ಕಣ್ಣಿದ್ದು ಕುರುಡರಾಗಿ ಬದುಕೋರು`ಸಖತ್’ ಸಿನ್ಮಾ ಬಾಲು ಥರ ಬದುಕಿ !

ಚಿತ್ರ ವಿಮರ್ಶೆ: ಸಖತ್


ನಿರ್ದೇಶನ-ಸುನಿ
ನಿರ್ಮಾಣ-ನಿಶಾ ವೆಂಕಟ್ ಕೋಣಂಕಿ
ತಾರಾಗಣ- ಗಣೇಶ್-ಸುರಭಿ-ನಿಶ್ವಿಕಾ ನಾಯ್ಡು-ಮಾಳವಿಕಾ ಅವಿನಾಶ್-ರಂಗಾಯಣ ರಘು-ಸಾಧುಕೋಕಿಲ-ಕುರಿಪ್ರತಾಪ್- ರವಿಶಂಕರ್, ಶೋಭರಾಜ್-ರಘುರಾಮ್- ಧರ್ಮಣ್ಣ-ಗಿರಿ
ಇತರರು

  • ವಿಶಾಲಾಕ್ಷಿ

ಜಗವೇ ಒಂದು ನಾಟಕರಂಗ , ನಾವಿಲ್ಲಿ ಪಾತ್ರಧಾರಿಗಳು ಅಷ್ಟೇ. ಸೂತ್ರಧಾರನ ಅಣತಿಯಂತೆ ಬಣ್ಣ ಬಳಿದುಕೊಳ್ಳದೇ ನಟನೆ ಮಾಡುವವರು ಇದ್ದಾರೆ. ಸಾರಥಿ ಆಜ್ಞೆಯಂತೆ ಬಣ್ಣ ಹಚ್ಚಿಕೊಂಡು ಅಭಿನಯಿಸುವವರು ಇದ್ದಾರೆ. ತರಹೇವಾರಿ ಪಾತ್ರಕ್ಕಾಗಿ ಬಣ್ಣ ಹಚ್ಚಿ ಆಕ್ಟಿಂಗ್ ಮಾಡುವವರನ್ನು ಕಣ್ಮುಂಚಿಕೊಂಡು ನಂಬಬಹುದು. ಆದರೆ ಮುಖವಾಡ ಹಾಕಿಕೊಂಡು ಜಬರ್ದಸ್ತ್ ಪರ್ಫಾಮೆನ್ಸ್ ಕೊಡುವವರನ್ನು ಯಾವುದೇ ಕಾರಣಕ್ಕೂ ನಂಬೋದಕ್ಕೆ ಆಗೋದಿಲ್ಲ. ಅಂದ್ಹಾಗೇ, ಈ ಭೂಮಿ ಮೇಲೆ ದೇವರ ದಯದಿಂದ ಕಣ್ಣನ್ನು ವರವಾಗಿ ಪಡೆದು ಬದುಕುವವರು ಇದ್ದಾರೆ. ದೃಷ್ಟಿ ಕಳೆದುಕೊಂಡು ದೇವರ ಮಕ್ಕಳಾಗಿ ಜೀವಿಸುವವರು ಇದ್ದಾರೆ. ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸಖತ್'ಸಿನಿಮಾ ಗೋಲ್ಡನ್ ಗಣಿಯ ಬಹುನಿರೀಕ್ಷಿತ ‘ಸಖತ್’ ಚಿತ್ರ ಅದ್ದೂರಿಯಾಗಿ ತೆರೆಕಂಡಿದೆ. ಕಣ್ಣಿದ್ದು ಕುರುಡರಾಗಿ ಬದುಕುವವರು `ಸಖತ್’ ಸಿನಿಮಾದ ಬಾಲು ಥರ ಬದುಕಿದರೆ ಚೆಂದ ಎನ್ನುವ ಮೆಸೇಜ್ ಕೂಡ ಸಿಕ್ಕಿದೆ.

