Categories
ಸಿನಿ ಸುದ್ದಿ

ಗ್ಯಾಂಗ್‌ ಸ್ಟರ್‌ ಪಾತ್ರದಲ್ಲಿ ಶಾನ್ವಿ ಶ್ರೀವಾಸ್ತವ್-‌ ಇಲ್ಲಿ ಡ್ಯಾಡಿ ಆಗಿದ್ದಾರೆ ಗಾಯಕ ರಘು ದೀಕ್ಷಿತ್‌ !

ಅವನೇ ಶ್ರೀಮನ್ನಾರಾಯಣ ಚಿತ್ರದ ಖ್ಯಾತಿಯ ನಟಿ ಶಾನ್ವಿ ಶ್ರೀವಾಸ್ತವ್‌ ʼಕಸ್ತೂರಿ ಮಹಲ್‌ʼ ಪ್ರವೇಶಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಅದೀಗ ತೆರೆಗೆ ಬರುವುದಕ್ಕೂ ರೆಡಿಯಾಗಿದೆ. ಈ ನಡುವೆಯೇ ಅವರೀಗ ಬ್ಯಾಂಗ್‌ ಹೆಸರಿನ ಚಿತ್ರಕ್ಕೂ ಬಣ್ಣ ಹಚ್ಚಿದ್ದು, ಅಲ್ಲಿ ಅವರು ಗ್ಯಾಂಗ್‌ ಸ್ಟರ್‌ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದೀಗ ರಿಲೀಸ್‌ ಹತ್ತಿರಕ್ಕೆ ಬಂದಿದೆ. ಇತ್ತೀಚೆಗಷ್ಟೇ ಆ ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಲಾಂಚ್‌ ಆಯಿತು. ವಸಂತ್‌ ಕುಮಾರ್‌ ಹಾಗೂ ಪೂಜಾ ವಸಂತ್‌ ಕುಮಾರ್‌ ನಿರ್ಮಾಣದ ಈ ಚಿತ್ರಕ್ಕೆ ಗಣೇಶ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಹೆಸರಿಗೆ ತಕ್ಕಂತೆ ಇದೊಂದು ಡಾರ್ಕ್‌ ಕಾಮಿಡಿ ಹಾಗೂ ಆಕ್ಷನ್ ಥ್ರಿಲ್ಲರ್ ಚಿತ್ರವಂತೆ.

ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಗಣೇಶ್‌ ಪರಶುರಾಮ್‌, ಇದು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲರಿಗೂ ಹಿಡಿಸುವ ಕಥೆ. ನಲವತ್ತೆಂಟು ಘಂಟೆಗಳಲ್ಲಿ ನಡೆಯುವ ಘಟನೆಯೊಂದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಮೊದಲ ಬಾರಿಗೆ ಶಾನ್ವಿ ಶ್ರೀವಾಸ್ತವ್ ಇಲ್ಲಿ ಗ್ಯಾಂಗ್ ಸ್ಟರ್ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಇದೇ ಪ್ರಥಮ ಬಾರಿಗೆ ಡ್ಯಾಡಿ ಎಂಬ ಪಾತ್ರದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ ಎಂದರು. ವಿಶೇಷ ಅಂದ್ರೆ ಈ ಚಿತ್ರವು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಗೆ ಬರುತ್ತಿದೆ. ಫೆಬ್ರವರಿಗೆ ರಿಲೀಸ್‌ ಪ್ಲಾನ್‌ ಹಾಕಿಕೊಂಡಿದೆ ಚಿತ್ರ ತಂಡ. ಅದಕ್ಕೂ‌ ಮುನ್ನ ‌ಜನವರಿಯಲ್ಲಿ ಟ್ರೇಲರ್ ಲಾಂಚ್‌ ಆಗಲಿದೆಯಂತೆ.


ಚಿತ್ರಕ್ಕೆ ತಾವು ಎಂಟ್ರಿಯಾದ ಬಗ್ಗೆ ಹಾಗೂ ತಮ್ಮ ಪಾತ್ರದ ಬಗ್ಗೆ ನಟಿ ಶಾನ್ವಿ ಶ್ರೀವಾಸ್ತವ್‌ ಹೇಳಿಕೊಂಡರು.ʼ ನಾನು ಈ ರೀತಿ ಪಾತ್ರ ಯಾವತ್ತೂ ಮಾಡಿಲ್ಲ.‌ ಮೊದಲು ಯೋಚನೆ ಮಾಡಿದ್ದೆ. ನನಗೆ ಈ ಪಾತ್ರ ಸರಿ ಹೊಂದುತ್ತದೊ ಇಲ್ಲವೋ? ಎಂದು. ಮೊದಲ ದಿನ ಚಿತ್ರೀಕರಣಕ್ಕೆ ಹೋದಾಗ, ನಾನು‌ ನಿರ್ಧಾರ ಸರಿ ಅನಿಸಿತು. ನಾಯಕಿಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇಂತಹ ಪಾತ್ರಗಳು ಬರುವುದು ಕಡಿಮೆ. ಕಥೆ ತುಂಬಾ ಚೆನ್ನಾಗಿದೆ ಎಂದರು ಶಾನ್ವಿ ಶ್ರೀವಾಸ್ತವ್. ಹಾಗೆಯೇ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ತಾವು ಡ್ಯಾಡಿ ಯಾದ ಕಥೆ ಬಿಚ್ಚಿಟ್ಟರು. ʼ ಗೆಳೆಯ ರಿತ್ವಿಕ್ ಹಾಗೂ ನಿರ್ದೇಶಕ ಗಣೇಶ್ ಮಾತನಾಡಲು ಮನೆಗೆ ಬಂದರು. ನಾನು ಸಂಗೀತ ನಿರ್ದೇಶನ ಅಥವಾ ಹಾಡು ಹಾಡಿಸುವುದಕ್ಕಾಗಿ ಕೇಳಲು ಮನೆಗೆ ಬಂದಿದ್ದಾರೆ ಅಂದು ಕೊಂಡೆ. ನಂತರ ಅವರು ನೀವು ಈ ಚಿತ್ರದಲ್ಲಿ ನಟಿಸಬೇಕೆಂ ದರು.‌ ಒಂದು ಸಲ ಆಶ್ಚರ್ಯವಾಯಿತು. ಮೊದಲು ನಾನು ಒಪ್ಪಲಿಲ್ಲ. ನಂತರ ಅವರ ಒತ್ತಡಕ್ಕೆ ಮಣಿದು ಒಪ್ಪಿಕೊಂಡೆ. ಡ್ಯಾಡಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ನಿರ್ಮಾಪಕ ರೊಂದಿಗೆ ಹಾಗೂ ಚಿತ್ರತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆʼ ಎಂದರು ರಘು ದೀಕ್ಷಿತ್.

ಚಿತ್ರದಲ್ಲಿ ನಾಲ್ಕು ಸ್ನೇಹಿತರ ಪಯಣದಲ್ಲಿ ಈ ಕಥೆ ನಡೆಯುತ್ತದೆ. ಚಿತ್ರದ‌ ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಆರವ್ ಪಾತ್ರದಲ್ಲಿ, ಸುನೀಲ್ ತಮ್ಮದೇ ಹೆಸರಿನ ಪಾತ್ರದಲ್ಲಿ, ನಾಟ್ಯ ರಂಗ ಭೂಷಣ್ ಆಗಿ‌ ಹಾಗೂ ಸಾತ್ವಿಕ ಅವರು ಸಿರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ನಾಲ್ಕು ಜನರು ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು. ಛಾಯಾಗ್ರಾಹಕ ಉದಯಲೀಲ, ಸಂಕಲನಕಾರ ಹಾಗೂ‌ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿರುವ ವಿಜೇತ್ ಚಂದ್ರ ಚಿತ್ರದ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಯು.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.‌ ಈಗಾಗಲೇ ಆನ ಹಾಗೂ ನಾನು, ಅದು ಮತ್ತು ಸರೋಜ ಚಿತ್ರಗಳನ್ನು ನಿರ್ಮಾಣ ಮಾಡಿರುವ ಪೂಜಾ ವಸಂತಕುಮಾರ್ ಅವರ ನಿರ್ಮಾಣದ ಮೂರನೇ ಚಿತ್ರ ‘ಬ್ಯಾಂಗ್’.
ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Categories
ಸಿನಿ ಸುದ್ದಿ

ದೊಡ್ಡಣ್ಣ ಬಡಾವಣೆಗೆ ದೊಡ್ಮನೆ ಮಗನ ಹೆಸರು- ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನಾಮಫಲಕ ಅನಾವರಣ ಮಾಡಿದ್ರು ಫ್ಯಾನ್ಸ್‌ !

ಅಭಿಮಾನಿಗಳ ಪ್ರೀತಿಯ ಅಪ್ಪು, ನಿಜಕ್ಕೂ ಅಜಾರಾಮರ. ಅಭಿಮಾನಿಗಳ ಮನೆ-ಮನದಲ್ಲಿ ಮಾತ್ರವಲ್ಲ ಅಪ್ಪು ಹೆಸರು, ನಾಡಿನ ಗಲ್ಲಿ ಗಲ್ಲಿಗಳಲ್ಲೂ ಅಚ್ಚಾಗುತ್ತಿದೆ. ಆಕಾಲಿಕವಾಗಿ ನಿಧನರಾದ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಹೆಸರನ್ನು ಚಿರಕಾಲ ಉಳಿಸುವ ಪ್ರಯತ್ನದಲ್ಲಿ ಅವರ ಅಭಿಮಾನಿಗಳು ಈಗಾಗಲೇ ಅವರ ಪ್ರತಿಮೆಗಳನ್ನು ಸ್ಥಾಪಿಸಿದ್ದು ಮಾತ್ರವಲ್ಲ, ತಮ್ಮೂರಿನ ರಸ್ತೆಗಳಿಗೂ ಅಪ್ಪು ಹೆಸರಿಡುತ್ತಿರುವ ಘಟನೆಗಳಿಗೆ ಈಗ ಬೆಂಗಳೂರಿನ ಹೆಗ್ಗಡೆದೇವನಪುರದ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಹೆಗ್ಗಡದೇವನಪುರದ ದೊಡ್ಡಣ್ಣ ಬಡಾವಣೆಯ ಮುಖ್ಯ ರಸ್ತೆಗೆ ಈಗ ಅಪ್ಪು ರಸ್ತೆ ಅಂತ ನಾಮಕರಣ ಮಾಡಲಾಗಿದೆ. ಹಾಗೆಯೇ ಅಲ್ಲಿ ದೊಡ್ಡದೊಂದು ನಾಮಫಲಕ ಹಾಕಿ, ಅಪ್ಪು ಅವರ ಹೆಸರನ್ನು ಅನುಗಾಲವೂ ಅಜರಾಮರವಾಗುಳಿಸುವಂತೆ ಮಾಡಲಿದ್ದಾರೆ. ʼಅಪ್ಪು ರಸ್ತೆʼ ಯ ನಾಮಫಲಕವನ್ನು ಸೋಮವಾರ ಉದ್ಘಾಟಿಸಲಾಯಿತು.

ಅಂದ ಹಾಗೆ, ಸೋಮವಾರಕ್ಕೆ ನಟ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನಿಧನರಾಗಿ ಒಂದು ತಿಂಗಳಾಯಿತು. ಇದೇ ಕಾರಣಕ್ಕೆ ಸೋಮವಾರ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಪ್ಪು ಸಮಾಧಿಗೆ ಅವರ ಕುಟುಂಬ ವರ್ಗದವರು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಅತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಹೆಗ್ಗಡದೇವನಪುರದಲ್ಲೂ ನಟ ಪುನೀತ್‌ ರಾಜಕುಮಾರ್‌ ಅಭಿಮಾನಿಗಳು ಕೂಡ ಸೋಮವಾರ ಅಪ್ಪು ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದರು. ವಿಶೇಷವಾಗಿ ಅಪ್ಪು ಮೇಲಿನ ಅಭಿಮಾನಕ್ಕೆ ಹೆಗ್ಗಡದೇವನಪುರದ ದೊಡ್ಡಣ ಬಡಾವಣೆಯ ಮುಖ್ಯರಸ್ತೆಗೆ ʼಅಪ್ಪು ರಸ್ತೆʼ ಎಂದು ನಾಮಕರಣ ಮಾಡಿ, ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನ ಮೆರೆದರು.

