Categories
ಸಿನಿ ಸುದ್ದಿ

ಧಗ ಧಗಿಸಲು ರೆಡಿಯಾಯ್ತು ಚಿತ್ರರಂಗ-ಅಕ್ಟೋಬರ್‌ 29 ಕ್ಕೆ ‘ಭಜರಂಗಿ 2’ ಅಬ್ಬರ !

ಚಿತ್ರ ರಂಗ ಎದ್ದು ಕುಳಿತಿದೆ. ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಅಕ್ಟೋಬರ್‌ ತಿಂಗಳಿನಿಂದಲೇ ಸಿನಿಮಾ ಪ್ರೇಕ್ಷಕರಿಗೆ ಹಬ್ಬದ ದೂಟ ಕಾಯಂ ಆಗಿದೆ. ಬಾಕಿ ಇರೋದು ಯಾರೆಲ್ಲ ಸ್ಟಾರ್‌ ಸಿನಿಮಾಗಳು, ಯಾವಾಗ ಬರುತ್ತವೆ ಅನ್ನೋದು. ಸದ್ಯಕ್ಕೆ ಭಜರಂಗಿ2 ತೆರೆಗೆ ಅಪ್ಪಳಿಸೋದಿಕ್ಕೆ ಡೇಟ್‌ ಫಿಕ್ಸ್‌ ಆಗಿದೆ.

ಚಿತ್ರಮಂದಿರಗಳಲ್ಲಿ 100 ರಷ್ಟು ಸೀಟು ಭರ್ತಿಗೆ ಅವಕಾಶ ಸಿಗುತ್ತಿದ್ದಂತೆ ಚಿತ್ರರಂಗ ಧಗ ಧಗಿಸಲು ಸಜ್ಜಾಗಿದೆ. ಸ್ಟಾರ್ ಸಿನಿಮಾಗಳ ಪೈಕಿ ಮುಂಚೆಯೇ ಬರುವ ಸಿನಿಮಾ ಯಾವುದು ಎನ್ನುವ ಸಿನಿಮಾ ಪ್ರೇಕ್ಷಕರ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ರಿಲೀಸ್ಗೆ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 29ಕ್ಕೆ ಶಿವರಾಜ್ ಕುಮಾರ್ ಭಜರಂಗಿ ಆಗಿ ಅಭಿಮಾನಿಗಳಿಗೆ ದರ್ಶನ ನೀಡುವುದು ಕನ್ ಫರ್ಮ್ ಆಗಿದೆ.

ಸ್ಯಾಂಡಲ್ ವುಡ್ ಮಟ್ಟಿಗೆ ಇದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಸಿನಿಮಾ. ಭಜರಂಗಿ ಸಕ್ಸಸ್ ಬೆನ್ನಲೇ ನಿರ್ದೇಶಕ ಹರ್ಷ ಹಾಗೂ ಸೆಂಚುರಿ ಸ್ಟಾರ್ ಶಿವಣ್ಣ ಇಲ್ಲಿ ಮತ್ತೆ ಒಂದಾದರು ಎನ್ನುವುದಷ್ಟೇ ಅಲ್ಲ ಜಯಣ್ಣ ಕಂಬೈನ್ಸ್ ನಂತಹಬಿಗ್ ಬ್ಯಾನರ್ ಸಿನಿಮಾ ಎನ್ನುವುದು ಕೂಡ ಆ ಕುತೂಹಲದ ಒಂದು ಭಾಗವೇ. ಅದರ ಜತೆಗೆ ಸದ್ಯದ ಟ್ರೆಂಡ್ ಗೆ ತಕ್ಕಂತೆ ನಿರ್ದೇಶಕ ಎ. ಹರ್ಷ ಗಟ್ಟಿ ಕಥೆಯ ಮೂಲಕ ಹೊಸತನ್ನು ಹೇಳಿ ಹೇಳುತ್ತಾರೆನ್ನುವ ಕೌತುಕ. ಅದರ ಜತೆಗೆ ಭಜರಂಗಿ ಮೊದಲ‌ಭಾಗಕ್ಕೆ ದೊಡ್ಡ ಗೆಲುವು ಸಿಕ್ಕಿದ್ದು.

ಭಜರಂಗಿ ೩ ನಿರೀಕ್ಷೆಯ ಬಗ್ಗೆ ಹೀಗೆ ಹೇಳುತ್ತಾ ಹೊದರೆ ಇಲ್ಲಿಸಾಕಷ್ಟುಕಾರಣಗಳನ್ನು ಕೊಡಬಹುದು. ದೊಡ್ಡ ತಾರಾಗಣವೂ ಕೂಡ ಈಸಿನಿಮಾ ಮತ್ತೊಂದು ವಿಶೇಷವೇ. ಇವೆಲ್ಲ ಕುತೂಹಲ , ನಿರೀಕ್ಷೆಗಳಿಗೆ ಫೈನಲಿ ತೆರೆ ಬೀಳುವ ಕಾಲ ಸನಿಹಿತವಾಗಿದೆ. ಅಕ್ಟೋಬರ್ 29ಕ್ಕೆ ಬೆಳ್ಳಿ ತೆರೆಯ ಮೇಲೆ ಭಜರಂಗಿಯ ಮಯಲೋಕ ತೆರೆದುಕೊಳ್ಳಲಿದೆ. ಅಲ್ಲಿ ನಿರ್ದೇಶಕ ಹರ್ಷ ಅವರ ಮ್ಯಾಜಿಕ್ ಏನು ಅಂತ ರಿವೀಲ್ ಆಗಲಿದೆ. ಸದ್ಯಕ್ಕೆ ಅಲ್ಲಿ ತನಕ ಕಾಯೋಣ ಅಂತಂದರೂ, ಈ ಸಮಯಕ್ಕಾಗಿ ಕಾದಿದ್ದೊ ಒಂದ, ಎರಡ ದಿನಗಳಾ?

ಹೆಚ್ಚು ಕಡಿಮೆ ಒಂದು ಒಂದೂವರೆ ವರ್ಷ. 2020 ಮಾರ್ಚ್ ತಿಂಗಳಲ್ಲಿ ಕೊರೋನ ಕಾರಣಕ್ಕೆ ಬಂದ್ ಆದ ಚಿತ್ರರಂಗ ಇಲ್ಲಿ ತನಕ ಅನುಭವಿಸಿದ್ದ ಯಮಾ ಯಾತನೆ. ಅದೆಷ್ಟೋ ಜನರುಉದ್ಯೋಗ ಇಲ್ಲದೆ ಪರದಾಡಿ ಹೋದರು.ಸಿನಿಮಾ ನಿರ್ಮಾಣಗಳಿಗೆ ದುಡ್ಡು ಹಾಕಿದನಿರ್ಮಾಪಕರು ಮುಂದೇನು ಗತಿ ಅಂತ ಮುಗಿಲು ಕಡೆ ಮುಖ ಹಾಕಿ ಕುಳಿತರು. ಕೆಲಸ ಇಲ್ಲದ ನಿರ್ದೇಶಕರು ಬದುಕಿಗೆ ದೇವರೇ ಗತಿ ಎಂದರು.ಚಿತ್ರಮಂದಿರಗಳನ್ನೇ ನಂಬಿಕೊಂಡ ಜನರು ಬಾಗಿಲುಮುಚ್ಚಿ ಬಿಡೋಣ ಅಂದರು. ಆ ಸಂಕಷ್ಟದ ಕಾಲದ ಪರದೆ ಕೊನೆಗೆ ಸರಿಯುತ್ತಿದೆ. ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ100 ರಷ್ಟು ಅನುಮತಿ ದೊರೆಯುವ ಮೂಲಕ ಚಿತ್ರರಂಗದಲ್ಲಿ ಮತ್ತೆ ಆಶಾಭಾವನೆ ಮೂಡಿದೆ.
– ಎಂಟರ್‌ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಮಂತಾ ಡಿವೋರ್ಸ್ ಕೊಟ್ರೆ ಕತ್ತರಿಸಿ ಹಾಕ್ತೀನಿ ; ರೊಚ್ಚಿಗೆದ್ದ ಅಕ್ಕಿನೇನಿ ಕುಟುಂಬದ ಹಾರ್ಡ್ ಕೋರ್‌ ಫ್ಯಾನ್ !?

ಸೌತ್ ಸಿನಿಮಾ ಇಂಡಸ್ಟ್ರಿಯ ತಾರಾಜೋಡಿಗಳಾದ ನಟಿ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ದಾಂಪತ್ಯ ವಿಚ್ಛೇದನದ ಅಂತ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ. ‌ಆದರೆ, ಗಾಸಿಪ್ ಟೋಪಿ‌ ಹಾಕಿಕೊಂಡಿರುವ ಸುದ್ದಿ ಊಸರವಳ್ಳಿಯಂತೆ ದಿನಕ್ಕೊಂದು‌ ಬಣ್ಣ ಬದಲಿಸುತ್ತಾ ಇಡೀ ಸೌತ್ ಸಿನಿಮಾ ಅಂಗಳದಲ್ಲೆಲ್ಲಾ ಗುಲ್ಲೆಬ್ಬಿಸುತ್ತಿದೆ. ಆದರೆ, ಬದುಕಲ್ಲಿ ಬಿರುಗಾಳಿ ಎದ್ದಿರುವ ಬಗ್ಗೆಯಾಗಲೀ, ಸಂಬಂಧದಲ್ಲಿ ಬಿರುಕು ಮೂಡಿರುವ ಕುರಿತಾಗಲೀ ಎಲ್ಲಿಯೂ ಚೈ ಅಂಡ್ ಸ್ಯಾಮ್ ಮುಕ್ತವಾಗಿ ಮಾತನಾಡ್ತಿಲ್ಲ. ಆದರೆ, ಗಲ್ಲಿಗಾಸಿಪ್ ಮಾತ್ರ ಇಬ್ಬರ ಡೈವರ್ಸ್ ಕಥೆ ಹೇಳ್ತಿದೆ. ಅಕ್ಟೋಬರ್ 06 ರಂದು ಅಧಿಕೃತವಾಗಿ ಇಬ್ಬರು ಡೈವರ್ಸ್ ಬಗ್ಗೆ ಸ್ಪಷ್ಟನೆ ಕೊಡಲಿದ್ದಾರಂತೆ, ಕೌನ್ಸಿಲಿಂಗ್ ಮಾಡಿಸಿದರೂ ಪ್ರಯೋಜನವಾಗಿಲ್ಲವಂತೆ, ಸಮಂತಾ 50 ಕೋಟಿ ಪರಿಹಾರ ಕೇಳಿದ್ದು, ಕಾನೂನು ಪ್ರಕ್ರಿಯೆ ಕೂಡ ಅಕ್ಟೋಬರ್ 06 ರಂದೇ ನಡೆಯಲಿದೆ‌ ಎನ್ನುವ ಗಾಸಿಪ್ ಸುದ್ದಿ ಅಚ್ಚರಿ ಮೂಡಿಸಿದೆ.‌


ಹೀಗೆ ಚೈ-ಸ್ಯಾಮ್ ಡಿವೋರ್ಸ್ ಗಾಸಿಪ್ ಮ್ಯಾಟರ್ ಗಲ್ಲಿಯಲ್ಲಿ ಥಕ್ಕಥೈ ಅಂತ ಕುಣಿಯುತ್ತಿರೋದ್ರಿಂದ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ಸ್ ಫುಲ್ ಅಪ್ ಸೆಟ್ ಆಗಿದ್ದಾರೆ. ಏನಾಗ್ತಿದೆ ನಟಿ ಸಮಂತಾ ಹಾಗೂ ನಾಗಚೈತನ್ಯ ಬದುಕಿನ ಬಾಂಡಲದಲ್ಲಿ ಎನ್ನುತ್ತಾ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಪ್ರೀತ್ಸಿ ಮದುವೆಯಾದ, ರೀಲ್ ಅಂಡ್ ರಿಯಲ್ ಲೈಫ್ ನಲ್ಲಿ ಸೈ ಎನಿಸಿಕೊಂಡ ಈ‌ಜೋಡಿ ಯಾವುದೇ ಕಾರಣಕ್ಕೂ ದೂರವಾಗಬಾರದು ದೇವಾ ಎನ್ನುತ್ತಾ ತಮ್ಮ ತಮ್ಮ ಮನೆದೇವರಿಗೆ ಹರಕೆ ಕಟ್ಟಿಕೊಳ್ತಿದ್ದಾರೆ. ಕಣ್ಣುಕುಕ್ಕುವಂತಿರುವ ಜೋಡಿ ಮೇಲೆ ಯಾವ ಕೆಟ್ಟಕಣ್ಣು ತಾಗದಿರಲಿ ಭಗವಂತ ಎನ್ನುತ್ತಿದ್ದಾರೆ. ಇಂತಹ ಫ್ಯಾನ್ ಫಾಲೋಯರ್ಸ್ ಮಧ್ಯೆ ಅಕ್ಕಿನೇನಿ ಫ್ಯಾಮಿಲಿ ಡೈಹಾರ್ಡ್ ಫ್ಯಾನ್ ವೊಬ್ಬ ಸಮಂತಾಗೆ ವಾರ್ನಿಂಗ್ ಮಾಡಿದ್ದಾರೆ.

