Categories
ಸಿನಿ ಸುದ್ದಿ

ಶಿವರಾಜಕುಮಾರ್‌ ಅವರ ಕಲರ್‌ಫುಲ್‌ ಜರ್ನಿಗೆ 35 – ಶುಭ ಹಾರೈಸಿದ ಕಿಚ್ಚ ಸುದೀಪ್


ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ ಶಿವಣ್ಣ

ಕನ್ನಡ ಸಿನಿಮಾರಂಗದಲ್ಲಿ ದಶಕಗಳನ್ನು ಸವೆಸುವುದೆಂದರೆ ಅದು ಸುಲಭದ ಮಾತಲ್ಲ. ಇಲ್ಲಿ ಅನೇಕರು ಹಲವು ದಶಕಗಳನ್ನು ಪೂರೈಸಿದ್ದಾರೆ. ಇತ್ತೀಚೆಗಷ್ಟೇ ‌ಸುದೀಪ್‌ ಅವರ ಸಿನಿಮಾ ಪಯಣಕ್ಕೆ 25 ವರ್ಷ ಪೂರೈಸಿತ್ತು. ಈಗ ಶಿವರಾಜಕುಮಾರ್‌ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 35 ವರ್ಷಗಳು ಪೂರೈಸಿವೆ. “ಆನಂದ್” ಚಿತ್ರದ ಮೂಲಕ ಕಲರ್‌ಫುಲ್‌ ರಂಗವನ್ನು ಸ್ಪರ್ಶಿಸಿದ ಶಿವರಾಜಕುಮಾರ್‌, ಈಗ ಯಶಸ್ವಿಯಾಗಿ 35 ವರ್ಷಗಳನ್ನು ಪೂರೈಸಿದ್ದಾರೆ.

ಈವರೆಗೆ 120ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಶಿವರಾಜಕುಮಾರ್‌, ಈಗಲೂ ಕನ್ನಡ ಚಿತ್ರರಂಗದ ಬೇಡಿಕೆ ನಟ ಅನ್ನೋದು ವಿಶೇಷ. ಶಿವರಾಜಕುಮಾರ್‌ ಅಭಿಮಾನಿಗಳು ಪ್ರೀತಿಯಿಂದಲೇ 35 ವರ್ಷದ ಸಂಭ್ರಮವನ್ನು ಆಚರಿಸಿದ್ದಾರೆ. ಶಿವರಾಜಕುಮಾರ್‌ ಅವರ ಮನೆಗೆ ತೆರಳಿದ ಅಭಿಮಾನಿಗಳ ಸಂಘದ ಪದಾಧಿಕಾರಿಗಳು, ಶಿವಣ್ಣ ಅವರನ್ನು ಸನ್ಮಾನಿಸಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆ ಶಿವರಾಜಕುಮಾರ್‌, ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.


ಇನ್ನು, ಶಿವರಾಜಕುಮಾರ್‌ ಅವರು ಈ 35 ವರ್ಷಗಳ ಸಿನಿಪಯಣಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ನಟರು, ನಟಿಯರು ಶುಭ ಹಾರೈಸಿದ್ದಾರೆ. ಕಿಚ್ಚ ಸುದೀಪ್ ಕೂಡ, ಟ್ವಿಟ್ಟರ್‌ನಲ್ಲಿ ಶುಭಹಾರೈಸಿದ್ದಾರೆ. “ಚಿತ್ರರಂಗದಲ್ಲಿ 35 ವರ್ಷಗಳನ್ನು ಪೂರ್ಣಗೊಳಿಸಿದ ವರ್ಸಟೈಲ್ ನಟ ಶಿವಣ್ಣ ಅವರಿಗೆ ಶುಭಾಶಯಗಳು. ದೊಡ್ಡ ಸಾಧನೆ ಇದು. ಚಿತ್ರರಂಗದಲ್ಲಿ ನೀವು ಮೈಲುಗಲ್ಲು ಸಾಧಿಸಿದ್ದೀರಿ. ಸಂತೋಷವಾಗಿರಿ’ ಎಂದು ಶುಭಹಾರೈಸಿದ್ದಾರೆ.


ಈ ಸುದೀರ್ಘ ಸಿನಿಮಾ ಪಯಣದಲ್ಲಿ ಶಿವರಾಜಕುಮಾರ್‌ ಅವರು, ಅನೇಕ ಗೆಲುವು ಕಂಡಿದ್ದಾರೆ. ಅಷ್ಟೇ ಸೋಲು ಕಂಡಿದ್ದಾರೆ. ಗೆಲುವು, ಸೋಲು ಏನೇ ಇದ್ದರೂ, ಸಮಾನಾಗಿಯೇ ಸ್ವೀಕರಿಸಿ, ಅಭಿಮಾನಿಗಳ ಪಾಲಿಗೆ ಪ್ರೀತಿಯ ಹೀರೋ ಆಗಿದ್ದಾರೆ. ಶಿವರಾಜಕುಮಾರ್‌, ಈಗಲೂ ಬಿಝಿ ನಟ ಅನ್ನೋದು ವಿಶೇಷ. ಅವರ “ಭಜರಂಗಿ-2” ಚಿತ್ರ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. “ಅಭಿಮಾನಿಗಳಿಂದಲೇ ನನಗೆ ಇಷೊಂದು ಎನರ್ಜಿ ಇದೆ. ಚಿತ್ರರಂಗ, ಅಭಿಮಾನಿಗಳು, ಮಾಧ್ಯಮ ಎಲ್ಲರ ಸಹಕಾರದಿಂದ ಇಷ್ಟು ವರ್ಷ ಪೂರೈಸಿದ್ದೇನೆ. ಈ ಹೆಸರು, ಸ್ಟಾರ್ ಗಿರಿ ಎಲ್ಲವೂ ಅಭಿಮಾನಿಗಳಿಂದ ಸಿಕ್ಕಿದ್ದು’ ಎಂದು ಹೇಳಿದ್ದಾರೆ.

