Categories
ಸಿನಿ ಸುದ್ದಿ

ಅಂಬಿ ಮಾಮ ಎನ್ನುತ್ತಿದ್ದರು ಜಯಂತಿ ; ಹೀಗನ್ನುತ್ತಿದ್ದರು ಕರ್ಣ ?

ಅಭಿನಯ ಶಾರದೆ ಜಯಂತಿಯವರು ದೈಹಿಕವಾಗಿ ಮರೆಯಾಗಿರಬಹುದು ಅಷ್ಟೇ ಶತಶತಮಾನಗಳು ಉರುಳಿದರೂ ಕೂಡ ಪಾತ್ರಗಳ ಮೂಲಕ ಅಜರಾಮರವಾಗಿರುತ್ತಾರೆ. ಮುಖಕ್ಕೆ ಬಣ್ಣ ಹಚ್ಚಿದಾಗಿನಿಂದ ಬಣ್ಣದ ಲೋಕದಲ್ಲಿ ಅಭಿನೇತ್ರಿಯಾಗಿ ಮಿಂಚಿದ ಜಯಂತಿಯವರು ಕೋಟ್ಯಾಂತರ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಡಾ ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯ್‌ಕುಮಾರ್, ಎನ್‌ಟಿರಾಮ್‌ರಾವ್, ಜೆಮಿನಿ ಗಣೇಶನ್, ಎಂ.ಜಿ ರಾಮಚಂದ್ರನ್ ಸೇರಿದಂತೆ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ದಿಗ್ಗಜರೊಟ್ಟಿಗೆ ತೆರೆಹಂಚಿಕೊಂಡು ಸೈ ಎನಿಸಿಕೊಂಡವರು ಜಯಂತಿಯವರು. ಇಂತಿಪ್ಪ ಈ ಎವರ್‌ಗ್ರೀನ್ ನಾಯಕಿ ರೆಬೆಲ್‌ಸ್ಟಾರ್ ಅಂಬರೀಷ್ ಅವರೊಟ್ಟಿಗೂ ಸ್ಕ್ರೀನ್ ಶೇರ್ ಮಾಡಿದ್ದರು.
ವಜ್ರದ ಜಲಪಾತ, ಲೀಡರ್ ವಿಶ್ವನಾಥ್, ಹೊಸ ತೀರ್ಪು, ಮಸಣದ ಹೂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಂಬರೀಷ್ ಹಾಗೂ ಜಯಂತಿಯವರು ಒಟ್ಟಿಗೆ ನಟಿಸಿದ್ದರು.

ಮಂಡ್ಯದ ಗಂಡು ಅಂಬರೀಷ್‌ರನ್ನ ನಟಿ ಜಯಂತಿಯವರು ಅಂಬಿಮಾಮ ಎನ್ನುತ್ತಿದ್ದರು ಅನ್ನೋದು ಇಂಟ್ರೆಸ್ಟಿಂಗ್ ವಿಷ್ಯ. ಹೌದು, ಶೂಟಿಂಗ್ ಸೆಟ್‌ನಲ್ಲಿ ರೆಬೆಲ್‌ಸ್ಟಾರ್‌ನ ಜಯಂತಿಯವರು ಅಂಬಿಮಾಮ ಎನ್ನುತ್ತಿದ್ದರಂತೆ. ಇದಕ್ಕೆ ಅಂಬ್ರೀಶ್‌ಯವರು ನೀನು `ಜೇಡರಭಲೇ’ ಎಂದು ಪ್ರೀತಿಯಿಂದಲೇ ರೇಗಿಸುತ್ತಿದ್ದರಂತೆ ಈ ಸಂಗತಿಯನ್ನ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ಕೊಟ್ಟಾಗ ಸ್ವತಃ ಜಯಂತಿಯವರೇ ಬಿಚ್ಚಿಟ್ದಿದ್ದರು.

ಸಿನಿಮಾ ಹೊರತಾಗಿಯೂ ಅಂಬರೀಶ್ ಹಾಗೂ ಅವರ ಕುಟುಂಬದೊಟ್ಟಿಗೆ ಜಯಂತಿ ಅಮ್ಮನವರು ಆತ್ಮೀಯತೆ ಬೆಸೆದುಕೊಂಡಿದ್ದರು. ಅಭಿನಯ ಶಾರದೆಯ ಆರೋಗ್ಯ ಹದಗೆಟ್ಟಿದೆ ಎನ್ನುವ ಸುದ್ದಿ ತಿಳಿದರೆ ಸಾಕು ಅಂಬಿಯಣ್ಣ ಎಲ್ಲೇ ಇದ್ದರೂ ಓಡೋಡಿ ಬರುತ್ತಿದ್ದರು. ಆಸ್ಪತ್ರೆಗೆ ಭೇಟಿಕೊಟ್ಟು ಕಷ್ಟ-ಸುಖ ವಿಚಾರಿಸುತ್ತಿದ್ದರಲ್ಲದೇ ಜಯಂತಿ ಅಮ್ಮವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದರು. ಸುಮಲತಾ ಅಂಬರೀಷ್ ಕೂಡ ಅಮ್ಮನವರ ಕ್ಷೇಮ-ಸಮಾಚಾರ ವಿಚಾರಿಸಿಕೊಳ್ಳುತ್ತಿದ್ದರು. ಈಗ ಅಮ್ಮನವರ ಅಗಲಿಕೆಗೆ ಸುಮಲತಾ ಕೂಡ ಕಂಬನಿ ಮಿಡಿದಿದ್ದಾರೆ. `ಕನ್ನಡದ ಮೇರು ನಟಿ, ಅಭಿನಯ ಶಾರದೆ ಹಾಗೂ ನನ್ನ ನಲ್ಮೆಯ ಜಯಂತಿ ಅಮ್ಮನ ನಿಧನದ ಸುದ್ದಿ ಅತೀವ ದುಃಖ ತಂದಿದೆ. ದಶಕಗಳಿಂದ ಅವರು ನಮ್ಮ ಕುಟುಂಬದ ಸದಸ್ಯರೇ ಆಗಿದ್ದು, ನಮ್ಮ ಸುಖ ದುಃಖಗಳಲ್ಲಿ ಜೊತೆಗಿದ್ದರು. ಅವರ ನಿಧನದಿಂದ ಭಾರತದ ಚಿತ್ರರಂಗ ಒಂದು ಅಪೂರ್ವ ಅಭಿನೇತ್ರಿಯನ್ನು ಕಳೆದುಕೊಂಡು ಅನಾಥವಾಗಿದೆ’ ಎಂದು ಸುಮಲತಾ ಭಾವುಕರಾಗಿದ್ದಾರೆ.

Categories
ಸಿನಿ ಸುದ್ದಿ

ಚಿತ್ರನಟಿ ಜಯಂತಿ ನಿಧನಕ್ಕೆ ಸುನೀಲ್ ಪುರಾಣಿಕ್ ಕಂಬನಿ

ಅಭಿನಯ ಶಾರದೆ, ಖ್ಯಾತ ಅಭಿನೇತ್ರಿ ಜಯಂತಿ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕಂಬನಿ ಮಿಡಿದಿದ್ದಾರೆ. ಭಾರತೀಯ ಚಿತ್ರರಂಗದ ಮೇರು ನಟಿ ಜಯಂತಿ ಅವರು ಈ ಶತಮಾನ ಕಂಡ ಅತ್ಯಂತ ಜನಪ್ರಿಯ ಮತ್ತು ಮೋಹಕ ನಟಿ ಎಂದು ಹೆಸರು ಪಡೆದವರು.

ಮೂಲತಃ ಬಳ್ಳಾರಿಯವರಾದ ಅವರು 1963 ರಲ್ಲಿ ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.ಕಪ್ಪು ಬಿಳಿಪು ಚಿತ್ರದ ಕಾಲದಿಂದ ಇತ್ತೀಚಿನವರೆಗೂ ಅವರ ಚಿತ್ರರಂಗದ ಸಾಧನೆ ಅಪಾರ.ಡಾ.ರಾಜಕುಮಾರ್ ಅವರೊಂದಿಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ಹೆಗ್ಗಳಿಕೆ ಜಯಂತಿ ಅವರದು.ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಅವರ ಅಭಿನಯ ಸಾರ್ವಕಾಲಿಕ ಶ್ರೇಷ್ಠ ಅಭಿನಯ ಎಂದು ಪರಿಗಣಿಸಲ್ಪಟ್ಟಿದ್ದು,

ಜಯಂತಿ ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅದ್ಭುತ ಕಲಾವಿದೆಯನ್ನು ಕಳೆದು ಕೊಂಡಂತಾಗಿದೆ.ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗು ಜಯಂತಿಯವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಅಪಾರ ಅಭಿಮಾನಿಗಳು, ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಪುರಾಣಿಕ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಜೀವನ ಪಯಣ ಮುಗಿಸಿದ ಅಭಿನಯ ಶಾರದೆ- ಕಸ್ತೂರಿ ನಿವಾಸದ ಕಲಾವಿದೆಯ ಅಗಲಿಕೆಗೆ ಚಿತ್ರರಂಗ ಕಣ್ಣೀರು

ಕನ್ನಡ‌ ಚಿತ್ರರಂಗ ಕಂಡ ಅತ್ಯದ್ಭುತ ನಟಿ, ಅಭಿನಯ ಶಾರದೆ ಎಂತನೇ ಜನಪ್ರಿಯಗೊಂಡಿದ್ದ ಹಿರಿಯ‌ ನಟಿ ಜಯಂತಿಯವರು ಜೀವನ ಪಯಣ ಮುಗಿಸಿದ್ದಾರೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಅಮ್ಮ ಭಾನುವಾರ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯುಂಟಾಗಿ ಕೊನೆಯುಸಿರೆಳೆದಿದ್ದಾರೆ. ಅಭಿನಯ ಶಾರದೆಯ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

500 ಚಿತ್ರಗಳಲ್ಲಿ ಅಭಿನಯ ಶಾರದೆ ಮಿಂಚು

ಜೇನುಗೂಡು ಜಯಂತಿಯವರು ಬಣ್ಣ ಹಚ್ಚಿದ ಮೊದಲ‌ ಕನ್ನಡದ ಸಿನಿಮಾ.‌ ತಮ್ಮ ಎರಡನೇ ಚಿತ್ರ ಚಂದವಳ್ಳಿಯ ತೋಟದಲ್ಲಿ ಡಾ ರಾಜ್ ಕುಮಾರ್ ಗೆ ನಾಯಕಿಯಾದರು. ಅಣ್ಣಾವ್ರು ಹಾಗೂ ಅಭಿನಯ ಶಾರದೆಯ ಜೋಡಿ ಕೂಡ ಅಭಿಮಾನಿ ದೇವರುಗಳ ಮನಸ್ಸು ಗೆದ್ದಿತ್ತು. ಜಯಂತಿ ಯವರಿಗೆ ಡಾ ರಾಜ್ ಕುಮಾರ್ ಜೊತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಚಂದವಳ್ಳಿಯ ತೋಟ, ಮಿಸ್ ಲೀಲಾವತಿ, ಮಂತ್ರಾಲಯ ಮಹಾತ್ಮೆ, ಲಗ್ನ ಪತ್ರಿಕೆ, ಜೇಡರಭಲೇ, ಶ್ರೀ ಕೃಷ್ಣದೇವರಾಯ, ಪರೋಪಕಾರಿ, ಕಸ್ತೂರಿ ನಿವಾಸ, ದೇವರು ಕೊಟ್ಟ ತಂಗಿ, ಎಡಕಲ್ಲು ಗುಡ್ಡದ ಮೇಲೆ, ಮಸಣದ ಹೂ, ಚಿತ್ರಗಳಲ್ಲಿ ಜಯಂತಿ ಅಣ್ಣಾವ್ರಿಗೆ ಜೋಡಿಯಾಗಿದ್ದರು.

