‘ಕಿರುತೆರೆ’ಯತ್ತ ಮತ್ತೆ ಗೋಲ್ಡನ್‌ಸ್ಟಾರ್; ಬಂಗಾರದ ಹುಡ್ಗನ ಹೊಸ ರಿಯಾಲಿಟಿ ಶೋ !

ಗಂಧದಗುಡಿಯ ಬಂಗಾರದ ಗಣಿ ಗೋಲ್ಡನ್‌ಸ್ಟಾರ್ ಗಣೇಶ್ ಅವರು ಮತ್ತೆ ಕಿರುತೆರೆಯತ್ತ ಮುಖಮಾಡಿದ್ದಾರೆ. ಜೀ ಕನ್ನಡದ ಹೊಚ್ಚ ಹೊಸ ರಿಯಾಲಿಟಿ ಶೋದ ನಿರೂಪಣೆಯ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು ಮಳೆ ಹುಡುಗ ಹೋಸ್ಟ್ ಮಾಡಲಿರುವ ಪ್ರೋಗ್ರಾಂ ಕುರಿತು ನಿರೀಕ್ಷೆಗಳು ಗರಿಗೆದರಿವೆ. ಇತ್ತೀಚೆಗಷ್ಟೇ ಗಣೇಶ್ ಅಭಿನಯದ ಸಖತ್ ಸಿನಿಮಾ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಗಣಿ-ಸುನಿ ಕಾಂಬಿನೇಷನ್ ಚಿತ್ರವಾದ ‘ಸಖತ್’ಗೆ ಭರಪೂರ ಪ್ರತಿಕ್ರಿಯೆ ಸಿಗುತ್ತಿರುವ ಬೆನ್ನಲ್ಲೇ ಗಣಿ ಸ್ಮಾಲ್‌ಸ್ಕ್ರೀನ್ ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಕಿರುತೆರೆಯಲ್ಲಿ ಮೂರನೇ ಇನ್ನಿಂಗ್ಸ್ ಶುರು ಮಾಡಿರುವ ಮುಂಗಾರುಮಳೆಯ ಪ್ರೀತಂ ಯಾವ್ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆ-ಮನ ತಲುಪೋದಕ್ಕೆ ಹೊರಟಿದ್ದಾರೆ ನೋಡೋಣ ಬನ್ನಿ.

ಗಣಿ ನನ್ನ ಮರೆತುಬಿಟ್ಯಾ? ಸಾಮಾನ್ಯ ಗಣಿ ಆಗಿದ್ದಾಗ ಚಾನ್ಸ್ ಕೊಟ್ಟಿದ್ದು ನಾನು, ಸ್ಟೇಜ್ ಅಂತ ಸಿಕ್ಕಿದ್ದು ನನ್ನಿಂದ, ಕಾರ್ಯಕ್ರಮ ಕೊಟ್ಟಿದ್ದು ನನ್ನ ಅಂಗಳದಲ್ಲಿ, ಮೆರವಣಿಗೆ ಹೊರಟಿದ್ದು ನನ್ನ ಅಖಾಡದಿಂದ, ಇಡೀ ಕರ್ನಾಟಕ ತಲುಪಿದ್ದು ನನ್ನ ಕೃಪೆಯಿಂದ, ಕನ್ನಡಿಗರ ಪ್ರೀತಿ- ಪ್ರೋತ್ಸಾಹ- ಅಭಿಮಾನ ಸಿಕ್ಕಿದ್ದು ನಾನ್ ನಿನಗೆ ಕೊಟ್ಟ ಅವಕಾಶದಿಂದ. ನನ್ನಿಂದ ಇಷ್ಟೆಲ್ಲಾ ಉಪಯೋಗ ಪಡೆದುಕೊಂಡ ಮೇಲೆ ನನ್ನ ಮರೆತರೆ ಹೆಂಗೆ ಗಣಿ? ಬೆಳೆದು ದೊಡ್ಡವನಾದ್ಮೇಲೆ ಬೆಡವಾದ್ನಾ ನಿಂಗೆ? ಇಷ್ಟೆನಾ ನೀನು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸ? ಹೀಗಂತ ಸ್ಮಾಲ್‌ಸ್ಕ್ರೀನ್ ಪ್ರಶ್ನೆ ಮಾಡುವ ಮೊದಲೇ ಸ್ಮಾಲ್‌ಸ್ಕ್ರೀನ್‌ನ ಖುಷಿಪಡಿಸುವ, ಕನ್ನಡಿಗರನ್ನು ಆನಂದ ಕಡಲಲ್ಲಿ ತೇಲಿಸುವ, ಎಲ್ಲದಕ್ಕಿಂತ ಹೆಚ್ಚಾಗಿ ಕಿರುತೆರೆಗೆ ಋಣಿಯಾಗಿರುವ ಕೆಲಸವನ್ನು ಗೋಲ್ಡನ್‌ಸ್ಟಾರ್ ಗಣೇಶ್ ಮಾಡ್ತಿದ್ದಾರೆ.

