Categories
ಸಿನಿ ಸುದ್ದಿ

ನಾನ್‌ ಒಳ್ಳೇವ್ನೆ ನನ್‌ ಟೈಮೇ ಸರಿ ಇಲ್ಲ! ಅಪ್ಪು ಹಾಡಿದ್ರು, ಜನ ಮೆಚ್ಚಿದ್ರು!! ಗ್ಯಾಂಗ್‌ ಕಟ್ಟಿಕೊಂಡೋರ ಹಾಡಿಗೆ ಭರಪೂರ ಮೆಚ್ಚುಗೆ…

ಏನ್ಮಾಡ್ಲಿ ಹೇಳಿ ಈಗ, ನನಗಿಲ್ಲ ಚೂರು ಮೂಡು… ಯಾಕೆ ಹೀಗೆ ಬದುಕು ಆಯ್ತು. ಕಾಣದೇ ಹೋದೆನಾ… ಬದುಕಿನಲ್ಲಿ ಖುಷಿಯೇ ಇಲ್ಲ. ಹೇಗೋ ಈ ಜೀವನ… ಹಿಂಗೆಲ್ಲಾ ಯಾಕಾಯ್ತೋ, ಈ ದುನಿಯಾ… ಅದೇಕೋ ನಮಗಿಲ್ಲ.. ಇದು ಖಾಲಿ ಹಾಳೆ ಜೀವನ…ʼ ಎನ್ನುವ ಪದಗಳಲ್ಲಿ ಅರ್ಥವಿದೆ. ಕಾಲೇಜ್‌ ಸ್ಟುಡೆಂಟ್ಸ್‌ಗೆ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಗೀತೆ ಇದು.

ಯಾರ್‌ ಏನಾರ ಅಂದ್‌ಕೊಳ್ಲಿ. ಒಮ್ಮೊಮ್ಮೆ ಸ್ಟಾರ್‌ ಸಿನಿಮಾದ ಹಾಡು ಕೂಡ ಗುನುಗೋ ಥರಾ ಇರಲ್ಲ. ಅಷ್ಟೇ ಅಲ್ಲ, ಒಮ್ಮೊಮ್ಮೆ ಸ್ಟಾರ್‌ ಅಲ್ಲದವರ ಸಿನಿಮಾ ಹಾಡಂತೂ ಗುನುಗಲೇಬೇಕು ಅಂತೆನಿಸದೇ ಇರಲ್ಲ…! ಇದೇನಪ್ಪಾ ಹೊಸಬರ ಸಿನಿಮಾದ ಹಾಡು ಅಷ್ಟೊಂದ್‌ ಚೆಂದಾಗೈತಾ? ಹೀಗೊಂದು ಪ್ರಶ್ನೆ ಕಾಡಬಹುದು. ನಿಜ ಹೇಳೋದಾದರೆ, ಹೊಸಬರ ಸಿನಿಮಾದ ಹಾಡು ಚೆನ್ನಾಗೈತೆ. ಬರೆದಿರೋ ಸಾಹಿತ್ಯವೂ ಈಗಿನ ಟ್ರೆಂಡ್‌ಗೆ ತಕ್ಕಂತೆ ಐತೆ. ಅದರಲ್ಲೂ ಅಂತದ್ದೊಂದು ಹಾಡಿಗೆ ಧ್ವನಿಯಾಗಿರೋರ ಹಾಡು ಇಷ್ಟವಾಗದೇ ಇರುತ್ತಾ? ಹೌದು, ಹೊಸಬರ “ಗಜಾನನ ಗ್ಯಾಂಗ್‌” ಸಿನಿಮಾದ ವಿಡಿಯೊ ಸಾಂಗ್‌ವೊಂದು ಆನಂದ್‌ ಆಡಿಯೊ ಯುಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆಗಿದೆ. ಅ ಹಾಡಿಗೆ ಧ್ವನಿಯಾಗಿರೋದು ಪವರ್‌ ಸ್ಟಾರ್‌ ಪುನೀತ್‌ರಾಜಕುಮಾರ್.‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಳ್ಳೆಯ ವೀಕ್ಷಣೆ ಪಡೆದಿದ್ದು, ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ನಿರ್ದೇಶ ಅಭಿಷೇಕ್‌ ಶೆಟ್ಟಿ ಬರೆದ ” ನಾನ್‌ ಒಳ್ಳೇವ್ನೆ… ನನ್‌ ಟೈಮೇ ಸರಿ ಇಲ್ಲ… ಟೈಮ್‌ ಸರಿ ಐತೆ.. ಜೊತೆಗಿರೋರೇ ನೆಟ್ಟಗಿಲ್ಲ…” ಎಂದು ಶುರುವಾಗುವ ಈ ಹಾಡು ಸದ್ಯ ವೈರಲ್‌ ಆಗುತ್ತಿದೆ. ಈ ಹಾಡು ಕೇಳಿದವರಿಗೆ ಮತ್ತೆ ಮತ್ತೆ ಕೇಳಬೇಕು ಎನಿಸುವುದು ನಿಜ. ಇದೊಂದು ಪಕ್ಕಾ ಕಾಲೇಜ್‌ ಹುಡುಗರ ಸಾಂಗು. ಅಷ್ಟೇ ಅಲ್ಲ, ಪಡ್ಡೆ ಹೈಕ್ಳು ಕೂಡ ಒಂದೊಮ್ಮೆ ಕೇಳಿದಂರಂತೂ ಗುನುಗೋದು ದಿಟ. ಪುನೀತ್‌ ಅವರಿಂದಲೇ ಹಾಡಿಸಿರುವುದರಿಂದ ಹಾಡಿಗೊಂದು ಮೆರುಗು ಸಿಕ್ಕಿದೆ. “ಯಾಕೆ ಹೀಗೆ ಬದುಕು ಆಯ್ತು. ಕಾಣದೇ ಹೋದೆನಾ… ಬದುಕಿನಲ್ಲಿ ಖುಷಿಯೇ ಇಲ್ಲ. ಹೇಗೋ ಈ ಜೀವನ… ಹಿಂಗೆಲ್ಲಾ ಯಾಕಾಯ್ತೋ, ಈ ದುನಿಯಾ… ಅದೇಕೋ ನಮಗಿಲ್ಲ.. ಇದು ಖಾಲಿ ಹಾಳೆ ಜೀವನ…ʼ ಎನ್ನುವ ಪದಗಳಲ್ಲಿ ಅರ್ಥವಿದೆ. ಕಾಲೇಜ್‌ ಸ್ಟುಡೆಂಟ್ಸ್‌ಗೆ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಗೀತೆ ಇದು.

ಈ ಗೀತೆಗೆ ರಾಗ ಸಂಯೋಜನೆ ಕೂಡ ಸೊಗಸಾಗಿದೆ. ಅಷ್ಟೇ ಅಂದವಾಗಿಯೇ ಚಿತ್ರೀಕರಿಸಲಾಗಿದೆ. ಒಂದು ಕಾಲೇಜ್‌ ಹುಡುಗನ ಲೈಫ್‌ ಸ್ಟೋರಿಯನ್ನು ಹೇಳುವಂತಹ ಗೀತೆ ಇದಾಗಿದ್ದು, ಸದ್ಯ ಜೋರು ಸದ್ದು ಮಾಡುತ್ತಿದೆ.
ಬೃಂದಾವನ್‌ ಎಂಟರ್‌ಪ್ರೈಸಸ್‌ ಮತ್ತು ಅದ್ವಿ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಮೂಡಿಬಂದಿರುವ ಈ ಸಿನಿಮಾ ಸದ್ಯ ರಿಲೀಸ್‌ಗೆ ಸಜ್ಜಾಗಿದೆ. ಈಗಾಗಲೇ “ನಮ್‌ ಗಣಿ ಬಿಕಾಂ ಪಾಸ್‌” ಸಿನಿಮಾ ನಿರ್ಮಿಸಿದ್ದ ನಿರ್ಮಾಪಕ ನಾಗೇಶ್‌ ಕುಮಾರ್. ಯು.ಎಸ್.‌ ಅವರು ಆ ಚಿತ್ರತಂಡದ ಮೇಲೆ ಭರವಸೆ ಇಟ್ಟು ಪುನಃ “ಗಜಾನನ ಗ್ಯಾಂಗ್‌” ಸಿನಿಮಾ ಮಾಡಿದ್ದಾರೆ.