ಇಂದಿರಾಗಾಂಧಿಯವರಿಂದ ಪ್ರಶಸ್ತಿ ಸ್ವೀಕಾರ !

ಮಿಸ್ ಲೀಲಾವತಿ ಚಿತ್ರದ ಜಯಂತಿ ಅವರ ಅಭಿನಯಕ್ಕೆ ರಾಜ್ಯಪ್ರಶಸ್ತಿ ಮುಡಿಗೇರಿತ್ತು. ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಜಯಂತಿ ಅವರಿಗೆ ರಾಷ್ಟ್ರ ಪ್ರಶಸ್ತಿ ಪ್ರಧಾನ ಮಾಡಿದ್ದರು. ʼಮಿಸ್ ಲೀಲಾವತಿ’ ನಟಿ ಜಯಂತಿಯವರ ಖ್ಯಾತಿಯನ್ನ ಉತ್ತುಂಗಕ್ಕೇರಿಸಿದ ಚಿತ್ರ. ಮಡಿ ವಂತಿ ಕೆಯ ಸಂಪ್ರದಾಯವನ್ನು ಮುರಿದು ಜಯಂತಿಯವರು ಮಾದಕ ನಟಿಯಾಗಿ ಮಿಂಚಿದ್ದೇ ಬಂತು ಸ್ಯಾಂಡಲ್ ವುಡ್ ಅಂಗಳ ದಲ್ಲಿ ಸುಂಟರಗಾಳಿ ಎಬ್ಬಿಸಿದರು. ಸ್ವಿಮ್ ಸೂಟ್ ಧರಿಸಿದ ಮೊದಲ ಕನ್ನಡದ ನಟಿ ಎನ್ನುವ ಖ್ಯಾತಿ ಗಳಿಸಿದರು. ಮೋಸ್ಟ್ ಬೋಲ್ಡ್ ಅಂಡ್ ಬ್ಯೂಟಿಫುಲ್ ನಾಯಕಿ ಪಟ್ಟಕ್ಕೇರಿ ತಮ್ಮದೇ ಆದ ನಯಾ ಮೇನಿಯಾ ಸೃಷ್ಟಿಸಿಕೊಂಡರು.

ಸ್ಕರ್ಟ್, ಟೀಶರ್ಟ್, ಸ್ವಿಮ್ ಸೂಟ್ ಈ ತರ ಮತ್ತೇರಿಸೋ ಕಾಸ್ಟ್ಯೂಮ್ ನಲ್ಲಿ ಕ್ಯಾಮೆರಾ ಮುಂದೆ ನಿಲ್ಲೋಕೆ ಅಂಜುತ್ತಿದ್ದ ಕಾಲವದು. ಅಂತಹ ಟೈಮ್ ನಲ್ಲಿ ನಟಿ ಜಯಂತಿಯವರು ಮನಸ್ಸನ್ನು ಬಿಗಿಯಾಗಿಸಿ ಕೊಂಡರು. ಯಾವುದೇ ಪಾತ್ರವಾದರೂ ಸರೀ ಲೀಲಾಜಾಲ ವಾಗಿ ಮಾಡಬಲ್ಲೇ ಎನ್ನುವಂತೆ ಯಾವುದೇ ಕಾಸ್ಟ್ಯೂಮ್ ಆದರೂ ಸರೀ ಅದನ್ನು ಧರಿಸಿ ಪಾತ್ರಕ್ಕೋಸ್ಕರ ಕ್ಯಾಮೆರಾ ಮುಂದೆ ನಿಲ್ಲಬಲ್ಲೇ ಎಂಬುದನ್ನು ಮಿಸ್ ಲೀಲಾವತಿ‌ ಚಿತ್ರದ ಮೂಲಕ ತೋರಿಸಿಕೊಟ್ಟರು. ಜಯಂತಿಯವರು ಕ್ಲಿಕ್ ಆದರೂ, ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯ್ತು.

ಅಭಿನಯ ಶಾರದೆ ಕನ್ನಡಕ್ಕಷ್ಟೇ ಅಲ್ಲ…

ಕನ್ನಡ, ತೆಲುಗು, ತಮಿಳು. ಮಲೆಯಾಳಂ, ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಮೇರುನಾಯಕಿಯಾಗಿ‌ ಮಿಂಚಿದರು. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಸಿನಿಮಾ ನಟನೆಗೆ ಏಳು ಭಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಎರಡು ಭಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡಿದ್ದರು. ಕನ್ನಡ ಚಿತ್ರರಂಗ ಕೊಟ್ಟ ಅಭಿನಯ ಶಾರದೆ ಎನ್ನುವ ಕಿರೀಟಕ್ಕೆ ಮುತ್ತಿಟ್ಟಿದ್ದರು.

ಒನಕೆ ಓಬ್ಬವ್ವಳಾಗಿ ಕರ್ನಾಟಕದ ಆರೂವರೆ ಕೋಟಿ ಮಂದಿಯ ಮನಸ್ಸು ಗೆದ್ದರು. ಕಮಲ‌ಕುಮಾರಿ ನಟಿ ಜಯಂತಿಯವರ ಹುಟ್ಟು ನಾಮಧೇಯ. ಚಿತ್ರರಂಗಕ್ಕೆ ಬಂದಮೇಲೆ ಜಯಂತಿ ಅಂತ ಹೆಸರು ಬದಲಾಯಿಸಿ ಕೊಂಡರು. ಹುಟ್ಟೂರು ಬಳ್ಳಾರಿ. ಬಾಲಸುಬ್ರಹ್ಮಣ್ಯಂ ಮತ್ತು ಸಂತಾನ ಲಕ್ಷ್ಮಿಯವರ ಸು ಪುತ್ರಿಯಾಗಿ ಜನಿಸಿದರು. ಈಗ ಪುತ್ರನನ್ನ ಅಗಲಿದ್ದಾರೆ. ಅಮ್ಮನ ಅಗಲಿಕೆಗೆ ಮಗ ಮಾತ್ರವಲ್ಲ ಇಡೀ ಸಿನಿಮಾ ಲೋಕ ಕಂಬನಿ‌ ಮಿಡಿಯುತ್ತಿದೆ

Categories
ಸಿನಿ ಸುದ್ದಿ

ತೋರ ಬಾರದ ಬೆಟ್ಟು ತೋರಿಸಿ ಬೆಪ್ಪಾದ ಚಂದ್ರಚೂಡ್ – ತಪ್ಪಾಯ್ತು ಬಿಡಿ ಸರ್, ಅಂದ್ರು ಬಿಡಲಿಲ್ಲ ಕಿಚ್ಚ ಸುದೀಪ್, ಮಾಡಿದ ತಪ್ಪಿಗೆ ಹೊರ ಬರ್ತಾರಾ ಚೂಡ್!

ಚಕ್ರವರ್ತಿ.. ಚಕ್ರವರ್ತಿ.. ಚಕ್ರವರ್ತಿ.. ಈ‌ ಹೆಸರಿಗೊಂದು ಘನತೆಯಿದೆ , ಗೌರವವಿದೆ , ಬೆಲೆಕಟ್ಟಲಾಗದ ಶಕ್ತಿಯಿದೆ. ಮಾತ್ರವಲ್ಲ ಶತಶತ ಮಾನ ಗಳಿಂದಲೂ ಚಕ್ರವರ್ತಿ ಎನ್ನುವ ಹೆಸರಿಗೆ ಒಂದು ವಿಶೇಷವಾದ ಸ್ಥಾನವಿದೆ. ಮಾನವಿದೆ. ಅದು ಇಡೀ ಮನುಕುಲಕ್ಕೆ ಗೊತ್ತಿರುವ ಸತ್ಯ.‌ ಆದರೂ ಈ ಚಕ್ರವರ್ತಿ ಮಾತ್ರ ಚಕ್ರವರ್ತಿ ಎನ್ನುವ ಹೆಸರಿಗೆ ಕಳಂಕವೇ? ಹೆಣ್ಣು ಅಂದ್ರೆ ಈ ಚಕ್ರವರ್ತಿಗೆ ಅದ್ಯಾಕೆ ಅಷ್ಟು ಕೋಪ? ಇಷ್ಟಕ್ಕೂ ನಾವ್ ಇಲ್ಲಿ ಹೇಳ್ತಿರೋದು ಅದ್ಯಾವ ಚಕ್ರವರ್ತಿ ಅಂತ ನೀವೇನು ಕನ್ ಪ್ಯೂಸ್ ಆಗೋದು ಬೇಡ.‌ನಾವಿಲ್ಲಿ ಹೇಳ್ತಿರೋದು ನಿರ್ದೇಶಕ, ಬರಹಗಾರ, ಪತ್ರಕರ್ತ ಹಾಗೂ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾ ಗಿರುವ ಚಕ್ರವರ್ತಿ ಚಂದ್ರಚೂಡ್ ಅವರ ಬಗ್ಗೆ.