ಶುಭಶುಕ್ರವಾರ ರಾಜ್ಯಾದ್ಯಂತ ಮುಂಗಾರುಮಳೆ ಹುಡುಗನ ಬಹುನಿರೀಕ್ಷೆಯ ಸಖತ್' ಸಿನಿಮಾ ತೆರೆಕಂಡಿದೆ. 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗೋಲ್ಡನ್‌ಸ್ಟಾರ್ ಗಣೇಶ್ ಅಭಿನಯದ ‘ಸಖತ್’ ಬಿಡುಗಡೆಯಾಗಿದೆ. ರಿಲೀಸ್ ಆದಂತಹ ಎಲ್ಲಾ ಚಿತ್ರಮಂದಿರಗಳಲ್ಲೂ ‘ಸಖತ್'ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.ಫಸ್ಟ್ ಡೇ ಫಸ್ಟ್ ಶೋ ನೋಡಿ ಥಿಯೇಟರ್‌ನಿಂದ ಹೊರಬಂದ ಚಿತ್ರಪ್ರೇಮಿಗಳು ಮುಗುಳುನಗೆ ಬೀರಿದ್ದಾರೆ.ಎರಡು ವರ್ಷಗಳ ನಂತರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಗೋಲ್ಡನ್‌ಸ್ಟಾರ್ ಗಣೇಶ್ ಸಿನಿಮಾವನ್ನು ಪ್ರೇಕ್ಷಕ ಮಹಾಷಯರು ಅದ್ದೂರಿಯಾಗಿ ವೆಲ್‌ಕಮ್ ಮಾಡಿಕೊಂಡಿದ್ದಾರೆ.ಬಾಸ್ ಈಸ್ ಬ್ಯಾಕ್’ ಎನ್ನುತ್ತಾ ಅವರ ಫ್ಯಾನ್ಸ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಹಾಗಂತ, ಗೋಲ್ಡನ್ ಗಣಿಯ `ಸಖತ್’ ಸಿನಿಮಾ ಸಖತ್ತಾಗಿದೆ ಎಂದು ಒಂದೇ ಸಾಲಿನಲ್ಲಿ ಹೇಳಿ ಮುಗಿಸೋದಕ್ಕೆ ಆಗಲ್ಲ. ಆದರೆ. ಕಾಸು ಕೊಟ್ಟು ಚಿತ್ರಮಂದಿರಕ್ಕೆ ಬಂದಂತಹ ಸಿನಿಮಾ ಪ್ರೇಮಿಗಳಿಗೆ ಮೋಸ ಅಂತೂ ಆಗೋದಿಲ್ಲ.

ಹಾಗಾದ್ರೆ ‘ಸಖತ್'ಸಿನ್ಮಾ ಕಥೆ ಏನು? ಸಖತ್’ ಸಿನ್ಮಾವನ್ನು ಚಿತ್ರಮಂದಿರಕ್ಕೆ ಹೋಗಿ ಯಾಕ್ ನೋಡ್ಬೇಕು? ‘ಸಖತ್'ಸಿನ್ಮಾದ ವಿಶೇಷತೆಗಳೇನು? ಚಿತ್ರದಲ್ಲಿ ಹೊಸದೇನಿದೆ? ಮೆಸೇಜ್ ಏನಿದೆ? ಹೀಗೆ ಒಂದಿಷ್ಟು ಪ್ರಶ್ನೆಗಳು ಅಕೌಂಟ್‌ನಿಂದ 500 ಡ್ರಾ ಮಾಡ್ಕೊಂಡು ಮೂವೀ ನೋಡೋಕೆ ಹೋಗುವಾಗ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳು. ಖಜಾನೆಯಿಂದ ನಾಲ್ಕು ಕಾಸು ಖರ್ಚು ಮಾಡುವಾಗ ಇಂತಹ ಪ್ರಶ್ನೆಗಳು ಬರಬೇಕು ನಿಜ ಆದರೆ ಮನರಂಜನೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಅಲ್ಲವೇ? ಹೀಗಾಗಿ, ಮೈಂಡ್ ಫ್ರೀ ಆಗ್ಬೇಕು, ಕಣ್ಣಿಗೆ ಹೊಸ ಪ್ರಪಂಚ ತೋರಿಸ್ಬೇಕು, ಮನಸ್ಸು ಹಗುರಾಗಬೇಕು, ಹೊಟ್ಟೆ ಹುಣ್ಣಾಗದೇ ಇದ್ದರೂ ಪರವಾಗಿಲ್ಲ ನಕ್ಕು ಬಾಯಿ ನೋವು ಬರಬೇಕು ಎನ್ನುವ ಕಾರಣಕ್ಕಾದರೂ ನೀವು ಗೋಲ್ಡನ್ ಗಣಿ ಹಾಗೂ ಸಿಂಪಲ್ ಸುನಿಯ ಕಾಂಬಿನೇಷನ್‌ನಲ್ಲಿ ಬಂದಿರುವ ಎರಡನೇ ಸಿನಿಮಾ ‘ಸಖತ್’ನ ಥಿಯೇಟರ್‌ಗೆ ಹೋಗಿ ನೋಡ್ಲೆಬೇಕು.