ಇವರೊಂದಿಗೆ ಪ್ರಶಾಂತ್ ಕುಮಾರ್ ಶೆಟ್ಟಿ ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಅದೇ ತಂಡ ಕಟ್ಟಿಕೊಂಡು ಕೆಲಸ ಮಾಡಿರುವ ಅಭಿಷೇಕ್‌ ಶೆಟ್ಟಿ, ಒಂದೊಳ್ಳೆಯ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ನಟನೆ ಹಾಗೂ ನಿರ್ದೇಶನ‌ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆ ಉಳಿಸಿಕೊಂಡಿರುವ ನಿರ್ದೇಶಕ ಅಭಿಷೇಕ್ ಶೆಟ್ಟಿ “ಗಜಾನನ ಗ್ಯಾಂಗ್‌” ಸಿನಿಮಾವನ್ನು ತುಂಬಾ ಸೊಗಸಾಗಿಯೇ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಶ್ರೀ ಹೀರೋ ಆಗಿದ್ದರೆ, ಅವರಿಗೆ ಅದಿತಿ ಪ್ರಭುದೇವ ನಾಯಕಿ. ಇನ್ನು, ಅಪ್ಪು ಹಾಡಿರುವ ಗೀತೆಗೆ ಪ್ರದ್ಯೋತ್ನ ರಾಗ ಸಂಯೋಜನೆ ಇದೆ.
ಈ ಹಿಂದೆ “ನಮ್‌ ಗಣಿ ಬಿಕಾಂ ಪಾಸ್” ಸಿನಿಮಾ ಒಂದೊಳ್ಳೆಯ ಸಂದೇಶ ಹೊತ್ತು ಬಂದಿತ್ತು. ಒಳ್ಳೇ ಹೆಸರು ತಂದು ಕೊಟ್ಟಿದ್ದರಿಂದ ನಿರ್ಮಾಪಕ ನಾಗೇಶ್‌ ಕುಮಾರ್‌ ಅವರಿಗೂ ಆ ಚಿತ್ರತಂಡದ ಮೇಲೆ ಪ್ರೀತಿ ಮತ್ತು ನಂಬಿಕೆ ಇತ್ತು. ಹಾಗಾಗಿ, ಅದೇ ತಂಡದೊಂದಿಗೆ “ಗಜಾನನ ಗ್ಯಾಂಗ್‌” ಸಿನಿಮಾ ಮಾಡಿದ್ದಾರೆ. ಆರಂಭದಿಂದಲೂ ಕ್ರೇಜ್‌ ಹುಟ್ಟಿಸಿದ್ದ ”ಗಜಾನನ ಅಂಡ್‌ ಗ್ಯಾಂಗ್‌” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು.

ಅಷ್ಟೇ ಒಳ್ಳೆಯ ತಂಡ ಕಟ್ಟಿಕೊಂಡ ನಿರ್ದೇಶಕ ಅಭಿಷೇಕ್‌ ಶೆಟ್ಟಿ, ಚಿತ್ರದ ಮೊದಲ ಲುಕ್‌ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ಕುತೂಹಲ ಮೂಡಿಸಿದ್ದರು. ಈಗ “ನಾನ್‌ ಒಳೇವ್ನೇ, ನನ್‌ ಟೈಮೇ ಸರಿ ಇಲ್ಲ…” ಹಾಡೊಂದನ್ನು ಹೊರಬಿಟ್ಟು ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದಾರೆ. ಈ ಹೊಸಬರ “ಗ್ಯಾಂಗ್‌” ಈಗ ಕಂಪ್ಲೀಟ್‌ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾ ಮಾಡಿರುವ ನಿರ್ದೇಶಕರು, ಯೂಥ್‌ ಟಾರ್ಗೆಟ್‌ ಮಾಡಿಯೇ ಸಿನಿಮಾ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಈ ಚಿತ್ರ ಇಷ್ಟವಾಗುತ್ತೆ ಎಂಬ ನಂಬಿಕೆಯೂ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಹಿಂದೆ ಪ್ರೇಮಿಗಳ ದಿನದಂದು ಬಿಡುಗಡೆಯಾದ “ಲವ್ ಡೇ ” ಸಾಂಗ್ ಕೂಡ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಸದ್ಯ ಅಭಿಷೇಕ್‌ ಅವರ ಗ್ಯಾಂಗ್‌ ಹೇಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. “ಬಿಕಾಂ ಪಾಸ್‌” ಮಾಡಿರುವ ಹುಡುಗರು ಈಗ “ಗ್ಯಾಂಗ್‌” ಮೂಲಕವೇ ರ್ಯಾಂಕ್‌ ಬರಲಿ ಅನ್ನೋದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಡಿಬಾಸ್‌ 24! ದರ್ಶನ್‌ ಗಾಂಧಿನಗರಕ್ಕೆ ಕಾಲಿಟ್ಟು ‌ಯಶಸ್ವಿ ಇಪ್ಪತ್ನಾಲ್ಕು ವರ್ಷ- ಗೆಳೆಯರಿಂದ ಹರಿದು ಬಂದ ಶುಭಹಾರೈಕೆ

ಸಿನಿಮಾ ರಂಗದಲ್ಲಿ ಅವಕಾಶ ಸಿಗೋದೇ ಕಷ್ಟ. ಸಿಕ್ಕರೂ ಅದನ್ನು ಉಳಿಸಿಕೊಂಡು ಹೋಗೋದು ಇನ್ನೂ ಕಷ್ಟ. ಅರೇ ಇದೇನಪ್ಪಾ ಕಷ್ಟದ ಬಗ್ಗೆ ಮಾತಾಡ್ತಾ ಇದಾರಲ್ಲ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಹೌದು, ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದು ತುಂಬಾನೇ ಸವಾಲು. ಅಂತಹ ಹಲವಾರು ಸವಾಲು-ಕಷ್ಟಗಳನ್ನು ಎದುರಿಸಿ ನಿಂತವರು ಸಾಕಷ್ಟು ಮಂದಿ ಇಲ್ಲಿದ್ದಾರೆ. ಆ ಸಾಲಿಗೆ ಚಾಲೆಂಜಿಂಗ್‌ ದರ್ಶನ್‌ ಕೂಡ ಮೊದಲ ಸಾಲಲ್ಲಿ ಕಾಣುತ್ತಾರೆ. ಇಲ್ಲೀಗ ದರ್ಶನ್‌ ಅವರ ಬಗ್ಗೆ ಹೇಳುವುದಕ್ಕೂ ಕಾರಣವಿದೆ. ದರ್ಶನ್‌ ಅವರು ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಯಾಗಿ ಇಂದಿಗೆ ಬರೋಬ್ಬರಿ 24 ವರ್ಷಗಳು ಕಳೆದಿವೆ. ಇನ್ನೊಂದು ವರ್ಷ ಪೂರೈಸಿದರೆ, ಅವರ ಸಿನಿಮಾ ರಂಗದ ಪಾದಾರ್ಪಣೆಗೆ ಬೆಳ್ಳಿಹಬ್ಬದ ಸಂಭ್ರಮ ಆಚರಿಸುತ್ತಾರೆ. ಸದ್ಯ 24 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ದರ್ಶನ್‌ ಅವರಿಗೆ ಅಪಾರ ಮೆಚ್ಚುಗೆಯ ಮಾತುಗಳೇ ಕೇಳಿಬರುತ್ತಿವೆ.


ಆರಂಭದಲ್ಲಿ ಕೇವಲ ಲೈಟ್‌ಬಾಯ್‌ ಆಗಿ ಕಾರ್ಯನಿರ್ವಹಿಸುತ್ತಲೇ ಇಂದು, ಬಹು ಬೇಡಿಕೆಯ ನಟ ಎನಿಸಿಕೊಂಡಿರುವ ದರ್ಶನ್‌, ನಿಜಕ್ಕೂ ಅವರು ಕನ್ನಡ ಚಿತ್ರರಂಗದ ಮಟ್ಟಿಗೆ ಬಾಕ್ಸಾಫೀಸ್ ಸುಲ್ತಾನ್!‌ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟಿರುವ ದರ್ಶನ್‌, ಹಗಲಿರುಳು ಶ್ರಮಿಸಿದ್ದುಂಟು. ಖಳನಟರೆಂದೇ ಖ್ಯಾತಿ ಪಡೆದ ತೂಗದೀಪ ಶ್ರೀನಿವಾಸ್‌ ಅವರ ಪುತ್ರರಾಗಿ, ಅವರು ಇಲ್ಲಿ ಅನೇಕ ಏಳು-ಬೀಳು ಕಂಡಿದ್ದುಂಟು. ಒಂದೊಂದೇ ಯಶಸ್ಸಿನ ಮೆಟ್ಟಿಲು ಏರಿ ಬಂದ ದರ್ಶನ್, ಇಂದು ಸ್ಟಾರ್‌ ನಟ ಎನಿಸಿಕೊಂಡಿದ್ದಾರೆ. ಇದರ ಹಿಂದೆ ನೂರೆಂಟು, ನೋವು-ಅವಮಾನಗಳೂ ಇವೆ. ಅವರ ಹಠ ಮತ್ತು ಛಲದಿಂದಲೇ ಇಲ್ಲಿಯವರೆಗೆ 24 ವರ್ಷಗಳನ್ನು ಪೂರೈಸಿರುವ ದರ್ಶನ್‌, ತಾನು ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ ಕೂಡ.


ಸದ್ಯ ಗಾಂಧಿನಗರಕ್ಕೆ ಕಾಲಿಟ್ಟು ೨೪ ವರ್ಷ [ಪೂರೈಸಿರುವ ಸಂತಸ ದರ್ಶನ್‌ ಅವರದು. ಅವರ ಫ್ಯಾನ್ಸ್‌ ಕೂಡ ಈ ಸಂಭ್ರಮವನ್ನು ದೊಡ್ಡ ಮಟ್ಟದಲ್ಲೇ ಆಚರಿಸಿಕೊಳ್ಳುತ್ತಿದ್ದಾರೆ. ದರ್ಶನ್ ತಮ್ಮ ಗೆಳೆಯರ ಜೊತೆ ಸೇರಿ 24 ವರ್ಷದ ಸಂತಸವನ್ನು ಹಂಚಿಕೊಂಡಿದ್ದಾರೆ.

