Categories
ಸಿನಿ ಸುದ್ದಿ

ಇವರ ಕಥೆ ಕೇಳಿ ಬೈದಿದ್ದ ಸಿದ್ಧಲಿಂಗಯ್ಯ ಸಿನ್ಮಾ ಮಾಡಲು ಮುಂದಾಗಿದ್ದರು !

6ನೇ ಕ್ಲಾಸ್‌ ಓದಿದವರ ಸಿನ್ಮಾ ಪ್ರೀತಿ

ಈ ಬಣ್ಣದ ಲೋಕವೇ ಹಾಗೆ, ಇಲ್ಲಿ ಒಮ್ಮೆ ಒಳನುಗ್ಗಿದರೆ ಮುಗೀತು. ಅದು ಸೋಲಿರಲಿ, ಗೆಲುವಿರಲಿ ಮತ್ತೆ ಮತ್ತೆ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರಬೇಕು. ಇದು ಈಗಿನದ್ದಲ್ಲ. ಸಿನಿಮಾ ಹುಟ್ಟು ಯಾವಾಗ ಶುರುವಾಯ್ತೋ ಅಂದಿನಿಂದಲೂ ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಈಗಾಗಲೇ ಅಂತಹ ಅನೇಕ ಪ್ರತಿಭೆಗಳು ಸಿನಿಮಾರಂಗ ಸ್ಪರ್ಶಿಸಿದ್ದು, ಗೆಲುವು ಕಾಣುವ ಉತ್ಸಾಹದಲ್ಲೇ ಒಂದಷ್ಟು ಪ್ರಯತ್ನಗಳೊಂದಿಗೆ ಮರಳಿ ಯತ್ನ ಮಾಡುತ್ತಲೇ ಇದ್ದಾರೆ. ಅದೆಷ್ಟೋ ಮಂದಿ ಸಿನಿಮಾವನ್ನೇ ಬದುಕಾಗಿಸಿಕೊಂಡಿದ್ದಾರೆ. ಸದ್ದಿಲ್ಲದೆಯೇ ಈ ಕಲೆಯ ಕಾಯಕ ಮಾಡುತ್ತಲೇ ಬದುಕು ಸವೆಸುತ್ತಿದ್ದಾರೆ. ಅಂತಹವರ ಸಾಲಿಗೆ ಶ್ರೀಧರ್‌ ಶೆಟ್ಟಿ ಕೂಡ ಒಬ್ಬರು.
ಶ್ರೀಧರ್‌ ಶೆಟ್ಟಿ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಕಳೆದ ಎರಡುವರೆ ದಶಕಗಳಿಗೂ ಹೆಚ್ಚು ಕಾಲ ಇವರಿಗೆ ಸಿನಿಮಾರಂಗದ ಒಡನಾಟವಿದೆ. ಇಷ್ಟು ವರ್ಷಗಳ ಅನುಭವ ಇರುವ ಅವರು, ಹಲವು ಧಾರಾವಾಹಿಗಳಿಗೆ ಕಥೆ, ಸಂಭಾಷಣೆ, ಚಿತ್ರಕಥೆ ಬರೆದಿದ್ದಾರೆ. ಇದರೊಂದಿಗೆ ಈವರೆಗೆ ಮೂರು ಸಿನಿಮಾ ನಿರ್ದೇಶಿಸಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಮೂರು ಸಿನಿಮಾಗಳನ್ನು ನಿರ್ದೇಶಿಸಲು ತಯಾರಿ ನಡೆಸಿದ್ದಾರೆ. ಇಷ್ಟಕ್ಕೂ ಈ ಶ್ರೀಧರ್‌ ಶೆಟ್ಟಿ ಯಾರು ಎಂಬ ಪ್ರಶ್ನೆಗೆ ಈ ಕೆಳಗಿರುವ ಸುದ್ದಿ ನೋಡಿ.

“1993 ರಲ್ಲಿ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರನ್ನು ಭೇಟಿಯಾದ ಶ್ರೀಧರ್,‌ ತಾವು ಬರೆದ ಕಥೆ ಹೇಳಿದಾಗ, ಸಿದ್ಧಲಿಂಗಯ್ಯ ಅವರು “ಡಬ್ಬಾ ಥರಾ ಇದೆ ಎಂದು ಬೈದು ಕಳಿಸಿದ್ದರಂತೆ”

ಸಿನಿಮಾರಂಗ ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ. ಆದರೆ, ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೆ. ಇಲ್ಲಿ ಪ್ರತಿಭೆ ಮತ್ತು ಅದೃಷ್ಟ ಇದ್ದರೆ ಯಾವುದೇ ಡಿಗ್ರಿಯ ಅಗತ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಶ್ರೀಧರ್‌ ಶೆಟ್ಟಿ ಬಗ್ಗೆ ಹೇಳೋದಾದರೆ, ಈಗಾಗಲೇ ಬದುಕಿನ ಅರ್ಧಸೆಂಚುರಿ ಮುಗಿಸಿ ಮುನ್ನೆಡೆಯುತ್ತಿದ್ದಾರೆ. ಆದರೆ, ಅವರ ಸಿನಿಮಾ ಉತ್ಸಾಹ ಮಾತ್ರ ಕುಗ್ಗಿಲ್ಲ. ಇವರು ಓದಿದ್ದು ಕೇವಲ 6 ನೇ ತರಗತಿ. ಹಾಗಂತ, ಇವರು ಬದುಕು ಬಲುಕಷ್ಟ ಅಂದುಕೊಳ್ಳಲೂ ಇಲ್ಲ. ಓದುವ ಆಸಕ್ತಿ ಇಟ್ಟುಕೊಳ್ಳದ ಇವರು ಸಿನಿಮಾ ಆಸಕ್ತಿ ಬೆಳೆಸಿಕೊಂಡರು. ಓದುವ ದಿನಗಳಲ್ಲೇ ಹಾಡು ಹಾಡುವ ಗೀಳು ಇಟ್ಟುಕೊಂಡವರು. ಕಾಲಕ್ರಮೇಣ ಇವರು ಕಥೆ ಬರೆಯುವುದರ ಕಡೆ ವಾಲಿದರು. ಆ ಸಮಯದಲ್ಲಿ ನಾಲ್ಕು ಕಥೆ ಬರೆದಿಟ್ಟುಕೊಂಡಿದ್ದರು. ಆಗಿನ ಒಂದಷ್ಟು ತಿಂಗಳ ಹಾಗೂ ವಾರದ ಪತ್ರಿಕೆಗಳಲ್ಲಿ ಪ್ರಕಟಿಸಲು ಕಳುಹಿಸಿದರೂ, ಇವರ ಕಥೆ ರಿಜೆಕ್ಟ್‌ ಆಗಿತ್ತು. ಬೇಸರಿಸಿಕೊಳ್ಳದ ಅವರು ಸಂಪಂಗಿರಾಮ ನಗರದ ದೇವರಾಜು ಎಂಬುವವರು ಗಣೇಶ ಹಬ್ಬದಲ್ಲಿ ಮಾಡುತ್ತಿದ್ದ ನಾಟಕವೊಂದರಲ್ಲಿನಟಿಸಲು ಅವಕಾಶ ಕೊಟ್ಟಿದ್ದಾರೆ. ನಟನೆಯ ಗಂಧ ತಿಳಿಯದ ಅವರಿಗೆ ಅಲ್ಲಿಂದ ನಟನೆ ಕಡೆ ಆಸಕ್ತಿ ಬೆಳೆದಿದೆ. ಅಲ್ಲಿಂದಲೇ ಅವರು ಸಿನಮಾ ಕಡೆ ವಾಲುವಂತಾಗಿದೆ. ನಟನೆ ಜೊತೆ ಕಥೆ ಬರೆಯುವ ಹುಚ್ಚು ಇಟ್ಟುಕೊಂಡಿದ್ದ ಶ್ರೀಧರ್‌ ಶೆಟ್ಟಿ, 1993 ರಲ್ಲಿ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರನ್ನು ಭೇಟಿಯಾದ ಶ್ರೀಧರ್‌ ತಾವು ಬರೆದ ಕಥೆ ಹೇಳಿದಾಗ, ಸಿದ್ಧಲಿಂಗಯ್ಯ ಅವರು “ಡಬ್ಬಾ ಥರಾ ಇದೆ ಎಂದು ಬೈದು ಕಳಿಸಿದ್ದರಂತೆ. ಅಷ್ಟಾದರೂ ಶ್ರೀಧರ್‌ ಕಥೆ ಬರೆಯುವುದನ್ನು ನಿಲ್ಲಿಸದೆ, ಸಿದ್ಧಲಿಂಗಯ್ಯ ಇರುತ್ತಿದ್ದ ಟೂರಿಸ್ಟ್‌ ಹೋಟೆಲ್‌ಗೆ ಹೋಗಿ ಕಥೆ ಹೇಳಲು ಕಾಡಿದ್ದಾರೆ. ಕೊನೆಗೆ ಇವರ ಕಾಟ ತಾಳಲಾರದೆ, ಸಿದ್ಧಲಿಂಗಯ್ಯ ಕೂರಿಸಿಕೊಂಡು ಕಥೆ ಬರೆಯುವುದನ್ನು ಹೇಳಿಕೊಟ್ಟಿದ್ದಾರೆ. ಆ ಬಳಿಕ ಶ್ರೀಧರ್‌, ಮತ್ತೊಂದು ಹೊಸ ಕಥೆ ಬರೆದುಕೊಂಡು ಹೋಗಿ ಕಥೆ ಹೇಳಿದಾಗ, ಪರವಾಗಿಲ್ಲ ಅರಿತಿದ್ದೀಯ ಅಂತ ಹೇಳಿದ್ದಲ್ಲದೆ, ನಾನೇ ಈ ಕಥೆಯನ್ನು ಸಿನಿಮಾ ಮಾಡ್ತೀನಿ ಎಂದಿದ್ದಾರೆ. ಆ ವೇಳೆ “ಪ್ರೇಮ ಪ್ರೇಮ” ಸಿನಿಮಾ ಸೋಲು ಕಂಡಿದ್ದರಿಂದ ಅವರು ಸಿನಿಮಾ ಮಾಡುವ ಪ್ರಯತ್ನ ಮಾಡಲಿಲ್ಲ. ಅಂದು ಶ್ರೀಧರ್‌ ಅವರ ಕಥೆಗೆ ಸಿದ್ಧಲಿಂಗಯ್ಯ ಅವರು ಇಟ್ಟ ಹೆಸರು, “ಬನವಾಸಿಯ ಬಯಲಲ್ಲಿ”. ಇಂದಿಗೂ ಆ ಕಥೆ ಹಾಗೆಯೇ ಇದೆ ಎಂಬುದು ಶ್ರೀಧರ್‌ ಶೆಟ್ಟಿ ಮಾತು.

ಇಷ್ಟಾದರೂ ಶ್ರೀಧರ್‌ ಸಿನಿಮಾ ಮೇಲಿನ ಆಸಕ್ತಿ ಕಳೆದುಕೊಳ್ಳದೆ, ಮರಳಿ ಯತ್ನವ ಮಾಡು ಎಂಬಂತೆ ಅವಕಾಶಕ್ಕಾಗಿ ಅಲೆದಾಡಿದ್ದಾರೆ. ಕೊನೆಗೆ ಕಿರುತೆರೆ ನಿರ್ದೇಶಕ ಅಮರ್‌ದೇವ್‌, ನಾಗತಿಹಳ್ಳಿ ಚಂದ್ರಶೇಖರ್‌ ಅವರ ಸಂಪರ್ಕ ಬೆಳೆಸಿಕೊಂಡು “ವಠಾರ” ಧಾರಾವಾಹಿಗೆ ಬರೆಯುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸುಮಾರು 600 ಸಂಚಿಕೆಗಳಿಗೆ ಬರೆಯುವುದರ ಜೊತೆಗೆ 300 ಸಂಚಿಕೆಗಳಲ್ಲಿ ನಟಿಸುವ ಅವಕಾಶವನ್ನೂ ಪಡೆದ ಶ್ರೀಧರ್‌, ನಾಗತಿಹಳ್ಳಿ ಚಂದ್ರಶೇಖರ್‌ ಅವರೊಂದಿಗೆ “ಬೆಳ್ಳಿಚುಕ್ಕಿ”ಯಲ್ಲೂ ಬರೆಯುವ ಅವಕಾಶ ಪಡೆದಿದ್ದಾರೆ. ಆದರೆ, 6ನೇ ತರಗತಿ ಓದಿದವನು ಹೇಗೆಲ್ಲಾ ಬರೆಯಬಹುದು ಎಂಬ ಅನುಮಾನದ ಮಾತುಗಳನ್ನಾಡಿದ್ದರಿಂದ, ಬೇಸತ್ತು, ಅಲ್ಲಿಂದ ಹೊರಬಂದಿದ್ದಾರೆ. ಕಾಲ ಕ್ರಮೇಣ ಅವರು ಸಿನಿಮಾ ನಿರ್ದೇಶನ ಕಡೆ ಮುಖ ಮಾಡಿದ್ದಾರೆ. “ಚಕ್ರ ಸುಳಿ” ಎಂಬ ಸಿನಿಮಾಗೆ ಕೈ ಹಾಕಿದ್ದಾರೆ. ಆ ಸಿನಿಮಾ ಮುಗಿಯುವ ಹಂತದಲ್ಲೇ ಅವರು “ಜನುಮದ ಸ್ನೇಹಿತರು” ಚಿತ್ರ ಮಾಡಿದ್ದಾರೆ. ಆ ಚಿತ್ರದ ಹೀರೋ ರೋಹಿತ್‌ ಶೆಟ್ಟಿ ಅವರು “ಆರೋಹಣ” ಚಿತ್ರ ನಿರ್ದೇಶನಕ್ಕೆ ಅವಕಾಶವನ್ನೂ ಕೊಟ್ಟಿದ್ದಾರೆ. ಈಗ ಅವರ “ಚಕ್ರ ಸುಳಿ” ಬಿಡುಗಡೆಗೆ ಸಿದ್ಧಗೊಂಡಿದೆ. ಕೈಯಲ್ಲಿ “ಮ್ಯಾಜಿಕ್‌ ಮನೆ” ಚಿತ್ರವಿದೆ. ಕಳೆದ ಯುಗಾದಿಯಲ್ಲಿ ಪೂಜೆಯಾಗಿದೆ. ಆದರೆ, ಲಾಕ್‌ಡೌನ್‌ ಆಗಿದ್ದರಿಂದ ಅದು ಸದ್ಯಕ್ಕೆ ಬ್ರೇಕ್‌ನಲ್ಲಿದೆ. ಇದರೊಂದಿಗೆ ಮೈಸೂರಿನ ರವಿ ಮತ್ತು ಅರ್ಬಾಜ್‌ ಎಂಬುವವರ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ತಡವಾದರೂ, ಅವಕಾಶ ಪಡೆದ ಶ್ರೀಧರ್‌, ಕನ್ನಡ ಚಿತ್ರರಂಗದಲ್ಲಿ ಚಂದದ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಅನುಭವ ಹೊಂದಿರುವ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆ ಸೂಕ್ತ ಕಾಲದಲ್ಲಿ ಅವಕಾಶ ಸಿಗಬೇಕಷ್ಟೆ. ಇಲ್ಲಿ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡರೆ, ಮುಂದಿನ ದಿನಗಳಲ್ಲಿ ಒಳ್ಳೆಯ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ.

