Categories
ಸಿನಿ ಸುದ್ದಿ

ವೈರಲ್ ಆಯ್ತು ಬೇಬಿ ಬಾಹುಬಲಿ ಫೋಟೋ !

ಈ ತನ್ವಿಯೇ ನೋಡಿ ಅಲ್ಲಿ ಕಂಡ ಮಹೇಂದ್ರ ಬಾಹುಬಲಿ

ರಾಜ್‌ಮೌಳಿ ನಿರ್ದೇಶನದ ‘ಬಾಹುಬಲಿ’ (2015) ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದ ಸಿನಿಮಾ. ಪ್ರಭಾಸ್‌, ರಾಣಾ ದಗ್ಗುಬಾಟಿ, ರಮ್ಯಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ ಬಾಟಿಯಾ ಸೇರಿದಂತೆ ಈ ಚಿತ್ರಕ್ಕೆ ಬಣ್ಣ ಹಚ್ಚಿದ ಸಣ್ಣ ಪುಟ್ಟ ಕಲಾವಿದರೂ ಕೂಡ ಮನೆ ಮಾತಾದರು. ಕೆಲವರಂತೂ ರಾತ್ರೋ ರಾತ್ರಿ ಸ್ಟಾರ್ ಆದರು. ಮೊದಲೇ ಸ್ಟಾರ್ ಆಗಿದ್ದ ಪ್ರಭಾಸ್ ಸೂಪರ್ ಸ್ಟಾರ್ ಆಗಿದ್ದು ನಿಮಗೂ ಗೊತ್ತು. ಇದರಾಚೆ ಇಲ್ಲಿ ಇನ್ನೊಂದು ಪಾತ್ರವೂ ಕೂಡ ಬಾಹು ಬಲಿ ಸಿನಿಮಾ ನೋಡಿದವರಿಗೆಲ್ಲ ನಿದ್ದೆ ಗೆಡಿಸಿತ್ತು. ಅದೇ ಬೇಬಿ ಬಾಹುಬಲಿ ! ಆ ಪಾತ್ರದಲ್ಲಿ ಕಾಣಸಿಕೊಂಡಿದ್ದು ಹುಡುಗ ಅಲ್ಲ, ಬೇಬಿ ತನ್ವಿ. ಆ ಪುಟಾಣಿಗೆ ಈಗ ಏಳು ವರ್ಷ. ಆಕೆಯ ಫೋಟೋ ಈಗ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಿಸ್ಮತಿ ಸಂಸ್ಥಾನದ ಆಳ್ವಿಕೆಯ ಕಾಲ. ಶಿವಗಾಮಿ ( ನಟಿ ರಮ್ಯ ಕೃಷ್ಣ) ದುಷ್ಟ ಸೈನಿಕರಿಂದ ತಪ್ಪಿಸಿಕೊಂಡು ಹೋಗುವ ಸಂದರ್ಭ. ತನ್ನ ಪುತ್ರ ಮಹೇಂದ್ರ ಬಾಹುಬಲಿ ಸಮೇತ ನದಿ ದಾಟುತ್ತಿದ್ದಾಗ, ನದಿಯ ಪ್ರವಾಹ ಹೆಚ್ಚಾಗಿ ಮುಳುಗಿ ಹೋಗುವಾಗ, ತನ್ನ ಪುತ್ರನನ್ನು ಒಂದು ಕೈಯಲ್ಲಿ ಎತ್ತಿ ಹಿಡಿದು ರಕ್ಷಿಸುವಂತೆ ಶಿವನನ್ನು ಕೋರುತ್ತಾಳೆ. ಕೊನೆಗೆ ಆ ಮಗು ನೀರಿನಲ್ಲಿ ತೇಲಿ ಹೋಗಿ, ಬದುಕುಳಿಯುವ ಕತೆ ಸಿನಿಮಾ ನೋಡಿದವರಿಗೆಲ್ಲ ಗೊತ್ತು. ಉಳಿದಂತೆ ಇಲ್ಲಿನ ಇಂಟರೆಸ್ಟಿಂಗ್ ಸಂಗತಿ ಏನಂದ್ರೆ, ಶಿವಗಾಮಿ ಅಂದ್ರೆ ರಮ್ಯ ಕೃಷ್ಣ ಕೈಯಲ್ಲಿದ್ದ ಮಗು ಯಾರು ಅಂತ. ಮಗುವೇ ತನ್ವಿ.

ಸಿನಿಮಾ ಬಂದ ಕಾಲಕ್ಕೆ ಈ ತನ್ವಿ ಇನ್ನು ಪುಟಾಣಿ. ಈಗ ಆಕೆಗೆ ಏಳು ವರ್ಷ. ಪೋಷಕರೊಂದಿಗೆ ತೆಗೆಸಿಕೊಂಡ ಫೋಟೋಗಳು ಸೋಷಲ್ ಮೀಡಿಯಾಕ್ಕೆ ಬರುತ್ತಿದ್ದಂತೆ ವೈರಲ್ ಆಗಿವೆ. ತನ್ವಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಕಾರಣ ಬಾಹುಬಲಿ ಚಿತ್ರದಲ್ಲಿದ್ದ ಅದೊಂದು ರೋಚಕ ದೃಶ್ಯ. ಕೆಲವೊಮ್ಮೆ ಕೆಲವರಿಗೆ ಮಹತ್ವದ ತಿರುವುಗಳಉ ಅರಿವಿಲ್ಲದೆ ಬಂದು ಹೋಗುತ್ತವೆ ಎನ್ನುವ ಮಾತು ತನ್ವಿ ವಿಚಾರಕ್ಕೂ ಅನ್ವಯ. ತನ್ವಿ ಈ ಬಣ್ಣದ ಜಗತ್ತಿನ ಬಗ್ಗೆ ತಿಳಿದುಕೊಳ್ಳುವಷ್ಟು ದೊಡ್ಡವಳಾಗುವ ಮುನ್ನವೇ ಸ್ಟಾರ್.

Categories
ಸಿನಿ ಸುದ್ದಿ

ದರ್ಶನ್‌ ಫ್ಯಾನ್ಸ್‌ಗೆ ಇದು ಸಂಭ್ರಮದ ಸುದ್ದಿ – ಮೆಜೆಸ್ಟಿಕ್‌ ಚಿತ್ರ ಬಂದು ಹತ್ತೊಂಬತ್ತು ವರ್ಷ

ಸಂತಸದಲ್ಲಿ ಮಿಂದೆದ್ದ ದಚ್ಚು ಹುಡುಗರು

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಹೌದು, ದರ್ಶನ್‌ ಅವರ “ರಾಬರ್ಟ್‌” ಸಿನಿಮಾ ಬಿಡುಗಡೆ ದಿನವನ್ನು ಈಗಾಗಲೇ ಅನೌನ್ಸ್‌ ಮಾಡಿದೆ. ತೆಲುಗಿನಲ್ಲೂ ಚಿತ್ರ ತೆರೆಗೆ ಬರುತ್ತಿದೆ. ಇದು ಅವರ ಫ್ಯಾನ್ಸ್‌ಗೆ ದೊಡ್ಡ ಖುಷಿಯ ವಿಷಯವೆಂದರೆ, ಇನ್ನೊಂದು ಸಂತಸದ ಸುದ್ದಿಯೂ ಇದೆ. ಹೌದು, ದರ್ಶನ್‌ ಅಭಿನಯದ “ಮೆಜೆಸ್ಟಿಕ್‌” ಚಿತ್ರ ಬಿಡುಗಡೆಯಾಗಿ ಇಂದಿಗೆ ೧೯ ವರ್ಷಗಳು ಸಂದಿವೆ.

