ದಾದಾ ಕಟ್ಟಾಭಿಮಾನಿ ; ಈ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯಾನೇ ಇಲ್ಲ

ಸೂರ್ಯ ಚಂದ್ರರು ಇರೋವರೆಗೂ ಸಾಹಸಸಿಂಹ ವಿಷ್ಣುವರ್ಧನ್ ಜೀವಂತ ಎನ್ನುವ ಮಾತನ್ನು ಸಾರ್ವಕಾಲಿಕ ಸತ್ಯವನ್ನಾಗಿಸುವಲ್ಲಿ ಅಭಿಮಾನಿ ದೇವರುಗಳು ಶ್ರಮಿಸುತ್ತಿದ್ದಾರೆ. ವಿಷ್ಣುದಾದಾರ ನಡೆ-ನುಡಿಯನ್ನು ಅನುಸರಿಸುತ್ತಾ, ಕೋಟಿಗೊಬ್ಬನ ಗುಣಗಳನ್ನು- ಆದರ್ಶಗಳನ್ನು ಪಾಲಿಸುತ್ತಾ, ಅಗಲಿರುವ ಆಪ್ತರಕ್ಷನನ್ನು ಜೀವಂತವಾಗಿಸುತ್ತಿರುವ ಅಭಿಮಾನಿಗಳು, ದೇಹವೆಂಬ ದೇಗುಲದಲ್ಲಿ ಹೃದಯವಂತನನ್ನು ಪ್ರತಿಷ್ಠಾಪಿಸಿಕೊಂಡು ಆರಾಧಿಸುತ್ತಿದ್ದಾರೆ ಪೂಜಿಸುತ್ತಿದ್ದಾರೆ. ಬರೀ ಮನಸ್ಸಲ್ಲಿ ಕರ್ಣನ ಸ್ಮರಿಸಿದರೇ ಸಾಲದು, ಯಜಮಾನರನ್ನು ನಾವೆಷ್ಟು ಪ್ರೀತಿಸ್ತೇವೆ ಎಂಬುದನ್ನು ಅಚ್ಚೆ ಮೂಲಕ ತೋರಿಸೋಣವೆಂದು ಕೆಲವರು ಅಚ್ಚೆ ಹಾಕಿಸಿಕೊಳ್ಳೋದನ್ನು ನೋಡಿದ್ದೇವೆ. ಆದರೆ, ಈ ಅಭಿಮಾನಿಯ ಅಭಿಮಾನವನ್ನು ಪದಗಳಲ್ಲಿ ವರ್ಣಿಸೋಕೆ ಸಾಲಲ್ಲ. ಮೈಸೂರು ಮೂಲದ ಅಭಿಮಾನಿ ಸಾಹಸ ಸಿಂಹ ವಿಷ್ಣುದಾದಾರನ್ನು ಯಾವ ಪರಿ ಪ್ರೀತಿಸ್ತಾರೆ, ಆರಾಧಿಸುತ್ತಾರೆ, ಅಭಿಮಾನಿಸುತ್ತಾರೆ ಎನ್ನುವುದನ್ನು ನೀವೇ ನಿಮ್ಮ ಕಣ್ಣಾರೆ ನೋಡಿ.

Related Posts

error: Content is protected !!