Categories
ಸಿನಿ ಸುದ್ದಿ

ನಿಖಿಲ್ ಕುಮಾರ್ ‘ರೈಡರ್‌’ನಲ್ಲಿ ಕೆಜಿಎಫ್ ಖ್ಯಾತಿಯ ಗರುಡ ರಾಮ್‌!

‘ಕೆಜಿಎಫ್‌’ ಸಿನಿಮಾದಲ್ಲಿ ‘ಗರುಡ’ನಾಗಿ ಅಬ್ಬರಿಸಿದ್ದ ರಾಮಚಂದ್ರ ರಾಜು (ಗರುಡ ರಾಮ್‌) ಈಗ ‘ರೈಡರ್‌’ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯ್‌ಕುಮಾರ್ ಕೊಂಡ ನಿರ್ದೇಶನದ ಈ ಆಕ್ಷನ್ – ಡ್ರಾಮಾ ಚಿತ್ರದಲ್ಲಿ ನಿಖಿಲ್‌ ಮತ್ತು ಕಶ್ಮೀರಾ ಪರ್ದೇಸಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ‘ಕೆಜಿಎಫ್‌’ ಚಿತ್ರದ ದೊಡ್ಡ ಯಶಸ್ಸಿನಿಂದಾಗಿ ಗರುಡ ರಾಮ್‌ ದಕ್ಷಿಣ ಭಾರತ ಸಿನಿಮಾರಂಗ ಮಾತ್ರವಲ್ಲದೆ ಬಾಲಿವುಡ್‌ಗೂ ಪರಿಚಿತರಾಗಿದ್ದಾರೆ.


ಅವರಿಗೀಗ ಕೈತುಂಬಾ ಅವಕಾಶಗಳು. ಸೂಪರ್‌ಸ್ಟಾರ್ ಮೋಹನ್‌ ಲಾಲ್‌ ನಟನೆಯ ‘ಆರಾಟ್ಟು’ ಮಲಯಾಳಂ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಮ್‌ ನಟಿಸುತ್ತಿದ್ದಾರೆ. ತೆರೆಗೆ ಸಿದ್ಧವಾಗಿರುವ ಕಾರ್ತಿ ಅಭಿನಯದ ‘ಸುಲ್ತಾನ್‌’ನಲ್ಲೂ ಅವರು ಖಳನಟ.

ರಾಜ್ ತರುಣ್ ಹೀರೋ ಆಗಿರುವ ತೆಲುಗು ಸಿನಿಮಾ, ಅರ್ಜುನ್ ಸರ್ಜಾ ಮತ್ತು ತಾಪ್ಸಿ ಪನ್ನು ಜೋಡಿ ನಟಿಸಲಿರುವ ತಮಿಳು ಚಿತ್ರಕ್ಕೂ ಅವರು ಸಹಿ ಹಾಕಿದ್ದಾರೆ. ಸಾಮಾನ್ಯ ನಟನ ವೃತ್ತಿ ಬದುಕಿಗೆ ಚಿತ್ರವೊಂದು ಹೇಗೆ ದೊಡ್ಡ ತಿರುವಾಗುತ್ತದೆ ಎನ್ನುವುದಕ್ಕೆ ರಾಮ್‌ ಉದಾಹರಣೆಯಾಗಿದ್ದಾರೆ. ಇನ್ನು ‘ರೈಡರ್‌’ ಶೇಕಡಾ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ. ನಿಖಿಲ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಯಾಗಿತ್ತು. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ‘ರೈಡರ್‌’ಗಿದೆ. ದತ್ತಣ್ಣ, ಅಚ್ಯುತ್‌ ಕುಮಾರ್‌, ಚಿಕ್ಕಣ್ಣ, ರಾಜೇಶ್ ನಟರಂಗ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ನ್ಯೂಯಾರ್ಕ್‌ನಲ್ಲಿ ಹರ್ಷಿಕಾ ಪೂಣಚ್ಚ , ಮಾಲ್ಡಿವ್ಸ್ ನಲ್ಲಿ ಲವ್ ಮಾಕ್ಟೆಲ್ ಜೋಡಿ !

ಲಾಕ್ ಡೌನ್ ಪರಿಣಾಮ‌ ಸರಿ‌ ಸುಮಾರು ಒಂದು ವರ್ಷದಷ್ಟು ಕಾಲ ಎಲ್ಲಿಗೂ ಹೋಗದೆ ಬೇಸತ್ತಿದ್ದ ಸ್ಯಾಂಡಲ್ವುಡ್ ಸ್ಟಾರ್ಸ್ ಈಗ ಚಿಟ್ಟೆಯಂತೆ ಹಾರಾಡುತ್ತಿದ್ದಾರೆ. ಕೆಲವರಂತೂ ವಿದೇಶ ಪ್ರವಾಸಕ್ಕೆ ಅವಸರದಲ್ಲೇ ವಿಮಾನ ಹತ್ತುತ್ತಿದ್ದಾರೆ. ಸದ್ಯಕ್ಕೆ ಆ ರೀತಿ ಈಗ ಬೆಂಗಳೂರಿನಿಂದ ಲವ್‌ ಮಾಕ್ಟೆಲ್‌ ಜೋಡಿ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ , ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ವಿದೇಶಕ್ಕೆ ಹಾರಿ ಸಖತ್‌ ಎಂಜಾಯ್‌ ಮಾಡುತ್ತಿರುವ ವಿಡಿಯೋ ಹಾಗೂ ಪೋಟೋಗಳು ಸೋಷಲ್‌ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿವೆ.