Categories
ಸಿನಿ ಸುದ್ದಿ

ಕ್ರಿಕೆಟ್ ಸಿನಿಮಾ ‘83’ ಜೂನ್‌ 4ಕ್ಕೆ‌ ರಿಲೀಸ್


ಕಪಿಲ್‌ ದೇವ್ ನಾಯಕತ್ವದಲ್ಲಿ ಚೊಚ್ಚಲ ಕ್ರಿಕೆಟ್ ವಿಶ್ವಕಪ್‌ ಗೆದ್ದ ಸಂಭ್ರಮವನ್ನು ದಾಖಲಿಸುವ ‘83’ ಹಿಂದಿ ಸಿನಿಮಾ ಜೂನ್‌ 4ಕ್ಕೆ ತೆರೆಕಾಣಲಿದೆ. ಕಪಿಲ್ ಪಾತ್ರದಲ್ಲಿ ನಟಿಸುತ್ತಿರುವ ರಣವೀರ್‌ ಸಿಂಗ್ ಚಿತ್ರದ ಪೋಸ್ಟರ್‌ನೊಂದಿಗೆ ಬಿಡುಗಡೆ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಸಿನಿಮಾ ಹಿಂದಿ ಸೇರಿದಂತೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ರೀಮೇಕ್‌ ಅವತರಣಿಕೆಗಳಲ್ಲಿ ಥಿಯೇಟರ್‌ಗೆ ಬರಲಿದೆ.

ಎಲ್ಲವೂ ಅಂದುಕೊಂಡಂತೆಯೇ ಆಗದ್ದರೆ ಚಿತ್ರ ಕಳೆದ ವರ್ಷ ಏಪ್ರಿಲ್‌ 10ಕ್ಕೆ ತೆರೆಕಾಣಬೇಕಿತ್ತು. ಕೋವಿಡ್‌ನಿಂದಾಗಿ ಚಿತ್ರೀಕರಣವೂ ತಡವಾಗಿ ಕೊನಗೆ ಬಿಡುಗಡೆಯೂ ವಿಳಂಬವಾಯ್ತು. ಮೊದಲು ಈ ಚಿತ್ರವನ್ನು ಓಟಿಟಿಯಲ್ಲೇ ತೆರೆಕಾಣಿಸಲು ನಿರ್ಮಾಪಕರು ಯೋಜಿಸಿದ್ದರು. ಇದಕ್ಕೆ ಸುಮಾರು 150 ಕೋಟಿ ರೂಪಾಯಿ ಆಫರ್ ಮಾಡಲಾಗಿತ್ತು ಎನ್ನಲಾಗಿದೆ. ಅಂತಿಮವಾಗಿ ಚಿತ್ರದ ನಿರ್ಮಾಪಕರು ಥಿಯೇಟರ್‌ನಲ್ಲೇ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡರು ಎನ್ನಲಾಗುತ್ತಿದೆ.

1983ರ ವಿಶ್ವಕಪ್ ಗೆದ್ದ ತಂಡದ ಆಟಗಾರರನ್ನು ‘ಕಪಿಲ್ ಡೆವಿಲ್ಸ್‌’ ಎಂದೇ ಕರೆಯುತ್ತಾರೆ! ಅಸಾಧಾರಣ, ಅನಿರೀಕ್ಷಿತ ಆಟದಿಂದ ಎದುರಾಳಿಗಳನ್ನು ಮಣಿಸಿದ್ದರಿಂದ ಭಾರತ ತಂಡದ ಆ ಪಂದ್ಯಗಳು ರೋಚಕವಾಗಿವೆ. ಹಾಗಾಗಿ ‘83’ ಒಂದು ಸ್ಪೋರ್ಟ್ಸ್‌ ಡ್ರಾಮಾ ಸಿನಿಮಾ ಆಗಿ ಪ್ರೇಕ್ಷಕರಿಗೆ ಇಷ್ಟವಾಗಬಹುದು ಎನ್ನುವುದು ಸಿನಿ ವಿಶ್ಲೇಷಕರ ಅಭಿಪ್ರಾಯ. ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕಪಿಲ್‌ ದೇವ್ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ತಾಹಿರ್ ರಾಜ್ ಭಾಸಿನ್‌, ಸಕಿಬ್ ಸಲೀಂ, ಅಮಿ ವಿರ್ಕ್‌, ಸಾಹಿಲ್ ಕಟ್ಟರ್‌, ಚಿರಾಗ್ ಪಾಟೀಲ್‌, ಆದಿನಾಥ್ ಕೊಠಾರೆ, ಧೈರ್ಯ ಕರ್ವ್‌, ಜತಿನ್ ಸರ್ನಾ, ನಿಶಾಂತ್‌ ದಾಹಿಯಾ ಇತರೆ ಆಟಗಾರರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಮಾರ್ಚ್ 24 ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಶುರು

 

ಬೆಂಗಳೂರಿನ ಒರಾಯನ್ ಮಾಲ್‍ನ ಪಿವಿಆರ್ ಚಿತ್ರಮಂದಿರದ 11 ಸ್ಕ್ರೀನ್ ನಲ್ಲಿ 50ಕ್ಕೂ ಹೆಚ್ಚು ದೇಶಗಳ ಸುಮಾರು 200 ಅತ್ಯುತ್ತಮ ಚಿತ್ರಗಳು ಪ್ರದರ್ಶಿಶನಗೊಳ್ಳಲಿವೆ.

ಅಂತೂ ಇಂತೂ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ದಿನ ನಿಗದಿಯಾಗಿದೆ. ಮಾರ್ಚ್ 24ರಿಂದ 13ನೇ ಚಿತ್ರೋತ್ಸವ ಜರುಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸುತ್ತಿರುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 24 ರಿಂದ 31 ರವರೆಗೆ ನಡೆಯಲಿದೆ. ಈ ಬಾರಿ “ಭಾರತೀಯ ಪ್ರದರ್ಶನ ಕಲೆಗಳ ಮಹತ್ವ” ವಿಷಯದ ಮೇಲೆ ಚಿತ್ರೋತ್ಸವವನ್ನು ಏರ್ಪಡಿಸಲು ನಿರ್ಣಯಿಸಲಾಗಿದೆ.

ಭಾರತದ ಪ್ರತಿಷ್ಠಿತ ಚಿತ್ರೋತ್ಸವವಾಗಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಬೆಳೆದು ಬಂದಿದ್ದು, ಈಗಾಗಲೇ ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ FIAPF ಮಾನ್ಯತೆ ದೊರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂಬುದು ಸಿಎಂ ಮಾತು.

