Categories
ಸಿನಿ ಸುದ್ದಿ

ಸುದೀಪ್ 25ರ ಸಂಭ್ರಮಕ್ಕೆ ಬೆಳ್ಳಿ ನಾಣ್ಯ ಬಿಡುಗಡೆ

ಸುದೀಪ್ ಸಾಂಸ್ಕೃತಿಕ ಪರಿಷತ್ ನಿಂದ ಒಂದು ಸಾವಿರ ಬೆಳ್ಳಿ ನಾಣ್ಯ

ಕನ್ನಡ ಚಿತ್ರರಂಗಕ್ಕೆ ಸುದೀಪ್ ಪಾದಾರ್ಪಣೆ ಮಾಡಿ 25 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ “ಸುದೀಪ್ ಸಾಂಸ್ಕೃತಿಕ ಪರಿಷತ್ತು ಆ ಸಂಭ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.
ಚಿತ್ರರಂಗದಲ್ಲಿ ಅನೇಕ ಯಶಸದವಿ ಸಿನಿಮಾಗಳನ್ನು ನೀಡಿರುವ ಸುದೀಪ್ ಅವರ ವೃತ್ತಿ ಜೀವನದ ಅವಿಸ್ಮರಣೆಗಾಗಿ “ಸುದೀಪ್ ಸಾಂಸ್ಕೃತಿಕ ಪರಿಷತ್ತು ವಿಶೇಷ 25 ಗ್ರಾಮ್ ನ 1000 ಬೆಳ್ಳಿ ನಾಣ್ಯವನ್ನು ಬಿಡುಗಡೆ ಮಾಡಲಿದೆ.


ಈ ಸಂದರ್ಭದಲ್ಲಿ ಸುದೀಪ್ ರವರಿಗೆ ಉಡುಗೊರೆಯಾಗಿ 100 ಗ್ರಾಮ್ ಬೆಳ್ಳಿ ನಾಣ್ಯವನ್ನು ಕೊಡಲು ಪರಿಷತ್ ನಿರ್ಧರಿಸಿದೆ.
ಸುದೀಪ್ ಅವರ ವೃತ್ತಿ ಜೀವನದ 25 ವರ್ಷಗಳನ್ನು ಸ್ಮರಿಸುವ ಅವರ ಭಾವಚಿತ್ರವಿರುವ “25 ಗ್ರಾಮ್ ಬೆಳ್ಳಿ ನಾಣ್ಯಗಳನ್ನು ಅಭಿಮಾನಿಗಳಿಗಾಗಿಯೇ ರೆಡಿ ಮಾಡಲಾಗಿದೆ.

Categories
ಸಿನಿ ಸುದ್ದಿ

ಎಂಬಿಎ ಹುಡುಗರ ಪೋಲಿ ಪ್ರೇಮ ಪುರಾಣ – ಮಾರ್ಚ್‌ 4 ರಂದು ತೆರೆಗೆ ಬರುತ್ತಿದೆ ಎಂಬಿಎ ಭಾಗ್ಯ ಅನ್‌ ಲಿಮಿಟೆಡ್‌ ಚಿತ್ರ !.

ಹೆಚ್ ಪಿ  ನಿರ್ದೇಶನದ ಸಿನಿಮಾ, ಹೆಚ್ ಪಿ ಅಂದ್ರೇನು? ನಿರ್ದೇಶಕರು ಅದು ನಿಗೂಢ ಎನ್ನುವುದೇಕೆ?

ಎಂಬಿಎ ಅನ್ನೋದೊಂದು ಸಿನಿಮಾ ಹೆಸರು. ಎಂಬಿಎ ಅಂದ್ರೆ ನಿಮಗೆಲ್ಲ ಇದುವರೆಗೂ ಗೊತ್ತಿರೋದು ಇದೊಂದು ಸ್ಟಡಿ ಕೋರ್ಸ್‌ ಅಂತ. ಅದ್ರೆ ಹೊಸಬರ ಒಂದು ತಂಡ , ಈಗ ಅದೇ ಹೆಸರಲ್ಲಿ ಒಂದು ಸಿನಿಮಾ ಮಾಡಿ ರಿಲೀಸ್‌ ರೆಡಿ ಆಗಿದೆ. ಎಂಬಿಎ ಹೆಸರಿನ ಚಿತ್ರದ ಶೀರ್ಷಿಕೆಗೆ ” ಭಾಗ್ಯ ಅನ್ ಲಿಮಿಟೆಡ್‌..ʼ ಅನ್ನೋದು ಟ್ಯಾಗ್‌ ಲೈನ್ ಇದೆ. ಹೆಚ್‌ ಪಿ ಎನ್ನುವವರು ಇದರ ನಿರ್ದೇಶಕ.
ಎಸ್.‌ ನಾರಾಯಣ್‌ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ಈಗ ಅವರೇ ಸ್ವತಂತ್ರ ನಿರ್ದೇಶಕರಾಗಿ “ಎಂಬಿಎʼ ಹೆಸರಿನ ಚಿತ್ರದ ಮೂಲಕ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿಮಗೆ ಗೊತ್ತಿರುವ ಹಾಗೆ ಎಂಬಿಎ ಅಂದ್ರೆ ಮಾಸ್ಟರ್‌ ಆಫ್‌ ಬಿಸಿನೆಸ್‌ ಆಡ್ಮಿನಿಸ್ಟ್ರೇಷನ್‌ ಅಂತ. ಆದ್ರೆ ಇಲ್ಲಿ ಎಂಬಿಎ ಎನ್ನುವ ಶೀರ್ಷಿಕೆಯ ಫುಲ್‌ ಫಾರ್ಮ್‌ ಬೇರೇನೆ ಇದೆಯಂತೆ. ಅದೇನು ಅಂತ ಗೊತ್ತಾಗಬೇಕಾದ್ರೆ, ಸಿನಿಮಾ ನೋಡ್ಬೇಕು ಅಂತಾರೆ ನಿರ್ದೇಶಕರು.


ಹಾಗಂತ ಇದೇನು ಕಾಲೇಜಿಗೆ ಸಂಬಂಧಿಸಿದ ಕಥಾ ಹಂದರ ಚಿತ್ರವಲ್ಲವೇ ಅಂತ ಭಾವಿಸಬೇಕಿಲ್ಲ. ಕಾಲೇಜಿನಲ್ಲಿ ನಡೆಯುವ ಸಸ್ಪೆನ್ಸ್‌, ಥ್ರಿಲ್ಲರ್‌ ಹಾಗೂ ಮರ್ಡರ್‌ ಮಿಸ್ಟರಿಯ ಕಥಾ ಹಂದರದ ಚಿತ್ರ ಇದು. ಅಲ್ಲಿ ಪ್ರೀತಿ ಇದೆ, ರೋಮಾನ್ಸ್‌ ಇದೆ, ಸೆಟಿಮೆಂಟ್‌ ಇದೆ, ಆಕ್ಷನ್‌ ಇದೆ ಎನ್ನುತ್ತಾರೆ ನಿರ್ದೇಶಕ ಹೆಚ್.ಪಿ.
ಚಿತ್ರದ ಶೀರ್ಷಿಕೆಯ ಹಾಗೆಯೇ ಇಲ್ಲಿ ಇನ್ನೊಂದು ಕುತೂಹಲ ನಿರ್ದೇಶಕರ ಹೆಸರಿಗೆ ಸಂಬಂಧಿಸಿದ್ದು. ಹೆಚ್‌ ಪಿ ಅನ್ನೋದು ಅವರ ಹೆಸರು. ಅದರ ಫುಲ್‌ ಫಾರ್ಮ್‌ ಏನು ಅಂತ ಪ್ರಶ್ನಿಸಿದರೆ, ಅದೆಲ್ಲ ಬೇಡ ಸರ್‌, ಆ ಕತೆ ಬೇರೆಯಿದೆ ಅಂತಾರೆ ನಿರ್ದೇಶಕ. ಹೊಸ ಪ್ರತಿಭೆಗಳಾದ ಪುನೀತ್‌ ಗೌಡ, ಗೂಳಿಸೋಮ, ಕಾವ್ಯ ಗೌಡ, ಸೌಮ್ಯ ಶಾನ್‌ಬೋಗ್‌ ಈ ಚಿತ್ರದ ಪ್ರಮುಖ ಕಲಾವಿದರು. ಸದ್ಯಕ್ಕೆ ಚಿತ್ರ ತಂಡ ಟ್ರೀಲರ್‌ ಲಾಂಚ್‌ ಮಾಡುವ ಮೂಲಕ ಸದ್ದು ಮಾಡಿದೆ. ಎರಡು ವರ್ಷಗಳ ಹಿಂದೆಯೇ ಶುರುವಾಗಿದ್ದ ಈ ಚಿತ್ರಕ್ಕೆ ಈಗ ಬಿಡುಗಡೆಯ ಕಾಲ ಕೂಡಿ ಬಂದಿದೆ. ಟ್ರೇಲರ್‌ ಲಾಂಚ್‌ ಗೆ ಹೆಸರಾಂತ ಸಂಭಾಷಣಾಕಾರ ಮಳ್ಳವಳ್ಳಿ ಸಾಯಿ ಕೃಷ್ಣ ಆಗಮಿಸಿದ್ದರು. ಟ್ರೇಲರ್‌ ಲಾಂಚ್‌ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು.


