Categories
ಸಿನಿ ಸುದ್ದಿ

ಅತ್ಯುತ್ತಮ ನಟಿ ಪ್ರಶಸ್ತಿಗೆ ಹರಿಪ್ರಿಯಾ, ಖುಷಿ, ಮಿಲನಾ, ಯಜ್ಞಾ ಶೆಟ್ಟಿ ಹೆಸರು !

ಸಿನಿಮಾ ಪತ್ರಕರ್ತರೇ ನೀಡುವ ಸ್ಯಾಂಡಲ್‌ವುಡ್‌ನ ಪ್ರತಿಷ್ಟಿತ ʼ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಆಕಾಡೆಮಿʼಯ ವಾರ್ಷಿಕ ಪ್ರಶಸ್ತಿಗೆ ಚಿತ್ರರಂಗ ಸಜ್ಜಾಗಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಪ್ರಶಸ್ತಿ ಪ್ರದಾನ ಸಮಾರಂಭ ವರ್ಣರಂಜಿತವಾಗಿಯೇ ಆಯೋಜನೆ ಗೊಂಡಿದೆ. ಫೆ. 21 ಕ್ಕೆ ಅವಾರ್ಡ್‌ ಪ್ರೋಗ್ರಾಮ್‌ ಫಿಕ್ಸ್‌ ಆಗಿದೆ. ಸದ್ಯಕ್ಕೆ ಜಾಗ ನಿಗದಿ ಆಗಿಲ್ಲ. ಆದರೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶನಿವಾರದಿಂದಲೇ ಚಾಲನೆ ಸಿಕ್ಕಿದೆ. ಬೆಂಗಳೂರಿನ ಎಸ್‌ ಆರ್‌ ವಿ ಮಿನಿ ಚಿತ್ರಮಂದಿರದಲ್ಲಿ ಶನಿವಾರ ಬೆಳಗ್ಗೆ ಟ್ರೋಪಿ ಅನಾವರಣ ಕಾರ್ಯಕ್ರಮ ನಡೆಯಿತು.

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಹಾಗೂ ‘ಟಗರುಪುಟ್ಟಿ ‘ ಅಂತಲೇ ಜನಪ್ರತಿಯತೆ ಪಡೆದ ನಟಿ ಮಾನ್ವಿತಾ ಕಾಮತ್‌ ಟ್ರೋಪಿ ಅನಾವರಣಗೊಳಿಸುವ ಮೂಲಕ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಈ ಪ್ರಸಕ್ತ ಸಾಲಿನ ಕ್ರಿಟಿಕ್ಸ್‌ ಅವಾರ್ಡ್‌ ಗೆ ವಿವಿಧ ೨೦ವಿಭಾಗಗಳಲ್ಲಿ ನಾಮಿನೇಟೆಡ್‌ ಆದ ಸಿನಿಮಾ, ನಟ-ನಟಿಯರು, ಪೋಷಕ ಕಲಾವಿದರು. ನೃತ್ಯ ನಿರ್ದೇಶಕರು, ಸ್ಟಂಟ್‌ ಮಾಸ್ಟರ್‌, ಗಾಯಕರು ಸೇರಿದಂತೆ ಎಲ್ಲಾ ವಿಭಾಗಗಳ ವಿವರ ಪ್ರಕಟಿಸಲಾಯಿತು.


ವಿಶೇಷವಾಗಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ಪ್ರಶಸ್ತಿಗೆ ಪೈಪೋಟಿಯಲ್ಲಿರುವವರ ವಿವರ ಕೂಡ ರೀವಿಲ್‌ ಆಯಿತು. ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಕ್ಟ್‌ 1978 , ದಿಯಾ, ಜಂಟಲ್‌ ಮನ್‌, ಲವ್‌ ಮಾಕ್ಟೆಲ್‌ ಹಾಗೂ ನಾನು ಮತ್ತು ಗುಂಡ ಚಿತ್ರಗಳಿವೆ. ಹಾಗೆಯೇ ಅತ್ಯುತ್ತಮ ನಟಿ ಪ್ರಶಸ್ತಿಗೆ ಹರಿಪ್ರಿಯಾ, ಖುಷಿ ರವಿ, ಮಿಲನಾ ನಾಗರಾಜ್‌ ಹಾಗೂ ಯಜ್ಫಾ ಶೆಟ್ಟಿ ಇದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಗೆ ಡಾಲಿ ಧನಂಜಯ್‌, ಕೃಷ್ಣ, ಪ್ರಜ್ವಲ್‌ ದೇವರಾಜ್‌, ಪೃಥ್ವಿ ಅಂಬರ್‌ ಮತ್ತು ರಮೇಶ್‌ ಅರವಿಂದ್‌ ನಾಮಿನೇಟೆಡ್‌ ಆಗಿದ್ದಾರೆ. ಕಳೆದ ಭಾರಿಗಿಂತ ಈ ಬಾರಿ ಅಂದರೆ 2020 ರಲ್ಲಿ ರಿಲೀಸ್‌ ಆದ ಸಿನಿಮಾಗಳ ಸಂಖ್ಯೆ ಕಮ್ಮಿ. ಅಷ್ಟಾಗಿಯೂ ಒಳ್ಳೆಯ ಚಿತ್ರಗಳೇ ಇದ್ದು, ಪ್ರಶಸ್ತಿ ಆಯ್ಕೆ ಎಲ್ಲಾ ವಿಭಾಗಗಳಲ್ಲು ಕುತೂಹಲಕಾರಿ ಆಗಿದೆ.


