Categories
ಸಿನಿ ಸುದ್ದಿ

ಕಟಿಂಗ್ ಶಾಪ್ ಹುಡ್ಗಿಗೆ ಖುಲಾಯಿಸ್ತು ಅದೃಷ್ಟ ! ನಾಯಕಿಯಾಗಿ ಬ್ಯುಸಿಯಾದ ಅರ್ಚನಾ ಕೊಟ್ಟಿಗೆ !

ರಂಗಭೂಮಿ ನಟಿ‌ ಅರ್ಚನಾ ಕೊಟ್ಟಿಗೆ ಅದೃಷ್ಟ ಖುಲಾಯಿಸಿದೆ. ಅವರೀಗ ಹೊಸ ಅವಕಾಶಗಳ ಮೂಲಕ ಆಗಿಫುಲ್ ಬ್ಯುಸಿ‌ ಆಗುತ್ತಿದ್ದಾರೆ. ನಾಯಕಿ‌ಯಾಗಿ ಅಭಿನಯಿಸಿದ ಮೊದಲ‌ ಸಿನಿಮಾ ‘ಡಿಯರ್ ಸತ್ಯ ‘ ಅದರ ಜತೆಗೆ ‘ಕಟಿಂಗ್ ಶಾಪ್ ‘ಚಿತ್ರಗಳು ರಿಲೀಸ್ ಗೆ ರೆಡಿಯಾಗಿರುವ ಬೆನ್ನಲೇ ಅರ್ಚನಾ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.’ ಜುಗಲ್ ಬಂಧಿ ಬೆನ್ನಲೇ ಈಗ ‘ಅಲಂಕಾರ್ ವಿದ್ಯಾರ್ಥಿ’ ಹೆಸರಿನ‌ಮತ್ತೊಂದು ಚಿತ್ರಕ್ಕೆ ಅರ್ಚನಾ ಕೊಟ್ಟಿಗೆ ನಾಯಕಿ ಆಗಿದ್ದಾರೆ. ಮೊನ್ನೆಯಷ್ಟೇ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿನಾಯಕ-ವೆಂಕಟೇಶ್ವರ ದೇವಾಲಯದಲ್ಲಿ ಅಲಂಕಾರ್ ವಿದ್ಯಾರ್ಥಿ ಚಿತ್ರಕ್ಕೆ ಮಹೂರ್ತ ನಡೆಯಿತು‌.

ಮುಹೂರ್ತ ಸಮಾರಂಭಕ್ಕೆ ನಟ ಡಾಲಿ ಧನಂಜಯ ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಶುಭ ಕೋರಿದರು. ಅನಂತರ ಚಿತ್ರದಲ್ಲಿನ‌ ತಮ್ಮ ಪಾತ್ರ ಹಾಗೂ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ‘ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇದೊಂದು ಕಾಲೇಜು ಸ್ಟೋರಿ ಸಿನಿಮಾ.‌ಇಲ್ಲಿ ನಾನು ಸ್ಟುಡೆಂಟ್. ವಿಶೇಷ ಅಂದ್ರೆ ನಾನು ನಿಜ ಜೀವನದಲ್ಲಂತೂ rank ಸ್ಟೂಡೆಂಟ್ ಆಗಿರಲಿಲ್ಲ. ಆದರೆ ಅಲಂಕಾರ್ ವಿದ್ಯಾರ್ಥಿಯ ಪಾತ್ರದ ಮೂಲಕ ಆ ಬಯಕೆಯನ್ನು ಈಡೇರಿಸಿಕೊಳ್ಳುತ್ತಿದ್ದೇನೆʼ ಎಂದು ನಗು ಬೀರಿದರು.‌ಇನ್ನು ಉಡಾಳ ಬಾಬು‌ಖ್ಯಾತಿಯ ನಟ ಪ್ರಮೋದ್ ಕಾಂಬಿನೇಷನ್ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಆಗುತ್ತಿದೆ ಎಂದರು.

ಬ್ಯಾಕ್ ಟು ಬ್ಯಾಕ್ ಸಿನಿಮಾ‌ ಅವಕಾಶ ಸಿಗುತ್ತಿರುವುದರ ರಹಸ್ಯ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ಅವರು, ಇದೆಲ್ಲ ದೊಡ್ಡದು ಅಂತ ಭಾವಿಸಬೇಡಿ. ಈಗ ಒಂದಷ್ಟು ಅವಕಾಶ ಸಿಗುತ್ತಿವೆ. ಉದ್ಯಮದಲ್ಲಿ ಇರುವ ಅನೇಕ ಸ್ಟಾರ್ ನಟಿಯರಿಗೆ ಹೋಲಿಕೆ ಮಾಡಿಕೊಂಡರೆ ನಾವೇನು ಅಲ್ಲ. ಅದ್ಯಾಕೋ‌ ನಾವಂದುಕೊಂಡಂತೆ ಇಲ್ಲಿ ಅವಕಾಶ ಸಿಗೋದು ತುಂಬಾ‌ ಕಮ್ಮಿ. ಒಳ್ಳೆಯ ಪಾತ್ರಗಳಲ್ಲಿ, ಒಳ್ಳೆಯ ಕತೆಗಳಲ್ಲಿ ಅಭಿನಯಿಸಬೇಕೆನ್ನುವ ಹಸಿವಿದೆ. ಆದರೆ ಅವೆಲ್ಲದ್ದಕ್ಕೂ ಸಮಯ ಬೇಕು ಅಂತಾರೆ ನಟಿ ಅರ್ಚನಾ ಕೊಟ್ಟಿಗೆ.ಅಂದ ಹಾಗೆ, ದಿವಾಕರ್ ಡಿಂಡಿಮ ನಿರ್ದೇಶನದ ಜುಗಲ್ ಬಂದಿ ಚಿತ್ರದಲ್ಲೂ ಅರ್ಚನಾ‌ ಅವರಿಗೆ ಒಂದೊಳ್ಳೆಯ ಪಾತ್ರ ಸಿಕ್ಕ ಖುಷಿ ಇದೆಯಂತೆ.

ಸದ್ಯಕ್ಕೆ ಡಿಯರ್ ಸತ್ಯ, ಅದರ ಜತೆಗೆ ಕಟಿಂಗ್ ಶಾಪ್ ಎರಡು ಸಿನಿಮಾ ರಿಲೀಸ್ ಆಗಬೇಕಿದೆ. ಈ‌ ನಡುವೆಯೇ ಅವಕಾಶಗಳ ಜತೆಗೆ ಬ್ಯುಸಿ ಆಗುತ್ತಿರುವ ಪಕ್ಕದ್ಮನೆ‌ ಹುಡುಗಿ ಅರ್ಚನಾ ಕೊಟ್ಟಿಗೆ, ಪಕ್ಕಾ ರಂಗಭೂಮಿ‌ ನಟಿ.‌ ಕಾರ್ಪೊರೇಟ್ ಜಾಹೀರಾತುಗಳಿಗೆ ಮಾಡೆಲ್ ಆಗಿ ಕ್ಯಾಮೆರಾ ಎದುರಿಸಿದ ದಿನಗಳಲ್ಲಿಯೇ ‘ಅನಾಮಿಕ‌’ ರಂಗ ತಂಡದ ಮೂಲಕ ರಂಗದ ಮೇಲೆ ಕಾಣಿಸಿಕೊಂಡರು. ಆನಂತರ 2017ರಲ್ಲಿ ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ರೆಡ್‌ ಕಾರ್ಪೆಟ್‌ ಕಾರ್ಯಕ್ರಮ, ಕಿರಿಕ್ ಪಾರ್ಟಿ ಶೋ ಹಾಗೂ LOL ಬಾಗ್ ಹೋಸ್ಟ್‌ ಮಾಡಿದ್ದರು. ಅದರ ಜೊತೆಗೆ ಹಲವು ಸಿನಿಮಾ ಆಡಿಷನ್‌ಗಳಲ್ಲಿ ಭಾಗಿಯಾಗಿದ್ದರಂತೆ. ಆದರೆ ಅವರಿಗೆ ಮೊದಲು ನಾಯಕಿ ಆಗಿ ಅವಕಾಶ ಸಿಕ್ಕಿದ್ದು ‘ ಡಿಯರ್ ಸತ್ಯ’ .

ಈ‌ ಚಿತ್ರದಲ್ಲಿ ನಾನು ಅಂಜಲಿ ಹೆಸರಿನ ಪಾತ್ರ ಮಾಡಿದ್ದೀನಿ. ಸಾವಿರಾರು ಕನಸುಗಳನ್ನು ಹೊತ್ತಿಕೊಂಡಿರುವ ಮಿಡಲ್‌ ಕ್ಲಾಸ್‌ ಕುಟುಂಬದ ಹುಡುಗಿ.  ಸತ್ಯನ ಲೈಫ್‌ ಮೇಲೆ ಸಿಕ್ಕಾಪಟ್ಟೆ ಪ್ರಭಾವ ಬೀರುವಂಥ ಗಟ್ಟಿ ಹುಡುಗಿ ಇವಳು. ನಿಜ ಹೇಳಬೇಕಂದರೆ ವೀಕ್ಷಕರು ಈ ಸಿನಿಮಾ ಹಾಗೂ ನನ್ನ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆಂದು ತುಂಬಾ ನರ್ವಸ್ ಆಗುತ್ತಿದ್ದೇನೆ’ ಎನ್ನುವ ನಟಿ ಅರ್ಚನಾ ಕೊಟ್ಟಿಗೆ ಈಗ ಹಲವು ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುತ್ತಾ, ಕಲಾವಿದೆಯಾಗಿ ತಮ್ಮ ನ್ನು ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸಿಕೊಳ್ಳಲು ಮುಂದಾಗಿದ್ದಾರೆ.ಆಲ್ ದಿ ಬೆಸ್ಟ್ ಅರ್ಚನಾ.

Categories
ಸಿನಿ ಸುದ್ದಿ

‘ಖಾಸಗಿ ಪುಟ’ದಲ್ಲಿ ಅನಾವರಣವಾಯ್ತು ಮನಮುಟ್ಟುವ ಪ್ರೇಮಕಥೆ…ಹೊಸಬರ ಹೊಸ ಪ್ರಯತ್ನದ ‘ಖಾಸಗಿ ಪುಟಗಳು’ ಫಸ್ಟ್ ಲುಕ್ ರಿಲೀಸ್!

ಕನ್ನಡ ಸಿನಿ ಜಗತ್ತಿನಲ್ಲಿ ಹೊಸಬರ ಹೊಸತನದ ಒಂದಷ್ಟು ಸಿನಿಮಾಗಳು ಸದ್ದು ಮಾಡುತ್ತಿವೆ. ಈ ಸಾಲಿಗೆ ‘ಖಾಸಗಿ ಪುಟಗಳು’ ಎಂಬ ಹೊಸಬರ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಕಡಲ ದಡಿಯಲ್ಲಿ ಕುಳಿತು ಎರಡು ಮುದ್ದಾದ ಜೋಡಿಗಳು ಹಸಿವು ನೀಗಿಸಿಕೊಳ್ಳುತ್ತಿರುವ ಮನಮುಟ್ಟುವ ಪೋಸ್ಟರ್ ಕುತೂಹಲದ ಕಾರ್ಮೋಡದಂತಿದೆ.

