Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಕೋಟಿಗೊಬ್ಬನ ಹಾಡು ಪಾಡು- ಮಾರ್ಚ್‌ 28ಕ್ಕೆ ಹಾಡುಗಳ ಬಿಡುಗಡೆ

ಸಾಂಗ್‌ ಎದುರು ನೋಡುತ್ತಿರುವ ಫ್ಯಾನ್ಸ್‌ 

ಕೋಟಿಗೊಬ್ಬ ಅಂದಾಕ್ಷಣ, ನೆನಪಾಗೋದೇ ಡಾ.ವಿಷ್ಣುವರ್ಧನ್.‌ ಈಗ ಅದೇ ಕೋಟಿಗೊಬ್ಬ ಹೆಸರಲ್ಲಿ ಸುದ್ದಿಯಾದವರು ಕಿಚ್ಚ ಸುದೀಪ್.‌ ಹೌದು, ಸುದೀಪ್‌ ಈಗಾಗಲೇ “ಕೋಟಿಗೊಬ್ಬ” ಸೀರೀಸ್‌ನಲ್ಲಿ ಸಿನಿಮಾ ಮಾಡಿರುವ ಸುದೀಪ್‌, “ಕೋಟಿಗೊಬ್ಬ ೩” ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.

ಅದಕ್ಕೆ ಕಾರಣ, ಈಗಾಗಲೇ ಸಾಕಷ್ಟು ಸುದ್ದಿಯಲ್ಲಿರೋದು. ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾಗಳ ಸ್ಟಾರ್‌ ನಟ ಎನಿಸಿರುವ ಸುದೀಪ್‌ ಅವರ “ಕೋಟಿಗೊಬ್ಬ” ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಮಾ.೨೮ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಹೌದು, ಸೂರಪ್ಪ ಬಾಬು ನಿರ್ಮಾಣದ “ಕೋಟಿಗೊಬ್ಬ ೩” ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರದ ಹಾಡುಗಳನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ, ಟ್ವೀಟ್‌ ಮೂಲಕ ಚಿತ್ರತಂಡ ಹಾಡುಗಳ ಬಿಡುಗಡೆ ಕುರಿತು ಹೇಳಿಕೊಂಡಿದೆ.

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ಸಿನಿಮಾ ವಿಚಾರದಲ್ಲಿ ನಟ ನಿರೂಪ್ ಭಂಡಾರಿ ಮನಸ್ಸಲೇ ಬೈದು ಕೊಂಡಿದ್ದಾರಂತೆ.. ಅದು ಯಾಕೆ?

ಸುದೀಪ್ ಜತೆಗೆ ಅಭಿನಯಿಸುವ ಸಲುವಾಗಿ..


ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ದಲ್ಲಿ ನಟ ನಿರೂಪ್ ಭಂಡಾರಿ‌ಕೂಡ ಇದ್ದಾರೆ. ಈಗಾಗಲೇ ಅವರು ಸಂಜೀವ್ ಗಂಬೀರ್ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ. ಈಗಾಗಲೇ ಆ ಪಾತ್ರ್ ಚಿತ್ರೀಕರಣ ಕೂಡ ಮುಗಿಸಿಕೊಂಡು ಬಂದಿದ್ದಾರೆ. ಭಾನುವಾರ ಅದರ ಮೊದಲ ಸುದ್ದಿಗೋಷ್ಟಿಯಲ್ಲಿ ನಟ ನಿರೂಪ್ ಭಂಡಾರಿ ಮಾತನಾಡುತ್ತಾ, ತಾವು ಪಾತ್ರಕ್ಕಾಗಿ ಮನಸ್ಸಲ್ಲೇ ಬೈದುಕೊಂಡ‌ ಕ್ಷಣ ಗಳನ್ನು ಹೇಳಿಕೊಂಡು ಅಚ್ಚರಿ ಮೂಡಿಸಿದರು.


‘ ನಂಗೆ ಈ ಪಾತ್ರ ಸಿಗುತ್ತೆ ಅಂತಂದುಕೊಂಡಿರಲಿಲ್ಲ‌ . ಸಿನಿಮಾ ಕತೆ ಬರೆಯಲು ಅನೂಪ್ ಶುರುಮಾಡಿ ದಾಗನಿಂದ ಅವರ ಜತೆ ಆಗಾಗ ಭೇಟಿ ಮಾಡುತ್ತಿದ್ದೆ. ಆದರೆ ನಂಗೆ ಅದರಲ್ಲಿ ಪಾತ್ರ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಕೊನೆಗೊಂದು ದಿನ ನಾನು ಅಭಿನಯಿಸಬೇಕಿದ್ದ ಪಾತ್ರಕ್ಕೆ ಬೇರೆ ಬೇರೆ ಆ್ಯಕ್ಟರ್ ಅವರನ್ನು ಹುಡುಕುತ್ತಿದ್ದರು. ಅನೇಕ ಸ್ಟಾರ್ ಹೆಸರು ಕೇಳಿಬಂದಿದ್ದವು. ಹಾಗೆಲ್ಲ ಬೇರೆ ಸ್ಟಾರ್ ಹೆಸರು ಕೇಳಿದಾಗೆಲ್ಲ ನಾನು ಮನಸ್ಸಲೇ ಬೈದುಕೊಳ್ಳುತ್ತಿದ್ದೆ. ಕೊನೆಗೆ ಒಂದು ದಿನ ಆ ಪಾತ್ರ‌ನಂಗೆ ಬಂತು. ಆಗ ಕೊನೆಗೂ ನೆಮ್ಮದಿ ಸಿಕ್ಕಿತು’ ಎಂದರು ನಟ ನಿರೂಪ್ ಭಂಡಾರಿ.

ನಿರೂಪ್ ಇಷ್ಟಕ್ಕೂ ಆ ಪಾತ್ರಕ್ಕಾಗಿ ಆ ರೀತಿ ಪರದಾಡಿದ್ದು ಯಾಕೆ? : ಸುದೀಪ್ ಸರ್ ಸಿನಿಮಾ. ಬಿಗ್ ಬಜೆಟ್ ಸಿನಿಮಾ.‌ಅವರೊಂದಿಗೆ ಅಂತಹದೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತಲ್ವಾ ಅಂತ ‌ಅದೇ ಕಾರಣಕ್ಕೆ ಈ ಸಿನಿಮಾಕ್ಕಾಗಿ ಈ ರೀತಿ ಪರದಾಡಿದ್ದು ಅಂತ ಸ್ಪಷ್ಟನೆ ಕೊಟ್ಟರು ನಟ ನಿರೂಪ್ ಭಂಡಾರಿ.

Categories
ಸಿನಿ ಸುದ್ದಿ

ಹೊಸ ಪ್ರತಿಭೆಗಳ ರಿವೈಂಡ್ ರೆಡಿ

ಟೀಸರ್ ಗೆ  ಭರಪೂರ ಮೆಚ್ಚುಗೆ

ಕನ್ನಡ ಚಿತ್ರರಂಗದಲ್ಲಿ ಈಗ ಬಿಡುಗಡೆಗೆ ಸಾಲು ನಿಂತಿರುವ ಚಿತ್ರಗಳ ಪಟ್ಟಿ ದೊಡ್ಡದ್ದೇ ಒದೆ. ಆ ಸಾಲಿಗೆ ‘ರಿವೈಂಡ್’ ಸಿನಿಮಾವೂ ಸೇರಿದೆ.
ಇದು ಬಹುತೇಕ ಹೊಸಬರ ಚಿತ್ರ.