ಸರಿ ಸುಮಾರು ಎರಡು ನಿಮಿಷಗಳಷ್ಟು ಅವಧಿಯ ಟ್ರೇಲರ್‌ನಲ್ಲಿ ಬರೀ ಪೋಲಿ ಮಾತುಗಳೇ ತುಂಬಿಕೊಂಡಿವೆ.

ಸೆನ್ಸಾರ್‌ ನಿಂದ ಈ ಚಿತ್ರಕ್ಕೆ ಎ ಸರ್ಟಿಫಿಕೇಟ್‌ ಸಿಕ್ಕಿದೆ.  ಸಿನಿಮಾ ಮುಖ್ಯವಾಗಿ ಕಾಲೇಜು ಹುಡುಗರ ಪ್ರೀತಿ, ಪ್ರೇಮ, ಹೊರಳಾಟ, ತೊಳಲಾಟ, ಒದ್ದಾಟಗಳ ಕತೆ ಹೇಳುತ್ತದೆ. ಹಾಗೆಯೇ ಈಗಿನ ಯುವ ಜನತೆಗೆ ಒಂದು ಸಂದೇಶ ನೀಡುತ್ತದೆ. ಹಾಗಾಗಿಯೇ ಸೆನ್ಸಾರ್‌ ಕಡೆಯಿಂದ ಚಿತ್ರಕ್ಕೆ ಎ ಸರ್ಟಿಫಿಕೇಟ್‌ ಸಿಕ್ಕಿದೆ ಎನ್ನುವುದು ನಿರ್ದೇಶಕ ಹೆಚ್.ಪಿ. ನೀಡುವ ಸ್ಪಷ್ಟನೆ. ನಿರ್ದೇಶಕ ಹೆಚ್.ಪಿ ಅವರೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹರ್ಷ ಕಾಗೋಡು ಸಂಗೀತ ನೀಡಿದ್ದು, ದರ್ಶನ್‌ ದೇವ್‌ ಛಾಯಾಗ್ರಹಣ ಮಾಡಿದ್ದಾರೆ. ಮರಿ ಸ್ವಾಮಿ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ನಾನು ಅನುಭವಿಸಿದ ನೋವು, ಅವಮಾನ ಯಾರಿಗೂ ಬೇಡ

ನನ್ನ ಹಾಗೆ ನೀವೂ ಕಷ್ಟ ಪಟ್ಟಿದ್ದೀರಿ, ಗೆಲ್ತೀರಿ, ಮುನ್ನುಗ್ಗಿ ಅಂದ್ರು ವಿನೋದ್‌ಪ್ರಭಾಕರ್

“ನಾನು ಅನುಭವಿಸಿದ ನೋವು, ಅವಮಾನದ ಮುಂದೆ ನಿಮ್ಮದೇನೂ ಅಲ್ಲ. ಸಾಕಪ್ಪ ಸಾಕು, ಈ ಬಣ್ಣದ ಬದುಕು ಅಂದಾಗ ಜನರು ಆಶೀರ್ವಾದ ನೀಡಿದ್ರು. ನಿಮ್ಗೆ ಇದೆಲ್ಲ ಅನುಭವ ಆಗಿಲ್ಲ. ಆದ್ರೂ ನನ್ನ ಹಾಗೆಯೇ ನೀವೂ ಕೂಡ ಕಷ್ಟಪಟ್ಟಿದ್ದೀರಿ, ಅದೇ ನಿಮ್ಗೆ ಗೆಲುವು ತಂದುಕೊಡುತ್ತದೆ. ಇಂದಲ್ಲ ನಾಳೆ ಗೆಲುವು ನಿಮ್ಮದೇ, ಮುನ್ನುಗ್ಗಿ…” ನಟ ವಿನೋದ್‌ಪ್ರಭಾಕರ್‌ಸ್ಟಾರ್‌ಆದ ಹಿಂದಿನ ತಮ್ಮ ಕಠಿಣ ಪರಿಶ್ರಮದ ಅನುಭವವನ್ನು “ಸಿನಿಲಹರಿ” ಮುಂದೆ ಹೀಗೆ ತೆರೆದಿಟ್ಟು, ನೀವು ಗೆದ್ದೇ ಗೆಲ್ತೀರಿ ಅಂತ ಹರಿಸಿದರು.

ಅವರು ಈ ಪ್ರೀತಿಯ ಮಾತುಗಳನ್ನು ಹೇಳಿದ್ದು, “ಸಿನಿ ಲಹರಿ” ಕಚೇರಿಗೆ ಭೇಟೀ ನೀಡಿದ ಸಂದರ್ಭ. ವಿನೋದ್‌ಪ್ರಭಾಕರ್‌ಈಗ ಚಂದನವನದ ಬಹು ಬೇಡಿಕೆಯ ಸ್ಟಾರ್‌ನಟ. “ಮರಿ ಟೈಗರ್‌‌” ಅಂತಾನೇ ಜನಪ್ರಿಯತೆ ಪಡೆದ ನಟ. ಫೆ.೫ ರಂದು ತೆರೆ ಕಾಣುತ್ತಿರುವ “ಶ್ಯಾಡೋ” ಸೇರಿದಂತೆ ಸಾಲು ಸಾಲು ಸಿನಿಮಾಗಳಿಗೆ ಅವರು ಹೀರೋ. ಹಾಗೆಯೇ ಈಗವರು, ದೊಡ್ಡದೊಂದು ಬ್ರೇಕಿಂಗ್‌ಸುದ್ದಿ ಕೊಡುವುದಕ್ಕೂ ರೆಡಿ ಆಗಿದ್ದಾರೆ. ಒಂದು ಮೂಲದ ಪ್ರಕಾರ, ಮುಂಬೈನ ದೊಡ್ಡ ಪ್ರೊಡಕ್ಷನ್‌ಹೌಸ್‌ನಿರ್ಮಾಣ ಮಾಡುತ್ತಿರುವ ಅದ್ದೂರಿ ವೆಚ್ಚದ ಪ್ಯಾನ್‌ಇಂಡಿಯಾ ಸಿನಿಮಾಕ್ಕೆ ವಿನೋದ್‌ಪ್ರಭಾಕರ್‌ಹೀರೋ ಅಂತೆ. ಇದಿನ್ನೂ ಕನ್ಫರ್ಮ್‌ಆಗಿಲ್ಲ. ಆದರೆ, ಆ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎನ್ನುವ ಸುದ್ದಿಯಂತೂ ಖಾತರಿ.

