Categories
ಸಿನಿ ಸುದ್ದಿ

ಇದು ಕನ್ನಡದ ಮಡ್ಡಿ, ಜಗತ್ತಿನಾದ್ಯಂತ ಹೊರಡಲು ರೆಡಿ – ಡಿಸೆಂಬರ್‌ 10 ಕ್ಕೆ ತೆರೆಗೆ ಬರುತ್ತಿದೆ ಹೊಸಬರ ಚಿತ್ರ !

ಡಿಫೆರೆಂಟ್‌ ಟೈಟಲ್‌ ಮೂಲಕವೇ ಸ್ಯಾಂಡಲ್‌ವುಡ್‌ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಬಂದಿದ್ದ ಮಡ್ಡಿ ಹೆಸರಿನ ಚಿತ್ರ ಇದೇ ಡಿಸೆಂಬರ್‌ 10 ಕ್ಕೆ ಗ್ರಾಂಡ್‌ ರಿಲೀಸ್‌ ಆಗುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲೀಷ್ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ. ಇದೊಂದು ಹೊಸಬರ ಚಿತ್ರವಾದರೂ ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಪಳಗಿದ ಅನುಭವಿಗಳೇ ಸೇರಿಕೊಂಡು ನಿರ್ಮಾಣ ಮಾಡಿದ ಅಂತಾರಾಷ್ಟ್ರೀಯ ಗುಣಮಟ್ಟದ ಸಿನಿಮಾ ಇದು. ಹಾಗಂತ ಚಿತ್ರ ತಂಡ ಮಾತು.

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಮಡ್‌ ರೇಸ್‌ ಕುರಿತ ಚಿತ್ರ. ಕಳೆದ ಐದು ವರ್ಷಗಳ ಕಾಲ ಮಡ್ ರೇಸ್​ ಬಗ್ಗೆ ಅಧ್ಯಯನ ನಡೆಸಿ ಈ ಕಥೆ ಸಿದ್ದಪಡಿಸಿದ್ದೇನೆ. ಇದು ಎರಡು ತಂಡಗಳ ನಡುವಿನ ಸ್ಪರ್ಧೆಯ ವಿಶೇಷತೆ ಇರುವ ಚಿತ್ರ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಸಾಹಸದ​ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಕ್ಸ್‌ ಆಗಿವೆ.

  • ನಿರ್ದೇಶ ಕ ಪ್ರಗ್ಬಲ್‌ ದಾಸ್.‌

ಪಿಕೆ7 ಪ್ರೊಡಕ್ಷನ್ಸ್ ಹೌಸ್ ಅಡಿಯಲ್ಲಿ ಪ್ರೇಮ್ ಕೃಷ್ಣ ದಾಸ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದು, ಡಾ. ಪ್ರಗ್ಬಲ್ ದಾಸ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಅವರಿಗಿದು ಮೊದಲ ಹೆಜ್ಜೆ. ಚಿತ್ರದ ಮೊದಲ ಟೀಸರ್ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆ ಆಗಿದ್ದು, ಅಭೂತಪೂರ್ವ ಮೆಚ್ಚುಗೆ ಪಡೆದುಕೊಂಡಿದೆ. ಈಗ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ. ಅದೇ ರೀತಿ ಚಿತ್ರಕ್ಕೆ ಒಟಿಟಿಯಲ್ಲಿ ಬಹು ಬೇಡಿಕೆ ಇದ್ದರೂ, ಚಿತ್ರಮಂದಿರದಲ್ಲಿಯೇ ಸಿನಿಮಾ ರಿಲೀಸ್ ಮಾಡಲು ತಂಡ ನಿರ್ಧರಿಸಿದೆ.

ಒಟ್ಟು 13 ಕ್ಯಾಮರಾಗಳನ್ನು ಈ ಚಿತ್ರದ ಶೂಟಿಂಗ್ ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆಯಂತೆ. ಸ್ಯಾನ್​ ಲೋಕೇಶ್​ ಸಂಕಲನ, ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಹಾಗೂ ಹಾಲಿವುಡ್​ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ ರತೀಶ್ ಅವರ ಛಾಯಾಗ್ರಹಣದ ಕೈ ಚಳಕ ಈ ಚಿತ್ರದಲ್ಲಿದೆ. ನೈಸರ್ಗಿಕ ಅರಣ್ಯ ಪ್ರದೇಶದಲ್ಲಿ ಇಡೀ ಸಿನಿಮಾದ ಶೂಟಿಂಗ್ ಆಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಸಿನಿಮಾ ಮೂಡಿಬಂದಿದ್ದು, ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರೀಶ್ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ತಾರಾಗಣದಲ್ಲಿದ್ದಾರೆ.

ಚಿತ್ರದ ಟೈಟಲೇ ಹೇಳುವ ಹಾಗೆ ಇದು ಮಡ್‌ ರೇಸ್‌ ಕುರಿತ ಕಥಾ ಹಂದರ ಚಿತ್ರ. ಚಿತ್ರದ ನಿರ್ದೇಶಕರು ಕಳೆದ ಐದು ವರ್ಷಗಳ ಕಾಲ ಮಡ್ ರೇಸ್​ ಬಗ್ಗೆ ಅಧ್ಯಯನ ನಡೆಸಿ ಈ ಕಥೆ ಸಿದ್ದಪಡಿಸಿದ್ದಾರಂತೆ. ಹಾಗಾದ್ರೆ ಆ ರೇಸ್‌ ವಿಶೇಷತೆ ಏನು ಅನ್ನೋದು ಚಿತ್ರದ ಒಳಗಿನ ಕಥಾಹಂದರ.ʼ ಇದು ಎರಡು ತಂಡಗಳ ನಡುವಿನ ಸ್ಪರ್ಧೆಯ ವಿಶೇಷತೆ ಇರುವ ಚಿತ್ರ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಸಾಹಸದ​ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಕ್ಸ್‌ ಆಗಿವೆ ಎನ್ನುತ್ತಾರೆ ನಿರ್ದೇಶ ಕ ಪ್ರಗ್ಬಲ್‌ ದಾಸ್.‌ ಚಿತ್ರದ ಮೋಷನ್ ಪೋಸ್ಟರ್ ಅನ್ನು ಈ ಹಿಂದೆ ಕಾಲಿವುಡ್ ನಟ ವಿಜಯ್ ಸೇತುಪತಿ, ಕನ್ನಡದಲ್ಲಿ ಶ್ರೀಮುರಳಿ, ಬಾಲಿವುಡ್ ನಟ ಅರ್ಜುನ್ ಕಪೂರ್ ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಹಲವು ಭಾಷೆಗಳ ಟೀಸರ್​ ಅನ್ನು ಶಿವರಾಜಕುಮಾರ್, ಫಹಾದ್ ಪಾಸಿಲ್, ಉನ್ನಿ ಮುಕುಂದನ್, ಅಪರ್ಣ ಬಾಲಮುರಳಿ ಸೇರಿ ಹಲವು ಸ್ಟಾರ್ ನಟರು ಬಿಡುಗಡೆ ಮಾಡಿದ್ದರು.ಇದೀಗ ಈ ಬಹುನಿರೀಕ್ಷಿತ ಸಿನಿಮಾ ಡಿ.10ಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ.
– ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Categories
ಸಿನಿ ಸುದ್ದಿ

ಕಿರುಚಿತ್ರದಲ್ಲಿ ದಿಯಾ ನಾಯಕಿ, ಸೋಷಲ್ ಮೀಡಿಯಾದಲ್ಲಿ ʼಇಕ್ಷಣ ‘ ಅದ್ದರದ್ದೇ ಸುದ್ದಿ …!

ಕಿರುಚಿತ್ರಗಳಂದ್ರೆ ನೋಡುಗನನ್ನು ಕಡಿಮೆ‌‌ ಸಮಯದಲ್ಲಿ ಹೆಚ್ಚು ಇಂಪ್ರೆಸ್ ಮಾಡೋದು. ಅಥವಾ ನೋಡುಗನ ಮನಸ್ಸಿಗೆ ತಟ್ಟುವುದು. ಅಂತಹ ಕಿರುಚಿತ್ರಗಳ‌ ಪೈಕಿ ಈಗ ಯುಟ್ಯೂಬ್ ನಲ್ಲಿ ಸಖತ್ ಟ್ರೆಂಡಿಂಗ್‌ ನಲ್ಲಿರುವ ಕಿರುಚಿತ್ರದ ಹೆಸರು ‘ಇಕ್ಷಣ’.ಫ್ಲಿಕರಿಂಗ್‌ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರೋ ಈ ಕಿರುಚಿತ್ರವನ್ನು ಇತ್ತೀಚೆಗೆ ನಟ ಗೊಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದರು. ಅದು ಲಾಂಚ್ ಆದ ಕ್ಷಣದಿಂದ ಸೋಷಲ್‌ ಮೀಡಿಯಾದಲ್ಲಿ ವೈರಲ್ ಆಗಿ ಸಖತ್ ಸುದ್ದಿಮಾಡುತ್ತಿದೆ.

ಅದಕ್ಕೆ ಕಾರಣಗಳು ಇವೆ. ಆ ಪೈಕಿ ಮೊದಲ ಕಾರಣ ಇದರ ತಾರಾಗಣ. ಈ ಕಿರುಚಿತ್ರದ ಪ್ರಮುಖ ಆಕರ್ಷಣೆ ದಿಯಾ ಖ್ಯಾತಿಯ ನಟಿ ಖುಷಿ ರವಿ. ಹಾಗೆಯೇ ಹಿರಿಯ ನಟರಾದ ಕೆ.ಎಸ್ ಶ್ರೀಧರ್ ಅಲಿಯಾಸ್ ಸಿದ್ಲಿಂಗು ಶ್ರೀಧರ್.‌ ಹಾಗೆಯೇ ಡಾ. ಸೀತಾ ಕೋಟೆ ನಟಿಸಿದ್ದಾರೆ. ಕಿರುಚಿತ್ರ ಗಳಂದ್ರೆ ಹೊಸಬರು ಇಲ್ಲವೇ ಉದಯೋನ್ಮುಖ ಕಲಾವಿದರೇ ಕಾಣಿಸಿಕೊಳ್ಳುವುದು ಸಹಜವೇ ಎನ್ನುವಂತಾಗಿರುವಾಗ, ಈ ಕಿರುಚಿತ್ರ ಸ್ಟಾರ್ ಕಲಾವಿದರನ್ನೇ ಒಳಗೊಂಡಿದ್ದು ಅದರ ವಿಶೇಷತೆಗಳಲ್ಲೊಂದು. ಹಾಗೆಯೇ ಇಲ್ಲಿರುವ ಕಥೆ. ಅದರ ಎರಡನೇಯ ಕಾರಣ.

ಈ‌ ಕಿರುಚಿತ್ರದಲ್ಲಿ ನಾನು ಅಭಿನಯಿಸಲು ಒಪ್ಪಿಕೊಂಡಿದ್ದಕ್ಕೆ ಎರಡು ಕಾರಣ ಇದ್ದವು. ಮೊದಲು ಅದರ ಕಥೆ.‌ಆದಾದ ನಂತರ ಎರಡನೇ ಕಾರಣ ಅದರ ನಿರ್ಮಾಪಕರು. ಒಂದೊಳ್ಳೆಯ ಕಥೆಯನ್ನು ಒಂದು ಕಮರ್ಷಿಯಲ್ ಸಿನಿಮಾ‌ಮಾದರಿಯಲ್ಲೇ ನಿರ್ಮಾಣ ಮಾಡಬೇಕೆಂದು ಬಯಸಿದ್ಧರು. ಹಾಗಾಗಿ ನಾನು ಇದರಲ್ಲಿ ಖುಷಿಯಿಂದಲೇ ಅಭಿನಯಿಸಿದೆ.
– ಖುಷಿ ರವಿ, ನಟಿ

ಅಪ್ಪ-ಮಗಳ ನಡುವೆ ಸಣ್ಣದೊಂದು‌ ಕಾಫಿ ವಿಷಯದೊಂದಿಗೆ ಶುರುವಾಗುವ ವಾಗ್ವಾದವು, ಸಮಾಜ ನಿರ್ಮಿತ ತಾರತಮ್ಯಗಳ ಕುರಿತ ಗಂಭೀರ ಚರ್ಚಗೆ ಮುನ್ನುಡಿ‌ ಬರೆಯುತ್ತದೆ. ಈ ಕಥೆಯು ಒಂದು ಮನೆಯ ಏಕೈಕ ಪ್ರಾಬಲ್ಯ ಸ್ತಂಭವಾಗಿರುವ ಸಂಪ್ರದಾಯವಾದಿ ತಂದೆ ಮತ್ತು ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಮಗಳು ತನ್ನ ಸ್ಥಾನವನ್ನು ಹುಡುಕಲು ಪ್ರಯತ್ನಿಸುತ್ತಿರುವ ಚರ್ಚೆಯ ಸುತ್ತ ಹೆಣೆಯಲಾಗಿದೆ.