ಹೌದು, ತೆಲುಗು ವೆಬ್ ಸೈಟ್ ಗಳು ವರದಿ ಮಾಡಿರುವಂತೆ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ ಸಮಂತಾಗೆ ವಾರ್ನ್ ಮಾಡಿದ್ದಾರಂತೆ. ಒಂದ್ವೇಳೆ ಸಮ್ಮು ಬೇಬಿ ಡಿವೋರ್ಸ್ ಕೊಟ್ಟಿದ್ದೇ ಆದಲ್ಲಿ ಕತ್ತರಿಸಿ ಹಾಕುವುದಾಗಿ ಧಮ್ಕಿ ಹಾಕಿದ್ದಾರಂತೆ. ಹೀಗಂತ, ಟಾಲಿವುಡ್ ವೆಬ್ ಸೈಟ್ ಗಳು ಸುದ್ದಿ ಬಿತ್ತರಿಸಿವೆ. ಅಷ್ಟಕ್ಕೂ, ಈ ಸುದ್ದಿಯಲ್ಲಿ ಎಷ್ಟು ಹುರುಳಿದೆಯೋ ಅಥವಾ ಎಷ್ಟು ಸುಳ್ಳಿದೆಯೋ ಗೊತ್ತಿಲ್ಲ. ಆದರೆ, ಒಂದಂತೂ ಸತ್ಯ ತಾವು ಇಷ್ಟಪಡುವ, ಆರಾಧಿಸುವ, ಅಭಿಮಾನಿಸುವ ತಾರೆಯರು ಹಾಗೂ ತಾರಾ ಜೋಡಿಗಳ ವೃತ್ತಿ ಬದುಕಿರಲಿ ಅಥವಾ ವೈಯಕ್ತಿಕ ಬದುಕಿರಲಿ ಅಲ್ಲಿ ಏನಾದರೂ ಹೆಚ್ಚುಕಮ್ಮಿಯಾದರೆ, ಬಿರುಗಾಳಿ ಎದ್ದರೆ, ಅದನ್ನ ಸಹಿಸುವ ಶಕ್ತಿ ಅಭಿಮಾನಿ ದೇವರುಗಳಿಗಿಲ್ಲ. ಹಲ್ಲಲ್ಲು ಕಡಿಯುತ್ತಲೇ, ಕಣ್ಣಲ್ಲೇ ಕೆಂಡ ಉಗುಳುತ್ತಲೇ ಅಖಾಡಕ್ಕೆ ಇಳಿದುಬಿಡ್ತಾರೆ.

ಎಲ್ಲವೂ ಸಮಾನವಾಗಿರಬೇಕು ಮತ್ತು ಸಂತೋಷದಿಂದ ಕೂಡಿರಬೇಕು ಅಂತ ಫ್ಯಾನ್ಸ್ ಬಯಸ್ತಾರೆ. ಈಗ ಸ್ಯಾಮ್ ‌ಚೈ ಫ್ಯಾನ್ಸ್ ಕೂಡ ಇದನ್ನೇ ಆಶಿಸುತ್ತಿದ್ದಾರೆ. ಬಜಾರ್ ನಲ್ಲಿ ಹಬ್ಬಿರುವ ವಿಚ್ಚೇದನದ ಸುದ್ದಿ ಸುಳ್ಳಾಗಲಿ, ಮನಂ ಜೋಡಿಯ ಮಧ್ಯೆ ವಿರಸ ಮೂಡಿರದಿರಲಿ, ಮಜಿಲಿ ಜೋಡಿ ಒಂದಾಗಿ, ಖುಷಿಯಾಗಿ, ಸುಖವಾಗಿ ಬಾಳಲಿ ಎನ್ನುವುದೇ ಅವರ ಕೋಟ್ಯಾಂತರ ಭಕ್ತರ ಕೋರಿಕೆ.

  • ಎಂಟರ್‌ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಗಂಧದಗುಡಿಗೆ ಹೊಂಬಾಳೆ ಫುಲ್‌ಮೀಲ್ಸ್ ; ಹಬ್ಬದೂಟ ಬಡಿಸ್ತಾರೆ ಸಂತೋಷ್-ಜಗ್ಗೇಶ್ ! `ರಾಘವೇಂದ್ರ ಸ್ಟೋರ್ಸ್ʼನ ಮೃಷ್ಟಾನ್ನ ಭೋಜನ !

ಚಿತ್ರಾನ್ನಕ್ಕೆ ಕಾಂಗ್ರೇಸ್ ಕಡ್ಲೇಬೀಜ ಹಾಕದೆ ಹೋದರೂ ಪರವಾಗಿಲ್ಲ ಸೀದಾ ಸಾದಾ ಚಿತ್ರಾನ್ನ ಕೊಟ್ಟರೆ ಸಾಕು ಅಂತ ಹೇಳಿದಾಗ ಗಾಂಧಿನಗರದಲ್ಲಿದ್ದ ಎರಡು ಇಡ್ಲಿ ಒಂದು ವಡಾ ಬ್ರೇಕ್‌ಫಾಸ್ಟ್‌ ಪದ್ದತಿಯನ್ನೇ ಬ್ರೇಕ್ ಮಾಡಿದವರು. ತಿಂಡಿ ಇರಲಿ ತೀರ್ಥ ಇರಲಿ ಎಲ್ಲವೂ ಹೊಟ್ಟೆತುಂಬಾ ಸೇರಬೇಕು ಅಂತ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಟ್ಟುಕೊಂಡು ಸಿನಿಮಾ ಕಾರ್ಮಿಕರನ್ನು, ಚಿತ್ರರಂಗ ನಂಬಿಕೊಂಡಿರುವವರನ್ನು, ಪ್ರತಿಭೆವುಳ್ಳವರನ್ನು, ಸಿನಿಮಾಗೋಸ್ಕರ ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡುವವರನ್ನು ಬೆಳೆಸುತ್ತಿದ್ದಾರೆ. ನಮ್ಮ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ `ಹೊಂಬಾಳೆ ಸಂಸ್ಥೆ’ಯವರು ಪಣತೊಟ್ಟಿದ್ದಾರೆ ಅಂದರೆ ಬಹುಶ: ತಪ್ಪಾಗಲಿಕ್ಕಿಲ್ಲ ಎನಿಸುತ್ತೆ.

ಕರ್ನಾಟಕ ಸಿನಿಮಾ ಪ್ರೇಕ್ಷಕರಿಗೆ ಬಾಳೆದೆಲೆಯಲ್ಲಿ ಹಬ್ಬದೂಟ ಬಡಿಸಿ ಸಂತೃಪ್ತಿಪಡಿಸಿರುವ ಹೊಂಬಾಳೆ ಫಿಲಂಸ್‌, ʼಕೆಜಿಎಫ್ʼ ಚಿತ್ರದ ಮೂಲಕ ಕನ್ನಡಿಗರ ಜೊತೆಗೆ ಇಡೀ ಜಗತ್ತಿಗೆ ಬಾಳೆದೆಲೆಯಲ್ಲಿ ಬಾಡೂಟ ಹಾಕ್ಸಿದ್ದು ಇನ್ನೂ ಯಾರು ಮರೆತಿಲ್ಲ. ಮುಂದೆ ಮರೆಯೋದು ಇಲ್ಲ. ಯಾಕಂದ್ರೆ, ಗಂಧದಗುಡಿಯಲ್ಲಿ ಗೊನೆಯೊಡೆದ ಬಾಳೆದೆಲೆಗೆ ಅದರದ್ದೇ ಆದ ಮಹತ್ವವಿದೆ, ಅಂತ ಮಹತ್ವದ ಎಲೆಯ ಮೇಲೆ ಹೊಂಬಾಳೆ ಫಿಲಂಸ್‌ ನವರು' ಬಡಿಸಿದ ಊಟಕ್ಕೆ ಅದರದ್ದೇ ಆದ ಶ್ರೇಷ್ಟತೆಯಿದೆ. ಹೀಗಾಗಿಯೇ, ಇವತ್ತು ಇಡೀ ಭಾರತೀಯ ಚಿತ್ರರಂಗ ಹೊಂಬಾಳೆ ತಯ್ಯಾರಿಸುವ ಮೃಷ್ಟಾನ್ನ ಭೋಜನಕ್ಕಾಗಿ ಎದುರು ನೋಡುತ್ತೆ. ʼಕೆಜಿಎಫ್ ಚಾಪ್ಟರ್-2ʼ ಗಾಗಿ ವರ್ಲ್ಡ್‌ ವೈಡ್ ಕಣ್ಣರಳಿಸಿ ಕಾಯುತ್ತಿರುವ ಕಾಲದಲ್ಲಿಗಂಧದಗುಡಿಗೆ’ ಫುಲ್‌ಮೀಲ್ಸ್ ಹಾಕೋದಕ್ಕೆ `ಹೊಂಬಾಳೆ’ಯ ಅನ್ನದಾತರು ಸಜ್ಜಾಗಿದ್ದಾರೆ.

ಚಿತ್ರಾನ್ನಕ್ಕೆ ಕಾಂಗ್ರೇಸ್ ಕಡ್ಲೇಬೀಜ ಹಾಕದೆ ಹೋದರೂ ಪರವಾಗಿಲ್ಲ ಸೀದಾ ಸಾದಾ ಚಿತ್ರಾನ್ನ ಕೊಟ್ಟರೆ ಸಾಕು ಅಂತ ಹೇಳಿದಾಗ ಗಾಂಧಿನಗರದಲ್ಲಿದ್ದ ಎರಡು ಇಡ್ಲಿ ಒಂದು ವಡಾ ಬ್ರೇಕ್‌ಫಾಸ್ಟ್‌ ಪದ್ದತಿಯನ್ನೇ ಬ್ರೇಕ್ ಮಾಡಿದವರು. ತಿಂಡಿ ಇರಲಿ ತೀರ್ಥ ಇರಲಿ ಎಲ್ಲವೂ ಹೊಟ್ಟೆತುಂಬಾ ಸೇರಬೇಕು ಅಂತ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಟ್ಟುಕೊಂಡು ಸಿನಿಮಾ ಕಾರ್ಮಿಕರನ್ನು, ಚಿತ್ರರಂಗ ನಂಬಿಕೊಂಡಿರುವವರನ್ನು, ಪ್ರತಿಭೆವುಳ್ಳವರನ್ನು, ಸಿನಿಮಾಗೋಸ್ಕರ ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡುವವರನ್ನು ಬೆಳೆಸುತ್ತಿದ್ದಾರೆ. ನಮ್ಮ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ `ಹೊಂಬಾಳೆ ಸಂಸ್ಥೆ’ಯವರು ಪಣತೊಟ್ಟಿದ್ದಾರೆ ಅಂದರೆ ಬಹುಶ: ತಪ್ಪಾಗಲಿಕ್ಕಿಲ್ಲ ಎನಿಸುತ್ತೆ.

ಪವರ್‌ಸ್ಟಾರ್ ಜೊತೆ ಯುವ ನಿರ್ಮಾಪಕರಾಗಿ ಅಖಾಡಕ್ಕಿಳಿದವರು ಇವತ್ತು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದುಮಾಡುತ್ತಿದ್ದಾರೆ ಮತ್ತು ಸುದ್ದಿಯಾಗ್ತಿದ್ದಾರೆ ಅಂದ್ರೆ ಕಾರಣ ಸಿನಿಮಾ ಮೇಲೆ `ಹೊಂಬಾಳೆ ಫಿಲಂಸ್‌ʼ ನ ಮುಖ್ಯಸ್ಥರಿಗೆ ಸಿನಿಮಾ ಮೇಲಿರುವಂತಹ ಪ್ರೀತಿ ಮತ್ತು ಭಕ್ತಿ. ಕೇವಲ ದುಡ್ಡು ಮಾಡೋದಕ್ಕೆ ಬಂದಿರುವವರಲ್ಲ ಇವರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಸಿನಿಮಾದಿಂದ ಬಂದ ಹಣವನ್ನ ಸಿನಿಮಾಗೆ ಸುರಿಯುತ್ತಿದ್ದಾರೆ. ಕೆಜಿಎಫ್ ನಂತರ ಭರ್ತಿ ಆರು ಚಿತ್ರಗಳನ್ನ ಅನೌನ್ಸ್ ಮಾಡಿದ್ದಾರೆ. ʼಕೆಜಿಎಫ್ ಚಾಪ್ಟರ್-2ʼ ಸೇರಿದಂತೆ ಒಟ್ಟು ಹನ್ನೆರಡು ಸಿನಿಮಾಗಳು ಹೊಂಬಾಳೆ ಮುಖ್ಯಸ್ಥರ ಕೈಯಲ್ಲಿವೆ. ಆರಿದ್ದ ಚಿತ್ರಗಳು ಹನ್ನೆರಡು ಆಗಿರುವಾಗ ಗಂಧದಗುಡಿಗೆ ಫುಲ್‌ಮೀಲ್ಸ್ ಹಾಕೋದಕ್ಕೆ ಮುಂದಾಗಿದ್ದಾರೆ. ನವರಸಗಳಿಗೆ ನಾಯಕರಾಗಿರುವ ಜಗ್ಗೇಶ್ ಅವರಿಂದಲೇ ಕರ್ನಾಟಕಕ್ಕೆ ಮೃಷ್ಟಾನ್ನ ಭೋಜನ ಬಡಿಸೋದಕ್ಕೆ ಹೊಂಬಾಳೆ ಸಂಸ್ಥೆ ಸಜ್ಜಾಗಿದೆ.

