Categories
ಸಿನಿ ಸುದ್ದಿ

ನಟಿಯಾಗಿ ನೀನು ನ್ಯಾಷನಲ್ ಅವಾರ್ಡ್ ತಗೋಬೇಕಮ್ಮ- ಹೀಗಂತ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಹಾರೈಸಿದ್ದುಯಾರಿಗೆ ಗೊತ್ತಾ?

ನಟ ರಾಮ್ ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ. ಅದೇ ಕಾರಣಕ್ಕೀಗ ಜಯಣ್ಣ ಕಂಬೈನ್ಸ್ ನಿರ್ಮಾಣದ‌ ಅದ್ದೂರಿ ವೆಚ್ವದ ‘ಶಿವ 143 ‘ ಚಿತ್ರ ಚಂದನವನದಲ್ಲಿ ತೀವ್ರ ಕುತೂಹಲ ಹುಟ್ಟಿಸಿರೋದು ನಿಮಗೂ ಗೊತ್ತು. ಹಾಗಂತ ರಾಮ್‌ ಕುಮಾರ್‌ ಪುತ್ರಿ ಧನ್ಯಾ ರಾಮ್‌ ಕುಮಾರ್‌ ಅವರೇನು ಕಮ್ಮಿ ಇಲ್ಲ. ಈಗಾಗಲೇ ಮಾಡೆಲಿಂಗ್‌ ನಲ್ಲಿ ಮಿಂಚಿದವರು. ಈಗ ಅವರು ಕೂಡ” ನಿನ್ನ ಸನಿಹಕೆʼ ಹೆಸರಿನ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಯಾಗುತ್ತಿದ್ದಾರೆ.

ಈಗಾಗಲೇ ಆ ಚಿತ್ರದ ಚಿತ್ರೀಕರಣವು ಮುಗಿದಿದೆ. ಹಾಡುಗಳ ಮೂಲಕ ಈಗ ಸೋಷಲ್ ಮೀಡಿಯಾದಲ್ಲಿ ” ನಿನ್ನ ಸನಿಹಕೆʼ ಚಿತ್ರ ಸಖತ್ ಸದ್ದು ಮಾಡಿದೆ. ಈ ಚಿತ್ರದ ಮೂಲಕ ನಟಿಯಾಗಿ ಬೆಳ್ಳಿತೆರೆಗೆ ಗ್ರಾಂಡ್ ಎಂಟ್ರಿಯಾಗುತ್ತಿರುವ ಧನ್ಯಾ ರಾಮ್ ಕುಮಾರ್ ಮೇಲೆ ರಾಜ್‌ ಕುಟುಂಬ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ತಮ್ಮ ಕುಟುಂಬದ ಮತ್ತೊಂದು ಕುಡಿ ಇದೇ ಮೊದಲು ನಾಯಕಿಯಾಗಿ ಎಂಟ್ರಿ ಆಗುತ್ತಿರುವುದು ಅವರಿಗೂ ಖುಷಿ ಇದೆ. ಧನ್ಯಾ ರಾಮ್‌ ಕುಮಾರ್‌ ನಾಯಕಿಯಾಗಿ ನಟಿಸಿರುವ .’ನಿನ್ನ ಸನಿಹಕೆ ‘ಚಿತ್ರದ ಪ್ರಮೊಷನ್ ಕಾರ್ಯಕ್ರಮವೊಂದರಲ್ಲಿ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ ರೀತಿಯೇ ವಿಶೇಷ ವಾಗಿತ್ತು.

‘ಧನ್ಯಾ ನಮ್ಮನೆ ಕುಡಿ. ಮಗಳೆ, ನಿನ್ನ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ.‌ ನಿನ್ನಮ್ಮ ಪೂರ್ಣಿಮಾ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ನೀನು ಕೂಡ ನಟಿಯಾಗಿ ನ್ಯಾಷನಲ್ ಅವಾರ್ಡ್ ತಗೊಬೇಕಮ್ಮ. ಅವಾರ್ಡ್ ಬಂದೇ ಬರುತ್ತೆ ಅನ್ನೋ‌ ನಂಬಿಕೆ ನಂಗಿದೆ. ಒಳ್ಳೆಯದಾಗಲಿ. ನಿಮ್ಮ ಸಿನಿಮಾ ದೊಡ್ಡ ಸಕ್ಸಸ್ ಕಾಣಲಿ’ ಅಂತ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಶುಭ ಹಾರೈಸಿದರು. ಅವರಂತೆಯೇ ನಟ ಪುನೀತ್‌ ರಾಜ್‌ ಕುಮಾರ್‌ ಕೂಡ ಸೋಷಲ್‌ ಮೀಡಿಯಾದ ಲೈವ್‌ ನಲ್ಲಿ ಧನ್ಯಾ ರಾಮ್‌ ಕುಮಾರ್‌ ಅವರಿಗೆ ಶುಭ ಹಾರೈಸಿದರು.