ಟ್ರೋಪಿ ಅನಾವರಣ ಗೊಳಿಸಿದ ನಂತರ ನಟಿ ಮಾನ್ವಿತಾ ಕಾಮತ್, ಕ್ರಿಟಿಕ್‌ ಅವಾರ್ಡ್‌ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪತ್ರಕರ್ತರು ಒಂದು ಅವಾರ್ಡ್ ಕೊಡ್ತಾರೆ ಅಂದ್ರೆ ಅಲ್ಲಿ ಪ್ರಾಮಾಣಿಕ ಪ್ರಯತ್ನ ಇರುತ್ತೆ, ಅದ್ಯಾವ ಸಿನಿಮಾವನ್ನು ಆದ್ರೂ , ಪ್ರಾಮಾಣಿಕ ಪ್ರಯತ್ನದಿಂದ ವಿವರ್ಶಿಸುತ್ತಾರೆ ಎಂದರು. ಹಾಗೆಯೇ ನಟ ಸಂಚಾರಿ ವಿಜಯ್‌ ಮಾತನಾಡಿ, ಪ್ರಶಸ್ತಿಗಳು, ಹಣ, ಜನಮನ್ನಣೆ ತಂದುಕೊಡಲ್ಲ. ನಿಜವಾದ ಪ್ರತಿಭೆಗಳನ್ನು ಗುರುತಿಸುವುದರಿಂದ ನಮ್ಮಲ್ಲೂ ಆತ್ಮವಿಶ್ವಾಸ ಮೂಡಿಸುತ್ತದೆ ಎಂದರು. ಈ ಸಂದರ್ಭದಲ್ಲಿ ʼಸಿನಿಲಹರಿʼ ವೆಬ್‌ ಸೈಟ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಸಿಇಓ ಕೃಷ್ಣ ಪಿ ಮತ್ತು ಮೂವೀ ಬಜಾರ್‌ ಮುಖ್ಯಸ್ಥ ನವರಸನ್‌ ಹಾಜರಿದ್ದರು. ” ಚಂದನವನ ಫಿಲ್ನ್‌ ಕ್ರಿಟಿಕ್ಸ್‌ ಎಲ್ಲಾ ಪ್ರಯತ್ನಕ್ಕೂ ಸಿನಿಲಹರಿ ಬೆಂಬಲ ಇರಲಿದ್ದು, ಇದು ಇನ್ನು ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು’ ಸಿನಿ ಲಹರಿ ‘ಸಿಇಓ ಕೃಷ್ಣ ಹೇಳಿದರು. ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಪರವಾಗಿ ನಿರ್ದೇಶಕರಾದ ಶರಣು ಹುಲ್ಲೂರು ಕಾರ್ಯಕ್ರಮದ ರೂಪುರೇಷೆಗಳ ಜತೆಗೆ ಪ್ರಶಸ್ತಿಗೆ ನಾಮಿನೇಟೆಡ್‌ ಆದವರ ವಿವರ ನೀಡಿದರು.

Categories
ಸಿನಿ ಸುದ್ದಿ

ಮೀರಾ ನಾಯರ್‌ ಮಿಸಿಸಿಪ್ಪಿ ಮಸಾಲಾ ರೀರಿಲೀಸ್‌


ಭಾರತದ ಪ್ರಮುಖ ಚಿತ್ರ ನಿರ್ದೇಶಕರಲ್ಲೊಬ್ಬರಾದ ಮೀರಾ ನಾಯರ್ ಅವರ ‘ ಮಿಸಿಸಿಪ್ಪಿ ಮಸಾಲಾ’ ಇಂಗ್ಲಿಷ್ ಸಿನಿಮಾ 1991ರ ಸೆಪ್ಟೆಂಬರ್‌ನಲ್ಲಿ ತೆರೆಕಂಡಿತ್ತು. ಚಿತ್ರ ತೆರೆಕಂಡು 2021ಕ್ಕೆ ಮೂವತ್ತು ವರ್ಷ. ಈ ರೊಮ್ಯಾಂಟಿಕ್ – ಡ್ರಾಮಾ ಚಿತ್ರದೊಂದಿಗೆ ಹಾಲಿವುಡ್‌ನಲ್ಲೂ ಮೀರಾ ಸದ್ದು ಮಾಡಿದ್ದರು. ಇದರ ಸವಿನೆನಪಿಗಾಗಿ ಚಿತ್ರದ ರೀಮಾಸ್ಟರ್ಡ್‌ ಅವತರಣಿಕೆ ಬಿಡುಗಡೆ ಮಾಡುವ ಯೋಜನೆ ಮೀರಾ ನಾಯರ್ ಅವರದು.

ಅಮೆರಿಕದ ಮಿಸಿಸಿಪ್ಪಿಯ ಗ್ರಾಮೀಣ ಭಾಗದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದ್ದ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಡೆನ್ಝಲ್ ವಾಷಿಂಗ್ಟನ್‌ ಮತ್ತು ಸರಿತಾ ಚೌಧರಿ ನಟಿಸಿದ್ದರು. ಆಫ್ರಿಕ-ಅಮೆರಿಕದ ಯುವಕ ಮತ್ತು ಭಾರತ-ಅಮೆರಿಕದ ಯುವತಿಯ ನಡುವಿನ ರೊಮ್ಯಾಂಟಿಕ್ ಪ್ರೇಮ ಕಥಾನಕವಿದು. ಶರ್ಮಿಳಾ ಟ್ಯಾಗೂರ್, ರೋಷನ್ ಸೇಠ್‌ ಮತ್ತು ಮೋಹನ್ ಅಗಾಸ್ಸೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


ವಿಶ್ಲೇಷಕರು ಮತ್ತು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿನಿಮಾ ವೆನಿಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿತ್ತು. ಸನ್‌ಡ್ಯಾನ್ಸ್ ಚಿತ್ರೋತ್ಸವದಲ್ಲಿ ಪ್ರೇಕ್ಷಕರು ಚಿತ್ರವೀಕ್ಷಣೆಯ ನಂತರ ಸ್ಟ್ಯಾಂಡಿಂಗ್ ಓವಿಯೇಷನ್‌ ಕೊಟ್ಟಿದ್ದರು. ಈ ಚಿತ್ರದೊಂದಿಗೆ ಮೀರಾ ನಾಯರ್‌ ಅವರು ತಮ್ಮ ನಿರ್ದೇಶನದ ‘ಸಲಾಂ ಬಾಂಬೆ’, ‘ದಿ ನೇಮ್‌ಸೇಕ್‌’, ‘ಕ್ವೀನ್ ಆಫ್ ಕಾಟ್ವೆ’ ಚಿತ್ರಗಳೊಂದಿಗೂ ಪ್ರೇಕ್ಷಕರಿಗೆ ನೆನಪಾಗುತ್ತಾರೆ. ಇತ್ತೀಚೆಗೆ ಮೀರಾ ಅವರು ವಿಕ್ರಂ ಸೇಠ್‌ ಕೃತಿ ‘ಎ ಸೂಟಬಲ್ ಬಾಯ್‌’ ಆಧರಸಿ ಸರಣಿ ರೂಪಿಸಿದ್ದರು.

