ಈತ ಪೈಸಾ ವಸೂಲ್ ಗೋವಿಂದ…!

ಚಿತ್ರ ವಿಮರ್ಶೆ- ಗೋವಿಂದ ಗೋವಿಂದ
ನಿರ್ದೇಶಕ – ತಿಲಕ್
ತಾರಾಗಣ – ಸುಮನ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್, ಕವಿತಾ ಗೌಡ,ಮಜಾ‌ಟಾಕೀಶ್ ಪವನ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್
ಇತರರು

  • ದೇಶಾದ್ರಿ ಹೊಸ್ಮನೆ

ಸಿನಿಮಾ ನಿರ್ದೇಶಕನಾಗಲೇಬೇಕೆಂದು ಹೊರಟ ಕನಸು ಕಂಗಳ ಹುಡುಗ, ತಾಯಿಯಲ್ಲದೆ ತನ್ನನ್ನೇ ಅವಲಂಭಿಸಿರುವ ಮಗಳು ತನ್ನಿ ಚ್ಚೆಯಂತೆಯೇ ಇರಬೇಕೆಂದು‌ ಬಯಸುವ ಅಪ್ಪ, ಭರತ ನಾಟ್ಯ ದ ಮೇಲೆ ಬೆಟ್ಟದಷ್ಟು ಕನಸು‌ ಕಟ್ಟಿಕೊಂಡ ನಾಯಕಿ, ಆಕೆಯ‌ ಕನಸುಗಳ ಸಾಕಾರಕ್ಕೆ ನೆರವಾಗಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಮೂವರು ಗೆಳೆಯರು ಅವರ ಜತೆಗೆ ಮೂಡನಂಬಿಕೆಯ‌ ಮೇಲೆ ನಾಯಕಿಯನ್ನೇ ಕಿಡ್ನಾಪ್ ಮಾಡುವ ಕಿರಾತಕರ ಸುತ್ತಣದ ಸಂಕಟ, ಸಾಹಸ, ದುಸ್ಸಾಹದ ಸಮಿಶ್ರಣಗಳ ಹೂರಣದೊಂದಿಗೆ ನೋಡುಗರನ್ನು ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ತಕ್ಕಮಟ್ಟಿಗೆ ರಂಜಿಸಬಹುದಾದ ಸಿನಿಮಾ ಗೋವಿಂದ ಗೋವಿಂದ.

ನವ ಪ್ರತಿಭೆ ತಿಲಕ್ ನಿರ್ದೇಶನದ ಈ ಸಿನಿಮಾವು ಕಾಮಿಡಿ, ಥ್ರಿಲ್ಲರ್, ಎಮೋಷನಲ್ ಜಾನರ್ ಗೆ ಸೇರಿದ್ದು‌. ಇಷ್ಟಾಗಿಯೂ ಚಿತ್ರ ರಸಿಕರು ಬಯಸುವ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡ ಒಂದು ಸಿದ್ದ ಸೂತ್ರದ ಸಿನಿಮಾವೂ ಹೌದು. ಸಿನಿಮಾ ನಿರ್ದೇಶಕನಾಗಬೇಕೆಂದು ಹೊರಟ ಒಬ್ಬ ಯುವಕನ ಕಲ್ಪನೆಯೊಳಗೆ ಇನ್ನೊಂದು ಕಥೆಯನ್ನು ಪ್ರೇಕ್ಷಕರ ಮುಂದೆ ತಂದಿಡುವ ನಿರ್ದೇಶಕರು ಅಲ್ಲಿ ನ ಕಥೆ ಹಲವು ಕುತೂಹಲದ ಉಪ ಕಥೆಗಳನ್ನು ಬಿಡಿ ಬಿಡಿಯಾಗಿ ಬಿಚ್ಚಿಡುವ ಮೂಲಕ ಪ್ರೇಕ್ಷಕರ ನ್ನು ಕುರ್ಚಿಯ ತುದಿ ಮೇಲೆ ಕೂರಿಸುವ ಪ್ರಯತ್ನ ಮಾಡಿದ್ದೇ ಇಲ್ಲಿ ಜಾಣತನ ಅಂತಲೇ ಹೇಳಬಹುದು. ಅದರಾಚೆ ಹೊಸತನವಿಲ್ಲದ, ಒಂದು ಸಿದ್ದ ಸೂತ್ರದ ಸರಳ ಕಥೆ ಎನ್ನುವುದಷ್ಟೇ ಇದರ ವೀಕ್ನೇಸ್.