ಗಂಡನಾದವನು ತಾನು ಕೆಲಸ ಮಾಡುವ ವ್ಯಕ್ತಿ ಎನ್ನುವ ಅ‌ಹಂ‌ನಲ್ಲಿ ಯಾಕೆ, ತನ್ನಂತೆಯೇ ಕೆಲಸ ಮಾಡಬೇಕು, ದುಡಿಬೇಕು, ಸಂಪಾದಿಸಬೇಕು, ಆ ಮೂಲಕ ತನ್ನೆಚ್ವೆಗಳನ್ನು ಪೂರೈಸಿಕೊಳ್ಳ ಬೇಕೆಂದು ಕೊಳ್ಳುವ ಹೆಂಡತಿಯನ್ನು ಕೇವಲ ಅಡುಗೆ ಮನೆ ಮಾತ್ರ ಸಿಮೀತ ಗೊಳಿಸುತ್ತಾನೆನ್ನುವ ಚರ್ಚೆಯ ಜತೆಗೆ, ಮದುವೆಯಾಗುವ ಹೆಣ್ಣು ಎಷ್ಟೇ ಓದಿ‌ವಿದ್ಯಾವಂತ ಳಾದರೂ,ತನ್ನ ಗಂಡ ತನಗಿಂತ ಹೆಚ್ವು ದುಡಿಯಬೇಕೆಂದು‌ ಬಯಸುತ್ತಾಳೆಂಬ ಪ್ರಶ್ನೆ ಗಳಿಗೂ ಉತ್ತರವಾಗುತ್ತದೆ. ಒಟ್ಟಾರೆ ಸಮಾಜ ನಿರ್ಮಿತ ಅನೇಕ ನಿಯಮಗಳು ಮತ್ತು ಏಕತಾನತೆಗಳಲ್ಲಿ, ಒಂದನ್ನು ಸೂಕ್ಷ್ಮವಾಗಿ ಚರ್ಚಿಸುವ ಉದ್ದೇಶದೊಂದಿಗೆ ನೋಡುಗನನ್ನು ಚಿಂತನೆಗೆ ಹಚ್ಚುತ್ತದೆ. ಅದೇ ಕಾರಣಕ್ಕೆ ಒಮ್ಮೆ ನೋಡಿದರೂ, ಮತ್ತೆ‌ಮತ್ತೆ‌ನೋಡುವಂತಹ ಕುತೂಹಲ ಮೂಡಿಸುವುದೇ ಇದರ ಪ್ಲಸ್ ಪಾಯಿಂಟ್.

ಕಥೆ‌ ಕೇಳಿದಾಗ ತುಂಬಾನೆ ಖುಷಿ ಯಾಯಿತು. ಅದನ್ನು‌ಒಂದು ಸಿನಿಮಾ‌ ಮಾದರಿಯಲ್ಲೇ ನಿರ್ಮಾಣ ಮಾಡಬೇಕೆಂದು ಹೊರಟಾಗ, ಸ್ಟಾರ್ ಕಲಾವಿದರು, ಅನುಭವಿ‌ತಂತ್ರಜ್ಜರೇ ನಮ್ಮ ಆದ್ಯತೆಯಾಯಿತು. ನಿರ್ಮಾಣದ ವೇಳೆ ಬಜೆಟ್ ಬಗ್ಗೆ ನಾವು ಆಲೋಚನೆ ಮಾಡಿಲ್ಲ, ಬದಲಿಗೆ ಒಂದೊಳ್ಳೆಯ ಕಿರುಚಿತ್ರ ಆಗಬೇಕೆಂದು‌ ಬಯಸಿದ್ದೇವು. ಅದೀಗ ಸಾಧ್ಯವಾಗಿದೆ ಎನ್ನುವ ಖುಷಿ‌ಸಿಕ್ಕಿದೆ.

ಸುಷ್ಮಿತಾ ಸಮೀರ,ನಿರ್ಮಾಪಕರು

ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆ ಈಗ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಈ ಹಿಂದೆ ಕನ್ನಡ ಚಲನಚಿತ್ರಗಳಲ್ಲಿ ಸಂಭಾಷಣೆ ಗಾರರಾಗಿ ಕೆಲಸ ಮಾಡಿದ ಪ್ರಸನ್ನ ವಿ.ಎಂ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಹಾಗೆಯೇಕನ್ನಡದ ಹೆಸರಾಂತ ಛಾಯಾಗ್ರಾಹಕ‌ ʼಟಗರುʼ ಖ್ಯಾತಿಯ ಮಹೇಂದರ್ ಸಿಂಹ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನಕಾರರಾಗಿ ಶ್ರೀಕಾಂತ್, ಸಂಗೀತಕ್ಕಾಗಿ ಜುಬಿನ್ ಪೌಲ್ ಅವರಂತಹ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರಿನ ಜಯಂತಿ ಕಾಫಿ ಈ ಕಿರುಚಿತ್ರಕ್ಕೆ ಪ್ರಾಯೋಜಕತ್ವ ನೀಡಿದೆ. ಸ್ಟಾರ್ ತಾರಾಗಣ, ಅನುಭವಿ ತಂತ್ರಜ್ಜರು, ಒಂದು ಮನಸ್ಸು ತಟ್ಟುವ ಕಥೆಯ ಮೂಲಕ ‘ಇ ಕ್ಷಣ’ ಸಖತ್ ಸುದ್ದಿ ಮಾಡುತ್ತಿರುವುದು ವಿಶೇಷ. ಆಸಕ್ತರು flickering studios youtube ಚಾನೆಲ್‌ ನಲ್ಲಿ ಈ ಕಿರುಚಿತ್ರ ನೋಡಬಹುದು.
– ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Categories
ಸಿನಿ ಸುದ್ದಿ

25 ಕೋಟಿ ರೂ ಕೊಟ್ಟು RRR ಆಡಿಯೋ ಹಕ್ಕು ಖರೀದಿಸಿದವರನ್ನೇ ಸ್ಟೇಜ್ ಮೇಲೆ ಕರಿಲಿಲ್ಲಾ ಅಂದ್ರೆ…… ! ?

ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ಶುಕ್ರವಾರ ಗ್ರಾಂಡ್‌ ಆಗಿ ನಡೆದ ʼಆರ್‌ಆರ್‌ಆರ್‌ʼ ಚಿತ್ರದ ಥೀಮ್‌ ಲಾಂಚ್‌ ಕಾರ್ಯಕ್ರಮ ಎರಡು ಕಾರಣಕ್ಕೆ ಸುದ್ದಿ ಆಗುತ್ತಿದೆ. ಅದರಲ್ಲೂ ಈವೆಂಟ್‌ ಆಯೋಜಿಸಿದ್ದ ಕೆವಿಎನ್‌ ಸಂಸ್ಥೆಯ ಪ್ರೋಗ್ರಾಮ್‌ ಚಾಕೌಟ್‌ ಬಗ್ಗೆಯೇ ಗುಸು ಗುಸು ಶುರುವಾಗಿದೆ. ಕೆವಿಎನ್‌ ಸಂಸ್ಥೆಯ ಮಾಲೀಕರು ಹಾಗೇಕೆ ಮಾಡಿದ್ರು ಅನ್ನೋದು ಈ ಚರ್ಚೆಯ ಸುತ್ತಣ ಪ್ರಧಾನ ವಿಷಯ. ಈವೆಂಟ್‌ನಲ್ಲಿ ಭಾಗವಹಿಸಿದ್ದವರ ಪ್ರಕಾರ ಈಗ ಚರ್ಚೆ ಆಗುತ್ತಿರುವ ವಿಷಯದ ಸುತ್ತ ಎರಡು ಕಾರಣಗಳಿವೆ. ಮೊದಲಿಗೆ ಇದ್ದಿದ್ದು ರಾಜಮೌಳಿ ಅವರು ತಾರಾತುರಿಯಲ್ಲಿ ಮಾತನಾಡಿ ಹೋಗಿದ್ದು. ಇದು ಅಲ್ಲಿದ್ದವರ ಪ್ರಶ್ನೆ ಮಾತ್ರವಲ್ಲ, ಮಾಧ್ಯಮವರಿಗೂ ನಿರಾಸೆ ಮೂಡಿಸಿದ ವಿಷಯವೇ ಹೌದು. ಮತ್ತೊಂದು ವಿಷಯ ಆರ್‌ ಆರ್‌ ಆರ್‌ ಚಿತ್ರದ ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆಯ ಮಾಲೀಕರನ್ನೇ ವೇದಿಕೆಗೆ ಆಹ್ವಾನಿಸದೆ ಇದ್ದಿದ್ದು. ಇದೆಲ್ಲ ಆ ಕ್ಷಣಕ್ಕೆ ಔಚಿತ್ಯವೋ, ಇಲ್ಲವೋ ಅದು ಬೇರೆ ವಿಚಾರ, ಆದರೆ ಒಂದು ಸಿನಿಮಾ ಈವೆಂಟ್‌ ನಲ್ಲಿ ಹೀಗೆಲ್ಲ ಅಗೌರವಗಳಾದರೆ ದುಬಾರಿ ಬೆಲೆ ನೀಡಿ, ಆಡಿಯೋ ಹಕ್ಕು ಖರೀದಿಸಿದವರಿಗೆ ಏನೆಲ್ಲ ಅನಿಸಬಹುದು ಅನ್ನೋದು ಸಹಜವಾದ ಪ್ರಶ್ನೆ.

ನಿಮಗೆಲ್ಲ ಗೊತ್ತಿರುವ ಹಾಗೆ ಭಾರತೀಯ ಚಿತ್ರರಂಗದಲ್ಲಿಯೇ ಭಾರೀ ನಿರೀಕ್ಷೆ ಮೂಡಿಸಿರುವ ʼಆರ್‌ ಆರ್‌ ಆರ್‌ʼ ಚಿತ್ರ ಜನವರಿಗೆ ವಿಶ್ವದಾದ್ಯಂತ ರಿಲೀಸ್‌ ಆಗುತ್ತಿದೆ. ಸದ್ಯಕ್ಕೆ ಅದರ ಪ್ರಮೋಷನ್‌ ಕೆಲಸಗಳಲ್ಲಿಯೇ ಬ್ಯುಸಿ ಆಗಿರುವ ನಿರ್ದೇಶಕ ರಾಜಮೌಳಿ ಬೆಂಗಳೂರಿಗೆ ಬರುತ್ತಿದ್ದಾರೆಂದರೆ ಚಿತ್ರದ ಬಗ್ಗೆ ಸಾಕಷ್ಟು ಮಾತನಾಡುವುದು ಗ್ಯಾರಂಟಿ ಅಂತಲೇ ಶುಕ್ರವಾರ ಒರಾಯನ್‌ ಮಾಲ್‌ ಗೆ ಟವಿ ಮೀಡಿಯಾ ಹಾಗೂ ಆನ್‌ ಮೀಡಿಯಾದ ಕ್ಯಾಮೆರಾಗಳು ಲೆಕ್ಕವಿಲ್ಲದಷ್ಟು ಬಂದಿದ್ದವು. ಅಲ್ಲಿದ್ದು ದೃಶ್ಯ ಸೆರೆ ಹಿಡಿಯುವುದಕ್ಕೆ ಮಾತ್ರವಲ್ಲ, ಲೈವ್‌ ಕೊಡುವುದಕ್ಕೂ ಕ್ಯಾಮೆರಾ ಕಣ್ಣು ರೆಡಿ ಆಗಿದ್ದವು. ಮಾಧ್ಯಮದ ಅದೆಷ್ಟೋ ಜನ ಪತ್ರಕರ್ತರು ರಾಜಮೌಳಿ ಅವರಿಗೆ ಕೇಳುವುದಕ್ಕಾಗಿಯೇ ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡು ಬಂದಿದ್ದರು. ಅವರ ಜೇಬಿನಲ್ಲಿದ್ದ ಪ್ರಶ್ನೆಗಳ ಚೀಟಿಯೂ ಕೂಡ ರಾಜಮೌಳಿ ಅವರ ಆಗಮನಕ್ಕಾಗಿ ಕಾಯುತ್ತಿದ್ದವು. ಆದರೇನು, ಅಲ್ಲಿ ಆಗಿದ್ದೇ ಬೇರೆ.