ಹಾಗಂತ ಅವರದೇನು ಕಥೆ ಅಂತ ವಿವರಿಸಿ ಹೇಳಬೇಕಿಲ್ಲ ಅನಿಸು ತ್ತೆ.ಬಿಗ್ ಬಾಸ್ ಮನೆಯಲ್ಲಿ ಒಂದು ಹೆಣ್ಣು ಮಗಳಿಗೆ ಆತ , ಕೋಪದಿಂದ ತೋರ ಬಾರದ ಬೆರಳು ತೋರಿಸಿದ ಕಾರಣಕ್ಕೆ ಆ ಯುವತಿ ನೊಂದು ಕೊಂಡಿದ್ದು ಅಷ್ಟಿಷ್ಟಲ್ಲ. ಅದನ್ನು ಇಡೀ ಕರುನಾಡೇ ಕಂಡು‌ ಕ್ಯಾಕರಿಸಿ ಉಗಿಯಿತು. ಸೋಷಲ್ ಮೀಡಿಯಾದಲ್ಲಿ ಆ ಏಪಿಸೋಡ್ ಗೆ ಬಂದ ಕಾಮೆಂಟ್ ನೋಡಿದ್ರೆ, ಅಬ್ಬಾ, ಚಕ್ರವರ್ತಿ ಚಂದ್ರಚೂಡ್ ಗೆ ಪಿಂಕಿ ಅಲಿಯಾಸ್ ಪ್ರಿಯಾಂಕಾ ಅವರ ಶಾಪ ಮಾತ್ರವಲ್ಲ ಸಕಲ ಹೆಣ್ಣು ಮಕ್ಕಳ ಶಾಪ ತಟ್ಟುವುದಂತೂ ಗ್ಯಾರಂಟಿ ಅಂತೆನಿಸಿ ದ್ದು ಹೌದು. ಅದೇನಾಗುತ್ತೋ ಗೊತ್ತಿಲ್ಲ, ಆದರೆ ಬಿಗ್ ಬಾಸ್ ನಿರೂಪಕರಾದ ಕಿಚ್ಚ ಸುದೀಪ್ ಮಾತ್ರ ಶಮಿವಾರ ಕೆಂಡಾಮಂಡ‌ಲ‌ ಆಗಿದ್ದನ್ನು ಕಂಡ ಕರುನಾಡು ಒಂದು ಕ್ಷಣ ಅಚ್ಚರಿಯಿಂದ ನೋಡಿದ್ದಂತೂ ಹೌದು. ಯಾಕಂದ್ರೆ ಚಂದ್ರ ಚೂಡ್ ಗೆ ನಟ ಸುದೀಪ್ ಕ್ಲಾಸ್ ತೆಗೆದುಕೊಂಡ ಪರಿಯೇ ಹಾಗಿತ್ತು.

ಶನಿವಾರ ಚಕ್ರವರ್ತಿಗೆ ಚಳಿಬಿಡಿಸಿರುವ ಕಿಚ್ಚ ಭಾನುವಾರ ಗೇಟ್ ಪಾಸ್ ಕೊಟ್ಟು ಕಳುಹಿಸೋದು ಖಚಿತ ಎನ್ನುವ ಮಾತು ಕೇಳಿಬರ್ತಿದೆ. ಅದಕ್ಕೆ ಕಾರಣ ಈ‌ ಘಟನೆಯಿಂದ ಚಂದ್ರಚೂಡ್ ಮೇಲೆ ಸುದೀಪ್ ಅವರಿಗಿರುವ ಕೋಪ ಅಂತ ಭಾವಿಸಬೇಕಿಲ್ಲ. ಯಾಕಂದ್ರೆ ಈ ವಾರ ನಾಮಿನೇಟ್ ಆದವರ ಪೈಕಿ ಚಂದ್ರಚೂಡ್ ಕೂಡ ಒಬ್ಬರು. ಶುಭಾಪುಂಜಾ, ಪ್ರಶಾಂತ್ ಸಂಬರ್ಗಿ, ಶಮಂತ್, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ ಈ ಐವರು ಈ ವಾರ ನಾಮಿನೇಟ್ ಆಗಿದ್ದಾರೆ. ಈ ಐವರಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರೇ ಕಿಕ್ ಔಟ್ ಆಗೋದು ಎನ್ನುವ ಸುದ್ದಿ ಹಲ್ ಚಲ್ ಎಬ್ಬಿಸುತ್ತಿದೆ. ಅದಕ್ಕೆ ಬೆಟ್ಟು ತೋರಿಸಿದ ವಿವಾದವೂ ಒಂದು.

ಅಂದ್ಹಾಗೇ ಚಕ್ರವರ್ತಿ ಚಂದ್ರಚೂಡ್ ಫಿನಾಲೆಗೆ ತಲುಪಲಿದ್ದ ಕ್ಯಾಂಡಿಡೇಟ್. ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಮಿಸ್ಸಾಗಬಹುದು. ಆದರೆ ಫೈನಲ್ ತಲುಪೋದು ಗ್ಯಾರಂಟಿ ಎನ್ನುವ ಮಾತು ಜನರ ಬಾಯಲ್ಲಿ ಬಂದಿತ್ತು. ಆದ್ರೀಗ, ಅದೇ ಜನರ ಬಾಯಲ್ಲಿ ಚಕ್ರವರ್ತಿಗೆ ಗೇಟ್ ಪಾಸ್ ಕೊಡಿಸುವ ಮಾತು ಕೇಳಿಬರ್ತಿದೆ. ಅದಕ್ಕೆ ಕಾರಣ ಪಿಂಕಿ ಅಲಿಯಾದ್ ಪ್ರಿಯಾಂಕಾ ತಿಮ್ಮೇಶ್ ಬಿಗ್ ಬಾಸ್ ನಿಂದ ಕಿಕ್ ಔಟ್ ಆದಾಗ ಚಕ್ರವರ್ತಿ ಮಧ್ಯದ ಬೆರಳನ್ನು ಅಶ್ಲೀಲವಾಗಿ ತೋರಿಸಿದ್ದಿರೆನ್ನುವುದೇ ಕಾರಣ. ಇಷ್ಟಕ್ಕೂ ಚಂದ್ರಚೂಡ್ ಅವರಿಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಅವರ ಮೇಲೆ ಅದ್ಯಾಕೆ ಅಷ್ಟು ಕೋಪವೋ ಗೊತ್ತಿಲ್ಲ. ಅವರನ್ನು ಕಂಡಾಗೆಲ್ಲ ಗುರ್ ಎನ್ನುತ್ತಿದ್ದರು. ಕೊನೆಗೆ ಆ ಸಿಟ್ಟು ತೋರಿಸಿಯೇ ಬಿಟ್ಟರು. ಆದರೆ ಅದರ ಪರಿಣಾಮ ಈಗ ಬೇರೆಯೇ ಆಗಿದೆ.

ಹೆಣ್ಣುಮಕ್ಕಳಿಗೆ ತುಂಬಾ ಗೌರವ ಕೊಡ್ತೀನಿ ಅಂತ ಗರ್ವದಿಂದ ಹೇಳಿಕೊಳ್ಳುವ ಚಕ್ರವರ್ತಿಯವರು ಅಶ್ಲೀಲ ಸನ್ನೆ ತೋರಿಸಿದ್ದಕ್ಕೆ ಹೆಣ್ಣು ಮಕ್ಕಳು ಮಾತ್ರವಲ್ಲ ರಾಜ್ಯದ ಜನರು ಕೆಂಡಾಮಂಡಲವಾದರು. ಬಿಗ್ ಬಾಸ್ ಕಿಚ್ಚ ಕೂಡ ಇದನ್ನ ಖಂಡಿಸಿದರು. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಕೊನೆಗೆ ಚಕ್ರವರ್ತಿಯವರು ನನ್ನಿಂದ ತಪ್ಪಾಯ್ತು ಅಂತ ಒಪ್ಪಿಕೊಂಡರು. ಆದರೆ, ರಾಜ್ಯದ ಜನರು‌ ಚಕ್ರವರ್ತಿಯವರ ಕ್ಷಮೆಯನ್ನ ಮನ್ನಿಸ್ತಾರಾ ? ಹೆಣ್ಣು ಮಕ್ಕಳ ಶಾಪದಿಂದ ಚಂದ್ರಚೂಡ್‌ ವಿಮುಕ್ತರಾಗುತ್ತಾರಾ? ಸದ್ಯಕ್ಕೆ ನಾಮಿನೇಟೆಡ್‌ ಆಗಿರುವ ಚಂದ್ರಚೂಡ್‌ ವಿಲಿಮಿನೇಟ್‌ ಆಗೋದ್ರಿಂದಲೂ ಈ ವಾರ ತಪ್ಪಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ಈ ವಾರ ಎಲಿಮಿನೇಟೆಡ್‌ ಪ್ರಕ್ರಿಯೆಯೇ ಇಲ್ಲ ಎನ್ನಲಾಗಿದೆ. ಆದರೆ ಮುಂದೆ?

ಈ‌ ನಡುವೆ ಕಿಚ್ಚನ ಅದೊಂದು ಮಾತು ಚಕ್ರವರ್ತಿ ಕಿಕ್ ಔಟ್ ಆಗೋ ದು ಪಕ್ಕಾ ಎನ್ನುವುದಕ್ಕೆ ರೆಕ್ಕೆ ಪುಕ್ಕ ಕಟ್ಟುತ್ತಿದೆ. ಮುಂದಿನ ವಾರ ನೀವಿದ್ದರೆ ಕ್ಲಿಪ್ಪಿಂಗ್ಸ್ ಸಮೇತ ತೋರಿಸ್ತೀನಿ ಅಂತ ಕಿಚ್ಚ ಹೇಳಿದ ಮಾತನ್ನ ಸೂಕ್ಷ್ಮವಾಗಿ ಗಮನಿಸಿದರೆ ಮುಂದಿನ‌ ವಾರ ಅಲ್ಲ ಇವತ್ತು ರಾತ್ರಿಯಿಂದಲೇ ಚಕ್ರವರ್ತಿಯವರಿಗೆ ದೊಡ್ಮನೆಯಲ್ಲಿ ಜಾಗವಿಲ್ಲ ಎನ್ನುವ ಅನುಮಾನ‌ ಮೂಡ್ತಿದೆ.‌ ಈ‌ ಅನುಮಾನ ಬರೀ ಅನುಮಾನ ವಾಗಿ ಉಳಿಯುತ್ತಾ? ಜಸ್ಟ್ ವೇಯ್ಟ್ ಅಂಡ್ ವಾಚ್.

Categories
ಸಿನಿ ಸುದ್ದಿ

ಆ ಜಾಗಕ್ಕೆ ಹೋಗಿ ಬಂದರೆ ದಾಸನಿಗೆ ನೆಮ್ಮದಿ; ಪ್ರತಿವರ್ಷ ಅಲ್ಲಿಗೆ ಭೇಟಿಕೊಡ್ತಾರೆ ದಚ್ಚು !

