ನಾನ್‌ ಒಳ್ಳೇವ್ನೆ ನನ್‌ ಟೈಮೇ ಸರಿ ಇಲ್ಲ! ಅಪ್ಪು ಹಾಡಿದ್ರು, ಜನ ಮೆಚ್ಚಿದ್ರು!! ಗ್ಯಾಂಗ್‌ ಕಟ್ಟಿಕೊಂಡೋರ ಹಾಡಿಗೆ ಭರಪೂರ ಮೆಚ್ಚುಗೆ…

ಏನ್ಮಾಡ್ಲಿ ಹೇಳಿ ಈಗ, ನನಗಿಲ್ಲ ಚೂರು ಮೂಡು… ಯಾಕೆ ಹೀಗೆ ಬದುಕು ಆಯ್ತು. ಕಾಣದೇ ಹೋದೆನಾ… ಬದುಕಿನಲ್ಲಿ ಖುಷಿಯೇ ಇಲ್ಲ. ಹೇಗೋ ಈ ಜೀವನ… ಹಿಂಗೆಲ್ಲಾ ಯಾಕಾಯ್ತೋ, ಈ ದುನಿಯಾ… ಅದೇಕೋ ನಮಗಿಲ್ಲ.. ಇದು ಖಾಲಿ ಹಾಳೆ ಜೀವನ…ʼ ಎನ್ನುವ ಪದಗಳಲ್ಲಿ ಅರ್ಥವಿದೆ. ಕಾಲೇಜ್‌ ಸ್ಟುಡೆಂಟ್ಸ್‌ಗೆ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಗೀತೆ ಇದು.

ಯಾರ್‌ ಏನಾರ ಅಂದ್‌ಕೊಳ್ಲಿ. ಒಮ್ಮೊಮ್ಮೆ ಸ್ಟಾರ್‌ ಸಿನಿಮಾದ ಹಾಡು ಕೂಡ ಗುನುಗೋ ಥರಾ ಇರಲ್ಲ. ಅಷ್ಟೇ ಅಲ್ಲ, ಒಮ್ಮೊಮ್ಮೆ ಸ್ಟಾರ್‌ ಅಲ್ಲದವರ ಸಿನಿಮಾ ಹಾಡಂತೂ ಗುನುಗಲೇಬೇಕು ಅಂತೆನಿಸದೇ ಇರಲ್ಲ…! ಇದೇನಪ್ಪಾ ಹೊಸಬರ ಸಿನಿಮಾದ ಹಾಡು ಅಷ್ಟೊಂದ್‌ ಚೆಂದಾಗೈತಾ? ಹೀಗೊಂದು ಪ್ರಶ್ನೆ ಕಾಡಬಹುದು. ನಿಜ ಹೇಳೋದಾದರೆ, ಹೊಸಬರ ಸಿನಿಮಾದ ಹಾಡು ಚೆನ್ನಾಗೈತೆ. ಬರೆದಿರೋ ಸಾಹಿತ್ಯವೂ ಈಗಿನ ಟ್ರೆಂಡ್‌ಗೆ ತಕ್ಕಂತೆ ಐತೆ. ಅದರಲ್ಲೂ ಅಂತದ್ದೊಂದು ಹಾಡಿಗೆ ಧ್ವನಿಯಾಗಿರೋರ ಹಾಡು ಇಷ್ಟವಾಗದೇ ಇರುತ್ತಾ? ಹೌದು, ಹೊಸಬರ “ಗಜಾನನ ಗ್ಯಾಂಗ್‌” ಸಿನಿಮಾದ ವಿಡಿಯೊ ಸಾಂಗ್‌ವೊಂದು ಆನಂದ್‌ ಆಡಿಯೊ ಯುಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆಗಿದೆ. ಅ ಹಾಡಿಗೆ ಧ್ವನಿಯಾಗಿರೋದು ಪವರ್‌ ಸ್ಟಾರ್‌ ಪುನೀತ್‌ರಾಜಕುಮಾರ್.‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಳ್ಳೆಯ ವೀಕ್ಷಣೆ ಪಡೆದಿದ್ದು, ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ನಿರ್ದೇಶ ಅಭಿಷೇಕ್‌ ಶೆಟ್ಟಿ ಬರೆದ ” ನಾನ್‌ ಒಳ್ಳೇವ್ನೆ… ನನ್‌ ಟೈಮೇ ಸರಿ ಇಲ್ಲ… ಟೈಮ್‌ ಸರಿ ಐತೆ.. ಜೊತೆಗಿರೋರೇ ನೆಟ್ಟಗಿಲ್ಲ…” ಎಂದು ಶುರುವಾಗುವ ಈ ಹಾಡು ಸದ್ಯ ವೈರಲ್‌ ಆಗುತ್ತಿದೆ. ಈ ಹಾಡು ಕೇಳಿದವರಿಗೆ ಮತ್ತೆ ಮತ್ತೆ ಕೇಳಬೇಕು ಎನಿಸುವುದು ನಿಜ. ಇದೊಂದು ಪಕ್ಕಾ ಕಾಲೇಜ್‌ ಹುಡುಗರ ಸಾಂಗು. ಅಷ್ಟೇ ಅಲ್ಲ, ಪಡ್ಡೆ ಹೈಕ್ಳು ಕೂಡ ಒಂದೊಮ್ಮೆ ಕೇಳಿದಂರಂತೂ ಗುನುಗೋದು ದಿಟ. ಪುನೀತ್‌ ಅವರಿಂದಲೇ ಹಾಡಿಸಿರುವುದರಿಂದ ಹಾಡಿಗೊಂದು ಮೆರುಗು ಸಿಕ್ಕಿದೆ. “ಯಾಕೆ ಹೀಗೆ ಬದುಕು ಆಯ್ತು. ಕಾಣದೇ ಹೋದೆನಾ… ಬದುಕಿನಲ್ಲಿ ಖುಷಿಯೇ ಇಲ್ಲ. ಹೇಗೋ ಈ ಜೀವನ… ಹಿಂಗೆಲ್ಲಾ ಯಾಕಾಯ್ತೋ, ಈ ದುನಿಯಾ… ಅದೇಕೋ ನಮಗಿಲ್ಲ.. ಇದು ಖಾಲಿ ಹಾಳೆ ಜೀವನ…ʼ ಎನ್ನುವ ಪದಗಳಲ್ಲಿ ಅರ್ಥವಿದೆ. ಕಾಲೇಜ್‌ ಸ್ಟುಡೆಂಟ್ಸ್‌ಗೆ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಗೀತೆ ಇದು.