ʼ ರಾಜ್‌ ಕುಟುಂಬದಲ್ಲಿ ನಾವು ತುಂಬಾ ಇಷ್ಟ ಪಡುತ್ತಿದ್ದ ನಟ ಪುನೀತ್‌ ರಾಜಕುಮಾರ್.‌ ಅದಕ್ಕೆ ಕಾರಣ ಸಿನಿಮಾ ಮೇಲಿನ ಅವರ ಬದ್ದತೆ ಮತ್ತು ಪ್ರೀತಿ. ಹಾಗಾಗಿ ಆರಂಭದಿಂದಲೂ ಅವರ ಸಿನಿಮಾಗಳನ್ನು ನೋಡುತ್ತಾ ಬಂದ ನಮಗೆ ಅವರ ಸಿನಿಮಾಗಳು ಬಿಡುಗಡೆ ಅಂದ್ರೆ ಒಂದ್ರೀತಿ ಹಬ್ಬವೇ ಎನ್ನುವಂತೆಯೇ ಇತ್ತು. ಅವರು ಅಭಿನಯಿಸಿದ ಯಾವುದೇ ಸಿನಿಮಾಗಳನ್ನು ನಾವು ನೋಡದೆ ಬಿಟ್ಟಿಲ್ಲ. ಹಾಗೆಯೇ ಅವರಿಗಿದ್ದ ಸಾಮಾಜಿಕ ಕಾಳಜಿಯೂ ಕೂಡ ನಾವು ಅವರನ್ನು ಹೆಚ್ಚು ಪ್ರೀತಿಸಲು ಕಾರಣ. ಇವತ್ತು ಪ್ರಚಾರಕ್ಕಾಗಿಯೇ ಸಮಾಜ ಸೇವೆ ಮಾಡುವವರ ನಡುವೆ ಅವರು ತಾವು ಮಾಡಿದ ಯಾವುದೇ ಸಾಮಾಜಿಕ ಕೆಲಸವೂ ಪ್ರಚಾರಕ್ಕೆ ಬರಬಾರದು ಅಂತ ತೆರೆಮರೆಯಲ್ಲಿಯೇ ಮಂದಿ ಮಕ್ಕಳಿಗೆ, ಅಸಹಾಯಕರಿಗೆ ಸೇವೆ ಮಾಡುತ್ತಾ ಬಂದಿದ್ದರು. ಆದರೆ ಅವರಿಲ್ಲದ ಈಕ್ಷಣವನ್ನು ನಾವು ಅರಗಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ. ಅವರು ಮಾಡಿದ ಸಾಮಾಜಿಕ ಕೆಲಸ ಮಾತ್ತು ಸಿನಿಮಾ ಬದ್ದತೆಯನ್ನು ಚಿರಕಾಲ ನೆನಪಿಸಿಕೊಳ್ಳಬೇಕೆಂಬ ಕಾರಣಕ್ಕೆ ನಮ್ಮದೊಂದು ಸಣ್ಣ ಕೆಲಸ ಅಂತ ಈ ರಸ್ತೆಗೆ ಅಪ್ಪು ರಸ್ತೆ ಅಂತ ನಾಮಕರಣ ಮಾಡಿದ್ದೇವೆ ಎನ್ನುತ್ತಾರೆ ದೊಡ್ಡಣ್ಣ ಬಡಾವಣೆಯ ನಿವಾಸಿ ಮಂಜು.

ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಚರಿತ್ರ್ಯೆ ಸೃಷ್ಟಿಸಲು ಹೊರಟ ಸಿನಿಮಾ, ಕಿಚ್ಚನ ಕೈಗೆ ಬಂತು -ಸುದೀಪ್‌ಗೆ ಜೈ ಎಂದ್ರು ರಣವೀರ್-ದೀಪಿಕಾ !

ಭಾರತೀಯ ಚಿತ್ರರಂಗದಲ್ಲಿ ನಯಾ ಇತಿಹಾಸವನ್ನು ಬರೆಯೋದ್ರಲ್ಲಿ ಸಂಶಯವೇ ಇಲ್ಲ ಎಂದು ಹೇಳಲಾಗುತ್ತಿರುವ ಆ ಒಂದು ಚಿತ್ರ ಗಂಧದಗುಡಿಯ ಅಭಿನಯ ಚಕ್ರವರ್ತಿ, ಸ್ಯಾಂಡಲ್‌ವುಡ್‌ನ ಬಾದ್‌ಷಾ ಕಿಚ್ಚ ಸುದೀಪ್ ಅವರ ಕೈ ಸೇರಿದೆ. ಹಾಗಂತ ಆ ಸಿನಿಮಾದಲ್ಲಿ ಕನ್ನಡದ ಮಾಣಿಕ್ಯ ಅಭಿನಯಿಸ್ತಿಲ್ಲ ಬದಲಾಗಿ ಆ ಚಿತ್ರವನ್ನು ಕರುನಾಡ ಮೂಲೆ ಮೂಲೆಗೆ ತಲುಪಿಸುವ ಜವಬ್ದಾರಿಯನ್ನು ಹೊತ್ಕೊಂಡಿದ್ದಾರೆ. ಹಾಗಾದ್ರೆ, ಆ ಮೂವೀ ಯಾವುದು? ಸ್ಯಾಂಡಲ್‌ವುಡ್ ಬಚ್ಚನ್‌ಗೆ ಬಿಟೌನ್ ಕ್ಯೂಟ್ ಅಂಡ್ ಮೋಸ್ಟ್ ಟ್ಯಾಲೆಂಟೆಡ್ ಕಪಲ್ಸ್ ರಣವೀರ್ ಹಾಗೂ ದೀಪಿಕಾ ಜೈ ಎಂದಿದ್ದೇಕೆ ? ಈ ಇಂಟ್ರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ

ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಸೌತ್‌ಗೆ ಮಾತ್ರ ಸೀಮಿತವಾಗಿಲ್ಲ ಅದರಾಚೆಗೂ ಬೆಳೆದಿದ್ದಾರೆ. ವರ್ಲ್ಡ್ ವೈಡ್ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ರನ್ನ, ಜಗತ್ತಿನ ತುಂಬೆಲ್ಲಾ ಹವಾ ಮೆಂಟೇನ್ ಮಾಡಿದ್ದಾರೆ. ಸ್ಯಾಂಡಲ್‌ವುಡ್-ಕಾಲಿವುಡ್-ಟಾಲಿವುಡ್-ಬಾಲಿವುಡ್‌ನಲ್ಲಿ ಧಗಧಗಿಸಿರೋ ಮಾಣಿಕ್ಯನಿಗೆ ಹಾಲಿವುಡ್ ಮಂದಿ ರತ್ನಗಂಬಳಿ ಹಾಸಿದ್ದು ಕನ್ನಡಿಗರ ಕಣ್ಮುಂದೆಯೇ ಇದೆ. ಹೀಗೆ ಇಂಗ್ಲೀಷ್ ಮಂದಿಯ ಕಣ್ಣುಕುಕ್ಕಿರೋ ಕಿಚ್ಚ, ಭಾರತೀಯ ಚಿತ್ರರಂಗ ಕೂತೂಹಲದಿಂದ ಕಾಯ್ತಿರೋ ಹೆಮ್ಮೆಯ ಸಿನಿಮಾವನ್ನು ಕನ್ನಡಿಗರಿಗೆ ತೋರಿಸಬೇಕು ಎಂದು ಹೊರಟಿದ್ದಾರೆ. ಅಷ್ಟಕ್ಕೂ, ಇಂಡಿಯನ್ ಸಿನಿಮಾ ಇಂಡಸ್ಟ್ರಿ ಕಣ್ಣರಳಿಸಿ ಕೂತಿರೋ ಆ ಸಿನಿಮಾ ಬೇರಾವುದು ಅಲ್ಲ… 1983ರಲ್ಲಿ ಇಡೀ ಜಗತ್ತು ಬೆಕ್ಕಸ ಬೆರಗಾಗಿ ಇಂಡಿಯಾದತ್ತ ನೋಡಿದಂತಹ ಆ ಒಂದು ಘಟನೆಯನ್ನು ಆಧರಿಸಿ ಸಿದ್ದಗೊಂಡಿರೋ `83′

ಅಷ್ಟಕ್ಕೂ 1983ರಲ್ಲಿ ಏನ್ ನಡೀತು? ಅದ್ಯಾವ ಐತಿಹಾಸಿಕ ಘಟನೆಗೆ ಭಾರತ ಸಾಕ್ಷಿಯಾಯ್ತು ಅಂತ ನಿಮ್ಮೆಲ್ಲರಿಗೂ ಗೊತ್ತೆಯಿದೆ. ಭಾರತೀಯರು ಮಾತ್ರವಲ್ಲ ಜಗತ್ತಿನಾದ್ಯಂತ ಯಾರೂ ಊಹಿಸದ ಚರಿತ್ರ್ಯೆ ಇತಿಹಾಸದ ಪುಟಗಳಲ್ಲಿ ದಾಖಲಾಯ್ತು. ಹೌದು, 1983ರಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತೀಯ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಮೊದಲ ಭಾರಿಗೆ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟರು. ಅಲ್ಲಿವರೆಗೂ ಕ್ರಿಕೆಟ್ ಸಾಮ್ರಾಜ್ಯವನ್ನು ಆಳುತ್ತಿದ್ದ ವಿಂಡೀಸ್ ತಂಡಕ್ಕೆ ಮಣ್ಣುಮುಕ್ಕಿಸಿ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಭಾರತೀಯರು ವರ್ಲ್ಡ್ ಕಪ್‌ನ ಎತ್ತಿಹಿಡಿದರು. ಈ ಮೂಲಕ ಯಾರೂ ತಿಕ್ಕಿ ಅಳಿಸಲಾಗದ ಇತಿಹಾಸ ಸೃಷ್ಟಿಗೆ ಕಾರಣಕರ್ತರಾದರು. ಈಗ ಇದೇ ರೋಚಕ ಘಟನೆ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ. ಕಬೀರ್ ಖಾನ್ ನಿರ್ದೇಶನದಲ್ಲಿ `83′ ಹೆಸರಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ.

ಕಪಿಲ್ ದೇವ್ ಪಾತ್ರಕ್ಕೆ ಬಿಟೌನ್ ಹ್ಯಾಂಡ್ಸಮ್ ಹಂಕ್ ರಣವೀರ್ ಸಿಂಗ್ ಜೀವ ತುಂಬಿದ್ದಾರೆ. ಕಪಿಲ್ ದೇವ್ ಪತ್ನಿ ರೂಮಿ ಭಾಟಿಯಾ ಪಾತ್ರದಲ್ಲಿ ನಟಿ ದೀಪಿಕಾ ಮಿಂಚಿದ್ದಾರೆ. ರಿಯಲ್ ಲೈಫ್‌ನಲ್ಲಿ ಸತಿಪತಿಗಳಾಗಿರುವ ವೀರ್-ಡಿಪ್ಪಿ `83′ ಚಿತ್ರದಲ್ಲಿ ಪತಿ-ಪತ್ನಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಸುನೀಲ್ ಗಾವಸ್ಕರ್ ಪಾತ್ರಕ್ಕೆ ತಹೀರ್ ರಾಜ್ ಭಾಸಿನ್, ಪಿ,ಆರ್ ಮಾನ್‌ಸಿಂಗ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ, ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರದಲ್ಲಿ ಜೀವಾ, ಮೊಹಿಂದರ್ ಅಮರನಾಥ್ ಪಾತ್ರಕ್ಕೆ ಸಾಕಿಬ್ ಸಲೀಂ, ಸಂದೀಪ್ ಪಾಟೀಲ್ ಪಾತ್ರಕ್ಕೆ ಚಿರಾಗ್ ಪಾಟೀಲ್ ಜೀವತುಂಬಿ ಅಭಿನಯಿಸಿದ್ದಾರೆ. ಸದ್ಯ ಇದರ ಟೀಸರ್ ರಿಲೀಸ್ ಆಗಿದ್ದು ಕ್ರಿಕೆಟ್ ಪ್ರೇಮಿಗಳನ್ನು ಮಾತ್ರವಲ್ಲ ಚಿತ್ರ ಪ್ರೇಮಿಗಳನ್ನು ಕೂಡ ಹುಚ್ಚೆಬ್ಬಿಸಿದೆ.

