Categories
ಸಿನಿ ಸುದ್ದಿ

ಅಮಿತಾಬ್‌ ಜೊತೆ ನಟಿಸಿದ ಅನುಭವ ಹಂಚಿಕೊಂಡ ರಶ್ಮಿಕಾ ಮಂದಣ್ಣ; ಬಚ್ಚನ್‌ ಮಗಳಾಗಿ ಕಾಣಿಸಿಕೊಂಡ ಕನ್ನಡ ಬೆಡಗಿ

ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ, ನೋಡ ನೋಡುತ್ತಿದ್ದಂತೆಯೇ, ಸಾಕಷ್ಟು ಸುದ್ದಿ ಮಾಡಿಬಿಟ್ಟರು. ಕನ್ನಡದಿಂದ ಟಾಲಿವುಡ್‌, ಕಾಲಿವುಡ್‌ಗೆ ಜಂಪ್‌ ಮಾಡಿರುವ ರಶ್ಮಿಕಾ ಬಾಲಿವುಡ್‌ ಅಂಗಳಕ್ಕೂ ಜಿಗಿದಿರುವ ಸುದ್ದಿ ಹೊಸದೇನಲ್ಲ. ಮೊದಲ ಬಾಲ್‌ನಲ್ಲೇ ಸಿಕ್ಸರ್‌ ಬಾರಿಸಿದಂತೆ, ಮೊದಲ ಹಿಂದಿ ಸಿನಿಮಾದಲ್ಲೇ ಬಾಲಿವುಡ್‌ ಲೆಜೆಂಡ್‌ ಅಮಿತಾಬ್‌ ಬಚ್ಚನ್‌ ಅವರೊಂದಿಗೆ ನಟಿಸುವ ಅವಕಾಶ ಪಡೆದರು. “ಗುಡ್‌ ಬೈ” ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಅಮಿತಾಬ್‌ ಬಚ್ಚನ್‌ ಜೊತೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯಾವುದೇ ಕಲಾವಿದ ಅಥವಾ ಕಲಾವಿದೆಗೆ ಅಮಿತಾಬ್ ಜೊತೆ ನಟಿಸಬೇಕೆಂಬ ಹಂಬಲ ಇದ್ದೇ ಇರುತ್ತೆ. ಆದರೆ, ಅದು ಅದೃಷ್ಟವಂತರಿಗೆ ಮಾತ್ರ ಆ ಅವಕಾಶ ಸಿಗುತ್ತೆ. ಅಂಥದ್ದೊಂದು ಅವಕಾಶ ರಶ್ಮಿಕಾ ಮಂದಣ್ಣ ಅವರಿಗೆ ಬಹುಬೇಗ ಸಿಕ್ಕಿದ್ದು, ನಿಜಕ್ಕೂ ತಮಾಷೆಯ ಮಾತಲ್ಲ.
ಅಂದಹಾಗೆ, ರಶ್ಮಿಕಾ ಮಂದಣ್ಣ ಅವರು, “ಗುಡ್‌ ಬೈ” ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿದ ಅನುಭವ ಕುರಿತು ಮಾಧ್ಯಮಗಳ ಜೊತೆ ಮಾತಾಡಿದ್ದಾರೆ. “ನಾನು ನಿಜಕ್ಕೂ ಅದೃಷ್ಟವಂತೆ. ಬಾಲಿವುಡ್‌ ಹಿರಿಯ ನಟ, ಅಮಿತಾಬ್‌ ಬಚ್ಚನ್ ಅವರ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಅದ್ಭುತ ಅನುಭವ.

ಯಾವುದೇ ಚಿತ್ರತಂಡವಿರಲಿ, ಅಲ್ಲಿ ಸಾಕಷ್ಟು ದಿನಗಳ ಕಾಲ ಚಿತ್ರೀಕರಣದಲ್ಲಿ ತೊಡಗಿದರೆ, ಅಲ್ಲಿ ನಟಿಸುವ ಕಲಾವಿದರೊಂದಿಗೆ ಒಂದಷ್ಟು ಸಲುಗೆ ಇದ್ದೇ ಇರುತ್ತೆ. ಆ ನಂತರ ಅವರೊಂದಿಗೆ ಕ್ಯಾಮೆರಾ ಮುಂದೆ ನಿಂತು ಅಭಿನಯಿಸುವುದು ಸುಲಭವಾಗುತ್ತೆ. ನನಗೂ ಇಲ್ಲಿ ಹಾಗೆಯೇ ಆಗಿದೆ. ಅಮಿತಾಬ್‌ ಬಚ್ಚನ್ ಅವರೊಟ್ಟಿಗೆ ಬಹಳ ಕಂಫರ್ಟ್‌ ಆಗಿ ಕೆಲಸ ಮಾಡಿದೆ. ಆ ಚಿತ್ರದ ನಿರ್ದೇಶಕರು ಹಾಗೂ ಸೆಟ್‌ನಲ್ಲಿದ್ದ ಎಲ್ಲರಿಗೂ ನನ್ನ ಕೆಲಸ ಇಷ್ಟವಾಗಿದೆʼ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.


ಚಿತ್ರದಲ್ಲಿ ರಶ್ಮಿಕಾ ಅವರು ಅಮಿತಾಬ್ ಬಚ್ಚನ್ ಮಗಳ ಪಾತ್ರ ಮಾಡಿದ್ದಾರೆ. ಅದೊಂದು ಅಪ್ಪ-ಮಗಳ ಸಂಬಂಧ ಕುರಿತ ಕಥೆ. ಇಡೀ ಸಿನಿಮಾ ಅಪ್ಪ-ಮಗಳ ಸುತ್ತವೇ ಸುತ್ತುತ್ತದೆ. ಇನ್ನು, ಈ ಚಿತ್ರಕ್ಕೆ ವಿಕಾಸ್ ಭಾಲ್ ನಿರ್ದೇಶಕರು. ಬಾಲಾಜಿ ಮೋಶನ್ ಪಿಕ್ಚರ್ಸ್, ರಿಲಯನ್ಸ್ ಎಂಟರ್ಟೈನ್‌ಮೆಂಟ್‌ ನಿರ್ಮಾಣ ಮಾಡಿದೆ. ಹಿರಿಯ ನಟಿ ನೀನಾ ಗುಪ್ತಾ, ಶಿವಿನ್ ನಾರಂಗ್ ಇತರರು ನಟಿಸಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಅವರು, ಬ್ಯುಝಿಯಾಗಿದ್ದಾರೆ. ತೆಲುಗಿನ ‘ಪುಷ್ಪ’ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ‘ಆಡುವಾಳ್ಳು ಮೀಕು ಜೋಹಾರ್ಲುʼ ಚಿತ್ರ ಕೂಡ ಇತ್ತೀಚೆಗೆ ಸೆಟ್ಟೇರಿದೆ. ಇದರೊಂದಿಗೆ ಸ್ಟಾರ್ ನಟ ವಿಜಯ್‌ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಹಿಂದಿಯಲ್ಲೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ‘ಮಿಷನ್ ಮಜ್ನು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೇನೆ ಇರಲಿ, ಬಾಲಿವುಡ್‌ನಲ್ಲಿ ಗಟ್ಟಿ ನೆಲೆಯೂರುವ ಸಲುವಾಗಿ ಮುಂಬೈನಲ್ಲಿ ರಶ್ಮಿಕಾ ಮಂದಣ್ಣ ಹೊಸ ಮನೆ ಖರೀದಿಸಿದ್ದೂ ಹೌದು.

