Categories
ಸಿನಿ ಸುದ್ದಿ

ನಟಿಯರಿಗೆ ಸವಾಲೊಡ್ಡಿದ ಬಾಲಿವುಡ್‌ ನಟಿ ಕಂಗನಾ!

ಹಾಲಿವುಡ್‌ ತಾರೆಯರಿಗೆ ತಮ್ಮನ್ನು ಹೋಲಿಸಿ ಟ್ವೀಟ್ ಮಾಡಿದ  ಕ್ವೀನ್‌!

 

ವಿವಾದಿತ ಹೇಳಿಕೆ, ಟ್ವೀಟ್‌ಗಳ ಮೂಲಕ ಸುದ್ದಿಯಾಗುವ ಕಂಗನಾ ಮತ್ತೊಂದು ಇಂಥದ್ದೇ ಟ್ವೀಟ್‌ನೊಂದಿಗೆ ಹಾಜರಾಗಿದ್ದಾರೆ. “ಸದ್ಯ ನನ್ನಂತೆ ವಿಭಿನ್ನ ಪಾತ್ರಗಳಿಗೆ ನ್ಯಾಯ ಸಲ್ಲಿಸುವಂಥ ಮತ್ತೊಬ್ಬ ನಟಿ ಈ ಭೂಮಿ ಮೇಲಿಲ್ಲ. ಹಾಲಿವುಡ್‌ ನಟಿ ಮೆರಿಲ್ ಸ್ಟ್ರೀಪ್‌ ಅವರಂತೆ ನಾನು ‘ಕಚ್ಛಾ ಪ್ರತಿಭೆ’. ಅಲ್ಲದೆ ನಟಿ ಗಾಲ್‌ ಗ್ಯಾಡೋಟ್‌ ಅವರಂತೆ ಆಕ್ಷನ್‌ ಮತ್ತು ಗ್ಲಾಮರ್ ಪಾತ್ರಗಳಿಗೂ ನಾನು ಸೈ” ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಕಂಗನಾ ಪ್ರಸ್ತುತ ವಿಭಿನ್ನ ಪಾತ್ರಗಳ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಕ್ಷನ್‌-ಥ್ರಿಲ್ಲರ್‌ ‘ಧಾಕಡ್‌’, ಬಯೋಪಿಕ್‌ ‘ತಲೈವಿ’ ಸಿನಿಮಾಗಳ ಆಶ್‌ಟ್ಯಾಗ್‌ಗಳೊಂದಿಗೆ ಅವರು ಈ ಟ್ವೀಟ್ ಮಾಡಿದ್ದಾರೆ. ಕಂಗನಾ ಟ್ವೀಟ್‌ಗೆ ನೆಟ್ಟಿಗರು ಹತ್ತಾರು ರೀತಿ ತಮಾಷೆಯ ಟ್ವೀಟ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ‘ಸುದ್ದಿಯಲ್ಲಿರಲು, ತಮ್ಮ ಸಿನಿಮಾ ಪ್ರಚಾರಕ್ಕಾಗಿ ಕಂಗನಾ ಏನು ಬೇಕಾದರೂ ಮಾಡುತ್ತಾರೆ, ಈ ಟ್ವೀಟ್‌ಗಳಲ್ಲಿ ನಾನು, ನಾನು ಎನ್ನುವುದನ್ನು ಸಾಕಷ್ಟು ಬಾರಿ ಬಳಕೆ ಮಾಡಿರುವ ನಿಮಗೆ ಮಾನಸಿಕ ವೈದ್ಯರ ಅವಶ್ಯಕತೆ ಇದೆ!” ಎನ್ನುವ ಪ್ರತಿಕ್ರಿಯೆಯ ಒಕ್ಕಣಿಯ ಟ್ವೀಟ್‌ಗಳು ಕಾಣಿಸುತ್ತಿವೆ.

ಇದೊಂದು ಟ್ವೀಟ್‌ಗೆ ಸುಮ್ಮನಾಗದ ಕಂಗನಾ ಮತ್ತೊಂದು ಟ್ವೀಟ್ ಮಾಡಿ, “ಈ ವಿಚಾರವಾಗಿ ನಾನು ಚರ್ಚೆಗೆ ಸಿದ್ಧಳಿದ್ದೇನೆ. ಜಗತ್ತಿನ ಯಾವುದೇ ಭಾಗದಲ್ಲಿ ಯಾರಾದರೂ ನನ್ನಂತೆ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿ ಯಶಸ್ವಿಯಾಗಿರುವುದನ್ನು ತೋರಿಸಲಿ. ಆಗ ನಾನು ಅವರಿಗೆ ಶರಣಾಗುತ್ತೇನೆ” ಎಂದು ಸವಾಲು ಹಾಕಿದ್ದಾರೆ.

‘ಧಾಕಡ್‌’ ಚಿತ್ರೀಕರಣದಲ್ಲಿರುವ ಕಂಗನಾ ಅವರು ನಟಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ ‘ತಲೈವಿ’ಯಲ್ಲೂ ನಟಿಸುತ್ತಿದ್ದಾರೆ. ‘ತೇಜಸ್‌’ ಮತ್ತು ‘ಮಣಿಕರ್ಣಿಕಾ2’ ಅವರ ಮುಂದಿನ ಸಿನಿಮಾಗಳು. ಸೆಟ್ಟೇರಲಿರುವ ಮತ್ತೊಂದು ಪೊಲಿಟಿಕಲ್ ಡ್ರಾಮಾ ಹಿಂದಿ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗೆ ಅವರು ಆ ಪಾತ್ರದಲ್ಲಿನ ತಮ್ಮ ಚಿತ್ರವನ್ನು ಟ್ವೀಟ್ ಮಾಡಿದ್ದರು.

Categories
ಸಿನಿ ಸುದ್ದಿ

ಹಿಂದಿ ನಟ, ನಿರ್ಮಾಪಕ ರಾಜೀವ್ ಕಪೂರ್ ಇನ್ನಿಲ್ಲ

ಹಿಂದಿ ಚಿತ್ರರಂಗದ ಪ್ರತಿಷ್ಠಿತ ಕಪೂರ್ ಕುಟುಂಬದ ಹಿರಿಯ ನಟ, ನಿರ್ಮಾಪಕ ರಾಜೀವ್ ಕಪೂರ್ ಇಂದು ಅಗಲಿದ್ದಾರೆ.

ನಟ, ನಿರ್ಮಾಪಕ, ನಿರ್ದೇಶಕ ರಾಜೀವ್ ಕಪೂರ್‌ (58 ವರ್ಷ) ಇಂದು ಹೃದಯಾಘಾತದಿಂದ ಅಗಲಿದ್ದಾರೆ. ಬಾಲಿವುಡ್‌ನ ಶೋಮ್ಯಾನ್ ಎಂದೇ ಹೆಸರಾಗಿದ್ದ ರಾಜ್‌ಕಪೂರ್ ಅವರ ಕೊನೆಯ ಪುತ್ರ ರಾಜೀವ್‌. ನಟ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ತಮ್ಮ ನಿರ್ದೇಶನದ ದುಬಾರಿ ಬಜೆಟನ್‌ನ ಮಹತ್ವಾಕಾಂಕ್ಷೆಯ ಸಿನಿಮಾ ‘ಪ್ರೇಮ್‌ಗ್ರಂಥ್‌’ ಚಿತ್ರದ ಸೋಲಿನ ನಂತರ ಅವರು ಚಿತ್ರರಂಗದಿಂದ ದೂರ ಸರಿದಿದ್ದರು.