ಸ್ಯಾಂಡಲ್‌ವುಡ್‌ಗೆ ಇದಂತೂ ಸೆನ್ಸೇಷನ್‌ಸುದ್ದಿ. ಸದ್ಯಕ್ಕೆ ಹೀಗೆಲ್ಲ ಬ್ಯುಸಿ ಆಗಿರುವ ನಟ ವಿನೋದ್‌ಪ್ರಭಾಕರ್‌, ಇತ್ತೀಚೆಗೆ ಪತ್ನಿ ಸಮೇತ “ಸಿನಿ ಲಹರಿ” ಕಚೇರಿಗೆ ಬಂದಿದ್ದರು. ಇದೊಂದು ಔಪಚಾರಿಕ ಭೇಟಿ ಮಾತ್ರ. ನಮ್ಮ ಮೇಲಿನ ಪ್ರೀತಿ, ಅಭಿಮಾನದ ಮೇರೆಗೆ ತಮ್ಮ ಬ್ಯುಸಿ ಶೆಡ್ಯೂಲ್‌ನಡುವೆಯೂ ಕಚೇರಿಗೆ ಬಂದು ಸುಮಾರು ಅರ್ಧ ತಾಸು ಕಚೇರಿಯಲ್ಲಿದ್ದು ಒಂದಷ್ಟು ಹರಟಿದರು. “ಸಿನಿ ಲಹರಿ” ವೆಬ್‌ಸೈಟ್‌ವೀಕ್ಷಿಸಿ, ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. “ಸಿನಿಲಹರಿ”ಯಲ್ಲಿರುವ ಬರಹಗಳೇ ಅದ್ಭುತವಾಗಿವೆ. ಇಂತಹ ಗುಣಮಟ್ಟ ಮತ್ತು ನಿಖರವಾದ ವರದಿ, ಸುದ್ದಿಗಳು ಚಿತ್ರರಂಗಕ್ಕೆ ಬೇಕು” ಎಂದು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆ ನಂತರ ಸಜ್ಜುಗೊಳ್ಳುತ್ತಿರುವ “ಸಿನಿಲಹರಿ” ಸ್ಟುಡಿಯೋ ವೀಕ್ಷಿಸಿ, ಖುಷಿಯ ಜೊತೆಗೆ ಅಚ್ಚರಿ ಪಟ್ಟರು. “ಏನೋ ಸಣ್ಣದಾಗಿ ಕಚೇರಿ ಮಾಡಿಕೊಂಡಿದ್ದೀರಿ ಅನ್ಕೊಂಡ್ರೆ, ತುಂಬಾನೆ ಕಷ್ಟಪಟ್ಟು ದೊಡ್ಡ ಸ್ಟುಡಿಯೋವನ್ನೇ ಮಾಡಿದ್ದೀರಿ. ತುಂಬಾ ವರ್ಷಗಳ ಕಾಲ ಪ್ರಾಮಾಣಿಕ ಪತ್ರಿಕೋದ್ಯಮವನ್ನೇ ನಂಬಿಕೊಂಡ ಬಂದ ನೀವು, ಇವತ್ತು ಅಷ್ಟೇ ಶ್ರದ್ದೆ ಮತ್ತು ನಂಬಿಕೆಯಿಂದ ಇಷ್ಟೇಲ್ಲ ಮಾಡಿದ್ದೀರಿ ಅಂತಂದ್ರೆ ಗೆದ್ದೇ ಗೆಲ್ಲುತ್ತೀರಿ, ಒಳ್ಳೆಯದಾಗಲಿʼ ಅಂತ ಹರಸಿದರು. ಕೆಲಸ ಕಳೆದುಕೊಂಡು ನಾವು ಅನುಭವಿಸಿದ ಕ್ಷಣಗಳು, ಆನಂತರ ನಮ್ಮದೇ ಬದುಕು ಕಟ್ಟಿಕೊಳ್ಳಬೇಕೆಂದು ಆರಂಭಿಸಿದ “ಸಿನಿ ಲಹರಿʼಯ ಶುರುವಿನ ದಿನಗಳು, ಆ ನಂತರದ ಜರ್ನಿಯ ಕ್ಷಣಗಳನ್ನು ತಾಳ್ಮೆಯಿಂದ ಕೇಳಿದ ವಿನೋದ್‌ಪ್ರಭಾಕರ್‌, ನಾನು ಅನುಭವಿಸಿದ ನೋವು, ಅವಮಾನ, ನಿಂದನೆಗಳ ಮುಂದೆ ನಿಮ್ದೇನು ಅಲ್ಲ ಅಂತೆನಿಸುತ್ತೆ. ನಟ ಪ್ರಭಾಕರ್‌ಅವರ ಮಗ ಎನ್ನುವ ಪರಿಚಯ ನನಗಿದ್ದರೂ, ಅದೆಲ್ಲ ಉದ್ಯಮದ ಮುಂದೆ ವರ್ಕೌಟ್‌ಆಗಲಿಲ್ಲ. ಅದರ ಪರಿಣಾಮ ಸೋಲು, ನೋವು ನನ್ನನ್ನೇ ಹೈರಾಣಾಗಿಸಿತುʼ ಅಂತ ಒಂದು ಕ್ಷಣ ಭಾವುಕರಾದರು ವಿನೋದ್‌ಪ್ರಭಾಕರ್.‌

ಮರಿ ಟೈಗರ್‌ವಿನೋದ್‌ಪ್ರಭಾಕರ್‌ಮಾತು ಮುಂದುವರೆಸಿದರು. ” ನಮ್ಮ-ನಿಮ್ಮಂತವರಿಗೆ ಸಕ್ಸಸ್‌ಸುಮ್ಮನೆ ಸಿಗೋದಿಲ್ಲ. ಕಷ್ಟಪಟ್ಟ ಮೇಲೆಯೇ ಗೆಲುವು. ನನಗೂ ಕೂಡ. ಸಾಕಪ್ಪ ಸಾಕು, ಈ ಸೋನು, ನೋವು ಅಂದಾಗ ಜನ ಕೈ ಹಿಡಿದರು. ಕೊನೆಗೂ ಸಕ್ಸಸ್‌ಕಂಡೆ. ಅಲ್ಲಿಂದ ನನ್ನದೇ ಒಂದು ಸೂತ್ರ ಇಟ್ಕೊಂಡು ಸಿನಿಮಾ ಮಾಡುತ್ತಾ ಬರುತ್ತಿದ್ದೇನೆ. ನಾನು ಯಾರನ್ನೂ ಮೋಸ ಮಾಡಲಾರೆ. ಯಾರಿಗೂ ಅನಗತ್ಯ ಬಂಡವಾಳ ಹಾಕುವಂತೆ ಹೇಳಲಾರೆ. ನನ್ನ ಸಿನಿಮಾದ ಬಜೆಟ್‌ಇಷ್ಟು, ಅದರಿಂದ ಬರುವ ಆದಾಯ ಇಷ್ಟು, ಬೇಕಾದ್ರೆ ಸಿನಿಮಾ ಮಾಡಿ, ಇಲ್ಲ ಅಂದ್ರೆ ಬೇರೆ ಯಾರನ್ನಾದರೂ ನೋಡಿಕೊಳ್ಳಿ ಅಂತ ಹೇಳಿ ಬಿಡುತ್ತೇನೆ. ಇಷ್ಟು ನಿಷ್ಟುರತೆಯಿಂದ ಯಾರು ಹೇಳುತ್ತಾರೋ ಗೊತ್ತಿಲ್ಲ. ಇದು ನನ್ನ ಪಾಲಿಸಿʼ ಎಂದು ಹೇಳುತ್ತಾ ಸಿನಿ ಲಹರಿಗೆ ಆಲ್‌ದಿ ಬೆಸ್ಟ್‌ಹೇಳಿ, ಶೂಟಿಂಗ್‌ಬ್ಯುಸಿ ಅಂತ ಕಾರು ಹತ್ತಿದರು.

Categories
ಸಿನಿ ಸುದ್ದಿ

ʼಕಾನೂನಿನ ಮೇಲೆ ನನಗೆ ಗೌರವವಿದೆ, ದೇವರ ದಯೆಯಿಂದ ಕೆಟ್ಟದ್ದನ್ನು ಒಳ್ಳೆಯದರಿಂದ ಜಯಿಸುವೆʼ

ಕುಟುಂಬ ಸಮೇತ ದೇವರ ದರ್ಶನ ಪಡೆದ ನಟಿ ರಾಗಿಣಿ ತಮ್ಮ ಮೇಲಿನ ಆರೋಪಕ್ಕೆ ರಿಯಾಕ್ಷನ್‌ ಕೊಟ್ಟಿದ್ದೇನು….?

ಗ್ಲಾಮರಸ್‌ ನಟಿ ರಾಗಿಣಿ ಮತ್ತೆ ಬಂದಿದ್ದಾರೆ. ಆಗಿದ್ದಾಯ್ತು, ಮುಂದೇ ಹೋಗೋಣ ಎನ್ನುವಂತೆ ಅವರೀಗ ಹೊಸ ಉತ್ಸಾಹ ತುಂಬಿಕೊಂಡು ಮತ್ತೆ ನಟಿಯಾಗಿ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.


ಸದ್ಯಕ್ಕೆ ಅವರ ಮೊದಲು ಯಾವ ಸಿನಿಮಾ ಟೀಮ್‌ ಮೂಲಕ ಕ್ಯಾಮೆರಾ ಎದುರಿಸಲಿದ್ದಾರೆನ್ನುವುದು ಸಿನಿಮಾ ಪ್ರೇಕ್ಷಕರಲ್ಲಿರುವ ಕುತೂಹಲ. ಅವರು ನಾಯಕಿ ಆಗಿರುವ “ಗಾಂಧಿಗಿರಿʼ ಈಗ ತೆರೆ ಬರಬೇಕಿದೆ. ಇನ್ನೇರೆಡು ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದಾಗಿಯೂ ಈ ಮುಂಚೆ ಹೇಳಿಕೊಂಡಿದ್ದರು. ಅವೆಲ್ಲವುಗಳ ಕತೆ ಏನೋ ಗೊತ್ತಿಲ್ಲ. ಆದರೆ ಈಗ ಅವರನ್ನೇ ಹಾಕಿಕೊಂಡು ಒಂದು ತಂಡ ಸಿನಿಮಾ ಮಾಡಲು ಹೊರಟಿದೆ.