ಕಲಾ ಕುಟುಂಬದಲ್ಲಿ ಹುಟ್ಟಿ ಬೆಳೆದ ಧನ್ಯ ರಾಮ್‌ ಕುಮಾರ್‌ ಅವರಿಗೆ ನಟಿಯಾಗಿ ಗುರುತಿಸಿಕೊಳ್ಳಲು ದೊಡ್ಡ ಅವಕಾಶವಿದೆ. ಅವರ ಸುತ್ತ ದೊಡ್ಡ ಕಲಾವಿದರ ಬಳಗವೇ ಇದೆ. ಹಾಗಂತ ಅದನ್ನೇ ನಂಬಿಕೊಂಡು ಧನ್ಯಾ ರಾಮ್‌ ಕುಮಾರ್‌ ನಟಿಯಾಗಲು ಹೊರಟಿಲ್ಲ. ನಟನೆ ಮೇಲೆ ದೊಡ್ಡ ಆಸಕ್ತಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ನಟನೆಯ ಎಲ್ಲಾ ಪಟ್ಟುಗಳನ್ನು ಕಲಿತುಕೊಂಡಿದ್ದಾರೆ. ಆ ಮೂಲಕವೇ ನಟಿಯಾಗಿ ಸಿನಿಮಾ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ. ಅವರ ಮಾವಂದಿರು ನಿರೀಕ್ಷೆ ಮಾಡಿದಂತೆ ಧನ್ಯಾ ರಾಮ್‌ ಕುಮಾರ್‌ ಪ್ರಶಸ್ತಿ ಅರಸಿ ಬರುವಂತೆ ನಟಿಯಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವೂ ಇಲ್ಲ.

Categories
ಸಿನಿ ಸುದ್ದಿ

ಮಗ‌ ಆಸ್ಪತ್ರೆ ಯಲ್ಲಿದ್ದಾನೆ, ನಾನು ಆರ್ಥಿಕ‌ ಸಂಕಷ್ಟದಲ್ಲಿದ್ದೇನೆ, ಯಾರಾದರೂ ನೆರವು ನೀಡಿ- ನಟ, ನಿರ್ದೇಶಕ ವಿ. ಆರ್. ಭಾಸ್ಕರ್ ಮನವಿ

ನಟ ಡಾ. ವಿಷ್ಣುವರ್ಧನ್ ಅವರಿಗೆ ಬಹುಕಾಲ ಸಹಾಯಕರಾಗಿದ್ದ ನಟ, ಸಾಹಿತಿ ಹಾಗೂ ನಿರ್ದೇಶಕ ವಿ.ಆರ್. ಭಾಸ್ಜರ್ ಸಂಕಷ್ಟದಲ್ಲಿದ್ದಾರೆ. ಅವರ ಪುತ್ರ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದಾರೆ. ಆತನ ಚಿಕಿತ್ಸಾ ವೆಚ್ಚಕ್ಕೆ ಬೇಕಾದಷ್ಟು ಹಣ ಇಲ್ಲದೆ ಭಾಸ್ಕರ್ ಅವರು ಆರ್ಥಿಕ ಸಂಕಷ್ಟ ಕ್ಕೆ ಸಿಲುಕಿದ್ದು, ದಾನಿಗಳಿಂದ ಆರ್ಥಿಕ‌ ನೆರವು ಬಯಸಿದ್ದಾರೆ. ಈ ಕುರಿತು ಒಂದು ವಿಡಿಯೋಮಾಡಿ, ಸೋಷಲ್ ಮೀಡಿಯಾದಲ್ಲಿ ಹಂಚಿ ಕೊಂಡಿ ದ್ದಾರೆ. ಚಿತ್ರರಂಗದ  ಯಾರಾದರೂ  ಕೈಲಾದ ಸಹಾಯ ಮಾಡಿ‌ಅಂತ ಅಸಹಾ ಯಕತೆ ಯೊಂದಿಗೆ ಕೈ ಮುಗಿದು ಕೇಳಿಕೊಂಡಿದ್ದಾರೆ.