ವೈಟ್‌ ಸ್ನೋ ಮೇಲೆ ಮಿಲ್ಕಿ ಬ್ಯುಟಿ…

ಕನ್ನಡದ ಮಿಲ್ಕಿ ಬ್ಯೂಟಿ ಖ್ಯಾತಿಯ ನಟಿ ಹರ್ಷಿಕಾ ಪೂಣಚ್ಚ ಈಗ ನ್ಯೂಯಾರ್ಕ್‌ ನಲ್ಲಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಾಕಷ್ಟು ದಿನಗಳ ಕಾಲ ಮನೆಯಲ್ಲೇ ಉಳಿದಿದ್ದ ಅವರು, ಈಗ ಬೇಸರ ಕಳೆದುಕೊಳ್ಳುವುದಕ್ಕೆ ನ್ಯೂಯಾರ್ಕ್‌ ಗೆ ಹಾರಿದ್ದಾರೆ. ನ್ಯೂಯಾರ್ಕ್‌ ನ ವೈಟ್‌ ಸ್ನೋ ನಲ್ಲಿ ಸಖತ್‌ ಆಗಿ ಹೆಜ್ಜೆ ಹಾಕುತ್ತಾ ಎಂಜಾಯ್‌ ಮಾಡುತ್ತಿದ್ದಾರೆ. ಆ ದೃಶ್ಯಗಳ ವಿಡಿಯೋ ಮತ್ತು ಫೋಟೋಗಳು ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಕನ್ನಡ ಸಿನಿಮಾ ಮಟ್ಟಿಗೆ ನಟಿ ಹರ್ಷಿಕಾ ಪೂಣಚ್ಚ ಅಷ್ಟಾಗಿ ಬ್ಯುಸಿ ಆಗಿಲ್ಲ. ಹಿಂದೆಲ್ಲ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಈಗ ಒಂದಷ್ಟು ಚೂಸಿ ಆಗಿದ್ದು, ಒಳ್ಳೆಯ ಪಾತ್ರಗಳು ಸಿಕ್ಕಾಗಷ್ಟೇ ನಟಿಸುತ್ತಿರುವುದು ನಿಮಗೂ ಗೊತ್ತು. ಹರ್ಷಿಕಾ ನ್ಯೂಯಾರ್ಕ್‌ ಪ್ರವಾಸದ ಆಕ್ಚ್ಯುವಲ್‌ ಉದ್ದೇಶ ನಮಗೂ ಗೊತ್ತಿಲ್ಲ. ಆದರೆ ಅವರು ನ್ಯೂ ಯಾರ್ಕ್‌ ನಲ್ಲಿರುವುದನ್ನು ಅವರೇ ರಿವೀಲ್‌ ಮಾಡಿದ್ದಾರೆ.

ಮಾಲ್ಡಿವ್ಸ್‌ ನಲ್ಲಿ ಲವ್‌ ಮಾಕ್ಟೆಲ್‌ ಜೋಡಿ…

ʼಲವ್‌ ಮಾಕ್ಟೆಲ್‌ʼ ಖ್ಯಾತಿಯ ಜೋಡಿ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಈಗ ಮಾಲ್ಡಿವ್ಸ್‌ ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ಮದುವೆ ಮುಗಿಸಿಕೊಂಡು ಹನಿಮೂನ್‌ ಪ್ರವಾಸಕ್ಕೆ ಈ ಜೋಡಿ ಮಾಲ್ಡಿವ್ಸ್‌ ನಲ್ಲಿದೆ. ಮಾಲ್ಡಿವ್ಸ್‌ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ. ಅದೊಂದು ಕಡಲ ತೀರಾ. ಸುಂದರವಾದ ಬೀಚ್‌ ರೆಸಾರ್ಟ್ಸ್‌ . ಇತ್ತೀಚೆಗಷ್ಟೇ ನಟ ಯಶ್‌ ಹಾಗೂ ರಾಧಿಕಾ ಪಂಡಿತ್‌ ಕೂಡ ಮಾಲ್ಡೀವ್ಸ್‌ ಗೆ ಹೋಗಿದ್ದರು. ಈಗ ಈ ಸರದಿ ನವ ದಂಪತಿ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅವರದ್ದು.

Categories
ಸಿನಿ ಸುದ್ದಿ

ವಿಜಯ್‌ಗೆ ಖಳನಟರಾಗಲಿದ್ದಾರೆಯೇ ನವಾಜುದ್ದೀನ್‌! ಬಾಲಿವುಡ್‌ ನಟ ತಮಿಳು ಸಿನಿಮಾಗೆ ಬರ್ತಾರ?

ತಾವು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಬಲ್ಲೆನು ಎನ್ನುವುದನ್ನು ‘ಮಾಸ್ಟರ್‌’ ತಮಿಳು ಚಿತ್ರದ ಮೂಲಕ ನಟ ವಿಜಯ್ ಮತ್ತೊಮ್ಮೆ ಸಾಬೀತು ಮಾಡಿದರು. ಕೋವಿಡ್‌ನಿಂದಾಗಿ ಥಿಯೇಟರ್‌ನಲ್ಲಿ ಶೇ.50ರಷ್ಟು ಪ್ರೇಕ್ಷಕರಿಗಷ್ಟೇ ಅವಕಾಶವಿತ್ತು. ಆದಾಗ್ಯೂ ವಿಜಯ್‌  ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿತು. ಆ ಚಿತ್ರದಲ್ಲಿ ಖಳನಾಗಿ ನಟಿಸಿದ್ದ ವಿಜಯ್ ಸೇತುಪತಿ ಕೂಡ ಭರ್ಜರಿಯಾಗಿ ಮಿಂಚಿದರು.

