್ಲಿ ಬೆಳೆ ತೆಗೆದ ಹಾಗೆ. ಕೊರೋನಾ ಕಾರಣಕ್ಕೆ ಲಾಕ್‌ಡೌನ್ ಆಗಿ ಹೆಚ್ಚು ಕಡಿಮೆ ಐದಾರು ತಿಂಗಳಿಗೆ ಚಿತ್ರ ಮಂದಿರಗಳು ಮತ್ತೆ ಒಪನ್ ಅದವು. ಅದರೂ ಕೊರೋನಾ ಆತಂಕ ಮಾತ್ರ ಇನ್ನು ಕಮ್ಮಿ ಆಗಿಲ್ಲ. ಚಿತ್ರ ಮಂದಿರಗಳು ಅಷ್ಟೋ ಇಷ್ಟೋ ಸುರಕ್ಷತೆ ಕ್ರಮಗಳ ಮೂಲಕ ಒಪನ್‌ ಅಗಿದ್ದರೂ, ಚಿತ್ರ ಮಂದಿರಕ್ಕೆ ಬರುವಷ್ಟು ಜನ ಇನ್ನು ಕೊರೋನಾ ಆತಂಕದಿಂದ ದೂರವಾಗಿಲ್ಲ. ಇಂತಹ ದಿನಗಳನಡುವೆಯೇ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆಯಂದ್ರೆ, ಬರಗಾಲದಲ್ಲಿ ಬೆಳೆ ತೆಗೆದ ಹಾಗೆಯೇ ಹೌದು.

ಲಾಕ್‌ ಡೌನ್‌ ನಂತರದ ಮೊದಲ ಸಿನಿಮಾವಾಗಿ ಆಕ್ಟ್‌ 1978 ತೆರೆಗೆ ಬಂದಿದ್ದು ಕೂಡ ಒಂದು ಸಾಹಸವೇ. ಎಲ್ಲರಿಗೂ ಈ ಸಿನಿಮಾದ ಕತೆ ಹೇಗೋ ಏನೋ ಎನ್ನುವಂತೆಯೇ ಇತ್ತು. ಚಿತ್ರ ಮಂದಿರಕ್ಕೆ ಜನ ಬರದಿದ್ದರೆ ನಿರ್ಮಾಪಕರ ಕತೆ ಏನು ಎನ್ನುವುದು ಹಲವರ ಆತಂಕವೂ ಆಗಿತ್ತು. ಆದರೆ ಮುಂದೆ ಆಗಿದ್ದೇ ಬೇರೆ. ಮಲ್ಟಿಪ್ಲೆಕ್ಸ್‌ ಸೇರಿದಂತೆ ಚಿತ್ರಮಂದಿರಗಳಲ್ಲಿ ಅಚ್ಚರಿಯೇ ನಡೆದುಹೋಯಿತು. ಚಿತ್ರ ಮಂದಿರಗಳಿಗೆ ಜನ ಬಂದರು. ಆಕ್ಟ್‌ 1978 ಚಿತ್ರ ತಂಡಕ್ಕೆ ಖುಷಿ ತಂದಿತು. ಅಲ್ಲಿಂದ ಶುರುವಾದ ಈ ಚಿತ್ರದ ಯಶಸ್ವಿ ಜರ್ನಿ , ಇಲ್ಲಿಗೀಗ ೨೫ ದಿನಗಳನ್ನು ಪೂರೈಸಿದೆ. ವಿಶೇಷ ಅಂದ್ರೆ, ಕಳೆದ ವಾರ ಮಲ್ಟಿಪ್ಲೆಕ್ಸ್‌ ಗಳಲ್ಲಿ ಹಾಲಿವುಡ್‌ ಚಿತ್ರ ಟೆನೆಟ್‌ ಗೂ ಟಾಂಟ್‌ ಕೊಟ್ಟಿದೆ ಆಕ್ಟ್‌ 1978 ಚಿತ್ರ. ʼ ಆರಂಭದಿಂದಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಇದು ಜನ ಆಶೀರ್ವಾದ. ವಾರದ ದಿನಗಳಲ್ಲಂತೂ, ಅದ್ಬುತ ಪ್ರತಿಕ್ರಿಯೆ ಸಿಗುತ್ತಾ ಬಂದಿದೆ. ಕಳೆದ ವಾರ ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ಹಾಲಿವುಡ್‌ ಚಿತ್ರ ಟೆನೆಟ್‌ ಗೂ ಟಾಂಟ್‌ ಕೊಟ್ಟಿದೆ ಆಕ್ಟ್‌ 1978 ಚಿತ್ರ. ಇದು ಕನ್ನಡಿಗರು ಕೊಟ್ಟ ಬೆಂಬಲ. ಇದೆಲ್ಲ ನೋಡಿದರೆ ಖುಷಿ ಆಗುತ್ತದೆʼ ಎನ್ನುತ್ತಾರೆ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಟ ಸಂಚಾರಿ ವಿಜಯ್.‌ ಹಾಗೆಯೇ ಚಿತ್ರ ತಂಡ ಚಿತ್ರ ಮಂದಿರಗಳಿಗೆ ಭೇಟಿ ನೀಡಿ, ಪ್ರೇಕ್ಷಕರ ಜತೆಗೆ ಮಾತುಕತೆ ನಡೆಸಿದ ಸಂದರ್ಭಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸೋಷಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದೆ. ಎಲ್ಲ ಕಡೆಯೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.

Categories
ಸಿನಿ ಸುದ್ದಿ

“ರಾ” ಗಿಣಿ ಪರಾರಿ! ದೂರದ ದುಬೈನಲ್ಲಿ ಅವರಿಗೇನು ಕೆಲಸ?

ಅವರೇಕೆ ಹೀಗೆ ಮಾಡಿದರು?

ಆ ರಾಗಿಣಿ ಬೇರೆ… ಈ “ರಾ” ಗಿಣಿ ಬೇರೆ…

“ರಾ”… ಗಿಣಿ ಈಗ ಪರಾರಿ…!
ಅರೇ, ಇದೇನಪ್ಪಾ, ಡ್ರಗ್ಸ್‌ ಕೇಸ್‌ನಲ್ಲಿ ರಾಗಿಣಿ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರು ಯಾವಾಗ ಜೈಲಿಂದ ಪರಾರಿಯಾದರು ಎಂಬ ಪ್ರಶ್ನೆ ಮತ್ತು ಅಚ್ಚರಿ ಎರಡೂ ಆಗಬಹುದು. ವಿಷಯವಿಷ್ಟೇ, ಇಲ್ಲಿ ಹೇಳುತ್ತಿರುವ ವಿಷಯ ನಟಿ ರಾಗಿಣಿ ವಿಷಯವಲ್ಲ. “ರಾ” ಎಂಬ ಹೊಸಬರ ಚಿತ್ರದ ನಾಯಕಿಯೊಬ್ಬರ ವಿಷಯ.

ಹೌದು, ನವ ನಿರ್ದೇಶಕ ರಾಜೇಶ್‌ಗೌಡ ಅವರು ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ “ರಾʼ ಚಿತ್ರದ ನಾಯಕಿ ಸನಾನೈಕ್‌ ಎಂಬುವವರು ಚಿತ್ರದ ಪ್ರಚಾರಕ್ಕೆ ಬಾರದೆ, ಎಲ್ಲೂ ಕಾಣಿಸುತ್ತಿಲ್ಲ. ಸರಿಯಾಗಿ ಚಿತ್ರತಂಡಕ್ಕೆ ಸ್ಪಂದಿಸುತ್ತಿಲ್ಲ ಎಂದು ಚಿತ್ರತಂಡ ಆರೋಪಿಸಿದೆ. ಅಷ್ಟೇ ಅಲ್ಲ, ಸ್ವತಃ ನಿರ್ದೇಶಕ ರಾಜೇಶ್‌ಗೌಡ ಅವರೇ, ನಾಯಕಿ ಸನಾನೈಕ್‌ ಫೋನ್‌ಗೂ ಸಿಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸನಾ‌ ನೈಕ್

ವಿಷಯವೇನು…?
ಕನ್ನಡದಲ್ಲಿ “ರಾ” ಹೆಸರಿನ ಸಿನಿಮಾವೊಂದು ರೆಡಿಯಾಗಿರುವುದು ಗೊತ್ತೇ ಇದೆ. ಚಿತ್ರಕ್ಕೆ ಸೆನ್ಸಾರ್‌ ಕೂಡ ಆಗಿದೆ. ಈಗ ಪ್ರೇಕ್ಷಕರ ಎದುರು ಬರಲು ಚಿತ್ರ ರೆಡಿಯಾಗಿದೆ. ವಾಹಿನಿಯಲ್ಲಿ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ್ದ ರಾಜೇಶ್‌ಗೌಡ, ಸುಮಾರು ವರ್ಷಗಳ ಅನುಭವದ ಮೇಲೆ “ರಾ” ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ಇವರದೇ. ಈ ಸಿನಿಮಾಗೆ, ಸನಾ ನೈಕ್‌ ನಾಯಕಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿರುವ ರಾಜೇಶ್‌ಗೌಡ, ಈಗ ಪ್ರಚಾರಕ್ಕೆ ನಾಯಕಿಯನ್ನು ಕರೆತರಲು ಹರಸಾಹಸ ಪಡುತ್ತಿದ್ದಾರೆ. ಆದರೆ, ನಾಯಕಿ ಮಾತ್ರ, ಇವರ ಫೋನ್‌ ಕಾಲ್‌ಗೆ ಸರಿಯಾಗಿ ಸ್ಪಂದಿಸುತ್ತಿಲ್ಲವಂತೆ. ಸಿನಿಮಾ ಕೆಲಸಗಳು ಕೊರೊನಾ ಮುನ್ನವೇ ಮುಗಿದಿದ್ದವು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿನಿಮಾ ಚಟುವಟಿಕೆ ಸ್ಥಗಿತಗೊಂಡಿತ್ತು. ಈಗ ಎಲ್ಲವೂ ಮೆಲ್ಲನೆ ಓಪನ್‌ ಆಗಿರುವುದರಿಂದ “ರಾ” ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