Categories
ಸಿನಿ ಸುದ್ದಿ

ಮಿನಿಸ್ಟರ್ ಮುನಿರತ್ನಅವರು ಮನಸ್ಸು ಮಾಡಿದರೆ, ಇದೇನು ಕಷ್ಟವೇನಲ್ಲ…

ಚಿತ್ರರಂಗ ಈಗ ಸಂಕಷ್ಟದಲ್ಲಿದೆ. ಸದ್ಯಕ್ಕೆ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಚಿತ್ರಮಂದಿರಗಳು ಓಪನ್ ಆಗಲು ಅವಕಾಶ ಸಿಕ್ಕಿದೆ. ಹಾಗೆಯೇ ಚಿತ್ರೀಕರಣಕ್ಕೂ ಅನುಮತಿ ನೀಡಿದೆ. ಆದರೆ ಲಾಕ್ ಡೌನ್ ಕಾರಣದಿಂದ ಉದ್ಯಮ ಈಗ ಭಾರೀ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಈ ಹೊತ್ತಲ್ಲಿ ಸರ್ಕಾರದಿಂದ ಒಂದಷ್ಟು ರಿಯಾಯಿತಿಗಳು ಸಿಕ್ಕರೆ ಉದ್ಯಮ ಚೇತರಿಕೆ ಕಾಣಬಹುದು ಅಂತಲೂ ಉದ್ಯಮದ ಜನರ ನಿರೀಕ್ಷೆ ಹೊಂದಿದ್ದಾರೆ. ಈ ಹೊತ್ತಲ್ಲಿಯೇ ನಿರ್ಮಾಪಕರೂ ಆದ ಬೆಂಗೂರಿನ ಆರ್.ಆರ್. ನಗರ ಶಾಸಕ ಮುನಿರತ್ನ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿರೋದು ಚಿತ್ರೋದ್ಯಮದ ಪಾಲಿಗೆ ಹೊಸ ಭರವಸೆಯಂತೂ ಮೂಡಿಸಿದೆ.
ಹಾಗಂತ ಮುನಿರತ್ನ ಅವರೇನು ಚಿತ್ರೋದ್ಯಮಕ್ಕೆ ಸ್ವರ್ಗವನ್ನೇ ಸೃಷ್ಟಿಸಿ ಬಿಡುತ್ತಾರೆ ಅಂತಲ್ಲ. ಸರ್ಕಾರದ ಮಟ್ಟದಲ್ಲಿ ಉದ್ಯಮದ ಪರವಾಗಿ ಗಟ್ಟಿ ಧ್ವನಿಯಾಗುವ ನಂಬಿಕೆಯಂತೂ ಇದೆ. ಯಾಕಂದ್ರೆ ಚಿತ್ರೋದ್ಯಮದ ಸಂಕಷ್ಟಗಳೇನು ಅನ್ನೋದನ್ನು ಅವರು ಹತ್ತಿರದಿಂದ ನೋಡಿದ್ದಾರೆ. ತಾವೇ ನಿರ್ಮಾಪಕರಾಗಿ ಅದನ್ನು ಅನುಭವಿಸಿದ್ದಾರೆ. ಉದ್ಯಮವನ್ನೇ ನಂಬಿಕೊಂಡು ಎಷ್ಟೇಲ್ಲ ಜನ ಇಲ್ಲಿದ್ದಾರೆನ್ನುವುದು ಅವರಿಗೆ ಗೊತ್ತಿದೆ. ಹಾಗಾಗಿ ಅವರ ಬಳಿ ಉದ್ಯಮದ ಕಷ್ಟಗಳನ್ನ ಹೇಳಿಕೊಂಡರೆ ಕನಿಷ್ಠ ಸರ್ಕಾರದ ಕಿವಿಗಾದರೂ ತಲುಪಿಸಬಹುದು ಅಂತಲೂ ಇದೆ. ಅದೇ ಕಾರಣಕ್ಕೆ ಮುನಿರತ್ನ ಸಚಿವರಾಗಿರೋದು ಸಹಜವಾಗಿಯೇ ಚಿತ್ರೋದ್ಯಮದಲ್ಲಿ ಸಂತಸ ಮೂಡಿಸಿದೆ.

ಮುಂದೆ ಚಿತ್ರೋದ್ಯಮಕ್ಕೆ ಭವಿಷ್ಯ ಇದೀಯಾ? ಲಾಕ್ ಡೌನ್ ಸೃಷ್ಟಿಸಿದ ಅವಾಂತರದಿಂದ ಹೀಗೊಂದು ಆತಂಕ ಇದ್ದೇ ಇದೆ. ಯಾಕಂದ್ರೆ ಕೊರೋನಾ, ಕೊರೋನಾ ಅಂತ ಸಿನಿಮಾ ಚಟುವಟಿಕೆಗಳೆಲ್ಲಾ ಬಂದ್ ಆಗಿ, ಚಿತ್ರಮಂದಿರಗಳು ಬಾಗಿಲು ಮುಚ್ಚಿದರೆ, ಇದನ್ನ ನಂಬಿಕೊಂಡವರು ಮಣ್ಣು ತಿನ್ನಬೇಕಷ್ಟೇ. ಕೊರೋನಾ ಶುರುವಾದ ಈ ಒಂದೂವರೆ ವರ್ಷದ ಭೀಕರತೆ ಅಕ್ಷರಶ: ಸಿನಿಮಾ ಮಂದಿಗೆ ಮಣ್ಣು ತಿನ್ನಿಸಿದೆ. ಅದರಿಂದ ಒಂದಷ್ಟು ಚೇತರಿಕೆ ಕಾಣಬೇಕಾದರೆ, ಸರ್ಕಾರವು ಉದ್ಯಮದ ಕೈ ಹಿಡಿಯಲೇಬೇಕಿದೆ. ಇದು ಯಾವ ಥರ? ಈ ಪ್ರಶ್ನೆಗೆ ತಕ್ಷಣವೇ ಉತ್ತರ ಕಂಡುಕೊಳ್ಳುವುದು ಕಷ್ಟ. ಕಾಲ ಕಾಲಕ್ಕೆ ಸರ್ಕಾರ ಉದ್ಯಮವನ್ನು ಅನುದಾನದ ಮೂಲಕವೇ, ಆರ್ಥಿಕ ನೆರವಿನ ಮೂಲಕವೋ, ತೆರೆಗೆಯ ರಿಯಾಯಿತಿಯ ಮೂಲಕವೋ ಕೈಹಿಡಿದು ಪ್ರೋತ್ಸಾಹಿಸುತ್ತಾ ಬಂದರೆ, ಚಿತ್ರೋದ್ಯಮಕ್ಕೆ ಒಂದಷ್ಟು ಚೇತರಿಕೆ ಸಿಗುವುದು ಖಚಿತ. ಆ ಕೆಲಸಕ್ಕೆ ಮುನಿರತ್ನ ಅವರು ಸರ್ಕಾರ ಮತ್ತು ಉದ್ಯಮದ ಗಟ್ಟಿ ಸೇತುವೆಯಾದರೆ ಸಾಕು ಎನ್ನುವ ಮಾತನ್ನು ಉದ್ಯಮದ ಮಂದಿ ಹೇಳುತ್ತಿದ್ದಾರೆ.

ಆರಂಭದಲ್ಲೀಗ ಚಿತ್ರಮಂದಿರಗಳ ನೂರರಷ್ಟು ಸೀಟಉ ಭರ್ತಿ ಸವಾಲಿದೆ. ಕೊರೋನಾ ಕಾರಣಕ್ಕೆ ಸರ್ಕಾರ ಈಗ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಮಾತ್ರ ಚಿತ್ರ ಪ್ರದರ್ಶನ ನಡೆಸಲು ಅನುಮತಿ ನೀಡಿದೆ. ಆದರೆ ಚಿತ್ರಮಂದಿರ ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಗೆ ಅವಕಾಶ ಸಿಗುವ ತನಕ ಸಿನಿಮಾ ರಂಗಕ್ಕೆ ಭವಿಷ್ಯ ಇಲ್ಲ ಅನ್ನೋದು ಸಿನಿಮಾ ರಂಗದ ಆತಂಕ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸರಿಯಾಗಿ ಮಾತನಾಡಿ, ಸಿನಿಮಾ ಉದ್ಯಮದ ವಾಸ್ತವವನ್ನು ಸರ್ಕಾರಕ್ಕೆ ಮನವರಿ ಕೆ ಮಾಡಿಕೊಡಬೇಕಿದೆ. ಮುನಿರತ್ನ ಅವರಿಂದ ಇದು ಸಾಧ್ಯವಾಗುತ್ತೆ. ಆ ನಿಟ್ಟಿನಲ್ಲಿ ಅವರನ್ನು ಉದ್ಯಮ ಬಳಸಿಕೊಳ್ಳಬೇಕು ಅಂತಲೂ ಹೇಳುತ್ತಿ ವೆ ಮೂಲಗಳು. ಉಳಿದಂತೆ ಸಿನಿಮಾ ಉದ್ಯಮ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆ ಬಗ್ಗೆ ಮುಂದೆ ಆಲೋಚಿ ಸಬಹುದು ಅನ್ನುತ್ತಾರೆ ಉದ್ಯಮದ ಹಿರಿಯ ನಿರ್ಮಾ ಪಕರೊಬ್ಬರು.

Categories
ಸಿನಿ ಸುದ್ದಿ

ಚಿತ್ರೋದ್ಯಮಕ್ಕೂ ಒಂದು ಚಾನ್ಸ್‌ ಸಿಗ್ತು- ನಿರ್ಮಾಪಕ ಮುನಿರತ್ನಗೆ ಕೊನೆಗೂ ಸಿಕ್ಕಿತು ಮಂತ್ರಿ ಪಟ್ಟ !