ಈ ಚಿತ್ರ ಕಥೆ ಬಗ್ಗೆ ಹೇಳೋದಾದರೆ, ಹೀರೋ ಇಲ್ಲಿ ಒಬ್ಬ ರಿಪೋರ್ಟರ್. ಒಂದಷ್ಟು ಸಮಸ್ಯೆಗಳು ಅವನಿಗೂ ಎದುರಾಗುತ್ತವೆ. ಅದರಿಂದ ಅವನ ಫ್ಯಾಮಿಲಿಯೂ ಸಿಲುಕುತ್ತದೆ. ನಂತರ ಹೇಗೆ ಅವನು ತನ್ನ ಫ್ಯಾಮಿಲಿಯನ್ನು ಕಷ್ಟಗಳಿಂದ ಪಾರು ಮಾಡ್ತಾನೆ ಅನ್ನೋದು ಕಥೆ.

ಇದೊಂದು ಥ್ರಿಲ್ಲರ್ ಸಿನಿಮಾ. ಈ ಪ್ರಯತ್ನಕ್ಕೆ ಎಲ್ಲರ ಸಹಕಾರವಿತ್ತು ಚೆನ್ನಾಗಿತ್ತು ಎಂದು ನಟ ಧರ್ಮ ಹೇಳಿಕೊಂಡರು.
ಇನ್ನು, ಚಿತ್ರದ ಹೀರೋ ತೇಜ್ ತಮ್ಮ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ. ‘ಯಂಗ್ ಸ್ಟಾರ್ಸ್ ಸೇರಿ ಈ ಪ್ರಯತ್ನ ಮಾಡಿದ್ದೇವೆ, ಕನ್ನಡ, ತಮಿಳು ಭಾಷೆಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ ಎಂಬ ವಿವರ ಕೊಟ್ಟರು.

ಅಂದಹಾಗೆ, ಈ ಚಿತ್ರಕ್ಕೆ ತೇಜ್ ಅವರದೇ ನಿರ್ದೇಶನವಿದೆ. ವಿನೋದ್ ನಿರ್ಮಾಪಕರು.
ಸದ್ಯ ಟೀಸರ್ ಬಿಡುಗಡೆಯಾಗಿದ್ದು,

ಏಪ್ರಿಲ್ 16 ರಂದು ರಿಲೀಸ್ ಆಗಲಿದೆ. ಚಿತ್ರದಲ್ಲಿ ಚಂದನ, ಹಿರಿಯ ನಟ ಸುಂದರ್ ರಾಜ್, ಸಂದೀಪ್ , ಮಲಾನಿ ಇತರರು ಇದ್ದಾರೆ.

Categories
ಸಿನಿ ಸುದ್ದಿ

‘ಪೊಗರು ‘ಅಂದ್ರೆ ಪಕ್ಕಾ ಎಂಟರ್ ಟೈನರ್ ಮೂವೀ- ನಟಿ ರಶ್ಮಿಕಾ ಮಂದಣ್ಣ ಇಷ್ಟೊಂದು ಭರವಸೆ ಕೊಟ್ಟಿದ್ದೇಕೆ….?

ಅಲ್ಲಿ ಸ್ಟುಡೆಂಟ್ – ಇಲ್ಲಿ ಟೀಚರ್, ಬಡ್ತಿ ಪಡೆದ್ರು ಕಿರಿಕ್ ಹುಡುಗಿ ಸಾನ್ವಿ

ಪೊಗರು ಅಂದ್ರೆ ಕ್ಲಾಸ್, ಪೊಗರು ಅಂದ್ರೆ ಮಾಸ್, ಪೊಗರು ಅಂದ್ರೆ  ರೋಮ್ಯಾಂಟಿಕ್, ಪೊಗರು ಅಂದ್ರೆ ಸೆಂಟಿಮೆಂಟ್, ಪೊಗರು ಅಂದ್ರೆ ಆಕ್ಷನ್, ಪೊಗರು ಅಂದ್ರೆ ಕಾಮಿಡಿ, ಪೊಗರು ಅಂದ್ರೆ ಥ್ರಿಲ್, ಟೋಟಲಿ ‘ಪೊಗರು ‘ ಅಂದ್ರೆ ಪಕ್ಕಾ ಎಂಟರ್ ಟೈನರ್ ಮೂವೀ…

– ಚಿತ್ರದ ನಾಯಕಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ‘ಪೊಗರು’ ಚಿತ್ರದ ಬಗ್ಗೆ ಮೂಡಿಸಿದ ಕುತೂಹಲ ಇದು‌.

ರಶ್ಮಿಕಾ ನಾಯಕಿಯಾಗಿ ನಟಿಸಿರುವ ಈ ಚಿತ್ರ ಫೆ.19 ಕ್ಕೆ ರಿಲೀಸ್ ಆಗುತ್ತಿದೆ. ಇದರ ಪ್ರಚಾರಕ್ಕೆ ಬರುವ ವಿಚಾರದಲ್ಲಿ ಕೇಳಿ ಬಂದ ಕೆಲವು ಕಾಂಟ್ರೋವರ್ಸಿಗಳ ನಡುವೆಯೇ ರಶ್ಮಿಕಾ ಮಂದಣ್ಣ ಈಗ ‘ಪೊಗರು ‘ಚಿತ್ರದ ಪ್ರ ಮೋಷನ್ ನಲ್ಲಿ  ಬ್ಯುಸಿ ಆಗಿದ್ದಾರೆ. ಅದೇ ವೇಳೆ’  ಸಿನಿ ಲಹರಿ’  ಗೂ ನೀಡಿದ  ವಿಶೇಷ ಸಂದರ್ಶನದಲ್ಲಿ ರಶ್ಮಿಕಾ ಅನೇಕ ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದು ವಿಶೇಷ.

1. ಒಂದಷ್ಟು ಗ್ಯಾಪ್ ಜತೆಗೆ ಲಾಕ್ ಡೌನ್ ನಂತರ ಪ್ರೇಕ್ಷಕರ ಎದುರು ಬರುತ್ತಿದ್ದೀರಿ, ಹೇಗನ್ನಿಸುತ್ತೆ ಈ ಎಂಟ್ರಿ ?

ನಂಗೆ ಇದು ಗ್ಯಾಪ್ ಅಂತೇನಿಲ್ಲ. ‘ಯಜಮಾನ’ ಚಿತ್ರ ರಿಲೀಸ್ ಮುಂಚೆಯೇ ಒಪ್ಪಿಕೊಂಡ ಸಿನಿಮಾ ಇದು. ಹೆಚ್ಚು- ಕಡಿಮೆ ಒಂದು- ಒಂದೂವರೆ ವರ್ಷ ಬರೀ ಚಿತ್ರೀಕರಣವೇ ನಡೆದಿದೆ. ಅಲ್ಲಿ‌ಂದ ಈಗ ರಿಲೀಸ್ ಆಗುತ್ತಿದೆ.  ಬದಲಿಗೆ ಲಾಕ್ ಡೌನ್ ನಂತರ , ಜತೆಗೆ ಟಾಕೀಸ್ ಗಳಲ್ಲಿ ಹಂಡ್ರೆಡ್ ಪರ್ಸೆಂಟ್ ಸೀಟು ಭರ್ತಿಗೆ ಅವಕಾಶ ಸಿಕ್ಕ ಸಂದರ್ಭದಲ್ಲಿ ನಮ್ ಸಿನಿಮಾ ಥಿಯೇಟರ್ ಗೆ ಬರ್ತಿದೆ. ಅದು ಖುಷಿ ತಂದಿದೆ. ಜತೆಗೆ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ತಾರೋ ಎನ್ನುವ ಆತಂಕವೂ ಇದೆ.