ಕೋವಿಡ್ ನಿಯಮಾವಳಿಗಳು ಮತ್ತು ಮಾರ್ಗಸೂಚಿ ಅನ್ವಯ ಚಿತ್ರೋತ್ಸವ ನಡೆಯಬೇಕು ಎಂದು ಸೂಚಿಸಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್‍ನ ಪಿವಿಆರ್ ಚಿತ್ರಮಂದಿರದ 11 ಸ್ಕ್ರೀನ್ ನಲ್ಲಿ 50ಕ್ಕೂ ಹೆಚ್ಚು ದೇಶಗಳ ಸುಮಾರು 200 ಅತ್ಯುತ್ತಮ ಚಿತ್ರಗಳು ಪ್ರದರ್ಶಿಶನಗೊಳ್ಳಲಿವೆ. ಈ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.


ಏಳು ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಏಷಿಯನ್ ಸಿನಿಮಾ, ಚಿತ್ರಭಾರತಿ (ಭಾರತೀಯ ಸಿನಿಮಾ) ಹಾಗೂ ಕನ್ನಡ ಸಿನಿಮಾಗಳ ಸ್ಪರ್ಧಾ ವಿಭಾಗವಿರುತ್ತದೆ. ಅಲ್ಲದೆ, ವಿಶ್ವಸಿನಿಮಾ, ಸಿಂಹಾವಲೋಕನ, ಗ್ರ್ಯಾಂಡ್ ಕ್ಲಾಸಿಕ್, ಕೆಲವು ದೇಶಗಳ ವಿಶೇಷ ಸಿನಿಮಾ, ಅಗಲಿದ ವಿಶ್ವದ, ಭಾರತದ ಮತ್ತು ಕನ್ನಡ ಚಿತ್ರರಂಗದ ಗಣ್ಯರ ಸಂಸ್ಮರಣೆ, ಚಲನಚಿತ್ರ ವಿಮರ್ಶಕರ ಅಂತಾರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ವಿಭಾಗ, ನೆಟ್‍ಪ್ಯಾಕ್, ಜೀವನಚರಿತ್ರೆ ಆಧರಿಸಿದ ಚಿತ್ರಗಳ ವಿಭಾಗಗಳು ವಿವಿಧ ದೃಷ್ಟಿಕೋನವನ್ನು ಬಿಂಬಿಸಲಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಈ ವೇಳೆ ವಿವರಿಸಿದರು.


ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಿನಿಮಾಗಳ ಪ್ರದರ್ಶನದ ಜೊತೆ ದೇಶ-ವಿದೇಶಗಳ ನಿರ್ದೇಶಕರು, ಕಲಾವಿದರು, ತಂತ್ರಜ್ಞ ರೊಂದಿಗಿನ ಸಂವಾದ, ವಿಚಾರ ಸಂಕಿರಣ, ಚಿತ್ರಕಥೆ ರಚನೆ ಕಾರ್ಯಾಗಾರ, ಮಾಸ್ಟರ್‍ಕ್ಲಾಸ್ ಮೊದಲಾದ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಚಿತ್ರೋದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಿನಿಮಾಸಕ್ತರಿಗೆ ಅನುಕೂಲವಾಗಲಿದೆ . ಕನ್ನಡ ಸಿನಿಮಾಗಳ ಸೃಜನಶೀಲ ಮುಖಗಳನ್ನು ವಿಶ್ವದ ನಾನಾ ದೇಶಗಳಿಗೆ ಪರಿಚಯಿಸುವ ಕೆಲಸವೂ ಈ ಮೂಲಕ ನಡೆಯಲಿದೆ.


ಇದೇ ವೇಳೆ ಯಡಿಯೂರಪ್ಪ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 13ನೇ ಆವೃತ್ತಿಯ ಲಾಂಛನ ಬಿಡುಗಡೆ ಮಾಡಿದರು.
ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್, ನಟಿ ಶೃತಿ, ತಾರಾ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಅಜುಂ ಪರ್ವೇಜ್, ಆಯುಕ್ತ ಪಿ.ಎಸ್.ಹರ್ಷ ಮತ್ತಿತರರು ಇದ್ದರು.

Categories
ಸಿನಿ ಸುದ್ದಿ

ನಿಖಿಲ್ ಕುಮಾರ್ ‘ರೈಡರ್‌’ನಲ್ಲಿ ಕೆಜಿಎಫ್ ಖ್ಯಾತಿಯ ಗರುಡ ರಾಮ್‌!

‘ಕೆಜಿಎಫ್‌’ ಸಿನಿಮಾದಲ್ಲಿ ‘ಗರುಡ’ನಾಗಿ ಅಬ್ಬರಿಸಿದ್ದ ರಾಮಚಂದ್ರ ರಾಜು (ಗರುಡ ರಾಮ್‌) ಈಗ ‘ರೈಡರ್‌’ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯ್‌ಕುಮಾರ್ ಕೊಂಡ ನಿರ್ದೇಶನದ ಈ ಆಕ್ಷನ್ – ಡ್ರಾಮಾ ಚಿತ್ರದಲ್ಲಿ ನಿಖಿಲ್‌ ಮತ್ತು ಕಶ್ಮೀರಾ ಪರ್ದೇಸಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ‘ಕೆಜಿಎಫ್‌’ ಚಿತ್ರದ ದೊಡ್ಡ ಯಶಸ್ಸಿನಿಂದಾಗಿ ಗರುಡ ರಾಮ್‌ ದಕ್ಷಿಣ ಭಾರತ ಸಿನಿಮಾರಂಗ ಮಾತ್ರವಲ್ಲದೆ ಬಾಲಿವುಡ್‌ಗೂ ಪರಿಚಿತರಾಗಿದ್ದಾರೆ.


ಅವರಿಗೀಗ ಕೈತುಂಬಾ ಅವಕಾಶಗಳು. ಸೂಪರ್‌ಸ್ಟಾರ್ ಮೋಹನ್‌ ಲಾಲ್‌ ನಟನೆಯ ‘ಆರಾಟ್ಟು’ ಮಲಯಾಳಂ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಮ್‌ ನಟಿಸುತ್ತಿದ್ದಾರೆ. ತೆರೆಗೆ ಸಿದ್ಧವಾಗಿರುವ ಕಾರ್ತಿ ಅಭಿನಯದ ‘ಸುಲ್ತಾನ್‌’ನಲ್ಲೂ ಅವರು ಖಳನಟ.