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ರಚನೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಬುಧವಾರ ನೂತನ ಸಚಿವರಾಗಿ ೨೯ ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಕನ್ನಡ ಚಿತ್ರರಂಗಕ್ಕೂ ಒಂದು ಮಂತ್ರಿ ಸ್ಥಾನ ಸಿಕ್ಕಿದೆ. ಅಂದ್ರೆ ಸಿನಿಮಾ ನಿರ್ಮಾಪಕರೂ ಆದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರಿಗೆ ಕೊನೆಗೂ ಮಂತ್ರಿ ಸ್ಥಾನ ಸಿಕ್ಕಿದೆ. ಸಚಿವ ಸ್ಥಾನದ ಕಾರಣಕ್ಕಾಗಿಯೇ ಅವರು ಈ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರಾರೂ, ಆ ಸಂದರ್ಭದಲ್ಲಿ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪಿ ಹೊಗಿತ್ತು. ಈಗ ಮಂತ್ರಿ ಆಗುವ ಅದೃಷ್ಟ ಅವರಿಗೆ ಸಿಕ್ಕಿದೆ.

ಬುಧವಾರ ಮಧ್ಯಾಹ್ನ ಬೆಂಗಳೂರಿನ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುನಿರತ್ಮ ಅವರು ನೂತನ ಸಚಿವರಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಕಾರಣಿ ಆಗಿದ್ದರೂ ನಿರ್ಮಾಪಕರಾಗಿ ಹಲವು ವರ್ಷಗಳಿಂದ ಚಿತ್ರೋದ್ಯಮ ಜತೆಗೆ ಗುರುತಿಸಿಕೊಡಿರುವ ಅವರು, ʼಆಂಟಿ ಪ್ರೀತ್ಸೆʼ,ʼ ರಕ್ತ ಕಣ್ಣೀರುʼ, ʼಅನಾಥರುʼ, ʼಕಠಾರಿ ವೀರ ಸುರಸುಂದರಾಂಗಿʼ ಹಾಗೂ ʼಮುನಿರತ್ಮ ಕುರುಕ್ಷೇತ್ರʼಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರದು. ಅದೆಲ್ಲಕ್ಕಿಂತ ಮುಖ್ಯವಾಗಿ ಸ್ಟಾರ್‌ ಸಿನಿಮಾಗಳನ್ನೇ ನಿರ್ಮಾಣ ಮಾಡಿದ್ದು ಮಾತ್ರವಲ್ಲ, ಬಿಗ್‌ ಬಜೆಟ್‌ ಸಿನಿಮಾ ಮಾಡಿದ ಖ್ಯಾತಿಯೂ ಅವರಿಗಿದೆ.

ಅದರ ಜತೆಗೆ ಹಿಂದೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರು ಆಗಿದ್ದರು. ಹಾಗೆಯೇ ಕನ್ನಡದ ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌ ಅವರ ಸಂಬಂಧಿಯೂ ಹೌದು. ಈ ಮೂಲಕ ನಿರ್ಮಾಪಕರು ಆದ ಶಾಸಕ ಮುನಿರತ್ನ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಇಡೀ ಚಿತ್ರರಂಗವೇ ಖುಷಿ ಪಟ್ಟಿದೆ. ಹಾಗಂತ ಸಿನಿಮಾದಿಂದ ಸಚಿವರಾಗುತ್ತಿರುವವರಲ್ಲಿ ಇವರೇ ಮೊದಲಿಗರಲ್ಲ. ಸಿನಿಮಾಕ್ಕೂ ರಾಜಕಾರಣಕ್ಕೂ ಇರುವ ನಂಟಿನ ಇತಿಹಾಸ ದೊಡ್ಡದ್ದು. ರಾಮಕೃಷ್ಣ ಹೆಗಡೆ ಮಂತ್ರಿ ಮಂಡಲದಲ್ಲಿ ಹಿರಿಯ ನಟ ಅನಂತ್‌ ನಾಗ್‌ ಮಂತ್ರಿಯಾಗಿದ್ದು. ಆಮೇಲೆ ಜೆ.ಎಚ್.‌ ಪಟೇಲ್‌ ಕಾಲಕ್ಕೂ ಆವರು ಮಂತ್ರಿ ಆಗಿದ್ದರು.

ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವಧಿಯಲ್ಲಿ ಹಿರಿಯ ನಟ ಅಂಬರೀಷ್‌ ವಸತಿ ಸಚಿವರಾಗಿದ್ದರು. ಹಾಗೆಯೇ ಜಯಮಾಲಾ, ಉಮಾಶ್ರೀ ಕೂಡ ಸಚಿವರಾದರು. ಸದ್ಯಕ್ಕೀಗ ಸಿನಿಮಾ ರಂಗದಿಂದ ಬಿಜೆಪಿ ಸರ್ಕಾರದ ಅವದಿಯಲ್ಲಿ ಹಿರಿಯ ನಟಿ ತಾರಾ, ಶ್ರುತಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದರೆ, ನಿರ್ಮಾಪಕ, ನಟ ಹಾಗೂ ನಿರ್ದೇಶಕ ಸುನೀಲ್‌ ಪುರಾಣಿಕ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾರೆ. ಈ ನಡುವೆ ರಾಜಕಾರಣಿಯೂ ಆಗಿರುವ ಬಿ.ಸಿ. ಪಾಟೀಲ್‌ ಅವರಿಗೂ ಸಿನಿಮಾ ನಂಟಿದೆ. ನಟರಾಗಿಯೇ ಅವರು ದೊಡ್ಡ ಯಶಸ್ಸು ಕಂಡವರು. ಆಮೂಲಕವೇ ರಾಜಕೀಯಕ್ಕೂ ಹೋದವರು. ಈಗ ಅವರು ಕೂಡ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಿನಿಮಾ ರಂಗ ಇವರಿಗೆ ಶುಭಾಶಯ ಕೋರಿದೆ.

Categories
ಸಿನಿ ಸುದ್ದಿ

ದೊಡ್ಮನೆ ಮಂದಿಗೆ “ಶಾಂತಿನಿವಾಸ”ದಿಂದ ಊಟ ಪಾರ್ಸೆಲ್; ಕಿಚ್ಚನ ಕೈರುಚಿ-ಮನೆಮಂದಿ ಸಂತೃಪ್ತಿ !

ದೊಡ್ಮನೆ ಕಾರ್ಯಕ್ರಮನಾ ಮಿಸ್ ಮಾಡದೇ ನೋಡುವವರಿಗೆ ಕಿಚ್ಚನ ಕೈ ತುತ್ತಿನ ಕಹಾನಿ ಏನು ಎಂಬುದು ಗೊತ್ತಿರುತ್ತೆ. ಬೈ ಚಾನ್ಸ್ ಮಿಸ್ ಮಾಡಿಕೊಂಡಿರುವವರು ಯಾರಾದರೂ ಇದ್ದರೆ, ಈ ಸ್ಟೋರಿ ನೋಡಿದರೆ ಆ ಕಹಾನಿ ಏನು ಅಂತ ತಿಳಿಯುತ್ತೆ. ಸ್ಯಾಂಡಲ್‌ವುಡ್ ಬಾದ್‌ಷಾ ಕುಕ್ಕಿಂಗ್‌ನಲ್ಲಿ ಮಾಸ್ಟರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಅಮ್ಮನ ಕೈತುತ್ತಿಗಾಗಿ ಮಕ್ಕಳು ಕಾಯುವಂತೆ, ಕಿಚ್ಚನ ಕೈತುತ್ತಿಗಾಗಿ ಸಾವಿರ, ಲಕ್ಷ ಅಲ್ಲ.. ಕೋಟ್ಯಾಂತರ ಮಂದಿಯಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಭಿನಯ ಚಕ್ರವರ್ತಿಯ ನಟನೆಯ ಪ್ರತಿ ಸಿನಿಮಾಗೋಸ್ಕರ ಎಷ್ಟು ಕಾತುರದಿಂದ ಕಾಯ್ತಾರೋ ಅಷ್ಟೇ ಕೌತುಕದಿಂದ ಸುದೀಪ್ ಕೈರುಚಿಯನ್ನ ನೋಡೋದಕ್ಕೆ ಎದುರು ನೋಡ್ತಿರ‍್ತಾರೆ. ಆದರೆ, ಎಲ್ಲರಿಗೂ ಮಾಣಿಕ್ಯನಿಂದ ಕೈ ತುತ್ತು ಹಾಕಿಸಿಕೊಳ್ಳುವ ಅವಕಾಶ ಸಿಕ್ಕೋದಿಲ್ಲ. ಕೆಲವೇ ಕೆಲವು ಮಂದಿಗೆ ಮಾತ್ರ ಕೋಟಿಗೊಬ್ಬ ತಮ್ಮ ಕೈಯ್ಯಾರೆ ಮಾಡಿದ ಮೃಷ್ಣಾನ ಭೋಜನವನ್ನು ಸವಿಯೋದಕ್ಕೆ ಚಾನ್ಸ್ ಸಿಗುತ್ತೆ. ಅಂತಹದ್ದೊಂದು ಲಕ್ಕಿ ಚಾನ್ಸ್ ಬಿಗ್‌ಬಾಸ್ ಮನೆಯ ಆರು ಸದಸ್ಯರಿಗೆ ಸಿಕ್ಕಿತ್ತು.

