Categories
ಸಿನಿ ಸುದ್ದಿ

ಕಿಚ್ಚ ಬಯೋಗ್ರಫಿಗೆ ನೀವು ಧ್ವನಿ ನೀಡಬಹುದು!

ಆಡಿಯೋ ಬುಕ್ ರೂಪಕ್ಕೆ ಕಿಚ್ಚ ಬಯೋಗ್ರಫಿ, ಸಿನಿಮಾ ಇತಿಹಾಸದಲ್ಲಿ ಆಡಿಯೋ ರೂಪಕ್ಕೆ ಮೊದಲ ಕೃತಿ

ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಬರೆದ ‘ ಕಿಚ್ವ’ ಬಯೋಗ್ರಫಿ ಅತೀ ಕಡಿಮೆ ಅವದಿಯಲ್ಲೇ ಹೆಚ್ಚು ಮಾರಾಟಗೊಂಡ ಪುಸ್ತಕ ಎನ್ನುವ ಹೆಗ್ಗಳಿಕೆಯ ನಡುವೆಯೇ ಅದೀಗ ಡಿಜಿಟಲ್ ರೂಪ ಪಡೆದಿದೆ. ಆನ್ ಲೈನ್ ನಲ್ಲಿ ಅದು ಇ ಬುಕ್ ರೂಪದಲ್ಲಿ‌ ಸಿಗಲಿದೆ.

ಮೈಲಾಂಗ್ ಬುಕ್ಸ್ ಸಂಸ್ಥೆ ಕಿಚ್ಚ ಬಯೋಗ್ರಫಿಯನ್ನು ಆಡಿಯೋ ಧ್ವನಿ ಮೂಲಕ ಹೊರತರಲು ಯೋಜಿಸಿದ್ದು, ಅದಕ್ಕಾಗಿ ಜನಸಾಮಾನ್ಯರಿಗೆ ಒಂದೊಳ್ಳೆ ಅವಕಾಶ ನೀಡಿದೆ. ಕಿಚ್ಚ ಬಯೋಗ್ರಫಿಗೆ ನೀವು ಧ್ವನಿಯಾಗುವಂತಹ ಅವಕಾಶ ಕಲ್ಪಿಸಿದೆ. ಇಂತಹೊಂದು ಅವಕಾಶವನ್ನು ಮೈಲಾಂಗ್ ಬುಕ್ಸ್ ನೀಡಿರುವುದು ವಿಶೇಷ.

ಹಾಗೊಂದು ವೇಳೆ, ನಿಮ್ಮ ಧ್ವನಿಯ ಸ್ಯಾಂಪಲ್‌ನ್ನು ಮೈಲಾಂಗ್ ಮೇಲ್‌ ವಿಳಾಸಕ್ಕೆ ಕಳುಹಿಸಿದರೆ, ಆ ಧ್ವನಿ ಸೂಕ್ತ ಎಂದು ಅನಿಸಿದರೆ ಇಡೀ ಪುಸ್ತಕಕ್ಕೆ ನಿಮ್ಮ ಧ್ವನಿಯನ್ನು ಕೊಡಬಹುದು. ಆದರೆ ಪುಸ್ತಕಕ್ಕೆ ಧ್ವನಿಯಾಗಲು ಬಯಸುವವರಿಗೆ ಕೆಲವು ಷರತ್ತು ನೀಡಿದೆ. ಅವು ಇಂತಿವೆ‌.

– 24-45ರ ಒಳಗಿನ ಗಂಡಸಿನ ಧ್ವನಿಯಾಗಿರಬೇಕು
– ಬೆಂಗಳೂರಿನಲ್ಲಿ ರೆಕಾರ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಸಿದ್ಧರಿರಬೇಕು
– ಬೇಸ್ ವಾಯ್ಸ್ ಇದ್ದವರಿಗೆ ಆದ್ಯತೆ
– ಆಯ್ಕೆಯ ಅಂತಿಮ ನಿರ್ಧಾರ ಮೈಲಾಂಗ್ ಸಂಸ್ಥೆಯದ್ದು

ಆಸಕ್ತರು ಇದಿಷ್ಟು ಷರತ್ತುಗಳೊಂದಿಗೆ ತಮ್ಮ ಧ್ವನಿಗಳ ರೆಕಾರ್ಡ್ ಅನ್ನು ಕಳುಹಿಸಲು ಜನವರಿ 7 ಕೊನೆಯ ದಿನಾಂಕ ಆಗಿದೆ. ಖ್ಯಾತ ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಬರೆದ’ ಕಿಚ್ಚ’ ಬಯೋಗ್ರಫಿ ಸೆಪ್ಟೆಂಬರ್ 2, 2020 ರಂದು ಲೋಕಾರ್ಪಣೆ ಗೊಂಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುಸ್ತಕ ಬಿಡುಗಡೆ ಮಾಡಿದ್ದರು. ಸಹಜವಾಗಿಯೇ ಸುದೀಪ್ ಅಭಿಮಾನಿಗಳಿಂದ ಪುಸ್ತಕಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

ಕೆಲವೇ ದಿನಗಳಲ್ಲಿ ಮೊದಲ ಪ್ರತಿ ಮಾರಾಟವಾಗಿ, ಎರಡನೇ ಪ್ರತಿ ಸಿದ್ದಗೊಂಡಿತ್ತು. ಅದಕ್ಕೂ ಅದ್ಬುತ ಪ್ರತಿಕ್ರಿಯೆ ಬಂದಿತ್ತು. ‌ಅದೀಗ ಆಡಿಯೋ ಬುಕ್ ಆಗುವ ಯೋಜನೆಯೊಂದಿಗೆ ಇನ್ನೊಂದು ಹಂತಕ್ಕೆ ಹೋಗಿದೆ.ಇದರ ಅಷ್ಟು ಕ್ರೆಡಿಟ್ ಪತ್ರಕರ್ತ ಶರಣು ಹುಲ್ಲೂರು ಅವರಿಗೆ ಸಲ್ಲುತ್ತದೆ.

Categories
ಸಿನಿ ಸುದ್ದಿ

ಈತ ಕೊಲೆ ಕೇಸಿನ ಹಿಂದೆ ಬಿದ್ದ ಜಯರಾಮ್‌ !

‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್‌ ಈಗ ಸಿಸಿಬಿ ಪೊಲೀಸ್‌

‘ರಾಮಾ ರಾಮಾ ರೇ’ ಚಿತ್ರದ ಖ್ಯಾತಿಯ ನಟ ನಟರಾಜ್ ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ.’ ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ನಂತರದ ಸಣ್ಣ ಗ್ಯಾಪ್ ಬಳಿಕ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಸಿಸಿಬಿ ಪೋಲಿಸ್ ಆಗಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಸುಧೀರ್ ಶಾನ್ ಬೋಗ್ ನಿರ್ದೇಶನದ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದಲ್ಲಿ ನಟರಾಜ್, ಮಫ್ತಿಯಲ್ಲಿರುವ ಸಿಸಿಬಿ ಕ್ರೈಮ್‌ ಬ್ರ್ಯಾಂಚ್ ಪೊಲೀಸ್ ‌ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸದ್ಯಕ್ಕೆ ಈ ಚಿತ್ರಕ್ಕಿನ್ನು ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಈ ಚಿತ್ರಕ್ಕೆ ಒಂದು ಹಂತದ ಚಿತ್ರೀಕರಣ ಮುಗಿದು ಹೋಗಿದೆ. ಇದಕ್ಕಾಗಿಯೇ ಚಿತ್ರ ತಂಡ ಮಂಗಳೂರು, ಮಲ್ಪೆ, ಮರವಂತೆ ಬೀಚ್ ಸುತ್ತು ಹಾಕಿ ಬಂದಿದೆ. ಒಂದೆರೆಡು‌ ದಿನ ಬೆಂಗಳೂರಿನಲ್ಲೂ ಶೂಟಿಂಗ್ ನಡೆದಿದೆ. ಈ ಹಂತದಲ್ಲಿ ನಟರಾಜ್ ಅವರ ಪಾತ್ರದ ಗೆಟಪ್ ರಿವೀಲ್ ಆಗುವ ಮೂಲಕ ಸುಧೀರ್‌ ಶಾನ್‌ ಬೋಗ್‌ ನಿರ್ದೇಶನದ ಹೊಸ ಸಿನಿಮಾ ವಿಚಾರ ಬಹಿರಂಗಗೊಂಡಿದೆ.