ಡಿ ಬಾಸ್ 24 ವರ್ಷದ ಪಯಣವನ್ನು ಅವರ ‌ ಸ್ನೇಹಿತರು ಅದ್ದೂರಿಯಾಗಿ ಆಚರಿಸಿದ್ದಾರೆ. ಕೇಕ್ ಕತ್ತರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ವಿನೋದ್‌ ಪ್ರಭಾಕರ್‌, ರಾಕ್ ಲೈನ್ ವೆಂಕಟೇಶ್, ಸೌಂದರ್ಯ ಜಗದೀಶ್ ಸೇರಿದಂತೆ ಸಂಭ್ರಮಾಚರಣೆಯಲ್ಲಿ ದರ್ಶನ್ ಆಪ್ತರು ಭಾಗಿಯಾಗಿ ಶುಭಕೋರಿದ್ದಾರೆ.

Categories
ಸಿನಿ ಸುದ್ದಿ

ವಿಜಯಾನಂದ ಮೋಷನ್‌ ಪೋಸ್ಟರ್‌ ಲಾಂಚ್‌ ; ಕುತೂಹಲ ಮೂಡಿಸುತ್ತಿದೆ ವಿಆರ್‌ ಎಲ್‌ ಸಾಮ್ರಾಜ್ಯದ ರೋಚಕ ಕಥೆ!

ಒಂದು ಲಾರಿಯ ಬೆನ್ನೇರಿ ಪ್ರಪಂಚವನ್ನೇ ತನ್ನೆಡೆಗೆ ತಿರುಗಿಸಿಕೊಂಡ ಸಾಧಕನ ದಂತ ಕತೆ…

ವಿಆರ್‌ಎಲ್‌ ಫಿಲಂಸ್‌ ಪ್ರೊಡಕ್ಷನ್‌ ನಿರ್ಮಾಣದ ಮೊದಲ ಬಹುನಿ ರೀಕ್ಷಿತ ಚಿತ್ರ ʼವಿಜಯಾನಂದʼ ಈಗ ಮೋಷನ್‌ ಟೀಸರ್‌ ಮೂಲಕ ಸೌಂಡ್‌ ಮಾಡುತ್ತಿದೆ. ರಿಷಿಕಾ ಶರ್ಮಾ ನಿರ್ದೇಶನ ಹಾಗೂ ನಿಹಾಲ್‌ ರಜಪೂತ್‌ ಅಭಿನಯದ ʼವಿಜಯಾನಂದʼ ಚಿತ್ರದ ಮೋಷನ್‌ ಟೀಸರ್‌ ಗುರುವಾರ ಲಾಂಚ್‌ ಆಗಿದೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ವಿಆರ್‌ ಎಲ್‌ ಸಂಸ್ಥೆಯ ಮಾಲೀಕ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ್‌ ಅವರ ಜೀವನ ಆಧರಿತ ಸಿನಿಮಾ , ಆಗಸ್ಟ್‌ ೨ ರಂದು ಇದರ ಟೈಟಲ್‌ ಲಾಂಚ್‌ ಜತೆಗೆ ಫಸ್ಟ್‌ ಲುಕ್‌ ಪೋಸ್ಟರ್‌ ಹೊರ ಬಂದಿತ್ತು. ವಿಜಯ್‌ ಸಂಕೇಶ್ವರ್‌ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವಿಆರ್‌ಎಲ್‌ ಸಮೂ ಹ ಸಂಸ್ಥೆಗಳ ಮ್ಯಾನೇಜಿಂಗ್‌ ಡೈರೆಕ್ಟರ್‌ ಆನಂದ್‌ ಸಂಕೇಶ್ವರ ಅವರು ಈ ಚಿತ್ರದ ಫಸ್ಟ್‌ ಲುಕ್‌ ಲಾಂಚ್‌ ಮಾಡಿದ್ದರು. ಇದೀಗ ಮೋಷನ್‌ ಪೋಸ್ಟ ರ್‌ ಲಾಂಚ್‌ ಆಗಿದ್ದು, ಸಿನಿಮಾ ಪ್ರಿಯರಲ್ಲಿ ಹೊಸ ಭರವಸೆ ಮೂಡಿಸಿದೆ.

ಲಾಜಿಸ್ಟಿಕ್‌ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೆಸರು ವಿಆರ್‌ಎಲ್. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಭಾರತದಲ್ಲಿಯೇ ವಿಆರ್‌ ಎಲ್‌ ಜನಜನಿತ. ಇಷ್ಟು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವ್ಯಕ್ತಿ ವಿಜಯ್ ಸಂಕೇಶ್ವರ.‌ ಅವರ ಸಾಧನೆಯ ಹಿಂದಿನ ರೋಚಕ ಕಥೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಪ್ರಯತ್ನವೇ ʼವಿಜಯಾನಂದ ʼಸಿನಿಮಾ. ವಿಆರ್‌ ಎಲ್‌ ಫಿಲಂ ಪ್ರೊಡಕ್ಷನ್‌ ಲಾಂಛನದಲ್ಲಿ ವಿಜಯ್‌ ಸಂಕೇಶ್ವರ ಅವರ ಪುತ್ರ ಆನಂದ್‌ ಸಂಕೇಶ್ವರ ಇದರ ನಿರ್ಮಾಪಕರು.

ಯುವ ನಿರ್ದೇಶಕಿ ರಿಷಿಕಾ ಶರ್ಮಾ ಈ ಚಿತ್ರದ ನಿರ್ದೇಶಕರು. ಕಳೆದ ಎಂಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭದ ಅವರಿಗಿದೆ. ಹಾಗೆಯೇ ʼಟ್ರಂಕ್‌ ʼ ಹೆಸರಿನ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದು, ಇದೀಗ ಅದೃಷ್ಟವೇ ಎನ್ನುವ ಹಾಗೆ ವಿಆರ್‌ ಎಲ್‌ ಸಂಸ್ಥೆಯ ಮಾಲೀಕ ವಿಜಯ್‌ ಸಂಕೇಶ್ವರ ಅವರ ಬಯೋಫಿಕ್‌ ಅನ್ನು ತೆರೆಗೆ ತರುವ ಅವಕಾಶ ಸಿಕ್ಕಿದೆ.

https://www.youtube.com/watch?v=jfTVhiwGhFY

ಇನ್ನು ವಿಜಯಾನಂದ ಚಿತ್ರದಲ್ಲಿ ಕಥಾ ನಾಯಕ ವಿಜಯ್‌ ಸಂಕೇಶ್ವರ್‌ ಅವರ ಪಾತ್ರಕ್ಕೆ ಯುವ ನಟ ನಿಹಾನ್‌ ರಜಪೂತ್‌ ಬಣ್ಣ ಹಚ್ಚುತ್ತಿದ್ದಉ, ಇದೀಗ ಮೋಷನ್‌ ಪೋಸ್ಟರ್‌ ನಲ್ಲಿ ಅವರ ಮೊದಲ ಲುಕ್‌ ರಿವೀಲ್‌ ಆಗಿದೆ.


ಮಲಯಾಳಂ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇನ್ನು ಕಡಲ ತೀರದ ಭಾರ್ಗವ ಮತ್ತು ಮಹಿರ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಕೀರ್ತನ ಪೂಜಾರಿ ಈ ಚಿತ್ರಕ್ಕೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂ ಡಿದ್ದಾರೆ. ಹೇಮಂತ್‌ ಕುಮಾರ್‌ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದ್ದು, ಸೆಪ್ಟೆಂಬರ್‌ ನಲ್ಲಿ ಚಿತ್ರೀಕರಣ ಶುರುವಾಗುವ ಸಾಧ್ಯತೆಗಳಿವೆ ಎನ್ನುತ್ತಿದೆ ಚಿತ್ರತಂಡ.

Categories
ಸಿನಿ ಸುದ್ದಿ

ಅಮರ ಪ್ರೇಮಿ ಅರುಣ್‌! ಮೊದಲ ಹಂತ ಮುಗಿಸಿದ ಖುಷಿಯಲ್ಲಿ ಹೊಸಬರು…

ಅಮರ ಪ್ರೇಮಿ ಅರುಣ್ ಸಿನಿಮಾದ ವಿಶೇಷ ಪಾತ್ರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಪದ್ಮಶ್ರೀ ಜೋಗತಿ ಮಂಜಮ್ಮ ನಟಿಸಿದ್ದಾರೆ…

ಒಲವು ಸಿನಿಮಾ ಸಂಸ್ಥೆಯು ನಿರ್ಮಿಸುತ್ತಿರುವ ʼಅಮರ ಪ್ರೇಮಿ ಅರುಣ್ʼ ಸಿನಿಮಾ, ತನ್ನ ಮೊದಲ ಸುತ್ತಿನ ಚಿತ್ರೀಕರಣವನ್ನು ಬಳ್ಳಾರಿ ನಗರದಲ್ಲಿ ಮುಗಿಸಿದ್ದು, ಈಗ ಮತ್ತೆ ಬಳ್ಳಾರಿಯಲ್ಲಿಯೇ ನಡೆಯಲಿರುವ ಎರಡನೇ ಸುತ್ತಿನ ಚಿತ್ರೀಕರಣಕ್ಕೆ ತಂಡ ತಯಾರಾಗುತ್ತಿದೆ.