ನಿರೀಕ್ಷೆಯಂತೆ ರಾಜಮೌಳಿ ಬಂದರು. ಮಧ್ಯಾಹ್ನ ೨ ಗಂಟೆಗೆ ಅಂತ ಕಾರ್ಯಕ್ರಮ ಫಿಕ್ಸ್‌ ಆಗಿದ್ದರೂ, ಅವರು ಬಂದಿದ್ದ ೩ ಗಂಟೆಗೆ. ಸಿನಿಮಾ ಕಾರ್ಯಕ್ರಮ ಅಂದ್ರೆ ಇದೆಲ್ಲ ಮಾಮೂಲು. ಅದರಲ್ಲೂ ರಾಜಮೌಳಿ ಚೆನ್ನೈನಿಂದ ಬರುತ್ತಿದ್ದಾರಂತೆ ಎಂಬುದಾಗಿ ಹೇಳಿದ್ದರಿಂದ ಇನ್ನೊಂದು ತಾಸು ಹೆಚ್ಚೇ ಆಗಿದ್ದರೂ, ಅದೆಲ್ಲ ಅಲ್ಲಿ ನಗಣ್ಯವೇ ಅನ್ನಿ. ಇರಲಿ, ಬಿಡಿ ಅಂತೂ ಬಂದರು. ಅವರೊಂದಿಗೆ ಅವರ ಪತ್ನಿ ರಮಾ ರಾಜಮೌಳಿ , ನಿರ್ಮಾಪಕ ಡಿ.ವಿ.ವಿ.ದಾನಯ್ಯ ಕೂಡ ಹಾಜರಿದ್ದರು. ಇನ್ನು ʼಆರ್‌ ಆರ್‌ ಆರ್‌ʼ ಚಿತ್ರದ ಎಲ್ಲಾ ಭಾಷೆಯ ಆಡಿಯೋ ಹಕ್ಕುಗಳನ್ನು ಖರೀದಿಸಿರುವ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಕೂಡ ಬಂದಿದ್ದರು. ರಾಜಮೌಳಿ ಎಂಟ್ರಿ ಆದಾಗಲೇ ಒಂದು ಶಾಕ್‌ ಕೊಟ್ಟರು. ವೇದಿಕೆಯಲ್ಲಿ ಹಾಕಿದ್ದ ಆಸನಗಳನ್ನು ತೆರವು ಗೊಳಿಸಿದರು. ಅಲ್ಲಿದ್ದವರೆಲ್ಲ ಅಂದುಕೊಂಡಿದ್ದು, ಸ್ಕ್ರೀನ್‌ ಮೇಲೆ ಇನ್ನೇನೋ ಬರುತ್ತೆ ಅಂತ. ಆದರೆ, ರಾಜಮೌಳಿ ಅವರ ಲೆಕ್ಕಚಾರವೇ ಬೇರಿತ್ತು.

ಆಸನ ತೆರೆವುಗೊಳಿಸಿದ ವೇದಿಕೆಯಲ್ಲಿ ಮೊದಲು ಮಾತನಾಡಿದ್ದು ಕೆವಿಎನ್‌ ಸಂಸ್ಥೆಯ ಮಾಲೀಕರಾದ ವೆಂಕಟ್.‌ ಅವರು ʼಆರ್‌ಆರ್‌ಆರ್‌ʼ ಚಿತ್ರವನ್ನು ತಾವು ಕರ್ನಾಟಕದ ಹಕ್ಕು ಖರೀದಿಸಿದ್ದು, ಹಾಗೆಯೇ ಅದನ್ನು ಕನ್ನಡಕ್ಕೆ ಡಬ್‌ ಮಾಡಿ ತರುತ್ತಿರುವ ಬಗ್ಗೆ ಹೇಳಿಕೊಂಡರು. ಅವರ ಮಾತು ಮುಗಿಯುತ್ತಿದ್ದಂತೆಯೇ ರಾಜಮೌಳಿ ಮಾತಿಗೆ ಎಂಟ್ರಿಯಾಗಿಬಿಟ್ಟರು. ಅವರು ಮೊದಲು ಹೇಳಿದ್ದು, ಎರಡು ಕಾರಣಕ್ಕೆ ನನ್ನನ್ನು ಕ್ಷಮಿಸಿ ಅಂದವರೇ, ತಾವೀಗ ಸಿನಿಮಾ ಬಗ್ಗೆ ಹೆಚ್ಚು ಮಾತನಾಡೋದಿಲ್ಲ, ಈಗ ರಿಲೀಸ್‌ ಆಗುತ್ತಿರುವ ಥೀಮ್‌ ಸಾಂಗ್‌ ಜನನಿ ಮಾತನಾಡಬೇಕಿದೆ ಎನ್ನುತ್ತಲೇ ಎರಡೇ ನಿಮಿಷಗಳಲ್ಲಿಯೇ ಮಾತು ಮುಗಿಸಿ ಕುಳಿತವರೇ ಥೀಮ್‌ ಸಾಂಗ್‌ ವಿಡಿಯೋ ಪ್ಲೇ ಮಾಡೋದಿಕ್ಕೆ ಆರ್ಡರ್‌ ಮಾಡಿದರು. ಇನ್ನೇನು ಹಾಡುಮುಗಿದು ಲಹರಿ ಸಂಸ್ಥೆಯ ಮಾಲೀಕರು ಮಾತನಾಡಬಹುದು ಅಂತಲೇ ಎಲ್ಲರು ನಿರೀಕ್ಷಿಸಿದ್ದರು. ಆದರೆ ಅದ್ಯಾವುದಕ್ಕೂ ಅಲ್ಲಿ ಅವಕಾಶವೇ ಸಿಗಲಿಲ್ಲ. ಸಿಗಲಿಲ್ಲ ಎನ್ನುವದಕ್ಕಿಂತ ಕೆವಿಎನ್‌ ಸಂಸ್ಥೆಯವರು ಇದನ್ನು ಗಮನಿಸಲಿಲ್ಲ. ಈವೆಂಟ್‌ ಅನ್ನೋದು ಇದೇ ಮೊದಲಾದರೂ ಕೆವಿಎನ್‌ ಸಂಸ್ಥೆಯವರು ಇದನ್ನು ನಿಭಾಯಿಸಬೇಕಾಗಿದತ್ತಾದರೂ, ಲಹರಿ ಸಂಸ್ಥೆಯ ಮಾಲೀಕರು ಅಲ್ಲಿಯೇ ಇದ್ದರೂ ವೇದಿಕೆಗೆ ಆಹ್ವಾನಿಸದೆ ಒಂದ್ರೀತಿ ಮುಜುಗರಕ್ಕೆ ಒಳಪಡಿಸಿದರು ಎನ್ನುವ ಮಾತು ಈವೆಂಟ್‌ ಅಟೆಂಡ್‌ ಮಾಡಿದವರಿಗೂ ಅನಿಸಿದ್ದು ಹೌದು.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ದೃಶ್ಯ-2 ಟ್ರೇಲರ್‌ಗೆ ಕಿಚ್ಚ ಸುದೀಪ್ ಚಾಲನೆ ; ಡಿಸೆಂಬರ್‌ 10ಕ್ಕೆ ಚಿತ್ರ ಬಿಡುಗಡೆ…

2014 ರಲ್ಲಿ ತೆರೆಕಂಡಿದ್ದ “ದೃಶ್ಯ” ಚಿತ್ರದ ಮುಂದುವರಿದ ಭಾಗ “ದೃಶ್ಯ 2”. ಬರುತ್ತಿರುವುದು ಗೊತ್ತೇ ಇದೆ. ದೃಶ್ಯ2 ಚಿತ್ರ ಡಿಸೆಂಬರ್‌ 10ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ. ಕಿಚ್ಚ ಸುದೀಪ್‌ ಟ್ರೇಲರ್‌ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ…

“ಈ ಸಮಾರಂಭಕ್ಕೆ ಬಂದಿದ್ದು, ನನಗೆ ಖುಷಿಯಾಗಿದೆ. ರವಿ ಅಣ್ಣ ನನ್ನನ್ನು, ನಮ್ಮ ಕುಟುಂಬದವನು ಎಂದದ್ದು ಇನ್ನೂ ಸಂತೋಷ ತಂದಿದೆ. ಈ ಚಿತ್ರ ಮಲೆಯಾಳಂ, ತೆಲುಗು ಭಾಷೆಯಲ್ಲಿ ಬಂದಿದೆ ಅಂದರು. ಆದರೆ ನಾನು‌ ಯಾವ ಭಾಷೆಯಲ್ಲೂ ಈ ಸಿನಿಮಾ ನೋಡಿಲ್ಲ‌. ಹಾಗಾಗಿ ನನಗೆ ಕಥೆ ಗೊತ್ತಿಲ್ಲ. ನನ್ನ ಹೆಂಡತಿ ಮಲೆಯಾಳಿ. ಅವರು ಮಲೆಯಾಳಂ ಚಿತ್ರ ನೋಡುವಾಗ ನನಗೂ ತೋರಿಸುತ್ತಾರೆ. ನಾನು ಸಬ್ ಟೈಟಲ್ ನೋಡುತ್ತಿರುತ್ತೇನೆ. ಒಳ್ಳೆಯ ಕಲಾವಿದರು ಹಾಗೂ ಒಳ್ಳೆಯ ತಂತ್ರಜ್ಞರು ಸೇರಿ ಮಾಡಿದಾಗ ಅದು ಒಳ್ಳೆಯ ಸಿನಿಮಾನೇ ಆಗಿರುತ್ತದೆ. ದೃಶ್ಯ ಚಿತ್ರವನ್ನು ಕನ್ನಡದಲ್ಲೇ ನೋಡಿದ್ದೀನಿ. ಎರಡನೇ ಭಾಗವನ್ನು ಕನ್ನಡದಲ್ಲೇ ನೋಡುತ್ತೇನೆ. ನೀವು ಮೂರನೇ ಭಾಗ ಮಾಡುವುದಿದ್ದರೆ ಮೊದಲು ಕನ್ನಡದಲ್ಲೇ ಮಾಡಿ ಎಂದು ಸುದೀಪ್ ಸಲಹೆ ನೀಡಿದರು.
ದೃಶ್ಯ ಮೊದಲ ಭಾಗದ ಸಿನಿಮಾ ಮಾತುಕತೆ ಆರಂಭವಾಗಿದ್ದು, ನಮ್ಮ ಮಾಣಿಕ್ಯ ಚಿತ್ರದ ಚಿತ್ರೀಕರಣ ಸಮಯದಲ್ಲಿ. ನಾನು ರವಿ ಸರ್ ಗೆ ಒಂದು ಚೆನ್ನಾಗಿರುವ ಮಲೆಯಾಳಂ ಕಥೆ ಬಂದಿದೆ ಕೇಳಿ ಅಂತ ಹೇಳಿದೆ. ಅವರು ಮೊದಲು ಕೇಳಲಿಲ್ಲ. ನಂತರ ಕೆಲವು ದಿನಗಳ ನಂತರ ಕಥೆ ಕೇಳಿದರು. ದೃಶ್ಯ ಆರಂಭವಾಯಿತು ಎಂದು ಸುದೀಪ್ ಆ ದಿನಗಳನ್ನು ನೆನಪಿಸಿಕೊಂಡರು.

“ಸುದೀಪ್ ನನ್ನ ಮಗ. ಆತನನ್ನು ಬರಮಾಡಿಕೊಳ್ಳಲು ನಾನೇ ಮುಖ್ಯದ್ವಾರದ ಬಳಿ ಹೋಗಿದ್ದೆ. ನನ್ನ ಸಮಾರಂಭಕ್ಕೆ ಬರಲು ಸುದೀಪ್ ಗೆ ಕರೆಯಬೇಕೆಂದು ಏನು ಇಲ್ಲ. ಆರ್ಡರ್ ಮಾಡಬಹುದು. ಏಕೆಂದರೆ ಆತ ನನ್ನ ಮಗ. ಸುದೀಪ್ ಸಮಾರಂಭಗಳಿಗೆ ನಾನು ಹಾಗೆ ಹೋಗುತ್ತೇನೆ. ನಮ್ಮಿಬ್ಬರಲ್ಲಿ ಆ ಬಾಂಧವ್ಯವಿದೆ.
ಇನ್ನು ಪಿ.ವಾಸು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ, ಮೊದಲ ಭಾಗದ ತರಹ ನೂರಕ್ಕೆ ನೂರು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕೈಚಳಕ ತುಂಬಾ ಚೆನ್ನಾಗಿದೆ.
ದೃಶ್ಯ ಚಿತ್ರದ ಚಿತ್ರತಂಡ ಬಹುತೇಕ ಈ ಚಿತ್ರದಲ್ಲೂ ಇದೆ. ಹಿರಿಯ ನಟ ಅನಂತನಾಗ್ ದೃಶ್ಯ 2 ನಲ್ಲಿ ಅಭಿನಯಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ತಂದೆ ಸಂಕಷ್ಟದಿಂದ ತನ್ನ ಕುಟುಂಬವನ್ನು ಹೇಗೆ ಪಾರು ಮಾಡುತ್ತಾನೆ ಎಂಬ ವಿಷಯ ಚಿತ್ರದ ಹೈಲೆಟ್ ಅಂದರು ರವಿಚಂದ್ರನ್.‌

ನನಗೆ ಈ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಹಾಗೂ ನಿರ್ದೇಶಕ ಪಿ.ವಾಸು ಅವರಿಗೆ ಧನ್ಯವಾದ. ನಾನು ಮಲೆಯಾಳಂ ನಲ್ಲಿ ಬಹಳ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೀನಿ. ಆದರೆ ನನ್ನ ಒನ್ ಆಫ್ ದಿ ಬೆಸ್ಟ್ ಡೈರೆಕ್ಟರ್ ಪಿ.ವಾಸು ಅವರು. ರವಿಚಂದ್ರ ಸರ್ ಅಂತಹ ಉತ್ತಮ ನಟರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ನಮ್ಮ ಟ್ರೇಲರ್ ಬಿಡುಗಡೆಗೆ ಬಂದಿರುವ ಸುದೀಪ್ ಅವರಿಗೆ ಧನ್ಯವಾದ ಎಂದರು ನಾಯಕಿ ನವ್ಯ ನಾಯರ್.