“ಅನಂತು ವರ್ಸಸ್ ನುಸ್ರತ್ʼ ಚಿತ್ರದ ನಂತರ ನಿರ್ದೇಶಕ ಸುಧೀರ್ ಶಾನ್ ಬೋಗ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು‌.  ಸೆಕ್ರೆಡ್ ವುಡ್ಸ್ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿದ್ದು, ನಟರಾಜ್ ಹುಳಿಯಾರ್ ಅವರ ಸಣ್ಷಕತೆ ಆಧರಿಸಿ ಗೌತಮ್ ಜೋತ್ಸಾ ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗಣೇಶ್ ಹೆಗಡೆ ಛಾಯಾಗ್ರಹಣ ಹಾಗೂ ಸುನಾದ್ ಗೌತಮ್  ಸಂಗೀತ ಸೇರಿದಂತೆ ಅನುಭವಿ ತಂತ್ರಜ್ಞರನ್ನೇ ಚಿತ್ರ ತಂಡ ಆಯ್ಕೆ ಮಾಡಿಕೊಂಡಿದೆ. ಉಳಿದಂತೆ ಚಿತ್ರದ ತಾರಾಗಣದಲ್ಲಿ ನಟರಾಜ್ ಜತೆಗೆ ಚಕ್ರವರ್ತಿ ಚಂದ್ರಚೂಡ್, ಶ್ರೀಕಾಂತ್, ಕೃತಿಕಾ ರವೀಂದ್ರ , ಸಂಪತ್ ಮೈತ್ರಿಯಾ, ಮಠ ಚಿತ್ರದ ಖ್ಯಾತಿಯ ಶಶಿಧರ್ ಭಟ್ ಹಾಗೂ ಮೋಹನ್ ಶೆಣೈ ಸೇರಿದಂತೆ ದೊಡ್ಡ ತಂಡವೆ‌ ಇದೆ. ಒಟ್ಟಿನಲ್ಲಿ ಒಂದೊಳ್ಳೆ ಟೀಮ್‌ ಮೂಲಕ ಅಷ್ಟೇ ಒಳ್ಳೆಯ ಸಿನಿಮಾ ಮಾಡುವ ಕಾತರದಲ್ಲಿದೆ ಚಿತ್ರತಂಡ. ಈ ತಂಡದೊಂದೊಗೆ ನಟರಾಜ್ ಇದೇ ಮೊದಲು ಪೊಲೀಸ್‌ ಆಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಂದ ಹಾಗೆ ಚಿತ್ರದಲ್ಲಿ ಅವರ ಪಾತ್ರದ ಹೆಸರು ಜಯರಾಮ್.‌

ನಾನಿಲ್ಲಿ ಪೊಲೀಸ್‌ ಇನ್ಸ್‌ ಸ್ಪೆಕ್ಟರ್.‌ ಹೆಸರು ಜಯರಾಮ್‌ ಅಂತ. ಆತ ಸಿಟಿ ಕ್ರೈಮ್‌ ಬ್ರ್ಯಾಂಚ್‌ ನಲ್ಲಿ ಕೆಲಸ ಮಾಡುವ ಅಧಿಕಾರಿ. ಹಾಗಂತ ಆತ ಎಂದಿಗೂ ಪೊಲೀಸ್‌ ಡ್ರೆಸ್‌ ಹಾಕಿಕೊಂಡವನಲ್ಲ. ಆತನದ್ದು ಮಫ್ತಿ ನಲ್ಲಿರುವ ಪೊಲೀಸ್‌. ಒಂಥರ ಅಂಡರ್‌ಕಾಪ್.‌ ಒಂದು ಕೊಲೆ ಕೇಸಿನ ತನಿಖೆಯಲ್ಲಿ ಆತನ ಪಾತ್ರ ಹೇಗಿರುತ್ತೆ, ಆತನ ವರ್ಕ್‌ ಶೈಲಿ ಎಂಥದ್ದು, ಆ ಕೊಲೆ ಕೇಸಿನ ಹಿಂದಿನ ಜಾಡು ಎಂಥದ್ದು ಎನ್ನುವುದೆಲ್ಲ ಚಿತ್ರದ ಕತೆಯೊಳಗಿನ ಸಸ್ಪೆನ್ಸ್‌ ಸಂಗತಿ. ತುಂಬಾ ಇಂಟೆರೆಸ್ಟಿಂಗ್‌ ಆಗಿರುವ ಕತೆ ಇದು. ಮೇಲ್ನೊಟಕ್ಕೆ ಇದಿಷ್ಟೇ ಇರಬಹುದು ಅಂತೆನಿಸಿದರೂ, ಸಸ್ಪೆನ್ಸ್‌ ಹಾಗೂ ಥ್ರಿಲ್ಲಿಂಗ್‌ ಸಬ್ಜೆಕ್ಟ್‌ ನಲ್ಲೂ ತುಂಬಾ ಹೊಸತಾದ ವಿಚಾರಗಳು ಇಲ್ಲಿವೆ. ಅವೆಲ್ಲ ಕನ್ನಡ ಪ್ರೇಕ್ಷಕರಿಗೆ ನಿಜಕ್ಕೂ ಹೊಸತಾದ, ಇಂಟೆರೆಸ್ಟಿಂಗ್‌ ಹುಟ್ಟಿಸುವ ವಿಷಯಗಳೇ . ನಾನು ಕೂಡ ಇಂಪ್ರೆಸ್‌ ಆಗಿದ್ದೇ ಈ ಕಂಟೆಂಟ್‌ ಕಾರಣದಿಂದಲೇ.

  • ನಟರಾಜ್‌, ನಟ

ಕಳ್ಬೆಟ್ಟದ ದರೋಡೆಕೋರರು ಚಿತ್ರದ ನಂತರ ಹೊಸ ಪಾತ್ರಗಳಿಗೆ ತಮ್ಮನ್ನು ತಾವು ರೆಡಿ ಮಾಡಿಕೊಳ್ಳುವಾಗ ನಟರಾಜ್‌, ಜಿಮ್ ನಲ್ಲಿ ವರ್ಕೌಟ್‌ ಶುರು ಮಾಡಿದ್ದರು. ಸಿಕ್ಸ್‌ ಪ್ಯಾಕ್‌ ಕೂಡ ಮಾಡಿಕೊಂಡಿದ್ದರು. ಅವೆಲ್ಲವುದರ ನಡುವೆ ಒಂದೆರೆಡು ಸಿನಿಮಾಗಳು ಮಾತುಕತೆಯಲ್ಲಿವೆ ಅಂತಲೂ ಹೇಳಿದ್ದರು. ಆದರೆ ಅವ್ಯಾವು ಅಂತ ಹೇಳಿರಲಿಲ್ಲ. ಆಗಲೇ ಫಿಕ್ಸ್‌ ಆಗಿದ್ದು ಈ ಚಿತ್ರ. ಹೆಚ್ಚು ಕಡಿಮೆ ಒಂದೂವರೆ ವರ್ಷದ ಸಿದ್ದತೆ ಇದು. ಈ ಪಾತ್ರಕ್ಕೆ ಹೇಗೆ ಸೆಲೆಕ್ಟ್‌ ಆಗಿದ್ದು ಎನ್ನುವುದಕ್ಕೆ ನಟರಾಜ್‌ ಹೇಳಿವುದು ಇದಿಷ್ಟು ;

ʼ ನಾನು ಈ ಪಾತ್ರಕ್ಕೆ ಸೆಲೆಕ್ಟ್‌ ಆಗಿದ್ದಕ್ಕೆ ಕಾರಣ ಭಾಗ್ಯರಾಜ್‌ ಚಿತ್ರದಲ್ಲಿನ ನನ್ನ ಪಾತ್ರ. ಅಲ್ಲೊಂದು ನೆಗೆಟಿವ್‌ ರೂಲ್‌ ಮಾಡಿದ್ದೆ. ನಂಗೆ ತುಂಬಾ ಖುಷಿ ಕೊಟ್ಟ ಪಾತ್ರ ಅದು. ನಿರ್ದೇಶಕ ಸುಧೀರ್‌ ಅವರು ಆ ಪಾತ್ರ ನೋಡಿದ್ದರಂತೆ. ಆ ಪಾತ್ರ ಅವರಿಗೆ ತುಂಬಾ ಹಿಡಿಸಿದ್ದರಿಂದಲೇ ಈ ಸಿನಿಮಾಕ್ಕೆ ಅವರು ನನ್ನನ್ನು ಅಪ್ರೋಚ್‌ ಮಾಡಿದ್ದು. ಆರಂಭದಲ್ಲಿ ಪಾತ್ರದ ಬಗ್ಗೆ ಹೇಳಿದ್ದರು. ಆದರೆ ಗೆಟಪ್‌ ಹೇಗಿರುತ್ತೋ ಏನೋ ಎನ್ನುವ ಅನುಮಾನ ಅವರಲ್ಲಿತ್ತಂತೆ. ಒಂದಿನ ಭೇಟಿ ಮಾಡಿದಾಗ, ಪಾತ್ರಕ್ಕೆ ನಾನೇನು ನಿರೀಕ್ಷೆ ಮಾಡುತ್ತಿದ್ದೇನೋ, ಅದೇ ರೀತಿ ನೀವಿದ್ದೀರಿ. ಸೂಪರ್‌, ಚೆನ್ನಾಗಿದೆ ನಿಮ್ಮ ಗೆಟಪ್‌ ಅಂದ್ರು. ಅಲ್ಲಿಂದ ಶುರುವಾಯ್ತು ಈ ಜರ್ನಿʼ  ಅಂತ ಅಂಡರ್‌ ಕಾಪ್‌ ಪೊಲೀಸ್‌ ಜಯರಾಮ್‌ ಆದ ಬಗೆಯನ್ನು ವಿವರಿಸಿದರು ನಟ ನಟರಾಜ್.‌

ಸದ್ಯಕ್ಕೆ ಈ ಚಿತ್ರದಲ್ಲಿ ಬ್ಯುಸಿಯಾಗಿರುವ ನಟರಾಜ್‌, ಇನ್ನೇರೆಡು ಚಿತ್ರ ಒಪ್ಪಿಕೊಂಡಿದ್ದಾರಂತೆ.