Categories
ಸಿನಿ ಸುದ್ದಿ

ಸಾಹಿರ್‌ ಬಯೋಪಿಕ್‌ನಲ್ಲಿ ಶಾರುಖ್‌?


ಎಂಟು ವರ್ಷದ ಹಿಂದಿನ ಮಾತು. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಖ್ಯಾತ ಕವಿ, ಚಿತ್ರಸಾಹಿತಿ ಸಾಹಿರ್ ಲುಧಿಯಾನ್ವಿ ಬಯೋಪಿಕ್ ಮಾಡುವುದಾಗಿ ಹೇಳಿದ್ದರು. ಸಾಹಿರ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ಇಲ್ಲವೇ ಇರ್ಫಾನ್ ಖಾನ್‌ ನಟಿಸಲಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ಯೋಜನೆ ಕೈಗೂಡಲಿಲ್ಲ. ಇದೀಗ ಮತ್ತೆ ಸಾಹಿರ್ ಬಯೋಪಿಕ್‌ ಕುರಿತಂತೆ ಸುದ್ದಿ ಬಂದಿದೆ. ಬಾಲಿವುಡ್‌ ಚಿತ್ರಕಥೆಗಾರ್ತಿ ಜಸ್ಮೀತ್ ರೀನ್‌ ಈ ಪ್ರಾಜೆಕ್ಟ್ ಬಗ್ಗೆ ಅತೀವ ಆಸಕ್ತಿಯಿಂದ ಓಡಾಡುತ್ತಿದ್ದಾರೆ. ನಟ ಶಾರುಖ್ ಖಾನ್‌ ಚಿತ್ರ ನಿರ್ಮಿಸಿ, ಶೀರ್ಷಿಕೆ ಪಾತ್ರದಲ್ಲಿ ನಟಿಸುವ ದಟ್ಟ ವದಂತಿಯಿದೆ.


ಬನ್ಸಾಲಿ ನಂತರ ಬಾಲಿವುಡ್ ನಿರ್ಮಾಪಕಿ ಆಶಿ ದುವಾ ಅವರು ಸಾಹಿರ್ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆಗ ಸಾಹಿರ್ ಪಾತ್ರಕ್ಕೆ ನಟರಾದ ಪರ್ಹನ್ ಅಖ್ತರ್‌, ಇರ್ಫಾನ್ ಖಾನ್ ಹೆಸರುಗಳು ಪ್ರಸ್ತಾಪವಾಗಿದ್ದವು. ಅಷ್ಟೇ ಅಲ್ಲ ಸಾಹಿರ್‌ ಅವರ ಆತ್ಮೀಯ ಸಂಗಾತಿ ಎಂದು ಕರೆಸಿಕೊಂಡಿದ್ದ ಕವಯಿತ್ರಿ ಅಮೃತಾ ಪ್ರೀತಂ ಪಾತ್ರದ ಬಗ್ಗೆಯೂ ಚರ್ಚೆ ನಡೆದಿತ್ತು.

ಈ ಪಾತ್ರಕ್ಕೆ ಪ್ರಿಯಾಂಕಾ ಚೋಪ್ರಾ, ತಾಪ್ಸಿ, ಕರೀನಾ ಕಪೂರ್ ಹೆಸರುಗಳು ಕೇಳಿಬಂದಿದ್ದವು. ಆಗಲೂ ಸಿನಿಮಾ ಸೆಟ್ಟೇರಲಿಲ್ಲ. ಇದೀಗ ಶಾರುಖ್ ನಿರ್ಮಾಣದಲ್ಲಿ ಸಿನಿಮಾ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇಂಥದ್ದೊಂದು ಪಾತ್ರ ನಿರ್ವಹಿಸಲು ಶಾರುಖ್ ಉತ್ಸುಕರಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

Categories
ಸಿನಿ ಸುದ್ದಿ

ಸಿಲ್ಕ್‌ಸ್ಮಿತಾ ಪಾತ್ರದಲ್ಲಿ ಶ್ರೀರೆಡ್ಡಿ! ತೆಲುಗು, ತಮಿಳಿನಲ್ಲಿ ತಯಾರಾಗಲಿದೆ ಸಿನಿಮಾ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಸಿಲ್ಕ್‌ಸ್ಮಿತಾ ಸಿನಿಮಾ – ಬದುಕು ಆಧರಿಸಿ ‘ದಿ ಡರ್ಟಿ ಪಿಕ್ಚರ್‌’ ಹಿಂದಿ ಚಿತ್ರ ತಯಾರಾಗಿತ್ತು. ಸಿಲ್ಮ್ ಸ್ಮಿತಾ ಪಾತ್ರದಲ್ಲಿ ನಟಿಸಿದ್ದ ವಿದ್ಯಾ ಬಾಲನ್ ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ಸಿಲ್ಕ್‌ ಸ್ಮಿತಾ ಕುರಿತಂತೆ ಮತ್ತೊಮ್ಮೆ ಸಿನಿಮಾ ಸೆಟ್ಟೇರುತ್ತಿದೆ. ತೆಲುಗು ಚಿತ್ರರಂಗದ ವಿವಾದಿತ ನಟಿ ಶ್ರೀರೆಡ್ಡಿ ಶೀರ್ಷಿಕೆ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವುದು ವಿಶೇಷ!

ಶ್ರೀರೆಡ್ಡಿ ನಟಿಸಲಿರುವ ಬಯೋಪಿಕ್‌ಗೆ ಶೀರ್ಷಿಕೆಯಿನ್ನೂ ನಿಗಧಿಯಾಗಿಲ್ಲ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗಲಿರುವ ಚಿತ್ರವನ್ನು ಮಧು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಕುರಿತು ಶ್ರೀರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿಬಿಟ್ಟಿದ್ದು, ಅದು ಸಖತ್ ವೈರಲ್ ಆಗಿದೆ. ಕಳೆದ ವರ್ಷ ನಟಿ ಶ್ರೀರೆಡ್ಡಿ ತೆಲುಗು, ತಮಿಳು ಚಿತ್ರರಂಗದಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಸಂಬಂಧ ಅಲ್ಲಿ ಸಿನಿಮಾ ವಾಣಿಜ್ಯ ಮಂಡಳಿ ಎದುರು ಧರಣಿ ಕುಳಿತು ಪ್ರತಿಭಟಿಸಿ ಸುದ್ದಿಯಾಗಿದ್ದರು. ಈಗ ಸಿಲ್ಮ್ ಸ್ಮಿತಾ ಸಿನಿಮಾ ಘೋಷಿಸಿದ್ದು, ಇದು ಕೂಡ ಪ್ರಚಾರದ ಗಿಮಿಕ್ ಎಂದು ಅಲ್ಲಿನ ಉದ್ಯಮದವರು ಮಾತನಾಡಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ದೀಪಿಕಾ ದಿ ವಿಲನ್! ‘ಧೂಮ್‌ 4’ನ ವಿಶಿಷ್ಟ ಪಾತ್ರದಲ್ಲಿ ಪಡುಕೋಣೆ ಬೆಡಗಿ!

