ಮೋಹಕತಾರೆ ರಮ್ಯಾ ಚಂದನವನದ ಎವರ್ಗ್ರೀನ್ ಚೆಲುವೆ. ಹುಡುಗರ ಪಾಲಿನ ಹಾಟ್ಫೇವರಿಟ್ ಹಾಗೂ ಆಲ್ ಟೈಮ್ ಕ್ರಷ್. ಬಣ್ಣದ ಲೋಕದಿಂದ ದೂರ ಉಳಿದರೂ ಕೂಡ ಸ್ಯಾಂಡಲ್ವುಡ್ ಪಾಲಿಗೆ ಗೋಲ್ಡನ್ ಕ್ವೀನ್ ಈಕೆ. ಗಂಧದಗುಡಿಗೆ ಎಷ್ಟೇ ಗ್ಲಾಮರ್ ಬೊಂಬೆಗಳು ಜಿಗಿಜಗಿದು ಬಂದರೂ ಕೂಡ ಊರಿಗೊಬ್ಳೆ ಪದ್ಮಾವತಿಯ ಚಾರ್ಮ್ ಕಮ್ಮಿಯಾಗಿಯಿಲ್ಲ. ಅಷ್ಟರ ಮಟ್ಟಿಗೆ ಮೇನಿಯಾ ಸೃಷ್ಟಿಸಿಕೊಂಡಿರುವ ರಮ್ಯಾ ಮೇಡಂ `39 ವರ್ಷ ಆಯ್ತು-ಯಾವ ಪ್ಲ್ಯಾನ್ಸ್ ಇಲ್ಲ..ಯಾವ ಸೆಲಬ್ರೇಷನ್ನು ಇಲ್ಲ’ ಹೀಗನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರಮ್ಯಾ ಮೇಡಂ ಹಿಂಗ್ಯಾಕ್ ಹೇಳಿದರು ಅನ್ನೋದು ನಿಮ್ಮೆಲ್ಲರ ಕೂತೂಹಲಕ್ಕೆ ಕಾರಣವಾಗಿರುತ್ತೆ. ಪ್ಲ್ಯಾನ್ಸ್ ಇಲ್ಲ ಸೆಲಬ್ರೇಷನ್ ಇಲ್ಲ ಅಂದ್ರೆ ಅದರ ಅರ್ಥ ಮದುವೆ ಆಗೋದು ಬೇಡ ಅಂತ ಏನಾದ್ರೂ ತೀರ್ಮಾನ ಮಾಡ್ಬಿಟ್ಟರಾ?
ಹೀಗೊಂದು ಪ್ರಶ್ನೆ ಕೂಡ ಮೂಡುತ್ತೆ. ಆದರೆ, ಬುಗಾಟಿ ಸ್ಪೀಡ್ನಲ್ಲಿ ನೀವು ಯೋಚನೆ ಮಾಡ್ಬೇಡಿ. ಯಾಕಂದ್ರೆ, ಮೋಹಕತಾರೆ ಯಾವ್ ಪ್ಲಾನ್ ಇಲ್ಲ…ಸೆಲಬ್ರೇಷನ್ ಇಲ್ಲ ಅಂತ ಹೇಳಿರುವುದು ಮುಂಬರುವ 39 ರ ಬರ್ತ್ ಡೇ ಬಗ್ಗೆ.
ಸ್ಟ್ಯಾಂಡಪ್ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಲೈವ್ ಬಂದಾಗ ರಮ್ಯಾಗೆ ಸೋನು ಪ್ರಶ್ನೆ ಮಾಡಿದರು. ನಿಮ್ಮ ಬರ್ತ್ ಡೇ ಇನ್ನೂ ನಾಲ್ಕು ತಿಂಗಳು ಇದೆ ಆದರೂ ನಿಮ್ಮ ಬರ್ತ್ಡೇ ಸೆಲಬ್ರೇಷನ್ ಬಗ್ಗೆ ಹೇಳಿ, ನಿಮ್ಮ ಫ್ಯಾನ್ಸ್ ಗೆ ಏನಾದರೂ ಸಪ್ರೈಸ್ ಕೊಡಿ ಅಂತ ಕೇಳಿದರು. ಇದಕ್ಕೆ ಉತ್ತರ ನೀಡಿದ ರಮ್ಯಾ ಮೇಡಂ, 39 ವರ್ಷ ವಯಸ್ಸಾಯ್ತು ಇನ್ನೇನ್ ಸೆಲಬ್ರೇಟ್ ಮಾಡ್ಲಿ ಬಿಡಿ. ಅಷ್ಟಕ್ಕೂ, ಬರ್ತ್ ಡೇ ಇನ್ನೂ ದೂರ ಇದೆ ನಾನಿನ್ನು ಯೋಚನೆ ಮಾಡಿಲ್ಲ ಬಿಡಿ ಎಂದುಬಿಟ್ಟರು.
ನವೆಂಬರ್ 29 ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹುಟ್ಟುಹಬ್ಬ. 38 ವರ್ಷಗಳನ್ನ ಪೂರೈಸಿ 39ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಮೂವತ್ತೊಂಭತ್ತಾದರೂ 22 ರ ಹರೆಯದ ಚೆಲುವೆಯಂತಿರುವ ಮೋಹಕತಾರೆಯನ್ನ ಕಂಡ್ರೆ ಪಡ್ಡೆಹೈಕ್ಳು ಮಾತ್ರವಲ್ಲ ಬೆಳ್ಳಿತೆರೆ ಕೂಡ ಬೆವರುತ್ತೆ. ಫ್ಯಾನ್ಸ್ ಹೇಗೆ ರಮ್ಯಾನ ಬಿಗ್ಸ್ಕ್ರೀನ್ನಲ್ಲಿ ನೋಡೋದಕ್ಕೆ ಬಯಸ್ತಿದ್ದಾರೋ ಅದೇ ರೀತಿ ಬೆಳ್ಳಿಪರದೆ ಕೂಡ ಪದ್ಮಾವತಿಯನ್ನ ತಲೆಮೇಲೆ ಹೊತ್ತು ಮೆರೆಸೋದಕ್ಕೆ ಎದುರು ನೋಡ್ತಿದೆ. ಆ ದಿವ್ಯಕ್ಷಣಕ್ಕೆ ದಿವ್ಯ ಸ್ಪಂದನ ಯಾವಾಗ ಗ್ರೀನ್ ಸಿಗ್ನಲ್ ಕೊಡ್ತಾರೋ ಗೊತ್ತಿಲ್ಲ. ಆ ಕ್ಷಣ ಆದಷ್ಟು ಬೇಗ ಹೊರಡಲಿ ಗೌರಮ್ಮ ಸಿಲ್ವರ್ಸ್ಕ್ರೀನ್ ಮೇಲೆ ದಿಬ್ಬಣ ಹೊರಡಲಿ ಅಲ್ಲವೇ.
ಇನ್ನೊಂದು ದಿನ ಬಾಕಿ ಇದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೇಳಿರುವ ಜುಲೈ 11 ರ ಸಸ್ಪೆನ್ಸ್ ರಿವೀಲ್ ಆಗೋದಿಕ್ಕೆ. ಅಷ್ಟರಲ್ಲಿಯೇ ಸ್ಯಾಂಡಲ್ ವುಡ್ ನಲ್ಲಿ ಒಂದು ಕೌತುಕ ಸಖತ್ ಸದ್ದು ಮಾಡುತ್ತಿದೆ. ಇದೇನಾ ರಕ್ಷಿತ್ ಶೆಟ್ಟಿ ಹೇಳಿದ ಸಸ್ಪೆನ್ಸ್ ಸಂಗತಿ ಅನ್ನೋದು ಕೂಡ ಸಿನಿಮಾ ಬಜಾರ್ ನಲ್ಲಿ ಸದ್ದು ಮಾಡುತ್ತಿದೆ. ಹಾಗಂತ ಅದು ನಿಜವೇ ಗೊತ್ತಿಲ್ಲ. ಇದ್ದರೂ ಇರಬಹುದೇನೋ . ಅದು ಖಾತರಿ ಆಗೋದಿಕ್ಕೆ ಕೆಲವೇ ಗಂಟೆಗಳಷ್ಟೇ ಕಾಯಬೇಕಿದೆ.
ಹಾಗಾದ್ರೆ ಅದಲ್ವಾ? ಅಲ್ಲಿ ರಕ್ಷಿತ್ ಶೆಟ್ಟಿ ಇಲ್ಲ ಅಂದ್ರೆ ಬೇರೆ ಯಾರು? ಕುತೂಹಲದ ಪ್ರಶ್ನೆಗಳಿವೆ. ಇವತ್ತು ಹಾಗೊಂದು ಕುತೂಹಲ ಹುಟ್ಟಿಸಿದ್ದು ಹೊಂಬಾಳೆ ಫಿಲ್ಮ್ ಸಂಸ್ಥೆ ರಿವೀಲ್ ಮಾಡಿರುವ ಒಂದು ಪೋಸ್ಟರ್. ನಾಳೆ ಅಂದರೆ ಜುಲೈ 11 ಕ್ಕೆ ಹೊಂಬಾಳೆ ಫಿಲಂಸ್ ನ ೧೦ ನೇ ಸಿನಿಮಾದ ಟೈಟಲ್ ಲಾಂಚ್ ಆಗುತ್ತಿದೆ. ಸದ್ಯಕ್ಕೆ ಅದರ ನಿರ್ದೇಶಕರು ಯಾರು, ನಾಯಕನಟ ಯಾರು, ನಾಯಕಿ ಯಾರು? ಎಲ್ಲವೂ ಸಸ್ಪೆನ್ಸ್. ಸುಮ್ನೆ ನೀವೇ ನೋಡಿ, ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಹೇಳಿರುವ ಜುಲೈ11 ರ ಸಸ್ಪೆನ್ಸ್ ಗೂ, ಹೊಂಬಾಳೆ ಫಿಲಂಸ್ ನಾಳೆ ಲಾಂಚ್ ಮಾಡುತ್ತಿರುವ ಸಿನಿಮಾದ ಟೈಟಲ್ಗೂ ಸಿಂಕ್ ಆಗುತ್ತಿಲ್ವಾ? ಅದೇ ಕಾರಣಕ್ಕೆ ಈಗ ಸಿನಿಮಾ ಬಜಾರ್ ನಲ್ಲಿ ಸಖತ್ ಕುತೂಹಲ ಹುಟ್ಟಿದೆ. ನಾವು – ನೀವು ಅಂದಾಜಿಸಿಕೊಂಡ ಹಾಗೆಯೇ ನಾಳೆ ಲಾಂಚ್ ಆಗುತ್ತಿರುವ 10 ನೇ ಸಿನಿಮಾಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯೇ ನಾಯಕ ಆಗಿರಬಹುದು? ಅಲ್ಲದಿದ್ದರೆ ಉಳಿದಂತೆ ಯಾರು?