ಬಿಗ್‌ಬಾಸ್ ಮನೆಯ ಸದಸ್ಯರಿಗೆ ಕಿಚ್ಚನ ಕೈತುತ್ತು ತಿನ್ನುವ ಅವಕಾಶ ಹಂಡ್ರೆಂಡ್ ಪರ್ಸೆಂಟ್ ಸಿಕ್ಕೆ ಸಿಗುತ್ತೆ. ಪ್ರತಿವರ್ಷ ಕಿಚ್ಚ ತಮ್ಮ ಕೈಯ್ಯಾರೆ ವೆರೈಟಿ-ವೆರೈಟಿ ಫುಡ್ ಪ್ರಿಪೇರ್ ಮಾಡಿ ದೊಡ್ಮನೆ ಸದಸ್ಯರಿಗೆ ಕಳುಹಿಸಿಕೊಡ್ತಾರೆ. ಬಿಗ್‌ಬಾಸ್ ಫೈನಲ್ಸ್ ಮುಗಿದ್ಮೇಲೆ ಮನೆಯ ಎಲ್ಲಾ ಸದಸ್ಯರನ್ನು ಒಮ್ಮೆ ತಮ್ಮ ಶಾಂತಿ ನಿವಾಸಕ್ಕೆ ಕರೆಸಿಕೊಂಡು ಅವರಿಷ್ಟದ ಅಡುಗೆಯನ್ನು ತಾವೇ ಖುದ್ದಾಗಿ ಮಾಡಿಬಡಿಸುತ್ತಾರೆ. ಅದರಂತೇ, ಇದೀಗ ಬಿಗ್‌ಬಾಸ್ ಸೀಸನ್ 8ರ ಆರು ಜನ ಸ್ಪರ್ಧಿಗಳಿಗೆ ಕಿಚ್ಚ ತಮ್ಮ ಶಾಂತಿನಿವಾಸದಲ್ಲಿ ಅಡುಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.

ಮುದ್ದುಬೊಂಬೆ ವೈಷ್ಣವಿ ಪ್ಯೂರ್ ವೆಜಿಟೇರಿಯನ್ ಆಗಿರೋದ್ರಿಂದ ಸ್ಪೆಷಲ್ಲಾಗಿ ವೆಜ್ ಐಟಮ್‌ನ ಪ್ರಿಪೇರ್ ಮಾಡಿದರು. ಅರವಿಂದ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ ನಾನ್‌ವೆಜ್ ಬರ‍್ಸೋದ್ರಿಂದ ಚಿಕನ್ ಪಕೋಡಾ, ಚಿಕನ್ ಬಿರಿಯಾನಿ, ರ‍್ರಿ ಜೊತೆಗೆ ಒಂದಿಷ್ಟು ನಾನ್‌ವೆಜ್ ಐಟಮ್ ತಯ್ಯಾರಿಸಿದರು. ಇದರೊಟ್ಟಿಗೆ ಸ್ಪೆಷಲ್ ಕೇಕ್, ಐಸ್‌ಕ್ರೀಮ್ ಇಟ್ಟು ಸಪರೇಟ್ ಆಗಿ ಪ್ಯಾಕ್ ಮಾಡಿ ಬಿಗ್‌ಹೌಸ್‌ಗೆ ಪಾರ್ಸಲ್ ಮಾಡಿದರು.

ಅಷ್ಟಕ್ಕೂ, ಬಿಗ್‌ಬಾಸ್ ಸ್ಪರ್ಧಿಗಳಿಗೆ ಕಿಚ್ಚನ ಕೈರುಚಿಯನ್ನು ಸವಿಯುವಂತಹ ಅವಕಾಶ ಸಿಕ್ಕಿದ್ದು ದಿವ್ಯಾ ಉರುಡುಗ ಅವ್ರಿಂದ. ಹೌದು, ಬಿಗ್‌ಬಾಸ್‌ಗೆ ಕಾಲಿಟ್ಟ ಗಳಿಗೆಯಿಂದ ಇಲ್ಲಿಯವರೆಗೆ ಈಡೇರದ ನಿಮ್ಮ ಆಸೆ-ಕನಸು ಯಾವುದಾದರೂ ಇದ್ದರೆ ಅದನ್ನ ನೀವು ಗಾರ್ಡನ್ ಏರಿಯಾದಲ್ಲಿ ಇಟ್ಟಿರುವ ಕಿವಿಯಾಕೃತಿಯ ಮುಂದೆ ಬಂದು ಹೇಳಿಕೊಳ್ಳಿ. ಸಾಧ್ಯವಾದರೆ ಆ ಆಸೆಯನ್ನು ಬಿಗ್‌ಬಾಸ್ ಈಡೇರಿಸುತ್ತಾರೆಂದು ಸೂಚಿಸಲಾಗಿತ್ತು. ಅದರಂತೇ, ಮನೆಯಲ್ಲಿರುವ ಆರು ಮಂದಿ ಸ್ಪರ್ಧಿಗಳು ಗಾರ್ಡನ್ ಏರಿಯಾಗೆ ಒಂದೊಂದು ಬೇಡಿಕೆಯನ್ನು ಕಿವಿಯಾಕೃತಿಯ ಮುಂದೆ ಹೇಳಿಕೊಂಡಿದ್ದರು.

ಅದರಲ್ಲಿ ದಿವ್ಯಾ ಉರುಡುಗ ಬಯಕೆ ವಿಶೇಷವಾಗಿತ್ತು. ಸುದೀಪ್ ಸರ್ ತಾವೇ ಸ್ವತಃ ಕೈಯ್ಯಾರೆ ಅಡುಗೆ ಮಾಡಿ ಬಿಗ್‌ಬಾಸ್‌ಗೆ ಕಳುಹಿಸಬೇಕು ನಾವೆಲ್ಲರೂ ಅದನ್ನು ಸವಿಯಬೇಕು ಅಂತ ಬೇಡಿಕೆ ಇಟ್ಟಿದ್ದರು. ಕೊನೆಗೂ ಬಿಗ್‌ಬಾಸ್ ಕಿಚ್ಚ ಸ್ಯಾಂಡಲ್‌ವುಡ್ ಸುಂದ್ರಿ ದಿವ್ಯಾ ಉರುಡುಗರ ಬಯಕೆಯನ್ನು ಈಡೇರಿಸಿದರು. ಕಿಚ್ಚನ ಕೈರುಚಿಯನ್ನು ಸವಿದ ದೊಡ್ಮನೆಯ ಆರು ಸದಸ್ಯರು ನಾಳೆಗೂ ಒಂದು ಸ್ವಲ್ಪ ಇರಲಿ ಅಂತ ಫ್ರಿಜ್‌ನಲ್ಲಿರಿಸಿದ್ರು. ಇದರಲ್ಲೇ ಗೊತ್ತಾಗುತ್ತೆ ಶಾಂತಿನಿವಾಸದಲ್ಲಿ ಸ್ವಾತಿಮುತ್ತು ತಯ್ಯಾರಿಸಿದ ಅಡುಗೆ ಎಷ್ಟು ಪ್ರಿಯಕರವಾಗಿತ್ತು ಎಂಬುದು.

ಎನಿವೇ, ಅರಮನೆಯಂತಿರುವ ಸೆರೆಮನೆಯಲ್ಲಿ ಸದ್ಯ ಆರು ಮಂದಿ ಸ್ಪರ್ಧಿಗಳು ಉಳಿದಿದ್ದಾರೆ. ಬುಧವಾರ ರಾತ್ರಿ 11ಗಂಟೆಯೊಳಗಾಗಿ ಆರು ಜನರಲ್ಲಿ ಒಬ್ಬರು ದೊಡ್ಮನೆಯಿಂದ ಹೊರಬರುತ್ತಾರೆ. ಈಗಾಗಲೇ ಆ ಸ್ಪರ್ಧಿ ದಿವ್ಯಾ ಸುರೇಶ್ ಎನ್ನುವ ಸುದ್ದಿ ಜೋರಾಗಿ ಕೇಳಿರ‍್ತಿದೆ. ಅಧಿಕೃತವಾಗಿ ಹೊರಬಿದ್ದ ನಂತರ ಉಳಿದ ಐದು ಮಂದಿ ಫೈನಲ್ಸ್ ತಲುಪುತ್ತಾರೆ. ಅಂತಿಮ ಹಣಾಹಣಿಯಲ್ಲಿ ಐವರ ನಡುವೆ ಪೈಪೋಟಿ ಹೇಗಿರುತ್ತೆ? ಟಾಪ್ ಫೈವ್ ಸ್ಪರ್ಧಿಗಳಲ್ಲಿ ಕೊನೆಗೆ ಅದ್ಯಾರು ಕಿಚ್ಚನ ಅಕ್ಕ-ಪಕ್ಕದಲ್ಲಿ ನಿಲ್ತಾರೆ. ಅದ್ಯಾವ ಇಬ್ಬರು ಸ್ಪರ್ಧಿಗಳು ವಿನ್ನರ್-ರನ್ನರ್ ಅಪ್‌ಪಟ್ಟಕ್ಕೇರುತ್ತಾರೆ? ಅದ್ಯಾರಿಗೆ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಸಿಗುತ್ತೆ? ಅದ್ಯಾರಿಗೆ 50 ಲಕ್ಷದ ಚೆಕ್ ಸಿಗುತ್ತೆ? ಈ ಕ್ಯೂರಿಯಾಸಿಟಿ ಕೊಶ್ಚನ್‌ಗೆ ಅಂತೆ-ಕಂತೆ ಉತ್ತರಕ್ಕಿಂತ ಭಾನುವಾರ ಸಿಗುವ ಉತ್ತರವೇ ಅಂತಿಮ. ಅಲ್ಲಿವರೆಗೆ ತಾಳ್ಮೆಯಿಂದ ಕಾಯಬೇಕು ಕಾಯೋಣ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಶಿವಣ್ಣನ ನ್ಯೂ ಲುಕ್ ಗೆ ಫ್ಯಾನ್ಸ್ ಫಿದಾ! ಅಂದು ಟಗರು- ಇಂದು ಟೈಗರು!! ಇದು ಬೈರಾಗಿ ಖದರು…