“ಮೆಜಸ್ಟಿಕ್‌” ಅವರ ಬದುಕಿನ ದಿಕ್ಕನ್ನೇ ಬದಲಿಸಿದ ಚಿತ್ರ. “ಮೆಜೆಸ್ಟಿಕ್‌” ಬಳಿಕ ಅವರು ಇದುವರೆಗೂ ತಿರುಗಿ ನೋಡಿದವರೇ ಅಲ್ಲ, ಅಲ್ಲಿಂದ ಬಣ್ಣದ ಲೋಕದಲ್ಲಿ ಮಿಂದೆದ್ದ ದರ್ಶನ್‌ ಈಗ‌ ಕನ್ನಡದ ಪಾಲಿಗೆ ಬಹುದೊಡ್ಡ ಸ್ಟಾರ್‌ನಟ. ಕ್ರಮೇಣ ಒಳ್ಳೆಯ ಚಿತ್ರಗಳ ಮೂಲಕವೇ ಅವರು ಸದ್ದು ಮಾಡುತ್ತಲೇ ಬಂದರು. “ಕಲಾಸಿಪಾಲ್ಯ”, “ಗಜ”, “ಚಿಂಗಾರಿ”, “ಬೃಂದಾವನ”, “ಸರ್ದಾರ್”, “ಜಗ್ಗುದಾದ”, “ದಾಸ” ಹೀಗೆ ಸಾಕಷ್ಟು ಹಿಟ್ ಚಿತ್ರಗಳನ್ನು ಕನ್ನಡ ಕಲಾರಸಿಕರಿಗೆ ನೀಡಿದ್ದಾರೆ. “ಮೆಜೆಸ್ಟಿಕ್‌” ಪಕ್ಕಾ ಮಾಸ್‌ ಸಿನಿಮಾ. ಅಲ್ಲಿಂದಲೇ ದರ್ಶನ್‌ ಅವರಿಗೆ ಮಾಸ್‌ ಫ್ಯಾನ್ಸ್‌ ಹುಟ್ಟುಕೊಂಡರು.

ಈಗ ಎಲ್ಲಿ ನೋಡಿದರೂ ದರ್ಶನ್‌ ಅವರ ಅಭಿಮಾನಿಗಳದ್ದೇ ಸುದ್ದಿ. ಅದರಲ್ಲೂ ದರ್ಶನ್‌ ಅಂದಾಕ್ಷಣ ನೆನಪಾಗೋದೇ ಮಾಸ್‌ ಫೀಲ್.‌ ಸದಾ ಸದಭಿರುಚಿಯ ಚಿತ್ರ ಕೊಡುತ್ತ ಬಂದಿರುವ ದರ್ಶನ್‌ ಅವರ “ಮೆಜೆಸ್ಟಿಕ್‌” ಚಿತ್ರದ ಬಗ್ಗೆಯೇ ಈಗ ಎಲ್ಲರ ಮಾತು. ಮತ್ತೆ ಮತ್ತೆ “ಮೆಜಸ್ಟಿಕ್‌” ನೆನಪಾಗುತ್ತೆ ಅಂದರೆ, ಅದರೊಳಗಿರುವ ಕಂಟೆಂಟ್.‌

ಅದೇನೆ ಇರಲಿ, ಇಂಥದ್ದೊಂದು ಸಿನಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ ದರ್ಶನ್‌ ಇಂದಿಗೂ ಮಾಸ್‌ ಹೀರೋ ಆಗಿಯೇ ಗಟ್ಟಿನೆಲೆ ಕಂಡಿದ್ದಾರೆ. ಅಂದಹಾಗೆ, ಪಿ.ಎನ್.ಸತ್ಯ ನಿರ್ದೇಶಿಸಿದ ಸಿನಿಮಾ ಇದು. ರಾಮಮೂರ್ತಿ, ಬಾ.ಮ.ಹರೀಶ್‌ ಇದರ ಹಿಂದೆ ಇದ್ದು, ತಯಾರು ಮಾಡಿದವರು.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಕೋಟಿಗೊಬ್ಬನ ಹಾಡು ಪಾಡು- ಮಾರ್ಚ್‌ 28ಕ್ಕೆ ಹಾಡುಗಳ ಬಿಡುಗಡೆ

ಸಾಂಗ್‌ ಎದುರು ನೋಡುತ್ತಿರುವ ಫ್ಯಾನ್ಸ್‌ 

ಕೋಟಿಗೊಬ್ಬ ಅಂದಾಕ್ಷಣ, ನೆನಪಾಗೋದೇ ಡಾ.ವಿಷ್ಣುವರ್ಧನ್.‌ ಈಗ ಅದೇ ಕೋಟಿಗೊಬ್ಬ ಹೆಸರಲ್ಲಿ ಸುದ್ದಿಯಾದವರು ಕಿಚ್ಚ ಸುದೀಪ್.‌ ಹೌದು, ಸುದೀಪ್‌ ಈಗಾಗಲೇ “ಕೋಟಿಗೊಬ್ಬ” ಸೀರೀಸ್‌ನಲ್ಲಿ ಸಿನಿಮಾ ಮಾಡಿರುವ ಸುದೀಪ್‌, “ಕೋಟಿಗೊಬ್ಬ ೩” ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.

ಅದಕ್ಕೆ ಕಾರಣ, ಈಗಾಗಲೇ ಸಾಕಷ್ಟು ಸುದ್ದಿಯಲ್ಲಿರೋದು. ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾಗಳ ಸ್ಟಾರ್‌ ನಟ ಎನಿಸಿರುವ ಸುದೀಪ್‌ ಅವರ “ಕೋಟಿಗೊಬ್ಬ” ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಮಾ.೨೮ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಹೌದು, ಸೂರಪ್ಪ ಬಾಬು ನಿರ್ಮಾಣದ “ಕೋಟಿಗೊಬ್ಬ ೩” ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರದ ಹಾಡುಗಳನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ, ಟ್ವೀಟ್‌ ಮೂಲಕ ಚಿತ್ರತಂಡ ಹಾಡುಗಳ ಬಿಡುಗಡೆ ಕುರಿತು ಹೇಳಿಕೊಂಡಿದೆ.

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ಸಿನಿಮಾ ವಿಚಾರದಲ್ಲಿ ನಟ ನಿರೂಪ್ ಭಂಡಾರಿ ಮನಸ್ಸಲೇ ಬೈದು ಕೊಂಡಿದ್ದಾರಂತೆ.. ಅದು ಯಾಕೆ?

ಸುದೀಪ್ ಜತೆಗೆ ಅಭಿನಯಿಸುವ ಸಲುವಾಗಿ..


ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ದಲ್ಲಿ ನಟ ನಿರೂಪ್ ಭಂಡಾರಿ‌ಕೂಡ ಇದ್ದಾರೆ. ಈಗಾಗಲೇ ಅವರು ಸಂಜೀವ್ ಗಂಬೀರ್ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ. ಈಗಾಗಲೇ ಆ ಪಾತ್ರ್ ಚಿತ್ರೀಕರಣ ಕೂಡ ಮುಗಿಸಿಕೊಂಡು ಬಂದಿದ್ದಾರೆ. ಭಾನುವಾರ ಅದರ ಮೊದಲ ಸುದ್ದಿಗೋಷ್ಟಿಯಲ್ಲಿ ನಟ ನಿರೂಪ್ ಭಂಡಾರಿ ಮಾತನಾಡುತ್ತಾ, ತಾವು ಪಾತ್ರಕ್ಕಾಗಿ ಮನಸ್ಸಲ್ಲೇ ಬೈದುಕೊಂಡ‌ ಕ್ಷಣ ಗಳನ್ನು ಹೇಳಿಕೊಂಡು ಅಚ್ಚರಿ ಮೂಡಿಸಿದರು.