ಇಂಟ್ರೆಸ್ಟಿಂಗ್ ಅಂದರೆ ‘83'ಪ್ಯಾನ್ ಇಂಡಿಯಾ ತುಂಬೆಲ್ಲಾ ಬಿಡುಗಡೆಯಾಗ್ತಿ ರುವುದು.ಯಸ್,ಮೂಲ ಹಿಂದಿ ಭಾಷೆಯಲ್ಲಿ ನಿರ್ಮಾಣಗೊಂಡಿದೆಯಾದರೂ ಕೂಡ ಕನ್ನಡ-ತೆಲುಗು-ತಮಿಳು-ಮಲೆಯಾಳಂ ಭಾಷೆಗೆ ಡಬ್ ಆಗ್ತಿದೆ. ಕನ್ನಡ ಭಾಷೆಯಲ್ಲಿ ಡಬ್ ಆಗಿರುವ ’83’ ಚಿತ್ರವನ್ನು ಕರುನಾಡಿನ ಮೂಲೆ ಮೂಲೆಗೂ ತಲುಪಿಸುವ ಜವಬ್ದಾರಿಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊತ್ತುಕೊಂಡಿದ್ದಾರೆ. ಇದೇ ಡಿಸೆಂಬರ್ 24 ರಂದು ಸಿನಿಮಾ ಜಗತ್ತಿನಾದ್ಯಂತ ತೆರೆಗೆ ಬರುತ್ತಿದೆ. ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಕಬೀರ್ ಖಾನ್ ಸಹನಿರ್ಮಾಪಕರಾಗಿದ್ದು, ಕರ್ನಾಟಕದಲ್ಲಿ `83′ ಡಿಸ್ಟ್ರಿಬ್ಯೂಟ್ ಮಾಡೋದಕ್ಕೆ ಕಿಚ್ಚನಿಗೆ ಒಪ್ಪಿಗೆ ಕೊಟ್ಟಿದ್ದಾರೆ.

ಬಾದ್ ಷಾ ಸುದೀಪ್‌ಗೆ ಸಿನಿಮಾ ಮೇಲೆ ಎಷ್ಟು ಪ್ರೀತಿ ಮತ್ತು ಆಸಕ್ತಿ ಇದೆಯೋ ಅಷ್ಟೇ ಪ್ರೀತಿ ಮತ್ತು ಆಸಕ್ತಿ ಕ್ರಿಕೆಟ್ ಮೇಲೆ ಕೂಡ ಇದೆ. ಹೀಗಾಗಿಯೇ, ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್'ನಂತಹ ತಂಡ ಕಟ್ಟಿ ಸ್ಟಾರ್‌ಗಳನ್ನು ಒಟ್ಟುಗೂಡಿಸಿದ್ದು.ನಾವೆಲ್ಲರೂ ಒಂದೇ ಎನ್ನುವ ಒಗ್ಗಟ್ಟಿನ ಮಂತ್ರದ ಜೊತೆಗೆ ಕ್ರಿಕೆಟ್ ಪ್ರೇಮವನ್ನು ಹೊರಗಾಕಿದ್ದರು.ಟೈಮ್ ಸಿಕ್ಕಾಗ ಮೈದಾನಕ್ಕಿಳಿದು ಬ್ಯಾಟ್ ಬೀಸುವ,ಫ್ಲೈಟ್ ಏರಿ ಕ್ರಿಕೆಟ್ ನೋಡಲಿಕ್ಕೆ ಹೊರದೇಶಕ್ಕೂ ಹೋಗಿಬರುವ ಕಿಚ್ಚ,ಕ್ರಿಕೆಟ್ ಮೇಲಿನ ಪ್ರೀತಿಗಾಗಿ ವರ್ಲ್ಡ್ ಕಪ್ ಕಥೆಯ ’83’ ಚಿತ್ರವನ್ನು ಕನ್ನಡಿರಿಗೆ ತೋರ‍್ಸೋಕೆ ಹೊರಟಿದ್ದಾರೆ. ಶುಭವಾಗಲಿ ಕೋಟಿಗೊಬ್ಬ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

‘ಕಿರುತೆರೆ’ಯತ್ತ ಮತ್ತೆ ಗೋಲ್ಡನ್‌ಸ್ಟಾರ್; ಬಂಗಾರದ ಹುಡ್ಗನ ಹೊಸ ರಿಯಾಲಿಟಿ ಶೋ !

ಗಂಧದಗುಡಿಯ ಬಂಗಾರದ ಗಣಿ ಗೋಲ್ಡನ್‌ಸ್ಟಾರ್ ಗಣೇಶ್ ಅವರು ಮತ್ತೆ ಕಿರುತೆರೆಯತ್ತ ಮುಖಮಾಡಿದ್ದಾರೆ. ಜೀ ಕನ್ನಡದ ಹೊಚ್ಚ ಹೊಸ ರಿಯಾಲಿಟಿ ಶೋದ ನಿರೂಪಣೆಯ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು ಮಳೆ ಹುಡುಗ ಹೋಸ್ಟ್ ಮಾಡಲಿರುವ ಪ್ರೋಗ್ರಾಂ ಕುರಿತು ನಿರೀಕ್ಷೆಗಳು ಗರಿಗೆದರಿವೆ. ಇತ್ತೀಚೆಗಷ್ಟೇ ಗಣೇಶ್ ಅಭಿನಯದ ಸಖತ್ ಸಿನಿಮಾ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಗಣಿ-ಸುನಿ ಕಾಂಬಿನೇಷನ್ ಚಿತ್ರವಾದ ‘ಸಖತ್’ಗೆ ಭರಪೂರ ಪ್ರತಿಕ್ರಿಯೆ ಸಿಗುತ್ತಿರುವ ಬೆನ್ನಲ್ಲೇ ಗಣಿ ಸ್ಮಾಲ್‌ಸ್ಕ್ರೀನ್ ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಕಿರುತೆರೆಯಲ್ಲಿ ಮೂರನೇ ಇನ್ನಿಂಗ್ಸ್ ಶುರು ಮಾಡಿರುವ ಮುಂಗಾರುಮಳೆಯ ಪ್ರೀತಂ ಯಾವ್ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆ-ಮನ ತಲುಪೋದಕ್ಕೆ ಹೊರಟಿದ್ದಾರೆ ನೋಡೋಣ ಬನ್ನಿ.

ಗಣಿ ನನ್ನ ಮರೆತುಬಿಟ್ಯಾ? ಸಾಮಾನ್ಯ ಗಣಿ ಆಗಿದ್ದಾಗ ಚಾನ್ಸ್ ಕೊಟ್ಟಿದ್ದು ನಾನು, ಸ್ಟೇಜ್ ಅಂತ ಸಿಕ್ಕಿದ್ದು ನನ್ನಿಂದ, ಕಾರ್ಯಕ್ರಮ ಕೊಟ್ಟಿದ್ದು ನನ್ನ ಅಂಗಳದಲ್ಲಿ, ಮೆರವಣಿಗೆ ಹೊರಟಿದ್ದು ನನ್ನ ಅಖಾಡದಿಂದ, ಇಡೀ ಕರ್ನಾಟಕ ತಲುಪಿದ್ದು ನನ್ನ ಕೃಪೆಯಿಂದ, ಕನ್ನಡಿಗರ ಪ್ರೀತಿ- ಪ್ರೋತ್ಸಾಹ- ಅಭಿಮಾನ ಸಿಕ್ಕಿದ್ದು ನಾನ್ ನಿನಗೆ ಕೊಟ್ಟ ಅವಕಾಶದಿಂದ. ನನ್ನಿಂದ ಇಷ್ಟೆಲ್ಲಾ ಉಪಯೋಗ ಪಡೆದುಕೊಂಡ ಮೇಲೆ ನನ್ನ ಮರೆತರೆ ಹೆಂಗೆ ಗಣಿ? ಬೆಳೆದು ದೊಡ್ಡವನಾದ್ಮೇಲೆ ಬೆಡವಾದ್ನಾ ನಿಂಗೆ? ಇಷ್ಟೆನಾ ನೀನು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸ? ಹೀಗಂತ ಸ್ಮಾಲ್‌ಸ್ಕ್ರೀನ್ ಪ್ರಶ್ನೆ ಮಾಡುವ ಮೊದಲೇ ಸ್ಮಾಲ್‌ಸ್ಕ್ರೀನ್‌ನ ಖುಷಿಪಡಿಸುವ, ಕನ್ನಡಿಗರನ್ನು ಆನಂದ ಕಡಲಲ್ಲಿ ತೇಲಿಸುವ, ಎಲ್ಲದಕ್ಕಿಂತ ಹೆಚ್ಚಾಗಿ ಕಿರುತೆರೆಗೆ ಋಣಿಯಾಗಿರುವ ಕೆಲಸವನ್ನು ಗೋಲ್ಡನ್‌ಸ್ಟಾರ್ ಗಣೇಶ್ ಮಾಡ್ತಿದ್ದಾರೆ.

ಗೋಲ್ಡನ್‌ಸ್ಟಾರ್ ಗಣೇಶ್ ಕಿರುತೆರೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಟ್ಟವರು ಅನ್ನೋದು ನಿಮ್ಮೆಲ್ಲರಿಗೂ ಗೊತ್ತೆಯಿದೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಕಾಮಿಡಿ ಟೈಮ್' ಕಾರ್ಯಕ್ರಮದ ಮೂಲಕ ಟಿವಿಯಲ್ಲಿ ಮೆರವಣಿಗೆ ಹೊರಟರು.ಯೂನಿಕ್ ಕಾನ್ಸೆಪ್ಟ್ ಮೂಲಕ ದಿಬ್ಬಣ ಹೊರಟ ಗಣಿ, ಕಾಮಿಡಿ ಕಿಕ್ ನೋಡುತ್ತಾ,ಬಕ್ರಾ ಮಾಡುತ್ತಾ ಕರುನಾಡ ಮಂದಿಗೆ ಕನೆಕ್ಟ್ ಆದರು.ಶೋ ಕ್ಲಿಕ್ ಆಯ್ತು ಕಾಮಿಡಿ ಟೈಮ್ ಗಣೇಶ್ ಅಂತಲೇ ಇಡೀ ಕರ್ನಾಟಕದಲ್ಲಿ ಮನೆಮಾತಾದರು.ಅಲ್ಲಿಂದ ಮೆಲ್ಲಗೆ ಬಣ್ಣದ ಲೋಕದತ್ತ ಕಣ್ಣಾಯಿಸಿದರು.ಗುಟ್ಟು ಚಿತ್ರಕ್ಕೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಎದುರಿಸಿದರು.ಸಣ್ಣ-ಪುಟ್ಟ ಪಾತ್ರ ಮಾಡುತ್ತಾ ಸಾಗಿಬಂದ ಗಣಿ ‘ಚೆಲ್ಲಾಟ’ ಚಿತ್ರದಲ್ಲಿ ಹೀರೋ ಆದರು. ಅದೇ ವರ್ಷ ಭಟ್ರ ಕೃಪೆಯಿಂದ ಮುಂಗಾರುಮಳೆ ಸುರಿಯಿತು ನೋಡಿ ಮುಂದಾಗಿದ್ದು ಇತಿಹಾಸ.