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಟಾಕಿ ಭಾಗದ ಚಿತ್ರೀಕರಣ ಮುಗಿಸಿದೆ. ತಮಿಳಿನ ಖ್ಯಾತ ಛಾಯಾಗ್ರಾಹಕ ಕಮ್ ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನವಿರುವ ಈ ಚಿತ್ರಕ್ಕೆ ನೂರಕ್ಕೂ ಹೆಚ್ಚು ದಿನ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ಶಿವಣ್ಣ ನಾನಾ ಅವತಾರ ಎತ್ತಿದ್ದಾರೆ. ಅವರ ಹುಟ್ಟು ಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ಎಲ್ಲರಿಗೂ ಮೆಚ್ಚುಗೆಯಾಗಿದ್ದು, ಟೈಟಲ್ ಹಾಗೂ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ.

ಹುಲಿ ವೇಷ, ಹೇರ್ ಸ್ಟೈಲ್ ಹಾಗೂ ಅವರ ಡಿಫರೆಂಟ್ ಕಾಸ್ಟ್ಯೂಮ್’ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮುಖ್ಯವಾಗಿ ಅನೂಪ್ ಸೀಳಿನ್ ಸಂಗೀತಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಕಷ್ಟು ಜನರು ಈಗಾಗಲೇ ಟೈಟಲ್ ಟೀಸರನ್ನು ಕಾಲರ್ ಟ್ಯೂನ್ ಮಾಡಿಕೊಂಡಿದ್ದಾರೆ.

‘ಟಗರು’ ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿರುವುದರಿಂದ ಪ್ರಾರಂಭದಿಂದಲೇ ನಿರೀಕ್ಷೆ ಗರಿಗೆದರಿದೆ. ಇಬ್ಬರೂ ಬೇರೆ ಬೇರೆ ಗೆಟಪ್ ಮೂಲಕ ಮೋಡಿ ಮಾಡಲಿದ್ದಾರೆ ಎಂಬುದು ವಿಶೇಷ. ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿರುವ ಶಿವಣ್ಣನ ಹುಲಿ ವೇಷದ ಗೆಟಪ್ ಎಲ್ಲೆಡೆ ವೈರಲ್ ಆಗಿದ್ದು, ಆಟೋ ಹಾಗೂ ಕಾರುಗಳ ಮೇಲೆ ಶಿವಣ್ಣನ ಪೋಸ್ಟರ್ ರಾರಾಜಿಸುತ್ತಿವೆ.

ಅಂಜಲಿ ಚಿತ್ರದ ನಾಯಕಿ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಸಾಕಷ್ಟು ನುರಿತ ಕಲಾವಿದರಿದ್ದಾರೆ. ಬಾಕಿ ಉಳಿದುಕೊಂಡಿರುವ ಹಾಡಿನ ಚಿತ್ರೀಕರಣಕ್ಕೆ ಸದ್ಯದಲ್ಲೇ ಮೈಸೂರಿಗೆ ತೆರಳಲಿದೆ ‘ಬೈರಾಗಿ’ ತಂಡ.

Categories
ಸಿನಿ ಸುದ್ದಿ

ಅಲ್ಲು-ಇಲ್ಲು ನಿಂದೆ ಗುಲ್ಲು- ಮತ್ತೆ ಬಂದೆ ಗಲ್ಲು ಗಲ್ಲು ! ಪವರ್ ಜೊತೆ ತ್ರಿಷಾ ರೋಮಿಂಗ್ !!

ನನ್ನ ದಿಲ್ಲು ಕಾಲಿಂಗ್ ಬೆಲ್ಲು..ಮತ್ತೆ ಬಂದೆ ಗಲ್ಲು ಗಲ್ಲು..ಅಲ್ಲು-ಇಲ್ಲು ನಿಂದೆ ಗುಲ್ಲು..ಲವ್ವೇ ಥ್ರಿಲ್ಲು ಹೀಗಂತ ಹಾಡಿಕೊಂಡು ಪವರ್‌ಸ್ಟಾರ್ ಜೊತೆ ಜಿರೋ ಸೈಜ್ ಸೊಂಟ ಕುಣಿಸಿದ್ದ ನಟಿ ತ್ರಿಷಾ ಕೃಷ್ಣನ್ ಮತ್ತೆ ಅಣ್ಣಬಾಂಡ್ ಜೊತೆ ಹೆಜ್ಜೆಹಾಕೋದಕ್ಕೆ ಸೈ ಎಂದಿದ್ದಾರೆ. ಸೌತ್ ಸುಂದರಿ ತ್ರಿಷಾ ಕೃಷ್ಣನ್ ಅಪ್ಪುಗೆ ಜೊತೆಯಾಗಲಿದ್ದಾರೆ,ದ್ವಿತ್ವ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬಂದಿತ್ತು. ಈ ಬಗ್ಗೆ ಸಿನಿಲಹರಿ ಜೊತೆ ಮಾತನಾಡಿದ್ದ ನಿರ್ದೇಶಕ ಪವನ್‌ಕುಮಾರ್ ತ್ರಿಷಾ ಜೊತೆ ಮಾತುಕತೆ ನಡೆದಿರುವುದು ಸತ್ಯ ಎಂದಿದ್ದರು. ಗಿಲ್ಲಿ ಬೆಡಗಿ ಗ್ರೀನ್ ಸಿಗ್ನಲ್ ಕೊಟ್ಟರೆ ಶೀಘ್ರದಲ್ಲೇ ಅಫಿಷಿಯಲ್ಲಾಗಿ ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೇ, ಭಾನುವಾರ ಸಂಜೆ ಅಷ್ಟರಲ್ಲಿ ಹೊಂಬಾಳೆ ಸಂಸ್ಥೆ `ದ್ವಿತ್ವ’ ಚಿತ್ರಕ್ಕೆ ತ್ರಿಷಾಕೃಷ್ಣನ್ ಲೀಡಿಂಗ್ ಲೇಡಿ ಎಂದು ಸಪ್ರೈಸ್ ಕೊಟ್ಟರು. ಸುದ್ದಿ ಕೇಳಿ ಅಪ್ಪು ಫ್ಯಾನ್ಸ್ ಥ್ರಿಲ್ಲಾದರು. ಪವರ್ ಜೋಡಿನಾ ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಕೊಟ್ಟಿದ್ದಕ್ಕೆ ಹೊಂಬಾಳೆ ಬ್ಯಾನರ್‌ಗೆ ಉಘೇ ಉಘೇ ಎಂದರು.

ಪವರ್ ಚಿತ್ರದಲ್ಲಿ ಅಪ್ಪು-ತ್ರಿಷಾ ಕೆಮಿಸ್ಟ್ರಿ ಕ್ಯಾರೆಟ್ ಅಲ್ವಾದಷ್ಟೇ ಕಿಕ್ ಕೊಟ್ಟಿತ್ತು. ಇದೀಗ ಅದೇ ಕಿಕ್ ಮತ್ತೊಮ್ಮೆ ದ್ವಿತ್ವ ಚಿತ್ರದಿಂದ ಸಿಗುತ್ತೆ ಎನ್ನುವ ಕಾತುರತೆ ಹೆಚ್ಚಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತ್ರಿಷಾಕೃಷ್ಣನ್ ಪವರ್ ಪಕ್ಕದಲ್ಲಿ ನಿಲ್ಲೋದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯನ್ನು ಮತ್ತೊಮ್ಮೆ ಚಂದನವನಕ್ಕೆ ಕರೆತರುತ್ತಿರುವ ಹೊಂಬಾಳೆ ಸಂಸ್ಥೆ, ಗಾಂಧಿನಗರ ಮಾತ್ರವಲ್ಲ ಸೌತ್ ಸಿನಿಮಾ ಇಂಡಸ್ಟಿçಯೂ ತಿರುಗಿ ನೋಡುವಂತೆ ಮಾಡಿದ್ದಾರೆ.