ಲೆಕ್ಕ ಹಾಕ್ಕೊಳ್ಳಿ, ಈಗ ಪವರ್ ಸ್ಟಾರ್ ಪುನೀತ್ ಹೊಂಬಾಳೆ ಫಿಲಂಸ್ ನ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಯುವರತ್ನ ಬೆನ್ನಲ್ಲೇ ಆದ ಕಮಿಟ್ ಮೆಂಟ್ ಇದು. ಇನ್ನು ಯಶ್ ಕೂಡ ಈಗ ಕೆಜಿಎಫ್ ೨ ನಲ್ಲಿಯೇ ತಲೆ ಕೆಡಿಸಿಕೊಂಡಿದ್ದಾರೆ. ಅವರುಮತ್ತೊಂದು ಸಿನಿಮಾಕ್ಕೆ ಸದ್ಯದಲ್ಕಿಯೇ ಅಷ್ಟು ಬೇಗ ಒಪ್ಪಿಕೊಳ್ಳಲಾರರು. ಹಾಗಾಗಿ ರಕ್ಷಿತ್ ಶೆಟ್ಟಿ ಅವರೇ ನಾಯಕ ನಟ ಅಂದ್ರು ಅಚ್ಚರಿ ಇಲ್ಲ.
ಗಾಂಧಿನಗರದ ಇಡ್ಲಿವಡೆ ಸಾಂಬಾರ್, ಕಾಂಗ್ರೇಜ್ ಕಡ್ಲೆಬೀಜ ಹಾಕಿರೋ ಚಿತ್ರಾನ್ನ ಅಂದರೆ ಮೋಹಕತಾರೆ ರಮ್ಯಾ ಮೇಡಂಗೆ ಆಲ್ಟೈಮ್ ಫೇವರಿಟ್. ಇದು ಎಲ್ಲರಿಗೂ ಗೊತ್ತಿರೋ ವಿಷ್ಯ. ಆದರೆ, ಪದ್ಮಾವತಿಗೆ ಜ್ವಾಳದ್ ರೊಟ್ಟಿ ಮುಳ್ಗಾಯ್ ಪಲ್ಯ ಕಂಡ್ರೆ ಪಂಚಪ್ರಾಣ ಎಂಬುದು ಗೊತ್ತಿರಲಿಲ್ಲ. ಹೀಗೆ ಫೇವರಿಟ್ ಫೂಡ್ನಿಂದ ಹಿಡಿದು ಕೊರೊನಾ ವ್ಯಾಕ್ಸಿನ್ ತನಕ ಒಂದಿಷ್ಟು ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ಸ್ವತಃ ರಮ್ಯಕ್ಕನೇ ಮಾತನಾಡಿದ್ದಾರೆ…
ಬರಹ: ವಿಶಾಲಾಕ್ಷಿ
ಸ್ಯಾಂಡಲ್ವುಡ್ನ ಮೋಹಕತಾರೆ ರಮ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ. ಬಹಳ ದಿನಗಳ ನಂತರ ಸೋಷಿಯಲ್ ಲೋಕದಲ್ಲಿ ಲೈವ್ ಬಂದ ದಿಲ್ಲಿ ಮೇಡಂ ಸ್ಟ್ಯಾಂಡಪ್ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಮಾತುಕಥೆ ಶುರುಹಚ್ಚಿಕೊಂಡರು. ಲೈವ್ನಲ್ಲಿ ಚಾಕಲೇಟ್ಸ್ ತಿನ್ನುತ್ತಾ ಮಾತಿಗಿಳಿದ ಗೌರಮ್ಮ, ಹಾಲು ಕುಡಿಯಲ್ಲ, ಐಸ್ಕ್ರೀಮ್ ಎಷ್ಟು ಬೇಕಾದರೂ ತಿನ್ನುತ್ತೀನಿ.
ಇಡ್ಲಿಗೆ ಸಾಂಬಾರ್ ಡಿಪ್ ಮಾಡೋಕೆ ಇಷ್ಟವಿಲ್ಲ ಹೀಗಾಗಿ ಚಟ್ನಿ ಜೊತೆ ತಿನ್ನುತ್ತೀನಿ. ನುಗ್ಗೆಕಾಯಿ ಇಷ್ಟ ಆಗಲ್ಲ, ಮಶ್ರೂಮ್ ಚೆನ್ನಾಗಿ ಬ್ಯಾಟಿಂಗ್ ಮಾಡ್ತೀನಿ. ಮೊಟ್ಟೆ ಸಪರೇಟ್ ತಿನ್ನಲ್ಲ ಕೇಕ್ನಲ್ಲಿ ಹಾಕಿದ್ರೆ ಟೇಸ್ಟ್ ಮಾಡ್ತೀನಿ. ನಾನ್ ವೆಜ್ ತಿನ್ನೋದನ್ನ ಬಿಟ್ಟುಬಿಟ್ಟಿದ್ದೀನಿ ಹೀಗೆ ತಮ್ಮ ಇಷ್ಟದ ಫುಡ್ ಬಗ್ಗೆ ಮಾತನಾಡುತ್ತಾ ಲೈವ್ನಲ್ಲೇ ಬೆಂಗಳೂರಿನ ಗಾಂಧಿನಗರ ಹಾಗೂ ಬಸವನಗುಡಿಯನ್ನ ಒಂದು ರೌಂಡ್ ಹಾಕಿಬಂದರು.
ಇಷ್ಟೆಲ್ಲಾ ಮಾತನಾಡಿದ ರಮ್ಯಾ ಅಭಿಮಾನಿಗಳ ಕೂತೂಹಲದ ಪ್ರಶ್ನೆಗೆ ಉತ್ತರ ನೀಡ್ಲೆ ಇಲ್ಲ. ಪದ್ಮಾವತಿ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಚಿತ್ರರಂಗಕ್ಕೆ ಯಾವಾಗ ಕಮ್ಬ್ಯಾಕ್ ಮಾಡ್ತಾರೆ ಅನ್ನೋದು ಫ್ಯಾನ್ಸ್ಗಳ ಮಿಲಿಯನ್ ಡಾಲರ್ ಪ್ರಶ್ನೆ ಈ ಕೌತುಕದ ಪ್ರಶ್ನೆಗೆ ಗೌರಮ್ಮ ಸರಿಯಾದ ಉತ್ತರ ಕೊಡಲಿಲ್ಲ. ಮನೆಯಲ್ಲೇ ಇದ್ದೇನೆ ಎಂದರೇ ಹೊರೆತು ಯಾವ್ ಮನೆ ಎಲ್ಲಿಯ ಮನೆ ಎಂದು ಹೇಳಲಿಲ್ಲ. ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡುವ ಪ್ಲ್ಯಾನ್ ಸದ್ಯಕ್ಕಿಲ್ಲ ಎಂದರೇ ಹೊರೆತು `ಡೋಂಟ್ ವರೀ ಐ ವಿಲ್ ಕಮ್’ ಅಂತ ಹೇಳಲೆ ಇಲ್ಲ ಗುರು. ಹಾಗಂತ ಫ್ಯಾನ್ಸ್ ಏನ್ ಬೇಜಾರ್ ಮಾಡಿಕೊಂಡಿಲ್ಲ. ಯಾವಾಗ ಬಂದ್ರೂ ಓಕೆ ರೆಡ್ಕಾರ್ಪೆಟ್ ಹಾಕೋದಕ್ಕೆ ನಾವ್ ರೆಡಿ ಎನ್ನುತ್ತಿದ್ದಾರೆ.