ಇದೀಗ ವಿಜಯ್‌ರ 65ನೇ ಚಿತ್ರದಲ್ಲೂ ಪ್ರಭಾವಿ ನಟ ಖಳಪಾತ್ರ ಮಾಡುವ ಸೂಚನೆ ಸಿಕ್ಕಿದೆ. ಬಾಲಿವುಡ್‌ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿ ಅವರಿಗೆ ಈ ಪಾತ್ರದಲ್ಲಿ ನಟಿಸುವಂತೆ ಕರೆ ಹೋಗಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ ‘ವಿಜಯ್‌ 65’ ಚಿತ್ರದಲ್ಲಿ ಖಳಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿದೆಯಂತೆ. ಹಾಗಾಗಿ ದೊಡ್ಡ ನಟನೇ ಆಗಬೇಕು ಎನ್ನುವುದು ಯೋಜನೆ. ಸಿದ್ದಿಕಿ ಅವರನ್ನು ಕರೆತಂದರೆ ಉತ್ತರ ಭಾರತದ ಪ್ರೇಕ್ಷಕರನ್ನೂ ಆಕರ್ಷಿಸಬಹುದು ಎನ್ನುವ ದೂರದ ಆಲೋಚನೆ ಕೂಡ ಸಹಜವೇ. ಸಿದ್ದಿಕಿ ಅವರು ಇದೀಗಷ್ಟೇ ‘ಸಂಗೀನ್‌’ ಚಿತ್ರೀಕರಣ ಮುಗಿಸಿಕೊಂಡು ಲಂಡನ್‌ನಿಂದ ಬಂದಿದ್ದಾರೆ. ಸದ್ಯ ವಿಜಯ್‌ ಸಿನಿಮಾಗೆ ಸಂಬಂಧಿಸಿದಂತೆ ಮಾತುಕತೆ ಜಾರಿಯಲ್ಲಿದ್ದು, ಸಿದ್ದಿಕಿ ಓಕೆ ಎನ್ನಬೇಕಿದೆ.

Categories
ಸಿನಿ ಸುದ್ದಿ

ನ್ಯಾಯಕ್ಕಾಗಿ ಪೊಲೀಸ್‌ ಅಧಿಕಾರಿಯಾಗಿ ಬಂದರು ಶ್ರುತಿ ಹರಿಹರನ್‌ !

ದಕ್ಷಿಣ ಭಾರತದ ನಟಿ ಶ್ರುತಿ ಹರಿಹರನ್‌ ನಟನೆಯ ‘ವಧಂ’ ವೆಬ್‌ ಸರಣಿ ಗಮನ ಸೆಳೆಯುತ್ತಿದೆ. ಸಿನಿಮಾಗಳ ವಿಶಿಷ್ಟ ಪಾತ್ರಗಳಲ್ಲಿ ಅವರನ್ನು ನೋಡಿದ್ದ ಅಭಿಮಾನಿಗಳು ತಮಿಳು ವೆಬ್‌ ಸರಣಿಯಲ್ಲಿ ಅವರನ್ನು ಪೊಲೀಸ್‌ ಅಧಿಕಾರಿಯನ್ನಾಗಿ ಕಂಡು ಥ್ರಿಲ್ಲಾಗಿದ್ದಾರೆ. ವೆಂಕಟೇಶ್ ಬಾಬು ನಿರ್ದೇಶನದ ಸರಣಿ ಮೊನ್ನೆ ಎಂಎಕ್ಸ್‌ ಪ್ಲೇಯರ್‌ನಲ್ಲಿ ಪ್ರೀಮಿಯರ್ ಆಗಿದ್ದು, ಥ್ರಿಲ್ಲರ್‌ ಕಥಾನಕದಿಂದ ಸರಣಿ ನೋಡುಗರನ್ನು ಸೆಳೆಯುತ್ತಿದೆ. ಶ್ರುತಿ ಇಲ್ಲಿ ಪೊಲೀಸ್ ಅಧಿಕಾರಿ ‘ಶಕ್ತಿ ಪಾಂಡಿಯನ್‌’ ಪಾತ್ರದಲ್ಲಿ ನಟಿಸುತ್ತಿದ್ದಾರೆ.

“ನಟಿಯಾಗಿ ನಾನು ಸದಾ ಸವಾಲಿನ ಪಾತ್ರಗಳನ್ನು ಎದುರುನೋಡುತ್ತೇನೆ. ಸಾಂಪ್ರದಾಯಿಕ ಪಾತ್ರಗಳಲ್ಲಷ್ಟೇ ನಟಿಸುವುದು ಬೇಜಾರು. ನ್ಯಾಯಕ್ಕಾಗಿ ಹೋರಾಟ ನಡೆಸುವ, ಪ್ರಭಾವಿ ಕೊಲೆಗಾರ ರಾಜಕಾರಣಿಯನ್ನು ಎದುರು ಹಾಕಿಕೊಂಡು ಸವಾಲು ಸ್ವೀಕರಿಸುವ ಶಕ್ತಿ ಪಾತ್ರದಲ್ಲಿ ನಾನು ತಲ್ಲೀನಳಾಗಿದ್ದೇನೆ” ಎನ್ನುತ್ತಾರೆ ಶ್ರುತಿ. ಸರಣಿಯಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳಿವೆ. ಇಂತಹ ಪಾತ್ರವನ್ನು ನಿಭಾಯಿಸುವಲ್ಲಿ ತಮಗೆ ನೆರವಾಗುತ್ತಿರುವ ನಿರ್ದೇಶಕರನ್ನು ಶ್ರುತಿ ಸ್ಮರಿಸುತ್ತಾರೆ.

