ಸಾಫ್ಟ್ ವೇರ್ ಟು ಸ್ಯಾಂಡಲ್‌ವುಡ್-11 ವರ್ಷದ ಸಂಭ್ರಮ; ಸಿಂಪಲ್‌ಸ್ಟಾರ್‌ಗೆ ನ್ಯಾಷನಲ್‌ಸ್ಟಾರ್ ಕಿರೀಟ !

ಅಣ್ಣಾವ್ರು, ವಿಷ್ಣುದಾದಾ, ಶಂಕರ್‌ನಾಗ್‌ರಂತಹ ದಿಗ್ಗಜರು ಕಟ್ಟಿಬೆಳೆಸಿದ ಗಂಧದಗುಡಿಯಲ್ಲಿ ಶೆಟ್ರು ನಾಯಕನಾಗಿ ಮೆರವಣಿಗೆ ಹೊರಟು ಹನ್ನೊಂದು ವರ್ಷ ತುಂಬಿದೆ. ಈ ಸಂತೋಷವನ್ನು-ಸಂಭ್ರಮವನ್ನು ಶೆಟ್ಟರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದು ಸಾಫ್ಟ್ ವೇರ್ ಕೆಲಸಕ್ಕೆ ಗುಡ್‌ಬೈ ಹೇಳಿ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ಗೋಧಿಬಣ್ಣ ಸಾಧಾರಣ ಮೈಕಟ್ಟಿನ ಶೆಟ್ರು ಸ್ಯಾಂಡಲ್‌ವುಡ್‌ನ ಶೇಕ್ ಮಾಡಿದ್ದಾರೆ. ಹನ್ನೊಂದು ವರ್ಷದ ಸಿನಿಜರ್ನಿಯಲ್ಲಿ ನಾಯಕರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂದು 1 ಕೋಟಿ 35 ಲಕ್ಷದ ಹೊಡೆತಕ್ಕೆ ಸಿನಿಮಾ ಸಹವಾಸವೇ ಬೇಡ ಅಂತ ನಿರ್ಧರಿಸಿದ್ದ ಶೆಟ್ಟರು ಇಂದು ಕೋಟಿ ಕೋಟಿ ಎಣಿಸುತ್ತಿದ್ದಾರೆ. ರಿಚರ್ಡ್ ಆಂಟನಿಯಾಗಿ ಹೊಸ ಸವಾಲ್‌ವೊಂದನ್ನು ಸ್ವೀಕರಿಸಿದ್ದಾರೆ.

ಶೆಟ್ಟರು ಈಗ ಕೇವಲ ಸಿಂಪಲ್‌ಸ್ಟಾರ್ ಆಗಿ ಉಳಿದಿಲ್ಲ..ಸ್ಯಾಂಡಲ್‌ವುಡ್‌ಗೆ ಮಾತ್ರ ಸೀಮಿತವಾಗಿಲ್ಲ.. ಬದಲಿಗೆ ಬಾರ್ಡರ್ ದಾಟಿದ್ದಾರೆ, ಪರಭಾಷಾ ಅಂಗಳದಲ್ಲೂ ಹವಾ ಎಬ್ಬಿಸಿದ್ದಾರೆ, ಅವನೇ ಶ್ರೀಮನ್ನಾರಾಯಣನ ಅವತಾರವೆತ್ತುವ ಮೂಲಕ ನ್ಯಾಷನಲ್‌ಸ್ಟಾರ್ ಪಟ್ಟಕ್ಕೇರಿ ನಯಾ ಮೇನಿಯಾ ಸೃಷ್ಟಿಸಿಕೊಂಡಿದ್ದಾರೆ. ಈ ಎಲ್ಲಾ ವಿಚಾರ ನಿಮ್ಮೆಲ್ಲರಿಗೂ ಗೊತ್ತು. ಅದರಂತೇ, ಬೆಳ್ಳಿಪರದೆ ಹಾಗೂ ಬಾಕ್ಸ್ಆಫೀಸ್‌ಗೂ ಗೊತ್ತು. ಹೀಗಾಗಿನೇ, ಶೆಟ್ಟರ ಹನ್ನೊಂದನೇ ವರ್ಷದ ಸಿನಿಮಾಜರ್ನಿಗೆ ಫ್ಯಾನ್ಸ್ ಜೊತೆ ಸಿಲ್ವರ್‌ಸ್ಕ್ರೀನ್ ಹಾಗೂ ಬಾಕ್ಸ್ಆಫೀಸ್ ಕೂಡ ಬೆಸ್ಟ್ ಆಫ್ ಲಕ್ ಹೇಳ್ತಿದೆ. `ರಿಚರ್ಡ್ ಆಂಟನಿಯಾಗಿ ಬಾ’ ಕಾಲೆಳೆದವರು ಕಣ್ಣುಜ್ಜಿಕೊಳ್ಳುವಂತೆ ಮಾಡ್ತೇವೆ. ನಿಮ್ಮವರೆಲ್ಲಾ ನೋಡ ನೋಡ ಎನ್ನುವಷ್ಟರಲ್ಲಿ ನಿನ್ನನ್ನು ಇಂಟರ್‌ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಸಿಬಿಡ್ತೇವೆ ಹೀಗಂತ ಈಗಲೇ ಮಾತನಾಡಿಕೊಳ್ಳುತ್ತಿವೆ ಬೆಳ್ಳಿಪರದೆ ಹಾಗೂ ಬಾಕ್ಸ್ಆಫೀಸ್ ಡಬ್ಬಗಳು.