ಈ ಜಗತ್ತಲ್ಲಿ ದುಡ್ಡು ಕೊಟ್ಟರೇ ಏನ್ ಬೇಕಾದರೂ ಸಿಗುತ್ತೆ ಆದರೆ ಆ ಎರಡನ್ನು ಹೊರತುಪಡಿಸಿ. ಯಾವುದು ಆ ಎರಡು ಅಂದರೆ ಹೆತ್ತವರ ನಿಷ್ಕಲ್ಮಶ ಪ್ರೀತಿ ಮತ್ತು ನೆಮ್ಮದಿ. ಈ ವಿಚಾರ ನಿಮ್ಮೆಲ್ಲರಿಗೂ ಗೊತ್ತೆಯಿರುತ್ತೆ ಬಿಡಿ. ಅಷ್ಟಕ್ಕೂ, ನಾವ್ ಈಗ ಹೇಳೋದಕ್ಕೆ ಹೊರಟಿರುವುದು ದಚ್ಚು ನೆಮ್ಮದಿ ಅರಸಿ ಹೊರಟ ಜಾಗದ ಬಗ್ಗೆ

ಕಳೆದ ಕೆಲವು ದಿನಗಳಿಂದ ಸಾರಥಿಯ ನೆಮ್ಮದಿ ಕದಡುವಂತಹ ಘಟನೆಗಳು ನಡೆಯುತ್ತಲೇ ಇವೆ. ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ ಪ್ರಕರಣದಿಂದ ಶುರುವಾದ ವಿವಾದ ದೊಡ್ಮನೆ ಆಸ್ತಿ ಮೇಲೆ ದಾಸ ಕಣ್ಣುಹಾಕಿದ್ದರು ಎಂಬಲ್ಲಿಗೆ ಬಂದುನಿಂತಿರುವುದನ್ನು ಇಡೀ ಕರುನಾಡು ನೋಡಿದೆ. ಯಾವುದು ಸತ್ಯ-ಯಾವುದು ಸುಳ್ಳು ಎಂಬುದು ತಿಳಿಯುತ್ತಿಲ್ಲ. ಬರೀ ಆರೋಪ-ಪ್ರತ್ಯಾರೋಪಗಳೇ ನಡೆಯುತ್ತಿವೆ. ಈ ಮಧ್ಯೆ ಚಾಲೆಂಜಿಂಗ್ ಚಕ್ರವರ್ತಿಯ ಹೆಸರಿಗೆ ಮಸಿ ಬಳಿಯುವ ಹಾಗೂ ತೇಜೋವಧೆ ಮಾಡುವಂತಹ ಕೆಲಸ ಆಗ್ತಿದೆಯೆಂದು ದಾಸನ ಭಕ್ತರು ಕೆಂಡಾಮಂಡಲಗೊಂಡಿದ್ದಾರೆ. `ಸತ್ಯಾನಾ ಧಫನ್ ಮಾಡುವ ಕಫನ್ ಇನ್ನೂ ಯಾರೂ ಕಂಡುಹಿಡಿದಿಲ್ಲ’ ಎನ್ನುತ್ತಾ ಗರ್ಜಿಸಿರುವ ಜಗ್ಗುದಾದ, ನೆಮ್ಮದಿ ಅರಸಿ ಆ ದಿವ್ಯಜಾಗಕ್ಕೆ ಭೇಟಿಕೊಟ್ಟಿದ್ದಾರೆ

ದಾಸ ದೇವರ ಮಗ ಅಪ್ಪಟ ದೈವಭಕ್ತ ಎಂಬುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಕಷ್ಟ-ದುಃಖ-ನೋವು-ನಲಿವು-ಸುಖ-ಸಂಭ್ರಮ ಏನೇ ಇರಲಿ ತಾಯಿ ಚಾಮುಂಡೇಶ್ವರಿಯ ಸನ್ನಿಧಿಗೆ ಭೇಟಿಕೊಟ್ಟು ದೇವಿಯ ಆಶೀರ್ವಾದ ಬೇಡುವ ದಾಸ, ಬೆಂಗಳೂರಿನ ಬಂಡಿಮಹಾಕಾಳಮ್ಮ, ಮಂಜುನಾಥಸ್ವಾಮಿ, ತಿರುಪತಿ ತಿಮ್ಮಪ್ಪ, ರಾಘವೇಂದ್ರಸ್ವಾಮಿಯನ್ನು ಆರಾಧಿಸುತ್ತಾರೆ. ಅದರಂತೇ, ತಮಿಳುನಾಡಿನ ತಿರುನಲ್ಲಾರ್‌ನಲ್ಲಿರುವ ಶನಿಮಹಾರಾಜನಿಗೆ ನಡೆದುಕೊಳ್ಳುತ್ತಾರೆ. ಪ್ರತಿವರ್ಷ ಶನಿಮಹಾತ್ಮ ದೇಗುಲಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಶನಿಮಹಾರಾಜನ ಸನ್ನಿಧಿಗೆ ಸಾರಥಿ ಪ್ರತಿವರ್ಷ ಭೇಟಿ !

ಪ್ರತಿವರ್ಷದಂತೆ ಈ ವರ್ಷವೂ ಸಾರಥಿ ತಮಿಳುನಾಡಿನ ತಿರುನಲ್ಲಾರ್‌ನಲ್ಲಿರುವ ಶನಿಮಹಾತ್ಮನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಸ್ನೇಹಿತರ ಜೊತೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿರುವ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿವಾದಗಳು ಒಂದಾದ ಮೇಲೊಂದರಂತೆ ಸುತ್ತಿಕೊಳ್ಳುತ್ತಿರುವ ಈ ಹೊತ್ತಲ್ಲಿ ದಿವ್ಯದೇಗುಲಕ್ಕೆ ದಚ್ಚು ಭೇಟಿಕೊಟ್ಟಿರುವುದರಿಂದ ನೆಮ್ಮದಿ ಅರಸಿ ದಾಸ ಶನಿಮಹಾತ್ಮನ ಸನ್ನಿಧಿಗೆ ತೆರಳಿದ್ದಾರೆಂದು ಸುದ್ದಿಯಾಗ್ತಿದೆ.

ಶನಿಮಹಾರಾಜನ ದರ್ಶನ ಮಾಡಿದರೆ ಶನಿಭಾದೆ ಇರುವುದಿಲ್ಲ ಎಂಬ ನಂಬಿಕೆಯಿದೆ. ದೈವಶಕ್ತಿಯ ಮೇಲೆ ಅಪಾರ ನಂಬಿಕೆಯಿಟ್ಟಿರುವ ದೇವರ ಮಗ ದಾಸ, ಬಂದದ್ದೆಲ್ಲಾ ಬರಲಿ ನಿನ್ನ ದಯೆಯೊಂದು ಇರಲೆಂದು ಬೇಡಿಕೊಂಡರ‍್ತಾರೆ. ತನ್ನೊಟ್ಟಿಗೆ ತನ್ನ ಸುತ್ತಮುತ್ತಲಿನವರನ್ನು ಕಾಪಾಡೆಂದು ಸದಾ ಬೇಡುವ ಸಾರಥಿಗೆ ತಿರುನಲ್ಲಾರ್‌ನಲ್ಲಿರುವ ನೆಲೆಸಿರುವ ಶನಿಮಹಾರಾಜ ತಥಾಸ್ತು ಎನ್ನದಿರಲು ಸಾಧ್ಯವೇ ನೀವೇ ಹೇಳಿ.

ಆರೋಪಗಳಿಂದ ಮುಕ್ತಿ ಸಿಗಲಿ ಸಾರಥಿಗೆ

ಸದ್ಯಕ್ಕೆ ದಚ್ಚು ಮೇಲೆ ಕೇಳಿಬರುತ್ತಿರುವ ಆರೋಪಗಳು ಹುಸಿಯಾಗಲಿ. ದಾಸನ ಹೆಸರಲ್ಲಿ ೨೫ ಕೋಟಿ ಲಪಟಾಯಿಸೋಕೆ ಸ್ಕೆಚ್ ಹಾಕಿದವರು ಮೊದಲು ತಗಲಾಕಿಕೊಳ್ಳಲಿ.
ಸಾರಥಿ-ಉಮಾಪತಿ ನಡುವೆ ಹುಳಿಹಿಂಡೋಕೆ ಪ್ರಯತ್ನಪಟ್ಟವರು ಯಾರೆಂಬ ಸತ್ಯ ತಿಳಿಯಲಿ. ಉಮಾಪತಿಯವರು ದಚ್ಚು ಜೊತೆ ಮುಂದಿನ ಸಿನಿಮಾ ಅನೌನ್ಸ್ ಮಾಡಲಿ. ಪ್ರೇಮ್ ಅಂಡ್ ರಕ್ಷಿತಾ ಪ್ರೇಮ್ ಜೊತೆ ದಚ್ಚು ಪಾರ್ಟಿ ಮಾಡುವ ಟೈಮ್ ಬರಲಿ. ಮೈಸೂರಿನ ಸ್ನೇಹಿತರ ಜೊತೆ ಮೊದಲಿನಂತೆ ಕುಳಿತು ಫಾರ್ಮ್ಹೌಸ್‌ನಲ್ಲಿ ಬಿರಿಯಾನಿ ಸವಿಯಲಿ.ಇಂದ್ರಜಿಂತ್ ಲಂಕೇಶ್ ಅವರ ಆರೋಪದಲ್ಲಿ ಸತ್ಯವಿದ್ದರೆ ಕಾನೂನು ಅದನ್ನು ಸಾಬೀತುಮಾಡಲಿ ನಂತರ ಏನಾಗ್ಬೇಕೋ ಅದು ಆಗುತ್ತೆ ಅದನ್ನು ಯಾರು ತಪ್ಪಿಸೋದಕ್ಕೆ ಆಗಲ್ಲ. ಅಲ್ಲಿವರೆಗೂ ಗಾಳಿಲಿ ಗುಂಡು ಹಾರಿಸೋದನ್ನು ಕಡಿಮೆ ಮಾಡ್ಲಿ ಎಲ್ಲರೂ ಅನ್ನೋದೇ ಸಿನಿಲಹರಿ ಆಶಯ

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಾಫ್ಟ್ ವೇರ್ ಟು ಸ್ಯಾಂಡಲ್‌ವುಡ್-11 ವರ್ಷದ ಸಂಭ್ರಮ; ಸಿಂಪಲ್‌ಸ್ಟಾರ್‌ಗೆ ನ್ಯಾಷನಲ್‌ಸ್ಟಾರ್ ಕಿರೀಟ !