ದ್ವಿತ್ವ ಟೈಟಲ್‌ನಿಂದಲೇ ಬಜಾರ್‌ನಲ್ಲಿ ಕ್ಯೂರಿಯಾಸಿಟಿ ಹುಟ್ಟುಹಾಕಿರುವ ಚಿತ್ರ. ಪವನ್ ಹಾಗೂ ಪುನೀತ್ ಕಾಂಬಿನೇಷನ್‌ನಲ್ಲಿ ಮೊದಲ ಚಿತ್ರ ಎನ್ನುವ ಕಾರಣಕ್ಕೂ ದ್ವಿತ್ವ' ಮೇಲೆ ನಿರೀಕ್ಷೆಗಳು ಗರಿಗೆದರಿವೆ.

ಟೈಟಲ್ ಅನೌನ್ಸ್ ಮೆಂಟ್ ಹಾಗೂ ಚಿತ್ರದ ನಾಯಕ-ನಾಯಕಿಯ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಫಿಲ್ಮ್ ಟೀಮ್ ಅದ್ದೂರಿಯಾಗಿ ಮುಹೂರ್ತ ಮಾಡಿ ಸಿನಿಮಾ ಶುರು ಮಾಡುವ ಪ್ಲ್ಯಾನ್‌ನಲ್ಲಿದೆ. ಸೆಪ್ಟೆಂಬರ್‌ನಿಂದದ್ವಿತ್ವ’ ತಂಡ ಚಿತ್ರೀಕರಣಕ್ಕೆ ಹೊರಡಲಿದೆ. ಪ್ರೀತಾ ಜಯರಾಮನ್ ಕ್ಯಾಮೆರಾ ಕೈಚಳಕ ಹಾಗೂ ತೇಜಸ್ವಿಯವರ ಸಂಗೀತ ಚಿತ್ರಕ್ಕಿದೆ.


ಸದ್ಯ ಅಪ್ಪು ಜೇಮ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ತ್ರಿಷಾ ಕೂಡ ನಾಲ್ಕೈದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ನಿರ್ದೇಶಕ ಪವನ್ ಕುಮಾರ್ `ದ್ವಿತ್ವ’ ಕಥೆ-ಚಿತ್ರಕಥೆ-ಸಂಗೀತ ಎಲ್ಲದರ ಮೇಲೆ ಮತ್ತೊಮ್ಮೆ ಕಣ್ಣುಹಾಯಿಸುತ್ತಿದ್ದಾರೆ. ದಿವ್ಯಮುಹೂರ್ತದಲ್ಲಿ ಮುಹೂರ್ತ ಮುಗಿಸಿ ಸಿನಿಮಾ ಸೆಟ್ಟೇರಿಸುವುದಕ್ಕೆ ಹೊಂಬಾಳೆ ಸಜ್ಜಾಗಿದೆ.

Categories
ಸಿನಿ ಸುದ್ದಿ

ಅಂದು ಹಾಡು ಬರೆದ್ರು ಇಂದು ಹೀರೋ ಆದ್ರು! ಜಿಂಕೆ ಮರಿನಾ ಖ್ಯಾತಿಯ ರಾಜ್‌ ಆನಂದರಾಂ ಹಿಂದಿನ ಅಟ್ಯಾಕ್‌ ರಹಸ್ಯ!!

“ಜಿಂಕೆ ಮರಿನಾ ನೀ ಜಿಂಕೆ ಮರಿನಾ…” ಕನ್ನಡದಲ್ಲಿ ಈ ಹಾಡನ್ನು ಬಹುತೇಕ ಮಂದಿ ಕೇಳಿದ್ದಾರೆ. ಈ ಹಾಡು “ಲೂಸ್‌ ಮಾದ” ಯೋಗಿ ಅಭಿನಯದ “ನಂದ ಲವ್ಸ್‌ ನಂದಿತ” ಚಿತ್ರದ್ದು. ಈ ಹಾಡನ್ನು ಬರೆದಿದ್ದು, ರಾಜ್ ಆನಂದರಾಂ. ಈ ಹಿಂದೆ ಇವರು “ಮೇಸ್ತ್ರಿ” ಸಿನಿಮಾ ನಿರ್ದೇಶಿಸಿದ್ದರು. ಅದಾದ ಬಳಿಕ ಮತ್ತೊಂದು ಸಿನಿಮಾಗೆ ನಿರ್ದೇಶಕರಾಗಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತು ನಿರ್ದೇಶನ ಮಾಡಿದ್ದಾರೆ. ಆ ಚಿತ್ರಕ್ಕೆ “ಜಯಕೃಷ್ಣ ಆಟ್ಯಾಕ್‌ ೧” ಎಂದು ಹೆಸರಿಟ್ಟಿದ್ದಾರೆ. ಇದೊಂದು ಪಕ್ಕಾ ಆಕ್ಷನ್-ಥ್ರಿಲ್ಲರ್‌ ಕಥೆ ಹೊಂದಿದೆ. ಚಿತ್ರ ಬಿಡುಗಡೆಗೆ ರೆಡೆಯಾಗಿದೆ. ಈ ಹಿಂದೆ ನಿರ್ದೇಶಕರಾದ ಮುರಳಿ ಮೋಹನ್, ಎಚ್.ವಾಸು ಅವರ ಬಳಿ ಕಾರ್ಯ ನಿರ್ವಹಿಸಿ ಅನುಭವವಿರುವ ರಾಜ್ ಆನಂದರಾಂ, ಈಗ ಥ್ರಿಲ್ಲರ್‌ ಕಥೆಯೊಂದಿಗೆ ಬರುತ್ತಿದ್ದಾರೆ.


ಬೆಂಗಳೂರು, ನೆಲಮಂಗಲ, ದೊಡ್ಡಬಳ್ಳಾಪುರ ಸುತ್ತಮುತ್ತ ಸುಮಾರು ಮೂವತ್ತೆರಡು ದಿನಗಳ ಕಲಾ ಚಿತ್ರೀಕರಣ ನಡೆದಿದೆ. ಓಂ ಫಿಲಂಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ, ಚಿತ್ರವನ್ನು ಲಕ್ಷ್ಮೀರಮೇಶ್ ಅರ್ಪಿಸುತ್ತಿದ್ದಾರೆ. ಆರ್ ಲೋಕೇಶ್, ವೇಣುಗೋಪಾಲ್, ಸುರೇಶ್ ಪೂಜಾರಿ ಹಾಗೂ ದಿನಕರ್ ಪೂಜಾರಿ ಅವರ ಸಹ ನಿರ್ಮಾಣವಿದೆ. ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದಾರೆ. ಕುಮಾರ್ ಚಕ್ರವರ್ತಿ ಹಾಗೂ ರಾಘವೇಂದ್ರ ಬಿ ಕೋಲಾರ್ ಕ್ಯಾಮೆರಾ ಹಿಡಿದಿದ್ದಾರೆ.

ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಧನಂಜಯ್ ನೃತ್ಯ ನಿರ್ದೇಶನವಿದೆ. ಬಂಡೆ‌ ಚಂದ್ರು, ಅಶೋಕ್, ಕೌರವ ವೆಂಕಟೇಶ್, ರಾಂದೇವ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ನಿರ್ದೇಶಕ ರಾಜ್ ಆನಂದರಾಂ ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿಯಾಗುತ್ತಿರುವುದು ಈ ಚಿತ್ರದ ವಿಶೇಷ. ರಶ್ಮಿತಾ ಶೆಟ್ಟಿ, ಜೋಗಿ ನಾಗರಾಜ್, ಕೆ.ವಿ.ಮಂಜಯ್ಯ, ಪ್ರಣತಿ, ಖುಷಿ, ದೀಪು ಇತರರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ಬಜೆಟ್ ಕೇಳಿದ್ರೆ ಹೌಹಾರ್ತೀರಿ; ಕಿಚ್ಚನಿಗಾಗಿ ಜಾಕ್ ಮಂಜು ಕೋಟಿ ಖಜಾನೆ‌ ಓಪನ್ !

ಸಿನಿಲಹರಿ ವಿಶೇಷ….