ತಂದೆ ರಾಜ್‌ಕಪೂರ್ ಮಾರ್ಗದರ್ಶನದಲ್ಲಿ ಸಿನಿಮಾರಂಗದಲ್ಲಿ ಅನುಭವ ಪಡೆದ ರಾಜೀವ್‌ ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ಏಕ್ ಜಾನ್ ಹೈ ಹಮ್‌’ (1983) ಚಿತ್ರದೊಂದಿಗೆ. ಚೊಚ್ಚಲ ಚಿತ್ರ ತೆರೆಕಂಡು ಎರಡು ವರ್ಷದ ನಂತರ ತಂದೆ ರಾಜ್‌ಕಪೂರ್‌ ನಿರ್ದೇಶನದಲ್ಲಿ ರಾಜೀವ್‌ ನಟಿಸಿದ ‘ರಾಮ್ ತೇರಿ ಗಂಗಾ ಮೈಲಿ’ (1985) ದೊಡ್ಡ ಯಶಸ್ಸು ಕಂಡಿತು. ಆದರೆ ಈ ಗೆಲುವು ಅವರ ಮುಂದಿನ ಚಿತ್ರಗಳಲ್ಲಿ ದಾಖಲಾಗಲಿಲ್ಲ. ಆಸ್ಮಾನ್‌, ಲವರ್‌ಬಾಯ್‌, ಜಬರ್‌ದಸ್ತ್‌, ಹಮ್ ತೋ ಚಲೇ ಪರ್ದೇಸ್‌, ಜಿಮ್ಮೇದಾರ್‌ ರಾಜೀವ್‌ ನಟನೆಯ ಇತರೆ ಪ್ರಮುಖ ಚಿತ್ರಗಳು.

ತಮ್ಮ ಹಿರಿಯ ಸಹೋದರರಾದ ರಣಧೀರ್ ಕಪೂರ್ ನಿರ್ದೇಶನದ ‘ಹೆನ್ನಾ’ ಮತ್ತು ರಿಷಿ ಕಪೂರ್ ನಿರ್ದೇಶನದ ‘ಆ ಅಬ್ ಲೌಟ್‌ ಚಲೇ’ ಎರಡೂ ರಾಜೀವ್ ನಿರ್ಮಾಣದ ಚಿತ್ರಗಳು. ಹಿರಿಯ ಸಹೋರದ ರಿಷಿ ಕಪೂರ್ ಮತ್ತು ಮಾಧುರಿ ದೀಕ್ಷಿತ್‌ ಜೋಡಿಗೆ ರಾಜೀವ್ ನಿರ್ದೇಶಿಸಿದ ‘ಪ್ರೇಮ್‌ಗ್ರಂಥ್‌’ ವಿಫಲವಾಯ್ತು. ಈ ಚಿತ್ರದ ಸೋಲಿನ ನಂತರ ರಾಜೀವ್ ಕಪೂರ್ ಚಿತ್ರರಂಗದಿಂದ ಬಹುತೇಕ ದೂರ ಉಳಿದಿದ್ದರು.

Categories
ಸಿನಿ ಸುದ್ದಿ

ಸ್ಕೇರಿ ಫಾರೆಸ್ಟ್‌ನಲ್ಲಿ ಭಾವನೆಗಳ ಪಯಣ

ಫೆ.28ಕ್ಕೆ ಸಿನಿಮಾ ಬಿಡುಗಡೆ

ಕನ್ನಡಕ್ಕೆ ಥ್ರಿಲ್ಲರ್‌ ಸಿನಿಮಾಗಳು ಹೊಸದೇನಲ್ಲ. ದಿನ ಕಳೆದಂತೆ ಅವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಥ್ರಿಲ್ಲರ್‌ ಸಿನಿಮಾ ನೋಡುವ ವರ್ಗವೇ ದೊಡ್ಡದಿದೆ. ಹಾಗಾಗಿ, ಹೊಸಬಗೆಯ ಥ್ರಿಲ್ಲರ್‌ ಚಿತ್ರಗಳು ಇಲ್ಲಿ ಬರುತ್ತಲೇ ಇವೆ. ಆ ಸಾಲಿಗೆ ಈಗ “ಸ್ಕೇರಿ ಫಾರೆಸ್ಟ್‌” ಎಂಬ ಹೊಸಬರ ಚಿತ್ರ ಕೂಡ ಸೇರಿದೆ. ಸಂಜಯ್ ಅಬೀರ್ ನಿರ್ದೇಶನದ ಈ ಚಿತ್ರ ಫೆ.೨೮ ರಂದು ಬಿಡುಗಡೆಯಾಗುತ್ತಿದೆ.

 

 

 

 

ಚಿತ್ರದ ಬಗ್ಗೆ ಹೇಳುವುದಾದರೆ, ಕಾಲೇಜು ಸ್ಟೂಡೆಂಟ್ಸ್‌ ಸೇರಿ ಸಂಶೋಧನೆಗೆ ಕಾಡಿಗೆ ತೆರಳಿ ಅಲ್ಲಿ ಯಾವುದೆಲ್ಲ ಸಮಸ್ಯೆಗಳನ್ನು ಅನುಭವಿಸುತ್ತಾರೆ ಅನ್ನೋದು ಈ ಸಿನಿಮಾದ ಕಥೆ. ಮನುಷ್ಯನೋ, ಆತ್ಮನೋ ಎನ್ನುವ ಕುತೂಹಲ ಈ ಸಿನಿಮಾದಲ್ಲಿ ‌ಕ್ಯೂರಿಯಾಸಿಟಿ ಈ ಸಿನಿಮಾದಲ್ಲಿದೆ ಎಂಬುದು ಚಿತ್ರತಂಡದ ಮಾತು.

 

 

 

 

 

 

 

ಸಿನಿಮಾದಲ್ಲಿ ಆರು ಹಾಡುಗಳಿವೆ. ಎಲ್ಲಾ ಜಾನರ್‌ ಹಾಡುಗಳು ಇಲ್ಲಿ ಕಾಣಬಹುದು. ನಿರ್ದೇಶಕ ಸಂಜಯ್ ಅಬೀರ್ ಸಿನಿಮಾ ಬಗ್ಗೆ ಹೇಳುವುದಿಷ್ಟು. ಇದೊಂದು ಭಾವನೆಗಳ ಗುಚ್ಛವಿರುವ ಚಿತ್ರ. ಒಳ್ಳೆಯ ತಂಡದೊಂದಿಗೆ ಉತ್ಸಾಹದಿಂದ ಈ ಸಿನಿಮಾ ಮಾಡಲಾಗಿದೆ, ಎಲ್ಲಾ ವರ್ಗಕ್ಕೂ ಇದು ಇಷ್ಟವಾಗಲಿದೆ ಎನ್ನುತ್ತಾರೆ ಅವರು. ಜಯಪ್ರಭ ಚಿತ್ರದ ಹೀರೋ.