ಮೊದ ಮೊದಲು ಕಾಮಿಡಿ ಈ ಸಿನಿಮಾದ ಪ್ರಧಾನ ಅಂಶದಂತೆ ಕಂಡರೂ, ನೋಡುಗನ ಮನಸ್ಸಿಗೆ ತಟ್ಟುವಂತಹ ಎಮೋಷನಲ್ ಎಳೆಗಳ ಮೂಲಕ ಗಾಢವಾಗಿ ತಟ್ಟುತ್ತದೆ. ಆರಂಭದ ಅರ್ಧ ಗಂಟೆ ಸಿನಿಮಾ ಮನಸು ಚಂಚಲಗೊಳ್ಳುವಂತೆ ಮಾಡಿದರು, ಕಥೆ ವಿಜಯಪುರದಿಂದ ಬೆಂಗಳೂರು ಕಡೆ ಮುಖ‌ ಮಾಡುವ ಮೂಲಕ ರೋಚಕತೆ ಹುಟ್ಟಿಸುತ್ತದೆ. ಒಂದು ರಿಮೇಕ್ ಸಿನಿಮಾದ ಬಗ್ಗೆ ಪ್ರೇಕ್ಷಕನಲ್ಲಿ ಹುಟ್ಟುವ ಕಲ್ಪನೆಯೇ ಬೇರೆ. ಮೂಲ‌ ಸಿನಿಮಾಕ್ಕಿಂತ ಅದು ಇನ್ನಷ್ಟು ವಿಶೇಷ ಎನಿಸಿದಾಗಲೇ ಪ್ರೇಕ್ಷಕನಿಗೂ ಇಷ್ಟ. ಹಾಗಿಲ್ಲದೆ ಅದು ಯಥಾವತ್ತಾಗಿ ಕಾಣಿಸಿಕೊಂಡರೆ, ಪ್ರೇಕ್ಷಕ ಯಾಕೆ ದುಡ್ಡು ಕೊಟ್ಟು ಆ ಸಿನಿಮಾ ನೋಡ್ಬೇಕು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತೆ. ಗೋವಿಂದ ಗೋವಿಂದ ಕೂಡ ಒಂದು ರಿಮೇಕ್ ಸಿನಿಮಾ ಅಂದು ಕೊಂಡವರು ಕೂಡ ಒಂದ್ಸಲ ಈ ಸಿನಿಮಾ ನೋಡಿದರೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಆ ಮಟ್ಟಿಗೆ ಇದೊಂದು ಪೈಸಾ ವಸೂಲ್ ಸಿನಿಮಾ.

ಸುಮಂತ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್, ಕವಿತಾ ಗೌಡ, ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ಕೆ.ಮಂಜು, ಕಡ್ಡಿಪುಡಿ ಚಂದ್ರು ಸೇರಿದಂತೆ ದೊಡ್ಡ ತಾರಗಣವೇ ಈ ತೆರೆ ಮೇಲಿದೆ. ಹಾಗಂತ ಯಾವ ಪಾತ್ರವೂ ಅಷ್ಟಕಷ್ಟೆ ಎಂದೇನು ಜರಿಯುವಂತಿಲ್ಲ. ಅಷ್ಟು ಪಾತ್ರಗಳಿಗೂ ಅದರದ್ದೇ ಮಹತ್ವ ಸಿಕ್ಕಿದೆ. ಇದಕ್ಕೆ ಪ್ಲಸ್ ಆಗಿದ್ದು ಕಥೆ ನಿರೂಪಣೆ. ಒಂದು ಮರ, ಅದಕ್ಕೆ ಹಲವು ರೆಂಬೆ ಕೊಂಬೆ ‌ಎನ್ನುವಂತೆ, ಇಲ್ಲಿ ಒಂದು ಕಥೆ, ಅದರೊಳಗೊಂದು ಉಪಕಥೆ, ಆ ಉಪಕಥೆಗೆ ಇನ್ನಷ್ಟು ಕಿರು ಕಥೆಗಳ ರೆಂಬೆ ಕೊಂಬೆಗಳಿದ್ದರೂ, ಕ್ಲೈಮ್ಯಾಕ್ಸ್ ನಲ್ಲಿ ಅವೆಲ್ಲವೂ ಒಂದು ಕೋನದಲ್ಲಿ ಬಂದು ಸೇರುವ ರೀತಿಯೇ ವಿಶೇಷ.

