ರಕ್ಷಿತ್ ಶೆಟ್ಟಿ ಹೇಳಿದ ಜುಲೈ 11 ರ ಸಸ್ಪೆನ್ಸ್ ಇದೇನಾ ?

ಇನ್ನೊಂದು‌ ದಿನ ಬಾಕಿ ಇದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ‌ ಹೇಳಿರುವ ಜುಲೈ 11 ರ ಸಸ್ಪೆನ್ಸ್ ರಿವೀಲ್ ಆಗೋದಿಕ್ಕೆ. ಅಷ್ಟರಲ್ಲಿಯೇ ಸ್ಯಾಂಡಲ್ ವುಡ್ ನಲ್ಲಿ ಒಂದು ಕೌತುಕ ‌ಸಖತ್ ಸದ್ದು ಮಾಡುತ್ತಿದೆ. ಇದೇನಾ‌ ರಕ್ಷಿತ್ ಶೆಟ್ಟಿ ಹೇಳಿದ ಸಸ್ಪೆನ್ಸ್ ಸಂಗತಿ ಅನ್ನೋದು ಕೂಡ ಸಿನಿಮಾ ಬಜಾರ್ ನಲ್ಲಿ ಸದ್ದು ಮಾಡುತ್ತಿದೆ. ಹಾಗಂತ ಅದು ನಿಜವೇ ಗೊತ್ತಿಲ್ಲ. ಇದ್ದರೂ ಇರಬಹುದೇನೋ‌ . ಅದು ಖಾತರಿ ಆಗೋದಿಕ್ಕೆ ಕೆಲವೇ ಗಂಟೆಗಳಷ್ಟೇ ಕಾಯಬೇಕಿದೆ‌.

ಹಾಗಾದ್ರೆ ಅದಲ್ವಾ? ಅಲ್ಲಿ ರಕ್ಷಿತ್ ಶೆಟ್ಟಿ ಇಲ್ಲ ಅಂದ್ರೆ ಬೇರೆ ಯಾರು? ಕುತೂಹಲದ ಪ್ರಶ್ನೆಗಳಿವೆ. ಇವತ್ತು ಹಾಗೊಂದು ಕುತೂಹಲ ಹುಟ್ಟಿಸಿದ್ದು ಹೊಂಬಾಳೆ ಫಿಲ್ಮ್ ಸಂಸ್ಥೆ ರಿವೀಲ್ ಮಾಡಿರುವ ಒಂದು ಪೋಸ್ಟರ್. ನಾಳೆ ಅಂದರೆ‌ ಜುಲೈ 11 ಕ್ಕೆ ಹೊಂಬಾಳೆ ಫಿಲಂಸ್ ನ ೧೦ ನೇ ಸಿನಿಮಾದ ಟೈಟಲ್ ಲಾಂಚ್ ಆಗುತ್ತಿದೆ. ಸದ್ಯಕ್ಕೆ ಅದರ ನಿರ್ದೇಶಕರು ಯಾರು, ನಾಯಕ‌ನಟ ಯಾರು, ನಾಯಕಿ ಯಾರು? ಎಲ್ಲವೂ ಸಸ್ಪೆನ್ಸ್.
ಸುಮ್ನೆ‌ ನೀವೇ ನೋಡಿ, ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಹೇಳಿರುವ ಜುಲೈ11 ರ ಸಸ್ಪೆನ್ಸ್ ಗೂ, ಹೊಂಬಾಳೆ ಫಿಲಂಸ್ ನಾಳೆ ಲಾಂಚ್ ಮಾಡುತ್ತಿರುವ ಸಿನಿಮಾದ ಟೈಟಲ್ಗೂ ಸಿಂಕ್ ಆಗುತ್ತಿಲ್ವಾ? ಅದೇ ಕಾರಣಕ್ಕೆ ಈಗ ಸಿನಿಮಾ ಬಜಾರ್ ನಲ್ಲಿ ಸಖತ್ ಕುತೂಹಲ‌ ಹುಟ್ಟಿದೆ. ನಾವು – ನೀವು ಅಂದಾಜಿಸಿಕೊಂಡ ಹಾಗೆಯೇ ನಾಳೆ ಲಾಂಚ್ ಆಗುತ್ತಿರುವ 10 ನೇ ಸಿನಿಮಾಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯೇ ನಾಯಕ ಆಗಿರಬಹುದು? ಅಲ್ಲದಿದ್ದರೆ ಉಳಿದಂತೆ ಯಾರು?

ಲೆಕ್ಕ ಹಾಕ್ಕೊಳ್ಳಿ, ಈಗ ಪವರ್ ಸ್ಟಾರ್ ಪುನೀತ್ ಹೊಂಬಾಳೆ ಫಿಲಂಸ್ ನ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಯುವರತ್ನ ಬೆನ್ನಲ್ಲೇ ಆದ ಕಮಿಟ್ ಮೆಂಟ್ ಇದು. ಇನ್ನು ಯಶ್ ಕೂಡ ಈಗ ಕೆಜಿಎಫ್ ೨ ನಲ್ಲಿಯೇ ತಲೆ ಕೆಡಿಸಿಕೊಂಡಿದ್ದಾರೆ. ಅವರು‌ಮತ್ತೊಂದು ಸಿನಿಮಾಕ್ಕೆ ಸದ್ಯದಲ್ಕಿಯೇ ಅಷ್ಟು ಬೇಗ ಒಪ್ಪಿಕೊಳ್ಳಲಾರರು.‌‌ ಹಾಗಾಗಿ ರಕ್ಷಿತ್ ಶೆಟ್ಟಿ ಅವರೇ ನಾಯಕ ನಟ ಅಂದ್ರು ಅಚ್ಚರಿ ಇಲ್ಲ.

Related Posts

error: Content is protected !!