  • ವಿಶಾಲಾಕ್ಷಿ

ವಿಕ್ರಾಂತ್ ರೋಣ ಬಹುಕೋಟಿ ವೆಚ್ಚದ ಸಿನಿಮಾ ಎಂಬುದು‌ ಎಲ್ಲರಿಗೂ ಗೊತ್ತಾಗಿದೆ ಆದರೆ ಬಹುಕೋಟಿ ಅಂದರೆ ಎಷ್ಟು ಕೋಟಿ ಸುರಿದಿರಬಹುದು ಎನ್ನುವ ಪ್ರಶ್ನೆ ಮಾತ್ರ ಕೂತೂಹಲವಾಗಿ ಉಳಿದಿದೆ. ಆ ಕೌತುಕದ ಪ್ರಶ್ನೆಗೆ ಉತ್ತರದ ಜೊತೆಗೆ ವಿಕ್ರಾಂತ್ ರೋಣನ ಡಿಮ್ಯಾಂಡ್ ಸ್ಟೋರಿ ಕಥೆನಾ ನಿಮ್ಮ ಮುಂದೆ ಇಡಲಿದ್ದೇವೆ.‌

ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಎದುರು‌ನೋಡ್ತಿರುವ ಕನ್ನಡದ ಹೆಗ್ಗಳಿಕೆಯ ಚಿತ್ರ ವಿಕ್ರಾಂತ್ ರೋಣ. ಭಾರತೀಯ ಚಿತ್ರರಂಗದ ಅಂಗಳದಲ್ಲಿ ಸಾವಿರಾರು ಚಿತ್ರಗಳು ತಯ್ಯಾರಾಗ್ತಿವೆ. ಹಲವು ಸೂಪರ್ ಸ್ಟಾರ್ ಗಳ ಪವರ್ ಫುಲ್ ಸಿನಿಮಾಗಳು ತೆರೆಗೆ ಬರೋಕೆ ಸಜ್ಜಾಗ್ತಿವೆ. ಈ ಮಧ್ಯೆ ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣನಿಗಾಗಿ ಜಗತ್ತಿನ‌ ಸಿನಿಮಾ ಪ್ರೇಕ್ಷಕ ಬಳಗ ಜಾತಕಪಕ್ಷಿಯಂತೆ ಕಾಯ್ತಿದೆ. ವಿಕ್ರಾಂತ್ ರೋಣನ ಮೇಲಿರುವ ನಿರೀಕ್ಷೆ ಬುರ್ಜ್ ಖಲೀಫಾವನ್ನು ಮೆಟ್ಟಿನಿಂತಿದೆ.

ಹೌದು, ಅದ್ಯಾವ ದಿವ್ಯಗಳಿಗೆಯಲ್ಲಿ ಚಿತ್ರತಂಡ ಫ್ಯಾಂಟಮ್ ಹೆಸರನ್ನ ಬದಲಾಯಿಸಿ ಬುರ್ಜ್ ಖಲೀಫಾ‌ದಲ್ಲಿ ವಿಕ್ರಾಂತ್ ರೋಣ ಟೈಟಲ್ ಲಾಂಚ್ ಮಾಡ್ತೋ ಏನೋ ಅಲ್ಲಿಂದ ಇಲ್ಲಿಯವರೆಗೆ ಚಿತ್ರದ ಮೇಲಿನ ನಿರೀಕ್ಷೆ ಗಗನಕ್ಕೇರುತ್ತಲೆ ಇದೆ.

ವಿಕ್ರಾಂತ್ ರೋಣ ಆಕ್ಷನ್ ಅಡ್ವೆಂಚರಸ್ ಚಿತ್ರ, ಬಹುಕೋಟಿ ವೆಚ್ಚದ ಸಿನಿಮಾ, ಸುದೀಪ್- ಅನುಪ್ ಕಾಂಬಿನೇಷನ್ ನಲ್ಲಿ ಬರ್ತಿರೋ‌ ಮೊದಲ ಮೂವೀ, ತ್ರಿಡಿ ತಂತ್ರಜ್ಞಾನದಲ್ಲಿ ತೆರೆಗೆ ಬರುತ್ತಿರುವ ಕನ್ನಡದ ಮೊದಲ ಫ್ಯಾಂಟಸಿ ಪಿಕ್ಚರ್, ಹೀಗೆ ಹಲವು ಕಾರಣಕ್ಕೆ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಾ ನಿರೀಕ್ಷೆ ಎನ್ನುವ ಬೆಟ್ಟವನ್ನು ಪರ್ವತವಾಗಿಸುತ್ತಾ ಬಂದಿತ್ತು. ಟೀಸರ್ ಹಾಗೂ ಕಣ್ಣು ಕುಕ್ಕುವ ಮೇಕಿಂಗ್ ನಿಂದ ಹೈಪ್‌ ಕ್ರಿಯೇಟ್ ಮಾಡಿಕೊಂಡು ಪರಭಾಷಾ ಮಂದಿ ತಿರುಗಿ ನೋಡುವಂತೆ ಮಾಡಿತ್ತು.

ಇತ್ತೀಚೆಗೆ 6 ಕೋಟಿ ಖರ್ಚು ಮಾಡಿ ಬಾಲಿವುಡ್ ನ ಬಂಗಾರದಂತಹ ಬೊಂಬೆ ಜಾಕ್ವೆಲಿನ್ ಕರೆತಂದು ಬೆಚ್ಚಿಬೆರಗಾಗುವಂತೆ ಮಾಡಿದ ಚಿತ್ರತಂಡ 20 ಲಕ್ಷ ಖರ್ಚು ಮಾಡಿ ಮುಂಬೈನ ಚಿತ್ರಕೂಟದಲ್ಲಿ ಫಸ್ಟ್ ಲುಕ್ ಲಾಂಚ್ ಮಾಡಿದ ಸುದ್ದಿ ಕೇಳಿ ಕೆಲವರು ಹೌಹಾರಿದ್ದರು. ಇದೀಗ, ವಿಕ್ರಾಂತ್ ರೋಣನಿಗೆ ನಿರ್ಮಾಪಕ ಜಾಕ್ ಮಂಜು ಸುರಿದಿರುವ ಕೋಟಿ‌ ಬಂಡವಾಳದ ಕಥೆ ಕೇಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋದು ಸತ್ಯಸ್ಯಸತ್ಯ

ಹೌದು, ವಿಕ್ರಾಂತ್ ರೋಣನಿಗಾಗಿ ನಿರ್ಮಾಪಕ ಜಾಕ್ ಮಂಜು ತಮ್ಮ ಮನೆಯ ಖಜಾನೆಯನ್ನ ಓಪನ್ ಮಾಡಿಟ್ಟಿದ್ದಾರೆ. ಹತ್ತಲ್ಲ‌ .. ಐವತ್ತಲ್ಲ.. ಭರ್ತಿ 100 ಕೋಟಿ ಬಂಡವಾಳನ ಬಾದ್ ಷಾ ಮೇಲೆ ಹಾಕಿದ್ದಾರೆ.‌ ಬಾಲ್ಯದ ಸ್ನೇಹಿತ ಸುದೀಪ್ ಮೇಲಿರುವಂತಹ ನಂಬಿಕೆ ಹಾಗೂ ವಿಶ್ವಾಸಕ್ಕಿಂತ ವಲ್ಡ್ ವೈಡ್, ಆಲ್ ಇಂಡಿಯಾ ಕಟೌಟ್ ಗಿರುವ ತಾಕತ್ತು ಹಾಗೂ ಮಾರುಕಟ್ಟೆ ಬೆಲೆನಾ‌ ಅರಿತುಕೊಂಡಿರುವ ನಿರ್ಮಾಪಕ ಜಾಕ್ ಮಂಜು ಶತಕೋಟಿ ಸುರಿದರೂ ಮಗದಷ್ಟು ಹಣ ಹೂಡೋಕೆ ಸಿದ್ದರಾಗಿದ್ದಾರೆ. ಅದು ಅವರ ಗಟ್ಟಿಗುಂಡಿಗೆ ಹಾಗೂ ಕಿಚ್ಚನ ಸಿನಿಮಾ ಮೇಲಿರುವ ನಂಬಿಕೆ ಅಲ್ಲದೇ ಇನ್ನೇನು ನೀವೇ ಹೇಳಿ.‌

ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಬಂದ‌ ಜಾಕ್ ಮಂಜು‌ ಅವರು, ಬ್ರಹ್ಮ ಸಿನಿಮಾದಿಂದ ಇಲ್ಲಿಯವರೆಗೆ ಕಿಚ್ಚನೊಟ್ಟಿಗೆ ಹೆಜ್ಜೆಹಾಕಿದ್ದಾರೆ. ಈ‌ ಮಧ್ಯೆ ತಮ್ಮದೇ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ಡೆಡ್ಲಿ ಸೋಮ, ಲೈಫು ಇಷ್ಟೇನೆ, ಭಜರಂಗಿ, ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ನಿರ್ಮಾಣ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ 100 ಕೋಟಿ ಬಜೆಟ್ ನ ಚಿತ್ರ ನಿರ್ಮಾಣ ಮಾಡುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಕ್ವಾಲಿಟಿ- ಕ್ವಾಂಟಿಟಿಯಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗದೇ ವಿಕ್ರಾಂತ್ ರೋಣ ಚಿತ್ರ ನಿರ್ಮಿಸಿ ಪರಭಾಷಾ ಮಂದಿ ಕಣ್ಣುಕುಕ್ಕುವಂತೆ ಮಾಡಿದ್ದಾರೆ.