ಖಾಸಗಿ ಪುಟಗಳು ಎಂಬ ಗಮನಸೆಳೆಯುವ ಈ ಸಿನಿಮಾವನ್ನು ಸಂತೋಷ್ ಶ್ರೀಕಂಠಪ್ಪ ನಿರ್ದೇಶನ ಮಾಡುತ್ತಿದ್ದು, ಇದು ಇವರ ಮೊದಲ ಸಿನಿಮಾವಾಗಿದೆ. ಒಂದಷ್ಟು ಶಾರ್ಟ್‌ಮೂವಿಯಲ್ಲಿ ನಟಿಸಿದ್ದ ವಿಶ್ವ ಹಾಗೂ ಹಿಂದಿಯಲ್ಲಿ ‘ವೈ’ ಅನ್ನುವ ಸಿನಿಮಾವೊಂದರಲ್ಲಿ ನಟಿಸಿರುವ ಶ್ವೇತಾ ಡಿಸೋಜಾ ಈ ಸಿನಿಮಾದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಚೇತನ್‌ ದುರ್ಗಾ, ನಂದಕುಮಾರ್‌, ನಿರೀಕ್ಷಾ ಶೆಟ್ಟಿ, ಮೈಸೂರು ದಿನೇಶ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಮಂಜು ಡಿ ರಾಜ್, ವೀಣಾ ಡಿ ರಾಜ್, ಮಂಜುನಾಥ್ ಡಿಎಸ್ ಖಾಸಗಿ ಪುಟಗಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ವಿಶ್ವಜಿತ್ ರಾವ್ ಛಾಯಾಗ್ರಾಹಣ, ಆಶಿಕ್ ಕುಸುಗೊಳಿ ಸಂಕಲನ, ವಾಸುಕಿ ವೈಭವ್ ಸಂಗೀತ, ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಹಾಗೂ ವಿಶ್ವಜಿತ್ ರಾವ್ ಸಾಹಿತ್ಯ ಸಿನಿಮಾಕ್ಕಿದೆ.

ಉಡುಪಿಯ ಚೆಂದದ ಕರಾವಳಿ ತೀರದಲ್ಲಿ ಹುಟ್ಟುವ ಕಾಲೇಜು ಹುಡುಗರ ಪ್ರೇಮವೇ ಪ್ರಧಾನ ಕಥಾಹಂದರದ ಖಾಸಗಿ ಪುಟಗಳು ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲಿಯೇ ಸಿನಿಮಾ ತಂಡ ಹಾಡುಗಳನ್ನು ರಿಲೀಸ್ ಮಾಡಲಿದೆ.

Categories
ಸಿನಿ ಸುದ್ದಿ

ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ? ಡೈವರ್ಸ್ ಮಾಡ್ಕೊಂಡಿರುವ ಸಮಂತಾ ಕೇಳಿದ್ಯಾವ ಮಾವನಿಗೆ ?

ಸೌತ್‌ಬ್ಯೂಟಿ ಸಮಂತಾ, ಅಕ್ಕಿನೇನಿ ನಾಗಚೈತನ್ಯರಿಂದ ವಿಚ್ಚೇದನ ಪಡೆದಿರುವುದು ಎಲ್ಲರಿಗೂ ತಿಳಿದಿರುವಂತಹದ್ದೇ. ಪರಸ್ಪರ ಒಪ್ಪಿಗೆಯ ಮೇರೆಗೆ ಡೈವರ್ಸ್ ಪಡೆದುಕೊಂಡು ನಾಲ್ಕು ವರ್ಷದ ವೈವಾಹಿಕ ಬದುಕಿಗೆ ಗುಡ್‌ಬೈ ಹೇಳಿದ್ದಾರೆ. ಸದ್ಯ ಚೈ ಅಂಡ್ ಸ್ಯಾಮ್ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಇಬ್ಬರು ಕೂಡ ತಮ್ಮ ತಮ್ಮ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಸ್ಯಾಮ್ `ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ'ಅಂತೇಳಿ ಸಂಚಲನ ಸೃಷ್ಟಿಸಿದ್ದಾರೆ.ಅಷ್ಟಕ್ಕೂ, ಸಮ್ಮು ಈ ರೀತಿ ಹೇಳಿದ್ದು ಯಾವ ಮಾವನ ಮುಂದೆ?ಏನ್ ನಡೀತಿದೆ ‘ರಾಜಿ’ ಸುತ್ತ ಮುತ್ತ? ಆ ಇಂಟ್ರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ

ಮನಂ'ಜೋಡಿಯ ನಾಲ್ಕು ವರ್ಷದ ದಾಂಪತ್ಯ ಜೀವನ ಮುಗಿದುಹೋದ ಅಧ್ಯಾಯ.11 ವರ್ಷ ಪ್ರೀತ್ಸಿ ಮದುವೆಯಾದ ಚೈ-ಸ್ಯಾಮ್ ಮಧ್ಯೆ ಅದ್ಯಾವ ಘಟನೆ ಘಟಿಸಿತೋ? ಇವರಿಬ್ಬರ ಸಂಸಾರದಲ್ಲಿ ಅದ್ಯಾರು ಉಳಿ ಹಿಂಡಿದ್ರೋ ಏನೋ ಗೊತ್ತಿಲ್ಲ? ‘ಮಜಿಲಿ’ ಜೋಡಿ ಡೈವರ್ಸ್ ತೆಗೆದುಕೊಳ್ಳುವಂತಾಯ್ತು. ಕೋಟ್ಯಾಂತರ ಅಭಿಮಾನಿಗಳ ಹೊಟ್ಟೆಗೆ ಬೆಂಕಿ ಬಿತ್ತು. ಹೀಗೆ ಹೊಟ್ಟೆಗೆ ಬೆಂಕಿ ಹಾಕಿಕೊಂಡವರೆಲ್ಲ ಫ್ಯಾನ್ಸ್ ಈಗ್ಲೂ ಕೇಳಿಕೊಳ್ತಿರುವುದು ಒಂದೇ ಚೈ-ಸ್ಯಾಮ್ ಇಬ್ಬರು ವೈಮನಸ್ಸು ಮರೆತು ಒಂದಾಗ್ಬೇಕು ಅನ್ನೋದು. ಅಭಿಮಾನಿಗಳ ಈ ಕನಸು ಈಡೇರುತ್ತೋ? ಇಲ್ಲವೋ? ಗೊತ್ತಿಲ್ಲ. ಆದರೆ, ಫ್ಯಾನ್ಸ್ ಗೆ ಮನರಂಜನೆ ಕೊಡುವುದಕ್ಕೆ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರು ಕೂಡ ಸಿನಿಮಾದ ಮೊರೆ ಹೋಗಿದ್ದಾರೆ. ಅದರಲ್ಲೂ ಸ್ಯಾಮ್ ಅಂತೂ `ಪುಷ್ಪ’ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯ ಚಿತ್ರಪ್ರೇಮಿಗಳು ಬೆರಗುಗಣ್ಣಿನಿಂದ ನೋಡುವಂತಹ ಪರ್ಫಾಮೆನ್ಸ್ ಕೊಟ್ಟಿದ್ದಾರೆ.

ಅಲ್ಲಾ, ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ ಅಂತ ಸಮಂತಾ ಕೇಳಿದ್ದಾರೆ. ಅದರ ಕಥೆ ಹೇಳ್ತೀವಿ ಅಂತೇಳಿ ಮತ್ತದೇ ಹಳೆ ಕಥೆ ಕ್ಯಾಸೆಟ್ ಪ್ಲೇ ಮಾಡ್ತಿದ್ದಾರೆ ಅಂದ್ಕೋಬೇಡಿ. ತಾಜಾ ಸಮಾಚಾರ ಹೇಳಲಿಕ್ಕಾಗಿಯೇ ಇಷ್ಟೆಲ್ಲಾ ಹೇಳಿದ್ದು. ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ'? ಹೀಗಂತ ಆ್ಯಪಲ್ ಬ್ಯೂಟಿ ಸಮಂತಾ ಕೇಳಿದ್ದೇನೋ ನಿಜ ಆದರೆ,ರೀಲ್ ಲೈಫ್‌ನಲ್ಲಿರುವ ಮಾವನ ಮುಂದೆ ಅಲ್ಲಾ? ಬದಲಾಗಿ ರಿಯಲ್ ಲೈಫ್‌ನಲ್ಲಿಪುಷ್ಪ’ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಬರುವ ಸ್ಟೈಲಿಷ್ ಮಾವನ ಮುಂದೆ.

ಹೌದು, ಸ್ಟೈಲಿಷ್ ಐಕಾನ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಪುಷ್ಪ' ಚಿತ್ರದಲ್ಲಿ ಸಮಂತಾ ಐಟಂ ಹಾಡಿಗೆ ಸೊಂಟ ಕುಣಿಸಿದ್ದಾರೆ.ಇದೇ ಮೊದಲ ಭಾರಿಗೆ ಸ್ಪೆಷಲ್ ನಂಬರ್ ಹಾಡಿಗೆ ಬೆಲ್ಲಿ ಬಳುಕಿಸಿರುವ ಸ್ಯಾಮ್ ‘ಸೀರೆ.. ಸೀರೆ.. ಸೀರೆಯುಟ್ಟರೆ ಕಣ್.. ಕಣ್.. ಬಿಟ್ಕೊಂಡು ನೋಡ್ತೀರಾ, ಪುಟ್ಟ..ಪುಟ್ಟ.. ಗೌನು ತೊಟ್ರೆ..ಹಿಂದೆ ಹಿಂದೆ ಬೀಳ್ತೀರಾ, ಸೀರೆಯಲ್ಲ..ಗೌನು ಅಲ್ಲ..ಉಟ್ಟ ಬಟ್ಟೇಲಿ ಏನೈತೆ, ನೀವು ನೋಡೋದ್ರಾಗೆ ಎಲ್ಲಾ ಐತೆ ನಿಮ್ಮ ಬುದ್ದಿ ಇಲ್ಲ ಶುದ್ದಿ, ಉಹ್ಞೂಂ ಅಂತೀಯಾ ಮಾವ ? ಹ್ಞೂಂ ಅಂತೀಯಾ ಮಾವ’? ಅಂತ ಅಲ್ಲು ಅರ್ಜುನ್ ಮುಂದೆ ಕೇಳಿದ್ದಾರೆ.

ಈ ಹಾಡಿಗಾಗಿ ದುಬಾರಿ ಸಂಭಾವನೆ ಪಡೆದಿರುವ ಸ್ಯಾಮ್, ನೀಲಿ ಬಣ್ಣದ ಲೆಹೆಂಗಾ ತೊಟ್ಟು ಸಖತ್ತಾಗೆ ಕುಣಿದಿದ್ದಾರೆ. ಈ ಸ್ಪೆಷಲ್ ನಂಬರ್ ಸಾಂಗ್ ಮೂರು ಸೀಸನ್‌ಗೂ ಮ್ಯಾಚ್ ಆಗುತ್ತೆ. ಚಳಿಗಾಲ..ಮಳೆಗಾಲ..ಬೇಸಿಗೆಕಾಲ ಈ ಮೂರು ಕಾಲದಲ್ಲೂ ಪಡ್ಡೆಹೈಕ್ಳು ಬೆವರುವಂತೆ ಮಾಡುವ ಸಾಂಗ್ ಇದು.

'ಕಣ್ಣೇ ಅದಿರಿಂದಿ'ಅಂತ ಹಾಡಿ ಪಡ್ಡೆ ಹುಡಗರ ಹಗಲು-ರಾತ್ರಿ ನಿದ್ದೆಕದ್ದ ಸಿಂಗರ್ ಮಂಗ್ಲಿ,ಈಗ ‘ಹ್ಞೂಂ ಅಂತೀಯಾ ಮಾವ? ಉಹ್ಞೂಂ ಅಂತೀಯಾ ಮಾವ’? ಅಂತ ಹಾಡಿ ಸಕಲ ಸೋದರ ಮಾವಂದಿರು-ಸಕಲ ಸೊಸೆಯಂದಿರನ್ನು ಅಟ್ರ್ಯಾಕ್ಟ್ ಮಾಡುತ್ತಿದ್ದಾರೆ. ವರದರಾಜ್ ಚಿಕ್ಕಬಳ್ಳಾಪುರ ಕನ್ನಡ ವರ್ಷನ್ ಹಾಡಿಗೆ ಕ್ಯಾಚಿ ಲಿರಿಕ್ಸ್ ಬರೆದುಕೊಟ್ಟಿದ್ದಾರೆ. ದೇವಿ ಶ್ರೀ ಪ್ರಸಾದ್ ಟ್ಯೂನ್ ಕಂಪೋಸ್ ಮಾಡಿದ್ದಾರೆ.

ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ‘ಹ್ಞೂಂ ಅಂತೀಯಾ ಮಾವ? ಉಹ್ಞೂಂ ಅಂತೀಯಾ ಮಾವ'? ಹಾಡು ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.ಸುಕುಮಾರ್ ಬತ್ತಳಿಕೆಯಿಂದ ಹೊರಬರುತ್ತಿರುವ ‘ಪುಷ್ಪ’ಕ್ಕೆ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೀವ ತುಂಬಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ‘ಪುಷ್ಪ'ಅದ್ದೂರಿಯಾಗಿ ನಿರ್ಮಾಣಗೊಂಡಿದ್ದು, ಡಿಸೆಂಬರ್ 17ರಂದು ಬಿಗ್‌ಸ್ಕ್ರೀನ್ ಮೇಲೆ ‘ಪುಷ್ಪ’ ಅರಳಲಿದೆ. ಪ್ಯಾನ್ ಇಂಡಿಯಾ ತುಂಬೆಲ್ಲಾ ಘಮಘಮಿಸೋಕೆ ಹೊರಟಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ರೂಲ್ ಮಾಡಲು ಹೊರಟು ನಿಂತರು ರೈಡರ್- ಯುವರಾಜ ನಿಖಿಲ್ ‌ಅಬ್ಬರಕ್ಕೆ ಮುಹೂರ್ತ ಫಿಕ್ಸ್ !

ಯುವ ರಾಜ ನಿಖಿಲ್ ಕುಮಾರ ಸ್ವಾಮಿ ಮತ್ತೆ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಲಹರಿ ಸಂಸ್ಥೆಯ ಬಹು ನಿರೀಕ್ಷಿತ ಸಿನಿಮಾ ‘ರೈಡರ್ ‌’ ಗ್ರಾಂಡ್ ರಿಲೀಸ್ ಗೆ ಸಜ್ಜಾಗಿದೆ. ಡಿಸೆಂಬರ್ ೨೪ ರಂದು ‌ಬೆಳ್ಳಿತೆರೆ ಮೇಲೆ ನಿಖಿಲ್ ಕುಮಾರ್ ಸ್ವಾಮಿ ರೈಡಿಂಗ್ ಶುರು‌ ಮಾಡಲಿದ್ದಾರೆ. ಕನ್ನಡ ದ ಮಟ್ಟಿಗೆ ರೈಡರ್ ಅನೇಕ ಕಾರಣಕ್ಕೆ ಕುತೂಹಲ‌ಹುಟ್ಟಿಸಿರೋ‌ ಸಿನಿಮಾ. ‘ಮಹಾ ಕ್ಷತ್ರೀಯ’, ರೋಜಾ,’ ಗಣೇಶನ‌ ಗಲಾಟೆ’ ಚಿತ್ರಗಳ ನಂತರ ಲಹರಿ ಸಂಸ್ಥೆ ನಿರ್ಮಾಣ ಮಾಡಿದ ಬಿಗ್ ಬಜೆಟ್ ಸಿನಿಮಾ ಎನ್ನುವುದರ ಜತೆಗೆ ಕನ್ನಡ, ತೆಲುಗು ಸೇರಿದಂತೆ ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ.‌

ಹಾಗೆಯೇ ನಿಖಿಲ್ ಕುಮಾರ ಸ್ವಾಮಿ ನಾಯಕರಾಗಿರೋ ಈ ಚಿತ್ರಕ್ಕೆ ನವ ತಾರೆ ಕಾಶ್ಮೀರಿ ಪರದೇಶಿ‌ ನಾಯಕಿ. ಹಾಗೆಯೇ ದೊಡ್ಡ ತಾರಾಗಣವೇ ಇಲ್ಲಿದೆ. ಚಿತ್ರ ತಂಡ ಮಾಹಿತಿ ಪ್ರಕಾರ ಕನ್ನಡದಲ್ಲಿಯೇ ಈ ಚಿತ್ರವೂ ೨೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಚಿತ್ರದ ರಿಲೀಸ್ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರ ತಂಡ ಇತ್ತೀಚೆಗೆ ಮಾಧ್ಯಮ ಮುಂದೆ ಬಂದಿತ್ತು. ಅಲ್ಲಿ ಚಿತ್ರದ ರಿಲೀಸ್ ಸಿದ್ದತೆಯ ಜತೆಗೆ ವಿಶೇಷತೆ ಕುರಿತು ಚಿತ್ರತಂಡ ಮಾಹಿತಿ‌ ಹಂಚಿಕೊಂಡಿತು.

ಮೊದಲು ಮೈಕ್ ಹಿಡಿದು ಮಾತಿಗೆ ನಿಂತಿದ್ದು ನಿರ್ಮಾಪಕರು ಆದ ಲಹರಿ ವೇಲು ಅವರು.’ ಲಹರಿ ಸಂಸ್ಥೆ ಈ ಹಿಂದೆ ಮಹಾ ಕ್ಷತ್ರಿಯ, ಗಣೇಶನ ಗಲಾಟೆ ಹಾಗೂ ತೆಲುಗಿನ ರೋಜ ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಈಗ ಸುನೀಲ್ ಅವರ ಶಿವನಂದಿ ಎಂಟರ್ ಟೈನ್ ಮೆಂಟ್ ಜೊತೆಗೂಡಿ “ರೈಡರ್” ಚಿತ್ರ ನಿರ್ಮಾಣ ಮಾಡಿದ್ದೇವೆ. ನಮ್ಮ ಅಣ್ಣ ಮನೋಹರ ನಾಯ್ಡು ಅವರ ಮಕ್ಕಳಾದ ಚಂದ್ರು ಹಾಗೂ ನವೀನ್ ಈಗ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಗೆದ್ದಿದೆ. ಚಿತ್ರ ಕೂಡ ಯಶಸ್ವಿಯಾಗಲಿದೆ ಎಂದರು ಲಹರಿ ವೇಲು.

ಇನ್ನು ಲಹರಿ ಸಂಸ್ಥೆಯ ಜತೆಗೆ ಸೇರಿ ಸಿನಿಮಾ ಮಾಡಿದ ಅನುಭವ ಕುರಿತು ಶಿವನಂದಿ ಸಂಸ್ಥೆಯ ಸುನೀಲ್ ಗೌಡ ಮಾತನಾಡಿದರು.’ ಒಳ್ಳೆಯ ಸಿನಿಮಾ ಮಾಡಿದ್ದ ಖುಷಿ ಇದೆ. ಇದೇ ಡಿಸೆಂಬರ್ 24 ರಂದು ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ. ಮೋಜೊ ಆಪ್ ನಲ್ಲಿ ನಮ್ಮ ಚಿತ್ರದ ಹಾಡು 221 ಮಿಲಿಯನ್‌ ಗೂ ಅಧಿಕ ವೀಕ್ಷಣೆಯಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಅಪ್ಪು ಅವರನ್ನು ನೆನೆದು ಮಾತು ಆರಂಭಿಸಿದ ನಾಯಕ ನಿಖಿಲ್ ಕುಮಾರ್ , ಕಲಾವಿದರ ಸಂಘಕ್ಕೆ ಮೊದಲ ಬಾರಿಗೆ ಅಂಬರೀಶ್ ಅವರೊಡನೆ ಬಂದಿದ್ದನ್ನು ನೆನಪಿಸಿಕೊಂಡರು. ‘ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ನಡೆಯಬೇಕಾದಾಗ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಈ ಚಿತ್ರದ ಕಥೆ ಹೇಳಿದರು. ನಂತರ ಸುನೀಲ್ ಹಾಗೂ ಲಹರಿ ಸಂಸ್ಥೆ ಮೂಲಕ ಈ ಚಿತ್ರದ ನಿರ್ಮಾಣ ಆರಂಭವಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾವಿದ ಹಾಗೂ ತಂತ್ರಜ್ಞರನ್ನು ನಿಖಿಲ್ ಅವರು ಪ್ರತ್ಯೇಕವಾಗಿ ಅಭಿನಂದಿಸಿದರು. ಅರ್ಜುನ್ ಜನ್ಯರ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡುಗಳು ಹಿಟ್ ಆಗಿರುವುದು ಸಂತೋಷ ತಂದಿದೆ. ಇದೇ 24 ನೇ ತಾರೀಖು ನಮ್ಮ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಬೆಂಬಲವಿರಲಿ’ ಎನ್ನುತ್ತಾರೆ ನಾಯಕ ನಿಖಿಲ್ ಕುಮಾರ್.

ನಿರ್ದೇಶಕ ವಿಜಯ್ ಕುಮಾರ್ ಕೊಂಡ ಚಿತ್ರ ಉತ್ತಮವಾಗಿ ಬರಲು ಸಹಕರಿಸಿದ ತಂಡಕ್ಕೆ ಧನ್ಯವಾದ ತಿಳಿಸಿದರು. ವಿತರಕ ಸುಪ್ರೀತ್ ಚಿತ್ರ ಬಿಡುಗಡೆ ಬಗ್ಗೆ ಮಾಹಿತಿ ನೀಡಿದರು. ನಟರಾದ ರಾಜೇಶ್ ನಟರಂಗ, ಗರುಡ ರಾಮ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ಮಂಜು ಪಾವಗಡ, ಗಿರೀಶ್, ಅರ್ಜುನ್ ಗೌಡ, ಸಂತು, ಚಿಲ್ಲರ್ ಮಂಜು, ಬೇಬಿ ಪ್ರಾಣ್ಯ, ಗೀತರಚನೆಕಾರ ಕವಿರಾಜ್, ನೃತ್ಯ ನಿರ್ದೇಶಕ ಭೂಷಣ್ ಹಾಗೂ ಸಾಹಸ ನಿರ್ದೇಶಕ ಚೇತನ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಅದ್ಭುತ-ಅಮೋಘ-ಅವಿಸ್ಮರಣೀಯ `ಆರ್‌ಆರ್‌ಆರ್’ ಟ್ರೈಲರ್; ಜಕ್ಕಣ್ಣನ ಕಲ್ಪನೆಗೆ ಹಾಲಿವುಡ್ಡು ಅಲ್ಲಾಡುತ್ತೆ ಗುರು !

ಸೌತ್ ಸಿನಿಮಾ ಇಂಡಸ್ಟ್ರಿಯ ಸೆನ್ಸೇಷನಲ್ ‘ಆರ್‌ಆರ್‌ಆರ್'ಚಿತ್ರದ ಟ್ರೈಲರ್ ಹೊರಬಿದ್ದಿದೆ.ತೆಲುಗು ಸೇರಿದಂತೆ ಕನ್ನಡ-ತಮಿಳು-ಮಲೆಯಾಳಂ ಹಿಂದಿ ಭಾಷೆಯಲ್ಲಿ ಅನಾವರಣಗೊಂಡಿದ್ದು ಜಕ್ಕಣ್ಣ ಹಾಲಿವುಡ್ ಮಂದಿಯನ್ನೂ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ.೩ ನಿಮಿಷ ೭ ಸೆಕೆಂಡ್ ಇರುವ ಟ್ರೈಲರ್ ಥ್ರಿಬ್ಬಲ್ ಆರ್ ಭವಿಷ್ಯವನ್ನು ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾ ಮಂದಿಯ ತಾಕತ್ತೇನು ಎಂಬುದನ್ನೇ ಇಡೀ ಜಗತ್ತಿಗೆ ತೋರಿಸುತ್ತಿದೆ.ಜಕ್ಕಣ್ಣನ ಕಲ್ಪನೆಯ ‘ಥ್ರಿಬ್ಬಲ್ ಆರ್’ ಕಥೆಗೆ ಟ್ರೈಲ್ಲರ‍್ರೇ ಕನ್ನಡಿ ಹಿಡಿಯುತ್ತಿದೆ. ‘ರೌದ್ರ-ರಣ-ರುಧೀರ'ಸಿನಿಮಾ ಎಷ್ಟು ಅದ್ಭುತವಾಗಿ-ಅದ್ದೂರಿಯಾಗಿ-ವೈಭವೊಪೇತವಾಗಿ ಮೂಡಿಬಂದಿರಬಹುದು ಎನ್ನುವ ಕಲ್ಪನೆಗೆ ಟ್ರೈಲರ್ ಜೀವ ತುಂಬುತ್ತಿದೆ.ಮಲ್ಟಿಸ್ಟಾರರ್ ಸಿನ್ಮಾ ಅಂದ್ರೆ ಹಿಂಗರ‍್ಬೇಕು ಎನ್ನುವುದರ ಜೊತೆಗೆ ಚಿತ್ರರಂಗ ಒಂದು ಕುಟುಂಬವಿದ್ದಂತೆ ಅಂತ ಬಾಯ್ ಮಾತಿಗೆ ಹೇಳದೇ, ಜೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ತೇಜಾರಂತೆ ಒಟ್ಟಿಗೆ ಅಭಿನಯಿಸಿ ತೋರಿಸ್ಬೇಕು’ ಎನ್ನುವ ಸೂಕ್ಷ್ಮತೆಯನ್ನು ಕೂಡ ಟ್ರೈಲರ‍್ರೇ ಹೇಳ್ತಿದೆ.