 

 

 

 

 

 

ಸಿನ್ಮಾ ಕುರಿತು ಹೇಳುವ ಅವರು, “ನಾನು ಹುಟ್ಟಿನಿಂದಲೇ ರಾಜ್ ಕುಮಾರ್ ಅಭಿಮಾನಿ‌. ಬಾಲಿವುಡ್ ನನಗೆ ಬೇಸ್ ಆಯಿತು. ಒಂದೊಳ್ಳೆಯ ಕಥೆಯಲ್ಲಿ ನಾನಿದ್ದೇನೆ ಅನ್ನೋದು ಹೆಮ್ಮೆ ಎಂಬುದು ಅವರ ಮಾತು. ನಾಯಕಿ ಟೀನಾ ಪೊನ್ನಪ್ಪ. ಕೂಡ ಪಾತ್ರದ ಬಗ್ಗೆ ಹೇಳಿಕೊಂಡು, ಶೇ. 90 ರಷ್ಟುಚಿತ್ರೀಕರಣ ಸಿದ್ಧಗಂಗಾ ಮಠದಲ್ಲಿ ನಡೆದಿದೆ.

 

 

 

 

 

 

 

ಅಮ್ರಿನಾ ಕಲ್ಪನಾ ಅವರಿಲ್ಲಿ 22 ವರ್ಷದ ಹುಡುಗಿಯ ಪಾತ್ರ ನಿರ್ವಹಿಸಿದ್ದಾರಂತೆ. “ಪ್ರೀತಿಯ ಬಲೆಯಲ್ಲಿ ಹೇಗೆ ಬೀಳ್ತೀನಿ, ಹೀರೋನ ಇಷ್ಟ ಪಟ್ಟರೆ, ಹೀರೋ ಮತ್ತೊಬ್ಬಳ ಪ್ರೀತಿಯ ಬಲೆಯಲ್ಲಿ ಬೀಳ್ತಾಳೆ. ನನಗೆ ಆಮೇಲೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದು ಕಥೆ. ಈ ಸಿನಿಮಾಗೆ ದೇವರಾಜ್, ಪ್ರಕಾಶ ಹಾಡನ್ನು ಬರೆದು ಹಾಡಿದ್ದಾರೆ. “ಪ್ರೀತಿ, ಭಯ, ಆತ್ಮ” ಎಂಬ ಅಡಿಬರಹವಿದೆ. ಪಂಚಾಕ್ಷರಿ, ಬೇಬಿ ಪೂಜಾ, ಪರಶಿವಯ್ಯ, ಸಾಹಿತಿ ದೇವರಾಜ್ ಪ್ರಕಾಶ್ ಇತರರು ಸಿನಿಮಾ ಬಗ್ಗೆ ಹೇಳಿಕೊಂಡರು.

 

Categories
ಸಿನಿ ಸುದ್ದಿ

ರಿಲೀಸ್‌ ಆಯ್ತು ಆಕ್ಷನ್‌-ಥ್ರಿಲ್ಲಿಂಗ್‌ ‘ಎಫ್‌9’ ಟೀಸರ್‌ !

ಜನಪ್ರಿಯ ‘ಫಾಸ್ಟ್‌ ಅಂಡ್‌ ಫ್ಯೂರಿಯಸ್‌’ ಹಾಲಿವುಡ್‌ ಸರಣಿ ಸಿನಿಮಾ ತೆರೆಗೆ ರೆಡಿ

ಹಾಲಿವುಡ್‌ನ ಅತ್ಯಂತ ಜನಪ್ರಿಯ ‘ಫಾಸ್ಟ್‌ ಅಂಡ್ ಫ್ಯೂರಿಯಸ್‌’ ಸರಣಿಯ ನೂತನ ಸಿನಿಮಾ ‘ಎಫ್‌9’ ಟೀಸರ್ ಬಿಡುಗಡೆಯಾಗಿದೆ. ಮೂವತ್ತು ಸೆಕೆಂಡ್‌ಗಳ ಚಿಕ್ಕ ಅವಧಿಯ ಟೀಸರ್ ಎನ್ನುವುದು ವಿಶೇ‍ಷ! ಭರಪೂರ ಆಕ್ಷನ್ ಜೊತೆ ಇಲ್ಲಿ ಫ್ಯಾಮಿಲಿ ಸೆಂಟಿಮೆಂಟ್‌ ಕೂಡ ಯತೇಚ್ಛವಾಗಿ ಇರುವಂತಿದೆ. ಕಳೆದ ಸರಣಿ ಸಿನಿಮಾಗಳಿಗಿಂತ ಕೊಂಚ ಭಿನ್ನವಾಗಿರಲಿದೆ ಎಂದು ನಿರ್ದೇಶಕ ಜಸ್ಟಿನ್ ಲಿನ್ ಮೊದಲೇ ಹೇಳಿಕೊಂಡಿದ್ದರು. ಅದರ ಸೂಚನೆ ಟೀಸರ್‌ನಲ್ಲಿ ಕಾಣಿಸುತ್ತದೆ. ಕುಟುಂಬದ ಸೀನ್‌, ಔತಣಕೂಟದೊಂದಿಗೆ ಆರಂಭವಾಗುವ ಟೀಸರ್‌ ಆಕ್ಷನ್‌ಗೆ ತೆರೆದುಕೊಳ್ಳುತ್ತದೆ. ಜಾನ್‌ ಸೆನಾ, ಹೆಲನ್ ಮಿರನ್‌ರ ನಗು, ಚಾರ್ಲ್ಸ್‌ ಥೆರೋನ್‌ ಕಣ್ಣು ಹೊಡೆವುದೇಕೆ ಎನ್ನುವುದು ಸಸ್ಪೆನ್ಸ್‌!

“ಬದಲಾವಣೆ ಜಗದ ನಿಯಮ. ಆದರೆ ಒಂದು ವಿಚಾರದಲ್ಲಿ ಬದಲಾವಣೆ ಕಾಣಿಸಲು ಸಾಧ್ಯವೇ ಇಲ್ಲ” ಎನ್ನುತ್ತಾರೆ ವಿನ್‌ ಡೀಸೆಲ್‌. ಈ ಸಂಭಾಷಣೆ, ಪಾತ್ರದೊಂದಿಗೆ ನಿರ್ದೇಶಕರು ಏನು ಹೇಳಲು ಹೊರಟಿರಬಹುದು ಎನ್ನುವ ಕುತೂಹಲ ಉಳಿಯುತ್ತದೆ. ಡೇನಿಯಲ್ ಕೇಸಿ ಅವರೊಡಗೂಡಿ ಜಸ್ಟಿನ್ ಲಿನ್ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ.

ಇದು ‘ಫಾಸ್ಟ್‌ ಅಂಡ್ ಫ್ಯೂರಿಯಸ್‌’ ಸರಣಿಯ ಒಂಬತ್ತನೇ ಸಿನಿಮಾ. ಈ ಸರಣಿಯ ಮುಂದಿನ ಎರಡು ಚಿತ್ರಗಳನ್ನೂ ಜಸ್ಟಿನ್ ಅವರೇ ನಿರ್ದೇಶಿಸಲಿದ್ದಾರೆ ಎನ್ನುವ ಘೋಷಣೆ ಈಗಾಗಲೇ ಹೊರಬಿದ್ದಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಚಿತ್ರ 2020ರ ಕೊನೆಯಲ್ಲಿ ಬಿಡುಗಡೆಯಾಗಬೇಕಿತ್ತು. ಕೋವಿಡ್‌ನಿಂದಾಗಿ ಚಿತ್ರದ ಬಿಡುಗಡೆ ದಿನಾಂಕ 2021ರ ಮೇ 28ಕ್ಕೆ ನಿಗಧಿಯಾಗಿದೆ. ಟೈರಿಸ್ ಗಿಬ್ಸನ್‌, ಕ್ರಿಸ್‌ ಲ್ಯುಡಾಕ್ರಿಸ್‌, ಸಂಗ್ ಕಾಂಗ್‌, ಚಾರ್ಲ್ಸ್‌ ಥೆರೋನ್‌, ಹೆಲನ್ ಮಿರನ್‌, ಜೋರ್ಡಾನ್ ಬ್ರ್ಯೂಸ್ಟರ್‌, ಜಾನ್ ಸೆನಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

Categories
ಸಿನಿ ಸುದ್ದಿ

ಶ್ಯಾಡೊ ನಿರ್ಮಾಪಕರ ವಿರುದ್ಧ ವಿನೋದ್‌ ಬೇಸರ

ನನ್‌ ಮಾತು ಕೇಳದೇ ಮನಸ್ಸಿಗೆ ಬಂದಂತೆ ನಡೆದುಕೊಂಡರು!

