Categories
ಸಿನಿ ಸುದ್ದಿ

ಪ್ರೀತಿಯ ಬಲೆಯಲ್ಲಿ ಅಮೀರ್‌ ಪುತ್ರಿ – ಟ್ವೀಟ್‌ ಮೂಲಕ ಪ್ರಿಯಕರನ ಫೋಟೋ ಹಂಚಿಕೊಂಡ ಇರಾ

ಇತ್ತೀಚೆಗೆ ಸ್ಟಾರ್ ನಟರ ಮಕ್ಕಳು ಸಿನಿಮಾರಂಗದಲ್ಲಿ ಮಿಂಚುತ್ತಿರೋದು ಗೊತ್ತೇ ಇದೆ. ಇದು ಹೊಸದಲ್ಲ. ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ಹೀಗೆ ಯಾವುದೇ ಭಾಷೆಯ ಚಿತ್ರರಂಗವನ್ನು ಗಮನಿಸಿದರೂ ಅಲ್ಲಿ ಒಂದಷ್ಟು ಸ್ಟಾರ್ ನಟ,ನಟಿಯರ ಮಕ್ಕಳೂ ಕೂಡ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಬಾಲಿವುಡ್ ನಟ ಅಮೀರ್‌ಖಾನ್ ಪುತ್ರಿ ಇರಾಖಾನ್‌ ಕೂಡ ಜೋರು ಸುದ್ದಿಯಲ್ಲಿದ್ದಾರೆ. ಅಂದಂತೆ, ಅವರೇನೂ ಹೊಸ ಸಿನಿಮಾ ಮಾಡುತ್ತಿಲ್ಲ.

ಆದರೆ, ತಾವು ಪ್ರೀತಿ ಮಾಡುತ್ತಿರುವ ಪ್ರಿಯಕರನ ಬಗ್ಗೆ ಹೇಳಿಕೊಂಡಿದ್ದಾರೆ. ಸ್ವತಃ ತಮ್ಮ ಟ್ವೀಟ್‌ ಮೂಲಕ ಈ ವಿಷಯವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಅದು ಫೋಟೋ ಸಮೇತ. ಇಷ್ಟಕ್ಕೂ ಅಮೀರ್‌ಖಾನ್‌ ಪುತ್ರಿ ಇರಾಖಾನ್‌ ಪ್ರೀತಿಯ ಬಲೆಗೆ ಬಿದ್ದಿರೋದು, ಆಕೆಗೆ ಫಿಟ್ನೆಸ್ ತರಬೇತಿ ಕೊಡುತ್ತಿರುವ ನೂಪುರ್ ಶಿಖರೆ ಅವರನ್ನು. ಇದನ್ನು ಇರಾಖಾನ್‌ ಅವರೇ ಸ್ಪಷ್ಟಪಡಿಸಿದ್ದಾರೆ. ನೂಪುರ್ ಶಿಖರೆ ಈಗಾಗಲೇ ಸಾಕಷ್ಟು ಹಿಂದಿ ನಟ, ನಟಿಯರಿಗೆ ಫಿಟ್ನೆಸ್ ತರಬೇತಿ ನೀಡಿದ್ದಾರೆ. ಇನ್ನೇನು ಪ್ರೇಮಿಗಳ ದಿನ ಕೂಡ ಬರುತ್ತಿರುವುದರಿಂದ ಇರಾಖಾನ್‌ ಈ ಪ್ರೀತಿಯ ವಿಷಯವನ್ನು ಹಂಚಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಜಗಪತಿಬಾಬುಗೆ ʼಮದಗಜʼ ತಂಡದಿಂದ ಭರ್ಜರಿ ಗಿಫ್ಟ್‌

ದಕ್ಷಿಣ ಭಾರತದ ಹೆಸರಾಂತ ನಟ ಜಗಪತಿ ಬಾಬು ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅವರಿಗೆ ಇಂದು ಶ್ರೀ ಮುರಳಿ ಅಭಿನಯದ” ಮದಗಜʼ ಚಿತ್ರ ತಂಡವು ಭರ್ಜರಿ ಗಿಫ್ಟ್‌ ನೀಡಿದೆ. ಟಾಲಿವುಡ್‌ ನ ಸ್ಟಾರ್‌ ನಟ ಜಗಪತಿ ಬಾಬು ಸದ್ಯಕ್ಕೆ ಮಹೇಶ್‌ ಕುಮಾರ್‌ ನಿರ್ದೇಶನ ಮದಗಜ ಚಿತ್ರದಲ್ಲಿ ಪ್ರಮುಖ ಖಳನಟನಾಗಿ ಅಭಿನಯಿಸಿದ್ದು, ಅದೇ ಕಾರಣಕ್ಕೆ ಚಿತ್ರ ತಂಡ ನಟ ಜಗಪತಿ ಬಾಬು ಅವರಿಗೆ ಇಂದು ಸ್ಪೆಷಲ್‌ ಟೀಸರ್‌ ಲಾಂಚ್‌ ಮಾಡಿದೆ.