ಚೆಲ್ಲಾಟ'ಆಡಿಕೊಂಡು ‘ಮುಂಗಾರು ಮಳೆ’ ಸುರಿಸಿದ್ಮೇಲೆ ಗಣಿ ನಸೀಬೇ ಚೇಜ್ ಆಯ್ತು. ಕರುನಾಡಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಹುಟ್ಟಿಕೊಂಡರು. ಹೆಣೈಕ್ಳು ಹೃದಯಾನೇ ಕೊಟ್ಟರು. ಕಾಲ್‌ಶೀಟ್‌ಗೋಸ್ಕರ ಡೈರೆಕ್ಟರ್-ಪ್ರೊಡ್ಯೂಸರ್ ಕ್ಯೂ ನಿಂತರು. ಸ್ಟಾರ್‌ಡಮ್ ಜೊತೆಗೆ ಬೆಲೆಕಟ್ಟಲಾಗದ ಪ್ರೀತಿ-ಅಭಿಮಾನ ಹೊಳೆಯಾಗಿ ಹರಿದುಬಂತು.
ಹಸಿವು-ಅವಮಾನ-ನಿಂದನೆ-ಸೋಲು-ಕಷ್ಟ ಎಲ್ಲದಕ್ಕೂ ಫಲ ಸಿಗ್ತು. ಬಣ್ಣದ ಲೋಕದ ಕನಸೊತ್ತು ಖಾಲಿ ೨೦೦ ರೂಪಾಯಿ ತೆಗೆದುಕೊಂಡು ನೆಲಮಂಗಲದ ಅಡಕಮಾರನ ಹಳ್ಳಿಯಿಂದ ಬೆಂಗ್ಳೂರಿಗೆ ಬಂದಿದ್ದಕ್ಕೂ ಬದುಕು ಸಾರ್ಥಕತವಾಯ್ತು. ಮಾತ್ರವಲ್ಲ ಕಾಮಿಡಿ ಟೈಮ್ ಗಣೇಶ್ ಅಂತ ಇದ್ದ ಹೆಸರು ಗೋಲ್ಡನ್ ಸ್ಟಾರ್ ಗಣೇಶ್ ಆಗಿ ಬದಲಾಯ್ತು. ಇಲ್ಲಿಂದ ಹಿಂತಿರುಗಿ ನೋಡಿದ್ದೆ ಇಲ್ಲ. ನಡುನಡುವೆ ಸಣ್ಣಪುಟ್ಟ ಸೋಲು ಕಂಡಿರಬಹುದು ಆದರೆ ಬಂಗಾರದ ಹುಡುಗ ಛಾರ್ಮ್ ಕಳೆದುಕೊಂಡಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಲೇ ಇದ್ದಾರೆ. ಪ್ರೇಕ್ಷಕ ಮಹಾಷಯರನ್ನು ರಂಜಿಸುತ್ತಲೇ ಇದ್ದಾರೆ.

ಸ್ಮಾಲ್‌ಸ್ಕ್ರೀನ್‌ನಿಂದ ಬಿಗ್‌ಸ್ಕ್ರೀನ್‌ನಲ್ಲಿ ಮಿಂಚೋ ಅವಕಾಶ ಗಿಟ್ಟಿಸಿಕೊಂಡಿರುವ ಗಣಿ ಯಾವತ್ತೂ ಕಿರುತೆರೆಯನ್ನ ಬಿಟ್ಟುಕೊಟ್ಟಿಲ್ಲ. ಟಿವಿ ಲೋಕದ ಮಂದಿ ಕಾಲ್‌ಶೀಟ್ ಕೇಳಿದಾಗ ಪ್ರೀತಿಯಿಂದ ಕೊಟ್ಟಿದ್ದಾರೆ. ಸಂಭಾವನೆ ಸಹಿತ ತನಗೆ ಕೊಟ್ಟ ಜವಬ್ದಾರಿಯನ್ನ ಅಷ್ಟೇ ಮುತುವರ್ಜಿಯಿಂದ ಮುಗಿಸಿಕೊಟ್ಟು ಬಂದಿದ್ದಾರೆ. ಹೌದು, ‘ಕಾಮಿಡಿ ಟೈಮ್’ ನಂತ್ರ ಬೆಳ್ಳಿತೆರೆಯಲ್ಲೇ ಬ್ಯುಸಿಯಾಗಿದ್ದ ಗೋಲ್ಡನ್‌ಸ್ಟಾರ್ ಕಳೆದ ಎರಡ್ಮೂರು ವರ್ಷದ ಹಿಂದೆ ‘ಸೂಪರ್ ಮಿನಿಟ್'ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಮತ್ತೊಮ್ಮೆ ಮೆರವಣಿಗೆ ಹೋಗಿಬಂದರು.

ಈಗ ಶುರುವಾಗ್ತಿದೆ ನಿಮ್ಮ ಗೋಲ್ಡನ್ ಮಿನಿಟ್ ಅಂದರೆ ಸೂಪರ್ ಮಿನಿಟ್’ ಎನ್ನುತ್ತಾ ಪ್ರೇಕ್ಷಕರನ್ನು ಒಂಟಿಕಾಲಿನಲ್ಲಿ ನಿಲ್ಲಿಸಿ, ಮಸ್ತ್ ಮನರಂಜನೆ ನೀಡಿದ ಹುಡುಗಾಟದ ಹುಡುಗ ಗಣಿ ಇದೀಗ ‘ಗೋಲ್ಡನ್ ಗ್ಯಾಂಗ್'ಜೊತೆ ಕಿರುತೆರೆಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಕೆಲಸ,ದುಡಿಮೆ,ಸಂಪಾದನೆಯ ನಡುವೆ ಮರೆಯಾದ ಸ್ನೇಹ,ಕಳೆದು ಹೋದ ಸ್ನೇಹಿತರನ್ನು ಹುಡುಕಿಕೊಂಡು ಹೊರಟಿರುವ ‘ಗೋಲ್ಡನ್ ಗ್ಯಾಂಗ್’ ನ ಬಂಗಾರದ ಗಣೇಶ್ ನಿರೂಪಣೆ ಮಾಡ್ತಿದ್ದಾರೆ. ಜೀ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಸದ್ಯಕ್ಕೆ ಪ್ರೋಮೋ ಬಿಡುಗಡೆಯಾಗಿದೆ. ಅತೀ ಶೀಘ್ರದಲ್ಲೇ ಗೋಲ್ಡನ್ ಗ್ಯಾಂಗ್ ಆರಂಭವಾಗಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಓಮಿಕ್ರಾನ್‌, ಓಮಿಕ್ರಾನ್…‌ಎಲ್ಲೆಲ್ಲೂ ಈಗ ಓಮಿಕ್ರಾನ್‌ ವೈರಸ್‌ ಭೀತಿ – ಸಿನಿಮಾ ಥಿಯೇಟರ್‌ಗಳಿಗೂ ತಟ್ಟುತ್ತಾ ಈ ವೈರಸ್‌ ಬಿಸಿ ?

ಉಸ್ಸಪ್ಪಾ ಅಂತ ಚಿತ್ರೋದ್ಯಮ ಈಗಷ್ಟೇ ಸುಧಾರಿಸಿಕೊಂಡಿದೆ. ಚಿತ್ರಮಂದಿರಗಳೂ ಒಂದಷ್ಟು ರಿಲ್ಯಾಕ್ಸ್‌ ಮೂಡಿಗೆ ಬಂದಿವೆ. ರಿಲೀಸ್‌ ಆಗುತ್ತಿರುವ ಸಿನಿಮಾಗಳ ಪೈಕಿ ಸ್ಟಾರ್‌ ಸಿನಿಮಾಗಳಿಗೆ ಹೌಸ್‌ ಫುಲ್‌ ಬೋರ್ಡ್‌ ಕಾಣುತ್ತಿವೆ. ಹಾಗೆಯೇ ಹೊಸ ಸಿನಿಮಾಗಳ ಮುಹೂರ್ತಗಳು, ಆಡಿಯೋ-ವಿಡಿಯೋ ರಿಲೀಸ್‌ ಕಾರ್ಯಕ್ರಮಗಳು ಕಳೆಗಟ್ಟುತ್ತಿವೆ. ಆಗಲೇ ಈಗ ಗಾಯದ ಮೇಲೆ ಬರೆ ಎಳೆದಂತೆ ಅದ್ಯಾವುದೋ ಓಮಿಕ್ರಾನ್‌ ಭೀತಿ ಕವಿದಿದೆ. ಕೊರೋನಾದ ಒಂದು ಮತ್ತು ಎರಡನೇ ಅಲೆಯ ಹಾಗೆ ಇದು ಎಷ್ಟರ ಮಟ್ಟಿಗೆ ಜನರ ಆರೋಗ್ಯದ ಮೇಲೆ ಅನಾಹುತ ಸೃಷ್ಟಿಸುತ್ತೋ ಗೊತ್ತಿಲ್ಲ. ಹಾಗೆಯೇ ಇದು ಕರ್ನಾಟಕಕ್ಕೆ ಕಾಲಿಟ್ಟ ಬಗ್ಗೆಯೂ ಖಾತರಿ ಆಗಿಲ್ಲ, ಆದರೆ ದಕ್ಷಿಣಾ ಆಫ್ರಿಕಾ, ಇಂಗ್ಲೆಂಡ್‌ , ಜರ್ಮಿನಿ ದೇಶಗಳಲ್ಲಿ ಈಗಾಗಲೇ ಓಮಿಕ್ರಾನ್‌ ಪ್ರಕರಣಗಳು ಪತ್ತೆ ಆಗಿರೋದ್ರಿಂದ ಸಹಜವಾಗಿಯೇ ಅನ್ಯ ದೇಶಗಳಲ್ಲೂ ಓಮಿಕ್ರಾನ್‌ ಹರಡುವ ಭೀತಿ ಶುರುವಾಗಿದೆ.

ಅದೇ ಕಾರಣಕ್ಕೆ ರಾಜ್ಯದಲ್ಲೂ ಸರ್ಕಾರ ಮುನ್ನೆಚ್ಚೆರಿಕೆ ಕ್ರಮವಾಗಿ ಈಗಾಗಲೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸದ್ಯಕ್ಕೀಗ ಗಡಿ ಜಿಲ್ಲೆಗಳಲ್ಲಿ ಆರ್‌ ಟಿಪಿಸಿಆರ್‌ ನೆಗೆಟಿವ್‌ ರಿಪೊರ್ಟ್‌ ಕಡ್ಡಾಯ ಮಾಡಿದೆ. ಹೊಟೇಲ್‌, ರೆಸ್ಟೋರೆಂಟ್‌ಗಳು, ಸಿನಿಮಾ ಹಾಲ್‌ ಗಳು, ಈಜುಕೊಳ ,ಮೃಗಾಲಯಗಳು ಮತ್ತು ಜೈವಿಕ ಉದ್ಯಾನವನಗಳಲ್ಲಿ ಕೆಲಸ ಮಾಡುವವರು ಎರಡು ಡೋಸ್‌ ಲಸಿಕೆ ಪಡೆದಿರಬೇಕೆಂದು ಸರ್ಕಾರ ಆದೇಶಿಸಿದೆ. ಇನ್ನು ಶಾಲಾ ಕಾಲೇಜುಗಳಲ್ಲಿ ಸೆಮಿನಾರ್‌, ಸಂಭ್ರಮಗಳಿಗೆ ಬ್ರೇಕ್‌ ಹಾಕಿದೆ. ಒಟ್ಟಾರೆ ಸಮೂಹ ಸೇರುವುದನ್ನು ಸರ್ಕಾರ ಬಂದ್‌ ಮಾಡಿದೆ. ಹಾಗಾದ್ರೆ ಮುಂದೆ ಸಿನಿಮಾ ಹಾಲ್‌ ಗಳ ಕಥೆಯೇನು ಅನ್ನೋದು ಈಗ ಚಿತ್ರೋದ್ಯಮದಲ್ಲಿ ದೊಡ್ಟ ಆತಂಕ ಹುಟ್ಟು ಹಾಕಿದೆ. ಈ ಕ್ಷಣಕ್ಕೆ ಸರ್ಕಾರ ಲಾಕ್‌ ಡೌನ್‌ ಪ್ತಸ್ತಾಪವೇ ಇಲ್ಲ ಎಂದಿದೆ. ಅಂತಹ ಪರಿಸ್ಥಿತಿಯೂ ಕೂಡ ಮುಂದೆ ಬರಲಾರದು ಅಂತೆಯೇ ಇಟ್ಟುಕೊಂಡರೂ, ಒಂದೆಡೆ ಜನ ಸೇರುವುದನ್ನುನಸರ್ಕಾರ ನಿಲ್ಲಿಸಬೇಕಾದಾಗ, ಚಿತ್ರಮಂದಿರಗಳು ಅದರ ಕರಾಳ ಛಾಯೆಗೆ ಒಳಗಾಗುತ್ತವೆ ಎನ್ನುವುದು ಗ್ಯಾರಂಟಿಯೂ ಹೌದು.