ಆ ವಿಚಾರ ಇಷ್ಟರಲ್ಲಿಯೇ ಬಹಿರಂಗವಾಗುವುದು ಕೂಡ ಗ್ಯಾರಂಟಿ ಇದೆ. ಈ ನಡುವೆಯೇ ಈಗ ರಾಗಿಣಿ, ಶನಿವಾರ ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಕುಟುಂಬದವರ ಜತೆಗೆ ಒಂದಷ್ಟು ದಿನ ಕಾಲ ಕಳೆಯಬೇಕಿದೆ ಅಂತಲೂ ಹೇಳಿಕೊಂಡಿದ್ದಾರೆ. ಉಳಿದಂತೆ ಸೋಷಲ್‌ ಮೀಡಿಯಾದಲ್ಲಿ ಅವರು ಒಂದಷ್ಟು ವಿಚಾರವನ್ನು ಮನ ಬಿಚ್ಚಿ ಹೇಳಿಕೊಂಡಿರುವುದು ವಿಶೇಷ . ಸರ್ವ ಶಕ್ತನಾದ ದೇವರ ಆಶೀರ್ವಾದಿಂದ ನಾನು ಕೆಟ್ಟದ್ದನ್ನು ಒಳ್ಳೆಯವರಿಂದ ಜಯಸುವೆ. ಅದರ ಮೇಲೆ ನನಗೆ ನಂಬಿಕೆಯಿದೆ ಎಂದು ರಾಗಿಣಿ ಹೇಳಿಕೊಂಡಿದ್ದಾರೆ.

ಅವರಿಲ್ಲಿ ಹೇಳಿಕೊಂಡಿರುವುದಿಷ್ಟು…” ಹೊಸ ವರ್ಷ ಜಗತ್ತಿಗೆ ಅದ್ಭುತವಾದ ಮೈಲುಗಲ್ಲು ಸ್ಥಾಪಿಸಲಿ. ಕಾನೂನು ಮತ್ತು ಕಾನೂನು ವ್ಯವಸ್ಥೆಯ ಮೇಲೆ ನನಗೆ ಬಲವಾದ ನಂಬಿಕೆ ಇದೆ. ಪ್ರತಿಯೊಬ್ಬ ನಾಗರಿಕರಂತೆ ನಾನು ಕೂಡ ನನ್ನ ಹಕ್ಕುಗಳನ್ನು ಯಾವಾಗಲೂ ಗೌರವಿಸುತ್ತೇನೆ. ಭಾರತದ ಸಂವಿಧಾನದ ಅಡಿಯಲ್ಲಿಯೇ ನಮ್ಮ ಹಕ್ಕುಗಳ ರಕ್ಷಣೆ ಇದೆ. ಅದು ನನಗೆ ಖಚಿತವಿದೆ. ಸರ್ವಶಕ್ತನಾದ ದೇವರ ಆಶೀರ್ವಾದಿಂದ ನಾನು ಕೆಟ್ಟದ್ದನ್ನು ಒಳ್ಳೆಯದರಿಂದ ಜಯಸುತ್ತೇನೆ. ನನ್ನ ಶಕ್ತಿ ನನ್ನ ಕುಟುಂಬ. ಹಾಗೆಯೇ ನನ್ನ ಅಭಿಮಾನಿಗಳು ಮತ್ತು ಬೆಂಬಲಿಗರು. ಇದು ನನ್ನ ಎಲ್ಲ ಪ್ರಯತ್ನಗಳಲ್ಲಿ ವಿಜಯಶಾಲಿಯಾಗಿ ಹೊರಬರಲು ಸಹಾಯ ನೀಡುತ್ತದೆʼ ಎಂದಿದ್ದಾರೆ.ಹಾಗೆಯೇ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿರುವ ರಾಗಿಣಿ, ಹೊಸ ವರ್ಷ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿ ತರಲಿ ಎಂದಿದ್ದಾರೆ.

Categories
ಸಿನಿ ಸುದ್ದಿ

“ಕಟೌಟ್‌ ಮೇಲೆ ಕಾಗೆ ಬಿಟ್ರೆ , ಒಂದು ಹಾರನು ಇರಲಿಲ್ಲ ‘

ಆ ದಿನವನ್ನು ನಟ ಸುದೀಪ್‌ ಇವತ್ತು ನೆನಪಿಸಿಕೊಂಡ ಪರಿಯೇ ವಿಚಿತ್ರ…

ನಟ ಕಿಚ್ಚ ಸುದೀಪ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಇಲ್ಲಿಗೆ  25 ವರ್ಷ. ಈಗ ಒಬ್ಬ ನಟನಿಗೆ 25  ವರ್ಷದ ಸಿನಿಮಾ ಜರ್ನಿ ಅನ್ನೋದು ದೊಡ್ಡ ಸಾಧನೆ. ಅದರಲ್ಲೂ ಬಹುಬೇಡಿಕೆಯ ನಟನಾಗಿ ಬಹುಕಾಲ ವರ್ಚಸ್ಸು ಉಳಿಸಿಕೊಂಡು ಇರುವುದೇ ಇಲ್ಲಿ ದೊಡ್ಡ ಸವಾಲು. ಅದರೆ ಅದು ಸುದೀಪ್‌ ಅವರಿಗೆ ಸಾಧ್ಯವಾಗಿದೆ. ಅಷ್ಟೇ ಅಲ್ಲ, ಕನ್ನಡದಾಚೆಯೂ ಕಿಚ್ಚ ಸುದೀಪ್‌ ಬಹುಬೇಡಿಕೆಯ ನಟರಾಗಿರುವುದು ಅವರ ಬಹುಮುಖ ಪ್ರತಿಭೆಗೆ ಹಿಡಿದ ಕನ್ನಡಿ. ಈ ತಾರಾ ವರ್ಚಸ್ಸಿನ ನಡುವೆಯೇ ಅವರೀಗ ತಮ್ಮ ಸಿನಿಮಾ ಜರ್ನಿಯ 25 ನೇ ವರ್ಷದ ಸಂಭ್ರಮವನ್ನು ದೂರದ ದುಬೈನಲ್ಲಿ ತುಂಬಾನೆ ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಅಂದ್ರೆ, ಅವರೀಗ ಬಹುನಿರೀಕ್ಷಿತ ʼ ವಿಕ್ರಾಂತ್‌ ರೋಣʼ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕಾಗಿಯೇ ದುಬೈಗೆ ಹಾರಿದ್ದಾರೆ. ನಾಳೆ( ಜ.31 ) ಅಲ್ಲಿ “ವಿಕ್ರಾಂತ್‌ ರೋಣʼ ಚಿತ್ರದ ಟೀಸರ್‌ ಲಾಂಚ್‌ ಆಗುತ್ತಿದೆ. ಚಿತ್ರದ ಟೀಸರ್ ಅನ್ನು ಬುರ್ಜ್ ಖಲೀಫಾ ಮೇಲೆ ಅನಾವರಣ ಮಾಡಲಾಗುತ್ತಿದೆ. ಅದಕ್ಕೂ ಮೊದಲು ಅಂದ್ರೆ, ಜ. 30 ರಂದು ಶನಿವಾರ ದುಬೈನಿಂದಲೇ ವರ್ಚುವಲ್‌ ನೆಟ್‌ವರ್ಕ್‌ ಮೂಲಕ ನಟ ಕಿಚ್ಚ ಸುದೀಪ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 25 ವರ್ಷದ ಹಾದಿಯಲ್ಲಿ ಸಿಕ್ಕ ಕೆಲವು ಮರೆಯಲಾಗದ ಘಟನೆಗಳನ್ನು ಹೇಳಿಕೊಂಡರು. ಹಾಗೆಯೇ ಇಷ್ಟು ವರ್ಷದ ಸಿನಿಮಾ ಜರ್ನಿಯ ಏಳು-ಬೀಳಿನ ಬಗ್ಗೆ ಮಾತನಾಡಿದರು.