‘ಧೂಮ್‌’ ಸರಣಿಯ ನಾಲ್ಕನೇ ಸಿನಿಮಾಗೆ ತಯಾರಿ ನಡೆದಿದೆ. ಈ ಬಾರಿ ಚಿತ್ರದಲ್ಲಿ ಲೇಡಿ ವಿಲನ್ ಪರಿಚಯಿಸುವುದು ಚಿತ್ರತಂಡದ ಯೋಜನೆ. ಇದಕ್ಕೆ ಖಡಕ್ಕಾದ, ಜನಪ್ರಿಯ ನಟಿಯೇ ಆಗಬೇಕು. ಹಾಗಾಗಿ ಚಿತ್ರತಂಡ ನಟಿ ದೀಪಿಕಾ ಪಡುಕೋಣೆ ಅವರನ್ನು ಪಾತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದೆ. ವೃತ್ತಿಜೀವನದಲ್ಲಿ ಮೊದಲ ಬಾರಿ ಇಂಥದ್ದೊಂದು ಪಾತ್ರದ ಅವಕಾಶ ದೀಪಿಕಾ ಪಾಲಿಗೆ ಬಂದಿದ್ದು, ಬಹುತೇಕ ಅವರು ಓಕೆ ಎನ್ನುವ ಸಾಧ್ಯತೆಗಳಿವೆ. ಈ ಪಾತ್ರಕ್ಕಾಗಿ ನಟಿ ಮಾನಸಿಕವಾಗಿ ಸಿದ್ಧತೆ ನಡೆಸುತ್ತಿದ್ದಾರೆ.

‘ಧೂಮ್‌’ ಸಿನಿಮಾ ಚೇಸಿಂಗ್ ದೃಶ್ಯಗಳು ಮತ್ತು ಆಕ್ಷನ್‌ಗೆ ಬ್ರ್ಯಾಂಡ್ ಆಗಿದೆ. ಅಭಿಷೇಕ್ ಬಚ್ಚನ್ ಮತ್ತು ಉದಯ್ ಚೋಪ್ರಾ ಹಿಂದಿನ ಎಲ್ಲಾ ಮೂರು ಸರಣಿಗಳಲ್ಲಿ ನಟಿಸಿದ್ದರು. ಇವರ ಜೊತೆ ಮೊದಲ ಚಿತ್ರದಲ್ಲಿ ಜಾನ್ ಅಬ್ರಹಾಂ, ಎರಡನೇ ಸರಣಿಯಲ್ಲಿ ಹೃತಿಕ್ ರೋಷನ್ ಮತ್ತು ಮೂರನೇ ಸರಣಿಯಲ್ಲಿ ಅಮೀರ್ ಖಾನ್ ನಟಿಸಿದ್ದರು. ಇದೀಗ ಸರಣಿಯ ನಾಲ್ಕನೇ ಪ್ರಯೋಗಕ್ಕೆ ದೀಪಿಕಾರನ್ನು ಲೇಡಿ ವಿಲನ್‌ರನ್ನಾಗಿ ಪರಿಚಯಿಸುವುದು ತಂಡದ ಉದ್ದೇಶ.

ಸದ್ಯ ದೀಪಿಕಾ ಅವರು ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್‌’ ಚಿತ್ರದಲ್ಲಿ ಶಾರುಖ್ ಜೋಡಿಯಾಗಿ ನಟಿಸುತ್ತಿದ್ದಾರೆ. ಇದಲ್ಲದೆ ಶಕುನ್ ಬಾತ್ರಾ ನಿರ್ದೇಶನದ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅನನ್ಯ ಪಾಂಡೆ ಮತ್ತು ಸಿದ್ಧಾರ್ಥ್ ಚತುರ್ವೇದಿ ಈ ಚಿತ್ರದ ಇತರೆ ಪಾತ್ರಧಾರಿಗಳು. ಇದಲ್ಲದೆ ತಾರಾಪತಿ ರಣವೀರ್ ಸಿಂಗ್‌ಗೆ ’83’ ಚಿತ್ರದಲ್ಲಿ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ದೋಬಾರಾ’ ಥ್ರಿಲ್ಲರ್‌ನಲ್ಲಿ ತಾಪ್ಸಿ, ಟೀಸರ್ ಮೂಲಕ ಸಿನಿಮಾ ಘೋಷಣೆ!

ಅನುರಾಗ್ ಕಶ್ಯಪ್ ನಿರ್ದೇಶನದ ‘ದೋಬಾರಾ’ ಹಿಂದಿ ಚಿತ್ರದಲ್ಲಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ತಾಪ್ಸಿಗೆ ಕಶ್ಯಪ್‌ ಜೊತೆ ಇದು ಮೂರನೇ ಪ್ರಯೋಗ. ಇದು ‘ನ್ಯೂ ಏಜ್ ಥ್ರಿಲ್ಲರ್‌’ ಸಿನಿಮಾ ಎಂದಿರುವ ಕಶ್ಯಪ್‌ ಆಕರ್ಷಕ ಟೀಸರ್‌ನೊಂದಿಗೆ ಸಿನಿಮಾ ಘೋಷಿಸಿರುವುದು ವಿಶೇಷ. ಟೀಸರ್‌ನಲ್ಲಿ, ಹೊರಗಿನಿಂದ ಮನೆಗೆ ಬರುವ ತಾಪ್ಸಿ ಏನಾದರೂ ವಿಶೇಷವಾಗಿದ್ದನ್ನು ಪ್ಲೇ ಮಾಡುವಂತೆ ‘ಅಲೆಕ್ಸಾ’ಗೆ ಹೇಳುತ್ತಾರೆ. ಟೀವಿಯಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಕಾಣಿಸುತ್ತಾರೆ!