2  ಮೊದಲ ಸಿನಿಮಾದಲ್ಲಿ ಸ್ಟೂಡೆಂಟ್ ಆಗಿದ್ದವರು ಈಗಿಲ್ಲಿ ನೀವು ಟೀಚರ್ ಆಗಿ ಕಾಣಿಸಿಕೊಂಡಿದ್ದೀರಂತೆ…..

ಹೌದು, ಇದೊಂಥರ ಪ್ರಮೋಷನ್.  ಕ್ಯಾರೆಕ್ಟರ್ ವಿಚಾರದಲ್ಲಿ ತುಂಬಾ ಡಿಫೆರೆಂಟ್ ಇಲ್ಲಿದೆ. ನಾನಿಲ್ಲಿ ಟೀಚರ್. ತುಂಬಾ ಇಂಟ್ರೋವರ್ಟ್. ಹೀರೋ ಮತ್ತು ನನ್ನ. ನಡುವೆ ಬರೀ ಜಗಳ. ಒಂಥರ ಟಾಮ್ ಅಂಡ್ ಜರಿ ನೋಡಿದ ಹಾಗೆ. ಆಕ್ಟಿಂಗ್ ಅಂತ ಬಂದಾಗ ಸಾಕಷ್ಟು ಸ್ಟೇಸ್ ಸಿಕ್ಕಿದೆ. ಹೀರೋ ಪಾತ್ರಕ್ಕಿರುವ ಮಹತ್ವ ಆ ಪಾತ್ರಕ್ಕೂ ಇದೆ. ಕಿರಿಕ್ ಪಾರ್ಟಿ, ಅಂಜನಿಪುತ್ರ, ಚಮಕ್ ಹಾಗೂ ಯಜಮಾನ  ಚಿತ್ರಗಳಲ್ಲಿದ್ದ  ನನ್ನ ಪಾತ್ರಗಳಿಗಿಂತ ತುಂಬಾ ಡಿಫೆರೆಂಟ್ ಇದು. ಅದು ಹೇಗೆ ಅನ್ನೋದು ಸಿನಿಮಾ ನೋಡಿದಾಗ ಗೊತ್ತಾಗಲಿದೆ.

3   ಚಿತ್ರದ ಹೀರೋ ಧ್ರುವ ಸರ್ಜಾ ಮತ್ತು ನಿಮ್ಮ ಕಾಂಬಿನೇಷನ್ ಬಗ್ಗೆ ಏನ್ ಹೇಳ್ತೀರಾ?

ನಾನ್ ಅವರನ್ನ ಫಸ್ಟ್  ಟೈಮ್ ಮೀಟ್ ಮಾಡಿದ್ದು ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿನಲ್ಲಿ. ಸಿನಿಮಾ ಶೂಟಿಂಗ್ ಸಮಯದಲ್ಲಿ. ಅವತ್ತು ಅವರ ಗೆಟಪ್ ಫುಲ್ ಚೇಂಜ್ ಇತ್ತು. ತುಂಬಾ ಸಿಂಪಲ್, ಜತೆಗೆ ಸಣ್ಣ ಆಗಿದ್ದರು. ತುಂಬಾ ಫ್ರೆಂಡ್ಲಿ  ಸ್ವಭಾವ ಅವರದು. ಹಾಗಿದ್ದಾಗ ನಾವು ಆ್ಯಕ್ಟ್ ಮಾಡೋದಿಕ್ಕೂ ಸುಲಭ ಆಗುತ್ತೆ.  ಅಂದ್ರೆ ಹೊಸಬರು ಅಂತ ಮುಜುಗರ ಇರೋದಿಲ್ಲ.

4 ‘ಪೊಗರು’ ಅಂದಾಕ್ಷಣ ಈಗ ಖರಾಬು ಹಾಡಿನದ್ದೇ ಸೌಂಡು, ಈ ಹಾಡಿನ ಚಿತ್ರೀಕರಣದ ಅನುಭವ ಜತೆಗೀಗ ಅದಕ್ಕೆ ಸಿಕ್ಕ ರೆಸ್ಪಾನ್ಸ್ ಬಗ್ಗೆ ಏನ್ ಹೇಳ್ತೀರಾ?

ಇದೊಂದು ಥ್ರಿಲ್ ಸಾಂಗ್. ಸಾಂಗ್ ಕೇಳಿದ ಸಂದರ್ಭದಲ್ಲೇ ಫುಲ್ ಖುಷಿ ಆಗಿದ್ದೆ. ಚಂದನ್ ಸರ್ ಅವರ ಬೀಟ್ಸ್ ಸೌಂಡ್ ಸೂಪರ್ ಆಗಿದೆ. ಚಿತ್ರೀಕರಣ ಅಂತ ಬಂದಾಗ ಇದೇನು ನಂಗೆ ಸಪ್ರೇಟ್ ಸಾಂಗ್ ಶೂಟಿಂಗ್ ಅಂತ ಎನಿಸಲಿಲ್ಲ,ಒಂದು ಸೀನ್ ಅಥವಾ ಮಾಂಟೇಜ್ ತರನೇ, ಶೂಟ್ ಮಾಡಿದ ಅನುಭವ ಆಯಿತು. ದೊಡ್ಡ ಸೆಟ್, ನೂರಾರು ಜೂನಿಯರ್ ಆರ್ಟಿಸ್ಟ್ , ಸುಮ್ನೆ ಹೆಜ್ಜೆ ಹಾಕುವಷ್ಟು ಥ್ರಿಲ್ ನೀಡುತ್ತಿದ್ದ ಚಂದನ್ ಸರ್ ಬೀಟ್ಸ್… ಮಜಾ ಮಜವಾಗಿ ಶೂಟ್ ಮುಗಿಸಿದ್ವಿ. ಈಗ ಅದುದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿದೆ. ನಾನು ಜಿಮ್ ಹೋದ್ರೂ ಅದೇ ಸಾಂಗ್ ಕೇಳುತ್ತಿರುತ್ತೆ. ಮೇಡಂ… ನ್ಯೂ ಸಾಂಗ್ ಅಂತ ಅಲ್ಲಿದ್ದವರು ಹೇಳ್ತಾರೆ. ಇದೊಂಥರ ಥ್ರಿಲ್.

5  ಈ ಸಾಂಗ್ ಒಂದಷ್ಟು ಕಾಂಟ್ರೋವರ್ಸಿ ಕೂಡ ಆಯ್ತ, ನಾಯಕಿ ಯನ್ನು ಕೆಟ್ಟದಾಗಿ ತೋರಿಸಲಾಗಿದೆ ಎನ್ನುವ ಆರೋಪ ಕೂಡ ಬಂತು….

ನಾನು  ಆ ಬಗ್ಗೆ ಏನನ್ನು ಹೇಳಲಾರೆ. ಯಾಕಂದ್ರೆ ಅದೆಲ್ಲ ನಂಗೆ ಗೊತ್ತಿಲ್ಲ. ಒಂದು ಪಾತ್ರಕ್ಕೆಏನು ಬೇಕಿತ್ತೋ ಅಷ್ಟುಮಾತ್ರವೇ ಅಲ್ಲಿ ಚಿತ್ರೀಕರಿಸಲಾಗಿದೆ‌.

6 ನಿರ್ದೇಶಕ ನಂದ್ ಕಿಶೋರ್ ಅವರ ಕೆಲಸ ಹೇಗನಿಸಿತು‌‌‌….

