ಸಾವಿರ ಪರದೆ ಮೇಲೆ ಪೊಗರು ಅಬ್ಬರ! ಫೆ.19 ರಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹಬ್ಬ

3 ವರ್ಷಗಳ ಬಳಿಕ ತೆರೆ ಮೇಲೆ ಧ್ರುವ ಸರ್ಜಾ ಸಿನ್ಮಾ

ಕೊರೋನಾ ನಂತರ ಚಿತ್ರರಂಗಕ್ಕೆ ಬಹುದೊಡ್ಡ ಎನರ್ಜಿ ತುಂಬಲು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷೆಯ ಸಿನಿಮಾ “ಪೊಗರು” ಸಜ್ಜಾಗಿದೆ. ಈಗಾಗಲೇ ಚಿತ್ರ ತಂಡ ಪ್ರಕಟಿಸಿರುವಂತೆ, ಫೆಬ್ರವರಿ 19 ರಂದು ಈ ಚಿತ್ರ ದೇಶಾದ್ಯಂತ ಅದ್ಧೂರಿಯಾಗಿಯೇ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಇದು ಕನ್ನಡದ ಜತೆಗೆ ತಮಿಳು ಹಾಗೂ ತೆಲುಗಿನಲ್ಲೂ ಬರುತ್ತಿದೆ ಎಂಬುದೇ ಈ ಹೊತ್ತಿನ ಸುದ್ದಿ.

ಇನ್ನೂ ಒಂದು ವಿಶೇಷವೆಂದರೆ, ಕೊರೋನಾ ನಂತರ ಬರುತ್ತಿರುವ ಮೊದಲ ಸ್ಟಾರ್ ಸಿನಿಮಾ ಯಾವುದು ಅಂತ ಪ್ರೇಕ್ಷಕರು ಎದುರು ನೋಡುತ್ತಿದ್ದಾಗ, ನಿರೀಕ್ಷೆಯಂತೆಯೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ “ಪೊಗರು” ತೆರೆಗೆ ಬರುತ್ತಿದೆ. ಅಲ್ಲಿಗೆ ಕೊರೊನಾ ಭಯ ದೂರವಾಗುತ್ತಿದ್ದಂತೆಯೇ, ಮೊದಲು ತನ್ನ “ಪೊಗರು” ತೋರಿಸಲು ಚಿತ್ರ ರೆಡಿಯಾಗಿದೆ.

ಕೊರೋನಾ ಆತಂಕ ಈಗಲೂ ಇರುವಾಗ ಈ ಚಿತ್ರದ ಬಿಡುಗಡೆ ಇಡೀ ಚಿತ್ರ ತಂಡವೇ ಬೆಂಬಲ ಕೊಟ್ಟಿದೆ. ನಿರ್ಮಾಪಕ ಗಂಗಾಧರ್ ಭರ್ಜರಿಯಾಗಿಯೇ ಚಿತ್ರವನ್ನು ಬಿಡುಗಡೆ ಮಾಡಲು ಜೋರಾದ ಸಿದ್ದತೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಒಂದು ಸಾವಿರ ಸ್ಕ್ರೀನ್‌ಗಳಿಗೂ ಹೆಚ್ಚು “ಪೊಗರು” ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ. ಕನ್ನಡದ ಮಟ್ಟಿಗೆ ಕೊರೋನಾ ನಂತರ ಇಷ್ಟು ಪ್ರಮಾಣದಲ್ಲಿ ತೆರೆಗೆ ಬರುತ್ತಿರುವ ಮೊದಲ ಸಿನಿಮಾ ಎನ್ನುವ ಹೆಸರು “ಪೊಗರು” ಚಿತ್ರಕ್ಕೆ ಸಲ್ಲುತ್ತದೆ.

ಹಾಗೆಯೇ ವಿಜಯ್ ಅಭಿನಯದ ತಮಿಳಿನ “ಮಾಸ್ಟರ್” ಸಿನಿಮಾ ಹೊರತುಪಡಿಸಿದರೆ ತಮಿಳು ಮತ್ತು ತೆಲುಗಿನಲ್ಲೂ ಇದೇ ಮೊದಲು ಅತೀ ಹೆಚ್ಚು ಪರದೆಗಳ ಮೇಲೆ ರಾರಾಜಿಸುತ್ತಿರುವ ಬಿಗ್‌ ಬಜೆಟ್‌ ಚಿತ್ರ. ಅಂದಹಾಗೆ, ಚಿತ್ರವನ್ನು ರಿಲೀಸ್‌ ಮಾಡುತ್ತಿರುವ ಕುರಿತು ಮಾಹಿತಿ ಹಂಚಿಕೊಳ್ಳಲೆಂದೇ ಚಿತ್ರತಂಡ ಮಾಧ್ಯಮ ಎದುರು ಬಂದಿತ್ತು. ನಿರ್ಮಾಪಕ ಗಂಗಾಧರ್‌, ನಿರ್ದೇಶಕ ನಂದ ಕಿಶೋರ್, ಧ್ರುವ ಸರ್ಜಾ, ಕಲಾವಿದರಾದ ಕರಿ ಸುಬ್ಬು, ಧರ್ಮ, ಗಿರಿಜಾ ಲೋಕೇಶ್, ರಾಘವೇಂದ್ರ ರಾಜ್ ಕುಮಾರ್ ಇತರರು ತಮ್ಮ ಚಿತ್ರದ ಅನುಭವ ಹಂಚಿಕೊಂಡರು.

