ಐವರಲ್ಲಿ ಟ್ರೋಪಿ ಗೆಲ್ಲುವವರು ಯಾರು ಗೊತ್ತಾ?

ಅಂತಿಮ ಹಂತಕ್ಕೆ ಸರಿಗಮಪ ರಿಯಾಲಿಟಿ ಶೋ ಸೀಸನ್‌ 17

ಫೈನಲ್ ಸ್ಪರ್ಧಿಗಳ ಜತೆಗೆ ನಿರೂಪಕಿ ಅನುಶ್ರೀ

ಜೀ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ” ಸರಿ ಗಮಪ ಸೀಸನ್‌ 17 ” ಕುತೂಹಲಕಾರಿ ಘಟ್ಟಕ್ಕೆ ಕಾಲಿಟ್ಟಿದೆ. ಭಾನುವಾರವಷ್ಟೇ ಸೆಮಿ ಫೈನಲ್‌ ಮುಗಿದಿದ್ದು, ಮುಂದಿನದು ಗ್ರ್ಯಾಂಡ್‌ ಫಿನಾಲೆ. ಅಲ್ಲಿಗೆ ಈಗ ಐದು ಸ್ಪರ್ಧೆಗಳು ಅಂತಿಮವಾಗಿ ಸರಿಗಮಪ ಸೀಸನ್‌ 17 ಕ್ಕೆ ಅಯ್ಕೆ ಆಗಿದ್ದಾರೆ. ನಿರೀಕ್ಷೆಯಂತೆ ಶ್ರೀ ನಿಧಿ ಶಾಸ್ತೀ ನೇರವಾಗಿಯೇ ಗ್ರ್ಯಾಂಡ್‌ ಫಿನಾಲೆಗೆ ಆಯ್ಕೆ ಆಗಿದ್ದರು.

ಶ್ರೀನಿಧಿ ಶಾಸ್ತ್ರಿ

ಇದೀಗ ಸೆಮಿ ಫೈನಲ್‌ ಹಣಾ ಹಣಿಯಲ್ಲಿ ಕಂಬದ ರಂಗಯ್ಯ, ಶರಧಿ ಪಾಟೀಲ್‌, ಅಶ್ವಿನ್‌ ಶರ್ಮಾ ಹಾಗೂ ಕಿರಣ್‌ ಪಾಟೀಲ್‌ ಆಯ್ಕೆಯಾಗುವ ಮೂಲಕ ಕನ್ನಡ ಕಿರುತೆರೆಯ ಬಹು ಜನಪ್ರಿಯ ಶೋ ಸರಿಗಮಪ ಸೀಸನ್‌ 17 ಇನ್ನೊಂದು ಹಂತಕ್ಕೆ ಕಾಲಿಟ್ಟಿದೆ.

ಗ್ರ್ಯಾಂಡ್‌ ಫಿನಾಲೆಗೆ

1 ಶ್ರೀನಿಧಿ ಶಾಸ್ತಿ
2 ಕಂಬದ ರಂಗಯ್ಯ
3 ಶರಧಿ ಪಾಟೀಲ್‌
4 ಅಶ್ವಿನ್‌ ಶರ್ಮಾ
5 ಕಿರಣ್‌ ಪಾಟೀಲ್‌

ಕಂಬದ ರಂಗಯ್ಯ
ಶರಧಿ ಪಾಟೀಲ್
ಕಿರಣ್ ಪಾಟೀಲ್
ಅಶ್ವಿನ್ ಶರ್ಮಾ

ಸೆಮಿ ಫೈನಲ್‌ ಹಂತದಲ್ಲಿ, 12 ಸ್ಪರ್ಧೆಗಳು ಅಂತಿಮವಾಗಿ ಉಳಿದುಕೊಂಡಿದ್ದರಲ್ಲದೆ, ಅಷ್ಟು ಸ್ಪರ್ಧಿಗಳ ನಡುವೆ ಭಾರೀ ಸ್ಪರ್ಧೆಯೇ ಏರ್ಪಟ್ಟಿತ್ತು. ಯಾರಿಗೆ ಯಾರಉ ಕಮ್ಮಿ ಇಲ್ಲ ಎನ್ನುವಂತೆ ಪ್ರತಿಯೊಬ್ಬರು ತಮ್ಮದೇ ಟ್ಯಾಲೆಂಟ್‌ ಮೂಲಕ ತೀರ್ಪುಗಾರರ ಗಮನ ಸೆಳೆದಿದ್ದರು. ವಿಶೇಷವಾಗಿ ನೇಹಾ ಶಾಸ್ತ್ರೀ, ಆಶಾ ಭಟ್‌ , ಪ್ರಿಯಾ ಕೆ.ವಿ , ವಿಶ್ವತಾ ಭಟ್‌ ಸೇರಿದಂತೆ ಮತ್ತಿತರರ ನಡುವೆ ಭಾರೀ ಸ್ಪರ್ಧೆ ಇತ್ತು. ಕೊನೆಗೂ ಅಂತಿಮವಾಗಿಐದು ಸ್ಪರ್ಧೆಗಳುಆಯ್ಕೆಯಾದರು. ಡಿಸೆಂಬರ್‌ ೨೬ಕ್ಕೆ ಗ್ರ್ಯಾಂಡ್‌ ಫಿನಾಲೆ ಫಿಕ್ಸ್‌ ಆಗಿದೆ. ಅಲ್ಲಿ ತೀರ್ಪುಗಾರರ ಗಮನ ಸೆಳೆದು ಅಂತಿಮವಾಗಿ ಯಾರು ಸೀಸನ್‌ 17 ರ ಟ್ರೋಪಿ ಗೆಲ್ಲುತ್ತಾರೆನ್ನುವುದನ್ನು ಕರುನಾಡಿನ ಸಂಗೀತ ಪ್ರಿಯರು ಎದುರು ನೋಡುತ್ತಿದ್ದಾರೆ.

ಸೀಸನ್‌ 17 ಗುಣಮಟ್ಟದ ಸ್ಪರ್ಧಿಗಳ ಜತೆಗೆ ತೀರ್ಪುಗಾರರ ಸ್ಥಾನದಲ್ಲಿದ್ದ ಮಹಾಗುರು ಹಂಸಲೇಖ, ಗಾಯಕರಾದ ವಿಜಯ್‌ ಪ್ರಕಾಶ್‌, ರಾಜೇಶ್‌ ಕೃಷ್ಣನ್‌, ಅರ್ಜುನ್‌ ಜನ್ಯಾ ಕೂಡ ಸರಿಗಮಪ ಸೀಸನ್‌ ೧೭ ಕಳೆ ಗಟ್ಟುವಂತೆ ಮಾಡಿದೆ. ಅದರಲ್ಲೂ ನಾದ ಬ್ರಹ್ಮ ಹಂಸಲೇಖ ಅವರು ಸರಿಗಮಪ ಶೋ ನ ಪ್ರಮುಖ ಆಕರ್ಷಣೆ ಆಗಿದ್ದಾರೆ.

Related Posts

error: Content is protected !!