Categories
ಸಿನಿ ಸುದ್ದಿ

ದಿಗಂತ್ ಎಂಬ ಬಂಗಾರ! ಹುಟ್ಟು ಹಬ್ಬಕ್ಕೆ ರಿಲೀಸ್ ಆಯ್ತು ಮಾರಿಗೋಲ್ಡ್ ಫಸ್ಟ್ ಲುಕ್ ಪೋಸ್ಟರ್

ಮಾಸ್ ಲುಕ್ ನಲ್ಲಿ ಡಿಂಪಲ್ ಸ್ಟಾರ್

ಟೈಟಲ್ ಮೂಲಕವೇ ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ
ಗುಳಿಕೆನ್ನೆ ಹುಡುಗ ದಿಗಂತ್‌ ಅಭಿನಯದ “ಮಾರಿಗೋಲ್ಡ್” ಚಿತ್ರ ಪೂರ್ಣಗೊಂಡಿದ್ದು ಗೊತ್ತೇ ಇದೆ. ಚಿತ್ರತಂಡ ಈಗ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ದಿಗಂತ್ ಹುಟ್ಟು ಹಬ್ಬಕ್ಕೆ(ಡಿಸೆಂಬರ್ 28) ಚಿತ್ರಂಡ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.


ವಿಭಿನ್ನ ಗೆಟಪ್ ನಲ್ಲಿರುವ ದಿಗಂತ್ ಅವರ ಫಸ್ಟ್ ಲುಕ್ ಪೋಸ್ಟರ್, ಹೊಸ ನಿರೀಕ್ಷೆ ಹುಟ್ಟಿಸಿದೆ. ಇದೇ ಮೊದಲ ಬಾರಿಗೆ ದಿಗಂತ್ ವಿಭಿನ್ನ ಪಾತ್ರದ ಮೂಲಕ “ಮಾರಿಗೋಲ್ಡ್” ಚಿತ್ರದಲ್ಲಿ ಮೋಡಿ ಮಾಡಲಿದ್ದಾರೆ ಎಂಬುದಕ್ಕೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೇಳುತ್ತಿದೆ. ಗನ್ ಜೊತೆ ದಿಗಂತ್ ಗೆ ಏನು ಕೆಲಸ ಎಂಬ ಪ್ರಶ್ನೆಯೂ ಮೂಡುತ್ತದೆ.


ಸದ್ಯಕ್ಕೆ ದಿಗಂತ್ ಬರ್ತ್ ಡೇಗೆ ಸಖತ್ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಮಾರ್ಚ್ ವೇಳೆಗೆ ರಿಲೀಸ್ ಮಾಡುವ ಯೋಚನೆ‌ ಮಾಡಿದೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ “ಮಾರಿಗೋಲ್ಡ್” ಫಸ್ಟ್ ಲುಕ್ ಪೋಸ್ಟರ್ ಸಾಕಷ್ಟು ವೈರಲ್ ಆಗುವುದರ ಜೊತೆಗೆ ಮೆಚ್ಚುಗೆಗೂ ಪಾತ್ರವಾಗಿದೆ.


ಇತ್ತೀಚೆಗೆ ಹಾಡೊಂದನ್ನು ಚಿತ್ರೀಕರಿಸುವ ಮೂಲಕ ಚಿತ್ರತಂಡ ಶೂಟಿಂಗ್‌ ಮುಗಿಸಿತ್ತು. ಈ ಹಿಂದೆ ಟೈಟಲ್ ಫಸ್ಟ್ ಲುಕ್ ಪೋಸ್ಟರ್‌ ಕೂಡ ಬಿಡುಗಡೆಯಾಗಿ, ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ಫಸ್ಟ್ ಲುಕ್ ಪೋಸ್ಟರ್ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದೆ.
ಈಗಾಗಲೇ ಡಬ್ಬಿಂಗ್‌ ಕಾರ್ಯವನ್ನೂ ಬಹುತೇಕ ಮುಗಿಸಿದ್ದು, ನಾಯಕ ದಿಗಂತ್‌ ಭಾಗವಷ್ಟೇ ಬಾಕಿ ಉಳಿದಿದೆ.

“ಮಾರಿಗೋಲ್ಡ್‌” ಅಂದಾಕ್ಷಣ, ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅದು ಅಂಡರ್‌ವರ್ಲ್ಡ್‌ ಸಿನಿಮಾನಾ ಅಥವಾ ರೌಡಿಸಂ ಕುರಿತಾದ ಕಥೆಯೇ ಎಂಬುದಕ್ಕೆ ಸಿನಿಮಾ ಬರುವ ತನಕ ಕಾಯಬೇಕು.
ಇನ್ನು, ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ನಿರ್ದೇಶನ ಮಾಡಿದ್ದಾರೆ.

ರಾಘವೇಂದ್ರ ನಾಯಕ್, ನಿರ್ದೇಶಕ

ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಚಿತ್ರವನ್ನು ರಘುವರ್ಧನ್‌ ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್‌ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ ಅವರು ಮಾಡಿಕೊಂಡಿದ್ದ ಕಥೆ. ಕಥೆ ಚೆನ್ನಾಗಿದ್ದರಿಂದ, ಆ ಕಥೆಯನ್ನು ರಾಘವೇಂದ್ರ ನಾಯಕ್‌ಅವರೇ ನಿರ್ದೇಶಿಸಲಿ ಎಂಬ ಮನೋಭಾವದಿಂದಾಗಿ ರಘುವರ್ಧನ್‌, ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಿಸಿದ್ದಾರೆ.

ರಘುವರ್ಧನ್, ನಿರ್ಮಾಪಕ

ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತವಿದೆ. ಯೋಗರಾಜ್ ಭಟ್ ಮತ್ತು ವಿಜಯ್ ಭರಮಸಾಗರ ಅವರು ಹಾಡು ಬರೆದಿದ್ದಾರೆ. ಕೆ.ಎಸ್.ಚಂದ್ರಶೇಖರ್ ಕ್ಯಾಮೆರಾ ಹಿಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಇನ್ನು, ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ .ಇನ್ನು, ಬೆಂಗಳೂರು, ಸಕಲೇಶಪುರ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ.

ಇದೊಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ ಆಗಿದ್ದು, ಸಂಗೀತಾ ಶೃಂಗೇರಿ ಚಿತ್ರದ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಸಂಪತ್‌ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ಶೆಟ್ಟಿ, ರಾಜ್‌ ಬಲವಾಡಿ, ಗಣೇಶ್‌ರಾವ್‌ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಹೊಸಬರ ಖಾಸಗಿ ವಿಷಯಗಳು! ಪುಟಗಳಲ್ಲಿ  ಬಚ್ಚಿಟ್ಟ  ಮಾತು

ಒಂದು ಹೊಸ ಪ್ರಯತ್ನದ ಸಿನಿಮಾ ಇದು…

ದಿನ ಕಳೆದಂತೆ ಕನ್ನಡ ಚಿತ್ರರಂಗ ಮೆಲ್ಲನೆ ರಂಗೇರಿತ್ತಿದೆ. ಹಳಬರು, ಹೊಸಬರು ಸಿನಿಮಾಗಳನ್ನು ಶುರು ಮಾಡುತ್ತಿದ್ದಾರೆ. ಈಗಾಗಲೇ ಕೊರೊನೊ ಹಾವಳಿ ಕೊಂಚ ಕಡಿಮೆ ಆಗುತ್ತಿದ್ದಂತೆಯೇ,, ಒಂದಷ್ಟು ಚಿತ್ರಗಳು ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಹೊಸಬರ ‘ಖಾಸಗಿ ಪುಟಗಳು’ ಚಿತ್ರವೂ ಸೇರಿದೆ.

ಶ್ವೇತಾ, ನಾಯಕಿ

ಹನುಮ ಜಯಂತಿ ದಿನದಂದು ಚಿತ್ರತಂಡ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದೆ.
ಈ ಪೋಸ್ಟರ್ ನೋಡಿದವರಿಗೆ ಇದೊಂದು ವಿಭಿನ್ನ ಪ್ರಯೋಗಾತ್ಮಕ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಅದರಲ್ಲೂ ಪೋಸ್ಟರ್ ನಲ್ಲೇ ಒಂದು ಕಡಲ ದಡಿಯ ಕಥೆ ಎಂಬುದನ್ನೂ ಸಾರುತ್ತೆ.