ಪೊಗರು ಚಿತ್ರದಲ್ಲಿ ರಾಘಣ್ಣ
ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಆ ವಿಶೇಷತೆಗಳಲ್ಲಿ ಒಂದನ್ನು ಹೆಸರಿಸುವುದಾದರೆ, ಈ ಮಾಸ್‌ ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್‌ ಕೂಡ ನಟಿಸಿದ್ದಾರೆ ಎಂಬುದೇ ದೊಡ್ಡ ಸುದ್ದಿ. ಇಡೀ ಭಾರತ ಚಿತ್ರರಂಗವೇ ತಿರುಗಿ ನೋಡುವಂತೆ ಕನ್ನಡ ಸಿನಿಮಾರಂಗ ಬೆಳೆದು ನಿಂತಿದೆ. ಆ ಕುರಿತಂತೆ ಖುಷಿ ಹಂಚಿಕೊಂಡ ರಾಘವೇಂದ್ರ ರಾಜಕುಮಾರ್‌, “ಪೊಗರು” ಚಿತ್ರತಂಡದಲ್ಲಿ ನಾನಿದ್ದೇನೆ ಅನ್ನುವುದೇ ಖುಷಿ. ಇಲ್ಲಿ ನನಗೆ ಇಷ್ಟವಾದ ಪಾತ್ರವಿದೆ. ಅದೊಂದು ರೀತಿಯ ವಿಭಿನ್ನ ಪಾತ್ರವಾಗಿದೆ. ಧ್ರುವ ಸರ್ಜಾ ಅವರಲ್ಲಿ ನಾನು ಶಿವಣ್ಣ ಮತ್ತು ಅಪ್ಪು ಅವರನ್ನು ಕಂಡಿದ್ದೇನೆ. ಇಡೀ ದೇಶವೇ ತಿರುಗಿ ನೋಡುವಂತಹ ಸಿನಿಮಾ ಮಾಡಿದ್ದಾರೆ. ಖಂಡಿತವಾಗಿಯೂ ಈ ಚಿತ್ರ ದೊಡ್ಡ ಗೆಲುವು ಕೊಡುತ್ತದೆ ಎಂಬ ವಿಶ್ವಾಸ ನನಗಿದೆ ಎಂಬುದು ರಾಘಣ್ಣ ಅವರ ಮಾತು.

ಆ ಪಾತ್ರಕ್ಕಾಗಿ ಮೂರು ವರ್ಷ ಯಾವ ಚಿತ್ರ ಒಪ್ಪಿಲ್ಲ ಧ್ರುವ

ಪೊಗರು ಸಿನಿಮಾದಲ್ಲಿ ಧ್ರುವ ಸ್ಕೂಲ್ ಬಾಯ್. ಆಗಿ ನಟಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅದರಲ್ಲೂ ಅವರು ಅದು ಕೂಡ 10 ನೇ ತರಗತಿ ಹುಡುಗ. ಕೆಲವರಿಗೆ ಇದು ನಂಬಲು ಅಸಾದ್ಯವಾದರೂ ನಂಬಲೇ ಬೇಕು. ಹೌದು, “ಪೊಗರು” ಸಿನಿಮಾದಲ್ಲಿ ಈ ಪಾತ್ರಕ್ಕಾಗಿಯೇ ಅವರು ಮೂರು ವರ್ಷ ಸಮಯ ತೆಗೆದುಕೊಂಡಿದ್ದಂತೆ. ಅದಿನ್ಜು ಎಲ್ಲಿಯೂ ರಿವೀಲ್ ಆಗಿಲ್ಲವಂತೆ. ಆ ಪಾತ್ರಕ್ಕಾಗಿಯೇ ಧ್ರುವ ಸರ್ಜಾ ಮೂರು ವರ್ಷ ಯಾವುದೇ ಸಿನಿಮಾ ಒಪ್ಪುಕೊಂಡಿಲ್ಲವಂತೆ. ಅವರೇಕೆ ಇದುವರೆಗೂ ಬೇರೆ ಸಿನಿಮಾ ಒಪ್ಪಿಕೊಂಡಿಲ್ಲ ಎಂಬುದಕ್ದಿಕೆ ಇದೇ ಕಾರಣವಂತೆ. ಮೊದಲು ಅವರು 65ಕೆಜಿಗೆ ದೇಹದ ತೂಕ ಇಳಿಸಿಕೊಂಡಿದ್ದಾರೆ.  ಆಮೇಲೆ 120 ಕೆಜಿ ಆದರಂತೆ. ಹಾಗಾಗಿಯೇ ಬೇರೆ ಸಿನಿಮಾ ಒಪ್ಪಿಕೊಂಡಿಲ್ಲ.  ಅದೇನೆ ಇರಲಿ, ಧ್ರುವ ಅವರ ಈ ಶ್ರದ್ಧೆಯನ್ನು  ಇಡೀ ಚಿತ್ರ ತಂಡ ಕೊಂಡಾಡಿದೆ.