‘ ನಂಗೆ ಈ ಪಾತ್ರ ಸಿಗುತ್ತೆ ಅಂತಂದುಕೊಂಡಿರಲಿಲ್ಲ‌ . ಸಿನಿಮಾ ಕತೆ ಬರೆಯಲು ಅನೂಪ್ ಶುರುಮಾಡಿ ದಾಗನಿಂದ ಅವರ ಜತೆ ಆಗಾಗ ಭೇಟಿ ಮಾಡುತ್ತಿದ್ದೆ. ಆದರೆ ನಂಗೆ ಅದರಲ್ಲಿ ಪಾತ್ರ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಕೊನೆಗೊಂದು ದಿನ ನಾನು ಅಭಿನಯಿಸಬೇಕಿದ್ದ ಪಾತ್ರಕ್ಕೆ ಬೇರೆ ಬೇರೆ ಆ್ಯಕ್ಟರ್ ಅವರನ್ನು ಹುಡುಕುತ್ತಿದ್ದರು. ಅನೇಕ ಸ್ಟಾರ್ ಹೆಸರು ಕೇಳಿಬಂದಿದ್ದವು. ಹಾಗೆಲ್ಲ ಬೇರೆ ಸ್ಟಾರ್ ಹೆಸರು ಕೇಳಿದಾಗೆಲ್ಲ ನಾನು ಮನಸ್ಸಲೇ ಬೈದುಕೊಳ್ಳುತ್ತಿದ್ದೆ. ಕೊನೆಗೆ ಒಂದು ದಿನ ಆ ಪಾತ್ರ‌ನಂಗೆ ಬಂತು. ಆಗ ಕೊನೆಗೂ ನೆಮ್ಮದಿ ಸಿಕ್ಕಿತು’ ಎಂದರು ನಟ ನಿರೂಪ್ ಭಂಡಾರಿ.

ನಿರೂಪ್ ಇಷ್ಟಕ್ಕೂ ಆ ಪಾತ್ರಕ್ಕಾಗಿ ಆ ರೀತಿ ಪರದಾಡಿದ್ದು ಯಾಕೆ? : ಸುದೀಪ್ ಸರ್ ಸಿನಿಮಾ. ಬಿಗ್ ಬಜೆಟ್ ಸಿನಿಮಾ.‌ಅವರೊಂದಿಗೆ ಅಂತಹದೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತಲ್ವಾ ಅಂತ ‌ಅದೇ ಕಾರಣಕ್ಕೆ ಈ ಸಿನಿಮಾಕ್ಕಾಗಿ ಈ ರೀತಿ ಪರದಾಡಿದ್ದು ಅಂತ ಸ್ಪಷ್ಟನೆ ಕೊಟ್ಟರು ನಟ ನಿರೂಪ್ ಭಂಡಾರಿ.

Categories
ಸಿನಿ ಸುದ್ದಿ

ಹೊಸ ಪ್ರತಿಭೆಗಳ ರಿವೈಂಡ್ ರೆಡಿ

ಟೀಸರ್ ಗೆ  ಭರಪೂರ ಮೆಚ್ಚುಗೆ

ಕನ್ನಡ ಚಿತ್ರರಂಗದಲ್ಲಿ ಈಗ ಬಿಡುಗಡೆಗೆ ಸಾಲು ನಿಂತಿರುವ ಚಿತ್ರಗಳ ಪಟ್ಟಿ ದೊಡ್ಡದ್ದೇ ಒದೆ. ಆ ಸಾಲಿಗೆ ‘ರಿವೈಂಡ್’ ಸಿನಿಮಾವೂ ಸೇರಿದೆ.
ಇದು ಬಹುತೇಕ ಹೊಸಬರ ಚಿತ್ರ.

ಈ ಚಿತ್ರ ಕಥೆ ಬಗ್ಗೆ ಹೇಳೋದಾದರೆ, ಹೀರೋ ಇಲ್ಲಿ ಒಬ್ಬ ರಿಪೋರ್ಟರ್. ಒಂದಷ್ಟು ಸಮಸ್ಯೆಗಳು ಅವನಿಗೂ ಎದುರಾಗುತ್ತವೆ. ಅದರಿಂದ ಅವನ ಫ್ಯಾಮಿಲಿಯೂ ಸಿಲುಕುತ್ತದೆ. ನಂತರ ಹೇಗೆ ಅವನು ತನ್ನ ಫ್ಯಾಮಿಲಿಯನ್ನು ಕಷ್ಟಗಳಿಂದ ಪಾರು ಮಾಡ್ತಾನೆ ಅನ್ನೋದು ಕಥೆ.

ಇದೊಂದು ಥ್ರಿಲ್ಲರ್ ಸಿನಿಮಾ. ಈ ಪ್ರಯತ್ನಕ್ಕೆ ಎಲ್ಲರ ಸಹಕಾರವಿತ್ತು ಚೆನ್ನಾಗಿತ್ತು ಎಂದು ನಟ ಧರ್ಮ ಹೇಳಿಕೊಂಡರು.
ಇನ್ನು, ಚಿತ್ರದ ಹೀರೋ ತೇಜ್ ತಮ್ಮ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ. ‘ಯಂಗ್ ಸ್ಟಾರ್ಸ್ ಸೇರಿ ಈ ಪ್ರಯತ್ನ ಮಾಡಿದ್ದೇವೆ, ಕನ್ನಡ, ತಮಿಳು ಭಾಷೆಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ ಎಂಬ ವಿವರ ಕೊಟ್ಟರು.

ಅಂದಹಾಗೆ, ಈ ಚಿತ್ರಕ್ಕೆ ತೇಜ್ ಅವರದೇ ನಿರ್ದೇಶನವಿದೆ. ವಿನೋದ್ ನಿರ್ಮಾಪಕರು.
ಸದ್ಯ ಟೀಸರ್ ಬಿಡುಗಡೆಯಾಗಿದ್ದು,

ಏಪ್ರಿಲ್ 16 ರಂದು ರಿಲೀಸ್ ಆಗಲಿದೆ. ಚಿತ್ರದಲ್ಲಿ ಚಂದನ, ಹಿರಿಯ ನಟ ಸುಂದರ್ ರಾಜ್, ಸಂದೀಪ್ , ಮಲಾನಿ ಇತರರು ಇದ್ದಾರೆ.

Categories
ಸಿನಿ ಸುದ್ದಿ

‘ಪೊಗರು ‘ಅಂದ್ರೆ ಪಕ್ಕಾ ಎಂಟರ್ ಟೈನರ್ ಮೂವೀ- ನಟಿ ರಶ್ಮಿಕಾ ಮಂದಣ್ಣ ಇಷ್ಟೊಂದು ಭರವಸೆ ಕೊಟ್ಟಿದ್ದೇಕೆ….?