ಗಿರೀಶ್ ಕಾಸರವಳ್ಳಿ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಹಿರಿಯ ನಿರ್ದೇಶಕರು ಸೇರಿ `ಅಡಾಕ್ ಕಮಿಟಿ’ ರಚನೆ ಮಾಡಲಾಗಿದ್ದು, ಅವ್ಯವಹಾರ ಮಾಡಿರುವವರ ವಿರುದ್ಧ ಕಮಿಷನರ್ ಗೆ ದೂರು ಕೊಟ್ಟು, ಅಕ್ರಮ ಸಾಬೀತಾದರೆ ಜೀವನದಲ್ಲಿ ಇನ್ನೆಂದು ಅಂತವರನ್ನ ನಿರ್ದೇಶಕರ ಸಂಘದ ಮೆಟ್ಟಿಲು ತುಳಿಯೋದಕ್ಕೆ ಅವಕಾಶ ಮಾಡಿಕೊಡಲ್ವಂತೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇಂಡಿಯಾದಲ್ಲಿ ನಂಬರ್ ಒನ್ ಆಗ್ಬೇಕು ಅಂತ ಪಣತೊಟ್ಟಿದ್ದಾರೆ ಹಿರಿಯ ನಿರ್ದೇಶಕರು…
ಬರಹ : ವಿಶಾಲಾಕ್ಷಿ
ಇವತ್ತು ಸೌತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡ್ತಿದೆ ಎಂಬುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಷ್ಯ. ಇದಕ್ಕೆ ಗಂಧದಗುಡಿಯ ದಿಗ್ಗಜರಿಂದ ಹಿಡಿದು ರಾಕಿಭಾಯ್ ಕೂಡ ಕಾರಣ ಎಂಬುದು ನಿಮ್ಮೆಲ್ಲರಿಗೂ ಗೊತ್ತಿರೋ ಸತ್ಯ. ಹೌದು, ಕನ್ನಡ ಚಿತ್ರರಂಗಕ್ಕಿರುವ ಇತಿಹಾಸ, ಗಂಧದಗುಡಿಗಿರುವ ಶಕ್ತಿ, ಚಂದನವನದ ಕಲಾವಿದರಿಗಿರುವ ತಾಕತ್ತು ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತಾಗುತ್ತಿರುವ ದಿನಗಳಲ್ಲಿ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಬೀದಿಗೆ ಬಿದ್ದಿದೆ. ಇದು ನಿಜಕ್ಕೂ ದುರಂತದ ಸಂಗತಿ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಅನ್ನೋದು ಬರೀ ಸಂಘವಲ್ಲ. ಯಾರೋ ಕೆಲಸಕ್ಕೆ ಬಾರದ ನಾಲ್ಕು ಮಂದಿ ಹುಟ್ಟು ಹಾಕಿದ ಸಂಸ್ಥೆಯೂ ಅಲ್ಲ ಬದಲಾಗಿ ಗಂಧದಗುಡಿಯನ್ನ ಕಟ್ಟಿ ಬೆಳೆಸಲಿಕ್ಕೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್, ರಾಜೇಂದ್ರ ಸಿಂಗ್ ಬಾಬು, ದೊರೆ ಭಗವಾನ್, ಸಿದ್ದಲಿಂಗಯ್ಯ ನಾಗೇಂದ್ರ ರಾವ್, ವಿಠಲಾಚಾರ್, ಶಂಕರ್ ಸಿಂಗ್ ಸೇರಿದಂತೆ ಹಲವು ದಿಗ್ಗಜರು ಬೆವರು ಹರಿಸಿದ್ದಾರೆ. ಭದ್ರ ಬುನಾದಿ ಹಾಕಿಕೊಟ್ಟು ಮಣ್ಣಲ್ಲಿ ಮಣ್ಣಾಗಿದ್ದಾರೆ. ಇಂತಹ ಸಂಸ್ಥೆ ಇವತ್ತು ನೆಲೆಕಳೆದುಕೊಂಡಿದೆ. ಇಂತಹ ಸಂಸ್ಥೆಯನ್ನು ಬೀದಿಗೆ ತಂದು ನಿಲ್ಲಿಸಿದ್ಯಾರು ಅನ್ನೋದನ್ನ ನೋಡೋದಕ್ಕೂ ಮುನ್ನ ಈ ಸಂಸ್ಥೆಯ ಹೆಮ್ಮೆಯ ಸಂಗತಿ ಬಗ್ಗೆ ಹೇಳ್ತೀವಿ ಕೇಳಿ…
ಪುಟ್ಟಣ್ಣ ಕಣಗಾಲ್
ಭಾರತದಲ್ಲೇ ಒನ್ ಆಫ್ ದಿ ಬೆಸ್ಟ್ ಡೈರೆಕ್ರ್ಸ್ ಅಸೋಸಿಯೇಷನ್ ! ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗಿಂತ ಈ ಅವಾರ್ಡ್ ದೊಡ್ಡದು !
ಇವತ್ತು ಬೀದಿಪಾಲಾಗಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಪುಟ್ಟಣ್ಣ ಅವರು ಇದ್ದಾಗಭಾರತದಲ್ಲೇ ಒನ್ ಆಫ್ ದಿ ಬೆಸ್ಟ್ ಡೈರೆಕ್ರ್ಸ್ ಅಸೋಸಿಯೇಷನ್ ಅಂತ ಕರೆಸಿಕೊಂಡಿತ್ತು. ಭಾರತೀಯ ಚಿತ್ರರಂಗ ಕಂಡ ಬಿ ಆರ್ ಚೋಪ್ರಾ, ಮಣಿರತ್ನಂ, ಭಾರತಿರಾಜ್, ಎಲ್. ವಿ ಪ್ರಸಾದ್, ಬಾಲಚಂದಿರ್, ವಿಶ್ವನಾಥ್, ಭಾನುಮತಿಯಂತಹ ನಿರ್ದೇಶಕರು ಕನ್ನಡ ಚಲನಚಿತ್ರ ಸಂಘವನ್ನು ಹಾಡಿಹೊಗಳಿದ್ದರು. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸೃತ ನಿರ್ದೇಶಕ ಎಲ್. ವಿ. ಪ್ರಸಾದ್ ಅವರು, `ದಾದಾಸಾಹೇಬ್ ಪಾಲ್ಕೆ ಪಡೆದು ನಂತರದ ವರ್ಷದಲ್ಲಿ ಅವರ ಪುಸ್ತಕದಲ್ಲಿ ಬರೆಯುತ್ತಾರೆ. ಕರ್ನಾಟಕ ನಿರ್ದೇಶಕರ ಸಂಘ ಕೊಡುವ ಗೌರವ ಹಾಗೂ ಪ್ರಶಸ್ತಿ ದಾದಾಸಾಹೇಬ್ ಪಾಲ್ಕೆ ಅವಾರ್ಡ್ಗಿಂತ ದೊಡ್ಡದು. ಇವರುಗಳು ಅವಾರ್ಡ್ ಕಾರ್ಯಕ್ರಮವನ್ನ ಕಂಡೆಕ್ಟ್ ಮಾಡುವ ರೀತಿ ಹಾಗೂ ಆರ್ಗನೈಸ್ ಮಾಡುವುದನ್ನ ಬೇರೆ ಯಾವ ಕಡೆನೂ ನಾನು ನೋಡಿಲ್ಲ ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದರು.
ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ
`ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ದ ವತಿಯಿಂದ ಪ್ರತಿವರ್ಷ ಅವಾರ್ಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಪ್ರಸಿದ್ದ ನಿರ್ದೇಶಕರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದರು. ವರನಟ ಡಾ ರಾಜ್ಕುಮಾರ್ ಅವ್ರಿಗೆ ನಿರ್ದೇಶಕ ಸಂಘದ ಕಾರ್ಯಕ್ರಮ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ, ತಮ್ಮ ತಂದೆ ಪುಟ್ಟಸ್ವಾಮಿಯವರ ಹೆಸರಲ್ಲಿ ಅವಾರ್ಡ್ ಇಟ್ಟಿದ್ದರು. ಬೆಸ್ಟ್ ಡೈರೆಕ್ಟರ್, ಬೆಸ್ಟ್ ಆಕ್ಟರ್, ಬೆಸ್ಟ್ ಪ್ರೊಡ್ಯೂಸರ್ ಹೀಗೆ ಸುಮಾರು 20 ವಿಭಾಗದಲ್ಲಿ ಅವಾರ್ಡ್ ನೀಡಲಾಗ್ತಿತ್ತು. ಈಗ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಅವಾರ್ಡ್ ಕಾರ್ಯಕ್ರಮವನ್ನು ನಡೆಸುವುದು ಇರಲಿ, ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಕೂರೋದಕ್ಕೆ ಜಾಗನೇ ಇಲ್ಲ.
ಭಗವಾನ್, ನಿರ್ದೇಶಕ
ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಸೂರಿಲ್ಲ ಗುರು ! ಪುಟ್ಟಣ್ಣ ಅವರ ಬೈಲಾ ಮೀರಿ ಅಧಿಕಾರ ಮಾಡಿದ್ರಾ ಇವರೆಲ್ಲರು !?
ಹೌದು, ಇವತ್ತು ಚಲನಚಿತ್ರ ಸಂಘಕ್ಕೆ ಒಂದು ಸೂರಿಲ್ಲ. ಪುಟ್ಟಣ್ಣ ಅವರು ಸಂಘ ಹುಟ್ಟು ಹಾಕಿದಾಗಿನಿಂದ ಇಲ್ಲಿವರೆಗೂ ಬಾಡಿಗೆ ಬಿಲ್ಡಿಂಗ್ ಆದರೂ ಇತ್ತು. ಆದರೆ, ವಿ. ನಾಗೇಂದ್ರ ಪ್ರಸಾದ್ ಅವರು ತಮ್ಮ ಅಧ್ಯಕ್ಷ ಪಟ್ಟವನ್ನು ಏಕಾಏಕಿ ನಿರ್ದೇಶಕ ಟೇಶಿ ವೆಂಕಟೇಶ್ಗೆ ಹಸ್ತಾಂತರಿಸಿದ ಮೇಲೆ ಚುನಾವಣೆ ನಡೆಯದೇ ಸ್ವಯಂ ಘೋಷಿತ ಅಧ್ಯಕ್ಷರಾಗಿ ಟೇಶಿ ವೆಂಕಟೇಶ್ ನಿರ್ದೇಶಕರ ಸಂಘದ ಜವಾಬ್ದಾರಿ ವಹಿಸಿಕೊಂಡ್ಮೇಲೆ ಸಂಘಕ್ಕೆ ಬಾಡಿಗೆ ಬಿಲ್ಡಿಂಗ್ ಕೂಡ ಇಲ್ಲ. ಸಂಘದ ನೀತಿ-ನಿಯಮಗಳನ್ನ ಪಾಲಿಸದೇ, ಪುಟ್ಟಣ್ಣ ಅವರ ಬೈಲಾ ಪ್ರಕಾರ ನಡೆದುಕೊಳ್ಳದೇ ಟೇಶಿ ವೆಂಕಟೇಶ್ ಸರ್ವಾಧಿಕಾರಿಯಂತೆ ವರ್ತಿಸಿದ್ದಾರಂತೆ. ನಿರ್ದೇಶಕರ ಸಂಘದ ಯಾರೊಬ್ಬರ ಗಮನಕ್ಕೂ ತರದೇ ಎಫ್ ಡಿ ಅಮೌಂಟ್ನ ಕೂಡ ಡ್ರಾ ಮಾಡಿಕೊಂಡಿದ್ದಾರಂತೆ.