ಅಯ್ಯೋ, ಅಷ್ಟು ಅನುಭವಿಗಳ ಕೆಲಸದ ಬಗ್ಗೆ‌ ನಾನೇನು ಕಾಮೆಂಟ್ ಮಾಡಲಿ? ಅವರಿಂದ ಸಾಕಷ್ಟು ಕಲಿತಿದ್ದೇನೆ. ಬೇಕಾದ್ರೆ ಅವರ ಜತೆಗೆ ನೂರು ಸಿನಿಮಾ ಮಾಡಬಲ್ಲೆ. ಅಷ್ಟು ಡೆಡಿಕೇಟೆಡ್ ಡೈರೆಕ್ಟರ್ ಅವರು‌. ಪ್ರತಿ ಸೀನ್ ಹೀಗೆಯೇ  ಬರಬೇಕು ಅಂತ ಪಟ್ಟು ಹಿಡಿದು ಶೂಟ್ ಮಾಡಿಸುತ್ತಿದ್ದರು‌. ಅಂದ್ರೆ ಒಬ್ಬ ಡೈರೆಕ್ಟರ್ ಗೆ ತನ್ನ ಸಿನಿಮಾದ ಬಗ್ಗೆ ಇರುವ ಕಾಳಜಿ ಅದು. ಆ ಬದ್ಧತೆ ನೋಡಿ ನಂಗೆ ಖುಷಿ ಆಯ್ತ. ಪ್ರತಿ ಹಂತದಲ್ಲೂ ನಂಗೆ ಹಾಗಲ್ಲ, ಹೀಗೆ ಅಂತ ಹೇಳಿಕೊಟ್ಟಿದ್ದಾರೆ. ಅಂತ ನಿರ್ದೇಶಕರು ಇದ್ದಾಗಲೇ ಒಂದು ಸಿನಿಮಾ ಚೆನ್ನಾಗಿ ಮೂಡಿ ಬರಲು ಸಾಧ್ಯ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ‘ ಪೊಗರು’

7 ‘ಪೊಗರು ‘ ಸಿನಿಮಾದ ಮೇಕಿಂಗ್ ಬಗ್ಗೆ ಹೇಳೋದಾದ್ರೆ….

ಪ್ರಡ್ಯೂಸರ್ ರಿಯಲಿ ಗ್ರೇಟ್. ಯಾಕಂದ್ರೆ  ಅದ್ದೂರಿ ವೆಚ್ಚದ ಸಿನಿಮಾವೊಂದು ಎರಡ್ಮೂರು ವರ್ಷ ಬರೀ ಮೇಕಿಂಗ್ ನಲ್ಲಿಯೇ ಇರೋದು ಅಂದ್ರೆ ತಮಾಷೆ ಅಲ್ಲ, ಅದಕ್ಕೆ‌ ತುಂಬಾ ತಾಳ್ಮೆ, ಶ್ರಮ ಬೇಕು. ಅದು ‘ಪೊಗರು’ ನಿರ್ಮಾಪಕ ಗಂಗಾಧರ್  ಅವರಲ್ಲಿದೆ. ಹಾಗಾಗಿಯೇ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ. ಯಾವುದೇ ಭಾಷೆಯ ಸಿನಿಮಾಕ್ಕೂ ಕಮ್ಮಿ ಇಲ್ಲದ ಹಾಗೆ ರಿಚ್ ಆಗಿದೆ ಈ ಸಿನಿಮಾ. ಇದಕ್ಕೆ ಬರೀ‌ಸ್ಟಾರ್ ಗಳು ಮಾತ್ರವಲ್ಲ ಎಲ್ಲಾ ಸಿಬ್ಬಂದಿ ಕೂಡ ಕಾರಣ.

8  ನಿಮ್ಮ ದೃಷ್ಟಿಯಲ್ಲಿ ‘ಪೊಗರು’ ಅಂದ್ರೇನು? ಅದರ ಹೈಲಟ್ಸ್ ಏನು?

ಪೊಗರು ಅಂದ್ರೆ ಕ್ಲಾಸ್, ಪೊಗರು ಅಂದ್ರೆ ಮಾಸ್, ಪೊಗರು ಅಂದ್ರೆ  ರೋಮ್ಯಾಂಟಿಕ್, ಪೊಗರು ಅಂದ್ರೆ ಸೆಂಟಿಮೆಂಟ್, ಪೊಗರು ಅಂದ್ರೆ ಆಕ್ಷನ್, ಪೊಗರು ಅಂದ್ರೆ ಕಾಮಿಡಿ, ಪೊಗರು ಅಂದ್ರೆ ಥ್ರಿಲ್, ಟೋಟಲಿ ‘ಪೊಗರು ‘ ಅಂದ್ರೆ ಪಕ್ಕಾ ಎಂಟರ್ ಟೈನರ್  ಮೂವೀ.

  9 ಪೊಗರು ಸಿನಿಮಾ ಕುರಿತು ನಿಮ್ಮ ಫ್ಯಾನ್ಸ್ ಹಾಗೂ ಆಡಿಯನ್ಸ್ ಗೆ ಏನ್ ಹೇಳ್ತೀರಾ?

ಪೊಗರು ತುಂಬಾ ಪ್ಯಾಷನ್ ಇಟ್ಕೊಂಡ್ ಮಾಡಿದ ಸಿನಿಮಾ. ಇದರ ಹಿಂದೆ ಸಾಕಷ್ಟು ಜನರ ಪರಿಶ್ರಮ ಇದೆ. ಹಾಗೆಯೇ ಹಲವರ ಬದುಕು ಇದೆ‌ . ಹತ್ತಾರು ಕನಸುಗಳಿವೆ. ಒಂದೊಳ್ಳೆಯ ತಂಡ ಕಷ್ಟಪಟ್ಟು ಮಾಡಿದ ಸಿನಿಮಾ ಆಗಿರೋದ್ರಿಂದ ನೋಡುಗರಿಗೆ ಎಲ್ಲೋಬೋರ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಪಕ್ಕಾ ಮನರಂಜ‌ನೆ ಸಿನಿಮಾ ದಲ್ಲಿದೆ.  ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಬರುವಾಗ ಒಂದಷ್ಟು ಎಚ್ಚರಿಕೆ ಇರಲಿ.ಮಾಸ್ಕ್ ಧರಿಸಿ‌ ಬನ್ನಿ. ಸ್ಯಾನಿಟೈಸ್ಡ್ ಮಾಡೋದನ್ನು ಮರಿಬೇಡಿ.

Categories
ಸಿನಿ ಸುದ್ದಿ

ನಂಗೂ ಗೊತ್ತಿದೆ, ವಯಸ್ಸಾಗ್ತಿದೆ – ರಶ್ಮಿಕಾ ಮಂದಣ್ಣ ಹೀಗೆ ತಮ್ಮ ವಯಸ್ಸಿನ ಕುರಿತು ಹೇಳಿದ್ದೇಕೆ?

ರಶ್ಮಿಕಾ ಮಂದಣ್ಣ ಮದುವೆ ಯಾವಾಗ ?

ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಯಸ್ಸಾಗ್ತಿದೆ. ಹಾಗಂತ ಹೇಳ್ತಿರೋದು ನಾವಲ್ಲ. ಖುದ್ದು ರಶ್ಮಿಕಾ ಅವರೇ ತಮಗೆ ವಯಸ್ಸಾಗ್ತಿದೆ ಅಂತ ಹೇಳಿಕೊಂಡಿದ್ದಾರೆ. ಅದು ʼಪೊಗರುʼ ಚಿತ್ರದ ಪ್ರಮೋಷನ್‌ ಕಾರ್ಯಕ್ರಮದಲ್ಲಿ ನಟ ರಕ್ಷಿತ್‌ ಶೆಟ್ಟಿ ಹಾಗೂ ತಮ್ಮ ನಡುವೆ ನಿಜಕ್ಕೂ ಅಗಿದ್ದೇನು? ಮದುವೆ ಬಗ್ಗೆ ನಿಮ್ಮ ಪ್ಲಾನ್‌ ಏನು? ಅಂತ ತಮಗೆ ಎದುರಾದ ಪ್ರಶ್ನೆಗಳಿಗೆ ಕೊಂಚ ಇರುಸು ಮುರುಸು ಮಾಡಿಕೊಂಡೆ ಉತ್ತರಿಸಿದ ಅವರು, ನಂಗೂ ಗೊತ್ತಾಗ್ತಿದೆ, ವಯಸ್ಸಾಗ್ತಿದೆ ಅಂತʼ ನಕ್ಕರು.

ಅನಿರೀಕ್ಷಿತವಾಗಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸಬೇಕೋ ಅಥವಾ ಬೇಡವೋ ಎನ್ನುವ ಮೂಡ್‌ ನಲ್ಲಿಯೇ ಮಾತಿಗೆ ಮುಂದಾದ ರಶ್ಮಿಕಾ, ಅದೆಲ್ಲ ಈಗ ಬೇಕಾ? ಎಂದು ಮರು ಪ್ರಶ್ಮೆ ಹಾಕಿದರು. ” ಕಿರಿಕ್‌ ಪಾರ್ಟಿʼ ನನ್ನ ಮೊದಲ ಸಿನಿಮಾ. ಆ ಸಿನಿಮಾ ದೊಡ್ಡ ಸಕ್ಸಸ್‌ ಕಂಡಿತು. ಅಲ್ಲಿಂದ ನನಗೆ ನನ್ನ ಕೆರಿಯರ್‌ ಮುಖ್ಯ ಎನಿಸಿತು. ಮೇಲಾಗಿ ನನಗೇನು ಆಗ ಮದುವೆ ಆಗುವ ವಯಸ್ಸಲ್ಲ ಎಂದರು. ಅದು ಸರಿ, ಮದುವೆ ಪ್ಲಾನ್‌ ಏನು? ಎನ್ನುವ ಮರು ಪ್ರಶ್ನೆಗೆ ” ನಂಗೂ ಗೊತ್ತಾಗ್ತಿದೆ, ವಯಸ್ಸಾಗ್ತಿದೆ ಅಂತ, ನೋಡೋಣ ಮುಂದೆʼ ಎಂದರು. ಸದ್ಯ ಅವರೀಗ ʼಪೊಗರುʼ ಚಿತ್ರದ ಪ್ರಮೋಷನ್‌ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದಾರೆ.

Categories
ಸಿನಿ ಸುದ್ದಿ

ಭಾರತ ರೈತರ ಪರ ಮಾತಾಡಿದ ಹಾಲಿವುಡ್ ನಟಿಗೆ ರೇಪ್‌-ಕೊಲೆ ಬೆದರಿಕೆ!

ಹಾಲಿವುಡ್‌ ನಟಿ, ಸಾಮಾಜಿಕ ಹೋರಾಟಗಾರ್ತಿ ಜಮೀಲಾ ಬಿಚ್ಚಿಟ್ಟ ಸತ್ಯ 

ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟದ ವಿಚಾರವಾಗಿ ಬಹಳಷ್ಟು ನಟಿಮಣಿಯರು ಸ್ಟೇಟ್ ಮೆಂಟ್ ಗಳನ್ನು ನೀಡಿದ್ದು ಗೊತ್ತೇಇದೆ. ಆ ಕುರಿತಂತೆ ಸಾಕಷ್ಟು ಸ್ಟಾರ್‌ಗಳು ಸಹ ಟ್ವೀಟ್‌ ಮಾಡಿದ್ದಾರೆ. ಇತ್ತೀಚೆಗೆ ಕನ್ನಡದ ನಟಿ ಪ್ರಣೀತಾ ಟ್ವೀಟ್‌ ಮಾಡಿದ್ದರು. ಈಗ ಹಾಲಿವುಡ್‌ ನಟಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಎಂದೇ ಗುರುತಿಸಿಕೊಂಡಿರುವ ಜಮೀಲಾ ಹಾಗೊಂದು ಟ್ವೀಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ, ಟ್ವೀಟ್‌ ಮಾಡಿದ ನಂತರ ಕರಾಳ ಸತ್ಯವೊಂದನ್ನೂ ಬಿಚ್ಚಿಟ್ಟಿದ್ದಾರೆ.

ಹೌದು, ಭಾರತದ ರೈತರ ಬಗ್ಗೆ ಮಾತನಾಡಿದ ನಟಿ ಜಮೀಲಾ ಅವರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬಂದಿವೆಯಂತೆ. ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಜಮೀಲಾ, ” ನಾನೂ ಮನುಷ್ಯಳು” ಎಂದು ಟ್ವೀಟರ್ ನಲ್ಲಿ ಹಾಕಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ʼಪೊಗರುʼ ನಂತರ ಕನ್ನಡದಲ್ಲಿ ನಟಿ ರಶ್ಮಿಕಾ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಯಾವುದು?

ಆಗಸ್ಟ್‌ ವರೆಗೂ ಕನ್ನಡದವರಿಗೆ ಸಿಗಲ್ಲ ಅಂದ್ರು ʼಕಿರಿಕ್‌ ಪಾರ್ಟಿʼ ಚೆಲುವೆ ರಶ್ಮಿಕಾ ಮಂದಣ್ಣ

ʼಕಿರಿಕ್‌ ಪಾರ್ಟಿʼ ಚಿತ್ರದ ಖ್ಯಾತಿಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಅಭಿನಯಿಸಿರುವ “ಪೊಗರುʼ ಚಿತ್ರ ಇದೇ ತಿಂಗಳು ೧೯ ರಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ. “ಯಜಮಾನʼ ಚಿತ್ರದ ನಂತರ ರಶ್ಮಿಕಾ ಇದೇ ಮೊದಲು ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೀಗ ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ ಅಂತೆಲ್ಲ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಮತ್ತೆ ಯಾವ ಸ್ಟಾರ್‌ ಜತೆಗೆ ಕಾಣಸಿಕೊಳ್ಳಬಹುದು? ಅವರ ಮುಂದಿನ ಸಿನಿಮಾ ಯಾವುದು ? ಸಿನಿ ಪ್ರೇಕ್ಷಕರಿಗೆ ಇಂತಹ ಕುತೂಹಲ ಇರುವುದು ಸಹಜವೇ. ಆದರೆ ಮುಂದಿನ ಆರು ತಿಂಗಳ ಕಾಲ ಅವರು ಕನ್ನಡಕ್ಕೆ ಲಭ್ಯ ಇಲ್ಲ. ಹಾಗೊಂದು ವೇಳೆ ಅವರು ಕನ್ನಡದಲ್ಲಿ ಯಾವುದಾದರೂ ಸಿನಿಮಾ ಒಪ್ಪಿಕೊಂಡು ಮತ್ತೆ ಇಲ್ಲಿ ಕಾಣಸಿಕೊಳ್ಳುವುದಾದರೆ ಅದು ಆಗಸ್ಟ್‌ ತಿಂಗಳ ನಂತರವೇ ಅಂತೆ. ಅಂತಹದೊಂದು ಸಂಗತಿಯನ್ನು ನಟಿ ರಶ್ಮಿಕಾ ಮಂದಣ್ಣ ಅವರೇ ರಿವೀಲ್‌ ಮಾಡಿದ್ದಾರೆ.