ಟಾಲಿವುಡ್‌ ಜತೆಗೆ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲೂ ಬ್ಯುಸಿ ಇರುವ ಜಗಪತಿ ಬಾಬು, ಹೀರೋ ಆಗಿದ್ದು ಮಿಂಚಿದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ ಈಗ ಅವರಿಗೆ ವಿಲನ್‌ ಆಗಿಯೂ ಅಷ್ಟೇ ಡಿಮ್ಯಾಂಡ್‌ ಇದೆ. ಅದರಲ್ಲೂ ಕಾರ್ಪೊರೇಟ್‌ ವಲಯದ ಖಳ ನಟನ ಪಾತ್ರಕ್ಕೆ ಜಗಪತಿ ಬಾಬು ಬಹು ಬೇಡಿಕೆ ಪಡೆದಿದ್ದಾರೆ. ಅದೇ ಕಾರಣಕ್ಕೆ ಕನ್ನಡದಲ್ಲೂ ಅವರಿಗೆ ಸಾಕಷ್ಟು ಡಿಮ್ಯಾಂಡ್‌ ಇದೆ. ಇತ್ತೀಚಿನ ಬಿಗ್‌ ಬಜೆಟ್‌ ಸಿನಿಮಾಗಳೆಲ್ಲ ಜಗಪತಿ ಬಾಬು ಖಾಯಂ ಆಗಿದ್ದಾರೆ.

ಅಂದ ಹಾಗೆ, ಈಗ ʼಮದಗಜʼ ಕೂಡ ಅಷ್ಟೇ ಕುತೂಹಲ ಮೂಡಿಸಿದೆ. ಉಮಾಪತಿ ಶ್ರೀನಿವಾಸ್‌ ಗೌಡ ನಿರ್ಮಾಣದ ʼಮದಗಜʼ ಚಿತ್ರದಲ್ಲಿ ಜಗಪತಿ ಬಾಬು ಅವರ ಗೆಟಪ್‌ ತುಂಬಾ ಚೆಂಜ್‌ ಇದೆ. ಅಭಿಮಾನಿಗಳು ಅವರ ಲುಕ್‌ ಅಂಡ್‌ ಗೆಟಪ್‌ ಗೆ ಫುಲ್‌ ಫಿದಾ ಆಗಿದ್ದಾರೆ. ʼ ಕೆಜಿಎಫ್‌ʼ ಖ್ಯಾತಿಯ ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಸಲ್ಮಾನ್‌ಗೆ ಇಮ್ರಾನ್‌ ಹಶ್ಮಿ‌ ವಿಲನ್! ಯೂರೋಪ್‌ನಲ್ಲಿ ಸಲ್ಲೂ-ಕತ್ರಿನಾ ‘ಟೈಗರ್‌ 3’ ಶೂಟಿಂಗ್

ಕಬೀರ್ ಖಾನ್‌ ನಿರ್ದೇಶನದಲ್ಲಿ 2012ರಲ್ಲಿ ತೆರೆಕಂಡ ‘ಏಕ್ ಥಾ ಟೈಗರ್‌’ ಚಿತ್ರದಲ್ಲಿ ಸಲ್ಮಾನ್ ಮತ್ತು ಕತ್ರಿನಾ ಕೈಫ್ ನಟಿಸಿದ್ದರು. ಚಿತ್ರದಲ್ಲಿನ ಅವರ RAW ಮತ್ತು ISI ಏಜೆಂಟ್ ಪಾತ್ರಗಳು ಕ್ಲಿಕ್ಕಾಗಿದ್ದವು. ಇದಾಗಿ ಐದು ವರ್ಷಕ್ಕೆ ಅಬ್ಬಾಶ್ ಜಾಫರ್‌ ನಿರ್ದೇಶನದಲ್ಲಿ ‘ಟೈಗರ್ ಜಿಂದಾ ಹೈ’ ಬಂತು. ಸಲ್ಲೂ ಮತ್ತು ಕತ್ರಿನಾ ಜೋಡಿಯ ಸಿನಿಮಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳಿಪಟ ಮಾಡಿತು.

