Categories
ಸಿನಿ ಸುದ್ದಿ

ಲಂಕಾಸುರನ ಆರ್ಭಟ ಶುರು -ಸಂಕ್ರಾಂತಿಗೆ ಶುರುವಾಯ್ತು ವಿನೋದ್‌ಪ್ರಭಾಕರ್‌ ಚಿತ್ರ

ಮರಿಟೈಗರ್‌ ಜೊತೆ ಲೂಸ್‌ ಮಾದ ಜೋಡಿ

ಸಂಕ್ರಾಂತಿಯ ಸಂಭ್ರಮ ಈ ವರ್ಷ ತುಸು ಜೋರಾಗಿಯೇ ಇದೆ. ಹಲವು ಸಿನಿಮಾಗಳು ಸಂಕ್ರಮಣದಂದು ಸೆಟ್ಟೇರಿವೆ. ಕೆಲವು ಚಿತ್ರಗಳು ಚಿತ್ರೀಕರಣ ಶುರುಮಾಡಿವೆ. ಆ ನಿಟ್ಟಿನಲ್ಲಿ ವಿನೋದ್‌ ಪ್ರಭಾಕರ್‌ ಅವರ ಅಭಿನಯದ “ಲಂಕಾಸುರ” ಸಿನಿಮಾಗೂ ಕೂಡ ಚಾಲನೆ ಸಿಕ್ಕಿದೆ. ಸುಗ್ಗಿ ಹಬ್ಬದಂದು “ಲಂಕಾಸುರ” ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ದೊಡ್ದ ಬಸ್ತಿಯ ಶ್ರೀಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಚಾಲನೆ ಸಿಕ್ಕಿದೆ. ಈ ಚಿತ್ರದಲ್ಲಿ ವಿನೋದ್‌ಪ್ರಭಾಕರ್‌ ಅವರೊಂದಿಗೆ “ಲೂಸ್‌ ಮಾದ” ಯೋಗೀಶ್‌ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

 

ಎ.ಎಂ.ಎಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ ಚಿತ್ರಕ್ಕೆ ನಿರ್ಮಾಪಕರ ಪುತ್ರರಾದ ಮಾ. ಮಾನಸ್ ಪ್ರಜ್ವಲ್ ಹಾಗೂ ಶ್ರೇಯಸ್ ಪ್ರಜ್ವಲ್ ಕ್ಯಾಮೆರಾ ಚಾಲನೆ ‌ಮಾಡಿದರು.‌ ನಿರ್ದೇಶಕರ ಪುತ್ರ ಮಾ.ಯೋಜಿತ್ ಕ್ಲಾಪ್‌ ಮಾಡಿದರು. ಸಂಕ್ರಾಂತಿ ದಿನದಂದು ಶುರುವಾದ ಈ ಚಿತ್ರದ ಚಿತ್ರೀಕರಣ, ಫೆಬ್ರವರಿ 15 ರವರೆಗೂ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊದಲ‌ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಪಾರ್ವತಿ ಅರುಣ್, ಸಹಾನಾ ಗೌಡ ಇತರರು ನಟಿಸಿದ್ದಾರೆ. “ದುನಿಯಾ” ನಿರ್ಮಾಪಕರಾದ ಸಿದ್ದರಾಜು, ವಿನೋದ್ ‌ಮಾಸ್ಟರ್ ಇತರರು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಂದಹಾಗೆ, ಹಿಂದೆ “ಮೂರ್ಕಲ್ ಎಸ್ಟೇಟ್” ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ “ಲಂಕಾಸುರ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ವಿಜೇತ್‌ ಕೃಷ್ಣ ಸಂಗೀತ ನೀಡಿದ್ದಾರೆ. ಸುಜ್ಞಾನ್‌ ಅವರ ಛಾಯಾಗ್ರಹಣವಿದೆ. ಚೇತನ್ ಡಿಸೋಜ, ದೀಪು ಎಸ್ ಕುಮಾರ್ ಸಂಕಲನವಿದೆ. ಮೋಹನ್ ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಲಂಕೆಯಲ್ಲಿ ಗೂಂಡಾಗಿರಿ, ಯೋಗಿ ಅವರದೇ‌ ಅಲ್ಲಿ ದಾದಾಗಿರಿ, ಇದು ಆಧುನಿಕ ರಾಮಾಯಣದ ಲಂಕೆಯಂತೆ…!

ಟೈಟಲ್ ಲಾಂಚ್ ನಲ್ಲಿ ನೋಡುಗರಿಗೆ ಭರ್ಜರಿ ಕಿರಿ ಕಿರಿ…..

ಲಂಕೆಯಲ್ಲಿ ರೌಡಿಸಂ ಅಂತೆ, ಅದು ಹೇಗೆ ? ರಾಮಾಯಣ ಬಲ್ಲವರಿಗೆ ಇದು ಅಚ್ಚರಿ. ಯಾಕಂದ್ರೆ ಅಲ್ಲಿ ಆಗಿದ್ದು ರಾಮ- ರಾವಣರ ಯುದ್ದ. ಬದಲಿಗೆ ಅಲ್ಲೂ ರೌಡಿಸಂ ಇತ್ತು ಅನ್ನೋದನ್ನು ಯಾರು ಕೇಳಿ ತಿಳಿದಿಲ್ಲ. ಆದ್ರೆ, ಇಲ್ಲಿ ಸೃಷ್ಟಿಸಿರುವವರ ‘ಲಂಕೆ’ಯಲ್ಲಿ ರೌಡಿಸಂ ಇದೆ. ಇಲ್ಲಿ ನಟ‌ ಲೂಸ್ ಮಾದ ಯೋಗೇಶ್ ಅವರದೇ ಗೂಂಡಾಗಿರಿ.ಯಾಕಂದ್ರೆ ಅವರೇ ಈ ‘ಲಂಕೆ’ ಯ‌ ರೌಡಿ !ಇ

ದು ಆಧುನಿಕ ರಾಮಾಯಣದ ಲಂಕೆ. ದಿ ಗ್ರೇಟ್ ಎಂಟರ್ಟೈನರ್ಸ್ ಲಾಂಛನದಲ್ಲಿ ಸಿದ್ಧವಾದ ಚಿತ್ರ . ರಾಮ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಈ ಚಿತ್ರ ಬಿಡುಗಡೆ ಆಗಿರತಿತ್ತು. ಕೊರೋನಾ ಕಾರಣ ಇದೀಗ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ರಿಲೀಸ್ ಸಿದ್ಧತೆಯಲ್ಲಿರುವ ಚಿತ್ರ ತಂಡ, ಈಗ ಟೈಟಲ್ ಲಾಂಚ್ ಮಾಡಿಕೊಂಡು, ಪ್ರಚಾರಕ್ಕೆ ಚಾಲನೆ ಕೊಟ್ಟಿದೆ.

ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಚಿತ್ರ ತಂಡ ಭರ್ಜರಿಯಾಗಿಯೇ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸರಿಯಾದ ವ್ಯವಸ್ಥೆ ಇಲ್ಲದೆ ಕೊಂಚ ಸಭಿಕರಿಗೆ ಕಿರಿ ಕಿರಿ ಉಂಟಾಯಿತು. ಕೊನೆಗೂ ಕಾರ್ಯಕ್ರಮ ಶುರುವಾಯಿತು.

ಮೊದಲಿಗೆ ಮಾತನಾಡಿದ ನಿರ್ದೇಶಕ ರಾಮ‌್ ಪ್ರಸಾದ್, ಕಥೆ ಬರೆಯುತ್ತಿದ್ದಂತೆ ರಾಮಾಯಣದ ತಿರುಳಿರುವ ಹಿನ್ನೆಲೆಯಲ್ಲಿ ಲಂಕೆ ಎಂದೇ ಶೀರ್ಷಿಕೆ ಫಿಕ್ಸ್ ಆಯ್ತು. ‌ಚಿತ್ರೀಕರಣ ಶುರುವಾಗಿ , ಇದೀಗ ಸಿನಿಮಾ ಚಿತ್ರ ಬಿಡುಗಡೆ ಹಂತದಲ್ಲಿದೆ ಎಂದರು ನಿರ್ದೇಶಕರು. ಚಿತ್ರದ ನಾಯಕಿಯರಾದ ಕೃಷಿ ತಾಪಂಡ ಹಾಗೂ ಕಾವ್ಯಾ ಶೆಟ್ಟಿ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.