ಐಪಿಎಸ್ ಅಧಿಕಾರಿ ಶಕ್ತಿ ಪಾಂಡಿಯನ್‌ ತಮ್ಮ ಮಹಿಳಾ ಸಹೋದ್ಯೋಗಿಗಳೊಂದಿಗೆ ಪ್ರಭಾವಿ ರಾಜಕಾರಣಿಯೊಬ್ಬರು ನಡೆಸಿದ ಕೊಲೆಯನ್ನು ಭೇದಿಸಲು ಹೊರಡುತ್ತಾರೆ. ಮಹಿಳಾ ಅಧಿಕಾರಿಯಾಗಿ ಅವರಿಗೆ ಸಾಕಷ್ಟು ತೊಡಕುಗಳು ಎದುರಾಗುತ್ತವೆ. ಈ ಎಲ್ಲಾ ಬೆದರಿಕೆ, ತೊಡಕುಗಳನ್ನು ಮೆಟ್ಟಿನಿಂತು ಅವರು ಹೇಗೆ ಕೊಲೆಗಾರನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ ಎನ್ನುವುದು ಸರಣಿಯ ಕಥಾವಸ್ತು. “ಇದು ಸೂಪರ್‌ ಥ್ರಿಲ್ಲರ್ – ಡ್ರಾಮಾ. ನಟಿ ಶ್ರುತಿ ಪಾತ್ರವನ್ನು ಜೀವಿಸಿದ್ದಾರೆ” ಎನ್ನುತ್ತಾರೆ ನಿರ್ದೇಶಕ ವೆಂಕಟೇಶ್ ಬಾಬು. ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಅಶ್ವಥಿ ವಾರಿಯರ್‌, ಸೆಮ್ಮಲಾರ್ ಅನ್ನನ್‌, ಪ್ರಿತೀಷಾ ಪ್ರೇಮಕುಮಾರನ್‌, ವಿವೇಕ್ ರಾಜಗೋಪಾಲ್‌ ನಟಿಸಿದ್ದಾರೆ.

Categories
ಗ್ಲಾಮರ್‌ ಕಾರ್ನರ್ ಸಿನಿ ಸುದ್ದಿ

ಹರಿಪ್ರಿಯಾ ಎಂಬ ಸೀರೆಪ್ರಿಯೆ , ಈ ಕುಮುದಾಗೆ ಸೀರೆ ಯಾಕೆ ಅಂದ?

ಹೆಣ್ಣಿಗೆ ಸೀರೆ ಯಾಕೆ ಅಂದಾ? ಬೆಳ್ಳಿತೆರೆ ಮೇಲೆ ಮಾದಕ ನಟಿ ಶ್ರೀದೇವಿಕಾ ಅವರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹೀಗೇಕೆ ಕೇಳಿದ್ರೋ ಗೊತ್ತಿಲ್ಲ, ಆದರೆ ಹೆಣ್ಣಿಗೆ ಸೀರೇನೆ ಚಂದ ಅಲ್ವಾ? ಇಲ್ಲಿ ಹೌದು ಅಂತ, ಸಖತ್ ಆದ ಸೀರೆಯುಟ್ಟು ದೀವಿನಾದ ಪೋಸು ನೀಡುತ್ತಾರೆ ಗ್ಲಾಮರಸ್ ನಟಿ ಹರಿಪ್ರಿಯಾ.

ಆದ್ರೆ, ಗ್ಲಾಮರಸ್ ನಟಿ ಹರಿಪ್ರಿಯಾ ಅಂದಾಕ್ಷಣ ಸಿನಿಮಾ ಪ್ರೇಕ್ಷಕರಿಗೆ ನೆನಪಾಗೋದು ʼನೀರ್ ದೋಸೆ ʼಚಿತ್ರದ ಕುಮುದಾ ಪಾತ್ರ. ಜಗ್ಗೇಶ್ ಅಭಿನಯದ ಈ ಚಿತ್ರದಲ್ಲಿ ಹರಿಪ್ರಿಯಾ ಅಭಿನಯಿಸಿದ್ದು ವೇಶೆ ಪಾತ್ರ.ಈ ಕುಮುದಾ ಸಿಕ್ಕಾಪಟ್ಟೆ ಹಾಟ್. ಉಡುಗೆ, ತೊಡುಗೆ ಮಾತ್ರವಲ್ಲ ಅವರ ಮಾತು ಕೂಡ ಅಷ್ಟೇ ಹಸಿ ಬಿಸಿ. ಹಾಗಾಗಿ ಸಿನಿಮಾ ಅಂದಾಕ್ಷಣ ಕನ್ನಡ ಸಿನಿಮಾ ಪ್ರೇಕ್ಷಕ ನಿಗೆ ಹಾಟ್ ಹರಿಪ್ರಿಯಾ ನೆನಪಾದರೂ, ನಿಜ ಜೀವನದಲ್ಲಿ ಅವರು ಇರೋದೇ ಬೇರೆ.