ವಿಶ್ವ, ನಾಯಕ

ಒಂದು ಕಡಲು, ಒಂದು ದೋಣಿ, ಯಕ್ಷಗಾನ ಕಲಾವಿದರೊಬ್ಬರ ಭಾವಚಿತ್ರ, ಹುಲಿವೇಷದಾರಿ , ಕಾಣುವ ಅಂಚೆ ಡಬ್ಬ, ಲಗೋರಿ ಆಡುತ್ತಿರುವ ಹುಡುಗ, ವಾಲಿಬಾಲ್ ಆಡುತ್ತಿರುವ ಮಂದಿ, ದಡಕ್ಕೆ ದೋಣಿ ಸರಿಸುತ್ತಿರುವ ನಾವಿಕ, ಅಲ್ಲೊಂದು ಕ್ಯಾಮರಾ ಕಣ್ಣು… ಹೀಗೆ ಸೂಕ್ಷ್ಮವಾಗಿ ಗಮನಿಸಿದರೆ ಇವೆಲ್ಲವೂ ಈ ‘ಖಾಸಗಿ ಪುಟಗಳಲ್ಲಿ’ ಕಾಣಸಿಗುತ್ತವೆ.
ಇಂಥದ್ದೊಂದು ವಿಭಿನ್ನ ಎನಿಸುವ ಅರ್ಥಪೂರ್ಣವಾಗಿರುವ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಒಂದಷ್ಟು ಕುತೂಹಲ ಮೂಡಿಸಿದೆ ಚಿತ್ರತಂಡ.
ಅಂದಹಾಗೆ, ಈ ಚಿತ್ರವನ್ನು ಸಂತೋಷ್ ಶ್ರೀಕಂಠಪ್ಪ ನಿರ್ದೇಶನ ಮಾಡುತ್ತಿದ್ದಾರೆ.

ಸಂತೋಷ್ , ನಿರ್ದೇಶಕ

ಮಂಜು ದಿ ರಾಜ್, ವೀಣಾ ದಿ ರಾಜ್, ಮಂಜುನಾಥ್ ಡಿ.ಎಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ವಿಶ್ವಜಿತ್ ರಾವ್ ಛಾಯಾಗ್ರಹಣವಿದೆ. ವಾಸುಕಿ ವೈಭವ್ ಸಂಗೀತವಿದೆ. ಆಶಿಕ್ ಕುಸುಗೊಳಿ ಸಂಕಲನ ಮಾಡಲಿದ್ದಾರೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ, ವಿಶ್ವಜಿತ್ ರಾವ್ ಸಾಹಿತ್ಯವಿದೆ.


ಸದ್ಯಕ್ಕೆ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡಕ್ಕೆ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಇನ್ನು ಈ ಚಿತ್ರಕ್ಕೆ ವಿಶ್ವ ಹೀರೋ. ಈ ಹಿಂದೆ ‘ಗೋಣಿ ಚೀಲ’ ಎಂಬ ಶಾರ್ಟ್ ಫಿಲ್ಮ್ ಮಾಡಿದ್ದ ವಿಶ್ವ ಇಲ್ಲಿ ಹೈಲೆಟ್.

ಅವರಿಗೆ ನಾಯಕಿಯಾಗಿ ಶ್ವೇತಾ ಕಾಣಿಸಿಕೊಂಡಿದ್ದಾರೆ. ಉಡುಪಿ ಸುತ್ತ ಮುತ್ತ ಚಿತ್ರೀಕರಣಗೊಂಡಿದ್ದು, ಇನ್ನು ಹಾಡುಗಳ ಚಿತ್ರೀಕರಣ ಬಾಕಿ ಇದೆ.

Categories
ಸಿನಿ ಸುದ್ದಿ

ಅಪ್ಪನಿಗೆ ಮಗ ನಿರ್ದೇಶನ – ನವಮಿಯಲ್ಲಿ ಎಸ್.ನಾರಾಯಣ್ ನಟನೆ

ಹೀರೋ ತಂದೆಯಾಗಿ ನಾರಾಯಣ್

ಕನ್ನಡ ಚಿತ್ರರಂಗದಲ್ಲಿ ಅಪ್ಪನ ನಿರ್ಮಾಣದಲ್ಲಿ ಮಗ ಹೀರೋ ಆಗಿರುವ ಉದಾಹರಣೆ ಇದೆ. ಅಪ್ಪನ ನಿರ್ದೇಶನದಲ್ಲಿ ಮಗ ನಟಿಸಿದ್ದೂ ಇದೆ. ಮಗನ ನಿರ್ದೇಶನದಲ್ಲಿ ಅಪ್ಪ ಅಭಿನಯಿಸಿದ್ದೂ ಉಂಟು. ಈಗ ಮಗನ ಚೊಚ್ಚಲ ನಿರ್ದೇಶನದಲ್ಲಿ ಅಪ್ಪ ಬಣ್ಣ ಹಚ್ಚಿ ನಟಿಸಿದ್ದು ಸುದ್ದಿಯಾಗಿದೆ.


ಹೌದು, ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಎಸ್ ನಾರಾಯಣ್ ‘ನವಮಿ 9.9.1999’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಾರಾಯಣ್ ಪುತ್ರ ಪವನ್ ಎಸ್ ನಾರಾಯಣ್ ನಿರ್ದೇಶಕರು. ಮಗನ ನಿರ್ದೇಶನದಲ್ಲಿ ಅಪ್ಪ ಅಭಿನಯಿಸಿರುವುದು ವಿಶೇಷ.
ಎಸ್.ನಾರಾಯಣ್ ಈ ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‌ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.‌ ಫೈಟ್ ಹಾಗೂ ಹಾಡುಗಳ ಚಿತ್ರೀಕರಣ ‌ಬಾಕಿ ಉಳಿದಿದೆ. ಬೆಂಗಳೂರು, ಶಿವಗಂಗೆ, ಸಕಲೇಶಪುರದಲ್ಲಿ 40 ದಿನಗಳ ಚಿತ್ರೀಕರಣ ನಡೆದಿದೆ.
ಉತ್ಸಾಹಿ ಯುವಕರ ತಂಡವೊಂದು ಲಾಕ್ ಡೌನ್ ಸಮಯದಲ್ಲಿ ಕಥೆ ಬರೆದಿದ್ದು, ಪವನ್ ಎಸ್‌ ನಾರಾಯಣ್ ಮೊದಲ ಸಲ ಆಕ್ಷನ್ ಕಟ್ ಹೇಳುತ್ತಿದ್ದಾರೆ.


ತಂದೆ ಗರಡಿಯಲ್ಲಿ ಪಳಗಿರುವ ಪವನ್ ಈಗ ಸ್ವತಂತ್ರ ನಿರ್ದೇಶಕನಾಗಿ ಈ ಸಿನಿಮಾದ ಮೂಲಕ ಹೆಜ್ಜೆ ಇಡುತ್ತಿದ್ದಾರೆ.
ಈ ಚಿತ್ರಕ್ಕೆ ನಟ ಯಶಸ್ ಅಭಿ ಹೀರೋ. ಈ ಹಿಂದೆ ‘ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಲ್ಲಿ ಯಶಸ್ ಅಭಿ ‌ನಟಿಸಿದ್ದಾರೆ.

ನಾಯಕ ನಟ ಯಶಸ್ ಅಭಿ ಮತ್ತು ಕೃಷ್ಣ ಗುಡೆಮಾರನ ಹಳ್ಳಿ ಚಿತ್ರಕಥೆ ರಚಿಸಿ, ಪದ್ಮ ಸುಂದರಿ ಕ್ರಿಯೇಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಂದಿನಿ ಗೌಡ ಈ ಚಿತ್ರದ ನಾಯಕಿಯಾಗಿದ್ದಾರೆ.
ಎಸ್.ನಾರಾಯಣ್, ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಸಂದೀಪ್ ಕುಮರ್ ಜಿ.ಎಂ, ಅನುಶ್ರಿ, ಪವಿತ್ರ, ಕುರಿಬಾಂಡ್ ಸುನೀಲ್, ಅರುಣ ಬಾಲರಾಜ್ ಮುಂತಾದವರು ಈ‌ ಚಿತ್ರದಲ್ಲಿದ್ದಾರೆ.
ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗಿರಿಧರ್ ದಿವಾನ್ ಸಂಗೀತ ನಿರ್ದೇಶನವಿದೆ. ನಾಗಾರ್ಜುನ್ ಶರ್ಮ ಸಾಹಿತ್ಯ, ಮಾಸ್ ಮಾದ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನವಿದೆ. ಮೋಹನ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ


ಶಶಿಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಾಹಿಸುತ್ತಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ನವ(ಒಂಭತ್ತು ಜನ) ನಿರ್ದೇಶಕರು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದರು.