ನಟ ಸಂಚಾರಿ ವಿಜಯ್ ಈ‌ ಚಿತ್ರದ‌ಮತ್ತೋರ್ವ ಪ್ರಮುಖ ಪಾತ್ರಧಾರಿ.’ ನನ್ನ ಮತ್ತು ಯೋಗಿ ಅವರ ಮೊದಲ ಸಿನಿಮಾ ಇದು. ಇಬ್ಬರಿಗೂ ಕಾಂಬಿನೇಷನ್ ಇಲ್ಲ. ಫ್ಲ್ಯಾಶ್ಬ್ಯಾಕ್ನಲ್ಲಿ ನಡೆಯುವ ಕಥೆಯಲ್ಲಿ ಎಸ್ತರ್ ನರೋನಾ ನನಗೆ ಜೋಡಿಯಾಗಿದ್ದಾರೆ. ಮಂಡ್ಯದಲ್ಲಿ ನಡೆದ ನೈ ಘಟನೆಯನ್ನೇ ವಿಶೇಷವಾಗಿ ತೋರಿಸಿದ್ದಾರೆ ನಿರ್ದೇಶಕರು ಎಂದರು ನಟ ವಿಜಯ್.

ಹೆಚ್ಚೇನೂ ಮಾತನಾಡದ ಲೂಸ್ ಮಾದ ಯೋಗಿ,ರೌಡಿಸಂ ಹಿನ್ನೆಲೆಯ ಕಥೆ. ಸಂಚಾರಿ ವಿಜಯ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ ಎಂದರು. ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್, ಶ್ರೀಮತಿ ಸುರೇಖಾ ರಾಮ್ ಪ್ರಸಾದ್ ಮಾತನಾಡಿ, ಒಂದೊಳ್ಳೆಯ ಸಿನಿಮಾ‌ಮಾಡಿದ‌ ಅನುಭವ ಹೇಳಿಕೊಂಡರು. ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದರು. ಇದೇ ವೇಳೆ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ, ಜನ್ಮದಿನದ ನಿಮಿತ್ತ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿತು ಚಿತ್ರತಂಡ.

Categories
ಸಿನಿ ಸುದ್ದಿ

ಸಿನಿಮಾ ನಿರ್ಮಾಣಕ್ಕೆ ಬಂದ ಮೈಲಾರಿ ಗ್ರೂಪ್, ಶೀಘ್ರವೇ ಹೊಸ ಸಿನಿಮಾ ಆರಂಭ ಎನ್ನುತ್ತಾರೆ ನಿರ್ಮಾಪಕ ಮಹೇಶ್

ಕನ್ಮಡದ ಸಿನಿಮಾ ಪ್ರೇಕ್ಷಕರ ಮುಂದೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ‌ !

ಹಾಸನ ಮೂಲದ ಮೈಲಾರಿ ಗ್ರೂಪ್ ಆಫ್ ಸಂಸ್ಥೆ ಚಿತ್ರ ನಿರ್ಮಾಣಕ್ಕೆ‌ ಮುಂದಾಗಿದೆ. ಸಂಸ್ಥೆಯ ಮಾಲೀಕರಾದ ಮೈಲಾರಿ ಮಹೇಶ್ ಸಿನಿಮಾ ನಿರ್ಮಾಣಕ್ಕೆ ವಿಶೇಷ ಆಸಕ್ತಿ ತೋರಿದ್ದಾರೆ. ಶೀಘ್ರದಲ್ಲೇ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗುವುದಾಗಿ ಅನೌನ್ಸ್ ಮಾಡಿದ್ದಾರೆ. ಕನ್ನಡ ಚಿತ್ರ ರಂಗಕ್ಕೆ ಇದು ಮೈಲಾರಿ ಗ್ರೂಪ್ ಆಫ್ ಸಂಸ್ಥೆಯ ಮೊದಲ ಕೊಡುಗೆ.

ನಿರ್ಮಾಪಕ‌ ಮಹೇಶ್ ಹಾಗೂ ನಿರ್ದೇಶಕ ರಾಜ್ ಚೈತನ್ಯ

ಕನ್ನಡದ ಹೆಸರಾಂತ ನಿರ್ದೇಶಕ, ಕಲಾ ಸಾಮ್ರಾಟ್ ಎಸ್.ನಾರಾಯಣ್ ಬಳಿ ಕೆಲಸ ಯುವ ನಿರ್ದೇಶಕ ರಾಜ ಚೈತನ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿ ದ್ದಾರೆ.ಈಗಾಗಲೇ ಅವರು, ‘ಅಮೃತ ವರ್ಷಿಣಿ’, ‘ಕೃಷ್ಣ ರುಕ್ಕು’, ‘ಲಕ್ಷ್ಮೀ ಬಾರಮ್ಮ’, ‘ಜೊತೆಜೊತೆಯಲಿ’ ಧಾರಾವಾಗಳಿಗೆ ಸಹ ನಿರ್ದೇಶನ ಮಾಡಿರುವ ಅನುಭವಿ.ಆ ಮೂಲಕವೇ ಈಗ ತಾವೇ ಕಥೆ, ಚಿತ್ರಕಥೆ ಬರೆದು, ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ‌ ಗುರುರಾಜ್ ಎಂ ದೇಸಾಯಿ ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ತಾರಾಗಣದ ವಿವರ ಲಭ್ಯವಾಗಿಲ್ಲ. ಆದರೆ ಚಿತ್ರ ತಂಡ ಅನುಭವಿ ತಂತ್ರಜ್ಞರನ್ನೇ ಆಯ್ಕೆ ಮಾಡಿಕೊಂಡಿದೆ.

ಜಯಂತ್ ಕಾಯ್ಕಿಣಿ

ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ರಾಜ ಚೈತನ್ಯ ಹಾಡುಗಳನ್ನು ಬರೆಯುತ್ತಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರಂತೆ. ಹಾಗೆಯೇ, ಜಾನಿ, ಮುರಳಿ, ಚಿನ್ನಿಪ್ರಕಾಶ್, ಇಮ್ರಾನ್ ಸರ್ದಾರಿಯ ನೃತ್ಯ ನಿರ್ದೇಶನ, ರವಿವರ್ಮ, ವಿನೋದ್ ಹಾಗೂ ವಿಕ್ರಂ ಮೋರ್ (ಕೆ ಜಿ ಎಫ್) ಅವರ ಸಾಹಸ ‌ನಿರ್ದೇಶನ ಈ ಚಿತ್ರಕ್ಕಿದೆ.‌ಮಹೇಶ್ ತಲಕಾಡು ಛಾಯಾಗ್ರಾಹಕರಾಗಿ, ಜೋನಿ ಹರ್ಷ ಸಂಕಲನಕಾ ರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹದೊಂದು ದೊಡ್ಡ ತಂಡವನ್ನೇ ಸೃಷ್ಟಿಸಿಕೊಂಡಿರುವ ಮೈಲಾರಿ‌ಗ್ರೂಪ್
ಬಿಗ್ ಬಜೆಟ್ ಸಿನಿಮಾ ಮಾಡುವುದು ಗ್ಯಾರಂಟಿ ಆಗಿದೆ. ಹಾಗೆಯೇ ದೊಡ್ಡ ಸ್ಟಾರ್ ಈ‌ಸಿನಿಮಾದಲ್ಲಿರುವುದು ಕೂಡ ಗ್ಯಾರಂಟಿಯಂತೆ.ಅದೆಲ್ಲವೂ ಮುಂದೆ ರಿವೀಲ್ ಆಗಲಿದೆಯಂತೆ.

ಅರ್ಜುನ್ ಜನ್ಯಾ
Categories
ಸಿನಿ ಸುದ್ದಿ

ಬೆಳ್ಳಿತೆರೆ ಮೇಲೆ ಹೊಸಬರ ಚಂದ ಮಾಮ, ರವಿ ಕಂಡ ಕನಸು, ಅಭಿಮಾನಿ‌ ಕಣ್ಣಲ್ಲಿ ನನಸು !