ಅಪ್‌ಕೋರ್ಸ್ ಮಾತನಾಡಿಕೊಳ್ಳಲೆಬೇಕು ಯಾಕಂದ್ರೆ `ರಿಚರ್ಡ್ ಆಂಟನಿ’ ಸಾಮಾನ್ಯ ಸಿನಿಮಾ ಅಲ್ಲ. ರಿಚರ್ಡ್ ಆಂಟನಿಗೆ ದುಡ್ಡು ಹಾಕುತ್ತಿರುವವರು ಸಾಮಾನ್ಯರಲ್ಲ ಕೆಜಿಎಫ್‌ನಂತಹ ಚಿನ್ನದ ಸಾಮ್ರಾಜ್ಯದ ಒಡೆಯರು. ಇಡೀ ದೇಶವೇ ಕಣ್ಣರಳಿಸಿ ನೋಡುವಂತಹ ಸಿನಿಮಾ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಈಗ ನ್ಯಾಷನಲ್‌ಸ್ಟಾರ್ ರಕ್ಷಿತ್ ಶೆಟ್ಟಿಗೆ ಬಂಡವಾಳ ಸುರಿಯಲಿದ್ದಾರೆ. ಸಾಗರದ ಅಧಿಪತಿಯಾಗಲಿಕ್ಕೆ ಹೊರಟಿರುವ ಶೆಟ್ರಿಗೆ ಕೋಟಿ ಕೋಟಿ ಹೂಡೋದಕ್ಕೆ ಸಜ್ಜಾಗಿದ್ದಾರೆ. ಟೈಟಲ್‌ನಿಂದಲೇ ಬಜಾರ್‌ನಲ್ಲಿ ಧೂಳೆಬ್ಬಿಸಿರುವ ರಿಚರ್ಡ್ ಆಂಟನಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣಗೊಳ್ಳಲಿದೆ. ಶೆಟ್ರಿಗೆ ರಿಚರ್ಡ್ ಆಂಟನಿ ಸವಾಲಿನ ಸಿನಿಮಾ ಆಗಿದೆ. ಗಂಧದಗುಡಿಯಲ್ಲಿ ಸ್ವಂತ ಬ್ರ್ಯಾಂಡ್ ಆದರೂ ಕೂಡ ಕಾಲೆಳೆಯುತ್ತಿರುವ ಮಂದಿಗೆ ನಾಯಕ ಕಮ್ ನಿರ್ದೇಶನಾಗಿ ಟಕ್ಕರ್ ಕೊಡಬೇಕಿದೆ ಕೊಡ್ತಾರೆ ಎನ್ನುವ ಭರವಸೆ ಶೆಟ್ಟರ ಅಭಿಮಾನಿಗಳಲ್ಲಿದೆ.