ʼ ಇದ್ಯಾವುದೋ ವರೈಸ್‌ ಬಂದು ಏನ್ಮಾಡುತ್ತೋ ಗೊತ್ತಿಲ್ಲ, ಆದರೆ ವೈರಸ್‌ ನಿಯಂತ್ರಣಕ್ಕೆ ಅಂತ ಸರ್ಕಾರಗಳು ಕಟ್ಟು ನಿಯಮಗಳನ್ನು ಜಾರಿಗೆ ತಂದರೆ ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತ ನೀಡುವುದಂತೂ ಹೌದು. ಹಾಗಂತ ನಾವು ಸರ್ಕಾರದ ಮನ್ನೆಚ್ಚರಿಕೆ ಕ್ರಮಗಳನ್ನು ವಿರೋಧಿಸಲು ಆಗದು. ದುಡಿಮೆ, ಹಣ ಅನ್ನೋದಕ್ಕಿಂತ ಜನರ ಜೀವ ಮುಖ್ಯ. ಜೀವ ಇದ್ದರೆ ಎಲ್ಲವೂ ಅಲ್ಲವೇ? ಹಿಂದೆ ಏನಾಯ್ತು ಅಂತ ಎಲ್ಲರಿಗೂ ಗೊತ್ತೇ ಇದೆ. ಸಾವಿನ ಸರಣಿಯೇ ನಡೆದು ಹೋಯಿತು. ಕೊರೋನಾ ದೊಡ್ಡ ಅವಾಂತರ ಸೃಷ್ಟಿಸಿ ಬಿಟ್ಟಿತು. ಈಗ ಅದನ್ನ ಹೇಗೋ ದಾಟಿಕೊಂಡು ಬಂದು , ಕೊಂಚ ನಿಟ್ಟುಸಿರು ಬಿಟ್ಟೆವು ಎನ್ನುವ ಹೊತ್ತಿಗೆ ಇದ್ಯಾವದೋ ಓಮಿಕ್ರಾನ್‌ ವೈರಸ್‌ ಭೀತಿ ಶುರುವಾಗಿದೆ. ಪರಿಸ್ಥಿತಿಗಳು ಹೀಗೆಯೇ ಸೃಷ್ಟಿಯಾಗುತ್ತಾ ಹೊರಟರೆ ಜನರ ಪರಿಸ್ಥಿತಿ ಅದೋಗತಿ. ಈಗಾಗಲೇ ಕೊರೋನಾ ಕಾರಣಕ್ಕೆ ಎಲ್ಲರ ಬದುಕು ಹೈರಾಣವಾಗಿದೆ. ಮತ್ತೆ ಕಠಿಣ ನಿಯಮಗಳು, ಲಾಕ್‌ ಡೌನ್‌ ಅಂತೇನಾದ್ರೂ ಮತ್ತೊಂದು ಸಂಕಷ್ಟ ಎದುರಾದರೆ ನಮ್ಮಗಳ ಕಥೆ ಮುಗೀತುʼ ಎನ್ನುವ ಮೂಲಕ ಭವಿಷ್ಯದ ದಿನಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಾರೆ ಚಿತ್ರೋದ್ಯಮದ ಹಿರಿಯ ನಿರ್ಮಾಪಕರೊಬ್ಬರು.

ಕೊರೋನಾ ಇನ್ನೆಂದಿಗೂ ಬಾರದಿರಲ್ಲಪ್ಪ ಅಂತ ದೇವರಲ್ಲಿ ಪ್ರಾರ್ಥಿಸಿಕೊಂಡವರಿಗೆ ಲೆಕ್ಕವೇ ಇಲ್ಲ. ಯಾಕಂದ್ರೆ ಅದು ಸೃಷ್ಟಿಸಿದ ಅವಾಂತರಗಳೇ ಹಾಗಿದ್ದವು. ಕೆಲಸ ಇಲ್ಲದೆ, ಕಾರ್ಯ ಇಲ್ಲದೆ ಹೊಟ್ಟೆ ಪಾಡಿಗೂ ಪರದಾಡಿದ ಆ ಕಡು ಕಷ್ಟಗಳ ನಡುವೆಯೇ ಸಾವು-ನೋವು ತಂದ ಕಣ್ಣೀರಿನ ಕಥೆಗಳನ್ನು ನೆನಪಿಸಿಕೊಂಡರೆ, ಕರುಳು ಹಿಂಡಿದಂತಾ ಗುತ್ತದೆ. ಅದೇ ಕಾರಣಕ್ಕೆ ಕೊರೋನಾ ಎನ್ನುವ ಮಹಾಮಾರಿ ಇನ್ನೆಂದಿಗೂ ಬಾರದಿರಲಿ ಅಂತ ಜನ ದೇವರಲ್ಲಿ ಮೊರೆಯಿಟ್ಟರೂ, ಈಗ ಅದ್ಯಾವುದೋ ಒಮಿಕ್ರಾನ್‌ ಎನ್ನುವ ವೈರಸ್‌ ಭೀತಿ ಈಗ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಸದ್ಯಕ್ಕೆ ಇದು ಎಷ್ಟರ ಮಟ್ಟಿಗೆ ಅನಾಹುತ ಸೃಷ್ಟಿಸುತ್ತೋ ಗೊತ್ತಿಲ್ಲ, ಆದರೆ ಜನರಲ್ಲಿ ಭೀತಿಯಂತೂ ದಟ್ಟವಾಗಿ ಆವರಿಸಿದೆ. ಈ ನಡುವೆ ಶೀತಗಾಳಿ ಬೇರೆ ಬೆಂಗಳೂರಿಗೆ ಅಡರಿಕೊಂಡಿದೆ. ಪ್ರಕೃತಿಯ ಈ ಅವಾಂತರಗಳಿಗೆ ಯಾರನ್ನು ದೂರಬೇಕೋ ಗೊತ್ತಿಲ್ಲ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ
Categories
ಸಿನಿ ಸುದ್ದಿ

ದಾದಾ ಕಟ್ಟಾಭಿಮಾನಿ ; ಈ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯಾನೇ ಇಲ್ಲ

ಸೂರ್ಯ ಚಂದ್ರರು ಇರೋವರೆಗೂ ಸಾಹಸಸಿಂಹ ವಿಷ್ಣುವರ್ಧನ್ ಜೀವಂತ ಎನ್ನುವ ಮಾತನ್ನು ಸಾರ್ವಕಾಲಿಕ ಸತ್ಯವನ್ನಾಗಿಸುವಲ್ಲಿ ಅಭಿಮಾನಿ ದೇವರುಗಳು ಶ್ರಮಿಸುತ್ತಿದ್ದಾರೆ. ವಿಷ್ಣುದಾದಾರ ನಡೆ-ನುಡಿಯನ್ನು ಅನುಸರಿಸುತ್ತಾ, ಕೋಟಿಗೊಬ್ಬನ ಗುಣಗಳನ್ನು- ಆದರ್ಶಗಳನ್ನು ಪಾಲಿಸುತ್ತಾ, ಅಗಲಿರುವ ಆಪ್ತರಕ್ಷನನ್ನು ಜೀವಂತವಾಗಿಸುತ್ತಿರುವ ಅಭಿಮಾನಿಗಳು, ದೇಹವೆಂಬ ದೇಗುಲದಲ್ಲಿ ಹೃದಯವಂತನನ್ನು ಪ್ರತಿಷ್ಠಾಪಿಸಿಕೊಂಡು ಆರಾಧಿಸುತ್ತಿದ್ದಾರೆ ಪೂಜಿಸುತ್ತಿದ್ದಾರೆ. ಬರೀ ಮನಸ್ಸಲ್ಲಿ ಕರ್ಣನ ಸ್ಮರಿಸಿದರೇ ಸಾಲದು, ಯಜಮಾನರನ್ನು ನಾವೆಷ್ಟು ಪ್ರೀತಿಸ್ತೇವೆ ಎಂಬುದನ್ನು ಅಚ್ಚೆ ಮೂಲಕ ತೋರಿಸೋಣವೆಂದು ಕೆಲವರು ಅಚ್ಚೆ ಹಾಕಿಸಿಕೊಳ್ಳೋದನ್ನು ನೋಡಿದ್ದೇವೆ. ಆದರೆ, ಈ ಅಭಿಮಾನಿಯ ಅಭಿಮಾನವನ್ನು ಪದಗಳಲ್ಲಿ ವರ್ಣಿಸೋಕೆ ಸಾಲಲ್ಲ. ಮೈಸೂರು ಮೂಲದ ಅಭಿಮಾನಿ ಸಾಹಸ ಸಿಂಹ ವಿಷ್ಣುದಾದಾರನ್ನು ಯಾವ ಪರಿ ಪ್ರೀತಿಸ್ತಾರೆ, ಆರಾಧಿಸುತ್ತಾರೆ, ಅಭಿಮಾನಿಸುತ್ತಾರೆ ಎನ್ನುವುದನ್ನು ನೀವೇ ನಿಮ್ಮ ಕಣ್ಣಾರೆ ನೋಡಿ.

Categories
ಸಿನಿ ಸುದ್ದಿ

ಸಪ್ತಸಾಗರದಾಚೆ ಬರ್ತ್ ಡೇ ಆಚರಿಸಿಕೊಳ್ತಿರೋ ಮೋಹಕತಾರೆ-39 ಮುಗಿಸಿದ್ದಕ್ಕೆ ಖುಷಿಯಿದೆ ಅಂದ್ರು ಗೌರಮ್ಮ !

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ದಿವ್ಯಸ್ಪಂಧನಾಗೆ ಹುಟ್ಟುಹಬ್ಬದ ಸಂಭ್ರಮ. 39 ವರ್ಷಗಳನ್ನು ಪೂರೈಸಿರುವ ಮೋಹಕತಾರೆ 40ನೇ ವಸಂತಕ್ಕೆ ಕಾಲಿಟ್ಟಿದ್ದು ಸಪ್ತಸಾಗರದಾಚೆ ಬರ್ತ್ ಡೇನಾ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ. ಚಂದನವನದ ಪದ್ಮಾವತಿಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದ್ದು ಸೋಷಿಯಲ್ ಮೀಡಿಯಾದ ಮೂಲಕ ರಮ್ಯಾ ಧನ್ಯವಾದ ಅರ್ಪಿಸುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡಿರುವ ಫೋಟೋ ಹಾಕಿ ಅಭಿಮಾನಿ ದೇವರುಗಳಿಗೆ ಹಾಗೂ ಆಪ್ತರಿಗೆ ಥ್ಯಾಂಕ್ಸ್ ಹೇಳ್ತಿರೋ ಗೌರಮ್ಮ, ದಯವಿಟ್ಟು ಎಲ್ಲರೂ ಮಾಸ್ಕ್ ಹಾಕಿಕೊಳ್ರಿ ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.

ಅಟ್ಲಾಂಟಿಕ್ ಸಾಗರ ದಾಟಿ ಹೋಗಿರುವ ಗೌರಮ್ಮನಿಗೆ ಲೈಟಾಗಿ ಹೆಲ್ತ್ ಅಪ್‌ಸೆಟ್ ಆಗಿದೆ ಅನ್ಸುತ್ತೆ. ಹೀಗಾಗಿಯೇ ಟ್ವೀಟ್ ಮೂಲಕ `ನಂಗ್ಯಾಕೋ ಸುಸ್ತಾಗ್ತಿದೆ, ನಿದ್ದೆ ಕೂಡ ಬರ‍್ತಿದೆ, 39 ವರ್ಷ ಕಳೆದಿರುವುದಕ್ಕೆ ಖುಷಿಯಿದೆ ಅಂತ ಬರೆದುಕೊಂಡಿದ್ದಾರೆ. ಕಳೆದ ಎರಡು ದಿನದ ಹಿಂದೆ ಸ್ವಿಮ್ಮಿಂಗ್ ಮಾಡ್ತಿರುವ ಫೋಟೋಗಳನ್ನು ಇನ್ಸ್ಟಾ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಸಪ್ತಸಾಗರವನ್ನು ದಾಟಿ ಹೋಗಿರುವ ಹಿಂಟ್ ಕೊಟ್ಟಿದ್ದರು. ಕೊನೆಗೆ ಗೌರಮ್ಮನೇ ಟ್ವೀಟ್ ಮೂಲಕ ಅಟ್ಲಾಂಟಿಕ್ ಸಾಗರದಲ್ಲೆಲ್ಲೋ ತಂಗಿರುವುದಾಗಿ ತಿಳಿಸಿದ್ದಾರೆ. 40 ನೇ ವರ್ಷದ ಹುಟ್ಟುಹಬ್ಬವನ್ನು ಅಲ್ಲೆ ಎಲ್ಲೋ ಸೆಲಬ್ರೇಟ್ ಮಾಡಿಕೊಳ್ಳಲಿದ್ದಾರೆ.