ಇದೀಗ ಟೈಗರ್ ಮತ್ತು ಜೋಯಾ ‘ಟೈಗರ್ 3’ಯಲ್ಲಿ ಜೋಡಿಯಾಗುತ್ತಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಚಿತ್ರದ ಖಳಪಾತ್ರದಲ್ಲಿ ‘ಕಿಸ್ಸಿಂಗ್ ಸ್ಟಾರ್‌’ ಇಮ್ರಾನ್ ಹಶ್ಮಿ ನಟಿಸಲಿದ್ದಾರೆ ಎನ್ನುವುದು ವಿಶೇ‍ಷ! ಚಿತ್ರ ನಿರ್ಮಿಸುತ್ತಿರುವ ಯಶ್ ರಾಜ್ ಫಿಲ್ಮ್ಸ್‌ ಸಂಸ್ಥೆ ಚಿತ್ರದ ಖಳನಾಗಿ ಹೊಸ ನಟನನ್ನು ಪರಿಚಯಿಸುವ ಇರಾದೆ ಹೊಂದಿತ್ತು. ಹಾಗೆ ಹಿಂದೆ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಅವರು ಸಾಜದ್ ಡೆಲಾಫ್ರೂಜ್‌ ಅವರನ್ನು ಪರಿಚಯಿಸಿದ್ದರು. ಇದೀಗ ‘ಟೈಗರ್‌ 3’ನಲ್ಲಿ ಇಮ್ರಾನ್ ಹಶ್ಮಿ ಅವರನ್ನು ಕರೆತಂದಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಟೈಗರ್ 3’ ಮುಂದಿನ ತಿಂಗಳು ಚಿತ್ರೀಕರಣ ಆರಂಭಿಸಲಿದೆ. ಮುಂಬಯಿಯ ಯಶ್ ರಾಜ್‌ ಸ್ಟುಡಿಯೋದಲ್ಲಿ ಮೊದಲ ಹಂತದ ಶೂಟಿಂಗ್‌ಗೆ ಚಾಲನೆ ಸಿಗಲಿದೆ. ಅಲ್ಲಿ ಸಲ್ಮಾನ್‌, ಕತ್ರಿನಾ ಮತ್ತು ಇಮ್ರಾನ್ ನಟನೆಯ ಕೆಲವು ಸನ್ನಿವೇಶಗಳು ಚಿತ್ರಣಗೊಳ್ಳಲಿವೆಯಂತೆ. ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಯೂರೋಪ್‌ಗೆ ತೆರಳಲಿದೆ. ಮತ್ತೆ ಮೂರನೇ ಹಂತ ಮುಂಬಯಿಯ ಸ್ಟುಡಿಯೋದಲ್ಲಿ ಚಿತ್ರಿತವಾಗಲಿದೆ. ಶಾರುಖ್ ನಟನೆಯ ‘ಪಠಾಣ್‌’ ಚಿತ್ರದ ಒಂದು ಪಾತ್ರದಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ. ಆ ಸಿನಿಮಾದ ಕೆಲಸ ಪೂರ್ಣಗೊಳ್ಳುತ್ತಲೇ ಸಲ್ಮಾನ್‌ ‘ಟೈಗರ್ 3’ ತಂಡಕ್ಕೆ ಹಾಜರಾಗಲಿದ್ದಾರೆ. ಖಳಪಾತ್ರದಲ್ಲಿ ಇಮ್ರಾನ್‌ ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಎಲ್ಲರದು.

Categories
ಸಿನಿ ಸುದ್ದಿ

ತಾಯಿಯಾದ ಸಂಭ್ರಮದಲ್ಲಿ ವೀರ ಕನ್ನಡಿಗ ನಟಿ

ಸಿನಿಮಾ ಮತ್ತು ಕಿರುತೆರೆ ನಟಿ ಅನಿತಾ ಹಸ್ಸನಂದನಿ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಅನಿತಾ ಮತ್ತು ರೋಹಿತ್ ರೆಡ್ಡಿ ದಂಪತಿ ಗಂಡು ಮಗುವಿಗೆ ಜನ್ಮ ನೀಡಿದ್ದು,  ಅವರಿಗೆ ಸಿನಿಮಾರಂಗದ ಹಲವರು ಶುಭ ಹಾರೈಸುತ್ತಿದ್ದಾರೆ. ದಂಪತಿ ಈ ಸಂತಸದ ಸಂದರ್ಭದ ಫೋಟೋ, ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನಿತಾ ಅವರ ಆತ್ಮೀಯ ಗೆಳತಿ, ನಿರ್ಮಾಪಕಿ ಏಕ್ತಾ ಕಪೂರ್‌ ಆಸ್ಪತ್ರೆಯಲ್ಲಿ ನಟಿಯನ್ನು ಭೇಟಿ ಮಾಡಿ ಶುಭ ಹಾರೈಸಿ ಅಲ್ಲಿನ ಫೋಟೋ ಶೇರ್ ಮಾಡಿದ್ದರು.

ಮುಂಬಯಿಯ ಸಿಂಧಿ ಕುಟುಂಬದ ಅನಿತಾ ದಕ್ಷಿಣದ ತೆಲುಗು, ತಮಿಳು ಚಿತ್ರೋದ್ಯಮಗಳಲ್ಲಿ ದೊಡ್ಡ ಗೆಲುವು ಕಂಡ ನಟಿ. ಉದಯ ಕಿರಣ್ ಜೊತೆ ಅವರು ನಟಿಸಿದ ‘ನುವ್ವು ನೇನು’ ತೆಲುಗು ಸಿನಿಮಾ ಸೂಪರ್‌ ಹಿಟ್ ಆಗಿತ್ತು. ಪುನೀತ್ ರಾಜಕುಮಾರ್ ಜೋಡಿಯಾಗಿ ‘ವೀರಕನ್ನಡಿಗ’ ಚಿತ್ರದೊಂದಿಗೆ ಕನ್ನಡಕ್ಕೆ ಬಂದ ಅವರು ‘ಗಂಡುಗಲಿ ಕುಮಾರರಾಮ’ ಚಿತ್ರದ ವಿಶಿಷ್ಠ ಪಾತ್ರದಲ್ಲಿ ನಟಿಸಿದ್ದರು.

