ಮಿನಿಸ್ಟರ್ ಮುನಿರತ್ನಅವರು ಮನಸ್ಸು ಮಾಡಿದರೆ, ಇದೇನು ಕಷ್ಟವೇನಲ್ಲ…

ಚಿತ್ರರಂಗ ಈಗ ಸಂಕಷ್ಟದಲ್ಲಿದೆ. ಸದ್ಯಕ್ಕೆ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಚಿತ್ರಮಂದಿರಗಳು ಓಪನ್ ಆಗಲು ಅವಕಾಶ ಸಿಕ್ಕಿದೆ. ಹಾಗೆಯೇ ಚಿತ್ರೀಕರಣಕ್ಕೂ ಅನುಮತಿ ನೀಡಿದೆ. ಆದರೆ ಲಾಕ್ ಡೌನ್ ಕಾರಣದಿಂದ ಉದ್ಯಮ ಈಗ ಭಾರೀ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಈ ಹೊತ್ತಲ್ಲಿ ಸರ್ಕಾರದಿಂದ ಒಂದಷ್ಟು ರಿಯಾಯಿತಿಗಳು ಸಿಕ್ಕರೆ ಉದ್ಯಮ ಚೇತರಿಕೆ ಕಾಣಬಹುದು ಅಂತಲೂ ಉದ್ಯಮದ ಜನರ ನಿರೀಕ್ಷೆ ಹೊಂದಿದ್ದಾರೆ. ಈ ಹೊತ್ತಲ್ಲಿಯೇ ನಿರ್ಮಾಪಕರೂ ಆದ ಬೆಂಗೂರಿನ ಆರ್.ಆರ್. ನಗರ ಶಾಸಕ ಮುನಿರತ್ನ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿರೋದು ಚಿತ್ರೋದ್ಯಮದ ಪಾಲಿಗೆ ಹೊಸ ಭರವಸೆಯಂತೂ ಮೂಡಿಸಿದೆ.
ಹಾಗಂತ ಮುನಿರತ್ನ ಅವರೇನು ಚಿತ್ರೋದ್ಯಮಕ್ಕೆ ಸ್ವರ್ಗವನ್ನೇ ಸೃಷ್ಟಿಸಿ ಬಿಡುತ್ತಾರೆ ಅಂತಲ್ಲ. ಸರ್ಕಾರದ ಮಟ್ಟದಲ್ಲಿ ಉದ್ಯಮದ ಪರವಾಗಿ ಗಟ್ಟಿ ಧ್ವನಿಯಾಗುವ ನಂಬಿಕೆಯಂತೂ ಇದೆ. ಯಾಕಂದ್ರೆ ಚಿತ್ರೋದ್ಯಮದ ಸಂಕಷ್ಟಗಳೇನು ಅನ್ನೋದನ್ನು ಅವರು ಹತ್ತಿರದಿಂದ ನೋಡಿದ್ದಾರೆ. ತಾವೇ ನಿರ್ಮಾಪಕರಾಗಿ ಅದನ್ನು ಅನುಭವಿಸಿದ್ದಾರೆ. ಉದ್ಯಮವನ್ನೇ ನಂಬಿಕೊಂಡು ಎಷ್ಟೇಲ್ಲ ಜನ ಇಲ್ಲಿದ್ದಾರೆನ್ನುವುದು ಅವರಿಗೆ ಗೊತ್ತಿದೆ. ಹಾಗಾಗಿ ಅವರ ಬಳಿ ಉದ್ಯಮದ ಕಷ್ಟಗಳನ್ನ ಹೇಳಿಕೊಂಡರೆ ಕನಿಷ್ಠ ಸರ್ಕಾರದ ಕಿವಿಗಾದರೂ ತಲುಪಿಸಬಹುದು ಅಂತಲೂ ಇದೆ. ಅದೇ ಕಾರಣಕ್ಕೆ ಮುನಿರತ್ನ ಸಚಿವರಾಗಿರೋದು ಸಹಜವಾಗಿಯೇ ಚಿತ್ರೋದ್ಯಮದಲ್ಲಿ ಸಂತಸ ಮೂಡಿಸಿದೆ.