ಪೊಗರು ವಿತರಣೆಗೆ ಸಾಥ್
ಒಂದು ಸಿನಿಮಾ ಅಂದಮೇಲೆ ವಿತರಣೆ ಭರ್ಜರಿಯಾಗಿಯೇ ಇರಬೇಕು. ಅದರಲ್ಲೂ ಬಹುನಿರೀಕ್ಷೆಯ “ಪೊಗರು” ಚಿತ್ರದ ಬಿಡುಗಡೆ ಅಂದಮೇಲೆ ಕೇಳಬೇಕೆ, ಭರ್ಜರಿಯಾಗಿಯೇ ಇರುತ್ತೆ. ಈ ಚಿತ್ರದ ವಿತರಣೆಯಲ್ಲಿ ಪುಷ್ಕರ್‌ ಮಲ್ಲಿಕಾರ್ಜುನ್‌, ಕೆ.ಪಿ.ಶ್ರೀಕಾಂತ್‌ ಅವರು ಸಾಥ್‌ ಕೊಡುತ್ತಿರುವುದು ವಿಶೇಷ. ಕನ್ನಡದ ಮಟ್ಟಿಗೆ “ಪೊಗರು” ದೊಡ್ಡ ಸ್ಕೇಲ್‌ ಸಿನಿಮಾ. ಹೀಗಾಗಿ ಬಿಡುಗಡೆ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿರಲಿದೆ. ಸಾವಿರಾರು ಪರದೆ ಮೇಲೆ ಪೊಗರು ಅಬ್ಬರಿಸುತ್ತದೆ ಅಂದಮೇಲೆ ಕೇಳಬೇಕೆ, ಅದಕ್ಕೆ ಸರಿಯಾದ ವ್ಯಕ್ತಿಗಳು ಜೊತೆ ಇರಬೇಕು. ಕನ್ನಡದ ಮಟ್ಟಿಗೆ ಇದೊಂದು ಮೈಲಿಗಲ್ಲು ಆಗುವಂತಹ ಚಿತ್ರ.

ಧ್ರುವ ಸರ್ಜಾ ಅವರ ಈ ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹೆಚ್ಚಿಸಿತ್ತು. ಅದೇ ನಿರೀಕ್ಷೆ ಬಿಡುಗಡೆಯವರೆಗೂ ಕಾಯ್ದುಕೊಂಡು ಬಂದಿದೆ. ಅಂದಹಾಗೆ, ಧ್ರುವ ಸರ್ಜಾ ಅವರ ಚಿತ್ರ ಈ ಹಿಂದೆ ತೆರೆಕಂಡು ಮೂರು ವರ್ಷ ಆಗಿತ್ತು. ಮೂರು ವರ್ಷದ ಬಳಿಕ “ಪೊಗರು” ತೆರೆ ಕಾಣುತ್ತಿದೆ ಎಂಬುದೇ ವಿಶೇಷ.