ಜಕ್ಕಣ್ಣನ ಮೆದುಳಿನಲ್ಲಿ ಮಿನುಗಿ ದೃಶ್ಯರೂಪಕ ಪಡೆದುಕೊಂಡಿರುವ ತ್ರಿಬಲ್‌ಆರ್' ಟ್ರೈಲರ್ ಏಕ್ದಮ್ ಜಕ್ಕಾಸ್ ಅಷ್ಟೇ.ಬಾಹುಬಲಿ ಸಾರಥಿ ಎಸ್.ಎಸ್. ರಾಜಮೌಳಿಯ ಸಿನಿಮಾಗಳಂದ್ರೆ ಅಲ್ಲಿ ಅದ್ದೂರಿತನಕ್ಕೆ ಕೊರತೆಯಿರಲ್ಲ, ಕೂತೂಹಲಕ್ಕೆ ಮಿತಿಯಿರುವುದಿಲ್ಲ,ಚಿತ್ರಪ್ರೇಮಿಗಳು ನಿರೀಕ್ಷೆ ಮಾಡಿದ್ದಕ್ಕಿಂತ ಒಂದು ತೂಕ ಜಾಸ್ತಿನೇ ಟ್ವಿಸ್ಟ್ ಅಂಡ್ ಟರ್ನ್ಸ್ ಇಟ್ಟಿರುತ್ತಾರೆ.ಕಥೆ ಮೇಲೆ ಇಂಚಿಂಚೂ ವರ್ಕ್ ಮಾಡಿರುತ್ತಾರೆ,ಪ್ರತಿಪಾತ್ರಕ್ಕೂ ಭೂಮಿ ತೂಕದ ಬೆಲೆ ಬರುವಂತೆ ಕಟ್ಟಿಕೊಡುತ್ತಾರೆ,ಮಾತ್ರವಲ್ಲ ಕಲಾವಿದರ ಹಣೆ ಮೇಲೆ ಇಟ್ಟಿರುವ ಬೊಟ್ಟು ಕೂಡ ಒಂದು ಕಥೆ ಹೇಳುತ್ತೆ.ಅದನ್ನು ನಾವು ಈ ಹಿಂದಿನ ಸಿನಿಮಾಗಳಲ್ಲಿ ನೋಡಿದ್ದೇವೆ. ಹೀಗೆ ಕಥೆ-ಚಿತ್ರಕಥೆ-ಸಂಭಾಷಣೆ-ಪಾತ್ರವರ್ಗ-ಮೇಕಿಂಗ್ ಅಂತ ತಲೆಕೆಡಿಸಿಕೊಂಡು ಕಲೆಗೆ ಜೀವತುಂಬುವ, ಒಂದೊಂದು ಫ್ರೇಮ್ ಕೂಡ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ತೋರಿಸುವ ಕಲಾಕಾರ್ ಜಕ್ಕಣ್ಣ,೩ ನಿಮಿಷ ೭ ಸೆಕೆಂಡ್’ ತ್ರಿಬಲ್ ಆರ್ ಟ್ರೈಲರ್ ಬಿಟ್ಟು ಇಡೀ ಜಗತ್ತು ವಾರೆವ್ಹಾ ಎನ್ನುವಂತೆ ಮಾಡಿರುವುದು ನಿಜಕ್ಕೂ ಗ್ರೇಟ್‌ನೆಸ್ ಅಲ್ಲದೇ ಮತ್ತೇನು ಹೇಳಿ.

'ಆರ್‌ಆರ್‌ಆರ್' ಇಡೀ ಜಗತ್ತು ಎದುರುನೋಡ್ತಿರುವ ಸಂಗತಿ ನಿಮ್ಮೆಲ್ಲರಿಗೂ ಗೊತ್ತಿದೆ.ಭಾರತೀಯ ಚಿತ್ರರಂಗ ಜಾತಕಪಕ್ಷಿಯಂತೆ ಕಾಯ್ತಿರೋ ಸಿನಿಮಾಗಳ ಪಟ್ಟಿಗೆ ಸೌತ್ ಸಿನಿಮಾ ಇಂಡಸ್ಟ್ರಿಯ ‘ಆರ್‌ಆರ್‌ಆರ್’ ಕೂಡ ಸೇರಿಕೊಳ್ಳುತ್ತೆ. ಇಷ್ಟೊಂದು ಕೂತೂಹಲದಿಂದ ಕಾಯೋದಕ್ಕೆ ಮೊದಲನೆಯ ಕಾರಣ ರಾಜಮೌಳಿಯ ನಿರ್ದೇಶನವಾದರೆ, ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ ಹಾಗೂ ಮೆಗಾಪ್ರಿನ್ಸ್ ರಾಮ್‌ಚರಣ್ ತೇಜಾ ಇಬ್ಬರು ಸ್ಕ್ರೀನ್ ಶೇರ್ ಮಾಡಿರುವುದು ಎರಡನೇ ಕಾರಣ. ಇವರಿಬ್ಬರು ಟಿಟೌನ್ ಅಂಗಳದಲ್ಲಿ ಸೂಪರ್‌ಸ್ಟಾರ್‌ಗಳು. ಇಬ್ಬರಿಗೂ ಆಕಾಶವನ್ನು ಅದುರಿಸುವಷ್ಟು ಅಭಿಮಾನಿಗಳಿದ್ದಾರೆ. ಇಬ್ಬರಿಗೂ ತಮ್ಮದೇ ಆದ ಸ್ಟಾರ್‌ಢಮ್ ಇದೆ ಹಾಗೂ ಬೇರೆ ಬೇರೆ ಇಮೇಜ್ ಇದೆ. ಅದೆಲ್ಲವನ್ನೂ ಬದಿಗಿಟ್ಟು ‘ಜಕ್ಕಣ್ಣ'ನ ಕಲ್ಪನೆಯ ‘ಆರ್‌ಆರ್‌ಆರ್’ಗೆ ಜೀವ ತುಂಬಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಹುಲಿಯ ಸದ್ದನ್ನು ಅಡಗಿಸುವಷ್ಟರ ಮಟ್ಟಿಗೆ ಯಂಗ್ ಟೈಗರ್ ಘರ್ಜಿಸಿದ್ದಾರೆ. ಯಂಗ್ ರೆಬೆಲ್‌ಸ್ಟಾರ್ ರಾಮಚರಣ್ ಭರ್ಜರಿ ಆಕ್ಷನ್ ಗಿಂತ ಅವರು ಉರಿಗೊಳಿಸಿಕೊಂಡಿರುವ ದೇಹಸ್ವರೂಪಕ್ಕೆ ಮಾಸ್ ಪ್ರಿಯರು ಮಾತ್ರವಲ್ಲ ಮಹಾರಾಣಿ ಕಾಲೇಜ್‌ನ ಹುಡ್ಗೀಯರು ಹೃದಯ ಕೊಡ್ತಾರೆ.

ಚಿಂಕಿ-ಮಿಂಕಿ ಡ್ರಸ್ ತೊಟ್ಟು ಬಾರ್ಬಿಡಾಲ್ ಥರಹ ಮಿಂಚುತ್ತಿದ್ದ ಆಲಿಯಾ ಭಟ್ `ಆರ್‌ಆರ್‌ಆರ್’ ಚಿತ್ರದಲ್ಲಿ ಪಕದ್ಮನೆ ಹುಡುಗಿ ಥರ ಕಾಣಿಸಿಕೊಳ್ತಿದ್ದಾರೆ. ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಒಂದೇ ಫ್ರೇಮ್‌ನಲ್ಲಿ ಬರುವ ಆಲಿಯಾ ಇಷ್ಟವಾಗ್ತಾರೆ. ಒಲಿವಿಯಾ ಮೋರಿಸ್ ಬ್ಯೂಟಿ ಕಣ್ಣಿಗೆ ಹೊಡೆಯುತ್ತೆ. ಶ್ರೇಯಾಶರಣ್ ಒಂದೇ ನೋಟದಲ್ಲೇ ಬೆಚ್ಚಿಬೀಳಿಸ್ತಾರೆ. ಬಾಲಿವುಡ್ ನಟ ಅಜಯ್ ದೇವಗನ್ ಕೈಲಿ ಬಂದೂಕು ಹಿಡಿದು ಎಗರೆಗರಿ ಹೊಡೆಯುತ್ತಾರೆ. ಕೈಲಿ ಬಂದೂಕು ಇದೆಯೆಂದು ಗುಂಡಿಗೆಗೆ ಗನ್ನಿಟ್ಟ ಹಾಲಿವುಡ್ ಸ್ಟಾರ್‌ಗಳು, ರಾಮ್‌ಚರಣ್ ರಾಮನ ಅವತಾರವೆತ್ತಿ ಬಂದಾಗ ಕಣ್ಣುಬಾಯಿಬಿಡ್ತಾರೆ. ಎಲ್ಲದಕ್ಕಿಂತ ಎಕ್ಸ್ಟ್ರಾಡಿನರಿ ಅಂದರೆ ರಾಮ್‌ಚರಣ್ ತೇಜಾರನ್ನ ಜೂನಿಯರ್ ಎನ್‌ಟಿಆರ್ ಹೆಗಲ ಮೇಲೆ ಹೊತ್ತು ಕುಣಿಯುವುದು. ಅಂದ್ಹಾಗೇ, ಪಿಕ್ಚರ್‌ನಲ್ಲಿ ಇವರಿಬ್ಬರು ಅಣ್ತಮ್ಮಾಸ್ ಆಗಿರಲಿ ಅಥವಾ ದೋಸ್ತಿಗಳೇ ಆಗಿರಲಿ. ಆದರೆ ಸ್ಟಾರ್‌ನಟರಿಬ್ಬರು ಒಂದೇ ಫ್ರೇಮ್‌ನಲ್ಲಿ ಈ ರೀತಿ ಕಂಡ್ರೆ ಅಭಿಮಾನಿಗಳಿಗೆ ಅದಕ್ಕಿಂತ ಹಬ್ಬ ಇನ್ನೊಂದು ಇಲ್ಲ ಬಿಡಿ.