ಆಗಲೇ ಹೇಳಿದ ಹಾಗೇ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಡುವ ಬ್ಯಾನರ್ ಹೊಂಬಾಳೆ'. ಚಿತ್ರಾನ್ನ ಕಂಡು ಎಕ್ಸೈಟ್‌ ಆಗುವ ಸಿನಿಪ್ರೇಮಿಗಳಿಗೆ ವೆಜ್‌ಪುಲಾವ್ ಬಡಿಸಿ ಸಂತೃಪ್ತಿಪಡಿಸುವ ನಿರ್ಮಾಣ ಸಂಸ್ಥೆ. ಇದೀಗ ನವರಸನಾಯಕ ಜಗ್ಗೇಶ್ ಹಾಗೂ ಸಂತೋಷ್ ಆನಂದ್‌ರಾಮ್ ಅವರ ಕಾಂಬಿನೇಷನ್‌ನಲ್ಲಿ ಡೆಲಿಷಿಯಸ್ ಫುಲ್‌ಮೀಲ್ ತಯ್ಯಾರಿಸುವ ಸಿದ್ದತೆಯಲ್ಲಿದೆ. ನವೆಂಬರ್ ೨೨ ರಂದು ಕುಕ್ಕಿಂಗ್ ಶುರುವಾಗಲಿದೆ.ʼ ರಾಜಕುಮಾರʼ ಹಾಗೂʼ ಯುವರತ್ನʼ ಚಿತ್ರದ ಸಾರಥಿ ಸಂತೋಷ್ ಆನಂದ್ ರಾಮ್ ರುಚಿಕಟ್ಟಾದ, ಸ್ವಾದಭರಿತ, ಆಹ್ಲಾದಕರವಾ ದಮೃಷ್ಟಾನ್ನ’ವನ್ನು ತಯ್ಯಾರಿಸಲಿದ್ದಾರೆ. ಹಾಸ್ಯ, ಶೃಂಗಾರ, ರೌದ್ರ, ಭಯಾನಕ, ಭೀಭತ್ಸ, ವೀರ, ಕರುಣಾ, ಅದ್ಭುತ, ಶಾಂತ ಹೀಗೆ ಒಂಭತ್ತು ರಸಗಳಿಗೆ ಬ್ರಾಂಡ್ ಅಂಬಾಸೀಡರ್ ಆಗಿರುವ, ನವರಸನಾಯಕ ಎಂತಲೇ ಪ್ರಖ್ಯಾತಿ ಪಡೆದಿರುವ ಜಗ್ಗಣ್ಣ ಇಡೀ ಕರುನಾಡಿಗೆ ಫುಲ್‌ಮೀಲ್ಸ್ ಹಬ್ಬದೂಟ ಬಡಿಸ್ತಾರೆ. ಈಗಾಗಲೇ ಬಿಡುಗಡೆಯಾಗಿರುವ `ರಾಘವೇಂದ್ರ ಸ್ಟೋರ್ಸ್ʼ ಪೋಸ್ಟರ್ ನೋಡಿದ್ರೆ ನಿಮಗೆ ತಿಳಿಯುತ್ತೆ.

ಅಂದ್ಹಾಗೇ,ರಾಘವೇಂದ್ರ ಸ್ಟೋರ್ಸ್ʼ ಪಕ್ಕಾ ಪ್ಯೂರ್ ವೆಜ್ ಖಾನಾವಳಿ. ಎರಡು ಇಡ್ಲಿ ಮೆಣಸಿನಕಾಯಿ ಜೊತೆ ತೂತ್‌ವಡೆ ಸಿಗುತ್ತೆ. ಉಪ್ಪಿಟ್ಟು ಖಾಯಂ, ನೆಂಚಿಗೆ ಬೇಕಾದರೆ ಟೇಬಲ್ ಮೇಲೆ ಈರುಳ್ಳಿ ಇರುತ್ತೆ. ತಿನ್ನೋವಾಗ ಕೂದಲು ಸಿಗ್ಬೋದು ಅರ್ಜೆಸ್ಟ್ ಮಾಡ್ಕೊಬೇಕಾಗುತ್ತದೆ. ಮುಖಕ್ಕೆ ಅಡುಗೆ ಭಟ್ಟ ಹಿಟ್ಟು ಮೆತ್ಕೊಂಡಿದ್ದಾನೆ ಎನ್ನುವ ಕಾರಣಕ್ಕೆ ಕ್ಲೀನ್ ಇಲ್ಲ ಎಂದುಕೊಳ್ಳಬೇಡಿ. ಕ್ಲಿನಿಕ್ ಆಲ್‌ಕ್ಲಿಯರ್ ಶಾಂಪು ಥರ ಈ ಹೋಟೆಲ್ ಪಕ್ಕಾ ಕ್ಲೀನ್ ಅಂಡ್ ಕ್ಲಿಯರ್ ಅದರಲ್ಲೂ,ರಾಘವೇಂದ್ರ ಸ್ಟೋರ್ಸ್ʼ ನಲ್ಲಿ ಅಡುಗೆ ಮಾಡುವ ಭಟ್ಟರು ಹಾಗೂ ಬಡಿಸೋರು ಶ್ರೀ ಗುರು ರಾಘವೇಂದ್ರ ಸ್ವಾಮಿಯ ಪರಮಭಕ್ತರಾಗಿರೋದ್ರಿಂದ ಕ್ಲೀನ್ ಆಗಿರಲೆಬೇಕು ಅಪ್‌ಕೋರ್ಸ್ ಇರುತ್ತಾರೆ ಕೂಡ.

ಅಣ್ಣಾವ್ರು ಮಂತ್ರಾಲಯ ಮಹಾತ್ಮೆ' ಸಿನಿಮಾ ಮಾಡುವಾಗ ಮಡಿಮೈಲಿಗೆಯಿಂದ ಇದ್ದರು ಜೊತೆಗೆ ನಾನ್‌ವೆಜ್ ತ್ಯಜಿಸಿದ್ದರು. ಅದರಂತೇ, ಜಗ್ಗಣ್ಣ ಕೂಡರಾಘವೇಂದ್ರ ಸ್ಟೋರ್ಸ್ʼಗಾಗಿ ನಾನ್‌ವೆಜ್ ಬಿಡ್ತಾರೆ ಅನ್ಸುತ್ತೆ. ಮೇಲ್ನೋಟಕ್ಕೆ ರಾಘವೇಂದ್ರ ಸ್ಟೋರ್ಸ್‌ʼ ಪ್ಯೂರ್ ವೆಜ್ ರೀತಿ ಕಾಣುತ್ತಿದೆ, ಪೋಸ್ಟರ್‌ನಲ್ಲಿ ಪಕ್ಕಾ ವೆಜ್ ಐಟಮ್ ಇರೋದ್ರಿಂದ ಪ್ಯೂರ್ ವೆಜಿಟೇರಿಯನ್ ಸಿನಿಮಾ ಅನ್ಸುತ್ತೆ. ಹೀಗಾಗಿ, ನಾನ್‌ವೆಜ್ ಬಿಡುವ ಸಂದರ್ಭ ಬರೋದಿಲ್ಲ ಆದರೂ ಕೂಡ ಜಗ್ಗಣ್ಣ ರಾಯರನ್ನ ಆರಾಧನೆ ಮಾಡೋದ್ರಿಂದ ರಾಘವೇಂದ್ರ ಸ್ಟೋರ್ಸ್‌ʼಗಾಗಿ ಬಾಡೂಟ ಬಿಟ್ಟರೂ ಬಿಡ್ಬೋದು ಕಾದುನೋಡಬೇಕು. ಒಟ್ನಲ್ಲಿ ರಾಘವೇಂದ್ರ ಸ್ಟೊರ್ಸ್‌ʼ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಫುಲ್‌ಮೀಲ್ಸ್ ಕೊಡ್ಬೇಕು ಅಂತ ಹೊಂಬಾಳೆ ನಿರ್ಧರಿಸಿದರೇ,ನಗಬೇಕು-ನಗಿಸಬೇಕು ಇದೇ ನನ್ನ ಧರ್ಮ’ ಫುಲ್‌ಮೀಲ್ಸ್ ಹಬ್ಬದೂಟ ಬಡಿಸ್ತೀನಿ ಎಂದು ಜಗ್ಗಣ್ಣ ರೆಡಿಯಾಗಿದ್ದಾರೆ. ಸಂತೋಷ್-ಜಗ್ಗೇಶ್ ತಯ್ಯಾರಿಸಲಿರುವ ಮೃಷ್ಟಾನ್ನ ಹೇಗಿರಲಿದೆ ಜಸ್ಟ್ ವೇಯ್ಟ್ ಅಂಡ್ ವಾಚ್

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ರಾಯರ ಮಗನ ರಾಘವೇಂದ್ರ ಸ್ಟೋರ್ಸ್ : ಹೊಂಬಾಳೆ ಫಿಲಂಸ್‌ ನಲ್ಲಿ‌ ನಟನೆಯ ಅಖಾಡಕ್ಕಿಳಿದ ನವರಸನಾಯಕ ಜಗ್ಗೇಶ್ !

ಹೊಂಬಾಳೆ ಫಿಲಂಸ್‌ ಅಚ್ಚರಿ ಹುಟ್ಟಿಸುತ್ತಿದೆ. ಕೊರೋನಾ ಅಂತ ಉದ್ಯಮವೇ ಸೈಲೆಂಟ್‌ ಆಗಿರುವಾಗ ಹೊಂಬಾಳೆ ಫಿಲಂಸ್‌ ಮಾತ್ರ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಅನೌನ್ಸ್‌ ಮಾಡುತ್ತಿದೆ. ಲಾಕ ಡೌನ್‌ ನಂತರದ ದಿನಗಳಲೇ ಪ್ರಭಾಸ್‌ ಆಯ್ತು, ಅಲ್ಲಿಂದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಆಯ್ತು, ಜತೆಗೆ ರಿಷಬ್‌ ಶೆಟ್ಟಿ , ರಕ್ಷಿತ್‌ ಶೆಟ್ಟಿ ಅವರಿಗೂ ಸಿನಿಮಾ ಅನೌನ್ಸ್‌ ಮಾಡಿ ಆಯ್ತು. ಈಗ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್‌ ಕಾಂಬಿನೇಷನ್‌ ಮೂಲಕ ಮತ್ತೊಂದು ಸಿನಿಮಾ ಅನೌನ್ಸ್‌ ಮಾಡಿ ಕುತೂಹಲ ಮೂಡಿಸಿದೆ ʼಕೆಜಿಎಫ್‌ʼ ಖ್ಯಾತಿಯ ಹೊಂಬಾಳೆ ಫಿಲಂಸ್.‌

ಸಿನಿಮಾ ಪ್ರೇಮಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಕನ್ನಡದ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ನ 12 ನೇ ಸಿನಿಮಾದ ಟೈಟಲ್‌ ಏನು, ಅದರ ನಾಯಕ ಯಾರು ಎನ್ನುವ ಕ್ಯೂರಿಯಾಸಿಟಿಗೆ ಇಂದು ಉತ್ತರ ಸಿಕ್ಕಿದೆ. ಈ ಮೊದಲೇ ಹೇಳಿದಂತೆ ಹೊಂಬಾಳೆ ಫಿಲಂಸ್‌ ತನ್ನ 12ನೇ ಸಿನಿಮಾದ ಟೈಟಲ್‌ ಜತೆಗೆ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮೂಲಕ ಅದರ ನಾಯಕ ಯಾರು ಎನ್ನುವುದನ್ನು ರಿವೀಲ್‌ ಮಾಡಿದೆ. ಒಂದ್ರೀತಿ ಇದು ಅಚ್ಚರಿಯನ್ನೇ ಹೊತ್ತು ಬಂದಿರುವುದು ವಿಶೇಷ.

ಅಂದ ಹಾಗೆ, ಹೊಂಬಾಳೆ ಫಿಲಂಸ್‌ ನಿರ್ಮಾಣದ 12 ನೇ ಚಿತ್ರದ ಹೆಸರು ರಾಘವೇಂದ್ರ ಸ್ಟೋರ್ಸ್‌ʼ ಇದರ ನಾಯಕ ನಟ ಜಗ್ಗೇಶ್.‌ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್.‌ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್‌ ಇದೇ ಮೊದಲು ಹೊಂಬಾಳೆ ಫಿಲಂಸ್‌ ಬ್ಯಾನರ್‌ ಮೂಲಕ ನಟನೆಯ ಅಖಾಡಕ್ಕೆ ಇಳಿದಿದ್ದಾರೆ. ಅವರಿಗೆ ಇಲ್ಲಿ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಜತೆಯಾಗಿದ್ದಾರೆ. ಇದೇ ಮೊದಲು ಇವರಿಬ್ಬರ ಜುಗಲ್‌ ಬಂಧಿ ರಾಘವೇಂದ್ರ ಸ್ಟೋರ್ಸ್‌ ನಲ್ಲಿ ಆಗಿದೆ.