ರಾಜ್ ತರುಣ್ ಹೀರೋ ಆಗಿರುವ ತೆಲುಗು ಸಿನಿಮಾ, ಅರ್ಜುನ್ ಸರ್ಜಾ ಮತ್ತು ತಾಪ್ಸಿ ಪನ್ನು ಜೋಡಿ ನಟಿಸಲಿರುವ ತಮಿಳು ಚಿತ್ರಕ್ಕೂ ಅವರು ಸಹಿ ಹಾಕಿದ್ದಾರೆ. ಸಾಮಾನ್ಯ ನಟನ ವೃತ್ತಿ ಬದುಕಿಗೆ ಚಿತ್ರವೊಂದು ಹೇಗೆ ದೊಡ್ಡ ತಿರುವಾಗುತ್ತದೆ ಎನ್ನುವುದಕ್ಕೆ ರಾಮ್‌ ಉದಾಹರಣೆಯಾಗಿದ್ದಾರೆ. ಇನ್ನು ‘ರೈಡರ್‌’ ಶೇಕಡಾ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ. ನಿಖಿಲ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಯಾಗಿತ್ತು. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ‘ರೈಡರ್‌’ಗಿದೆ. ದತ್ತಣ್ಣ, ಅಚ್ಯುತ್‌ ಕುಮಾರ್‌, ಚಿಕ್ಕಣ್ಣ, ರಾಜೇಶ್ ನಟರಂಗ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ನ್ಯೂಯಾರ್ಕ್‌ನಲ್ಲಿ ಹರ್ಷಿಕಾ ಪೂಣಚ್ಚ , ಮಾಲ್ಡಿವ್ಸ್ ನಲ್ಲಿ ಲವ್ ಮಾಕ್ಟೆಲ್ ಜೋಡಿ !

ಲಾಕ್ ಡೌನ್ ಪರಿಣಾಮ‌ ಸರಿ‌ ಸುಮಾರು ಒಂದು ವರ್ಷದಷ್ಟು ಕಾಲ ಎಲ್ಲಿಗೂ ಹೋಗದೆ ಬೇಸತ್ತಿದ್ದ ಸ್ಯಾಂಡಲ್ವುಡ್ ಸ್ಟಾರ್ಸ್ ಈಗ ಚಿಟ್ಟೆಯಂತೆ ಹಾರಾಡುತ್ತಿದ್ದಾರೆ. ಕೆಲವರಂತೂ ವಿದೇಶ ಪ್ರವಾಸಕ್ಕೆ ಅವಸರದಲ್ಲೇ ವಿಮಾನ ಹತ್ತುತ್ತಿದ್ದಾರೆ. ಸದ್ಯಕ್ಕೆ ಆ ರೀತಿ ಈಗ ಬೆಂಗಳೂರಿನಿಂದ ಲವ್‌ ಮಾಕ್ಟೆಲ್‌ ಜೋಡಿ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ , ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ವಿದೇಶಕ್ಕೆ ಹಾರಿ ಸಖತ್‌ ಎಂಜಾಯ್‌ ಮಾಡುತ್ತಿರುವ ವಿಡಿಯೋ ಹಾಗೂ ಪೋಟೋಗಳು ಸೋಷಲ್‌ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿವೆ.

ವೈಟ್‌ ಸ್ನೋ ಮೇಲೆ ಮಿಲ್ಕಿ ಬ್ಯುಟಿ…

ಕನ್ನಡದ ಮಿಲ್ಕಿ ಬ್ಯೂಟಿ ಖ್ಯಾತಿಯ ನಟಿ ಹರ್ಷಿಕಾ ಪೂಣಚ್ಚ ಈಗ ನ್ಯೂಯಾರ್ಕ್‌ ನಲ್ಲಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಾಕಷ್ಟು ದಿನಗಳ ಕಾಲ ಮನೆಯಲ್ಲೇ ಉಳಿದಿದ್ದ ಅವರು, ಈಗ ಬೇಸರ ಕಳೆದುಕೊಳ್ಳುವುದಕ್ಕೆ ನ್ಯೂಯಾರ್ಕ್‌ ಗೆ ಹಾರಿದ್ದಾರೆ. ನ್ಯೂಯಾರ್ಕ್‌ ನ ವೈಟ್‌ ಸ್ನೋ ನಲ್ಲಿ ಸಖತ್‌ ಆಗಿ ಹೆಜ್ಜೆ ಹಾಕುತ್ತಾ ಎಂಜಾಯ್‌ ಮಾಡುತ್ತಿದ್ದಾರೆ. ಆ ದೃಶ್ಯಗಳ ವಿಡಿಯೋ ಮತ್ತು ಫೋಟೋಗಳು ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಕನ್ನಡ ಸಿನಿಮಾ ಮಟ್ಟಿಗೆ ನಟಿ ಹರ್ಷಿಕಾ ಪೂಣಚ್ಚ ಅಷ್ಟಾಗಿ ಬ್ಯುಸಿ ಆಗಿಲ್ಲ. ಹಿಂದೆಲ್ಲ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಈಗ ಒಂದಷ್ಟು ಚೂಸಿ ಆಗಿದ್ದು, ಒಳ್ಳೆಯ ಪಾತ್ರಗಳು ಸಿಕ್ಕಾಗಷ್ಟೇ ನಟಿಸುತ್ತಿರುವುದು ನಿಮಗೂ ಗೊತ್ತು. ಹರ್ಷಿಕಾ ನ್ಯೂಯಾರ್ಕ್‌ ಪ್ರವಾಸದ ಆಕ್ಚ್ಯುವಲ್‌ ಉದ್ದೇಶ ನಮಗೂ ಗೊತ್ತಿಲ್ಲ. ಆದರೆ ಅವರು ನ್ಯೂ ಯಾರ್ಕ್‌ ನಲ್ಲಿರುವುದನ್ನು ಅವರೇ ರಿವೀಲ್‌ ಮಾಡಿದ್ದಾರೆ.