ಒಟ್ನಲ್ಲಿ ಆರ್‌ಆರ್‌ಆರ್' ಟ್ರೈಲರ್ ಅದ್ಬೂತವಾಗಿ ಮೂಡಿಬಂದಿದೆ. ಭರ್ಜರಿ ಸ್ಟಂಟ್ಸ್-ಸಸ್ಪೆನ್ಸ್-ಸ್ನೇಹ-ಸಹೋದರತ್ವ-ಸ್ವಾತಂತ್ರ್ಯ-ಸ್ವಾಭಿಮಾನ-ಜನ ಹೀಗೆ ಹಲವು ಕಾರಣಕ್ಕೆತ್ರಿಬಲ್ ಆರ್’ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ. ಇಬ್ಬರು ಫ್ರೀಡಂಫೈಟರ್‌ಗಳ ಸಾಹಸಗಾಥೆ ಇದಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜಾ ಕಾಣಿಸಿಕೊಂಡಿದ್ದಾರೆ. ಕೊಮರಂ ಭೀಮ್ ಪಾತ್ರವನ್ನು ಜೂನಿಯರ್ ಎನ್‌ಟಿಆರ್ ನಿಭಾಯಿಸಿದ್ದಾರೆ. ತಳ ಸಮುದಾಯದ ಜನರನ್ನು ರಕ್ಷಿಸುವ ಕೊಮರಂ ಭೀಮ್ ನ ಶಿಕ್ಷಿಸುವ ಬ್ರಿಟಿಷ್ ಅಧಿಕಾರಿ ಅಲ್ಲೂರಿ ಸೀತರಾಮ ರಾಜು ಮುಂದೆ ಭೀಮ್ ಜೊತೆಗೆ ಕೈಜೋಡಿಸ್ತಾರೆ.

ಮೊದಲು ವಿರೋಧಿಗಳಾಗಿದ್ದವರು ಅನಂತರ ಸ್ನೇಹಿತರಾಗ್ತಾರೆ. ಇಬ್ಬರು ಜೊತೆಯಾಗಿ ಬ್ರಿಟಿಷರ ವಿರುದ್ದ ಸಿಡಿದೇಳುತ್ತಾರೆ. ಇಷ್ಟು ಕಥೆ ಸದ್ಯಕ್ಕೆ ಟ್ರೈಲರ್‌ನಿಂದ ಗೊತ್ತಾಗುತ್ತೆ. ಅಸಲಿ ಕಥೆ ಏನು? ಎಂತ? ಎನ್ನುವುದು ಜನವರಿ ೦೭ರಂದು ಗೊತ್ತಾಗಲಿದೆ. ೧೦೦೦ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಡಿ.ವಿವಿ ದಾನಯ್ಯ ನಿರ್ಮಾಣದಲ್ಲಿ ಕೋಟ್ಯಾನುಕೋಟಿ ವೆಚ್ಚದಲ್ಲಿ ಆರ್‌ಆರ್‌ಆರ್' ರೆಡಿಯಾಗಿದೆ. ದೊಡ್ಡಮಟ್ಟದಲ್ಲಿ ಇಡೀ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಸದ್ಯ, ಪ್ರಮೋಷನ್ ಕೆಲಸದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ನಾಳೆ ಅಂದ್ರೆ ಶುಕ್ರವಾರ ಬೆಳಗ್ಗೆ ಟಿಫನ್ ಮುಗಿಸಿ ಬೆಂಗಳೂರಿನಲ್ಲಿಆರ್‌ಆರ್‌ಆರ್’ ತಂಡ ಪ್ರಮೋಷನ್ ಮಾಡ್ತಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಿನಿಮಾ‌ ಅಂತರಂಗ ಫಿಲ್ಮ್ ಫೆಸ್ಟಿವಲ್- 2021; ಫಿಲ್ಮಾಹಾಲಿಕ್ ಫೌಂಡೇಶನ್ ಪ್ರಸೆಂಟ್ಸ್ !

ಫಿಲ್ಮಾಹಾಲಿಕ್ ಫೌಂಡೇಶನ್ ರವರು ಎರಡನೇ ವರ್ಷದ ಸಿನಿಮಾ ಅಂತರಂಗ (cff2021) ಚಲನಚಿತ್ರೋತ್ಸವವನ್ನು ಡಿಸೆಂಬರ್ 25 ನೇ ತಾ|| ಹಮ್ಮಿಕೊಂಡಿದ್ದಾರೆ.
ಚಿತ್ರೋತ್ಸವಕ್ಕೆ ತಮ್ಮ ಚಿತ್ರಗಳನ್ನು ಸಲ್ಲಿಸಿದ ಚಲನಚಿತ್ರ ತಂಡಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ತೀರ್ಪುಗಾರರು ನಿಮ್ಮ ಸಿನಿಮಾವನ್ನು ಮೆಚ್ಚಿ ಪ್ರಶಂಸೆ ನೀಡಿದ್ದಾರೆ ಹಾಗೂ 16 ಚಲನಚಿತ್ರಗಳನ್ನು ಕೊನೆಯ ಹಂತಕ್ಕೆ ಆಯ್ಕೆ ಮಾಡಿದ್ದಾರೆ.
ಸಿನಿಮಾ ಅಂತರಂಗ ಚಲನ ಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾದ 16 ಚಲನಚಿತ್ರಗಳು ಈ ಕೆಳಕಂಡಂತಿವೆ.


ಈ ಚಿತ್ರೋತ್ಸವಕ್ಕೆ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್, ಭಾರತ ಸಾರಥಿ ಪತ್ರಿಕೆ ಹಾಗೂ ನ್ಯೂಸ್ ಚಾನೆಲ್, ಅಂಜನಾದ್ರಿ ಕೋಪರೇಟಿವ್ ಸೊಸೈಟಿ, ಮಾರುತಿ ಮೆಡಿಕಲ್ಸ್ ಪ್ರಾಯೋಜಕ ರಾಗಿದ್ದಾರೆ. ಮಾಧ್ಯಮ ಮಿತ್ರರಾಗಿ ಐಕಾಚ್ ಮೀಡಿಯಾ, ಚಿತ್ತಾರ, ಸಿನಿ ಲಹರಿ, ಬಿ ಸಿನಿಮಾಸ್, ನಮ್ಮ ಸೂಪರ್ ಸ್ಟಾರ್ಸ್, ಎಂಎಂಎಂ ಮೀಡಿಯಾ, ಸ್ಟಾರ್ ಕನ್ನಡ, ರಿಯಲ್ ಟೈಮ್ಸ್, ಸಿರಿ ಟಿವಿ, ಹೈಬ್ರಿಡ್ ನ್ಯೂಸ್, ಫಿಲ್ಮಗಪ್ಪ, ಮಯೂರಿ ಮೀಡಿಯಾ ಇವರುಗಳು ಇದ್ದಾರೆ.

  1. ದಾರಿ ಯಾವುದಯ್ಯ ವೈಕುಂಟಕೆ
  2. ದೇವರ ಕನಸು – Dream of God
  3. ಕಾನ್ಸಿಕ್ವೆನ್ಸ್ ಕರ್ಮ
  4. ಲಕ್ಕಿ ಲಾಕ್ಡೌನ್
  5. ದ್ವಿಭಾಜಕ
  6. ಸಂಬಾಲ್ – A Musical Invention
  7. ದಿ ಮಿರಾಜ್ ಆಫ್ ಡ್ರ್ಯಾಗನ್ ಫ್ಲೈ
  8. ಕೇರಳ ಪ್ಯಾರಡಿಸೋ
  9. ಮೈ ನೇಮ್ ಇಸ್ ಅನಂಧನ್
  10. ಡ್ರಾಮಾ
  11. ಡ್ಯಾಡ್…ಹೋಲ್ಡ್ ಮೈ ಹ್ಯಾಂಡ್
  12. ಆನ್ ಅ ಕ್ವೆಸ್ಟ್
  13. ದನಗಳು
  14. ಮಂತ್ರಿ ಹ್ಯಾಂಡ್ಸಂ ಸೋಲ್ಸ್
  15. ಕಟ್ಟಿಲ್
  16. ಕವಡೆ ಕಾಸಿನ

Categories
ಸಿನಿ ಸುದ್ದಿ

‘ರಾಕಿಂಗ್ ಜೋಡಿ’ಗೆ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮ-ರಾಧಿಕಾ ಪಂಡಿತ್ ಹೇಳಿದ್ದಿಷ್ಟು !

ಸ್ಯಾಂಡಲ್‌ವುಡ್‌ನ ಮೋಸ್ಟ್ ಬ್ಯೂಟಿಫುಲ್ ಅಂಡ್ ಕ್ಯೂಟೆಸ್ಟ್ ಕಪಲ್ಸ್ ಅಂದ್ರೆ ರಾಕಿಭಾಯ್ ಅಂಡ್ ರಾಧಿಕಾ ಪಂಡಿತ್ ಅನ್ನೋದನ್ನ ಹೊಸದಾಗಿ ಹೇಳಬೇಕಿಲ್ಲ. ರೀಲ್‌ನಲ್ಲಿ ಜೋಡಿಯಾಗಿ ಚಿತ್ರಪ್ರೇಮಿಗಳಿಂದ ಬಹುಪರಾಕ್ ಹಾಕಿಸಿಕೊಂಡ ಯಶ್-ರಾಧಿಕಾ ರಿಯಲ್‌ನಲ್ಲಿ ಜೊತೆಯಾಗಿ ಆದರ್ಶ ದಂಪತಿಗಳಂತೆ ಬದುಕುತ್ತಿರುವುದನ್ನು ಇಡೀ ಕರುನಾಡು ನೋಡ್ತಿದೆ. ಇಂತಿಪ್ಪ ಮಾಧರಿ ಜೋಡಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಪ್ರೀತ್ಸಿ ಮದುವೆಯಾದ ರಾಕಿಂಗ್ ಜೋಡಿ ಇಂದು ಐದನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿನಾ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ. ಮುದ್ದಿನ ಮಗಳು ಐರಾ ಹಾಗೂ ಮುದ್ದಿನ ಮಗ ಯಥರ್ವ್ ಜೊತೆ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸುತ್ತಿದ್ದಾರೆ.

ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ'ಯವ್ರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.ನಂದಗೋಕುಲ’ ಸೀರಿಯಲ್ ಅಂಗಳದಲ್ಲಿ ಶುರುವಾದ ಪ್ರೀತಿಯನ್ನು ಪೋಷಿಸಿ ಬೆಳೆಸಿದ ‘ರಾಕಿಂಗ್ ಕಪಲ್ಸ್',ಗೋವಾದ ಕಡಲ ತೀರದಲ್ಲಿ ರಿಂಗ್ ಎಕ್ಸ್‌ಚೇಂಜ್ ಮಾಡಿಕೊಂಡು ‘ಇನ್ಮೇಲೆ ನೀವು ನಮ್ಮವರು, ನಾವು ನಿಮ್ಮವರು’ ಎಂದು ಸಂಬಂಧ ಗಟ್ಟಿಮಾಡಿಕೊಂಡರು. ಡಿಸೆಂಬರ್- 09- 2016 ರಂದು ಬಾಂದವ್ಯದ ಮುದ್ರೆ ಹೊತ್ತಿದ್ದರು. ಕುಟುಂಬಸ್ಥರು-ಆಪ್ತರು-ಸಿನಿಮಾದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದರು. ಗ್ರ್ಯಾಂಡ್ ರಿಸೆಪ್ಷನ್ ಏರ್ಪಡಿಸಿ ಅಭಿಮಾನಿ ದೇವರುಗಳ ಆಶೀರ್ವಾದ ಪಡೆದರು. ಹೀಗೆ ಭರ್ಜರಿಯಾಗಿ ದಾಂಪತ್ಯದ ಬದುಕಿಗೆ ಕಾಲಿರಿಸಿದ ಯಶ್-ರಾಧಿಕಾ, ನಾಲ್ಕು ವರ್ಷಗಳ ವೈವಾಹಿಕ ಜೀವನವನ್ನು ಸುಂದರವಾಗಿಸಿ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಬ್ಯೂಟಿಫುಲ್ ಕಪಲ್ಸ್ಗೆ ಆರತಿಗೊಬ್ಬಳು ಮಗಳು.. ಕೀರ್ತಿಗೊಬ್ಬ ಮಗನಿದ್ದಾನೆ.