ಹೊಂಬಾಳೆ ಫಿಲಂಸ್‌ ಇದೆಲ್ಲ ವಿವರವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಟೈಟಲ್‌ ಮೂಲಕವೇ ಕುತೂಹಲ ಹುಟ್ಟಿಸುವ ಈ ಸಿನಿಮಾ ಇದು. ರಾಘವೇಂದ್ರ ಅಂದಾಕ್ಷಣ ಅದು ಜಗ್ಗೇಶ್‌ ಅವರಿಗೆ ಕನೆಕ್ಟ್.‌ ಅದೇ ಕಾರಣಕ್ಕೆ ನಟ ಜಗ್ಗೇಶ್‌ ಅವರ ಪಾಲಿಗೆ ಇದು ಸಾಕಷ್ಟು ವಿಶೇಷತೆ ಹೊಂದಿದ ಸಿನಿಮಾ. ಯಾಕಂದ್ರೆ, ನಟ ಜಗ್ಗೇಶ್‌ ಅವರು ಗುರು ರಾಘವೇಂದ್ರ ಪರಮ ಭಕ್ತರು. ರಾಯರ ಮಗ ಅಂತಲೇ ನಂಬಿಕೆ. ಕಾಕತಾಳೀಯ ಎನ್ನುವ ಹಾಗೆ ಈಗವರು ರಾಯರ ಹೆಸರಿನ ಚಿತ್ರಕ್ಕೆ ನಾಯಕರಾಗಿದ್ದಾರೆ. ಅದರ ನಂಟಿನ ಬಗ್ಗೆಯೇ ಅವರು ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ʼ ರಾಯರ ಮಗನಿಗೆ ರಾಘವೇಂದ್ರ ಸ್ಟೋರ್ಸ್ ʼ ಚಿತ್ರ ಬದುಕಿನ ಪರಿಪೂರ್ಣ ಅವರ್ಥ. ನಗಿಸುತ್ತ ಬಿಡಿಸಿ ಹೇಳುವ ಅದ್ಭುತ ಕೃತಿ.‌ ಹೊಂಬಾಳೆ ಸಿನಿಮಾದ್‌ ಜತೆಗೆ ಇದು ನನ್ನ ಮೊದಲ ಸಿನಿಮಾವಾಗಿದ್ದು, ಈ ಹೊಸ ಪ್ರಯತ್ನವನ್ನು ಪ್ರೇಕ್ಷಕರು ಮೆಚ್ಚಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆʼ ಎನ್ನುವುದರ ಮೂಲಕ ʼರಾಘವೇಂದ್ರ ಸ್ಟೋರ್ಸ್‌ʼ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ ನಟ ಜಗ್ಗೇಶ್. ಇನ್ನು ರಾಘವೇಂದ್ರ ಸ್ಟೋರ್ಸ್‌ ಬಗ್ಗೆ ಹೊಂಬಾಳೆ ಫಿಲಂಸ್‌ ಎರಡು ದಿನಗಳ ಮುಂಚೆಯೇ ಕೊಟ್ಟ ಹಿಂಟ್ಸ್‌ ಏನು ಅಂತ ನಿಮಗೆಲ್ಲ ಗೊತ್ತೇ ಇದೆ. ಬಾಳೆ ಏಲೆ, ಅದರ ಮೇಲೆ ಒಂದಷ್ಟು ಅಕ್ಷರ. ಪ್ರತಿಯೊಬ್ಬರಲ್ಲೂ ಹಸಿವಿದೆ, ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ. ಅನ್ನದಾತೋ ಸುಖೀಭವ ಎಂಬುದಾಗಿ ಬರೆದು, ಚಿತ್ರದ ಟೈಟಲ್‌ ಅನೌನ್ಸ್‌ ಜತೆಗೆ ಅದರ ನಾಯಕ ಯಾರು ಎನ್ನುವುದರ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹುಟ್ಟಿಸಿತ್ತು ಹೊಂಬಾಳೆ ಫಿಲಂಸ್.‌

ಆ ಕುತೂಹಲಕ್ಕೆ ಈಗ ತೆರೆ ಎಳೆದಿದೆ. ಮೊದಲೇ ಹೇಳಿದಂತೆ ಬುಧವಾರ ಟೈಟಲ್‌ ಜತೆಗೆ ಅದರ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ರಿವೀಲ್‌ ಆಗಿದೆ. ಕಳೆದೆರೆಡು ದಿನಗಳಿಂದ ಏನೇನೋ ಕಲ್ಪಿಸಿಕೊಂಡವರಿಗೆ ಇವತ್ತು ನಿಜಕ್ಕೂ ಶಾಕ್.‌ ಯಾಕಂದ್ರೆ ʼರಾಜಕುಮಾರʼ ಖ್ಯಾತಿಯ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರಿಗೆ ಇಲ್ಲಿ ಜೋಡಿಯಾಗಿದ್ದು ಕನ್ನಡದ ಹಿರಿಯ ನಟ, ನವರಸನಾಯಕ ಜಗ್ಗೇಶ್.‌ ಇನ್ನು ಟೃಟಲ್‌ ಅನೌನ್ಸ್‌ ಗೆ ಬಾಳೆ ಎಲೆ ಹಾಸಿ, ಒಂದಷ್ಟು ಕುತೂಹಲದ ಕೊಟೇಷನ್‌ ಹಾಕಿದ್ದ ಹೊಂಬಾಳೆ ಫಿಲಂಸ್‌ ನ 12 ನೇ ಚಿತ್ರದ ಕಥೆ ಬಗೆಗಿನ ಕುತೂಹಲಕ್ಕೂ ಒಂದಷ್ಟು ಮಾಹಿತಿ ಇಲ್ಲಿ ರಿವೀಲ್‌ ಆಗಿದೆ. ಅದಕ್ಕಿಂತ ಮೊದಲು ಹೊಂಬಾಳೆ ಫಿಲಂಸ್‌ ನಲ್ಲಿ ನಟ ಜಗ್ಗೇಶ್‌ ಇದೇ ಮೊದಲು ನಟನೆಯ ಅಖಾಡಕ್ಕೆ ಇಳಿದಿರುವುದು ಇಲ್ಲಿ ವಿಶೇಷ. ಆ ಬಗ್ಗೆ ನಿರ್ಮಾಪಕ ವಿಜಯ್‌ ಕಿರಗಂದೂರು ಕೂಡ ಹರ್ಷ ವ್ಯಕ್ತಪಡಿಸುತ್ತಾರೆ.

ʼ ಹಿರಿಯ ನಟರಾದ ಜಗ್ಗೇಶ್‌ ಅವರು ಇದೇ ಮೊದಲು ನಮ್ಮ ಬ್ಯಾನರ್‌ ನಲ್ಲಿ ನಟಿಸುತ್ತಿರುವುದು ನಮ್ಮನ್ನು ಪುಳಕಿತರನ್ನಾಗಿ ಮಾಡಿದೆ. ಇದು ನಮಗೆ ಹೆಮ್ಮೆಯ ವಿಷಯವೂ ಹೌದು.ಕನ್ನಡ ಚಲನಚಿತ್ರರಂಗ ಕೀರ್ತಿಯಲ್ಲಿ ಜಗ್ಗೇಶ್‌ ಅವರ ಪಾತ್ರಾಪಾರವಾದದ್ದು.ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅವೀಸ್ಮರಣಿಯ. ಅವರು ಚಿತ್ರರಂಗದ ಬಹುದೊಡ್ಡ ಆಸ್ತಿ. ಹೀಗಾಗಿ ಹೊಂಬಾಳೆ ಟೀಮ್‌ ಗೆ ನವರಸನಾಯಕ ಜಗ್ಗೇಶ್‌ ಅವರ ಸೇರ್ಪಡೆ ನಮ್ಮ ಸೌಭಾಗ್ಯʼ ಎನ್ನುವ ಮಾತುಗಳೊಂದಿಗೆ ತಮ್ಮ ಸಂಸ್ಥೆಯ ಸಿನಿಮಾಕ್ಕೆ ಅದ್ಧೂರಿ ಸ್ವಾಗತ ನೀಡಿದ್ದಾರೆ ನಿರ್ಮಾಪಕ ವಿಜಯ್‌ ಕಿರಗಂದೂರು. ಹಾಗೆಯೇ ರಾಜಕುಮಾರ, ಯುವರತ್ನ ಚಿತ್ರದ ನಂತರ ಮತ್ತೆ ಈಗ ಮೂರನೇ ಸಿನಿಮಾದೊಂದಿಗೆ ಹೊಂಬಾಳೆ ಫಿಲಂಸ್‌ ಮೂಲಕ ಹ್ಯಾಟ್ರಿಕ್‌ ಬಾರಿಸುತ್ತಿರುವ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರ ಬಗ್ಗೆಯೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ಮಾಪಕ ವಿಜಯ್‌ ಕಿರಗಂದೂರು, ಹೊಸ ಚಲನಚಿತ್ರವನ್ನು ಚಿತ್ರ ರಸಿಕರ ನಿರೀಕ್ಷೆಗೆ ತಕ್ಕಂತೆ ರೂಪಿಸಲಿದ್ದಾರೆಂಬ ಆತ್ಮವಿಶ್ವಾಸ, ನಂಬಿಕೆ ನನಗಿದೆ ಎಂದಿದ್ದಾರೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಛೇ, ಅವರು ಇರಲೇಬೇಕಿತ್ತು….ಅಂತ ನಿಮಗೂ ಅನಿಸುತ್ತೆ : ಸೆ.24ಕ್ಕೆ ಬೆಳ್ಳಿತೆರೆ ಮೇಲೆ ಪುಕ್ಸಟ್ಟೆ ಲೈಪು ಪುರ್ ಸೊತ್ತೇ ಇಲ್ಲ !

ನಟ ಸಂಚಾರಿ ವಿಜಯ್‌ ಈಗಿಲ್ಲ ಅನ್ನೋದನ್ನು ಈಗಲೂ ಅರಗಿಸಿಕೊಳ್ಳಲಾಗದ ಸಂಗತಿ. ಆದರೂ ಅದು ವಾಸ್ತವ. ಅವರು ಕಡೆಯದಾಗಿ ಅಭಿನಯಿಸಿದ ಸಿನಿಮಾಗಳು ಈಗ ಬೆಳ್ಳಿತೆರೆ ಮೇಲೆ ಚಿಮ್ಮಲು ಕಾದಿವೆ. ಆ ಪೈಕಿ ಸೆ.24 ಕ್ಕೆ ಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಸಿನಿಮಾ ಅನೇಕ ಕಾರಣಕ್ಕೆ ತುಂಬಾ ಸ್ಪೆಷಲ್.‌ ಅದರಲ್ಲಿ ವಿಜಯ್‌ ಅವರ ಪಾತ್ರ, ನಟನೆಯೂ ಕೂಡ ಕಾರಣ.

ಛೇ, ಅವರು ಇರಲೇಬೇಕಿತ್ತು…ಹೌದು, ಆ ಚಿತ್ರದ ಟ್ರೇಲರ್‌ನಲ್ಲಿ ಕಾಣುವ ಅವರ ನಟನೆಯನ್ನು ನೋಡಿದಾಗ ನಮ್ಮೊಳಗೆ ಅಂತಹದೊಂದು ವೇದನೆ ಗಾಢವಾಗಿ ಕಾಡುತ್ತದೆ. ಕೇವಲ ಎರಡೇ ನಿಮಿಷದ ಆ ಟ್ರೇಲರ್‌ ನಲ್ಲಿನ ಅವರ ಅಭಿನಯ ನೋಡ ನೋಡುತ್ತಲೇ ಛೇ, ಅವರು ನಮ್ಮೊಂದಿಗೆ ಇರಲೇಬೇಕಿತ್ತು ಅಂತ ಮನಸ್ಸು ಪರಿತಪಿಸತೊಡಗುತ್ತದೆ. ಒಂದ್ರೀತಿಯ ಬೇಸರ ನಮ್ಮನ್ನೇ ಆವರಿಸಿಕೊಳ್ಳುತ್ತದೆ. ಟ್ರೇಲರ್‌ ಮುಗಿಯುತಾ ಬಂದಾಗ ಒಂದು ಡೈಲಾಗ್‌ ಕೇಳುತ್ತದೆ. ʼಎಲ್ಲಾದರೂ ಕಾಣದಂತೆ ಆರು ತಿಂಗಳು ಹೊರಟು ಹೋಗು, ಯಾರ ಕಣ್ಣಿಗೂ ಕಾಣಬೇಡʼ ಅಂತ ಪೊಲೀಸ್‌ ಪಾತ್ರದಾರಿ ಅಚ್ಯುತ್‌ ಕುಮಾರ್‌ ಹೇಳುತ್ತಾರೆ. ಹಾಗೆಯೇ ನಟ ಸಂಚಾರಿ ವಿಜಯ್‌ ಹೊರಟು ಹೋಗಿದ್ದಾರೆಯೇ ಎನ್ನುವ ಕೊಂಚ ಸಮಾಧಾನದ ಮಾತು ಅಲ್ಲಿ ಕೇಳಿದರೂ ವಾಸ್ತವದಲ್ಲಿ ಅವರಿಲ್ಲ ಎನ್ನುವ ಗಾಢ ಬೇಸರದಲ್ಲಿಯೇ ಟ್ರೇಲರ್‌ ನಲ್ಲಿನ ಅವರ ಅಭಿನಯ ನಮ್ಮೆನ್ನೆಲ್ಲ ಮಂತ್ರ ಮುಗ್ದಗೊಳಿಸುತ್ತದೆ. ಅಂದ ಹಾಗೆ ಆ ಟ್ರೇಲರ್‌ ʼಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲʼ ಚಿತ್ರದ್ದು.