ಅಲ್ಲಿ ಸ್ಟುಡೆಂಟ್ – ಇಲ್ಲಿ ಟೀಚರ್, ಬಡ್ತಿ ಪಡೆದ್ರು ಕಿರಿಕ್ ಹುಡುಗಿ ಸಾನ್ವಿ

ಪೊಗರು ಅಂದ್ರೆ ಕ್ಲಾಸ್, ಪೊಗರು ಅಂದ್ರೆ ಮಾಸ್, ಪೊಗರು ಅಂದ್ರೆ  ರೋಮ್ಯಾಂಟಿಕ್, ಪೊಗರು ಅಂದ್ರೆ ಸೆಂಟಿಮೆಂಟ್, ಪೊಗರು ಅಂದ್ರೆ ಆಕ್ಷನ್, ಪೊಗರು ಅಂದ್ರೆ ಕಾಮಿಡಿ, ಪೊಗರು ಅಂದ್ರೆ ಥ್ರಿಲ್, ಟೋಟಲಿ ‘ಪೊಗರು ‘ ಅಂದ್ರೆ ಪಕ್ಕಾ ಎಂಟರ್ ಟೈನರ್ ಮೂವೀ…

– ಚಿತ್ರದ ನಾಯಕಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ‘ಪೊಗರು’ ಚಿತ್ರದ ಬಗ್ಗೆ ಮೂಡಿಸಿದ ಕುತೂಹಲ ಇದು‌.

ರಶ್ಮಿಕಾ ನಾಯಕಿಯಾಗಿ ನಟಿಸಿರುವ ಈ ಚಿತ್ರ ಫೆ.19 ಕ್ಕೆ ರಿಲೀಸ್ ಆಗುತ್ತಿದೆ. ಇದರ ಪ್ರಚಾರಕ್ಕೆ ಬರುವ ವಿಚಾರದಲ್ಲಿ ಕೇಳಿ ಬಂದ ಕೆಲವು ಕಾಂಟ್ರೋವರ್ಸಿಗಳ ನಡುವೆಯೇ ರಶ್ಮಿಕಾ ಮಂದಣ್ಣ ಈಗ ‘ಪೊಗರು ‘ಚಿತ್ರದ ಪ್ರ ಮೋಷನ್ ನಲ್ಲಿ  ಬ್ಯುಸಿ ಆಗಿದ್ದಾರೆ. ಅದೇ ವೇಳೆ’  ಸಿನಿ ಲಹರಿ’  ಗೂ ನೀಡಿದ  ವಿಶೇಷ ಸಂದರ್ಶನದಲ್ಲಿ ರಶ್ಮಿಕಾ ಅನೇಕ ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದು ವಿಶೇಷ.

1. ಒಂದಷ್ಟು ಗ್ಯಾಪ್ ಜತೆಗೆ ಲಾಕ್ ಡೌನ್ ನಂತರ ಪ್ರೇಕ್ಷಕರ ಎದುರು ಬರುತ್ತಿದ್ದೀರಿ, ಹೇಗನ್ನಿಸುತ್ತೆ ಈ ಎಂಟ್ರಿ ?

ನಂಗೆ ಇದು ಗ್ಯಾಪ್ ಅಂತೇನಿಲ್ಲ. ‘ಯಜಮಾನ’ ಚಿತ್ರ ರಿಲೀಸ್ ಮುಂಚೆಯೇ ಒಪ್ಪಿಕೊಂಡ ಸಿನಿಮಾ ಇದು. ಹೆಚ್ಚು- ಕಡಿಮೆ ಒಂದು- ಒಂದೂವರೆ ವರ್ಷ ಬರೀ ಚಿತ್ರೀಕರಣವೇ ನಡೆದಿದೆ. ಅಲ್ಲಿ‌ಂದ ಈಗ ರಿಲೀಸ್ ಆಗುತ್ತಿದೆ.  ಬದಲಿಗೆ ಲಾಕ್ ಡೌನ್ ನಂತರ , ಜತೆಗೆ ಟಾಕೀಸ್ ಗಳಲ್ಲಿ ಹಂಡ್ರೆಡ್ ಪರ್ಸೆಂಟ್ ಸೀಟು ಭರ್ತಿಗೆ ಅವಕಾಶ ಸಿಕ್ಕ ಸಂದರ್ಭದಲ್ಲಿ ನಮ್ ಸಿನಿಮಾ ಥಿಯೇಟರ್ ಗೆ ಬರ್ತಿದೆ. ಅದು ಖುಷಿ ತಂದಿದೆ. ಜತೆಗೆ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ತಾರೋ ಎನ್ನುವ ಆತಂಕವೂ ಇದೆ.

2  ಮೊದಲ ಸಿನಿಮಾದಲ್ಲಿ ಸ್ಟೂಡೆಂಟ್ ಆಗಿದ್ದವರು ಈಗಿಲ್ಲಿ ನೀವು ಟೀಚರ್ ಆಗಿ ಕಾಣಿಸಿಕೊಂಡಿದ್ದೀರಂತೆ…..

ಹೌದು, ಇದೊಂಥರ ಪ್ರಮೋಷನ್.  ಕ್ಯಾರೆಕ್ಟರ್ ವಿಚಾರದಲ್ಲಿ ತುಂಬಾ ಡಿಫೆರೆಂಟ್ ಇಲ್ಲಿದೆ. ನಾನಿಲ್ಲಿ ಟೀಚರ್. ತುಂಬಾ ಇಂಟ್ರೋವರ್ಟ್. ಹೀರೋ ಮತ್ತು ನನ್ನ. ನಡುವೆ ಬರೀ ಜಗಳ. ಒಂಥರ ಟಾಮ್ ಅಂಡ್ ಜರಿ ನೋಡಿದ ಹಾಗೆ. ಆಕ್ಟಿಂಗ್ ಅಂತ ಬಂದಾಗ ಸಾಕಷ್ಟು ಸ್ಟೇಸ್ ಸಿಕ್ಕಿದೆ. ಹೀರೋ ಪಾತ್ರಕ್ಕಿರುವ ಮಹತ್ವ ಆ ಪಾತ್ರಕ್ಕೂ ಇದೆ. ಕಿರಿಕ್ ಪಾರ್ಟಿ, ಅಂಜನಿಪುತ್ರ, ಚಮಕ್ ಹಾಗೂ ಯಜಮಾನ  ಚಿತ್ರಗಳಲ್ಲಿದ್ದ  ನನ್ನ ಪಾತ್ರಗಳಿಗಿಂತ ತುಂಬಾ ಡಿಫೆರೆಂಟ್ ಇದು. ಅದು ಹೇಗೆ ಅನ್ನೋದು ಸಿನಿಮಾ ನೋಡಿದಾಗ ಗೊತ್ತಾಗಲಿದೆ.

3   ಚಿತ್ರದ ಹೀರೋ ಧ್ರುವ ಸರ್ಜಾ ಮತ್ತು ನಿಮ್ಮ ಕಾಂಬಿನೇಷನ್ ಬಗ್ಗೆ ಏನ್ ಹೇಳ್ತೀರಾ?