ಇದಕ್ಕೂ ಮುನ್ನ, ರಾಜೇಶ್‌ಗೌಡ ಅವರು, ೨೦೧೯ರಲ್ಲಿ ದುಬೈನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದರು. ಆಗ ನಾಯಕಿ ಸನಾನೈಕ್‌ ಅವರು ದುಬೈನಲ್ಲೇ ಇದ್ದರೂ, ಅವರ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಿಲ್ಲ. ಉಡುಪಿಯಲ್ಲೂ ಒಂದು ದೊಡ್ಡ ಈವೆಂಟ್‌ನಲ್ಲೂ ಭಾಗವಹಿಸಲಿಲ್ಲ. ಎಂಬ ಬೇಸರದ ಮಾತುಗಳನ್ನು ನಿರ್ದೇಶಕ ರಾಜೇಶ್‌ಗೌಡ ಹೊರಹಾಕುತ್ತಾರೆ. ಸದ್ಯಕ್ಕೆ ದುಬೈನಲ್ಲೇ ಬೀಡುಬಿಟ್ಟಿರುವ ನಾಯಕಿ ಸನಾನೈಕ್‌, ಚಿತ್ರದ ಪ್ರಚಾರ ಸಲುವಾಗಿ ಚಿತ್ರತಂಡ ಫೋನ್‌ ಮಾಡಿದರೂ ಯಾವುದೇ ರೀತಿಯಲ್ಲೂ ಉತ್ತರ ಕೊಡುತ್ತಿಲ್ಲ. ಆದರೆ, ಫೆಬ್ರವರಿಯಲ್ಲಿ ಬರ್ತೀನಿ ಅಂತಿದ್ದಾರೆ ವಿನಃ, ಬೇರೇನೂ ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಎಂಬುದು ನಿರ್ದೇಶಕರ ಹೇಳಿಕೆ.


ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ನಾಯಕಿ ಸನಾನೈಕ್‌ ನಿರ್ದೇಶಕರಿಗೆ ಕಾಣುತ್ತಿಲ್ಲ, ಮಾತಿಗೂ ಸಿಗುತ್ತಿಲ್ಲ. ಉಡುಪಿಯೊಲ್ಲೊಂದು ಈವೆಂಟ್‌ ಮಾಡಿದ್ದರೂ ಬಂದಿಲ್ಲ. ಹೊಸಬರು ಎಂಬ ಕಾರಣಕ್ಕೆ ಅವರಿಗೆ ನಾವು ಅವಕಾಶ ಕೊಟ್ಟೆವು. ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಈಗ ನೋಡಿದರೆ, ಪ್ರಚಾರಕ್ಕೆ ಬಾರದೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾನು ದುಬೈನಲ್ಲಿದ್ದೇನೆ ಅಂತಾರೆ. ಆದರೆ, ಅಲ್ಲೇನ್‌ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಸಿನಿಮಾದಲ್ಲಿ ಅವಕಾಶ ಸಿಗುವುದೇ ಕಷ್ಟ. ಆದರೆ, ಅವಕಾಶ ಸಿಕ್ಕರೂ ಈ ನಾಯಕಿ ಚಿತ್ರತಂಡಕ್ಕೆ ಹೀಗೆಲ್ಲಾ ಬೇಜಾರು ಮಾಡುತ್ತಿದ್ದಾರೆ. ಒಂದು ಸಿನಮಾ ಮಾಡಿ ಮುಗಿಸುವುದು ಸುಲಭದ ಕೆಲಸವಲ್ಲ. ನಿರ್ಮಾಪಕರು ನಂಬಿ ಹಣ ಹಾಕಿರುತ್ತಾರೆ. ಅವರಿಗೆ ಹಣ ಹಿಂದಿರುಗಬೇಕಾದರೆ, ಸಿನಿಮಾ ರಿಲೀಸ್‌ ಆಗಬೇಕು, ರಿಲೀಸ್‌ ಮಾಡಬೇಕಾದರೆ, ಅದಕ್ಕೂ ಮೊದಲು ಜನರಿಗೆ ಸಿನಿಮಾ ಬಗ್ಗೆ ಗೊತ್ತಾಗಬೇಕು, ಗೊತ್ತಾಗಬೇಕಾದರೆ, ಸರಿಯಾಗಿಯೇ ಸಿನಿಮಾ ಪ್ರಚಾರ ಮಾಡಬೇಕು. ಆದರೆ, ಪ್ರಚಾರ ಮಾಡಲು ಹೊರಟರೆ, ನಾಯಕಿಯೇ ಸಿಗುತ್ತಿಲ್ಲ. ಏನು ಮಾಡಬೇಕು ಎಂಬುದು ನಿರ್ದೇಶಕರ ಅಳಲು.

ನಿರ್ದೇಶಕ ರಾಜೇಶ್‌ಗೌಡ

ಅದೇನೆ ಇರಲಿ, ಒಂದು ಕನ್ನಡ ಸಿನಿಮಾದ ಕನ್ನಡದ ನಾಯಕಿಯಾಗಿರುವ ಸನಾನೈಕ್‌, ತಮ್ಮ ಸಿನಿಮಾದ ಪ್ರಚಾರಕ್ಕೆ ಬಾರದೆ ದೂರದ ದುಬೈನಲ್ಲಿ ಕುಳಿತರೆ, ಇಲ್ಲಿ ಸಿನಮಾಗೆ ಹಣ ಹಾಕಿರುವ ನಿರ್ಮಾಪಕರ ಗತಿ ಏನು? ಹತ್ತಾರು ಕನಸು ಕಟ್ಟಿಕೊಂಡಿರುವ ನಿರ್ದೇಶಕರ ಪಾಡೇನು? ಈಗಲಾದರೂ ನಾಯಕಿ ಸನಾನೈಕ್‌ ಇಂಡಿಯಾಗೆ ಬಂದು, ತಮ್ಮ “ರಾ” ಸಿನಿಮಾದ ಪ್ರಚಾರಕ್ಕೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಪ್ರೇಕ್ಷಕನ ಡಿಯರ್ ಆಗ್ತಾನಾ ಈ ಸತ್ಯ?

ಸತ್ಯ ಮೇಲೆ ಸಂತೋಷ್ ಇಟ್ಟಿದ್ದಾರೆ ಬೆಟ್ಟದಷ್ಟು ನಿರೀಕ್ಷೆ !

 

ವರ್ಚಸ್ ಅನ್ನೋದಿದ್ರೂ ನಟ-ನಟಿಯರಿಗೆ ಸಕ್ಸಸ್ ಅನ್ನೋದು ಅತೀ ಮುಖ್ಯ. ಯಾಕಂದ್ರೆ ಅವರ ಆಸ್ತಿತ್ವ ಸಕ್ಸಸ್ ಎನ್ನುವುದರ ಮೇಲೆಯೇ ನಿಂತಿದೆ. ಅದರಲ್ಲೂ ಸಿನಿ ದುನಿಯಾಕ್ಕೆ ಹೊಸದಾಗಿ ಬಂದವರಿಗೆ ಇದು  ತುಂಬಾನೆ ಇಂಫಾರ್ಟೆಂಟ್. ಸದ್ಯಕ್ಕೆ ಒಬ್ಬ ಭರವಸೆಯ ನಟನಾಗಿ ಅಂತಹದೇ ಸಕ್ಸಸ್ ಎದುರು ನೋಡುತ್ತಿರುವ ನಟರ ಪೈಕಿ ಕಿರುತೆರೆಯ ನಿರೂಪಕ ಹಾಗೂ ಮಾಜಿ ಬಿಗ್ ಬಾಸ್ ಕಂಟೆಸ್ಟೆಂಟ್ಆರ್ಯನ್ ಸಂತೋಷ್  ಕೂಡ ಒಬ್ಬರು. ಕಟ್ಟು ಮಸ್ತ್ ದೇಹದೊಂದಿಗೆ ನೋಡುವುದಕ್ಕೂ ಹ್ಯಾಂಡ್ ಸಮ್ ಆಗಿರುವ ಆರ್ಯನ್ ಸಂತೋಷ್ , ಹೀರೋ ಆಗುವುದಕ್ಕೇನು ಯಾವುದರಲ್ಲೂ ಕಮ್ಮಿ ಇಲ್ಲ. ಹಾಗೆ ನೋಡಿದರೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅನೇಕ ಚಾಕ್ ಲೇಟ್ ಹೀರೋಗಳ ಹಾಗೆ ಸಂತೋಷ್ ಕನ್ನಡದಲ್ಲಿ ಒಬ್ಬ ಚಾಕ್ ಲೇಟ್ ಹೀರೋ. ಆದರೂ ಯಾಕೆ ತಮ್ಮನ್ನು ಕನ್ನಡದ ಪ್ರೇಕ್ಷಕರು ದೊಡ್ಡದೊಂದು ಬ್ರೇಕ್ ಸಿಗುವ ಹಾಗೆ ಒಪ್ಪಿಕೊಂಡಿಲ್ಲ, ಅಪ್ಪಿಕೊಂಡಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಲೇ ಇದೆ. ಹಾಗೊಂದು ಸಕ್ಸಸ್ ಸಿಗಲೇ ಬೇಕು ಅಂತ ಅವರು ಪಡುತ್ತಿರುವ ಶ್ರಮ ಕೂಡ ಅಷ್ಟಿಷ್ಟಲ್ಲ, ಆದರೆ ಈ ಸಲ ಅದು ಮಿಸ್ ಆಗಬಾರದು ಅಂತಲೇ ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ” ಡಿಯರ್ ಸತ್ಯ’ ಚಿತ್ರವನ್ನು ತಾವೇ ಹೆಚ್ಚಿನ ಮುತುವರ್ಜಿ ವಹಿಸಿಕೊಂಡು, ತೆರೆಗೆ ತರಲು ಸಿದ್ಧತೆ ನಡೆಸಿದ್ದಾರಂತೆ.