ದೃಶ್ಯ 2 ಬಿಡುಗಡೆಗೆ ಸಿದ್ದವಾಗಿದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನನಗೆ ಈ ಸಿನಿಮಾದಲ್ಲಿ ಇಷ್ಟವಾಗಿದ್ದು‌, ರವಿಚಂದ್ರ ಹಾಗೂ ನವ್ಯ ನಾಯರ್ ಅವರ ರಿಲೇಶನ್ ಶಿಪ್. ಅವರಿಬ್ಬರ ನೈಜ ಅಭಿನಯ ತುಂಬಾ ಚೆನ್ನಾಗಿದೆ. ಯಾವಾಗಲೂ ಒಬ್ಬ ನಿರ್ದೇಶಕ, ಯಾವ ನಾಯಕನ ಸಿನಿಮಾ‌ ಮಾಡುವನೊ, ಮೊದಲು ಅವನ ಫ್ಯಾನ್ ಆಗಬೇಕು. ಆಗ ಸಿನಿಮಾ ಉತ್ತಮವಾಗಿ ಮೂಡಿಬರುತ್ತದೆ. ರವಿಚಂದ್ರ ಅವರಂತೂ ಕಂಪ್ಲೀಟ್ ಸ್ಟಾರ್ ಎಂದು ಬಣ್ಣಿಸಿದ ನಿರ್ದೇಶಕ ಪಿ.ವಾಸು, ಚಿತ್ರ ಮುಂದಿನ ತಿಂಗಳ ಹತ್ತರಂದು ತೆರೆಗೆ ಬರಲಿದೆ. ನೋಡಿ ಪ್ರೋತ್ಸಾಹಿಸಿ ಎಂದರು.‌

ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಸಂಗೀತದ ಬಗ್ಗೆ, ಪ್ರಮೋದ್ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. E4 entertainment ಲಾಂಛನದಲ್ಲಿ ನಿರ್ಮಾಣವಾಗಿದ್ದು, ನಿರ್ಮಾಪಕರಲೊಬ್ಬರಾದ ಮುಖೇಶ್ ಮೆಹ್ತಾ ಮಾತನಾಡಿ ಕನ್ನಡದಲ್ಲಿ ಇದು ನಮ್ಮ ಎರಡನೇ ಚಿತ್ರ. ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಟ್ರೇಲರ್ ಬಿಡುಗಡೆಗೆ ಬಂದಿರುವ ಸುದೀಪ್ ಅವರಿಗೆ ಧನ್ಯವಾದ ಎಂದರು.

ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ಬಿಡುಗಡೆ ಮಾಡುತ್ತಿರುವ ಜೀ ಸಿನಿಮಾಸ್ ನ ನೀರಜ್ ಸಹ ಕೆಲವು ವಿಷಯಗಳನ್ನು ಹಂಚಿಕೊಂಡರು.

Categories
ಸಿನಿ ಸುದ್ದಿ

RRR ಆತ್ಮ ಪರಿಚಯಿಸಿದ ರಾಜಮೌಳಿ ! ಜಕ್ಕಣ್ಣನ ಕಲ್ಪನೆಯ ‘ಜನನಿ’ಗೆ ಕನ್ನಡಿಗರು ಉಘೇ ಉಘೇ !

ಬಾಹುಬಲಿ ದೃಶ್ಯಕಾವ್ಯದ ಸೃಷ್ಟಿಕರ್ತ.. ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಬೆಂಗಳೂರಿಗೆ ಆಗಮಿಸಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆರ್ ಆರ್ ಆರ್ ಚಿತ್ರದ ಬಹು ಮುಖ್ಯವಾದ ಜನನಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ನಗರದ ಮಾಲ್ ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನನಿ ಹಾಡನ್ನು ಬಿಡುಗಡೆ ಮಾಡಲಾಯಿತು.

ಹಾಡನ್ನು ಬಿಡುಗಡೆ ಮಾಡುವ ಮೊದಲೇ ಜಕ್ಕಣ್ಣಗಾರು, ಕನ್ನಡದಲ್ಲಿಯೇ ಮಾತು ಆರಂಭಿಸಿ, ಎರಡು ವಿಚಾರಗಳಿಗೆ ಕನ್ನಡಿಗರ ಕ್ಷಮೆ ಕೇಳುತ್ತೇನೆ. ನಾನು ಇಲ್ಲಿ ಹಾಡು ಬಿಡುಗಡೆ ಮಾಡಲು ಬಂದಿಲ್ಲ. ಈ ಕಾರ್ಯಕ್ರಮ ಸಿನಿಮಾದ ಪ್ರಚಾರನೂ ಅಲ್ಲ. ಜನನಿ ಹಾಡು ನಮ್ಮ ಆರ್ ಆರ್ ಆರ್ ಸಿನಿಮಾದ ಆತ್ಮ. ಆ ಆತ್ಮದೊಂದಿಗೆ ನಿಮ್ಮನ್ನು ಪರಿಚಯಿಸಲು ಬಂದಿದ್ದೇನೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಕೂಡ ಬರುತ್ತಾರೆ ಎಂದರು.

ಆರ್ ಆರ್ ಆರ್ ಸಿನಿಮಾ ಅನೌನ್ಸ್ ಆದಾಗಿನಿಂದ ನಿರೀಕ್ಷೆಯನ್ನು ದುಪ್ಪಟ್ಟು ಮಾಡುತ್ತಲೇ ಇದೆ. ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶಿಯಾ ಶರಣ್ ಸೇರಿದಂತೆ ದೊಡ್ಡ ತಾರಾಬಳಗ ನಟಿಸಿರುವ ಆರ್ ಆರ್ ಆರ್ ಸಿನಿಮಾದ ಎರಡು ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ದೋಸ್ತಿ ಹಾಗೂ ಹಳ್ಳಿ ನಾಟು ಹಾಡು ಭರ್ಜರಿ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ಜನನಿ ಹಾಡು ಸಿನಿಪ್ರೇಕ್ಷಕಕುಲದ ಮುಂದೆ ಅರ್ಪಿಸಿದ್ದಾರೆ.

ಅದ್ಭುತ ದೃಶ್ಯಕಾವ್ಯದ ಜನನಿ ಹಾಡಿನ ಪ್ರತಿ ಫ್ರೇಮ್ ಅತ್ಯದ್ಭುತವಾಗಿ ಮೂಡಿ ಬಂದಿದೆ. ಸಂಗೀತ ನಿರ್ದೇಶಕ ಎಂ,.ಎಂ.ಕೀರವಾಣಿ ಮ್ಯೂಸಿಕ್ ಗುಂಗು..ಪ್ರತಿ ಪದಗಳು ಅಮೋಘವಾಗಿವೆ. ಕ್ರೋಧ, ಭಯದ ನಡುವೆ ಮನಕಲುವ ದೃಶ್ಯಗಳು ನೋಡುಗರ ಕಣಂಚುಗಳು ಒದ್ದೆ ಮಾಡುತ್ತವೆ.

3 ನಿಮಿಷದ 10 ಸೆಕೆಂಡ್ ನ ಜನನಿ ಹಾಡು ಬೇರೆಯದ್ದೇ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಸೆಂಥಿಲ್ ಕುಮಾರ್ ಪ್ರತಿ ದೃಶ್ಯಗಳನ್ನು ಕ್ಯಾಮೆರಾ ಕಣ್ಣುಗಳಲ್ಲಿ ಅಚ್ಚುಕಟ್ಟಾಗಿ ಸೆರೆ ಹಿಡಿದಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಾಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿರುವ ಜನನಿ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ಜನವರಿ 7ಕ್ಕೆ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರ್ತಿದೆ.

Categories
ಸಿನಿ ಸುದ್ದಿ

ಬಾಹುಬಲಿ‌ ನಿರ್ದೇಶಕನ ರೇಂಜೇ ಬೇರೆ… ಸ್ಪೆಷಲ್ ಪ್ಲೈಟ್ ನಲ್ಲಿಯೇ ಬೆಂಗಳೂರಿಗೆ ಬಂದು ಹೋದರು ರಾಜ‌ಮೌಳಿ !

ಸ್ಟಾರ್ ನಿರ್ದೇಶಕ ಅಂದ್ರೆ ಇದು. ‘ ಬಾಹು ಬಲಿ’ ಖ್ಯಾತಿಯ ರಾಜಮೌಳಿ‌ ಅವರ ರೇಂಜ್ ಹೆಂಗೈತಿ ಅಂತ ಕೇಳಿದ್ರೆ ನೀವು ದಂಗಾಗಿ ಹೋಗ್ತಿರಾ. ಯಾಕಂದ್ರೆ ನಾವೆಲ್ಲ ಸ್ಟಾರ್ ನಟರ ಹೈ ಪೈ ನೋಡಿದವರಷ್ಟೇ. ಬದಲಿಗೆ ಸ್ಟಾರ್ ನಿರ್ದೇಶಕರ ಹೈ ಪೈ ರೇಂಜ್ ನೋಡಿಲ್ಲ. ಅಷ್ಟೇ ಯಾಕೆ, ಕನ್ನಡದಲ್ಲಿ ‌ನೂರಿನ್ನೂರು ಕೋಟಿ ಸಿನಿಮಾ ಮಾಡಿದ ನಿರ್ದೇಶಕರು ಕೂಡ ಯಾರು ಇಲ್ಲ. ಆದರೆ ನಿರ್ದೇಶಕ ರಾಜ ಮೌಳಿ ಹಾಗಲ್ಲ, ಇವತ್ತು ಅವರ ಸಿನಿಮಾಗಳ ಬಡ್ಜೆಟ್ ಏನೇ ಆದ್ರು 200 ಕೋಟಿ ಮೇಲೆಯೇ.

ಸದ್ಯಕ್ಕೆ ಭಾರೀ‌ ನಿರೀಕ್ಷೆಯೊಂದಿಗೆ ಸಖತ್ ಸೌಂಡ್ ಮಾಡುತ್ತಿರುವ ಆರ್ ಆರ್ ಆರ್ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ‌ಬ್ಯುಸಿಯಾಗಿರುವ ರಾಜಮೌಳಿ , ಶುಕ್ರವಾರ ಬೆಂಗಳೂರಿಗೆ ಸ್ಪೆಷಲ್ ವಿಮಾನದಲ್ಲಿ ಬಂದಿದ್ದರು ಅಂದ್ರೆ ಅವರ ರೇಂಜ್ ಏನು ಅಂತ ನೀವೇ ಊಹಿಸಿಕೊಳ್ಳಿ. ನಟರು ಬಿಡಿ, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅಮೀರ್ ಖಾನ್, ರಜನೀಕಾಂತ್, ಮುಮ್ಮುಟ್ಟಿ, ಮೊಹನ್ ಲಾಲ್, ಚಿರಂಜೀವಿ ಕುಟುಂಬವೂ ಸೇರಿದಂತೆ ಅನೇಕರು ತಮಗಿರುವ ಸ್ಟಾರ್ ವಾಲ್ಯೂ ಆಧರಿಸಿ ವಿಶೇಷ ವಿಮಾನಗಳಲ್ಲಿ ಯೇ ಓಡಾಡುವುದೇನು ವಿಶೇಷ ಅಲ್ಲ, ಆದರೆ ಒಬ್ಬ ನಿರ್ದೇಶಕ ನಾಗಿ ರಾಜಮೌಳಿ ಸ್ಪೆಷಲ್ ಪ್ಲೈಟ್ ನಲ್ಲಿ ಓಡಾಡುವ ಮೂಲಕ‌ ನಿರ್ದೇಶಕನ ಹುದ್ದೆಗೂ‌ ಒಂದು ಸ್ಟಾರ್ ವ್ಯಾಲೂ‌‌ ತಂದು ಕೊಟ್ಟಿದ್ದಾರೆಂದರೆ ನಿರ್ದೇಶಕ ರ ಬಳಗ ಹೆಮ್ಮೆ ಪಡಬೇಕು.