ಬಾಡಿಗೆ ವ್ಯವಸ್ಥೆ ಮುಂದುವರೆಯಲಿ

ಇದು ಓದು ಗೌಡರಿಗೆ ನಿರ್ಮಾಪಕ ಸೂರಪ್ಪ ಬಾಬು ಅವರಿ ಮಾಡಿದ ವಿನಂತಿ. “ನಾವೆಲ್ಲ ಇಷ್ಟು ಜನ ಒಟ್ಟಾಗಿ ಬಂದಿದ್ದೇವೆ. ಇಂತಹ ಕಷ್ಟಕಾಲದಲ್ಲೂ ಸಿನಿಮಾ ಬಿಡುಗಡೆ ಮಾಡಲು ಬಂದಿದ್ದೇವೆ. ಅದರಲ್ಲೂ “ಪೊಗರು” ಚಿತ್ರ ಮೊದಲು ಬಿಡುಗಡೆಯಾಗುತ್ತಿದೆ. ಅವರಿಗೆ ನಾವೆಲ್ಲಾ ಕೈ ಜೋಡಿಸಿ, ಬೆಂಬಲಕ್ಕೆ ನಿಂತಿದ್ದೇವೆ. ಕಳೆದ ಒಂಭತ್ತು ತಿಂಗಳಿನಿಂದಲೂ ಭಾರೀ ಬಜೆಟ್ ನ ಚಿತ್ರ ನಿರ್ಮಾಪಕರು  ತುಂಬಾ ಕಷ್ಟ ಪಟ್ಟಿದ್ದಾರೆ. ಉತ್ಥರ ಕರ್ನಾಟಕ ಕಡೆಯಿಂದ ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತಿದೆ.  ವಿನಂತಿ ಮಾಡುತ್ತಿದ್ದೇವೆ. ಹಿಂದೆ ಹೇಗೆ ನಡೆದುಕೊಂಡು ಬಂದಿತ್ತೋ, ಅದನ್ನೇ ಮುಂದುವರೆಸಿಕೊಂಡು ಬನ್ನಿ. ನೀವು ಯೋಚನೆ ಮಾಡಿ, ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ. ಶಿವಣ್ಣ ಅವರ ಜೊತೆಗೂ ಚರ್ಚೆ ಮಾಡಿದ್ದೇವೆ. ಓದುಗೌಡರೆ ಇದನ್ನೆಲ್ಲ ಬಿಟ್ಟು ಬಿಡಿ.  ಬಾಡಿಗೆ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಶೇರ್ ಬೇಡ. ಅದನ್ನು ಕೊಡೋದಿಕ್ಕೆ ಶುರು ಮಾಡಿದರೆ ಬಿಗ್ ಬಜೆಟ್ ಸಿನಿಮಾ ಮಾಡೋದಿಕ್ಕೆ ಆಗೋದಿಲ್ಲ. ಬಾಡಿಗೆ ವ್ಯವಸ್ಥೆ ಮುಂದುವರೆಯಬೇಕು” ಎಂಬ ಮನವಿ ಇಟ್ಟರು.

ಇನ್ಮುಂದೆ  ರಿಲೀಸ್ ಫೈಟ್‌ ಇಲ್ಲ

ಯಾವುದೇ ನಿರ್ಮಾಪಕ ಇರಲಿ, ಇನ್ನು ಮುಂದೆ ರಿಲೀಸ್‌ಗೆ ಫೈಟಿಂಗ್‌ ಮಾಡೋದು ಬೇಡ. ಯಾರದ್ದೋ ಒತ್ತಡದ ಆಸೆಗೆ ಸಿನಿಮಾ ರಿಲೀಸ್‌ ಮಾಡಬೇಡಿ. ಇದು ಎಲ್ಲರಿಗೂ ಒಳಿತು ಎಂಬ ಮಾತು ಕೂಡ ಇದೇ ವೇಳೆ ಕೇಳಿಬಂತು. ಅಂದಹಾಗೆ, ಮಾರ್ಚ್‌ ‌11ಕ್ಕೆ “ರಾಬರ್ಟ್” ಬಂದರೆ, ನಂತರದ ದಿನಗಳಲ್ಲಿ, ಏಪ್ರಿಲ್‌ 1 ರಂದು  “ಯುವರತ್ನ”, ಏಪ್ರಿಲ್‌ 15 ಕ್ಕೆ “ಸಲಗ”, ಏಪ್ರಿಲ್‌ 25 ಕ್ಕೆ “ಕೋಟಿಗೊಬ್ಬ” ,  ಮೇ 15ಕ್ಕೆ “ಭಜರಂಗಿ ೨”  ಹೀಗೆ  ಬಿಡುಗಡೆಯಾಗಲಿವೆ.   ಜೂನ್‌ನಲ್ಲಿ “ವಿಕ್ರಾಂತ್‌ ರೋಣ”, “ಕೆಜಿಎಫ್-‌೨” , ಆಗಸ್ಟ್‌ ನಲ್ಲಿ “ಚಾರ್ಲಿ” ಇತ್ಯಾದಿ ಚಿತ್ರಗಳು ಬರಲಿವೆ.

Related Posts

error: Content is protected !!