ಅದ್ದೂರಿ ಮೇಕಿಂಗ್ ಸಿನಿಮಾ..

ಅಂದ ಹಾಗೆ, ಪರ್ಪಲ್ ರಾಕ್ ಹಾಗೂ  ವಿಂಟರ್ ಬ್ರಿಡ್ಜ್ ಬ್ಯಾನರ್ ನಲ್ಲಿ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಹಾಗೂ ಆಜೇಯ್ ರಾವ್ ನಿರ್ಮಾಣ ಮಾಡಿದ ಚಿತ್ರ ” ಡಿಯರ್ ಸತ್ಯ’. ಸಿನಿಮಾ ಜಗತ್ತಿನ ಜತೆಗಿನ ನಂಟು ಹಾಗೂ ಅದರ ಮೇಲಿರುವ ಪ್ಯಾಷನ್ ಕಾರಣಕ್ಕೆ ಕನ್ನಡಕ್ಕೆ ಒಂದೊಳ್ಳೆ ಸಿನಿಮಾ ಕೊಡಬೇಕೆನ್ನುವ ಮಹಾದಾಸೆ ಇಟ್ಕೊಂಡೇ ತಂಡ ಈ ಸಿನಿಮಾ ಮಾಡಿದೆಯಂತೆ. ಹಾಗಾಗಿ ಸಿನಿಮಾವನ್ನು ಕತೆಗೆ ತಕ್ಕಂತೆ ಆದ್ದೂರಿಯಾಗಿಯೇ ತೆರೆಗೆ ತಂದಿರುವುದಾಗಿ ನಿರ್ಮಾಪಕರು ಹೇಳುತ್ತಿರುವುದು ಮಾತ್ರವಲ್ಲ, ಟ್ರೇಲರ್ ಹಾಗೂ ಹಾಡುಗಳ ದೃಶ್ಯಗಳಲ್ಲಿ ಅದರ ಮೇಕಿಂಗ್ ಕಾಣುತ್ತಿದೆ. ‍ಇತ್ತೀಚೆಗಷ್ಟೇ ನಡೆದ ಅದರ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಬಂದಿದ್ದು, ಈ ತಂಡ ಸಿನಿಮಾ ಮೇಲಿಟ್ಟಿರುವ ಕಾಳಿಜಿಯಿಂದಲೇ ಅಂತೆ. ಜತೆಗೆ ನಟ ಸಂತೋಷ್ ಹಾಗೂ ನಿರ್ಮಾಪಕ ಯತೀಶ್ ಆವರ ಪರಿಚಯದ ಕಾರಣಕ್ಕೂ ಹೌದು. ಅದೇನೋ ಗೊತ್ತಿಲ್ಲ, ನಟ ಸಂತೋಷ್ ಅವರಿಗೆ ಆರಂಭದಿಂದಲೂ ರಾಜ್ ಕುಟುಂಬದ ಆಶೀರ್ವಾದ ಇದ್ದೇ.

ಸಂತುಗಿದೆ ರಾಜ್ ಕುಟುಂಬದ ಆಶೀರ್ವಾದ..

ಸಂತೋಷ್ ಹೀರೋ ಆಗಿ ಲಾಂಚ್ ಆದ ನೂರು ಜನ್ನಕ್ಕೂ ಚಿತ್ರದ ಆಡಿಯೊ ಲಾಂಚ್ ಸೇರಿದಂತೆ ಆದರ ಪ್ರಚಾರದಲ್ಲೂ ಶಿವಣ್ಣ ಹಾಗೂ ಪುನೀತ್ ಬೆಂಬಲವಾಗಿ ನಿಂತಿದ್ದರು. ಅದೇ ರೀತಿ ಇವತ್ತು ಕೂಡ ರಾಜ್ ಕುಟುಂಬ ಸಂತೋಷ್ ಸಿನಿಮಾಕ್ಕೆ ಬೆಂಬಲಕ್ಕೆ ಬಂದಿದೆ. ‘ಡಿಯರ್ ಸತ್ಯ’ ಚಿತ್ರ ಟೀಸರ್ ಲಾಂಚ್ ಗೆ ಶಿವಣ್ಣ ಬಂದಿದ್ದರು. ಆ ನಂತರವೀಗ ಇದರ ಆಡಿಯೋ ಲಾಂಚ್ ಗೆ ಪುನೀತ್ ರಾಜ್ ಕುಮಾರ್ ಬಂದಿದ್ದರು. ಇದೊಂದು ತಮ್ಮ ಸೌಭಾಗ್ಯ ಅಂದರು ಸಂತೋಷ್ ಆರ್ಯನ್. ಅವತ್ತಿನ ಸಮಾರಂಭದಲ್ಲಿ ಅದನ್ನು ಸಂತೋಷ್ ನೆನಪಿಸಿಕೊಳ್ಳುವುದೇ ವಿಶೇಷ.”  ಶಿವಣ್ಣ ಅವರ’ ಓಂ’ ಚಿತ್ರ ಬಂದಾಗ ಅಲಸೂರಿನ ಚಿತ್ರ ಮಂದಿರದಲ್ಲಿ ಬ್ಲಾಕ್ ನಲ್ಲಿ ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡಿದ್ದೆ. ಅವತ್ತೇ ನಾನು ಶಿವರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಮುಂದೆ ನಾನೂ ಕೂಡ ಸಿನಿ ದುನಿಯಾಕ್ಕೆ ಬರುತ್ತೇನೆ, ನನ್ನ ಸಿನಿಮಾಕ್ಕೆ ಶಿವಣ್ಣ ಬಂದು ಆಶೀರ್ವಾದ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಆದರೆ ಅದು ಅಯಿತು. ಡಿಯರ್ ಸತ್ಯ ಟೀಸರ್ ಆನ್ನು ಅವರೇ ಲಾಂಚ್ ಮಾಡಿದ್ದರು. ಈಗ ಪುನೀತ್ ಅವರು ಆಡಿಯೋ ಲಾಂಚ್ ಮಾಡಿಕೊಟ್ಟಿದ್ದಾರೆ. ದೊಡ್ಮನೆ ಆಶೀರ್ವಾದ ಇದೇ ಆದ್ಮೇಲೆ ನನಗೆ ಗೆಲ್ಲವುದೇನು ಕಷ್ಟ ಆಗದು ಅಂತ ಅತೀವ ವಿಶ್ವಾಸ ವ್ಯಕ್ತಪಡಿಸಿದರು ಆರ್ಯನ್ ಸಂತೋಷ್.

ಡಿಯರ್ ಸತ್ಯ ಗೆಲ್ಲಲ್ಲೇ ಬೇಕಿದೆ…

ಹೌದು, ಆರ್ಯನ್ ಸಂತೋಷ್ ಗೆಲ್ಲಲೇ ಬೇಕಿದೆ. ಕಿರುತೆರೆಯಲ್ಲಿ ನಿರೂಪಕರಾಗಿ, ಆನಂತರ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆಲ್ಲುವ  ಅವರ ಪ್ರಯತ್ನ ಒಂದಷ್ಟು ಫನ ಕೊಟ್ಟರೂ, ಹೀರೋ ಆಗಿ ಅವರಿಗೆ ‍ಇನ್ನು ದೊಡ್ಡದೊಂದು ಬ್ರೇಕ್ ಬೇಕಿದೆ. ಆ ಬ್ರೇಕ್ ಗಾಗಿ ಅವರು ಕಾಯುತ್ತಿದ್ದಾರೆ. ನೂರು ಜನ್ನಕ್ಕೂ ದೊಡ್ಡ ನಿರೀಕ್ಷೆ ಮೂಡಿಸಿದ್ದರೂ, ಅಲ್ಲಿ ಸಂತೋಷ್ ಅವರಿಗೆ ಅದೃಷ್ಟ ಕೈ ಕೊಟ್ಟಿತು. ಮುಂದೆ ಅಭಿರಾಮ್, ಇಷ್ಟ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ಸಂತೋಷ್ ಅರ್ಯನ್ ಜನರಿಗೆ ಇನ್ನು ಅಷ್ಟಾಗಿ ಹಿಡಿಸದೆ ಹೋದರು. ಈಗ ಅದೆಲ್ಲವನ್ನು ಮರೆಸಬೇಕು, ದೊಡ್ಡದೊಂದು ಬ್ರೇಕ್ ಪಡೆದುಕೊಳ್ಳಬೇಕು ಅಂತಲೇ ಡಿಯರ್ ಸತ್ಯದಲ್ಲಿ ಆಭಿನಯಿಸಿದ್ದಾರಂತೆ. ಈ ಸಿನಿಮಾದಲ್ಲಿ ಸಂತೋಷ್ ಆರ್ಯನ್ ಅವರ ಮಾಸ್ ಹಾಗೂ ಕ್ಲಾಸ್ ಲುಕ್ ಎಲ್ಲವೂಇದೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗುವುದು ನೂರಕ್ಕೂ ನೂರರಷ್ಟು ಗ್ಯಾರಂಟಿ ಅಂತಾರೆ ಆರ್ಯನ್ ಸಂತೋಷ್ . ಉಳಿದಂತೆ  ಶಿವಗಣೇಶ್ ನಿರ್ದೇಶನದ ಡಿಯರ್ ಸತ್ಯ ಚಿತ್ರ ಫೆಬ್ರವರಿಗೆ ತೆರೆಗೆ ಬರುವ ಸಾಧ್ಯತೆಗಳಿವೆ. ಸಂತೋಷ್ ಅವರಿಗೆ ಇಲ್ಲಿ ನಟಿ ಅರ್ಚನಾ ಕೊಟ್ಟಿಗೆ ನಾಯಕಿ ಆಗಿದ್ದಾರೆ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಶ್ರೀಮುರಳಿ ಚಿತ್ರ- ಡಿ.17ರ ರೋರಿಂಗ್‌ ಸ್ಟಾರ್‌ ಬರ್ತ್‌ಡೇಗೆ ಹೊಸ ಚಿತ್ರ ಘೋಷಣೆ