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಹುಡುಗ ಹುಡುಗಿ’ ನಂತರ ಮತ್ತೆ ಅವರು ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ಐದಾರು ವರ್ಷಗಳಿಂದ ಕಿರುತೆರೆಯಲ್ಲಿ ಬ್ಯುಜಿಯಾಗಿರುವ ಅವರು ಹಿಂದಿ ಸರಣಿಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಕಾವ್ಯಾಂಜಲಿ, ಯೆಹ್ ಹೈ ಮೊಹಬತೇನ್‌, ನಾಗಿನ್‌ 3 ಹಿಂದಿ ಸರಣಿಗಳು ಅವರಿಗೆ ಹೆಸರು ತಂದುಕೊಟ್ಟಿವೆ. ಕೃಷ್ಣಾ ಕಾಟೇಜ್‌, ಕುಚ್ ತೋ ಹೈ, ರಾಗಿಣಿ ಎಂಎಂಎಸ್‌ ಅವರ ನಟನೆಯ ಹಿಂದಿ ಸಿನಿಮಾಗಳು. 2013ರಲ್ಲಿ ಉದ್ಯಮಿ ರೋಹಿತ್‌ ರೆಡ್ಡಿ ಅವರನ್ನು ವರಿಸಿದ್ದ ಅವರ ದಾಂಪತ್ಯಕ್ಕೀಗ ಪುತ್ರ ಜನಿಸಿದ್ದಾನೆ.

Categories
ಸಿನಿ ಸುದ್ದಿ

ಟಾಪ್‌ ಟಕ್ಕರ್‌ ಸಾಂಗ್‌ನಲ್ಲಿ ರಶ್ಮಿಕಾ ಸ್ಟೆಪ್‌- ಮೊದಲ ಹಿಂದಿ ಹಾಡಲ್ಲಿ ಕುಣಿದ ಕೊಡಗಿನ ಬೆಡಗಿ

ಸದ್ಯಕ್ಕೆ ರಶ್ಮಿಕಾ ಮಂದಣ್ಣ ಜೋರು ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ಅಭಿನಯದ “ಪೊಗರು” ಫೆಬ್ರವರಿ ೧೯ರಂದು ರಿಲೀಸ್‌ ಆಗುತ್ತಿದೆ. ಅದಷ್ಟೇ ಅಲ್ಲ, ಅತ್ತ ಬಾಲಿವುಡ್‌ನಲ್ಲೂ ರಶ್ಮಿಕಾ ಮಂದಣ್ಣ ಕೂಡ ಈಗಷ್ಟೇ ಮಿಂಚುತ್ತಿದ್ದಾರೆ. ಅದರೊಂದಿಗೆ ಈಗ ಅವರು ಬಾದ್‌ಷಾ ಅವರ ಟಾಪ್‌ ಟಕ್ಕರ್‌ ಸಾಂಗ್‌ನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಇದು ಅವರ ಮೊದಲ ಹಿಂದಿ ಸಾಂಗ್‌ ಆಗಿದ್ದು, ಸದ್ಯಕ್ಕೆ ಹಾಡಿನ ಟೀಸರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆಯೂ ಸಿಗುತ್ತಿದೆ. ಈ ಹಾಡಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ನ ಚೊಚ್ಚಲ ಚಿತ್ರ “ಮಿಷನ್‌ ಮಜ್ನು” ಚಿತ್ರದ ಸುರುವಿಗೆ ಮುನ್ನವೇ, ಅವರು ಹಿಂದಿ ವಿಡಿಯೋ ಸಾಂಗ್‌ನಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಸದ್ಯಕ್ಕೆ ಈ ಸುದ್ದಿ ಅವರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ ತಂದಿದೆ.


ಅದೇನೆ ಇರಲಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕರುನಾಡ ಕ್ರಶ್ ಅಂತೂ ಹೌದು. “ಕಿರಿಕ್ ಪಾರ್ಟಿ” ಮೂಲಕ ಸಿನಿ ಜಗತ್ತಿಗೆ ಎಂಟ್ರಿಯಾದ ಸಾನ್ವಿಯ ಲೈಫ್‌ ನೋಡ ನೋಡುತ್ತಿದ್ದಂತೆಯೇ ಬದಲಾಗಿದ್ದು ನಿಜ. ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದ ರಶ್ಮಿಕಾ, ನಂತರದ ದಿನಗಳಲ್ಲಿ ಕನ್ನಡದ ಸ್ಟಾರ್‌ ನಟರೊಂದಿಗೆ ಕಾಣಿಸಿಕೊಂಡರು.