“ನೀವೇಕೆ ನನ್ ಟೀವೀಲಿ ಬಂದಿದ್ದೀರಿ?” ಎನ್ನುತ್ತಾರೆ ತಾಪ್ಸಿ. “ಏನಾದರೂ ವಿಶೇಷವಾಗಿರೋದು ಪ್ಲೇ ಮಾಡೋಕೆ ಹೇಳಿದ್ಯಲ್ಲ, ಅದಕ್ಕೆ ನಾನು ಬಂದಿದ್ದೇನೆ. ನಿನ್ನಲ್ಲಿ ಸ್ಕ್ರಿಪ್ಟ್ ಇದೆ ನೋಡು” ಎನ್ನುತ್ತಾರೆ ಕಶ್ಯಪ್‌. ಸ್ಕ್ರಿಪ್ಟ್‌ ಮೇಲೆ ಕಣ್ಣಾಡಿಸುವ ತಾಪ್ಸಿ, “ಚಿತ್ರದ ಶೀರ್ಷಿಕೆ ಏನು?” ಎಂದು ಕೇಳುತ್ತಾರೆ. ‘ಈಗ ಟೈಂ ಎಷ್ಟು?’ ಎನ್ನುವ ಕಶ್ಯಪ್ ಪ್ರಶ್ನೆ ತಾಪ್ಸಿಗೆ ಅಚ್ಚರಿ ಮೂಡಿಸುತ್ತದೆ. “ಈಗ ಗಡಿಯಾರ ತೋರಿಸುತ್ತಿರುವ ಸಮಯವೇ ಚಿತ್ರದ ಶೀರ್ಷಿಕೆ” ಎಂದು ಕಶ್ಯಪ್ ಹೇಳುತ್ತಲೇ ತಾಪ್ಸಿ ವಾಚ್ ನೋಡುತ್ತಾರೆ. ‘ದೋ ಬಾರಾ’ ಎಂದು ಉದ್ಘರಿಸುತ್ತಾರೆ ಆಕೆ!

2018ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ‘ಮನ್‌ಮರ್ಝಿಯಾ’ ಚಿತ್ರದಲ್ಲಿ ನಟಿಸಿದ್ದರು ತಾಪ್ಸಿ. “ಇದೊಂದು ವಿಶಿಷ್ಠ ಥ್ರಿಲ್ಲರ್ ಸಿನಿಮಾ ಆಗಲಿದೆ. ಇಲ್ಲಿಯವರೆಗೆ ನಾನು ನಟಿಸಿರುವ ಥ್ರಿಲ್ಲರ್ ಚಿತ್ರಗಳ ಪಟ್ಟಿಗೆ ಇದೊಂದು ಮಹತ್ವದ ಪ್ರಯೋಗವಾಗಿ ಸೇರ್ಪಡೆಯಾಗಲಿದೆ” ಎನ್ನುತ್ತಾರೆ ತಾಪ್ಸಿ. ಇನ್ನು ನಿರ್ದೇಶಕ ಕಶ್ಯಪ್ ಚಿತ್ರದ ಬಗ್ಗೆ ಹೇಳುತ್ತಾ, “ಥ್ರಿಲ್ಲರ್ ಮಾದರಿಯಲ್ಲಿ ಇದೊಂದು ತಾಜಾ ಪ್ರಯೋಗವಾಗಿರಲಿದೆ” ಎಂದಿದ್ದಾರೆ. ಏಕ್ತಾ ಕಪೂರ್ ಮತ್ತಿಬ್ಬರ ಸಹಯೋಗದೊಂದಿಗೆ ಚಿತ್ರ ನಿರ್ಮಿಸುತ್ತಿದ್ದಾರೆ.

https://youtu.be/50fZA_XeTiE

Categories
ಸಿನಿ ಸುದ್ದಿ

ಚಾರಿಟೇಬಲ್‌ ಸೊಸೈಟಿ ಕೆಲಸಕ್ಕೆ ಕಿಚ್ಚ ಮೆಚ್ಚುಗೆ- ಫೆ.14ಕ್ಕೆ ವಿಶೇಷ ಕಾರ್ಯ

ಕಿಚ್ಚ ಸುದೀಪ್‌ ಅವರ ಆಪ್ತರು, ಅಭಿಮಾನಿಗಳು, ಸ್ನೇಹಿತರು “ಕಿಚ್ಚ ಸುದೀಪ ಚಾರಿಟೇಬಲ್‌ ಸೊಸೈಟಿ” ಶುರುಮಾಡಿದ್ದು ಗೊತ್ತೇ ಇದೆ. ಈ ಮೂಲಕ ಹಲವು ಸಾಮಾಜಿಕ ಕಾರ್ಯಗಳೂ ನಡೆದಿವೆ. ಈ ಸೊಸೈಟಿಗೆ ಅವರ ಅಭಿಮಾನಿಗಳೂ ಸಾಥ್‌ ನೀಡುತ್ತಿದ್ದಾರೆ. ಈಗ ಈ “ಕಿಚ್ಚ ಸುದೀಪ ಚಾರಿಟೇಬಲ್‌ ಸೊಸೈಟಿ”ಗೆ ನಾಲ್ಕು ವರ್ಷ ಪೂರೈಸಿದೆ. ಹೌದು, ಸುದೀಪ್ ಅವರ ಗೆಳೆಯರು, ಅಭಿಮಾನಿಗಳು “ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ” ಮಾಡಿದ್ದು, ಇದಕ್ಕೆ ಅಭಿನಯ ಚಕ್ರವರ್ತಿ ಮಾರ್ಗದರ್ಶಕರಾಗಿದ್ದಾರೆ. ಈ ಮೂಲಕ ಅಶಕ್ತರಿಗೆ, ಬಡ ವಿದ್ಯಾರ್ಥಿಗಳಿಗೆ, ವಿಕಲಚೇತನರಿಗೆ ಸಹಾಯ ಮಾಡಲಾಗುತ್ತಿದೆ. ಹಲವರಿಗೆ ಚಿಕಿತ್ಸೆಗೆ ನೆರವಾಗಿದೆ.


ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಗೆ ನಾಲ್ಕು ವರ್ಷ ತುಂಬಿದೆ. ಕಳೆದ ನಾಲ್ಕು ವರ್ಷದಿಂದಲೂ ಹಲವಾರು ಸಾಮಾಜಿಕ ಕೆಲಸ ಮಾಡುತ್ತಿರುವ ಈ ಸೊಸೈಟಿಗೆ ನಾಲ್ಕು ವರ್ಷ ತಂಬಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 14 ರಂದು ಒಂದಷ್ಟು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬೀದಿ ಬದಿಯಲ್ಲಿ ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ತುತ್ತು ಅನ್ನ, ನೀರಿನ ವ್ಯವಸ್ಥೆ, ಪಂಜರದಲ್ಲಿ ಬಂಧಿಯಾಗಿರುವ ಪಕ್ಷಿಗಳನ್ನು ಬಿಡುಗಡೆಗೊಳಿಸುವ ಕೆಲಸ, ಗೋಶಾಲೆಗೆ ಭೇಟಿ ನೀಡಿ ಅಲ್ಲೂ ಮೇವು ಇತ್ಯಾದಿ ವವಸ್ಥೆ ಮಾಡುವ ಬಗ್ಗೆ ಚಾರಿಟೇಬಲ್ ಸೊಸೈಟಿ ನಿರ್ಧರಿಸಿದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಲಾಗುತ್ತಿದೆ.

ಆದರೆ, ಅಂದು ಪುಲ್ವಾಮ ದಾಳಿಯಲ್ಲಿ ದೇಶದ ಅನೇಕ ಸೈನಿಕರು ಹುತಾತ್ಮರಾದ ದಿನ. ಹಾಗಾಗಿ ಆ ನಮ್ಮ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಚಾರಿಟೇಬಲ್ ಸೊಸೈಟಿ ಹೇಳಿಕೊಂಡಿದೆ. ಈ ಬಗ್ಗೆ ಸ್ವತಃ ಸುದೀಪ್‌ ಅವರು ಚಾರಿಟೇಬಲ್ ಸೊಸೈಟಿಯ ಮಹತ್ವದ ಕೆಲಸಗಳ ಬಗ್ಗೆ ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಒಂದು ತುತ್ತು ಒಂದು ಜೀವವನ್ನ ಉಳಸೋದಾದ್ರೆ ಅ ಮೊದಲ ತುತ್ತು ನನ್ನದಾಗಲಿ” ಎಂದಿದ್ದಾರೆ.

Categories
ಸಿನಿ ಸುದ್ದಿ

ನಟ ಸತ್ಯಜಿತ್‌ ಮೇಲೆ ಮಗಳಿಂದಲೇ ದೂರು! ಮಾನಸಿಕ ಕಿರುಕುಳ, ಬೆದರಿಕೆ ಆರೋಪ


ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ವಿರುದ್ಧ ಅವರ ಪುತ್ರಿ ಅಖ್ತರ್ ಸ್ವಲೇಹಾ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಣ ಕೊಡುವಂತೆ ತಂದೆ ಕಿರುಕುಳ ಕೊಡುತ್ತಿದ್ದಾರೆ, ರೌಡಿಗಳನ್ನು ಬಿಟ್ಟು ಹೆದರಿಸುತ್ತಿದ್ದಾರೆ ಎನ್ನುವುದು ಅವರ ದೂರು.  ಸ್ವಲೇಹಾ ಪ್ರತಿಷ್ಠಿತ ಏರ್‌ಲೈನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. “ಪ್ರತೀ ತಿಂಗಳು ತಂದೆಗೆ ನಾನು ಒಂದು ಲಕ್ಷ ರೂಪಾಯಿ ಕೊಡುತ್ತಿದ್ದೆ. ನಾನೀಗ ತುಂಬು ಗರ್ಭಿಣಿಯಾದ್ದರಿಂದ ಕೆಲಸ ತೊರೆದಿದ್ದೇನೆ. ಅಲ್ಲದೆ ನನಗೆ ಕೌಟುಂಬಿಕ ಜವಾಬ್ದಾರಿಗಳು ಇರುವುದರಿಂದ ಹಣ ಕೊಡಲು ಸಾಧ್ಯವಾಗುತ್ತಿಲ್ಲ. ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಅವರು ನನಗೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಈ ವಿಚಾರವಾಗಿ ಮಾನಸಿಕ ಕಿರುಕುಳ ಕೊಡುತ್ತಿದ್ದು, ರೌಡಿಗಳಿಂದಲೂ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಸ್ವಲೇಹಾ ದೂರು ದಾಖಲಿಸಿದ್ದಾರೆ.