ಪಕ್ಕಾ ಸಂಪ್ರದಾಯ ಸ್ಥ ಕುಟುಂಬದ ಹಿನ್ನೆಲೆ ಹರಿಪ್ರಿಯಾ ಅವರದು. ಶುದ್ಧ ದೈವ ಭಕ್ತೆ. ಹಾಗೆಯೇ ಸೀರೆಯೇ ಅವರ ನೆಚ್ಚಿ‌ನ ಉಡುಗೆ. ಸೋಷಲ್ ಮೀಡಿಯಾದಲ್ಲಿ ಅವರ ಇನ್ಸ್ಟಾ, ಪೇಸ್ ಬುಕ್ , ಟ್ವಿಟರ್ ಖಾತೆ ತೆರೆದರೆ ದಿನ ನಿತ್ಯ ತರಾಹೇವಾರಿ ಬಣ್ಣದ ಸೀರೆಗಳುಟ್ಟು ಪೋಸು ನೀಡಿರುವುದು ನಿಮಗೂ ಗೊತ್ತು. ಅಷ್ಟೇ ಅಲ್ಲ, ತೆರೆ ಮೇಲೂ ಹರಿಪ್ರಿಯಾ ಸೀರೆಯಲ್ಲಿ ಕಾಣಿಸಿಕೊಂಡರೆ ಚೆಂದ.

ಹಾಗಂತ ಅವರ ಅಭಿಮಾನಿಗಳು ಬಯಸುತ್ತಾರಂತೆ. ಮುನಿರತ್ನ ಕುರುಕ್ಷೇತ್ರದಲ್ಲಿ ನಟಿ ಹರಿಪ್ರಿಯಾ ಚೆಂದದ ಸೀರೆಯುಟ್ಟು ಕಾಣಿಸಿಕೊಂಡಿದ್ದಕ್ಕೂ ಆಗಾಧ ಮೆಚ್ಚುಗೆ ಸಿಕ್ಕಿತ್ತು. ಇದೇ ಕಾರಣಕ್ಕೋ ಏನೋ, ಸೀರೆಯಲ್ಲಿ ಸದಾ ಮಿಂಚುತ್ತಾರೆ ನಟಿ ಹರಿಪ್ರಿಯಾ‌.

ಅಂದ ಹಾಗೆ ಹರಿಪ್ರಿಯಾ ಈಗ ಕನ್ನಡದ ಬ್ಯುಸಿ ನಟಿಯರಲ್ಲಿ ಒಬ್ಬರು. ಉಗ್ರಂ ನಂತರ ಹರಿಪ್ರಿಯಾ ಅವರದ್ದು ಸೆಕೆಂಡ್ ಇನ್ನಿಂಗ್ಸ್.‌ಉಗ್ರಂ ಮೂಲಕ ಸಿಕ್ಕ ದೊಡ್ಡ ಸಕ್ಸಸ್ ನಂತರ ಹರಿಪ್ರಿಯಾ , ನೀರ್ ದೋಸೆ ಮೂಲಕ ಫಿನಿಕ್ಸ್ ನಂತೆ ಎದ್ದು ಕುಳಿತರು.ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ. ಈಗಷ್ಟೇ ಅವರು ವಿಜಯ್ ಪ್ರಸಾದ್ ನಿರ್ದೇಶನದ’ ಪೆಟ್ರೋಮ್ಯಾಕ್ಸ್’ ಚಿತ್ರರ ಚಿತ್ರೀಕರಣ ಮುಗಿಸಿದ್ದಾರೆ.

Categories
ಟಾಲಿವುಡ್

ರಾಮ್‌ ಚರಣ್‌ಗೆ ರಶ್ಮಿಕಾ ಜೋಡಿ!?


ಕನ್ನಡ ನಟಿ ರಶ್ಮಿಕಾ ಮಂದಣ್ಣ ಒಂದಾದ ಮೇಲೊಂದು ದೊಡ್ಡ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ. ದಕ್ಷಿಣದ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ನಟಿಸಿದ ಬೆಡಗಿ ಇದೀಗ ‘ಮಿಷನ್‌ ಮಜ್ನೂ’ ಬಾಲಿವುಡ್‌ ಚಿತ್ರೀಕರಣದಲ್ಲಿದ್ದಾರೆ. ಇದೀಗ ಬಂದ ಸುದ್ದಿಯ ಪ್ರಕಾರ ಅವರು ತೆಲುಗು ಸ್ಟಾರ್‌ ರಾಮ್‌ ಚರಣ್‌ ತೇಜಾ ನಟನೆಯ ದುಬಾರಿ ಪ್ಯಾನ್‌ ಇಂಡಿಯಾ “3ಡಿ” ಸಿನಿಮಾದ ನಾಯಕಿಯಾಗಲಿದ್ದಾರಂತೆ. ಸೈನ್ಸ್-ಫಿಕ್ಷನ್ ಸಿನಿಮಾಗಳ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶನದ ಚಿತ್ರವಿದು ಎನ್ನುವುದು ವಿಶೇಷ.


ಸದ್ಯ ರಶ್ಮಿಕಾ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ತಮ್ಮ ಚಿತ್ರಕ್ಕೆ ಅವರೇ ನಾಯಕಿಯಾಗಲಿ ಎನ್ನುವುದು ರಾಮ್‌ ಚರಣ್‌ ಇರಾದೆ. ಹಾಗಾಗಿ ಚಿತ್ರತಂಡದಿಂದ ನಟಿಗೆ ಆಹ್ವಾನವೂ ಹೋಗಿದೆ. ಆದರೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾಗೆ ಹೊಸ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳುವುದು ಕಷ್ಟವಾಗಿದೆ. ಆದರೆ ರಾಮ್‌ ಚರಣ್‌ – ಶಂಕರ್‌ ಸಿನಿಮಾ ಕೈಬಿಡಲು ಅವರಿಗೂ ಇಷ್ಟವಿಲ್ಲ.