Categories
ಸಿನಿ ಸುದ್ದಿ

ಲಹರಿ ಈಗ ಕೋಟಿ ಒಡೆಯ!

ವಜ್ರ ಪದಕ ಖುಷಿಯಲ್ಲಿ ಲಹರಿ ಮ್ಯೂಸಿಕ್‌ ಸಂಸ್ಥೆ

* 9 ವರ್ಷಗಳ ಕಠಿಣ ಶ್ರಮ * 6500 ಹಾಡುಗಳು * 4000 ಚಿತ್ರಗಳ ಟೀಸರ್‌, ಟ್ರೇಲರ್‌ * ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲೂ ಹವಾ * ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನ

ಮನೋಹರ್‌ ನಾಯ್ಡು, ವೇಲು

” ಯಾವುದೇ ಒಂದು ಸಾಧನೆಯ ಹಿಂದೆ ಒಂದು ಕಥೆ ಇರುತ್ತೆ. ಅಲ್ಲಿ ರಾತ್ರಿ-ಹಗಲಿನ ಕಠಿಣ ಶ್ರಮ ಇದ್ದೇ ಇರುತ್ತೆ. ಲಹರಿ ಮ್ಯೂಸಿಕ್‌ ಸಂಸ್ಥೆ ಕೂಡ ಅಂಥದ್ದೊಂದು ಕಠಿಣ ಶ್ರಮದ ಮೇಲೆಯೇ ಇಂದು ದಕ್ಷಿಣ ಭಾರತದಲ್ಲಿ ಟಾಪ್‌ನಲ್ಲಿದೆ. ದಶಕಗಳ ಹಿಂದೆ ಕೇವಲ 500 ರುಪಾಯಿ ಬಂಡವಾಳ ಹೂಡಿ ತನ್ನ ಶ್ರದ್ಧೆಯ ಕಾಯಕ ಶುರುಮಾಡಿದ ಲಹರಿ ಸಂಸ್ಥೆ, ಈಗ ಸಾವಿರಾರು ಕೋಟಿಯ ಒಡೆಯನಾಗಿದೆ ಅಂದರೆ, ಹಿಂದಿನ ಶ್ರಮದ ಫಲವದು”

ಇದು ಸುಮಾರು ಎರಡ್ಮೂರು ದಶಕಗಳ ಹಿಂದಿನ ಮಾತು. ಆಗೆಲ್ಲಾ ಟೇಪ್‌ ರೆಕಾರ್ಡ್‌ಗಳ ಸುಗ್ಗಿ. ನಗರ, ಪಟ್ಟಣವಷ್ಟೇ ಅಲ್ಲ, ಹಳ್ಳಿಗಳಲ್ಲೂ “ಪ್ರೇಮಲೋಕ” ಚಿತ್ರದ ಹಾಡುಗಳದ್ದೇ ಹಬ್ಬ! ಟೇಪ್‌ ರೆಕಾರ್ಡ್‌ ಇದ್ದವರ ಮನೆಯಲ್ಲಂತೂ “ಪ್ರೇಮಲೋಕ” ಕ್ಯಾಸೆಟ್‌ ಫಿಕ್ಸ್.‌ ಅಷ್ಟರಮಟ್ಟಿಗೆ “ಪ್ರೇಮಲೋಕ” ಹಾಡುಗಳು ಜನಪ್ರಿಯಗೊಂಡಿದ್ದವು. ಈ ಜನಪ್ರಿಯ ಹಾಡುಗಳನ್ನು ಅಂದಿನ ಕಾಲಕ್ಕೆ ಮನೆ ಮನಸ್ಸಿಗೆ ತಲುಪಿಸಿದ್ದು ಲಹರಿ ಆಡಿಯೋ ಸಂಸ್ಥೆ. ಆ ಕಾಲಕ್ಕೇ ಲಹರಿ ಆಡಿಯೋ ಸಂಸ್ಥೆಯದು ದೊಡ್ಡ ಹೆಸರು. ಆ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿರುವುದಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಉನ್ನತ ಸ್ಥಾನದಲ್ಲಿದೆ. ಅಷ್ಟೇ ಆಗಿದ್ದರೆ, ಹೆಚ್ಚು ಹೇಳುವ ಅಗತ್ಯ ಇರುತ್ತಿರಲಿಲ್ಲ. ಲಹರಿ ಮ್ಯೂಸಿಕ್‌ ಸಂಸ್ಥೆ ಈಗ ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಲಹರಿ ಮ್ಯೂಸಿಕ್‌ ಸಂಸ್ಥೆ ಬರೋಬ್ಬರಿ ಒಂದು ಕೋಟಿ ಚಂದಾದಾರರನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ ಎಂಬುದೇ ಈ ಹೊತ್ತಿನ ವಿಶೇಷ.

ಲಹರಿ ಆಡಿಯೋ ಸಂಸ್ಥೆ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವ ಮೂಲಕ ತನ್ನ ಚಂದಾದಾರರನ್ನೂ ಖುಷಿಪಡಿಸುತ್ತಿದೆ ಎಂಬುದು ಹೆಮ್ಮೆಯ ವಿಷಯ. ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಈ ಸಂಸ್ಥೆಯ ರೂವಾರಿಗಳು ಎಂಬುದು ಮತ್ತೊಂದು ಖುಷಿ. ಸಾಕಷ್ಟು ಸಂಕಷ್ಟಗಳ ಸವಾಲುಗಳನ್ನು ಎದುರಿಸಿದ ಈ ಸಹೋದರರು ಈಗ ಅನೇಕ ಉತ್ಸಾಹಿ ಯುವ ಉದ್ಯಮಿಗಳಿಗೆ, ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ. ಇಷ್ಟಕ್ಕೂ ಈ ಲಹರಿ ಮ್ಯೂಸಿಕ್‌ ಸಂಸ್ಥೆ ಖಾತೆಯಲ್ಲಿ ಒಂದು ಕೋಟಿ ಚಂದಾದಾರರು ಇದ್ದಾರೆಂದರೆ ಅದು ಲಹರಿ ಮ್ಯೂಸಿಕ್‌ ಸಂಸ್ಥೆ ಕೊಡುತ್ತಿರುವ ಗುಣಮಟ್ಟದ ಹಾಗೂ ಚಂದದ ಹಾಡುಗಳು ಕಾರಣ. ಇಷ್ಟೆಲ್ಲಾ ಪ್ರಗತಿಗೊಂಡಿರುವ ಲಹರಿ ಮ್ಯೂಸಿಕ್‌ ಸಂಸ್ಥೆ ಈಗಾಗಲೇ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಹಿಂದೆ ಯೂಟ್ಯೂಬ್‌ ಕೊಡಮಾಡುವ ಪ್ರತಿಷ್ಠಿತ ಸ್ವರ್ಣಪದಕ ಪ್ರಶಸ್ತಿಗೆ ಭಾಜನವಾಗಿದ್ದ ಲಹರಿ ಮ್ಯೂಸಿಕ್‌ ಈಗ ವಜ್ರ ಪದಕ ಪಡೆಯುವ ಉತ್ಸಾಹದಲ್ಲಿದೆ. ಅಂದಹಾಗೆ, ಈ ಅವಾರ್ಡ್‌ ಪಡೆಯುತ್ತಿರುವ ದಕ್ಷಿಣ ಭಾರತದ ಮೊದಲ ಮ್ಯೂಸಿಕ್‌ ಸಂಸ್ಥೆ ಎಂಬುದು ವಿಶೇಷ.

ಯಶಸ್ಸಿಗೆ ದಶಕದ ಕಠಿಣ ಶ್ರಮ ಕಾರಣ

ಯಾವುದೇ ಒಂದು ಸಾಧನೆಯ ಹಿಂದೆ ಒಂದು ಕಥೆ ಇರುತ್ತೆ. ಅಲ್ಲಿ ರಾತ್ರಿ-ಹಗಲಿನ ಕಠಿಣ ಶ್ರಮ ಇದ್ದೇ ಇರುತ್ತೆ. ಲಹರಿ ಮ್ಯೂಸಿಕ್‌ ಸಂಸ್ಥೆ ಕೂಡ ಅಂಥದ್ದೊಂದು ಕಠಿಣ ಶ್ರಮದ ಮೇಲೆಯೇ ಇಂದು ದಕ್ಷಿಣ ಭಾರತದಲ್ಲಿ ಟಾಪ್‌ನಲ್ಲಿದೆ. ದಶಕಗಳ ಹಿಂದೆ ಕೇವಲ 500 ರುಪಾಯಿ ಬಂಡವಾಳ ಹೂಡಿ ತನ್ನ ಶ್ರದ್ಧೆಯ ಕಾಯಕ ಶುರುಮಾಡಿದ ಲಹರಿ ಸಂಸ್ಥೆ, ಈಗ ಸಾವಿರಾರು ಕೋಟಿಯ ಒಡೆಯನಾಗಿದೆ ಅಂದರೆ, ಹಿಂದಿನ ಶ್ರಮದ ಫಲವದು. ಈ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, “ಈ ಸಾಧನೆಗೆ ಕಾರಣ ನಾವೊಬ್ಬರೇ ಅಲ್ಲ. ನನ್ನ ಸಿಬ್ಬಂದಿಯೂ ಇದ್ದಾರೆ. ಲಹರಿ ಮ್ಯೂಸಿಕ್‌ ಸಂಸ್ಥೆ ಒಂದು ಕೋಟಿ ಚಂದಾದಾರರನ್ನು ಹೊಂದಿದೆ ಅಂದರೆ, ನಿಜಕ್ಕೂ ಸುಲಭದ ಮಾತಲ್ಲ. ಇದಕ್ಕಾಗಿ ನಾವು ಕಳೆದ ಒಂದು ದಶಕದಿಂದಲೂ ಹಗಲು-ರಾತ್ರಿ ಕಠಿಣ ಶ್ರಮಪಟ್ಟಿದ್ದರಿಂದಲೇ ಇಂದು ಈ ಪ್ರತಿಫಲ ಕಾಣುವುದಕ್ಕೆ ಕಾರಣ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಏಕೈಕ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸಿದೆ. ಇದೊಂದು ರೀತಿ ಡಿಜಿಟಲ್‌ ಕ್ರಾಂತಿ. ಎಲ್ಲವೂ ಡಿಜಿಟಲ್‌ಮಯ ಆಗಿದ್ದರಿಂದ ಬಹಳಷ್ಟು ಆಡಿಯೋ ಕಂಪೆನಿಗಳು ಭಯಗೊಂಡಿದ್ದು ನಿಜ. ಆಗ ನಾವು ಬೇರೆ ಏನನ್ನೂ ಯೋಚಿಸದೆ, ಲಹರಿ ಮ್ಯೂಸಿಕ್‌ ಹೆಸರಲ್ಲಿ ಸಿಂಪಲ್ಲಾಗಿ ಒಂದು ಯುಟ್ಯೂಬ್‌ ಚಾನೆಲ್‌ ಶುರುಮಾಡಿದೆವು. ಆರಂಭದಲ್ಲಿ ಯಾವುದೇ ನಿರೀಕ್ಷೆಗಳಿಲ್ಲದೆ ಕೆಲಸ ಮಾಡಿದೆವು. ಜೀರೋದಿಂದ ಆರಂಭಿಸಿದ ಈ ಸಂಸ್ಥೆ ಈಗ ಉನ್ನತಮಟ್ಟದಲ್ಲಿದೆ. ಸಂಗೀತ ಕ್ಷೇತ್ರ ಎಂಬುದು ನಮ್ಮ ಪಾಲಿಗೆ ನಮ್ಮ ತಾಯಿ ಇದ್ದಂತೆ. ಇದಕ್ಕೆ ಚಿತ್ರರಂಗದ ಎಲ್ಲರೂ ಕಾರಣ ಎಂಬುದು ಲಹರಿ ವೇಲು ಮಾತು.