ಅಂದ್ಹಾಗೇ, ಈಗಾಗಲೇ ಶೆಟ್ಟರು ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಉಳಿದವರು ಕಂಡಂತೆ' ಸಿನಿಮಾದ ಮೂಲಕ ತಮ್ಮೊಳಗಿನ ಚಿತ್ರಬ್ರಹ್ಮನನ್ನು ಬಣ್ಣದ ಲೋಕಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆಹೊಡೆಯಲಿಲ್ಲ ಅನ್ನೋದನ್ನ ಬಿಟ್ಟರೆ ರಕ್ಷಿತ್ ನಿರ್ದೇಶನದ ಕಲೆಗೆ ಬೆಲೆಕಟ್ಟಲಾಗದ ಪ್ರಶಂಸೆಗಳು ಈ ಚಿತ್ರಕ್ಕೆ ಹರಿದುಬಂದಿದ್ವು.ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಮೂಲಕ ಹೀರೋ ಆಗಿ ಸ್ವಲ್ಪ ಸೌಂಡ್ ಮಾಡಿದ ಶೆಟ್ಟರು, ಉಳಿದವರು ಕಂಡಂತೆ ಮೂಲಕ ಡೈರೆಕ್ಟರ್ ಕಮ್ ಹೀರೋ ಆಗಿ ಕಮಾಲ್ ಮಾಡಿದರು. ರಿಕ್ಕಿ ಚಿತ್ರ ಮಾಡಿ ಬಹುಪರಾಕ್ ಹಾಕಿಸಿಕೊಂಡರು. ಕಿರಿಕ್ ಪಾರ್ಟಿ ಮೂಲಕ ಬೆಳ್ಳಿಪರದೆಯನ್ನೇ ಹುಚ್ಚೆಬ್ಬಿಸಿ ಅವನೇ ಶ್ರೀಮನ್ನಾರಾಯಣ'ನಾಗಿ ಗಡಿದಾಟಿದರು. ಈಗಚಾರ್ಲಿ’, `ಸಪ್ತಸಾಗರದಾಚೆ ಎಲ್ಲೋ’, ರಿಚರ್ಡ್ ಆಂಟನಿ ಚಿತ್ರಗಳ ಮೂಲಕ ಸಖತ್ ಸೌಂಡ್ ಮಾಡ್ತಿದ್ದಾರೆ.

ಶೆಟ್ಟರು ಸಾಮಾನ್ಯರಲ್ಲ ಗೋಲ್ಡನ್ ಸ್ಪೂನ್ ಬಾಯಲ್ಲಿಟ್ಟುಕೊಂಡೇ ಭೂಮಿಗೆ ಬಂದವರು. ವೆಲ್ ಎಜುಕೇಟೆಡ್ ಶೆಟ್ಟರು ಹೆಸರಾಂತ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು ೫೦೦೦೦ ಸಾವಿರ ಸಂಬಳ ಎಣಿಸುತ್ತಿದ್ದರು. ಈ ನಡುವೆ ಬಣ್ಣದ ಲೋಕದ ಕಡೆ ಆಕರ್ಷಿತರಾದರು. ಮುಖಕ್ಕೆ ಬಣ್ಣ ಹಚ್ಚಬೇಕು ಎನ್ನುವ ಕನಸು ಕಂಡರು. ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯಲ್ಲಿ ತನ್ನದೊಂದು ಛಾಪು ಮೂಡಿಸ್ಬೇಕು ಎನ್ನುವ ಹಠಕ್ಕೆ ಬಿದ್ದರು. ಅದರಂತೇ, ನಮ್ ಏರಿಯಲ್ ಒಂದಿನಾ' ಸಿನಿಮಾಗೆ ಬಣ್ಣ ಹಚ್ಚಿಕೊಂಡು ಹೀರೋ ಆದರು. ಚೊಚ್ಚಲ ಚಿತ್ರದಲ್ಲಿ ಚಮಕ್ ಕೊಡೋದಕ್ಕೆ ಆಗಲಿಲ್ಲ ಹಾಗಂತ ರಕ್ಷಿತ್ ಸೈಡಿಗೆ ಹೋಗಲಿಲ್ಲ ಬದಲಾಗಿತುಘಲಕ್’ ಚಿತ್ರದ ಮೂಲಕ ಮತ್ತೆ ಹೀರೋ ಆಗಿ ಕ್ಯಾಮೆರಾ ಎದುರಿಸಿದರು. ಅಷ್ಟೇ ಅಲ್ಲ ಭರ್ತಿ ಒಂದೂ ಕೋಟಿ ೩೫ ಲಕ್ಷ ಬಂಡವಾಳನೂ ಸುರಿದರು. ಆದರೆ, ತುಘಲಕ್ ದರ್ಬಾರ್ ಬೆಳ್ಳಿಪರದೆ ಮೇಲೆ ನಡೆಯಲಿಲ್ಲ ಹೀಗಾಗಿ ಶೆಟ್ಟರು ಸಿನಿಮಾ ಸಹವಾಸವೇ ಬೇಡ ಮತ್ತೆ ಸಾಫ್ಟ್ ವೇರ್ ಫೀಲ್ಡ್ ಗೆ ಹೋಗಿ `ತುಘಲಕ್’ ಸಾಲ ತೀರಿಸ್ತೀನಿ ಅಂತ ಗೆಳೆಯ ರಿಷಬ್ ಶೆಟ್ಟಿ ಜೊತೆ ತ್ರಿಭುವನ್ ಥಿಯೇಟರ್ ಮುಂದೆ ಹೇಳಿಕೊಂಡು ಕಣ್ಣೀರಿಟ್ಟರು. ಆಗ ರಕ್ಷಿತ್‌ಗೆ ಧೈರ್ಯ ತುಂಬಿದ್ದು ಗೆಳೆಯ ರಿಷಬ್ ಶೆಟ್ಟಿ.

