ಸ್ಕೇರಿ ಫಾರೆಸ್ಟ್‌ನಲ್ಲಿ ಭಾವನೆಗಳ ಪಯಣ

ಫೆ.28ಕ್ಕೆ ಸಿನಿಮಾ ಬಿಡುಗಡೆ

ಕನ್ನಡಕ್ಕೆ ಥ್ರಿಲ್ಲರ್‌ ಸಿನಿಮಾಗಳು ಹೊಸದೇನಲ್ಲ. ದಿನ ಕಳೆದಂತೆ ಅವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಥ್ರಿಲ್ಲರ್‌ ಸಿನಿಮಾ ನೋಡುವ ವರ್ಗವೇ ದೊಡ್ಡದಿದೆ. ಹಾಗಾಗಿ, ಹೊಸಬಗೆಯ ಥ್ರಿಲ್ಲರ್‌ ಚಿತ್ರಗಳು ಇಲ್ಲಿ ಬರುತ್ತಲೇ ಇವೆ. ಆ ಸಾಲಿಗೆ ಈಗ “ಸ್ಕೇರಿ ಫಾರೆಸ್ಟ್‌” ಎಂಬ ಹೊಸಬರ ಚಿತ್ರ ಕೂಡ ಸೇರಿದೆ. ಸಂಜಯ್ ಅಬೀರ್ ನಿರ್ದೇಶನದ ಈ ಚಿತ್ರ ಫೆ.೨೮ ರಂದು ಬಿಡುಗಡೆಯಾಗುತ್ತಿದೆ.

 

 

 

 

ಚಿತ್ರದ ಬಗ್ಗೆ ಹೇಳುವುದಾದರೆ, ಕಾಲೇಜು ಸ್ಟೂಡೆಂಟ್ಸ್‌ ಸೇರಿ ಸಂಶೋಧನೆಗೆ ಕಾಡಿಗೆ ತೆರಳಿ ಅಲ್ಲಿ ಯಾವುದೆಲ್ಲ ಸಮಸ್ಯೆಗಳನ್ನು ಅನುಭವಿಸುತ್ತಾರೆ ಅನ್ನೋದು ಈ ಸಿನಿಮಾದ ಕಥೆ. ಮನುಷ್ಯನೋ, ಆತ್ಮನೋ ಎನ್ನುವ ಕುತೂಹಲ ಈ ಸಿನಿಮಾದಲ್ಲಿ ‌ಕ್ಯೂರಿಯಾಸಿಟಿ ಈ ಸಿನಿಮಾದಲ್ಲಿದೆ ಎಂಬುದು ಚಿತ್ರತಂಡದ ಮಾತು.

 

 

 

 

 

 

 

ಸಿನಿಮಾದಲ್ಲಿ ಆರು ಹಾಡುಗಳಿವೆ. ಎಲ್ಲಾ ಜಾನರ್‌ ಹಾಡುಗಳು ಇಲ್ಲಿ ಕಾಣಬಹುದು. ನಿರ್ದೇಶಕ ಸಂಜಯ್ ಅಬೀರ್ ಸಿನಿಮಾ ಬಗ್ಗೆ ಹೇಳುವುದಿಷ್ಟು. ಇದೊಂದು ಭಾವನೆಗಳ ಗುಚ್ಛವಿರುವ ಚಿತ್ರ. ಒಳ್ಳೆಯ ತಂಡದೊಂದಿಗೆ ಉತ್ಸಾಹದಿಂದ ಈ ಸಿನಿಮಾ ಮಾಡಲಾಗಿದೆ, ಎಲ್ಲಾ ವರ್ಗಕ್ಕೂ ಇದು ಇಷ್ಟವಾಗಲಿದೆ ಎನ್ನುತ್ತಾರೆ ಅವರು. ಜಯಪ್ರಭ ಚಿತ್ರದ ಹೀರೋ.

 

 

 

 

 

 

ಸಿನ್ಮಾ ಕುರಿತು ಹೇಳುವ ಅವರು, “ನಾನು ಹುಟ್ಟಿನಿಂದಲೇ ರಾಜ್ ಕುಮಾರ್ ಅಭಿಮಾನಿ‌. ಬಾಲಿವುಡ್ ನನಗೆ ಬೇಸ್ ಆಯಿತು. ಒಂದೊಳ್ಳೆಯ ಕಥೆಯಲ್ಲಿ ನಾನಿದ್ದೇನೆ ಅನ್ನೋದು ಹೆಮ್ಮೆ ಎಂಬುದು ಅವರ ಮಾತು. ನಾಯಕಿ ಟೀನಾ ಪೊನ್ನಪ್ಪ. ಕೂಡ ಪಾತ್ರದ ಬಗ್ಗೆ ಹೇಳಿಕೊಂಡು, ಶೇ. 90 ರಷ್ಟುಚಿತ್ರೀಕರಣ ಸಿದ್ಧಗಂಗಾ ಮಠದಲ್ಲಿ ನಡೆದಿದೆ.

 

 

 

 

 

 

 

ಅಮ್ರಿನಾ ಕಲ್ಪನಾ ಅವರಿಲ್ಲಿ 22 ವರ್ಷದ ಹುಡುಗಿಯ ಪಾತ್ರ ನಿರ್ವಹಿಸಿದ್ದಾರಂತೆ. “ಪ್ರೀತಿಯ ಬಲೆಯಲ್ಲಿ ಹೇಗೆ ಬೀಳ್ತೀನಿ, ಹೀರೋನ ಇಷ್ಟ ಪಟ್ಟರೆ, ಹೀರೋ ಮತ್ತೊಬ್ಬಳ ಪ್ರೀತಿಯ ಬಲೆಯಲ್ಲಿ ಬೀಳ್ತಾಳೆ. ನನಗೆ ಆಮೇಲೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದು ಕಥೆ. ಈ ಸಿನಿಮಾಗೆ ದೇವರಾಜ್, ಪ್ರಕಾಶ ಹಾಡನ್ನು ಬರೆದು ಹಾಡಿದ್ದಾರೆ. “ಪ್ರೀತಿ, ಭಯ, ಆತ್ಮ” ಎಂಬ ಅಡಿಬರಹವಿದೆ. ಪಂಚಾಕ್ಷರಿ, ಬೇಬಿ ಪೂಜಾ, ಪರಶಿವಯ್ಯ, ಸಾಹಿತಿ ದೇವರಾಜ್ ಪ್ರಕಾಶ್ ಇತರರು ಸಿನಿಮಾ ಬಗ್ಗೆ ಹೇಳಿಕೊಂಡರು.

 

Related Posts

error: Content is protected !!