ಅಣ್ಣಾವ್ರು, ವಿಷ್ಣುದಾದಾ, ಶಂಕರ್‌ನಾಗ್‌ರಂತಹ ದಿಗ್ಗಜರು ಕಟ್ಟಿಬೆಳೆಸಿದ ಗಂಧದಗುಡಿಯಲ್ಲಿ ಶೆಟ್ರು ನಾಯಕನಾಗಿ ಮೆರವಣಿಗೆ ಹೊರಟು ಹನ್ನೊಂದು ವರ್ಷ ತುಂಬಿದೆ. ಈ ಸಂತೋಷವನ್ನು-ಸಂಭ್ರಮವನ್ನು ಶೆಟ್ಟರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದು ಸಾಫ್ಟ್ ವೇರ್ ಕೆಲಸಕ್ಕೆ ಗುಡ್‌ಬೈ ಹೇಳಿ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ಗೋಧಿಬಣ್ಣ ಸಾಧಾರಣ ಮೈಕಟ್ಟಿನ ಶೆಟ್ರು ಸ್ಯಾಂಡಲ್‌ವುಡ್‌ನ ಶೇಕ್ ಮಾಡಿದ್ದಾರೆ. ಹನ್ನೊಂದು ವರ್ಷದ ಸಿನಿಜರ್ನಿಯಲ್ಲಿ ನಾಯಕರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂದು 1 ಕೋಟಿ 35 ಲಕ್ಷದ ಹೊಡೆತಕ್ಕೆ ಸಿನಿಮಾ ಸಹವಾಸವೇ ಬೇಡ ಅಂತ ನಿರ್ಧರಿಸಿದ್ದ ಶೆಟ್ಟರು ಇಂದು ಕೋಟಿ ಕೋಟಿ ಎಣಿಸುತ್ತಿದ್ದಾರೆ. ರಿಚರ್ಡ್ ಆಂಟನಿಯಾಗಿ ಹೊಸ ಸವಾಲ್‌ವೊಂದನ್ನು ಸ್ವೀಕರಿಸಿದ್ದಾರೆ.

ಶೆಟ್ಟರು ಈಗ ಕೇವಲ ಸಿಂಪಲ್‌ಸ್ಟಾರ್ ಆಗಿ ಉಳಿದಿಲ್ಲ..ಸ್ಯಾಂಡಲ್‌ವುಡ್‌ಗೆ ಮಾತ್ರ ಸೀಮಿತವಾಗಿಲ್ಲ.. ಬದಲಿಗೆ ಬಾರ್ಡರ್ ದಾಟಿದ್ದಾರೆ, ಪರಭಾಷಾ ಅಂಗಳದಲ್ಲೂ ಹವಾ ಎಬ್ಬಿಸಿದ್ದಾರೆ, ಅವನೇ ಶ್ರೀಮನ್ನಾರಾಯಣನ ಅವತಾರವೆತ್ತುವ ಮೂಲಕ ನ್ಯಾಷನಲ್‌ಸ್ಟಾರ್ ಪಟ್ಟಕ್ಕೇರಿ ನಯಾ ಮೇನಿಯಾ ಸೃಷ್ಟಿಸಿಕೊಂಡಿದ್ದಾರೆ. ಈ ಎಲ್ಲಾ ವಿಚಾರ ನಿಮ್ಮೆಲ್ಲರಿಗೂ ಗೊತ್ತು. ಅದರಂತೇ, ಬೆಳ್ಳಿಪರದೆ ಹಾಗೂ ಬಾಕ್ಸ್ಆಫೀಸ್‌ಗೂ ಗೊತ್ತು. ಹೀಗಾಗಿನೇ, ಶೆಟ್ಟರ ಹನ್ನೊಂದನೇ ವರ್ಷದ ಸಿನಿಮಾಜರ್ನಿಗೆ ಫ್ಯಾನ್ಸ್ ಜೊತೆ ಸಿಲ್ವರ್‌ಸ್ಕ್ರೀನ್ ಹಾಗೂ ಬಾಕ್ಸ್ಆಫೀಸ್ ಕೂಡ ಬೆಸ್ಟ್ ಆಫ್ ಲಕ್ ಹೇಳ್ತಿದೆ. `ರಿಚರ್ಡ್ ಆಂಟನಿಯಾಗಿ ಬಾ’ ಕಾಲೆಳೆದವರು ಕಣ್ಣುಜ್ಜಿಕೊಳ್ಳುವಂತೆ ಮಾಡ್ತೇವೆ. ನಿಮ್ಮವರೆಲ್ಲಾ ನೋಡ ನೋಡ ಎನ್ನುವಷ್ಟರಲ್ಲಿ ನಿನ್ನನ್ನು ಇಂಟರ್‌ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಸಿಬಿಡ್ತೇವೆ ಹೀಗಂತ ಈಗಲೇ ಮಾತನಾಡಿಕೊಳ್ಳುತ್ತಿವೆ ಬೆಳ್ಳಿಪರದೆ ಹಾಗೂ ಬಾಕ್ಸ್ಆಫೀಸ್ ಡಬ್ಬಗಳು.

ಅಪ್‌ಕೋರ್ಸ್ ಮಾತನಾಡಿಕೊಳ್ಳಲೆಬೇಕು ಯಾಕಂದ್ರೆ `ರಿಚರ್ಡ್ ಆಂಟನಿ’ ಸಾಮಾನ್ಯ ಸಿನಿಮಾ ಅಲ್ಲ. ರಿಚರ್ಡ್ ಆಂಟನಿಗೆ ದುಡ್ಡು ಹಾಕುತ್ತಿರುವವರು ಸಾಮಾನ್ಯರಲ್ಲ ಕೆಜಿಎಫ್‌ನಂತಹ ಚಿನ್ನದ ಸಾಮ್ರಾಜ್ಯದ ಒಡೆಯರು. ಇಡೀ ದೇಶವೇ ಕಣ್ಣರಳಿಸಿ ನೋಡುವಂತಹ ಸಿನಿಮಾ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಈಗ ನ್ಯಾಷನಲ್‌ಸ್ಟಾರ್ ರಕ್ಷಿತ್ ಶೆಟ್ಟಿಗೆ ಬಂಡವಾಳ ಸುರಿಯಲಿದ್ದಾರೆ. ಸಾಗರದ ಅಧಿಪತಿಯಾಗಲಿಕ್ಕೆ ಹೊರಟಿರುವ ಶೆಟ್ರಿಗೆ ಕೋಟಿ ಕೋಟಿ ಹೂಡೋದಕ್ಕೆ ಸಜ್ಜಾಗಿದ್ದಾರೆ. ಟೈಟಲ್‌ನಿಂದಲೇ ಬಜಾರ್‌ನಲ್ಲಿ ಧೂಳೆಬ್ಬಿಸಿರುವ ರಿಚರ್ಡ್ ಆಂಟನಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣಗೊಳ್ಳಲಿದೆ. ಶೆಟ್ರಿಗೆ ರಿಚರ್ಡ್ ಆಂಟನಿ ಸವಾಲಿನ ಸಿನಿಮಾ ಆಗಿದೆ. ಗಂಧದಗುಡಿಯಲ್ಲಿ ಸ್ವಂತ ಬ್ರ್ಯಾಂಡ್ ಆದರೂ ಕೂಡ ಕಾಲೆಳೆಯುತ್ತಿರುವ ಮಂದಿಗೆ ನಾಯಕ ಕಮ್ ನಿರ್ದೇಶನಾಗಿ ಟಕ್ಕರ್ ಕೊಡಬೇಕಿದೆ ಕೊಡ್ತಾರೆ ಎನ್ನುವ ಭರವಸೆ ಶೆಟ್ಟರ ಅಭಿಮಾನಿಗಳಲ್ಲಿದೆ.

ಅಂದ್ಹಾಗೇ, ಈಗಾಗಲೇ ಶೆಟ್ಟರು ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಉಳಿದವರು ಕಂಡಂತೆ' ಸಿನಿಮಾದ ಮೂಲಕ ತಮ್ಮೊಳಗಿನ ಚಿತ್ರಬ್ರಹ್ಮನನ್ನು ಬಣ್ಣದ ಲೋಕಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆಹೊಡೆಯಲಿಲ್ಲ ಅನ್ನೋದನ್ನ ಬಿಟ್ಟರೆ ರಕ್ಷಿತ್ ನಿರ್ದೇಶನದ ಕಲೆಗೆ ಬೆಲೆಕಟ್ಟಲಾಗದ ಪ್ರಶಂಸೆಗಳು ಈ ಚಿತ್ರಕ್ಕೆ ಹರಿದುಬಂದಿದ್ವು.ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಮೂಲಕ ಹೀರೋ ಆಗಿ ಸ್ವಲ್ಪ ಸೌಂಡ್ ಮಾಡಿದ ಶೆಟ್ಟರು, ಉಳಿದವರು ಕಂಡಂತೆ ಮೂಲಕ ಡೈರೆಕ್ಟರ್ ಕಮ್ ಹೀರೋ ಆಗಿ ಕಮಾಲ್ ಮಾಡಿದರು. ರಿಕ್ಕಿ ಚಿತ್ರ ಮಾಡಿ ಬಹುಪರಾಕ್ ಹಾಕಿಸಿಕೊಂಡರು. ಕಿರಿಕ್ ಪಾರ್ಟಿ ಮೂಲಕ ಬೆಳ್ಳಿಪರದೆಯನ್ನೇ ಹುಚ್ಚೆಬ್ಬಿಸಿ ಅವನೇ ಶ್ರೀಮನ್ನಾರಾಯಣ'ನಾಗಿ ಗಡಿದಾಟಿದರು. ಈಗಚಾರ್ಲಿ’, `ಸಪ್ತಸಾಗರದಾಚೆ ಎಲ್ಲೋ’, ರಿಚರ್ಡ್ ಆಂಟನಿ ಚಿತ್ರಗಳ ಮೂಲಕ ಸಖತ್ ಸೌಂಡ್ ಮಾಡ್ತಿದ್ದಾರೆ.