ಮೋಹಕತಾರೆಯ ಅಭಿಮಾನಿ ದೇವರುಗಳು ತಮ್ಮ ನೆಚ್ಚಿನ ನಟಿಯ ಬರ್ತ್ಡೇನಾ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಬೇಕು, ಒಂದು ವರ್ಷವಾದರೂ ಕೂಡ ನಮ್ಮೊಟ್ಟಿಗೆ ನಮ್ಮ ಮೇಡಂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕೆಂದು ಕಾಯ್ತಿದ್ದಾರೆ. ಆದರೆ, ಚಿತ್ರರಂಗದಿಂದ ಕೊಂಚ ದೂರ ಉಳಿದಿರೋ ರಮ್ಯಾ ಮೇಡಂ ದಿಲ್ಲಿಗೆ ಹೋಗಿ ಸೆಟಲ್ ಆದ್ಮೇಲೆ ಫ್ಯಾನ್ಸ್ ಕೈಗೆ ಸಿಗ್ತಿಲ್ಲ. ವರ್ಷಕ್ಕೆ ಒಮ್ಮೆಯಾದರೂ ನೆಚ್ಚಿನ ತಾರೆಯ ದರುಶನ ಫ್ಯಾನ್ಸ್ ಗೆ ಸಿಗುತ್ತಿಲ್ಲ, ಸೆಲ್ಫಿಯಂತೂ ಇಲ್ಲವೇ ಇಲ್ಲ. ಅದ್ಯಾವಾಗ ಸ್ಯಾಂಡಲ್‌ವುಡ್ ಕ್ವೀನ್ ಜನುಮದಿನವನ್ನು ಆಚರಿಸುವ ಚಾನ್ಸ್ ಫ್ಯಾನ್ಸ್ ಗೆ ಸಿಗುತ್ತೋ? ಅದ್ಯಾವಾಗ ಲಕ್ಕಿ ಸುಂದರಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುವ ಅವಕಾಶ ಸಿಗುತ್ತೋ ಅಣ್ಣಮ್ಮ ತಾಯಿಗೆ ಗೊತ್ತು

ಬಣ್ಣದ ಲೋಕದಿಂದ ಅಂತರಕಾಯ್ದುಕೊಂಡಿರುವ ಊರಿಗೊಬ್ಳೆ ಪದ್ಮಾವತಿ `ಎಕ್ಸ್ಕ್ಯೂಸ್ ಮೀ’ ಎನ್ನುತ್ತಾ ಗಂಧದಗುಡಿಗೆ ಮರಳಬೇಕು. ಮತ್ತೆ ಬಣ್ಣ ಹಚ್ಚಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡಬೇಕು ಎನ್ನುವುದು ಅದೆಷ್ಟೋ ಸಿನಿಪ್ರಿಯರ ಕನಸು. ಆ ಆಸೆ ಕನಸು ಅದ್ಯಾವ ಸುಂದರ ಗಳಿಗೆಯಲ್ಲಿ ಸಾಕಾರಗೊಳ್ಳುತ್ತೋ ಗೊತ್ತಿಲ್ಲ. ಆದರೆ, ಗೌರಮ್ಮನ ಅಭಿಮಾನಿಗಳು ಮಾತ್ರ ನಮ್ಮ ಮೇಡಂ ಡೆಲ್ಲಿ ಬಿಟ್ಟು ಬೆಂಗ್ಳೂರಿಗೆ ಬರುತ್ತಾರೆ, ಗಾಂಧಿನಗರದಲ್ಲಿ ಮತ್ತೊಮ್ಮೆ ಎಲ್ಲಾ ಸ್ಟಾರ್‌ಗಳ ಜೊತೆ ಬಿಗ್‌ಸ್ಕ್ರೀನ್ ನಲ್ಲಿ ಮಿಂಚ್ತಾರೆ ಎನ್ನುವ ಮಹದಾಸೆ ಇಟ್ಟುಕೊಂಡಿದ್ದಾರೆ. ಆ ದಿವ್ಯ ಕನಸು ಈಡೇರಲಿ. 40 ಆದರೂ ಕೂಡ ಟಿನೇಜ್ ಹುಡ್ಗಿ ಥರ ಲಕಲಕ ಹೊಳೆಯೋ ಲಕ್ಕಿ ಗರ್ಲ್ ರಮ್ಯಾ ಸಿಲ್ವರ್‌ಸ್ಕ್ರೀನ್ ಮೇಲೆ ಸೆಕೆಂಡ್ ಇನ್ನಿಂಗ್ಸ್ ಶುರುವಿಟ್ಟುಕೊಳ್ಳಲಿ. ದಶಕಗಳು ಉರುಳಿದರೂ ಅಳಿಯದ ಹಳೆಯ ಚಾರ್ಮ್ಗೆ ಲಿಫ್ಟಿಕ್- ಐ ಲೈನರ್ ಹಚ್ಚಿ ಹೊಸ ರಂಗು ತುಂಬಲಿ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಇದು ಕನ್ನಡದ ಮಡ್ಡಿ, ಜಗತ್ತಿನಾದ್ಯಂತ ಹೊರಡಲು ರೆಡಿ – ಡಿಸೆಂಬರ್‌ 10 ಕ್ಕೆ ತೆರೆಗೆ ಬರುತ್ತಿದೆ ಹೊಸಬರ ಚಿತ್ರ !

ಡಿಫೆರೆಂಟ್‌ ಟೈಟಲ್‌ ಮೂಲಕವೇ ಸ್ಯಾಂಡಲ್‌ವುಡ್‌ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಬಂದಿದ್ದ ಮಡ್ಡಿ ಹೆಸರಿನ ಚಿತ್ರ ಇದೇ ಡಿಸೆಂಬರ್‌ 10 ಕ್ಕೆ ಗ್ರಾಂಡ್‌ ರಿಲೀಸ್‌ ಆಗುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲೀಷ್ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ. ಇದೊಂದು ಹೊಸಬರ ಚಿತ್ರವಾದರೂ ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಪಳಗಿದ ಅನುಭವಿಗಳೇ ಸೇರಿಕೊಂಡು ನಿರ್ಮಾಣ ಮಾಡಿದ ಅಂತಾರಾಷ್ಟ್ರೀಯ ಗುಣಮಟ್ಟದ ಸಿನಿಮಾ ಇದು. ಹಾಗಂತ ಚಿತ್ರ ತಂಡ ಮಾತು.

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಮಡ್‌ ರೇಸ್‌ ಕುರಿತ ಚಿತ್ರ. ಕಳೆದ ಐದು ವರ್ಷಗಳ ಕಾಲ ಮಡ್ ರೇಸ್​ ಬಗ್ಗೆ ಅಧ್ಯಯನ ನಡೆಸಿ ಈ ಕಥೆ ಸಿದ್ದಪಡಿಸಿದ್ದೇನೆ. ಇದು ಎರಡು ತಂಡಗಳ ನಡುವಿನ ಸ್ಪರ್ಧೆಯ ವಿಶೇಷತೆ ಇರುವ ಚಿತ್ರ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಸಾಹಸದ​ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಕ್ಸ್‌ ಆಗಿವೆ.

  • ನಿರ್ದೇಶ ಕ ಪ್ರಗ್ಬಲ್‌ ದಾಸ್.‌

ಪಿಕೆ7 ಪ್ರೊಡಕ್ಷನ್ಸ್ ಹೌಸ್ ಅಡಿಯಲ್ಲಿ ಪ್ರೇಮ್ ಕೃಷ್ಣ ದಾಸ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದು, ಡಾ. ಪ್ರಗ್ಬಲ್ ದಾಸ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಅವರಿಗಿದು ಮೊದಲ ಹೆಜ್ಜೆ. ಚಿತ್ರದ ಮೊದಲ ಟೀಸರ್ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆ ಆಗಿದ್ದು, ಅಭೂತಪೂರ್ವ ಮೆಚ್ಚುಗೆ ಪಡೆದುಕೊಂಡಿದೆ. ಈಗ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ. ಅದೇ ರೀತಿ ಚಿತ್ರಕ್ಕೆ ಒಟಿಟಿಯಲ್ಲಿ ಬಹು ಬೇಡಿಕೆ ಇದ್ದರೂ, ಚಿತ್ರಮಂದಿರದಲ್ಲಿಯೇ ಸಿನಿಮಾ ರಿಲೀಸ್ ಮಾಡಲು ತಂಡ ನಿರ್ಧರಿಸಿದೆ.

ಒಟ್ಟು 13 ಕ್ಯಾಮರಾಗಳನ್ನು ಈ ಚಿತ್ರದ ಶೂಟಿಂಗ್ ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆಯಂತೆ. ಸ್ಯಾನ್​ ಲೋಕೇಶ್​ ಸಂಕಲನ, ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಹಾಗೂ ಹಾಲಿವುಡ್​ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ ರತೀಶ್ ಅವರ ಛಾಯಾಗ್ರಹಣದ ಕೈ ಚಳಕ ಈ ಚಿತ್ರದಲ್ಲಿದೆ. ನೈಸರ್ಗಿಕ ಅರಣ್ಯ ಪ್ರದೇಶದಲ್ಲಿ ಇಡೀ ಸಿನಿಮಾದ ಶೂಟಿಂಗ್ ಆಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಸಿನಿಮಾ ಮೂಡಿಬಂದಿದ್ದು, ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರೀಶ್ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ತಾರಾಗಣದಲ್ಲಿದ್ದಾರೆ.

ಚಿತ್ರದ ಟೈಟಲೇ ಹೇಳುವ ಹಾಗೆ ಇದು ಮಡ್‌ ರೇಸ್‌ ಕುರಿತ ಕಥಾ ಹಂದರ ಚಿತ್ರ. ಚಿತ್ರದ ನಿರ್ದೇಶಕರು ಕಳೆದ ಐದು ವರ್ಷಗಳ ಕಾಲ ಮಡ್ ರೇಸ್​ ಬಗ್ಗೆ ಅಧ್ಯಯನ ನಡೆಸಿ ಈ ಕಥೆ ಸಿದ್ದಪಡಿಸಿದ್ದಾರಂತೆ. ಹಾಗಾದ್ರೆ ಆ ರೇಸ್‌ ವಿಶೇಷತೆ ಏನು ಅನ್ನೋದು ಚಿತ್ರದ ಒಳಗಿನ ಕಥಾಹಂದರ.ʼ ಇದು ಎರಡು ತಂಡಗಳ ನಡುವಿನ ಸ್ಪರ್ಧೆಯ ವಿಶೇಷತೆ ಇರುವ ಚಿತ್ರ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಸಾಹಸದ​ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಕ್ಸ್‌ ಆಗಿವೆ ಎನ್ನುತ್ತಾರೆ ನಿರ್ದೇಶ ಕ ಪ್ರಗ್ಬಲ್‌ ದಾಸ್.‌ ಚಿತ್ರದ ಮೋಷನ್ ಪೋಸ್ಟರ್ ಅನ್ನು ಈ ಹಿಂದೆ ಕಾಲಿವುಡ್ ನಟ ವಿಜಯ್ ಸೇತುಪತಿ, ಕನ್ನಡದಲ್ಲಿ ಶ್ರೀಮುರಳಿ, ಬಾಲಿವುಡ್ ನಟ ಅರ್ಜುನ್ ಕಪೂರ್ ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಹಲವು ಭಾಷೆಗಳ ಟೀಸರ್​ ಅನ್ನು ಶಿವರಾಜಕುಮಾರ್, ಫಹಾದ್ ಪಾಸಿಲ್, ಉನ್ನಿ ಮುಕುಂದನ್, ಅಪರ್ಣ ಬಾಲಮುರಳಿ ಸೇರಿ ಹಲವು ಸ್ಟಾರ್ ನಟರು ಬಿಡುಗಡೆ ಮಾಡಿದ್ದರು.ಇದೀಗ ಈ ಬಹುನಿರೀಕ್ಷಿತ ಸಿನಿಮಾ ಡಿ.10ಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ.
– ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Categories
ಸಿನಿ ಸುದ್ದಿ

ಕಿರುಚಿತ್ರದಲ್ಲಿ ದಿಯಾ ನಾಯಕಿ, ಸೋಷಲ್ ಮೀಡಿಯಾದಲ್ಲಿ ʼಇಕ್ಷಣ ‘ ಅದ್ದರದ್ದೇ ಸುದ್ದಿ …!