ಸಿನಿಮಾ ರಿಲೀಸ್ ಆದ ದಿನ ಚಿತ್ರಮಂದಿರಕ್ಕೆ ತೆರಳಿದ್ದಾಗ ಆದ ಅನುಭವದ ಬಗ್ಗೆ ಮಾತನಾಡಿದ ಸುದೀಪ್, ‘ಚಿತ್ರಮಂದಿರಕ್ಕೆ ಹೋದಾಗ ಏಳೆಂಟು ಜನ ಇದ್ರು. ಒಬ್ಬ ಹಾರ ಕೈಯಲ್ಲಿ ಹಿಡಿದು ನಿಂತಿದ್ದ. ನಾನು ಹೋಗುತ್ತಿದ್ದ ಹಾಗೆ ಬಂದು ಹಾರ ಹಾಕಿದ್ರು. ಇರೋದು 8 ಜನ ಅದ್ರಲ್ಲಿ ಒಬ್ಬ ಬಂದು ಹಾರ ಹಾಕಿದ್ದು ನೋಡಿ, ಅವ್ನೇನೋ ತಿಥಿ ಮಾಡೋಕೆ ಬಂದಿದ್ದಾನಾ ಅಂತೆನಿಸಿತು. ಅಷ್ಟೇ ಅಲ್ಲ, ಅಲ್ಲಿದ್ದ ಕಟೌಟ್‌ ನೋಡಿದೆ. ಅದರ ಮೇಲೆ ಕಾಗೆ ಬಿಟ್ರೆ ಒಂದು ಹಾರನು ಇರಲಿಲ್ಲ. ನಾನು ನನ್ನ ಸ್ನೇಹಿತ ಚಿತ್ರಮಂದಿರದ ಒಳಗೆ ಹೋದೆವು. ಮ್ಯಾನೇಜರ್ ಬಂದು ಕಾಫಿ ಬೇಕಾ ಅಂತ ಕೇಳಿದ್ರು, ಬೇಡ ಎಂದೆ, ಕಾಫಿ ತಗೊಳ್ಳಿ ಎಂದು ಒತ್ತಾಯ ಮಾಡಿದ್ರು. ಅವರು ನನ್ನ ಸ್ನೇಹಿತನ ಬಳಿ ಕೇಳಿದ್ರು ಏನಾಯಿತು ಎಂದು ಆಗ ಜನ ಇಲ್ಲ ಅದಕ್ಕೆ ಹೀಗೆ ಕುಳಿದ್ದಾರೆ ಎಂದ. ಆಗ ಅವರು ಇದಕ್ಕಿಂತ ಜನ ಬೇಕಾ ಎಂದು ಹೇಳಿದ್ರು. 8 ಜನಕ್ಕೆ ಇವರು ಇಷ್ಟು ದೊಡ್ಡ ಕ್ರೌಡ್ ಅಂತ ಅಂದುಕೊಂಡಿದ್ದಾರಾ ಅಂತ ಅಂದು ಕೊಂಡೆ. ಆದ್ರೆ ಟಾಕೀಸ್‌ ಹೌಸ್‌ ಫುಲ್‌ ಆಗಿತ್ತು. ಆ ಮೇಲಿನ ಕ್ಷಣಗಳೇ ರೋಚಕ‌ʼ ಎಂದರು ನಟ ಸುದೀಪ್.

Categories
ಸಿನಿ ಸುದ್ದಿ

ಹೊಸಬರ ಫಾರೆಸ್ಟ್‌ ಜರ್ನಿ

ಕನ್ನಡಕ್ಕೆ ಮತ್ತೊಂದು ಹಾರರ್‌ ಚಿತ್ರ

ಈಗ ಸಿನಿಮಾರಂಗ ಮತ್ತಷ್ಟು ರಂಗು ರಂಗಾಗಿದೆ. ಇನ್ನೇನು ಫೆಬ್ರವರಿ ಒಂದರಿಂದ ಸ್ಯಾಂಡಲ್‌ವುಡ್‌ ತನ್ನ ಕಾರ್ಯಚಟುವಟಿಕೆಯನ್ನು ಸಾಕಷ್ಟು ವಿಸ್ತರಿಸಲಿದೆ. ಈ ನಿಟ್ಟಿನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಹೌದು, ಈಗಾಗಲೇ ಸ್ಟಾರ್‌ ಚಿತ್ರಗಳು ತಮ್ಮ ಚಿತ್ರಗಳ ಬಿಡುಗಡೆ ದಿನವನ್ನು ಘೋಷಿಸಿವೆ. ಆ ಸಾಲಿಗೆ ಈಗ ಹೊಸಬರ “ಸ್ಕೇರಿ ಫಾರೆಸ್ಟ್‌” ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ.


ಹೌದು, ಸಂಪೂರ್ಣ ಹೊಸಬರೇ ಸೇರಿ ಮಾಡಿರುವ “ಸ್ಕೇರಿ ಫಾರೆಸ್ಟ್”‌ ಹಾರರ್‌ ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಹಾರಾರ್ ಕಥಾಹಂದರ ಇರುವ ಚಿತ್ರಗಳು ಬಂದಿವೆ. ಆ ಸಾಲಿಗೆ “ಸ್ಕೇರಿ ಫಾರೆಸ್ಟ್” ಚಿತ್ರವೂ ಸೇರಿದೆ. ಈ ಚಿತ್ರಕ್ಕೆ “ಪ್ರೀತಿ-ಭಯ-ಆತ್ಮ” ಎಂಬ ಅಡಿಬರಹವಿದೆ. ಈ ಚಿತ್ರ ಫೆಬ್ರವರಿ 26ರಂದು ಬಿಡುಗಡೆಯಾಗಲಿದೆ.


ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಮಿತ್ರರೆಲ್ಲ ಸೇರಿ ಒಂದು ಸಂಶೋಧನೆಗೆಂದು ಕಾಡಿಗೆ ಹೋಗುತ್ತಾರೆ. ಅಲ್ಲೊಂದಷ್ಟು ವಿಚಿತ್ರ ಘಟನೆಗಳು ನಡೆಯುತ್ತವೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಈ ಚಿತ್ರದ ಕಥಾವಸ್ತು. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯ ಜಯಪ್ರಭು ಆರ್. ಲಿಂಗಾಯಿತ್ ಚಿತ್ರದ ನಿರ್ಮಾಪಕರು. ಸಂಜಯ್‌ ಅಭೀರ್‌ ನಿರ್ದೇಶನವಿದೆ. ಇದು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಿದೆ.

ನಿರ್ದೇಶಕ ಸಂಜಯ್‌ ಅಭೀರ್‌ ಅವರು ಬಾಲಿವುಡ್‌ನಲ್ಲಿ ಒಂದಷ್ಟು ಕೆಲಸ ಮಾಡಿದ ಅನುಭವ ಹೊಂದಿದ್ದು, ಆ ಅನುಭವದ ಮೇಲೆ ಈ ಚಿತ್ರ ಮಾಡಿದ್ದಾರೆ. ನಿರ್ಮಾಪಕ ಜಯಪ್ರಭು ಆರ್.‌ ಲಿಂಗಾಯಿತ್‌, ಮುಂಬೈನಲ್ಲಿದ್ದಾರೆ. ಡಾ.ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ ಆಗಿರುವ ಅವರು, ಅವರ ಸ್ಫೂರ್ತಿಯಿಂದಲೇ ಸಿನಿಮಾಗೆ ಎಂಟ್ರಿಯಾಗಿದ್ದಾರೆ. ಮುಂಬೈನಲ್ಲೊಂದು ಕಾರ್ಖಾನೆ ನಡೆಸುತ್ತಿರುವ ಜಯಪ್ರಭು ಲಿಂಗಾಯಿತ್‌, ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿದ್ದು, ಟ್ರಸ್ಟ್‌ವೊಂದನ್ನು ಸ್ಥಾಪಿಸಿ ಆ ಮೂಲಕ ಸಮಾಜಮುಖಿ ಕಾರ್ಯ ನಡೆಸುತ್ತಿದ್ದಾರೆ. ಗೆಳೆಯರೊಬ್ಬರು ಸಿನಿಮಾ ನಿರ್ಮಾಣ ಮಾಡಿ ಅಂದಾಗ, ಕನ್ನಡ ಸಿನಿಮಾ ಮಾಡಿದರೆ ಮಾತ್ರ ಮಾಡುವುದಾಗಿ ಹೇಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.


ನಿರ್ದೇಶಕ ಸಂಜಯ್‌ ಅಭೀರ್‌ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‌ಹಿನ್ನೆಲೆ ಸಂಗೀತ ಲಕ್ಷ್ಮೀಕಾಂತ್ ನೀಡಿದ್ದಾರೆ. ಹಾಲಿವುಡ್ ನ “ಜಂಗಲ್ ಬುಕ್ 1994”, ಹಿಂದಿಯ “ರಾಗಿಣಿ ಎಂ.ಎಂ.ಎಸ್-೨” ಸೇರಿದಂತೆ ಮುಂತಾದ ಹೆಸರಾಂತ ಚಿತ್ರಗಳ ಛಾಯಾಗ್ರಾಹಕರಾದ ನರೇನ್ ಗೇಡಿಯಾ ಅವರ ಛಾಯಾಗ್ರಹಣವಿದೆ. ರಾಜೇಶ್ ಶಾ ಸಂಕಲನ ಹಾಗೂ‌ ದೀಪಕ್ ಶರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಕುತೂಹಲಕಾರಿ ಕಥೆಯೊಂದಿಗೆ ಟ್ರಯಾಂಗಲ್ ಲವ್ ಸ್ಟೋರಿ ಕೂಡ ಚಿತ್ರದಲ್ಲಿ ಸಾಗಲಿದೆ. ನಿರ್ಮಾಪಕ‌ ಜಯಪ್ರಭು ಸಹ‌ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಜೀತ್ ರಾಯ್ದತ್, ಬಹುಭಾಷ ನಟ ಯಶ್ ಪಾಲ್ ಶರ್ಮ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ‌ ಟೀನಾ ಪೊನ್ನಪ್ಪ, ಆಮ್‌ ರೀನ್, ಕಲ್ಪನಾ ನಾಯಕಿಯರು. ಬೇಬಿ ಪೂಜಾ ಇತರರು ನಟಿಸಿದ್ದಾರೆ. ಸಿದ್ದಗಂಗಾ ಮಠದ ಆವರಣ, ತುಮಕೂರು, ಚಿಕ್ಕಮಗಳೂರು ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ.