ನಾನ್ ಅವರನ್ನ ಫಸ್ಟ್  ಟೈಮ್ ಮೀಟ್ ಮಾಡಿದ್ದು ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿನಲ್ಲಿ. ಸಿನಿಮಾ ಶೂಟಿಂಗ್ ಸಮಯದಲ್ಲಿ. ಅವತ್ತು ಅವರ ಗೆಟಪ್ ಫುಲ್ ಚೇಂಜ್ ಇತ್ತು. ತುಂಬಾ ಸಿಂಪಲ್, ಜತೆಗೆ ಸಣ್ಣ ಆಗಿದ್ದರು. ತುಂಬಾ ಫ್ರೆಂಡ್ಲಿ  ಸ್ವಭಾವ ಅವರದು. ಹಾಗಿದ್ದಾಗ ನಾವು ಆ್ಯಕ್ಟ್ ಮಾಡೋದಿಕ್ಕೂ ಸುಲಭ ಆಗುತ್ತೆ.  ಅಂದ್ರೆ ಹೊಸಬರು ಅಂತ ಮುಜುಗರ ಇರೋದಿಲ್ಲ.

4 ‘ಪೊಗರು’ ಅಂದಾಕ್ಷಣ ಈಗ ಖರಾಬು ಹಾಡಿನದ್ದೇ ಸೌಂಡು, ಈ ಹಾಡಿನ ಚಿತ್ರೀಕರಣದ ಅನುಭವ ಜತೆಗೀಗ ಅದಕ್ಕೆ ಸಿಕ್ಕ ರೆಸ್ಪಾನ್ಸ್ ಬಗ್ಗೆ ಏನ್ ಹೇಳ್ತೀರಾ?

ಇದೊಂದು ಥ್ರಿಲ್ ಸಾಂಗ್. ಸಾಂಗ್ ಕೇಳಿದ ಸಂದರ್ಭದಲ್ಲೇ ಫುಲ್ ಖುಷಿ ಆಗಿದ್ದೆ. ಚಂದನ್ ಸರ್ ಅವರ ಬೀಟ್ಸ್ ಸೌಂಡ್ ಸೂಪರ್ ಆಗಿದೆ. ಚಿತ್ರೀಕರಣ ಅಂತ ಬಂದಾಗ ಇದೇನು ನಂಗೆ ಸಪ್ರೇಟ್ ಸಾಂಗ್ ಶೂಟಿಂಗ್ ಅಂತ ಎನಿಸಲಿಲ್ಲ,ಒಂದು ಸೀನ್ ಅಥವಾ ಮಾಂಟೇಜ್ ತರನೇ, ಶೂಟ್ ಮಾಡಿದ ಅನುಭವ ಆಯಿತು. ದೊಡ್ಡ ಸೆಟ್, ನೂರಾರು ಜೂನಿಯರ್ ಆರ್ಟಿಸ್ಟ್ , ಸುಮ್ನೆ ಹೆಜ್ಜೆ ಹಾಕುವಷ್ಟು ಥ್ರಿಲ್ ನೀಡುತ್ತಿದ್ದ ಚಂದನ್ ಸರ್ ಬೀಟ್ಸ್… ಮಜಾ ಮಜವಾಗಿ ಶೂಟ್ ಮುಗಿಸಿದ್ವಿ. ಈಗ ಅದುದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿದೆ. ನಾನು ಜಿಮ್ ಹೋದ್ರೂ ಅದೇ ಸಾಂಗ್ ಕೇಳುತ್ತಿರುತ್ತೆ. ಮೇಡಂ… ನ್ಯೂ ಸಾಂಗ್ ಅಂತ ಅಲ್ಲಿದ್ದವರು ಹೇಳ್ತಾರೆ. ಇದೊಂಥರ ಥ್ರಿಲ್.

5  ಈ ಸಾಂಗ್ ಒಂದಷ್ಟು ಕಾಂಟ್ರೋವರ್ಸಿ ಕೂಡ ಆಯ್ತ, ನಾಯಕಿ ಯನ್ನು ಕೆಟ್ಟದಾಗಿ ತೋರಿಸಲಾಗಿದೆ ಎನ್ನುವ ಆರೋಪ ಕೂಡ ಬಂತು….

ನಾನು  ಆ ಬಗ್ಗೆ ಏನನ್ನು ಹೇಳಲಾರೆ. ಯಾಕಂದ್ರೆ ಅದೆಲ್ಲ ನಂಗೆ ಗೊತ್ತಿಲ್ಲ. ಒಂದು ಪಾತ್ರಕ್ಕೆಏನು ಬೇಕಿತ್ತೋ ಅಷ್ಟುಮಾತ್ರವೇ ಅಲ್ಲಿ ಚಿತ್ರೀಕರಿಸಲಾಗಿದೆ‌.

6 ನಿರ್ದೇಶಕ ನಂದ್ ಕಿಶೋರ್ ಅವರ ಕೆಲಸ ಹೇಗನಿಸಿತು‌‌‌….

ಅಯ್ಯೋ, ಅಷ್ಟು ಅನುಭವಿಗಳ ಕೆಲಸದ ಬಗ್ಗೆ‌ ನಾನೇನು ಕಾಮೆಂಟ್ ಮಾಡಲಿ? ಅವರಿಂದ ಸಾಕಷ್ಟು ಕಲಿತಿದ್ದೇನೆ. ಬೇಕಾದ್ರೆ ಅವರ ಜತೆಗೆ ನೂರು ಸಿನಿಮಾ ಮಾಡಬಲ್ಲೆ. ಅಷ್ಟು ಡೆಡಿಕೇಟೆಡ್ ಡೈರೆಕ್ಟರ್ ಅವರು‌. ಪ್ರತಿ ಸೀನ್ ಹೀಗೆಯೇ  ಬರಬೇಕು ಅಂತ ಪಟ್ಟು ಹಿಡಿದು ಶೂಟ್ ಮಾಡಿಸುತ್ತಿದ್ದರು‌. ಅಂದ್ರೆ ಒಬ್ಬ ಡೈರೆಕ್ಟರ್ ಗೆ ತನ್ನ ಸಿನಿಮಾದ ಬಗ್ಗೆ ಇರುವ ಕಾಳಜಿ ಅದು. ಆ ಬದ್ಧತೆ ನೋಡಿ ನಂಗೆ ಖುಷಿ ಆಯ್ತ. ಪ್ರತಿ ಹಂತದಲ್ಲೂ ನಂಗೆ ಹಾಗಲ್ಲ, ಹೀಗೆ ಅಂತ ಹೇಳಿಕೊಟ್ಟಿದ್ದಾರೆ. ಅಂತ ನಿರ್ದೇಶಕರು ಇದ್ದಾಗಲೇ ಒಂದು ಸಿನಿಮಾ ಚೆನ್ನಾಗಿ ಮೂಡಿ ಬರಲು ಸಾಧ್ಯ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ‘ ಪೊಗರು’

7 ‘ಪೊಗರು ‘ ಸಿನಿಮಾದ ಮೇಕಿಂಗ್ ಬಗ್ಗೆ ಹೇಳೋದಾದ್ರೆ….

ಪ್ರಡ್ಯೂಸರ್ ರಿಯಲಿ ಗ್ರೇಟ್. ಯಾಕಂದ್ರೆ  ಅದ್ದೂರಿ ವೆಚ್ಚದ ಸಿನಿಮಾವೊಂದು ಎರಡ್ಮೂರು ವರ್ಷ ಬರೀ ಮೇಕಿಂಗ್ ನಲ್ಲಿಯೇ ಇರೋದು ಅಂದ್ರೆ ತಮಾಷೆ ಅಲ್ಲ, ಅದಕ್ಕೆ‌ ತುಂಬಾ ತಾಳ್ಮೆ, ಶ್ರಮ ಬೇಕು. ಅದು ‘ಪೊಗರು’ ನಿರ್ಮಾಪಕ ಗಂಗಾಧರ್  ಅವರಲ್ಲಿದೆ. ಹಾಗಾಗಿಯೇ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ. ಯಾವುದೇ ಭಾಷೆಯ ಸಿನಿಮಾಕ್ಕೂ ಕಮ್ಮಿ ಇಲ್ಲದ ಹಾಗೆ ರಿಚ್ ಆಗಿದೆ ಈ ಸಿನಿಮಾ. ಇದಕ್ಕೆ ಬರೀ‌ಸ್ಟಾರ್ ಗಳು ಮಾತ್ರವಲ್ಲ ಎಲ್ಲಾ ಸಿಬ್ಬಂದಿ ಕೂಡ ಕಾರಣ.