ಶೆಟ್ಟರು ಸಾಮಾನ್ಯರಲ್ಲ ಗೋಲ್ಡನ್ ಸ್ಪೂನ್ ಬಾಯಲ್ಲಿಟ್ಟುಕೊಂಡೇ ಭೂಮಿಗೆ ಬಂದವರು. ವೆಲ್ ಎಜುಕೇಟೆಡ್ ಶೆಟ್ಟರು ಹೆಸರಾಂತ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು ೫೦೦೦೦ ಸಾವಿರ ಸಂಬಳ ಎಣಿಸುತ್ತಿದ್ದರು. ಈ ನಡುವೆ ಬಣ್ಣದ ಲೋಕದ ಕಡೆ ಆಕರ್ಷಿತರಾದರು. ಮುಖಕ್ಕೆ ಬಣ್ಣ ಹಚ್ಚಬೇಕು ಎನ್ನುವ ಕನಸು ಕಂಡರು. ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯಲ್ಲಿ ತನ್ನದೊಂದು ಛಾಪು ಮೂಡಿಸ್ಬೇಕು ಎನ್ನುವ ಹಠಕ್ಕೆ ಬಿದ್ದರು. ಅದರಂತೇ, ನಮ್ ಏರಿಯಲ್ ಒಂದಿನಾ' ಸಿನಿಮಾಗೆ ಬಣ್ಣ ಹಚ್ಚಿಕೊಂಡು ಹೀರೋ ಆದರು. ಚೊಚ್ಚಲ ಚಿತ್ರದಲ್ಲಿ ಚಮಕ್ ಕೊಡೋದಕ್ಕೆ ಆಗಲಿಲ್ಲ ಹಾಗಂತ ರಕ್ಷಿತ್ ಸೈಡಿಗೆ ಹೋಗಲಿಲ್ಲ ಬದಲಾಗಿತುಘಲಕ್’ ಚಿತ್ರದ ಮೂಲಕ ಮತ್ತೆ ಹೀರೋ ಆಗಿ ಕ್ಯಾಮೆರಾ ಎದುರಿಸಿದರು. ಅಷ್ಟೇ ಅಲ್ಲ ಭರ್ತಿ ಒಂದೂ ಕೋಟಿ ೩೫ ಲಕ್ಷ ಬಂಡವಾಳನೂ ಸುರಿದರು. ಆದರೆ, ತುಘಲಕ್ ದರ್ಬಾರ್ ಬೆಳ್ಳಿಪರದೆ ಮೇಲೆ ನಡೆಯಲಿಲ್ಲ ಹೀಗಾಗಿ ಶೆಟ್ಟರು ಸಿನಿಮಾ ಸಹವಾಸವೇ ಬೇಡ ಮತ್ತೆ ಸಾಫ್ಟ್ ವೇರ್ ಫೀಲ್ಡ್ ಗೆ ಹೋಗಿ `ತುಘಲಕ್’ ಸಾಲ ತೀರಿಸ್ತೀನಿ ಅಂತ ಗೆಳೆಯ ರಿಷಬ್ ಶೆಟ್ಟಿ ಜೊತೆ ತ್ರಿಭುವನ್ ಥಿಯೇಟರ್ ಮುಂದೆ ಹೇಳಿಕೊಂಡು ಕಣ್ಣೀರಿಟ್ಟರು. ಆಗ ರಕ್ಷಿತ್‌ಗೆ ಧೈರ್ಯ ತುಂಬಿದ್ದು ಗೆಳೆಯ ರಿಷಬ್ ಶೆಟ್ಟಿ.

ಅಂದು ರಕ್ಷಿತ್‌ಗೆ ರಿಷಬ್ ಶೆಟ್ಟಿಯವರು ಮಗಾ ನಾನು ನಿನ್ನ ಜೊತೆ ಇರ‍್ತೀನಿ ಅಂತ ಧೈರ್ಯ ತುಂಬದೇ ಹೋಗಿದ್ದರೆ, `ತುಘಲಕ್’ ಸೋಲಿಗೆ ಹಾಗೂ ಸಾಲಕ್ಕೆ ಹೆದರಿ ಸಿನಿಮಾ ಇಂಡಸ್ಟ್ರಿಗೆ ಗುಡ್‌ಬೈ ಹೇಳಿದರೆ ಇವತ್ತು ಶೆಟ್ಟರು ನ್ಯಾಷನಲ್‌ಸ್ಟಾರ್ ಆಗುತ್ತಿರಲಿಲ್ಲ. ಸ್ಯಾಂಡಲ್‌ವುಡ್ ಮಾತ್ರವಲ್ಲ ಪರಭಾಷಾ ಮಂದಿ ರಕ್ಷಿತ್ ಚಿತ್ರಕ್ಕೋಸ್ಕರ ಕಾಯುತ್ತಿರುವ ಘಳಿಗೆ ಬರುತ್ತಿರಲಿಲ್ಲ. ಕೋಟ್ಯಾಂತರ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ನಟನಾಗಿ-ನಿರ್ದೇಶಕನಾಗಿ-ನಿರ್ಮಾಪಕನಾಗಿ ಸೈ ಎನಿಸಿಕೊಳ್ಳೋದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಸ್ವಂತ ಬ್ರ್ಯಾಂಡ್ ಕಟ್ಟೋದಕ್ಕೆ, ಪರಂವಃ ಸ್ಟುಡಿಯೋ ಹುಟ್ಟಿಹಾಕೋದಕ್ಕೆ, ಹೊಸ ಪ್ರತಿಭೆಗಳಿಗೆ ರೆಡ್‌ಕಾರ್ಪೆಟ್ ಹಾಕೋದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಕೋಟಿ ಕೋಟಿ ಹಣ ಶೆಟ್ಟರ ಖಾತೆಯಲ್ಲಿ ಕುಣಿಯುತ್ತಿರಲಿಲ್ಲ. ಇಂದು ಇಷ್ಟೆಲ್ಲಾ ಸಾಧ್ಯವಾಗಿದೆ ಅಂದರೆ ಅದಕ್ಕೆ ಕಾರಣ ಸಿಂಪಲ್‌ಸ್ಟಾರ್‌ಗೆ ಸಿನಿಮಾ ಮೇಲಿರುವ ಶ್ರದ್ದಾಭಕ್ತಿ ಹಾಗೂ ಶೆಟ್ಟರ ಗೆಳೆಯರ ಬಳಗ ಅಂದರೆ ತಪ್ಪಾಗಲಿಕ್ಕಿಲ್ಲ. ಶೆಟ್ಟರು ಧೈರ್ಯ ಕಳೆದುಕೊಂಡಾಗ, ಕುಗ್ಗಿದಾಗ, ಬಿದ್ದಾಗ, ಶೆಟ್ಟರ ಸ್ನೇಹಬಳಗ ಕೈಹಿಡಿದು ಮೇಲೆತ್ತಿದೆ ಹೊಸ ಹುರುಪು ತುಂಬಿದೆ ಧೈರ್ಯ ಹೇಳಿ ಸಂತೈಸಿದೆ ಹೀಗಾಗಿ ಸಿಂಪಲ್‌ಸ್ಟಾರ್ ಸದ್ದಿಲ್ಲದೇ ನ್ಯಾಷನಲ್‌ಸ್ಟಾರ್ ಆದರೂ ಮುಂದೆ ಇಂಟರ್‌ನ್ಯಾಷನಲ್ ಸ್ಟಾರ್ ಕೂಡ ಆಗ್ತಾರೆ ಅದಕ್ಕೆ ಒಳ್ಳೆ ಟೈಮ್ ಬರಬೇಕು ಅಷ್ಟೆ. ಹೀಗಾಗಿ ಸಿಂಪಲ್‌ಸ್ಟಾರ್ ಹೇಳ್ತಿದ್ದಾರೆ ಅಪ್ನಾ ಟೈಮ್ ಆಯೇಗಾ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕನ್ನಡದಲ್ಲೂ ಜೈಭೀಮ್ ಹವಾ -ಅಂಬೇಡ್ಕರ್ ಅನುಯಾಯಿಗಳು ಖುಷ್ ಹುವಾ !

ಟೈಟಲ್ ಓದಿದಾಕ್ಷಣ ಅರೆ, ಇದೇನು ಅಂತ ನಿಮಗನಿಸಿರಬಹುದು. ʼಮಹಾನಾಯಕʼ ಸೀರಿಯಲ್ ನಂತರ ಕನ್ನಡದ ಕಿರುತೆರೆಯಲ್ಲಿ ‘ಜೈ ಭೀಮ್’ ಹೆಸರಲ್ಲಿ ಮತ್ತೊಂದು ಸೀರಿಯಲ್ ಶುರುವಾಗುತ್ತಾ ಎನ್ನುವ ಲೆಕ್ಕಚಾರವೂ ಹುಟ್ಟಿರಬಹುದು. ಯಾಕಂದ್ರೆ ಈಗ ಮಹಾನಾಯಕ ಅಥವಾ ಜೈ ಭೀಮ್‌ ಅಂತ ಸಿನಿಮಾ ಅಥವಾ ಸೀರಿಯಲ್‌ ಪೂರಕವಾಗಿ ಹೇಳಿದರೆ, ಹಾಗೆಂದು ಭಾವಿಸುವಷ್ಟು ಜನಪ್ರಿಯತೆ ಕನ್ನಡದಲ್ಲಿ ಮಹಾನಾಯಕ ಸೀರಿಯಲ್‌ ತಂದಿಟ್ಟಿದೆ. ಆದರೆ ಇದು ಸೀರಿಯಲ್‌ ಕಥೆ ಅಲ್ಲ. ಸಿನಿಮಾವೇ ಹೌದು. ಹಾಗಂತ ಕನ್ನಡದವರು ಮಾಡುತ್ತಿಲ್ಲ. ಬದಲಿಗೆ ತಮಿಳಿನ ಹೆಸರಾಂತ ನಟ ಸೂರ್ಯ ಅಲಿಯಾಸ್‌ ಸೂರ್ಯ ಶಿವಕುಮಾರ್‌ ಅವರ 39ನೇ ಚಿತ್ರದ ಹೆಸರು ಜೈ ಭೀಮ್.‌

ಶುಕ್ರವಾರವಷ್ಟೇ ನಟ ಸೂರ್ಯ ತಮ್ಮ 46ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ಆ ಹುಟ್ಟು ಹಬ್ಬದ ಪ್ರಯುಕ್ತ ಅವರು ʼಜೈ ಭೀಮ್‌ʼ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಪೋಸ್ಟರ್‌ ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಷ್ಟು ಮಾತ್ರವಲ್ಲ, ಸೌತ್ ಸಿನಿಮಾ ಇಂಡಸ್ಟ್ರಿನಲ್ಲಿ ಸಖತ್ ಸೌಂಡ್ ಮಾಡಿದೆ. ಯಾಕಂದ್ರೆ ಅದು ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡವೂ ಸೇರಿದಂತೆ ಭಾರತದ ಬಹು ಭಾಷೆಗಳಲ್ಲಿ ಬರುತ್ತಿದೆ. ಅವೆಲ್ಲ ಭಾಷೆಗಳಲ್ಲೂ ಚಿತ್ರ ತಂಡ ಪೋಸ್ಟರ್‌ ರಿವೀಲ್‌ ಮಾಡಿದೆ.