 

“ಈ ಸಮಯದಲ್ಲಿ ಚಿತ್ರ ರಿಲೀಸ್‌ ಮಾಡೋದು ಬೇಡ ಅಂತ ಹೇಳಿದ್ದೆ. ಆದರೆ, ನಿರ್ಮಾಪಕರು ಮಾತ್ರ ನನ್ನ ಮಾತು ಕೇಳದೆ, ಹೇಳದೆಯೇ ಚಿತ್ರ ರಿಲೀಸ್‌ ಮಾಡಿದ್ದಾರೆ. ನಾನು, ನನ್ನದು ಅಂತ ಹೋದರೆ ಏನೂ ಲಾಭವಿರೋದಿಲ್ಲ…”


– ಇದು ನಟ ವಿನೋದ್‌ಪ್ರಭಾಕರ್‌ ಅವರ ಬೇಸರದ ನುಡಿ. ಇಷ್ಟಕ್ಕೂ ವಿನೋದ್‌ ಪ್ರಭಾಕರ್‌ ಹೀಗೆ ನೋವಿನ ಮಾತುಗಳಲ್ಲಿ ಹೇಳಿಕೊಂಡಿದ್ದು, ತಮ್ಮ “ಶ್ಯಾಡೊ” ಸಿನಿಮಾ ಬಗ್ಗೆ. ಹೌದು, “ಶ್ಯಾಡೊ” ಫೆ.೫ರಂದು ರಿಲೀಸ್‌ ಆಗಿತ್ತು. ಇದಕ್ಕೂ ಮುನ್ನ, ವಿನೋದ್‌ ಪ್ರಭಾಕರ್‌ ರಾಂಗ್‌ ಟೈಮ್‌ನಲ್ಲಿ ರಿಲೀಸ್‌ ಬೇಡ ಅಂತಾನೇ ಹೇಳಿದ್ದರಂತೆ. ಆದರೆ, ನಿರ್ಮಾಪಕರು ಮಾತ್ರ ಮಾತು ಕೇಳದೆ ರಿಲೀಸ್‌ ಮಾಡಿದ್ದಾರೆ.

ಚಿತ್ರದ ಬಗ್ಗೆ ಒಳ್ಳೆಯ ಮಾತು ಕೇಳಿಬಂದರೂ, ಕಲೆಕ್ಷನ್‌ ವಿಚಾರದಲ್ಲಿ ಏನೂ ಆಗಿಲ್ಲ. ನಾನು ಇರುವೆಯ ರೀತಿ ಸಾಮ್ರಾಜ್ಯ ಕಟ್ಟಿದ್ದೇನೆ‌. ಆದರೆ, ಎಲ್ಲರೂ ಅದನ್ನು ಕೆಡವಿದರು. ಎಲ್ಲಾ ಅವರವರೇ ಡಿಸೈಡ್ ಮಾಡ್ತಾರೆ, ನಾನು ಅನ್ನೋದು ಇಲ್ಲಿ ಶಾಶ್ವತ ಅಲ್ಲ. ಈ ಸಿನಿಮಾದಲ್ಲಿ ಟೀಂ ವರ್ಕ್ ಇರಲಿಲ್ಲ. ಫ್ಯಾಮಿಲಿ ತರಹ ನಾವೆಲ್ಲ ಒಂದೇ ಎನ್ನುವ ಭಾವನೆ ಕಿಂಚಿತ್ತೂ ಇದ್ದಿಲ್ಲ. ಮುಖ್ಯವಾಗಿ, ಕಮ್ಯೂನಿಕೇಷನ್ ಗ್ಯಾಪ್ ಸಮಸ್ಯೆ ಎಂದು ಬೇಸರಿಸಿಕೊಂಡೇ ಹೇಳಿಕೊಂಡರು ವಿನೋದ್.


“ಶ್ಯಾಡೊ” ಬಿಡುಗಡೆ ಮಾಡುವ ಸಮಯದಲ್ಲಿ ನನ್ನನ್ನು ಒಂದು ಮಾತೂ ಪ್ರೊಡ್ಯೂಸರ್ ಕೇಳಲೇ ಇಲ್ಲ. ಬಿಡುಗಡೆ ಯಾವಾಗ ಅನ್ನೋದು ಪತ್ರಿಕೆಗಳಲಲಿ ಓದಿ ಗೊತ್ತಾಯ್ತು. ಹಾಗಂತ ನಾನು ದುರಹಂಕಾರಿ ಮನುಷ್ಯನಲ್ಲ. ಮುಂದೆ ನನ್ನದೇ ಆದ ಹೊಸ ಟೀಂ ಕಟ್ಟಿ, ಸಿನಿಮಾ ರಂಗದಲ್ಲಿ ತಂದೆಯಾದ ಪ್ರಭಾಕರ್ ಹೆಸರನ್ನು ಬೆಳೆಸುವುದೊಂದೇ ನನ್ನಾಸೆ” ಎಂಬುದು ವಿನೋದ್‌ ಹೇಳಿಕೆ. ಅಂದಹಾಗೆ, ರವಿಗೌಡ “ಶ್ಯಾಡೊ” ಸಿನಿಮಾದ ನಿರ್ದೇಶಕರು. ಇದು ಮಲಯಾಳಂನಲ್ಲಿ ಬಂದ ಚಿತ್ರ. ತೆಲುಗಿಗೂ ಡಬ್‌ ಆಗಿದ್ದ “ನೆಪೋಲಿಯನ್‌” ಚಿತ್ರದ ರೀಮೇಕ್. ಚಕ್ರವರ್ತಿಸಿ.ಎಚ್. ನಿರ್ಮಾಣವಿದೆ.