“ಪೊಗರುʼ ಚಿತ್ರದ ರಿಲೀಸ್‌ ಪ್ರಮೋಷನ್‌ ಹಿನ್ನೆಲೆಯಲ್ಲಿ ಶನಿವಾರ “ಮೀಟ್‌ ದಿ ಮೀಡಿಯಾʼ ಕಾರ್ಯಕ್ರಮದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದರು. ʼಪೊಗರುʼ ನಂತರ ಕನ್ನಡದಲ್ಲಿ ನಿಮ್ಮ ಮುಂದಿನ ಪ್ರಾಜೆಕ್ಟ್‌ ಯಾವುದು ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಸದ್ಯಕ್ಕೆ ನಾನು ಒಪ್ಪಿಕೊಂಡ ಪ್ರಾಜೆಕ್ಟ್ ಶೆಡ್ಯೂಲ್‌ ಪ್ರಕಾರ ಜುಲೈ – ಆಗಸ್ಟ್‌ ತಿಂಗಳವರೆಗೂ ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಸಮಯ ಇಲ್ಲ. ಅದುವರೆಗೂ ನಾನು ಶೂಟಿಂಗ್‌ ಜಾಮ್‌ ಪ್ಯಾಕ್.‌ ಅವೆಲ್ಲ ಮುಗಿಯೋದಿಕ್ಕೆ ಕನಿಷ್ಟ ಆರು ತಿಂಗಳು ಬೇಕೇ ಬೇಕು. ಆಮೇಲೆ ಸಮಯ ಸಿಕ್ಕಾಗ ಕನ್ನಡದಲ್ಲಿ ಕಥೆ ಕೇಳಿ, ಹೊಸ ಪ್ರಾಜೆಕ್ಟ್‌ ಒಪ್ಪಿಕೊಳ್ಳೋಣ ಅಂದುಕೊಂಡಿದ್ದೇನೆʼ ಎನ್ನುತ್ತಾರೆ ರಶ್ಮಿಕಾ.

ಹಾಗಾದ್ರೆ ಕನ್ನಡಕ್ಕೆ ನೀವು ʼದುಬಾರಿʼಯಾದ್ರಾ ಎನ್ನುವ ಮತ್ತೊಂದು ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ ರೀತಿಯೇ ಅದ್ಭುತ. ” ಅಯ್ಯೋ, ನಾನು ಕನ್ನಡತಿ. ಇಲ್ಲಿಯೇ ನಂಗೆ ನೇಮ್-ಫೇಮ್‌ ಸಿಕ್ಕಿದ್ದು. ಇಲ್ಲಿ ನಾನು ಅಭಿನಯಿಸುವುದಿಲ್ಲ ಎನ್ನುತ್ತೇನಾ? ಸದ್ಯಕ್ಕೀಗ ಬೇರೆ ಬೇರೆ ಭಾಷೆಯ ಸಿನಿಮಾಗಳ ಅವಕಾಶ ಬಂದಿವೆ. ಆ ಸಿನಿಮಾಗಳ ಶೂಟಿಂಗ್‌ ಶೆಡ್ಯೂಲ್‌ ಕೊಟ್ಟಿದ್ದೇನೆ. ಹಾಗಾಗಿ ಕನ್ನಡದಲ್ಲಿನ ಆಫರ್ ಗಳ ಬಗ್ಗೆ ಹೆಚ್ಚು ಗಮನ ನೀಡಲು ಆಗುತ್ತಿಲ್ಲವಷ್ಟೇ. ಮುಂದೆ ಅದಕ್ಕಾಗಿಯೇ ಒಂದಷ್ಟು ಸಮಯ ಫಿಕ್ಸ್‌ ಮಾಡಿಕೊಳ್ಳುತ್ತಿದ್ದೇನೆ. ಆಗ ಯಾವುದಾದರೂ ಒಳ್ಳೆಯ ಕತೆ ಸಿಕ್ಕರೆ ಖಂಡಿತಾ ಇಲ್ಲಿ ನಟಿಸುತ್ತೇನೆʼ ಎನ್ನುತ್ತಾರೆ ರಶ್ಮಿಕಾ ಮಂದಣ್ಣ.

Categories
ಸಿನಿ ಸುದ್ದಿ

ಖುಷ್‌ ಖುಷಿಯಲಿ… ಕೇರಳದಲ್ಲಿ ಖುಷಿ ಹಾಡು

ಪ್ರೇಮಿಗಳ ದಿನಕ್ಕೆ ಆಲ್‌ ಓಕೆ ‌ ಗಿಫ್ಟ್

ಹೊಸ ಆಲ್ಬಂ ಸಾಂಗ್‌ಗೆ ಖುಷಿ ಹೆಜ್ಜೆ

ಕನ್ನಡದಲ್ಲಿ “ದಿಯಾ” ಅನ್ನುವ ಸಿನಿಮಾ ಹೊಸದೊಂದು ಕ್ರೇಜ್‌ ಹುಟ್ಟಿಸಿದ್ದು ಎಲ್ಲರಿಗೂ ಗೊತ್ತು.  ವಿಷಯ ಏನೆಂದರೆ, “ದಿಯಾ” ಸಿನಿಮಾ ನಾಯಕಿ ಖುಷಿ ಆ ಸಿನಿಮಾ ಬಳಿಕ ಸಾಕಷ್ಟು ಖುಷಿಯಲ್ಲಿರೋದಂತು ನಿಜ.

ಅದಾದ ಮೇಲೆ ಒಂದೊಂದೇ ಸಿನಿಮಾಗಳು ಅವರನ್ನು ಹುಡುಕಿ ಬಂದಿದ್ದು ನಿಜ. “ದಿಯಾ” ಕನ್ನಡದ ಮಟ್ಟಿಗೆ ವಿಶೇಷವಾದ ಚಿತ್ರ. ಈಗೇಕೆ “ದಿಯಾʼ ಕುರಿತ ಸುದ್ದಿ ಅಂದರೆ, ಆ ಸಿನಿಮಾದ ನಾಯಕಿ ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿರುವುದಷ್ಟೇ ಅಲ್ಲ, ಅವರೀಗ  ಕೇರಳದ  ರೆಸಾರ್ಟ್‌ವೊಂದರಲ್ಲಿ ‌ಬೀಡು ಬಿಟ್ಟಿದ್ದಾರೆ. ಆಲ್‌ ಓಕೆ (ಅಲೋಕ್)‌ ಅವರ ಹೊಸ ಆಲ್ಬಂ ಸಾಂಗ್‌ವೊಂದರಲ್ಲಿ ತೊಡಗಿಕೊಂಡಿದ್ದು, ಚಿತ್ರೀಕರಣ ಅಲ್ಲೀಗ ಜೋರಾಗಿ ನಡೆಯುತ್ತಿದೆ. ಅದು ವ್ಯಾಲೆಂಟೈನ್ಸ್ ಡೇ ‌ಗಾಗಿಯೇ ಮಾಡುತ್ತಿರುವ ಹಾಡು ಎಂದು ಹೇಳಿದ್ದಾರೆ ಖುಷಿ. ಆ ಹಾಡಿನ ಕೆಲ ಫೋಟೋಗಳನ್ನು ಅವರು ಟ್ವೀಟ್‌ ಮಾಡಿದ್ದಾರೆ.