Categories
ಸಿನಿ ಸುದ್ದಿ

ಚಿತ್ರ ನಿರ್ಮಾಣಕ್ಕೆ ಸಿಂಗರ್‌ ಚಂದನ್‌ ಶೆಟ್ಟಿ, ಹೊಸ ವರ್ಷಕ್ಕೆ ಹೊಸ ಸಿನಿಮಾ

ಯುನೈಟೆಡ್‌ ಎಂಟರ್‌ಟೈನರ್‌ ಮೂಲಕ ಇಷ್ಟರಲ್ಲೇ ಶುರುವಾಗಲಿದೆ ಚಂದನ್‌ ಶೆಟ್ಟಿ ಸಿನಿಮಾ

ಸಿಂಗರ್‌ ಚಂದನ್‌ ಶೆಟ್ಟಿ, ಈಗ ಸಿನಿಮಾ ಪ್ರೊಡಕ್ಷನ್‌ ಕಡೆ ಮುಖ ಮಾಡಿದ್ದಾರೆ. ಅದಕ್ಕಂತಲೇ ಅವರೀಗ ಆಂಧ್ರ ಮೂಲದ ಗಣಿ ಉದ್ಯಮಿ ಚೈತನ್ಯ ಲಖಂ ಸಾನಿ ಎಂಬುವರೊಂದಿಗೆ ಸೇರಿ ʼಯುನೈಟೆಡ್‌ ಎಂಟರ್‌ ಟೈನರ್‌ʼ ಎಂಬ ಹೊಸ ಪ್ರೊಡಕ್ಷನ್‌ ಹೌಸ್‌ ಶುರು ಮಾಡಿದ್ದಾರೆ. ನಟ ಧರ್ಮ ಕೂಡ ಇದಕ್ಕೆ ಸಾಥ್‌ ನೀಡಿದ್ದು, ಎಲ್ಲವೂ ಅಂದುಕೊಂಡಂತಾದರೆ ಹೊಸ ವರ್ಷದ ಆರಂಭದಲ್ಲಿ ಯುನೈಟೆಡ್‌ ಎಂಟರ್‌ ಟೈನರ್‌ ಮೂಲಕ  ಚಂದನ್‌ ಶೆಟ್ಟಿ ಅದ್ದೂರಿ ವೆಚ್ಚದ ನಿರ್ಮಾಣ ಮಾಡುವುದು ಕನ್ಫರ್ಮ್.

ಸದ್ಯಕ್ಕೆ ಆ ಸಿನಿಮಾದ ಪ್ಲಾನ್‌ ಏನು? ಆರ್ಟಿಸ್ಟ್‌ ಯಾರು? ಕಥೆ-ನಿರ್ದೇಶನ ಯಾರದು? ಇತ್ಯಾದಿ ಮಾಹಿತಿಗಳು ಇನ್ನು ನಿಗೂಢ. ಚಂದನ್‌ ಶೆಟ್ಟಿ ಆಂಡ್‌ ಗ್ರೂಪ್‌ ಅದೆಲ್ಲವನ್ನು ಫೈನಲ್‌ ಮಾಡಿಕೊಂಡಿದೆಯೋ ಇಲ್ಲವೋ ಗೊತ್ತಿಲ್ಲ.  ಆ ಬಗ್ಗೆ ಟೀಮ್‌ ಕೂಡ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸಿನಿಮಾ ಮಾಡುವ ಮುಂದಿನ ಯೋಚನೆಯನ್ನು ಚಂದನ್‌ ಶೆಟ್ಟಿ ಆಂಡ್‌ ಟೀಮ್‌ ಶನಿವಾರ ಅಧಿಕೃತವಾಗಿಯೇ ರಿವೀಲ್‌ ಮಾಡಿದೆ. ಯುನೈಟೆಡ್‌ ಎಂಟರ್‌ ಟೈನರ್‌ ಬ್ಯಾನರ್‌ ಮೂಲಕ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಆಲೋಚನೆ ಇದೆ ಅಂತಲೂ ಹೇಳಿದೆ.

ಸದ್ಯಕ್ಕೀಗ ಯುನೈಟೆಡ್‌ ಆಡಿಯೋ ಸಂಸ್ಥೆ ಮೂಲಕ ಮೊದಲ ಮ್ಯೂಜಿಕ್‌ ವಿಡಿಯೋ ಆಲ್ಬಂ ಲಾಂಚ್‌ ಆಗಿದೆ.” ಪಾರ್ಟಿ ಫ್ರಿಕ್‌ʼ  ಎನ್ನುವುದು ಅದರ ಹೆಸರು. ನ್ಯೂ ಈಯರ್‌ ಪಾರ್ಟಿಗಳಿಗೆ ಇನ್ನಷ್ಟು ಕಿಕ್‌ ಬರಲಿ ಅಂತನೇ ರ್ಯಾಪರ್‌ ಚಂದನ್‌ ಶೆಟ್ಟಿ ತಾವೇ ಸಾಹಿತ್ಯ ಬರೆದು, ಅದರಲ್ಲಿ ಹಾಡಿ ಕುಣಿದಿದ್ದಾರೆ. ಇದು ಕನ್ನಡ ಮತ್ತು ತೆಲುಗು ಏರಡೂ ಭಾಷೆಗೂ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಮೂರು ದಿನಗಳ ಕಾಲ ಬೆಂಗಳೂರಿನ ಶರ್ಟಾನ್‌ ಸ್ಟಾರ್‌ ಹೋಟೆಲ್‌ ನಲ್ಲಿ ಚಿತ್ರೀಕರಣಗೊಂಡಿದ್ದು, ಅದಕ್ಕಾಗಿ ಸರಿ ಸುಮಾರು ೩೦ ಲಕ್ಷ ರೂ. ವೆಚ್ಚ ಮಾಡಿದ್ದಾಗಿ ತಂಡ ಹೇಳಿದೆ. ಅದೀಗ ಯುನೈಟೆಡ್‌ ಆಡಿಯೋ ಸಂಸ್ಥೆಯ ಆಧಿಕೃತ ಯುಟ್ಯೂಬ್‌ ಚಾನೆಲ್‌ ಮೂಲಕ ಬಿಡುಗಡೆ ಅಗಿದೆ.

ಶನಿವಾರ ಅದು ಲಾಂಚ್‌ ಆದ ಸಂದರ್ಭದಲ್ಲಿ ಮಾತನಾಡಿದ ಚಂದನ್‌ ಶೆಟ್ಟಿ, ಯುನೈಟೆಡ್‌ ಸಂಸ್ಥೆಯ ಶುರುವಾದ ಬಗೆ, ಅದರ ಮೂಲ ಉದ್ದೇಶ, ಮುಂದಿನ ಯೋಜನೆಗಳನ್ನು ರಿವೀಲ್‌ ಮಾಡಿದರು.” ಯುನೈಟೆಡ್‌ ಸಂಸ್ಥೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಆಲ್ಬಂ ಸಾಂಗ್‌ ಮಾಡುವ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಅದರ ಮೊದಲ ಉದ್ದೇಶವಾದರೆ, ಕ್ರಮೇಣ ಸಿನಿಮಾ ನಿರ್ಮಾಣ ಮಾಡುವುದು ಅದರ ಟಾರ್ಗೆಟ್‌ ಎಂಬುದಾಗಿ ಹೇಳಿದರು. ನಟ ಧರ್ಮ ಹಾಗೂ ನಿರ್ಮಾಪಕ ಚೈತನ್ಯ ಲಖಂ ಸಾನಿ ಕೂಡ ಇದನ್ನು ಬಹಿರಂಗ ಪಡಿಸಿದರು. ಒಟ್ಟಿನಲ್ಲಿ  ಸಿನಿಮಾದಲ್ಲಿ ಹಾಡು ಬರೆದು , ಹಾಡುವುದಕ್ಕಾಗಿ ಒಂದು ಟೈಮ್‌ ಪರದಾಡಿದ್ದ ಚಂದನ್‌ ಶೆಟ್ಟಿ ಇವತ್ತುಬಹುಬೇಡಿಕೆಯ ಸಿಂಗರ್‌ ಆಗಿದ್ದು ಒಂದೆಡೆಯಾದರೆ, ಮತ್ತೊಂದಡೆ ಸಿನಿಮಾ ನಿರ್ಮಾಣದತ್ತ ಕೂಡ ಮನಸ್ಸು ಮಾಡಿದ್ದು ವಿಶೇಷ.

