ಕಿರುಚಿತ್ರದಲ್ಲಿ ದಿಯಾ ನಾಯಕಿ, ಸೋಷಲ್ ಮೀಡಿಯಾದಲ್ಲಿ ʼಇಕ್ಷಣ ‘ ಅದ್ದರದ್ದೇ ಸುದ್ದಿ …!

ಕಿರುಚಿತ್ರಗಳಂದ್ರೆ ನೋಡುಗನನ್ನು ಕಡಿಮೆ‌‌ ಸಮಯದಲ್ಲಿ ಹೆಚ್ಚು ಇಂಪ್ರೆಸ್ ಮಾಡೋದು. ಅಥವಾ ನೋಡುಗನ ಮನಸ್ಸಿಗೆ ತಟ್ಟುವುದು. ಅಂತಹ ಕಿರುಚಿತ್ರಗಳ‌ ಪೈಕಿ ಈಗ ಯುಟ್ಯೂಬ್ ನಲ್ಲಿ ಸಖತ್ ಟ್ರೆಂಡಿಂಗ್‌ ನಲ್ಲಿರುವ ಕಿರುಚಿತ್ರದ ಹೆಸರು ‘ಇಕ್ಷಣ’.ಫ್ಲಿಕರಿಂಗ್‌ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರೋ ಈ ಕಿರುಚಿತ್ರವನ್ನು ಇತ್ತೀಚೆಗೆ ನಟ ಗೊಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದರು. ಅದು ಲಾಂಚ್ ಆದ ಕ್ಷಣದಿಂದ ಸೋಷಲ್‌ ಮೀಡಿಯಾದಲ್ಲಿ ವೈರಲ್ ಆಗಿ ಸಖತ್ ಸುದ್ದಿಮಾಡುತ್ತಿದೆ.

ಅದಕ್ಕೆ ಕಾರಣಗಳು ಇವೆ. ಆ ಪೈಕಿ ಮೊದಲ ಕಾರಣ ಇದರ ತಾರಾಗಣ. ಈ ಕಿರುಚಿತ್ರದ ಪ್ರಮುಖ ಆಕರ್ಷಣೆ ದಿಯಾ ಖ್ಯಾತಿಯ ನಟಿ ಖುಷಿ ರವಿ. ಹಾಗೆಯೇ ಹಿರಿಯ ನಟರಾದ ಕೆ.ಎಸ್ ಶ್ರೀಧರ್ ಅಲಿಯಾಸ್ ಸಿದ್ಲಿಂಗು ಶ್ರೀಧರ್.‌ ಹಾಗೆಯೇ ಡಾ. ಸೀತಾ ಕೋಟೆ ನಟಿಸಿದ್ದಾರೆ. ಕಿರುಚಿತ್ರ ಗಳಂದ್ರೆ ಹೊಸಬರು ಇಲ್ಲವೇ ಉದಯೋನ್ಮುಖ ಕಲಾವಿದರೇ ಕಾಣಿಸಿಕೊಳ್ಳುವುದು ಸಹಜವೇ ಎನ್ನುವಂತಾಗಿರುವಾಗ, ಈ ಕಿರುಚಿತ್ರ ಸ್ಟಾರ್ ಕಲಾವಿದರನ್ನೇ ಒಳಗೊಂಡಿದ್ದು ಅದರ ವಿಶೇಷತೆಗಳಲ್ಲೊಂದು. ಹಾಗೆಯೇ ಇಲ್ಲಿರುವ ಕಥೆ. ಅದರ ಎರಡನೇಯ ಕಾರಣ.