ಪೋಸ್ಟರ್‌ ಸಖತ್‌ ಸುದ್ದಿ ಮಾಡಿದ್ದು ಸೂರ್ಯ ಅವರ ಪಾತ್ರದ ಲುಕ್‌ ಕಾರಣಕ್ಕೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಇದು ಅಂಬೇಡ್ಕರ್‌ ಅವರ ಕುರಿತ ಕಥಾಹಂದರದ ಚಿತ್ರ. ಹಾಗಂತ ಚಿತ್ರ ಶೀರ್ಷಿಕೆಯೇ ಹೇಳುತ್ತೆ. ಹಾಗಂತ ಇದು ಅಂಬೇಡ್ಕರ್‌ ಅವರ ಇಡೀ ಜೀವನ ಕಥೆ ಆಧರಿಸಿದ ಸಿನಿಮಾ ಅಲ್ಲ. ಈಗ ಲಾಂಚ್‌ ಆಗಿರುವ ಪೋಸ್ಟರ್‌ ನಲ್ಲಿ ನಟ ಸೂರ್ಯ ಅವರದ್ದು ಲಾಯರ್‌ ಪಾತ್ರ. ಅಲ್ಲಿಗೆ ಈ ಚಿತ್ರದ ಕಥಾ ಹಂದರ ಅಂಬೇಡ್ಕರ್‌ ಒಬ್ಬ ಲಾಯರ್‌ ಆಗಿ, ಯಾರ ಪರವಾಗಿ ಧ್ವನಿ ಎತ್ತಿದ್ದರು, ಯಾರ ವಿರುದ್ಧ ಹೇಗೆಲ್ಲ ಕಾನೂನಿನ ಮೂಲಕ ಗೆದ್ದರು ಅನ್ನೋದನ್ನು ಬಯೋಪಿಕ್ ಮಾದರಿಯಲ್ಲಿ ತೋರಿಸುವುದಕ್ಕೆ ಹೊರಟ ಸಿನಿಮಾ. ಪೋಸ್ಟರ್‌ ಲಾಂಚ್‌ ಹಿನ್ನೆಲೆಯಲ್ಲಿ ಬಂದ ವರದಿಗಳ ಪ್ರಕಾರ ಚಿತ್ರದ ನಾಯಕ, ದೇಶದ ಬುಡಕಟ್ಟು ಜನರ ಪರವಾಗಿ ಕೋರ್ಟ್‌ನಲ್ಲಿ ವಾದಿಸುವ ಒಬ್ಬ ಜನಪರ ಲಾಯರ್. ಅಲ್ಲಿಂದ ಆತನಿಗೆ ವ್ಯವಸ್ಥೆಯಲ್ಲಿ ಏನೆಲ್ಲ ಸವಾಲು ಏದುರಾದವು‌, ಅವುಗಳನ್ನು ಆತ ಏದುರಿಸಿದ ಏನ್ನುವ ಎಳೆಗಳೇ ಚಿತ್ರಕಥೆಯ ಹೈಲೆಟ್ಸ್‌ ಅಂತೆ.

ಅದೇನೆ ಇರಲಿ, ಸಿನಿಮಾದ ಕಥೆ ಏನು ಎನ್ನುವುದರ ಫುಲ್‌ ಡಿಟೈಲ್ಸ್‌ ಸಿನಿಮಾ ಬಂದಾಗ ನಿಮಗೂ ಸಿಗುತ್ತೆ. ಅದರಾಚೆ ಇಲ್ಲಿ ವಿಶೇಷ ಎನಿಸಿದ್ದು ಸೂರ್ಯ ಅವರಂತಹ ಒಬ್ಬ ಕರ್ಮಷಿಯಲ್‌ ಹೀರೋ, ಇಂತಹ ಸಾಮಾಜಿಕ ಕಾಳಜಿಯ ಕಥೆಯೊಳಗೂ ತಾನು ನಟಿಸಬಲ್ಲೆ ಅಂತ ಮುಂದಾಗಿದ್ದು. ಹಾಗಂತ ಅವರಿಗೇನು ಇದು ಹೊಸದಲ್ಲ, ನಟನೆಯನ್ನು ಒಂದ್ರೀತಿ ಪ್ರಯೋಗಾತ್ಮಕ ಎನ್ನುವ ಹಾಗೆಯೇ ಸ್ವೀಕರಿಸಿದ ಅಪರೂಪದ ನಟ ಅವರು. ಅದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ಬಂದು ಹೋದʼ ಸೂರರೈ ಪೋಟ್ರುʼ ಸಿನಿಮಾ. ಇದು ಕನ್ನಡದವರೇ ಆದ ಏರ್‌ಡೆಕ್ಕನ್‌ ವಿಮಾನ ಸಂಸ್ಥೆಯ ಮಾಲೀಕರಾಗಿದ್ದ ಕ್ಯಾಪ್ಟನ್‌ ಗೋಪಿನಾಥ್‌ ಅವರ ಜೀವನದ ಕಥೆ. ಅದರಲ್ಲಿಯೇ ಅತ್ಯಾದ್ಬುತವಾಗಿ ನಟಿಸಿದ್ದ ಸೂರ್ಯ, ಕನ್ನಡದಲ್ಲೂ ಮನೆ ಮಾತಾದರು ಎನ್ನುವುದು ಅಷ್ಟೇ ಸತ್ಯ. ಈಗ ಅಂತಹದೇ ಮತ್ತೊಂದು ಜನಪ್ರಿಯ ವ್ಯಕ್ತಿಯ ಕಥೆಯಲ್ಲಿ ಸೂರ್ಯ ನಾಯಕರಾಗಿದ್ದು ಕನ್ನಡದಲ್ಲೂ ಸದ್ದು ಮಾಡಿದೆ.

ಪೋಸ್ಟರ್‌ ಈಗಾಗಲೇ ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲೂ ಬಂದಿವೆ. ದೊಡ್ಡ ಕುತೂಹಲ ಅಂಬೇಡ್ಕರ್‌ ಅವರ ನ್ಯಾಯವಾದಿ ಬದುಕಿನೊಂದಿಗೆ ತೆರೆದುಕೊಂಡಿದೆ. ಅಂಬೇಡ್ಕರ್‌ ಅನುಯಾಯಿ ಗಳಂತೂ ಸೂರ್ಯ ಅವರ ಹೊಸ ಅವತಾರದಲ್ಲಿ ಅಂಬೇಡ್ಕರ್‌ ಅವರ ವಕೀಲಿ ವೃತ್ತಿಯ ಕಾರ್ಯ ಶೈಲಿಯನ್ನು ಕಣ್ತುಂಬಿಕೊಳ್ಳಲು ಕಾತರದಲ್ಲಿದ್ದಾರೆ. ಆ ಮಟ್ಟಿಗೆ ಜೈ ಭೀಮ್ ಸಿನಿಮಾ ಬರೀ ಪೋಸ್ಟರ್‌ ಮೂಲಕವೇ ದೊಡ್ಡ ಹವಾ ಎಬ್ಬಿಸಿದೆ. ಉಳಿದಂತೆ ಈ ಸಿನಿಮಾವು ೨ಡಿ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿದೆ. ಜ್ಞಾನವೆಲ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಹೆಸರಾಂತ ನಟ ಪ್ರಕಾಶ್‌ ರೈ ಸೇರಿದಂತೆ ಹಲವರು ಈ ಚಿತ್ರದಲ್ಲಿದ್ದಾರೆಂಬ ಮಾಹಿತಿ ಇದೆ.

Categories
ಸಿನಿ ಸುದ್ದಿ

ಶೇ. ೧೦೦ ಸೀಟು ಭರ್ತಿಗೆ ಮನವಿ ಮಾಡಿದ ವಾಣಿಜ್ಯ ಮಂಡಳಿ ನಿಯೋಗ

ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡಬೇಕು, ಹಾಗೆಯೇ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಕೊಡಬೇಕು ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ನೇತೃತ್ವದ ನಿಯೋಗ ಶನಿವಾರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ನಿಯೋಗ, ಚಿತ್ರರಂಗದ ಭವಿಷ್ಯ ಕರಾಳವಾಗಿದೆ. ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಟಾಕೀಸ್‌ ತೆರೆಯಿರಿ ಅಂದ್ರೆ ಅದು ಅಷ್ಟು ಸುಲಭ ಇಲ್ಲ. ಈಗಿರುವ ಸರ್ಕಾರದ ಆದೇಶದಂತೆ ನಾವು ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಟಾಕೀಟ್‌ ತೆರೆದು ಚಿತ್ರ ಪ್ರದರ್ಶನ ನಡೆಸಿದರೆ ಟಾಕೀಸ್‌ ನಿರ್ವಹಣೆಯ ಖರ್ಚು ಕೂಡ ಬರುವುದು ಕಷ್ಟ. ಹಾಗಾಗಿ ಸರ್ಕಾರವೇನಾದರೂ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿ ಕೊಟ್ಟರೆ, ಚಿತ್ರಮಂದಿರದ ಮಾಲೀಕರು ಬದುಕುತ್ತಾರೆ, ಸಿನಿಮಾ ನಿರ್ಮಾಪಕ ರು ಉಳಿಯುತ್ತಾರೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂಬುದಾಗಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ಕಾರ್ಯದರ್ಶಿ ಎನ್.ಎಂ. ಸುರೇಶ್‌ ಹಾಗೂ ಊಪಾಧ್ಯಕ್ಷ ಉಮೇಶ್‌ ಉಣಕಾರ್‌, ಚಿತ್ರೋದ್ಯಮದ ಪರವಾಗಿ ಅಧಿಕೃತ ಮನವಿ ಪತ್ರವನ್ನು ನೀಡಿ, ಚಿತ್ರರಂಗದ ಸವಾಲುಗಳು, ಮುಂದಿನ ಪರಿಸ್ಥಿತಿಗಳನ್ನು ವಿವರಿಸಿದೆ. ಮೂಲಕ ಸರ್ಕಾರ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡ ಬೇಕೆಂದು ಕೇಳಿಕೊಂಡಿದೆ. ಈ ಕುರಿತು ಸಿನಿ ಲಹರಿ ಜತೆಗೆ ಮಾತನಾಡಿದ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಹೇಳಿದ್ದಿಷ್ಟು…

ʼ ಈಗಿರುವ ಪರಿಸ್ಥಿತಿ ನೋಡಿದರೆ ಶೇಕಡಾ 50 ರಷ್ಟು ಸೀಟು ಭರ್ತಿಯೊಂ ದಿಗೆ ಟಾಕೀಸ್‌ ಒಪನ್‌ ಮಾಡಿ ಅನ್ನೋದು ಉಪಯೋಗ ಇಲ್ಲ. ಯಾಕಂದ್ರೆ ಜನ ಅಷ್ಟು ಸಲುಭವಾಗಿ ಟಾಕೀಸ್‌ ಗೆ ಬರುತ್ತಾರೆ ನ್ನುವ ಗ್ಯಾರಂಟಿ ಇಲ್ಲ. ಹಾಗೊಂದು ವೇಳೆ ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಅವರಿಗೂ ಒಂದು ಧೈರ್ಯ ಬರುತ್ತೆ. ನಿರ್ಮಾಪಕರು ಕೂಡ ಧೈರ್ಯದಿಂದ ಸಿನಿಮಾ ರಿಲೀಸ್‌ ಮಾಡುತ್ತಾರೆ. ಇದೇ ಕಾರಣಕ್ಕೆ ವಾಣಿಜ್ಯ ಮಂಡಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿದೆ. ಅದಕ್ಕವರು ಸಕರಾತ್ಮಕ ಸ್ಪಂದನೆ ಮಾಡಿದ್ದಾರೆ. ಇಷ್ಟರಲ್ಲಿಯೇ ಸರ್ಕಾರದ ಆದೇಶ ಹೊರಬೀಳುವ ಸಾಧ್ಯತೆಗಳಿವೆ.