80 ರ ದಶಕದ ಕತೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಮಧು ವೈ.ಜಿ. ಹಳ್ಳಿ

ಬಣ್ಣದ ಲೋಕದಲ್ಲಿ ‘ಚಂದಮಾಮ’ ಅಂದ್ರೆ ಕ್ರೇಜಿಸ್ಟಾರ್ ರವಿಚಂದ್ರನ್ ನೆನಪಾಗ್ತಾರೆ. ಯಾಕಂದ್ರೆ, ಹಿಂದೊಮ್ಮೆ ಅವರು ಅದೇ ಹೆಸರಲ್ಲೊಂದು ಸಿನಿಮಾ ಶುರು ಮಾಡಿದ್ದರು. ಅದ್ಯಾಕೋ ಅದು ಅರ್ಧದಲ್ಲೆ ನಿಂತು ಹೊಯಿತು . ಆದರೇನಂತೆ, ಈಗ ಹೊಸಬರ ತಂಡವೊಂದು ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರಿಗೆ ‘ಚಂದ ಮಾಮ’ ನನ್ನು ತೋರಿಸಲು ಕೈ ಹಾಕಿದೆ. ಅವರ ಪ್ರಯತ್ನ ವೇ ‘ಚಂದಮಾಮ’ ಚಿತ್ರ.

ಮಧು ವೈ.ಜಿ. ಹಳ್ಳಿ ನಿರ್ದೇಶನದ ಚಿತ್ರವಿದು. ಶ್ರೀ ಸಾಯಿ ಭೂಮಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಯೋಚಿತಾ ಫಿಲ್ಮ್ ಪ್ರೊಡಕ್ಷನ್ ಸಾತ್ ನೀಡಿದೆ. ಚಿಕ್ಕಮಗಳೂರು ಮೂಲದ ತ್ರಿವೇಣಿ ಗಾಂಧಿ, ಹುಬ್ಬಳ್ಳಿ ಯ ಅಸ್ಲಾಂ ಖಾನ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸತೀಶ್ ( ಎಚ್ ಎಮ್ ಮಾರ್ಕೆಟ್‌) ಬಂಡವಾಳ ಹಾಕಿ ‘ಚಂದ ಮಾಮ’ ನನ್ನು ಸೃಷ್ಟಿಸುತ್ತಿದ್ದಾರೆ. ಸದ್ದಿಲ್ಲದೆ ‌ಸೆಟ್ಟೇರಿರುವ ಈ ಚಿತ್ರಕ್ಕೀಗ ಅರ್ಧದಷ್ಟು ಚಿತ್ರೀಕರಣವೂ‌ ಮುಗಿದಿದೆ. ಇನ್ನೇನೂ ಪ್ರಚಾರ ಆರಂಭಿಸುವ ಅದರ ಮೊದಲ ಹಂತವಾಗಿ ‘ ಸಂಕ್ರಾಂತಿ ‘ ಹಬ್ಬಕ್ಕೆ ಚಿತ್ರ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದೆ.‌ ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಹಾಗೂ ನಟ ಮನು ರಂಜನ್ ಪೋಸ್ಟರ್ ಲಾಂಚ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ಚಿತ್ರ ತಂಡ ಪೋಸ್ಟರ್ ಲಾಂಚ್ ಗೆ ನಟ ರವಿಚಂದ್ರನ್ ಅವರ ಪುತ್ರನನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ , ನಿರ್ದೇಶಕ ಮಧು ವೈ .ಜಿ ಹಳ್ಳಿ ಅವರು ರವಿಚಂದ್ರನ್ ಅವರ ಪಕ್ಕಾ ಆಭಿಮಾನಿ ಆಗಿದ್ದು. ಅದೇ ಕಾರಣ ಕ್ಕಾಗಿಯೇ ಚಂದ ಮಾಮ ಸಿನಿಮಾ ಕೂಡ ಶುರು ವಾಗಿದ್ದಂತೆ. ಹಾಗಂತ ಹೇಳುತ್ತಾರೆ ನಿರ್ದೇಶಕ ಮಧು. ‘ ನನಗಿದು ಚೊಚ್ಚಲ ಸಿನಿಮಾ. ಆದರೂ ಚಿತ್ರೋದ್ಯ ಮದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ ಅನುಭವ ಇದೆ. ಆ ಮೂಲಕವೇ ಸ್ವತಂತ್ರ ವಾಗಿ ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದಾಗ ನನಗೆ ಹೊಳೆದ ಮೊದಲ ಶೀರ್ಷಿಕೆ ಯೇ ಚಂದ ಮಾಮ.‌ಅದಕ್ಕೆ ಕಾರಣ ರವಿ ಚಂದ್ರನ್ ಸರ್. ಅವರು ಶುರು ಮಾಡಿ, ಅರ್ಧದಲ್ಲೇ ಕೈ ಬಿಟ್ಟಿದ್ದ ಪ್ರಾಜೆಕ್ಟ್ ಅದು.‌ಅದನ್ನೇ ಮುಂದುವರೆಸೋಣ ಅಂತ ಅದೇ ಹೆಸರಲ್ಲಿ ಈ ಸಿನಿಮಾ‌ ಮಾಡುತ್ತಿದ್ದೇನೆ’ ಎನ್ಜುತ್ತಾರೆ ನಿರ್ದೇಶಕ ಮಧು ವೈ.ಜಿ. ಹಳ್ಳಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನವರಾದ ಮಧು ವೈ. ಜಿ. ಹಳ್ಳಿ ಕಿರುತೆರ ಹಾಗೂ ಹಿರಿತೆರೆ ಎರಡರಲ್ಲೂ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಕೆಲಸ‌ ಮಾಡಿದ್ದಾರಂತೆ. ಧಾರಾವಾಹಿ ನಿರ್ದೇಶನ ಮಾಡಿದ ಅನುಭವ ಕೂಡ ಇದೆಯಂತೆ. ಅದೇ ಅನುಭವದಲ್ಲಿ ತಾವೇ ಒಂದು‌ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಸಿನಿಮಾ ನಿರ್ದೇಶನಕ್ಕೆ ಮುಂದಾದಾಗ, ನಿರ್ಮಾಪಕರಾದ ತ್ರಿವೇಣಿ ಗಾಂಧಿ, ಅಸ್ಲಾಂ ಖಾನ್ ಹಾಗೂ ಸತೀಶ್ ಬೆಂಬಲದಿಂದ ಸಿನಿಮಾ ಸೆಟ್ಟೇರಿ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ ಆಂತಾರೆ‌‌ ನಿರ್ದೇಶಕ ಮಧು.

ನಿರ್ಮಾಪಕರು, ನಿರ್ದೇಶಕರ ಹಾಗೆಯೇ ಚಿತ್ರದ ತಾರಾಗಣದಲ್ಲೂ ಬಹುತೇಕ ಹೊಸಬರೇ ಇದ್ದಾರೆ. ರಂಗಭೂಮಿ ಕಲಾವಿದರಾದ ಹುಬ್ಬಳ್ಳಿ ಹುಡುಗ ಆಕಾಶ್ ನಾಯಕರಾಗಿ ಕಾಣಿಸಿಕೊಂಡರೆ, ಮಲಯಾಳಂ ನಟಿ ದೀಪಾ ನಾಯರ್ ಈ ಚಿತ್ರದ ನಾಯಕಿ. ಅವರೊಂದಿಗೆ ಪತ್ರಕರ್ತ ಅಪ್ಜಲ್ ಸೇರಿದಂತೆ ದೊಡ್ಡ ತಂಡವೇ ಚಿತ್ರದಲ್ಲಿದೆ. ಹಾಗೆಯೇ ಶ್ರೀ‌ಪುರಾಣಿಕ್ ಕುಂದಾಪುರ ಛಾಯಾಗ್ರಹಣ, ಕೀರ್ತಿ ಚಂದ್ರ ವರ್ಮ ಅವರ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಸುತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರ ತಂಡ, ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣ ಶುರು ಮಾಡಲಿದೆಯಂತೆ.