” ಒಂದು ಸಂಸ್ಥೆಯ ಬೆಳವಣಿಗೆ ಹಿಂದೆ ಮಹಾನ್‌ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ. ನಮ್ಮ ಈ ಲಹರಿ ಮ್ಯೂಸಿಕ್‌ ಸಂಸ್ಥೆಗೆ ನನ್ನ ಅಣ್ಣ ಮನೋಹರ್‌ ನಾಯ್ಡು ಅವರೇ ಬೆನ್ನೆಲುಬು. ನಮಗೆ ಅವರೇ ನಿಜವಾದ ಕ್ಯಾಪ್ಟನ್.‌ ನಾನು ಕೇವಲ ಈ ಲಹರಿ ಆಡಿಯೋ ಸಂಸ್ಥೆಯ ಉದ್ಯೋಗಿೈಷ್ಟೇ. ಇನ್ನು, ನನ್ನ ಅಣ್ಣನ ಮಕ್ಕಳಾದ ನವೀನ್‌ ಕುಮಾರ್‌ ಹಾಗೂ ಚಂದ್ರು ವಿದೇಶದಲ್ಲಿ ಓದಿದವರು. ಅವರು ತಾಂತ್ರಿಕತೆಯಲ್ಲಿ ಸಾಕಷ್ಟು ತಿಳಿದುಕೊಂಡಿದ್ದಾರೆ. ಅವರ ಆ ತಾಂತ್ರಿಕ ತಿಳುವಳಿಕೆ ಕೂಡ ನಮ್ಮ ಆಡಿಯೋ ಸಂಸ್ಥೆಯ ವ್ಯಾಪಾರ ವಹಿವಾಟುಗೆ ಸಹಕಾರಿಯಾಗಿದೆ ” 

ಲಹರಿಗೆ ನನ್ನ ಸಹೋದರ ಬೆನ್ನೆಲುಬು

ಒಂದು ಸಂಸ್ಥೆಯ ಬೆಳವಣಿಗೆ ಹಿಂದೆ ಮಹಾನ್‌ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ. ನಮ್ಮ ಈ ಲಹರಿ ಮ್ಯೂಸಿಕ್‌ ಸಂಸ್ಥೆಗೆ ನನ್ನ ಅಣ್ಣ ಮನೋಹರ್‌ ನಾಯ್ಡು ಅವರೇ ಬೆನ್ನೆಲುಬು. ನಮಗೆ ಅವರೇ ನಿಜವಾದ ಕ್ಯಾಪ್ಟನ್.‌ ನಾನು ಕೇವಲ ಈ ಲಹರಿ ಆಡಿಯೋ ಸಂಸ್ಥೆಯ ಉದ್ಯೋಗಿೈಷ್ಟೇ. ಇನ್ನು, ನನ್ನ ಅಣ್ಣನ ಮಕ್ಕಳಾದ ನವೀನ್‌ ಕುಮಾರ್‌ ಹಾಗೂ ಚಂದ್ರು ವಿದೇಶದಲ್ಲಿ ಓದಿದವರು. ಅವರು ತಾಂತ್ರಿಕತೆಯಲ್ಲಿ ಸಾಕಷ್ಟು ತಿಳಿದುಕೊಂಡಿದ್ದಾರೆ. ಅವರ ಆ ತಾಂತ್ರಿಕ ತಿಳುವಳಿಕೆ ಕೂಡ ನಮ್ಮ ಆಡಿಯೋ ಸಂಸ್ಥೆಯ ವ್ಯಾಪಾರ ವಹಿವಾಟುಗೆ ಸಹಕಾರಿಯಾಗಿದೆ. ಇಲ್ಲಿಯವರೆಗೆ ಸುಮಾರು 6500 ಹಾಡುಗಳು ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರಬಂದಿವೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಗಳ ಟೀಸರ್‌, ಟ್ರೇಲರ್‌ ಬಿಡುಗಡೆಗೊಂಡಿದೆ. ಕೇವಲ ಕನ್ನಡಕ್ಕೆ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ ಭಾಷೆಗೂ ಇದು ವಿಸ್ತರಣೆಯಾಗಿದೆ. ಇವತ್ತು ಈ ಲಹರಿ ಮ್ಯೂಸಿಕ್‌ ಸಂಸ್ಥೆ ಈ ಎತ್ತರಕ್ಕೆ ಬೆಳೆದಿದೆ ಅಂದರೆ, ಅದರ ಹಿಂದೆ ದೊಡ್ಡ ಶ್ರಮವಿದೆ. ನೂರಾರು ಕೋಟಿ ಹಣ ಹೂಡಿಕೆ ಮಾಡಿದ್ದೇವೆ. ದೊಡ್ಡ ಮಟ್ಟದ ಯಶಸ್ವಿ ಚಿತ್ರಗಳ ಹಾಡುಗಳಿಗೆ ಕೋಟಿಗಟ್ಟಲೆ ಖರ್ಚು ಮಾಡಿ ಹಕ್ಕು ಖರೀದಿಸಿದ್ದೇವೆ. ಪ್ರತಿ ಹಂತದಲ್ಲೂ ತುಂಬಾನೇ ರಿಸ್ಕ್‌ ತೆಗೆದುಕೊಂಡೇ ಕೆಲಸ ಮಾಡಿದ್ದೇವೆ ಅನ್ನೋದು ವೇಲು ಹೇಳಿಕೆ.

ಭಾವಗೀತೆಗೆ ಪ್ರತ್ಯೇಕ ಚಾನೆಲ್‌

ಬಹುಶಃ ಭಾವಗೀತೆಗೆಂದೇ ಪ್ರತ್ಯೇಕ ಯೂಟ್ಯೂಬ್‌ ಚಾನೆಲ್‌ ವಿರಳ. ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಭಾವಗೀತೆ ಹಾಡುಗಳನ್ನು ಎಲ್ಲೆಡೆ ಪಸರಿಸಲು ಲಹರಿ ಮ್ಯೂಸಿಕ್‌ ಸಂಸ್ಥೆ ಪ್ರತ್ಯೇಕ ಯೂಟ್ಯೂಬ್‌ ಚಾನೆಲ್‌ ಮಾಡಿದ್ದು ವಿಶೇಷತೆಗಳಲ್ಲೊಂದು. ಇದು ಭಾರತೀಯ ಚಿತ್ರರಂಗದಲ್ಲೇ ಮೊದಲು. ಹಾಗಾಗಿ ಇದೊಂದು ಮೈಲಿಗಲ್ಲು ಎನ್ನಬಹುದು. ಸದ್ಯಕ್ಕೆ ಭಾವಗೀತೆಗೆಂದೇ ವಿಶೇಷವಾಗಿ ರೂಪಿಸಿರುವ ಯೂಟ್ಯೂಬ್‌ ಚಾನೆಲ್‌ನಲ್ಲಿ ಈಗ ಎಂಟು ಲಕ್ಷ ಚಂದಾದಾರರಿದ್ದಾರೆ. ಇನ್ನು ಎರಡು ಲಕ್ಷ ಚಂದಾದಾರರಾದರೆ, ನಿಜಕ್ಕೂ ಇದೊಂದು ಹಿರಿಮೆ. ಈ ಕುರಿತು ಮಾತನಾಡುವ ವೇಲು, ಅವರು, ಆರಂಭದಲ್ಲಿ ಸಣ್ಣದ್ದಾಗಿ ಶುರು ಮಾಡಿದ ಈ ಸಂಸ್ಥೆ ಕೋಟಿ ಮಂದಿ ಚಂದಾದಾರರನ್ನು ಹೊಂದುತ್ತೆ ಎಂದು ಅಂದಾಜು ಇರಲಿಲ್ಲ. ಯಾವಾಗ ಡಿಜಿಟಲ್‌ ಮಾಧ್ಯಮದ ಹವಾ ಹೆಚ್ಚಾಯ್ತೋ, ಕೆಲವು ಆಡಿಯೋ ಕಂಪೆನಿಗಳು ಮುಚ್ಚಬೇಕಾಯ್ತು. ಆಗ ಇನ್ನೇನು ಸಂಗೀತ ಕ್ಷೇತ್ರದಲ್ಲಿರುವ ಆಡಿಯೋ ಕಂಪೆನಿಗಳು ಬಾಗಿಲು ಮುಚ್ಚುತ್ತವೆ ಅಂತ ಜನ ಮಾತಾಡತೊಡಗಿದರು. ಕೆಲವರು ಆಡಿಯೋ ಕಂಪೆನಿ ಮಾರಿದರು. ಆದರೆ, ನಾವು, ನೋಡೋಣ, ನಡೆಸೋಣ ಅಂತ ತಾಳ್ಮೆಯಿಂದ ಕಾದು ನೋಡಿದೆವು. ರಾತ್ರಿ-ಹಗಲು ಕಷ್ಟಪಟ್ಟೆವು. ಫಲ ಸಿಕ್ಕಿತು. ಈ ಸಾಧನೆ ಹಿಂದೆ ಹಲವರಿದ್ದಾರೆ. ನಮ್ಮ ಕಂಪೆನಿ ಮೇಲೆ ನಂಬಿಕೆ ಇಟ್ಟು ಬಂದವರಿಗೆ ಇದುವರೆಗೂ ಸಮಸ್ಯೆ ಆಗಿಲ್ಲ ಎಂಬುದು ಅವರ ಮಾತು.

Categories
ಸಿನಿ ಸುದ್ದಿ

ಸಿನಿ ಲಹರಿ ಲಾಂಚ್‌ ಮಾಡಿದ ಶ್ರೀಮುರಳಿ

ಸಿನಿಮಾ ಮಾಧ್ಯಮ ಲೋಕಕ್ಕೆ “ಸಿನಿ ಲಹರಿ ʼ ಎಂಟ್ರಿ

 ರಾಜ್ಯೋತ್ಸವದಂದು  ಸಿನಿ ಲಹರಿ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ

ಸಿನಿ ಲಹರಿ ಲಾಂಚ್‌ ಗೆ ಶ್ರೀ ಮುರಳಿ ಎಂಟ್ರಿ

ಒಂದು ಹೆಜ್ಜೆ ಇಟ್ಟಾಯಿತು. ಬಹು ದಿನದ  ಕನಸು ನನಸಾಯಿತು. ಮಾಧ್ಯಮ ಕ್ಷೇತ್ರದಲ್ಲಿದ್ದು,  ಸಿನಿಮಾಕ್ಕೆ ಸಂಬಂಧಿಸಿದಂತೆ ನಾವೇ ಒಂದು ವೆಬ್‌ ಸೈಟ್‌ ಶುರು ಮಾಡಬೇಕೆನ್ನುವ ಆಸೆಯಿತ್ತು. ಕೊನೆಗೂ ಅದು ಈಡೇರಿದ್ದು  ಈ ವರ್ಷದ ನೆವೆಂಬರ್‌ ೧ ಕ್ಕೆ .ವಿಶೇಷ  ಅಂದ್ರೆ, ಅವತ್ತು ಕನ್ನಡ ರಾಜ್ಯೋತ್ಸವ. ಕಾಕತಾಳೀಯ ಎನ್ನುವಂತೆ ಅಂದೇ ʼ ಸಿನಿ ಲಹರಿʼ  ವೆಬ್‌ ಸೈಟ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಎರಡು ಉದ್ಘಾಟನೆಗೊಂಡವು.

ಸಿನಿ ಲಹರಿ ವೆಬ್‌ ಸೈಟ್‌ ಲಾಂಚ್‌

ಅಂದು ಸಂಜೆ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋ ಸಭಾಂಗಣದಲ್ಲಿʼ ಸಿನಿ ಲಹರಿʼ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ ನಡೆಯಿತು. ಅಧಿಕೃತವಾಗಿ ಆಹ್ವಾನಿಸಿದ್ದಕ್ಕಿಂತ ಹೆಚ್ಚೇ ಸ್ನೇಹಿತರು, ಬಂಧುಗಳು, ಒಡನಾಡಿಗಳು , ಹಿತೈಷಿಗಳು  ಬಂದರು. ಕೊರೋನಾ ಕಾರಣಕ್ಕೆ ಹೆಚ್ಚು ಜನರೇ ಬೇಡ ಎಂದುಕೊಂಡಿದ್ದೆವು. ಆದರೆ ದೊಡ್ಡ ಸಂಖ್ಯೆಯ ಜನರೇ ಆಗಮಿಸಿ, ಸಿನಿ ಲಹರಿಗೆ ಮನ ದುಂಬಿ ಹಾರೈಸಿದ್ದನ್ನು ಮರೆಯಲಾಗದು.

ಕಾರ್ಯಕ್ರಮದ ಮುಖ್ಯ ಆಕರ್ಷಣೆ   ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ.  ಆರಂಭದಿಂದಲೂ ಅವರು ನಮ್ಮ ಜತೆಗಿದ್ದರು.  ಹಾಗಾಗಿ ಅವರೇ ಉದ್ಘಾಟನೆ ಮಾಡಬೇಕೆನ್ನುವುದು ನಮ್ಮಗಿದ್ದಆಸೆ. ಅಂತೆಯೇ ನಟ ಶ್ರೀಮುರಳಿ ಅಂದು ಹಾಜರಿದ್ದು “ಸಿನಿ ಲಹರಿ” ವೆಬ್ ಸೈಟ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಉದ್ಘಾಟಿಸಿದರು. ” ತುಂಬಾ ಆಪ್ತರು ಶುರುಮಾಡಿದ ಸಂಸ್ಥೆ. ಆವರು ಆಹ್ವಾನಿಸದ್ದೇ ಇದಿದ್ದರೂ ನಾನಿಲ್ಲಿಗೆ ಬರುತ್ತಿದ್ದೆ. ಇದು ನನ್ನದೇ ಕಾರ್ಯಕ್ರಮ ಎನ್ನುವಷ್ಟು ಖುಷಿಯಿದೆ. ಈ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆಯಲಿ ʼ ಅಂತ ಹಾರೈಸಿದರು.