ಸಖತ್'ಚಿತ್ರದಲ್ಲಿ ಗಣೇಶ್ ಅವ್ರದ್ದು ಅಂಧನ ಪಾತ್ರ ಅಂತೇಳಿ ಟೀಸರ್-ಟ್ರೇಲರ್ ಬಿಟ್ರೂ ಕೂಡ,ಸಿನಿಮಾ ಪ್ರೇಕ್ಷಕರಿಗೆ ಗಣಿ ಕಣ್ಣಿದ್ದು ಕುರುಡನಂತೆ ಡವ್ ಮಾಡಿರಬಹುದು ಎನ್ನುವ ಡೌಟ್ ಇತ್ತು.ಆ ಡೌಟ್ ನಿಜ ಕೂಡ.ಆದರೆ,ಸಖತ್’ ಸಿನಿಮಾದ ಬಾಲು ಪಾತ್ರಧಾರಿ ಗಣೇಶ್ ಅವರು ಕುರುಡನಂತೆ ವರ್ತಿಸಲಿಕ್ಕೂ ಒಂದು ಕಾರಣವಿದೆ. ಅದೇನು ಅನ್ನೋದನ್ನು ನೀವು ಥಿಯೇಟರ್‌ಗೆ ಹೋಗಿ ಕುಂತ್ಕೊಂಡು ನಿಮ್ಮ ಕಣ್ಣುಗಳನ್ನು ಅರಳಿಸಿಕೊಂಡೇ ನೋಡ್ಬೇಕು. ಅದರಂತೇ, ಜೂನಿಯರ್ ಬಾಲು ಪಾತ್ರದಲ್ಲಿ ಅಭಿನಯಿಸಿ ಚಿತ್ರಪ್ರೇಮಿಗಳಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಂಡಿರುವ ಗಣಿ ಮಗನನ್ನು ನೀವು ಬಿಗ್‌ಸ್ಕ್ರೀನ್‌ನಲ್ಲೇ ಕಣ್ತುಂಬಿಕೊಳ್ಳಬೇಕು.