ಅದ್ಧೂರಿ ಬಜೆಟ್‌ ಚಿತ್ರಕ್ಕೆ ನಿರ್ದೇಶಕ ಯಾರೆಂಬುದು ಗೌಪ್ಯ

ಕನ್ನಡದಲ್ಲೀಗ ಹೊಸ ಸಿನಿಮಾ ಅನೌನ್ಸ್‌ಮೆಂಟ್‌ಗಳ ಸುರಿಮಳೆ. ಹೌದು, ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್‌ ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅಭಿನಯದ “ಸಲಾರ್‌” ಸಿನಿಮಾ ನಿರ್ಮಿಸುವ ಕುರಿತು ಅನೌನ್ಸ್‌ ಮಾಡಿತ್ತು. ಆ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ನಿರ್ದೇಶಕ ಎಂಬುದನ್ನೂ ಹೇಳಿತ್ತು. ಅದರ ಬೆನ್ನೆಲ್ಲೇ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಅನೌನ್ಸ್‌ ಮಾಡುವುದಾಗಿ ಹೇಳಿಕೊಂಡಿದೆ. ಹೌದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್‌, ಡಿಸೆಂಬರ್‌ ೧೭ರಂದು ೧೧.೫೯ಕ್ಕೆ ಹೊಸ ಸಿನಿಮಾ ಘೋಷಣೆ ಮಾಡುವುದಾಗಿ ಹೇಳಿಕೊಂಡಿದೆ. ಎಲ್ಲವೂ ಸರಿ, ಹೊಂಬಾಳೆ ಫಿಲ್ಮ್ಸ್‌ ಯಾಕೆ ಡಿಸೆಂಬರ್‌ ೧೭ರಂದು ಹೊಸ ಸಿನಿಮಾ ಅನೌನ್ಸ್‌ ಮಾಡಲಿದೆ, ಅದಕ್ಕೆ ಕಾರಣ ಏನು? ಈ ಪ್ರಶ್ನೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಹೊಂಬಾಳೆ ಫಿಲ್ಮ್ಸ್‌ ಮೂಲಕ ಇದುವರೆಗೆ ಆರು ಚಿತ್ರಗಳು ತಯಾರಾಗಿದ್ದು, ಇತ್ತೀಚೆಗೆ ಏಳನೇ ಸಿನಿಮಾ “ಸಲಾರ್‌” ಚಿತ್ರವನ್ನು ಘೋಷಣೆ ಮಾಡಿತ್ತು. ಈಗ ಎಂಟನೇ ಸಿನಿಮಾ ಘೋಷಣೆಗೆ ಡಿಸೆಂಬರ್‌ ೧೭ರಂದು ನಿಗದಿ ಮಾಡಲಾಗಿದೆ. ಎಲ್ಲವೂ ಸರಿ, ಈ ಸಿನಿಮಾಗೆ ನಾಯಕ ಯಾರು? ಯಾಕೆ ಡಿಸೆಂಬರ್‌ ೧೭ರಂದೇ ಹೊಸ ಚಿತ್ರ ಅನೌನ್ಸ್‌ ಮಾಡಲಿದ್ದಾರೆ? ಈ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. ಕೆಲವು ಕಡೆ ಪುನೀತ್‌ ರಾಜಕುಮಾರ್‌ ಅವರ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅವರ ಸಿನಿಮಾ ಘೋಷಣೆ ಮಾಡಿದರೂ ಅಚ್ಚರಿ ಇಲ್ಲ ಬಿಡಿ.


ಆದರೆ, ಡಿಸೆಂಬರ್‌ ೧೭ರಂದು ಬೆಳಗ್ಗೆ ೧೧.೫೯ಕ್ಕೆ ಹೊಂಬಾಳೆ ಫಿಲ್ಮ್ಸ್‌ ಅನೌನ್ಸ್‌ ಮಾಡಲಿರುವ ಹೊಸ ಸಿನಿಮಾಗೆ ಮೂಲಗಳ ಪ್ರಕಾರ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರು ಹೀರೋ ಎನ್ನಲಾಗುತ್ತಿದೆ. ಯಾಕೆಂದರೆ, ಡಿಸೆಂಬರ್‌ ೧೭ರಂದು ಶ್ರೀಮುರಳಿ ಅವರ ಹುಟ್ಟುಹಬ್ಬ. ಅಂದೇ ಹೊಂಬಾಳೆ ಫಿಲ್ಸ್ಮ್‌ ಶ್ರೀಮುರಳಿ ಅವರ ಹೊಸ ಸಿನಿಮಾವವನ್ನು ಅನೌನ್ಸ್‌ ಮಾಡಲಿದ್ದಾರೆ ಎಂಬ ಜೋರು ಸುದ್ದಿಯೂ ಇದೆ.
ಎರಡು ದಿನಗಳ ಹಿಂದಷ್ಟೇ,  “ಸಿನಿಲಹರಿ” ಕೂಡ ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ತ್ರಿಬಲ್‌ ಧಮಾಕ ಶೀರ್ಷಿಕೆಯಡಿ ಸುದ್ದಿಯೊಂದನ್ನು ಪೋಸ್ಟ್‌ ಮಾಡಿತ್ತು. ಆ ಸುದ್ದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈಗ ಹೊಂಬಾಳೆ ಫಿಲ್ಮ್ಸ್‌ ಹೊಸ ಚಿತ್ರ ಅನೌನ್ಸ್‌ ‌ ಮಾಡುತ್ತಿರುವುದು ಕೂಡ ಡಿ.೧೭ಕ್ಕೆ. ಹಾಗಾಗಿ ಶ್ರೀಮುರಳಿ ಅವರ ಹುಟ್ಟಹಬ್ಬಕ್ಕೆ ಹೊಂಬಾಳೆ ಫಿಲ್ಮ್ಸ್‌ ಹೊಸ ಚಿತ್ರ ಅನೌನ್ಸ್‌ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. ಸದ್ಯಕ್ಕೆ ನಿರ್ದೇಶಕ ಯಾರೆಂಬುದು ಗೌಪ್ಯವಾಗಿದೆ.

Categories
ಸಿನಿ ಸುದ್ದಿ

ಶ್ರೀಮುರಳಿ ಹುಟ್ಟು ಹಬ್ಬಕ್ಕೆ ತ್ರಿಬಲ್ ಧಮಾಕ! ಮದಗಜ ಟೀಸರ್ ಜೊತೆ ಎರಡು ಬಿಗ್ ಪ್ರಾಜೆಕ್ಟ್ ಅನೌನ್ಸ್

 ಫ್ಯಾನ್ಸ್ ಗೆ  ಸರ್ಪ್ರೈಸ್  ಕೊಡ್ತಾರೆ ರೋರಿಂಗ್ ಸ್ಟಾರ್

ಸಿನಿ ಲಹರಿ ಎಕ್ಸ್ ಕ್ಲ್ಯೂಸ್

ಶ್ರೀಮುರಳಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ‘ಉಗ್ರಂ’ ಮೂಲಕ ತಮ್ಮ ಇಮೇಜ್ ಬದಲಿಸಿಕೊಂಡವರು. ಅಲ್ಲಿಂದ ಇಲ್ಲಿಯವರೆಗೂ ಅದೇ ಇಮೇಜ್ ಉಳಿಸಿಕೊಂಡು ಬಂದಿದ್ದಾರೆ. ಅವರೀಗ ಮತ್ತಷ್ಟು ಹೊಸ ಪ್ರಾಜೆಕ್ಟ್‌ ಗಳಲ್ಲಿ ಬಿಝಿಯಾಗಲಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.