ನಟ ಸಂಚಾರಿ ವಿಜಯ್‌ ಈಗಿಲ್ಲ. ಆದರೆ ಅವರ ಅಭಿನಯದ ಕೊನೆಯ ಸಿನಿಮಾಗಳು ಈಗ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಕಾದಿವೆ. ಆ ಪೈಕಿ ʼಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲʼ ಸಿನಿಮಾ ಕೂಡ ಒಂದು. ಆರಂಭದಿಂದಲೂ ಟೈಟಲ್‌ ಮೂಲಕವೇ ಕುತೂಹಲ ಮೂಡಿಸಿದ ಸಿನಿಮಾ ಇದು. ಜತೆಗೆ ಟೀಸರ್‌ ಹಾಗೂ ಟ್ರೇಲರ್‌ ಮೂಲಕವೂ ಮತ್ತಷ್ಟು ಸದ್ದು ಮಾಡಿ, ಈಗ ಪ್ರೇಕ್ಷಕರ ಮುಂದೆ ಬರುತ್ತಿದೆ. ಸೆ.24 ಕ್ಕೆ ಈ ಚಿತ್ರ ಗ್ರಾಂಡ್ ರಿಲೀಸ್‌‌ ಗೆ ರೆಡಿ ಆಗಿದೆ. ಶೇಕಡಾ 50 ರಷ್ಟು ಸೀಟು ಭರ್ತಿಯ ಅವಕಾಶದ ನಡುವೆಯೇ ಈ ಚಿತ್ರ ಇದೇ ವಾರ ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿದೆ. ಕೊರೋನಾ ಆರಂಭಕ್ಕೂ ಮುನ್ನ ಇದ್ದ ಸಿನಿಮಾ ವಾತಾವರಣ ಈಗಿಲ್ಲ ಎನ್ನುವುದು ಸತ್ಯವೇ ಆಗಿದ್ದರೂ, ಸಂಕಷ್ಟದ ಪರಿಸ್ಥಿತಿ ಈಗ ತಿಳಿಯಾಗುತ್ತಿದೆ. ಈ ವಾರದಲ್ಲಿಯೇ ಚಿತ್ರಮಂದಿರಗಳಲ್ಲಿ ಶೇ. 100 ರಷ್ಟು ಸೀಟು ಭರ್ತಿಗೂ ಅವಕಾಶ ಸಿಗುವ ಸಾಧ್ಯತೆಗಳಿವೆ.

ಚಿತ್ರರಂಗದ ಪಾಲಿಗೆ ಇದು ದೊಡ್ಡ ಆಶಾಭಾವನೆ ಹುಟ್ಟು ಹಾಕಿದೆ. ಆ ದಿನಗಳು ಮತ್ತೆ ಬಂದೇ ಬರಬಹುದು ಎನ್ನುವ ದೊಡ್ಡ ಭರವಸೆ ಮೂಲಕ ರಿಲೀಸ್‌ ಗೆ ರೆಡಿ ಇರುವ ಸಿನಿಮಾಗಳು, ಚಿತ್ರಮಂದಿರಗಳಿಗೆ ನುಗ್ಗಲು ತಯಾರಿ ನಡೆಸಿವೆ. ಈ ಪೈಕಿ ಈಗ ಬೆಳ್ಳಿತೆರೆಯಲ್ಲಿ ಅಬ್ಬರಿಸಲು ತುದಿಗಾಲ ಮೇಲೆ ನಿಂತಿರೋ ಸಿನಿಮಾ ʼಪುಕ್ಸಟ್ಟೆ ಲೈಪು ಪರುಸೊತ್ತೇ ಇಲ್ಲʼ. ನಟ ಸಂಚಾರಿ ವಿಜಯ್‌ ಅಭಿನಯದ ಕಾರಣಕ್ಕೆ ದೊಡ್ಡ ಕುತೂಹಲ ಹುಟ್ಟು ಹಾಕಿರೋ ಸಿನಿಮಾ ಇದು. ಅವರೊಂದಿಗೆ ಇಲ್ಲಿ ಅಚ್ಯುತ್ ಕುಮಾರ್‌, ರಂಗಾಯಣ ರಘು, ಜಯಶ್ರೀ ಸೇರಿದಂತೆ ರಂಗಭೂಮಿಯ ದೊಡ್ಡ ಕಲಾವಿದರ ಸಮಾಗಮವೇ ಇಲ್ಲಿದೆ. ಸರ್ವಸ್ವ ಪ್ರೊಡಕ್ಷನ್‌ ಮೂಲಕ ನಿರ್ಮಾಣವಾಗಿರೋ ಈ ಸಿನಿಮಾಕ್ಕೆ ಅರವಿಂದ್‌ ಕುಪ್ಲೀಕರ್‌ ನಿರ್ದೇಶಕ. ರಂಗಭೂಮಿಯ ದೊಡ್ಡ ಅನುಭವ ಅವರಿಗಿದೆ. ಟ್ರೇಲರ್‌ ನೋಡಿದಾಗ ಈ ಸಿನಿಮಾದ ತಿರುಳು ಕೊಂಚ ನಿಮಗೂ ಅರ್ಥವಾಗಿರಬಹುದು. ʼಬೇಲಿಯೇ ಎದ್ದು ಹೊಲ ಮೇಯ್ದದಂತೆ ʼಎನ್ನುವ ಗಾದೆ ಮಾತಿನಂತೆ ಇಲ್ಲಿ ಪೊಲೀಸರೇ ಕಳ್ಳರ ಜತೆ ಸೇರಿ ಕಳ್ಳತನ ಮಾಡಿದ್ರೆ ಹೇಗಿರುತ್ತೆ ಎನ್ನುವ ಸಣ್ಣ ಎಳೆಯೊಂದನ್ನು ಇಟ್ಟುಕೊಂಡು ನಿರ್ಮಾಣ ಮಾಡಿರುವ ಸಿನಿಮಾ ಇದು.

ಅಚ್ಯುತ್‌ ಕುಮಾರ್‌ ಪೊಲೀಸ್‌ ಪಾತ್ರದಲ್ಲಿ, ರಂಗಾಯಣ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರಗಳೇ ಇಲ್ಲಿ ವಿಭಿನ್ನ, ವಿಶಿಷ್ಟವಾಗಿವೆ. ಚಿತ್ರದ ಪ್ರಮುಖ ಪಾತ್ರದಾರಿ ವಿಜಯ್‌ ಅವರದ್ದು ಈಲ್ಲಿ ಬೀಗ ರಿಪೇರಿ ಮಾಡುವ ಒಬ್ಬ ಯುವಕ. ಆತನ ಹೆಸರು ಶಹಜಹಾನ್.‌ ಆತ ಬೀಗ ರಿಪೇರಿಯಿಂದ ಬರುವ ಸಂಪಾದನೆಯಿಂದ ಜೀವನ ನಡೆಸಲು ಕಷ್ಟ ಆದಾಗ, ಕಳ್ಳತನಕ್ಕೆ ಕೈ ಹಾಕುತ್ತಾರೆ. ಅಲ್ಲಿಂದ ಏನೆಲ್ಲ ಘಟನೆಗಳು ಘಟಿಸುತ್ತವೆ ಎನ್ನುವ ಕಥಾನಕವೇ ಈ ಚಿತ್ರದ್ದು. ವಿಜಯ್‌ ಅವರಿಗೆ ಇಲ್ಲಿ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಅವರೆಲ್ಲ ಟ್ರೇಲರ್‌ ನಲ್ಲಿ ಕಾಣಿಸಿಕೊಂಡು ಭಾರೀ ಕುತೂಹಲ ಮೂಡಿಸಿರುವುದು ವಿಶೇಷ.

ಅಷ್ಟು ಮಾತ್ರವಲ್ಲ,ರಿಲೀಸ್‌ ಹಿನ್ನೆಲೆಯಲ್ಲೀಗ ಚಿತ್ರ ತಂಡ ಪ್ರಚಾರಕ್ಕಾಗಿ ಮೊನ್ನೆಯಷ್ಟೇ ವಿಶೇಷವಾದ ಆನಿಮೇಟೆಡ್‌ ವಿಡಿಯೊವೊಂದನ್ನು ಲಾಂಚ್‌ ಮಾಡಿದೆ. ಆ ವಿಡಿಯೋ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುವ ವಿಶಿಷ್ಟ ಪ್ರಯೋಗವನ್ನು ಚಿತ್ರ ತಂಡ ಮಾಡಿದೆ. ಇದು ತುಂಬಾನೆ ಡಿಫೆರೆಂಟ್‌ ಆಗಿದೆ.ಆನಿಮೇಟೆಡ್‌ ವಿಡಿಯೋದಲ್ಲಿ ದಿವಂಗತ ನಟರಾದ ರಾಜ್‌ ಕುಮಾರ್‌, ಶಂಕರ್‌ ನಾಗ್‌, ವಿಷ್ಣುವರ್ದನ್‌, ಅಂಬರೀಷ್‌ ಸೇರಿ ಹಲವು ಕಲಾವಿದರ ಜೊತೆಗೆ ನನ ದಿವಂಗತ ಸಂಚಾರಿ ವಿಜಯ್‌ ಅವರು ಮಾತುಕತೆ ನಡೆಸುತ್ತಾ ತಮ್ಮ ಹೊಸ ಚಿತ್ರದ ಬಗ್ಗೆ ವಿವರಿಸುವ ದೃಶ್ಯವದು.

ಈ ವಿಡಿಯೋ ಮೂಲಕ ವಿಜಯ್‌ ಅವರನ್ನು ಹಲವರು ನೆನಪಿಸಿಕೊಂಡಿದ್ದಾರೆ. ಅದು ಕೂಡ ಚಿತ್ರದ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡಿದೆ. ಚಿತ್ರ ತಂಡ ಹೇಳುವ ಪ್ರಕಾರ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ನಟ ವಿಜಯ್‌ ಅಭಿಮಾನಿಗಳು ಕೂಡ ದೊಡ್ಡ ಕಾತರದಲ್ಲಿದ್ದಾರೆ. ಕಥೆ ಜತೆಗೆ ಕಲಾವಿದರ ಅಭಿನಯವೂ ಕೂಡ ಇಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿವೆ. ಆ ಕಾರಣಕ್ಕೆ ಸಿನಿಮಾಕ್ಕೆ ದೊಡ್ಡ ರೆಸ್ಪಾನ್ಸ್‌ ಸಿಗುವ ನಿರೀಕ್ಷೆ ಕೂಡ ಚಿತ್ರ ತಂಡಕ್ಕಿದೆ. ಚಿತ್ರ ತಂಡ ಅಂದುಕೊಂಡಂತೆ ಸಿನಿಮಾ ಕನ್ನಡ ಸಿನಿಮಾ ರಸಿಕರ ಆಶೀರ್ವಾದವೂ ಸಿಗಲಿ.

  • ಎಂಟರ್‌ ಟೈನ್‌ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಚಿತ್ರೀಕರಣ ಮುಗಿಸಿಕೊಂಡ ರಗಡ್ ಕಥೆಯ ‘ಬಯಲುಸೀಮೆ’!

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲಿ ಯಾವತ್ತಿಗೂ ಒಂದು ರೀತಿಯ ಕುತೂಹಲ ಮತ್ತು ವಿಶೇಷವಾದ ಪ್ರೀತಿ ಇದ್ದೇ ಇರುತ್ತದೆ. ಅದೇ ಹಿನ್ನೆಲೆಯಲ್ಲೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ಚಿತ್ರವೊಂದು ಚಿತ್ರೀಕರಣ ಮುಗಿಸಿಕೊಂಡು ರಿಲೀಸ್‌ ಗೆ ರೆಡಿಯಾಗುತ್ತಿದೆ. ಆ ಸಿನಿಮಾವೇ ʼಬಯಲು ಸೀಮೆʼ

ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಜಾನರ್‌ ಕಥಾ ಹಂದರದ ಸಿನಿಮಾ ಇದು. ಪಕ್ಕಾ ಉತ್ತರ ಕರ್ನಾಟಕ ಶೈಲಿಯಲ್ಲಿ ತಯಾರಾಗಿದೆ. ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುವಂತಹ ಕಥೆಯ ಈ ಚಿತ್ರ ಪ್ರೇಕ್ಷಕರನ್ನು ಪಕ್ಕಾ ರಂಜಿಸುವುದು ಗ್ಯಾರಂಟಿ ಎನ್ನುತ್ತಿದೆ ಚಿತ್ರ ತಂಡ.

ಲಕ್ಷ್ಮಣ್ ಸಾ ಶಿಂಗ್ರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಯಲುಸೀಮೆಯನ್ನು ವರುಣ್ ಕಟ್ಟೀಮನಿ ನಿರ್ದೇಶನ ಮಾಡಿದ್ದಾರೆ. ಎಂಭತ್ತರ ದಶಕ ಮತ್ತು ಈವತ್ತಿನ ಕಾಲಮಾನದೊಂದಿಗೆ ಜುಗಲ್ ಬಂಧಿ ಹೊಂದಿರೋ ಈ ಕಥೆ, ಆ ಎರಡು ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಕಟ್ಟಿಕೊಟ್ಟಿದೆಯಂತೆ.