ಅಂತಹದೊಂದು ಘಟನೆಗೆ ಶುಕ್ರವಾರ ಬೆಂಗಳೂರಿನಲ್ಲಿ ಜರುಗಿದ ಆರ್ ಆರ್ ಆರ್ ಚಿತ್ರದ ಥೀಮ್ ಸಾಂಗ್ ಲಾಂಚ್ ಕಾರ್ಯಕ್ರಮ ಸಾಕ್ಷಿಯಾಯಿತು.

ಬಾಹುಬಲಿ ಸರಣಿಯ ನಂತರ ರಾಜ ಮೌಳಿ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ ಆರ್ ಅರ್ ಆರ್. ತೆಲುಗು , ಹಿಂದಿ, ಕನ್ನಡ , ತಮಿಳು ಸೇರಿದಂತೆ ಭಾರತದ ಅಷ್ಟು ಭಾಷೆ ಹಾಗೆಯೇ‌ ಜಗತ್ತಿನ ಇತರ ಭಾಷೆಗಳಿಗೂ ಡಬ್ ಆಗಿ ಬರುತ್ತಿದೆ ಈ ಚಿತ್ರ. ಸದ್ಯಕ್ಕೆ‌ ಕನ್ನಡದ‌ ಅದರ ಅವತರಣಿಕೆಯ ಹಕ್ಕುಗಳನ್ನು ಕೆವಿಎನ್ ಸಂಸ್ಥೆ ಪಡೆದುಕೊಂಡಿದೆ.

ಶುಕ್ರವಾರ ಅದೇ ಸಂಸ್ಥೆ ಆರ್ ಆರ್ ಆರ್ ಚಿತ್ರದ ಥೀಮ್ ಸಾಂಗ್ ಜನನಿ ವಿಡಿಯೋ ಸಾಂಗ್ ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ಅಂದು ಚೆನ್ನೈ ನಲ್ಲೂ ಇದೇ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜಮೌಳಿ, ಅಲ್ಲಿಂದ ಪತ್ನಿ ಸಮೇತ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಬೆಂಜ್ ಕಾರಿನಲ್ಲಿ ಒರಾಯನ್ ಮಾಲ್ ಗೆ ಬಂದಿದ್ದರು. ಇದು ಬಾಹುಬಲಿ ಚಿತ್ರದ ನಂತರ ಬದಲಾದ ರಾಜಮೌಳಿ‌ ಅವರ ಕಾಸ್ಟ್ಲಿ ಬದುಕಿನ ಒಂದು ಕಥೆ.

Categories
ಸಿನಿ ಸುದ್ದಿ

ಆರ್ ಆರ್ ಆರ್ ಪ್ರಮೋಷನ್ ಗೆ ಬೆಂಗಳೂರಿಗೆ ಬಂದು ಬಾಹುಬಲಿ ಜಕ್ಕಣ್ಣ ಕೊಟ್ಟಿದ್ದೆಂತಾ ಮಾಂಜ ?

ಬರೀ ತೆಲುಗು ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಆರ್‌ಆರ್‌ಆರ್‌. ರಾಜಮೌಳಿ ನಿರ್ದೇಶನ ಅನ್ನೋದಷ್ಟೇ ಅಲ್ಲ ಜೂನಿಯರ್‌ ಎನ್‌ಟಿಅರ್‌, ರಾಮ್‌ ಚರಣ್‌ ತೇಜ್‌, ಅಜಯ್‌ ದೇವಗನ್‌, ಆಲಿಯಾ ಭಟ್‌, ಶ್ರೇಯಾ ಶರಣ್‌ ಒಳಗೊಂಡಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಅದೇ ಕಾರಣಕ್ಕೆ ಬಾಲಿವುಡ್‌ ಸೇರಿದಂತೆ ಭಾರತೀಯ ಚಿತ್ರರಂಗವೇ ಚಾತಕ ಪಕ್ಷಿಯಂತೆ ಕಾಯುತ್ತಿರುವ ಈ ಚಿತ್ರ ಹೊಸ ವರ್ಷ ಜನವರಿಗೆ ವಿಶ್ವದಾದ್ಯಂತ ತೆರೆ ಬರಲಿದೆ. ಚಿತ್ರ ತಂಡವೇ ಹಾಗಂತ ಅಧಿಕೃತ ಮಾಹಿತಿ ರಿವೀಲ್‌ ಮಾಡಿದೆ.

ಸದ್ಯಕ್ಕೆ ಅದರ ಪ್ರಮೋಷನ್‌ ಚಟುವಟಿಕೆ ಶುರು ಮಾಡಿರುವ ಚಿತ್ರ ತಂಡ ಶುಕ್ರವಾರ ಚಿತ್ರದ ಥೀಮ್‌ ಸಾಂಗ್‌ ಜನನಿ ಹಾಡನ್ನು ರಿಲೀಸ್‌ ಮಾಡಿದೆ. ಸದ್ಯಕ್ಕೆ ಕನ್ನಡದ ವರ್ಷನ್‌ ನಲ್ಲಿ ಲಾಂಚ್‌ ಆಗಿರುವ ಈ ಹಾಡಿನ ಲಿರಿಕಲ್‌ ವಿಡಿಯೋ ನೋಡುಗ ಹಾಗೂ ಕೇಳುವ ಗುಂಡಿಗೆ ಒಂದು ಕ್ಷಣ ಎದೆ ಝೆಲ್‌ ಎನ್ನುವಂತೆ ಮಾಡುವುದು ಗ್ಯಾರಂಟಿ. ಸಾಂಗ್‌ ಲಾಂಚ್‌ ಕಾರ್ಯಕ್ರಮ ಶುಕ್ರವಾರ ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ನಡೆಯಿತು.

ಕೆವಿಎನ್‌ ಪ್ರೊಡಕ್ಷನ್ಸ್‌ ಹೌಸ್‌ ಆಯೋಜಿಸಿದ್ದ ಈವೆಂಟ್‌ ಗೆ ನಿರ್ದೇಶಕ ರಾಜಮೌಳಿ ಬಿಡುವು ಮಾಡಿಕೊಂಡು ದೂರದ ಹೈದ್ರಾಬಾದ್‌ ನಿಂದ ಬಂದಿದ್ದರು. ಬಹು ದಿನಗಳ ನಂತರ ಆಯೋಜಿಸಿದ್ದಲಾಗಿದ್ದ ಮೊದಲ ಕಾರ್ಯಕ್ರಮ ಆಗಿದ್ದರಿಂದ ನಿರ್ದೇಶಕ ರಾಜಮೌಳಿ ಅವರು ಸಾಂಗ್‌ ರಿಲೀಸ್‌ ನೆಪದಲ್ಲಿ ಅನೇಕ ಸಂಗತಿಗಳನ್ನು ಹಂಚಿಕೊಳ್ಳಬಹುದೆನ್ನುವ ನಿರೀಕ್ಷೆ ಮಾಧ್ಯಮದವರಲ್ಲಿತ್ತು. ಅದೇ ಕಾರಣಕ್ಕೆ ಸಾಟ್‌ ಲೈಟ್‌ ವಾಹಿನಿಯವರು, ಯುಟ್ಯೂಬರ್ಸ್‌ ಸೇರಿದಂತೆ ಅಲ್ಲಿಗೆ ಬಂದವರೆಲ್ಲ ತಮ್ಮ ಮೊಬೈಲ್‌ ತೆಗೆದು ಲೈವ್‌ ಮಾಡಲು ಸಿದ್ದರಾಗಿದ್ದರು.

ಆದರೆ ಅವರಿಗೆ ನಿರ್ದೇಶಕ ರಾಜಮೌಳಿ ದೊಡ್ಡ ಶಾಕ್‌ ಕೊಟ್ಟರು. ಇದು ಚಿತ್ರದ ಥೀಮ್‌ ಸಾಂಗ್‌ ಲಾಂಚ್.‌ ಅದೇ ಮಾತನಾಡಬೇಕಿದೆ, ನಾನು ಈಗ ಮಾತನಾಡೋದಿಲ್ಲ. ಮುಂದೆ ಅಂದ್ರೆ ಡಿಸೆಂಬರ್‌ ನಲ್ಲಿ ಬೆಂಗಳೂರಿನಲ್ಲಿ ದೊಡ್ಡ ಈವೆಂಟ್‌ ಮಾಡುವ ಪ್ಲಾನ್‌ ಇದೆ, ಅವತ್ತು ಜೂನಿಯರ್‌ ಎನ್‌ ಟಿಆರ್‌, ರಾಮ್‌ ಚರಣ್‌ ತೇಜ್‌ , ಆಲಿಯಾ ಭಟ್‌, ಶ್ರೇಯಾ ಶರಣ್‌ ಸೇರಿದಂತೆ ಇಡೀ ತಂಡವೇ ಇಲ್ಲಿರಲಿದೆ. ಅವತ್ತು ಮಾಧ್ಯಮದವರು ಕೇಳುವ ಪ್ರತಿ ಪ್ರಶ್ನೆಗೆ ಮುಖಾಮುಖಿಯಾಗಿ ಮಾತನಾಡಲಾಗುವುದು ಅಂದವರೇ ಮೈಕ್‌ ಇಟ್ಟು ಕುಳಿತು ಕೊಂಡರು. ಆನಂತರ ಚಿತ್ರದ ಥೀಮ್‌ ಸಾಂಗ್‌ ಜನನಿ ಲಿರಿಕಲ್‌ ವಿಡಿಯೋ ಪ್ರದರ್ಶಿಸಲಾಯಿತು.

ಅಂದ ಹಾಗೆ, ಬಹು ನಿರೀಕ್ಷಿತ ಆರ್‌ ಆರ್‌ ಆರ್‌ ಚಿತ್ರ ಹೊಸ ವರ್ಷ ಜನವರಿಗೆ ವಿಶ್ವದಾದ್ಯಂತ ಗ್ರಾಂಡ್‌ ರಿಲೀಸ್‌ ಆಗಲಿದೆ. ಇದು ಕನ್ನಡದ್ಲೂ ಡಬ್‌ ಆಗಿ ಬರುತ್ತಿದೆ. ಕರ್ನಾಟಕಕ್ಕೆ ಈ ಚಿತ್ರದ ವಿತರಣೆಯ ಹಕ್ಕನ್ನು ಕೆವಿಎನ್‌ ಸಂಸ್ಥೆ ಪಡೆದಿದೆ. ಸರಿ ಸುಮಾರು ೨೦ ಕೋಟಿ ಗೆ ಈ ಹಕ್ಕು ಪಡೆದುಕೊಂಡಿದೆ ಎನ್ನುತ್ತಿವೆ ಮೂಲಗಳು. ಒಟ್ಟಾರೆ ಆರ್‌ ಆರ್ ಆರ್‌ ಚಿತ್ರ ೩೦೦ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಡಿವಿವಿ ಸಂಸ್ಥೆ ಇದಕ್ಕೆ ಬಂಡವಾಳ ಹಾಕಿದೆ.

Categories
ಸಿನಿ ಸುದ್ದಿ

ಕಣ್ಣಿದ್ದು ಕುರುಡರಾಗಿ ಬದುಕೋರು`ಸಖತ್’ ಸಿನ್ಮಾ ಬಾಲು ಥರ ಬದುಕಿ !