ಶ್ರೀಮುರಳಿ ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ. ಡಿಸೆಂಬರ್ 17ರಂದು ಅವರ ಹುಟ್ಟು ಹಬ್ಬ. ಅದರ ಹಿನ್ನೆಲೆಯಲ್ಲಿ ಶ್ರೀಮುರಳಿ ಅವರ ಮೂರು ವಿಶೇಷತೆಗಳಿವೆ. ಅದು ಬೇರೇನೂ ಅಲ್ಲ. ಶ್ರೀಮುರಳಿ ಅವರ ಎರಡು ಹೊಸ ಪ್ರಾಜೆಕ್ಟ್ ಗಳು ಅನೌನ್ಸ್ ಆಗಲಿವೆ. ‘ಉಗ್ರಂ’, ‘ಮಫ್ತಿ’, ‘ಭರಾಟೆ’, ಎಂಬ ಅದ್ಧೂರಿ ಮತ್ತು ಯಶಸ್ವಿ ಸಿನಿಮಾಗಳನ್ನು ಕೊಟ್ಟಿರುವ ಶ್ರೀಮುರಳಿ ಅವರು, ಈಗ ‘ಮದಗಜ’ ಎಂಬ ಬಹು ನಿರೀಕ್ಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅದರ ಬೆನ್ನಲ್ಲೇ ಎರಡು ದೊಡ್ಡ ಬ್ಯಾನರ್ ಗಳಲ್ಲಿ ತಯಾರಾಗುತ್ತಿರುವ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಈ ಕುರಿತು ಅವರ ಹುಟ್ಟು ಹಬ್ಬದ ದಿನದಂದು ಅನೌನ್ಸ್ ಆಗಲಿವೆ. ಆ ಎರಡು ಸಿನಿಮಾಗಳು ಬಿಗ್ ಬ್ಯಾನರ್ ಮೂಲಕ ತಯಾರಾಗಲಿವೆ ಎಂಬುದು ವಿಶೇಷ. ಅವರ ಹುಟ್ಟು ಹಬ್ಬದ ಮುನ್ನವೇ ಹೊಸ ಪ್ರಾಜೆಕ್ಟ್ ಗಳು  ಘೋಷಣೆಯಾಗುತ್ತಿವೆ. ಆದರೆ, ಯಾವ ಬ್ಯಾನರ್, ಯಾವ ನಿರ್ದೇಶಕರ ಸಿನಿಮಾಗಳು ಅನ್ನೋದು ಗೌಪ್ಯ. ಇನ್ನು  ಶ್ರೀಮುರಳಿ ಅವರ  ‘ಮದಗಜ’ ಚಿತ್ರದ ಟೀಸರ್ ಕೂಡ ಅವರ ಹುಟ್ಟುಹಬ್ಬದಂದು ರಿಲೀಸ್ ಆಗಲಿದೆ. ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಟೀಸರ್ ರಿಲೀಸ್ ಮಾಡಲಿದ್ದಾರೆ.

ಅದೇನೆ ಇರಲಿ, ‘ಮದಗಜ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಬಾರಿಯ ಡಿಸೆಂಬರ್17ರ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಹುಟ್ಟುಹಬ್ಬಕ್ಕೆ ತ್ರಿಬಲ್‌ ಧಮಾಕ. ಈಗಾಗಲೇ ಫಸ್ಟ್ ಲುಕ್ ಟೀಸರ್ ನ ವಿಡಿಯೊ ತುಣುಕು ರಿಲೀಸ್ ಆಗಿದ್ದು, ಎಲ್ಲೆಡೆ, ನಿರೀಕ್ಷೆ ಹುಟ್ಟಿಸಿದೆ.ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ನಿರ್ಮಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಮುಹೂರ್ತ ಮುಗಿಸಿದ ಫಾರ್ ರಿಜಿಸ್ಟ್ರೇಷನ್ ಚಿತ್ರ

ಕ್ಲಾಪ್ ಮಾಡಿ ಶುಭ ಹಾರೈಸಿದ ನಟ ನಿಖಿಲ್ ಕುಮಾರ ಸ್ವಾಮಿ

ಬಾಲ್ಯದಲ್ಲಿನ ಗೆಳೆತನ ಯಾರು, ಎಷ್ಟು ವರ್ಷ ಕಾಪಿಟ್ಟುಕೊಂಡು ಬರುತ್ತಾರೋ ಗೊತ್ತಿಲ್ಲ, ಆದರೆ ಇಲ್ಲೊಂದಷ್ಟು ಗೆಳೆಯರು ಬಾಲ್ಯದಲ್ಲಿನ‌ ಪ್ರೀತಿಗೆ ಬೆಲೆ ಕೊಟ್ಟು ಸಿನಿಮಾ ನಿರ್ಮಾಣದಲ್ಲಿ ಒಂದಾಗಿದ್ದಾರೆ. ಆಚಿತ್ರದ ಹೆಸರು ‘ಫಾರ್ ರಿಜಿಸ್ಟ್ರೇಷನ್‌’.ಇದೊಂದು ವಿಭಿನ್ನ ಶೀರ್ಷಿಕೆ ಯ ಚಿತ್ರ. ಇದರ ಕತೆ ಕೂಡ ಅಷ್ಟೆ ವಿಶೇಷವಾಗಿದೆ. ಬೆಂಗಳೂರಿನ‌ ವಸಂತನಗರದಲ್ಲಿನ ಅಂಬಾಭವಾನಿ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ಮುಗಿಯಿತು.
ನಟ ನಿಖಿಲ್ ಕುಮಾರಸ್ವಾಮಿ ಅತಿಥಿಯಾಗಿ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ನಿರ್ಮಾಪಕ ನವೀನ್ ಕುಮಾರ್ ಅವರ ಪುತ್ರ ನಿಶ್ಚಲ್ ಕ್ಯಾಮರಾ ಸ್ವೀಚ್ ಆನ್ ಮಾಡಿದರು. ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎನ್. ನವೀನ್ ರಾವ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ‘ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ ಹಾಗೂ ಲವ್ ಮಾಕ್ಟೆಲ್ ಖ್ಯಾತಿಯ ನಾಯಕಿ ಮಿಲನಾ‌ ನಾಗರಾಜ್ಬಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಇಷ್ಟರಲ್ಲಿಯೇ ಚಿತ್ರೀಕರಣ ಶುರುವಾಗಲಿದೆಯಂತೆ.


ಚಿತ್ರಕ್ಕೆ ನವೀನ್ ದ್ವಾರಕಾನಾಥ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರು ಸಿನಿಮಾ‌ಕುರಿತು ಮಾತನಾಡುತ್ತಾ, ‘ಕಳೆದ ಒಂದೂವರೆ ವರ್ಷದ ಹಿಂದೆಯೇ ಈ ಸಿನಿಮಾ ಮಾಡುವ ಬಗ್ಗೆ ಚರ್ಚೆ ಶುರುವಾಗಿತ್ತು. ಅದೇ ರೀತಿ ಇದೀಗ ಈ ಸಿನಿಮಾ ಸೆಟ್ಟೇರಿದೆ ‘ ಎಂದರು. ಟೈಟಲ್ ಕುರಿತು ಸ್ಪಷ್ಟನೆ ನೀಡಿದ ನವೀನ್, ‘ಇತ್ತೀಚಿನ ದಿನಗಳಲ್ಲಿ ಏನೇ ಕೆಲಸ ಮಾಡಬೇಕೆಂದರೂ ನಾವು ಅದಕ್ಕೆ ಸಂಬಂಧಪಟ್ಟಂತೆ ನೋಂದಣಿ ಮಾಡಿಸಲೇಬೇಕು. ಇಲ್ಲಿಯೂ ಅದರ ಸುತ್ತ ಕಥೆ ಸಾಗಲಿದೆ ‘ ಎಂದರು.
ಚಿತ್ರಕ್ಕೆ ಒಟ್ಟು 30 ದಿನಗಳ ಶೂಟಿಂಗ್ ಯೋಜನೆ ಇದೆಯಂತೆ. ಸಕಲೇಶಪುರ, ಮಂಗಳೂರು, ಉಡುಪಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ‌ನಡೆಸಲು‌ತಂಡ ಯೋಜನೆ ಹಾಕಿಕೊಂಡಿದೆ. ಚಿತ್ರಕ್ಕೆ ನವೀನ್ ರಾವ್ ಬಂಡವಾಳ ಹಾಕುತ್ತಿದ್ದಾರೆ‌. ‘ದಿಯಾ’ ಚಿತ್ರದ ಖ್ಯಾತಿಯ ನಟ ಪೃಥ್ವಿ ಅಂಬರ ನಾಯಕ, ಲವ್ ಮಾಕ್ಟೆಲ್ ಖ್ಯಾತಿಯ ನಟಿ ಮಿಲನಾ‌ನಾಗರಾಜ್ ನಾಯಕಿ. ಚಿತ್ರಕ್ಕೆ ತಬಲ‌ನಾಣಿ‌ಸಂಭಾಷಣೆ ಬರೆದು ಪ್ರಮುಖ‌ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಹಾಗೆಯೇ ಸುಧಾರಾಣಿ, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ,ರಾಘು ರಾಮನಕೊಪ್ಪ ಚಿತ್ರದ ತಾರಾಗಣದಲ್ಲಿದ್ದಾರೆ.

ಚಿತ್ರಕ್ಕೆ ವಿವೇಕ್ ಛಾಯಾಗ್ರಹಣ ಮಾಡುತ್ತಿದ್ದು, ಈ ಮೊದಲು ಕಿರುಚಿತ್ರ ಮಾಡಿದ ಅನುಭವ ಅವರಿಗಿದೆ. ಇದು ಅವರ ಮೊದಲ ಪೂರ್ಣಪ್ರಮಾಣದ ಸಿನಿಮಾ. ಹರೀಶ್ ಸಂಗೀತ ಸಂಯೋಜನೆಯ ಜವಾಭ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿವೆ. ಅವರಿಗೂ ಇದು ಮೊದಲ ಸಿನಿಮಾ. ಚೇತನ್ ಕುಮಾರ್, ಕವಿರಾಜ್ ನಾಗಾರ್ಜುನ್ ಶರ್ಮಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಇರ್ಮಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಕನ್ನಡಕ್ಕೊಂದು ಹೆಮ್ಮೆ…ಆಕ್ಟ್ 1978 !