ಹೀಗೆ ಬೈಲಾ ವಿರುದ್ದವಾಗಿ ಸಂಘದಲ್ಲಿ ಕಾರ್ಯಚಟುವಟಿಕೆಗಳು ಆಗ್ತಿದ್ದನ್ನ ಮನಗಂಡ ನಿರ್ದೇಶಕರ ಸಂಘದ ಉಪಾಧ್ಯಕ್ಷೆ ರೂಪಾ ಅಯ್ಯರ್ ಅವರು ಕಾನೂನಿನ ಮೊರೆ ಹೋಗಿದ್ದರು. ಇದೀಗ ಸರ್ಕಾರ ಕನ್ನಡ ನಿರ್ದೇಶಕರ ಸಂಘಕ್ಕೆ ಆಡಳಿತಾಧಿಕಾರಿಯನ್ನ ನೇಮಕ ಮಾಡಿದೆ. ಈ ವಿಷಯವನ್ನು ಹಾಗೂ ಇಲ್ಲಿವರೆಗೂ ನಡೆದಿರುವ ಘಟನೆಗಳನ್ನ ಹಿರಿಯ ನಿರ್ದೇಶಕರ ಸಭೆ ನಡೆಸಿ ಅವರ ಮುಂದಿಡುವ ಕೆಲಸವನ್ನ ರೂಪ ಅಯ್ಯರ್ ಮಾಡಿದ್ದಾರೆ. ಅಂದ್ಹಾಗೇ, ವಿ ನಾಗೇಂದ್ರ ಪ್ರಸಾದ್ ಹಾಗೂ ಟೇಶಿ ವೆಂಕಟೇಶ್ ಅವರ ಆಡಳಿತದ ಬಗ್ಗೆ ಸರ್ಕಾರದ ಆಡಳಿತಾಧಿಕಾರಿಯಿಂದ ಶೀಘ್ರದಲ್ಲೇ ತನಿಖೆ ಆಗಲಿದೆ. ಅಧಿಕಾರ ದುರುಪಯೋಗ ಆಗಿದ್ದಲ್ಲಿ, ಸಂಘದ ಹಣ ಉಪಯೋಗಿಸಿಕೊಂಡು ಅವ್ಯವಹಾರ ಮಾಡಿದ್ದಲ್ಲಿ ತಕ್ಕ ಶಿಕ್ಷೆಯಾಗಲಿದೆ.
ಪುಟ್ಟಣ್ಣ ಹಾಗೂ ದಿಗ್ಗಜರು ಕಟ್ಟಿದಂತಹ ನಿರ್ದೇಶಕರ ಸಂಸ್ಥೆಯನ್ನ ಬೀದಿಗೆ ತಂದು ನಿಲ್ಲಿಸಿರುವವರ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ದೊರೆ ಭಗವಾನ್, ಹಿರಿಯ ನಟ ಶಿವರಾಂ, ಕೋಡ್ಲು ರಾಮಕೃಷ್ಣ ಸೇರಿದಂತೆ ಹಲವು ಹಿರಿಯ ನಿರ್ದೇಶಕರು ಅಸಮಾಧಾನಗೊಂಡರು. ಗಿರೀಶ್ ಕಾಸರವಳ್ಳಿ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಹಿರಿಯ ನಿರ್ದೇಶಕರು ಸೇರಿ `ಅಡಾಕ್ ಕಮಿಟಿ’ ರಚನೆ ಮಾಡಿದ್ದೇವೆ. ಸರ್ಕಾರ ನಿರ್ದೇಶಕರ ಸಂಘಕ್ಕೆ ನೇಮಕ ಮಾಡಿರುವ ಆಡಳಿತಾಧಿಕಾರಿಯಿಂದ ಸೂಕ್ತ ದಾಖಲೆ ಹಾಗೂ ಮಾಹಿತಿಯನ್ನು ಕಲೆಹಾಕಿಕೊಂಡು ಕಾನೂನಿನ ಮೊರೆ ಹೋಗ್ತೇವೆ. ಅವ್ಯವಹಾರ ಮಾಡಿರುವವರ ವಿರುದ್ಧ ಕಮಿಷನರ್ ಗೆ ದೂರು ಕೊಡ್ತೇವೆ. ಅಕ್ರಮ ಸಾಬೀತಾದರೆ ಜೀವನದಲ್ಲಿ ಇನ್ನೆಂದು ಅಂತವರನ್ನ ನಿರ್ದೇಶಕರ ಸಂಘದ ಮೆಟ್ಟಿಲು ತುಳಿಯೋದಕ್ಕೆ ಅವಕಾಶ ಮಾಡಿಕೊಡಲ್ಲ ಅಂತ ರಾಜೇಂದ್ರ ಸಿಂಗ್ ಬಾಬು ಕಿಡಿಕಾರಿದ್ದಾರೆ. ಜೊತೆಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇಂಡಿಯಾದಲ್ಲಿ ನಂಬರ್ ಒನ್ ಆಗ್ಬೇಕು ಅಂತ ಪಣತೊಟ್ಟಿದ್ದಾರೆ.
ಇತಿಹಾಸ ಸೃಷ್ಟಿಸಿದ್ದರು `ಕೆಜಿಎಫ್’ ಸಾರಥಿ ! ಕನ್ನಡ ನಿರ್ದೇಶಕರಿಗಿದೆ ತಿರುಗಿ ನೋಡುವಂತೆ ಮಾಡೋ ಶಕ್ತಿ !
ಇಳಿವಯಸ್ಸಲ್ಲೂ ಕೂಡ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಇಂತಹದ್ದೊಂದು ದಿಟ್ಟ ಕಾರ್ಯಕ್ಕೆ ಎಲ್ಲರನ್ನೂ ಹುರಿದುಂಬಿಸುವ ರೀತಿಗೆ ಸೆಲ್ಯೂಟ್ ಹೊಡಿಬೇಕು. 100 ವರ್ಷದ ಹಿಂದೆನೇ ನಿರ್ದೇಶಕನೇ ಸಾರಥಿ ಅಂತ ಘೋಷಣೆಯಾಗಿದೆ. ಒಬ್ಬ ನಿರ್ದೇಶಕ ಮನಸ್ಸು ಮಾಡಿದ್ರೆ ಇತಿಹಾಸ' ಸೃಷ್ಟಿಯಾಗುತ್ತೆ ಅದಕ್ಕೆ ತಾಜಾ ಉದಾಹರಣೆಕೆಜಿಎಫ್’ ಅನ್ನೋ ಸಿನಿಮಾ ಇಡೀ ಇಂಡ್ಯಾವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರು.
ಹೀಗೆ ಇಡೀ ದೇಶವನ್ನ ತಮ್ಮ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡುವ ಶಕ್ತಿ ನಮ್ಮ ಕನ್ನಡ ಚಿತ್ರರಂಗದ ಕ್ಯಾಪ್ಟನ್ ಗಳಿಗಿದೆ ಅಂದ್ಮೇಲೆ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘವನ್ನ ಇಂಡಿಯಾದಲ್ಲಿ ನಂಬರ್ ಒನ್ ಮಾಡುವ ತಾಕತ್ತು ಇದೆ ಅಂತ ಅರ್ಥ. ಹೀಗಿರುವಾಗ ಈಗಿನ ತಲೆಮಾರಿನ ನಿರ್ದೇಶಕರಗಳು ರಾಜೇಂದ್ರ ಸಿಂಗ್ ಬಾಬು ಅವರ ಯೋಜನೆಗೆ ಕೈ ಜೋಡಿಸಬೇಕು. ಜಗತ್ತಿನ ಬೇರೆ ಬೇರೆ ಚಿತ್ರರಂಗದ ನಿರ್ದೇಶಕರುಗಳನ್ನು ಕರೆಸಿ ಇಂಡಿಯನ್ ಕಾನ್ ಕ್ಲೇವ್ ಮಾಡಬೇಕು, ಸಿನಿಮಾ ಬಗ್ಗೆ ಚರ್ಚೆಗಳು ನಡೀಬೇಕು ಅಂತ ಸಿಂಗ್ ಬಾಬು ಅಭಿಪ್ರಾಯ ಪಟ್ಟಿದ್ದಾರೆ. ಅವರ ಆಸೆ ಆಕಾಂಕ್ಷೆ ಈಡೇರಲಿ , ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇಂಡ್ಯಾದಲ್ಲಿ ಜನಪ್ರಿಯಗೊಳ್ಳಲಿ ಅನ್ನೋದೇ ಕನ್ನಡಿಗರ ಬಯಕೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿರ್ದೇಶಕ ಶಶಾಂಕ್, ತಮ್ಮದೇ ನಿರ್ಮಾಣದ ಉಪೇಂದ್ರ ಹಾಗೂ ಹರಿಪ್ರಿಯ ಜೋಡಿಯ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳಿ ಇಷ್ಟರಲ್ಲಿಯೇ ಸಿನಿಮಾವನ್ನು ರಿಲೀಸ್ ಹಂತಕ್ಕೆ ತಂದು ನಿಲ್ಲಿಸುತ್ತಿದ್ದರೋ ಏನೋ, ಆದರೆ, ಕೊರೊನಾ ಹಿನ್ನೆಲೆಯಲ್ಲಿ ಅವರ ಬಹು ನಿರೀಕ್ಷಿತ ಪ್ರಾಜೆಕ್ಟ್ ಅರ್ಧಕ್ಕೆ ನಿಂತಿದೆ. ಈ ನಡುವೆಯೇ ಈಗ ಹೊಸ ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದಾರೆ. ವಿಶೇಷ ಅಂದ್ರೆ ಈಗವರು ಹೊಸ ಪ್ರತಿಭೆಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಆ ಚಿತ್ರದ ಟೈಟಲ್ ಕೂಡ ಈಗ ರಿವೀಲ್ ಆಗಿದೆ.