Categories
ಸಿನಿ ಸುದ್ದಿ

ಕೋಟಿಗೊಂದೇ ಕ್ಯಾಲೆಂಡರ್‌! ಕನ್ನಡ ವರ್ಣಮಾಲೆಯಲ್ಲಿ ಅರಳಿದ ಡಾ.ವಿಷ್ಣುವರ್ಧನ್

ಅಭಿಮಾನಿಗಳಿಗಾಗಿ ಅಭಿಮಾನದ ಕ್ಯಾಲೆಂಡರ್‌ ಲೋಕಾರ್ಪಣೆ

 

ಡಾ.ವಿಷ್ಣುವರ್ಧನ್‌ ಅವರ ಕುರಿತ ಅನೇಕ ಪುಸ್ತಕಗಳು ಹೊರಬಂದಿವೆ. ಅಷ್ಟೇ ಯಾಕೆ, ಸರ್ಕಾರ ಅವರ ಭಾವಚಿತ್ರವಿರುದ ಅಂಚೆ ಚೀಟಿಯನ್ನೂ ಹೊರತಂದಿದೆ. ಅವರ ಅಭಿಮಾನಿಗಳಂತೂ ವಿವಿಧ ರೀತಿಯಲ್ಲಿ ವಿಷ್ಣುವರ್ಧನ್‌ ಅವರನ್ನು ಆರಾಧಿಸುತ್ತಲೇ ಬಂದಿದ್ದಾರೆ. ಈಗ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ಡಾ.ವಿಷ್ಣುವರ್ಧನ್‌ ಅವರ ವಿಭಿನ್ನವಾದ ಕ್ಯಾಲೆಂಡರ್‌ವೊಂದನ್ನು ಹೊರತಂದಿದ್ದಾರೆ. ಆ ಕ್ಯಾಲೆಂಡರ್‌ ತುಂಬಾನೇ ವಿಶೇಷವಾಗಿದೆ ಎಂಬುದೇ ಈ ಹೊತ್ತಿನ ಸುದ್ದಿ.
ಅಷ್ಟಕ್ಕೂ ಆ ಕ್ಯಾಲೆಂಡರ್‌ನ ವಿಶೇಷತೆ ಏನು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಸಾಮಾನ್ಯವಾಗಿ ವರ್ಣಮಾಲೆ ಕಲಿಯದ ಕನ್ನಡಿಗರಿಲ್ಲ. ಬಾಲ್ಯದಿಂದಲೂ ಅ-ಅರಸ, ಆ-ಆಕಾಶ ಹೀಗೆ ಒಂದೊಂದು ಅಕ್ಷರದ ಮೂಲಕ ಕನ್ನಡವನ್ನು ಪ್ರೀತಿಯಿಂದ ಕಲಿತಿರುವುದುಂಟು. ಅದನ್ನು ಸದಾ ಕಂಠಪಾಠ ಮಾಡುತ್ತಲೇ ಇಂದಿಗೂ ಕನ್ನಡ ಮೇಲಿನ ಪ್ರೀತಿ ಇಟ್ಟುಕೊಂಡಿದ್ದಾರೆ. ಈಗ ಡಾ.ವಿಷ್ಣು ಅಭಿಮಾನಿಗಳಿಗಾಗಿ ಅದೇ ವರ್ಣಮಾಲೆಯನ್ನು ಬಳಸಕೊಂಡೇ ಸ್ವಲ್ಪ ವಿಭಿನ್ನವಾಗಿ ವಿನೂತನ ರೀತಿಯಲ್ಲಿ ಕ್ಯಾಲೆಂಡರ್‌ ಮಾಡಲಾಗಿದೆ.

ಅ-ಅಸಾಧ್ಯ ಅಳಿಯ, ಆ-ಆಪ್ತಮಿತ್ರ, ಇ-ಇಂದಿನ ರಾಮಾಯಣ, ಈ-ಈ ಜೀವ ನಿನಗಾಗಿ, ಊ-ಊರಿಗೆ ಉಪಕಾರಿ, ಎ-ಎಲ್ಲರಂತಲ್ಲ ನನ್ನ ಗಂಡ, ಏ-ಏಕದಂತ… ಹೀಗೆ ವರ್ಣಮಾಲೆಯ ಮೊದಲ ಅಕ್ಷರದಲ್ಲಿ ಮೂಡಿಬಂದಿರುವ ಸಿನಿಮಾಗಳನ್ನೂ ಹೆಸರಿಸಿ, ರಿಚ್‌ ಆಗಿರುವ ಆಕರ್ಷಣೆ ಎನಿಸುವ ಕ್ಯಾಲೆಂಡರ್‌ ಮಾಡಲಾಗಿದೆ.

 


ಅ-ಅಸಾಧ್ಯ ಅಳಿಯ, ಆ-ಆಪ್ತಮಿತ್ರ, ಇ-ಇಂದಿನ ರಾಮಾಯಣ, ಈ-ಈ ಜೀವ ನಿನಗಾಗಿ, ಊ_ಊರಿಗೆ ಉಪಕಾರಿ, ಎ-ಎಲ್ಲರಂತಲ್ಲ ನನ್ನ ಗಂಡ, ಏ-ಏಕದಂತ… ಹೀಗೆ ವರ್ಣಮಾಲೆಯ ಮೊದಲ ಅಕ್ಷರದಲ್ಲಿ ಮೂಡಿಬಂದಿರುವ ಸಿನಿಮಾಗಳನ್ನೂ ಹೆಸರಿಸಿ, ರಿಚ್‌ ಆಗಿರುವ ಆಕರ್ಷಣೆ ಎನಿಸುವ ಕ್ಯಾಲೆಂಡರ್‌ ಮಾಡಲಾಗಿದೆ.  ಅ ಅಕ್ಷರದಿಂದ ಳ ಅಕ್ಷರದವರೆಗೆ ಇರುವಂತಹ ಎಲ್ಲಾ ಡಾ.ವಿಷ್ಣುವರ್ಧನ್ ಅವರ ಚಿತ್ರಗಳ ಹೆಸರುಗಳನ್ನು ಕನ್ನಡ ವರ್ಣಮಾಲೆಯೊಂದಿಗೆ ಜೋಡಿಸಿ ಮುದ್ರಿಸಿರುವ ವಿಶಿಷ್ಠ ಪ್ರಯತ್ನ ಇದಾಗಿದೆ. ಕೇವಲ ವರ್ಣಮಾಲೆ ಮಾತ್ರವಲ್ಲದೆ ಕನ್ನಡಿಗರ ಹೆಗ್ಗುರುತಾದ ಹಂಪೆಯ ಕಲ್ಲಿನ ರಥವನ್ನು ಈ ಕ್ಯಾಲೆಂಡರ್ ವಿನ್ಯಾಸಕ್ಕೆ ಬಳಸಲಾಗಿದೆ.

ವೀರಕಪುತ್ರ ಶ್ರೀನಿವಾಸ್‌, ವಿಷ್ಣು ಸೇನಾ ಸಮಿತಿ ಅಧ್ಯಕ್ಷ

ಪ್ರತಿ ತಿಂಗಳ ಪುಟದಲ್ಲೂ ಡಾ.ವಿಷ್ಣುವರ್ಧನ್ ಅವರ ಅಪರೂಪದ ಭಾವಚಿತ್ರಗಳಿರುವುದು ಈ ಕ್ಯಾಲೆಂಡರ್‌ನ ವಿಶೇಷತೆ. ಪ್ರತಿ ತಿಂಗಳಿಗೂ ವಿಶೇಷ ಬಣ್ಣಗಳ ಸಂಯೋಜನೆ ಕೂಡ ಆಕರ್ಷಕವಾಗಿದೆ. ಕ್ಯಾಲೆಂಡರ್‌ನಲ್ಲಿ ರಜಾದಿನಗಳು, ಅಮಾವಾಸೆ, ಹುಣ್ಣಿಮೆ, ಹಬ್ಬಗಳು, ಗಣ್ಯರ ಜನ್ಮದಿನ ಒಳಗೊಂಡಿರುವ ಈ ಕ್ಯಾಲೆಂಡರ್ ವೃತಿಪರ ಕ್ಯಾಲೆಂಡರ್‌ಗಳಂತೆಯೇ ಮೂಡಿಬಂದಿದೆ.
ಈ ಕೋಟಿಗೊಬ್ಬ ಕ್ಯಾಲೆಂಡರ್ ಸರಣಿ ಶುರುವಾಗಿ 2021ಕ್ಕೆ ಹತ್ತು ವರ್ಷಗಳಾಗಿವೆ. ದಿ.ಅನಂತಕುಮಾರ್ ಮತ್ತು ಡಾ.ಭಾರತಿ ವಿಷ್ಣುವರ್ಧನ್ ಅವರು ಈ ಕ್ಯಾಲೆಂಡರ್ ಸರಣಿಯ ಮೊದಲನೇ ಸಂಚಿಕೆಯನ್ನು ಬಿಡುಗಡೆಗೊಳಿಸಿದ್ದರು. ಅಂದಿನಿಂದ ಇಂದಿನವರೆಗೆ ಹತ್ತು ವರ್ಷಗಳ ಕಾಲ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಮನೆಮಾತಾಗಿರುವ ಈ 2021ರ ಕೋಟಿಗೊಬ್ಬ ಕ್ಯಾಲೆಂಡರ್ ಈಗಾಗಲೇ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ ಲೋಕಾರ್ಪಣೆಗೊಂಡಿದೆ ಎಂದು ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಹೇಳಿದ್ದಾರೆ.

Categories
ಸಿನಿ ಸುದ್ದಿ

ನಿರ್ಮಾಪಕ ಕೆ.ಪಿ. ಶ್ರೀಕಾಂತ್‌, ಹಿಂಬಾಲಕರ ಸಂಖ್ಯೆ 5 ಸಾವಿರ !