Categories
ಸಿನಿ ಸುದ್ದಿ

ಏಕ್‌ ಲವ್‌ ಯಾ ಹೊಸ ಪೋಸ್ಟರ್ ಹವಾ – ಸಂಕ್ರಾಂತಿಗೆ ಪ್ರೇಮ್ ಗಿಫ್ಟ್

ಲವರ್ಸ್ ಡೇಗೆ ಮೊದಲ ಸಾಂಗ್ ರಿಲೀಸ್

ಸದ್ಯಕ್ಕೆ ನಿರೀಕ್ಷೆ ಹುಟ್ಟಿಸಿರುವ ‘ಜೋಗಿ’ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ” ಚಿತ್ರದ ಮತ್ತೊಂದು ಹೊಸ ಪೋಸ್ಟರ್ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡಲಾಗಿದೆ. ಈ ಬಾರಿ ಪೋಸ್ಟರ್‌ ಜೊತೆಗೆ ಮೊದಲ ಹಾಡಿನ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಮಾಡಲಾಗಿದೆ.
ಫೆ.14ರ ಪ್ರೇಮಿಗಳ ದಿನದಂದು ‘ಏಕ್ ಲವ್ ಯಾ’ ಚಿತ್ರದ ಮೊದಲ ಹಾಡು ರಿಲೀಸ್‌ ಮಾಡಲು ಪ್ರೇಮ್ ನಿರ್ಧರಿಸಿದ್ದಾರೆ.


ಅಂದಹಾಗೆ ಈ ಚಿತ್ರ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರಲಿದೆ.
ಜೋಗಿ ಪ್ರೇಮ್‌ ನಿರ್ದೇಶನದಲ್ಲಿ ತಯಾರಾಗ್ತಿರೋ ಮ್ಯೂಸಿಕಲ್‌ ವಿಶ್ಯುಯಲ್‌ ಟ್ರೀಟ್‌ ತುಂಬಾನೇ ವಿಶೇಷವಾಗಿರಲಿದೆ ಎಂಬುದನ್ನಿಲ್ಲಿ ಪ್ರತ್ಯೇಕವಾಗಿ ಹೇಳುವಂತಿಲ್ಲ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಹಾಡು ರಿಲೀಸ್‌ ಆಗಲಿದೆ.


ಅರ್ಜುನ್‌ ಜನ್ಯಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಈ ಚಿತ್ರದ ಹೀರೋ ರಾಣಾ, ಸಿಕ್ಸ್‌ ಪ್ಯಾಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತಾ ಫಿಲಂ ಫ್ಯಾಕ್ಟರಿ ಮೂಲಕ ಚಿತ್ರ ನಿರ್ಮಾಣವಾಗುತ್ತಿದೆ.

Categories
ಸಿನಿ ಸುದ್ದಿ

ಸಂಕ್ರಾಂತಿಗೆ ಸಲಾರ್ ಗಿಫ್ಟ್ – ಪ್ರಭಾಸ್-ಪ್ರಶಾಂತ್ ಜೋಡಿ ಚಿತ್ರಕ್ಕೆ ಜ.15ರಂದು ಮುಹೂರ್ತ

ಸಲಾರ್ ಮುಹೂರ್ತಕ್ಕೆ ಹೈದರಾಬಾದ್ ಸಾಕ್ಷಿ

ತೆಲುಗಿನ ಖ್ಯಾತ ನಟ ಪ್ರಭಾಸ್ ಹಾಗೂ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿ, ಈಗ ಮೋಡಿಗೆ ಸಜ್ಜಾಗಿದೆ. ಜನವರಿ 15ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ.
ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ನಿರ್ಮಾಣದ “ಸಲಾರ್” ಚಿತ್ರ ಹೈದರಾಬಾದ್ ನಲ್ಲಿ ಸೆಟ್ಟೇರಲಿದೆ. ಈ ಚಿತ್ರದಲ್ಲಿ ತಮ್ಮ ಹೊಸ ಗೆಟಪ್ ರಿವೀಲ್ ಮಾಡಲು ಕಾತರರಾಗಿದ್ದಾರೆ.

ಸಿನಿಮಾ ಅನೌನ್ಸ್ ಆಗುತ್ತಿದ್ದಂತೆಯೇ, ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು. ಈಗ ಚಿತ್ರತಂಡ ಶೂಟಿಂಗ್ ಹೋಗಲು ಸಜ್ಜಾಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ “ಸಲಾರ್” ಇಂಡಿಯನ್ ಸಿನಿಮಾ ಎಂದು ಚಿತ್ರ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಅದರಂತೆ ಇದೀಗ ಚಿತ್ರದ ಮುಹೂರ್ತಕ್ಕೆ ತಂಡ ತಯಾರಿ ನಡೆಸಿದ್ದು, ಶುಕ್ರವಾರ ಹೈದರಾಬಾದ್ ನಲ್ಲಿ ಬೆಳಗ್ಗೆ 11 ಗಂಟೆಗೆ ನೆರವೇರಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರ ದಂಡೇ ಸಾಕ್ಷಿಯಾಗಲಿದೆ.

ಮುಖ್ಯ ಅತಿಥಿಯಾಗಿ ರಾಜ್ಯದ ಉನ್ನತ ಶಿಕ್ಷಣ ಸಚಿವರು ಮತ್ತು ಉಪಮುಖ್ಯಮಂತ್ರಿಗಳೂ ಆಗಿರುವ ಡಾ. ಅಶ್ವತ್ಥನಾರಾಯಣ್ ಸಿ.ಎನ್ ಭಾಗವಹಿಸಲ್ಲಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಈ ಮುಹೂರ್ತ ಕಾರ್ಯಕ್ರಮದಲ್ಲಿ ಇರಲಿದ್ದು, ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಭಾಗವಹಿಸಲಿದ್ದಾರೆ.
ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ “ಸಲಾರ್” ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ ಲುಕ್ ಸಹ ಅಷ್ಟೇ ಕುತೂಹಲ ಕೆರಳಿಸಿದೆ. ಇದೀಗ ತಮ್ಮ ಲುಕ್ ಬಗ್ಗೆಯೂ ಪ್ರಭಾಸ್ ಮಾತನಾಡಿದ್ದಾರೆ. ‘ಈ ಸಿನಿಮಾದ ಮುಹೂರ್ತ ಮತ್ತು ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಕ್ಕೆ ನಾನು ತುಂಬ ಕೌತುಕನಾಗಿದ್ದೇನೆ. ನನ್ನ ಲುಕ್ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಲು ಅಷ್ಟೇ ಉತ್ಸುಕನಾಗಿದ್ದೇನೆ ಎಂದಿದ್ದಾರೆ ಪ್ರಭಾಸ್.

ಶುಕ್ರವಾರ ಮುಹೂರ್ತ ಮುಗಿಸಿಕೊಂಡ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದೆ. ಈಗಾಗಲೇ ಅದಕ್ಕಾಗಿ ಭರ್ಜರಿ ತಯಾರಿ ಶುರುವಾಗಿದೆ. ಇನ್ನುಳಿದ ಪಾತ್ರವರ್ಗದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಹಿರಂಗ ಪಡಿಸಲಿದೆ.

Categories
ಸಿನಿ ಸುದ್ದಿ

ಲಂಕೆಗೆ ಖಳನಟಿ ಈ ನಾಯಕಿ ,ʼಸಿಲಿಕಾನ್‌ ಸಿಟಿʼ ಬೆಡಗಿ, ತೆರೆ ಮೇಲೆ ವಿಲನ್‌ ಆದ ಸ್ಟಾರ್‌ ನಟಿ !

ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಈಗ ಬೆಳ್ಳಿ ತೆರೆಗೆ ವಿಲನ್‌ 

ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಒಂದಷ್ಟು ಗ್ಯಾಪ್‌ ನಂತರ ಮತ್ತೆ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ೨೦೧೮ರಲ್ಲಿ ಸಂಹಾರ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಂಡವರು, ಮತ್ತೇಲ್ಲೂ ಸದ್ದು ಮಾಡಿರಲಿಲ್ಲ. ಈಗ “ಲಂಕೆʼ ಹೆಸರಿನ ಚಿತ್ರದ ಮೂಲಕ ಹೊಸ ಅವತಾರದೊಂದಿಗೆ ತೆರೆ ಬರಲು ರೆಡಿ ಅಗಿದ್ದಾರೆ ಕಾವ್ಯ ಶೆಟ್ಟಿ. ಹೌದು, ಇಷ್ಟು ದಿನ ನಾಯಕಿಯಾಗಿ ತೆರೆ ಮೇಲೆ ಗ್ಲಾಮರಸ್‌ ಪಾತ್ರಗಳ ಮೂಕಕ ಮಿಂಚಿದ್ದ ಕಾವ್ಯ ಶೆಟ್ಟಿ, ಈಗ ತೆರೆ ಮೇಲೆ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರಂತೆ. “ಲಂಕೆʼ ಚಿತ್ರ ಅದೇ ಕಾರಣಕ್ಕೆ ತಮಗೆ ವಿಶೇಷ ಎನ್ನುತ್ತಾರೆ.