ʼಲವ್ 360ʼ ಎನ್ನುವುದು ಆ ಚಿತ್ರದ ಹೆಸರು. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವ್ ಸ್ಟೋರಿ ಸಿನಿಮಾ. ಹೊಸ ತಲೆಮಾರಿನ ಯುವ ಜನತೆಗೆ ಹಿಡಿಸುವಂತಹ ಕಥೆಯೊಂದನ್ನು ರೆಡಿ ಮಾಡಿಕೊಂಡು ಲವ್ ೩೬೦ ಹೆಸರಲ್ಲಿ ಸಿನಿಮಾ ಮಾಡಲು ಹೊರಟಿದ್ದಾರಂತೆ ನಿರ್ದೇಶಕ ಶಶಾಂಕ್. ಲವ್ ಅನ್ನೋದೇ ಒಂದು ಯುನಿವರ್ಸಲ್ ಸಬ್ಜೆಕ್ಟ್. ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಬಗೆಯಲ್ಲಿ ಪ್ರೀತಿಯ ಧಾರೆ ಹರಿದೇ ಇರುತ್ತೆ. ಆ ದೃಷ್ಟಿಯಲ್ಲಿ ತುಂಬಾ ಆಫ್ಟ್ ಆಗುವ ವಿಷಯವನ್ನು ಕೈಗೆತ್ತಿಕೊಂಡಿದ್ದು ಮಾತ್ರವಲ್ಲ, ಈ ಕಥೆಗೆ ತಕ್ಕಂತೆ ಬಳ್ಳಾಗಿ ಮೂಲದ ಹೊಸ ಪ್ರತಿಭೆಯನ್ನು ಚಿತ್ರದ ನಾಯಕನನ್ನಾಗಿಯೇ ಆಯ್ಕೆ ಮಾಡಿಕೊಂಡಿದ್ದಾರೆ.
ಅಂದಹಾಗೆ, ಬಳ್ಳಾರಿ ಮೂಲದ ಯುವ ಪ್ರತಿಭೆ ಪ್ರವೀಣ್ ಈ ಚಿತ್ರದ ನಾಯಕ. ಎಂಜಿನಿಯರಿಂಗ್ ಮುಗಿಸಿರುವ ಈ ಹುಡುಗನಿಗೆ ಸಿನಿಮಾ ಅಂದ್ರೆ ವಿಪರೀತ ಹುಚ್ಚಂತೆ. ಅದರಲ್ಲೂ ನಾಯಕನಾಗಿಯೇ ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂಬ ಹಂಬಲವಂತೆ. ಸದ್ಯಕ್ಕೆ ಈ ಚಿತ್ರಕ್ಕೆ ಪವೀಣ್ ನಾಯಕರಾಗಿ ಆಯ್ಕೆ ಆಗಿದ್ದು ಬಿಟ್ಟರೆ, ನಾಯಕಿ ಸೇರಿದಂತೆ ಉಳಿದ ಪಾತ್ರಗಳಿಗೆ ಕಲಾವಿದರ ಹುಡುಕಾಟ ನಡೆಸಿದ್ದಾರಂತೆ ನಿರ್ದೇಶದ ಶಶಾಂಕ್.ʼ ನಾಯಕಿ ಸೇರಿದಂತೆ ಉಳಿದ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ಕೆಲಸ ಈಗ ನಡೆದಿದೆ. ಈ ವಾರದೊಳಗೆ ನಾಯಕಿ ಅಯ್ಕೆ ಫೈನಲ್ ಆಗಲಿದೆ. ಉಳಿದಂತೆ ಚಿತ್ರದ ತಂತ್ರಜ್ಜರು ಆಯ್ಕೆ ಈಗಾಗಲೇ ನಡೆದು ಹೋಗಿದೆ ಎನ್ನುತ್ತಾರವರು.
“ಲವ್ 360” ಗೆ ಶಶಾಂಕ್ ಅವರೇ ನಿರ್ದೇಶಕ ಕಮ್ ನಿರ್ಮಾಪಕ. ಶಶಾಂಕ್ ಫಿಲ್ಮ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಆಗಸ್ಟ್ ನಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ಶುರುವಾಗಲಿದೆಯಂತೆ. ಸದ್ಯಕ್ಕೆ ಕಲಾವಿದರ ಆಯ್ಕೆ ಹಾಗೂ ಒಂದಷ್ಟು ಸಿದ್ದತೆ ನಡೆಯುತ್ತಿವೆ ಎನ್ನುತ್ತಾರವರು. ಇನ್ನು ಅವರದೇ ಬ್ಯಾನರ್ನಲ್ಲಿ ನಿರ್ಮಾಣವಾಗಬೇಕಿದ್ದ ಉಪೇಂದ್ರ- ಹರಿಪ್ರಿಯ ಕಾಂಬಿನೇಷನ್ ಸಿನಿಮಾ ಶುರುವಾಗುವುದು ಯಾವಾಗ ಎನ್ನುವುದಕ್ಕೂ ಪ್ರತಿಕ್ರಿಯೆ ಕೊಟ್ಟಿದ್ದಾರೆ.ʼ
ಅದು ಬಿಗ್ ಬಜೆಟ್ ಸಿನಿಮಾ. ಮೇಲಾಗಿ ಜನರ ಮಧ್ಯೆಯೇ ಸಾಕಷ್ಟು ದೃಶ್ಯಗಳನ್ನು ಚಿತ್ರೀಕರಿಸಬೇಕಿದೆ. ಆದರೆ ಈ ಕೊರೋನಾ ಸಂದರ್ಭದಲ್ಲಿ ಅದೆಲ್ಲ ಸಾಧ್ಯವೇ ಇಲ್ಲ. ಅದೇ ಕಾರಣದಿಂದ ಅದನ್ನು ಸದ್ಯಕ್ಕೆ ನಿಲ್ಲಿಸಿ, ಈ ಸಿನಿಮಾ ಶುರುಮಾಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ಶಶಾಂಕ್.
ಕನ್ನಡ ಸಿನಿಮಾರಂಗ ಈಗ ಮೆಲ್ಲನೆ ಗರಿಗೆದರುತ್ತಿದೆ. ಕನ್ನಡದಲ್ಲೀಗ ಹೊಸ ಸಿನಿಮಾಗಳ ಕಲರವ ಆಗುತ್ತಿರುವುದು ಹೊಸ ಬೆಳವಣಿಗೆಯೇ ಸರಿ. ಕೊರೊನಾ ಸಮಸ್ಯೆಗೆ ನಲುಗಿದ್ದ ಚಿತ್ರರಂಗ ಈಗ ಚೇತರಿಸಿಕೊಳ್ಳುತ್ತಿದೆ. ಹೊಸಬರು ಆಸೆಯ ಕಂಗಳಲ್ಲೇ ತಮ್ಮ ನೂತನ ಸಿನಿಮಾಗಳಿಗೆ ಚಾಲನೆ ಕೊಡುತ್ತಿದ್ದಾರೆ. ಅರ್ಧಕ್ಕೆ ನಿಂತಿದ್ದ ಚಿತ್ರಗಳು ಕೂಡ ಇದೀಗ ಶುರುವಾಗುತ್ತಿವೆ. ಒಂದಷ್ಟು ಸಿನಿಮಾಗಳು ಬಿಡುಗಡೆಗೂ ತಯಾರಾಗುತ್ತಿವೆ. ಈಗ ಆದರ ಬೆನ್ನಲ್ಲೇ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಆಷಾಢ ಶುರುವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದೆಷ್ಟೋ ಸಿನಿಮಾಗಳು ಸೆಟ್ಟೇರಿವೆ. ಪೂಜೆ ಮುಗಿಸಿಕೊಂಡಿವೆ. ಅಂತೆಯೇ ನಿರ್ದೇಶಕ ನೂತನ್ ಉಮೇಶ್ ಅವರೂ ಸಹ ಹೊಸದೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಹೌದು, ಈಗಾಗಲೇ ನೂತನ್ ಉಮೇಶ್ ಅವರು ಸದ್ದಿಲ್ಲದೆಯೇ, ಒಂದು ಸಿನಮಾ ಮಾಡಿದ್ದಾಗಿದೆ. ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಸಿನಿಮಾ ಲಾಕ್ಡೌನ್ ಕಥಾಹಂದರ ಹೊಂದಿದೆ. ಅದೊಂದು ವಿಶೇಷ ಕಥೆ ಎನ್ನುವ ನಿರ್ದೇಶಕ ನೂತನ್ ಉಮೇಶ್, ನಾಲ್ಕು ಭಾಷೆಯಲ್ಲಿ ಬೇರೆ ಬೇರೆ ಹೀರೋಗಳಿದ್ದಾರೆ. ಹಾಗಂತ, ಆಯಾ ಭಾಷೆಯಲ್ಲೇ ನಟರಿದ್ದರೂ, ಎಲ್ಲಾ ನಟರಿಗೂ ಕಥೆಯೊಳಗಿನ ಲಿಂಕ್ ಇರಲಿದೆ ಎನ್ನುವ ಅವರು ಆ ಚಿತ್ರದ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ. ಈಗ ಹೊಸ ಸುದ್ದಿ ಅಂದರೆ, ಅವರು ತಮ್ಮ ಹೊಸ ಪ್ರಾಜೆಕ್ಟ್ಗೂ ಚಾಲನೆ ಕೊಟ್ಟಿದ್ದಾರೆ. ನೂತನ್ ಉಮೇಶ್ ಅವರ ಡ್ರೀಮ್ ಪ್ರಾಜೆಕ್ಟ್ ಅದು ಅನ್ನೋದು ವಿಶೇಷತೆಗಳಲ್ಲೊಂದು.