ಟ್ವಿಟ್ಟರ್‌ ಖಾತೆಯಲ್ಲಿ ಫುಲ್‌ ಆ್ಯಕ್ಟಿವ್ ಆಗಿರುವ “ಸಲಗʼ ನಿರ್ಮಾಪಕ

ಕನ್ನಡ ಚಿತ್ರರಂಗದ ಮಟ್ಟಿಗೆ ಸೋಷಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್‌ ಆಗಿದ್ದವರು ಯಾರು ಅಂತ ಬಂದಾಗ ಸ್ಟಾರ್‌ಗಳು, ತಂತ್ರಜ್ನರು, ನಿರ್ದೇಶಕರು, ಇಲ್ಲವೆ ಸಂಗೀತ ನಿರ್ದೇಶಕರು ಮುಂಚೂಣಿಯಲ್ಲಿ ಕಾಣುತ್ತಾರೆ. ಅದರಾಚೆ ನಿರ್ಮಾಪಕರು ಇಲ್ಲವೇ ಅಂತ ನೋಡಿದರೆ ಬೆರಳೆಣಿಕೆಯ ಜನ ಇದ್ದಾರೆ. ಆ ಪೈಕಿ ʼಟಗರುʼ ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಕೂಡ ಒಬ್ಬರು. ಫೇಸ್‌ ಬುಕ್‌, ಇನ್ಸಾಸ್ಟಾಗ್ರಾಮ್‌ ಹಾಗೂ ಟ್ಬಿಟರ್‌ ಸೇರಿದಂತೆ ಎಲ್ಲಾ ಪ್ಲಾಟ್‌ ಫಾರ್ಮ್‌ ನಲ್ಲೂ ಅವರು ಫುಲ್‌ ಆಕ್ಟಿವ್.‌ ಸದ್ಯಕ್ಕೆ ಅವರ ಟ್ವಿಟರ್‌ ಅಕೌಂಟ್‌ ಫಾಲೋವರ್ಸ್‌ ಸಂಖ್ಯೆ ಈಗ ೫ ಸಾವಿರ ರಿಚ್‌ ಆಗಿದೆ.

ಕನ್ನಡದ ನಿರ್ಮಾಪಕರ ಪೈಕಿ ಟ್ವಿಟರ್‌ ನಲ್ಲಿ ಇಷ್ಟು ಸಕ್ರಿಯವಾಗಿದ್ದು, ೫ ಸಾವಿರ ಫಾಲೋವರ್ಸ್‌ ಹೊಂದಿರುವ ನಿರ್ಮಾಪಕ ಶ್ರೀಕಾಂತ್‌ ಬಹುಶ: ಮೊದಲಿಗರು ಹೌದು. ಟ್ವಿಟರ್‌ ಫಾಲೋವರ್ಸ್‌ ಸಂಖ್ಯೆ ೫ ಸಾವಿರ ತಲುಪಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ನಿರ್ಮಾಪಕ ಶ್ರೀಕಾಂತ್‌, ಸೋಷಲ್‌ ಮೀಡಿಯಾ ಎನ್ನುವುದು ಈ ಕಾಲದ ಅತೀ ವೇಗದ ಸಂಪರ್ಕ ಮಾಧ್ಯಮ. ಸ್ಟಾರ್‌ ಗಳಂತೂ ಅದೇ ಕಾರಣಕ್ಕೆ ಇಲ್ಲಿ ಹೆಚ್ಚು ಸಕ್ರಿಯವಾಗಿರುವುದು ಎಲ್ಲರಿಗೂ ಗೊತ್ತು. ನಮಗೂ ಕೂಡ ಇದು ಅಗತ್ಯವೇ. ನಮ್ಮ ಸಿನಿಮಾ ಸಂಬಂಧಿತ ಎಲ್ಲಾ ಮಾಹಿತಿಗಳನ್ನು, ಮುಂದಿನ ಯೋಜನೆಗಳನ್ನು ಹಂಚಿಕೊಳ್ಳುವುದಕ್ಕೂ ಇದು ಸೂಕ್ತ ವೇದಿಕೆ ಎನಿಸಿದೆ. ಈಗ ನಾನು ೫ ಸಾವಿರ ಫಾಲೋವರ್ಸ್‌ ಹೊಂದಿರುವುದು ಖುಷಿ ಕೊಟ್ಟಿದೆ. ಅವರಿಗೆಲ್ಲ ಧನ್ಯವಾದʼ ಅಂತ ಶ್ರೀಕಾಂತ್‌ ಟ್ವಿಟ್‌ ಮಾಡಿದ್ದಾರೆ. ಸದ್ಯ ಶ್ರೀಕಾಂತ್‌ ಅವರ ನಿರ್ಮಾಣದಲ್ಲಿ ʼಸಲಗʼ ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌ ಮುಗಿಸಿ, ರಿಲೀಸ್‌ ಗೆ ರೆಡಿಯಾಗಿದೆ.

‘ಟಗರುʼ ಸೇರಿದಂತೆ ಈಗಾಗಲೇ ಹಲವು ಯಶಸ್ವಿ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ಖ್ಯಾತಿ ಶ್ರೀಕಾಂತ್‌ ಅವರಿಗಿದೆ. ಅದೇ ಯಶಸ್ಸಿನ ಖುಷಿ ಮತ್ತು ಜವಾಬ್ದಾರಿ ಮೂಲಕ ಸಲಗ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರಲು ಹೊರಟಿದ್ದಾರೆ. ನಟ ದುನಿಯಾ ವಿಜಯ್‌ ಇದೇ ಮೊದಲು ಆಕ್ಷನ್‌ ಕಟ್‌ ಹೇಳಿದ ಸಿನಿಮಾ ಇದು. ಅವರೇ ಇದರ ನಾಯಕರು ಹೌದು. ಅದನ್ನೀಗ ಜನರ ಬಳಿಗೆ ತೆಗೆದುಕೊಂಡು ಹೋಗಲು ಸೋಷಲ್‌ ಮೀಡಿಯಾವೂ ಒಂದು ಸಂಪರ್ಕ ಮಾಧ್ಯಮ ಎನ್ನುವ ಅಭಿಪ್ರಾಯ ಶ್ರೀಕಾಂತ್‌ ಅವರದ್ದು.

Categories
ಸಿನಿ ಸುದ್ದಿ

ಕೊರೊನಾ ವರ್ಷಕ್ಕೆ ಸ್ಯಾಂಡಲ್‌ವುಡ್‌ ಗುಡ್‌ ಬೈ – ಈ ವರ್ಷ ರಿಲೀಸ್‌ ಆದ ಸಿನಿಮಾಗಳೆಷ್ಟು ಗೊತ್ತಾ?

ರಿಲೀಸ್‌ ಆಗಿದ್ದು 76 ಪ್ಲಸ್-‌ ಒಟಿಟಿಯಲ್ಲೂ 3 ಚಿತ್ರ ಬಿಡುಗಡೆ

ಅಂತೂ ಇಂತೂ  2020 ಮುಗಿಯೋ ಹಂತ ತಲುಪಿದೆ. ಈ ವರ್ಷ ಎಲ್ಲಾ ರಂಗಕ್ಕೂ ಬಿಸಿ ತಟ್ಟಿದೆ. ಅದರಲ್ಲೂ ಸಿನಿಮಾರಂಗದ ವಿಷಯಕ್ಕೆ ಬಂದರೆ, ಈ ವರ್ಷದ ಮನರಂಜನೆ ಪೂರ್ಣ ಪ್ರಮಾಣದಲ್ಲಿ ಕುಸಿದಿದ್ದು ನಿಜ. ಈ ವರ್ಷದ ಜನವರಿಯಿಂದ ಮಾರ್ಚ್‌ ಎರಡನೇ ವಾರದವರೆಗೆ ಮಾತ್ರ ಚಿತ್ರರಂಗ ವೇಗ ಕಂಡುಕೊಂಡಿತ್ತು. ಆಮೇಲೆ ಕೊರೊನಾ ವಕ್ಕರಿಸಿದ ಬಳಿಕ ಮನರಂಜನೆ ಅನ್ನೋದು ಮರೀಚಿಕೆಯಾಗಿದ್ದು ಸುಳ್ಳಲ್ಲ. ಹಾಗೆ ನೋಡಿದರೆ ಈ ವರ್ಷದ ಎಂಟು ತಿಂಗಳ ಕಾಲ ಮನರಂಜನೆಗೆ ಬ್ರೇಕ್‌ ಬಿದ್ದಿದ್ದರೂ, ಕನ್ನಡ ಚಿತ್ರರಂಗದಲ್ಲಿ ಸುಮಾರು 76 ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಕಂಡಿವೆ ಎಂಬುದು ಅಚ್ಚರಿ.