ಮಾಲ್ಡಿವ್ಸ್‌ ನಲ್ಲಿ ಲವ್‌ ಮಾಕ್ಟೆಲ್‌ ಜೋಡಿ…

ʼಲವ್‌ ಮಾಕ್ಟೆಲ್‌ʼ ಖ್ಯಾತಿಯ ಜೋಡಿ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಈಗ ಮಾಲ್ಡಿವ್ಸ್‌ ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ಮದುವೆ ಮುಗಿಸಿಕೊಂಡು ಹನಿಮೂನ್‌ ಪ್ರವಾಸಕ್ಕೆ ಈ ಜೋಡಿ ಮಾಲ್ಡಿವ್ಸ್‌ ನಲ್ಲಿದೆ. ಮಾಲ್ಡಿವ್ಸ್‌ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ. ಅದೊಂದು ಕಡಲ ತೀರಾ. ಸುಂದರವಾದ ಬೀಚ್‌ ರೆಸಾರ್ಟ್ಸ್‌ . ಇತ್ತೀಚೆಗಷ್ಟೇ ನಟ ಯಶ್‌ ಹಾಗೂ ರಾಧಿಕಾ ಪಂಡಿತ್‌ ಕೂಡ ಮಾಲ್ಡೀವ್ಸ್‌ ಗೆ ಹೋಗಿದ್ದರು. ಈಗ ಈ ಸರದಿ ನವ ದಂಪತಿ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅವರದ್ದು.

Categories
ಸಿನಿ ಸುದ್ದಿ

ವಿಜಯ್‌ಗೆ ಖಳನಟರಾಗಲಿದ್ದಾರೆಯೇ ನವಾಜುದ್ದೀನ್‌! ಬಾಲಿವುಡ್‌ ನಟ ತಮಿಳು ಸಿನಿಮಾಗೆ ಬರ್ತಾರ?

ತಾವು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಬಲ್ಲೆನು ಎನ್ನುವುದನ್ನು ‘ಮಾಸ್ಟರ್‌’ ತಮಿಳು ಚಿತ್ರದ ಮೂಲಕ ನಟ ವಿಜಯ್ ಮತ್ತೊಮ್ಮೆ ಸಾಬೀತು ಮಾಡಿದರು. ಕೋವಿಡ್‌ನಿಂದಾಗಿ ಥಿಯೇಟರ್‌ನಲ್ಲಿ ಶೇ.50ರಷ್ಟು ಪ್ರೇಕ್ಷಕರಿಗಷ್ಟೇ ಅವಕಾಶವಿತ್ತು. ಆದಾಗ್ಯೂ ವಿಜಯ್‌  ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿತು. ಆ ಚಿತ್ರದಲ್ಲಿ ಖಳನಾಗಿ ನಟಿಸಿದ್ದ ವಿಜಯ್ ಸೇತುಪತಿ ಕೂಡ ಭರ್ಜರಿಯಾಗಿ ಮಿಂಚಿದರು.

ಇದೀಗ ವಿಜಯ್‌ರ 65ನೇ ಚಿತ್ರದಲ್ಲೂ ಪ್ರಭಾವಿ ನಟ ಖಳಪಾತ್ರ ಮಾಡುವ ಸೂಚನೆ ಸಿಕ್ಕಿದೆ. ಬಾಲಿವುಡ್‌ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿ ಅವರಿಗೆ ಈ ಪಾತ್ರದಲ್ಲಿ ನಟಿಸುವಂತೆ ಕರೆ ಹೋಗಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ ‘ವಿಜಯ್‌ 65’ ಚಿತ್ರದಲ್ಲಿ ಖಳಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿದೆಯಂತೆ. ಹಾಗಾಗಿ ದೊಡ್ಡ ನಟನೇ ಆಗಬೇಕು ಎನ್ನುವುದು ಯೋಜನೆ. ಸಿದ್ದಿಕಿ ಅವರನ್ನು ಕರೆತಂದರೆ ಉತ್ತರ ಭಾರತದ ಪ್ರೇಕ್ಷಕರನ್ನೂ ಆಕರ್ಷಿಸಬಹುದು ಎನ್ನುವ ದೂರದ ಆಲೋಚನೆ ಕೂಡ ಸಹಜವೇ. ಸಿದ್ದಿಕಿ ಅವರು ಇದೀಗಷ್ಟೇ ‘ಸಂಗೀನ್‌’ ಚಿತ್ರೀಕರಣ ಮುಗಿಸಿಕೊಂಡು ಲಂಡನ್‌ನಿಂದ ಬಂದಿದ್ದಾರೆ. ಸದ್ಯ ವಿಜಯ್‌ ಸಿನಿಮಾಗೆ ಸಂಬಂಧಿಸಿದಂತೆ ಮಾತುಕತೆ ಜಾರಿಯಲ್ಲಿದ್ದು, ಸಿದ್ದಿಕಿ ಓಕೆ ಎನ್ನಬೇಕಿದೆ.

Categories
ಸಿನಿ ಸುದ್ದಿ

ನ್ಯಾಯಕ್ಕಾಗಿ ಪೊಲೀಸ್‌ ಅಧಿಕಾರಿಯಾಗಿ ಬಂದರು ಶ್ರುತಿ ಹರಿಹರನ್‌ !

ದಕ್ಷಿಣ ಭಾರತದ ನಟಿ ಶ್ರುತಿ ಹರಿಹರನ್‌ ನಟನೆಯ ‘ವಧಂ’ ವೆಬ್‌ ಸರಣಿ ಗಮನ ಸೆಳೆಯುತ್ತಿದೆ. ಸಿನಿಮಾಗಳ ವಿಶಿಷ್ಟ ಪಾತ್ರಗಳಲ್ಲಿ ಅವರನ್ನು ನೋಡಿದ್ದ ಅಭಿಮಾನಿಗಳು ತಮಿಳು ವೆಬ್‌ ಸರಣಿಯಲ್ಲಿ ಅವರನ್ನು ಪೊಲೀಸ್‌ ಅಧಿಕಾರಿಯನ್ನಾಗಿ ಕಂಡು ಥ್ರಿಲ್ಲಾಗಿದ್ದಾರೆ. ವೆಂಕಟೇಶ್ ಬಾಬು ನಿರ್ದೇಶನದ ಸರಣಿ ಮೊನ್ನೆ ಎಂಎಕ್ಸ್‌ ಪ್ಲೇಯರ್‌ನಲ್ಲಿ ಪ್ರೀಮಿಯರ್ ಆಗಿದ್ದು, ಥ್ರಿಲ್ಲರ್‌ ಕಥಾನಕದಿಂದ ಸರಣಿ ನೋಡುಗರನ್ನು ಸೆಳೆಯುತ್ತಿದೆ. ಶ್ರುತಿ ಇಲ್ಲಿ ಪೊಲೀಸ್ ಅಧಿಕಾರಿ ‘ಶಕ್ತಿ ಪಾಂಡಿಯನ್‌’ ಪಾತ್ರದಲ್ಲಿ ನಟಿಸುತ್ತಿದ್ದಾರೆ.