ಇನ್ನು ಸಿನಿಲಹರಿಯ ಬೆನ್ನೆಲಬು ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆಯ ಮಾಲೀಕ ಲಹರಿ ವೇಲು ಅವರು. ಅವರು ಕೂಡ ಹಾಜರಿದ್ದು ಸಿನಿ ಲಹರಿ ಉದ್ಘಾಟನೆಗೆ ಸಾಕ್ಷಿಯಾದರು.  ಸಂಸ್ಥೆಯ ಆರಂಭಕ್ಕೆ ಅವರೇ ಕಾರಣವಾಗಿದ್ದರಿಂದ, ಆರಂಭದ ದಿನಗಳಲ್ಲಿ ಸಂಸ್ಥೆಯ ರೂವಾರಿಗಳು ಪಟ್ಟ ಪರಿಶ್ರಮ ನೆನಪಿಸಿಕೊಂಡು ಭಾವುಕರಾದರು. ನಟ ರವಿಶಂಕರ್‌ ಗೌಡ, ನಟಿ ಆರೋಹಿನಾರಾಯಣ್‌, ನಿರ್ಮಾಪಕ ಪಿ. ಕೃಷ್ಣ, ಕೆಪಿಸಿಸಿ ಕೋ ಆರ್ಡಿನೇಟರ್‌ ಟಿ. ನಾಗರಾಜ್‌ ವೇದಿಕೆಯಲ್ಲಿದ್ದು , ಉದ್ಘಾಟನೆಗೆ ಮೆರಗು ತಂದರು. ಕೊನೆಯಲ್ಲಿ ರಾಷ್ಟ್ರಪಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಎಂಟ್ರಿ ಕೊಟ್ಟು ನಮ್ಮ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು.

ಅಷ್ಟೇ ಅಲ್ಲ, ನಾವು ವೇದಿಕೆಗೆ ಆಹ್ವಾನಿಸಲೇ ಬೇಕಿದ್ದ ಹಲವರು  ಸಭಿಕರ ಸಾಲಿನಲ್ಲಿದ್ದರು. ಅವೆಲ್ಲರೂ ತಾವು ಸೆಲಿಬ್ರಿಟಿಗಳು ಎನ್ನುವ ಯಾವುದೇ ಅಹಂ ಇಲ್ಲದೆ ಕೇವಲ ನಮ್ಮ ಮೇಲಿನ ಪ್ರೀತಿಗೆ ಬಂದಿದ್ದು, ವಿಶೇಷ. ಆ  ಪೈಕಿ ಕನ್ನಡ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇ ಗೌಡ,  ನಿರ್ಮಾಪಕ ಕಮ್‌ ನಿರ್ದೇಶಕ ರಘುವರ್ಧನ್‌,  ಹೇಮಂತ್‌ ಕುಮಾರ್‌, ನಿರ್ದೇಶಕರಾದ ಮಂಸೋರೆ, ನಾಗಚಂದ್ರ,  ನೂತನ್‌ ಉಮೇಶ್‌, ಮಾ. ಚಂದ್ರು,  ನಟರಾದ ಮಧು, ‌ ಕಾಕ್ರೋಚ್‌ ಸುಧಿ, ಬೆನಕ ಗುಬ್ಬಿ ವೀರಣ್ಣ, ಯಶ್‌ ರಾಜ್‌,  ಪ್ರಸಾದ್‌, ಸಂಗೀತ ನಿರ್ದೇಶಕ ವೀರ್‌ ಸಮರ್ಥ್‌, ಸಂಕಲನ ಕಾರ ಕಿರಣ್‌ ಕುಮಾರ್‌, ಪಿಆರ್‌ ಒ ವೆಂಕಟೇಶ್‌, ವಿಜಯ್‌ ಕುಮಾರ್‌ , ಚಿತ್ರತಾರಾ ಮನು ಸೇರಿದಂತೆ ಹಲವರು ಹಾಜರಿದ್ದು,  ಸಿನಿ ಲಹರಿ ಉದ್ಘಾಟನೆಗೆ ಸಾಕ್ಷಿಯಾದರು. ಇನ್ನು ಮುಂದೆ  ತಾಜಾ ಸುದ್ದಿಗಳೊಂದಿಗೆ ಸಿನಿ ಲಹರಿ ನಿಮ್ಮ ಮುಂದೆ.

ಕಾರ್ಯಕ್ರಮದ ಫೋಟೋ ಝಲಕ್…

Categories
ಸಿನಿ ಸುದ್ದಿ

ಅಭಿಮಾನಿಗಳೆ  ನನ್ನ  ಉಳಿಸಿ..!

  1. ಕಳೆದು ಹೋಗುತ್ತಿರುವ ಚಿತ್ರಮಂದಿರಗಳ ಗೋಳು ಕೇಳುತ್ತೀರಾ? 

” ಶುಕ್ರವಾರ ಬಂತೆಂದರೆ ಸಾಕು, ನನ್ನ ಎದುರು ಜನಜಾತ್ರೆ. ಹಲಗೆ, ಡೊಳ್ಳು, ಶಿಳ್ಳೆ, ಕೇಕೆ ಜೊತೆ ಕುಣಿತದ ಸಂಭ್ರಮವೇ ತುಂಬಿ ತುಳುಕುತ್ತಿತ್ತು. ಹಾರ, ತುರಾಯಿ ಹಾರಾಟ ಜೋರಾಗಿಯೇ ಇರುತ್ತಿತ್ತು. ಅದೆಷ್ಟೋ ಜನರನ್ನು ಕುಣಿಸಿದ್ದೇನೆ, ಖುಷಿಪಡಿಸಿದ್ದೇನೆ. ರಂಜಿಸಿದ್ದೇನೆ. ಹೇಳಲಾಗದಷ್ಟು ಸಂಭ್ರಮಕ್ಕೆ ಕಾರಣವಾಗಿದ್ದೇನೆ. ಆದರೆ, ಕೊರೊನಾ ಎಂಬ ಮಹಾಮಾರಿ ನನ್ನಲ್ಲಿದ್ದ ಆ ಖುಷಿಯನ್ನು ದೂರಪಡಿಸಿತ್ತಲ್ಲದೆ, ನನ್ನೊಂದಿಗಿದ್ದ ನೌಕರರನ್ನೂ ನನ್ನಿಂದ ದೂರ ಮಾಡುವಂತಹ ಪರಿಸ್ಥಿತಿಗೆ ನೂಕಿಬಿಟ್ಟಿದೆ. ಇಷ್ಟೇ ಆಗಿದ್ದರೆ, ನನ್ನ ನೋವನ್ನು ನಾನೀಗ ತೋಡಿಕೊಳ್ಳುತ್ತಿರಲಿಲ್ಲ. ಕೊರೊನಾ ನೆಪ ಹೇಳಿ ಇನ್ನು ಮುಂದೆ ಸಂಪೂರ್ಣವಾಗಿಯೇ ನನ್ನನ್ನು ಕಡೆಗಣಿಸುತ್ತಾರೇನೋ ಎಂಬ ಭಯ ನನ್ನನ್ನು ಕಾಡುತ್ತಿದೆ…”

– ಇದು ಯಾರೋ ಹೇಳಿದ ಮಾತಲ್ಲ. ಪ್ರಸ್ತುತ ರಾಜ್ಯದಲ್ಲಿರುವ ಕೆಲವು ಚಿತ್ರಮಂದಿರಗಳು ಹೇಳಿಕೊಳ್ಳುತ್ತಿರುವ ಪರಿ. ಹೌದು, ಕೊರೊನಾ ಇಡೀ ಜಗತ್ತನ್ನೇ ಕಾಡಿದ್ದು ಸುಳ್ಳಲ್ಲ. ಇದಕ್ಕೆ ಚಿತ್ರರಂಗವೂ ಹೊರತಲ್ಲ ಬಿಡಿ. ಕೊರೊನಾದಿಂದ ಅದೆಷ್ಟೋ ಮಂದಿ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ನೆಲೆ ಕಾಣದೆ ಪರಿತಪಿಸುತ್ತಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಡೀ ಜಗತ್ತಿನ ವ್ಯಾಪಾರ-ವಹಿವಾಟು ಕುಸಿದಿದ್ದಷ್ಟೇ ಅಲ್ಲ, ಕಷ್ಟಪಟ್ಟು ಕಟ್ಟಿಕೊಂಡಿದ್ದ ಬದುಕು ಕೂಡ ರಪ್ಪನೆ ಕಳಚಿಬಿದ್ದಿದೆ. ಇಲ್ಲೀಗ ಕಳಚಿ ಬೀಳುತ್ತಿರುವ ಚಿತ್ರಮಂದಿರಗಳ ಬಗ್ಗೆಯೂ ಹೇಳಲೇಬೇಕಿದೆ.

ಹೌದು, ಕಪ್ಪು-ಬಿಳುಪು ಸಿನಿಮಾಗಳ ಕಾಲದಿಂದಲೂ ದಶಕಗಳ ಕಾಲ ಜನರನ್ನು ರಂಜಿಸುತ್ತಿದ್ದ ಅದೆಷ್ಟೋ ಚಿತ್ರಮಂದಿರಗಳು ಈಗಲೂ ಇವೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು, ಪಟ್ಟಣಗಳಲ್ಲಿದ್ದ ಕೆಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದು ಗೊತ್ತೇ ಇದೆ. ಜನರಿಗೆ ರಸದೌತಣ ನೀಡುತ್ತಿದ್ದ ಚಿತ್ರಮಂದಿರಗಳು ಮಾಲೀಕರ ನಿರ್ಧಾರದಿಂದಾಗಿ ನೆಲಸಮಗೊಂಡು ಕಮರ್ಷಿಯಲ್‌ ಬಿಲ್ಡಿಂಗ್‌ ರೂಪ ಪಡೆದುಕೊಂಡಿವೆ. ಈಗ ಕೊರೊನೊ ತಂದ ಅವಾಂತರದಿಂದಾಗಿ, ಇದ್ದ ಬದ್ದ ಕೆಲವು ಚಿತ್ರಮಂದಿರಗಳೂ ಕೂಡ ಸಂಪೂರ್ಣ ಮುಚ್ಚುವ ಸಾಧ್ಯತೆ ಇದೆ. ಇದಕ್ಕೆ ಕಾರಣ, ಮತ್ತದೇ ಕೊರೊನಾ!

ಇದು ನಿಜಕ್ಕೂ ನೋವಿನ ಸಂಗತಿ

ದಶಕಗಳ ಕಾಲ ಸಾವಿರಾರು ಸಿನಿಮಾಗಳ ಪ್ರದರ್ಶನ ಮಾಡಿರುವ ಕೆಲವು ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ಬಲಿಯಾಗುತ್ತಿವೆ ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿವೆ. ಇದು ನಿಜವಾದರೂ, ಎಷ್ಟರ ಮಟ್ಟಿಗೆ ಅದು ದೃಢ ಎಂಬುದು ಸದ್ಯಕ್ಕೆ ಸ್ಪಷ್ಟವಿಲ್ಲ. ಆದರೂ, ಒಂದಷ್ಟು ಚಿತ್ರಮಂದಿರಗಳು ಪುನಃ ಬಾಗಿಲು ತೆಗೆಯುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಲೇ ಇದೆ. ಎಲ್ಲಾ ಸರಿ, ಅಷ್ಟಕ್ಕೂ ಚಿತ್ರಮಂದಿರಗಳೇಕೆ ಮುಚ್ಚುವ ಪರಿಸ್ಥಿತಿಯಲ್ಲಿವೆ ಎಂಬ ಪ್ರಶ್ನೆಗೆ ಉತ್ತರ, ಕೊರೊನಾ ತಂದ ನಷ್ಟ.

ನಿಜ, ಕೊರೊನಾದಿಂದಾಗಿ ಲಾಕ್‌ಡೌನ್‌ ಮಾಡಬೇಕಾದ ಪರಿಸ್ಥಿತಿ ಬಂದೊದಗಿತು. ಇದರಿಂದ ಎಲ್ಲವೂ ಬಂದ್‌ ಆಯ್ತು. ಚಿತ್ರಮಂದಿರಗಳೂ ಇದಕ್ಕೆ ಹೊರತಾಗಲಿಲ್ಲ. ಕಳೆದ ಎಂಟು ತಿಂಗಳಿನಿಂದಲೂ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದರಿಂದ, ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ನೌಕರರು ಕೂಡ ಬೀದಿಗೆ ಬಿದ್ದರು. ಅಷ್ಟೇ ಯಾಕೆ, ಸ್ವತಃ ಮಾಲೀಕರು ಸಹ, ಚಿತ್ರಮಂದಿರವನ್ನು ಮೇಂಟೈನ್‌ ಮಾಡದಂತಹ ಪರಿಸ್ಥಿತಿಗೆ ಬಂದು ಮುಚ್ಚುವ ನಿರ್ಧಾರ ಮಾಡುವಂತಾಗಿದೆ. ಮಾಹಿತಿ ಪ್ರಕಾರ ರಾಜ್ಯದಲ್ಲಿರುವ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಮುಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣ? ನಷ್ಟ. ಇದು ನಿಜ, ಚಿತ್ರಮಂದಿರಗಳು ಈಗ ನಷ್ಟದಲ್ಲಿವೆ.