ಬಳ್ಳಾರಿ ನಗರದ ಪ್ರಮುಖ ಜಾಗಗಳಲ್ಲಿ ನಾಯಕ ಹರಿಶರ್ವಾ, ನಾಯಕಿ ದೀಪಿಕಾ ಆರಾಧ್ಯ ಸೇರಿದಂತೆ ಧರ್ಮಣ್ಣ, ಭೂಮಿಕಾ ಭಟ್, ಮಹೇಶ್ ಬಂಗ್, ಬಲರಾಜ್ವಾಡಿ, ರೋಹಿಣಿ, ವಿಜಯಲಕ್ಷ್ಮಿ ಮತ್ತು ಅನೇಕ ಕಲಾವಿದರ ನಟನೆಯಲ್ಲಿ ದೃಶ್ಯಗಳನ್ನು ಚಿತ್ರಿಸಲಾಗಿದೆ.

ʼಅಮರ ಪ್ರೇಮಿ ಅರುಣ್ʼ ಸಿನಿಮಾ ವಿಶೇಷ ಪಾತ್ರಗಳಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಪದ್ಮಶ್ರೀ ಜೋಗತಿ ಮಂಜಮ್ಮನವರು ಮತ್ತು ಖ್ಯಾತ ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ ಅವರು ನಟಿಸಿದ್ದಾರೆ.

ಚಿತ್ರಕ್ಕೆ ಪ್ರವೀಣ್ ಕುಮಾರ್ ಜಿ ಅವರ ರಚನೆ-ನಿರ್ದೇಶನ, ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ನಿರಂಜನ್ ದೇವರ ಮನೆಯವರ ಸಂಕಲನ, ಮಂಡ್ಯ ಮಂಜು ಅವರ ಕಾರ್ಯಕಾರಿ ನಿರ್ಮಾಣವಿದೆ. ಜಯಂತ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಅವರ ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಜೋಗಿ ಪ್ರೇಮ್ ಚಿತ್ರದಲ್ಲಿ ಹಳ್ಳಿ ಹೈದ ಹನುಮಂತ ಗಾನ; ಕೊಟ್ಟ ಮಾತು ಉಳಿಸಿಕೊಂಡ್ರು ಅರ್ಜುನ್ ಜನ್ಯಾ !

ಹೊತ್ತಿಲ್ಲದ ಹೊತ್ತು, ತುತ್ತಿಲ್ಲದೇ ನಿಂತು,ಕಾದಿದ್ದೆ ನಿನಗಾಗಿ ಯಾಕೇ, ಹೇಳು ಯಾಕೇ, ಹೇಳು ಯಾಕೇ.ಆಣೆಯ ಇಟ್ಟು ಭಾಷೆಯ ಕೊಟ್ಟು, ಹಿಂದಿಂದೆ ಬಂದಿದ್ದು ಯಾಕೇ,ಹೇಳು ಯಾಕೇ, ಹೇಳು ಯಾಕೇ, ಈ ರೀತಿ ಸಾಗುವ ಏಕ್ ಲವ್ ಯಾ’ ಚಿತ್ರದ ಹಾಡು ಸುನೀಲ್ ಹಾಗೂ ಹನುಮನ ಕಂಠಸಿರಿಯಲ್ಲಿ ಮೂಡಿ ಬರಲಿದೆ…

  • ವಿಶಾಲಾಕ್ಷಿ

ಹೊಡಿರೀ ಹಲಗಿ.. ಹಚ್ಚಿ ಪಟಾಕಿ… ಹಳ್ಳಿಹೈದ ಹನುಮಂತಣ್ಣ ಮತ್ತೆ ಅಖಾಡಕ್ಕೆ ಇಳಿದಿದ್ದಾನೆ. ಮ್ಯೂಸಿಕ್ ಲೋಕದಲ್ಲಿ ಮ್ಯಾಜಿಕ್ ಮಾಡೋದಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾನೆ. ಅಂದ್ಹಾಗೇ, ಚಿಲ್ಲೂರು ಚಿಂಗಾರಿಯನ್ನು ಮತ್ತೆ ಕಣಕ್ಕೆ ಇಳಿಸಿರುವುದು ಡೈರೆಕ್ಟರ್ ಜೋಗಿ ಪ್ರೇಮ್ ಹಾಗೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ . ಹಾವೇರಿ ಜಿಲ್ಲೆ ಸವಣೂರ್ ತಾಲೂಕ್ ಬಡ್ನಿ ತಾಂಡಾದಲ್ಲಿ ಮತ್ತೆ ಕುರಿ ಕಾಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಹನುಮನನ್ನು ಮತ್ತೆ ಬೆಂಗಳೂರಿಗೆ ಕರೆತಂದಿದ್ದಾರೆ. ಜನ್ಯಾಜೀ ಫೋನ್ ಹೋಗಿದ್ದೇ ತಡ ಬಡ್ನಿ ಹೈದ ಹನುಮ ಅಂಗಿ-ಲುಂಗಿ ತೊಟ್ಟು ಹೆಗಲಿಗೊಂದು ಟವಲ್ ಹಾಕಿಕೊಂಡು ಬೆಂಗಳೂರಿಗೆ ಬಂದಿಳಿದಿದ್ದಾನೆ.

ಸವಣೂರ್ ಸೂಪರ್‌ಸ್ಟಾರ್ ಎನಿಸಿಕೊಂಡಿದ್ದ ಹನುಮಂತನಿಗೆ ಅರ್ಜುನ್ ಜನ್ಯಾ ತಮ್ಮ ಸಿನಿಮಾದಲ್ಲಿ ಒಂದು ಅವಕಾಶ ಕೊಡ್ತೀನಿ ಅಂತ ಸಾರೆಗಾಮ' ಅಂಗಳದಲ್ಲೇ ಅನೌನ್ಸ್ ಮಾಡಿದ್ದರು. ಪ್ರೇಮ್ ನಿರ್ದೇಶನದ ಸಿನೆಮಾದಲ್ಲಿ ಸಾರೆಗಾಮ ರನ್ನರ್ ಅಪ್ ಹನುಮನಿಗೆ ಹಾಡುವ ಅವಕಾಶ ಸಿಗಲಿದೆ ಎನ್ನುವ ಸುದ್ದಿಯೊಂದು ಈ ಹಿಂದೆ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು. ಇದೀಗ, ಆ ಸುದ್ದಿ ನಿಜವಾಗಿದೆ. ಹಳ್ಳಿಹಕ್ಕಿ ಹನುಮನಿಗೆ ಜೋಗಿ ಪ್ರೇಮ್ ನಿರ್ದೇಶನದಏಕ್ ಲವ್’ ಯಾ’ ಚಿತ್ರದಲ್ಲಿ ಹಾಡುವ ಚಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದು, `ಸಾರೆಗಾಮ’ ಸೀಸನ್ 13ರ ವಿನ್ನರ್ ಸುನೀಲ್ ಜೊತೆ ಚಿಲ್ಲೂರು ಚಿಂಗಾರಿ ಹನುಮಂತ ಕಂಠಕುಣಿಸಿದ್ದಾರೆ.

ಹೊತ್ತಿಲ್ಲದ ಹೊತ್ತು, ತುತ್ತಿಲ್ಲದೇ ನಿಂತು.. ಕಾದಿದ್ದೆ ನಿನಗಾಗಿ ಯಾಕೇ.. ಹೇಳು ಯಾಕೇ.. ಹೇಳು ಯಾಕೇ.. ಆಣೆಯ ಇಟ್ಟು ಭಾಷೆಯ ಕೊಟ್ಟು.. ಹಿಂದಿಂದೆ ಬಂದಿದ್ದು ಯಾಕೇ.. ಹೇಳು ಯಾಕೇ.. ಹೇಳು ಯಾಕೇ.. ಈ ರೀತಿಯಾಗಿ ಸಾಗುವ ಏಕ್ ಲವ್ ಯಾ’ ಚಿತ್ರದ ಹಾಡು ಸುನೀಲ್ ಹಾಗೂ ಹನುಮನ ಕಂಠಸಿರಿಯಲ್ಲಿ ಮೂಡಿಬರಲಿದೆ. ಇತ್ತೀಚೆಗೆ ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ಕಾರ್ಯ ಮುಗಿದಿದೆ. ಅದರ ಝಲಕ್‌ನ ಡೈರೆಕ್ಟರ್ ಪ್ರೇಮ್ ಹಾಗೂ ಜನ್ಯಾಜೀಯವರು ತಮ್ಮ ಸೋಷಿಯಲ್ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ನೋಡಿ ಬಡ್ನಿಭೀಮನ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಂತಹ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾಗೆ ಉಘೇ ಉಘೇ ಎನ್ನುತ್ತಿದ್ದಾರೆ. ಸೆನ್ಸೇಷನಲ್ ಡೈರೆಕ್ಟರ್ ಸಿನಿಮಾದಲ್ಲಿ ಹನುಮ ಹಾಡಿದ್ದಾಯ್ತು ಈ ಹಾಡಿನಿಂದ ಹಳ್ಳಿ ಹೈದನ ಸಂಗೀತ ಪಯಣಕ್ಕೆ ಕಿಕ್‌ಸ್ಟಾರ್ಟ್ ಸಿಗುವಂತಾಗಲಿ, ಬಣ್ಣದ ಲೋಕದಲ್ಲಿ ಬಡ್ನಿಭೀಮನ ಜವಾರಿ ಬಂಡಿ ಸಾಗಲಿ ಅನ್ನೋದೇ ಸಿನಿಲಹರಿ ಆಶಯ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕೆಜಿಎಫ್ ಚಾಪ್ಟರ್-2 ಗೆ ಓಟಿಟಿ ಬಿಗ್ ಆಫರ್; ನೋ ವೇ ಚಾನ್ಸೇ ಇಲ್ಲ ಅಂದ್ರಂತೆ ರಾಕಿಭಾಯ್!