ಹೌದು, ಪ್ರತಿ ವರ್ಷ ಬಿಡುಗಡೆಯಲ್ಲಿ ಸುಮಾರು 120ರ ಗಡಿ ದಾಟುತ್ತಿದ್ದ ಸಿನಿಮಾಗಳು, ಈ ವರ್ಷ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದಂತೂ ಹೌದು. ಅಕ್ಟೋಬರ್‌ 15ರಿಂದ ಚಿತ್ರಮಂದಿರಗಳಿಗೆ ಅವಕಾಶ ದೊರೆತ ನಂತರ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದವು. ಆದರೆ, ಪ್ರತಿ ವರ್ಷದ ದಾಖಲೆ ಈ ವರ್ಷ ಆಗಿಲ್ಲ ಅನ್ನುವುದು ಅಷ್ಟೇ ಸತ್ಯ. ಅದೆಷ್ಟೋ ವರ್ಷಗಳ ಬಳಿಕ ಅತೀ ಕಡಿಮೆ ಸಂಖ್ಯೆಯಲ್ಲಿ ಬಿಡುಗಡೆ ಕಂಡ ವರ್ಷ ಇದು ಎಂಬುದನ್ನು ಗಮನಿಸಲೇಬೇಕು. ಒಂದು ಲೆಕ್ಕದ ಪ್ರಕಾರ ಈ ವರ್ಷ ಕನ್ನಡ, ತುಳು, ಕೊಂಕಣಿ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಯ ಸಿನಿಮಾಗಳು ಸೇರಿ ಸುಮಾರು ೭೬ ಚಿತ್ರಗಳು ಬಿಡುಗಡೆ ಕಂಡಿವೆ.

ಈ 2020 ವರ್ಷವನ್ನು ಸ್ಯಾಂಡಲ್‌ವುಡ್‌ ಬರಮಾಡಿಕೊಂಡಿದ್ದು, ಮಯೂರ್‌ ಪಟೇಲ್‌ ಅಭಿನಯದ “ರಾಜೀವ ಐಎಎಸ್‌” ಚಿತ್ರ. ಹಾಗೆಯೇ ಅಂತ್ಯಗೊಳಿಸಿದ್ದು, ಇಂದ್ರಜಿತ್‌ ಲಂಕೇಶ್‌ ಅವರ “ಶಕೀಲಾʼ ಸಿನಿಮಾ. ೨೦೨೦ರ ಜನವರಿಯಲ್ಲಿ ಮೂರು ಕನ್ನಡ ಸಿನಿಮಾಗಳು ಪ್ರೇಕ್ಷಕರ ಎದುರು ಬಂದಿದ್ದವು. “ರಾಜೀವ ಐಎಎಸ್”, ಹೊಸಬರ “ವೇಷಧಾರಿ”, “ಗುಡಮನ ಅವಾಂತರ” ಚಿತ್ರಗಳು ಬಿಡುಗಡೆಯಾಗಿದ್ದವು.  ತದನಂತರದಲ್ಲಿ ಬಿಡುಗಡೆಯ ಪರ್ವ ಶುರುವಾಯಿತು.

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ “ಇಂಡಿಯಾ ವರ್ಸಸ್‌ ಇಂಗ್ಲೆಂಡ್”, ಚಿರಂಜೀವಿ ಸರ್ಜಾ ಅಭಿನಯದ “ಖಾಕಿ”, “ಕಾಣದಂತೆ ಮಾಯವಾದನು”, ವಿಜಯರಾಘವೇಂದ್ರ ಅಭಿನಯದ “ಮಾಲ್ಗುಡಿ ಡೇಸ್”, ಮದರಂಗಿ ಕೃಷ್ಣ ಅವರ “ಲವ್ ಮಾಕ್ಟಲ್”, ಪ್ರಜ್ವಲ್‌ ದೇವರಾಜ್‌ ಅವರ “ಜಂಟಲ್‌ ಮನ್‌”, “ದಿಯಾ”, “ಮಾಯಾ ಬಜಾರ್”, “ಪಾಪ್‌ಕಾರ್ನ್ ಮಂಕಿ ಟೈಗರ್”, “ಶಿವಾಜಿ ಸುರತ್ಕಲ್”, “ಫ್ರೆಂಚ್ ಬಿರಿಯಾನಿ”, “ಆಕ್ಟ್ 1978”, “ಅರಿಷಡ್ವರ್ಗ” ಸೇರಿದಂತೆ ಒಂದಷ್ಟು ಸಿನಿಮಾಗಳು ಬಂದವು. ಈ ಪೈಕಿ ಕೊರೊನಾ ಸಮಸ್ಯೆಯಿಂದಾಗಿ ಒಟಿಟಿಯಲ್ಲಿ ಕನ್ನಡದ ಮೂರು ಸಿನಿಮಾಗಳು ಬಿಡುಗಡೆಯಾದದ್ದು ವಿಶೇಷ. ಪುನೀತ್‌ ರಾಜಕುಮಾರ್‌ ಬ್ಯಾನರ್‌ನಲ್ಲಿ ತಯಾರಾದ “ಲಾ”. “ಫ್ರೆಂಚ್ ಬಿರಿಯಾನಿ” ಹಾಗು “ಭೀಮಸೇನ ನಳ ಮಹಾರಾಜ” ಚಿತ್ರಗಳು ಒಟಿಟಿಯಲ್ಲಿ ರಿಲೀಸ್‌ ಆಗಿದ್ದವು.

 

Categories
ಸಿನಿ ಸುದ್ದಿ

ಫ್ಯಾಮಿಲಿ ಫೋಟೋಶೂಟ್ ನಲ್ಲಿ ಶ್ರೀ‌ಮುರಳಿ – ವಿದ್ಯಾ ದಂಪತಿಯ ಕ್ಯೂಟ್ ಲುಕ್

ನಟ ಶ್ರೀ ಮುರಳಿ ಸದ್ಯಕ್ಕೆ ಕನ್ನಡದ ಬಹುಬೇಡಿಕೆಯ ನಟ. ಹಾಗೆಯೇ ಸಖತ್‌ ಬ್ಯುಸಿ ಸ್ಟಾರ್‌ ಕೂಡ. ಅವರಿಗೀಗ ಸಿಗುತ್ತಿರುವ ಆಫರ್‌ ನೋಡಿದ್ರೆ, ಮುಂದಿನ ದಿನಗಳಲ್ಲಿ ಶ್ರೀ ಮುರಳಿ, ಸೌತ್‌ ಇಂಡಿಯಾದ ಬಹು ಬೇಡಿಕೆಯ ನಟ ಆಗುವುದರಲ್ಲೂ ಅನುಮಾನ ಇಲ್ಲ. ಹೊಸ ವರ್ಷಕ್ಕೆ ʼಮದಗಜʼ ಚಿತ್ರದ ತೆಲುಗು ವರ್ಷನ್‌ ಟೀಸರ್‌ ಕೂಡ ಹೊರಬರಲಿದೆ. ಅಲ್ಲಿಂದ ಶುರುವಾಗಲಿದೆ ಶ್ರೀ ಮುರಳಿ ಅವರ ಸೌತ್‌ ಇಂಡಿಯಾದ ಸೆನ್ಸೆಷೇನಲ್ ಎಂಟ್ರಿ. ಅದಿರಲಿ, ಇದಿಷ್ಟು ಸಿನಿಮಾದ ಬ್ಯುಸಿ ಶೆಡ್ಯೂಲ್‌ ನಡುವೆಯೂ ಶ್ರೀ ಮುರಳಿ ಫ್ಯಾಮಿಲಿ ಜತೆಗೊಂದು ಚೆಂದದ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.ಸದ್ಯಕ್ಕೆ ಅದು ಅವರ ಖುಷಿಗಾಗಿ. ಜಸ್ಟ್ ಪ್ರೊಪೈಲ್ ಗೆ. ಆದರೆ ಇಬ್ಬರು ಮಕ್ಕಳ ಜತೆಗೆ ಶ್ರೀಮುರಳಿ ಹಾಗೂ ವಿದ್ಯಾಶ್ರೀ ದಂಪತಿ‌ ಲವ್ ಸ್ಟೋರಿ ಸಿನಿಮಾದ ಲವ್ಲಿ ಸೀನ್ ತರಹ ಕ್ಯಾಮೆರಾಕ್ಕೆ ಪೋಸು ನೀಡಿರುವುದು ವಿಶೇಷವಾಗಿದೆ.


ಮೂರು ದಿನಗಳ ಹಿಂದಷ್ಟೇ ಈ ಪೋಟೋಶೂಟ್ ನಡೆದಿದೆ. ಸದ್ಯಕ್ಕೆ ಅದೇ ಪೋಟೋಶೂಟ್ ನ ಒಂದು ಲುಕ್ ಈಗ ರಿವೀಲ್ ಆಗಿದೆ. ಶುಕ್ರವಾರ ಕ್ರಿಸ್‌ಮಸ್‌ ಹಬ್ಬ ಇತ್ತು. ಈ ಹಬ್ಬಕ್ಕೆ ಶುಭಾಶಯ ಕೋರುವುದಕ್ಕೆ ಶ್ರೀ‌ಮುರಳಿ ಅವರು ತಮ್ಮ ಫ್ಯಾಮಿಲಿ ಜತೆಗೆ ಹೊದ ಫೋಟೋಶೂಟ್ ಒಂದು ಲುಕ್ ಸೋಷಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದರ ಜತೆಗೆ ಅದನ್ನೇ ಕ್ರಿಸ್ಮಸ್‌ ವಿಶ್ ಗೆ ವಿಶೇಷವಾಗಿ ಡಿಸೈನ್ ಮಾಡಿದ್ದಾರೆ. ಅದರ ಕ್ರಿಯೇಟಿವಿಟಿ ಚೆನ್ನಾಗಿದೆ‌.

error: Content is protected !!