ಕಿರುಚಿತ್ರಗಳಂದ್ರೆ ನೋಡುಗನನ್ನು ಕಡಿಮೆ‌‌ ಸಮಯದಲ್ಲಿ ಹೆಚ್ಚು ಇಂಪ್ರೆಸ್ ಮಾಡೋದು. ಅಥವಾ ನೋಡುಗನ ಮನಸ್ಸಿಗೆ ತಟ್ಟುವುದು. ಅಂತಹ ಕಿರುಚಿತ್ರಗಳ‌ ಪೈಕಿ ಈಗ ಯುಟ್ಯೂಬ್ ನಲ್ಲಿ ಸಖತ್ ಟ್ರೆಂಡಿಂಗ್‌ ನಲ್ಲಿರುವ ಕಿರುಚಿತ್ರದ ಹೆಸರು ‘ಇಕ್ಷಣ’.ಫ್ಲಿಕರಿಂಗ್‌ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರೋ ಈ ಕಿರುಚಿತ್ರವನ್ನು ಇತ್ತೀಚೆಗೆ ನಟ ಗೊಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದರು. ಅದು ಲಾಂಚ್ ಆದ ಕ್ಷಣದಿಂದ ಸೋಷಲ್‌ ಮೀಡಿಯಾದಲ್ಲಿ ವೈರಲ್ ಆಗಿ ಸಖತ್ ಸುದ್ದಿಮಾಡುತ್ತಿದೆ.

ಅದಕ್ಕೆ ಕಾರಣಗಳು ಇವೆ. ಆ ಪೈಕಿ ಮೊದಲ ಕಾರಣ ಇದರ ತಾರಾಗಣ. ಈ ಕಿರುಚಿತ್ರದ ಪ್ರಮುಖ ಆಕರ್ಷಣೆ ದಿಯಾ ಖ್ಯಾತಿಯ ನಟಿ ಖುಷಿ ರವಿ. ಹಾಗೆಯೇ ಹಿರಿಯ ನಟರಾದ ಕೆ.ಎಸ್ ಶ್ರೀಧರ್ ಅಲಿಯಾಸ್ ಸಿದ್ಲಿಂಗು ಶ್ರೀಧರ್.‌ ಹಾಗೆಯೇ ಡಾ. ಸೀತಾ ಕೋಟೆ ನಟಿಸಿದ್ದಾರೆ. ಕಿರುಚಿತ್ರ ಗಳಂದ್ರೆ ಹೊಸಬರು ಇಲ್ಲವೇ ಉದಯೋನ್ಮುಖ ಕಲಾವಿದರೇ ಕಾಣಿಸಿಕೊಳ್ಳುವುದು ಸಹಜವೇ ಎನ್ನುವಂತಾಗಿರುವಾಗ, ಈ ಕಿರುಚಿತ್ರ ಸ್ಟಾರ್ ಕಲಾವಿದರನ್ನೇ ಒಳಗೊಂಡಿದ್ದು ಅದರ ವಿಶೇಷತೆಗಳಲ್ಲೊಂದು. ಹಾಗೆಯೇ ಇಲ್ಲಿರುವ ಕಥೆ. ಅದರ ಎರಡನೇಯ ಕಾರಣ.

ಈ‌ ಕಿರುಚಿತ್ರದಲ್ಲಿ ನಾನು ಅಭಿನಯಿಸಲು ಒಪ್ಪಿಕೊಂಡಿದ್ದಕ್ಕೆ ಎರಡು ಕಾರಣ ಇದ್ದವು. ಮೊದಲು ಅದರ ಕಥೆ.‌ಆದಾದ ನಂತರ ಎರಡನೇ ಕಾರಣ ಅದರ ನಿರ್ಮಾಪಕರು. ಒಂದೊಳ್ಳೆಯ ಕಥೆಯನ್ನು ಒಂದು ಕಮರ್ಷಿಯಲ್ ಸಿನಿಮಾ‌ಮಾದರಿಯಲ್ಲೇ ನಿರ್ಮಾಣ ಮಾಡಬೇಕೆಂದು ಬಯಸಿದ್ಧರು. ಹಾಗಾಗಿ ನಾನು ಇದರಲ್ಲಿ ಖುಷಿಯಿಂದಲೇ ಅಭಿನಯಿಸಿದೆ.
– ಖುಷಿ ರವಿ, ನಟಿ

ಅಪ್ಪ-ಮಗಳ ನಡುವೆ ಸಣ್ಣದೊಂದು‌ ಕಾಫಿ ವಿಷಯದೊಂದಿಗೆ ಶುರುವಾಗುವ ವಾಗ್ವಾದವು, ಸಮಾಜ ನಿರ್ಮಿತ ತಾರತಮ್ಯಗಳ ಕುರಿತ ಗಂಭೀರ ಚರ್ಚಗೆ ಮುನ್ನುಡಿ‌ ಬರೆಯುತ್ತದೆ. ಈ ಕಥೆಯು ಒಂದು ಮನೆಯ ಏಕೈಕ ಪ್ರಾಬಲ್ಯ ಸ್ತಂಭವಾಗಿರುವ ಸಂಪ್ರದಾಯವಾದಿ ತಂದೆ ಮತ್ತು ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಮಗಳು ತನ್ನ ಸ್ಥಾನವನ್ನು ಹುಡುಕಲು ಪ್ರಯತ್ನಿಸುತ್ತಿರುವ ಚರ್ಚೆಯ ಸುತ್ತ ಹೆಣೆಯಲಾಗಿದೆ.

ಗಂಡನಾದವನು ತಾನು ಕೆಲಸ ಮಾಡುವ ವ್ಯಕ್ತಿ ಎನ್ನುವ ಅ‌ಹಂ‌ನಲ್ಲಿ ಯಾಕೆ, ತನ್ನಂತೆಯೇ ಕೆಲಸ ಮಾಡಬೇಕು, ದುಡಿಬೇಕು, ಸಂಪಾದಿಸಬೇಕು, ಆ ಮೂಲಕ ತನ್ನೆಚ್ವೆಗಳನ್ನು ಪೂರೈಸಿಕೊಳ್ಳ ಬೇಕೆಂದು ಕೊಳ್ಳುವ ಹೆಂಡತಿಯನ್ನು ಕೇವಲ ಅಡುಗೆ ಮನೆ ಮಾತ್ರ ಸಿಮೀತ ಗೊಳಿಸುತ್ತಾನೆನ್ನುವ ಚರ್ಚೆಯ ಜತೆಗೆ, ಮದುವೆಯಾಗುವ ಹೆಣ್ಣು ಎಷ್ಟೇ ಓದಿ‌ವಿದ್ಯಾವಂತ ಳಾದರೂ,ತನ್ನ ಗಂಡ ತನಗಿಂತ ಹೆಚ್ವು ದುಡಿಯಬೇಕೆಂದು‌ ಬಯಸುತ್ತಾಳೆಂಬ ಪ್ರಶ್ನೆ ಗಳಿಗೂ ಉತ್ತರವಾಗುತ್ತದೆ. ಒಟ್ಟಾರೆ ಸಮಾಜ ನಿರ್ಮಿತ ಅನೇಕ ನಿಯಮಗಳು ಮತ್ತು ಏಕತಾನತೆಗಳಲ್ಲಿ, ಒಂದನ್ನು ಸೂಕ್ಷ್ಮವಾಗಿ ಚರ್ಚಿಸುವ ಉದ್ದೇಶದೊಂದಿಗೆ ನೋಡುಗನನ್ನು ಚಿಂತನೆಗೆ ಹಚ್ಚುತ್ತದೆ. ಅದೇ ಕಾರಣಕ್ಕೆ ಒಮ್ಮೆ ನೋಡಿದರೂ, ಮತ್ತೆ‌ಮತ್ತೆ‌ನೋಡುವಂತಹ ಕುತೂಹಲ ಮೂಡಿಸುವುದೇ ಇದರ ಪ್ಲಸ್ ಪಾಯಿಂಟ್.

ಕಥೆ‌ ಕೇಳಿದಾಗ ತುಂಬಾನೆ ಖುಷಿ ಯಾಯಿತು. ಅದನ್ನು‌ಒಂದು ಸಿನಿಮಾ‌ ಮಾದರಿಯಲ್ಲೇ ನಿರ್ಮಾಣ ಮಾಡಬೇಕೆಂದು ಹೊರಟಾಗ, ಸ್ಟಾರ್ ಕಲಾವಿದರು, ಅನುಭವಿ‌ತಂತ್ರಜ್ಜರೇ ನಮ್ಮ ಆದ್ಯತೆಯಾಯಿತು. ನಿರ್ಮಾಣದ ವೇಳೆ ಬಜೆಟ್ ಬಗ್ಗೆ ನಾವು ಆಲೋಚನೆ ಮಾಡಿಲ್ಲ, ಬದಲಿಗೆ ಒಂದೊಳ್ಳೆಯ ಕಿರುಚಿತ್ರ ಆಗಬೇಕೆಂದು‌ ಬಯಸಿದ್ದೇವು. ಅದೀಗ ಸಾಧ್ಯವಾಗಿದೆ ಎನ್ನುವ ಖುಷಿ‌ಸಿಕ್ಕಿದೆ.

ಸುಷ್ಮಿತಾ ಸಮೀರ,ನಿರ್ಮಾಪಕರು

ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆ ಈಗ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಈ ಹಿಂದೆ ಕನ್ನಡ ಚಲನಚಿತ್ರಗಳಲ್ಲಿ ಸಂಭಾಷಣೆ ಗಾರರಾಗಿ ಕೆಲಸ ಮಾಡಿದ ಪ್ರಸನ್ನ ವಿ.ಎಂ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಹಾಗೆಯೇಕನ್ನಡದ ಹೆಸರಾಂತ ಛಾಯಾಗ್ರಾಹಕ‌ ʼಟಗರುʼ ಖ್ಯಾತಿಯ ಮಹೇಂದರ್ ಸಿಂಹ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನಕಾರರಾಗಿ ಶ್ರೀಕಾಂತ್, ಸಂಗೀತಕ್ಕಾಗಿ ಜುಬಿನ್ ಪೌಲ್ ಅವರಂತಹ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರಿನ ಜಯಂತಿ ಕಾಫಿ ಈ ಕಿರುಚಿತ್ರಕ್ಕೆ ಪ್ರಾಯೋಜಕತ್ವ ನೀಡಿದೆ. ಸ್ಟಾರ್ ತಾರಾಗಣ, ಅನುಭವಿ ತಂತ್ರಜ್ಜರು, ಒಂದು ಮನಸ್ಸು ತಟ್ಟುವ ಕಥೆಯ ಮೂಲಕ ‘ಇ ಕ್ಷಣ’ ಸಖತ್ ಸುದ್ದಿ ಮಾಡುತ್ತಿರುವುದು ವಿಶೇಷ. ಆಸಕ್ತರು flickering studios youtube ಚಾನೆಲ್‌ ನಲ್ಲಿ ಈ ಕಿರುಚಿತ್ರ ನೋಡಬಹುದು.
– ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Categories
ಸಿನಿ ಸುದ್ದಿ

25 ಕೋಟಿ ರೂ ಕೊಟ್ಟು RRR ಆಡಿಯೋ ಹಕ್ಕು ಖರೀದಿಸಿದವರನ್ನೇ ಸ್ಟೇಜ್ ಮೇಲೆ ಕರಿಲಿಲ್ಲಾ ಅಂದ್ರೆ…… ! ?

ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ಶುಕ್ರವಾರ ಗ್ರಾಂಡ್‌ ಆಗಿ ನಡೆದ ʼಆರ್‌ಆರ್‌ಆರ್‌ʼ ಚಿತ್ರದ ಥೀಮ್‌ ಲಾಂಚ್‌ ಕಾರ್ಯಕ್ರಮ ಎರಡು ಕಾರಣಕ್ಕೆ ಸುದ್ದಿ ಆಗುತ್ತಿದೆ. ಅದರಲ್ಲೂ ಈವೆಂಟ್‌ ಆಯೋಜಿಸಿದ್ದ ಕೆವಿಎನ್‌ ಸಂಸ್ಥೆಯ ಪ್ರೋಗ್ರಾಮ್‌ ಚಾಕೌಟ್‌ ಬಗ್ಗೆಯೇ ಗುಸು ಗುಸು ಶುರುವಾಗಿದೆ. ಕೆವಿಎನ್‌ ಸಂಸ್ಥೆಯ ಮಾಲೀಕರು ಹಾಗೇಕೆ ಮಾಡಿದ್ರು ಅನ್ನೋದು ಈ ಚರ್ಚೆಯ ಸುತ್ತಣ ಪ್ರಧಾನ ವಿಷಯ. ಈವೆಂಟ್‌ನಲ್ಲಿ ಭಾಗವಹಿಸಿದ್ದವರ ಪ್ರಕಾರ ಈಗ ಚರ್ಚೆ ಆಗುತ್ತಿರುವ ವಿಷಯದ ಸುತ್ತ ಎರಡು ಕಾರಣಗಳಿವೆ. ಮೊದಲಿಗೆ ಇದ್ದಿದ್ದು ರಾಜಮೌಳಿ ಅವರು ತಾರಾತುರಿಯಲ್ಲಿ ಮಾತನಾಡಿ ಹೋಗಿದ್ದು. ಇದು ಅಲ್ಲಿದ್ದವರ ಪ್ರಶ್ನೆ ಮಾತ್ರವಲ್ಲ, ಮಾಧ್ಯಮವರಿಗೂ ನಿರಾಸೆ ಮೂಡಿಸಿದ ವಿಷಯವೇ ಹೌದು. ಮತ್ತೊಂದು ವಿಷಯ ಆರ್‌ ಆರ್‌ ಆರ್‌ ಚಿತ್ರದ ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆಯ ಮಾಲೀಕರನ್ನೇ ವೇದಿಕೆಗೆ ಆಹ್ವಾನಿಸದೆ ಇದ್ದಿದ್ದು. ಇದೆಲ್ಲ ಆ ಕ್ಷಣಕ್ಕೆ ಔಚಿತ್ಯವೋ, ಇಲ್ಲವೋ ಅದು ಬೇರೆ ವಿಚಾರ, ಆದರೆ ಒಂದು ಸಿನಿಮಾ ಈವೆಂಟ್‌ ನಲ್ಲಿ ಹೀಗೆಲ್ಲ ಅಗೌರವಗಳಾದರೆ ದುಬಾರಿ ಬೆಲೆ ನೀಡಿ, ಆಡಿಯೋ ಹಕ್ಕು ಖರೀದಿಸಿದವರಿಗೆ ಏನೆಲ್ಲ ಅನಿಸಬಹುದು ಅನ್ನೋದು ಸಹಜವಾದ ಪ್ರಶ್ನೆ.

ನಿಮಗೆಲ್ಲ ಗೊತ್ತಿರುವ ಹಾಗೆ ಭಾರತೀಯ ಚಿತ್ರರಂಗದಲ್ಲಿಯೇ ಭಾರೀ ನಿರೀಕ್ಷೆ ಮೂಡಿಸಿರುವ ʼಆರ್‌ ಆರ್‌ ಆರ್‌ʼ ಚಿತ್ರ ಜನವರಿಗೆ ವಿಶ್ವದಾದ್ಯಂತ ರಿಲೀಸ್‌ ಆಗುತ್ತಿದೆ. ಸದ್ಯಕ್ಕೆ ಅದರ ಪ್ರಮೋಷನ್‌ ಕೆಲಸಗಳಲ್ಲಿಯೇ ಬ್ಯುಸಿ ಆಗಿರುವ ನಿರ್ದೇಶಕ ರಾಜಮೌಳಿ ಬೆಂಗಳೂರಿಗೆ ಬರುತ್ತಿದ್ದಾರೆಂದರೆ ಚಿತ್ರದ ಬಗ್ಗೆ ಸಾಕಷ್ಟು ಮಾತನಾಡುವುದು ಗ್ಯಾರಂಟಿ ಅಂತಲೇ ಶುಕ್ರವಾರ ಒರಾಯನ್‌ ಮಾಲ್‌ ಗೆ ಟವಿ ಮೀಡಿಯಾ ಹಾಗೂ ಆನ್‌ ಮೀಡಿಯಾದ ಕ್ಯಾಮೆರಾಗಳು ಲೆಕ್ಕವಿಲ್ಲದಷ್ಟು ಬಂದಿದ್ದವು. ಅಲ್ಲಿದ್ದು ದೃಶ್ಯ ಸೆರೆ ಹಿಡಿಯುವುದಕ್ಕೆ ಮಾತ್ರವಲ್ಲ, ಲೈವ್‌ ಕೊಡುವುದಕ್ಕೂ ಕ್ಯಾಮೆರಾ ಕಣ್ಣು ರೆಡಿ ಆಗಿದ್ದವು. ಮಾಧ್ಯಮದ ಅದೆಷ್ಟೋ ಜನ ಪತ್ರಕರ್ತರು ರಾಜಮೌಳಿ ಅವರಿಗೆ ಕೇಳುವುದಕ್ಕಾಗಿಯೇ ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡು ಬಂದಿದ್ದರು. ಅವರ ಜೇಬಿನಲ್ಲಿದ್ದ ಪ್ರಶ್ನೆಗಳ ಚೀಟಿಯೂ ಕೂಡ ರಾಜಮೌಳಿ ಅವರ ಆಗಮನಕ್ಕಾಗಿ ಕಾಯುತ್ತಿದ್ದವು. ಆದರೇನು, ಅಲ್ಲಿ ಆಗಿದ್ದೇ ಬೇರೆ.

ನಿರೀಕ್ಷೆಯಂತೆ ರಾಜಮೌಳಿ ಬಂದರು. ಮಧ್ಯಾಹ್ನ ೨ ಗಂಟೆಗೆ ಅಂತ ಕಾರ್ಯಕ್ರಮ ಫಿಕ್ಸ್‌ ಆಗಿದ್ದರೂ, ಅವರು ಬಂದಿದ್ದ ೩ ಗಂಟೆಗೆ. ಸಿನಿಮಾ ಕಾರ್ಯಕ್ರಮ ಅಂದ್ರೆ ಇದೆಲ್ಲ ಮಾಮೂಲು. ಅದರಲ್ಲೂ ರಾಜಮೌಳಿ ಚೆನ್ನೈನಿಂದ ಬರುತ್ತಿದ್ದಾರಂತೆ ಎಂಬುದಾಗಿ ಹೇಳಿದ್ದರಿಂದ ಇನ್ನೊಂದು ತಾಸು ಹೆಚ್ಚೇ ಆಗಿದ್ದರೂ, ಅದೆಲ್ಲ ಅಲ್ಲಿ ನಗಣ್ಯವೇ ಅನ್ನಿ. ಇರಲಿ, ಬಿಡಿ ಅಂತೂ ಬಂದರು. ಅವರೊಂದಿಗೆ ಅವರ ಪತ್ನಿ ರಮಾ ರಾಜಮೌಳಿ , ನಿರ್ಮಾಪಕ ಡಿ.ವಿ.ವಿ.ದಾನಯ್ಯ ಕೂಡ ಹಾಜರಿದ್ದರು. ಇನ್ನು ʼಆರ್‌ ಆರ್‌ ಆರ್‌ʼ ಚಿತ್ರದ ಎಲ್ಲಾ ಭಾಷೆಯ ಆಡಿಯೋ ಹಕ್ಕುಗಳನ್ನು ಖರೀದಿಸಿರುವ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಕೂಡ ಬಂದಿದ್ದರು. ರಾಜಮೌಳಿ ಎಂಟ್ರಿ ಆದಾಗಲೇ ಒಂದು ಶಾಕ್‌ ಕೊಟ್ಟರು. ವೇದಿಕೆಯಲ್ಲಿ ಹಾಕಿದ್ದ ಆಸನಗಳನ್ನು ತೆರವು ಗೊಳಿಸಿದರು. ಅಲ್ಲಿದ್ದವರೆಲ್ಲ ಅಂದುಕೊಂಡಿದ್ದು, ಸ್ಕ್ರೀನ್‌ ಮೇಲೆ ಇನ್ನೇನೋ ಬರುತ್ತೆ ಅಂತ. ಆದರೆ, ರಾಜಮೌಳಿ ಅವರ ಲೆಕ್ಕಚಾರವೇ ಬೇರಿತ್ತು.

ಆಸನ ತೆರೆವುಗೊಳಿಸಿದ ವೇದಿಕೆಯಲ್ಲಿ ಮೊದಲು ಮಾತನಾಡಿದ್ದು ಕೆವಿಎನ್‌ ಸಂಸ್ಥೆಯ ಮಾಲೀಕರಾದ ವೆಂಕಟ್.‌ ಅವರು ʼಆರ್‌ಆರ್‌ಆರ್‌ʼ ಚಿತ್ರವನ್ನು ತಾವು ಕರ್ನಾಟಕದ ಹಕ್ಕು ಖರೀದಿಸಿದ್ದು, ಹಾಗೆಯೇ ಅದನ್ನು ಕನ್ನಡಕ್ಕೆ ಡಬ್‌ ಮಾಡಿ ತರುತ್ತಿರುವ ಬಗ್ಗೆ ಹೇಳಿಕೊಂಡರು. ಅವರ ಮಾತು ಮುಗಿಯುತ್ತಿದ್ದಂತೆಯೇ ರಾಜಮೌಳಿ ಮಾತಿಗೆ ಎಂಟ್ರಿಯಾಗಿಬಿಟ್ಟರು. ಅವರು ಮೊದಲು ಹೇಳಿದ್ದು, ಎರಡು ಕಾರಣಕ್ಕೆ ನನ್ನನ್ನು ಕ್ಷಮಿಸಿ ಅಂದವರೇ, ತಾವೀಗ ಸಿನಿಮಾ ಬಗ್ಗೆ ಹೆಚ್ಚು ಮಾತನಾಡೋದಿಲ್ಲ, ಈಗ ರಿಲೀಸ್‌ ಆಗುತ್ತಿರುವ ಥೀಮ್‌ ಸಾಂಗ್‌ ಜನನಿ ಮಾತನಾಡಬೇಕಿದೆ ಎನ್ನುತ್ತಲೇ ಎರಡೇ ನಿಮಿಷಗಳಲ್ಲಿಯೇ ಮಾತು ಮುಗಿಸಿ ಕುಳಿತವರೇ ಥೀಮ್‌ ಸಾಂಗ್‌ ವಿಡಿಯೋ ಪ್ಲೇ ಮಾಡೋದಿಕ್ಕೆ ಆರ್ಡರ್‌ ಮಾಡಿದರು. ಇನ್ನೇನು ಹಾಡುಮುಗಿದು ಲಹರಿ ಸಂಸ್ಥೆಯ ಮಾಲೀಕರು ಮಾತನಾಡಬಹುದು ಅಂತಲೇ ಎಲ್ಲರು ನಿರೀಕ್ಷಿಸಿದ್ದರು. ಆದರೆ ಅದ್ಯಾವುದಕ್ಕೂ ಅಲ್ಲಿ ಅವಕಾಶವೇ ಸಿಗಲಿಲ್ಲ. ಸಿಗಲಿಲ್ಲ ಎನ್ನುವದಕ್ಕಿಂತ ಕೆವಿಎನ್‌ ಸಂಸ್ಥೆಯವರು ಇದನ್ನು ಗಮನಿಸಲಿಲ್ಲ. ಈವೆಂಟ್‌ ಅನ್ನೋದು ಇದೇ ಮೊದಲಾದರೂ ಕೆವಿಎನ್‌ ಸಂಸ್ಥೆಯವರು ಇದನ್ನು ನಿಭಾಯಿಸಬೇಕಾಗಿದತ್ತಾದರೂ, ಲಹರಿ ಸಂಸ್ಥೆಯ ಮಾಲೀಕರು ಅಲ್ಲಿಯೇ ಇದ್ದರೂ ವೇದಿಕೆಗೆ ಆಹ್ವಾನಿಸದೆ ಒಂದ್ರೀತಿ ಮುಜುಗರಕ್ಕೆ ಒಳಪಡಿಸಿದರು ಎನ್ನುವ ಮಾತು ಈವೆಂಟ್‌ ಅಟೆಂಡ್‌ ಮಾಡಿದವರಿಗೂ ಅನಿಸಿದ್ದು ಹೌದು.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!