ಶಿವಣ್ಣ ನಿಮ್ಮ ಆಶೀರ್ವಾದದಿಂದಲೇ ಈ‌ ಟ್ರೋಪಿ ನಂಗೆ ಸಿಕ್ತು! ದೊಡ್ಮನೆಗೆ ಬಿಗ್ ಬಾಸ್ ವಿನ್ನರ್ ಮಂಜಣ್ಣ ಎಂಟ್ರಿ…

ಬಿಗ್‌ ಬಾಸ್‌ ವಿನ್ನರ್‌ ಮಂಜು ಪಾವಗಡ ಬುಧವಾರ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ಕೆಲ ಹೊತ್ತು ಮಾತನಾಡಿ ಅವರ ಆಶೀರ್ವಾದ ಪಡೆದರು. ಶಿವಣ್ಣ ಅವರ ಕಾಲಿಗೆ ನಮಸ್ಕರಿಸೀದ ಮಂಜು ಪಾವಗಡ, ಸಿಹಿ ತಿನಿಸಿ ಸಂಭ್ರಮಪಟ್ಟರು.

ಶಿವರಾಜ್‌ ಕುಮಾರ್‌ ಅವರೊಂದಿಗೆ ಮಾತನಾಡಬೇಕೆನ್ನುವ ಬಹುದೊಡ್ಡ ಆಸೆಯನ್ನು ಬಿಗ್‌ ಬಾಸ್‌ ಮನೆಯಲ್ಲಿದ್ದಾಗಲೇ ಈಡೇರಿಸಿಕೊಂಡಿದ್ದ ಮಂಜು, ಬುಧವಾರ ನಾಗವಾರದಲ್ಲಿರುವ ಶಿವರಾಜ್‌ ಕುಮಾರ್‌ ನಿವಾಸಕ್ಕೆ ತೆರಳಿ ತಮ್ಮ ಮತ್ತೊಂದು ಆಸೆಯನ್ನು ಈಡೇರಿಸಿಕೊಂಡಿದ್ದುವಿಶೇಷ.

ಬಿಗ್‌ ಬಾಸ್‌ ಟ್ರೋಪಿ ಸಮೇತ ತೆರಳಿದ್ದ ಮಂಜು ಪಾವಗಡ, ಟ್ರೋಪಿ ಹಿಡಿದುಕೊಂಡೇ ಶಿವರಾಜ್‌ ಕುಮಾರ್‌ ಜತೆಗೆ ಕ್ಯಾಮಾರಾಕ್ಕೆ ಪೋಸು ಕೊಟ್ಟರು.

Related Posts

error: Content is protected !!