ಮೊಗ್ಗಿನ ಮನಸ್ಸಿನ ಹುಡುಗನನ್ನು ಕೈಹಿಡಿದ ರಾಧಿಕಾ ಇಬ್ಬರು ಮುದ್ದಿನ ಮಕ್ಕಳ ತಾಯಿಯಾಗಿ ‘ರಾಕಿಂಗ್'ಮನೆಯನ್ನು ಬೆಳಗುತ್ತಿದ್ದಾರೆ.ಸಕ್ಸಸ್‌ಫುಲ್ ಹೀರೋಯಿನ್ನಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದ ಸಿಂಡ್ರೆಲಾ ಈಗ ಸಿನಿಮಾರಂಗದಿಂದ ಕೊಂಚ ದೂರ ಉಳಿದು ಗಂಡ-ಮನೆ-ಮಕ್ಕಳು ಅಂತ ಬ್ಯುಸಿಯಾಗಿದ್ದಾರೆ.ಈ ಮಧ್ಯೆ ಐದನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿ ಆಸ್ಟೇಲಿಯನ್ ಮೂಲದ ಲೇಖಕ ಬ್ಯೂ ಟ್ಯಾಪ್ಲಿನ್ ಅವರ ಕೋಟ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಯಾರಾದರೂ ನಿಮ್ಮನ್ನು ನೀವು ಉತ್ತಮಗೊಳ್ಳುವಂತೆ ಮಾಡುವ, ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೋತ್ಸಾಹಿಸುವ ಮತ್ತು ಪ್ರೇರೇಪಿಸುವ, ನೀವು ನಿರ್ಲಕ್ಷ ಮಾಡುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ಹಿಡಿದು ನೂಕುವ, ಯಾವುದೇ ಫಲಾಪೇಕ್ಷೆಯಿಲ್ಲದೇ ನಿಸ್ವಾರ್ಥವಾಗಿ ಅವರ ಸಮಯವನ್ನು ನಿಮಗಾಗಿ ತ್ಯಾಗ ಮಾಡುವವರು ನಿಮ್ಮ ಜೀವನದಲ್ಲಿದ್ದರೆ, ನೀವು ಧೈರ್ಯಶಾಲಿಯಾಗಿರಲು ಮತ್ತು ಸಂತೋಷದಿಂದಿರಲು ಸಹಾಯವಾಗುತ್ತೆ. ಇಂತಹ ಸಂಬಂಧ ಪವಿತ್ರವಾದದ್ದು ಹೀಗಾಗಿ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ’ ಹೀಗೆ ಟ್ವೀಟ್ ಮಾಡಿರುವ ರಾಧಿಕಾ `ಹ್ಯಾಪಿ 5th ಆ್ಯನಿವರ್ಸರಿ ಸ್ವೀಟ್‌ಹಾರ್ಟ್’ ಎಂದಿದ್ದಾರೆ. ಪತ್ನಿಯ ಪ್ರೀತಿಯ ಶುಭಾಷಯಕ್ಕೆ ಯಶ್ ಒಲವಿನ ಉಡುಗೊರೆ ನೀಡರ‍್ತಾರೆ. ಒಟ್ನಲ್ಲಿ, ಮಾಡ್ರನ್ ಲೋಕದಲ್ಲಿ ಮಾಧರಿಯಾಗಿ ಬದುಕುತ್ತಿರುವ ಈ ಜೋಡಿಗೆ ಶುಭವಾಗಲಿ ಎಲ್ಲರ ಶುಭಹಾರೈಕೆ ಇರಲಿ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಹೀರೋ ಆಗಿ ಬಂದರು ಡಾನ್ ಜೈರಾಜ್ ಪುತ್ರ ಅಜಿತ್ ಜೈರಾಜ್- ಡಿಸೆಂಬರ್ ೧೦ ಕ್ಕೆ ತೆರೆ ಮೇಲೆ ರೈಮ್ಸ್

ಆರು ವರ್ಷ ಹತ್ತಾರು ಸಿನಿಮಾ, ಆದರೆ ಇದೇ ಮೊದಲು ನಾನೀಗ ನಿಮ್ಮ‌ಮುಂದೆ ಹೀರೋ….ಪ್ರೇಕ್ಷಕರಲ್ಲಿ ಆಶೀರ್ವಾದ ಬಯಸಿ ಹೀಗೆ ಹೇಳುವಾಗ ಯುವ ನಟ ಅಜಿತ್ ಜೈರಾಜ್ ಕೊಂಚ ಭಾವುಕರಾದರು. ಅದು ಸಹಜವೂ ಹೌದು. ಆರು ವರ್ಷದ ಪಯಣದಲ್ಲಿ ಸಿಹಿಗಿಂತ ಕಹಿ ಅನುಭವವನ್ನೇ ಹೆಚ್ಚು ಹೊತ್ತುಕೊಂಡು ಕೊನೆಗೊ ಒಂದು ಸಾಹಸದೊಂದಿಗೆ ಹೀರೋ ಆದ ಕಷ್ಟ ಸಾಹಸವನ್ನು ನೆನಪಿಸಿಕೊಂಡಾಗ ಎಂತಹವರಿಗೂ ಭಾವುಕತೆ ತುಂಬಿಕೊಳ್ಳುವುದು ಅಷ್ಟೇ ಸಹಜ. ನಟ ಅಜಿತ್ ಜಯರಾಜ್ ಕೂಡ ಪ್ರೇಕ್ಷಕರಾದ ನಿಮ್ಮಗಳ ಆಶೀರ್ವಾದ ಬಯಸಿ, ಭಾವುಕರಾಗಿದ್ದೆಲ್ಲಿ ಅಂತಹದ್ದೇನು ಅಚ್ಚರಿಯೇ ಇಲ್ಲ. ಅಂದ ಹಾಗೆ ಅವರು ಈ ಭಾವುಕ ಮಾತುಗಳೊಂದಿಗೆ ತಮ್ಮ ಸಿನಿ ಪಯಣದ ಹೊಸ ಹಾದಿಯನ್ನು ಬಿಚ್ಚಿಟ್ಟಿದ್ದು ‘ ರೈಮ್ಸ್ ‘ ಚಿತ್ರದ ಕುರಿತು‌.

ಡಾನ್ ಜೈರಾಜ್ ಪುತ್ರ ಅಜಿತ್ ಜೈರಾಜ್ ಅವರು ನಾಯಕನಾಗಿ ಆಭಿನಯಿಸಿರೋ ಚೊಚ್ಚಲ ಚಿತ್ರ ‘ ರೈಮ್ಸ್ ‘ಡಿಸೆಂಬರ್ ೧೦ ಕ್ಕೆ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಸಿಂಗಲ್ ಸ್ಕ್ರೀನ್ ಗೆ ಆದ್ಯತೆ ನೀಡದೆ ಪರಿಸ್ಥಿತಿಗೆ ತಕ್ಕಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ ಈ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಎಲ್ಲವೂ ತಂದುಕೊಂಡಂತೆಯೇ ಆಗಿದ್ದರೆ, ಇಷ್ಟೊತ್ತಿಗೆ ಈ ಚಿತ್ರ ರಿಲೀಸ್ ಆಗಿ ಹಳೇ ಮಾತೇ ಆಗುತ್ತಿತ್ತೆನೋ, ಆದರೆ ಕೊರೋನಾ ಕಾರಣಕ್ಕೆ ಚಿತ್ರ ತಂಡ. ಎರಡು ವರ್ಷಗಳ ನಂತರ ತೆರೆ ಮೇಲೆ ರೈಮ್ಸ್ ಕೇಳಿಸಲು ಸಜ್ಜಾಗಿದೆ. ರಿಲೀಸ್ ಸಿದ್ದತೆ ಜತೆಗೆ ತಮ್ಮ ಸಿನಿಮಾವನ್ನು ಪ್ರೇಕ್ಷಕರು ಯಾಕೆ ನೋಡಬೇಕು ಅಂತ ಹೇಳಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದ ಸಂದರ್ಭ ದಲ್ಲಿ‌ ಜನಾಶಯ ಪ್ರಭಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ನಟ ಅಜಿತ್ ಜಯರಾಜ್ ತಮ್ಮ ಸಿನಿ‌ಬದುಕಿನ‌ ಕಥೆ ಬಿಚ್ಚಿಟ್ಟರು.

‘ ಸರ್ ನಾನೀಗ ಸಿನಿಮಾ ರಂಗಕ್ಕೆ ಬಂದು ಇಲ್ಲಿಗೆ ಆರು ವರ್ಷ. ಒಬ್ಬ ನಟನ ಪಾಲಿಗೆ ಇದು ದೊಡ್ಡ ಹಾದಿ. ಈ‌ಹಾದಿಯಲ್ಲೀಗ ಹತ್ತಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇನೆ. ಅದರೆ ಅವೆಲ್ಲವೂ ಸಣ್ಣ ಸಣ್ಣ ಪಾತ್ರಗಳು. ಅಲ್ಲಿಂದೀಗ ಹೀರೋ ಆಗಿ ಇದೇ ಮೊದಲು ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ‌. ಹೀರೊ ಆಗಿ ಮೊದಲ ಸಿನಿಮಾವಾದರೂ, ಆರು ವರ್ಷಗಳ ನಟನೆಯ ಅನುಭವದ ಮೂಲಕವೇ ರೈಮ್ಸ್ ನಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ನಟನೆ ಹೇಗಿದೆ ಎನ್ನುವುದಕದಕ್ಕಿಂತ ಸಿನಿಮಾದ ಕಥೆ ಇಲ್ಲಿ ಹೀರೋ. ನಾನು ನಾಯಕನಾಗಿ ನಟಿಸಲು ಮನಸು‌ಮಾಡಿದ್ದೇ ಇದೇ ಕಾರಣಕ್ಕೆ. ಕನ್ನಡಕ್ಕೆ ಈ‌ಕಥೆ ತೀರಾ ಹೊಸದು‌ . ನಾರ್ಮಲ್ ಪ್ಯಾಟ್ರನ್ ದಾಟಿ, ಹೊಸ ರೀತಿಯ ಅನುಭವವನ್ನು ಕಟ್ಟಿಕೊಡಲಿದೆ ಈ‌ ಸಿನಿಮಾ.‌ಅದೇ ಕಾರಣಕ್ಕೆ ಈ ಸಿನಿಮಾ ಗೆಲ್ಲುತ್ತೆ ಎನ್ನುವ ದೊಡ್ಡ ವಿಶ್ವಾಸವೂ ನನಗಿದೆ ಎಂದರು ಅಜಿತ್ ಜಯರಾಜ್.

ಅಲ್ಲಿಂದ ಅಜಿತ್ ಅವರ ಮಾತು ಚಿತ್ರದಲ್ಲಿನ ತಮ್ಮ ಪಾತ್ರದ ಕಡೆ ಹೊರಳಿತು.’ ನಾನಿಲ್ಲಿ ಒಬ್ಬ ಇನ್ವೇಸ್ಟಿಗೇಟಿವ್ ಪೊಲೀಸ್ ಆಫೀಸರ್. ಕೊಲೆ ಪ್ರಕರಣಗಳನ್ನು ಭೇದಿಸಲು ಆತ ಮುಂದಾಗುತ್ತಾನೆ. ಇಲ್ಲಿ ತನಿಖೆಯ ರೀತಿಯೇ ವಿಭಿನ್ನವಾಗಿದೆ‌. ನಾರ್ಮಲ್ ರೀತಿಯ ತನಿಖೆಯ ಶೈಲಿಯೇ ಇಲ್ಲಿ ಕಾಣದು. ಕೊಲೆಗಾರನಿಗೂ ಒಂದು ರೈಮ್ಸ್ ಗೂ ಇರುವ ನಂಟಿನ ಮೇಲೆ ಕೊಲೆ ಪ್ರಕರಣಗಳ ಹಿಂದಿನ ವ್ಯಕ್ತಿಯನ್ನು ಹಿಡಿಯಲಾಗುತ್ತದೆ‌ . ಈ ಪಾತ್ರಕ್ಕೆ ನಾನು‌ ಒಪ್ಪಿಕೊಂಡಾಗ ಪೊಲೀಸ್ ಕೆಲಸದಲ್ಲಿರುವ ನನ್ನದೇ ಕೆಲವು ಗೆಳೆಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.‌ಹಾಗೆಯೇ ತನಿಖೆಯ ವಿಧಾನಗಳ ಬಗ್ಗೆ‌ಸ್ಟಡಿಮಾಡಿದ್ದೇನೆ. ಹಾಗೆಯೇ ಒಂದಷ್ಟು ರಿಹರ್ಸಲ್ ಮೂಲಕವೇ ಈ‌ಪಾತ್ರ ನಿಭಾಯಿಸಿರುವೆ. ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ನಂಬಿಕೆ‌ನನಗಿದೆ ಎನ್ನುತ್ತಾರೆ ನಟ ಅಜಿತ್‌ ಜೈರಾಜ್.