ಆಲ್ಬಂ ಸಾಂಗ್‌ಗಾಗಿ ಅವರು ಸದ್ಯ ಕೇರಳದಲ್ಲಿದ್ದಾರೆ. ಬಿಡುವಿನ ಸಮಯ ನೋಡಿಕೊಂಡು, ಹಾಡಿನ ಫೋಟೋಗಳನ್ನು ಟ್ವಿಟ್ಟರ್‌‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಫ್ಯಾನ್ಸ್‌ ಸದ್ಯಕ್ಕೆ ಅವರ ಕಲರ್‌ಫುಲ್‌ ಫೋಟೋಗಳನ್ನು ನೋಡಿ ಖುಷ್‌ ಖುಷಿಯಾಗಿದ್ದಾರೆ. ದಿ ಕೇಕ್‌ ಎನ್ನುವುದು ಆ ಆಲ್ಬಂ ಸಾಂಗ್‌ ಹೆಸರು. ಅಲೋಕ್‌ ಹಾಗೂ ಖುಷಿ ಅವರೊಂದಿಗೆ  “ಕೆಜಿಎಫ್‌ʼ ಖ್ಯಾತಿಯ ‌ಜಾನ್‌ ‌ ಕೊಕೆನ್  ಇಲ್ಲಿ ಗೆಸ್ಟ್‌ ಆಫಿರಿಯನ್ಸ್‌ ಮಾಡಿದ್ದಾರೆ. ‌  ಇದು ವ್ಯಾಲೆಂಟೈನ್ಸ್ ಡೇ ಗೆ ರಿಲೀಸ್ ಆಗಲಿದೆ.ಸದ್ಯ ಈ ಸಾಂಗ್‌  ಗೆ  ಕೇರಳದ ವಯನಾಡ್ ನಲ್ಲಿ  ಚಿತ್ರೀಕರಣ ನಡೆಯುತ್ತಿದೆ. ಮೂರು ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ.  ಕನ್ನಡ, ತೆಲುಗು, ತಮಿಳಿನಲ್ಲಿ ಮೂಡಿಬರಲಿದೆ. ಚಿತ್ರೀಕರಣದ ಅನುಭವ ಹೇಳಿಕೊಂಡಿರುವ ನಟಿ ಖುಷಿ, ಬೇರೆ ಬೇರೆ ಭಾಷೆಯ ನಟರನ್ನು ಭೇಟಿಯಾಗುವ ಅವಕಾಶ ದೊರಕಿತು. ರೆಸಾರ್ಟ್ ತುಂಬಾ ಬ್ಯೂಟಿಫುಲ್ ಎಂದು ಖುಷಿ ಖುಷಿ ವ್ಯಕ್ತಪಡಿಸಿದರು.

Categories
ಸಿನಿ ಸುದ್ದಿ

ʼ ಕಾಂಟ್ರೋವರ್ಸಿ ಇಲ್ಲ ಅಂದ್ರೆ ಈ ನಟಿಗೆ ಸಿಕ್ಕಾಪಟ್ಟೆ ಬೇಸರವಂತೆ ʼ

ನ್ಯಾಷನಲ್‌ ಕ್ರಷ್‌ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹೀಗೇಕೆ ಹೇಳಿದ್ರು….


ನಟಿ ರಶ್ಮಿಕಾ ಮಂದಣ್ಣಗೆ ಈಗ ಕಾಂಟ್ರೋವರ್ಸಿ ಬೇಕೇ ಬೇಕು. ಅದಿಲ್ಲ ಅಂದ್ರೆ ಅವರಿಗೆ ಬೇಜಾರಾಗುತ್ತಂತೆ. ಹೀಗಂತ ಹೇಳಿದ್ದು ಬೇರಾರೂ ಅಲ್ಲ, ಖುದ್ದು ಅವರೇ ಇದನ್ನು ಹೇಳಿಕೊಂಡು ನಗೆ ಬೀರಿದ್ದು ವಿಚಿತ್ರ ಎನಿಸಿತು.
ಇಷ್ಟಕ್ಕೂ ಅವರು ಈ ರೀತಿ ಹೇಳಿದ್ದು ಶನಿವಾರ ʼಪೊಗರುʼ ಚಿತ್ರದ ಮೀಟ್‌ ದಿ ಮೀಡಿಯಾ ಕಾರ್ಯಕ್ರಮದಲ್ಲಿ. ಸೋಷಲ್‌ ಮೀಡಿಯಾದಲ್ಲಿ ತಮ್ಮ ಬಗ್ಗೆ ದಿನನಿತ್ಯ ಕಾಣಿಸಿಕೊಳ್ಳುವ ಕಾಂಟ್ರೋವರ್ಸಿಗಳ ಕುರಿತ ಪ್ರಶ್ನೆಗೆ ನಗುತ್ತಲೇ ಪ್ರತಿಕಿಯಿಸಿದ ನಟಿ ರಶ್ಮಿಕಾ ಮಂದಣ್ಣ, ಅವುಗಳಿಗೆಲ್ಲ ನಾನು ಹೆಚ್ಚು ತಲೆ ಕಡೆಸಿಕೊಳ್ಳುವುದಿಲ್ಲ. ದಿನಿ ನಿತ್ಯ ಮಾಡೋದಿಕ್ಕೆ ಸಾಕಷ್ಟು ಕೆಲಸ ಇರುತ್ತದೆ ಎಂದರು.

 

” ಮೊದಲೆಲ್ಲ ಅಂದ್ರೆ ಕಿರಿಕ್‌ ಪಾರ್ಟಿ ಬಂದು ಹೋದ ನಂತರದ ದಿನಗಳಲ್ಲಿ ನನ್ನ ಬಗೆಗಿನ ಯಾವುದಾದರೂ ಕಾಂಟ್ರೋವರ್ಸಿ ವಿಷಯ ಕಿವಿ ಬಿದ್ದರೆ ಸಿಕ್ಕಾಪಟ್ಟೆ ಬೇಸರ ಆಗುತ್ತಿತ್ತು. ಇದ್ಯಾಕೆ ಹೀಗೆ ಜನ ಏನೇನು ಗಾಸಿಪ್‌ ಹಬ್ಬಿಸುತ್ತಿದ್ದಾರೆ, ಇವರಿಗೇನು ಕೆಲಸ ಇಲ್ಲವೇ ಅಂತೆಲ್ಲ ತಲೆಕೆಡಿಸಿಕೊಂಡು, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೆ. ಆದ್ರೆ ಈಗ ಅದೆಲ್ಲವನ್ನು ಪಾಸಿಟಿವ್‌ ಆಗಿಯೇ ತೆಗೆದುಕೊಂಡಿದ್ದೇನೆ. ದಿನ ಸುದ್ದಿಯಲ್ಲಿರಬೇಕಾದ್ರೆ ಅಂತಹ ಕಾಂಟ್ರೋವರ್ಸಿ ಇರಬೇಕು ಅಂತೆನಿಸುತ್ತದೆ. ಅದೂ ಇದ್ದಾಗಲೇ ನಾವು ಕೂಡ ಇಲ್ಲಿ ಸಕ್ರಿಯವಾಗಿದ್ದೇವೆ ಅಂತೆನಿಸುತ್ತದೆ ʼ ಅಂತ ನಟಿ ರಶ್ಮಿಕಾ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

 