Categories
ಸಿನಿ ಸುದ್ದಿ

ವಾಲ್ಮೀಕಿ ರತ್ನ ಪ್ರಶಸ್ತಿಗೆ ಪಾತ್ರವಾದ ಕಿಚ್ಚ ಸುದೀಪ್

ನಟ ಕಿಚ್ಚ ಸುದೀಪ್‌ ಅವರಿಗೆ ಮೊನ್ನೆಯಷ್ಟೇ ದುಬೈನಲ್ಲಿ ʼಕನ್ನಡ ಕುಲತಿಲಕʼ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈಗ ದಾವಣಗೆರೆ ಸಮೀಪದ ರಾಜನಹಳ್ಳಿ ವಾಲ್ಮೀಕಿ ಗುರುಪೀಠವೂ ಈ ಬಾರಿಯʼ ವಾಲ್ಮೀಕಿ ರತ್ನʼ ಪ್ರಶಸ್ತಿ ನೀಡಿದೆ. ಫೆ. 9  ರಂದು ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ನಡೆಯಲಿದ್ದು,  ಅಲ್ಲಿ ನಟ ಸುದೀಪ್‌ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಜಾತ್ರೆಗೆ ಸುಮಾರು 3  ಲಕ್ಷ ಜನ ಭಕ್ತರು ಸೇರುವ ನಿರೀಕ್ಷೆ ಇದ್ದು, ಅಷ್ಟು ಜನರ ಸಮ್ಮುಖದಲ್ಲಿಯೇ ನಟ ಸುದೀಪ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

 

Categories
ಸಿನಿ ಸುದ್ದಿ

ಎಲ್ಲವೂ ಯೋಗಾಯೋಗ…ಸಿನಿ ಲಹರಿಗೆ ಶುಭ ಹಾರೈಕೆಯ ಮಹಾಪೂರ

ಕಚೇರಿಗೆ ಬಂದು ಸಿನಿ‌ಲಹರಿಗೆ ಹಾರೈಸಿದ ಪ್ಯಾರಾ ಒಲಂಪಿಕ್ ಖ್ಯಾತಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ವೈ.ವೆಂಕಟೇಶ್…..


ಎಲ್ಲವೂ ಯೋಗಾಯೋಗ. ನೂರು ದಿನದ ಸಂಭ್ರಮಕ್ಕೆ ನಾಳೆ ದಿನ‌ ನಿಗದಿ ಆಗಿದೆ. ಸಿಬ್ಬಂದಿ‌ ಖುಷಿಗಾಗಿ ನಾಳೆ ಸುಮ್ನೆ ಕೇಕ್ ಕತ್ತರಿಸಿ ಹಂಡ್ರೆಡ್ ಡೇಸ್ ಸಲೆಬ್ರೆಷನ್ ಮಾಡೋಣ ಅನ್ನೋ ಆಲೋಚನೆಯಲ್ಲಿದ್ದೇವೆ ಆದ್ರೆ ಇವತ್ತೊಂದು ಅಚ್ಚರಿಯೇ ಘಟಿಸಿ ಬಿಟ್ಟಿತು‌.

ನಿರ್ದೇಶಕರಾದ ಕಿರಣ್ ಹಾಗೂ ರಾಜು ಪಾವಗಡ ಎಂದಿನಂತೆ‌ಆಫೀಸ್ ಗೆ ಬರುತ್ತೇವೆ ಎಂದರು. ಬನ್ನಿ ಎಂದೆವು. ಬರುವಾಗ ಅವರೊಂದಿಗೆ ಒಬ್ಬ ಗಣ್ಯ ವ್ಯಕ್ತಿಯೇ ಜತೆಗಿದ್ದರು. ಸರ್, ಇವ್ರು, ಕೆ.ವೈ .ವೆಂಕಟೇಶ್ ಅಂತ. ಪ್ಯಾರಾ ಒಲಂಪಿಕ್ ಸಾಧನೆಯಲ್ಲಿ ಈ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದವರು ‌ ದೊಡ್ಡ ಸಾಧಕರು ‘ ಅಂತ ಪರಿಚಯಿಸುತ್ತಿದ್ದಂತೆ, ನಮಗೆ ಏನ್ ಹೇಳ್ಬೇಕೋ ಗೊತ್ತಾಗಲಿಲ್ಲ‌ . ಅವರ ಆಗಮನಕ್ಕಾಗಿ‌ ಆದ ಖುಷಿಗೆ ಆನಂದ ಬಾಷ್ಪಗಳೇ ಬಂದವು.

ಯಾವುದೇ ಆಹ್ವಾನ ಇಲ್ಲದೆ ಅವರು ನಮಗೆ ಹರಿಸಲು ಬಂದಿದ್ದರು. ಇಡೀ ನಮ್ಮ ವ್ಯವಸ್ಥೆ ನೋಡಿ ತುಂಬಾನೆ ಖುಷಿ ಪಟ್ಟರು.ಕೊನೆಗೆ ಕೇಕ್ ಕತ್ತರಿಸಿ, ಒಂದೆರೆಡು ಮಾತನಾಡಿದರು.’ ಸಹೋದರಂತಿರುವ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ, ನಿಮ್ಮ ಕಚೇರಿ, ಸ್ಟುಡಿಯೋ ವ್ಯವಸ್ಥೆ ನೋಡಿ‌ ನಿಜಕ್ಕೂ ಖುಷಿ ಎನಿಸಿತು. ಸಾಧನೆಗೆ ಬೆಲೆ ಇದೆ.ಇಂದಲ್ಲ ನಾಳೆ, ನಿಮಗೆ ಗೆಲುವು ಸಿಗುತ್ತದೆ. ಶುಭವಾಗಲಿ ಅಂತ ಹರಸಿದರು. ಸಿನಿ‌ಲಹರಿ ಗೆ ಇದಕ್ಕಿಂತ ಇನ್ನೇನು ಬೇಕು. ಉದ್ಯಮದ ಜತೆಗೆ ಆಚೆಗೂ ಇರುವ ಸಾಧಕರು ನಮ್ಮನ್ನು ಮನದುಂಬಿ ಹರಿಸುತ್ತಿದ್ದಾರಲ್ಲ, ಅನ್ನೋದು ನಮ್ಮ ದೊಡ್ಡ ಶಕ್ತಿ.

Categories
ಸಿನಿ ಸುದ್ದಿ

ಬುರ್ಜ್‌ ಖಲೀಫ ಮೇಲೆ ಕನ್ನಡ ಧ್ವಜ ರಾರಾಜಿಸಿದ್ದು ಹೇಗೆ – ಒಂದೊಂದು ವಿಷಯವೂ ರೋಚಕ…

ವಿಕ್ರಾಂತ್‌ ರೋಣ ಅನಾವರಣ ಹಿಂದಿನ ಕಥೆ

ಕಿಚ್ಚ ಸುದೀಪ್‌ ಅಭಿನಯದ “ವಿಕ್ರಾಂತ್‌ ರೋಣ” ಶೀರ್ಷಿಕೆ ಜಗತ್ತಿನ ಅತೀ ಎತ್ತರದ ಕಟ್ಟಡದ ಖ್ಯಾತಿ ಪಡೆದಿರುವ ದುಬೈನ “ಬುರ್ಜ್‌ ಖಲೀಫ” ಮೇಲೆ ಅನಾವರಣಗೊಂಡಿದ್ದು ಎಲ್ಲರಿಗೂ ಗೊತ್ತು. ಅತ್ಯಂತ ಎತ್ತರದ ಕಟ್ಟಡದ ಮೇಲೆ ಕನ್ನಡ ಸಿನಿಮಾವೊಂದರ ಶೀರ್ಷಿಕೆ ಅನಾವರಣಗೊಂಡಿದ್ದು ಇದೇ ಮೊದಲು. ಅಷ್ಟೇ ಅಲ್ಲ, ಅದೊಂದು ಐತಿಹಾಸಿಕ ಕ್ಷಣವಂತೂ ಹೌದು. ಬುರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಸಿನಿಮಾವೊಂದರ ಶೀರ್ಷಿಕೆ ಅನಾವರಣ ಮಾಡುವುದು ಅಂದರೆ ತುಸು ಶ್ರಮದ ಕೆಲಸವೇ ಅಂಥದ್ದೊಂದು ಕೆಲಸಕ್ಕೆ “ವಿಕ್ರಾಂತ್‌ ರೋಣ” ಚಿತ್ರತಂಡ ಸಾಕ್ಷಿಯಾಗಿದೆ. ಇಷ್ಟೇ ಆಗಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಬರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಧ್ವಜ ರಾರಾಜಿಸಿದ್ದು ವಿಶೇಷವೇ ಸರಿ. ಆ ಕುರಿತು ಒಂದಷ್ಟು ರೋಚಕ ವಿಷಯಗಳಿವೆ. ಹಾಗೆ ಹೇಳುವುದಾದರೆ…