ಚಿತ್ರ ವಿಮರ್ಶೆ: ಸಖತ್


ನಿರ್ದೇಶನ-ಸುನಿ
ನಿರ್ಮಾಣ-ನಿಶಾ ವೆಂಕಟ್ ಕೋಣಂಕಿ
ತಾರಾಗಣ- ಗಣೇಶ್-ಸುರಭಿ-ನಿಶ್ವಿಕಾ ನಾಯ್ಡು-ಮಾಳವಿಕಾ ಅವಿನಾಶ್-ರಂಗಾಯಣ ರಘು-ಸಾಧುಕೋಕಿಲ-ಕುರಿಪ್ರತಾಪ್- ರವಿಶಂಕರ್, ಶೋಭರಾಜ್-ರಘುರಾಮ್- ಧರ್ಮಣ್ಣ-ಗಿರಿ
ಇತರರು

  • ವಿಶಾಲಾಕ್ಷಿ

ಜಗವೇ ಒಂದು ನಾಟಕರಂಗ , ನಾವಿಲ್ಲಿ ಪಾತ್ರಧಾರಿಗಳು ಅಷ್ಟೇ. ಸೂತ್ರಧಾರನ ಅಣತಿಯಂತೆ ಬಣ್ಣ ಬಳಿದುಕೊಳ್ಳದೇ ನಟನೆ ಮಾಡುವವರು ಇದ್ದಾರೆ. ಸಾರಥಿ ಆಜ್ಞೆಯಂತೆ ಬಣ್ಣ ಹಚ್ಚಿಕೊಂಡು ಅಭಿನಯಿಸುವವರು ಇದ್ದಾರೆ. ತರಹೇವಾರಿ ಪಾತ್ರಕ್ಕಾಗಿ ಬಣ್ಣ ಹಚ್ಚಿ ಆಕ್ಟಿಂಗ್ ಮಾಡುವವರನ್ನು ಕಣ್ಮುಂಚಿಕೊಂಡು ನಂಬಬಹುದು. ಆದರೆ ಮುಖವಾಡ ಹಾಕಿಕೊಂಡು ಜಬರ್ದಸ್ತ್ ಪರ್ಫಾಮೆನ್ಸ್ ಕೊಡುವವರನ್ನು ಯಾವುದೇ ಕಾರಣಕ್ಕೂ ನಂಬೋದಕ್ಕೆ ಆಗೋದಿಲ್ಲ. ಅಂದ್ಹಾಗೇ, ಈ ಭೂಮಿ ಮೇಲೆ ದೇವರ ದಯದಿಂದ ಕಣ್ಣನ್ನು ವರವಾಗಿ ಪಡೆದು ಬದುಕುವವರು ಇದ್ದಾರೆ. ದೃಷ್ಟಿ ಕಳೆದುಕೊಂಡು ದೇವರ ಮಕ್ಕಳಾಗಿ ಜೀವಿಸುವವರು ಇದ್ದಾರೆ. ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸಖತ್'ಸಿನಿಮಾ ಗೋಲ್ಡನ್ ಗಣಿಯ ಬಹುನಿರೀಕ್ಷಿತ ‘ಸಖತ್’ ಚಿತ್ರ ಅದ್ದೂರಿಯಾಗಿ ತೆರೆಕಂಡಿದೆ. ಕಣ್ಣಿದ್ದು ಕುರುಡರಾಗಿ ಬದುಕುವವರು `ಸಖತ್’ ಸಿನಿಮಾದ ಬಾಲು ಥರ ಬದುಕಿದರೆ ಚೆಂದ ಎನ್ನುವ ಮೆಸೇಜ್ ಕೂಡ ಸಿಕ್ಕಿದೆ.

ಶುಭಶುಕ್ರವಾರ ರಾಜ್ಯಾದ್ಯಂತ ಮುಂಗಾರುಮಳೆ ಹುಡುಗನ ಬಹುನಿರೀಕ್ಷೆಯ ಸಖತ್' ಸಿನಿಮಾ ತೆರೆಕಂಡಿದೆ. 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗೋಲ್ಡನ್‌ಸ್ಟಾರ್ ಗಣೇಶ್ ಅಭಿನಯದ ‘ಸಖತ್’ ಬಿಡುಗಡೆಯಾಗಿದೆ. ರಿಲೀಸ್ ಆದಂತಹ ಎಲ್ಲಾ ಚಿತ್ರಮಂದಿರಗಳಲ್ಲೂ ‘ಸಖತ್'ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.ಫಸ್ಟ್ ಡೇ ಫಸ್ಟ್ ಶೋ ನೋಡಿ ಥಿಯೇಟರ್‌ನಿಂದ ಹೊರಬಂದ ಚಿತ್ರಪ್ರೇಮಿಗಳು ಮುಗುಳುನಗೆ ಬೀರಿದ್ದಾರೆ.ಎರಡು ವರ್ಷಗಳ ನಂತರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಗೋಲ್ಡನ್‌ಸ್ಟಾರ್ ಗಣೇಶ್ ಸಿನಿಮಾವನ್ನು ಪ್ರೇಕ್ಷಕ ಮಹಾಷಯರು ಅದ್ದೂರಿಯಾಗಿ ವೆಲ್‌ಕಮ್ ಮಾಡಿಕೊಂಡಿದ್ದಾರೆ.ಬಾಸ್ ಈಸ್ ಬ್ಯಾಕ್’ ಎನ್ನುತ್ತಾ ಅವರ ಫ್ಯಾನ್ಸ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಹಾಗಂತ, ಗೋಲ್ಡನ್ ಗಣಿಯ `ಸಖತ್’ ಸಿನಿಮಾ ಸಖತ್ತಾಗಿದೆ ಎಂದು ಒಂದೇ ಸಾಲಿನಲ್ಲಿ ಹೇಳಿ ಮುಗಿಸೋದಕ್ಕೆ ಆಗಲ್ಲ. ಆದರೆ. ಕಾಸು ಕೊಟ್ಟು ಚಿತ್ರಮಂದಿರಕ್ಕೆ ಬಂದಂತಹ ಸಿನಿಮಾ ಪ್ರೇಮಿಗಳಿಗೆ ಮೋಸ ಅಂತೂ ಆಗೋದಿಲ್ಲ.

ಹಾಗಾದ್ರೆ ‘ಸಖತ್'ಸಿನ್ಮಾ ಕಥೆ ಏನು? ಸಖತ್’ ಸಿನ್ಮಾವನ್ನು ಚಿತ್ರಮಂದಿರಕ್ಕೆ ಹೋಗಿ ಯಾಕ್ ನೋಡ್ಬೇಕು? ‘ಸಖತ್'ಸಿನ್ಮಾದ ವಿಶೇಷತೆಗಳೇನು? ಚಿತ್ರದಲ್ಲಿ ಹೊಸದೇನಿದೆ? ಮೆಸೇಜ್ ಏನಿದೆ? ಹೀಗೆ ಒಂದಿಷ್ಟು ಪ್ರಶ್ನೆಗಳು ಅಕೌಂಟ್‌ನಿಂದ 500 ಡ್ರಾ ಮಾಡ್ಕೊಂಡು ಮೂವೀ ನೋಡೋಕೆ ಹೋಗುವಾಗ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳು. ಖಜಾನೆಯಿಂದ ನಾಲ್ಕು ಕಾಸು ಖರ್ಚು ಮಾಡುವಾಗ ಇಂತಹ ಪ್ರಶ್ನೆಗಳು ಬರಬೇಕು ನಿಜ ಆದರೆ ಮನರಂಜನೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಅಲ್ಲವೇ? ಹೀಗಾಗಿ, ಮೈಂಡ್ ಫ್ರೀ ಆಗ್ಬೇಕು, ಕಣ್ಣಿಗೆ ಹೊಸ ಪ್ರಪಂಚ ತೋರಿಸ್ಬೇಕು, ಮನಸ್ಸು ಹಗುರಾಗಬೇಕು, ಹೊಟ್ಟೆ ಹುಣ್ಣಾಗದೇ ಇದ್ದರೂ ಪರವಾಗಿಲ್ಲ ನಕ್ಕು ಬಾಯಿ ನೋವು ಬರಬೇಕು ಎನ್ನುವ ಕಾರಣಕ್ಕಾದರೂ ನೀವು ಗೋಲ್ಡನ್ ಗಣಿ ಹಾಗೂ ಸಿಂಪಲ್ ಸುನಿಯ ಕಾಂಬಿನೇಷನ್‌ನಲ್ಲಿ ಬಂದಿರುವ ಎರಡನೇ ಸಿನಿಮಾ ‘ಸಖತ್’ನ ಥಿಯೇಟರ್‌ಗೆ ಹೋಗಿ ನೋಡ್ಲೆಬೇಕು.

ಸಖತ್'ಚಿತ್ರದಲ್ಲಿ ಗಣೇಶ್ ಅವ್ರದ್ದು ಅಂಧನ ಪಾತ್ರ ಅಂತೇಳಿ ಟೀಸರ್-ಟ್ರೇಲರ್ ಬಿಟ್ರೂ ಕೂಡ,ಸಿನಿಮಾ ಪ್ರೇಕ್ಷಕರಿಗೆ ಗಣಿ ಕಣ್ಣಿದ್ದು ಕುರುಡನಂತೆ ಡವ್ ಮಾಡಿರಬಹುದು ಎನ್ನುವ ಡೌಟ್ ಇತ್ತು.ಆ ಡೌಟ್ ನಿಜ ಕೂಡ.ಆದರೆ,ಸಖತ್’ ಸಿನಿಮಾದ ಬಾಲು ಪಾತ್ರಧಾರಿ ಗಣೇಶ್ ಅವರು ಕುರುಡನಂತೆ ವರ್ತಿಸಲಿಕ್ಕೂ ಒಂದು ಕಾರಣವಿದೆ. ಅದೇನು ಅನ್ನೋದನ್ನು ನೀವು ಥಿಯೇಟರ್‌ಗೆ ಹೋಗಿ ಕುಂತ್ಕೊಂಡು ನಿಮ್ಮ ಕಣ್ಣುಗಳನ್ನು ಅರಳಿಸಿಕೊಂಡೇ ನೋಡ್ಬೇಕು. ಅದರಂತೇ, ಜೂನಿಯರ್ ಬಾಲು ಪಾತ್ರದಲ್ಲಿ ಅಭಿನಯಿಸಿ ಚಿತ್ರಪ್ರೇಮಿಗಳಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಂಡಿರುವ ಗಣಿ ಮಗನನ್ನು ನೀವು ಬಿಗ್‌ಸ್ಕ್ರೀನ್‌ನಲ್ಲೇ ಕಣ್ತುಂಬಿಕೊಳ್ಳಬೇಕು.

ಎಸ್ ಪಿ ಬಾಲು ಆಗ್ಬೇಕು ಎಂಬುದು ಸಖತ್' ಸಿನಿಮಾದ ಬಾಲು ಕನಸು. ಬಾಲ್ಯದಿಂದಲೇ ಇಂತಹದ್ದೊಂದು ಕನಸು ಕಂಡಿದ್ದ ಬಾಲು ನನಗೆ ಕಣ್ಣು ಕಾಣಲ್ಲ ಅಂತ ಸಿಂಪತಿ ಗಿಟ್ಟಿಸಿಕೊಂಡು ‘ಅಂತ್ಯಾಕ್ಷರಿ’ ಸಿಂಗಿಂಗ್ ರಿಯಾಲಿಟಿ ಶೋಗೆ ಎಂಟ್ರಿಕೊಡ್ತಾನೆ. ಅಲ್ಲಿ ಆಂಕರ್ ಮಯೂರಿ (ಸುರಭಿ) ಮೇಲೆ ಬಾಲುಗೆ ಲವ್ವಾಗುತ್ತೆ. ಹೇಗಾದರೂ ಮಾಡಿ ಮಯೂರಿನಾ ಬಲೆಗೆ ಹಾಕಿಕೊಳ್ಳಬೇಕು ಅಂತ ಕುರುಡನಂತೆ ನಟಿಸುತ್ತಾನೆ. ಬಾಲು ಡವ್ ಡ್ರಾಮ ವರ್ಕೌಟ್ ಆಗುತ್ತಾ? ಬಾಲು ಪ್ರೀತಿಯನ್ನ ಮಯೂರಿ ಒಪ್ಪಿಕೊಳ್ತಾಳಾ? ಇವರಿಬ್ಬರ ಮಧ್ಯೆ ಅಂಧೆ (ನಕ್ಷತ್ರ) ನಿಶ್ವಿಕಾ ನಾಯ್ಡು ಎಂಟ್ರಿಯಿಂದ ಕಥೆಗೆ ಯಾವ್ ರೀತಿ ಟ್ವಿಸ್ಟ್ ಸಿಗಲಿದೆ? ಇದೆಲ್ಲದಕ್ಕಿಂತ ಹೆಚ್ಚಾಗಿ ಕಣ್ಣಿದ್ದರೂ ಕೂಡ ಕೆಲವೊಮ್ಮೆ ಕುರುಡನಂತೆ ವರ್ತಿಸೋದ್ರಿಂದ ಏನ್ ಲಾಭ ಇದೆ? ಸೊಸೈಟಿಗೆ ಯಾವ್ ರೀತಿಯ ಕೊಡುಗೆ ಕೊಡಬಹುದು. ಈ ಸೂಕ್ಷ್ಮ ಸಂದೇಶವನ್ನು ಹಾಸ್ಯದ ಜೊತೆಗೆ ನಿರ್ದೇಶಕ ಸಿಂಪಲ್ ಸುನಿ ಕಟ್ಟಿಕೊಟ್ಟಿದ್ದಾರೆ. ಗೋಲ್ಡನ್ ಗಣಿ ಜೀವತುಂಬಿ ಅಭಿನಯಿಸಿದ್ದಾರೆ. ಮಾಳವಿಕಾ ಅವಿನಾಶ್-ರಂಗಾಯಣ ರಘು-ಸಾಧುಕೋಕಿಲ-ಕುರಿಪ್ರತಾಪ್-ಶೋಭರಾಜ್-ರಘುರಾಮ್- ಧರ್ಮಣ್ಣ-ಗಿರಿ ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಚಮಕ್' ಕೊಟ್ಟು ಗೆದ್ದಿದ್ದ ಗಣಿ-ಸುನಿಸಖತ್’ ಸಿನಿಮಾದಲ್ಲಿ ಗಿಮಿಕ್ ಮಾಡಿ ಗೆದ್ದಿದ್ದಾರೆ. ಸಿಂಗಿಂಗ್ ರಿಯಾಲಿಟಿ ಶೋ ಸ್ಪರ್ಧೆ-ಕಾಂಪಿಟೇಷನ್-ಟಿಆರ್‌ಪಿ ಅಂತ ಅಣುಕು ಪ್ರದರ್ಶನ ಮಾಡಿದರಾದರೂ ಕೂಡ ಹಾಸ್ಯಕ್ಕೆ ಒತ್ತು ನೀಡಿ ಪ್ರೇಕ್ಷಕ ಮಹಾಷಯರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ‘ಸಖತ್'ಕಾಮಿಡಿ ಎಂಟರ್‌ಟೈನರ್ ಚಿತ್ರವಾಗಿರೋದ್ರಿಂದ ಕೋರ್ಟ್ ರೂಮ್ ಡ್ರಾಮದ ಕಥೆಗೆ ಸೀರಿಯಸ್ ಟಚ್ ಕೊಟ್ಟಿಲ್ಲ.ಆದರೆ,ಒಂದು ಸೀರಿಯಸ್ ಮ್ಯಾಟರ್‌ನ ತಗೊಂಡು ಸಮಾಜಕ್ಕೆ ಒಂದು ಸಂದೇಶ ಕೊಟ್ಟಿದ್ದಾರೆ.ಕಣ್ಣಿದ್ದು ಕುರುಡರಾಗಿ ಬದುಕೋರುಸಖತ್’ ಸಿನ್ಮಾ ಬಾಲು ಥರ ಬದುಕಿದರೆ ಚೆಂದ ಅನ್ನೋದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಮೊದಲ ಭಾರಿಗೆ ಅಂದನ ಪಾತ್ರ ಮಾಡಿ ಗಣಿ ಸೈ ಎನಿಸಿಕೊಂಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತದ ಪ್ರೀತಿಗೆ ಕಣ್ಣಿಲ್ಲ' ಸಾಂಗು ಎಲ್ಲರ ಮನಸ್ಸಲ್ಲಿ ಉಳಿಯುತ್ತೆ.ಸಂತೋಷ್ ರೈ ಪತಾಜೆ ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತೆ.ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ‘ಸಖತ್’ ಪ್ರೇಕ್ಷಕರಿಗೆ ಫುಲ್‌ಮೀಲ್ಸ್ ಕೊಟ್ಟಿದೆ ಅದು ಮಾತ್ರ ಸತ್ಯ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪ್ರೀತಿ ಸುತ್ತ ಅಮೃತ! ಅಪಾರ್ಟ್ಮೆಂಟ್ಸ್ ಒಳಗೊಂದು ಥ್ರಿಲ್ಲಿಂಗ್ ಸ್ಟೋರಿ!!