ಜ್ಞಾನಶೇಖರ್, ರವಿಕುಮಾರ್ ಹಾಗೂ ರಮೇಶ್ ನಿರ್ಮಾಣದ ಈ ಚಿತ್ರಕ್ಕೆ ಯುವ ಪ್ರತಿಭೆ ಅಜಿತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಶುಂಭ ಪುಂಜಾ, ಸುಷ್ಮಾ ನಾಯರ್ ಇಲ್ಲಿ ನಾಯಕಿಯರು‌. ಹಾಗೆಯೇ ಹೊಸಬರ ದೊಡ್ಡ ತಂಡವೇ ಈ ಸಿನಿಮಾ ದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ‌. ಕ್ರೈಮ್ ಥ್ರಿಲ್ಲರ್ ಕಥಾ ಹಂದರದ ಈ ಚಿತ್ರವು ಈಗಾಗಲೇ ಟೀಸರ್, ಟ್ರೇಲರ್ ಹಾಗೂ ವಿಭಿನ್ನ ಶೈಲಿಯ ಪೋಸ್ಟರ್‌ಮೂಲಕವೂ ಕುತೂಹಲಮೂಡಿಸಿದೆ. ಇನ್ನೊಂದು ವಿಶೇಷ ಅಂದ್ರೆ ಕನ್ನಡದಲ್ಲಿ ಯೇ ಇದೇ ಮೊದಲು ಟ್ರೇಲರ್ ಅನ್ನು ತ್ರಿ ಡಿ ಮೂಲಕಲಾಂಚ್ ಮಾಡಿದೆ. ಹೊಸಬರ ಈ ಪ್ರಯತ್ನ ಫಲಿಸಬೇಕಾದರೆ ಪ್ರೇಕ್ಷಕರ ಬೆಂಬಲ ಅಗತ್ಯವೇ ಹೌದು.

Categories
ಸಿನಿ ಸುದ್ದಿ

ನಾಡಿನ ಹೆಸರಾಂತ ಪತ್ರಿಕೆಯೊಂದರಲ್ಲಿ ಕ್ರೈಮ್ ರಿಪೋರ್ಟರ್ ಅಗಿ ಕೆಲಸಕ್ಕೆ ಸೇರಿದ ನಟಿ ಶುಭ ಪುಂಜಾ !

ಕನ್ನಡದ ಗ್ಲಾಮರಸ್ ನಟಿ ಶುಭ ಪೂಂಜಾ ಬಿಗ್ ಬಾಸ್ ಗೆ ಹೋಗಿ ಬಂದ ನಂತರ ಹೆಚ್ಚು ಕಡಿಮೆ ಮದುವೆ ಬ್ಯುಸಿ ಯಲ್ಲಿರುವುದು ನಿಮಗೆ ತಿಳಿದಿದ್ದೇ. ಯಾಕಂದ್ರೆ ಅವರು ಈ ಮಾತನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಹೇಳಿಕೊಂಡಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಹೋದ ಮೇಲೆ ನಿಮಗಿರುವ ಮೊದಲ ಕೆಲಸ ಏನು ಅಂದಾಗ ಮದುವೆ ಅಂತ ಹೇಳಿದ್ದರು‌ ‌. ಹಾಗಾದ್ರೆ ಅವರು ಅಲ್ಲಿ ಹೇಳಿದಂತೆ ಮದುವೆ ಆದ್ರಾ?

ಸದ್ಯಕ್ಕೆ ಇಲ್ಲ, ಆದರೆ ಇಷ್ಟರಲ್ಲಿಯೇ ಅವರು ಗೆಳೆಯ ಸುಮಂತ್ ಕೈ ಹಿಡಿಯುವುದು ಗ್ಯಾರಂಟಿ‌ ಆಗಿದೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದ ತಕ್ಷಣವೇ ಈ ಜೋಡಿ ಗೋವಾ ಟ್ರಿಪ್ ಮುಗಿಸಿಕೊಂಡು‌ಬಂದಿದೆ. ಈಗ ಮದುವೆ ಸಿದ್ದತೆ ನಡೆದಿದೆ. ಹೊಸ ವರ್ಷದಲ್ಲಿಯೇ ಮದುವೆ ಎನ್ನುವ ಸುದ್ದಿಯೂ ಇದೆ.ಈ ನಡುವೆಯೇ ಅವರೀಗ ಮೂರ್ನಾಲ್ಕು‌ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ‌. ಶ್ರೀನಿ ನಿರ್ದೇಶನದ’ ಅಂಬುಜ’ ಚಿತ್ರದ ಚಿತ್ರೀಕರಣ ಶುರುವಾಗಿದೆ. ಅದರ ಜತೆಗೆಯೇ ‘ಬೀರ’ ಸೇರಿದಂತೆ ಇನ್ನೆರೆಡು ಪ್ರಾಜೆಕ್ಟ್ ಗು ಸಹಿ ಹಾಕಿದ್ದಾರಂತೆ. ಅದರ ಜತೆಗೆಯೇ ಈಗ ನಾಡಿನ ಹೆಸರಾಂತ ಪತ್ರಿಕೆಯೊಂದರಲ್ಲಿ ಕ್ರೈಮ್ ರಿಪೊರ್ಟರ್ ಆಗಿ ಕೆಲಸಕ್ಕೂ ಸೇರಿಕೊಂಡಿದ್ದಾರೆ.

ಅರೆ, ಎಲ್ಲಾ ಬಿಟ್ಟು ಇದ್ಯಾಕೆ ರಿಪೊರ್ಟರ್ ಕೆಲಸಕ್ಕೆ ಸೇರಿದರು ಅಂತ ನಿಮಗು ಅಚ್ಚರಿ ಆಗಬಹುದು. ಆದರೆ ಇದು ರಿಯಲ್ ಅಲ್ಲ, ರೀಲ್ ಕಥೆ‌. ಅಂದ ಹಾಗೆ, ನಟಿ ಶುಭಾ ಪೂಂಜಾ ಕ್ರೈಮ್ ರಿಪೊರ್ಟರ್ ಆಗಿರೋದು ರೈಮ್ಸ್ ಹೆಸರಿನ ಚಿತ್ರದಲ್ಲಿ‌ . ಇದು ಯುವ ಪ್ರತಿಭೆ ಅಜಿತ್ ಕುಮಾರ್ ನಿರ್ದೇಶನದ ಚಿತ್ರ. ಡಾನ್ ಜೈರಾಜ್ ಪುತ್ರ ಅಜಿತ್ ಜೈರಾಜ್ ಇದರ ಹೀರೋ. ಡಿಸೆಂಬರ್.10ರಂದು ಸಿನಿಮಾ ತೆರೆಗೆ ಬರಲಿದೆ. ಪ್ರಚಾರದ ಭಾಗವಾಗಿ ಮೊನ್ನೆಯಷ್ಟೇ ಈ ಚಿತ್ರದ ಟ್ರೇಲರ್ ಲಾಂಚ್ ಆಯಿತು. ಅಲ್ಲಿ ಮಾತಿಗೆ ಸಿಕ್ಕ ನಟಿ ಶುಭಾ ಪೂಂಜಾ ತಾವು ಕ್ರೈಮ್ ರಿಪೊರ್ಟರ್ ಆದ ಕಥೆ ಬಿಚ್ಚಿಟ್ಟರು‌.

‘ಈ ಸಿನಿಮಾದಲ್ಲಿ ನನ್ನದು ಜರ್ನಲಿಸ್ಟ್ ಪಾತ್ರ. ಅದನ್ನು ನೀವು ಮಾಡಬೇಕು, ಅದಕ್ಕಾಗಿ ತಯಾರಿ ಮಾಡಿಕೊಳ್ಳಿ ಎಂದು ನಿರ್ದೇಶಕರು ಹೇಳಿದರು. ಆದರೆ, ನನಗೆ ತುಂಬ ಜನ ಜರ್ನಲಿಸ್ಟ್ ಫ್ರೆಂಡ್ಸ್ ಇದ್ದಾರೆ. ಹಾಗಾಗಿ, ಪತ್ರಕರ್ತೆ ಪಾತ್ರಕ್ಕೆ ಬೇಕಾದ ಬೇಸಿಕ್ ತಯಾರಿಗಳು ನನಗೆ ಗೊತ್ತಿದೆ. ಆದರೆ ಶೂಟಿಂಗ್ ಮಾಡುವಾಗ ಸ್ವಲ್ಪ ಕಷ್ಟ ಆಯ್ತು. ಕೀಬೊರ್ಡ್‌ ಮೇಲೆ ಟೈಪ್ ಮಾಡಲು ಗೊತ್ತಾಗುತ್ತಿರಲಿಲ್ಲ. ಅಲ್ಲದೇ ಪತ್ರಕರ್ತೆಯಾಗಿ ಸೀರಿಯಸ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಅದು ಸ್ವಲ್ಪ ಕಷ್ಟ ಎನಿಸಿತು. ನನಗೆ ಎಲ್ಲಿಯೂ ನಗುವುದಕ್ಕೆ ಬಿಟ್ಟಿಲ್ಲ ‘ ಎನ್ನುತ್ತಾ ಅಲ್ಲಿ ನಗದೆ ಇದಿದ್ದನ್ನು ಪತ್ರಕರ್ತರ ಮುಂದೆ ಮನಸು ಬಿಚ್ಚಿ ನಕ್ಕರು.

ಇನ್ನು ನಟಿ ಶುಭಾ ಅವರಿಗೆ ‘ರೈಮ್ಸ್’ ಚಿತ್ರದ ಅವಕಾಶ ಸಿಕ್ಕಿದ್ದು ಚಿತ್ರದ ನಾಯಕ ನಟ ಅಜಿತ್ ಜೈರಾಜ್ ಮೂಲಕವಂತೆ. ‘ ರೈಮ್ಸ್ ಒಂದು ವಿಶಿಷ್ಟವಾದ ಚಿತ್ರ‌‌ . ನನ್ನ ಕೆರಿಯರ್ ನಲ್ಲಿ ಕ್ರೈಮ್ ರಿಪೊರ್ಟರ್ ಪಾತ್ರವನ್ನೇ ಮಾಡಿರಲಿಲ್ಲ‌. ಫಸ್ಟ್ ಇಂತಹ ಪಾತ್ರಕ್ಕೆ ಬಣ್ಣ ಹಚ್ವಿದ್ದೇನೆ.ಹಾಗೆ ಯೇ‌ ಇದೊಂದು ವಿಭಿನ್ನವಾದ ಕಥಾ ಹಂದರದ ಚಿತ್ರ‌. ಕ್ರೈಮ್ ಥ್ರಿಲ್ಲರ್ ಕಥೆ. ನಿರ್ದೇಶಕರು ತುಂಬಾ ಅದ್ಬುತವಾಗಿಯೇ ತೆರೆಗೆ ತಂದಿದ್ದಾರೆ.ನಂಗೂ ಈ ಸಿನಿಮಾ ದೊಡ್ಡ ಕುತೂಹಲಹುಟ್ಟಿಸಿದೆ. ಜನರಿಗೆ ಇದು ಖಂಡಿತಾ ಇಷ್ಟವಾಗುತ್ತೆ’ ಎನ್ನುವ ವಿಶ್ವಾಸದ ಮಾತು ಶುಭಾ ಪೂಂಜಾ‌ ಅವರದು.