ಬುರ್ಜ್‌ ಖಲೀಫ ಕಟ್ಟಡದಲ್ಲಿ ಬೇರೆ ಬೇರೆ ದೇಶಗಳ ಧ್ವಜಗಳನ್ನು ಹಾರಿಸಬಹುದು. ಹಾಗೆಯೇ, “ವಿಕ್ರಾಂತ್‌ ರೋಣ” ಚಿತ್ರದ ನಿರ್ಮಾಪಕ ಜಾಕ್‌ ಮಂಜು ಅವರು ಇಂಡಿಯನ್‌ ಫ್ಲಾಗ್‌ ಹಾರಿಸುವ ಹುಮ್ಮಸ್ಸಿನಲ್ಲಿದ್ದರು. ಆದರೆ, ಅಲ್ಲಿ ಬೇಗನೇ ಅನುಮತಿ ಸಿಗಲಿಲ್ಲ. ಯಾಕೆಂದರೆ, ಎಂಬೆಸ್ಸಿ ಮೂಲಕ ಅನುಮತಿ ಪಡೆಯಬೇಕಿತ್ತು. ಅದಕ್ಕೆಲ್ಲ ಸಮಯವೂ ಇರಲಿಲ್ಲ. ಕಡಿಮೆ ಅವಧಿ ಇದ್ದುದರಿಂದ ನಿರ್ಮಾಪಕ ಜಾಕ್‌ ಮಂಜು, ಏನಾದರೂ ಸರಿ, ಕನ್ನಡ ಧ್ವಜ ಹಾರಿಸಬೇಕು ಅಂದುಕೊಂಡು ಮುಂದಾದರು. ಎರಡು ವಾರದಲ್ಲಿ ಶೀರ್ಷಿಕೆ ಅನಾವರಣಗೊಳ್ಳಬೇಕಿತ್ತು. ಸಮಯ ಕಡಿಮೆ ಇದ್ದುರಿಂದ ಎಂಬೆಸ್ಸಿ ಅನುಮತಿ ಅಸಾಧ್ಯ. ಹಾಗಾಗಿ ಅಲ್ಲಿ ಕನ್ನಡ ಧ್ವಜ ಹಾರಿಸಿಬಿಟ್ಟರು. ಆದರೆ, ಕನ್ನಡಿಗರನ್ನು ಹೊರತುಪಡಿಸಿ ಅಲ್ಲಿರುವ ಮಂದಿಗೆ ಕನ್ನಡ ಧ್ವಜದ ಬಣ್ಣದ ಬಗ್ಗೆ ಅಷ್ಟೇನೂ ಐಡಿಯಾ ಇರಲಿಲ್ಲ. ಬುರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಧ್ವಜ ರಾರಾಜಿಸಿತು.

ಸ್ಕ್ರೀನಿಂಗ್‌ ಆಗಿದ್ದು 6 ಕಿಮೀ ದೂರದಿಂದ...
ಎಲ್ಲರೂ ಬುರ್ಜ್‌ ಖಲೀಫ ಮೇಲೆ ನಮ್ಮ ಕನ್ನಡ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು ನೋಡಿ ಹೆಮ್ಮೆ ಎನಿಸಿದ್ದು ನಿಜ. ಕನ್ನಡ ಧ್ವಜ ಕಾಣಿಸಿಕೊಂಡಿದ್ದೂ ಕೂಡ ಅಷ್ಟೇ ಸಂಭ್ರಮ ಎನಿಸಿತು. ಆದರೆ, ಆ ಕಟ್ಟಡದ ಮೇಲೆ ಇಷ್ಟೆಲ್ಲಾ ಸಾಧ್ಯವಾಗಬೇಕಾದರೆ, ಎಲ್ಲವೂ ಸುಲಭವಾಗಿರಲಿಲ್ಲ. ಬುರ್ಜ್‌ ಖಲೀಫ ಮೇಲೆ “ವಿಕ್ರಾಂತ್‌ ರೋಣ” ಚಿತ್ರದ ಶೀರ್ಷಿಕೆ ಮೂಡಲು, ಕನ್ನಡ ಧ್ವಜ ರಾರಾಜಿಸಲು ಸುಮಾರು 6  ಕಿ.ಮೀ ದೂರದಲ್ಲೇ ಪ್ರೊಜೆಕ್ಟರ್ ಸೆಟಪ್‌ ಮಾಡಿ ಆ ನಂತರ ಲೇಸರ್‌ ಮೂಲಕ ಸ್ಕ್ರಿನಿಂಗ್‌ ಮಾಡಲಾಗಿದೆ.

ದೊಡ್ಡ ಕಟ್ಟಡದ ಮೇಲೆ ಇಷ್ಟೆಲ್ಲಾ ಬರಬೇಕಾದರೆ, ದೂರದಿಂದಲೇ ಪ್ರೊಜೆಕ್ಟರ್ ಸೆಟಪ್‌ ಮಾಡಲೇಬೇಕಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಕಿಲೋಮೀಟರ್‌ಗೊಂದೊಂದು ಕ್ಯಾಮೆರಾ ಸೆಟಪ್‌ ಮಾಡಿ ಸುಮಾರು ನಾಲ್ಕೈದು ಪ್ರೊಜೆಕ್ಟರ್‌ಗಳ ಮೂಲಕ ಆ ವ್ಯವಸ್ಥೆ ಮಾಡಲಾಗಿದೆ. ಇನ್ನು, ಕೋವಿಡ್‌ ಇದ್ದುದರಿಂದ ಆರು ಜನರ ಮೇಲೆ ಗುಂಪಾಗಲು ಅಲ್ಲಿ ಅವಕಾಶವೂ ಇರಲಿಲ್ಲ. ಹೇಗೋ, “ವಿಕ್ರಾಂತ್‌ ರೋಣ” ತಂಡ, ಇಷ್ಟಿಷ್ಟು ಜನರನ್ನು ಇಟ್ಟುಕೊಂಡು ಅಸಾಧ್ಯವಾದದ್ದನ್ನು ಸಾಧಿಸಿದೆ. ವಿಶೇಷ ಕಾರ್ಯಕ್ರಮ ವೀಕ್ಷಿಸಲು ದುಬೈ ಕನ್ನಡಿಗರು ಬರುತ್ತಾರಾ ಎಂಬ ಪ್ರಶ್ನೆ ಕೂಡ ಚಿತ್ರತಂಡಕ್ಕಿತ್ತು. ಆದರೆ, ಅವರ ನಿರೀಕ್ಷೆ ಮೀರಿ ಜನರು ಸೇರಿದ್ದು ಮರೆಯಲಾರದ ವಿಷಯ ಎಂಬುದು ಚಿತ್ರತಂಡದ ಮಾತು.