ಸಾಹೂರಾವ್ ಶಿಂಧೆ ಎಂಬ ಶ್ರೀಮಂತ ವ್ಯಕ್ತಿಯ ಸುತ್ತ ಬಯಲು ಸೀಮೆಯ ಕಥೆ ಚಲಿಸುತ್ತೆ. ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಂದು ಲವ್ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳುವ ದ್ವೇಷ… ಕ್ಷಣ ಕ್ಷಣವೂ ಪ್ರೇಕ್ಷಕರನ್ನು ತುದಿ ಸೀಟಿಗೆ ತಂದು ಕೂರಿಸುವಂತಹ ಗಟ್ಟಿ ಕಥೆಯೊಂದಿಗೆ ಚಿತ್ರತಂಡ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉತ್ಸಾಹದಲ್ಲಿದೆ.

ಈ ಸಿನಿಮಾದಲ್ಲಿ ಭಯ ಹುಟ್ಟಿಸೋ ಪಾತ್ರಗಳಿವೆ. ಅದಕ್ಕೆ ಅತಿರಥ ಮಹಾರಥ ಕಲಾವಿದರುಗಳು ಜೀವ ತುಂಬಿದ್ದಾರೆ. ಬೃಹತ್ ತಾರಾಗಣ ಹೊಂದಿರುವ ಬಯಲು ಸೀಮಿಯಲ್ಲಿ ಬಿಸಿಲ ನಾಡ ಪ್ರತಿಭೆಗಳೂ ಮಿಂಚಲು ಅಣಿಯಾಗಿದ್ದಾರೆ. ಟಿ.ಎಸ್ ನಾಗಾಭರಣ, ರವಿಶಂಕರ್, ಸಂಯುಕ್ತ ಹೊರನಾಡು, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ವರುಣ್ ಕಟ್ಟೀಮನಿ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕೈನವರ್, ಪ್ರದೀಪ್ ರಾಜ್ ಮುಂತಾದವರ ತಾರಾಗಣ ಈ ಸಿನಿಮಾದಲ್ಲಿದೆ.

ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಮತ್ತು ರಾಮು ಅವರ ನೃತ್ಯ ಸಂಯೋಜನೆಯಿಂದ ಬಯಲುಸೀಮೆ ಸಿಂಗರಿಸಿಕೊಂಡಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ
Categories
ಸಿನಿ ಸುದ್ದಿ

ಬಿಗ್ ಬಾಸ್ ಬೆಡಗಿಯ ಆನ್ ಲೈನ್ ಎಂಗೇಜ್ ಮೆಂಟ್ ; ಅಂದು ದೊಡ್ಮನೆಯಲ್ಲಿಈ ನಟಿ ಕಿಚ್ಚನಿಗೆ ಕೇಳಿದ್ದೇನು ಗೊತ್ತಾ ?

ಇದು ಕಲಿಯುಗ ಮಾತ್ರವಲ್ಲ ಸೋಷಿಯಲ್ ಯುಗ. ಕೊರೊನಾ ಬಂದ್ಮೇಲಂತೂ ಸಾಮಾಜಿಕ ಜಾಲತಾಣಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಎಲ್ಲವೂ ಆನ್ ಲೈನ್ ಮಯವಾಗುತ್ತಿದೆ. ಇಂತಹ ಹೊತ್ತಲ್ಲಿ ಬಿಗ್ ಬಾಸ್ ಬೆಡಗಿ ಆನ್ ಲೈನ್ ನಲ್ಲೇ ಎಂಗೇಜ್ಮೆಂಟ್ ಮಾಡಿಕೊಂಡು ಸುದ್ದಿಯಾಗಿದ್ದಾರೆ.

ಬಿಗ್ ಬಾಸ್ ಅತೀ ದೊಡ್ಡ ರಿಯಾಲಿಟಿ ಶೋ. ಕಲರ್ಸ್ ಸಂಸ್ಥೆಯ ಹೆಮ್ಮೆಯ ಕಾರ್ಯಕ್ರಮ. ದೊಡ್ಮನೆಯ ಲ್ಲಿ ನಡೆಯುವ ಈ ಜಬರ್ದಸ್ತ್ ಪ್ರೋಗ್ರಾಂಗೆ ಹಾಗೂ ಕಿಚ್ಚನ ವೀಕೆಂಡ್ ಮಾತಿಗೆ ಮತ್ತು ಮಸ್ತಿಗೆ ವೀಕ್ಷಕರು ಕಣ್ಣರಳಿಸಿ ಕಾಯ್ತಾರೆ. ಇಂತಿಪ್ಪ ಈ ಬಿಗ್ ಹೌಸ್ ಶೋ ಎಂಟು ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿದೆ. ಒಂಭತ್ತನೇ ಸೀಸನ್ ಗಾಗಿ ಕಿರುತೆರೆ ವೀಕ್ಷಕರು ಎದುರುನೋಡ್ತಿದ್ದಾರೆ.‌ ಈ ಮಧ್ಯೆ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ವೈಜಯಂತಿ ಅಡಿಗ ಆನ್ ಲೈನ್ ನಲ್ಲೇ ಎಂಗೇಜ್ ಆಗಿ ಸಪ್ರೈಸ್ ಕೊಟ್ಟಿದ್ದಾರೆ.

ವೈಜಯಂತಿ ಅಡಿಗ ಕೆಲವೇ ಕೆಲವು ದಿನಗಳ ಕಾಲ ಬಿಗ್ ಬಾಸ್ ನಲ್ಲಿದ್ದಂತವರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶಿಸಿದ ವೈಜಯಂತಿ, ಅರಮನೆಯಂತಿರುವ ಸೆರೆಮನೆಯಲ್ಲಿ ನನ್ನ ಕೈಲಿ ಇರೋದಕ್ಕೆ ಆಗಲ್ಲ ಅಂತ ಕಣ್ಣೀರಿಟ್ಟಿದ್ದರು. ದಿನಪ್ರತಿಕಣ್ಮಣಿ ಕ್ಯಾಮರಾ ಮುಂದೆ ನಿಂತು ನನ್ನ ಕಳುಹಿಸಿಕೊಡಿ ನನಗೆ ಬಿಗ್ ಬಾಸ್ ಮನೆಯಲ್ಲಿ ಇರೋದಕ್ಕೆ ಆಗ್ತಿಲ್ಲ‌ ಅಂತ ಬೇಡಿಕೊಳ್ತಿದ್ದರು. ಹೀಗಾಗಿ, ಕಿಚ್ಚ ವೈಜಯಂತಿಯವರಿಗೆ ಬಿಗ್ ಬಾಸ್ ಮಹತ್ವ ತಿಳಿಸಿಕೊಟ್ಟು ಬಿಳ್ಕೊಟ್ಟರು. ಇದರಿಂದ ಬ್ರೋಗೌಡ ಶಮಂತ್ ಸೇಫ್ ಆದರು. ಫೈನಲ್ಸ್ ವರೆಗೂ ಟಕ್ಕರ್ ಕೊಟ್ಟರು ಇದೆಲ್ಲ‌ ನಿಮಗೆ ಗೊತ್ತಿದೆ.

ಅಂದು ಬಿಗ್ ಬಾಸ್ ಮನೆಯಿಂದ ಹೊರಬಂದು ಸುದ್ದಿಯಾಗಿದ್ದ ವೈಜಯಂತಿಯವರು ಇಂದು ಆನ್ ಲೈನ್‌ನಲ್ಲೇ ಪ್ರಿಯಕರನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸದ್ದು ಮಾಡುತ್ತಿದ್ದಾರೆ. ವೈಜಯಂತಿ ಪ್ರೀತ್ಸಿರುವ ಹುಡುಗ ಸೂರಜ್ ಫಾರಿನ್ ನಲ್ಲಿ ಸೆಟಲ್ ಆಗಿದ್ದಾರೆ. ಕೊರೊನಾ ಆವಾಂತರದಿಂದ ಕರ್ನಾಟಕಕ್ಕೆ ಬರಲಾಗುತ್ತಿಲ್ಲ. ಹೀಗಾಗಿ, ಆನ್ ಲೈನ್ ನಲ್ಲಿ ಲೈವ್ ಬಂದು ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಜೊತೆ ಸೂರಜ್ ಎಂಗೇಜ್ ಆಗಿದ್ದಾರೆ. ವೈಜಯಂತಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ. ಈ ಸುಂದರ ಕ್ಷಣಗಳನ್ನ ಫೋಟೋದಲ್ಲಿ ಸೆರೆಹಿಡಿದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಟಿ ವೈಜಯಂತಿ ಅಡಿಗ ಹಂಚಿಕೊಂಡಿದ್ದಾರೆ.

ನಟಿ ವೈಜಯಂತಿ ಅಡಿಗ ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಮಗಳು. ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲಿ ವೈಜಯಂತಿ ಅಭಿನಯಿಸಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಅನುಭವ ಪಡೆದುಕೊಂಡರು. ಈಗ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳುವ ತವಕದಲ್ಲಿದ್ದಾರೆ. ಪ್ರಿಯಕರ ಸೂರಜ್ ಜೊತೆ ವೈಜಯಂತಿ ದಾಂಪತ್ಯ ಜೀವನಕ್ಕೆ‌ ಕಾಲಿರಿಸಲಿದ್ದಾರೆ. ಸದ್ಯಕ್ಕೆ ಎಂಗೇಜ್ ಆಗಿದ್ದಾರೆ, ಶೀಘ್ರದಲ್ಲೇ ಮದುವೆಯ ಅಪ್ ಡೇಟ್ ನೀಡ್ತಾರೆ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಉಪೇಂದ್ರ ಅಂದ್ರೆ ಬರೀ ಸೂಪರ್ ಸ್ಟಾರ್ ಅಲ್ಲ… ಆರ್. ಚಂದ್ರು ಬಿಚ್ಚಿಟ್ಟರು ಉಪೇಂದ್ರ ಅವರ ಇನ್ನೊಂದು ಮುಖ !

ನಟ, ನಿರ್ದೇಶಕ, ಸಂಭಾಷಣೆಕಾರ, ಗೀತ ರಚನೆಕಾರ ಹಾಗೂ ನಿರ್ಮಾಪಕರು ಆದ ಉಪೇಂದ್ರ ಅವರಿಗೆ ಇಂದು ಹುಟ್ಟು ಹಬ್ಬ. ಅವರಿಗೆ ನಾನಾ ನಾಮಶೇಷಣಗಳಿವೆ. ಅವೆಲ್ಲಕ್ಕಿಂದ ಮುಖ್ಯವಾಗಿ ಅವರೊಬ್ಬ ಪ್ರಾಮಾಣಿಕ, ಒಳ್ಳೆಯರು ಎನ್ನುವುದು ನಿರ್ದೇಶಕ ಚಂದ್ರು ಅವರ ಬಣ್ಣನೆ. ಅದು ಹೇಗೆ? ಯಾಕೆ? ಆ ಬಗ್ಗೆ ಆರ್. ಚಂದ್ರು ಹೇಳಿದ್ದೇನು ಎನ್ನುವ ಸ್ಟೋರಿ ಇಲ್ಲಿದೆ ನೋಡಿ….

ಎಲ್ಲರೂ ನಿಮ್ಮನ್ನು ಬುದ್ಧಿವಂತ ಅಂತಾರೆ, ಅದ್ಭುತ ನಿರ್ದೇಶಕ ಅಂತಾರೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅಂತ ಎಲ್ಲ ಹೇಳುತ್ತಾರೆ, ಅದೆಲ್ಲವೂ ಸತ್ಯ. ಆದರೆ ಅದೆಲ್ಲಕ್ಕೂ ಮಿಗಿಲಾಗಿ ನೀವು ಪ್ರಾಮಾಣಿಕರು ಮತ್ತು ಒಳ್ಳೆಯ ಮನುಷ್ಯ….
ನಟ, ನಿರ್ದೇಶಕ ಉಪೇಂದ್ರ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಉಪ್ಪಿ ಅವರ ಅಂತರ್ಯದ ಇನ್ನೊಂದು ವ್ಯಕ್ತಿತ್ವವನ್ನು ಹೀಗೆ ಬಿಚ್ಚಿಟ್ಟವರು ‘ಕಬ್ಜ ‘ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು. ಅದು ಅವರಿಗೆ ಗೊತ್ತಾಗಿದ್ದು ಉಪೇಂದ್ರ ಅವರೊಂದಿಗಿದ್ದ ಆತ್ಮೀಯ ಒಡನಾಟ. ಅದಕ್ಕೆ ಸಾಕ್ಷಿ ʼಬ್ರಹ್ಮʼ, ʼಐ ಲವ್ ಯೂʼ ಜತೆಗೀಗ’ ಕಬ್ಜ’ ಚಿತ್ರ. ಕನ್ನಡದ ಚಿತ್ರರಂಗದ ಮಟ್ಟಿಗೆ ಆರ್. ಚಂದ್ರು ಒಬ್ಬ ಸಾಹಸಿ ನಿರ್ದೇಶಕ ಕಮ್ ನಿರ್ಮಾಪಕ. ಕಡು ಕಷ್ಟದಲ್ಲಿಯೇ ಸಿನಿಮಾ ಬದುಕನ್ನು ಅಪ್ಪಿ, ಒಪ್ಪಿ ತಲೆಗೆ ನಿರ್ದೇಶಕನ ಹ್ಯಾಟ್ ತೊಟ್ಟು ಗೆದ್ದು ಅಪರೂಪದ ವ್ಯಕ್ತಿ. ಅವರ ಸಾಹಸದ ಸ್ವಭಾವದಿಂದಲೇ ಅವರೀಗ ನಿರ್ಮಾಪಕರೂ‌ ಆಗಿದ್ದಾರೆನ್ನುವುದು ಎಲ್ಲರಿಗೂ ಗೊತ್ತು. ಅದರ ದೊಡ್ಡ ಸಾಹಸವೇ ಈಗ ‘ ಕಬ್ಜ’ ಚಿತ್ರ.