ಮುಂದೆ ಚಿತ್ರೋದ್ಯಮಕ್ಕೆ ಭವಿಷ್ಯ ಇದೀಯಾ? ಲಾಕ್ ಡೌನ್ ಸೃಷ್ಟಿಸಿದ ಅವಾಂತರದಿಂದ ಹೀಗೊಂದು ಆತಂಕ ಇದ್ದೇ ಇದೆ. ಯಾಕಂದ್ರೆ ಕೊರೋನಾ, ಕೊರೋನಾ ಅಂತ ಸಿನಿಮಾ ಚಟುವಟಿಕೆಗಳೆಲ್ಲಾ ಬಂದ್ ಆಗಿ, ಚಿತ್ರಮಂದಿರಗಳು ಬಾಗಿಲು ಮುಚ್ಚಿದರೆ, ಇದನ್ನ ನಂಬಿಕೊಂಡವರು ಮಣ್ಣು ತಿನ್ನಬೇಕಷ್ಟೇ. ಕೊರೋನಾ ಶುರುವಾದ ಈ ಒಂದೂವರೆ ವರ್ಷದ ಭೀಕರತೆ ಅಕ್ಷರಶ: ಸಿನಿಮಾ ಮಂದಿಗೆ ಮಣ್ಣು ತಿನ್ನಿಸಿದೆ. ಅದರಿಂದ ಒಂದಷ್ಟು ಚೇತರಿಕೆ ಕಾಣಬೇಕಾದರೆ, ಸರ್ಕಾರವು ಉದ್ಯಮದ ಕೈ ಹಿಡಿಯಲೇಬೇಕಿದೆ. ಇದು ಯಾವ ಥರ? ಈ ಪ್ರಶ್ನೆಗೆ ತಕ್ಷಣವೇ ಉತ್ತರ ಕಂಡುಕೊಳ್ಳುವುದು ಕಷ್ಟ. ಕಾಲ ಕಾಲಕ್ಕೆ ಸರ್ಕಾರ ಉದ್ಯಮವನ್ನು ಅನುದಾನದ ಮೂಲಕವೇ, ಆರ್ಥಿಕ ನೆರವಿನ ಮೂಲಕವೋ, ತೆರೆಗೆಯ ರಿಯಾಯಿತಿಯ ಮೂಲಕವೋ ಕೈಹಿಡಿದು ಪ್ರೋತ್ಸಾಹಿಸುತ್ತಾ ಬಂದರೆ, ಚಿತ್ರೋದ್ಯಮಕ್ಕೆ ಒಂದಷ್ಟು ಚೇತರಿಕೆ ಸಿಗುವುದು ಖಚಿತ. ಆ ಕೆಲಸಕ್ಕೆ ಮುನಿರತ್ನ ಅವರು ಸರ್ಕಾರ ಮತ್ತು ಉದ್ಯಮದ ಗಟ್ಟಿ ಸೇತುವೆಯಾದರೆ ಸಾಕು ಎನ್ನುವ ಮಾತನ್ನು ಉದ್ಯಮದ ಮಂದಿ ಹೇಳುತ್ತಿದ್ದಾರೆ.

ಆರಂಭದಲ್ಲೀಗ ಚಿತ್ರಮಂದಿರಗಳ ನೂರರಷ್ಟು ಸೀಟಉ ಭರ್ತಿ ಸವಾಲಿದೆ. ಕೊರೋನಾ ಕಾರಣಕ್ಕೆ ಸರ್ಕಾರ ಈಗ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಮಾತ್ರ ಚಿತ್ರ ಪ್ರದರ್ಶನ ನಡೆಸಲು ಅನುಮತಿ ನೀಡಿದೆ. ಆದರೆ ಚಿತ್ರಮಂದಿರ ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಗೆ ಅವಕಾಶ ಸಿಗುವ ತನಕ ಸಿನಿಮಾ ರಂಗಕ್ಕೆ ಭವಿಷ್ಯ ಇಲ್ಲ ಅನ್ನೋದು ಸಿನಿಮಾ ರಂಗದ ಆತಂಕ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸರಿಯಾಗಿ ಮಾತನಾಡಿ, ಸಿನಿಮಾ ಉದ್ಯಮದ ವಾಸ್ತವವನ್ನು ಸರ್ಕಾರಕ್ಕೆ ಮನವರಿ ಕೆ ಮಾಡಿಕೊಡಬೇಕಿದೆ. ಮುನಿರತ್ನ ಅವರಿಂದ ಇದು ಸಾಧ್ಯವಾಗುತ್ತೆ. ಆ ನಿಟ್ಟಿನಲ್ಲಿ ಅವರನ್ನು ಉದ್ಯಮ ಬಳಸಿಕೊಳ್ಳಬೇಕು ಅಂತಲೂ ಹೇಳುತ್ತಿ ವೆ ಮೂಲಗಳು. ಉಳಿದಂತೆ ಸಿನಿಮಾ ಉದ್ಯಮ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆ ಬಗ್ಗೆ ಮುಂದೆ ಆಲೋಚಿ ಸಬಹುದು ಅನ್ನುತ್ತಾರೆ ಉದ್ಯಮದ ಹಿರಿಯ ನಿರ್ಮಾ ಪಕರೊಬ್ಬರು.

Related Posts

error: Content is protected !!