ಈ ಗೀತೆಗೆ ರಾಗ ಸಂಯೋಜನೆ ಕೂಡ ಸೊಗಸಾಗಿದೆ. ಅಷ್ಟೇ ಅಂದವಾಗಿಯೇ ಚಿತ್ರೀಕರಿಸಲಾಗಿದೆ. ಒಂದು ಕಾಲೇಜ್‌ ಹುಡುಗನ ಲೈಫ್‌ ಸ್ಟೋರಿಯನ್ನು ಹೇಳುವಂತಹ ಗೀತೆ ಇದಾಗಿದ್ದು, ಸದ್ಯ ಜೋರು ಸದ್ದು ಮಾಡುತ್ತಿದೆ.
ಬೃಂದಾವನ್‌ ಎಂಟರ್‌ಪ್ರೈಸಸ್‌ ಮತ್ತು ಅದ್ವಿ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಮೂಡಿಬಂದಿರುವ ಈ ಸಿನಿಮಾ ಸದ್ಯ ರಿಲೀಸ್‌ಗೆ ಸಜ್ಜಾಗಿದೆ. ಈಗಾಗಲೇ “ನಮ್‌ ಗಣಿ ಬಿಕಾಂ ಪಾಸ್‌” ಸಿನಿಮಾ ನಿರ್ಮಿಸಿದ್ದ ನಿರ್ಮಾಪಕ ನಾಗೇಶ್‌ ಕುಮಾರ್. ಯು.ಎಸ್.‌ ಅವರು ಆ ಚಿತ್ರತಂಡದ ಮೇಲೆ ಭರವಸೆ ಇಟ್ಟು ಪುನಃ “ಗಜಾನನ ಗ್ಯಾಂಗ್‌” ಸಿನಿಮಾ ಮಾಡಿದ್ದಾರೆ.

