ಆ ಜಾಗಕ್ಕೆ ಹೋಗಿ ಬಂದರೆ ದಾಸನಿಗೆ ನೆಮ್ಮದಿ; ಪ್ರತಿವರ್ಷ ಅಲ್ಲಿಗೆ ಭೇಟಿಕೊಡ್ತಾರೆ ದಚ್ಚು !

ಈ ಜಗತ್ತಲ್ಲಿ ದುಡ್ಡು ಕೊಟ್ಟರೇ ಏನ್ ಬೇಕಾದರೂ ಸಿಗುತ್ತೆ ಆದರೆ ಆ ಎರಡನ್ನು ಹೊರತುಪಡಿಸಿ. ಯಾವುದು ಆ ಎರಡು ಅಂದರೆ ಹೆತ್ತವರ ನಿಷ್ಕಲ್ಮಶ ಪ್ರೀತಿ ಮತ್ತು ನೆಮ್ಮದಿ. ಈ ವಿಚಾರ ನಿಮ್ಮೆಲ್ಲರಿಗೂ ಗೊತ್ತೆಯಿರುತ್ತೆ ಬಿಡಿ. ಅಷ್ಟಕ್ಕೂ, ನಾವ್ ಈಗ ಹೇಳೋದಕ್ಕೆ ಹೊರಟಿರುವುದು ದಚ್ಚು ನೆಮ್ಮದಿ ಅರಸಿ ಹೊರಟ ಜಾಗದ ಬಗ್ಗೆ

ಕಳೆದ ಕೆಲವು ದಿನಗಳಿಂದ ಸಾರಥಿಯ ನೆಮ್ಮದಿ ಕದಡುವಂತಹ ಘಟನೆಗಳು ನಡೆಯುತ್ತಲೇ ಇವೆ. ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ ಪ್ರಕರಣದಿಂದ ಶುರುವಾದ ವಿವಾದ ದೊಡ್ಮನೆ ಆಸ್ತಿ ಮೇಲೆ ದಾಸ ಕಣ್ಣುಹಾಕಿದ್ದರು ಎಂಬಲ್ಲಿಗೆ ಬಂದುನಿಂತಿರುವುದನ್ನು ಇಡೀ ಕರುನಾಡು ನೋಡಿದೆ. ಯಾವುದು ಸತ್ಯ-ಯಾವುದು ಸುಳ್ಳು ಎಂಬುದು ತಿಳಿಯುತ್ತಿಲ್ಲ. ಬರೀ ಆರೋಪ-ಪ್ರತ್ಯಾರೋಪಗಳೇ ನಡೆಯುತ್ತಿವೆ. ಈ ಮಧ್ಯೆ ಚಾಲೆಂಜಿಂಗ್ ಚಕ್ರವರ್ತಿಯ ಹೆಸರಿಗೆ ಮಸಿ ಬಳಿಯುವ ಹಾಗೂ ತೇಜೋವಧೆ ಮಾಡುವಂತಹ ಕೆಲಸ ಆಗ್ತಿದೆಯೆಂದು ದಾಸನ ಭಕ್ತರು ಕೆಂಡಾಮಂಡಲಗೊಂಡಿದ್ದಾರೆ. `ಸತ್ಯಾನಾ ಧಫನ್ ಮಾಡುವ ಕಫನ್ ಇನ್ನೂ ಯಾರೂ ಕಂಡುಹಿಡಿದಿಲ್ಲ’ ಎನ್ನುತ್ತಾ ಗರ್ಜಿಸಿರುವ ಜಗ್ಗುದಾದ, ನೆಮ್ಮದಿ ಅರಸಿ ಆ ದಿವ್ಯಜಾಗಕ್ಕೆ ಭೇಟಿಕೊಟ್ಟಿದ್ದಾರೆ

ದಾಸ ದೇವರ ಮಗ ಅಪ್ಪಟ ದೈವಭಕ್ತ ಎಂಬುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಕಷ್ಟ-ದುಃಖ-ನೋವು-ನಲಿವು-ಸುಖ-ಸಂಭ್ರಮ ಏನೇ ಇರಲಿ ತಾಯಿ ಚಾಮುಂಡೇಶ್ವರಿಯ ಸನ್ನಿಧಿಗೆ ಭೇಟಿಕೊಟ್ಟು ದೇವಿಯ ಆಶೀರ್ವಾದ ಬೇಡುವ ದಾಸ, ಬೆಂಗಳೂರಿನ ಬಂಡಿಮಹಾಕಾಳಮ್ಮ, ಮಂಜುನಾಥಸ್ವಾಮಿ, ತಿರುಪತಿ ತಿಮ್ಮಪ್ಪ, ರಾಘವೇಂದ್ರಸ್ವಾಮಿಯನ್ನು ಆರಾಧಿಸುತ್ತಾರೆ. ಅದರಂತೇ, ತಮಿಳುನಾಡಿನ ತಿರುನಲ್ಲಾರ್‌ನಲ್ಲಿರುವ ಶನಿಮಹಾರಾಜನಿಗೆ ನಡೆದುಕೊಳ್ಳುತ್ತಾರೆ. ಪ್ರತಿವರ್ಷ ಶನಿಮಹಾತ್ಮ ದೇಗುಲಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಶನಿಮಹಾರಾಜನ ಸನ್ನಿಧಿಗೆ ಸಾರಥಿ ಪ್ರತಿವರ್ಷ ಭೇಟಿ !