ಚಿನ್ನದ ಸಾಮ್ರಾಜ್ಯದ ಅಧಿಪತಿಗಳಿಗೆ ಆಫರ್ ಕೊಡ್ತಿರಾ, ಕೋಟಿ ಆಸೆ ತೋರಿಸಿ ಕ್ಯಾಚ್ ಹಾಕಿಕೊಳ್ಳೋ ದುರಾಸೆ ಬುಟ್ಬುಡಿ…

ಇಡೀ ಜಗತ್ತೇ ಎದುರು ನೋಡ್ತಿರುವ ಕನ್ನಡದ ಹೆಮ್ಮೆಯ ಸಿನಿಮಾ ಅಂದರೆ ಅದು ಎಲ್ಲರಿಗೂ ಗೊತ್ತು
ಕೆಜಿಎಫ್ ಚಾಪ್ಟರ್ 2. ಪ್ರಶಾಂತ್ ನೀಲ್‌ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಪಾರ್ಟ್ 1 ಬಿಡುಗಡೆಯಾಗಿ ಎರಡೂವರೆ ವರ್ಷಗಳು ಉರುಳಿವೆ. ಆದರೂ ಕೂಡ ಈ‌ ಸಿನಿಮಾದ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ದಿನಗಳು ಉರುಳಿದಂತೆ ಕೆಜಿಎಫ್ ಕ್ರೇಜ್‌ ಹೆಚ್ಚಾಗುತ್ತಲೇ ಇದೆ. ಆಲ್ ಓವರ್ ಇಂಡ್ಯಾ ಕೆಜಿಎಫ್ ಚಾಪ್ಟರ್ 2 ರಿಲೀಸ್ ಯಾವಾಗ ಅಂತ ಕೇಳ್ತಿದ್ದಾರೆ. ವಲ್ಡ್ ವೈಡ್ ಕನ್ನಡದ ಚಿತ್ರಕ್ಕಿರುವ ಬೇಡಿಕೆಯನ್ನು ಗಮನಿಸಿದ ಓಟಿಟಿ ಕೆಜಿಎಫ್ ಚಾಪ್ಟರ್ 2 ಮೇಲೆ ಕಣ್ಣಿಟ್ಟು ಬಿಗ್ ಆಫರ್ ಮಾಡಿದೆಯಂತೆ.

ಹೌದು, ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಭಾರೀ ಬೇಡಿಕೆ ಇದೆ. ಆಚೆ-ಈಚೆ-ನೀಚೆ- ಪೀಚೆ ಮಾತ್ರವಲ್ಲ ದೇಶ- ವಿದೇಶದ ಸಿನಿಮಾ ಮಂದಿ ಕೂಡ ಕನ್ನಡದ‌ ಕೆಜಿಎಫ್ ನ ನಮ್ಮ ಅಂಗಳದಲ್ಲಿ‌ ರಿಲೀಸ್ ಮಾಡೋಕೆ ಅವಕಾಶ ಕೊಡಿ ಅಂತ ಹೊಂಬಾಳೆ ನಿರ್ಮಾಣ ಸಂಸ್ಥೆಯ ದುಂಬಾಲು ಬಿದ್ದಿದ್ದಾರೆ. ಈ ಮಧ್ಯೆ ಲೀಡಿಂಗ್ ನಲ್ಲಿರುವ ಜನಪ್ರಿಯ ಓಟಿಟಿ ಸಂಸ್ಥೆ ಕೆಜಿಎಫ್ ಚಾಪ್ಟರ್ ೨ ಗೆ 250 ಕೋಟಿ ಆಫರ್ ಮಾಡಿದೆಯಂತೆ. ಆದರೆ, ಈ ಆಫರ್ ನ ರಾಕಿಭಾಯ್ ಎಡಗೈ ನಲ್ಲಿ ಸರಿಸಿದ್ದಾರಂತೆ.

ಕೊರೊನಾ ಅಟ್ಟಹಾಸ ಮುಗಿಯುತ್ತಿಲ್ಲ, ಚಿತ್ರಮಂದಿರಗಳು‌ ಬಾಗಿಲು ತೆರೆಯುತ್ತಿಲ್ಲ.‌ ಶೇಕಡ 100 ರಷ್ಟು ಆಸನ ಭರ್ತಿಗೆ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಹೀಗಾಗಿ ಕೆಜಿಎಫ್ ಸೇರಿದಂತೆ ಬಹುತೇಕ ಎಲ್ಲಾ ದೊಡ್ಡ ಸಿನಿಮಾಗಳು ಹಾಗೂ ಕಡಿಮೆ ಬಜೆಟ್ ನ ಹೊಸಬರ ಚಿತ್ರಗಳು ತೆರೆಗೆ ತರುವುದಕ್ಕೆ ಚಿತ್ರತಂಡಗಳು ಹಿಂದೇಟು‌ ಹಾಕುತ್ತಿವೆ. ಇದೇ ಟೈಮ್ ನ‌ ಸದುಪಯೋಗ ಪಡಿಸಿಕೊಳ್ಳಬೇಕು ಅಂತ ಜನಪ್ರಿಯ ಓಟಿಟಿ ಸಂಸ್ಥೆ 250 ಕೋಟಿ ಕೊಡ್ತೀವಿ ನೇರವಾಗಿ ಕೆಜಿಎಫ್ ಚಾಪ್ಟರ್ 2 ನ ಓಟಿಟಿ ವೇದಿಕೆಯಲ್ಲಿ ‌ರಿಲೀಸ್ ಮಾಡ್ತೀರಾ ಅಂತ ಕೇಳಿಕೊಂಡಿದ್ದಾರೆ. ಇದಕ್ಕೆ ಹೊಂಬಾಳೆ ಬ್ಯಾನರ್ ನ ಓನರ್ ಏನಂದ್ರೋ ಗೊತ್ತಿಲ್ಲ ಆದರೆ, ರಾಕಿಭಾಯ್ ಮಾತ್ರ ನೋ‌ ವೇ ಚಾನ್ಸೇ ಇಲ್ಲ ಗುರು ಎಂದಿದ್ದಾರಂತೆ.

ಆಲ್ ಓವರ್ ಇಂಡ್ಯಾದಲ್ಲಿರುವ ನನ್ನ ಫ್ಯಾನ್ಸ್ ಹಾಗೂ ಕೆಜಿಎಫ್ ಸಿನಿಮಾಗಾಗಿ ಕಾದು ಕುಳಿತಿರುವ ಪ್ರೇಕ್ಷಕ ಮಹಾಷಯರು ಕೆಜಿಎಫ್ ಚಾಪ್ಟರ್-2 ನ ಥಿಯೇಟರ್ ನಲ್ಲೇ‌ ನೋಡಬೇಕು, ಬಿಗ್ ಸ್ಕ್ರೀನ್ ನಲ್ಲೇ ನಮ್ಮ ಸಿನಿಮಾನ‌ ಕಣ್ತುಂಬಿಕೊಳ್ಳಬೇಕು. ಇಂತಹದ್ದೊಂದು ಟೈಮ್ ಬರುವುವವರೆಗೂ ಕಾಯ್ತೇವೆ ಹೊರೆತು ಯಾವುದೇ ಕಾರಣಕ್ಕೂ ಓಟಿಟಿಯಲ್ಲಿ ರಿಲೀಸ್ ಮಾಡೋದಿಲ್ಲ‌ ಅಂತ ನ್ಯಾಷನಲ್‌ಸ್ಟಾರ್ ರಾಕಿಭಾಯ್ ತೀರ್ಮಾನ ಮಾಡಿದ್ದಾರಂತೆ.‌ ಹೀಗಂತ ತಮಿಳಿನ ಖ್ಯಾತ ಅಂಕಣಕಾರರು ಹಾಗೂ ಲೇಖಕರಾಗಿ ಗುರ್ತಿಸಿ ಕೊಂಡಿರುವ ಮನೋಬಾಲ ಅವರು ತಮ್ಮ ಟ್ವೀಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಈ‌ ಸುದ್ದಿ ಕೇಳಿ ರಾಕಿಂಗ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಥಿಯೇಟರ್ ನಲ್ಲಿ ಕೆಜಿಎಫ್ ರಿಲೀಸ್ ಆಗಬೇಕು ಎನ್ನುವ ರಾಕಿ ನಿರ್ಧಾರಕ್ಕೆ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಅಧೀರ ಹಾಗೂ ರಾಕಿ ಕಾಳಗ ಹೇಗಿರಬಹುದು ಅಂತ ಲೆಕ್ಕಚ್ಚಾರ ಹಾಕುತ್ತಾ ಕೆಜಿಎಫ್ ಸಾಮ್ರಾಜ್ಯನ ಕಣ್ಮುಂದೆ ತಂದುಕೊಳ್ತಿದ್ದಾರೆ. ಎನಿವೇ,
ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಬಿಗ್ ಅಪ್ ಡೇಟ್ ಶೀಘ್ರದಲ್ಲೇ ರಿವೀಲ್ ಆಗಲಿದೆ. ಅಲ್ಲಿವರೆಗೂ ವೇಯ್ಟ್ ಅಂಡ್ ಸೀ

ವಿಶಾಲಾಕ್ಷಿ ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲವ್ ಯೂ ರಚ್ಚು ‘ದುರಂತ ; ಮೃತ ಫೈಟರ್ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ- ಸದ್ಯ 5 ಲಕ್ಷ ಚೆಕ್ ಹಸ್ತಾಂತರ !