ಎಸ್ ಪಿ ಬಾಲು ಆಗ್ಬೇಕು ಎಂಬುದು ಸಖತ್' ಸಿನಿಮಾದ ಬಾಲು ಕನಸು. ಬಾಲ್ಯದಿಂದಲೇ ಇಂತಹದ್ದೊಂದು ಕನಸು ಕಂಡಿದ್ದ ಬಾಲು ನನಗೆ ಕಣ್ಣು ಕಾಣಲ್ಲ ಅಂತ ಸಿಂಪತಿ ಗಿಟ್ಟಿಸಿಕೊಂಡು ‘ಅಂತ್ಯಾಕ್ಷರಿ’ ಸಿಂಗಿಂಗ್ ರಿಯಾಲಿಟಿ ಶೋಗೆ ಎಂಟ್ರಿಕೊಡ್ತಾನೆ. ಅಲ್ಲಿ ಆಂಕರ್ ಮಯೂರಿ (ಸುರಭಿ) ಮೇಲೆ ಬಾಲುಗೆ ಲವ್ವಾಗುತ್ತೆ. ಹೇಗಾದರೂ ಮಾಡಿ ಮಯೂರಿನಾ ಬಲೆಗೆ ಹಾಕಿಕೊಳ್ಳಬೇಕು ಅಂತ ಕುರುಡನಂತೆ ನಟಿಸುತ್ತಾನೆ. ಬಾಲು ಡವ್ ಡ್ರಾಮ ವರ್ಕೌಟ್ ಆಗುತ್ತಾ? ಬಾಲು ಪ್ರೀತಿಯನ್ನ ಮಯೂರಿ ಒಪ್ಪಿಕೊಳ್ತಾಳಾ? ಇವರಿಬ್ಬರ ಮಧ್ಯೆ ಅಂಧೆ (ನಕ್ಷತ್ರ) ನಿಶ್ವಿಕಾ ನಾಯ್ಡು ಎಂಟ್ರಿಯಿಂದ ಕಥೆಗೆ ಯಾವ್ ರೀತಿ ಟ್ವಿಸ್ಟ್ ಸಿಗಲಿದೆ? ಇದೆಲ್ಲದಕ್ಕಿಂತ ಹೆಚ್ಚಾಗಿ ಕಣ್ಣಿದ್ದರೂ ಕೂಡ ಕೆಲವೊಮ್ಮೆ ಕುರುಡನಂತೆ ವರ್ತಿಸೋದ್ರಿಂದ ಏನ್ ಲಾಭ ಇದೆ? ಸೊಸೈಟಿಗೆ ಯಾವ್ ರೀತಿಯ ಕೊಡುಗೆ ಕೊಡಬಹುದು. ಈ ಸೂಕ್ಷ್ಮ ಸಂದೇಶವನ್ನು ಹಾಸ್ಯದ ಜೊತೆಗೆ ನಿರ್ದೇಶಕ ಸಿಂಪಲ್ ಸುನಿ ಕಟ್ಟಿಕೊಟ್ಟಿದ್ದಾರೆ. ಗೋಲ್ಡನ್ ಗಣಿ ಜೀವತುಂಬಿ ಅಭಿನಯಿಸಿದ್ದಾರೆ. ಮಾಳವಿಕಾ ಅವಿನಾಶ್-ರಂಗಾಯಣ ರಘು-ಸಾಧುಕೋಕಿಲ-ಕುರಿಪ್ರತಾಪ್-ಶೋಭರಾಜ್-ರಘುರಾಮ್- ಧರ್ಮಣ್ಣ-ಗಿರಿ ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಚಮಕ್' ಕೊಟ್ಟು ಗೆದ್ದಿದ್ದ ಗಣಿ-ಸುನಿಸಖತ್’ ಸಿನಿಮಾದಲ್ಲಿ ಗಿಮಿಕ್ ಮಾಡಿ ಗೆದ್ದಿದ್ದಾರೆ. ಸಿಂಗಿಂಗ್ ರಿಯಾಲಿಟಿ ಶೋ ಸ್ಪರ್ಧೆ-ಕಾಂಪಿಟೇಷನ್-ಟಿಆರ್‌ಪಿ ಅಂತ ಅಣುಕು ಪ್ರದರ್ಶನ ಮಾಡಿದರಾದರೂ ಕೂಡ ಹಾಸ್ಯಕ್ಕೆ ಒತ್ತು ನೀಡಿ ಪ್ರೇಕ್ಷಕ ಮಹಾಷಯರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ‘ಸಖತ್'ಕಾಮಿಡಿ ಎಂಟರ್‌ಟೈನರ್ ಚಿತ್ರವಾಗಿರೋದ್ರಿಂದ ಕೋರ್ಟ್ ರೂಮ್ ಡ್ರಾಮದ ಕಥೆಗೆ ಸೀರಿಯಸ್ ಟಚ್ ಕೊಟ್ಟಿಲ್ಲ.ಆದರೆ,ಒಂದು ಸೀರಿಯಸ್ ಮ್ಯಾಟರ್‌ನ ತಗೊಂಡು ಸಮಾಜಕ್ಕೆ ಒಂದು ಸಂದೇಶ ಕೊಟ್ಟಿದ್ದಾರೆ.ಕಣ್ಣಿದ್ದು ಕುರುಡರಾಗಿ ಬದುಕೋರುಸಖತ್’ ಸಿನ್ಮಾ ಬಾಲು ಥರ ಬದುಕಿದರೆ ಚೆಂದ ಅನ್ನೋದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಮೊದಲ ಭಾರಿಗೆ ಅಂದನ ಪಾತ್ರ ಮಾಡಿ ಗಣಿ ಸೈ ಎನಿಸಿಕೊಂಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತದ ಪ್ರೀತಿಗೆ ಕಣ್ಣಿಲ್ಲ' ಸಾಂಗು ಎಲ್ಲರ ಮನಸ್ಸಲ್ಲಿ ಉಳಿಯುತ್ತೆ.ಸಂತೋಷ್ ರೈ ಪತಾಜೆ ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತೆ.ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ‘ಸಖತ್’ ಪ್ರೇಕ್ಷಕರಿಗೆ ಫುಲ್‌ಮೀಲ್ಸ್ ಕೊಟ್ಟಿದೆ ಅದು ಮಾತ್ರ ಸತ್ಯ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!