ಕನ್ನಡದ ಮಹಿಳಾ‌ ನಿರ್ದೇಶಕರಲ್ಲಿ ಹೆಚ್ಚು ಕ್ರಿಯಾಶೀಲ ಆಗಿರುವವರು ‘ಟ್ರಂಕ್’ ಚಿತ್ರದ ಖ್ಯಾತಿಯ ನಿರ್ದೇಶಕಿ ರಿಷಿಕಾ ಶರ್ಮಾ.ಇವರು ಕನ್ನಡ ಚಿತ್ರ ರಂಗದ ಭೀಷ್ಮ ಜಿ.ವಿ. ಅಯ್ಯರ್ ಮೊಮ್ಮಗಳು. ನಟಿಯಾಗಿ ಬಂದವರು ಈಗ ನಿರ್ದೇಶನದಲ್ಲೆ ಹೆಚ್ಚು ತೊಡಗಿಸಿಕೊಂಡಿದ್ದಾರೆ. ‘ಟ್ರ‌ಂಕ್’ ನಂತರ ಅವರೀಗ ಬಿಗ್ ಬಜೆಟ್ ನ ಕಮರ್ಷಿಯಲ್ ಚಿತ್ರವೊಂದರ ನಿರ್ದೇಶನದ ಸಿದ್ದತೆಯಲ್ಲಿದ್ದಾರೆ. ಇಷ್ಟರಲ್ಲೇ ಅದರ ವಿವರ ರಿವೀಲ್ ಆಗಲಿದೆ.ಈ ನಡುವೆ ಅವರು ಇತ್ತೀಚೆಗೆ ‘ಆಕ್ಟ್ 1978 ‘ಚಿತ್ರ ನೋಡಿದ್ದರು. ಅದೊಂದು ಸದಭಿರುಚಿಯ ಚಿತ್ರವಾಗಿದ್ದರಿಂದ ಅದು ಹೆಚ್ಚೆಚ್ಚು ಜನರಿಗೆ ತಲುಪಬೇಕು, ಜನರು ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡಬೇಕೆನ್ನುವ ಕಾಳಜಿಯೊಂದಿಗೆ ಆ ಸಿನಿಮಾದ ಕುರಿತು ಸಿನಿ‌ಲಹರಿ ಜತೆಗೆ ಒಂದಷ್ಟು ಅನಿಸಿಕೆ ಹಂಚಿಕೊಂಡಿದ್ದು, ಅದರ ಪೂರ್ಣ ವಿವರ ಇಲ್ಲಿದೆ‌.

…………

ನಿರ್ದೇಶಕಿ ರಿಷಿಕಾ‌ ಶರ್ಮಾ‌ ಬರೀತಾರೆ……

 

ಕನ್ನಡಕ್ಕೆ ಒಂದು ಹೆಮ್ಮೆ ಹಾಗೆ ಒಂದು ಅದ್ಭುತ ಸಿನಿಮಾ Act – 1978. ಚಿತ್ರಕ್ಕೆ ಚಿತ್ರದ ಕಥಾ ವಸ್ತು ಬೆನ್ನೆಲುಬು ಆಗಿದ್ದರೆ, ಇದರ ಪಾತ್ರಧಾರಿಗಳು, ಛಾಯಾಗ್ರಹಣ, ಕಲರ್ ಟೋನ್, ಹಿನ್ನೆಲೆ ಸಂಗೀತ ಇವೆಲ್ಲವೂ ಚಿತ್ರದ ಉಸಿರಾಗಿದೆ.

ಬೇರೊಂದು ಜಗತ್ತಿಗೆ ಕರೆದು ಕೊಂಡು ಹೋಗುವ screenplay, ಕಥೆ ಸಾಗಿದಷ್ಟು ಆಳಕ್ಕೆ ಪರಿಚಯಿಸುವ ಪಾತ್ರಗಳು ಹಾಗೂ ಅದರ ದೃಷ್ಟಿ ಕೋನಗಳು, ಇದಿಷ್ಟು ವಿಷಯಗಳು ನಮ್ಮನ್ನು ಅಂದರೆ ಪ್ರೇಕ್ಷಕರನ್ನು ಚಿತ್ರದ heroin ಗೀತಾ ಪಾತ್ರದ ಸ್ವತಃ ಮುಂದೆಯೇ ನಿಂತು, ಆ ಒಂದು ದಿನ – ಬೆಳಗ್ಗೆ ನಿಂದ ಸಂಜೆಯವರೆಗೂ ಅವಳ ಜೀವನದಲ್ಲಿ ಏನು ನಡೀತು ಅನ್ನೋದನ್ನ 2 ಗಂಟೆಗಳ ಒಳಗೆ ಬಹಳ ನೈಜ್ಯವಾಗಿ ಹಾಗೆ ಅದ್ಭುತವಾಗಿ ಸೆರೆ ಹಿಡಿಯುವುದರಲ್ಲಿ ಚಿತ್ರ ತಂಡ ಯಶಸ್ವಿಯಾಗಿದೆ.

ಒಬ್ಬ ಸಾಮಾನ್ಯ ಗರ್ಭಿಣಿ ಮಹಿಳೆ ಹಾಗೂ ಕುಟುಂಬಸ್ಥ ಅವರಿಗೆ ಸರ್ಕಾರಿ ನೌಕರರಿಂದ ಅನ್ಯಾಯ ಆದಾಗ, ಆ ನೌಕರರಿಗೆ ಗೀತಾ ಅವಳ ಪರಿಸ್ಥಿತಿ ಅರ್ಥ ಮಾಡಿಸೋಕೆ, ಅವರಿಗೆ ಒಂದು ಪಾಠ ಕಲಿಸುವುದಕ್ಕೆ ಕೃಷಿ ಇಲಾಖೆ ಕಚೇರಿಯನ್ನು ಈಕೆ ಹ್ಯೂಮನ್ ಬಾಂಬ್ ಹಾಕಿಕೊಂಡು ಸೆರೆ ಹಿಡಿಯುತ್ತಾಳೆ. ಹೇಗೆ ಸೆರೆ ಹಿಡಿದ್ರು? ಮುಂದೆ ಆಕೆಗೆ ನ್ಯಾಯ ಸಿಗತ್ತಾ? ಅನ್ನೋದು ಚಿತ್ರದ ಕಥೆ.

ಕಥೆಯ ಪಾತ್ರಧಾರಿ ಗೀತಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ, ಕುಟುಂಬಸ್ಥರ ಪಾತ್ರದಲ್ಲಿ ಬಿ. ಸುರೇಶ್, ಪೊಲೀಸ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ನೌಕರರ ಪಾತ್ರದಲ್ಲಿ ನಂದ ಗೋಪಾಲ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನುಳಿದ ಪಾತ್ರಗಳು ಕೂಡಾ ಮನ ಸೆಳೆಯುವಂತೆ ಅಭಿನಯಿಸಿದ್ದಾರೆ.

ಇಂತಹ ಪ್ರಯತ್ನವನ್ನ ಕನ್ನಡಕ್ಕೆ ಚಿತ್ರೀಕರಿಸಿ ಕೊಟ್ಟ ಚಿತ್ರದ ಕ್ಯಾಪ್ಟನ್ ನಿರ್ದೇಶಕ ಮಂಸೋರೆ ಅವರಿಗೆ ಹಾಟ್ಸ್ ಆಫ್. ಕನ್ನಡದಲ್ಲಿ ಇಂತಹದ್ದು ಒಂದು ಸಿನಿಮಾ ಅಚ್ಚುಕಟ್ಟಾಗಿ ಮಾಡಬಹುದು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಚಿತ್ರದಲ್ಲಿ emotions with entertainment ಒಂದಕ್ಕೊಂದು ಸಾಥ್ ಕೊಡೋದ್ರಲ್ಲಿ ಯಶಸ್ವಿಯಾಗಿದೆ.

ಕನ್ನಡ ಪ್ರೇಕ್ಷಕರೆ ನಿಮ್ಮಲ್ಲಿ ಒಂದು ವಿನಂತಿ 🙏 (Movie Lovers) with all safety measures to avoid #COVID19 spread, request you all to please do support #kannadafilms by watching this classic in theatre. ನಿಮ್ಮ ಪ್ರೋತ್ಸಾಹ ಇರಲಿ 🙏

Categories
ಸಿನಿ ಸುದ್ದಿ

ದಿಗಂತ್‌ ಮಾರಿಗೋಲ್ಡ್‌ ಪೂರ್ಣ – ಮಾಸ್‌ ಕ್ರೇಜ್‌ ಸೃಷ್ಟಿಸಿರುವ ಚಿತ್ರ

ಹಾಡಿನ ಮೂಲಕ ಸಿನಿಮಾಗೆ ಕುಂಬಳಕಾಯಿ

ಗುಳಿಕೆನ್ನೆ ಹುಡುಗ ದಿಗಂತ್‌ ಅಭಿನಯದ “ಮಾರಿಗೋಲ್ಡ್” ಚಿತ್ರ ಪೂರ್ಣಗೊಂಡಿದೆ. ಇತ್ತೀಚೆಗೆ ಹಾಡೊಂದನ್ನು ಚಿತ್ರೀಕರಿಸುವ ಮೂಲಕ ಚಿತ್ರತಂಡ ಕುಂಬಳಕಾಯಿ ಒಡೆಯುವ ಮೂಲಕ ಶೂಟಿಂಗ್‌ ಮುಗಿಸಿದೆ. ಈಗಾಗಲೇ ಫಸ್ಟ್‌ಲುಕ್‌ ಪೋಸ್ಟರ್‌ ಕೂಡ ಬಿಡುಗಡೆಯಾಗಿ, ಸಾಕಷ್ಟು ಕುತೂಹಲ ಮೂಡಿಸಿದೆ.