‘ಲವ್ ಯೂ ರಚ್ಚು’ ಸಿನಿಮಾ ಸೆಟ್ ನಲ್ಲಿ ನಡೆದ ದುರಂತದ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೆಯಿದೆ. ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಪ್ರಾಣಬಿಟ್ಟ ಫೈಟರ್ ವಿವೇಕ್ ಸಾವಿಗೆ ನೀವೆಲ್ಲರೂ ಕೂಡ ಕಂಬನಿ ಮಿಡಿದಿದ್ದೀರಾ, ಮರುಕ ಪಟ್ಟಿದ್ದೀರಾ ಅದೇ ರೀತಿ ಚಿತ್ರತಂಡ ಕೂಡ ಕೊರಗುತ್ತಿದೆ, ನಿರ್ಮಾಪಕ ಗುರು ದೇಶ್ ಪಾಂಡೆ ಕುಟುಂಬ ಕೂಡ ವಿಷಾದ ವ್ಯಕ್ತಪಡಿಸುತ್ತಿದೆ.‌

ನಮ್ಮ ಬ್ಯಾನರ್ ನ ಸಿನಿಮಾದಲ್ಲಿ ಇಂತಹದ್ದೊಂದು‌ ಅವಘಡ ಸಂಭವಿಸಿಬಾರದಿತ್ತು, ದುರದೃಷ್ಟವಶಾತ್ ದುರಂತ ಸಂಭವಿಸಿದೆ. ಈಗ ಮೃತ ವಿವೇಕ್ ನ ಜೀವಂತವಾಗಿ ತಂದು ಕೊಡುವುದಕ್ಕಂತೂ ಆಗೋದಿಲ್ಲ ಹಾಗಂತ ವಿವೇಕ್ ಕುಟುಂಬವನ್ನೂ ನಾವು ಕೈಬಿಡುವುದಿಲ್ಲ. ವಿವೇಕ್ ಅಂತಿಮ ಕಾರ್ಯಕ್ಕೂ ಹಣ ನೀಡಿದ್ದೇವೆ, ಗಾಯಗೊಂಡು ಆಸ್ಪತ್ರೆ ಸೇರಿರುವ ರಂಜಿತ್ ಚಿಕಿತ್ಸಾ ವೆಚ್ಚ ಕೂಡ ಭರಿಸಿದ್ದಾರೆ ಎಂದಿದ್ದಾರೆ.

ಸದ್ಯ ಗುರುದೇಶ್ ಪಾಂಡೆ ಎಲ್ಲಿದ್ದಾರೋ ಗೊತ್ತಿಲ್ಲ.
ಘಟನೆ ನಡೆದ ಕ್ಷಣದಿಂದ ಯಾರ ಕೈಗೂ ಕೂಡ ಸಿಗುತ್ತಿಲ್ಲ. ಅಜ್ಞಾತ ಸ್ಥಳದಿಂದಲೇ ಲಾಯರ್ ಗೆ ಮೇಲ್ ಮಾಡಿ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿ ಎಂದು ಹೇಳಿದ್ದರಂತೆ. ಹೀಗಾಗಿ, ಗುರು ದೇಶ್ ಪಾಂಡೆಯವರ ಪತ್ನಿ ಪ್ರಿತಿಕಾ ದೇಶ್ ಪಾಂಡೆ
ಜಿ ಸಿನಿಮಾ ಅಕಾಡೆಮಿ ಪರ ವಕೀಲ ನಾಗಭೂಷಣ್, ಹಾಗೂ ಗುರು ದೇಶ್ ಪಾಂಡೆ ಪರ ವಕೀಲ ಕೆಂಪೇಗೌಡರ ಜೊತೆ ಸುದ್ದಿಗೋಷ್ಠಿ ನಡೆಸಿದರು.


10 ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದೇವೆ, ಸದ್ಯ 5 ಲಕ್ಷ ಚೆಕ್ ನ ಹಸ್ತಾಂತರಿಸುತ್ತೇವೆ. ವಿವೇಕ್ ಮನೆಗೆ ನಾವೇ ಖುದ್ದಾಗಿ ಹೋಗಿ ಅವರ ತಾಯಿ ಕೈಗೆ 5 ಲಕ್ಷ ಚೆಕ್ ಒಪ್ಪಿಸಲಿದ್ದೇವೆ ಅಂತ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದರು.

ಪ್ರಕರಣ ತನಿಖೆಯ ಹಂತದಲ್ಲಿದೆ ಹೆಚ್ಚು ಮಾತನಾಡುವುದಿಲ್ಲ, ತಪ್ಪಿತಸ್ಥರು ನೀವೇ ಅಂತ ನಮ್ಮ ನಿರ್ಮಾಣ ಸಂಸ್ಥೆಯ ಮೇಲೆ ಬಂದರೆ ಅದರ ಹೊಣೆಯನ್ನ ನಾವೇ ಹೊರುತ್ತೇವೆ ಎಂದು
ಕ್ಯಾಮೆರಾ ಮುಂದೆ ಹೇಳಿದ್ದಾರೆ. ಪ್ರಕರಣ ಸಂಬಂಧ ಲವ್ ಯೂ ರಚ್ಚು ಚಿತ್ರದ ನಿರ್ದೇಶಕ ಶಶಾಂಕ್ ರಾಜ್, ನಿರ್ಮಾಪಕ ಗುರುದೇಶ್ ಪಾಂಡೆ, ಸಾಹಸ ನಿರ್ದೇಶಕ ವಿನೋದ್, ಸಿನಿಮಾ ಇನ್ ಚಾರ್ಜ್ ಫರ್ನಾಂಡೀಸ್, ಕ್ರೇನ್ ಆಪರೇಟರ್ ಮಹದೇವ್ ಸೇರಿದಂತೆ ಐವರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಈಗಾಗಲೇ ಮೂವರನ್ನು ಅರೆಸ್ಟ್ ಮಾಡಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಾನೂನು ಯಾವ ರೀತಿಯ ತೀರ್ಪು ಕೊಡುತ್ತೆ ಕಾದುನೋಡಬೇಕಿದೆ.

Categories
ಸಿನಿ ಸುದ್ದಿ

ಶಿವಣ್ಣ ನಿಮ್ಮ ಆಶೀರ್ವಾದದಿಂದಲೇ ಈ‌ ಟ್ರೋಪಿ ನಂಗೆ ಸಿಕ್ತು! ದೊಡ್ಮನೆಗೆ ಬಿಗ್ ಬಾಸ್ ವಿನ್ನರ್ ಮಂಜಣ್ಣ ಎಂಟ್ರಿ…

ಬಿಗ್‌ ಬಾಸ್‌ ವಿನ್ನರ್‌ ಮಂಜು ಪಾವಗಡ ಬುಧವಾರ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ಕೆಲ ಹೊತ್ತು ಮಾತನಾಡಿ ಅವರ ಆಶೀರ್ವಾದ ಪಡೆದರು. ಶಿವಣ್ಣ ಅವರ ಕಾಲಿಗೆ ನಮಸ್ಕರಿಸೀದ ಮಂಜು ಪಾವಗಡ, ಸಿಹಿ ತಿನಿಸಿ ಸಂಭ್ರಮಪಟ್ಟರು.

ಶಿವರಾಜ್‌ ಕುಮಾರ್‌ ಅವರೊಂದಿಗೆ ಮಾತನಾಡಬೇಕೆನ್ನುವ ಬಹುದೊಡ್ಡ ಆಸೆಯನ್ನು ಬಿಗ್‌ ಬಾಸ್‌ ಮನೆಯಲ್ಲಿದ್ದಾಗಲೇ ಈಡೇರಿಸಿಕೊಂಡಿದ್ದ ಮಂಜು, ಬುಧವಾರ ನಾಗವಾರದಲ್ಲಿರುವ ಶಿವರಾಜ್‌ ಕುಮಾರ್‌ ನಿವಾಸಕ್ಕೆ ತೆರಳಿ ತಮ್ಮ ಮತ್ತೊಂದು ಆಸೆಯನ್ನು ಈಡೇರಿಸಿಕೊಂಡಿದ್ದುವಿಶೇಷ.

ಬಿಗ್‌ ಬಾಸ್‌ ಟ್ರೋಪಿ ಸಮೇತ ತೆರಳಿದ್ದ ಮಂಜು ಪಾವಗಡ, ಟ್ರೋಪಿ ಹಿಡಿದುಕೊಂಡೇ ಶಿವರಾಜ್‌ ಕುಮಾರ್‌ ಜತೆಗೆ ಕ್ಯಾಮಾರಾಕ್ಕೆ ಪೋಸು ಕೊಟ್ಟರು.

Categories
ಸಿನಿ ಸುದ್ದಿ

ಗಂಧದಗುಡಿ ಅರಗಿಣಿ ಯಾವುದರಲ್ಲಿ ಕಮ್ಮಿ ಗುರು ; ಕಣ್ಣರಳಿಸಿ ನೋಡಿ- ಗಡಿದಾಟೋದು ಬಿಡಿ !?