ಚಿತ್ರ ವಿಮರ್ಶೆ: ಅಮೃತ ಅಪಾರ್ಟ್ಮೆಂಟ್ಸ್

ನಿರ್ದೇಶನ , ನಿರ್ಮಾಣ: ಗುರುರಾಜ ಕುಲಕರ್ಣಿ
ತಾರಾಗಣ: ತಾರಕ್, ಊರ್ವಶಿ,ಸೀತಾಕೋಟಿ,ಬಾಲಾಜಿ ಮನೋಹರ್,ಮಾನಸ ಜೋಷಿ ಇತರರು.

ವಿಜಯ್ ಭರಮಸಾಗರ

ಅವಳು ಕೊಲ್ಕತ್ತಾ ಹುಡುಗಿ. ಅವನು ಮೈಸೂರು ಹುಡುಗ. ಇಬ್ಬರಲ್ಲೂ ಅಪಾರವಾದ ಆಸೆ-ಆಕಾಂಕ್ಷೆ. ತಮ್ಮ ಕನಸು ನನಸು ಮಾಡಿಕೊಳ್ಳಲು ಹೊರಟ ಮುದ್ದಾದ ಜೋಡಿಗೆ ನೂರಾರು ವಿಘ್ನ! ಆ ಎಲ್ಲಾ ವಿಘ್ನಗಳನ್ನು ದಾಟಿ ಹೊರಬರುತ್ತಾರೋ, ಇಲ್ಲವೋ ಅನ್ನೋದು ಒನ್ ಲೈನ್ ಸ್ಟೋರಿ.

ಮೊದಲೇ ಸ್ಪಷ್ಟಪಡಿಸುತ್ತೇವೆ. ಎಲ್ಲರಂತೆ ನಾವೂ ಚೆಂದದ ಬದುಕು ಕಟ್ಟಿಕೊಳ್ಳಬೇಕೆಂದು ಹಪಹಪಿಸುವ ಯುವ ಮನಸ್ಸುಗಳ ತಲ್ಲಣ, ತಳಮಳ, ಆತಂಕ, ಬದುಕಿನ ಧಾವಂತಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ಗುರುರಾಜ ಕುಲಕರ್ಣಿ ಯಶಸ್ವಿಯಾಗಿದ್ದಾರೆ.

ಇದು ನಿರ್ದೇಶಕರ ಚೊಚ್ಚಲ ಪ್ರಯತ್ನ. ಮೊದಲ ಬಾಲ್ ನಲ್ಲೇ ಸಿಕ್ಸರ್ ಬಾರಿಸಿರುವ ಅವರ ನಿರೂಪಣೆ ಶೈಲಿ ಚೆನ್ನಾಗಿದೆ. ಒಂದು ಕಥೆಯನ್ನು ಹೇಗೆ ಹೇಳಬೇಕು, ಹೇಗೆಲ್ಲಾ ತೋರಿಸಬೇಕು ಎಂಬುದನ್ನು ಅರಿತಿದ್ದಾರೆ. ಹಾಗಾಗಿ ಅಮೃತ ಅಪಾರ್ಟ್ಸ್ಮೆಂಟ್ಸ್ ರುಚಿಸುತ್ತದೆ.

ಸಿನಿಮಾದಲ್ಲಿ ನಿರ್ದೇಶಕರು ಬದುಕಿನ ಏರಿಳಿತಗಳು,
ಭಾವನೆಗಳು ಮತ್ತು ಭಾವನಾತ್ಮಕ ಸಂಬಂಧಗಳು,
ಆಸೆ ಮತ್ತು ದುರಾಸೆ, ಏಳು ಬೀಳು, ನೋವು-ನಲಿವುಗಳನ್ನು ಹೇಳುವ ಮೂಲಕ ‘ಅಮೃತ’ದ ನಿಜ ಚಿತ್ರಣವನ್ನು ಉಣಬಡಿಸಿದ್ದಾರೆ. ಮೊದಲರ್ಧ ಜಾಲಿಯಾಗಿ ಸಾಗುವ ಅಪಾರ್ಟ್ಮೆಂಟ್ಸ್ ಲ್ಲಿ, ದ್ವಿತಿಯಾರ್ಧ ಗಂಭೀರತೆಗೆ ಸಾಕ್ಷಿಯಾಗುತ್ತೆ. ಒಂದು ಸರಳ ಕಥೆಗೆ, ಇನ್ನಷ್ಟು ಬಿಗಿಯಾದ ಚಿತ್ರಕಥೆಯ ಅಗತ್ಯವಿತ್ತು. ಎಲ್ಲೋ ಒಂದು ಕಡೆ, ‘ಅಮೃತ’ದ ಕೆಲ ಅನಗತ್ಯ ದೃಶ್ಯಗಳ ಬಗ್ಗೆ ಮಾತಾಡಬೇಕೆನಿಸುತ್ತಿದ್ದಂತೆ, ಹಾಡುಗಳು ಕಾಣಿಸಿಕೊಂಡು ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ. ಸಿನಿಮಾ ಸಲೀಸಾಗಿ ಸಾಗಲು ಸಂಕಲನದ ಪಾತ್ರವಿಲ್ಲಿ ಪ್ರಮುಖವಾಗಿದೆ.

ಇದು ಕಥೆ

ಸೂಕ್ಷ್ಮ ಸಂವೇದನೆಯ ಅಂಶಗಳ ಜೊತೆ ಸಾಗುವ ಸಿನಿಮಾದಲ್ಲಿ, ಅನೇಕ ಟ್ವಿಸ್ಟ್ ಗಳಿವೆ. ಪ್ರೀತಿಸಿ ಮದುವೆಯಾಗುವ ಜೋಡಿಯೊಂದು, ಕನಸಿನ ಅಮೃತ್ ಅಪಾರ್ಟಮೆಂಟ್ಸ್’ನಲ್ಲಿ ಬದುಕು ರೂಪಿಸಿಕೊಳ್ಳಲು ರೆಡಿಯಾಗುತ್ತಾರೆ. ಪ್ರೀತಿಸಿ ಜೊತೆಯಾದ ಆ ಜೋಡಿ ಮಧ್ಯೆ ಸಣ್ಣದ್ದೊಂದು ಬಿರುಕು ಮೂಡುತ್ತೆ. ಆ ಅಪಾರ್ಟ್ಮೆಂಟ್ ಒಳಗೆ ನೂರೆಂಟು ಕಥೆಗಳು ಬಿಚ್ಚಿಕೊಳ್ಳುತ್ತವೆ. ಆ ಘಟನೆಗಳನ್ನು ಹೇಳುವುದಕ್ಕಿಂತ ನೀವೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಅಮೃತ್ ಅಪಾರ್ಟಮೆಂಟ್ಸ್ ನೋಡುಗರನ್ನು ಹಾಗೊಮ್ಮೆ ಮುದಗೊಳಿಸುತ್ತೆ. ಒಮ್ಮೊಮ್ಮೆ ಗಂಭೀರತೆಗೂ ದೂಡುತ್ತೆ.

ಮುಖ್ಯವಾಗಿ ಈ ಚಿತ್ರದಲ್ಲಿ ಗಮನಿಸಬೇಕಾದ ಅಂಶವೆಂದರೆ, ಬೆಂಗಳೂರೆಂ ಕಾಂಕ್ರೀಟ್ ನಾಡಲ್ಲಿ ಎತ್ತ ನೋಡಿದರತ್ತ ಮುಗಿಲೆತ್ತರಕ್ಕೆ ತಲೆ ಎತ್ತಿ ನಿಂತ ಬೃಹತ್ ಅಪಾರ್ಟಮೆಂಟ್ಸ್ ಗಳು, ಅಲ್ಲೆಲ್ಲೋ ನಮ್ಮದೂ ಒಂದಿರಲಿ ಅಂತ ಸೂರು ಕಾಣಬೇಕು ಅನ್ನೋ ಮನಸ್ಸುಗಳು, ಅತಿಯಾದ ಆಸೆ, ಆಕಾಂಕ್ಷೆ, ಇವುಗಳ ಜೊತೆ ನೂರಾರು ಸವಾಲುಗಳು, ಅದಕ್ಕೆೆ ಎದುರಾಗುವ ಸವಾಲುಗಳು, ಆಸೆಗಾಗಿಯೇ ಮೌಲ್ಯ ಕಳೆದುಕೊಳ್ಳುವ ಸಂಬಂಧಗಳು ನಾಟುತ್ತವೆ. ಒಟ್ಟಾರೆ ವಸ್ತುಸ್ಥಿತಿಯನ್ನು ಅಚ್ಚುಕಟ್ಟಾಗಿ ಹೇಳು ಪ್ರಯತ್ನ ಇಲ್ಲಾಗಿದೆ.

ನಗರವಾಸಿಗಳ ಒತ್ತಡ, ಅವರೊಳಗಿರುವ ನೋವು, ತಲ್ಲಣಗಳನ್ನು ನಿರ್ದೇಶಕರು ತೋರಿಸುವ ಮೂಲಕ ಈಗಿನ ವಾಸ್ತವ ಚಿತ್ರಣ ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಇನ್ನೂ ಒಂದು ಪ್ರಮುಖ ಅಂಶವಿದೆ. ನಿರ್ದೇಶಕರು, ನವಿರಾದ ಪ್ರೀತಿಯ ಹೂರಣದ ಜೊತೆ, ಭಾವುಕ ಅಂಶಗಳನ್ನಿಟ್ಟಿದ್ದಾರೆ. ಅಲ್ಲೊಂದು ಕ್ರೈಮ್ ಮತ್ತು ಥ್ರಿಲ್ ಎನಿಸೋ ಘಟನೆಗಳನ್ನೂ ಇಟ್ಟಿದ್ದಾರೆ. ಈ ಬಗ್ಗೆ ನೋಡುವ ಕುತೂಹಲವಿದ್ದರೆ, ಬಿಡುವು ಮಾಡಿಕೊಂಡು ಸಿನಿಮಾ ನೋಡಿ.