ಹಾಗಾಗಿ ಬಹುತೇಕ ಅವರೇ ಚಿತ್ರದ ನಾಯಕಿಯಾಗಬಹುದು. ಇನ್ನು ಸದ್ಯದಲ್ಲೇ ಅಲ್ಲು ಅರ್ಜುನ್ ಜೊತೆಗೆ ಅವರು ನಟಿಸಿರುವ ‘ಪುಷ್ಪ’ ತೆಲುಗು ಸಿನಿಮಾ ತೆರೆಗೆ ಬರುತ್ತಿದೆ. ಅಲ್ಲದೆ ಇಂದು ಅವರು ನಾಯಕಿಯಾಗಿರುವ ಕನ್ನಡ ಸಿನಿಮಾ ‘ಪೊಗರು’ ತೆರೆಕಂಡಿದ್ದು, ಇದರ ತೆಲುಗು ಅವತರಣಿಕೆಯೂ ಆಂಧ್ರದಲ್ಲಿ ತೆರೆಕಂಡಿದೆ.

Categories
ಸೌತ್‌ ಸೆನ್ಸೇಷನ್

ತೆಲುಗು ಗನಿ ಚಿತ್ರಕ್ಕೆ ಉಪ್ಪಿ ನ್ಯೂ ಲುಕ್‌!


ವರುಣ್ ತೇಜ್ ನಾಯಕನಾಗಿ ನಟಿಸುತ್ತಿರುವ ‘ಗನಿ’ ತೆಲುಗು ಚಿತ್ರದಲ್ಲಿನ ನಟ ಉಪೇಂದ್ರ ಲುಕ್ ರಿವೀಲ್ ಆಗಿದೆ. ಕಿರಣ್ ಕೊರಪಾಟಿ ಚೊಚ್ಚಲ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಚಿತ್ರೀಕರಣದ ನಿಮಿತ್ತ ಹೈದರಾಬಾದ್‌ನಲ್ಲಿರುವ ಉಪೇಂದ್ರರ ಲುಕ್‌ ರಿವೀಲ್ ಆಗಿದೆ. ಈ ಅದ್ಧೂರಿ ಸಿನಿಮಾದಲ್ಲಿ ವರುಣ್ ತೇಜ್‌ ಬಾಕ್ಸರ್ ಪಾತ್ರ ನಿರ್ವಹಿಸಲಿದ್ದಾರೆ. ಉಪೇಂದ್ರರಿಗೆ ಬಾಕ್ಸಿಂಗ್ ಕೋಚ್‌ ಪಾತ್ರ ಎಂದು ಮೂಲಗಳು ಹೇಳುತ್ತವೆಯಾದರೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ದುಬಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ‘ಗನಿ’ಯಲ್ಲಿ ಜಗಪತಿ ಬಾಬು, ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸುತ್ತಿದ್ದಾರೆ. ಸಾಹಿ ಮಂಜ್ರೇಕರ್ ಚಿತ್ರದ ನಾಯಕಿ. ಆರು ವರ್ಷಗಳ ಹಿಂದೆ ತೆರೆಕಂಡ ಅಲ್ಲು ಅರ್ಜುನ್‌ ನಟನೆಯ ‘ಸನ್‌ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ಉಪೇಂದ್ರ ನಟಿಸಿದ್ದರು. ಇದೀಗ ‘ಗನಿ’ಯೊಂದಿಗೆ ಮತ್ತೆ ತೆಲುಗು ಬೆಳ್ಳಿತೆರೆಗೆ ಹೋಗಿದ್ದಾರೆ.

ತೆಲುಗು ನಾಡಿನಲ್ಲೂ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರರ ಹಲವಾರು ಕನ್ನಡ ಚಿತ್ರಗಳು ತೆಲುಗಿಗೆ ರೀಮೇಕ್ ಆಗಿವೆ. ಇನ್ನು ಅವರ ಪ್ಯಾನ್ ಇಂಡಿಯಾ ‘ಕಬ್ಜ’ ಸಿನಿಮಾದ ಕೆಲಸಗಳೂ ಚಾಲ್ತಿಯಲ್ಲಿವೆ.

Categories
ಸಿನಿ ಸುದ್ದಿ

ಜೂನಿಯರ್ ಚಿರು ಪುಟಾಣಿ ಕೈಯಿಂದ ರಾಜಾಮಾರ್ತಾಂಡ ಟ್ರೇಲರ್ ರಿಲೀಸ್‌!


ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜಾ ಮಾರ್ತಾಂಡ’ ತೆರೆಗೆ ಸಿದ್ಧವಾಗುತ್ತಿದೆ. ಚಿರಂಜೀವಿ ಪಾತ್ರಕ್ಕೆ ಅವರ ಸಹೋದರ ಧ್ರುವ ಡಬ್‌ ಮಾಡಿದ್ದಾರೆ.  ಫೆಬ್ರವರಿ 19ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಈ ಟ್ರೇಲರ್‌ ಅನ್ನು ಚಿರಂಜೀವಿ ಪುಟಾಣಿ ಪುತ್ರನ ಕೈಗಳಿಂದ ಲಾಂಚ್‌ ಮಾಡಿಸಲಾಗುತ್ತಿದೆ! ಚಿತ್ರದ ನಿರ್ದೇಶಕ ರಾಮ್‌ನಾರಾಯಣ್‌ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ತೊಟ್ಟಿಲಲ್ಲಿರುವ ಜ್ಯೂ.ಚಿರು ಜೊತೆಗಿನ ಸೆಲ್ಫಿ ಹಾಕಿ ಅವರು ಈ ಸುದ್ದಿಯನ್ನು ಬರೆದಿದ್ದಾರೆ.