ಕೋಟಿ ಕೋಟಿ ಸುರಿದು ಅದ್ಯಾಕೆ ಬೇರೆ ಭಾಷೆಯ ಬೆಡಗಿಯರನ್ನು ರತ್ನಗಂಬಳಿ ಹಾಕಿಕೊಂಡು ಕರೆತರುತ್ತೀರಿ? ನಮ್ಮಲ್ಲೇ ಗಿಲ್ಲಿಯಂಹ ಗರ್ಲ್ಸ್ ಇದ್ದಾರೆ, ಮಾದಕತೆ ತುಂಬಿರುವ ಅಭಿನಯದ ಮೂಲಕ ಕಿಕ್ಕೇರಿಸುವ ನಟಿಮಣಿಯರು ಇದ್ದಾರೆ. ಒಂದೇ ಒಂದು ಸೆಕೆಂಡ್ ಕಣ್ಣರಳಿಸಿ ನೋಡಿದ್ರೆ ನೀವ್ಯಾರು ಗಡಿದಾಟಲ್ಲ ಬರೆದಿಟ್ಟುಕೊಳ್ಳಿ!

ಗಂಧದಗುಡಿ ಅರಗಿಣಿ ಯಾವುದರಲ್ಲಿ ಕಮ್ಮಿ ಗುರು.. ಕಣ್ಣರಳಿಸಿ ನೋಡಿ- ಗಡಿದಾಟೋದು ಬಿಡಿ, ಹೀಗಂತ ನಾವು ಹೇಳ್ತಿಲ್ಲ ಅವರ ಫ್ಯಾನ್ಸ್ ಹೇಳ್ತಿದ್ದಾರೆ. ಗಿಣಿಯ ಫ್ಯಾನ್ಸ್ಫಾಲೋಯರ್ಸ್ ಈ ರೀತಿಯಾಗಿ ಗುಡುಗುತ್ತಿರುವುದಕ್ಕೂ ಕಾರಣ ಇದೆ ಅದೇನು ಅಂತ ಹೇಳ್ತೀವಿ. ಅದಕ್ಕೂ ಮುನ್ನ ಅರಗಿಣಿಯ ಹವಾ ಕಥೆ ಕೇಳಿ.ಗಿಣಿ ಅಂದಾಕ್ಷಣ ನಿಮ್ಮೆಲ್ಲರ ಕಣ್ಮುಂದೆ ನಟಿ ರಾಗಿಣಿ ಬಂದು ನಿಲ್ತಾರೆ ಅಪ್ ಕೋರ್ಸ್ ನಿಲ್ಲಬೇಕು. ಚಂದನವನಕ್ಕೆ ಊರಿಗೊಬ್ಳೆ ಪದ್ಮಾವತಿ ಹೇಗೋ ಸ್ಯಾಂಡಲ್ ವುಡ್ ಗೆ ಒಬ್ಬರೇ ಗಿಣಿ ಅವರೇ ನಟಿ ರಾಗಿಣಿಯವರು. ಸೌಂದರ್ಯದ ಕಣಿಯಂ ತಿರುವ ಅರಗಿಣಿ ಮಾದಕ ನೋಟ ಮಾತ್ರವಲ್ಲ ಮನಮೋಹಕ ಅಭಿನ ಯ ದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಬೆಳ್ಳಿತೆರೆಯನ್ನೂ ಮೆಚ್ಚಿಸಿ ಬಿಗ್ ಸ್ಕ್ರೀನ್ ನಲ್ಲಿ ದಶಕ ಪೂರೈಸಿದ್ದಾರೆ.

ಈ ಹತ್ತು ವರ್ಷದ ಸಿನಿಜರ್ನಿಯಲ್ಲಿ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನಾಯಕನ ಜೊತೆ ಬರೀ ಮರಸುತ್ತು ವುದಲ್ಲದೇ ನಾಯಕಿ ಪ್ರಧಾನ ಸಿನಿಮಾ ಮೂಲಕ ಬೆಳ್ಳಿಪರದೆಯನ್ನು ಬೆಚ್ಚಿಸಿ, ಬಾಕ್ಸ್ ಆಫೀಸ್ ನ ಶೇಕ್ ಮಾಡಿದ್ದಾರೆ. ನಾಯಕಿಯಾಗಿ ತರಹೇವಾರಿ ಪಾತ್ರಗಳಿಗೆ ಜೀವತುಂಬಿ ಸಿಲ್ವರ್‌ಸ್ಕ್ರೀನ್ ಮೇಲೆ ದಿಬ್ಬಣ ಹೋಗಿ ಬಂದಿದ್ದಾರೆ. ಎಕ್ಸ್‌ ಪಿರಿಮೆಂಟ್ ಮಾಡುವ ಹೊತ್ತಲ್ಲಿ ಎಡವಿ ದ್ದಾರೆ, ಕೆಳಗೆ ಬಿದ್ದು ಮೇಲೇಳಲು ಒದ್ದಾಡಿದ್ದಾರೆ. ಚಾರ್ಮ್ ಉಳಿಸಿ ಕೊಳ್ಳೋದಕ್ಕೆ ಹಗಲು-ರಾತ್ರಿ ಕಷ್ಟಪಟ್ಟಿದ್ದಾರೆ.

ಯಾವುದೇ ಜರ್ನಿಯಲ್ಲಿ ಅಪ್ಸ್ ಅಂಡ್ ಡೌನ್ಸ್ ಇದ್ದೇ ಇರುತ್ತೆ. ಅಂತಹ ಜರ್ನಿಯ ಅನುಭವ ರಾಗಿಣಿಗೂ ಆಗಿದೆ. ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ರಾಗಿಣಿ ಡ್ರಗ್ಸ್ ವಿಚಾರದಲ್ಲಿ ಜೈಲಿಗೆ ಹೋಗಬೇಕಾಗಿ ಬಂತು. ಅಲ್ಲಿಂದ ಬಂದ್ಮೇಲೆ ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇರಬಹುದಾಗಿತ್ತು ಆದರೆ ಅದಕ್ಕೆ ರಾಗಿಣಿ ಮನಸ್ಸು ಒಪ್ಪಲಿಲ್ಲ. ಹೀಗಾಗಿ, ಮತ್ತೆ ಸಾಮಾಜಿಕ ಕೆಲಸಕ್ಕೆ ಅಣಿಯಾದರು. ಕೊರೊನಾ ಸಂಕಷ್ಟದಿಂದ ನರಳುತ್ತಿದ್ದವರಿಗೆ ನೆರವಿನ ಹಸ್ತ ಚಾಚಿದರು ಅನ್ನಪೂರ್ಣೇಶ್ವರಿ ಎನಿಸಿಕೊಂಡರು. ನಟಿ ರಾಗಿಣಿಯ ಹೃದಯವಂತಿಕೆ ಹಾಗೂ ಸಮಾಜಮುಖಿ ಕೆಲಸಕ್ಕೆ ಅತ್ಯದ್ಬುತ ಪ್ರಶಸ್ತಿ ಕೂಡ ಸಿಗ್ತು.

ಇಷ್ಟೆಲ್ಲಾ ಹೇಳಿದ್ಮೇಲೆ ನಟಿ ರಾಗಿಣಿಯ ಹೊಸ ವರಸೆ ಹಾಗೂ ಅವರ ಅಭಿಮಾನಿಗಳ ಒಕ್ಕೊರಲ ಅಭಿಪ್ರಾಯವನ್ನು ನಿಮ್ಮ ಮುಂದೆ ಇಡಲೆ ಬೇಕು. ನಟಿ ರಾಗಿಣಿ ದ್ವಿವೇದಿ ಬದಲಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಬಜಾರ್‌ನಲ್ಲಿ ನಾವೇ ಸ್ಲಿಮ್ ಸುಂದರಿಯರು ಅಂತ ಮೆರೆಯುತ್ತಿ ದ್ದವರು ಕೂಡ ಅರಗಿಣಿಯ ಜಿರೋ ಸೈಜ್ ಫಿಗರ್‌ನ ನೋಡಿ ಹೊಟ್ಟೆ ಉರಿದು ಕೊಳ್ಳುತ್ತಿದ್ದಾರೆ. ಹೌದು, ಮೊದಲೇ ಸ್ಲಿಮ್ ಆಗಿದ್ದ ರಾಗಿಣಿ ಮೊಗದಷ್ಟು ಸ್ಲಿಮ್ ಆಗಿದ್ದಾರೆ. ಜಿಮ್-ವರ್ಕೌಟ್‌ನ ಬದಿಗಿಟ್ಟು ಯೋಗದ ಮೊರೆ ಹೋದ ರಾಗಿಣಿ ಭರ್ತಿ ಐದು ಕೆ.ಜಿ ತೂಕ ಇಳಿಸಿಕೊಂ ಡಿದ್ದಾರೆ. ಯೋಗ ಮಾಡಿ ದೈಹಿಕವಾಗಿ ಮತ್ತು ಮಾನಸಿ ಕವಾಗಿ ಸ್ಟ್ರಾಂಗ್ ಆಗಿದ್ದೇನೆಂದು ಸಿನಿಲಹರಿ ಜೊತೆ ಹೇಳಿಕೊಂಡಿದ್ದಾರೆ.