ಗೋಲ್ಡನ್‌ಸ್ಟಾರ್ ಗಣೇಶ್ ಕಿರುತೆರೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಟ್ಟವರು ಅನ್ನೋದು ನಿಮ್ಮೆಲ್ಲರಿಗೂ ಗೊತ್ತೆಯಿದೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಕಾಮಿಡಿ ಟೈಮ್' ಕಾರ್ಯಕ್ರಮದ ಮೂಲಕ ಟಿವಿಯಲ್ಲಿ ಮೆರವಣಿಗೆ ಹೊರಟರು.ಯೂನಿಕ್ ಕಾನ್ಸೆಪ್ಟ್ ಮೂಲಕ ದಿಬ್ಬಣ ಹೊರಟ ಗಣಿ, ಕಾಮಿಡಿ ಕಿಕ್ ನೋಡುತ್ತಾ,ಬಕ್ರಾ ಮಾಡುತ್ತಾ ಕರುನಾಡ ಮಂದಿಗೆ ಕನೆಕ್ಟ್ ಆದರು.ಶೋ ಕ್ಲಿಕ್ ಆಯ್ತು ಕಾಮಿಡಿ ಟೈಮ್ ಗಣೇಶ್ ಅಂತಲೇ ಇಡೀ ಕರ್ನಾಟಕದಲ್ಲಿ ಮನೆಮಾತಾದರು.ಅಲ್ಲಿಂದ ಮೆಲ್ಲಗೆ ಬಣ್ಣದ ಲೋಕದತ್ತ ಕಣ್ಣಾಯಿಸಿದರು.ಗುಟ್ಟು ಚಿತ್ರಕ್ಕೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಎದುರಿಸಿದರು.ಸಣ್ಣ-ಪುಟ್ಟ ಪಾತ್ರ ಮಾಡುತ್ತಾ ಸಾಗಿಬಂದ ಗಣಿ ‘ಚೆಲ್ಲಾಟ’ ಚಿತ್ರದಲ್ಲಿ ಹೀರೋ ಆದರು. ಅದೇ ವರ್ಷ ಭಟ್ರ ಕೃಪೆಯಿಂದ ಮುಂಗಾರುಮಳೆ ಸುರಿಯಿತು ನೋಡಿ ಮುಂದಾಗಿದ್ದು ಇತಿಹಾಸ.

ಚೆಲ್ಲಾಟ'ಆಡಿಕೊಂಡು ‘ಮುಂಗಾರು ಮಳೆ’ ಸುರಿಸಿದ್ಮೇಲೆ ಗಣಿ ನಸೀಬೇ ಚೇಜ್ ಆಯ್ತು. ಕರುನಾಡಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಹುಟ್ಟಿಕೊಂಡರು. ಹೆಣೈಕ್ಳು ಹೃದಯಾನೇ ಕೊಟ್ಟರು. ಕಾಲ್‌ಶೀಟ್‌ಗೋಸ್ಕರ ಡೈರೆಕ್ಟರ್-ಪ್ರೊಡ್ಯೂಸರ್ ಕ್ಯೂ ನಿಂತರು. ಸ್ಟಾರ್‌ಡಮ್ ಜೊತೆಗೆ ಬೆಲೆಕಟ್ಟಲಾಗದ ಪ್ರೀತಿ-ಅಭಿಮಾನ ಹೊಳೆಯಾಗಿ ಹರಿದುಬಂತು.
ಹಸಿವು-ಅವಮಾನ-ನಿಂದನೆ-ಸೋಲು-ಕಷ್ಟ ಎಲ್ಲದಕ್ಕೂ ಫಲ ಸಿಗ್ತು. ಬಣ್ಣದ ಲೋಕದ ಕನಸೊತ್ತು ಖಾಲಿ ೨೦೦ ರೂಪಾಯಿ ತೆಗೆದುಕೊಂಡು ನೆಲಮಂಗಲದ ಅಡಕಮಾರನ ಹಳ್ಳಿಯಿಂದ ಬೆಂಗ್ಳೂರಿಗೆ ಬಂದಿದ್ದಕ್ಕೂ ಬದುಕು ಸಾರ್ಥಕತವಾಯ್ತು. ಮಾತ್ರವಲ್ಲ ಕಾಮಿಡಿ ಟೈಮ್ ಗಣೇಶ್ ಅಂತ ಇದ್ದ ಹೆಸರು ಗೋಲ್ಡನ್ ಸ್ಟಾರ್ ಗಣೇಶ್ ಆಗಿ ಬದಲಾಯ್ತು. ಇಲ್ಲಿಂದ ಹಿಂತಿರುಗಿ ನೋಡಿದ್ದೆ ಇಲ್ಲ. ನಡುನಡುವೆ ಸಣ್ಣಪುಟ್ಟ ಸೋಲು ಕಂಡಿರಬಹುದು ಆದರೆ ಬಂಗಾರದ ಹುಡುಗ ಛಾರ್ಮ್ ಕಳೆದುಕೊಂಡಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಲೇ ಇದ್ದಾರೆ. ಪ್ರೇಕ್ಷಕ ಮಹಾಷಯರನ್ನು ರಂಜಿಸುತ್ತಲೇ ಇದ್ದಾರೆ.