ಅದರಲ್ಲೂ ಈ ಲಾಕ್‌ಡೌನ್‌ ಟೈಮ್‌ನಲ್ಲಿ ಬಾಗಿಲು ಮುಚ್ಚಿದ್ದರಿಂದ ಕರೆಂಟ್‌ ಬಿಲ್‌, ವಾಟರ್‌ ಬಿಲ್‌ ಇತ್ಯಾದಿ ಖರ್ಚುಗಳೆಲ್ಲವೂ ಚಿತ್ರಮಂದಿರಗಳ ಮಾಲೀಕರ ಮೇಲೆಯೇ ಬಂದಿದೆ. ಅದು ಸಾವಿರಾರು ರುಪಾಯಿ ಆಗಿದ್ದರೆ, ಹೇಗೋ ಪರಿಸ್ಥಿತಿ ನಿವಾರಿಸಿಕೊಳ್ಳಬಹುದಿತ್ತೇನೋ? ಆದರೆ, ಲಕ್ಷಾಂತರ ರುಪಾಯಿ ಬಿಲ್‌ ಪಾವತಿಸುವುದೆಂದರೆ ನಿಜಕ್ಕೂ ನಿವಾರಿಸುವುದು ಕಷ್ಟ ಸಾಧ್ಯ. ಇದೊಂದೇ ಕಾರಣಕ್ಕೆ ಮಾಲೀಕರು ತಮ್ಮ ಚಿತ್ರಮಂದಿರಗಳನ್ನು ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟುವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ದುಡಿದ ನೌಕರರನ್ನೂ ಹೊರಗಿಡುವ ಪರಿಸ್ಥಿತಿ ಬಂದೊದಗಿದೆ ಎಂಬುದು ಚಿತ್ರಮಂದಿರ ಮಾಲೀಕರೊಬ್ಬರ ನೋವಿನ ನುಡಿ. ಚಿತ್ರಮಂದಿರಗಳನ್ನು ಪುನಃ ಆರಂಭಿಸುವ ಮುನ್ನ, ಕರೆಂಟ್‌ ಬಿಲ್‌ ಸೇರಿದಂತೆ ಇತ್ಯಾದಿ ಬಿಲ್‌ಗಳನ್ನು ಭರಿಸಲೇಬೇಕು. ಭರಿಸಲು ಮಾಲೀಕರಲ್ಲಿ ಈಗ ಅಷ್ಟೊಂದು ಹಣವಿಲ್ಲ.

ಸಿನಿಮಾ ಬಿಡುಗಡೆಯಾಗಿ, ಥಿಯೇಟರ್‌ ಚಾಲನೆಯಲ್ಲಿರುತ್ತಿದ್ದರೆ, ಎಲ್ಲವೂ ಸರಿಯಾಗಿರುತ್ತಿತ್ತು. ಆದರೆ, ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಹೀಗಾಗಿಯೇ, ಚಿತ್ರಮಂದಿರಗಳನ್ನು ಮುಚ್ಚುವುದರ ಜೊತೆಗೆ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಮಾಲೀಕರು ಬಂದಿದ್ದಾರೆ ಎನ್ನಲಾಗಿದೆ. ಅದೇನೆ ಇರಲಿ, ವರ್ಷಾನುಗಟ್ಟಲೆ ರಂಜಿಸಿದ್ದ ಚಿತ್ರಮಂದಿರಗಳು ಹೀಗೆ ದಿಢೀರನೆ ಮುಚ್ಚುತ್ತವೆ ಅಂದಾಗ, ಎಂಥವರಿಗೂ ಬೇಸರ ಇದ್ದೇ ಇರುತ್ತೆ. ಸಿನಿರಸಿಕರಿಗಂತೂ ಚಿತ್ರಮಂದಿರಗಳ ಮೇಲೆ ಪ್ರೀತಿ ಇದ್ದೇ ಇರುತ್ತೆ. ಅದರಲ್ಲೂ ಚಿತ್ರಮಂದಿರವನ್ನು ಸ್ವಚ್ಛವಾಗಿಟ್ಟುಕೊಂಡು, ಪ್ರತಿ ದಿನ ಬರುವ ಪ್ರೇಕ್ಷಕರನ್ನು ಅಷ್ಟೇ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಕೂಡ ಈಗ ಅಕರಶಃ ಬೀದಿಪಾಲು. ಇದಕ್ಕೊಂದು ಪರಿಹಾರ ಇದೆಯಾ? ಗೊತ್ತಿಲ್ಲ. ಅದನ್ನು ಚಿತ್ರಮಂದಿರ ಮಾಲೀಕರೇ ನಿರ್ಧರಿಸಬೇಕು, ಚಿತ್ರಮಂದಿರ ಪಾಲಿಗೆ ಒಳ್ಳೆಯ ದಿನಗಳು ಬರಬೇಕು ಅನ್ನುವುದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಹಿರಿಯ ರಂಗಕರ್ಮಿ‌‌ ಹೆಚ್.ಜಿ. ಸೋಮಶೇಖರ್ ರಾವ್ ( ಸೋಮಣ್ಣ ) ಇನ್ನಿಲ್ಲ

ಹಿರಿಯ ರಂಗಕರ್ಮಿ  ಹಾಗೂ ನಟ  ಹೆಚ್. ಜಿ. ಸೋಮಶೇಖರ ರಾವ್ (ಸೋಮಣ್ಣ)‌ಇಂದು‌ ವಿಧಿ‌ವಶರಾದರು.‌ ಅವರಿಗೆ 86 ವರ್ಷ ವಯಸ್ಸಾಗಿತ್ತು.‌ವಯೋ ಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಅವರು ನಿಧನರಾದರು.


ಹಿರಿಯ ನಟ ದತ್ತಣ್ಣ ನವರ ಸಹೋದರರಾಗಿದ್ದ ಸೋಮಶೇಖರ ರಾವ್‌, ವೃತ್ತಿಯಲ್ಲಿ  ಬ್ಯಾಂಕ್ ಅಧಿಕಾರಿಯಾಗಿದ್ದರು. ಆದರೂ ಸಹ  ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕಾರರ ಕೃತಿಗಳನ್ನು  ರಂಗ ಪ್ರಯೋಗಕ್ಕೆ ತಂದಿದ್ದರು. ಆ ಪ್ರಯೋಗಗಳ ಮೂಲಕ ಆ ನಾಟಕಕಾರರನ್ನು ಜೀವಂತಗೊಳಿಸಿದ್ದುಗಮನಾರ್ಹ.

ಸೋಮಶೇಖರ್ ರಾವ್ ಅ‌ವರು ಚಿತ್ರರಂಗವನ್ನು ಪ್ರವೇಶಿಸಿದ್ದು 1981 ರಲ್ಲಿ, ಟಿ.ಎಸ್.ರಂಗಾರವರ ನಿರ್ದೇಶನದ ‘ಸಾವಿತ್ರಿ’ಮೂಲಕ. ಖ್ಯಾತ ನಟ ಅನಿಲ್ ಠಕ್ಕರ್ ಅವರ ” ಪ್ರತಿದ್ವಂದಿʼ ಯಾಗಿ ಇವರು ನೀಡಿದ ಅಭಿನಯ ಪ್ರೇಕ್ಷಕರ ಮೆಚ್ಚುಗೆ  ಪಡೆದಿತ್ತು. ಆನಂತರ ಸೋಮಶೇಖರ್ ರಾವ್‌ ಅವರು, ಅನೇಕ ಚಿತ್ರಗಳಲ್ಲಿ ಭಾವಪ್ರಧಾನ ಮತ್ತು ಹಾಸ್ಯಪ್ರಧಾನ ಪಾತ್ರ ನಿರ್ವಹಿಸಿದರು.  ರವಿ ನಿರ್ದೇಶನದ ‘ಮಿಥಿಲೆಯ ಸೀತೆಯರು’ಇವರ ಅಭಿನಯ ಸಾಮರ್ಥ್ಯವನ್ನು ಸಮರ್ಥವಾಗಿ ಗುರುತಿಸುವಂತೆ ಮಾಡಿತು.

ರವೀಯವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾವ್ ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಅವರಿ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು. ಕೆನರಾ ಬ್ಯಾಂಕ್  ನಲ್ಲಿ ಉನ್ನತ  ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ನಂತರ ಸೋಮಣ್ಣ, ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ನಿಜವಾದ ಕಾಯಕವಾಗಿ ಮಾಡಿಕೊಂಡರು.

ನಟ, ರಂಗ ಕರ್ಮಿ  ಸೋಮಶೇಖರ ರಾವ್‌  ಬದುಕಿನ ಅನುಭವ ಕಥನವು ಪ್ರಕಟವಾಗಿದ್ದು, ಅವರ ಕಲಾ ಸೇವೆಯನ್ನು  ಗಂಭೀರವಾಗಿ ದಾಖಲು ಮಾಡಲಾಗಿದೆ. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ರಾವ್‌ ಅವರು,   ತಮ್ಮ 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು, ರಂಗಭೂಮಿ ಮತ್ತು ಕಿರುತೆರೆ ಎರಡು ಕ್ಷೇತ್ರಗಳು ಬಡವಾಗುವಂತೆ ಮಾಡಿದೆ. ಸಿನಿಮಾ ಮತ್ತು ರಂಗಭೂಮಿ ಎರಡು ಕ್ಷೇತ್ರದ ಗಣ್ಯರು ರಾವ್‌ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

( ಫೋಟೋ – ಪ್ರಗತಿ ಅಶ್ವಥ್‌ ನಾರಾಯಣ)

Categories
ಸಿನಿ ಸುದ್ದಿ

ಸ್ಟಾರ್ಸ್‌ ಬರಬೇಕು, ಸಿನ್ಮಾ ರಥ ಸಾಗಬೇಕು‌ !

ಉತ್ಸಾಹದಲ್ಲಿ ಕನ್ನಡ ಚಿತ್ರರಂಗ

 

ಚಿತ್ರಮಂದಿರಕ್ಕೆ ಸ್ಟಾರ್ಸ್‌ ಸಿನಿಮಾಗಳು ಬರುವ ಮೂಲಕ ಸಿನಿರಸಿಕರನ್ನು ಕರೆತರುವ ಅಗತ್ಯವಿದೆ. ಆದರೆ, ಮೊದಲು ಚಿತ್ರಮಂದಿರಕ್ಕೆ ಬರುವ ಧೈರ್ಯ ಯಾರು ಮಾಡುತ್ತಾರೆ ಅನ್ನೋದು ಮುಖ್ಯ. ಸ್ಟಾರ್ಸ್‌ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿರುತ್ತೆ. ಅವರು ಬಿಡುಗಡೆಗೆ ರೆಡಿಯಾಗಿರುವ ತಮ್ಮ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಮನಸ್ಸು ಮಾಡಿ, ಬಿಡುಗಡೆ ಮಾಡಿದ್ದಲ್ಲಿ, ಫ್ಯಾನ್ಸ್‌ ಸಿನಿಮಾ ನೋಡೋಕೆ ಬರುತ್ತಾರೆ.

Categories
ಸಿನಿ ಸುದ್ದಿ

ಲಾಸ್ಟ್ ಸೀನ್ ಎಂಬ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಆಲ್ಬಂ

ನಾಲ್ಕು ಭಾಷೆಗಳಲ್ಲಿ ಬರುತ್ತಿದೆ ನೊಂದ ಹೆಣ್ಣಿನ ಗೀತೆ

ಬಣ್ಣದ ಜಗತ್ತಿನಲ್ಲೀಗ ಎಲ್ಲವೂ ಪ್ಯಾನ್ ಇಂಡಿಯಾ. ‘ಕೆಜಿಎಫ್’ ನಂತರ ಅದು ಸ್ಯಾಂಡಲ್ ವುಡ್ ನಲ್ಲೂ ದೊಡ್ಡ ಹವಾ ಸೃಷ್ಟಿಸಿದ್ದು ನಿಮಗೂ ಗೊತ್ತಿದೆ. ಅದರ ಪ್ರಭಾವವೇ ಎನ್ನುವ ಹಾಗೆ, ಮುಂಬರುವ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ರಿಲೀಸ್ ಗೆ ಕಾದಿವೆ. ಸಿನಿಮಾ ಕತೆ ಇದಾದರೆ, ಈಗ ಆಲ್ಭಂ ಸಾಂಗ್ ಮೇಕಿಂಗ್ ನಲ್ಲೂ ಇದೇ ಟ್ರೆಂಡ್ ಶುರುವಾಗಿದೆ. ‌’ಲಾಸ್ಟ್ ಸೀನ್’ ಹೆಸರಿನ ಒಂದು‌ ವಿಡಿಯೋ‌ ಸಾಂಗ್ ಅಲ್ಬಂ ಈಗ ಅದೇ ಕಾರಣಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಮೊದಲು‌ ಕನ್ನಡದಲ್ಲಿ‌ ರಿಲೀಸ್..

ಅದ್ದೂರಿ ಸಿನಿಮಾ ಮಾದರಿಯಲ್ಲೆ ಇದು ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ‌ ನಿರ್ಮಾಣಗೊಂಡಿದೆ. ಅಷ್ಟು ಭಾಷೆಗಳಲ್ಲೂ ಹಂತ‌ಹಂತವಾಗಿ ಬಿಡುಗಡೆಯಾಗುತ್ತಿದೆ. ಇದರ ಮೊದಲ ಹಂತವಾಗಿ ಭಾನುವಾರ( ಸೆ.27) ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಇದರ ಕನ್ನಡದ ಆವತರಿಣಿಕೆ ಲಾಂಚ್ ಆಗಿದೆ. ಕನ್ನಡದ ಮಟ್ಟಿಗೆ ನಾಲ್ಕುವರೆ ನಿಮಿಷಗಳ ಒಂದು ವಿಡಿಯೋ ಸಾಂಗ್ ಆಲ್ಬಂ ಅದ್ದೂರಿ ವೆಚ್ವದಲ್ಲಿ‌ ನಿರ್ಮಾಣಗೊಂಡು, ಪ್ಯಾನ್ ಇಂಡಿಯಾ ಟ್ರೆಂಡ್ ಮೂಲಕ ಬಹು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಒಂದು ಉತ್ಸಾಹಿ ಯುವಕರ ತಂಡ.