ಈ‌ ಕಿರುಚಿತ್ರದಲ್ಲಿ ನಾನು ಅಭಿನಯಿಸಲು ಒಪ್ಪಿಕೊಂಡಿದ್ದಕ್ಕೆ ಎರಡು ಕಾರಣ ಇದ್ದವು. ಮೊದಲು ಅದರ ಕಥೆ.‌ಆದಾದ ನಂತರ ಎರಡನೇ ಕಾರಣ ಅದರ ನಿರ್ಮಾಪಕರು. ಒಂದೊಳ್ಳೆಯ ಕಥೆಯನ್ನು ಒಂದು ಕಮರ್ಷಿಯಲ್ ಸಿನಿಮಾ‌ಮಾದರಿಯಲ್ಲೇ ನಿರ್ಮಾಣ ಮಾಡಬೇಕೆಂದು ಬಯಸಿದ್ಧರು. ಹಾಗಾಗಿ ನಾನು ಇದರಲ್ಲಿ ಖುಷಿಯಿಂದಲೇ ಅಭಿನಯಿಸಿದೆ.
– ಖುಷಿ ರವಿ, ನಟಿ

ಅಪ್ಪ-ಮಗಳ ನಡುವೆ ಸಣ್ಣದೊಂದು‌ ಕಾಫಿ ವಿಷಯದೊಂದಿಗೆ ಶುರುವಾಗುವ ವಾಗ್ವಾದವು, ಸಮಾಜ ನಿರ್ಮಿತ ತಾರತಮ್ಯಗಳ ಕುರಿತ ಗಂಭೀರ ಚರ್ಚಗೆ ಮುನ್ನುಡಿ‌ ಬರೆಯುತ್ತದೆ. ಈ ಕಥೆಯು ಒಂದು ಮನೆಯ ಏಕೈಕ ಪ್ರಾಬಲ್ಯ ಸ್ತಂಭವಾಗಿರುವ ಸಂಪ್ರದಾಯವಾದಿ ತಂದೆ ಮತ್ತು ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಮಗಳು ತನ್ನ ಸ್ಥಾನವನ್ನು ಹುಡುಕಲು ಪ್ರಯತ್ನಿಸುತ್ತಿರುವ ಚರ್ಚೆಯ ಸುತ್ತ ಹೆಣೆಯಲಾಗಿದೆ.

ಗಂಡನಾದವನು ತಾನು ಕೆಲಸ ಮಾಡುವ ವ್ಯಕ್ತಿ ಎನ್ನುವ ಅ‌ಹಂ‌ನಲ್ಲಿ ಯಾಕೆ, ತನ್ನಂತೆಯೇ ಕೆಲಸ ಮಾಡಬೇಕು, ದುಡಿಬೇಕು, ಸಂಪಾದಿಸಬೇಕು, ಆ ಮೂಲಕ ತನ್ನೆಚ್ವೆಗಳನ್ನು ಪೂರೈಸಿಕೊಳ್ಳ ಬೇಕೆಂದು ಕೊಳ್ಳುವ ಹೆಂಡತಿಯನ್ನು ಕೇವಲ ಅಡುಗೆ ಮನೆ ಮಾತ್ರ ಸಿಮೀತ ಗೊಳಿಸುತ್ತಾನೆನ್ನುವ ಚರ್ಚೆಯ ಜತೆಗೆ, ಮದುವೆಯಾಗುವ ಹೆಣ್ಣು ಎಷ್ಟೇ ಓದಿ‌ವಿದ್ಯಾವಂತ ಳಾದರೂ,ತನ್ನ ಗಂಡ ತನಗಿಂತ ಹೆಚ್ವು ದುಡಿಯಬೇಕೆಂದು‌ ಬಯಸುತ್ತಾಳೆಂಬ ಪ್ರಶ್ನೆ ಗಳಿಗೂ ಉತ್ತರವಾಗುತ್ತದೆ. ಒಟ್ಟಾರೆ ಸಮಾಜ ನಿರ್ಮಿತ ಅನೇಕ ನಿಯಮಗಳು ಮತ್ತು ಏಕತಾನತೆಗಳಲ್ಲಿ, ಒಂದನ್ನು ಸೂಕ್ಷ್ಮವಾಗಿ ಚರ್ಚಿಸುವ ಉದ್ದೇಶದೊಂದಿಗೆ ನೋಡುಗನನ್ನು ಚಿಂತನೆಗೆ ಹಚ್ಚುತ್ತದೆ. ಅದೇ ಕಾರಣಕ್ಕೆ ಒಮ್ಮೆ ನೋಡಿದರೂ, ಮತ್ತೆ‌ಮತ್ತೆ‌ನೋಡುವಂತಹ ಕುತೂಹಲ ಮೂಡಿಸುವುದೇ ಇದರ ಪ್ಲಸ್ ಪಾಯಿಂಟ್.