ಬುರ್ಜ್‌ ಖಲೀಫಗೆ ಮಾಡಿದ ಖರ್ಚಲ್ಲಿ ನಾಲ್ಕು ಕಲಾತ್ಮಕ ಚಿತ್ರ ಮಾಡಬಹುದಿತ್ತು!
ಇಂಥದ್ದೊಂದು ಸಾಹಸಕ್ಕೆ ಮುಂದಾದ ಜಾಕ್‌ ಮಂಜು, ಬುರ್ಜ್‌ ಖಲೀಫ ಮೇಲೆ “ವಿಕ್ರಾಂತ್‌ ರೋಣ” ಟೈಟಲ್‌ ಜೊತೆ ಕನ್ನಡ ಧ್ವಜ ರಾರಾಜಿಸಬೇಕೆನಿಸಿದ್ದು ನವೆಂಬರ್‌ನಲ್ಲಿ ಮಕ್ಕಳ ಜೊತೆ ಕುಳಿತು ಊಟ ಮಾಡುವಾಗ, ಕನ್ನಡ ಬಗ್ಗೆ, ಧ್ವಜದ ಬಗ್ಗೆ ಮಾತುಕತೆ ನಡೆಸುತ್ತಿದ್ದರಂತೆ.

ಅತೀ ಎತ್ತರದಲ್ಲಿ ಬಾವುಟ ಹಾರಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದಂತೆಯೇ, ಜಾಕ್‌ಮಂಜು ಅವರಿಗೊಂದು ಯೋಚನೆ ಬಂದಿದೆ. ಯಾಕೆ ದುಬೈನಲ್ಲಿರುವ ಬುರ್ಜ್‌ ಖಲೀಫ ಮೇಲೆ ಇದನ್ನೆಲ್ಲಾ ಮಾಡಬಾರದು ಅಂತಂದುಕೊಂಡು ಇಷ್ಟೆಲ್ಲಾ ಮಾಡಲು ಕಾರಣವಾಯಿತು ಎನ್ನುತ್ತಾರೆ ಜಾಕ್‌ ಮಂಜು. ಅಂದಹಾಗೆ, ಅದಕ್ಕೆಲ್ಲಾ ಕೋಟಿಗಟ್ಟಲೆ ಖರ್ಜು ಬೇಕೇ ಬೇಕು. ಆದರೆ, ದೊಡ್ಡ ಮಟ್ಟದಲ್ಲೇ ಸುದೀಪ್‌ ಅವರ ಚಿತ್ರದ ಟೈಟಲ್‌ ಲಾಂಚ್‌ ಮಾಡಬೇಕು ಅಂದುಕೊಂಡು, ಈ ಕೆಲಸ ಮಾಡಿದ್ದಾರೆ. ಇನ್ನು, ಅಲ್ಲಿಗೆ ಖರ್ಚು ಮಾಡಿದ ಹಣದಲ್ಲಿ ನಾಲ್ಕು ಕಲಾತ್ಮಕ ಚಿತ್ರಗಳನ್ನು ಮಾಡಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿರುವುದಂತೂ ನಿಜ.

Categories
ಸಿನಿ ಸುದ್ದಿ

ಬೆಳ್ಳಿತೆರೆಗೆ ಸುದೀಪ್‌ ಅವರದ್ದು ಐರನ್‌‌ ಲೆಗ್ಗಾ? ಗೋಲ್ಡನ್‌ ಲೆಗ್ಗಾ?

ನಟ ಕಿಚ್ಚ ಸುದೀಪ್‌ ಅವರೇ ಈ ಬಗ್ಗೆ ಏನ್ ಹೇಳ್ತಾರೆ ಕೇಳಿ….

ಅಭಿನಯ ಚಕ್ರವರ್ತಿ ಅಂತಲೇ ಜನಪ್ರಿಯತೆ ಪಡೆದ ನಟ ಕಿಚ್ಚ ಸುದೀಪ್‌ ಅವರ ಸಿನಿಜರ್ನಿಗೆ ಈಗ ೨೫ ವರ್ಷ. ಸದ್ಯ ಸುದೀಪ್‌ ಈಗ ಅದೇ ಖುಷಿಯಲ್ಲಿದ್ದಾರೆ. ಯಾಕಂದ್ರೆ, ಒಬ್ಬ ನಟಿನಿಗೆ ಯಶಸ್ವಿ ೨೫ ವರ್ಷ ಅನ್ನೋದು ಸುಲಭವಾದದ್ದೇನು ಅಲ್ಲ. ಸೋಲಿಗಿಂತ ಹೆಚ್ಚಾಗಿ ಗೆಲುವು ಸಾಧಿಸಿಕೊಂಡಾಗಲೇ ಅದೆಲ್ಲ ಸಾಧ್ಯ. ಆ ವಿಚಾರದಲ್ಲಿ ನಟ ಸುದೀಪ್‌ ಒಬ್ಬ ಯಶಸ್ವಿ ನಟ.

ಅದಕ್ಕೆ ಅದೃಷ್ಟ ಎನ್ನಬೇಕೋ, ಇಲ್ಲವೇ ಕಠಿಣವಾದ ಪರಿಶ್ರಮ ಎನ್ನಬೇಕೋ ಗೊತ್ತಿಲ್ಲ. ಆದರೆ ಸ್ಯಾಂಡಲ್‌ ವುಡ್‌ನಲ್ಲಿ ಅವರ ಬಗ್ಗೆ ಇದ್ದ ಅಭಿಪ್ರಾಯವೇ ಬೇರೆ. ಸಿನಿಮಾ ಅಂತ ಬಂದಾಗ ಅವರ ಬಗ್ಗೆ ಕೆಲವರು ಐರನ್‌ ಲೆಗ ಅಂದಿದ್ದಾರೆ. ಹಾಗೆಯೇ ಕೆಲವರು “ಗೋಲ್ಡನ್‌ ಲೆಗ್‌ʼ ಅಂತ ಪ್ರಶಂಸೆ ವ್ಯಕ್ತಪಡಿಸಿದ್ದೂ ಇದೆ. ಹಾಗಾದ್ರೆ ಇವೆರೆಡು ಅಭಿಪ್ರಾಯಗಳಲ್ಲಿ ಯಾವುದು ಸರಿ ? ನಟ ಸುದೀಪ್‌ ಅವರ ಪ್ರಕಾರವೇ ಯಾವುದು ಸರಿ, ಯಾವುದು ತಪ್ಪು ?

ನಟ ಸುದೀಪ್‌ ಅವರು ತಮ್ಮ ಸಿನಿಜರ್ನಿಯ ೨೫ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭಾನುವಾರ(ಫೆ.೭) ದಂದು ಬೆಂಗಳೂರಿನ ಪಂಚತಾರಾ ಹೋಟೆಲ್‌ ನಲ್ಲಿ ಮಾಧ್ಯಮದವರೊಂದಿಗೆ ಒಂದು ಔತಣಕೂಟ ಆಯೋಜಿಸಿದ್ದರು. ಹಾಗೆಯೇ ಅಲ್ಲಿ ಅವರ ಬಹು ನಿರೀಕ್ಷಿತ ʼವಿಕ್ರಾಂತ್‌ ರೋಣʼ ಚಿತ್ರದ ಮೊದಲ ಸುದ್ದಿ ಗೋಷ್ಠಿ ಕೂಡ ಇತ್ತು. ಅದರ ಮಾತುಕತೆ ನಂತರ ಸುದೀಪ್‌ ಅವರಿಗೆ ಎದುರಾಗಿದ್ದು ಐರನ್‌ ಲೆಗ್‌ ಹಾಗೂ  ಗೋಲ್ಡನ್‌ ಲೆಗ್‌ ಬಗೆಗಿನ ಪ್ರಶ್ನೆ.