Categories
ಸಿನಿ ಸುದ್ದಿ

ಕೆಜಿಎಫ್-‌2 ರಿಲೀಸ್‌ ಡೇಟ್‌ ಫಿಕ್ಸ್‌ ಜುಲೈ 16 ರಂದು ರಣ ಬೇಟೆಗಾರನ ಬೇಟೆ!

ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ ಬಹುನಿರೀಕ್ಷೆಯ ಯಶ್‌ ಚಿತ್ರ

 

ಕನ್ನಡದಲ್ಲಿ ಈಗ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಈಗಾಗಲೇ ಸ್ಟಾರ್‌ ಚಿತ್ರಗಳು ತಮ್ಮ ಸಿನಿಮಾಗಳ ದಿನಾಂಕವನ್ನು ಘೋಷಣೆ  ಮಾಡಿವೆ. ಇದೀಗ ಯಶ್ ‌ಅಭಿನಯದ ಬಹುನಿರೀಕ್ಷೆಯ “ಕೆಜಿಎಫ್-2” ಚಿತ್ರ ಕೂಡ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ. ಹೌದು, ಯಶ್ ‌ಅಭಿಮಾನಿಗಳು ತಮ್ಮ ಹೀರೋ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದಿದ್ದರು.

ಅವರಿಗೆ ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ತಮ್ಮ ಟ್ವಿಟ್ಟರ್‌ಹಾಗೂ ಫೇಸ್‌ಬುಕ್‌ನಲ್ಲಿ ತಮ್ಮ ಚಿತ್ರದ ಬಿಡುಗಡೆಯನ್ನು ಘೋಷಣೆ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್‌ಅವರು “ಕೆಜಿಎಫ್‌-2” ಚಿತ್ರ ರಿಲೀಸ್‌ದಿನವನ್ನು ಘೋಷಣೆ ಮಾಡುವುದರ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.


ಅಂದಹಾಗೆ, “ಕೆಜಿಎಫ್-‌2ʼ ಚಿತ್ರ ಜುಲೈ 16 ರಂದು ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ಹಾಗೂ ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬಿಡುಗಡೆಯ ದಿನಾಂಕದ  ಬಗ್ಗೆ ಮಾಹಿತಿ  ನೀಡಿದ್ದಾರೆ. ಇದು ಸಹಜವಾಗಿಯೇ ಯಶ್ ‌ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಬೀರಿದೆ.

ಈಗಿನಿಂದಲೇ ಅವರು “ಕೆಜಿಎಫ್-‌2″  ಚಿತ್ರದ  ಹಬ್ಬ ಆಚರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈಗಾಗಲೇ ಧ್ರುವಸರ್ಜಾ ಅಭಿನಯದ ‌”ಪೊಗರು” ಫೆಬ್ರವರಿ 19, “ರಾಬರ್ಟ್” ಮಾರ್ಚ್‌11, “ಯುವರತ್ನ” ಏಪ್ರಿಲ್‌ 1, “ಸಲಗ ” ಏಪ್ರಿಲ್‌ 15, “ಕೋಟಿಗೊಬ್ಬ” ಮೇ ತಿಂಗಳಲ್ಲಿ ರಿಲೀಸ್‌ದಿನವನ್ನು ಘೋಷಣೆ ಮಾಡಿವೆ.

ಪ್ರಶಾಂತ್‌ ನೀಲ್‌, ನಿರ್ದೇಶಕ

ಈಗ ಆ ಸಾಲಿಗೆ “ಕೆಜಿಎಫ್-2” ಚಿತ್ರದ ರಿಲೀಸ್ ದಿನಾಂಕ ಘೋಷಣೆ ಮಾಡಲಾಗಿದೆ. “ಕೋಟಿಗೊಬ್ಬ” ಮೇ ತಿಂಗಳಲ್ಲಿ ಬರಲಿದ್ದು, ಅದೇ ತಿಂಗಳ ಕೊನೆಯ ವಾರದಲ್ಲಿ “ಕೆಜಿಎಫ್-‌2” ಚಿತ್ರ ತೆರೆಗೆ ಅಪ್ಪಳಿಸಲಿದೆ. ಅಂದಹಾಗೆ, “ಕೆಜಿಎಫ್‌-2” ವಿಶ್ವಾದ್ಯಂತ ತೆರೆಗೆ ಬರಲಿದೆ. ಅದೇನೆ ಇರಲಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಹುತೇಕ ಎಲ್ಲ ಕನ್ನಡ ಸ್ಟಾರ್ ನಟರ ಚಿತ್ರಗಳ ಜಾತ್ರೆಗೆ ಅಭಿಮಾನಿಗಳಂತೂ ಈಗ ಕಾತುರದಿಂದ ಕಾದು ನಿಂತಿರುವುದಂತೂ ನಿಜ.

ವಿಜಯ್‌ ಕಿರಗಂದೂರು, ನಿರ್ಮಾಪಕ

“ಕೆಜಿಎಫ್-2” ಸಿನಿಮಾ ಈಗಾಗಲೇ ಪೋಸ್ಟರ್‌, ಟೀಸರ್‌ಮೂಲಕ ದೊಡ್ಡ ಕ್ರೇಜ್‌ ಹುಟ್ಟಿಸಿರುವುದಂತೂ ನಿಜ. ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಅಲೆ ಎಬ್ಬಿಸಿದ್ದ “ಕೆಜಿಎಫ್”‌ ಈಗ “ಚಾಪ್ಟರ್‌2” ಮೂಲಕವೂ ದೊಡ್ಡದ್ದೊಂದು ಭರವಸೆ ಹುಟ್ಟಿಸಿದೆ. ಎಲ್ಲರೂ ಈ  ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದ ದಿನ ಗೊತ್ತಾಗಿದೆ. ಇನ್ನೇನಿದ್ದರೂ, ಎಲ್ಲರೂ ಆ ಹಬ್ಬಕ್ಕಾಗಿ ಕಾಯಬೇಕಿದೆ.

Categories
ಸಿನಿ ಸುದ್ದಿ

ಡಾಕ್ಟರ್‌ ಆಗಿದ್ದ ಆಕ್ಟರ್‌ ಸಾಯಿಕುಮಾರ್‌ ಪುತ್ರಿ ಈಗ ಫುಡ್‌ ಪ್ರಾಡೆಕ್ಟ್‌ ಸಂಸ್ಥೆಯ ಓನರ್‌

ಮಕ್ಕಳಿಗಾಗಿಯೇ ಮಾರುಕಟ್ಟೆಗೆ ಬಂತು ಫುಡ್‌ಸ್ಟೆಪ್ಸ್‌, ಶುಭವಾಗಲಿ ಅಂದ್ರು ಪವರ್‌ ಸ್ಟಾರ್‌

ಕನ್ನಡದಲ್ಲಿ ಪೊಲೀಸ್‌ ಸ್ಟೋರಿ ಚಿತ್ರದೊಂದಿಗೆ ಡೈಲಾಗ್‌ ಕಿಂಗ್‌ ಅಂತಲೇ ಹೆಸರಾದ ನಟ ಸಾಯಿಕುಮಾರ್‌ ಪುತ್ರಿ ಡಾಕ್ಟರ್.‌ ಅಷ್ಟೇ ಅಲ್ಲ ಉದ್ಯಮಿಯೂ ಹೌದು. ಸ್ಟಾರ್ಸ್‌ ಮಕ್ಕಳು ತಮ್ಮ ಪೋಷಕರ ಹಾಗೆಯೇ ಬಣ್ಣದ ಜಗತ್ತಿನಲ್ಲೇ ಗುರುತಿಸಿಕೊಳ್ಳಬೇಕೆಂದು ಬಯಸುವಾಗ ನಟ ಸಾಯಿಕುಮಾರ್‌ ಪುತ್ರಿ ಜ್ಯೋತಿರ್ಮಯಿ ಅವರದ್ದು ಕೊಂಚ ಡಿಫೆರೆಂಟ್‌ ವ್ಯಕ್ತಿತ್ವ. ಅವರು ಎಂಬಿಬಿಎಸ್‌ ಓದಿ ಡಾಕ್ಟರ್ ಆಗಿದ್ದು ಮಾತ್ರವಲ್ಲ, ಈಗ ಮಕ್ಕಳತಜ್ಞೆ. ಹಾಗೆಯೇ ಮಕ್ಕಳಿಗಾಗಿಯೇ ಪೌಷ್ಟಿಕ ಆಹಾರ ತಯಾರಿಸುವ ಒಂದು ಕಂಪನಿಯ ಒಡತಿ.