ಜ್ಯೂ.ಚಿರಂಜೀವಿಯಿಂದ ‌ಟ್ರೇಲರ್ ಲಾಂಚ್ ಮಾಡಿಸುವ ಐಡಿಯಾಗೆ ನಟಿ  ಮೇಘನಾ ರಾಜ್‌ ಅವರೂ ಖುಷಿಯಾಗಿದ್ದಾರೆ. ಪುಟಾಣಿಯಿಂದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ಬಹುಶಃ ಕನ್ನಡ ಚಿತ್ರರಂಗದ ಮಟ್ಟಿಗೂ ಹೊಸದು. ಇನ್ನು ಚಿರಂಜೀವಿ ನಟನೆಯ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ‘ರಾಜಾಮಾರ್ತಾಂಡ’ ಕುರಿತು ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಡಬ್ ಮಾಡಲು ಶುರುಮಾಡಿದ್ದಾರೆ.

ಟ್ರೇಲರ್‌ಗೆ ಬೇಕಾದ ಡಬ್ಬಿಂಗ್ ಕೆಲಸ ಮುಗಿಸಿರುವ ಧ್ರುವ ತಮ್ಮ ‘ಪೊಗರು’ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಅವರು ಪೂರ್ಣಪ್ರಮಾಣದಲ್ಲಿ ಆ ಸಿನಿಮಾದ ಡಬ್ಬಿಂಗ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.  ಟ್ರೇಲರ್ ಬಿಡುಗಡೆಯ ಕೆಲವು ದಿನಗಳಲ್ಲಿ ‘ರಾಜಾಮಾರ್ತಾಂಡ’ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ನಟ ದರ್ಶನ್‌ ಕೂಡ ಈ ಸಿನಿಮಾದ ಬೆನ್ನಿಗೆ ನಿಂತಿದ್ದಾರೆ. ಚಿತ್ರದಲ್ಲಿ ದರ್ಶನ್ ಹಿನ್ನೆಲೆ ದನಿ ಇರಲಿದೆ. ಈ ಮೂಲಕ ಅಗಲಿದ ಗೆಳೆಯನಿಗೆ ಅವರ ಕಡೆಯಿಂದ ಶ್ರ‌ದ್ಧಾಂಜಲಿ ಅರ್ಪಣೆಯಾಗುತ್ತಿದೆ.

Categories
ಸಿನಿ ಸುದ್ದಿ

ಅಭಿಮಾನಿ ಹೃದಯದಲ್ಲಿ ಸಲಗ – ಎದೆ ಮೇಲೆ‌ ರಾರಾಜಿಸಿದ ಸಲಗನ ಕಂಡು ವಿಜಯ್‌ ಭಾವುಕ

“ದುನಿಯಾ” ವಿಜಯ್‌ ಅಭಿನಯದ “ಸಲಗ” ಸಿನಿಮಾ ರಿಲೀಸ್‌ಗೆ ಮುನ್ನವೇ ಜೋರು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ವಿಜಯ್‌ ಅವರ ಗೋವಾದ ಅಭಿಮಾನಿಯೊಬ್ಬ ತನ್ನ ಕೈ ಮೇಲೆ “ಸಲಗ” ಎಂಬ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದು ಗೊತ್ತೇ ಇದೆ. ಈಗ ಮತ್ತೊಬ್ಬ ಅಭಿಮಾನಿ ತನ್ನ ಎದೆಯ ಮೇಲೆಯೇ “ಸಲಗ” ಹೆಸರನ್ನ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ. ಹೌದು, ಅಭಿಮಾನಿ ಎದೆಯ ಮೇಲೆ ರಾರಾಜಿಸುತ್ತಿರುವ “ಸಲಗ” ಹೆಸರು ನೋಡಿದ ʼದುನಿಯಾʼ ವಿಜಯ್‌ ಅಭಿಮಾನಿಯ ಪ್ರೀತಿಯ ಅಭಿಮಾನಿಗೆ ಫಿದಾ ಆಗಿದ್ದಾರೆ.

ಸದ್ಯಕ್ಕೆ ಈಗ “ದುನಿಯಾ” ವಿಜಯ್ ಅಭಿಮಾನಿಗಳಿಂದ ಟ್ಯಾಟೋ‌ ಅಭಿಯಾನ ಕೊಂಚ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ ಒಂದು ರೀತಿ ಈ ಅಭಿಯಾನ ಸೆನ್ಸೇಷನ್ ಕೂಡ ಕ್ರಿಯೇಟ್ ಮಾಡುತ್ತಿದೆ. ದಿನ ಕಳೆದಂತೆ “ಸಲಗ” ಚಿತ್ರದ ಕ್ರೇಜ್ ಹೆಚ್ಚುತ್ತಲೇ ಇದೆ. ವಿಜಯ್ ಅಭಿಮಾನಿಗಳು‌ ತಮ್ಮ‌ ಪ್ರೀತಿಯ ನಟನ ಸಿನಿಮಾ‌ ಮೇಲೆ‌ ತುಸು ಹೆಚ್ಚಾಗಿಯೇ ಪ್ರೀತಿ ಬೆಳೆಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಹಾಗೂ ರಿಲೀಸ್ ಆಗಿರುವ ಹಾಡುಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