“ನಟಿಯಾಗಿ ನಾನು ಸದಾ ಸವಾಲಿನ ಪಾತ್ರಗಳನ್ನು ಎದುರುನೋಡುತ್ತೇನೆ. ಸಾಂಪ್ರದಾಯಿಕ ಪಾತ್ರಗಳಲ್ಲಷ್ಟೇ ನಟಿಸುವುದು ಬೇಜಾರು. ನ್ಯಾಯಕ್ಕಾಗಿ ಹೋರಾಟ ನಡೆಸುವ, ಪ್ರಭಾವಿ ಕೊಲೆಗಾರ ರಾಜಕಾರಣಿಯನ್ನು ಎದುರು ಹಾಕಿಕೊಂಡು ಸವಾಲು ಸ್ವೀಕರಿಸುವ ಶಕ್ತಿ ಪಾತ್ರದಲ್ಲಿ ನಾನು ತಲ್ಲೀನಳಾಗಿದ್ದೇನೆ” ಎನ್ನುತ್ತಾರೆ ಶ್ರುತಿ. ಸರಣಿಯಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳಿವೆ. ಇಂತಹ ಪಾತ್ರವನ್ನು ನಿಭಾಯಿಸುವಲ್ಲಿ ತಮಗೆ ನೆರವಾಗುತ್ತಿರುವ ನಿರ್ದೇಶಕರನ್ನು ಶ್ರುತಿ ಸ್ಮರಿಸುತ್ತಾರೆ.

ಐಪಿಎಸ್ ಅಧಿಕಾರಿ ಶಕ್ತಿ ಪಾಂಡಿಯನ್‌ ತಮ್ಮ ಮಹಿಳಾ ಸಹೋದ್ಯೋಗಿಗಳೊಂದಿಗೆ ಪ್ರಭಾವಿ ರಾಜಕಾರಣಿಯೊಬ್ಬರು ನಡೆಸಿದ ಕೊಲೆಯನ್ನು ಭೇದಿಸಲು ಹೊರಡುತ್ತಾರೆ. ಮಹಿಳಾ ಅಧಿಕಾರಿಯಾಗಿ ಅವರಿಗೆ ಸಾಕಷ್ಟು ತೊಡಕುಗಳು ಎದುರಾಗುತ್ತವೆ. ಈ ಎಲ್ಲಾ ಬೆದರಿಕೆ, ತೊಡಕುಗಳನ್ನು ಮೆಟ್ಟಿನಿಂತು ಅವರು ಹೇಗೆ ಕೊಲೆಗಾರನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ ಎನ್ನುವುದು ಸರಣಿಯ ಕಥಾವಸ್ತು. “ಇದು ಸೂಪರ್‌ ಥ್ರಿಲ್ಲರ್ – ಡ್ರಾಮಾ. ನಟಿ ಶ್ರುತಿ ಪಾತ್ರವನ್ನು ಜೀವಿಸಿದ್ದಾರೆ” ಎನ್ನುತ್ತಾರೆ ನಿರ್ದೇಶಕ ವೆಂಕಟೇಶ್ ಬಾಬು. ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಅಶ್ವಥಿ ವಾರಿಯರ್‌, ಸೆಮ್ಮಲಾರ್ ಅನ್ನನ್‌, ಪ್ರಿತೀಷಾ ಪ್ರೇಮಕುಮಾರನ್‌, ವಿವೇಕ್ ರಾಜಗೋಪಾಲ್‌ ನಟಿಸಿದ್ದಾರೆ.

Categories
ಗ್ಲಾಮರ್‌ ಕಾರ್ನರ್ ಸಿನಿ ಸುದ್ದಿ

ಹರಿಪ್ರಿಯಾ ಎಂಬ ಸೀರೆಪ್ರಿಯೆ , ಈ ಕುಮುದಾಗೆ ಸೀರೆ ಯಾಕೆ ಅಂದ?

ಹೆಣ್ಣಿಗೆ ಸೀರೆ ಯಾಕೆ ಅಂದಾ? ಬೆಳ್ಳಿತೆರೆ ಮೇಲೆ ಮಾದಕ ನಟಿ ಶ್ರೀದೇವಿಕಾ ಅವರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹೀಗೇಕೆ ಕೇಳಿದ್ರೋ ಗೊತ್ತಿಲ್ಲ, ಆದರೆ ಹೆಣ್ಣಿಗೆ ಸೀರೇನೆ ಚಂದ ಅಲ್ವಾ? ಇಲ್ಲಿ ಹೌದು ಅಂತ, ಸಖತ್ ಆದ ಸೀರೆಯುಟ್ಟು ದೀವಿನಾದ ಪೋಸು ನೀಡುತ್ತಾರೆ ಗ್ಲಾಮರಸ್ ನಟಿ ಹರಿಪ್ರಿಯಾ.

ಆದ್ರೆ, ಗ್ಲಾಮರಸ್ ನಟಿ ಹರಿಪ್ರಿಯಾ ಅಂದಾಕ್ಷಣ ಸಿನಿಮಾ ಪ್ರೇಕ್ಷಕರಿಗೆ ನೆನಪಾಗೋದು ʼನೀರ್ ದೋಸೆ ʼಚಿತ್ರದ ಕುಮುದಾ ಪಾತ್ರ. ಜಗ್ಗೇಶ್ ಅಭಿನಯದ ಈ ಚಿತ್ರದಲ್ಲಿ ಹರಿಪ್ರಿಯಾ ಅಭಿನಯಿಸಿದ್ದು ವೇಶೆ ಪಾತ್ರ.ಈ ಕುಮುದಾ ಸಿಕ್ಕಾಪಟ್ಟೆ ಹಾಟ್. ಉಡುಗೆ, ತೊಡುಗೆ ಮಾತ್ರವಲ್ಲ ಅವರ ಮಾತು ಕೂಡ ಅಷ್ಟೇ ಹಸಿ ಬಿಸಿ. ಹಾಗಾಗಿ ಸಿನಿಮಾ ಅಂದಾಕ್ಷಣ ಕನ್ನಡ ಸಿನಿಮಾ ಪ್ರೇಕ್ಷಕ ನಿಗೆ ಹಾಟ್ ಹರಿಪ್ರಿಯಾ ನೆನಪಾದರೂ, ನಿಜ ಜೀವನದಲ್ಲಿ ಅವರು ಇರೋದೇ ಬೇರೆ.