ಅಂದ ಹಾಗೆ ಇದು ಲೂಸ್‌ ಮಾದ ಯೋಗೇಶ್‌ ನಾಯಕರಾಗಿ ಅಭಿನಯಿಸಿದ ಚಿತ್ರ. ಸಂಚಾರಿ ವಿಜಯ್‌ ಕಾವ್ಯ ಶೆಟ್ಟಿ, ಬಿಗ್‌ ಬಾಸ್‌ ಖ್ಯಾತಿಯ ಕೃಷಿ ತಾಪಂಡ, ಏಸ್ತರ್‌ ನರೋನಾ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಕಳೆದ ವರ್ಷವೇ ಸೆಟ್ಟೇರಿ ಚಿತ್ರೀಕರಣ ಮುಗಿಸಿದ ಚಿತ್ರ ಇದು. ಸದ್ಯಕ್ಕೀಗ ಟೈಟಲ್‌ ಲಾಂಚ್‌ ಮಾಡುವ ಮೂಲಕ ಸುದ್ದಿ ಮಾಡಿದೆ. ಇದೇ ವೇಳೆ, ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಅವರ ಪಾತ್ರದ ವಿಶೇಷತೆಯೂ ಇಲ್ಲಿ ರಿವೀಲ್‌ ಆಗಿದೆ. ಇದೇ ಮೊದಲ ತಾವು ತೆರೆ ಮೇಲೆ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿರುವುದನ್ನು ಅವರೇ ರಿವೀಲ್‌ ಮಾಡಿದ್ದಾರೆ.

” ನನ್ನ ಮಟ್ಟಿಗೆ ಇದೊಂದಉ ವಿಶೇಷವಾದ ಪಾತ್ರ, ಫಸ್ಟ್‌ ಟೈಮ್‌ ವಿಲನ್‌ ಆಗಿ ಕಾಣಸಿಕೊಳ್ಳುತ್ತಿದ್ದೇನೆ. ಲಂಕೆಯಲ್ಲಿ ಒಂಥರ ನಾನು ರಾವಣ. ನಿಜಕ್ಕು ಅದು ಹೇಗಿದೆ ಅನ್ನೋದು ಚಿತ್ರ ನೋಡಿದಾಗ ಗೊತ್ತಾಗಲಿದೆʼ ಎಂದರು ಕಾವ್ಯ ಶೆಟ್ಟಿ. ಹಾಗೆ ನೋಡಿದರೆ ನೆಗೆಟಿವ್‌ ಶೇಡ್‌ ಪಾತ್ರ ಅನ್ನೋದು ಹೊಸದಲ್ಲ. ನಾಗತಿ ಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಇಷ್ಟಕಾಮ್ಯ ಚಿತ್ರದಲ್ಲಿಯೇ ಅವರ ಪಾತ್ರಕ್ಕೆ ನೆಗೆಟಿವ್‌ ಶೇಡ್‌ ಇತ್ತು. ಈಗ ಇನ್ನೊಂದು ಬಗೆಯಂತೆ. ಅದು ಹೇಗೆ ಅನ್ನೋದಕ್ಕೆ ಚಿತ್ರ ನೋಡಬೇಕಂತೆ. ರಾಮ್‌ ಪ್ರಸಾದ್‌ ನಿರ್ದೇಶನದ ಈ ಚಿತ್ರಕ್ಕೆ ಪಟೇಲ್‌ ಶ್ರೀನಿವಾಸ್‌ ಹಾಗೂ ಸುರೇಖಾ ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಅಯೋಧ್ಯೆ ರಾಮನಿಗೆ ಒಂದು ಲಕ್ಷ ದೇಣಿಗೆ -ರಾಮಮಂದಿರ ನಿರ್ಮಾಣಕ್ಕೆ ನಟಿ ಪ್ರಣೀತಾ ಕಿರು ಕಾಣಿಕೆ

ದೇಶದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ವಿಷಯ ಈಗ ಕೇಂದ್ರಬಿಂದುವಾಗಿದೆ. ಈಗಾಗಲೇ ಅಯೋಧ್ಯೆಯ ಶ್ರೀರಾಮಮಂದಿರದ ನಿರ್ಮಾಣ ಕಾರ್ಯಕ್ಕೆ ನಿಧಿ ಸಮರ್ಪಣಾ ಅಭಿಯಾನವೊಂದು ಶುರುವಾಗಿದೆ. ಈ ನಿಟ್ಟಿನಲ್ಲಿ ಇದೀಗ ಕನ್ನಡದ ನಟಿ ಪ್ರಣೀತಾ ಅವರು ಒಂದು ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದ್ದಾರೆ.

ಈ ಕುರಿತು ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಆ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಭಕ್ತರಿಗೆ ಮನವಿ ಮಾಡಿದ್ದಾರೆ. “ನಿಮಗೆಲ್ಲರಿಗೂ ಗೊತ್ತಿರುವವಂತೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ. ದೇಶದೆಲ್ಲೆಡೆ ನಿಧಿ ಸಮರ್ಪಣಾ ಕಾರ್ಯ ನಡೆದಿದೆ. ಈ ಕಾರ್ಯಕ್ಕೆ ನಾನು ನನ್ನ ಸಣ್ಣ ಸೇವೆ ಸಲ್ಲಿಸಿದ್ದೇನೆ. ನೀವು ಕೈ ಜೋಡಿಸಿ” ಎಂದು ಮನವಿ ಮಾಡಿದ್ದಾರೆ.
ಪ್ರಣೀತಾ ಸದ್ಯಕ್ಕೆ ತೆಲುಗು ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ಕೊಟ್ಟಿರುವ ಪ್ರಣೀತಾ, ಆಗಾಗ ಸಮಾಜ ಸೇವೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿರುತ್ತಾರೆ. ಈಗ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೂ ದೇಣಿಗೆ ನೀಡಿದ್ದಾರೆ.

Categories
ಸಿನಿ ಸುದ್ದಿ

ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲ ! ಹಾಗಿದ್ಮೇಲೆ ಈ ನಟ-ನಟಿಯರು ಅಲ್ಲಿಗ್ಯಾಕೆ ಬರ್ಬೇಕು?

ಲಂಕೆ  ಟೈಟಲ್‌  ಲಾಂಚ್‌ ನಲ್ಲೂ ಒಬ್ಬ ನಟಿಯ ಮಾತು ಮುಗಿದಿದ್ದೇ  ಹೀಗೆ…

ಎಲ್ಲಿಗೆ ? ತಕ್ಷಣ ಹೀಗೊಂದು ಪ್ರಶ್ನೆ ನಿಮ್ಮಲ್ಲೂ ಕಾಡಬಹುದು. ವಿಷಯ ಇನ್ನೇನೂ ಅಲ್ಲ. ಇಲ್ಲಿ ಹೇಳ ಹೊರಟಿದ್ದು ಸಿನಿಮಾ ಪ್ರಚಾರ ಕಾರ್ಯಕ್ರಮ ಅಥವಾ ಸಿನಿಮಾ ಸಂಬಂಧಿತ ಪ್ರೆಸ್‌ಮೀಟ್‌ಗಳಲ್ಲಿನ ಅವಾಂತರಗಳ ಕುರಿತು. ಅದ್ಹೇಂಗೆ ಅಂತ ವಿವರಿಸಿ ಹೇಳುವುದಕ್ಕೂ ಮುಂಚೆ ಈ ʼಪ್ರೆಸ್‌ಮೀಟ್‌ʼ ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿ ಅಗತ್ಯ. ಇದೆಲ್ಲ ಸಿನಿಮಾ ಮಂದಿಗೆ, ರಾಜಕಾರಣಿಗಳಿಗೆ, ಸಾರ್ವಜನಿಕ ಕ್ಷೇತ್ರಗಳಲ್ಲಿರುವವರೆಗೆ ಗೊತ್ತು. ಅದರಾಚೆ ತೀರಾ ಸಾಮಾನ್ಯ ಜನರಿಗೆ ಹೆಚ್ಚಾಗಿ ಮಾಹಿತಿ ಇರೋದಿಲ್ಲ ಅನ್ನೋದು ಅಷ್ಟೇ ಸತ್ಯ. ಆ ದೃಷ್ಟಿಯಿಂದ ʼ ಪ್ರೆಸ್‌ಮೀಟ್‌ʼ ಬಗ್ಗೆ ವಿವರಿಸುವುದಾದರೆ, ಇದೊಂದು ಮಾಧ್ಯಮ ಹಾಗೂ ಪ್ರಚಾರ ಬಯಸುವವರ ಮುಖಾಮುಖಿ. ಆ ಮೂಲಕ ಜನರಿಗೆ ತಲುಪುವ ಪ್ರಯತ್ನ.