ಅಲ್ಲದೇ, ಪರಭಾಷಾ ಮಂದಿ ವಿತರಣಾ ಹಕ್ಕುಗಳನ್ನು ಕೊಳ್ಳೋದಕ್ಕೆ‌ ಮುಗಿಬೀಳ್ತಿದ್ದಾರಂತೆ.‌ ವಿಶ್ವದಾದ್ಯಂತ ವಿಕ್ರಾಂತ್ ರೋಣನ ಮೇಲಿರುವ ನಿರೀಕ್ಷೆ ಚಿತ್ರದ ಬೇಡಿಕೆಯನ್ನು ಹೆಚ್ಚಿಸುತ್ತಿದೆ.
ಸದ್ಯಕ್ಕೆ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಕೋಟಿಗೊಬ್ಬ 3 ನಂತರ ಅನುಪ್ ಬಂಡಾರಿ ನಿರ್ದೇಶನ- ಜಾಕ್ ಮಂಜು ನಿರ್ಮಾಣ- ಸುದೀಪ್ ಅಭಿನಯದ ವಿಕ್ರಾಂತ್ ರೋಣನ ಆರ್ಭಟ ಶುರುವಾಗಲಿದೆ.

Categories
ಸಿನಿ ಸುದ್ದಿ

ಚಡ್ಡಿದೋಸ್ತ್‌ಗಳ ಆಗಮನ! ಇದು ಇಬ್ಬರು ನಿರ್ದೇಶಕರು ಹೀರೋ ಆದ ಸಿನಿಮಾ!!


ನಿರ್ದೇಶಕರು ಹೀರೋ ಆಗಿರುವ ಸಿನಿಮಾಗಳು ಹೊಸದೇನಲ್ಲ. ಆದರೆ, ಇಬ್ಬರು ನಿರ್ದೇಶಕರು ಸೇರಿ ಈಗ ಒಂದೇ ಸಿನಿಮಾದಲ್ಲಿ ಹೀರೋ ಆಗಿದ್ದಾರೆ ಅನ್ನೋದು ವಿಶೇಷ. ಈ ಹಿಂದೆ ಕೂಡ ನಿರ್ದೇಶಕರುಗಳು ತೆರೆಯ ಮೇಲೆ ರಾರಾಜಿಸಿದ್ದಾರೆ. ಆದರೆ, ಇಲ್ಲಿರೋ ನಿರ್ದೇಶಕರು ತೆರೆ ಹಿಂದೆಯೂ ದೋಸ್ತಿಗಳು. ತೆರೆಮೇಲೂ ದೋಸ್ತಿಗಳು. ಹಾಗಂತ, ತೆರೆ ಮೇಲೆ ದೋಸ್ತಿಗಳಾಗಿದ್ದರೂ, ಒಂದಷ್ಟು ಕೋಪ, ಮನಸ್ತಾಪ, ಜಗಳ, ಎಲ್ಲವೂ ಇದೆ. ಈಗ ಪ್ರೇಕ್ಷಕರ ಮುಂದೆ ಬರಲು ಅವರು ಸಜ್ಜಾಗಿದ್ದಾರೆ.

ಹೌದು, “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ”. ಇದು ಇದೇ ತಿಂಗಳು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಆಸ್ಕರ್‌ ಕೃಷ್ಣ ನಿರ್ದೇಶನದ ಚಿತ್ರವಿದು. ಈ ಹಿಂದೆ. “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಚಿತ್ರ ನಿರ್ದೇಶಿಸಿ, ನಟಿಸಿದ್ದ ಲೋಕೇಂದ್ರ ಸೂರ್ಯ ಮತ್ತು ಆಸ್ಕರ್‌ ಕೃಷ್ಣ ಈ ಚಿತ್ರದ ಹೀರೋಗಳು.

ಇವರಿಗೆ ಗೌರಿ ನಾಯರ್‌ ಜೋಡಿ. ಇಲ್ಲಿ ನಾಯಕಿ ಯಾರ ಹಿಂದೆ ಹೋಗುತ್ತಾಳೆ ಅನ್ನೋದು ಸಸ್ಪೆನ್ಸ್.‌ ಅಂದಹಾಗೆ, ಇದು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ಅವರ ನಿರ್ಮಾಣದ ಚಿತ್ರ.

ಕೊರೊನಾದಿಂದ ತತ್ತರಿಸಿದ್ದ ಚಿತ್ರರಂಗ, ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಚಿತ್ರಮಂದಿರಗಳು ಕೂಡ ಈಗ ತೆರೆದಿವೆ. ನಿರ್ದೇಶಕ ಆಸ್ಕರ್ ಕೃಷ್ಣ ಚಿತ್ರಮಂದಿರದಲ್ಲಿಯೇ ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಕಾದಿದ್ದರು. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರವು ಆಗಸ್ಟ್ ತಿಂಗಳಲ್ಲಿ ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ಅನಂತ್‌ ಆರ್ಯನ್‌ ಸಂಗೀತ ನೀಡಿದ್ದು, ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಜೋಗಿ ಸುನಿತಾ ಹಾಡಿದ್ದಾರೆ. ಈಗಾಗಲೇ ಹಾಡುಗಳು ಮೆಚ್ಚುಗೆ ಪಡೆದಿವೆ. ಇಲ್ಲಿ ನಾಯಕರ ಜೊತೆಗೆ ನಿರ್ಮಾಪಕ ಸೆವೆನ್ ರಾಜ್ ಕೂಡ ಒಂದು ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗಗನ್ ಕುಮಾರ್ ಛಾಯಾಗ್ರಹಣ ಮಾಡಿದರೆ, ಮರಿಸ್ವಾಮಿ ಸಂಕಲನವಿದೆ. ಅಕುಲ್ ನೃತ್ಯ ಹಾಗೂ ವೈಲೆಂಟ್ ವೇಲು ಸಾಹಸ ಮಾಡಿದ್ದಾರೆ.

Categories
ಸಿನಿ ಸುದ್ದಿ

ಶಂಭೋ ಶಿವ ಶಂಕರ ಚಿತ್ರದ ಟೀಸರ್ ಬಂತು; ಆಗಸ್ಟ್ 3ರಿಂದ ಕೊನೆ ಹಂತದ ಚಿತ್ರೀಕರಣ

ಈಗ ಸಿನಿಮಾ ಪ್ರಚಾರದ ಪರ್ವ. ಹೌದು, ಲಾಕ್‌ಡೌನ್‌ ಬಳಿಕ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಶೇ.100ರಷ್ಟು ಭರ್ತಿಗೆ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಚಿತ್ರರಂಗವಿದೆ. ಹಾಗಾಗಿ, ಸದ್ಯ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ಈಗಿನಿಂದಲೇ ಬಿಡುಗಡೆಯ ಕೆಲಸವನ್ನು ಶುರುವಿಟ್ಟುಕೊಂಡಿವೆ. ಎರಡನೇ ಅಲೆ ನಂತರದಲ್ಲಿ ಸಿನಿಮಾಗಳು ಪ್ರಚಾರಕ್ಕೆ ಇಳಿದಿವೆ. ಆ ಸಾಲಿಗೆ ಈಗ “ಶಂಭೋ ಶಂಕರ” ಸಿನಿಮಾ ಕೂಡ ಸೇರಿದೆ.

ಅಘನ್ಯ ಪಿಕ್ಚರ್ಸ್ ಬ್ಯಾನರ್‌ನಲ್ಲಿ ವರ್ತೂರ್ ಮಂಜು ನಿರ್ಮಿಸುತ್ತಿರುವ ‘ಶಂಭೋ ಶಿವ ಶಂಕರ’ ಚಿತ್ರದ ನಾಯಕರಲೊಬ್ಬರಾದ ಅಭಯ್ ಪುನೀತ್ ಅವರ ಹುಟ್ಟುಹಬ್ಬದಂದು ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿದೆ. ಆನಂದ್ ಆಡಿಯೋ ಮೂಲಕ ಹೊರಬಂದಿರುವ ಟೀಸರ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಆಗಸ್ಟ್ 3 ರಿಂದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಶಂಕರ್‌ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಗೌಸ್‌ಫೀರ್ ಸಾಹಿತ್ಯವಿದೆ.

ಹಿತನ್ ಹಾಸನ್ ಸಂಗೀತ ನೀಡುತ್ತಿದ್ದಾರೆ‌. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದೆ. ‘ಶಂಭೋ ಶಿವ ಶಂಕರ’ ಮೂವರು ಹೀರೋಗಳ ಹೆಸರು. ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಸುಪ್ರಿಂ ಹೀರೋ ಶಶಿಕುಮಾರ್, ಸೋನಾಲ್ ಮಾಂಟೆರೊ, ಜೊಗಿ‌ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್’, ಡಿ.ಸಿ.ತಮ್ಮಣ್ಣ ನಟಿಸಿದ್ದಾರೆ.

error: Content is protected !!