ರಿಯಲ್ ಐ ಆಮ್ ಎಂಜಾಯ್ಡ್. ಹಾಗೆಯೇ ಅಲ್ಲಿ ಅನೇಕ ಕಾರಣಕ್ಕೆ ಭಾವುಕಳಾಗಿದ್ದೇನೆ. ಹಾಗೆಯೇ ಆ ಮನೆ ಅನೇಕ ಬಗೆಯ ಪಾಠ ಕಲಿಸಿದೆ‌. ನಾನು ಹೊರಗಡೆ ಇದ್ದಾಗ ಬಿಗ್ ಬಾಸ್ ಬಗ್ಗೆ ಅಂದುಕೊಂಡಿದ್ದಕ್ಕೂ, ಅಲ್ಲಿಗೆ ನಾನು ಕಂಟೆಸ್ಟೆಡ್ ಆಗಿ ಹೋದ ಮೇಲೆ ಆದ ಅನುಭಕ್ಕೂ ಅಜಗಜಾಂತರ ವ್ಯತ್ಯಾಸ. ಹೀಗೆಲ್ಲ ಇರುತ್ತಾ ಅನಿಸಿತು. ಒಳ್ಳೆಯ ಸ್ನೇಹಿತರು ಸಿಕ್ಕರು. ಕೆಲವರ ಅವಗುಣಗಳು ಅನಾವರಣವಾದವು. ಎಲ್ಲಕ್ಕಿಂತ ಮುಖ್ಯವಾಗಿ ನಾನೇನು ಅಂತ ರಾಜ್ಯದ ಜನತೆಗೆ ತೋರಿಸಿಕೊಳ್ಳುವುದಕ್ಕೂ ಸಾಧ್ಯವಾಯಿತು. ಇದೆಲ್ಲ ನಾನು ಅಲ್ಲಿಗೆ ಹೊಗಿಲ್ಲದಿದ್ದರೆ ಆಗುತ್ತಿರಲಿಲ್ಲ. ಅದರ ಜತೆಗೆ ನಾನೊಬ್ಬ ನಟಿಯಾಗಿ ಪಡೆದುಕೊಂಡಿದ್ದ ಪ್ಯಾನ್ಸ್ ಫಾಲೋವರ್ಸ್ ಸಂಖ್ಯೆ ಕೂಡ ಅಧಿಕವಾಗಿದೆ. ಅದು‌ಮೂರು ಪಟ್ಟು ಜಾಸ್ತಿ ಅಂದ್ರೆ ನೀವು ನಂಬಲೇಬೇಕು. ಇದೆಲ್ಲ ಅಲ್ಲಿಗೆ ಹೋಗಿದ್ದರಿಂದಲೆ ಅಲ್ಲವೇ?

ಬಿಗ್ ಬಾಸ್ ಮನೆ ಪಕ್ಕಾ ಸುಸಜ್ಜಿತ ಎನ್ನುವುದರ ಜತೆಗೆ ಶುದ್ದತೆಗೆ ಇನ್ನೊಂದು ಮಾದರಿ. ಪ್ರತಿದಿನವೂ ಅಲ್ಲಿ ಸ್ಯಾನಿಟೈಸ್ಡ್ ಮಾಡಲಾಗುತ್ತಿತ್ತು. ಹಾಗೆಯೇ‌ ನಮ್ಮಗಳ ಆರೋಗ್ಯಕ್ಕಾಗಿಯೇ ಅಲ್ಲಿ ಡಾಕ್ಟರ್‌ ಇದ್ದರು. ಆದರೆ‌, ನಾವೆಲ್ಲ ಮಂಗನಿಂದ ಮಾನವರಾದವರಲ್ವಾ? ಸುಮ್ಮನೆ ಕೂರುವ ಅಭ್ಯಾಸವೇ ಇರುತ್ತಿರಲಿಲ್ಲ‌ . ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದು ಒಂದಷ್ಟು ಬೇಸರ ತರಿಸಿತ್ತು. ಹಾಗಾಗಿ‌ಒಂದಿ‌ ನ ಕುತೂಹಲಕ್ಕೆ, ಕಾತರಕ್ಕೆ ಹೊರಗಡೆ ನೋಡ್ಬೇಕು ಅಂತ ಕಾಂಪೌಂಡ್ ಗೋಡೆ ಹತ್ತಿ ನೋಡಿದ್ದೆವು. ಅಲ್ಲಿ ಒಂದು ಅಂಬೂಲೆನ್ಸ್ ಇತ್ತು. ಜತೆಗೆ ಡಾಕ್ಟರ್‌ ಕೂಡ ಇದ್ದರು.

Categories
ಸಿನಿ ಸುದ್ದಿ

ಸೀತಮ್ಮನ ಮಗನಿಗೆ ಕಲಾವಿದ;ಯತಿರಾಜ್ ಆಕ್ಷನ್ ಕಟ್ !

ಕಲಾವಿದ ,ಪತ್ರಕರ್ತ ಯತಿರಾಜ್ ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದಾರೆ. ‘ಪೂರ್ಣ ಸತ್ಯ’ ಚಿತ್ರದ ನಂತರ ಅವರೀಗ ಸೀತಮ್ಮನ ಮಗ ಹೆಸರಿ‌ನ ಮತ್ತೊಂದು ಚಿತ್ರಕ್ಕೆ ಡೈರೆಕ್ಟರ್ ಹ್ಯಾಟ್ ತೊಟ್ಟು ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಸೋನು ಫಿಲಂಸ್ ಲಾಂಚನದಲ್ಲಿ ಮಂಜುನಾಥ್ ನಾಯಕ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಚರಣ್, ಕಸಾಲ, ಸೋನು ಸಾಗರ್, ಬುಲೆಟ್ ರಾಜು ಕಲಾವಿದರಾಗಿ ಆಯ್ಕೆ ಆಗಿದ್ದಾರೆ. ಚಿತ್ರ ದ ಕುರಿತು ಮಾಹಿತಿಯನ್ನು ಚಿತ್ರ ತಂಡ ಬುಧವಾರ ರಿವೀಲ್ ಮಾಡಲಿದೆ. ಹಾಗೆಯೇ ಅದರ ಚಿತ್ರೀಕರಣ, ಸಂಗೀತ ಇತ್ಯಾದಿ ಮಾಹಿತಿಯೂ ನಾಳೆ ಹೊರ ಬೀಳಲಿದೆ‌ . ಉಳಿದಂತೆ ಇಲ್ಲಿ ಕಲಾವಿದ ಯತಿರಾಜ್ ಅವರ ಮತ್ತೊಂದು ಪ್ರಯತ್ನವೇ ವಿಶೇಷ‌.

ಇದು ಅವಕಾಶ ಗಿಟ್ಟಿಸಿಕೊಂಡರು ಅಥವಾ ಸಿಕ್ಕಿದೆ ಎನ್ನುವುದಕ್ಕಿಂತ ಅವರ ಕಲಾಸೇವೆಯ ಪ್ರತಿಫಲವೇ ಹೌದು. ಯಾಕಂದ್ರೆ ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಯತಿರಾಜ್, ನಟನೆಯ ಮೇಲಿನ ಆಸಕ್ತಿಯಿಂದಲೇ ಕಲಾವಿದನಾಗಿ‌ ಗುರುತಿಸಿಕೊಂಡವರು. ಅದಕ್ಕಾಗಿಯೇ ನಟ ಕಿಚ್ವ ಸುದೀಪ್ ಬಳಗವನ್ನು ಸೇರಿ, ಅವರೊಂದಿಗೆ ತೆರೆ‌ಮೇಲೆ ಕಾಣಿಸಿಕೊಂಡರು. ಮುಂದೆ ಅವರಿಗೆ ಅವಕಾಶಗಳೂ ಬಂದವು. ಅದೇ ಕಾರಣಕ್ಕೆ ಪತ್ರಕರ್ತ ವೃತ್ತಿಯ ಜತೆಗೆ ನಟನೆಗೂ ಹೆಚ್ಚು ಆದ್ಯತೆ ನೀಡಿದವರು ಈಗ ಪೂರ್ಣವದಿಯ ನಟ, ನಿರ್ದೇಶಕ ಹಾಗೂ ಬರಹಗಾರ.

ಇದುವರೆಗಿನ ಅವರ ಸಿನ ಪಯಣದಲ್ಲಿ ೧೬೫ಕ್ಕೂ ಹೆಚ್ಚು ಚಿತ್ರಗಳಿಗೆ ನಟನಾಗಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಜತೆಗೆ ತಮಿಳಿ ಚಿತ್ರ ರಂಗದಲ್ಲೂ ನಟನಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಸ್ಟಾರ್ ಸಿನಿಮಾಗಳಲ್ಲಿ ಸಹ ನಟನಾಗಿ ಅಭಿನಯಸಿ, ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ಫೇರ್ ಅಂಡ್ ಲವ್ಲಿ , ಪೂರ್ಣ ಸತ್ಯ ಹಾಗೂ ಈಗ ಸೀತಮ್ಮನ ಮಗ ಚಿತ್ರವೂ ಸೇರಿ‌ಮೂರು ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ಈ ಪೈಕಿ ಈಗ ಅವರದ್ದೇ ನಿರ್ದೇಶನ ಎರಡನೇ‌ಸಿನಿಮಾ ‘ಸೀತಮ್ಮನ ಮಗ’

‘ ವೃತ್ತಿಯಲ್ಲಿ ಪತ್ರಕರ್ತನಾಗಿದ್ದ ನನಗೆ ಕಥೆಗಳ ಬರವಣಿಗೆ ಅನ್ನೋದು ಒಂದು ಹುಚ್ಚು. ಸದಾ ಒಂದಲ್ಲೊಂದು ಬಗೆಯ ಸಿನಿಮಾ ಕಥೆ ತಲೆಗೆ ಹೊಳೆದಾಗ ಅದನ್ನು ಬರೆಯುವುದು ತೀಡುವುದು ಸಹಜವೇ ಆಗಿತ್ತು. ಅದೇ ಹಾದಿಯಲ್ಲಿ ನಾನು ಸಿದ್ದ ಪಡಿಸಿದ ಕಥೆಗಳ ಪೈಕಿ ಮೊದಲು ಫೇರ್ ಅಂಡ್ ಲವ್ಲಿ ಸಿನಿಮಾವಾಯಿತು. ಅದಕ್ಕೆ ಬೇರೆಯವರು ನಿರ್ದೇಶನ‌ಮಾಡಿದರು‌ .‌

ಕೊನೆಗೆ ನನಗೆ ತೀವ್ರವಾಗಿ ಅನಿಸಿದ್ದು ನನ್ನದೇ ಕಥೆಗೆ ನಾನೇ ನಿರ್ದೆಶನ ಮಾಡಿದರೆ ಹೇಗಿರುತ್ತೆ ಅಂತ‌ . ಅದೇ ಹಾದಿಯಲ್ಲಿ’ ಪೂರ್ಣ ಸತ್ಯ’ ಸಿನಿಮಾ ಮಾಡಿದೆ‌. ಈಗ ಸೀತಮ್ಮನ ಮಗ. ಇದೆಲ್ಲ ಕಷವೃತ್ತಿಯಲ್ಲಿಆದರೆ,ಒಬ್ಬ ಸಹ ನಟನಾದವನಿಗೆ ಹೀರೋ ಆಗುವ ಕನಸು, ಹೀರೋ ಸಿನಿಮಾ ನಿರ್ಮಾಣ ಮಾಡುವ ಕನಸು ಎಷ್ಟು ಸಹಜವೋ ಹಾಗೆಯೇ ಸಿನಿಮಾ ಕಥೆ ಬರೆಯುವವನಿಗೆ ನಿರ್ದೇಶಕನಾಗುವ ಹಂಬಲವೂ ಸಹಜ. ಅದೇ ಹಾದಿಯಲ್ಲೀಗ ಸೀತಮ್ಮನ ಮಗ’ ಎನ್ನುತ್ತಾರೆ ಯತಿರಾಜ್.

error: Content is protected !!