ವಿಶೇಷವಾಗಿ ಸಿನಿಮಾ ಮಂದಿಗೆ ಈ ರೀತಿಯ ಪ್ರಚಾರ ಅತ್ಯಗತ್ಯ. ತಾವು ಮಾಡಿದ ಸಿನಿಮಾದ ಕುರಿತು ಮಾಹಿತಿ ನೀಡಿ, ಅವರನ್ನು ಚಿತ್ರಮಂದಿರಕ್ಕೆ ಕರೆತರಬೇಕಾದ್ರೆ ಮಾಧ್ಯಮದವರೊಂದಿಗಿನ ಸಿನಿಮಾದವರ ಮುಖಾಮುಖಿ ಬೇಕೇ ಬೇಕು. ಹಾಗಂತ ಈ ಪ್ರೆಸ್‌ಮೀಟ್‌ ಕರೆಯೋದು ಅಂದ್ರೆ ಅಷ್ಟು ಸುಲಭ ಅಲ್ಲ. ಈ ಕಾಲಮಾನಕ್ಕೆ ಇದೊಂದು ದುಬಾರಿಯ ಮೀಟ್ !‌ ಆದರೂ, ಕಷ್ಟಪಟ್ಟು ಸಿನಿಮಾ ಮಾಡಿದ ನಿರ್ಮಾಪಕ ಅದನ್ನು ಜನರ ಬಳಿಗೆ ಒಯ್ಯಬೇಕಾದರೆ ಈಗ ಪ್ರಚಾರ ಅನ್ನೋದು ಅಷ್ಟೆ ಅಗತ್ಯ. ಅದಕ್ಕಾಗಿ ಅವರು ಒಂದು ಪ್ರೆಸ್‌ಮೀಟ್‌ ಆಯೋಜಿಸಬೇಕಾದ್ರೆ, ಅದಕ್ಕೊಂದು ಸುಸಜ್ಜಿತವಾದ ಜಾಗ ಫಿಕ್ಸ್‌ ಮಾಡ್ಬೇಕು. ಅದಕ್ಕೆ ಹಲವು ದಿನಗಳಿಂದ ಸಿದ್ಧತೆ ನಡೆಸಬೇಕು. ಸಿನಿಮಾ ಕಲಾವಿದರೆಲ್ಲರನ್ನು ಒಂದೆಡೆ ಸೇರಿಸಬೇಕು, ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚು ಮಾಡಬೇಕು, ಇದೆಲ್ಲ ಹೆಣಗಾಟದರ ನಡುವೆ ನಿರ್ಮಾಪಕ ಸುಸ್ತಾಗಿ ಮಾತನಾಡದೆ ಮೌನವಹಿಸುವಾಗ, ನಿರ್ದೇಶಕರು ಸೇರಿ ಕಲಾವಿದರೇ ಆ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಸಮಗ್ರ ಸುದ್ದಿ ನೀಡಬೇಕು. ಅದು ಬಿಟ್ಟು, ಗ್ಲಾಮರಸ್‌ ಆಗಿ ಬಂದು ವೇದಿಕೆಯ ಮೇಲೆ ಕುಳಿತು, ಮೋಜಿನಲ್ಲಿ ಚುಯಿಂಗ್‌ ಗಮ್‌ ಜಿಗಿಯುತ್ತಾ ಕೈಗೆ ಮೈಕ್‌ ಹಿಡಿದು ಮಾತನಾಡುವಾಗ ” ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲʼ ಅಂತ ಮೈಕ್‌ ಕೆಳಗಿಟ್ಟರೆ, ಅಷ್ಟೇಲ್ಲ ಖರ್ಚು ಮಾಡಿ ಸುದ್ದಿಗೋಷ್ಠಿ ಕರೆಯುವ ನಿರ್ಮಾಪಕರ ಕತೆಯೇನು?

ಒಂದು ಪ್ರೆಸ್‌ಮೀಟ್‌ ಆಯೋಜಿಸಬೇಕಾದ್ರೆ, ಅದಕ್ಕೊಂದು ಸುಸಜ್ಜಿತವಾದ ಜಾಗ ಫಿಕ್ಸ್‌ ಮಾಡ್ಬೇಕು. ಅದಕ್ಕೆ ಹಲವು ದಿನಗಳಿಂದ ಸಿದ್ಧತೆ ನಡೆಸಬೇಕು. ಸಿನಿಮಾ ಕಲಾವಿದರೆಲ್ಲರನ್ನು ಒಂದೆಡೆ ಸೇರಿಸಬೇಕು, ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚು ಮಾಡಬೇಕು, ಇದೆಲ್ಲ ಹೆಣಗಾಟದರ ನಡುವೆ ನಿರ್ಮಾಪಕ ಸುಸ್ತಾಗಿ ಮಾತನಾಡದೆ ಮೌನವಹಿಸುವಾಗ, ನಿರ್ದೇಶಕರು ಸೇರಿ ಕಲಾವಿದರೇ ಆ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಸಮಗ್ರ ಸುದ್ದಿ ನೀಡಬೇಕು.

ಅ ಬಗ್ಗೆ ಎಷ್ಟು ಜನ ಕಲಾವಿದರು ಯೋಚಿಸುತ್ತಾರೋ ಇಲ್ಲವೋ ಗೊತ್ತಿಲ್ಲ, ಇತ್ತೀಚೆಗೆ ಸಿನಿಮಾ ಸುದ್ದಿಗೋಷ್ಠಿಗಳಲ್ಲಿ “ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲʼ ಎನ್ನುವ ಮಾತು ತುಂಬಾ ಕಾಮನ್‌ ಅಗಿದೆ. ಅತ್ಯಂತ ದುಬಾರಿ ಎನಿಸುವ ಸ್ಟಾರ್ ಹೊಟೇಲ್‌ ಗಳಲ್ಲಿನ ಸುದ್ದಿಗೋಷ್ಠಿಗಳಲ್ಲೂ ಕೆಲವರು ಸಿನಿಮಾದಲ್ಲಿನ ತಮ್ಮ ಪಾತ್ರ, ಸಿನಿಮಾದ ವಿಶೇಷತೆ ಕುರಿತು ಮಾತನಾಡುವ ಬದಲಿಗೆ ನಾಟ್‌‌ ಪ್ರೀಪೆರ್‌ ಅಂತ ಮಾತು ಮುಗಿಸಿ ಬಿಡುತ್ತಾರೆ. ಇಲ್ಲವೇ ಬರೀ ಥ್ಯಾಂಕ್ಸ್‌ ಗಿವಿಂಗ್‌ ಗಷ್ಟೇ ತಮ್ಮ ಮಾತು ಮೀಸಲಿರಿಸಿ, ಮೈಕ್‌ ಕೆಳಗಿಟ್ಟು ಕ್ಯಾಮೆರಾ ಕಡೆ ಮುಖ ಮಾಡುತ್ತಾರೆ. ಮಂಗಳವಾರದ ಸಂಜೆ ಕರೆದಿದ್ದ ʼಲಂಕೆʼ ಸಿನಿಮಾ ಟೈಟಲ್‌ ಲಾಂಚ್‌ ಕಾರ್ಯಕ್ರಮದಲ್ಲೂ ಒಬ್ಬ ನಟಿ ಮಾತು ಇದೇ ಆಗಿತ್ತು. ಸದ್ಯಕ್ಕೆ ಇಲ್ಲಿ ಅವರ ಹೆಸರು ಬೇಡ. ಮುಂದಿನ ದಿನವೂ ಅವರು ಹೀಗೆ ಮಾಡಿದರೆ, ಅವರ ಹೆಸರು ಬಹಿರಂಗ. ಅವರನ್ನ ಬಿಟ್ಟು ಬಿಡಿ, ಕೊನೆ ಪಕ್ಷ ನಿರ್ದೇಶಕರು, ನಿರ್ಮಾಪಕರಿಗೂ ಬುದ್ಧಿ ಬೇಡವೇ? ಹಾಗಂತ ಅನೇಕ ಸುದ್ದಿ ಗೋಷ್ಠಿಗಳಲ್ಲಿ ಆಕ್ಷೇಪಗಳು ಕೇಳಿಬಂದಿದ್ದ ಸತ್ಯ.