ಪಕ್ಕಾ ಸಂಪ್ರದಾಯ ಸ್ಥ ಕುಟುಂಬದ ಹಿನ್ನೆಲೆ ಹರಿಪ್ರಿಯಾ ಅವರದು. ಶುದ್ಧ ದೈವ ಭಕ್ತೆ. ಹಾಗೆಯೇ ಸೀರೆಯೇ ಅವರ ನೆಚ್ಚಿ‌ನ ಉಡುಗೆ. ಸೋಷಲ್ ಮೀಡಿಯಾದಲ್ಲಿ ಅವರ ಇನ್ಸ್ಟಾ, ಪೇಸ್ ಬುಕ್ , ಟ್ವಿಟರ್ ಖಾತೆ ತೆರೆದರೆ ದಿನ ನಿತ್ಯ ತರಾಹೇವಾರಿ ಬಣ್ಣದ ಸೀರೆಗಳುಟ್ಟು ಪೋಸು ನೀಡಿರುವುದು ನಿಮಗೂ ಗೊತ್ತು. ಅಷ್ಟೇ ಅಲ್ಲ, ತೆರೆ ಮೇಲೂ ಹರಿಪ್ರಿಯಾ ಸೀರೆಯಲ್ಲಿ ಕಾಣಿಸಿಕೊಂಡರೆ ಚೆಂದ.

ಹಾಗಂತ ಅವರ ಅಭಿಮಾನಿಗಳು ಬಯಸುತ್ತಾರಂತೆ. ಮುನಿರತ್ನ ಕುರುಕ್ಷೇತ್ರದಲ್ಲಿ ನಟಿ ಹರಿಪ್ರಿಯಾ ಚೆಂದದ ಸೀರೆಯುಟ್ಟು ಕಾಣಿಸಿಕೊಂಡಿದ್ದಕ್ಕೂ ಆಗಾಧ ಮೆಚ್ಚುಗೆ ಸಿಕ್ಕಿತ್ತು. ಇದೇ ಕಾರಣಕ್ಕೋ ಏನೋ, ಸೀರೆಯಲ್ಲಿ ಸದಾ ಮಿಂಚುತ್ತಾರೆ ನಟಿ ಹರಿಪ್ರಿಯಾ‌.

ಅಂದ ಹಾಗೆ ಹರಿಪ್ರಿಯಾ ಈಗ ಕನ್ನಡದ ಬ್ಯುಸಿ ನಟಿಯರಲ್ಲಿ ಒಬ್ಬರು. ಉಗ್ರಂ ನಂತರ ಹರಿಪ್ರಿಯಾ ಅವರದ್ದು ಸೆಕೆಂಡ್ ಇನ್ನಿಂಗ್ಸ್.‌ಉಗ್ರಂ ಮೂಲಕ ಸಿಕ್ಕ ದೊಡ್ಡ ಸಕ್ಸಸ್ ನಂತರ ಹರಿಪ್ರಿಯಾ , ನೀರ್ ದೋಸೆ ಮೂಲಕ ಫಿನಿಕ್ಸ್ ನಂತೆ ಎದ್ದು ಕುಳಿತರು.ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ. ಈಗಷ್ಟೇ ಅವರು ವಿಜಯ್ ಪ್ರಸಾದ್ ನಿರ್ದೇಶನದ’ ಪೆಟ್ರೋಮ್ಯಾಕ್ಸ್’ ಚಿತ್ರರ ಚಿತ್ರೀಕರಣ ಮುಗಿಸಿದ್ದಾರೆ.

Categories
ಸಿನಿ ಸುದ್ದಿ

ಜೂನಿಯರ್ ಚಿರು ಪುಟಾಣಿ ಕೈಯಿಂದ ರಾಜಾಮಾರ್ತಾಂಡ ಟ್ರೇಲರ್ ರಿಲೀಸ್‌!


ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜಾ ಮಾರ್ತಾಂಡ’ ತೆರೆಗೆ ಸಿದ್ಧವಾಗುತ್ತಿದೆ. ಚಿರಂಜೀವಿ ಪಾತ್ರಕ್ಕೆ ಅವರ ಸಹೋದರ ಧ್ರುವ ಡಬ್‌ ಮಾಡಿದ್ದಾರೆ.  ಫೆಬ್ರವರಿ 19ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಈ ಟ್ರೇಲರ್‌ ಅನ್ನು ಚಿರಂಜೀವಿ ಪುಟಾಣಿ ಪುತ್ರನ ಕೈಗಳಿಂದ ಲಾಂಚ್‌ ಮಾಡಿಸಲಾಗುತ್ತಿದೆ! ಚಿತ್ರದ ನಿರ್ದೇಶಕ ರಾಮ್‌ನಾರಾಯಣ್‌ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ತೊಟ್ಟಿಲಲ್ಲಿರುವ ಜ್ಯೂ.ಚಿರು ಜೊತೆಗಿನ ಸೆಲ್ಫಿ ಹಾಕಿ ಅವರು ಈ ಸುದ್ದಿಯನ್ನು ಬರೆದಿದ್ದಾರೆ.

ಜ್ಯೂ.ಚಿರಂಜೀವಿಯಿಂದ ‌ಟ್ರೇಲರ್ ಲಾಂಚ್ ಮಾಡಿಸುವ ಐಡಿಯಾಗೆ ನಟಿ  ಮೇಘನಾ ರಾಜ್‌ ಅವರೂ ಖುಷಿಯಾಗಿದ್ದಾರೆ. ಪುಟಾಣಿಯಿಂದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ಬಹುಶಃ ಕನ್ನಡ ಚಿತ್ರರಂಗದ ಮಟ್ಟಿಗೂ ಹೊಸದು. ಇನ್ನು ಚಿರಂಜೀವಿ ನಟನೆಯ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ‘ರಾಜಾಮಾರ್ತಾಂಡ’ ಕುರಿತು ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಡಬ್ ಮಾಡಲು ಶುರುಮಾಡಿದ್ದಾರೆ.