ನಟಿ ರಾಗಿಣಿ ತೂಕ ಇಳಿಸಿಕೊಂಡಿರುವುದು ಯಾವುದೋ ಸಿನಿಮಾಗಾಗಿ ಅಲ್ಲ ಫಿಸಿಕಲಿ ಫಿಟ್ ಆಗರ‍್ಬೇಕು ಹಾಗೂ ಹೆಲ್ತಿಯಾಗರ‍್ಬೇಕು ಎನ್ನುವ ಕಾರಣಕ್ಕೆ ಯೋಗದ ಮೊರೆ ಹೋಗಿದ್ದಾರೆ. ತಮ್ಮ ನೆಚ್ಚಿನ ನಾಯಕಿಯ ನಯಾ ಲುಕ್‌ನ ನೋಡಿದ ಅವರ ಫ್ಯಾನ್ಸು ನಮ್ಮ ಅರಗಿಣಿಗೆ ಏನ್ ಕಮ್ಮಿಯಾಗಿದೆ ಹೇಳ್ರಪ್ಪಾ? ಆರಡಿ ಹೀರೋಗೆ ಹೈಟ್ ಮ್ಯಾಚ್ ಮಾಡ್ತಾರೆ? ಜಿರೋ ಸೈಜ್‌ನ ಮೆಂಟೇನ್ ಮಾಡಿದ್ದಾರೆ, ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿಯೂ ಇದ್ದಾರೆ. ಇಷ್ಟೆಲ್ಲಾ, ಇದ್ದರೂ ಕೂಡ ನಮಗೆ ಗಿಲ್ಲಿ ಗರ್ಲ್ ಬೇಕು, ಕಿಕ್ ಸುಂದರಿನೇ ಆಗ್ಬೇಕು, ಮಲೆಯಾಳಂ ಕುಟ್ಟಿನೇ ಬೇಕು ಅಂತ ಯಾಕೇ ಹಠ ಮಾಡ್ತೀರಿ? ನಮ್ಮ ಇಂಡಸ್ಟ್ರಿಯ ಹೆಣ್ಣುಮಕ್ಕಳನ್ನು ಅದ್ಯಾಕೆ ಕಡೆಗಣಿಸ್ತೀರಿ ?ಕೋಟಿ ಕೋಟಿ ಸುರಿದು ಅದ್ಯಾಕೆ ಬೇರೆ ಭಾಷೆಯ ಬೆಡಗಿಯರನ್ನು ರತ್ನಗಂಬಳಿ ಹಾಕಿಕೊಂಡು ಕರೆತರುತ್ತೀರಿ? ನಮ್ಮಲ್ಲೇ ಗಿಲ್ಲಿಯಂಹ ಗರ್ಲ್ಸ್ ಇದ್ದಾರೆ, ಮಾದಕತೆ ತುಂಬಿರುವ ಅಭಿನಯದ ಮೂಲಕ ಕಿಕ್ಕೇರಿಸುವ ನಟಿಮಣಿಯರು ಇದ್ದಾರೆ. ಒಂದೇ ಒಂದು ಸೆಕೆಂಡ್ ಕಣ್ಣರಳಿಸಿ ನೋಡಿದ್ರೆ ನೀವ್ಯಾರು ಗಡಿದಾಟಲ್ಲ ಬರೆದಿಟ್ಟುಕೊಳ್ಳಿ ಹೀಗಂತಾರೇ, ಸಕಲ ಕನ್ನಡ ನಟಿಮಣಿಯರ ಅಭಿಮಾನಿ ದೇವರುಗಳು.

-ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲವ್ಲಿ ನ್ಯೂಸ್:‌ ನೆನಪಿರಲಿ ಪ್ರೇಮ್‌ ಅವರ ಚಿತ್ರ ಪೂಜೆಗೆ ರೆಡಿಯಾಗಿ- ಅಕ್ಟೋಬರ್‌ 29ಕ್ಕೆ ಪ್ರೇಮಂ ಪೂಜ್ಯಂ ವರ್ಲ್ಡ್‌ ವೈಡ್‌ ರಿಲೀಸ್!

ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಟೈಟಲ್ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿ, ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಪಡೆದಿದೆ. ಈಗ ಈ ಚಿತ್ರದ ಹೊಸ ಸುದ್ದಿ ಅಂದರೆ, ಚಿತ್ರತಂಡ ಬಿಡುಗಡೆ ದಿನವನ್ನು ಘೋಷಿಸಿದೆ. ಹೌದು, “ಪ್ರೇಮಂ ಪೂಜ್ಯಂ” ಪ್ರೇಮ್ ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ ಕೂಡ. ಚಿತ್ರದ‌ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್‌ ಲವ್‌ಸ್ಟೋರಿ ಅಂತ. ಸಿನಿಮಾ ಯಾವಾಗ ಅಂತ ಪ್ರೇಮ್‌ ಫ್ಯಾನ್ಸ್‌ ಕೇಳುತ್ತಲೇ ಇದ್ದರು. ಅವರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ. ಅದೇ ಚಿತ್ರ ಬಿಡುಗಡೆ ಆಗುತ್ತಿರುವ ಸುದ್ದಿ. ಅಕ್ಟೋಬರ್‌ 29 ರಂದು ಚಿತ್ರ ಬಿಡುಗಡೆಯಾಗುತ್ತಿದೆ.‌

ಈ ಬಿಡುಗಡೆ ಸುದ್ದಿಯನ್ನು ಚಿತ್ರತಂಡ ಅನೌನ್ಸ್‌ ಮಾಡಿದೆ. ಸಹಜವಾಗಿಯೇ ಇದು ಪ್ರೇಮ್‌ ಫ್ಯಾನ್ಸ್‌ಗೆ ಖುಷಿ ಹೆಚ್ಚಿಸಿದೆ.
ಅಂದಹಾಗೆ, ಈ ಚಿತ್ರವನ್ನು ಜಗತ್ತಿನಾದ್ಯಂತ ರಿಲೀಸ್‌ ಮಾಡಲು ಚಿತ್ರತಂಡ ತಯಾರು ಮಾಡಿಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಶೇ.50ರಷ್ಟು ಮಾತ್ರ ಚಿತ್ರಮಂದಿರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್‌ ಹೊತ್ತಿಗೆ ಶೇ.100ರಷ್ಟು ಅನುಮತಿ ಸಿಗಬಹುದು. ಹಾಗಾಗಿ, ಚಿತ್ರತಂಡ ಎಲ್ಲವನ್ನೂ ಯೋಚಿಸಿಯೇ ಈ ನಿರ್ಧಾರ ಪ್ರಕಟಿಸಿದೆ.
ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ, ಎಲ್ಲರಲ್ಲೂ ಒಂದಷ್ಟು ನಿರಿಕ್ಷೆಯನ್ನು ಹೆಚ್ಚಿಸಿದೆ. ಕಳೆದ ಯುಗಾದಿಗೆ ಚಿತ್ರದ ಟೈಟಲ್‌ ಸಾಂಗ್‌ ಲಿರಿಕಲ್‌ ಸಾಂಗ್ ವಿಡಿಯೊ ಬಿಡುಗಡೆಯಾಗಿತ್ತು.

ಅದಕ್ಕೆ ಮಿಲಯನ್ಸ್‌ ವೀವ್ಸ್‌ ಬಂದಿತ್ತು. ಅದರ ಬೆನ್ನಲ್ಲೇ ಚಿತ್ರತಂಡ “ವೈದ್ಯೋ ನಾರಾಯಣ ಹರಿಹಿ.. ಎಂದು ಸಾಗುವ… ಸಾಗುವ ಲಿರಿಕಲ್‌ ಸಾಂಗ್ ವಿಡಿಯೋ ಕೂಡ ಬಿಡುಗಡೆ ಮಾಡಿತ್ತು. ಅದೊಂದು ಒಳ್ಳೆಯ ಪ್ರಯತ್ನವಾಗಿ ಹೊರಬಂದಿತ್ತು. ” ನನ್ನ ಜೀವನ ನಿನಗೆ ಸಮರ್ಪಣ ಕೈ ಮುಗಿವೆನು ಈ ನಾರಾಯಣ” ಎಂಬ ಹಾಡು ಅರ್ಥಪೂರ್ಣವಾಗಿದೆ. ಇನ್ನು, ಈ ಚಿತ್ರ ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿದ್ದು, ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.

ಡಾ.ರಾಘವೇಂದ್ರ ಬಿ.ಎಸ್.‌ ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿರುವುದು ವಿಶೇಷ. ಈ ಚಿತ್ರದ ಪೋಸ್ಟರ್‌ಗಳು ಸಾಕಷ್ಟು ಸುದ್ದಿ ಮಾಡಿದ್ದಂತೂ ನಿಜ. ಅವೆಲ್ಲವನ್ನೂ ನೋಡಿದವರಿಗೆ ಪ್ರೇಮ್‌ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್‌ ಲೊಕೇಷನ್‌ ಜೊತೆ ಅಷ್ಟೇ ಕ್ಯೂಟ್‌ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ಹರೀಶ್‌ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್‌ ಕೆಡಂಬದಿ, ಡಾ.ರಾಜಕುಮಾರ್‌ ಜಾನಕಿರಾಮನ್‌, ಡಾ.ರಾಘವೇಂದ್ರ ಎಸ್‌, ಮನೋಜ್‌ ಕೃಷ್ಣನ್‌ ನಿರ್ಮಾಪಕರು.


ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ 25ನೇ ಹೊಸ್ತಿಲಲ್ಲಿ ಇರುವ ಪ್ರೇಮ್‌, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

error: Content is protected !!