ಮೆಲ್ಲನೆ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟೂ, ಅಲ್ಲೂ ಸೈ ಎನಿಸಿಕೊಂಡರು. ಅಲ್ಲಿಂದ ಬಾಲಿವುಡ್‌ನತ್ತ ಈಗ ಪಯಣ ಬೆಳೆಸಿದ್ದಾರೆ. ಅಲ್ಲಿ ಸಿನಿಮಾ ಮಾಡುವ ಮೊದಲು ಟಾಪ್‌ ಟಕ್ಕರ್‌ ಎಂಬ ಹಿಂದಿ ಸಾಂಗ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

Categories
ಸಿನಿ ಸುದ್ದಿ

ಆಸ್ಪತ್ರೆಗೆ ದಾಖಲಾದ ಸಂಜನಾ! ಲೈವ್‌ ಬಂದು ಬದುಕು ಬೇಸರವಾಗಿದೆ ಜೀವನ ಬೇಡ ಅಂದಿದ್ದರು

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲುವಾಸ ಅನುಭವಿಸಿದ್ದ ನಟಿ   ಸಂಜನಾ ಗಲ್ರಾನಿ,  ಕೆಲವು ತಿಂಗಳ ಕಾಲ ಜೈಲಲ್ಲಿದ್ದರು. ಕೊನೆಗೂ ಅವರು ಹೊರಬಂದಿದ್ದೂ ಆಯ್ತು. ಯಾರ ಮಾತಿಗೂ  ಸಿಗದ ಸಂಜನಾ ಕೆಲ ಕಾಲ  ಮನೆಯಲ್ಲಿದ್ದುಕೊಂಡೇ ರಿಲ್ಯಾಕ್ಸ್ ಆಗಿದ್ದರು. ಪೈಂಟಿಂಗ್ ಮಾಡಿಕೊಳ್ಳುತ್ತಾ, ಖುಷಿ ಖುಷಿಯಾಗಿ ಮನೆಯವರ ಜೊತೆ ಕಾಲ ಕಳೆಯುತ್ತಿದ್ದರು. ಈಗ ಸಂಜನಾ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಲೈವ್‌   ಬಂದು, ಬದುಕಿನ ಬಗೆಗೆ ಬೇಸರ ಆಗಿದೆ, ಜೀವನನೇ ಬೇಡ ಎಂಬಂತೆ  ಹೇಳಿಕೊಂಡಿದ್ದರು. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ನನ್ನ ಆರೋಗ್ಯದಲ್ಲಿ ವಿಪರೀತ ಏರುಪೇರಾಗಿದೆ ಎಂದಿದ್ದರು.

ಕೆಲ ಹೊತ್ತಿನ ಬಳಿಕ ಅವರನ್ನು  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ  ಎಂಬ ಸುದ್ದಿ ಬಂದಿದೆ. ಸದ್ಯಕ್ಕೆ ಸಂಜನಾ ಗಲ್ರಾನಿ  ಆಸ್ಪತ್ರೆಗೆ ಸೇರಿದ್ದು ಯಾಕೆ ಎಂಬ ಮಾಹಿತಿ ತಿಳಿದಿಲ್ಲ. ಆಸ್ಪತ್ರೆಯಿಂದಲೇ ಲೈವ್ ನಲ್ಲಿ ಮಾತನಾಡಿರುವ ಇವರು,  ನನ್ನ ಆರೋಗ್ಯ ಈಗ ಸುಧಾರಿಸಿದೆ ಎಂದು ಹೇಳಿಕೊಂಡಿದ್ದಾರೆ. ಅದೇನೆ ಇರಲಿ, ಸಂಜನಾ ಜೈಲಿನಿಂದ ಹೊರಬಂದ ಬಳಿಕ ಮಾತನಾಡಿದ್ದು, ಆಸ್ಪತ್ರೆಗೆ ಸೇರಿದ್ದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

Categories
ಸಿನಿ ಸುದ್ದಿ

ಶುರುವಾಯ್ತು ರಶ್ಮಿಕಾ ಹಿಂದಿ ಸಿನಿಮಾ! ಮಿಷನ್ ಮಜ್ನೂ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ

ಕನ್ನಡತಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಬೇಡಿಕೆಯ ನಟಿ. ಇನ್ನೂ ಒಂದು ಮೆಟ್ಟಿಲು ಹತ್ತಿರುವ ಅವರೀಗ ಬಾಲಿವುಡ್ ಹಿರೋಯಿನ್‌! ಶಂತನು ಬಾಗ್ಚಿ ನಿರ್ದೇಶನದ ಅವರ ಹಿಂದಿ ಸಿನಿಮಾ ‘ಮಿಷನ್ ಮಜ್ನೂ’ ಇಂದು ಚಿತ್ರೀಕರಣ ಆರಂಭಿಸಿದೆ. ‘ಕಪೂರ್ ಅಂಡ್ ಸನ್ಸ್‌’, ‘ಏಕ್ ವಿಲನ್‌’ ಸಿನಿಮಾಗಳ ಖ್ಯಾತಿಯ ಸಿದ್ಧಾರ್ಥ್ ಮಲ್ಹೋತ್ರಾ ಚಿತ್ರದ ಹೀರೋ.

