ಜೀವನ ಪಯಣ ಮುಗಿಸಿದ ಅಭಿನಯ ಶಾರದೆ- ಕಸ್ತೂರಿ ನಿವಾಸದ ಕಲಾವಿದೆಯ ಅಗಲಿಕೆಗೆ ಚಿತ್ರರಂಗ ಕಣ್ಣೀರು

ಕನ್ನಡ‌ ಚಿತ್ರರಂಗ ಕಂಡ ಅತ್ಯದ್ಭುತ ನಟಿ, ಅಭಿನಯ ಶಾರದೆ ಎಂತನೇ ಜನಪ್ರಿಯಗೊಂಡಿದ್ದ ಹಿರಿಯ‌ ನಟಿ ಜಯಂತಿಯವರು ಜೀವನ ಪಯಣ ಮುಗಿಸಿದ್ದಾರೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಅಮ್ಮ ಭಾನುವಾರ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯುಂಟಾಗಿ ಕೊನೆಯುಸಿರೆಳೆದಿದ್ದಾರೆ. ಅಭಿನಯ ಶಾರದೆಯ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

500 ಚಿತ್ರಗಳಲ್ಲಿ ಅಭಿನಯ ಶಾರದೆ ಮಿಂಚು

ಜೇನುಗೂಡು ಜಯಂತಿಯವರು ಬಣ್ಣ ಹಚ್ಚಿದ ಮೊದಲ‌ ಕನ್ನಡದ ಸಿನಿಮಾ.‌ ತಮ್ಮ ಎರಡನೇ ಚಿತ್ರ ಚಂದವಳ್ಳಿಯ ತೋಟದಲ್ಲಿ ಡಾ ರಾಜ್ ಕುಮಾರ್ ಗೆ ನಾಯಕಿಯಾದರು. ಅಣ್ಣಾವ್ರು ಹಾಗೂ ಅಭಿನಯ ಶಾರದೆಯ ಜೋಡಿ ಕೂಡ ಅಭಿಮಾನಿ ದೇವರುಗಳ ಮನಸ್ಸು ಗೆದ್ದಿತ್ತು. ಜಯಂತಿ ಯವರಿಗೆ ಡಾ ರಾಜ್ ಕುಮಾರ್ ಜೊತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಚಂದವಳ್ಳಿಯ ತೋಟ, ಮಿಸ್ ಲೀಲಾವತಿ, ಮಂತ್ರಾಲಯ ಮಹಾತ್ಮೆ, ಲಗ್ನ ಪತ್ರಿಕೆ, ಜೇಡರಭಲೇ, ಶ್ರೀ ಕೃಷ್ಣದೇವರಾಯ, ಪರೋಪಕಾರಿ, ಕಸ್ತೂರಿ ನಿವಾಸ, ದೇವರು ಕೊಟ್ಟ ತಂಗಿ, ಎಡಕಲ್ಲು ಗುಡ್ಡದ ಮೇಲೆ, ಮಸಣದ ಹೂ, ಚಿತ್ರಗಳಲ್ಲಿ ಜಯಂತಿ ಅಣ್ಣಾವ್ರಿಗೆ ಜೋಡಿಯಾಗಿದ್ದರು.

ಇಂದಿರಾಗಾಂಧಿಯವರಿಂದ ಪ್ರಶಸ್ತಿ ಸ್ವೀಕಾರ !

ಮಿಸ್ ಲೀಲಾವತಿ ಚಿತ್ರದ ಜಯಂತಿ ಅವರ ಅಭಿನಯಕ್ಕೆ ರಾಜ್ಯಪ್ರಶಸ್ತಿ ಮುಡಿಗೇರಿತ್ತು. ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಜಯಂತಿ ಅವರಿಗೆ ರಾಷ್ಟ್ರ ಪ್ರಶಸ್ತಿ ಪ್ರಧಾನ ಮಾಡಿದ್ದರು. ʼಮಿಸ್ ಲೀಲಾವತಿ’ ನಟಿ ಜಯಂತಿಯವರ ಖ್ಯಾತಿಯನ್ನ ಉತ್ತುಂಗಕ್ಕೇರಿಸಿದ ಚಿತ್ರ. ಮಡಿ ವಂತಿ ಕೆಯ ಸಂಪ್ರದಾಯವನ್ನು ಮುರಿದು ಜಯಂತಿಯವರು ಮಾದಕ ನಟಿಯಾಗಿ ಮಿಂಚಿದ್ದೇ ಬಂತು ಸ್ಯಾಂಡಲ್ ವುಡ್ ಅಂಗಳ ದಲ್ಲಿ ಸುಂಟರಗಾಳಿ ಎಬ್ಬಿಸಿದರು. ಸ್ವಿಮ್ ಸೂಟ್ ಧರಿಸಿದ ಮೊದಲ ಕನ್ನಡದ ನಟಿ ಎನ್ನುವ ಖ್ಯಾತಿ ಗಳಿಸಿದರು. ಮೋಸ್ಟ್ ಬೋಲ್ಡ್ ಅಂಡ್ ಬ್ಯೂಟಿಫುಲ್ ನಾಯಕಿ ಪಟ್ಟಕ್ಕೇರಿ ತಮ್ಮದೇ ಆದ ನಯಾ ಮೇನಿಯಾ ಸೃಷ್ಟಿಸಿಕೊಂಡರು.