ಸತ್ಯಜಿತ್‌ ಕಳೆದ ಮೂರು ವರ್ಷಗಳ ಹಿಂದೆ ಗ್ಯಾಂಗ್ರಿನ್‌ನಿಂದಾಗಿ ಕಾಲು ಕಳೆದುಕೊಂಡಿದ್ದು ಸಂಕಷ್ಟಕ್ಕೀಡಾಗಿದ್ದರು. ಈ ಸಂದರ್ಭದಲ್ಲಿ ಚಿತ್ರರಂಗದ ಕೆಲ ಹಿರಿಯರು ಅವರಿಗೆ ನೆರವಾಗಿದ್ದಿದೆ. ಇದೀಗ ಕೌಟುಂಬಿಕ ಕಾರಣಕ್ಕಾಗಿ ಸತ್ಯಜಿತ್ ಸುದ್ದಿಯಲ್ಲಿದ್ದಾರೆ. ಪುತ್ರಿಯ ದೂರಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸತ್ಯಜಿತ್‌, ಇದು ಸಂಪೂರ್ಣ ಸತ್ಯವಲ್ಲ ಎಂದಿದ್ದಾರೆ. ಹುಬ್ಬಳ್ಳಿ ಮೂಲದ ಸತ್ಯಜಿತ್‌ ಅವರ ಜನ್ಮನಾಮ ನಿಜಾಮುದ್ದೀನ್ ಸೈಯದ್. ಕೆಎಸ್‍ಆರ್‍ಟಿಸಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರಿಗೆ ಆಗ ನಟನೆ ಪ್ರವೃತ್ತಿಯಾಗಿತ್ತು. ಹುಬ್ಬಳ್ಳಿಯ ಹವ್ಯಾಸಿ ರಂಗತಂಡವೊಂದರ ಸಕ್ರಿಯ ಸದಸ್ಯರಾಗಿ ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಒಮ್ಮೆ ನಾಟಕ ಪ್ರದರ್ಶನಕ್ಕೆಂದು ತಂಡದೊಂದಿಗೆ ಮುಂಬೈಗೆ ಹೋಗಿದ್ದರು ಸೈಯದ್. ಅಲ್ಲಿ ಸಿನಿಮಾ ತಂತ್ರಜ್ಞರೊಬ್ಬರ ಕಣ್ಣಿಗೆ ಬಿದ್ದದ್ದೇ ಅವರ ಬದುಕಿಗೆ ತಿರುವು ಸಿಕ್ಕಿತು. ನಾನಾ ಪಾಟೇಕರ್ ಹೀರೋ ಆಗಿದ್ದ `ಅಂಕುಶ್’ ಹಿಂದಿ ಚಿತ್ರದಲ್ಲಿ ನಟಿಸುವ ಅವಕಾಶ ಅವರದಾಯಿತು. ಈ ಚಿತ್ರದ ಟೈಟಲ್ ಕಾರ್ಡ್‍ನಲ್ಲೇ ಅವರ ಹೆಸರು `ಸತ್ಯಜಿತ್’ ಎಂದು ಬದಲಾದದ್ದು. ಹಿಂದಿ ಚಿತ್ರದ ನಂತರ ಸತ್ಯಜಿತ್‍ಗೆ ಕನ್ನಡ ಸಿನಿಮಾಗಳಲ್ಲೂ ಅವಕಾಶಗಳು ಹುಡುಕಿಕೊಂಡು ಬಂದವು. ಕನ್ನಡ ಚಿತ್ರರಂಗದ ಪ್ರಮುಖ ಖಳನಾಯಕ, ಪೋಷಕ ನಟನಾಗಿ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಕಿಚ್ಚ ಸ್ವಾಮಿ! ಬಿಗ್‌ಬಾಸ್‌ ಭವಿಷ್ಯ ಹೇಳೋಕೆ ಸ್ವಾಮಿ ಗೆಟಪ್‌ನಲ್ಲಿ ಬಂದ್ರು


– ಇಲ್ಲಿರುವ ಫೋಟೋ ನೋಡಿದವರಿಗೆ ಒಂದು ರೀತಿ ಅಚ್ಚರಿಯಾಗಬಹುದು, ಹೊಸ ಸಿನಿಮಾದಲ್ಲೇನಾದರೂ ಪಾತ್ರ ಮಾಡುತ್ತಿದ್ದಾರಾ ಅಂತಾನೂ ಅನಿಸಬಹುದು. ಆದರೆ, ಸಿನಿಮಾ ವಿಷಯವಲ್ಲ. ಅವರು ಯಾವುದೋ ಸಿನಿಮಾದಲ್ಲಿ ಸ್ವಾಮೀಜಿ ಪಾತ್ರ ಮಾಡುತ್ತಿಲ್ಲ. ಬದಲಾಗಿ ಅವರು “ಬಿಗ್‌ಬಾಸ್‌” ಪ್ರೋಮೋಗಾಗಿ ಮಾಡಿರುವ ಪಾತ್ರದ ಒಂದು ಫೋಟೋವಷ್ಟೇ. ಸದ್ಯಕ್ಕೆ ಕಲರ್ಸ್‌ ಕನ್ನಡ ವಾಹಿನಿ ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋ ಹಂಚಿಕೊಂಡಿದೆ. “ಬಿಗ್‌ಬಾಸ್”‌ ೮ ನೇ ಆವೃತ್ತಿಗೆಂದೇ ಒಂದು ಫೋಟೋ ಹರಿಬಿಟ್ಟಿದೆ. ಆ ಫೋಟೋ ನೋಡಿದವರಿಗೆ ಜ್ಯೋತಿಷಿಗಳಂತೆಯೇ ಕಾಣುತ್ತಾರೆ.

ಅಭಿನಯ ಚಕ್ರವರ್ತಿಯ ಸ್ವಾಮೀಜಿ ಗೆಟಪ್‌ನ ಫೋಟೋ ಶೇರ್ ಮಾಡಿರುವ ಕಲರ್ಸ್ ಕನ್ನಡ ವಾಹಿನಿ, “ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ” ಎಂದು ಪೋಸ್ಟ್ ಮಾಡಿದೆ. “ಬಿಗ್‌ಬಾಸ್” ಹೊಸ ಆವೃತ್ತಿ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಘೋಷಿಸದ ವಾಹಿನಿ, ಪ್ರೇಕ್ಷಕರಲ್ಲಿ ಒಂದಷ್ಟು ಕುತೂಹಲ ಮೂಡಿಸಿರುವುದಂತೂ ನಿಜ. ಸದ್ಯದ ಮಾಹಿತಿ ಪ್ರಕಾರ, ಬಿಗ್‌ಬಾಸ್ ಕನ್ನಡ 8ನೇ ಆವೃತ್ತಿ ಫೆಬ್ರವರಿ 28 ರಂದು ಆರಂಭವಾಗಲಿದೆ. ಯಾರೆಲ್ಲಾ ಸ್ಪರ್ಧಿಗಳು ಇದ್ದಾರೆ ಅನ್ನೋದು ಗೌಪ್ಯ.