ಇಂದು ಚಿತ್ರಕ್ಕೆ ಚಾಲನೆ ಸಿಕ್ಕಿದ್ದು ನಾಯಕ – ನಾಯಕಿ ಸಿದ್ಧಾರ್ಥ್ ಮತ್ತು ರಶ್ಮಿಕಾ ಸ್ಕ್ರಿಪ್ಟ್‌ ಪೇಪರ್‌ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಎಪತ್ತರ ದಶಕದ ಹಿನ್ನೆಲೆಯ ಕತೆ ಚಿತ್ರದಲ್ಲಿರುತ್ತದೆ. ನೈಜ ಘಟನೆಯನ್ನು ಆಧರಿಸಿ ಹೆಣೆದಿರುವ ಕತೆಯಲ್ಲಿ ಸಿದ್ಧಾರ್ಥ್‌ ರಾ  ಏಜೆಂಟ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಗೂಢಚರ್ಯೆಗೆ ಸಂಬಂಧಿಸಿದಂತಹ ಪ್ರಮುಖ ಅಂಶವೊಂದು ಹೇಗೆ ಎರಡು ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರ ಸುತ್ತ ಕಥಾಹಂದರ ಹೆಣೆಯಲಾಗಿದೆ.

ಪರ್ವೀಜ್ ಶೇಖ್‌, ಅಸೀಮ್ ಅರೋರಾ, ಸುಮಿತ್ ಬತೇಜಾ ಚಿತ್ರಕಥೆ ಹೆಣೆದಿದ್ದಾರೆ. “ವಿಶೇಷ ತಂಡದೊಂದಿಗೆ ಅಪರೂಪದ ಕತೆಯ ಸಿನಿಮಾ ಶುರುವಾಗಿದೆ” ಎಂದು ನಟ ಸಿದ್ಧಾರ್ಥ್ ಟ್ವೀಟ್ ಮಾಡಿ ಫೋಟೋ ಹಂಚಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಗೋವಾ ಕನ್ನಡಿಗನ ಸಲಗ ಪ್ರೀತಿ- ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡ ದುನಿಯಾ ವಿಜಯ್ ಅಭಿಮಾನಿ

ಭಾವುಕರಾದ ವಿಜಯ್‌ ಅಭಿಮಾನಿ ಜೊತೆ ವಿಡಿಯೋ ಕಾಲ್‌ ಮಾತುಕತೆ

ಅದೇನೋ ಗೊತ್ತಿಲ್ಲ. ಸಿನಿಮಾ ಸ್ಟಾರ್ಸ್‌ ಅಂದರೆ, ಅದೊಂದು ರೀತಿ ಎಲ್ಲಿಲ್ಲದ ಅಭಿಮಾನ. ಅಭಿಮಾನಿಗಳು ತಮ್ಮ ತಮ್ಮ ಹೀರೋಗಳನ್ನು ಆರಾಧಿಸುವ ಪರಿ ಬಗ್ಗೆ ಹೇಳುವುದು ಕಷ್ಟವೇ. ಹೌದು, ಇಲ್ಲೀಗ ಹೇಳಹೊರಟಿರುವ ವಿಷಯ, “ದುನಿಯಾ” ವಿಜಯ್‌ ಅಭಿಮಾನಿಯೊಬ್ಬನ ಪ್ರೀತಿಯ ಬಗ್ಗೆ. ಉತ್ತರ ಕರ್ನಾಟಕ ಮೂಲದ ಹನುಮಂತ ಎಂಬ ಹುಡುಗ, ಗೋವಾದಲ್ಲಿರುವ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಅವನಿಗೆ “ದುನಿಯಾ” ವಿಜಯ್‌ ಅಂದರೆ, ತುಂಬು ಪ್ರೀತಿ. ಅಪ್ಪಟ ಅಭಿಮಾನಿಯೂ ಹೌದು. ವಿಜಯ್‌ ಅವರಂತೆಯೇ ಹನುಮಂತ ಕೂಡ ತನ್ನ ತಂದೆ-ತಾಯಿಯನ್ನು ಅಷ್ಟೇ ಪ್ರೀತಿಯಿಂದ ಆರಾಧಿಸುತ್ತಾನೆ. ತಮ್ಮ ಪ್ರೀತಿಯ ಹೀರೋ “ದುನಿಯಾ” ವಿಜಯ್‌ ಅವರ ಚೊಚ್ಚಲ ನಿರ್ದೇಶನದ “ಸಲಗ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿ,”ಸಲಗ” ಟೈಟಲ್‌ ಅನ್ನು ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.