ಉತ್ಸಾಹಿ ಯುವಕರ ಪ್ರಯತ್ನ…

‘ಮಿ.ಬೀಜಾ’ ಹೆಸರಿನ ಕಿರುಚಿತ್ರದೊಂದಿಗೆ ಈಗಾಗಲೇ ಒಂದಷ್ಟು ಹೆಸರು ಮಾಡಿದ್ದ ಚಿತ್ರದುರ್ಗ ಮೂಲದ ಎನ್. ವಿನಾಯಕ , ರಚಿಸಿ- ನಿರ್ದೇಶಿರುವ ವಿಡಿಯೋ‌ ಸಾಂಗ್ ಆಲ್ಬಂ ಇದು.ವಿನು ಐಡಿಯಾ ಪ್ರೊಡಕ್ಷನ್ ಮೂಲಕ ನಿರ್ಮಾಣಗೊಂಡಿದೆ. ಹೊಸ ಪ್ರತಿಭೆಗಳಾದ ವಾಗೀಶ್ ಆಯುಷ್ ಹಾಗೂ ಸಂಗೀತಾ ಇದರ ಪ್ರಮುಖ ಕಲಾವಿದರು.ಪ್ರಮೋದ್ ಆಚಾರ್ಯ ಅವರ ಸಾಹಿತ್ಯಕ್ಕೆ ಜುಬೇರ್ ಮೊಹಮದ್ ಸಂಗೀತ ನೀಡಿದ್ದಾರೆ.ಮನು ಬಿ.ಕೆ‌.ಛಾಯಾಗ್ರಹಣ, ಕೃಷ್ಣ ಸುಜಾನ್ ಸಂಕಲನ ಮಾಡಿದ್ದಾರೆ.ವಾಸುಕಿ ವೈಭವ್ ಅವರ ಗಾಯನಕ್ಕೆ ಮೋಹನ್ ಜಾಕ್ಸನ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಅದ್ದೂರಿ ಮೇಕಿಂಗ್..

ಕನ್ನಡ ಹೊರತು ಪಡಿಸಿ ಉಳಿದ ಮೂರು ಭಾಷೆಗಳಿಗೆ ಗೌತಮ್ ಶಕ್ತಿ, ಜಯ ಚಂದ್ರ ಹಾಗೂ ರಾಜೇಶ್ ಅವರ ಸಾಹಿತ್ಯಕ್ಕೆ ಜುಬೇರ್ ಮೊಹಮದ್ ಅವರೇ ಸಂಗೀತ ಸಂಯೋಜಿಸುವ ಮೂಲಕ‌ ತಾವೇ ಹಾಡಿರುವುದು ವಿಶೇಷ. ಅತ್ಯಾಚಾರಕ್ಕೆ ಒಳಗಾದ ಒಬ್ಬ ಹುಡುಗಿಯ ನೋವು ಹಾಗೂ ಆಕೆಯ ನೋವಿನಲ್ಲಿ ಅವಳ ಪ್ರೇಮಿಯ ವೇದನೆ ಹೇಗಿರುತ್ತೆ ಎನ್ನುವ ಪರಿಕಲ್ಪನೆಯ ಮೇಲೆ ಈ ಹಾಡು ಮೂಡಿ‌ಬಂದಿದೆ. ನಾಲ್ಕುವರೆ ನಿಮಿಷಗಳ ಈ ವಿಡಿಯೋ ಸಾಂಗ್ ಆಲ್ಬಂ ಮೇಕಿಂಗ್ ನಲ್ಲಿ ತುಂಬಾ ರಿಚ್ ಆಗಿದೆ. ಒಂದು‌ ಅದ್ದೂರಿ ಸಿನಿಮಾ‌ದ ಹಾಡಿನ‌ ಹಾಗೆಯೇ ಸೆಟ್ ಹಾಕಿ ಚಿತ್ರೀಕರಣ‌ ಮಾಡಲಾಗಿದೆ. ಬೆಂಗಳೂರು ಅಲ್ಲದೆ ಡಾಬಸ್ ಪೇಟೆ ಹಾಗೂ‌ ಮಂಗಳೂರಿನಲ್ಲೂ ಚಿತ್ರೀಕರಣ ನಡೆದಿದೆ.

ಜನರಿಗೆ ರೀಚ್ ಆದ್ರೆ ಸಾಕು..

ಸದ್ಯಕ್ಕೆ‌ಹಾಡಿನ‌ ಬಿಡುಗಡೆ ಗೆ ಸಜ್ಜಾಗಿರುವ ತಂಡ ಶನಿವಾರ‌ ರೇಣುಕಾಂಬ‌‌ ಚಿತ್ರ‌ಮಂದಿರದಲ್ಲಿ‌ ಹಾಡಿನ‌ಪ್ರದರ್ಶನದ ಜತೆಗೆ ಸುದ್ದಿಗೋಷ್ಟಿ ಆಯೋಜಿಸಿತ್ತು.‌ ತಂಡದ ಸದಸ್ಯರು, ಹಿತೈಷಿಗಳು ವೇದಿಕೆಯಲ್ಲಿದ್ದು ಮಾತನಾಡಿದರು‌. ನಿರ್ದೇಶಕ ವಿನಾಯಕ್ ಮಾತನಾಡಿ, ನಮ್ಮನ್ನು ನಾವು ಪರಿಚಯಿಸಿಕೊಳ್ಳುವುದಕ್ಕೆ ಈ ವಿಡಿಯೋ ಸಾಂಗ್ ಆಲ್ಬಂ ಮಾಡಿದ್ದೇವೆ. ಇದರಿಂದ ಲಾಭ‌ಗಳಿಸಬೇಕು ಎನ್ನುವುದಕ್ಕಿಂತ ಜನರಿಗೆ‌ ತಲುಪಿದರೆ‌ ನಮ್ಮ‌ಶ್ರಮ‌ಸಾರ್ಥಕವಾಗಲಿದೆ ಎಂದರು.‌ಹಾಗೆಯೇ ಕಲಾವಿದರಾದ ವಾಗೀಶ್ ಮತ್ತು ಸಂಗೀತಾ ಇಬ್ಬರು ಅದ್ದೂರಿ ವೆಚ್ಚದ ಒಂದು‌ಆಲ್ಬಂ‌ನಲ್ಲಿ ತಾವು ಕಾಣಿಸಿಕೊಂಡಿದ್ದೇ ಅದೃಷ್ಟ ಎಂದು‌ ಸಂಭ್ರಮ‌ಪಟ್ಟರು.‌ಅತಿಥಿಗಳಾಗಿ ಬಂದಿದ್ದ‌ ನಿರ್ದೇಶಕ ನಾಗಚಂದ್ರ ಮರಡಿಹಳ್ಳಿ ಸೇರಿದಂತೆ ಗಣ್ಯರನ್ನು ತಂಡವು ನೆನಪಿನ ಕಾಣಿಕೆ‌ನೀಡಿ‌ಗೌರವಿಸಿತು.ಇದೀಗ ಆಲ್ಬಂ ವೀಕ್ಷಕರ ಸಂಖ್ಯೆ ಲಕ್ಚದಷ್ಟಾಗಿದೆ. ತಂಡ ಖುಷಿಯಾಗಿದೆ.

Categories
ಸಿನಿ ಸುದ್ದಿ

ಮುಖವಾಡಿಗಳ ನಡುವೆ ಮುಖವಾಡ ಇಲ್ಲದವನೊಬ್ಬ!!

ಬೇಕಿರುವುದಿಲ್ಲಿ ಜ್ಞಾನದ ಭಂಗಿಯೋ, ತೊಗಲು ಮುಚ್ಚುವ ಅಂಗಿಯೋ…?

ಚರ್ಮವೇ ಭಗವಂತ ಕೊಟ್ಟ ಊಡುಗೆಯಾಗಿರುವಾಗ, ಇನ್ಯಾಕೆ ದುಬಾರಿ ಬಟ್ಟೆ. ಹೋಗುವಾಗ ಬೆತ್ತಲೆ, ಬರುವಾಗ ಬೆತ್ತಲೆ ಎನ್ನುವಾಗ ಇನ್ಯಾಕೆ ಆಸ್ತಿ- ಅಂತಸ್ತು? ಇದು ಮುಖವಾಡ ಇಲ್ಲದವ ಹೇಳುವ ಮಾತು. ಅಂದ  ಹಾಗೆ ಇದೊಂದು ಸಿನಿಮಾ ಕಥೆ.  ಇಂತಹ ಕಥೆ ಹೊತ್ತು ಬರುತ್ತಿರುವ ಚಿತ್ರದ ಹೆಸರು  ʼ ಮುಖವಾಡ ಇಲ್ಲದವನು ೮೪ʼ .

ಓಂ ನಮ: ಶಿವಾಯ ಬ್ಯಾನರ್‌ ವಲ್ಲಿ ಗಣಪತಿ ಬೆಳಗಾವಿ ನಿರ್ಮಾಣ ಮಾಡಿದ ಚಿತ್ರವಿದು. ಶಿವಕುಮಾರ್‌ ಕಡೂರ್‌ ಇದರ ನಿರ್ದೇಶಕ. ಹಾಗೆಯೇ ಇಬ್ಬರೂ ಕೂಡ ಚಿತ್ರದ ಪ್ರಮುಖ ಪಾತ್ರಧಾರಿಗಳು. ನಿರ್ದೇಶಕ ಶಿವಕುಮಾರ್‌ ನಾಯಕರಾಗಿ ಕಾಣಿಸಿಕೊಂಡರೆ, ನಿರ್ಮಾಪಕ ಗಣಪತಿ ಕೂಡ ಮತ್ತೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ.  ಚಿತ್ರ ತಂಡ ಚಿತ್ರೀಕರಣ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌  ಜತೆಗೆ ಸೆನ್ಸಾರ್‌ ಮುಗಿಸಿಕೊಂಡು  ಈ ಚಿತ್ರ ರಿಲೀಸ್‌ ಗೆ ರೆಡಿಯಾಗಿದೆ.  ಸದ್ಯಕ್ಕೆ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿಲ್ಲ. ಆದರೆ ಆ ನಿಟ್ಟಿನಲ್ಲಿ ಚಿತ್ರ ತಂಡ ಸಿದ್ದತೆ ನಡೆಸಿಕೊಂಡಿದ್ದು, ಈಗ ಟ್ರೇಲರ್‌ ಲಾಂಚ್‌ ಮೂಲಕ ಸದ್ದು ಮಾಡಿದೆ.

ನಿರ್ಮಾಪಕ ಗಣಪತಿ ಬೆಳಗಾವಿ, ನಿರ್ದೇಶಕ ಶಿವಕುಮಾರ್

ರೇಣುಕಾಂಬ ಚಿತ್ರ ಮಂದಿರದಲ್ಲಿ ಇತ್ತೀಚೆಗೆ ಚಿತ್ರ ತಂಡ ಟ್ರೇಲರ್‌ ಲಾಂಚ್‌ ಮಾಡುವ ಮೂಲಕ ಮಾಧ್ಯಮದ ಮುಂದೆ ಬಂತು. ನಿರ್ದೇಶಕ ರವಿ ಶ್ರೀವತ್ಸ ಹಾಗೂ  ವೇಣು ಗೋಪಾಲ್‌ ಅತಿಥಿಗಳಾಗಿ ಬಂದು ಟ್ರೇಲರ್‌ಲಾಂಚ್‌ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದರು.  ಆನಂತರ ಚಿತ್ರ ತಂಡ ಚಿತ್ರದ ವಿಶೇಷತೆ ಕುರಿತುಮಾತನಾಡಿತು.

‌ʼಇದೊಂದು ಪುಸ್ತಕದ ಮೂಲಕ ಶುರುವಾಗುವ ಕಥೆ ಇದು. ಒಬ್ಬ ಭಿಕ್ಷುಕ ಇಲ್ಲಿ ಒಬ್ಬ ಆಧ್ಯಾತ್ಮದ ಗುರು. ಆತನ ವೇಷ, ಭೂಷಣ ವಿಚಿತ್ರವಾಗಿರುತ್ತದೆ. ಅದಕ್ಕೆ ಕಾರಣ ಭೌತಿಕ ಜೀವನದ ಮೇಲಿನ ತಿರಸ್ಕಾರ. ಅವರ ದೃಷ್ಟಿಯಲ್ಲಿ ಜ್ಣಾನವೇ ನಿಜವಾದ ಆಸ್ತಿ ಎಂಬುದು ಚಿತ್ರದ ತಿರುಳು ” ಎನ್ನುತ್ತಾರೆ ಶಿವಕುಮಾರ್. ನಿರ್ದೇಶನದ  ಜತೆಗೆ  ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ  ಬರೆದಿದ್ದಾರೆ.  ಇದು ಅವರಿಗೆ ಎರಡನೇ ಚಿತ್ರ.‌

ಯುವ ನಿರ್ದೇಶಕ ಶಿವಕುಮಾರ್‌  ಈ ಹಿಂದೆ ʼಡ್ರೆಸ್‌ ಕೋಡ್‌ ʼಹೆಸರಿನ ಚಿತ್ರ ನಿರ್ದೇಶಿಸಿದ್ದರು. ಜತೆಗೆ ʼ ಕಠಾರಿ ʼ ಹೆಸರಿನ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದರು. ‌ ಇದೀಗ ” ಮುಖವಾಡ ಇಲ್ಲದವನು ೮೪”  ಹೆಸರಿನ ಚಿತ್ರದೊಂದಿಗೆ ಮತ್ತೆ ನಿರ್ದೇಶನದ ಅದೃಷ್ಟ ಪರೀಕ್ಷಿಸಿಕೊಳ್ಳಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಚಿತ್ರಕ್ಕೆ ಬಂಡವಾಳ ಹಾಕುವ ಮೂಲಕ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು ಗಣಪತಿ ಪಾಟೀಲ್‌  ಬೆಳಗಾವಿ. ವೃತ್ತಿಯಲ್ಲಿ ಮೆಡಿಕಲ್​ ಕ್ಷೇತ್ರದಲ್ಲಿದ್ದಾರೆ. ದೂರದ ನ್ಯೂಜಿಲೆಂಡ್​ನಲ್ಲಿ ನೆಲೆಸಿದ್ದಾರೆ. ಪರಿಚಿತರೊಬ್ಬರ ಮೂಲಕ ನಿರ್ದೇಶಕ ಶಿವಕುಮಾರ್‌  ಹೇಳಿದ ಕಥೆ ಕೇಳಿದ ತಕ್ಷಣವೇ ಚಿತ್ರ ನಿರ್ಮಾಣ ಮಾಡಲು ಮುಂದಾದರಂತೆ.