ಇನ್ನು, ಚಿತ್ರತಂಡ “ಮಾರಿಗೋಲ್ಡ್‌” ಚಿತ್ರದ ಡಬ್ಬಿಂಗ್‌ ಕಾರ್ಯವನ್ನೂ ಬಹುತೇಕ ಮುಗಿಸಿದ್ದು, ನಾಯಕ ದಿಗಂತ್‌ ಭಾಗವಷ್ಟೇ ಬಾಕಿ ಉಳಿದಿದೆ. “ಮಾರಿಗೋಲ್ಡ್‌” ಕುತೂಹಲ ಹುಟ್ಟಿಸಿರುವುದಕ್ಕೆ ಕಾರಣ, ಶೀರ್ಷಿಕೆ ಮತ್ತು ಚಿತ್ರತಂಡ ಬಿಡುಗಡೆ ಮಾಡಿರುವ ಶೀರ್ಷಿಕೆ ಫಸ್ಟ್‌ಲುಕ್‌. ಶೀರ್ಷಿಕೆ ಕೇಳಿದವರಿಗೆ ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅದು ಅಂಡರ್‌ವರ್ಲ್ಡ್‌ ಸಿನಿಮಾನಾ ಅಥವಾ ರೌಡಿಸಂ ಕುರಿತಾದ ಕಥೆಯೇ ಎಂಬುದಕ್ಕೆ ಸಿನಿಮಾ ಬರುವ ತನಕ ಕಾಯಬೇಕು.


ಇನ್ನು, ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ನಿರ್ದೇಶನ ಮಾಡಿದ್ದಾರೆ. ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಹಾಗಂತ, ಅವರಿಗೆ ಅನುಭವ ಇಲ್ಲವೆಂದಲ್ಲ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ ಅನುಭವದ ಮೇಲೆ ಈಗ “ಮಾರಿಗೋಲ್ಡ್‌” ಹಿಂದೆ ನಿಂತಿದ್ದಾರೆ. ಇನ್ನು, ಚಿತ್ರವನ್ನು ರಘುವರ್ಧನ್‌ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್‌ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ಅವರು ಮಾಡಿಕೊಂಡಿದ್ದ ಕಥೆ. ಕಥೆ ಚೆನ್ನಾಗಿದ್ದರಿಂದ, ಆ ಕಥೆಯನ್ನು ರಾಘವೇಂದ್ರ ನಾಯಕ್‌ಅವರೇ ನಿರ್ದೇಶಿಸಲಿ ಎಂಬ ಮನೋಭಾವದಿಂದಾಗಿ ರಘುವರ್ಧನ್‌, ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಿಸಿ, ಈಗ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.


ಸದ್ಯಕ್ಕೆ “ಮಾರಿಗೋಲ್ಡ್‌” ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದಕ್ಕೆ ಕಾರಣ, ಎಲ್ಲೆಡೆ “ಮಾರಿಗೋಲ್ಡ್‌” ಕುರಿತು ಸಿಗುತ್ತಿರುವ ಮೆಚ್ಚುಗೆ. ಈ ಚಿತ್ರದ ಹೀರೋ ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ .ಇನ್ನು, ಬೆಂಗಳೂರು, ಸಕಲೇಶಪುರ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಇದೊಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ ಆಗಿದ್ದು, ಸಂಗೀತಾ ಶೃಂಗೇರಿ ಚಿತ್ರದ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಸಂಪತ್‌ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ಶೆಟ್ಟಿ, ರಾಜ್‌ ಬಲವಾಡಿ, ಗಣೇಶ್‌ರಾವ್‌ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೆ.ಎಸ್.‌ಚಂದ್ರಶೇಖರ್‌ ಕ್ಯಾಮೆರಾ ಹಿಡಿದರೆ, ವೀರ್‌ ಸಮರ್ಥ್‌ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಬರೆದಿದಾರೆ. ಯೋಗರಾಜ್‌ಭಟ್‌, ವಿಜಯ್‌ ಭರಮಸಾಗರ ಸಾಹಿತ್ಯವಿದೆ.‌ ಸದ್ಯಕ್ಕೆ ಬಿಡುಗಡೆ ತಯಾರಿಯಲ್ಲಿ ಚಿತ್ರವಿದೆ. “ಮಾರಿಗೋಲ್ಡ್”‌ ಒಂದು ರೀತಿಯ ಮಾಸ್‌ ಕ್ರೇಜ್‌ ಹುಟ್ಟುಹಾಕಲು ಕಾರಣ, ಈ ಚಿತ್ರದ ಶೀರ್ಷಿಕೆ ಪೋಸ್ಟರ್.‌ ಇನ್ನು, ಈ ಶೀರ್ಷಿಕೆಯಡಿ ದಿಗಂತ್‌ ನಡೆಸುತ್ತಿರುವುದರಿಂದ ಅವರನ್ನಿಲ್ಲಿ ಬೇರೆ ರೀತಿಯಲ್ಲೇ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂಬುದು ನಿರ್ದೇಶಕರ ಮಾತು. ಒಟ್ಟಾರೆ, “ಮಾರಿಗೋಲ್ಡ್‌” ಪಕ್ಕಾ ಸಿನಿಪ್ರೇಮಿಗಳಿಗಂತೂ ಒಂದೊಳ್ಳೆಯ ಮನರಂಜನಾತ್ಮಕ ಸಿನಿಮಾ ಆಗಿ ಹೊರಬರಲಿದೆ ಎಂಬ ಗ್ಯಾರಂಟಿ ಕೊಡುತ್ತಾರೆ ನಿರ್ಮಾಪಕ ರಘುವರ್ಧನ್.

Categories
ಸಿನಿ ಸುದ್ದಿ

ಐವರಲ್ಲಿ ಟ್ರೋಪಿ ಗೆಲ್ಲುವವರು ಯಾರು ಗೊತ್ತಾ?

ಅಂತಿಮ ಹಂತಕ್ಕೆ ಸರಿಗಮಪ ರಿಯಾಲಿಟಿ ಶೋ ಸೀಸನ್‌ 17

ಫೈನಲ್ ಸ್ಪರ್ಧಿಗಳ ಜತೆಗೆ ನಿರೂಪಕಿ ಅನುಶ್ರೀ

ಜೀ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ” ಸರಿ ಗಮಪ ಸೀಸನ್‌ 17 ” ಕುತೂಹಲಕಾರಿ ಘಟ್ಟಕ್ಕೆ ಕಾಲಿಟ್ಟಿದೆ. ಭಾನುವಾರವಷ್ಟೇ ಸೆಮಿ ಫೈನಲ್‌ ಮುಗಿದಿದ್ದು, ಮುಂದಿನದು ಗ್ರ್ಯಾಂಡ್‌ ಫಿನಾಲೆ. ಅಲ್ಲಿಗೆ ಈಗ ಐದು ಸ್ಪರ್ಧೆಗಳು ಅಂತಿಮವಾಗಿ ಸರಿಗಮಪ ಸೀಸನ್‌ 17 ಕ್ಕೆ ಅಯ್ಕೆ ಆಗಿದ್ದಾರೆ. ನಿರೀಕ್ಷೆಯಂತೆ ಶ್ರೀ ನಿಧಿ ಶಾಸ್ತೀ ನೇರವಾಗಿಯೇ ಗ್ರ್ಯಾಂಡ್‌ ಫಿನಾಲೆಗೆ ಆಯ್ಕೆ ಆಗಿದ್ದರು.

ಶ್ರೀನಿಧಿ ಶಾಸ್ತ್ರಿ

ಇದೀಗ ಸೆಮಿ ಫೈನಲ್‌ ಹಣಾ ಹಣಿಯಲ್ಲಿ ಕಂಬದ ರಂಗಯ್ಯ, ಶರಧಿ ಪಾಟೀಲ್‌, ಅಶ್ವಿನ್‌ ಶರ್ಮಾ ಹಾಗೂ ಕಿರಣ್‌ ಪಾಟೀಲ್‌ ಆಯ್ಕೆಯಾಗುವ ಮೂಲಕ ಕನ್ನಡ ಕಿರುತೆರೆಯ ಬಹು ಜನಪ್ರಿಯ ಶೋ ಸರಿಗಮಪ ಸೀಸನ್‌ 17 ಇನ್ನೊಂದು ಹಂತಕ್ಕೆ ಕಾಲಿಟ್ಟಿದೆ.