ಕನ್ನಡದ ಮಟ್ಟಿಗೀಗ ಬಹು ನಿರೀಕ್ಷಿತ ಸಿನಿಮಾವೇ ಆಗಿರುವ ʼಕಬ್ಜʼ ಚಿತ್ರವು ಆರ್. ಚಂದ್ರು ಹಾಗೂ ನಟ ಉಪೇಂದ್ರ ಜೋಡಿಯ ಮೂರನೇ ಸಿನಿಮಾ. ಹಾಗೆ ನೋಡಿದರೆ ಅವರ ಹಿಂದಿನ ಅವೆರೆಡು ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಹಲವು ಕಾರಣಕ್ಕೆ ವಿಶೇಷ ಹೊಂದಿರುವ ಸಿನಿಮಾ. ಬಿಗ್‌ ಬಜೆಟ್‌ ಸಿನಿಮಾ ಮಾತ್ರವಲ್ಲ ಚಂದ್ರು ಸಿನಿಮಾ ಕೆರಿಯರ್‌ ನಲ್ಲಿ ಮೊದಲ ಬಾರಿಗೆ ಪ್ಯಾನ್‌ ಇಂಡಿಯಾ ಎನ್ನುವ ಹೆಗ್ಗಳಿಕೆ ಕೂಡ ಅದಕ್ಕಿದೆ. ಹಾಗೆಯೇ ಅದರ ಕಥೆಯ ಜತೆಗೆ ಕಲರ್‌, ಸೆಟ್‌, ಟಿಂಟ್‌ ಜತೆಗೆ ಹಲವು ವೈಶಿಷ್ಟ್ಯಗಳು ಇಲ್ಲಿವೆ. ಅದೇ ಕಾರಣಕ್ಕೆ ಈ ಸಿನಿಮಾ ಶುರುವಾಗಿ ಫಸ್ಟ್‌ ಲುಕ್‌ ರಿವೀಲ್‌ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಅದೇ ಕಾರಣಕ್ಕೆ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಕಬ್ಜದ ವಿಶೇಷ ಏನು ಅಭಿಮಾನಿಗಳಿಗೆ ನಿರೀಕ್ಷೆಗೆ ಈಗ ಉತ್ತರ ಸಿಕ್ಕಿದೆ.

ಆರ್.‌ ಚಂದ್ರು ಅವರು ಶುಕ್ರವಾರ ಅನೌನ್ಸ್‌ ಮಾಡಿದ್ದ ಹಾಗೆ, ಶನಿವಾರ ಬೆಳಗ್ಗೆಯೇ ಉಪ್ಪಿ ಬರ್ತ್‌ ಡೇ ಗಿಫ್ಟ್‌ ಆಗಿ ಕಬ್ಜ ಚಿತ್ರದ ಸ್ಪೆಷಲ್‌ ಮೋಷನ್‌ ಪೋಸ್ಟರ್‌ ರಿವೀಲ್‌ ಮಾಡಿದ್ದಾರೆ. ಅವರೇ ಹೇಳಿದ್ದ ಹಾಗೆಯೇ ಈ ಪೋಸ್ಟರ್‌ ನಲ್ಲಿ ಕಬ್ಜ ಚಿತ್ರದ ಸೆಟ್‌, ಕಲರ್‌, ಟಿಂಟ್‌ ಎಲ್ಲವನ್ನು ತೋರಿಸುವ ಹಾಗೆ ಪೋಸ್ಟರ್‌ ಡಿಸೈನ್‌ ಮಾಡಿಸಿ, ಸೋಷಲ್‌ ಮೀಡಿಯಾ ಮೂಲಕ ಲಾಂಚ್‌ ಮಾಡಿದ್ದಾರೆ. ಎರಡು ಭಾಷೆಗಳಲ್ಲಿ ಈ ಪೋಸ್ಟರ್‌ ಔಟ್‌ ಆಗಿದೆ. ಆ ಮೂಲಕ ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಅದರ ಜತೆಗೆ ಕಜ್ಬ ಚಿತ್ರದ ಬಹುನಿರೀಕ್ಷಿತ ಟೀಸರ್‌ ರಿಲೀಸ್‌ ಡೇಟ್‌ ಅನ್ನು ರಿವೀಲ್‌ ಮಾಡಿದ್ದಾರೆ. ದೀಪಾವಳಿಗೆ ಕಬ್ಜ ಚಿತ್ರದ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಟೀಸರ್‌ ಲಾಂಚ್‌ ಆಗುತ್ತಿದೆ. ಮೋಷನ್‌ ಪೋಸ್ಟರ್‌ ಲಾಂಚ್‌ ಜತೆಗೆ ಟೀಸರ್‌ ಲಾಂಚ್‌ ಡೇಟ್‌ ಅನ್ನು ಸೋಷಲ್‌ ಮೀಡಿಯಾದಲ್ಲಿ ಅನೌನ್ಸ್‌ ಮಾಡುವ ಸಂದರ್ಭದಲ್ಲಿ ನಿರ್ದೇಶಕ ಚಂದ್ರು ಅವರು ತಾವು ಹತ್ತಿರದಿಂದ ಕಂಡ ಉಪೇಂದ್ರ ಅವರ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಇಲ್ಲಿ ಬಿಚ್ಚಿಟ್ಟಿರುವುದು ವಿಶೇಷ.

ಎಲ್ಲರೂ ನಿಮ್ಮನ್ನು ಬುದ್ಧಿವಂತ ಅಂತಾರೆ, ಅದ್ಭುತ ನಿರ್ದೇಶಕ ಅಂತಾರೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅಂತ ಎಲ್ಲ ಹೇಳುತ್ತಾರೆ, ಅದೆಲ್ಲವೂ ಸತ್ಯ. ಆದರೆ ಅದೆಲ್ಲಕ್ಕೂ ಮಿಗಿಲಾಗಿ ನೀವು ಪ್ರಾಮಾಣಿಕರು ಮತ್ತು ಒಳ್ಳೆಯ ಮನುಷ್ಯ… ಅಂತ ಚಂದ್ರು ಅವರು ಉಪೇಂದ್ರ ಅವರನ್ನು ಬಣ್ಣಿಸಿದ್ದಾರೆ. ಚಂದ್ರು ಕಂಡಂತೆ ಉಪೇಂದ್ರ ಅವರ ನಿಜವಾದ ವ್ಯಕ್ರಿತ್ವ ಇರೋದೇ ಹಾಗೆ. ಉಪೇಂದ್ರ ಅಂದ್ರೆ ಬುದ್ದಿವಂತ, ಸೂಪರ್‌ ಸ್ಟಾರ್‌, ರಿಯಲ್‌ ಸ್ಟಾರ್‌, ಫಿಲ್ಟರ್‌ ಲೆಸ್‌ ಆಕ್ಟರ್‌ ಎನ್ನುವವುದು ಎಷ್ಟು ನಿಜವೋ ಹಾಗೆಯೇ ಪ್ರಾಮಾಣಿಕರು ಹಾಗೂ ಒಳ್ಳೆಯರು ಹೌದು. ಅವರಿಗೆ ಸಿನಿಲಹರಿ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ
Categories
ಸಿನಿ ಸುದ್ದಿ

ದೇವರ ಮೊರೆ ಹೋದ ನಟಿ ಸಮಂತಾ ; ಪ್ರಶ್ನೆ ಮಾಡಿದವರಿಗೆ ಬುದ್ದಿ ಇದೆಯಾ ಎಂದ ಸ್ಯಾಮ್ ?

ನಟಿ ಸಮಂತಾ ದೇವರ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ದಾಂಪತ್ಯದಲ್ಲಿ ಕಲಹ, ಅಕ್ಕಿನೇನಿ ಕುಟುಂಬ ತೊರೆದಿದ್ದಾರೆ ಎನ್ನುವ ಅಂತೆ- ಕಂತೆ ಸಮಾಚಾರದ ನಡುವೆ ತಿರುಪತಿ ತಿಮ್ಮಪ್ಪನ ದರ್ಶನ‌ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ

ಸೌತ್ ಸಿನಿಮಾ ಬ್ಯೂಟಿ, ಮಾಯಬಜಾರ್ ನ ಬಹುಬೇಡಿಕೆಯ ನಟಿ ಸಮಂತಾ ಈಗೀಗ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸಮಂತಾ ಅಕ್ಕಿನೇನಿ ಅಂತ ಇದ್ದ ಹೆಸರನ್ನ ಬದಲಿಸಿಕೊಂಡು ಬರೀ ಎಸ್ ಅಂತ ಹಾಕಿಕೊಂಡಿದ್ದೇ ಬಂತು ದಿನಕ್ಕೊಂದು ರೀತಿ ಸುದ್ದಿಗಳು ಸಮಂತಾ ಸುತ್ತ ಹಬ್ಬುತ್ತವೆ. ಅಕ್ಕಿನೇನಿ ಕುಟುಂಬದಿಂದ ದೂರವಾಗಿರಬಹುದು, ನಾಗಚೈತನ್ಯ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿರಬಹುದು ಅಂತೆಲ್ಲಾ ಮಾತನಾಡಿಕೊಳ್ತಿದ್ದಾರೆ. ಆದರೆ, ಗಾಸಿಪ್ ಟೋಪಿ ಹಾಕಿಕೊಂಡು ಕುಣಿಯುತ್ತಿರುವ ಯಾವ ಸುದ್ದಿಗೂ ಸಮಂತಾ ಆಗಲೀ, ಅಕ್ಕಿನೇನಿ ಕುಟುಂಬಸ್ಥರಾಗಲಿ ಕ್ಲ್ಯಾರಿಟಿ ಕೊಡ್ತಿಲ್ಲ.

ಸಮಂತಾ- ನಾಗಚೈತನ್ಯ ಮಾಧರಿ ಜೋಡಿಯಾಗಬೇಕಿದ್ದವರು. ಲವ್ ಲೈಫ್ ಲೀಡ್ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಇದ್ದರೆ ಇವ್ರಂತ ಜೋಡಿ ಇರಬೇಕು ಅಂತ ಸ್ಯಾಮ್ ಹಾಗೂ ಚೈ ಫ್ಯಾನ್ಸ್ ಗರ್ವದಿಂದ ಹೇಳಿಕೊಂಡಿದ್ದುಂಟು. ರೀಲ್ ನಲ್ಲಿ ಸೈ ಎನಿಸಿಕೊಂಡಿದ್ದ ತಾರಾಜೋಡಿ ರಿಯಲ್ ಲೈಫ್ ನಲ್ಲೂ ಜೈಕಾರ ಹಾಕಿಸಿಕೊಂಡಿದ್ದು ಸತ್ಯ. ಆದರೆ, ಏಕಾಏಕಿ ಮನಂ ಕಪಲ್ಸ್ ಮಧ್ಯೆ ಏನಾಯ್ತು? ಏಕಾಏಕಿ ಎಸ್ ಅಂತ ಸಮಂತಾ ಹೆಸರು ಬದಲಾಯಿಸಿಕೊಳ್ಳೋಕೆ ಕಾರಣ ಏನು? ಇದ್ಯಾವುದಕ್ಕೂ ಸದ್ಯಕ್ಕೆ ಉತ್ತರ ಇಲ್ಲ.

ನಿಜಕ್ಕೂ, ಮಜಿಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿದೆಯಾ? ಮಹಾನಟಿಯ ಸುಂದರ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಕೋಲಾಹಲ ಸೃಷ್ಟಿಯಾಗಿದೆಯಾ? ಒಂದ್ವೇಳೆ ಅಕ್ಕಿನೇನಿ ಕುಟುಂಬದಿಂದ ಬೇರಾಗುವ ಸಂದರ್ಭ- ಸನ್ನಿವೇಶ ಸೃಷ್ಟಿಯಾಗಿದ್ರೆ ಮಾವ ನಾಗಾರ್ಜುನ್‌ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿರಲಿಲ್ಲ ಅನ್ಸುತ್ತೆ, ನಾಗಚೈತನ್ಯ ಲವ್ ಸ್ಟೋರಿಗೆ ವಿಶ್ ಮಾಡ್ತಿರಲಿಲ್ಲ. ಆದರೆ, ಸಮಂತಾ ಈ ಎರಡು ಮಾಡಿದ್ದಾರೆ. ಹೀಗಾಗಿ, ಅಕ್ಕಿನೇನಿ ಕುಟುಂಬಕ್ಕೆ ಗುಡ್ ಬೈ ಹೇಳ್ತಾರೆ ಎನ್ನುವುದು ಡೌಟು. ಗುಡ್ ಬೈ ಹೇಳದಿರಲಿ, ಮನಂ ಫ್ಯಾಮಿಲಿಯ ಜೊತೆಗೆ ಮನಸಾರೆ ಜೀವಿಸಲಿ ಎನ್ನುವುದೇ ಎಲ್ಲರ ಆಶಯ.