ಹಾಗಾದ್ರೆ ಕಾಂಟ್ರೋವರ್ಸಿಗಳನ್ನ ಪಾಸಿಟಿವ್‌ ತೆಗೆದುಕೊಳ್ಳುತ್ತಿದ್ದೀರಿ ಅಂತನಾ ಎನ್ನುವ ಮರು ಪ್ರಶ್ನೆಗೆ, ರಶ್ಮಿಕಾ ಉತ್ತರ ಅಷ್ಟೇ ಬುದ್ಧಿವಂತಿಕೆಯಿಂದಲೇ ಉತ್ತರಿಸಿದರು.” ಪಾಸಿಟಿವ್‌ ಅಂತಲ್ಲ. ಸೋಷಲ್‌ ಮೀಡಿಯಾದಲ್ಲಿ ಅದನ್ನೇ ಕಿಯೇಟ್‌ ಮಾಡೋದಿಕ್ಕೆ ಒಂದಷ್ಟು ಜನರು ಇರುವಾಗ ನಾವು ಅವರಿಗೆ ಏನೇ ಉತ್ತರ ಕೊಟ್ಟರು ಕೂಡ ಅದು ಕಾಂಟ್ರೋವರ್ಸಿಯಾಗಿಯೇ ಇರುತ್ತದೆ. ಹಾಗಾಗಿ ಅವರಿಗೆ ಪ್ರತಿಕ್ರಿಯಿಸಿ ನಾವು ಸಣ್ಣರಾಗುವುದಕ್ಕಿಂತ ಸುಮ್ಮನಿರುವುದೇ ಉತ್ತಮ ಅಲ್ಲವೇ ಎನ್ನುವ ಮೂಲಕ ರಶ್ಮಿಕಾ ತುಂಬಾ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

Categories
ಸಿನಿ ಸುದ್ದಿ

ಅಷ್ಟೊಂದು ಸಂಭಾವನೆ ಸಿಕ್ಕರೆ ನಂಗೂ ಖುಷಿ ಅಲ್ವೇ…?

ಟಾಲಿವುಡ್‌ ನಲ್ಲಿ ರಶ್ಮಿಕಾಗೆ 2 ಕೋಟಿ ಸಂಭಾವನೆಯಂತೆ ಎನ್ನುವ ಪ್ರಶ್ನೆಗೆ ಅಚ್ಚರಿಪಟ್ಟಿದ್ದು ಯಾರು ಗೊತ್ತಾ?

ನ್ಯಾಷನಲ್‌ ಕ್ರಷ್‌ ಅಂತಲೇ ಜನಪ್ರಿಯತೆ ಪಡೆದಿರುವ ಕಿರಿಕ್‌ ಪಾರ್ಟಿ ಚಿತ್ರದ ಖ್ಯಾತಿಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಹುಭಾಷೆಗಳಲ್ಲಿ ಬಹು ಬೇಡಿಕೆಯ ನಟಿ. ವಿಶೇಷವಾಗಿ ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಮನೆ ಮಾತಾದ ಜನಪ್ರಿಯ ತಾರೆ. ಈಗ ಅಲ್ಲಿ ಅವರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು? ಒಂದು ಸಿನಿಮಾಕ್ಕೆ ಅಲ್ಲಿ ಅವರು ಪಡೆಯುತ್ತಿರುವ ಸಂಭಾವನೆ ಎರಡು ಕೋಟಿ ಎನ್ನುವುದು ನಿಜವೇ?

ಅಧಿಕೃತವಾಗಿ ಅದು ಯಾರಿಗೂ ಗೊತ್ತಿಲ್ಲ. ಆದರೆ ಸೋಷಲ್‌ ಮೀಡಿಯಾದಲ್ಲಿ ಅವರ ಸಂಭಾವನೆ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌ ನಲ್ಲಿ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ೨ ಕೋಟಿ. ಹಾಗಾದ್ರೆ ಇದು ನಿಜವೇ? ಇದಕ್ಕೆ ಖುದ್ದು ನಟಿ ರಶ್ಮಿಕಾ ಮಂದಣ್ಣ ಅವರು ಹೇಳುವುದೇನು?

ಶನಿವಾರ ʼಪೊಗರುʼ ಚಿತ್ರದ ಮೀಟ್‌ ದಿ ಮೀಡಿಯಾ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಅವರಿಗೆ ಈ ಪ್ರಶ್ನೆ ಎದುರಾಯಿತು. ಟಾಲಿವುಡ್‌ ನಲ್ಲಿ ನೀವು ಒಂದು ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು? ಎರಡು ಕೋಟಿ ಇದೆ ಎನ್ನುವುದು ನಿಜವೇ ? ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವ ಮುನ್ನ ನಟಿ ರಶ್ಮಿಕಾ ಮಂದಣ್ಣ ಜೋರಾಗಿ ನಕ್ಕರು.


“ಅಯ್ಯೋ,, ಅಷ್ಟೊಂದು ಸಂಭಾವನೆ ಸಿಕ್ಕರೆ ನಂಗೂ ಖುಷಿ ಅಲ್ವೇ? ಹಾಗೆಲ್ಲ ಹೇಳಿದರು, ಹೇಳುತ್ತಿರುವವರು ಯಾರೋ ನಂಗೆ ಗೊತ್ತಿಲ್ಲ. ಆದ್ರೆ ನನ್ನ ಪ್ರಕಾರ ಅದೆಲ್ಲ ಸುಳ್ಳು. ವಾಸ್ತವದಲ್ಲಿ ಅಷ್ಟೊಂದು ಸಂಭಾವನೆ ಪಡೆಯುತ್ತಿರುವ ನಟಿ ನಾನಲ್ಲ. ಒಂದು ವೇಳೆ ಅಷ್ಟು ಸಂಭಾವನೆ ಸಿಕ್ಕಿದ್ದರೆ ನಿಜಕ್ಕೂ ಅದು ನಂಗೂ ಖುಷಿ ನೀಡುತ್ತಿತ್ತು.

ಆದರೆ ಅದೆಲ್ಲ ಅಪಪ್ರಚಾರ ಮಾತ್ರ. ಅದರಿಂದಲೇ ಅಲ್ವೇ, ನಮ್ಮ ಮನೆ ಮೇಲೆ ಐಟಿ ದಾಳಿ ನಡೆದಿದ್ದು. ಇದೆಲ್ಲದ್ದಕ್ಕೂ ನಾನು ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಿಲ್ಲ. ಆದರೆ ಅಷ್ಟೊಂದು ಸಂಭಾವನೆ ಬೇಕೆಂದು ಅಲ್ಲಿ ನಾವೇ ಡಿಮ್ಯಾಂಡ್‌ ಮಾಡಿದರೂ ಅಲ್ಲಿ ಕೊಡುವವರು ಇಲ್ಲ. ಅವರಿಗೂ ಗೊತ್ತು, ಯಾರಿಗೆ ಎಷ್ಟೇಲ್ಲ ಡಿಮ್ಯಾಂಡ್‌ ಇದೆ, ಎಷ್ಟು ಕೊಡಬೇಕು ಅಂತ. ನಾವು ಕೇಳಿದಷ್ಟನ್ನೇ ಕೊಡುವುದಕ್ಕೂ ಕೂಡ ಬೇರೆ, ಬೇರೆ ನಟಿಯರನ್ನು ಮಾದರಿಯಾಗಿ ತೋರಿಸುತ್ತಾರೆ. ಅವರೇ ಅಷ್ಟೊಂದು ಕಡಿಮೆ ಸಂಭಾವನೆ ಪಡೆಯುವಾಗ, ನೀವ್ಯಾಕೆ ಇಷ್ಟೊಂದು ಕೇಳ್ತೀರಾ ಅಂತಾರೆʼ ಎನ್ನುವ ಮಾತುಗಳ ಮೂಲಕ ಸಂಭಾವನೆ ಹಿಂದಿನ ಗುಟ್ಟು ರಟ್ಟು ಮಾಡಲು ನಿರಾಕರಿಸಿದರು.

error: Content is protected !!