ಈ ಅಭಿಮಾನಿಯ ವಿಷಯ ತಿಳಿಯುತ್ತಿದ್ದಂತೆಯೇ “ದುನಿಯಾ” ವಿಜಯ್‌ ಗೋವಾದಲ್ಲಿರುವ ಅಭಿಮಾನಿ ಹನುಮಂತುಗೆ ವಿಡಿಯೋ ಕಾಲ್‌ ಮಾಡಿ, ಪ್ರೀತಿಯಿಂದ ಮಾತಾಡಿದ್ದಾರೆ. ವಿಜಯ್‌ ವಿಡಿಯೋ ಕಾಲ್‌ ಮಾಡುತ್ತಿದ್ದಂತೆಯೇ, ಆ ಅಭಿಮಾನಿ ಹನುಮಂತು, ಖುಷಿಗೊಂಡಿದ್ದಾರೆ. ಆನಂದಭಾಷ್ಪ ಸುರಿಸಿದ್ದಾರೆ. ಈ ವೇಳೆ ವಿಜಯ್‌ ಕೂಡ ಭಾವುಕರಾಗಿ, ತಮ್ಮ ಅಭಿಮಾನಕ್ಕೆ ಮೂಕನಾಗಿದ್ದೇನೆ ಎಂದು ಹೇಳಿದ್ದಾರೆ. ನಿಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಒಳ್ಳೆಯದಾಗುತ್ತೆ ಎಂದು ಹನುಮಂತನಿಗೆ ಶುಭಕೋರಿದ್ದಾರೆ. ಸದ್ಯಕ್ಕೆ ಈ ವಿಡಿಯೋ ವೈರಲ್‌ ಆಗುತ್ತಿದೆ.

 

Categories
ಸಿನಿ ಸುದ್ದಿ

ಸಿನಿಲಹರಿ ನೂರನೇ ದಿನಕ್ಕೆ ಕೇಕ್‌ ಕತ್ತರಿಸಿ ಶುಭ ಹಾರೈಸಿದ ನಟ ಸಂಚಾರಿ ವಿಜಯ್‌

ವೀರಕಪುತ್ರ ಶ್ರೀನಿವಾಸ್‌ , ಮಂಸೋರೆ, ಹರೀಶ್‌ ಎಂ.ಡಿ ಹಳ್ಳಿ, ನಟಿಯರಾದ ಜಯಶ್ರೀ, ಅನುಷಾ ರೋಡ್ರಿಗಸ್‌ ಸೇರಿ ಹಲವರು ಸಾಥ್

ಸಿನಿ ಲಹರಿ ಶುರುವಾಗಿ ನೂರು ದಿನ ಪೂರೈಸಿತು. ಎಷ್ಟು ಬೇಗ ಆದವು ದಿನಗಳು ಅಂತೆನಿಸುತ್ತಿದೆ. ಹಾಗಂತ, ಇದೇನು ದೊಡ್ಡ ಸಾಧನೆ ಅಲ್ಲ. ಅದರೂ, ನಮ್ಮ ಮಟ್ಟಿಗೆ ಇದು ಒಂದೊಳ್ಳೆಯ ಹೆಜ್ಜೆ. ಕಾರಣ, ಮುಂದಿನ ಯೋಜನೆ, ಯೋಚನೆಗೆ ಇದು ಮಹತ್ತರದ ಕ್ಷಣ. ಅದೇ ಕಾರಣಕ್ಕೆ ʼಸಿನಿಲಹರಿʼ ಹಿತೈಷಿಗಳೇ ಸಿನಿಲಹರಿ ಸ್ಟುಡಿಯೋ ದಲ್ಲಿ ಸಿಂಪಲ್‌ ಆಗಿ ಆಯೋಜಿಸಿದ್ದ ಸಣ್ಣದೊಂದು ಸೆಲೆಬ್ರೇಷನ್‌ ದೊಡ್ಡದಾಗಿಯೇ ನಡೆದಿದ್ದು ವಿಶೇಷ. ಇದೊಂದು ಪೂರ್ವಯೋಜಿತ ಕಾರ್ಯಕ್ರವಲ್ಲ. ಅವಸರದ ಕಾರ್ಯಕ್ರಮ. ಆದರೂ ಸಿನಿ ಲಹರಿ ಮೆಲಿನ ಪ್ರೀತಿಗೆ, ಕಾಳಜಿಗೆ ಸಿನಿಮಾ ರಂಗದ ದೊಡ್ಡ ತಂಡವೇ ಬಂದಿದ್ದು ನಮ್ಮ ಹೆಮ್ಮೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌, ನಮ್ಮ ಆಹ್ವಾನ ಗೌರವಿಸಿ ಬಂದಿದ್ದರು. ಅವರೇ ಕೇಕ್‌ ಕತ್ತರಿಸಿ, ಸಿನಿ ಲಹರಿಗೆ ಶುಭ ಹಾರೈಸಿದರು.