ಗ್ರ್ಯಾಂಡ್‌ ಫಿನಾಲೆಗೆ

1 ಶ್ರೀನಿಧಿ ಶಾಸ್ತಿ
2 ಕಂಬದ ರಂಗಯ್ಯ
3 ಶರಧಿ ಪಾಟೀಲ್‌
4 ಅಶ್ವಿನ್‌ ಶರ್ಮಾ
5 ಕಿರಣ್‌ ಪಾಟೀಲ್‌

ಕಂಬದ ರಂಗಯ್ಯ
ಶರಧಿ ಪಾಟೀಲ್
ಕಿರಣ್ ಪಾಟೀಲ್
ಅಶ್ವಿನ್ ಶರ್ಮಾ

ಸೆಮಿ ಫೈನಲ್‌ ಹಂತದಲ್ಲಿ, 12 ಸ್ಪರ್ಧೆಗಳು ಅಂತಿಮವಾಗಿ ಉಳಿದುಕೊಂಡಿದ್ದರಲ್ಲದೆ, ಅಷ್ಟು ಸ್ಪರ್ಧಿಗಳ ನಡುವೆ ಭಾರೀ ಸ್ಪರ್ಧೆಯೇ ಏರ್ಪಟ್ಟಿತ್ತು. ಯಾರಿಗೆ ಯಾರಉ ಕಮ್ಮಿ ಇಲ್ಲ ಎನ್ನುವಂತೆ ಪ್ರತಿಯೊಬ್ಬರು ತಮ್ಮದೇ ಟ್ಯಾಲೆಂಟ್‌ ಮೂಲಕ ತೀರ್ಪುಗಾರರ ಗಮನ ಸೆಳೆದಿದ್ದರು. ವಿಶೇಷವಾಗಿ ನೇಹಾ ಶಾಸ್ತ್ರೀ, ಆಶಾ ಭಟ್‌ , ಪ್ರಿಯಾ ಕೆ.ವಿ , ವಿಶ್ವತಾ ಭಟ್‌ ಸೇರಿದಂತೆ ಮತ್ತಿತರರ ನಡುವೆ ಭಾರೀ ಸ್ಪರ್ಧೆ ಇತ್ತು. ಕೊನೆಗೂ ಅಂತಿಮವಾಗಿಐದು ಸ್ಪರ್ಧೆಗಳುಆಯ್ಕೆಯಾದರು. ಡಿಸೆಂಬರ್‌ ೨೬ಕ್ಕೆ ಗ್ರ್ಯಾಂಡ್‌ ಫಿನಾಲೆ ಫಿಕ್ಸ್‌ ಆಗಿದೆ. ಅಲ್ಲಿ ತೀರ್ಪುಗಾರರ ಗಮನ ಸೆಳೆದು ಅಂತಿಮವಾಗಿ ಯಾರು ಸೀಸನ್‌ 17 ರ ಟ್ರೋಪಿ ಗೆಲ್ಲುತ್ತಾರೆನ್ನುವುದನ್ನು ಕರುನಾಡಿನ ಸಂಗೀತ ಪ್ರಿಯರು ಎದುರು ನೋಡುತ್ತಿದ್ದಾರೆ.

ಸೀಸನ್‌ 17 ಗುಣಮಟ್ಟದ ಸ್ಪರ್ಧಿಗಳ ಜತೆಗೆ ತೀರ್ಪುಗಾರರ ಸ್ಥಾನದಲ್ಲಿದ್ದ ಮಹಾಗುರು ಹಂಸಲೇಖ, ಗಾಯಕರಾದ ವಿಜಯ್‌ ಪ್ರಕಾಶ್‌, ರಾಜೇಶ್‌ ಕೃಷ್ಣನ್‌, ಅರ್ಜುನ್‌ ಜನ್ಯಾ ಕೂಡ ಸರಿಗಮಪ ಸೀಸನ್‌ ೧೭ ಕಳೆ ಗಟ್ಟುವಂತೆ ಮಾಡಿದೆ. ಅದರಲ್ಲೂ ನಾದ ಬ್ರಹ್ಮ ಹಂಸಲೇಖ ಅವರು ಸರಿಗಮಪ ಶೋ ನ ಪ್ರಮುಖ ಆಕರ್ಷಣೆ ಆಗಿದ್ದಾರೆ.

Categories
ಸಿನಿ ಸುದ್ದಿ

ಹುಡುಗಿಯ ಅಪಹರಣದ ಹಿಂದೆ ರೋಚಕತೆ! ಹಾಫ್‌ ಮೊದಲ ಹಂತದ ಚಿತ್ರೀಕರಣ ಪೂರ್ಣ

ಹೊಸ ಕಥಾಹಂದರದ ಮೇಲೆ ಭವ್ಯ ಭರವಸೆ

 

ಕೆಲವು ಸಿನಿಮಾಗಳೇ ಹಾಗೆ. ಒಮ್ಮೆ ಶುರುವಾದರೆ, ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ಚಿತ್ರೀಕರಣಗೊಳ್ಳುತ್ತವೆ. ಆ ಸಾಲಿಗೆ “ಹಾಫ್”‌ ಚಿತ್ರವೂ ಸೇರಿದೆ. ಹೌದು, ಈ ಹಿಂದೆ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಸಿನಿಮಾ ಮೂಲಕ ಸುದ್ದಿಯಾಗಿದ್ದ ನಿರ್ದೇಶಕ ಕಮ್‌ ಹೀರೋ ಲೋಕೇಂದ್ರ ಸೂರ್ಯ ಈಗ “ಹಾಫ್‌” ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ.

ಹೌದು, ಈಗಾಗಲೇ ಅದ್ಧೂರಿ ಫೋಟೋ ಶೂಟ್ ನಂತರ ಶೂಟಿಂಗ್ ನಡೆಸಿದ್ದ “ಹಾಫ್” ತಂಡ, ಈಗ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಈ ಹಂತದ ಚಿತ್ರೀಕರಣದಲ್ಲಿ ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆಯಲ್ಲಿ ಒಂದು ಫೈಟ್ ಕೂಡಾ ಚಿತ್ರೀಕರಣಗೊಂಡಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಹದಿನೈದು ದಿನಗಳ ಚಿತ್ರೀಕರಣದಲ್ಲಿ ಹಲವಾರು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಶೂಟಿಂಗ್‌ ವೇಳೆ ಹೀರೋ ಜೊತೆಗಿದ್ದ ಬೇಗಂ ಎಂಬ ಹುಡುಗಿಯನ್ನು ಅಪಹರಿಸಿದಾಗ, ನಂತರ ನಡೆಯುವ ಚೇಸಿಂಗ್‌ ದೃಶ್ಯವನ್ನು ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರು, ಚಿತ್ರೀಕರಿಸಿದ್ದಾರೆ. ಅಂದಹಾಗೆ, ಈ ದೃಶ್ಯದಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು.


ಆ ಸಾಹಸ ದೃಶ್ಯ ಕುರಿತು ಮಾತನಾಡುವ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು, “ಇದುವರೆಗೆ ಹೊಸಬರ ನೂರಾರು ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದೇನೆ. ಆದರೆ ಲೋಕೇಂದ್ರ ಅವರ ತಂಡವನ್ನು ನೋಡಿದರೆ ನಿಜಕ್ಕೂ ಇವರೆಲ್ಲಾ ಹೊಸಬರಾ ಎನ್ನುವ ಅನುಮಾನ ಮೂಡುತ್ತದೆ. ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವುದು ಕಷ್ಟದ ಕೆಲಸ. ಅನುಭವಿಗಳಿದ್ದರೆ ಮಾತ್ರ ಸರಾಗವಾಗಿ ಮತ್ತು ಅಂದುಕೊಂಡಂತೆ ಶಾಟ್ಸ್ ಕಂಪೋಸ್ ಮಾಡಲು ಸಾಧ್ಯ. ಹೊಸಬರು ಅಂದ ಕೂಡಲೇ ಅವರಿಗೆ ಎಲ್ಲವನ್ನೂ ಹೇಳಿಕೊಟ್ಟು, ಸಮಯ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಲೋಕೇಂದ್ರ ಮತ್ತವರ ತಂಡದ ಕಾರ್ಯ ವೈಖರಿ ಕಂಡು ಇವರೆಲ್ಲ ಹತ್ತಾರು ಸಿನಿಮಾಗಳಲ್ಲಿ ಕೆಲಸ ಮಾಡಿ ಬಂದಿದ್ದಾರೇನೋ ಅನ್ನಿಸಿಬಿಟ್ಟಿತು. ಒಂದು ದಿನಕ್ಕೆ ಐವತ್ತೆರಡು ಓಕೆ ಟೇಕ್‌ ಶೂಟ್ ಮಾಡಿದ್ದೇನೆ. ಹೊಸದಾಗಿ ಚಿತ್ರರಂಗಕ್ಕೆ ಬಂದಿರುವವರಿಂದ ಈ ಮಟ್ಟಿಗಿನ ಕೆಲಸ ತೆಗೆಸಿಕೊಳ್ಳುವುದು ನಿಜಕ್ಕೂ ದಾಖಲೆʼ ಎಂಬುದು ಥ್ರಿಲ್ಲರ್ ಮಂಜು ಮಾತು.


ವರ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ದಾಖಲೆ ನಿರ್ಮಿಸಿರುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಮೂಲಕ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಟನಾಗಿ ನಟಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಕ್ಯಾಮೆರಾ ಹಿಡಿದರೆ, ಯುಡಿವಿ ವೆಂಕಿ ಸಂಕಲನವಿದೆ. ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ, ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಹಾಫ್ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್, ಮೋಹನ್ ನೆನಪಿರಲಿ ಇತರರು ನಟಿಸಿದ್ದಾರೆ. ಕೃಷ್ಣ ಸಹ ನಿರ್ದೇಶನ, ಶ್ರೀವತ್ಸ, ಭರತ್, ಧೃವಿನ್, ಶಂಕರ್, ನವೀನ್ ಚಲ, ಮನೋಜ್ ಆರ್, ಪುನೀತ್ ಎಲ್, ವಿಜಯ್ ಚಂದ್ರ ಸಹಾಯಕ ನಿರ್ದೇಶನವಿದೆ. ಶಿವಕಾಂತ್ ಕಲಾ ನಿರ್ದೇಶನವಿದೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.

error: Content is protected !!