ತೆರೆ ಮೇಲೆ ಇದುವರೆಗೂ ಲವರ್ ಬಾಯ್ ಆಗಿ, ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ‌ಯುವನಟ ಸುಮನ್ ಶೈಲೆಂದ್ರ ಇದೇ ಮೊದಲು ಒಂದು ಕಾಮಿಡಿ ಹೀರೋ ಆಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲ, ಕಾಲೇಜು ವಿದ್ಯಾರ್ಥಿ ಯಾಗಿ ಪ್ರೇಕ್ಷಕರನ್ನು ರಂಜಿಸುವುದು ಕೂಡ ವಿಶೇಷ. ಅವರಿಗೆ ಇಲ್ಲಿ ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರ್ ಸಖತ್ ಸಾಥ್ ನೀಡಿದ್ದಾರೆ. ಅವರಿಬ್ಬರ ಉತ್ತರ ಕರ್ನಾಟಕದ ಜವಾರಿ ಭಾಷೆಯ ಕಾಮಿಡಿ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಖ್ಯಾತಿಯ ಚಿನ್ನು ಅಲಿಯಾಸ್ ಕವಿತಾ ಗೌಡ ಇಲ್ಲಿ ಸಿನಿಮಾ ಒಳಗೆಯೇ ಬರುವ ಸಿನಿಮಾ ಕಥೆಯ ನಾಯಕಿ. ಸಿಕ್ಕ ಅವಕಾಶವನ್ನು ಸಮರ್ಥ ವಾಗಿ ಯೇ ಬಳಸಿಕೊಂಡಿ, ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಹಾಗೆ ನೋಡಿದರೆ ಸಿನಿಮಾ ಮುಖ್ಯ ಆಕರ್ಷಣೆ ನಟಿ‌ ಭಾವನಾ ಮನೆನ್ ಹಾಗೂ ಯುವ ನಟ ರೂಪೇಶ್ ಶೆಟ್ಟಿ. ಯಾಕಂದ್ರೆ ಕಥೆ ರಿವೀಲ್ ಆಗೋದೆ ಇವರಿಬ್ಬರ ಮುಖಾ ಮುಖಿಯೊಂದಿಗೆ.‌ ಮೇಕಿಂಗ್ ಅಂತ ಬಂದಾಗ ಕಥೆಯ ಅಗತ್ಯತೆಯನ್ನು ಪ್ರಾಮಾಣಿಕವಾಗಿ ಪೂರೈಸಿದ್ದಾರೆ ನಿರ್ಮಾಪಕರು. ಅದು ಅವರ ಅನುಭವದ ಜಾಣತನ. ಹಾಗೆಯೇ ಛಾಯಾಗ್ರಹಣ, ಸಂಗೀತ ಸೇರಿದಂತೆ ಸಿನಿಮಾ ಉಳಿದ ಕೆಲಸಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಮನರಂಜನೆ ನಗಬೇಕು, ಒಂದಷ್ಟು ಹಗುರಾಗಬೇಕು ಅಂತೆಲ್ಲ ಬಯಸುವರಿಗೆ ಇದು ಹೇಳಿ‌ಮಾಡಿಸಿದ ಸಿನಿಮಾ‌ .

Related Posts

error: Content is protected !!