ಸಿನಿಮಾ ಮಂದಿ ನಡುವೆ ನಿಮ್ಮ ಬಗ್ಗೆ ಎರಡು ಅಭಿಪ್ರಾಯಗಳಿದ್ದವು. ಸುದೀಪ್‌ ಅಂದ್ರೆ ಐರನ್‌ ಲೆಗ್‌ ಅಂತ ಕೆಲವರು ಹೇಳಿದ್ರೆ, ಮತ್ತೆ ಕೆಲವರು ಸುದೀಪ್‌ ಅವರದ್ದು ಗೋಲ್ಡನ್‌ ಲೆಗ್‌ ಅಂತಲೂ ಹೇಳಿದ್ದರು. ಈ ಬಗ್ಗೆ ನೀವೇನು ಹೇಳ್ತೀರಾ ? ನಿಮ್ಮ ಪ್ರಕಾರ ಯಾವುದು ಸರಿ ? ಮಾಧ್ಯಮದವರು ಕೇಳಿದ ಈ ಪ್ರಶ್ನೆಗೆ ಸುದೀಪ್‌ ನೀಡಿದ ಉತ್ತರ ಮಾತ್ರ ಮಜಾ ವಾಗಿತ್ತು.” ಐರನ್‌ ಲೆಗ್ಗೋ, ಗೋಲ್ಡನ್‌ ಲೆಗ್ಗೋ ಗೊತ್ತಿಲ್ಲ. ನಂಗೆ ದೇವರು ಕೊಟ್ಟ ಎರಡು ಕಾಲುಗಳು ಮಾತ್ರ ಇವೆ. ಅವೆಲ್ಲ ಅಪ್ಪ-ಅಮ್ಮನ ಕೊಡುಗೆ. ನಂಗೆ ಅವಷ್ಟೇ ಸಾಕು, ಬೇರೆನೋ ಲೆಗ್‌ ಬೇಡ.” ಎಂದು ನಗುತ್ತಲೇ ಮಾರ್ಮಿಕವಾಗಿ ಉತ್ತರಿಸಿದರು ನಟ ಸುದೀಪ್.

Categories
ಸಿನಿ ಸುದ್ದಿ

ಪೋರ್ನ್‌ ಮೂವಿ ರಾಕೆಟ್‌ನಲ್ಲಿ ಸಿಕ್ಕಿಬಿದ್ದ ಹೆಸರಾಂತ ನಟಿ

ಪೊಲೀಸ್‌ ಕಸ್ಟಡಿಯಲ್ಲಿರುವ ಗೆಹನಾ ವಸಿಷ್ಠ್‌ ನಿಜಕ್ಕೂ ಅಪರಾಧಿಯೇ?

ಹಿಂದಿ ಕಿರುತೆರೆ ಹಾಗೂ ಸಿನಿಮಾ ನಟಿ ಗೆಹನಾ ವಸಿಷ್ಠ್‌ ಅವರನ್ನು ಮುಂಬಯಿಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪೋರ್ನ್‌ ವೀಡಿಯೋಗಳಲ್ಲಿ ಪಾಲ್ಗೊಳ್ಳುವಂತೆ ಯುವತಿಯರನ್ನು ಓಲೈಸುತ್ತಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರು ಬಂಧನಕ್ಕೊಳಗಾಗಿದ್ದಾರೆ. ತಮ್ಮ ವೆಬ್‌ಸೈಟ್‌ನಲ್ಲಿ ಅಶ್ಲೀಲ, ಅನಪೇಕ್ಷಿತ ವೀಡಿಯೋಗಳನ್ನು ಹಾಕುತ್ತಿದ್ದರು ಎನ್ನುವ ಆರೋಪವೂ ಅವರ ಮೇಲಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಆಕೆಯೊಂದಿಗೆ ಇನ್ನೂ ಐವರು ಪೊಲೀಸರ ಕಸ್ಟಡಿಯಲ್ಲಿದ್ದಾರೆ.

ಛತ್ತೀಸ್‌ಘಡ ಮೂಲದ ಗೆಹನಾ ವಸಿಷ್ಠ ಅವರ ನಿಜನಾಮಧೇಯ ವಂದನಾ ತಿವಾರಿ. 2012ರ ಮಿಸ್‌ ಏಷ್ಯಾ ಬಿಕಿನಿ ಸ್ಪರ್ಧೆಯಲ್ಲಿ ವಿಜೇತರಾದ ಅವರು ಜಾಹೀರಾತು, ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟರು. ಮುಂದೆ ಕಿರುತೆರೆ, ಸಿನಿಮಾರಂಗದಲ್ಲೂ ತೊಡಗಿಸಿಕೊಂಡರು. ‘ಗಂಧಿ ಬಾತ್‌’ ವೆಬ್‌ ಸರಣಿ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ಗೆಹನಾ ಸ್ಟಾರ್‌ ಪ್ಲಸ್‌ನ ‘ಬೆಹನೀನ್‌’ ಸರಣಿಯಲ್ಲೂ ಹೆಸರು ಮಾಡಿದ್ದಾರೆ. ಲಕ್ನೋವಿ ಇಶ್ಕ್‌, ದಾಲ್‌ ಮೇ ಕುಚ್‌ ಕಾಲಾ ಹೈ ಸೇರಿದಂತೆ ಕೆಲವು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ.

ವೆಬ್‌ ಸರಣಿಗಳಲ್ಲಿ ಅವಕಾಶ ಕೊಡುವುದಾಗಿ ಯುವತಿಯರಿಗೆ ಆಮಿಷ ಒಡ್ಡಿ ಅವರನ್ನು ಪೋರ್ನ್‌ ವೀಡಿಯೋದಲ್ಲಿ ಕಾಣಿಸಿಕೊಳ್ಳುವಂತೆ ಗೆಹನಾ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಆದರೆ ಮತ್ತೊಂದು ವಾದದ ಅನ್ವಯ ಗೆಹನಾ ಜನಪ್ರಿಯತೆಯನ್ನು ಸಹಿಸದೆ ಹಿತಶತ್ರುಗಳು ಆಕೆಯನ್ನು ಈ ಆರೋಪಕ್ಕೆ ಸಿಲುಕಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. “ಈ ವಿಚಾರದಲ್ಲಿ ಗೆಹನಾ ನಿರ್ದೋಷಿ. ಆಕೆ ಯಾವುದೇ ಪೋರ್ನ್‌ ರಾಕೆಟ್‌ನಲ್ಲಿ ತೊಡಗಿಕೊಂಡಿಲ್ಲ. ತಮ್ಮ ಜಿವಿ ಸ್ಟುಡಿಯೋದ ನಿರ್ದೇಶಕಿ, ನಿರ್ಮಾಪಕಿಯಾಗಿ ಅವರು ಕಾನೂನಿಗೆ ಮೀರಿ ಯಾವುದೇ ರೀತಿಯ ಕಾರ್ಯಚಟುವಟಿಕೆ ಕೈಗೊಂಡಿಲ್ಲ. ಇದೊಂದು ದೊಡ್ಡ ಪಿತೂರಿ” ಎಂದು ಗೆಹನಾ ವಕೀಲರು ವಾದ ಮಾಡುತ್ತಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಮುಂದಿನ ಕೆಲವೇ ದಿನಗಳಲ್ಲಿ ಹೊರಬೀಳಲಿದೆ.

error: Content is protected !!