ಪ್ರತಿವರ್ಷದಂತೆ ಈ ವರ್ಷವೂ ಸಾರಥಿ ತಮಿಳುನಾಡಿನ ತಿರುನಲ್ಲಾರ್‌ನಲ್ಲಿರುವ ಶನಿಮಹಾತ್ಮನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಸ್ನೇಹಿತರ ಜೊತೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿರುವ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿವಾದಗಳು ಒಂದಾದ ಮೇಲೊಂದರಂತೆ ಸುತ್ತಿಕೊಳ್ಳುತ್ತಿರುವ ಈ ಹೊತ್ತಲ್ಲಿ ದಿವ್ಯದೇಗುಲಕ್ಕೆ ದಚ್ಚು ಭೇಟಿಕೊಟ್ಟಿರುವುದರಿಂದ ನೆಮ್ಮದಿ ಅರಸಿ ದಾಸ ಶನಿಮಹಾತ್ಮನ ಸನ್ನಿಧಿಗೆ ತೆರಳಿದ್ದಾರೆಂದು ಸುದ್ದಿಯಾಗ್ತಿದೆ.

ಶನಿಮಹಾರಾಜನ ದರ್ಶನ ಮಾಡಿದರೆ ಶನಿಭಾದೆ ಇರುವುದಿಲ್ಲ ಎಂಬ ನಂಬಿಕೆಯಿದೆ. ದೈವಶಕ್ತಿಯ ಮೇಲೆ ಅಪಾರ ನಂಬಿಕೆಯಿಟ್ಟಿರುವ ದೇವರ ಮಗ ದಾಸ, ಬಂದದ್ದೆಲ್ಲಾ ಬರಲಿ ನಿನ್ನ ದಯೆಯೊಂದು ಇರಲೆಂದು ಬೇಡಿಕೊಂಡರ‍್ತಾರೆ. ತನ್ನೊಟ್ಟಿಗೆ ತನ್ನ ಸುತ್ತಮುತ್ತಲಿನವರನ್ನು ಕಾಪಾಡೆಂದು ಸದಾ ಬೇಡುವ ಸಾರಥಿಗೆ ತಿರುನಲ್ಲಾರ್‌ನಲ್ಲಿರುವ ನೆಲೆಸಿರುವ ಶನಿಮಹಾರಾಜ ತಥಾಸ್ತು ಎನ್ನದಿರಲು ಸಾಧ್ಯವೇ ನೀವೇ ಹೇಳಿ.

ಆರೋಪಗಳಿಂದ ಮುಕ್ತಿ ಸಿಗಲಿ ಸಾರಥಿಗೆ

ಸದ್ಯಕ್ಕೆ ದಚ್ಚು ಮೇಲೆ ಕೇಳಿಬರುತ್ತಿರುವ ಆರೋಪಗಳು ಹುಸಿಯಾಗಲಿ. ದಾಸನ ಹೆಸರಲ್ಲಿ ೨೫ ಕೋಟಿ ಲಪಟಾಯಿಸೋಕೆ ಸ್ಕೆಚ್ ಹಾಕಿದವರು ಮೊದಲು ತಗಲಾಕಿಕೊಳ್ಳಲಿ.
ಸಾರಥಿ-ಉಮಾಪತಿ ನಡುವೆ ಹುಳಿಹಿಂಡೋಕೆ ಪ್ರಯತ್ನಪಟ್ಟವರು ಯಾರೆಂಬ ಸತ್ಯ ತಿಳಿಯಲಿ. ಉಮಾಪತಿಯವರು ದಚ್ಚು ಜೊತೆ ಮುಂದಿನ ಸಿನಿಮಾ ಅನೌನ್ಸ್ ಮಾಡಲಿ. ಪ್ರೇಮ್ ಅಂಡ್ ರಕ್ಷಿತಾ ಪ್ರೇಮ್ ಜೊತೆ ದಚ್ಚು ಪಾರ್ಟಿ ಮಾಡುವ ಟೈಮ್ ಬರಲಿ. ಮೈಸೂರಿನ ಸ್ನೇಹಿತರ ಜೊತೆ ಮೊದಲಿನಂತೆ ಕುಳಿತು ಫಾರ್ಮ್ಹೌಸ್‌ನಲ್ಲಿ ಬಿರಿಯಾನಿ ಸವಿಯಲಿ.ಇಂದ್ರಜಿಂತ್ ಲಂಕೇಶ್ ಅವರ ಆರೋಪದಲ್ಲಿ ಸತ್ಯವಿದ್ದರೆ ಕಾನೂನು ಅದನ್ನು ಸಾಬೀತುಮಾಡಲಿ ನಂತರ ಏನಾಗ್ಬೇಕೋ ಅದು ಆಗುತ್ತೆ ಅದನ್ನು ಯಾರು ತಪ್ಪಿಸೋದಕ್ಕೆ ಆಗಲ್ಲ. ಅಲ್ಲಿವರೆಗೂ ಗಾಳಿಲಿ ಗುಂಡು ಹಾರಿಸೋದನ್ನು ಕಡಿಮೆ ಮಾಡ್ಲಿ ಎಲ್ಲರೂ ಅನ್ನೋದೇ ಸಿನಿಲಹರಿ ಆಶಯ

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!