ಇನ್ನು ತೆರೆ ಮೇಲೆ ರಾರಾಜಿಸಿರುವ ತಾರಕ್ ಅಭಿನಯದಲ್ಲಿ ಹಿಂದೆ ಉಳಿದಿಲ್ಲ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಊರ್ವಶಿ ನಿರ್ದೇಶಕರು ಹೇಳಿದ್ದನ್ನು ಚಾಚು ತಪ್ಪದೆ ಮಾಡಿದ್ದಾರೆ. ಬಾಲಾಜಿ ಮನೋರ್ರ್, ಮಾನಸಿ ಜೋಷಿ, ಸಂಪತ್ ಕುಮಾರ, ಮಹಂತೇಶ್, ಸೀತಾಕೋಟಿ ಇತರರು ಗಮನಸೆಳೆಯುತ್ತಾರೆ.
ಎಸ್.ಡಿ.ಅರವಿಂದ ಅವರ ಸಂಗೀತ ಕಥೆಗೆ ಪೂರಕ.
‘ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಹಾಡು ಗುನುಗುವಂತಿದೆ. ಅಜಿತ್ ಆರ್ಯನ್ ಕ್ಯಾಮರಾ ಕೈಚಳಕ ಸಿನಿಮಾ ಅಂದವನ್ನು ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಈತ ಪೈಸಾ ವಸೂಲ್ ಗೋವಿಂದ…!

ಚಿತ್ರ ವಿಮರ್ಶೆ- ಗೋವಿಂದ ಗೋವಿಂದ
ನಿರ್ದೇಶಕ – ತಿಲಕ್
ತಾರಾಗಣ – ಸುಮನ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್, ಕವಿತಾ ಗೌಡ,ಮಜಾ‌ಟಾಕೀಶ್ ಪವನ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್
ಇತರರು

  • ದೇಶಾದ್ರಿ ಹೊಸ್ಮನೆ

ಸಿನಿಮಾ ನಿರ್ದೇಶಕನಾಗಲೇಬೇಕೆಂದು ಹೊರಟ ಕನಸು ಕಂಗಳ ಹುಡುಗ, ತಾಯಿಯಲ್ಲದೆ ತನ್ನನ್ನೇ ಅವಲಂಭಿಸಿರುವ ಮಗಳು ತನ್ನಿ ಚ್ಚೆಯಂತೆಯೇ ಇರಬೇಕೆಂದು‌ ಬಯಸುವ ಅಪ್ಪ, ಭರತ ನಾಟ್ಯ ದ ಮೇಲೆ ಬೆಟ್ಟದಷ್ಟು ಕನಸು‌ ಕಟ್ಟಿಕೊಂಡ ನಾಯಕಿ, ಆಕೆಯ‌ ಕನಸುಗಳ ಸಾಕಾರಕ್ಕೆ ನೆರವಾಗಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಮೂವರು ಗೆಳೆಯರು ಅವರ ಜತೆಗೆ ಮೂಡನಂಬಿಕೆಯ‌ ಮೇಲೆ ನಾಯಕಿಯನ್ನೇ ಕಿಡ್ನಾಪ್ ಮಾಡುವ ಕಿರಾತಕರ ಸುತ್ತಣದ ಸಂಕಟ, ಸಾಹಸ, ದುಸ್ಸಾಹದ ಸಮಿಶ್ರಣಗಳ ಹೂರಣದೊಂದಿಗೆ ನೋಡುಗರನ್ನು ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ತಕ್ಕಮಟ್ಟಿಗೆ ರಂಜಿಸಬಹುದಾದ ಸಿನಿಮಾ ಗೋವಿಂದ ಗೋವಿಂದ.

ನವ ಪ್ರತಿಭೆ ತಿಲಕ್ ನಿರ್ದೇಶನದ ಈ ಸಿನಿಮಾವು ಕಾಮಿಡಿ, ಥ್ರಿಲ್ಲರ್, ಎಮೋಷನಲ್ ಜಾನರ್ ಗೆ ಸೇರಿದ್ದು‌. ಇಷ್ಟಾಗಿಯೂ ಚಿತ್ರ ರಸಿಕರು ಬಯಸುವ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡ ಒಂದು ಸಿದ್ದ ಸೂತ್ರದ ಸಿನಿಮಾವೂ ಹೌದು. ಸಿನಿಮಾ ನಿರ್ದೇಶಕನಾಗಬೇಕೆಂದು ಹೊರಟ ಒಬ್ಬ ಯುವಕನ ಕಲ್ಪನೆಯೊಳಗೆ ಇನ್ನೊಂದು ಕಥೆಯನ್ನು ಪ್ರೇಕ್ಷಕರ ಮುಂದೆ ತಂದಿಡುವ ನಿರ್ದೇಶಕರು ಅಲ್ಲಿ ನ ಕಥೆ ಹಲವು ಕುತೂಹಲದ ಉಪ ಕಥೆಗಳನ್ನು ಬಿಡಿ ಬಿಡಿಯಾಗಿ ಬಿಚ್ಚಿಡುವ ಮೂಲಕ ಪ್ರೇಕ್ಷಕರ ನ್ನು ಕುರ್ಚಿಯ ತುದಿ ಮೇಲೆ ಕೂರಿಸುವ ಪ್ರಯತ್ನ ಮಾಡಿದ್ದೇ ಇಲ್ಲಿ ಜಾಣತನ ಅಂತಲೇ ಹೇಳಬಹುದು. ಅದರಾಚೆ ಹೊಸತನವಿಲ್ಲದ, ಒಂದು ಸಿದ್ದ ಸೂತ್ರದ ಸರಳ ಕಥೆ ಎನ್ನುವುದಷ್ಟೇ ಇದರ ವೀಕ್ನೇಸ್.

ಮೊದ ಮೊದಲು ಕಾಮಿಡಿ ಈ ಸಿನಿಮಾದ ಪ್ರಧಾನ ಅಂಶದಂತೆ ಕಂಡರೂ, ನೋಡುಗನ ಮನಸ್ಸಿಗೆ ತಟ್ಟುವಂತಹ ಎಮೋಷನಲ್ ಎಳೆಗಳ ಮೂಲಕ ಗಾಢವಾಗಿ ತಟ್ಟುತ್ತದೆ. ಆರಂಭದ ಅರ್ಧ ಗಂಟೆ ಸಿನಿಮಾ ಮನಸು ಚಂಚಲಗೊಳ್ಳುವಂತೆ ಮಾಡಿದರು, ಕಥೆ ವಿಜಯಪುರದಿಂದ ಬೆಂಗಳೂರು ಕಡೆ ಮುಖ‌ ಮಾಡುವ ಮೂಲಕ ರೋಚಕತೆ ಹುಟ್ಟಿಸುತ್ತದೆ. ಒಂದು ರಿಮೇಕ್ ಸಿನಿಮಾದ ಬಗ್ಗೆ ಪ್ರೇಕ್ಷಕನಲ್ಲಿ ಹುಟ್ಟುವ ಕಲ್ಪನೆಯೇ ಬೇರೆ. ಮೂಲ‌ ಸಿನಿಮಾಕ್ಕಿಂತ ಅದು ಇನ್ನಷ್ಟು ವಿಶೇಷ ಎನಿಸಿದಾಗಲೇ ಪ್ರೇಕ್ಷಕನಿಗೂ ಇಷ್ಟ. ಹಾಗಿಲ್ಲದೆ ಅದು ಯಥಾವತ್ತಾಗಿ ಕಾಣಿಸಿಕೊಂಡರೆ, ಪ್ರೇಕ್ಷಕ ಯಾಕೆ ದುಡ್ಡು ಕೊಟ್ಟು ಆ ಸಿನಿಮಾ ನೋಡ್ಬೇಕು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತೆ. ಗೋವಿಂದ ಗೋವಿಂದ ಕೂಡ ಒಂದು ರಿಮೇಕ್ ಸಿನಿಮಾ ಅಂದು ಕೊಂಡವರು ಕೂಡ ಒಂದ್ಸಲ ಈ ಸಿನಿಮಾ ನೋಡಿದರೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಆ ಮಟ್ಟಿಗೆ ಇದೊಂದು ಪೈಸಾ ವಸೂಲ್ ಸಿನಿಮಾ.

ಸುಮಂತ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್, ಕವಿತಾ ಗೌಡ, ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ಕೆ.ಮಂಜು, ಕಡ್ಡಿಪುಡಿ ಚಂದ್ರು ಸೇರಿದಂತೆ ದೊಡ್ಡ ತಾರಗಣವೇ ಈ ತೆರೆ ಮೇಲಿದೆ. ಹಾಗಂತ ಯಾವ ಪಾತ್ರವೂ ಅಷ್ಟಕಷ್ಟೆ ಎಂದೇನು ಜರಿಯುವಂತಿಲ್ಲ. ಅಷ್ಟು ಪಾತ್ರಗಳಿಗೂ ಅದರದ್ದೇ ಮಹತ್ವ ಸಿಕ್ಕಿದೆ. ಇದಕ್ಕೆ ಪ್ಲಸ್ ಆಗಿದ್ದು ಕಥೆ ನಿರೂಪಣೆ. ಒಂದು ಮರ, ಅದಕ್ಕೆ ಹಲವು ರೆಂಬೆ ಕೊಂಬೆ ‌ಎನ್ನುವಂತೆ, ಇಲ್ಲಿ ಒಂದು ಕಥೆ, ಅದರೊಳಗೊಂದು ಉಪಕಥೆ, ಆ ಉಪಕಥೆಗೆ ಇನ್ನಷ್ಟು ಕಿರು ಕಥೆಗಳ ರೆಂಬೆ ಕೊಂಬೆಗಳಿದ್ದರೂ, ಕ್ಲೈಮ್ಯಾಕ್ಸ್ ನಲ್ಲಿ ಅವೆಲ್ಲವೂ ಒಂದು ಕೋನದಲ್ಲಿ ಬಂದು ಸೇರುವ ರೀತಿಯೇ ವಿಶೇಷ.

ತೆರೆ ಮೇಲೆ ಇದುವರೆಗೂ ಲವರ್ ಬಾಯ್ ಆಗಿ, ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ‌ಯುವನಟ ಸುಮನ್ ಶೈಲೆಂದ್ರ ಇದೇ ಮೊದಲು ಒಂದು ಕಾಮಿಡಿ ಹೀರೋ ಆಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲ, ಕಾಲೇಜು ವಿದ್ಯಾರ್ಥಿ ಯಾಗಿ ಪ್ರೇಕ್ಷಕರನ್ನು ರಂಜಿಸುವುದು ಕೂಡ ವಿಶೇಷ. ಅವರಿಗೆ ಇಲ್ಲಿ ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರ್ ಸಖತ್ ಸಾಥ್ ನೀಡಿದ್ದಾರೆ. ಅವರಿಬ್ಬರ ಉತ್ತರ ಕರ್ನಾಟಕದ ಜವಾರಿ ಭಾಷೆಯ ಕಾಮಿಡಿ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಖ್ಯಾತಿಯ ಚಿನ್ನು ಅಲಿಯಾಸ್ ಕವಿತಾ ಗೌಡ ಇಲ್ಲಿ ಸಿನಿಮಾ ಒಳಗೆಯೇ ಬರುವ ಸಿನಿಮಾ ಕಥೆಯ ನಾಯಕಿ. ಸಿಕ್ಕ ಅವಕಾಶವನ್ನು ಸಮರ್ಥ ವಾಗಿ ಯೇ ಬಳಸಿಕೊಂಡಿ, ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಹಾಗೆ ನೋಡಿದರೆ ಸಿನಿಮಾ ಮುಖ್ಯ ಆಕರ್ಷಣೆ ನಟಿ‌ ಭಾವನಾ ಮನೆನ್ ಹಾಗೂ ಯುವ ನಟ ರೂಪೇಶ್ ಶೆಟ್ಟಿ. ಯಾಕಂದ್ರೆ ಕಥೆ ರಿವೀಲ್ ಆಗೋದೆ ಇವರಿಬ್ಬರ ಮುಖಾ ಮುಖಿಯೊಂದಿಗೆ.‌ ಮೇಕಿಂಗ್ ಅಂತ ಬಂದಾಗ ಕಥೆಯ ಅಗತ್ಯತೆಯನ್ನು ಪ್ರಾಮಾಣಿಕವಾಗಿ ಪೂರೈಸಿದ್ದಾರೆ ನಿರ್ಮಾಪಕರು. ಅದು ಅವರ ಅನುಭವದ ಜಾಣತನ. ಹಾಗೆಯೇ ಛಾಯಾಗ್ರಹಣ, ಸಂಗೀತ ಸೇರಿದಂತೆ ಸಿನಿಮಾ ಉಳಿದ ಕೆಲಸಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಮನರಂಜನೆ ನಗಬೇಕು, ಒಂದಷ್ಟು ಹಗುರಾಗಬೇಕು ಅಂತೆಲ್ಲ ಬಯಸುವರಿಗೆ ಇದು ಹೇಳಿ‌ಮಾಡಿಸಿದ ಸಿನಿಮಾ‌ .

error: Content is protected !!