Categories
ಸಿನಿ ಸುದ್ದಿ

ಒಂದೂ ಚಿತ್ರ ತೆರೆ ಕಂಡಿಲ್ಲ, ಆದರೂ ಈ ನಟಿಗೆ ಕೈ ತುಂಬಾ ಆಫರ್ !‌ ‌

ಈಗಷ್ಟೇ ಚಂದನವನಕ್ಕೆ ಪ್ರವೇಶ ಪಡೆದ ನಟಿ ಇವರು.“ ಪದವಿ ಪೂರ್ವʼ ಚಿತ್ರಕ್ಕೆ ನಿರ್ದೇಶಕ ಯೋಗರಾಜ್‌ ಭಟ್‌ ಶೋಧಿಸಿ ತಂದ ಚೆಲುವೆ. ಆದ ಚಿತ್ರ ಇನ್ನು ಚಿತ್ರೀಕರಣದಲ್ಲಿರುವಾಗಲೇ ಶಿವರಾಜ್‌ ಕುಮಾರ್‌ ಅಭಿನಯದ “ಶಿವಪ್ಪʼ ಚಿತ್ರದಲ್ಲೂ ಅಭಿನಯಿಸುವ ಅವಕಾಶ ಸಿಕ್ಕಿದೆ. ಅಲ್ಲಿಂದೀಗ “ ಬಹದ್ದೂರ್‌ ಗಂಡುʼ ಹೆಸರಿನ ಮತ್ತೊಂದು ಚಿತ್ರಕ್ಕೂ ನಾಯಕಿ ಆಗಿದ್ದಾರೆ. ಅಂದ ಹಾಗೆ, ಆ ನಟಿ ಬೇರಾರು ಅಲ್ಲ ಬೆಂಗಳೂರು ಬೆಡಗಿ ಯಶ್ ಶಿವಕುಮಾರ್.‌

ಚಿತ್ರೋದ್ಯಮ ಈಗ ಹಿಂದಿನಂತಿಲ್ಲ. ಹೊಸಬರಿಗೆ ಇಲ್ಲಿ ಅವಕಾಶ ಸಿಗುವುದು ಅಷ್ಟು ಸುಲಭ ಇಲ್ಲ. ನಟಿಯರ ವಿಚಾರದಲ್ಲಂತೂ ಇದು ಸಂಕಷ್ಟದ ಕಾಲ. ಸೌಂದರ್ಯದ ಜತೆಗೆ ಪ್ರತಿಭೆ ಇದ್ದವರೂ ಕೂಡ ಈಗ ಹೊಸ ಹೊಸ ಅವಕಾಶಗಳಿಗೆ ಪರದಾಡುವ ಪರಿಸ್ಥಿತಿ ಮಾಮೂಲು ಆಗಿದೆ. ಇದರ ನಡುವೆಯೂ ಸ್ಯಾಂಡಲ್‌ ವುಡ್‌ ಗೆ ಈಗಷ್ಟೇ ಎಂಟ್ರಿಯಾದ ಯಶ್‌ ಶಿವಕುಮಾರ್‌ಗೆ ಕೈ ತುಂಬಾ ಅವಕಾಶ ಎನ್ನುವುದು ವಿಶೇಷಗಳಲ್ಲೇ ವಿಶೇಷ.

ಇದು ಹೆಸರಿನಲ್ಲೇ ʼಯಶ” ಸ್ಸು ಇದಿದ್ದರ ರಹಸ್ಯವೋ, ಅದೃಷ್ಟವೋ?

ಬೆಂಗಳೂರು ಬೆಡಗಿ ಯಶ್‌ ಕುಮಾರ್‌ ಇಂಜಿನಿಯರ್‌  ಪದವೀಧರೆ. ಮಂಗಳೂರಿನ ಆಳ್ವಾಸ್‌ ಕಾಲೇಜು ವಿದ್ಯಾರ್ಥಿನಿ. ಆಲ್ಲೇ ಒದುತ್ತಿದ್ದಾಗಲೇ ಫ್ಯಾಷನ್‌ ಎಬಿಸಿಡಿ ಸ್ಪರ್ಧೆಯಲ್ಲಿ ಭಾಗವಹಿಸಿ, ಮಿಸ್‌ ಕರ್ನಾಟಕ ಕಿರೀಟ್ ಮುಡಿಗೇರಿಸಿಕೊಂಡಿದ್ದರು. ಆದಾದ ಮೇಲೆಯೇ ʼಪದವಿ ಪೂರ್ವʼ ಚಿತ್ರಕ್ಕೆ ಆಡಿಷನ್‌ ಮುಗಿಸಿದ್ದರಂತೆ. ಆದಾಗಿ ಒಂದು ವರ್ಷಕ್ಕೆ ಆ ಚಿತ್ರಕ್ಕೆ ಆಯ್ಕೆಯಾಗಿದ್ದು. ಅದೃಷ್ಟ ಅಂದ್ರೆ, ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ ನಂತರ ಅವರಿಗೆ ಮತ್ತೊಂದು ಆಫರ್‌ ಬಂತು, ಅದುವೇ ಶಿವರಾಜ್‌ ಕುಮಾರ್‌ ಅಭಿನಯದ ʼಶಿವಪ್ಪ ʼಚಿತ್ರ.

ಕಲಾವಿದರಿಗೆ ಅದೃಷ್ಟ ಖುಲಾಯಿಸುವುದು ಹೀಗೆಯೇ. ಕೆಲವರು ಒಂದು ಸಿನಿಮಾ ಮಾಡಿ, ಮತ್ತೊಂದು ಚಿತ್ರಕ್ಕೆ ಪರದಾಡಿದ ಉದಾಹರಣೆಗಳು ಸಾಕಷ್ಟಿವೆ. ಅದು ಕೂಡ ಸಕ್ಸಸ್‌ ಸಿನಿಮಾ ಮಾಡಿಯೂ ಹೊಸಬರು ಮತ್ತೊಂದು ಚಿತ್ರಕ್ಕೆ ಹೆಣಗಾಡಿದ್ದೂ ಇದೆ. ಅಂತಹ ಉದಾಹರಣೆಗಳ ನಡುವೆ ಯಶ್‌, ಅದೃಷ್ಟವಂತೆ ಎಂದೆನಿಸುವುದು ಇದೇ ಕಾರಣಕ್ಕೆ. ʼಶಿವಪ್ಪʼ ನಂತರವೀಗ ಕಿರುತೆರೆಯ ಜನಪ್ರಿಯ ನಟ ಕಿರಣ್‌ ರಾಜ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವʼಬಹದ್ದೂರ್‌ ಗಂಡುʼ ಚಿತ್ರಕ್ಕೆ ಈಗಷ್ಟೇ ನಾಯಕಿ ಆಗಿದ್ದಾರೆ. ಅವರ ಮಟ್ಟಿಗೆ ಇದು ಅದೃಷ್ಟವೇ? ನಿಜವೂ ಹೌದು ಎನ್ನುತ್ತಾರೆ ನಟಿ ಯಶ್‌ ಶಿವಕುಮಾರ್.

error: Content is protected !!