ನೂತನ್ ಉಮೇಶ್, ನಿರ್ದೇಶಕ
ಹೌದು, ನೂತನ್ ಉಮೇಶ್ ಅವರು, ಬಹಳ ದಿನಗಳಿಂದಲೂ ಒಂದೊಳ್ಳೆಯ ಕಥೆ ಮಾಡಿಕೊಂಡು, ಸಿನಿಮಾ ಮಾಡುವ ಉತ್ಸಾಹದಲ್ಲಿದ್ದರು. ಇನ್ನೇನು ಶುರು ಮಾಡಬೇಕು ಅನ್ನುವ ಹೊತ್ತಿಗೆ ಕೊರೊನಾ ಇತ್ಯಾದಿ ಸಮಸ್ಯೆಗಳು ಎದುರಾಗಿಬಿಟ್ಟಿದ್ದವು. ಈಗ ಅವರು ಒಂದೊಳ್ಳೆಯ ಹಾರರ್ ಕಥೆ ಹಿಡಿದು ಹೊರಟಿದ್ದಾರೆ. ಆ ಚಿತ್ರಕ್ಕೆ “A tale of ಅಂಡಾಳಮ್ಮ” ಎಂದು ನಾಮಕರಣ ಮಾಡಿದ್ದಾರೆ. ಹೌದು, ” ಹನಿ ಹನಿ ಹಾರರ್ ಕಹಾನಿ” ಎಂಬ ಅಡಿಬರಹವಿರುವ ಈ ಚಿತ್ರದ ಟೈಟಲ್ ಮಾತ್ರ ಅನೌನ್ಸ್ ಮಾಡಿರುವ ನೂತನ್ ಉಮೇಶ್, ಚಿತ್ರಕ್ಕೆ ಶ್ರೀನಿ ಅವರನ್ನು ಹೀರೋ ಮಾಡಿದ್ದಾರೆ. ಶ್ರೀನಿ ಈ ಹಿಂದೆ “ಟೋಪಿವಾಲ” ನಿರ್ದೇಶಿಸಿದ್ದರು. “ಶ್ರೀನಿವಾಸ ಕಲ್ಯಾಣ” ಮತ್ತು ಬೀರ್ಬಲ್ʼ ಸಿನಿಮಾದಲ್ಲಿ ನಟಿಸುವುದರ ಜೊತೆಗೂ ನಿರ್ದೇಶನ ಮಾಡಿದ್ದರು.
ಶ್ರೀನಿ, ಹೀರೋ
ಈಗ “A tale of ಅಂಡಾಳಮ್ಮ” ಸಿನಮಾದಲ್ಲಿ ನಟಿಸುತ್ತಿದ್ದಾರೆ. ಈ ಶೀರ್ಷಿಕೆಯೇ ಒಂದೊಳ್ಳೆಯ ಮಜಾ ಎನಿಸುತ್ತದೆ. ಕಥೆ ಕೂಡ ಅಷ್ಟೇ ಮಜವಾಗಿದೆ ಎನ್ನುವ ನಿರ್ದೇಶಕರು, ಅಂಡಾಳಮ್ಮ ಅಂದರೇನು? ಎಂಬ ಪ್ರಶ್ನೆಗೆ ಸಿನಿಮಾ ನೋಡಬೇಕು ಎಂದಷ್ಟೇ ಹೇಳುತ್ತಾರೆ. ಅದೇನೆ ಇರಲಿ, ಕನ್ನಡದಲ್ಲಿ ಈಗಂತೂ ಹೊಸಬಗೆಯ ಕಥೆಗಳು ಹುಟ್ಟಿಕೊಳ್ಳುತ್ತಿವೆ.
ಆ ಮೂಲಕ ಹೊಸ ಸಂಚಲನವನ್ನೂ ಸೃಷ್ಟಿಸುತ್ತಿವೆ. ಶ್ರೀನಿ ಹಾಗು ನೂತನ್ ಉಮೇಶ್ ಅವರ ಈ “A tale of ಅಂಡಾಳಮ್ಮ” ಸಿನಿಮಾ ಕೂಡ ಸಕ್ಸಸ್ ಆಗಲಿ. ಅಂದಹಾಗೆ, ಈ ಚಿತ್ರ ಮೋಹಕ್ ಸಿನಿಮಾಸ್ ಪ್ರೆಸೆಂಟ್ಸ್ ಮೂಲಕ ಶುರುವಾಗುತ್ತಿದೆ. ಸದ್ಯಕ್ಕೆ ಶ್ರೀನಿ ಹೀರೋ. ಅವರಿಗೆ ನಾಯಕಿ ಯಾರು, ಯಾರೆಲ್ಲಾ ತಾಂತ್ರಿಕ ವರ್ಗದವರು ಇರುತ್ತಾರೆ, ಕಲಾವಿದರು ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಇಷ್ಟರಲ್ಲೇ ಉತ್ತರ ಸಿಗಲಿದೆ.
ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಾಣಬೇಕು ಅಂತ ನೂರಾರು ಪ್ರತಿಭೆಗಳು ತಮ್ಮ ಶ್ರಮದಿಂದಲೇ ಗುರುತಿಸಿಕೊಳ್ಳೋ ಪ್ರಯತ್ನ ಮಾಡುತ್ತಲೇ ಇದ್ದಾರೆ. ಕೆಲವರು ನೆಲೆ ಕಂಡರೆ ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ ಈಗ ಯುವ ನಟ ತನುಷ್ ಶಿವಣ್ಣ ಕೂಡ ಗಾಂಧಿನಗರದಲ್ಲಿ ತಕ್ಕಮಟ್ಟಿಗಿನ ಸದ್ದು ಮಾಡುತ್ತಿದ್ದಾರೆ. ಹೌದು, ಈ ಹಿಂದೆ “ಮಡಮಕ್ಕಿ” ಎಂಬ ಜನ ಮೆಚ್ಚುಗೆಯ ಸಿನಿಮಾ ಮಾಡಿ ಆ ಮೂಲಕ ಸೈ ಎನಿಸಿಕೊಂಡು ಭವ್ಯ ಭರವಸೆ ಮೂಡಿಸಿದ್ದ ತನುಷ್ ಈಗ ಮತ್ತೊಂದು ಭರವಸೆಯ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ತನುಷ್ ಶಿವಣ್ಣ ಈಗ “ನಟ್ವರ್ ಲಾಲ್” ಆಗಿದ್ದಾರೆ. ಚಿತ್ರ ಇನ್ನೇನು ಬಿಡುಗಡೆಗೂ ಸಜ್ಜಾಗಿದೆ. ಇತ್ತೀಚೆಗೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಫಸ್ಟ್ ಲುಕ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಮೊದಲ ಲುಕ ನಲ್ಲೇ ಭಾರೀ ಸದ್ದು ಮಾಡುತ್ತಿದೆ ಅನ್ನೋದು ವಿಶೇಷ.
ತನುಷ್ ಶಿವಣ್ಣ, ಹೀರೋ
ವಿ.ಲವ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಡಬ್ಬಿಂಗ್ ನಡೆಯುತ್ತಿದೆ. ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಬಹುತೇಕ ಚಿತ್ರೀಕರಣ ವಿವಿಧ ಸೆಟ್ ಗಳಲ್ಲಿ ನಡೆದಿರುವುದು ಈ ಚಿತ್ರದ ವಿಶೇಷ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಹೀರೋ ತನುಷ್ ಅವರಿಗೆ ಸೋನಾಲ್ ಮಾಂಟೆರೊ ನಾಯಕಿ.
ಧರ್ಮ ವಿಶ್ ಸಂಗೀತವಿದೆ, ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ಗೌಡ ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನವಿದೆ.
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೇಡಂ ಇನ್ನೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಇದು ಈ ಕ್ಷಣದ ಬಿಗ್ ಬ್ರೇಕಿಂಗ್ ಸ್ಟೋರಿ.
ರೂಪಾಂತರಿ ಕೊರೊನಾ ಅಟ್ಟಹಾಸ ಇನ್ನೂ ಕಮ್ಮಿಯಾಗಿಲ್ಲ ದಯವಿಟ್ಟು ಎಲ್ಲರೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಅಂತ ಸರ್ಕಾರ ಸಾರಿ ಸಾರಿ ಹೇಳ್ತಿದೆ. ಸರ್ಕಾರ ಇಷ್ಟು ಹೇಳಿದರೂ, ಕೊರೊನಾ ಬಗ್ಗೆ ಅರಿವು ಮೂಡಿಸಿದ್ರೂ ಕೂಡ ಸೆಲೆಬ್ರಿಟಿ ಹುದ್ದೆಯಲ್ಲಿರುವ, ಸಾಮಾಜಿಕ ಜವಾಬ್ದಾರಿಯನ್ನ ನಿಭಾಯಿಸಬೇಕಾಗಿರುವ ರಮ್ಯಾ ಮೇಡಂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳೋಕೆ ತಡ ಮಾಡ್ತಿದ್ದಾರೆ.