Categories
ಸಿನಿ ಸುದ್ದಿ

ಮತ್ತೆ ಕ್ಯಾಮೆರಾ ಎದುರಿಸಿ ಖುಷಿಪಟ್ಟ ಮೇಘನಾ ರಾಜ್ !

ಈ ಸುದ್ದಿಯನ್ನು ಕೇಳೋದಕ್ಕೆ ಒಂದು ಖುಷಿ. ಈ ಕ್ಷಣಕ್ಕಾಗಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಸರ್ಜಾರ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ನಟಿ ಮೇಘನಾ ಮತ್ತೆ ಕ್ಯಾಮೆರಾ ಎದುರಿಸಬೇಕು ಎನ್ನುವ ಆಸೆ ಕನಸನ್ನು ಫ್ಯಾನ್ಸ್ ಇಟ್ಟುಕೊಂಡಿದ್ದರು ಆ ಕನಸು ಈಗ ಈಡೇರಿದೆ.

ಜೂನಿಯರ್ ಚಿರುಗೆ ಒಂಭತ್ತು ತಿಂಗಳು ತುಂಬಿದ ದಿನದಂದೇ ಮೇಘನಾ ಕ್ಯಾಮೆರಾ ಮುಂದೆ ಬಂದಿದ್ದಾರೆ. ಈ ಸುಂದರ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೈಯಲ್ಲಿ ಸ್ಕ್ರಿಪ್ಟ್ ಪೇಪರ್ ಹಿಡಿದಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ, ಇದು ಯಾವ ಚಿತ್ರದ್ದು? ಏನ್ ಕಥೆ ಎಂಬ ಗುಟ್ಟನ್ನ ಮೇಘನಾ ಬಿಟ್ಟುಕೊಟ್ಟಿಲ್ಲ. ಅಂದ್ಹಾಗೇ, ಮೇಘನಾ ಕೈಯಲ್ಲಿ `ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ’ ಹಾಗೂ ಬುದ್ದಿವಂತ-೨ ಚಿತ್ರಗಳಿವೆ. ಈ ಸಿನಿಮಾದ ಶೂಟಿಂಗ್‌ಗೆ ಮರಳಿದ್ದಾರೋ ಅಥವಾ ಹೊಸ ಸಿನಿಮಾಗೆ ಜೀವತುಂಬುತ್ತಿದ್ದಾರೋ ಇನ್ನಷ್ಟೇ ರಿವೀಲ್ ಆಗ್ಬೇಕಿದೆ.

ಒಟ್ನಲ್ಲಿ ಸರ್ಜಾ ಕುಟುಂಬದ ಅಭಿಮಾನಿ ದೇವರುಗಳ ಕನಸು ನನಸಾಗಿದೆ. ಬೆಳ್ಳಿಮೋಡಗಳಲ್ಲಿ ಮರೆಯಾಗಿರುವ ಚಿರು ಆಶೀರ್ವಾದ ಕೂಡ ಮೇಘನಾ ಮೇಲಿದೆ. ಮೇಘನಾ ಈ ಹಿಂದೆ ಹೇಳಿಕೊಂಡಂತೆ ಮತ್ತೆ ಕ್ಯಾಮೆರಾ ಮುಂದೆ ಬಂದು ಫ್ಯಾನ್ಸ್ಗೆ ಸಪ್ರೈಸ್ ಕೊಟ್ಟಿದ್ದಾರೆ. ಮಗನಿಗೆ ಒಂಭತ್ತು ತಿಂಗಳು ತುಂಬಿದ ಖುಷಿಯನ್ನ ಕ್ಯಾಮೆರಾ ಎದುರಿಸುವ ಮೂಲಕ ಸಂಭ್ರಮಿಸಿದ್ದಾರೆ. ಆದಷ್ಟು ಬೇಗ ತಮ್ಮ ಅಪ್‌ಕಮ್ಮಿಂಗ್ ಸಿನಿಮಾ ಹಾಗೂ ಪಾತ್ರದ ಬಗ್ಗೆ ಮೇಘನಾ ಹೇಳಿಕೊಳ್ಳಲಿ. ಫ್ಯಾನ್ಸ್ ಮಾತ್ರವಲ್ಲ ಬೆಳ್ಳಿಪರದೆಯೂ ಖುಷಿಯಾಗುವಂತೆ ಮಾಡಲಿ ಎಂಬುದೇ ಎಲ್ಲರ ಹಾರೈಕೆ

Categories
ಸಿನಿ ಸುದ್ದಿ

ಅಧ್ಯಾತ್ಮದತ್ತ ಒಲವು ತೋರಿದ್ದೇಕೆ ನಟಿ ಚೈತ್ರಾ ಕೋಟೂರ್‌ ?

ಬಿಗ್‌ ಬಾಸ್‌ ಖ್ಯಾತಿಯ ಬರಹಗಾರ್ತಿ ಹಾಗೂ ನಟಿ ಚೈತ್ರಾ ಕೊಟ್ಟೂರು ಅಧ್ಯಾತ್ಮದತ್ತ ವಾಲಿದ್ದಾರೆ. ಎಲ್ಲ ಬಿಟ್ಟು ಮಠ ಸೇರಿದ್ರೂ ಎನ್ನುವ ಹಾಗೆ ಸಿನಿಮಾ, ನಟನೆ, ನಿರ್ದೇಶನದ ಜತೆಗೆ ಬರವಣಿಗೆ ಅಂತೆಲ್ಲ ಅದು ಇದು ಬಿಟ್ಟು ಸದ್ದಿಲ್ಲದೆ ಸುದ್ದಿಯೂ ಮಾಡದೆ ಅವರೀಗ ಬೆಳಗಾವಿಯಲ್ಲಿರುವ ಓಶೋ ಧ್ಯಾನ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತ್ರಾ ಕೊಟೂರು ಅಲ್ಲಿರುವ ಸಾಕ್ಷಿಗೆ ಒಂದು ವಿಡಿಯೊಂದನ್ನು ಅವರು ತಮ್ಮ ಇನ್‌ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ವಿಚಿತ್ರ ಅಂದ್ರೆ ಇಷ್ಟ ಬೇಗ ಅಧ್ಯಾತ್ಮದತ್ತ ಅವರು ಒಲವು ತೋರಿದಕ್ಕೆ ಕಾರಣವೇನು ಅಂತ.

ಅಂದ ಹಾಗೆ, ಆ ಬಗೆಗಿನ ನಿಗೂಢತೆ ಏನೆಂಬುದರ ಕುರಿತು ಹೆಚ್ಚೇನು ಹೇಳಬೇಕಿಲ್ಲ. ನಟಿ ಚೈತ್ರಾ ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದು ಅವರ ಮದುವೆ ಕಾರಣಕ್ಕೆ.ಉದ್ಯಮಿ ನಾಗಾರ್ಜುನ್‌ ಎಂಬುಬರ ಜತೆಗೆ ಸರಳವಾಗಿ ವಿವಾಹವಾಗಿದ್ದರು. ಆದರೆ ಆ ಮದುವೆಗೆ ಎರಡು ಕುಟುಂಬಗಳು ಒಪ್ಪದ ಕಾರಣ ಆ ಮದುವೆ ಪೊಲೀಸ್‌ ಸ್ಟೇಷನ್‌ ಮೆಟ್ಟಲೇರಿತ್ತು.ಕೊನೆಗೆ ಆ ಮದುವೆ ಬಲವಂತವಾಗಿ ನಡೆದಿದ್ದು ಎಂದು ನಾಗಾರ್ಜುನ್‌ ದೂರಿದ್ದರು. ಕನ್ನಡ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಕೆಲವರು ತಮ್ಮನ್ನು ಬಲವಂತವಾಗಿ ಎಳೆದುಕೊಂಡು ಬಂದು ಮದುವೆ ಮಾಡಿಸಿದ್ದಾರೆಂದು ಆತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ.

ಆದರೆ ನಟಿ ಚೈತ್ರಾ ಕೋಟೂರು ಇದನ್ನು ಅಲ್ಲಗಳೆದಿದ್ದರು. ಆತ ನನ್ನನ್ನು ಪ್ರೀತಿಸಿದ್ದ. ಕೊನೆಗೆ ಮೋಸ ಮಾಡಲು ಯತ್ನಿಸಿದ್ದ. ಹಾಗಾಗಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆದಿತ್ತು ಎಂದಿದ್ದರು. ಕೊನೆಗೆ ಆ ಮದುವೆ ಮುರಿದು ಬಿದ್ದು, ನಟಿ ಚೈತ್ರಾ ಕೋಟೂರು ಆತ್ಮಹತ್ಯೆಗೆ ಯತ್ನಿಸಿದ್ದು ಆಗಿತ್ತು. ಇದೆಲ್ಲ ರಗಳೆಗಳ ನಡುವೆ ಮತ್ತೆ ಎಂದಿನಂತೆ ಸಿನಿಮಾ, ಬರವಣಿಗೆ ಅಂತೆಲ್ಲ ತೋಡಿಸಿಕೊಂಡಿದ್ದ ಚೈತ್ರಾ ಕೋಟೂರು ಈಗ ಅಧ್ಯಾತ್ಮದತ್ತ ವಾಲಿದ್ದಾರೆ. ಬೆಳಗಾವಿಯಲ್ಲಿರುವ ಒಶೋ ಧ್ಯಾನ ಶಿಬಿರದಲ್ಲಿ ಈಗ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.

error: Content is protected !!