ಡಾ. ವಿಷ್ಣು ವರ್ಧನ್‌ ಅಭಿಮಾನಿಗಳ ಸಂಘದ ವೀರಕಪುತ್ರ ಶ್ರೀನಿವಾಸ್‌ , ನಟ ನಿಹಾಲ್‌,ನಿರ್ದೇಶಕರಾದ ಮಂಸೋರೆ, ಹರೀಶ್‌ ಎಂ.ಡಿ. ಹಳ್ಳಿ, ಹೃಷಿಕೇಶ್‌, ಕಿರಣ್‌, ರಾಜು ಪಾವಗಡ, ನಟಿಯರಾದ ಅನುಷಾ ರೋಡ್ರಿಗಸ್‌, ಅಂಜಲಿ ರಾಮಚಂದ್ರ, ಜಯಶ್ರೀ, “ಮಗಳು ಜಾನಕಿʼ ಧಾರಾವಾಹಿಯ ಖ್ಯಾತಿಯ ಸುಪ್ರಿಯಾ ರಾವ್‌, ನಿರಂಜನ್‌ ಕುಮಾರ್‌ ದಾವಣಗೆರೆ, ಯುವ ಪ್ರತಿಭೆ ವೈಶಾಖ್‌, ಸವಿನ್‌ ತೀರ್ಥಹಳ್ಳಿ, ಮತ್ತಿತರರು ಹಾಜರಿದ್ದು ಸಿನಿ ಲಹರಿಗೆ ಶುಭ ಹಾರೈಸಿದರು. ಸಿನಿ ಲಹರಿ ಸಿಇಓ ಕೃಷ ಪಿ. ಕೂಡ ಹಾಜರಿದ್ದು, ಮುಂದಿನ ಯೋಜನೆಯ ಬಗ್ಗೆ ವಿವರಿಸಿದರು. ಅದರ ಒಂದು ಫೋಟೋ ಝಲಕ್‌ ಇಲ್ಲಿದೆ.

Categories
ಸಿನಿ ಸುದ್ದಿ

ರಿಷಭ್‌ ಶೆಟ್ಟಿ ಹೀರೋ ಆಗಿ ಎಂಟ್ರಿ- ಅಶೋಕವನ ಎಸ್ಟೇಟ್‌ನಲ್ಲಿ ರಕ್ತಚರಿತ್ರೆ!

ಮಾರ್ಚ್ 5ಕ್ಕೆ ಹೀರೋ ಸಿನಿಮಾ ಬಿಡುಗಡೆ

ಕನ್ನಡದಲ್ಲೀಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿಗೆ ಈಗ ರಿಷಭ್‌ ಶೆಟ್ಟಿ ಅವರ ನಿರ್ಮಾಣದ “ಹೀರೋ” ಕೂಡ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್‌ 5 ರಂದು “ಹೀರೋ”ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ವಿಷಯವನ್ನು ಸ್ವತಃ ರಿಷಭ್‌ ಶೆಟ್ಟಿ ಅವರೇ ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಫಿಲಂ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗಿದೆ. ಎಂ. ಭರತ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು, ರಿಷಭ್‌ ಶೆಟ್ಟಿ ಇಲ್ಲಿ ಹೀರೋ ಆಗಿದ್ದರೆ, ಅವರಿಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಸೇರಿದಂತೆ ಹಲವರು ಇದ್ದಾರೆ.


ಈ “ಹೀರೋ” ಬಗ್ಗೆ ಹೇಳುವುದಾದರೆ, ಅಶೋಕ ವನ ಎಸ್ಟೇಟ್‌ ನಲ್ಲಿ ನಡೆಯುವ ಒಂದು ಕಥೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಇದು. ವಿಶೇಷವೆಂದರೆ, ಲಾಕ್‌ಡೌನ್‌ ಸಮಯದಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ. ಎಲ್ಲರೂ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿದ್ದರೆ, ರಿಷಭ್‌ ಶೆಟ್ಟಿ, ಆ ವೇಳೆ ಚಂದದ ಕಥೆ ಮಾಡಿಕೊಂಡು, ಸ್ಕ್ರಿಪ್ಟ್‌ ಬರೆದು, ಚಿತ್ರೀಕರಣಕ್ಕೆ ಅಣಿಯಾದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ರಿಷಭ್‌ ಶೆಟ್ಟಿ ಬ್ಯಾನರ್‌ನಲ್ಲಿ ಇದೇ ಮೊದಲ ಸಲ ರಕ್ತಗತವಾದ ಅಂಶಗಳಿರುವ ಸಿನಿಮಾ ಎಂಬುದು. ಹೌದು, ಇಲ್ಲಿ ಗನ್‌ಗಳ ಸದ್ದಿದೆ, ರಕ್ತದ ಕಲೆಗಳೂ ಕಾಣಿಸಿಕೊಳ್ಳುತ್ತವೆ. ಬಹುತೇಕ ಒಂದು ಕಾಡು, ಅಶೋಕವನ ಎಂಬ ಎಸ್ಟೇಟ್‌ ಸುತ್ತಲೇ ಸುತ್ತುವ ಕಥೆ ಇದಾಗಿದೆ. ರಿಷಭ್‌ ಆಗಾಗ ಪ್ರಯತ್ನಕ್ಕೆ ಇಳಿಯುತ್ತಲೇ ಇರುತ್ತಾರೆ. ಅಂಥದ್ದೊಂದು ಪ್ರಯತ್ನ “ಹೀರೋ” ಮೂಲಕ ಆಗಿದೆ ಎಂಬುದು ಚಿತ್ರತಂಡದ ಮಾತು. ಅದೇನೆ ಇರಲಿ, ಇಲ್ಲಿ “ಹೀರೋ” ಯಾರು? ಈ ಪ್ರಶ್ನೆಗೆ ಮಾರ್ಚ್‌ 5ರವರೆಗೆ ಕಾಯಲೇಬೇಕು.

error: Content is protected !!