8  ನಿಮ್ಮ ದೃಷ್ಟಿಯಲ್ಲಿ ‘ಪೊಗರು’ ಅಂದ್ರೇನು? ಅದರ ಹೈಲಟ್ಸ್ ಏನು?

ಪೊಗರು ಅಂದ್ರೆ ಕ್ಲಾಸ್, ಪೊಗರು ಅಂದ್ರೆ ಮಾಸ್, ಪೊಗರು ಅಂದ್ರೆ  ರೋಮ್ಯಾಂಟಿಕ್, ಪೊಗರು ಅಂದ್ರೆ ಸೆಂಟಿಮೆಂಟ್, ಪೊಗರು ಅಂದ್ರೆ ಆಕ್ಷನ್, ಪೊಗರು ಅಂದ್ರೆ ಕಾಮಿಡಿ, ಪೊಗರು ಅಂದ್ರೆ ಥ್ರಿಲ್, ಟೋಟಲಿ ‘ಪೊಗರು ‘ ಅಂದ್ರೆ ಪಕ್ಕಾ ಎಂಟರ್ ಟೈನರ್  ಮೂವೀ.

  9 ಪೊಗರು ಸಿನಿಮಾ ಕುರಿತು ನಿಮ್ಮ ಫ್ಯಾನ್ಸ್ ಹಾಗೂ ಆಡಿಯನ್ಸ್ ಗೆ ಏನ್ ಹೇಳ್ತೀರಾ?

ಪೊಗರು ತುಂಬಾ ಪ್ಯಾಷನ್ ಇಟ್ಕೊಂಡ್ ಮಾಡಿದ ಸಿನಿಮಾ. ಇದರ ಹಿಂದೆ ಸಾಕಷ್ಟು ಜನರ ಪರಿಶ್ರಮ ಇದೆ. ಹಾಗೆಯೇ ಹಲವರ ಬದುಕು ಇದೆ‌ . ಹತ್ತಾರು ಕನಸುಗಳಿವೆ. ಒಂದೊಳ್ಳೆಯ ತಂಡ ಕಷ್ಟಪಟ್ಟು ಮಾಡಿದ ಸಿನಿಮಾ ಆಗಿರೋದ್ರಿಂದ ನೋಡುಗರಿಗೆ ಎಲ್ಲೋಬೋರ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಪಕ್ಕಾ ಮನರಂಜ‌ನೆ ಸಿನಿಮಾ ದಲ್ಲಿದೆ.  ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಬರುವಾಗ ಒಂದಷ್ಟು ಎಚ್ಚರಿಕೆ ಇರಲಿ.ಮಾಸ್ಕ್ ಧರಿಸಿ‌ ಬನ್ನಿ. ಸ್ಯಾನಿಟೈಸ್ಡ್ ಮಾಡೋದನ್ನು ಮರಿಬೇಡಿ.

Categories
ಸಿನಿ ಸುದ್ದಿ

ನಂಗೂ ಗೊತ್ತಿದೆ, ವಯಸ್ಸಾಗ್ತಿದೆ – ರಶ್ಮಿಕಾ ಮಂದಣ್ಣ ಹೀಗೆ ತಮ್ಮ ವಯಸ್ಸಿನ ಕುರಿತು ಹೇಳಿದ್ದೇಕೆ?

ರಶ್ಮಿಕಾ ಮಂದಣ್ಣ ಮದುವೆ ಯಾವಾಗ ?

ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಯಸ್ಸಾಗ್ತಿದೆ. ಹಾಗಂತ ಹೇಳ್ತಿರೋದು ನಾವಲ್ಲ. ಖುದ್ದು ರಶ್ಮಿಕಾ ಅವರೇ ತಮಗೆ ವಯಸ್ಸಾಗ್ತಿದೆ ಅಂತ ಹೇಳಿಕೊಂಡಿದ್ದಾರೆ. ಅದು ʼಪೊಗರುʼ ಚಿತ್ರದ ಪ್ರಮೋಷನ್‌ ಕಾರ್ಯಕ್ರಮದಲ್ಲಿ ನಟ ರಕ್ಷಿತ್‌ ಶೆಟ್ಟಿ ಹಾಗೂ ತಮ್ಮ ನಡುವೆ ನಿಜಕ್ಕೂ ಅಗಿದ್ದೇನು? ಮದುವೆ ಬಗ್ಗೆ ನಿಮ್ಮ ಪ್ಲಾನ್‌ ಏನು? ಅಂತ ತಮಗೆ ಎದುರಾದ ಪ್ರಶ್ನೆಗಳಿಗೆ ಕೊಂಚ ಇರುಸು ಮುರುಸು ಮಾಡಿಕೊಂಡೆ ಉತ್ತರಿಸಿದ ಅವರು, ನಂಗೂ ಗೊತ್ತಾಗ್ತಿದೆ, ವಯಸ್ಸಾಗ್ತಿದೆ ಅಂತʼ ನಕ್ಕರು.

ಅನಿರೀಕ್ಷಿತವಾಗಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸಬೇಕೋ ಅಥವಾ ಬೇಡವೋ ಎನ್ನುವ ಮೂಡ್‌ ನಲ್ಲಿಯೇ ಮಾತಿಗೆ ಮುಂದಾದ ರಶ್ಮಿಕಾ, ಅದೆಲ್ಲ ಈಗ ಬೇಕಾ? ಎಂದು ಮರು ಪ್ರಶ್ಮೆ ಹಾಕಿದರು. ” ಕಿರಿಕ್‌ ಪಾರ್ಟಿʼ ನನ್ನ ಮೊದಲ ಸಿನಿಮಾ. ಆ ಸಿನಿಮಾ ದೊಡ್ಡ ಸಕ್ಸಸ್‌ ಕಂಡಿತು. ಅಲ್ಲಿಂದ ನನಗೆ ನನ್ನ ಕೆರಿಯರ್‌ ಮುಖ್ಯ ಎನಿಸಿತು. ಮೇಲಾಗಿ ನನಗೇನು ಆಗ ಮದುವೆ ಆಗುವ ವಯಸ್ಸಲ್ಲ ಎಂದರು. ಅದು ಸರಿ, ಮದುವೆ ಪ್ಲಾನ್‌ ಏನು? ಎನ್ನುವ ಮರು ಪ್ರಶ್ನೆಗೆ ” ನಂಗೂ ಗೊತ್ತಾಗ್ತಿದೆ, ವಯಸ್ಸಾಗ್ತಿದೆ ಅಂತ, ನೋಡೋಣ ಮುಂದೆʼ ಎಂದರು. ಸದ್ಯ ಅವರೀಗ ʼಪೊಗರುʼ ಚಿತ್ರದ ಪ್ರಮೋಷನ್‌ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದಾರೆ.