ಅಂದ್ಹಾಗೇ, ಅಂತೆ- ಕಂತೆ ಸಮಾಚಾರ ಧಗಧಗಿಸುತ್ತಿರುವ ಹೊತ್ತಲ್ಲಿ
ನಟಿ ಸಮಂತಾ ದೇವರ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಈ ಹೊತ್ತಲ್ಲಿ ಸಮಂತಾಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.‌ ದೇವಸ್ಥಾನಕ್ಕೆ ಬಂದಾಗ ಪ್ರಶ್ನೆ ಮಾಡಿದ್ದಕ್ಕೆ ಸ್ಯಾಮ್ ಗರಂ ಆಗಿದ್ದಾರೆ. ಬುದ್ದಿ ಇದೆಯಾ ಇಲ್ಲವಾ ಹೇಳಿಬಿಡಿ ಎನ್ನುತ್ತಲೇ ದೇವಸ್ತಾನದ ಒಳಗೆ ಎಂಟ್ರಿಕೊಟ್ಟಿದ್ದಾರೆ. ಸಾಮಾಜಿಕ ಲೋಕದಲ್ಲಿರುವವರಿಗೆ ಹೋದಲ್ಲಿ ಬಂದಲ್ಲಿ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ, ನೆಮ್ಮದಿ ಅರಸಿ ದೇಗುಲಕ್ಕೆ ಹೋದಾಗ ವೈಯಕ್ತಿಕವಾಗಿ ಕೆದಕಿ ಕೊಶ್ಚನ್ ಮಾಡಿದಾಗ ಬೇಸರವಾಗೋದು ಸಹಜ.‌ ಆ ಬೇಸರವನ್ನ ಕ್ಯಾಮೆರಾ ಮುಂದೆಯೇ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಮಹಾನಟಿಯ ಬೇಸರ ದೂರಾಗಲಿ, ವೈಯಕ್ತಿಕ ಬದುಕಲ್ಲಿ ಏನಾದರೂ ಏರುಪೇರಾಗಿದ್ದಲ್ಲಿ ತಿರುಪತಿ ತಿಮ್ಮಪ್ಪ‌ ಅದನ್ನೆಲ್ಲ ಸರಿಪಡಿಸಲಿ. ಮನಂ ಜೋಡಿ ನೂರು ಕಾಲ ಒಂದಾಗಿ ಬಾಳಲಿ ಅಲ್ಲವೇ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಉಪ್ಪಿ ಬರ್ತ್‌ಡೇ ಗೆ ಅನೌನ್ಸ್‌ ಆಗುತ್ತೆ ʼಕಬ್ಜʼ ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ : ಮೋಷನ್‌ ಪೋಸ್ಟರ್‌ ಮೂಲಕ ಚಿತ್ರ ಸ್ಪೆಷಲ್‌ ಏನು ಅಂತ ತೋರಿಸುತ್ತಾರಂತೆ ನಿರ್ದೇಶಕ ಆರ್.‌ ಚಂದ್ರು !

ನಟ, ನಿರ್ದೇಶಕ ಉಪೇಂದ್ರ ಅವರಿಗೆ ನಾಳೆ ಹುಟ್ಟು ಹಬ್ಬದ ಸಂಭ್ರಮ. ಕೊರೋನಾ ಕಾರಣ ಈ ಬಾರಿಯೂ ಅವರು ಗ್ರಾಂಡ್‌ ಆಗಿ ಬರ್ತ್‌ ಡೇ ಸೆಲೆಬ್ರೇಷನ್‌ ಮಾಡಿಕೊಳ್ತಿಲ್ಲ ಎನ್ನುವುದನ್ನು ಬಿಟ್ಟರೆ, ಈ ಬಾರಿಯ ಅವರು ಹುಟ್ಟು ಹಬ್ಬಕ್ಕೆ ಹಲವು ಕಾರಣಕ್ಕೆ ತುಂಬಾ ಸ್ಪೆಷಲ್.‌ ಅದು ಯಾಕೆ ಅನ್ನೋದಿಕ್ಕೆ ಈ ವರದಿ ನೋಡಿ…

ನಟ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಇನ್ನೇನು ಕೇಲವೇ ಗಂಟೆಗಳು ಬಾಕಿ ಇದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಅವರು ಅಭಿಮಾನಿಗಳ ಜತೆಗೆ ಅದ್ದೂರಿಯಾಗಿ ಬರ್ತ್‌ ಡೇ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ಅವರು ಅಭಿನಯಿಸಿದ ಸಿನಿಮಾ ತಂಡಗಳು ತಮ್ಮ ನೆಚ್ಚಿನ ನಟನಿಗೆ ಸ್ಪೆಷಲ್‌ ಗಿಫ್ಟ್‌ ನೀಡೋದಿಕ್ಕೆ ರೆಡಿಯಾಗಿವೆ. ಅದಕ್ಕಿಂತ ಸ್ಪೆಷಲ್‌ ಏನಂದ್ರೆ ಈ ಸಲ ಉಪ್ಪಿ ಅವರು ತಮ್ಮ ಹುಟ್ಟು ಹಬ್ಬ ಕೊಡುಗೆಯಾಗಿ ಅಭಿಮಾನಿಗಳಿಗೆ ಡೈರೆಕ್ಷನ್‌ ಗಿಫ್ಟ್‌ ನೀಡುತ್ತಿದ್ದಾರೆ. ಅಂದ್ರೆ ಉಪ್ಪಿ ನಿರ್ದೇಶನದ ಸಿನಿಮಾ ಘೋಷಣೆಯಾಗುವುದು ಕಾತರಿ ಆಗಿದೆ.

ಈಗಾಗಲೇ ನಟ, ನಿರ್ದೇಶಕ ಉಪ್ಪಿ ಅವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆನ್ನೆಲಾದ ಪೋಸ್ಟರ್ ಲೀಕ್ ಆಗಿದೆ. ಇನ್ನು ವಿಶೇಷ ಅಂದ್ರೆ, `ಪಂಗನಾಮದ’ ಸಿಂಬಲ್ ಇರುವ, ನೀನು ಮತ್ತು ನಾನು ಕಥೆಯನ್ನು ಹೇಳುತ್ತಿರುವ ಫಸ್ಟ್ ಲುಕ್ ಪೋಸ್ಟರ್‌ಗೂ ಈಗಾಗಲೇ ದೊಡ್ಡದಾಗಿ ಸದ್ದು ಮಾಡುತ್ತಿರುವುದರ ನಡುವೆಯೇ, ನಟಿ ರಚಿತಾ ರಾಮ್‌ ತಮ್ಮ ಹಣೆಗೆ ಹಣೆಗೆ ನಾಮಹಾಕಿಸಿಕೊಂಡಿರುವ ಪೋಟೋಗೂ ಸಿಂಕ್ ಆಗುತ್ತಿರುವುದು ಭಾರೀ ಕುತೂಹಲ ಹುಟ್ಟುಸಿದೆ. ಅಂದ್ರೆ, ಉಪ್ಪಿ ನಿರ್ದೇಶನದ ಸಿನಿಮಾದಲ್ಲಿ ರಚಿತಾ ರಾಮ್‌ ನಾಯಕಿ ಆಗಿರಬಹುದಾ ಎನುವ ಕ್ಯೂರಿಯಾಸಿಟಿ ಮನೆ ಮಾಡಿದೆ. ಇದೆಲ್ಲದ್ದಕ್ಕೂ ನಾಳಿನ ತಮ್ಮ ಹುಟ್ಟು ಹಬ್ಬದ ದಿನ ಉಪ್ಪಿ ಉತ್ತರ ನೀಡಬಹುದು ಎಂದೇ ನಿರೀಕ್ಷಿಸಲಾಗಿದೆ. ಅದು ಬಿಟ್ಟರೆ, ಉಪ್ಪಿ ಅವರ ಬರ್ತ್‌ ಡೇ ಗೆ ಆರ್.‌ ಚಂದ್ರು ನಿರ್ದೇಶನದ ʼಕಬ್ಜʼ ಚಿತ್ರದ ಗಿಫ್ಟ್‌ ಏನು ಅಂತ.

ಅದಕ್ಕೆ ದೊಡ್ಡ ಕಾರಣವೂ ಇದೆ. ಉಪ್ಪಿ ಸಿನಿಕೆರಿಯರ್‌ ನಲ್ಲಿಯೇ ʼಕಬ್ಜʼ ಒಂದು ಸ್ಪೆಷಲ್‌ ಮೂವೀ. ಬಿಗ್‌ ಬಜೆಟ್‌ ಸಿನಿಮಾ ಹಾಗೆಯೇ ಇದು ಪ್ಯಾನ್‌ ಇಂಡಿಯಾ ಸಿನಿಮಾ ಕೂಡ. ನಿರ್ದೇಶಕ ಆರ್.‌ ಚಂದ್ರು ನಿರ್ದೇಶನದ ಜತೆಗೆ ನಿರ್ಮಾಣದಲ್ಲೂ ಇಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಅದು ಇಡಿಯಾ ಲೆವೆನ್‌ ನಲ್ಲಿಯೇ ಸದ್ದು ಮಾಡಿರುವುದನ್ನು ನೋಡಿದರೆ, ದೊಡ್ಡ ಹವಾ ಸೃಷಿಸುವುದು ಗ್ಯಾರಂಟಿ ಆಗಿದೆ. ಅದೇ ಕಾರಣಕ್ಕೆ ಉಪ್ಪಿ ಬರ್ತ್‌ ಡೇ ಅಂದಾಕ್ಷಣ ಕಬ್ಜ ಸಿನಿಮಾ ತಂಡದ ಸ್ಪೆಷಲ್‌ ಏನು ಅಂತ ಅಭಿಮಾನಿಗಳು ನಿರೀಕ್ಷೆ ಮಾಡುವುದು ಸಹಜ. ಅದೇ ಕಾರಣಕ್ಕೆ ನಿರ್ದೇಶಕ ಆರ್.‌ ಚಂದ್ರು ಅವರು ಚಿತ್ರದ ನಾಯಕ ನಟ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಕಬ್ಜ ಚಿತ್ರದ ಸ್ಪೆಷಲ್‌ ಮೋಷಲ್‌ ಪೋಸ್ಟರ್‌ ಲಾಂಚ್‌ ಮಾಡಲು ರೆಡಿಯಾಗಿದ್ದಾರೆ. ಅದರ ಜತೆಗೆ ಕಬ್ಜ ಚಿತ್ರ ಟೀಸರ್‌ ಲಾಂಚ್‌ ದಿನವನ್ನು ನಿರ್ದೇಶಕ ಆರ್.‌ ಚಂದ್ರು ಅವರು ನಾಳೆಯೇ ಅನೌನ್ಸ್‌ ಮಾಡಲಿದ್ದಾರಂತೆ. ಅದು ಈ ಬಾರಿಯ ಉಪೇಂದ್ರ ಅವರ ಬರ್ತ್‌ ಡೇ ಗೆ ಸ್ಪೆಷಲ್.

ʼ ನಂಗೊತ್ತು ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಕಬ್ಜ ಚಿತ್ರದ ಏನ್‌ ಬರುತ್ತೆ ಅಂತ ಕಾಯುತ್ತಾರೆ ಅನ್ನೋದು ನಂಗೊತ್ತು. ಅದೇ ಕಾರಣಕ್ಕೆ ನಾವೀಗ ಚಿತ್ರದ ನಾಯಕ ನಟ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ನಮ್ಮ ಚಿತ್ರದ ಸ್ಪೆಷಲ್‌ ಮೋಷನ್‌ ಪೋಸ್ಟರ್‌ ಲಾಂಚ್‌ ಮಾಡುತ್ತಿದ್ದೇವೆ. ಈಗಾಗಲೇ ಒಂದೆರೆಡು ಪೋಸ್ಟರ್‌ ಲಾಂಚ್‌ ಮಾಡಿದ್ದೇವೆ. ಆದ್ರೆ ಇದು ತುಂಬಾ ಸ್ಪೆಷಲ್‌ . ಯಾಕಂದ್ರೆ ಚಿತ್ರದ ಸೆಟು. ಟಿಂಟು, ಕಲರು ಒಳಗೊಂಡಂತೆ ಚಿತ್ರದ ಒಟ್ಟಾರೆಯ ಒಂದು ಲುಕು ರಿವೀಲ್‌ ಆಗುವ ಹಾಗೆ ಈ ಪೋಸ್ಟರ್‌ ಇರಲಿದೆ. ಅದರ ಜತೆಗೆ ಚಿತ್ರದ ಟೀಸರ್‌ ಲಾಂಚ್‌ ದಿನಾಂಕವನ್ನು ನಾಳೆಯೇ ನಾವು ಅನೌನ್ಸ್‌ ಮಾಡುತ್ತೇವೆ. ಇದು ಉಪೇಂದ್ರ ಅವರ ಬರ್ತ್‌ ಡೇ ಗೆ ಕಬ್ಜ ಚಿತ್ರದ ತಂಡದಿಂದ ನೀಡುವ ಗಿಫ್ಟ್‌ʼ ಎನ್ನುತ್ತಾರೆ ನಿರ್ದೇಶಕ ಆರ್.‌ ಚಂದ್ರು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ

error: Content is protected !!