ಕಥೆ‌ ಕೇಳಿದಾಗ ತುಂಬಾನೆ ಖುಷಿ ಯಾಯಿತು. ಅದನ್ನು‌ಒಂದು ಸಿನಿಮಾ‌ ಮಾದರಿಯಲ್ಲೇ ನಿರ್ಮಾಣ ಮಾಡಬೇಕೆಂದು ಹೊರಟಾಗ, ಸ್ಟಾರ್ ಕಲಾವಿದರು, ಅನುಭವಿ‌ತಂತ್ರಜ್ಜರೇ ನಮ್ಮ ಆದ್ಯತೆಯಾಯಿತು. ನಿರ್ಮಾಣದ ವೇಳೆ ಬಜೆಟ್ ಬಗ್ಗೆ ನಾವು ಆಲೋಚನೆ ಮಾಡಿಲ್ಲ, ಬದಲಿಗೆ ಒಂದೊಳ್ಳೆಯ ಕಿರುಚಿತ್ರ ಆಗಬೇಕೆಂದು‌ ಬಯಸಿದ್ದೇವು. ಅದೀಗ ಸಾಧ್ಯವಾಗಿದೆ ಎನ್ನುವ ಖುಷಿ‌ಸಿಕ್ಕಿದೆ.

ಸುಷ್ಮಿತಾ ಸಮೀರ,ನಿರ್ಮಾಪಕರು

ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆ ಈಗ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಈ ಹಿಂದೆ ಕನ್ನಡ ಚಲನಚಿತ್ರಗಳಲ್ಲಿ ಸಂಭಾಷಣೆ ಗಾರರಾಗಿ ಕೆಲಸ ಮಾಡಿದ ಪ್ರಸನ್ನ ವಿ.ಎಂ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಹಾಗೆಯೇಕನ್ನಡದ ಹೆಸರಾಂತ ಛಾಯಾಗ್ರಾಹಕ‌ ʼಟಗರುʼ ಖ್ಯಾತಿಯ ಮಹೇಂದರ್ ಸಿಂಹ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನಕಾರರಾಗಿ ಶ್ರೀಕಾಂತ್, ಸಂಗೀತಕ್ಕಾಗಿ ಜುಬಿನ್ ಪೌಲ್ ಅವರಂತಹ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರಿನ ಜಯಂತಿ ಕಾಫಿ ಈ ಕಿರುಚಿತ್ರಕ್ಕೆ ಪ್ರಾಯೋಜಕತ್ವ ನೀಡಿದೆ. ಸ್ಟಾರ್ ತಾರಾಗಣ, ಅನುಭವಿ ತಂತ್ರಜ್ಜರು, ಒಂದು ಮನಸ್ಸು ತಟ್ಟುವ ಕಥೆಯ ಮೂಲಕ ‘ಇ ಕ್ಷಣ’ ಸಖತ್ ಸುದ್ದಿ ಮಾಡುತ್ತಿರುವುದು ವಿಶೇಷ. ಆಸಕ್ತರು flickering studios youtube ಚಾನೆಲ್‌ ನಲ್ಲಿ ಈ ಕಿರುಚಿತ್ರ ನೋಡಬಹುದು.
– ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Related Posts

error: Content is protected !!