Categories
ಸಿನಿ ಸುದ್ದಿ

ಭಾರತ ರೈತರ ಪರ ಮಾತಾಡಿದ ಹಾಲಿವುಡ್ ನಟಿಗೆ ರೇಪ್‌-ಕೊಲೆ ಬೆದರಿಕೆ!

ಹಾಲಿವುಡ್‌ ನಟಿ, ಸಾಮಾಜಿಕ ಹೋರಾಟಗಾರ್ತಿ ಜಮೀಲಾ ಬಿಚ್ಚಿಟ್ಟ ಸತ್ಯ 

ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟದ ವಿಚಾರವಾಗಿ ಬಹಳಷ್ಟು ನಟಿಮಣಿಯರು ಸ್ಟೇಟ್ ಮೆಂಟ್ ಗಳನ್ನು ನೀಡಿದ್ದು ಗೊತ್ತೇಇದೆ. ಆ ಕುರಿತಂತೆ ಸಾಕಷ್ಟು ಸ್ಟಾರ್‌ಗಳು ಸಹ ಟ್ವೀಟ್‌ ಮಾಡಿದ್ದಾರೆ. ಇತ್ತೀಚೆಗೆ ಕನ್ನಡದ ನಟಿ ಪ್ರಣೀತಾ ಟ್ವೀಟ್‌ ಮಾಡಿದ್ದರು. ಈಗ ಹಾಲಿವುಡ್‌ ನಟಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಎಂದೇ ಗುರುತಿಸಿಕೊಂಡಿರುವ ಜಮೀಲಾ ಹಾಗೊಂದು ಟ್ವೀಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ, ಟ್ವೀಟ್‌ ಮಾಡಿದ ನಂತರ ಕರಾಳ ಸತ್ಯವೊಂದನ್ನೂ ಬಿಚ್ಚಿಟ್ಟಿದ್ದಾರೆ.

ಹೌದು, ಭಾರತದ ರೈತರ ಬಗ್ಗೆ ಮಾತನಾಡಿದ ನಟಿ ಜಮೀಲಾ ಅವರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬಂದಿವೆಯಂತೆ. ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಜಮೀಲಾ, ” ನಾನೂ ಮನುಷ್ಯಳು” ಎಂದು ಟ್ವೀಟರ್ ನಲ್ಲಿ ಹಾಕಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ʼಪೊಗರುʼ ನಂತರ ಕನ್ನಡದಲ್ಲಿ ನಟಿ ರಶ್ಮಿಕಾ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಯಾವುದು?

ಆಗಸ್ಟ್‌ ವರೆಗೂ ಕನ್ನಡದವರಿಗೆ ಸಿಗಲ್ಲ ಅಂದ್ರು ʼಕಿರಿಕ್‌ ಪಾರ್ಟಿʼ ಚೆಲುವೆ ರಶ್ಮಿಕಾ ಮಂದಣ್ಣ

ʼಕಿರಿಕ್‌ ಪಾರ್ಟಿʼ ಚಿತ್ರದ ಖ್ಯಾತಿಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಅಭಿನಯಿಸಿರುವ “ಪೊಗರುʼ ಚಿತ್ರ ಇದೇ ತಿಂಗಳು ೧೯ ರಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ. “ಯಜಮಾನʼ ಚಿತ್ರದ ನಂತರ ರಶ್ಮಿಕಾ ಇದೇ ಮೊದಲು ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೀಗ ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ ಅಂತೆಲ್ಲ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಮತ್ತೆ ಯಾವ ಸ್ಟಾರ್‌ ಜತೆಗೆ ಕಾಣಸಿಕೊಳ್ಳಬಹುದು? ಅವರ ಮುಂದಿನ ಸಿನಿಮಾ ಯಾವುದು ? ಸಿನಿ ಪ್ರೇಕ್ಷಕರಿಗೆ ಇಂತಹ ಕುತೂಹಲ ಇರುವುದು ಸಹಜವೇ. ಆದರೆ ಮುಂದಿನ ಆರು ತಿಂಗಳ ಕಾಲ ಅವರು ಕನ್ನಡಕ್ಕೆ ಲಭ್ಯ ಇಲ್ಲ. ಹಾಗೊಂದು ವೇಳೆ ಅವರು ಕನ್ನಡದಲ್ಲಿ ಯಾವುದಾದರೂ ಸಿನಿಮಾ ಒಪ್ಪಿಕೊಂಡು ಮತ್ತೆ ಇಲ್ಲಿ ಕಾಣಸಿಕೊಳ್ಳುವುದಾದರೆ ಅದು ಆಗಸ್ಟ್‌ ತಿಂಗಳ ನಂತರವೇ ಅಂತೆ. ಅಂತಹದೊಂದು ಸಂಗತಿಯನ್ನು ನಟಿ ರಶ್ಮಿಕಾ ಮಂದಣ್ಣ ಅವರೇ ರಿವೀಲ್‌ ಮಾಡಿದ್ದಾರೆ.

“ಪೊಗರುʼ ಚಿತ್ರದ ರಿಲೀಸ್‌ ಪ್ರಮೋಷನ್‌ ಹಿನ್ನೆಲೆಯಲ್ಲಿ ಶನಿವಾರ “ಮೀಟ್‌ ದಿ ಮೀಡಿಯಾʼ ಕಾರ್ಯಕ್ರಮದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದರು. ʼಪೊಗರುʼ ನಂತರ ಕನ್ನಡದಲ್ಲಿ ನಿಮ್ಮ ಮುಂದಿನ ಪ್ರಾಜೆಕ್ಟ್‌ ಯಾವುದು ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಸದ್ಯಕ್ಕೆ ನಾನು ಒಪ್ಪಿಕೊಂಡ ಪ್ರಾಜೆಕ್ಟ್ ಶೆಡ್ಯೂಲ್‌ ಪ್ರಕಾರ ಜುಲೈ – ಆಗಸ್ಟ್‌ ತಿಂಗಳವರೆಗೂ ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಸಮಯ ಇಲ್ಲ. ಅದುವರೆಗೂ ನಾನು ಶೂಟಿಂಗ್‌ ಜಾಮ್‌ ಪ್ಯಾಕ್.‌ ಅವೆಲ್ಲ ಮುಗಿಯೋದಿಕ್ಕೆ ಕನಿಷ್ಟ ಆರು ತಿಂಗಳು ಬೇಕೇ ಬೇಕು. ಆಮೇಲೆ ಸಮಯ ಸಿಕ್ಕಾಗ ಕನ್ನಡದಲ್ಲಿ ಕಥೆ ಕೇಳಿ, ಹೊಸ ಪ್ರಾಜೆಕ್ಟ್‌ ಒಪ್ಪಿಕೊಳ್ಳೋಣ ಅಂದುಕೊಂಡಿದ್ದೇನೆʼ ಎನ್ನುತ್ತಾರೆ ರಶ್ಮಿಕಾ.