ಸ್ಕರ್ಟ್, ಟೀಶರ್ಟ್, ಸ್ವಿಮ್ ಸೂಟ್ ಈ ತರ ಮತ್ತೇರಿಸೋ ಕಾಸ್ಟ್ಯೂಮ್ ನಲ್ಲಿ ಕ್ಯಾಮೆರಾ ಮುಂದೆ ನಿಲ್ಲೋಕೆ ಅಂಜುತ್ತಿದ್ದ ಕಾಲವದು. ಅಂತಹ ಟೈಮ್ ನಲ್ಲಿ ನಟಿ ಜಯಂತಿಯವರು ಮನಸ್ಸನ್ನು ಬಿಗಿಯಾಗಿಸಿ ಕೊಂಡರು. ಯಾವುದೇ ಪಾತ್ರವಾದರೂ ಸರೀ ಲೀಲಾಜಾಲ ವಾಗಿ ಮಾಡಬಲ್ಲೇ ಎನ್ನುವಂತೆ ಯಾವುದೇ ಕಾಸ್ಟ್ಯೂಮ್ ಆದರೂ ಸರೀ ಅದನ್ನು ಧರಿಸಿ ಪಾತ್ರಕ್ಕೋಸ್ಕರ ಕ್ಯಾಮೆರಾ ಮುಂದೆ ನಿಲ್ಲಬಲ್ಲೇ ಎಂಬುದನ್ನು ಮಿಸ್ ಲೀಲಾವತಿ‌ ಚಿತ್ರದ ಮೂಲಕ ತೋರಿಸಿಕೊಟ್ಟರು. ಜಯಂತಿಯವರು ಕ್ಲಿಕ್ ಆದರೂ, ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯ್ತು.

ಅಭಿನಯ ಶಾರದೆ ಕನ್ನಡಕ್ಕಷ್ಟೇ ಅಲ್ಲ…

ಕನ್ನಡ, ತೆಲುಗು, ತಮಿಳು. ಮಲೆಯಾಳಂ, ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಮೇರುನಾಯಕಿಯಾಗಿ‌ ಮಿಂಚಿದರು. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಸಿನಿಮಾ ನಟನೆಗೆ ಏಳು ಭಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಎರಡು ಭಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡಿದ್ದರು. ಕನ್ನಡ ಚಿತ್ರರಂಗ ಕೊಟ್ಟ ಅಭಿನಯ ಶಾರದೆ ಎನ್ನುವ ಕಿರೀಟಕ್ಕೆ ಮುತ್ತಿಟ್ಟಿದ್ದರು.

ಒನಕೆ ಓಬ್ಬವ್ವಳಾಗಿ ಕರ್ನಾಟಕದ ಆರೂವರೆ ಕೋಟಿ ಮಂದಿಯ ಮನಸ್ಸು ಗೆದ್ದರು. ಕಮಲ‌ಕುಮಾರಿ ನಟಿ ಜಯಂತಿಯವರ ಹುಟ್ಟು ನಾಮಧೇಯ. ಚಿತ್ರರಂಗಕ್ಕೆ ಬಂದಮೇಲೆ ಜಯಂತಿ ಅಂತ ಹೆಸರು ಬದಲಾಯಿಸಿ ಕೊಂಡರು. ಹುಟ್ಟೂರು ಬಳ್ಳಾರಿ. ಬಾಲಸುಬ್ರಹ್ಮಣ್ಯಂ ಮತ್ತು ಸಂತಾನ ಲಕ್ಷ್ಮಿಯವರ ಸು ಪುತ್ರಿಯಾಗಿ ಜನಿಸಿದರು. ಈಗ ಪುತ್ರನನ್ನ ಅಗಲಿದ್ದಾರೆ. ಅಮ್ಮನ ಅಗಲಿಕೆಗೆ ಮಗ ಮಾತ್ರವಲ್ಲ ಇಡೀ ಸಿನಿಮಾ ಲೋಕ ಕಂಬನಿ‌ ಮಿಡಿಯುತ್ತಿದೆ

Related Posts

error: Content is protected !!