ಸ್ಮಾಲ್‌ಸ್ಕ್ರೀನ್‌ನಿಂದ ಬಿಗ್‌ಸ್ಕ್ರೀನ್‌ನಲ್ಲಿ ಮಿಂಚೋ ಅವಕಾಶ ಗಿಟ್ಟಿಸಿಕೊಂಡಿರುವ ಗಣಿ ಯಾವತ್ತೂ ಕಿರುತೆರೆಯನ್ನ ಬಿಟ್ಟುಕೊಟ್ಟಿಲ್ಲ. ಟಿವಿ ಲೋಕದ ಮಂದಿ ಕಾಲ್‌ಶೀಟ್ ಕೇಳಿದಾಗ ಪ್ರೀತಿಯಿಂದ ಕೊಟ್ಟಿದ್ದಾರೆ. ಸಂಭಾವನೆ ಸಹಿತ ತನಗೆ ಕೊಟ್ಟ ಜವಬ್ದಾರಿಯನ್ನ ಅಷ್ಟೇ ಮುತುವರ್ಜಿಯಿಂದ ಮುಗಿಸಿಕೊಟ್ಟು ಬಂದಿದ್ದಾರೆ. ಹೌದು, ‘ಕಾಮಿಡಿ ಟೈಮ್’ ನಂತ್ರ ಬೆಳ್ಳಿತೆರೆಯಲ್ಲೇ ಬ್ಯುಸಿಯಾಗಿದ್ದ ಗೋಲ್ಡನ್‌ಸ್ಟಾರ್ ಕಳೆದ ಎರಡ್ಮೂರು ವರ್ಷದ ಹಿಂದೆ ‘ಸೂಪರ್ ಮಿನಿಟ್'ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಮತ್ತೊಮ್ಮೆ ಮೆರವಣಿಗೆ ಹೋಗಿಬಂದರು.

ಈಗ ಶುರುವಾಗ್ತಿದೆ ನಿಮ್ಮ ಗೋಲ್ಡನ್ ಮಿನಿಟ್ ಅಂದರೆ ಸೂಪರ್ ಮಿನಿಟ್’ ಎನ್ನುತ್ತಾ ಪ್ರೇಕ್ಷಕರನ್ನು ಒಂಟಿಕಾಲಿನಲ್ಲಿ ನಿಲ್ಲಿಸಿ, ಮಸ್ತ್ ಮನರಂಜನೆ ನೀಡಿದ ಹುಡುಗಾಟದ ಹುಡುಗ ಗಣಿ ಇದೀಗ ‘ಗೋಲ್ಡನ್ ಗ್ಯಾಂಗ್'ಜೊತೆ ಕಿರುತೆರೆಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಕೆಲಸ,ದುಡಿಮೆ,ಸಂಪಾದನೆಯ ನಡುವೆ ಮರೆಯಾದ ಸ್ನೇಹ,ಕಳೆದು ಹೋದ ಸ್ನೇಹಿತರನ್ನು ಹುಡುಕಿಕೊಂಡು ಹೊರಟಿರುವ ‘ಗೋಲ್ಡನ್ ಗ್ಯಾಂಗ್’ ನ ಬಂಗಾರದ ಗಣೇಶ್ ನಿರೂಪಣೆ ಮಾಡ್ತಿದ್ದಾರೆ. ಜೀ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಸದ್ಯಕ್ಕೆ ಪ್ರೋಮೋ ಬಿಡುಗಡೆಯಾಗಿದೆ. ಅತೀ ಶೀಘ್ರದಲ್ಲೇ ಗೋಲ್ಡನ್ ಗ್ಯಾಂಗ್ ಆರಂಭವಾಗಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!