” ಒಂದು ಸಿನಿಮಾ ಮಾಡ್ಬೇಕು ಎನ್ನುವುದು ನನ್ನ ಕನಸಾಗಿತ್ತು. ಅದೀಗ ನನಸಾಗಿದೆ. ತುಂಬಾ ಕಡಿಮೆ ಸಮಯದಲ್ಲಿ ಈ ಸಿನಿಮಾ ಸಿದ್ದತೆ ನಡೆಯಿತು. ಸುಮಾರು ೪೫ ದಿನಗಳ ಕಾಲ ಚಿತ್ರೀಕರಣ ವಡೆಯಿತು. ಅಂದು ಕೊಂಡಂತೆ ಚಿತ್ರ ಚೆನ್ನಾಗಿ ಬಂದಿದೆ. ಸಂಭಾಷಣೆಯೇ ಚಿತ್ರದ ಜೀವಾಳ ಆಗಿದೆ. ಮಾಸ್‌ , ಕಮರ್ಷಿಯಲ್‌ ಎನ್ನುವುದಕ್ಕಿಂತ ಈ ಚಿತ್ರದ ಒಂದು ಡಿಫೆರೆಂಟ್‌ ಚಿತ್ರದ ಆಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರಕ್ಕೆ ಬೆಂಗಳೂರು, ಬನ್ನೇರಘಟ್ಟ, ಚಿಕ್ಕಮಗಳೂರು, ಉತ್ತರ ಕರ್ನಾಟಕ , ಬೆಳಗಾವಿ ಹಾಗೂ  ಅಂಬಾಲಿ ಸೇರಿದಂತೆ ವಿವಿಧೆಡೆಗಳಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ರಚನಾ ಅಂಬಲೆ, ಅನುಶ್ರೀ, ಕಾವ್ಯಗೌಡ ನಾಯಕಿಯರಾಗಿ ಅಭಿನಯಿಸಿದ್ದಾರೆ.  ಭಂಗಿ ಹಾಡಿನಲ್ಲಿ ಮರಾಠಿ ನಟಿ ಸೋನಾಲಿ ರಾಯ್‌ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಚಿತ್ರ ತಂಡ ಕೂಡ ಫುಲ್‌ ಫಿದಾ ಆಗಿದೆ. ದುರ್ಗಾ ಪ್ರಸಾದ್​ ಸಂಗೀತ, ಡಾ. ಮಹಾರಾಜಾ ಹಿನ್ನೆಲೆ ಸಂಗೀತ, ಮಧು ಆರ್ಯ ಕ್ಯಾಮರಾ ಜವಾಬ್ದಾರಿ ನಿಭಾಯಿಸಿದರೆ, ಕಥೆ, ಚಿತ್ರಕತೆ ಸಂಭಾಷಣೆ ಮತ್ತು ನಿರ್ದೇಶನವನ್ನು ಶಿವಕುಮಾರ್ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣ ಪತ್ರ  ಸಿಕ್ಕಿದೆ. ಚಿತ್ರ ತಂಡ ರಿಲೀಸ್‌ ಸಿದ್ದತೆಯಲ್ಲಿದೆ. ಚಿತ್ರ ಮಂದಿರಗಳ ಪರಿಸ್ಥಿತಿ ನೋಡಿಕೊಂಡು ಚಿತ್ರಮಂದಿರಕ್ಕೆ ಬರಲಿದೆಯಂತೆ.

Categories
ಎಡಿಟೋರಿಯಲ್ ಸಿನಿ ಸುದ್ದಿ

ಸಿನಿ‌ಲಹರಿ ಎಂಬ ಭಾವನೆಗಳ ಲಹರಿ !

ಲೈಕ್ ಒತ್ತಿ,  ಸಿನಿ ‌ಲಹರಿ ಹಿರಿಮೆ  ಗಗನಕ್ಕೇರಿಸಿ

ನೀವೂ ಡಿಜಿಟಲ್ ಆದ್ರಾ? ಹಲವು‌ ದಿನಗಳಿಂದ ನಮಗೆ ಎದುರಾದ ಪ್ರಶ್ನೆ ಇದು. ಅದಕ್ಕೆ‌ ಉತ್ತರಿಸಲು‌ ನಮ್ಮಿಂದ‌ ಈವರೆಗೂ ಆಗಿಲ್ಲ. ಹೌದು ಅಂತ ಹೇಳಿಬಿಡಬ ಹುದಾಗಿತ್ತೇನೋ, ಆದರೆ ಉತ್ತರ ಅಷ್ಟು ಸುಲಭ ಇಲ್ಲ‌. ಯಾಕಂದ್ರೆ, ಆ ಪ್ರಶ್ನೆಗಳೇ ವಿಚಿತ್ರವಾಗಿದ್ದವು.‌ ಹೌದು ಎನ್ನಬೇಕೆ, ಬೇಡವೇ ಗೊಂದಲಕ್ಕೆ ಸಿಲುಕಿ‌ ಮೌನಕ್ಕೆ‌ ಜಾರಿದ್ದೆವು.ಬದಲಿಗೆ ಅಂದುಕೊಂಡಿದ್ದನ್ನ‌ ಮಾಡಿ ತೋರಿಸೋಣ ಅಂತಷ್ಟೇ ಯೋಚಿಸಿದ್ದೇವು. ಈಗ ಅದು ಒಂದು ಹಂತಕ್ಕೆ ಬಂದಿದೆ. ಸರಳವಾಗಿಯೇ ಇರಲಿ‌ ಅತಂದುಕೊಂಡಿದ್ದರೂ, ಎಲ್ಲವೂ ಗ್ರಾಂಡ್ ರೂಪ ಪಡೆದಿವೆ.‌ ಇದೆಲ್ಲ ಹಿತೈಷಿಗಳ ಸಹಕಾರ. ಬೆಂಬಲ. ಅದರ ರೂಪವೇ ಈಗ ಸಿನಿ‌ಲಹರಿ.

ನಾವೇನು ಬ್ರಹ್ಮ ವಿಧ್ಯೆ ಕಲಿತವರಾ?

ಹೌದು, ಈಗ ನಮ್ಮದೇ ಒಂದು ಹಾದಿ. ಡಿಜಿಟಲ್ ಮಾಧ್ಯಮದ ದಾರಿ. ಅನೇಕ ಪ್ರಯೋಗಗಳ ಜತೆಗೆ ಇದೊಂದು ಹೊಸ ಪಯಣ‌. ಯಾಕೆ ಹೀಗೆ ಅಂತ ಅನೇಕರಿಗೆ ಅಚ್ಚರಿ. ಅದಕ್ಕೆ ಕಾರಣ ಕೋರೋನಾ. ಅದರಿಂದೇನಾಯ್ತ? ಅದಿಲ್ಲಿ‌ ಬೇಕಿಲ್ಲ.‌ ಆದರೆ ಏನಾದ್ರೂ ಕೆಲಸ ಮಾಡಲೇಬೇಕಿದೆ. ಹಾಗಂತ ಏನು‌ ಮಾಡಲು ಸಾಧ್ಯ? ಗೊತ್ತಿರೋದು ಬರವಣಿಗೆ ಮಾತ್ರ.‌ ಹಾಗಂತ ನಾವೇನು ಬ್ರಹ್ಮ ವಿದ್ಯೆ ಕಲಿತವರಾ? ಇಲ್ಲ, ಗೊತ್ತಿರೊದು ಅಷ್ಟೋ ಇಷ್ಟೋ ಸಿನಿಮಾ‌ ವರದಿಗಾರಿಕೆ.ಅದು ಹತ್ತಾರು ವರ್ಷ ಚಿತ್ರೋದ್ಯಮದ ಜತೆಗಿನ ನಂಟಿನಿಂದ ಕಲಿತಿದ್ದು. ಅದನ್ನೇ ನಂಬಿಕೊಂಡು ಕಾಲಕ್ಕೆ ತಕ್ಕಂತೆ ಏನಾದರೂ ಮಾಡಬೇಕು ಅಂದಾಗ ನಮಗೆ ಹೊಳೆದಿದ್ದು ಡಿಜಿಟಲ್ ಮಾಧ್ಯಮ.

ನಮ್ಮದೂ ಒಂದು‌ ಪ್ರಯತ್ನ!

ಆಧುನಿಕ ಜಗತ್ತೀಗ ಅಚ್ಚರಿಗೊಳ್ಳುವಷ್ಟು ಬದಲಾಗಿದೆ. ಪ್ರತಿ‌ದಿನವೂ ಹೊಸತು‌ಕಾಣುತ್ತಿದೆ. ಸಿನಿಮಾ ಮತ್ತು ಮಾಧ್ಯಮ ಜಗತ್ತು ಕೂಡ ಅದರಿಂದ ಹೊರತಾ ಗಿಲ್ಲ.‌ಮಾಧ್ಯಮ ಎನ್ನುವಂತಹದು ಹತ್ತಾರು ರೂಪುಗಳನ್ನು ದಾಟುತ್ತಾ ಬಂದಿದೆ. ಅಚ್ವುಮೊಳೆಯಿಂದ ಕಂಪ್ಯೂಟರ್ ತಂತ್ರಜ್ಞಾನ ಕ್ಕೆ, ಅಲ್ಲಿಂದೀಗ ಡಿಜಿಟಲ್ ತಂತ್ರಜ್ಞಾನ ದ  ಕಾಲಕ್ಕೆ  ಬಂದಿದೆ‌. ಹೇಳಿ – ಕೇಳಿ ಇದು ಮೊಬೈಲ್ ಯುಗ. ಬೆರಳಿನ ತುದಿಯಲ್ಲೇ ಜಗತ್ತು.ಅದನ್ನೇ ನಂಬಿಕೊಂಡು ಮಾಧ್ಯಮ ಕೂಡ ಹೊಸ ಅವತಾರ ತಾಳಿದೆ.‌‌ನಮ್ಮದೂ ಕೂಡ ಈಗ ಅದರ‌ ಒಂದು‌ ಪ್ರಯತ್ನ.‌ಅದೇ ಸಿನಿ‌ಲಹರಿ.

ಇದು ಬಣ್ಣದ ಭಾವನೆಗಳ ಲಹರಿ !

ಹೆಸರಲ್ಲೇನಿದೆ ಬಿಡಿ ಅಂದರೂ‌‌ ಹೆಸರು ಮುಖ್ಯವೇ. ಒಂದಷ್ಟು ಯೋಚಿಸಿ, ಚರ್ಚಿಸಿ ಈ ಹೆಸರು ಫೈನಲ್  ಆಗಿದೆ‌. ಈಗಾಗಲೇ ಅದಕ್ಕೆ ಒಳ್ಳೆಯ ಕಾಮೆಂಟ್ ಕೂಡ ಸಿಕ್ಕಿದೆ. ಅದು ನಮ್ಮ‌ ಪ್ರಯತ್ನದ ಪಾಸಿಟಿವ್ ವೈಬ್ರೇಷನ್. ಇನ್ನು ಮನೆಗೊಂದು ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ಇರುವ ಕಾಲ ಇದು.‌ ಅದರ ಅರಿವು ನಮಗಿದೆ. ಏನಾದ್ರೂ ಹೊಸತನ ಇರಬೇಕು ಅನ್ನೋದು ನಮ್ಮ ಬಯಕೆ. ದ್ವೇಷ, ಮತ್ಸರಕ್ಕೆ ಜಾಗ ಕೊಡದೇ ಸಕರಾತ್ಮಕ ಚಿಂತನೆಯ‌ ಮೂಲಕ‌ ಕನ್ನಡ ಚಿತ್ರ ರಂಗದ ಸಮಗ್ರ ಸುದ್ದಿ ಕೊಡುವ ವೆಬ್ ಸೈಟ್ ಮಾಡಬೇಕೆಂಬುದು ನಮ್ಮ ಉದ್ದೇಶ. ನಮಗ್ಯಾರು ಇಲ್ಲಿ‌ ಸ್ಪರ್ಧಿಗಳಿಲ್ಲ.‌ನಮಗೆ ನಾವೇ ಸ್ಪರ್ಧಿಗಳು ಮಾತ್ರ.

ಗೆಲ್ಲೋದೇ ನಮ್ಮ‌ ಟಾರ್ಗೆಟ್ ಅಲ್ಲ

ಕ್ಯೂರಿಯಾಸಿಟಿ‌ ಹುಟ್ಟಿಸಲು ಮಸಾಲೆ ಟೈಟಲ್ ನೀಡುವುದು, ಕತೆ ಕಟ್ಟುವುದು, ಯಾರದೋ ಮನಸ್ಸು ನೋಯಿಸುವಂತಹ ಬರಹ ಬರೆದು ನಮ್ಮ ವೆಬ್ ಸೈಟ್ ಮತ್ತು ಯುಟ್ಯೂಬ್ ವೀಕ್ಚಕರ ಸಂಖ್ಯೆಯನ್ನು ರಾತ್ರೋರಾತ್ರಿ ಹೆಚ್ಚಿಸಿಕೊಳ್ಳುವುದು ನಮ್ಮ ಉದ್ದೇಶ ಅಲ್ಲ. ತಾಜಾ‌,‌ವಸ್ತು ನಿಷ್ಟ, ಸಕರಾತ್ಮಕ, ನಂಬಿಕೆಗೆ ಅರ್ಹವಾದ ಸುದ್ದಿ ನೀಡುವುದಷ್ಟೇ ನಮ್ಮ‌ಕೆಲಸ. ಹಾಗಂತ ಇಲ್ಲಿ ಏನಾದ್ರೂ ‌ಮಾಡಿ ಗೆಲ್ಲೋದೇ ನಮ್ಮ ಟಾರ್ಗೆಟ್ ಅಲ್ಲ . ಅಂದುಕೊಂಡಿದ್ದನ್ನು ಅಚ್ಚುಕಟ್ಟಾಗಿ ಮಾಡೋಣ, ಒಂದೊತ್ತಿನ ಹೊಟ್ಟೆ ತುಂಬಿಸಿಕೊಳ್ಳೋಣ ಎನ್ನುವುದಷ್ಟೇ ನಮ್ಮ ಟಾರ್ಗೆಟ್.‌ ಆ ಮೂಲಕ ಸಿನಿಮಾ‌ಪ್ರೇಮಿಗಳಿಗೂ ಒಂದು ಚೆಂದದ ಸುದ್ದಿ ಜಾಲ ತಾಣ ಸಿಗಲಿದೆ. ಅದೆಲ್ಲದಕ್ಕೂ ನಿಮ್ಮಿಂದ ಆಗಬೇಕಿರುವುದು ಬೆಂಬಲ. ಆ ಬೆಂಬಲಕ್ಕೆ ಸಿನಿ ಲಹರಿ ಪೇಜ್ ಮತ್ತು ಯುಟ್ಯೂಬ್ ಚಾನೆಲ್ ಗೆ ಒಂದು ಲೈಕ್ ಒತ್ತಿ, ನಮ್ಮನ್ನು ಕೈ ಹಿಡಿದು ಮೇಲಕ್ಕೆತ್ತಿ. ಉಳಿದಂತೆ ‘ಸಿನಿ‌ಲಹರಿ ‘ನಿಮ್ಮದೇ ಸಿನಿಮಾ‌ ಸುದ್ದಿ ವೆಬ್ ಸೈಟ್.