ವೈದ್ಯೆ ಜ್ಯೋತಿರ್ಮಯಿ ಅವರ ಈ ಪ್ರಯತ್ನಕ್ಕೆ ಸಾಥ್‌ ಕೊಟ್ಟಿದ್ದು ಅವರ ಪತಿ ಕೃಷ್ಣ ಫಲ್ಗುಣ. ಮೂಲತಃ ಇವರು ಬೆಳಗಾವಿ. ಅಲ್ಲಿಯೇ ಕ್ಸೋಬು ಫುಡ್ಸ್‌ ಮತ್ತು ಬೆವರೇಜಸ್‌ ಸಂಸ್ಥೆಯ ಮೂಲಕ ಈ ದಂಪತಿ ಈಗ ಅಹಾರ ತಯಾರಿಕಾ ಉದ್ಯಮ ಶುರು ಮಾಡಿದ್ದಾರೆ. ಅದರ ಫಲವಾಗಿ ಈಗ ಮಕ್ಕಳಿಗಾಗಿಯೇ ಧ್ರವಿಕೃತ ಸಿದ್ಧ ಆಹಾರದ ಪಾಕೆಟ್‌ಗಳ “ಫುಡ್‌ಸ್ಟೆಪ್ಸ್‌ʼ ಪ್ರಾಡೆಕ್ಟ್‌ ಮಾರುಕಟ್ಟೆಗೆ ಬಿಡುಗಡೆ ಆಗಿದೆ.

ಜ. ೨೮ ರಂದು ಗುರುವಾರ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಈ ಪ್ರಾಡೆಕ್ಟ್‌ ಲಾಂಚ್‌ ಕಾರ್ಯಕ್ರಮ ತುಂಬಾ ಗ್ರಾಂಡ್‌ ಆಗಿಯೇ ನಡೆಯಿತು. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಈ ಪ್ರಾಡೆಕ್ಟ್‌ ಲಾಂಚ್‌ ಮಾಡಿ, ಶುಭ ಹಾರೈಸಿದರು.
ಫುಡ್‌ ಪ್ರಾಡೆಕ್ಟ್‌ ಮೊದಲ ಗ್ರಾಹಕರಾಗಿ ಸಿಂಪಲ್ಲಾಂಗ್‌ ಒಂದ್‌ ಸ್ಟೋರಿಯ ಜನಪ್ರಿಯ ನಟಿ ಶ್ವೇತಾ ಶ್ರೀವಾತ್ಸವ್‌ , ದ್ರವೀಕೃತ ಸಿದ್ದ ಆಹಾರದ ಪಾಕೆಟ್ ಖರೀದಿಸಿದ್ದು ವಿಶೇಷ. ಪ್ರಾಡೆಕ್ಟ್‌ ಲಾಂಚ್‌ ಮಾಡಿ ಮಾತನಾಡಿದ ನಟ ಪುನೀತ್‌ ರಾಜ್‌ ಕುಮಾರ್‌, ಫುಡ್‌ ಸ್ಟೆಪ್ಸ್‌ ನಂತಹ ಪ್ರಾಡೆಕ್ಟ್ ಗಳನ್ನು ಫಾರಿನ್ ಕಂಟ್ರಿಗಳಲ್ಲಿ ನೋಡುತ್ತಿದ್ದೆವು. ಈಗ ನಮ್ಮಲ್ಲಿಯೂ ಸಹ ಬಂದಿದೆ. ನಟ ಸಾಯಿಕುಮಾರ್ ಅವರ ಮಗಳು ಮಕ್ಕಳ ವೈದ್ಯರಾಗಿ, ಇಂಥ ಒಂದು ಪ್ರಾಡೆಕ್ಟ್ ರೆಡಿ ಮಾಡಿದ್ದಾರೆ. ಅವರ ಕಂಪನಿ ಉತ್ತಮವಾಗಿ ಬೆಳೆಯಲಿ ʼಎಂದರು.

ಹಾಗೆಯೇ ಈ ಪ್ರಾಡೆಕ್ಟ್‌ ಅನ್ನು ತಾವೇ ತಯಾರಿಸಿದ್ದಕ್ಕೆ ಕಾರಣವೇನು ಅನ್ನೋದನ್ನು ಸಾಯಿ ಕುಮಾರ್‌ ಪುತ್ರಿ ಜ್ಯೋತಿರ್ಮಯಿ ಹೇಳಿಕೊಂಡರು. ” ನಾನು ಮಕ್ಕಳತಜ್ಞೆ ಯಾಗಿ ಕಂಡ ಒಂದು ಸಂಗತಿ ಮಕ್ಕಳ ಪೌಷ್ಟಿಕ ಆಹಾರದ ಕೊರತೆಗೆ ಸಂಬಂಧಿಸಿದ್ದು. ಬಹಳಷ್ಟು ಪೋಷಕರು ನಿರಾಸಕ್ತಿ ವಹಿಸಿದ್ದರಿಂದಲೇ ಇದೆಲ್ಲ ಕಾರಣ ಅನ್ನೋದು ತಿಳಿಯಿತು. ಒಂದು ಧ್ರವೀಕೃತ ಸಿದ್ಧ ಆಹಾರವೇ ಸಿಕ್ಕರೆ ಪೋಷಕರಿಗೂ ಅನುಕೂಲ ಆಗುತ್ತೆ ಅಂತ ನಾವು ಇದನ್ನು ತಯಾರಿಸಲು ಮುಂದಾದೆವು. ಅದರ ಫಲವೇ ಫುಡ್ ಸ್ಟೆಪ್ಸ್‌ʼ ಎಂದರು. ಜ್ಯೋತಿರ್ಮಯಿ ಪತಿ ಕೃಷ್ಣಫಲ್ಗುಣ ಹಾಜರಿದ್ದರು.

ಈ ಪ್ರಯತ್ನಕ್ಕೆ ನಟರಾದ ಸಾಯಿ ಕುಮಾರ್‌, ರವಿಶಂಕರ್‌, ಅಯ್ಯಪ್ಪ ಹಾಜರಿದ್ದರು. ಕಾರ್ಯಕ್ರಮ ಒಂದು ಪ್ರಾಡೆಕ್ಟ್‌ ಲಾಂಚ್‌ ಕಾರ್ಯಕ್ರಮವಾದರೂ, ಅದೊಂದು ಸಾಯಿ ಕುಮಾರ್‌ ಪರಿವಾರದ ಸಮಾರಂಭದಂತೆ ಕಂಡಿತು. ಕೊನೆಯಲ್ಲಿ ಇಡೀ ಕುಟುಂಬ ನಟ ಪುನೀತ್‌ ಅವರೊಂದಿಗೆ ಕ್ಯಾಮೆರಾಕ್ಕೆ ಪೋಸು ನೀಡಿತು.

Categories
ಸಿನಿ ಸುದ್ದಿ

ನಾವು ಭಾಷಾಭಿಮಾನಿಗಳಲ್ಲ, ಯಾವುದೇ ಭಾಷಿಗರು ಸಿಕ್ಕರೂ ಅವರ ಭಾಷೆ ಮಾತನಾಡುವ ಜನ ನಾವು – ನಟ ದರ್ಶನ್‌ ಹೀಗೆಲ್ಲ ಸಿಟ್ಟಾಗಿದ್ದು ಯಾಕೆ ?