Categories
ಸಿನಿ ಸುದ್ದಿ

200 ಎಕರೆ ಎಸ್ಟೇಟು, ನಿರ್ಜನ ಪ್ರದೇಶ, 24 ಜನ, ಒಂದು ತಿಂಗಳು, ನನ್‌ ಲೈಫ್‌ಲ್ಲಿ ಆ ಅನುಭವ ಕಂಡಿದ್ದೇ ಅದೇ ಫಸ್ಟು…!..

  ಆ  ” ಹೀರೋ ʼ ಕುರಿತು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೀಗೆ ಹೇಳಿದ್ದರ ಹಿಂದಿನ ಕತೆಯೇ ರೋಚಕ…!!!.

ವಿಷಯಕ್ಕೆ ಬರೋಣ, ರಿಷಬ್‌ ಶೆಟ್ಟಿ ಹೇಳಿದ ಈ ಕತೆ ಯಾವುದಕ್ಕೆ ಸಂಬಂಧಿಸಿದ್ದು? ಎಲ್ಲೋ ಹೋಗಿ ಲಾಕ್‌ ಆಗಿ ಅನುಭವಿಸಿದ ಹಾರರ್‌ ಕತೆಯಾ ಅಥವಾ ನಕ್ಸಲೈಟೋ, ಇಲ್ಲವೇ ಯಾವುದಾದ್ರೂ ದರೋಡೆ ಗ್ಯಾಂಗ್‌ನವರ ಕೈಗೆ ಸಿಲುಕಿ, ತಪ್ಪಿಸಿಕೊಂಡು ಬಂದಿದ್ದರ ರಾಬಿನ್‌ ಹುಡ್‌ ಥರದ ಸ್ಟೋರಿಯಾ ? ಅಸಲಿಗೆ, ಈ ಕತೆ ಅದ್ಯಾವುದಕ್ಕೂ ಲಿಂಕ್‌ ಆಗಿದ್ದಲ್ಲ. ಬದಲಿಗೆ ಇದು ಅವರ ” ಹೀರೋʼ ಸಿನಿಮಾದ ಚಿತ್ರೀಕರಣಕ್ಕೆ ಸಂಬಂಧಿಸಿದ್ದು. ರಿಷಬ್‌ ಶೆಟ್ಟಿ ಫಿಲಂಸ್‌ ಮೂಲಕ ಭರತ್‌ ರಾಜ್‌ ನಿರ್ದೇಶನ ಹಾಗೂ ರಿಷಬ್‌ ಶೆಟ್ಟಿ ನಾಯಕರಾಗಿ ಅಭಿನಯಿಸಿರುವ ʼಹೀರೋʼ ಚಿತ್ರ ಈಗ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಆಗಿದೆ. ನಾಳೆ( ಜ.14) ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರದ ಮೊದಲ ಅಫೀಷಿಯಲ್‌ ಟ್ರೈಲರ್‌, ಯುಟ್ಯೂಬ್‌ ಚಾನೆಲ್ ಮೂಲಕ ಲಾಂಚ್‌ ಆಗುತ್ತಿದೆ. ಸಹಜವಾಗಿಯೇ ಅದರ ಬಗ್ಗೆ ದೊಡ್ಡ ನಿರೀಕ್ಷೆಯೂ ಇದೆ.

ಕಾರಣ ಇಷ್ಟೇ, “ಬೆಲ್ ಬಾಟಮ್‌‌ʼ ಚಿತ್ರದ ಬಹುದೊಡ್ಡ ಸಕ್ಸಸ್‌ ನಂತರ ರಿಷಬ್‌ ಶೆಟ್ಟಿ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದು. ಹಾಗೆಯೇ ನಿರ್ಮಾಪಕರಾಗಿ ” ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼ ಚಿತ್ರದ ಮೂಲಕ ಕಂಡ ಬಹುದೊಡ್ಡ ಗೆಲುವಿನ ನಂತರ ನಿರ್ಮಾಣ ಮಾಡಿದ ಚಿತ್ರ ʼಹೀರೋʼ. ವಿಶೇಷ ಅಂದ್ರೆ ಈ ಚಿತ್ರ ಶುರುವಾಗಿದ್ದೂ, ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೂ ಎರಡು ಚಿತ್ರ ತಂಡಕ್ಕೆ ಗೊತ್ತೇ ಆಗಿಲ್ಲವಂತೆ. ಅಂದ್ರೆ, ಶುರುವಾಗಿದ್ದಷ್ಟೇ ಬೇಗ, ಚಿತ್ರೀಕರಣವೂ ಮುಗಿದಿದೆಯಂತೆ. ಅದರಲ್ಲೂ ಲಾಕ್‌ ಡೌನ್‌ ಸಮಯದಲ್ಲೇ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ಇದು ಪಕ್ಕಾ ಕಮರ್ಷಿಯಲ್‌ ಚಿತ್ರವಾದರೂ, ಆ ಸಿನಿಮಾಗಳ ಚಿತ್ರೀಕರಣದ ಹಾಗೆ ಸೆಟ್‌ನಲ್ಲೂ ಇರುವಷ್ಟು ಜನರೇ ಇಲ್ಲದೆ, ಕೇವಲ ೨೪ ಜನ ಸೆಟ್‌ನಲ್ಲಿದ್ದು ನಿಗದಿತ ಸಮಯದಲ್ಲಿ ಶೂಟಿಂಗ್‌ ಮುಗಿಸಿಕೊಂಡು ಬಂದಿದ್ದು, ರಿಷಬ್‌ ಶೆಟ್ಟಿ ಸಿನಿ ಜರ್ನಿಯಲ್ಲೇ ಇದು ಫಸ್ಟ್‌ ಅಂತೆ. ಟ್ರೈಲರ್‌ ಲಾಂಚ್‌ ಹಿನ್ನೆಲೆಯಲ್ಲಿ ಜ. 13 ರಂದು ಬುಧವಾರ ಚಿತ್ರ ತಂಡದೊಂದಿಗೆ ಮಾಧ್ಯಮದ ಮುಂದೆ ಬಂದಿದ್ದ ನಟ, ನಿರ್ದೇಶಕ ಕಮ್‌ ನಿರ್ಮಾಪಕ ರಿಷಬ್‌ ಶೆಟ್ಟಿ, ʼಹೀರೋʼ ಚಿತ್ರೀಕರಣದ ಆ ರೋಚಕ ಸಂಗತಿಗಳನ್ನು ತೆರೆದಿಟ್ಟರು.