ಇವರೊಂದಿಗೆ ಪ್ರಶಾಂತ್ ಕುಮಾರ್ ಶೆಟ್ಟಿ ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಅದೇ ತಂಡ ಕಟ್ಟಿಕೊಂಡು ಕೆಲಸ ಮಾಡಿರುವ ಅಭಿಷೇಕ್‌ ಶೆಟ್ಟಿ, ಒಂದೊಳ್ಳೆಯ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ನಟನೆ ಹಾಗೂ ನಿರ್ದೇಶನ‌ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆ ಉಳಿಸಿಕೊಂಡಿರುವ ನಿರ್ದೇಶಕ ಅಭಿಷೇಕ್ ಶೆಟ್ಟಿ “ಗಜಾನನ ಗ್ಯಾಂಗ್‌” ಸಿನಿಮಾವನ್ನು ತುಂಬಾ ಸೊಗಸಾಗಿಯೇ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಶ್ರೀ ಹೀರೋ ಆಗಿದ್ದರೆ, ಅವರಿಗೆ ಅದಿತಿ ಪ್ರಭುದೇವ ನಾಯಕಿ. ಇನ್ನು, ಅಪ್ಪು ಹಾಡಿರುವ ಗೀತೆಗೆ ಪ್ರದ್ಯೋತ್ನ ರಾಗ ಸಂಯೋಜನೆ ಇದೆ.
ಈ ಹಿಂದೆ “ನಮ್‌ ಗಣಿ ಬಿಕಾಂ ಪಾಸ್” ಸಿನಿಮಾ ಒಂದೊಳ್ಳೆಯ ಸಂದೇಶ ಹೊತ್ತು ಬಂದಿತ್ತು. ಒಳ್ಳೇ ಹೆಸರು ತಂದು ಕೊಟ್ಟಿದ್ದರಿಂದ ನಿರ್ಮಾಪಕ ನಾಗೇಶ್‌ ಕುಮಾರ್‌ ಅವರಿಗೂ ಆ ಚಿತ್ರತಂಡದ ಮೇಲೆ ಪ್ರೀತಿ ಮತ್ತು ನಂಬಿಕೆ ಇತ್ತು. ಹಾಗಾಗಿ, ಅದೇ ತಂಡದೊಂದಿಗೆ “ಗಜಾನನ ಗ್ಯಾಂಗ್‌” ಸಿನಿಮಾ ಮಾಡಿದ್ದಾರೆ. ಆರಂಭದಿಂದಲೂ ಕ್ರೇಜ್‌ ಹುಟ್ಟಿಸಿದ್ದ ”ಗಜಾನನ ಅಂಡ್‌ ಗ್ಯಾಂಗ್‌” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು.

ಅಷ್ಟೇ ಒಳ್ಳೆಯ ತಂಡ ಕಟ್ಟಿಕೊಂಡ ನಿರ್ದೇಶಕ ಅಭಿಷೇಕ್‌ ಶೆಟ್ಟಿ, ಚಿತ್ರದ ಮೊದಲ ಲುಕ್‌ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ಕುತೂಹಲ ಮೂಡಿಸಿದ್ದರು. ಈಗ “ನಾನ್‌ ಒಳೇವ್ನೇ, ನನ್‌ ಟೈಮೇ ಸರಿ ಇಲ್ಲ…” ಹಾಡೊಂದನ್ನು ಹೊರಬಿಟ್ಟು ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದಾರೆ. ಈ ಹೊಸಬರ “ಗ್ಯಾಂಗ್‌” ಈಗ ಕಂಪ್ಲೀಟ್‌ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾ ಮಾಡಿರುವ ನಿರ್ದೇಶಕರು, ಯೂಥ್‌ ಟಾರ್ಗೆಟ್‌ ಮಾಡಿಯೇ ಸಿನಿಮಾ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಈ ಚಿತ್ರ ಇಷ್ಟವಾಗುತ್ತೆ ಎಂಬ ನಂಬಿಕೆಯೂ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಹಿಂದೆ ಪ್ರೇಮಿಗಳ ದಿನದಂದು ಬಿಡುಗಡೆಯಾದ “ಲವ್ ಡೇ ” ಸಾಂಗ್ ಕೂಡ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಸದ್ಯ ಅಭಿಷೇಕ್‌ ಅವರ ಗ್ಯಾಂಗ್‌ ಹೇಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. “ಬಿಕಾಂ ಪಾಸ್‌” ಮಾಡಿರುವ ಹುಡುಗರು ಈಗ “ಗ್ಯಾಂಗ್‌” ಮೂಲಕವೇ ರ್ಯಾಂಕ್‌ ಬರಲಿ ಅನ್ನೋದು “ಸಿನಿಲಹರಿ” ಆಶಯ.

Related Posts

error: Content is protected !!