Categories
ಸಿನಿ ಸುದ್ದಿ

ಲಹರಿ‌ ವೇಲು ಎಂಬ ಪ್ರೇರಕ ಶಕ್ತಿ…!


ಬನ್ನಿ ಸಾಹೇಬ್ರೆ, ಮಾಡೋಣ ಅಂದಿದ್ದೇ ಸಿನಿ‌ಲಹರಿ ಹುಟ್ಟಿಗೆ ಕಾರಣ ಅಂದ್ರೆ….

ಹೊಸತೆನ್ನುವುದರ ಆರಂಭ ಹೇಗೆ, ಎಲ್ಲಿ, ಯಾವಾಗ ಎನ್ನುವುದು ಗೊತ್ತೇ ಆಗುವುದಿಲ್ಲ‌. ಎಲ್ಲವೂ ಆಕಸ್ಮಿಕ ಎನ್ನುವ ಹಾಗೆ‌. ಸಣ್ಣದೋ, ದೊಡ್ಡದೋ ಒಂದು ಹೊಸ ಸಾಹಸ, ಒಂದು ಪ್ರಯತ್ನ ಅಥವಾ ಒಂದು ಹೊಸ ಕನಸು ನನಸಾಗುವುದಕ್ಕೆ ಒಂದು ನೆಪ ಬೇಕು ಅಷ್ಟೇ. ಒಬ್ಬರ ಪ್ರೇರಣೆಯೋ, ಇಲ್ಲವೇ ಒಬ್ಬರು ಮಾದರಿಯಾಗಿಯೋ, ಇಲ್ಲವೇ ಇನ್ನೋಬ್ಬರ ಮನೋಸ್ಥೈರ್ಯ ದ ಮಾತುಗಳೋ ನಮ್ಮ‌ ಸಾಹಸಗಳಿಗೆ ನೀರೆರೆದು , ಪುಷ್ಟಿ‌ನೀಡಿ ಬಿಡುತ್ತವೆ. ಒಟ್ಟಿನಲ್ಲಿ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ನಾವೇನೋ‌ ಮಾಡುತ್ತೇವೆ ಅಂತ ಹೊರಟಾಗ ಪಾಸಿಟಿವ್ ಮಾತುಗಳೇ ದೊಡ್ಡ ಶಕ್ತಿ. ಅವತ್ತು ಅಂತಹ ಮಾತುಗಳನ್ನಾಡುವ ಮೂಲಕ‌ ‘ಸಿನಿ‌ಲಹರಿ’ ಶುರುವಿಗೆ ಪ್ರೇರಕರಾದವರು ಲಹರಿ ಸಂಸ್ಥೆಯ ಮಾಲೀಕರಾದ‌ ಲಹರಿ‌ ವೇಲು .

‘ಸಿನಿ‌ಲಹರಿ ‘ ಹೆಸರಿನ‌ ಒಂದು ವೆಬ್ ಸೈಟ್ ಮತ್ತು ಯುಟ್ಯೂಬ್ ಚಾನೆಲ್‌ ಇವತ್ತು ಶುರುವಾಗಿ ನಿಮ್ಮ‌ಮುಂದೆ ಅನಾವರಣಗೊಂಡಿದ್ದರೆ ಅದಕ್ಕೆ ಪ್ರೇರಕರಾದವರು ಅನೇಕರು. ಅದರಲ್ಲಿ‌ ಮೊದಲಿಗರು ಲಹರಿ ವೇಲು.‌ ಒಂದು ಸಂಕಷ್ಟದ ಕಾಲದಲ್ಲಿ‌ ಅವರು ‘ ಬನ್ನಿ‌ ಸಾಹೇಬ್ರೆ, ಮಾಡೋಣ …ಅಂತೆನ್ನದೇ ಇದ್ದಿದ್ದರೆ ಇದು ಶುರುವಾಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಆ ಒಂದು‌ ಮಾತಿನಿಂದ ‘ಸಿನಿ ಲಹರಿ’ ಶುರುವಾಯ್ತು.‌ ಅದರ ಅಲೋಚನೆ ಹುಟ್ಟಿಕೊಂಡಿದ್ದ ಸಂದರ್ಭವೇ ವಿಚಿತ್ರ ವಾಗಿತ್ತು.ಆ ದಿನಗಳಲ್ಲೇ ಲಹರಿ‌ ವೇಲು ಅವರು ತಮ್ಮ ಕಚೇರಿಯಲ್ಲಿ ಸರಿ‌ಸುಮಾರು 3 ಗಂಟೆಯಷ್ಟು ಕಾಲ ಕೂರಿಸಿಕೊಂಡು, ಸುದೀರ್ಘವಾಗಿ‌ ಮಾತನಾಡಿ, ಸಾಹೇಬ್ರೆ, ನೀವು ಮಾಡ್ತೀರಾ ಮಾಡಿ’ ಅಂತ ಬೆನ್ನು ತಟ್ಟಿದ್ದು ‘ಸಿನಿ‌ಲಹರಿ ‘ಹುಟ್ಟಿಗೆ ಕಾರಣ. ಈ ನೆನಪು ಯಾಕಂದ್ರೆ , ಅವತ್ತಿನ ಸಂದರ್ಭವೇ ಭಿನ್ನವಾಗಿತ್ತು.‌ಆ ದಿನಗಳಲ್ಲಿ ನಮಗೆ ಅವರು ಸಿಕ್ಕರು ಎನ್ನುವ ಕಾರಣಕ್ಕೆ.

ಅದ್ಹೆಂಗೆ ಅಂತೀರಾ? ಲಾಕ್ ಡೌನ್ ಆಗಷ್ಟೇ ತೆರವಾಗಿದ್ದ ಸಂದರ್ಭ. ಜನರ ಓಡಾಟಕ್ಕೆ ಒಂದಷ್ಟು ನಿರ್ಬಂಧಗಳು ಸಡಿಲಗೊಂಡಿದ್ದವು ಎನ್ನುವುದನ್ನು ಬಿಟ್ಟರೆ, ಕೊರೋನಾ‌ ಹರಡುವಿಕೆಯ ಅಬ್ಬರ ಮಾತ್ರ ಕಿಂಚಿತ್ತು ಕಮ್ಮಿ ಆಗಿರಲಿಲ್ಲ. ಜನ ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುತ್ತಿದ್ದರು. ನಂಗಂತೂ ಎದುರಿಗೆ ಬಂದವರೆಲ್ಲ ಕೊರೋನಾ ದಂತೆಯೇ ಕಾಣುತ್ತಿದ್ದರು. ಆ ದಿನಗಳಲ್ಲೇ ನಾನು ಊರಿನಿಂದ ವಾಪಾಸ್ ಬೆಂಗಳೂರಿಗೆ ಬಂದಿದ್ದೆ.ಆ ಹೊತ್ತಿಗಾಗಲೇ ನಾನು ನಿರುದ್ಯೋಗಿ. ಮಾನಸಿಕ‌‌ ಕಿರಿ‌ಕಿರಿ‌ ಆಗಿ, ಕೆಲಸ ಬೇಡ ಅಂತ ಬಿಟ್ಟು ಬಿಟ್ಟಿದ್ದೆ.’ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ‘ ಅನ್ನೋ ಪರಿಸ್ಥಿತಿ ನಾನು ಕೆಲಸ ಬಿಟ್ಟ ಸಂಸ್ಥೆಗೂ ಇತ್ತು. ಅಲ್ಲಿದ್ದ ಕೆಲವರು ಸಂಭ್ರಮಾಚರಣೆ ಮಾಡಿದ್ದರು. ಆ ಬಗ್ಗೆ ತಲೆ‌ ಕಡೆಸಿಕೊಳ್ಳದೆ, ಎರಡ್ಮೂರು ತಿಂಗಳು ಊರಲ್ಲೇ ಇದ್ದೆ. ವಾಪಾಸ್ ಬೆಂಗಳೂರಿಗೆ ಬರಲೇಬೇಕು.ಬಂದ್ಮೇಲೆ ಏನು ಅಂತ ಗೆಳೆಯ ವಿಜಯ್ ಭರಮ ಸಾಗರ ಜತೆ ಚರ್ಚೆ ಮಾಡುತ್ತಿದ್ದಾಗ, ಆತನೆ, ವೆಬ್ಸೈಟ್ ಪ್ರಪೋಜಲ್ ಇಟ್ಟಿದ್ದ.‌ ಆದರೆ ಅದಕ್ಕೆಲ್ಲ ಯಾರು ಬೆಂಬಲ‌ ನೀಡ್ತಾರೆ, ಹಣಕಾಸು ಹೇಗೆ ಅಂತೆಲ್ಲ ಯೋಚಿಸುತ್ತಲೇ ಬೆಂಗಳೂರಿಗೆ ಬಂದೆ

ಏನಾದರೂ ಮಾಡಲೇ ಬೇಕು ಎನ್ನುವ ಚರ್ಚೆಯಲ್ಲೆ ವಾರ ಕಳೆಯಿತು. ಅಲ್ಲಿ ಇಲ್ಲಿ ಒಂದಷ್ಟು ಗೆಳೆಯರ ಜತೆ ಮಾತುಕತೆ ನಡೆಯಿತು. ಅಲ್ಲಿಂದ ಒಂದಿನ ಲಹರಿವೇಲು ಅವರನ್ನ ಭೇಟಿ ಮಾಡುವ ಆಲೋಚನೆಬಂತು.ತಕ್ಷಣವೇ ಕಾಲ್ ಮಾಡಿಮಾತನಾಡಿದೆ. ನಾಳೆಯೇ ಆಫೀಸ್ ಗೆ ಬನ್ನಿ,ಅಂದ್ರು. ಅದೇ ಮಾತಿನಂತೆ ಮಧ್ಯಾಹ್ನ 2 ಗಂಟೆಗೆ ಅವರದೇ ಆಫೀಸ್ ನಲ್ಲಿ ಭೇಟಿಯಾದೆವು. ‘ ನಾಲ್ಕು ತಿಂಗಳಾದವು ಸಾಹೇಬ್ರೆ, ಅಫೀಸ್ ಮುಖ ನೋಡದೆ. ನಿಮಗಾಗಿಯೇ ಇವತ್ತು ಇಲ್ಲಿಗೆ ಬಂದೆ. ಬೇರೆ ಯಾರೇ ಆಗಿದ್ದರೂ, ಆಫೀಸ್ ಗೆ ಬರುತ್ತಿರಲಿಲ್ಲ’ ಅಂತ ಕೊರೋನಾ ಆತಂಕದ ಬದುಕನ್ನು ವಿವರಿಸುತ್ತಾ ಮಾತಿಗೆ ಕುಳಿತರು.


ಮೂರು ತಾಸು ಮಾತುಕತೆ ನಡೆಯಿತು. ನಮ್ಮಪರಿಸ್ಥಿತಿ ಕೇಳಿ ನೊಂದುಕೊಂಡರು. ಕೊನೆಗೆ ಅವರು ಹೇಳಿದ್ದು ಒಂದೇ ಮಾತು, ‘ ಸಾಹೇಬ್ರೆ , ನೀವೆನು ಯೋಚನೆ ಮಾಡ್ಬೇಡಿ. ನೀವೇನು, ನಿಮ್ಮಸಾಮಾರ್ಥ್ಯವೇನು ಅಂತ ನಂಗೊತ್ತು. ನಾನಿದ್ದೇನೆ, ವೆಬ್ ಸೈಟ್ ಮಾಡಿ, ಒಳ್ಳೆಯದಾಗುತ್ತೆ ‘ ಅಂದ್ರು.ಆ ಒಂದು ಮಾತು ನಮಗೆ ಅನೆ ಬಲ ನೀಡಿತು. ಅಲ್ಲಿಂದಶುರುವಾದ ವೆಬ್ ಸೈಟ್ ಕೆಲಸಕ್ಕೆ ಅನೇಕರು ಸಾಥ್ ಕೊಟ್ಟರು.ಅನೇಕರುಪ್ರೊತ್ಸಾಹ ದಾಯಕಮಾತುಗಳನ್ನು ಆಡಿದರು.ಹಲವರು ನಾವಿದ್ದೇವೆ ಮಾಡಿ ಅಂತ ಬೆನ್ನಿಗೆ ನಿಂತಿರು. ಅದೆಲ್ಲದರ ಪ್ರತಿಫಲವೇ’ ಸಿನಿಲಹರಿ’. ಎಲ್ಲದರಿಗೂ ಧನ್ಯವಾದ.

error: Content is protected !!