” ಈ ಚಿತ್ರದ ಆಗಿದ್ದೇ ಲಾಕ್‌ ಡೌನ್‌ ಸಮಯದಲ್ಲಿ. ಲಾಕ್‌ಡೌನ್‌ ಇದೆ ಅಂತ ಊರಿಗೆ ಹೋದಾಗ ಎರಡು ತಿಂಗಳು ಕೆಲಸ ಇಲ್ದೆ ಒದ್ದಾಡಿ ಬಿಟ್ಟೆ. ಏನೋ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಅಂತೆನಿಸಿತು. ಹಾಗಾಗಿ ಅಲ್ಲಿಂದ ಮಿಸೆಸ್‌ ಕರ್ಕೊಂಡು ಬೆಂಗಳೂರಿಗೆ ಬಂದು ಬಿಟ್ಟೆ. ಬಂದ್ಮೇಲೆ ಒಂದಷ್ಟು ಗೆಳೆಯರನ್ನು ಅವರಿದ್ದ ಜಾಗಗಳಿಂದಲೇ ಫೋನ್‌ ಮೂಲಕ ಸಂಪರ್ಕಿಸಿ, ಈ ಸಿನಿಮಾದ ಬಗ್ಗೆ ಹೇಳಿದೆ. ಆಗಲೇ ನಿರ್ದೇಶಕ ಭರತ್‌ ರಾಜ್‌ ಕತೆ ಬರೆದಿದ್ರು. ಉಳಿದಂತೆ ಸ್ಕ್ರಿಫ್ಟ್‌ ವರ್ಕ್‌ ತುಂಬಾನೆ ಅರ್ಜೆಂಟ್‌ ಆಗಿ ನಡೆದು ಹೋದವು. ಕಲಾವಿದರು ಬೇಕಲ್ವಾ ಅಂತ ಯೋಚಿಸುತ್ತಿದ್ದಾಗ, ಯಾರೆಲ್ಲ ಕೆಲಸ ಇಲ್ದೆ ಮನೆಯಲ್ಲೇ ಕುಳಿತಿದ್ದಾರೋ ಅವರನ್ನೇ ಆಯ್ಕೆ ಮಾಡ್ಕೊಳೋಣ ಅಂತ ಡಿಸೈಡ್‌ ಮಾಡಿದೆವು. ಜತೆಗೆ ಅವರ ಸೇಫ್ಟಿ ಬಗ್ಗೆಯೋ ಅಷ್ಟೇ ಕೇರ್‌ ವಹಿಸಿದೆವು, ಶೂಟಿಂಗ್‌ ಮುಗಿಯೋ ತನಕ ಮನೆಗೆ ಬರೋ ಹಾಗಿಲ್ಲ ಅಂತ ಸೂಚನೆ ಕೊಟ್ಟೆವು. ಅದಕ್ಕೆ ತಕ್ಕಂತೆ ಲೊಕೇಷನ್‌ ಹಂಟಿಂಗ್‌ ಶುರುವಾಯ್ತು. ನಿರ್ಜನವಾದ 200 ಎಕರೆ ಪ್ರದೇಶದ ಒಂದು ಕಾಫಿ ಎಸ್ಟೇಟ್‌ ಸಿಕ್ಕಿತು. ಕಲಾವಿದರು, ತಾಂತ್ರಿಕ ವರ್ಗದವರು ಸೇರಿ ೨೪ ಜನರ ತಂಡದೊಂದಿಗೆ ಅಲ್ಲಿಗೆ ಹೋದೆವು. ಅಲ್ಲಿಗೆ ಹೋದ ನಂತರ ಆದ ಅನುಭವೇ ಅದ್ಭುತʼ ಎನ್ನುತ್ತಾ ಮುಂದೆ ಹೇಳಲಿದ್ದ ತಮ್ಮ ಅನುಭವದ ಕತೆಗೆ ಮತ್ತಷ್ಟು ಕುತೂಹಲದ ಟ್ವಿಸ್ಟ್‌ ಕೊಟ್ಟರು ನಟ ರಿಷಬ್‌ ಶೆಟ್ಟಿ.

ಲಾಕ್‌ ಡೌನ್‌ ಸಮಯದಲ್ಲಿ ಅನೇಕರಿಗೆ ಹತ್ತಾರು ರೀತಿಯ ಅನುಭವ ಆಗಿವೆ. ಪ್ರತಿಯೊಬ್ಬರದು ಒಂದೊಂದು ಬಗೆ. ಒಬ್ಬ ಸಿನಿಮಾ ಮೇಕರ್‌ ಆಗಿ ರಿಷಬ್‌ ಕಂಡಿದ್ದು ಕೂಡ ಒಂದು ಸಿನಿಮ್ಯಾಟಿಕ್‌ ಅನುಭವವೇ. ಅದನ್ನವರು ಹೀಗೆ ವಿವರಿಸುತ್ತಾರೆ..” ಕತೆಯಲ್ಲಿ ಅಶೋಕ ವನದ ಸನ್ನಿವೇಶ ಇದೆ. ಅದಕ್ಕೆ ತಕ್ಕಂತೆಯೇ ಇರಲಿ ಅಂತ ನಾವು ಊರ ಹೊರಗಿನ ಆ ಎಸ್ಟೇಟ್‌ ಹುಡುಕಿಕೊಂಡಿದ್ದೆವು. ಊರಿನಿಂದ ಅದು ತುಂಬಾ ದೂರ ಅದು. ಏನಾದ್ರೂ ಬೇಕಿದ್ದರೆ, ಸಿಟಿ ಗೆ ಹೋಗಿ ಬರೋದಿಕ್ಕೆ ಒಂದಿನ ಬೇಕಿತ್ತು. ಹಾಗಾಗಿ ನಾವು ಮತ್ತೆ ಸಿಟಿಗೆ ಹೋಗಿ ಬರುವ ತಾಪತ್ರಯಗಳನ್ನು ದೂರ ವಿಟ್ಟು, ವಾಸ್ತವ್ಯ, ಅಡುಗೆ-ಉಡುಗೆಯ ಸರಕು ಸರಂಜಾಮುಗಳ ಸಮೇತ ಅಲ್ಲಿಗೆ ಹೋಗಿದ್ದೆವು. ತಂಡದ ಹಿರಿಕರು, ಅನುಭವಿಗಳು ಆದ ಪ್ರಮೋದ್‌ ಶೆಟ್ಟಿ ಹಾಗೂ ನಟ ಮಂಜುನಾಥ್‌ ಗೌಡ ಒಂದೇ ದಿನದಲ್ಲಿ ಸೆಟ್‌ ಪ್ರಾಪರ್ಟಿ ತಂದುಕೊಟ್ಟರು. ಸುಹಾಸ್‌ ಅಡುಗೆ ನೋಡಿಕೊಂಡರು. ಕೇವಲ ೨೪ ಜನ ಮಾತ್ರ ನಾವಲ್ಲಿದ್ದೆವು. ಕಲಾವಿದರಾಗಿ ಕ್ಯಾಮೆರಾ ಎದುರಿಸಿದವರೇ, ಸೆಟ್‌ ಬಾಯ್‌ ಆಗಿ ಕೆಲಸ ಮಾಡಿದರು. ಬಹುಶಃ, ಒಂದು ಕಮರ್ಷಿಯಲ್‌ ಸಿನಿಮಾಕ್ಕೆ ಇಷ್ಟು ಕಡಿಮೆ ಜನ ಇಟ್ಕೊಂಡು ಚಿತ್ರೀಕರಣ ಮಾಡಿದ್ದು ಇದೇ ಮೊದಲಿರಬೇಕು. ನನ್ನ ಸಿನಿ ಜರ್ನಿಗೆ ಇದೇ ಮೊದಲು. ಲೈಫ್‌ ನಲ್ಲಿ ಅಂತಹ ಅನುಭವ ಕಂಡೇ ಇರಲಿಲ್ಲ. ಸಿನಿಮಾದಲ್ಲಿ ರಕ್ತ ಇದೆ, ಹಾಗೆಯೇ ಅದರ ಚಿತ್ರೀಕರಣಕ್ಕೂ ಕೆಲವರು ರಕ್ತ ಹರಿಸಿದ್ದಾರೆ. ನಿದ್ದೆ – ನೀರಡಿಕೆ  ಬಿಟ್ಟು ಚಿತ್ರೀಕರಣ ಮಾಡಿದ್ದೇವೆ. ಮಜಾ ಮಾಡ್ಲಿಕ್ಕೆ ಬಂದಿದ್ದೇವೆ ಅಂತ ಯಾರಿಗೂ ಎನಿಸಲಿಲ್ಲ. ಅದೆಲ್ಲದರ ಪ್ರತಿಫಲವೇ ʼಹೀರೋʼ. ಅಂತ ಅದರ ಚಿತ್ರೀಕರಣದ ಅನುಭವ ಹೇಳಿಕೊಂಡರು ರಿಷಬ್‌ ಶೆಟ್ಟಿ.

ಅಂದ ಹಾಗೆ,  ರಿಲೀಸ್‌ ಗೆ ರೆಡಿಯಾಗಿರುವ ಹೀರೋ ಸಿನಿಮಾ ಅತೀ ಶೀಘ್ರದಲ್ಲೇ ತೆರೆಗೆ ಬರಲಿರುವುದು ಗ್ಯಾರಂಟಿ ಅಂತೆ.

error: Content is protected !!