ಅಂದು ರಕ್ಷಿತ್‌ಗೆ ರಿಷಬ್ ಶೆಟ್ಟಿಯವರು ಮಗಾ ನಾನು ನಿನ್ನ ಜೊತೆ ಇರ‍್ತೀನಿ ಅಂತ ಧೈರ್ಯ ತುಂಬದೇ ಹೋಗಿದ್ದರೆ, `ತುಘಲಕ್’ ಸೋಲಿಗೆ ಹಾಗೂ ಸಾಲಕ್ಕೆ ಹೆದರಿ ಸಿನಿಮಾ ಇಂಡಸ್ಟ್ರಿಗೆ ಗುಡ್‌ಬೈ ಹೇಳಿದರೆ ಇವತ್ತು ಶೆಟ್ಟರು ನ್ಯಾಷನಲ್‌ಸ್ಟಾರ್ ಆಗುತ್ತಿರಲಿಲ್ಲ. ಸ್ಯಾಂಡಲ್‌ವುಡ್ ಮಾತ್ರವಲ್ಲ ಪರಭಾಷಾ ಮಂದಿ ರಕ್ಷಿತ್ ಚಿತ್ರಕ್ಕೋಸ್ಕರ ಕಾಯುತ್ತಿರುವ ಘಳಿಗೆ ಬರುತ್ತಿರಲಿಲ್ಲ. ಕೋಟ್ಯಾಂತರ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ನಟನಾಗಿ-ನಿರ್ದೇಶಕನಾಗಿ-ನಿರ್ಮಾಪಕನಾಗಿ ಸೈ ಎನಿಸಿಕೊಳ್ಳೋದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಸ್ವಂತ ಬ್ರ್ಯಾಂಡ್ ಕಟ್ಟೋದಕ್ಕೆ, ಪರಂವಃ ಸ್ಟುಡಿಯೋ ಹುಟ್ಟಿಹಾಕೋದಕ್ಕೆ, ಹೊಸ ಪ್ರತಿಭೆಗಳಿಗೆ ರೆಡ್‌ಕಾರ್ಪೆಟ್ ಹಾಕೋದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಕೋಟಿ ಕೋಟಿ ಹಣ ಶೆಟ್ಟರ ಖಾತೆಯಲ್ಲಿ ಕುಣಿಯುತ್ತಿರಲಿಲ್ಲ. ಇಂದು ಇಷ್ಟೆಲ್ಲಾ ಸಾಧ್ಯವಾಗಿದೆ ಅಂದರೆ ಅದಕ್ಕೆ ಕಾರಣ ಸಿಂಪಲ್‌ಸ್ಟಾರ್‌ಗೆ ಸಿನಿಮಾ ಮೇಲಿರುವ ಶ್ರದ್ದಾಭಕ್ತಿ ಹಾಗೂ ಶೆಟ್ಟರ ಗೆಳೆಯರ ಬಳಗ ಅಂದರೆ ತಪ್ಪಾಗಲಿಕ್ಕಿಲ್ಲ. ಶೆಟ್ಟರು ಧೈರ್ಯ ಕಳೆದುಕೊಂಡಾಗ, ಕುಗ್ಗಿದಾಗ, ಬಿದ್ದಾಗ, ಶೆಟ್ಟರ ಸ್ನೇಹಬಳಗ ಕೈಹಿಡಿದು ಮೇಲೆತ್ತಿದೆ ಹೊಸ ಹುರುಪು ತುಂಬಿದೆ ಧೈರ್ಯ ಹೇಳಿ ಸಂತೈಸಿದೆ ಹೀಗಾಗಿ ಸಿಂಪಲ್‌ಸ್ಟಾರ್ ಸದ್ದಿಲ್ಲದೇ ನ್ಯಾಷನಲ್‌ಸ್ಟಾರ್ ಆದರೂ ಮುಂದೆ ಇಂಟರ್‌ನ್ಯಾಷನಲ್ ಸ್ಟಾರ್ ಕೂಡ ಆಗ್ತಾರೆ ಅದಕ್ಕೆ ಒಳ್ಳೆ ಟೈಮ್ ಬರಬೇಕು ಅಷ್ಟೆ. ಹೀಗಾಗಿ ಸಿಂಪಲ್‌ಸ್ಟಾರ್ ಹೇಳ್ತಿದ್ದಾರೆ ಅಪ್ನಾ ಟೈಮ್ ಆಯೇಗಾ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!