ಮಾಜಿ ನಟಿ, ಕಾಂಗ್ರೇಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದಂತ ರಮ್ಯಾ ಅವರು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳೋದಕ್ಕೆ ತಡ ಮಾಡ್ತಿರೋದಕ್ಕೆ ಕಾರಣ ಕೊರೊನಾ ವ್ಯಾಕ್ಸಿನ್ ಬಗ್ಗೆ ಅವರಿಗಿರುವ ಕನ್ಫ್ಯೂಶನ್
ಹೌದು, ಕೊವ್ಯಾಕ್ಸಿನ್ ತಗೊಳ್ಳೋದಾ, ಕೊವಿಶೀಲ್ಡ್ ಹಾಕಿಸಿಕೊಳ್ಳೋದಾ ಅಂತ ನಮ್ಮ ಜನ ಕನ್ಫ್ಯೂಶನ್ ಕ್ರಿಯೇಟ್ ಮಾಡಿಕೊಳ್ತಾರೆ. ಅದರಂತೇ ಚಂದನವನದ ಮಾಜಿ ಪದ್ಮಾವತಿಗೂ ಯಾವ್ ವ್ಯಾಕ್ಸಿನ್ ತಗೋಬೇಕು ಅಂತ ಕನ್ಫ್ಯೂಶನ್ ಆಗ್ತಿದೆಯಂತೆ.
ಈ ಬಗ್ಗೆ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಇನ್ಸ್ ಟಾಗ್ರಾಮ್ ಲೈವ್ ನಲ್ಲಿ ಮಾತನಾಡಿರುವ ಗೌರಮ್ಮ, ವ್ಯಾಕ್ಸಿನ್ ಹಾಕಿಸಿಕೊಳ್ಳಲೆಬೇಕು ಆದರೆ ಮೊಡರ್ನಾ ವ್ಯಾಕ್ಸಿನ್ ಬಂದರೆ 100 ಪರ್ಸೆಂಟ್ ಹಾಕಿಸಿಕೊಳ್ತೀನಿ ಎಂದಿದ್ದಾರೆ. ಮೊಡರ್ನಾ ವ್ಯಾಕ್ಸಿನ್ ಗೆ ಪರ್ಮಿಷನ್ ಸಿಕ್ಕಿದೆ ಅದು ಬರೋವರೆಗೂ ವೇಯ್ಟ್ ಮಾಡಿ ಆಮೇಲೆ ತೆಗೆದುಕೊಳ್ಳೋದಕ್ಕೆ ರಮ್ಯಾ ನಿರ್ಧರಿಸಿದ್ದಾರೆ.
ಅಷ್ಟಕ್ಕೂ ಸದ್ಯಕ್ಕೆ ರಮ್ಯಾ ಮೇಡಂ ಅದೆಲ್ಲಿ ನೆಲೆಸಿದ್ದಾರೋ ಗೊತ್ತಿಲ್ಲ. ಮೊಡೊರ್ನಾ ಬಗ್ಗೆ ಮಾತನಾಡ್ತಿದ್ದಾರೆ ಅಂದರೆ ಮಂಡ್ಯ ಮೇಡಂ ಡೆಲ್ಲಿನಲ್ಲಿರೋದು ಡೌಟು ಮತ್ತೆಲ್ಲಿದ್ದಾರೆ ಅನ್ನೋ ಕೂತೂಹಲದ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಯಾಕಂದ್ರೆ ನಿನ್ನೆ ರಾತ್ರಿ ಲೈವ್ ಬಂದಾಗ ರಮ್ಯಕ್ಕನಿಗೆ ಎಲ್ಲಿದ್ದೀರಾ ಈಗ ಅಂತ ಫ್ಯಾನ್ಸ್ ಪ್ರಶ್ನೆ ಕೇಳಿದರೆ ಮನೆಯಲ್ಲಿದ್ದೀನಿ ಅಂತ ಹೇಳಿದರೆ ಹೊರೆತು,
ಯಾವ್ ಮನೆ? ಎಲ್ಲಿ ತಂಗಿದ್ದಾರೆ ಅನ್ನೋದನ್ನ ಕೊನೆಗೂ ಬಾಯ್ಬಿಟ್ಟು ಹೇಳಲಿಲ್ಲ. ಹೀಗಾಗಿ, ದಿಲ್ಲಿ ಮೇಡಂ ರಮ್ಯಾ ಅವರು ಎಲ್ಲಿದ್ದಾರೆ ಅನ್ನೋದು ಎಲ್ಲರ ಕೂತೂಹಲದ ಪ್ರಶ್ನೆ.
ಲಹರಿ, ಇದು ಕನ್ನಡಿಗರ ಮನೆ ಮಾತಾದ ಹೆಸರು. ಲಹರಿ ಅಂದಾಕ್ಷಣ ನೆನಪಾಗುವುದೆ ʼಲಹರಿ ಆಡಿಯೋ ಸಂಸ್ಥೆʼ ಯಾಕಂದ್ರೆ, ಸಿನಿಮಾ, ಭಾವಗೀತೆ ಹಾಗೂ ಭಕ್ತಿ ಗೀತೆಗಳ ಆಡಿಯೋ ಸಂಗೀತ ಕ್ಷೇತ್ರದಲ್ಲಿ ಲಹರಿ ಮ್ಯೂಜಿಕ್ ಗೆ ಮಹತ್ತರ ಮೈಲುಗಲ್ಲು ಸ್ಥಾಪಿಸಿದ ಹೆಗ್ಗಳಿಕೆ ಇದೆ. ಅಷ್ಟು ಮಾತ್ರವೇ ಅಲ್ಲ, ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಲಹರಿ ಆಡಿಯೋ ಸಂಸ್ಥೆಯದ್ದು. ಅದರ ಸಾಧನೆಯ ಕಿರೀಟಕ್ಕೆ ಈಗಾಗಲೇ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳು ಸಂದಿವೆ. ಆ ಸಾಲಿನಲ್ಲಿ ಈಗ ಅತೀ ಶ್ರೇಷ್ಟ ಎನ್ನಬಹುದಾದ ಗೌರವದ ಗರಿ ಮೂಡಿದೆ.
ಹೌದು, ಲಹರಿ ಮ್ಯೂಜಿಕ್ ಯುಟ್ಯೂಬ್ ಚಾನೆಲ್ಗೆ ಈಗ 1.18 ಕೋಟಿ ಯಷ್ಟು ಜನ ಚಂದದಾರಾಗಿದ್ದಾರೆ. ಇದು ಭಾರತೀಯ ಸಂಗೀತ ಕ್ಷೇತ್ರದ ಡಿಜಿಟಲ್ ಯುಗಕ್ಕೆ ಹೊಚ್ಚ ಹೊಸ ದಾಖಲೆಯೇ ಹೌದು. ಈ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಯುಟ್ಯೂಬ್ ಸಂಸ್ಥೆಯಿಂದ ಲಹರಿ ಮ್ಯೂಜಿಕ್ ಗೆ ಪ್ರತಿಷ್ಟಿತ ʼಡೈಮಂಡ್ ಕ್ರಿಯೇಟರ್ ಅವಾರ್ಡ್ ಸಿಕ್ಕಿದೆ. ಸಹಜವಾಗಿಯೇ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಅವರ ಮುಖದಲ್ಲಿ ಸಂತಸದ ನಗೆ ಮೂಡಿಸಿದೆ.
ʼ ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಒಂದು ಸಣ್ಣ ಸಂಸ್ಥೆಯನ್ನು ಆರು ಕೋಟಿ ಕನ್ನಡಿಗರು ಪ್ರೋತಾಹಿಸಿ, ಬೆಳೆಸುತ್ತಾ ಬಂದಿದ್ದರ ಫಲದಿಂದಾಗಿಯೇ ಲಹರಿ ಸಂಸ್ಥೆ ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲಬೇಕಾದ ಗೌರವ. ಅವರಿಗೆ ಇದು ಅರ್ಪಣೆʼ ಎನ್ನುತ್ತಾರೆ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು. ಲಹರಿ ಮ್ಯೂಜಿಕ್ಗೆ ಈಗಾಗಲೇ ಯುಟ್ಯೂಬ್ ಸಂಸ್ಥೆಯಿಂದ ಎರಡು ಅವಾರ್ಡ್ ಸಿಕ್ಕಿವೆ. ಯುಟ್ಯೂಬ್ ಚಾನೆಲ್ಗೆ ಚಂದದಾರರ ಬಳಗವೂ ದಾಖಲೆಯಲ್ಲಿ ಜತೆಯಾದಂತೆಯೇ ಯುಟ್ಯೂಬ್ ಸಂಸ್ಥೆಯ ಕಡೆಯಿಂದ ಸಿಲ್ವರ್ ಹಾಗೂ ಗೋಲ್ಡನ್ ಅವಾರ್ಡ್ ಬಂದಿರುವುದು ಅದರ ಸಾಧನೆಯ ಸಿಕ್ಕ ಗರಿಮೆ. ಒಂದು ಲಕ್ಷ, 50 ಲಕ್ಷ ಹಾಗೂ 1 ಕೋಟಿಯಷ್ಟು ಜನರು ಕ್ರಮವಾಗಿ ಲಹರಿ ಮ್ಯೂಜಿಕ್ಗೆ ಚಂದದಾರರು ಆದಂತೆಲ್ಲ, ಯುಟ್ಯೂಬ್ ಸಂಸ್ಥೆ ದಾಖಲೆಯ ಗೌರವಗಳನ್ನು ನೀಡುತ್ತಾ ಬಂದಿದೆ.