ಹಾಗಾದ್ರೆ ಕನ್ನಡಕ್ಕೆ ನೀವು ʼದುಬಾರಿʼಯಾದ್ರಾ ಎನ್ನುವ ಮತ್ತೊಂದು ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ ರೀತಿಯೇ ಅದ್ಭುತ. ” ಅಯ್ಯೋ, ನಾನು ಕನ್ನಡತಿ. ಇಲ್ಲಿಯೇ ನಂಗೆ ನೇಮ್-ಫೇಮ್‌ ಸಿಕ್ಕಿದ್ದು. ಇಲ್ಲಿ ನಾನು ಅಭಿನಯಿಸುವುದಿಲ್ಲ ಎನ್ನುತ್ತೇನಾ? ಸದ್ಯಕ್ಕೀಗ ಬೇರೆ ಬೇರೆ ಭಾಷೆಯ ಸಿನಿಮಾಗಳ ಅವಕಾಶ ಬಂದಿವೆ. ಆ ಸಿನಿಮಾಗಳ ಶೂಟಿಂಗ್‌ ಶೆಡ್ಯೂಲ್‌ ಕೊಟ್ಟಿದ್ದೇನೆ. ಹಾಗಾಗಿ ಕನ್ನಡದಲ್ಲಿನ ಆಫರ್ ಗಳ ಬಗ್ಗೆ ಹೆಚ್ಚು ಗಮನ ನೀಡಲು ಆಗುತ್ತಿಲ್ಲವಷ್ಟೇ. ಮುಂದೆ ಅದಕ್ಕಾಗಿಯೇ ಒಂದಷ್ಟು ಸಮಯ ಫಿಕ್ಸ್‌ ಮಾಡಿಕೊಳ್ಳುತ್ತಿದ್ದೇನೆ. ಆಗ ಯಾವುದಾದರೂ ಒಳ್ಳೆಯ ಕತೆ ಸಿಕ್ಕರೆ ಖಂಡಿತಾ ಇಲ್ಲಿ ನಟಿಸುತ್ತೇನೆʼ ಎನ್ನುತ್ತಾರೆ ರಶ್ಮಿಕಾ ಮಂದಣ್ಣ.

Categories
ಸಿನಿ ಸುದ್ದಿ

ಖುಷ್‌ ಖುಷಿಯಲಿ… ಕೇರಳದಲ್ಲಿ ಖುಷಿ ಹಾಡು

ಪ್ರೇಮಿಗಳ ದಿನಕ್ಕೆ ಆಲ್‌ ಓಕೆ ‌ ಗಿಫ್ಟ್

ಹೊಸ ಆಲ್ಬಂ ಸಾಂಗ್‌ಗೆ ಖುಷಿ ಹೆಜ್ಜೆ

ಕನ್ನಡದಲ್ಲಿ “ದಿಯಾ” ಅನ್ನುವ ಸಿನಿಮಾ ಹೊಸದೊಂದು ಕ್ರೇಜ್‌ ಹುಟ್ಟಿಸಿದ್ದು ಎಲ್ಲರಿಗೂ ಗೊತ್ತು.  ವಿಷಯ ಏನೆಂದರೆ, “ದಿಯಾ” ಸಿನಿಮಾ ನಾಯಕಿ ಖುಷಿ ಆ ಸಿನಿಮಾ ಬಳಿಕ ಸಾಕಷ್ಟು ಖುಷಿಯಲ್ಲಿರೋದಂತು ನಿಜ.

ಅದಾದ ಮೇಲೆ ಒಂದೊಂದೇ ಸಿನಿಮಾಗಳು ಅವರನ್ನು ಹುಡುಕಿ ಬಂದಿದ್ದು ನಿಜ. “ದಿಯಾ” ಕನ್ನಡದ ಮಟ್ಟಿಗೆ ವಿಶೇಷವಾದ ಚಿತ್ರ. ಈಗೇಕೆ “ದಿಯಾʼ ಕುರಿತ ಸುದ್ದಿ ಅಂದರೆ, ಆ ಸಿನಿಮಾದ ನಾಯಕಿ ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿರುವುದಷ್ಟೇ ಅಲ್ಲ, ಅವರೀಗ  ಕೇರಳದ  ರೆಸಾರ್ಟ್‌ವೊಂದರಲ್ಲಿ ‌ಬೀಡು ಬಿಟ್ಟಿದ್ದಾರೆ. ಆಲ್‌ ಓಕೆ (ಅಲೋಕ್)‌ ಅವರ ಹೊಸ ಆಲ್ಬಂ ಸಾಂಗ್‌ವೊಂದರಲ್ಲಿ ತೊಡಗಿಕೊಂಡಿದ್ದು, ಚಿತ್ರೀಕರಣ ಅಲ್ಲೀಗ ಜೋರಾಗಿ ನಡೆಯುತ್ತಿದೆ. ಅದು ವ್ಯಾಲೆಂಟೈನ್ಸ್ ಡೇ ‌ಗಾಗಿಯೇ ಮಾಡುತ್ತಿರುವ ಹಾಡು ಎಂದು ಹೇಳಿದ್ದಾರೆ ಖುಷಿ. ಆ ಹಾಡಿನ ಕೆಲ ಫೋಟೋಗಳನ್ನು ಅವರು ಟ್ವೀಟ್‌ ಮಾಡಿದ್ದಾರೆ.

ಆಲ್ಬಂ ಸಾಂಗ್‌ಗಾಗಿ ಅವರು ಸದ್ಯ ಕೇರಳದಲ್ಲಿದ್ದಾರೆ. ಬಿಡುವಿನ ಸಮಯ ನೋಡಿಕೊಂಡು, ಹಾಡಿನ ಫೋಟೋಗಳನ್ನು ಟ್ವಿಟ್ಟರ್‌‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಫ್ಯಾನ್ಸ್‌ ಸದ್ಯಕ್ಕೆ ಅವರ ಕಲರ್‌ಫುಲ್‌ ಫೋಟೋಗಳನ್ನು ನೋಡಿ ಖುಷ್‌ ಖುಷಿಯಾಗಿದ್ದಾರೆ. ದಿ ಕೇಕ್‌ ಎನ್ನುವುದು ಆ ಆಲ್ಬಂ ಸಾಂಗ್‌ ಹೆಸರು. ಅಲೋಕ್‌ ಹಾಗೂ ಖುಷಿ ಅವರೊಂದಿಗೆ  “ಕೆಜಿಎಫ್‌ʼ ಖ್ಯಾತಿಯ ‌ಜಾನ್‌ ‌ ಕೊಕೆನ್  ಇಲ್ಲಿ ಗೆಸ್ಟ್‌ ಆಫಿರಿಯನ್ಸ್‌ ಮಾಡಿದ್ದಾರೆ. ‌  ಇದು ವ್ಯಾಲೆಂಟೈನ್ಸ್ ಡೇ ಗೆ ರಿಲೀಸ್ ಆಗಲಿದೆ.ಸದ್ಯ ಈ ಸಾಂಗ್‌  ಗೆ  ಕೇರಳದ ವಯನಾಡ್ ನಲ್ಲಿ  ಚಿತ್ರೀಕರಣ ನಡೆಯುತ್ತಿದೆ. ಮೂರು ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ.  ಕನ್ನಡ, ತೆಲುಗು, ತಮಿಳಿನಲ್ಲಿ ಮೂಡಿಬರಲಿದೆ. ಚಿತ್ರೀಕರಣದ ಅನುಭವ ಹೇಳಿಕೊಂಡಿರುವ ನಟಿ ಖುಷಿ, ಬೇರೆ ಬೇರೆ ಭಾಷೆಯ ನಟರನ್ನು ಭೇಟಿಯಾಗುವ ಅವಕಾಶ ದೊರಕಿತು. ರೆಸಾರ್ಟ್ ತುಂಬಾ ಬ್ಯೂಟಿಫುಲ್ ಎಂದು ಖುಷಿ ಖುಷಿ ವ್ಯಕ್ತಪಡಿಸಿದರು.

error: Content is protected !!