ಟ್ರೇಲರ್‌ಗೆ ಬೇಕಾದ ಡಬ್ಬಿಂಗ್ ಕೆಲಸ ಮುಗಿಸಿರುವ ಧ್ರುವ ತಮ್ಮ ‘ಪೊಗರು’ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಅವರು ಪೂರ್ಣಪ್ರಮಾಣದಲ್ಲಿ ಆ ಸಿನಿಮಾದ ಡಬ್ಬಿಂಗ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.  ಟ್ರೇಲರ್ ಬಿಡುಗಡೆಯ ಕೆಲವು ದಿನಗಳಲ್ಲಿ ‘ರಾಜಾಮಾರ್ತಾಂಡ’ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ನಟ ದರ್ಶನ್‌ ಕೂಡ ಈ ಸಿನಿಮಾದ ಬೆನ್ನಿಗೆ ನಿಂತಿದ್ದಾರೆ. ಚಿತ್ರದಲ್ಲಿ ದರ್ಶನ್ ಹಿನ್ನೆಲೆ ದನಿ ಇರಲಿದೆ. ಈ ಮೂಲಕ ಅಗಲಿದ ಗೆಳೆಯನಿಗೆ ಅವರ ಕಡೆಯಿಂದ ಶ್ರ‌ದ್ಧಾಂಜಲಿ ಅರ್ಪಣೆಯಾಗುತ್ತಿದೆ.

Categories
ಸಿನಿ ಸುದ್ದಿ

ಅಭಿಮಾನಿ ಹೃದಯದಲ್ಲಿ ಸಲಗ – ಎದೆ ಮೇಲೆ‌ ರಾರಾಜಿಸಿದ ಸಲಗನ ಕಂಡು ವಿಜಯ್‌ ಭಾವುಕ

“ದುನಿಯಾ” ವಿಜಯ್‌ ಅಭಿನಯದ “ಸಲಗ” ಸಿನಿಮಾ ರಿಲೀಸ್‌ಗೆ ಮುನ್ನವೇ ಜೋರು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ವಿಜಯ್‌ ಅವರ ಗೋವಾದ ಅಭಿಮಾನಿಯೊಬ್ಬ ತನ್ನ ಕೈ ಮೇಲೆ “ಸಲಗ” ಎಂಬ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದು ಗೊತ್ತೇ ಇದೆ. ಈಗ ಮತ್ತೊಬ್ಬ ಅಭಿಮಾನಿ ತನ್ನ ಎದೆಯ ಮೇಲೆಯೇ “ಸಲಗ” ಹೆಸರನ್ನ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ. ಹೌದು, ಅಭಿಮಾನಿ ಎದೆಯ ಮೇಲೆ ರಾರಾಜಿಸುತ್ತಿರುವ “ಸಲಗ” ಹೆಸರು ನೋಡಿದ ʼದುನಿಯಾʼ ವಿಜಯ್‌ ಅಭಿಮಾನಿಯ ಪ್ರೀತಿಯ ಅಭಿಮಾನಿಗೆ ಫಿದಾ ಆಗಿದ್ದಾರೆ.

ಸದ್ಯಕ್ಕೆ ಈಗ “ದುನಿಯಾ” ವಿಜಯ್ ಅಭಿಮಾನಿಗಳಿಂದ ಟ್ಯಾಟೋ‌ ಅಭಿಯಾನ ಕೊಂಚ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ ಒಂದು ರೀತಿ ಈ ಅಭಿಯಾನ ಸೆನ್ಸೇಷನ್ ಕೂಡ ಕ್ರಿಯೇಟ್ ಮಾಡುತ್ತಿದೆ. ದಿನ ಕಳೆದಂತೆ “ಸಲಗ” ಚಿತ್ರದ ಕ್ರೇಜ್ ಹೆಚ್ಚುತ್ತಲೇ ಇದೆ. ವಿಜಯ್ ಅಭಿಮಾನಿಗಳು‌ ತಮ್ಮ‌ ಪ್ರೀತಿಯ ನಟನ ಸಿನಿಮಾ‌ ಮೇಲೆ‌ ತುಸು ಹೆಚ್ಚಾಗಿಯೇ ಪ್ರೀತಿ ಬೆಳೆಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಹಾಗೂ ರಿಲೀಸ್ ಆಗಿರುವ ಹಾಡುಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

“ಸಲಗ” ಥಿಯೇಟರ್‌ಗೆ ಬರುವುದನ್ನು ಕಾತರದಿಂದಲೇ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ತಮ್ಮದೇ ಆದ ರೀತಿಯಲ್ಲೇ ಅವರು ಅಭಿಮಾನವನ್ನು ತೋರಿಸುತ್ತಿದ್ದಾರೆ. ಗೋವಾ ಕನ್ನಡಿಗನೊಬ್ಬ ತನ್ನ ಕೈ ಮೇಲೆ‌‌ ಟ್ಯಾಟೋ‌ ಹಾಕಿಸಿಕೊಂಡು ಅಭಿಮಾನ ತೋರಿದ್ದ ಬೆನ್ನಲ್ಲೇ ಈಗ ಇನ್ನೊಬ್ಬ ಅಭಿಮಾನಿ ತನ್ನ ಎದೆ ಮೇಲೇನೆ “ಸಲಗ” ಟ್ಯಾಟೋ‌ ಹಾಕಿಸಿಕೊಂಡು, ಖುದ್ದು ತಮ್ಮ ಪ್ರೀತಿಯ ನಟ ವಿಜಯ್‌ ಮನೆಗೆ ಬಂದು ಅವರ ಕೈಯಲ್ಲೇ ಆ ಟ್ಯಾಟೋ ಕವರ್‌ ಅನ್ನು ಬಿಚ್ಚಿಸಿಕೊಂಡಿದ್ದಾನೆ. ಅಭಿಮಾನಿಯ ಈ ಅಭಿಮಾನಕ್ಕೆ ವಿಜಯ್‌ ಅವರೇ ಖುದ್ದು ಭಾವುಕರಾಗಿ ಅಭಿಮಾನಿಗೆ ಶರಣಗಿದ್ದಾರೆ.

error: Content is protected !!