ಈಗ ಲಹರಿ ಮ್ಯೂಜಿಕ್ ಯುಟ್ಯೂಬ್ ಸಾಧನೆಯಲ್ಲಿ ಡೈಮೆಂಡ್ ಅವಾರ್ಡ್ ಪ್ರಾಪ್ತಿ ಆಗಿದೆ. ಆ ಮೂಲಕ ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲಿಯೇ ಲಹರಿ ಮ್ಯೂಜಿಕ್ ಅಗ್ರಗಣ್ಯ ಸ್ಥಾನಕ್ಕೇರಿದೆ. ʼನನಗೆ ಗೊತ್ತಿರುವ ಹಾಗೆ ಇದು ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿಯೇ ಮೊದಲು. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಯಾವುದೇ ಭಾಷೆಯಲ್ಲೂ ಇಷ್ಟು ಚಂದದಾರರ ಬಳಗವನ್ನು ಸಂಪಾದಿಸಿಕೊಂಡ ಮ್ಯೂಜಿಕ್ ಯುಟ್ಯೂಬ್ ಚಾನೆಲ್ ಇಲ್ಲ. ಅಂತಹ ಹೊಸ ದಾಖಲೆ ಲಹರಿ ಮ್ಯೂಜಿಕ್ ಗೆ ಸಿಕ್ಕಿದೆ ಎನ್ನುವುದೇ ನಮ್ಮ ಸಂಸ್ಥೆಯ ಹೆಮ್ಮೆ. ಅದಕ್ಕೆ ಕಾರಣಕರ್ತರು ನಾವು ಎನ್ನುವುದಕ್ಕಿಂತ ಸಮಸ್ತ ಕನ್ನಡಿಗರು. ಸಿನಮಾ ನಿರ್ಮಾಪಕರು, ನಿರ್ದೇಶಕರು, ಕಲಾವಿದರು. ಕಾರ್ಮಿಕರು, ವಿಶೇಷವಾಗಿ ಸಂಗೀತ ನಿರ್ದೇಶಕರು, ಗಾಯಕರು, ಸಾಹಿತಿಗಳು , ಜತೆಗೆ ಮಾಧ್ಯಮದ ಮಿತ್ರರು ಕಾರಣರು. ಅವರು ನೀಡಿದ ಅಭೂತ ಪೂರ್ವ ಬೆಂಬಲದಿಂದಲೇ ಇದೆಲ್ಲ ಸಾಧ್ಯವಾಗಿದೆʼ ಎನ್ನುತ್ತಾರೆ ಲಹರಿ ವೇಲು.
ಲಹರಿ ಯುಟ್ಯೂಬ್ ಚಾನೆಲ್ ಶುರುವಾಗಿ ಇಲ್ಲಿಗೆ ೧೦ ವರ್ಷ. ಇಷ್ಟು ಕಡಿಮೆ ಅವದಿಯಲ್ಲಿ ಅದು ೧.೧೮ ಕೋಟಿ ಚಂದದಾರರ ಬಳಗ ಹೊಂದಿದೆ. ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತೆಲುಗು, ತಮಿಳು ಹಾಗೂ ಮಲಯಾಳಂಗೂ ವಿಸ್ತರಣೆ ಗೊಂಡಿದೆ. ಪ್ರತಿ ಭಾಷೆಯಲ್ಲೂ ಒಂದೊಂದು ತಂಡ ಹೊಂದಿದೆ. ಪ್ರತಿ ತಂಡದಲ್ಲೂ ೨೦ ರಿಂದ ೨೫ ಮಂದಿ ಕೆಲಸ ಗಾರರಿದ್ದಾರೆ. ಇದು ಲಹರಿ ಮ್ಯೂಜಿಕ್ ನ ಶಕ್ತಿ. ಇನ್ನು ಲಹರಿ ಆಡಿಯೋ ಸಂಸ್ಥೆ ಆಲದ ಮರದಂತೆ ಬೆಳೆದು ನಿಂತಿದೆ. ಕನ್ನಡದ ಹಿರಿಮೆ-ಗರಿಮೆ ಹೆಚ್ಚಾಗುವಂತೆ ಅದು ಕನ್ನಡದ ಚಿತ್ರಗೀತೆ ಮತ್ತು ಭಾವಗೀತೆಗಳನ್ನು ಜಗತ್ತಿನಾದ್ಯಂತ ಸಂಗೀತ ಪ್ರಿಯರಿಗೆ ಉಣಬಡಿಸುತ್ತಿದೆ. .ಆ ಮೂಲಕ ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಇಬ್ಬರು ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗಿದ್ದು ಲಹರಿ ಸಂಸ್ಥೆಯ ಸಾಧನೆಗೆ ಸಂದ ಬಹುದೊಡ್ಡ ಗೌರವ. ಹಾಗೆಯೇ ಕನ್ನಡದ ಹೆಮ್ಮೆಯೂ ಹೌದು.
ಮಂಡ್ಯ ದಲ್ಲಿನ ವಾಕ್ಸಮರದಲ್ಲೀಗ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ ಅಂಬರೀಶ್ ಕೂಡ ಧ್ವನಿ ಮೊಳಗಿಸಿದ್ದಾರೆ.’ರಾಜಕೀಯವಾಗಿ ಏನು ಬೇಕಾದರೂ ವಿರೋಧ ಮಾಡಿ, ಆದರೆ ವೈಯಕ್ತಿಕ ವಿಚಾರಗಳಿಗೆ ಬರಬೇಡಿ. ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ,ಮನಸ್ಸಿಗೆ ತುಂಬಾ ನೋವಾಗುತ್ತದೆ ‘ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಅವರ ವಿರುದ್ಧ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಕಿಡಿಕಾರಿದ್ದಾರೆ.
ಅಂದಿನ ಸಿಎಂ ಆಗಿದ್ದಾಗ ನೀವು ಏನ್ ಹೇಳಿದ್ರಿ ಅಂತ ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಬಳಿಯೇ ದಾಖಲೆ ಇದೆ. ಟೈಮ್ ವ್ಯರ್ಥ ಮಾಡುವುದು ಬೇಡ. ಮನೆಯಲ್ಲಿ ಯಾರನ್ನಾದ್ರೂ ಕಳೆದುಕೊಂಡಾಗ ಮಾತಾಡುವ ಪರಿಸ್ಥಿತಿಯಲ್ಲಿ ಇರುತ್ತಾರಾ ?ಅವತ್ತು ನಮ್ಮಮ್ಮ ಗಂಡನ ಕಳೆದುಕೊಂಡು ನೋವಲ್ಲಿದ್ದರು. ಅಂದು ಅಮ್ಮ ಏನೂ ಮಾತನಾಡಿಲ್ಲ. ಆದ್ರೆ ನೀವು ಸಾವನ್ನು ರಾಜಕೀಯ ಮಾಡಬೇಡಿ. ನೋವಾಗುತ್ತದೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್ ಡಿಕೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು. ಅಕ್ರಮ ಗಣಿಗಾರಿಕೆ ಧ್ವನಿ ಎತ್ತಿದ್ದು ನಟೋರಿಯಸ್ಸಾ? ಅಕ್ರಮದ ಬಗ್ಗೆ ಮಾತಾಡೋದು ನಟೋರಿಯಸ್ ಎನ್ನುವುದಾದರೆ, ಹೌದು ನಾವು ನಟೋರಿಸ್ ಅಂತಲೇ ಹೇಳಬೇಕಾಗುತ್ತದೆ. ಯಾರು ನಿಮ್ಮನ್ನು ವಿರೋಧಿಸುತ್ತಿಲ್ಲ ಅಂದ್ರೆ ನೀವು ಏನೂ ಮಾಡಿಲ್ಲ ಅಂತಲೇ ಅರ್ಥ. ವಿಲನ್ ಇಲ್ಲದೆ ಹೀರೋ ಸಾಧ್ಯವೇ ?ನಮ್ಮಮ್ಮ ಏನಾದರೂ ಮಾಡ್ತೀನಿ ಅಂತ ಮನಸ್ಸು ಮಾಡಿದರೆ ಕೊನೆಯವರೆಗೂ ಬಿಡುವುದಿಲ್ಲ. ಚುನಾವಣೆಗೆ ನಿಂತರು. ಚುನಾವಣೆಯನ್ನು ಮಾಡಿದರು. ಛಲದಿಂದ ಕೆಲಸ ಮಾಡಿದರು. ಗೆದ್ದರು. ಜನ ಅವರಿಗೆ ಆಶೀರ್ವಾದ ಮಾಡಿದರು. ಅದು ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಂಸದರು ಒಳ್ಳೆಯ ಕೆಲಸ ಮಾಡ್ತಿದ್ದಾರೆ ಅಂತ ಜನ ಹೇಳುತ್ತಿದ್ದಾರೆ. ಆದರೆ ಇವರಿಗೆ ಜನರ ಕೆಲಸ ಬೇಕಿಲ್ಲ, ಅವರ ರಾಜಕೀಯ ನಡೀಬೇಕು ಅದಕ್ಕಾಗಿಯೇವ ಹೀಗೆಲ್ಲ ಮಾಡುತ್ತಿದ್ದಾರೆಂದು ಗುಡುಗಿದರು.