ʼರಾಬರ್ಟ್ʼ‌  ಚಿತ್ರದ ರಿಲೀಸ್‌ ವಿಚಾರದಲ್ಲಿ ಗರಂ ಆದ ದರ್ಶನ್‌
 

ನಟ ದರ್ಶನ್‌ ಸಿಟ್ಟಾಗಿದ್ದಾರೆ. ಅದರಲ್ಲೂ ಕನ್ನಡಿಗರ ಭಾಷಾಭಿಮಾನದ ಕುರಿತು ಖಾರವಾಗಿ ಮಾತನಾಡಿದ್ದಾರೆ. ” ನಾವು ಭಾಷಾಭಿಮಾನಿಗಳಲ್ಲ, ಯಾವುದೇ ಭಾಷಿಗರು ಸಿಕ್ಕರೂ, ಅವರ ಭಾಷೆಯಲ್ಲಿ ಮಾತನಾಡುವ ಜನ ನಾವುʼ ಅಂತ ಕಿಡಿಕಾರಿದ್ದಾರೆ. ಅವರ ಈ ಸಿಟ್ಟಿಗೆ ಕಾರಣ” ರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲುಗು ಚಿತ್ರರಂಗ ಅಡ್ಡಿಯಾಗಿದ್ದು. ಈ ಸಂಬಂಧ ಶುಕ್ರವಾರ ಬೆಳಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡಿಗರು ನಿಜ ಭಾಷಾಭಿಮಾನ ಹೊಂದಿದ್ದರೆ ಇದೆಲ್ಲ ಆಗುತ್ತಿರಲಿಲ್ಲ. ಅದರಿಂದಲೇ ಇದೆಲ್ಲ ಸಮಸ್ಯೆ ಆಗುತ್ತಿದೆ ಅನ್ನೋದು ಅವರ ವಾದ.
ಹಾಗಂತ ಇದು ಅವರ “ರಾಬರ್ಟ್‌ʼ ಚಿತ್ರಕ್ಕೆ ಮಾತ್ರ ಸಂಬಂಧಿಸಿದ್ದೇ ? ” ಖಂಡಿತಾ ಹಾಗಲ್ಲ, ನಾನು ಕೇವಲ ನನ್ನ ಸಿನಿಮಾದ ವಿಚಾರಕ್ಕೆ ಮಾತ್ರ ಮಾತನಾಡುತ್ತಿಲ್ಲ. ಇಲ್ಲಿ ಸಾಕಷ್ಟು ಮಂದಿ ಹೊಸಬರು ಬಂದು ಸಿನಿಮಾ ಮಾಡುತ್ತಿದ್ದಾರೆ. ಅವರು ಒಂದು ಸಿನಿಮಾ ಮಾಡುವಾಗ ಸಾಕಷ್ಟು ಕಷ್ಟಗಳಿವೆ. ಅದನ್ನೆಲ್ಲ ಕಷ್ಟಪಟ್ಟು ಎದುರಿಸಿ, ಅವರು ಒಂದು ಸಿನಿಮಾ ಮಾಡಿ ಹೊರ ತರುವಾಗ ಇಂತಹ ಸಮಸ್ಯೆಗಳಾದರೆ ಅವರ ಗತಿಯೇನು ಎನ್ನುವುದೇ ನನ್ನ ಪ್ರಶ್ನೆ ಎನ್ನುವ ಉತ್ತರ ದರ್ಶನ್‌ ಅವರದ್ದು.

ಇನ್ನು ದರ್ಶನ್‌ ಅವರೇ ಈ ಸ್ವ ಇಚ್ಚೆಯಿಂದ ಈ ವಿಚಾರ ಪ್ರಸ್ತಾಪಿಸಿದರಾ ಅಥವಾ ಚಿತ್ರತಂಡದ ಪರವಾಗಿ ಮತನಾಡಿದರಾ ಎನ್ನುವ ಮಾಧ್ಯಮದ ಪ್ರಶ್ನೆಗೂ ಅವರು ನೀಡಿದ್ದು ಖಡಕ್‌ ಉತ್ತರವೇ. ರಾಬರ್ಟ್‌ ಕುರಿತು ನಾನಿಲ್ಲಿ ಮಾತನಾಡುತ್ತೇನೆಂದರೆ, ಚಿತ್ರ ತಂಡದಲಿದ್ದೇ ಅಲ್ವಾ? ನಿರ್ಮಾಪಕರು ಅನ್ನದಾತರು. ಅವರ ಪರವಾಗಿ ನಾನು ಕೊನೆವರೆಗೂ ನಿಲ್ಲಬೇಕು. ಅದೇ ಕಾರಣಕ್ಕೆ ನಾನಿಲ್ಲಿ ಮಾತನಾಡುತ್ತಿದ್ದೇನೆ ಅಂತ ಉತ್ತರಿಸಿದರು ದರ್ಶನ್.‌

 

Categories
ಸಿನಿ ಸುದ್ದಿ

ಟಾಲಿವುಡ್ ನಲ್ಲಿ ರಾಬರ್ಟ್‌ ರಿಲೀಸ್‌ ಗೆ ವಿರೋಧ , ದರ್ಶನ್‌ ಆಕ್ರೋಶಕ್ಕೆ ಫಿಲ್ಮ್‌ ಚೇಂಬರ್‌ ತತ್ತರ

ಭಾನುವಾರವೇ ಸೌತ್‌ ಸಿನಿಮಾ ಇಂಡಸ್ಟ್ರಿ ವಾಣಿಜ್ಯ ಮಂಡಳಿ ಸಭೆ – ಅಧ್ಯಕ್ಷ ಜೈರಾಜ್‌ ಭರವಸೆ


ಬಹುನಿರೀಕ್ಷಿತ ” ರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲಗು ಚಿತ್ರರಂಗ ಅಡ್ಡಿಯಾಗಿರುವ ವಿಚಾರ ಈಗ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದರ್ಶನ್‌ ಗುಟುರು ಹಾಕಿದ್ದು, ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲೇ ತಲ್ಲಣ ಹುಟ್ಟಿದೆ. ಇದೀಗ ಕರ್ನಾಟಕ ವಾಣಿಜ್ಯ ಮಂಡಳಿ ಕೂಡ ಎಚ್ಚೆತ್ತುಕೊಂಡಿದೆ. ಭಾನುವಾರ ಈ ಸಂಬಂಧ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಸೇರುವುದು ಗ್ಯಾರಂಟಿ ಆಗಿದೆ. ಅಲ್ಲಿಯೇ “ರಾಬರ್ಟ್‌‌ʼ ಚಿತ್ರದ ಬಿಡುಗಡೆ ಬಿಕ್ಕಟ್ಟು ಬಗೆಹರಿಸುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಜೈ ರಾಜ್‌ ಭರವಸೆ ಕೊಟ್ಟಿದ್ದಾರೆ.

ʼರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲುಗು ಚಿತ್ರರಂಗ ಅಡ್ಡಿಯಾಗಿದ್ದರ ವಿರುದ್ಧ ಶುಕ್ರವಾರ ಬೆಳಗ್ಗೆ ನಟ ದರ್ಶನ್‌ , ಕರ್ನಾಟಕ ವಾಣಿಜ್ಯ ಮಂಡಳಿ ಭೇಟಿ ನೀಡಿ ದೂರು ಸಲ್ಲಿಸಿದರು. ಆ ನಂತರ ವಾಣಿಜ್ಯ ಮಂಡಳಿ ಆಧ್ಯಕ್ಷ ಜೈರಾಜ್‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ರಾಬರ್ಟ್‌ ಚಿತ್ರದ ಬಿಡುಗಡೆ ತೆಲುಗಿನಲ್ಲಿ ವಿರೋಧ ಅಗಿಲ್ಲ. ಆದರೆ ಮಾರ್ಚ್‌ 11 ರಂದೇ ತೆಲುಗಿನಲ್ಲೂ ಒಂದುಅದ್ದೂರಿ ವೆಚ್ಚದ ಚಿತ್ರ ತೆರೆ ಕಾಣುತ್ತಿದೆ. ಹಾಗಾಗಿ ಒಂದಷ್ಟು ಗೊಂದಲ ನಿರ್ಮಾಣವಾಗಿದೆ. ಭಾನುವಾರವೇ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆಯುವಂತೆ ಕೋರಲಾಗುವುದು. ಅಲ್ಲಿಯೇ ಈ ಸಮಸ್ಯೆ ಬಗೆಹರಿಸುವುದಾಗಿ ‘ರಾಬರ್ಟ್’‌ ಚಿತ್ರ ತಂಡಕ್ಕೆ ಭರವಸೆ ಕೊಟ್ಟರು.

ತೆಲುಗು ಚಿತ್ರರಂಗದವರ ಸ್ವಪಕ್ಷಪಾತ ನೀತಿ ಬಗ್ಗೆ ಗರಂ ಆಗಿದ್ದ ನಟ, ಇದೆಲ್ಲ ನಡೆಯೋದಿಲ್ಲ. ಅವರ ಸಿನಿಮಾಗಳಿಗೆ ಮುಂದೆ ಕನ್ನಡದಲ್ಲಿ ಸಮಸ್ಯೆಯಾಲಿದೆ ಅಂತ ಗುಟುರು ಹಾಕಿದ್ದರು. ಅಷ್ಟೇ ಅಲ್ಲ, ಶುಕ್ರವಾರ ಬೆಳಗ್ಗೆ ತೆಲುಗು ಚಿತ್ರರಂಗದ ಈ ಇಬ್ಬಗೆ ನೀತಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದರು. ಕರ್ನಾಟಕದಲ್ಲಿ ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮಗಳು, ತಕರಾರುಗಳು ಇಲ್ಲ. ಆದರೆ ಕನ್ನಡ ಸಿನಿಮಾಗಳು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಕೆಲವು ಅಲಿಖಿತ ನಿಯಮಗಳನ್ನು ವಿಧಿಸಿರುವುದು ಎಷ್ಟು ಸರಿ ಎಂಬುದು ದರ್ಶನ್ ಅಸಮಾಧಾನ ಹೊರ ಹಾಕಿದ್ದರು.

error: Content is protected !!