“ಸಲಗ” ಥಿಯೇಟರ್‌ಗೆ ಬರುವುದನ್ನು ಕಾತರದಿಂದಲೇ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ತಮ್ಮದೇ ಆದ ರೀತಿಯಲ್ಲೇ ಅವರು ಅಭಿಮಾನವನ್ನು ತೋರಿಸುತ್ತಿದ್ದಾರೆ. ಗೋವಾ ಕನ್ನಡಿಗನೊಬ್ಬ ತನ್ನ ಕೈ ಮೇಲೆ‌‌ ಟ್ಯಾಟೋ‌ ಹಾಕಿಸಿಕೊಂಡು ಅಭಿಮಾನ ತೋರಿದ್ದ ಬೆನ್ನಲ್ಲೇ ಈಗ ಇನ್ನೊಬ್ಬ ಅಭಿಮಾನಿ ತನ್ನ ಎದೆ ಮೇಲೇನೆ “ಸಲಗ” ಟ್ಯಾಟೋ‌ ಹಾಕಿಸಿಕೊಂಡು, ಖುದ್ದು ತಮ್ಮ ಪ್ರೀತಿಯ ನಟ ವಿಜಯ್‌ ಮನೆಗೆ ಬಂದು ಅವರ ಕೈಯಲ್ಲೇ ಆ ಟ್ಯಾಟೋ ಕವರ್‌ ಅನ್ನು ಬಿಚ್ಚಿಸಿಕೊಂಡಿದ್ದಾನೆ. ಅಭಿಮಾನಿಯ ಈ ಅಭಿಮಾನಕ್ಕೆ ವಿಜಯ್‌ ಅವರೇ ಖುದ್ದು ಭಾವುಕರಾಗಿ ಅಭಿಮಾನಿಗೆ ಶರಣಗಿದ್ದಾರೆ.

Categories
ಸಿನಿ ಸುದ್ದಿ

ನಟ ಮಾಧವನ್‌ಗೆ ಗೌರವ ಡಾಕ್ಟರೇಟ್‌!

ಬಹುಭಾ‍ಷಾ ನಟ ಮಾಧವನ್‌ ಸಿನಿಮಾ ಸಾಧನೆ ಪರಿಗಣಿಸಿ ಕೊಲ್ಹಾಪುರದ ಡಿ.ವೈ.ಪಾಟೀಲ್‌ ಶಿಕ್ಷಣ ಸಂಸ್ಥೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮೊನ್ನೆ ಶಿಕ್ಷಣ ಸಂಸ್ಥೆಯ ಒಂಬತ್ತನೇ ಶೈಕ್ಷಣಿಕ ಸಮಾಂಭದಲ್ಲಿ ಮಾಧವನ್‌ ಈ ಗೌರವ ಸ್ವೀಕರಿಸಿದ್ದಾರೆ. ಈ ಪುರಸ್ಕಾರದಿಂದ ಹೆಮ್ಮೆಯಿಂದ ಬೀಗುತ್ತಿರುವ ಐವತ್ತರ ಹರೆಯದ ಮಾಧವನ್, “ಈ ಗೌರವವನ್ನು ನಾನು ವಿನಯದಿಂದ ಸ್ವೀಕರಿಸುತ್ತೇನೆ. ಈ ಮನ್ನಣೆ ನನಗೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ. ಮುಂದೆ ಇನ್ನಷ್ಟು ಒಳ್ಳೆಯ ಮಾದರಿ ಸಿನಿಮಾ, ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ” ಎಂದಿದ್ದಾರೆ.

ಮಾಧವನ್‌ ಸಿನಿಮಾಗೆ ಅಡಿಯಿಟ್ಟಿದ್ದು ತೊಂಬತ್ತರ ದಶಕದ ಕೊನೆಯಲ್ಲಿ. ಮಣಿರತ್ನಂ ನಿರ್ದೇಶನದ ‘ಅಲೈಪಾಯಿದೆ’ (2000) ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿದ ಸಿನಿಮಾ. ಆನಂತರ ರೆಹ್ನಾ ಹೈ ತೇರಾ ದಿಲ್‌ ಮೇ, 3 ಈಡಿಯಟ್ಸ್‌, ತನು ವೆಡ್ಸ್ ಮನ, ವಿಕ್ರಂ ವೇದಾ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಗಮನ ಸೆಳೆದರು.

ಅಮೇಜಾನ್‌ ಪ್ರೈಮ್‌ನ ‘ಬ್ರೀಥ್‌’ನೊಂದಿಗೆ ಓಟಿಟಿಗೆ ಪದಾರ್ಪಣೆ ಮಾಡಿದ ಮಾಧವನ್‌ ಇತ್ತೀಚಿನ ‘ಮಾರಾ’ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಮಿಂಚಿದ್ದರು. ಇದು ದುಲ್ಕರ್ ಸಲ್ಮಾನ್‌ ನಟನೆಯ ‘ಚಾರ್ಲಿ’ ಮಲಯಾಳಂ ಚಿತ್ರದ ರೀಮೇಕ್‌. ಇದೀಗ ಅವರು ನಟಿಸಿ, ನಿರ್ದೇಶಿಸಿರುವ ‘ರಾಕೆಟ್ರೀ: ದಿ ನಂಬಿ ಎಫೆಕ್ಟ್‌’ ತೆರೆಗೆ ಸಿದ್ಧವಾಗಿದೆ. ISRO ದಲ್ಲಿ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್‌ ಅವರ ಜೀವನ ಆಧರಿಸಿದ ಚಿತ್ರವಿದು.

error: Content is protected !!