ವಿಕ್ರಾಂತ್ ರೋಣ ಸಿನಿಮಾ ವಿಚಾರದಲ್ಲಿ ನಟ ನಿರೂಪ್ ಭಂಡಾರಿ ಮನಸ್ಸಲೇ ಬೈದು ಕೊಂಡಿದ್ದಾರಂತೆ.. ಅದು ಯಾಕೆ?

ಸುದೀಪ್ ಜತೆಗೆ ಅಭಿನಯಿಸುವ ಸಲುವಾಗಿ..


ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ದಲ್ಲಿ ನಟ ನಿರೂಪ್ ಭಂಡಾರಿ‌ಕೂಡ ಇದ್ದಾರೆ. ಈಗಾಗಲೇ ಅವರು ಸಂಜೀವ್ ಗಂಬೀರ್ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ. ಈಗಾಗಲೇ ಆ ಪಾತ್ರ್ ಚಿತ್ರೀಕರಣ ಕೂಡ ಮುಗಿಸಿಕೊಂಡು ಬಂದಿದ್ದಾರೆ. ಭಾನುವಾರ ಅದರ ಮೊದಲ ಸುದ್ದಿಗೋಷ್ಟಿಯಲ್ಲಿ ನಟ ನಿರೂಪ್ ಭಂಡಾರಿ ಮಾತನಾಡುತ್ತಾ, ತಾವು ಪಾತ್ರಕ್ಕಾಗಿ ಮನಸ್ಸಲ್ಲೇ ಬೈದುಕೊಂಡ‌ ಕ್ಷಣ ಗಳನ್ನು ಹೇಳಿಕೊಂಡು ಅಚ್ಚರಿ ಮೂಡಿಸಿದರು.


‘ ನಂಗೆ ಈ ಪಾತ್ರ ಸಿಗುತ್ತೆ ಅಂತಂದುಕೊಂಡಿರಲಿಲ್ಲ‌ . ಸಿನಿಮಾ ಕತೆ ಬರೆಯಲು ಅನೂಪ್ ಶುರುಮಾಡಿ ದಾಗನಿಂದ ಅವರ ಜತೆ ಆಗಾಗ ಭೇಟಿ ಮಾಡುತ್ತಿದ್ದೆ. ಆದರೆ ನಂಗೆ ಅದರಲ್ಲಿ ಪಾತ್ರ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಕೊನೆಗೊಂದು ದಿನ ನಾನು ಅಭಿನಯಿಸಬೇಕಿದ್ದ ಪಾತ್ರಕ್ಕೆ ಬೇರೆ ಬೇರೆ ಆ್ಯಕ್ಟರ್ ಅವರನ್ನು ಹುಡುಕುತ್ತಿದ್ದರು. ಅನೇಕ ಸ್ಟಾರ್ ಹೆಸರು ಕೇಳಿಬಂದಿದ್ದವು. ಹಾಗೆಲ್ಲ ಬೇರೆ ಸ್ಟಾರ್ ಹೆಸರು ಕೇಳಿದಾಗೆಲ್ಲ ನಾನು ಮನಸ್ಸಲೇ ಬೈದುಕೊಳ್ಳುತ್ತಿದ್ದೆ. ಕೊನೆಗೆ ಒಂದು ದಿನ ಆ ಪಾತ್ರ‌ನಂಗೆ ಬಂತು. ಆಗ ಕೊನೆಗೂ ನೆಮ್ಮದಿ ಸಿಕ್ಕಿತು’ ಎಂದರು ನಟ ನಿರೂಪ್ ಭಂಡಾರಿ.

ನಿರೂಪ್ ಇಷ್ಟಕ್ಕೂ ಆ ಪಾತ್ರಕ್ಕಾಗಿ ಆ ರೀತಿ ಪರದಾಡಿದ್ದು ಯಾಕೆ? : ಸುದೀಪ್ ಸರ್ ಸಿನಿಮಾ. ಬಿಗ್ ಬಜೆಟ್ ಸಿನಿಮಾ.‌ಅವರೊಂದಿಗೆ ಅಂತಹದೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತಲ್ವಾ ಅಂತ ‌ಅದೇ ಕಾರಣಕ್ಕೆ ಈ ಸಿನಿಮಾಕ್ಕಾಗಿ ಈ ರೀತಿ ಪರದಾಡಿದ್ದು ಅಂತ ಸ್ಪಷ್ಟನೆ ಕೊಟ್ಟರು ನಟ ನಿರೂಪ್ ಭಂಡಾರಿ.

Related Posts

error: Content is protected !!