” ಮಗ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು , ಆತನ ಚಿಕಿತ್ಸೆಗೆ ಹೆಚ್ಚಿನ ಹಣ ಬೇಕಿದೆ. ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸೆಗೆ ತುಂಬಾ ಹಣ ಬೇಕಿದೆ.ಅಷ್ಟು ಹಣ ನನ್ನ ಬಳಿ ಇಲ್ಲ. ವಿಷ್ಣುವರ್ಧನ್ ಅವರ ಜತೆಯಲ್ಲಿದ್ದಾಗ ಒಂದಷ್ಟು ಹಣಕಾಸು ಮಾಡಿಕೊಂಡಿದ್ದೆ. ಆದರೆ ಇನ್ನೊಬ್ಬ ಮಗ ತೀರಿಹೋದ. ಆತನ ಚಿಕಿತ್ಸೆಗಾಗಿಯೇ ಆ ಹಣ ಖರ್ಚಾಗಿ ಹೋಯಿತು. ಈಗ ಉಳಿದ ಇನ್ನೊಬ್ಬ ಮಗನೂ ಕೂಡ ಅನಾರೋಗ್ಯ ದಲ್ಲಿದ್ದಾನೆ. ಯಾರಾದರೂ ದಾನಿಗಳು ಒಂದಷ್ಟು ಸಹಾಯ ಮಾಡಿದರೆ, ಅದು ಆತನ ಚಿಕಿತ್ಸೆಗೆ ಅನುಕೂಲವಾಗಲಿದೆ ಅಂತ ಭಾಸ್ಕರ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. 

ದುರಂತ ಅಂದ್ರೆ ಕೆಲವರನ್ನು ಬದುಕು ವಿನಾಕರಣ ಹೈರಾಣಾಗಿಸುತ್ತೆ. ಅಂತಹದೇ ಪರಿಸ್ಥಿಯಲ್ಲೀಗ ಭಾಸ್ಕರ್ ಇದ್ದಾರೆ. ಭಾಸ್ಕರ್ ಚಿತ್ರರಂಗಕ್ಕೆ ತುಂಬಾನೆ ಪರಿಚಿತ ಇದ್ದವರು. ನಟರಾಗಿ, ನಿರ್ದೇಶಕ ರಾಗಿ ಯೂ ಚಿರಪರಿಚಿತ. ಅದಕ್ಕಿಂತ ಮುಖ್ಯವಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಬಹುಕಾಲ ಸಹಾಯಕರಾಗಿದ್ದರು. ಹಾಗೆಯೇ ಅವರ ಕಾರು ಚಾಲಕರಾಗಿಯೂ ಕೆಲಸ ಮಾಡಿದ್ದರು. ಆ ದಿನಗಳಲ್ಲಿ ಅನೇಕ ನಟರೊಂದಿಗೆ ತುಂಬಾ ಒಳ್ಳೆಯ ಗೆಳೆತನ ಹೊಂದಿದ್ದರು. ವಿಷ್ಣುವರ್ಧನ್ ಅವರ ನಿಧನದ ನಂತರ ಏಕಾಂಗಿಯಂತಿರುವ ಭಾಸ್ಕರ್,  ಮಕ್ಕಳ ಅನಾರೋಗ್ಯ ದ ಕಾರಣ ನೊಂದು ಹೋಗಿದ್ದಾರೆ. ತೀವ್ರ ಆರ್ಥಿಕ‌ ಸಂಕಷ್ಟಕ್ಕೆ ಸಿಲುಕಿ, ಮಗನನ್ನು ಉಳಿಸಿಕೊಳ್ಳಲು ಪರದಾಡಬೇಕಿದೆ.

ಬಹುಕಾಲ ನಟ ವಿಷ್ಣುವರ್ಧನ್ ಅವರನ್ನುದೇವರಂತೆ ನಂಬಿಕೊಂ ಡಿದ್ದ‌ಭಾಸ್ಕರ್ ಗೆ, ವಿಷ್ಣುವರ್ಧನ್ ‌ಇಲ್ಲದ ದಿನಗಳು ತೀವ್ರ ಕಷ್ಟಕರ ವಾಗಿವೆ ಅಂತ ಅವರ ಕುಟುಂಬ ಹೇಳಿಕೊಂಡಿದೆ.  ವಿಷ್ಣುವರ್ಧನ್ ಅಭಿಮಾನಿಗಳು ಯಾರಾದರೂ‌ಮುಂದೆ ಬಂದು ಭಾಸ್ಕರ್ ನೆರವಿಗೆ ನಿಂತರೆ, ಭಾಸ್ಕರ್ ಪುತ್ರ ನನ್ನು ಉಳಿಸಿಕೊಳ್ಳಲಿದ್ದಾರೆ.ಆ ಕೆಲಸ ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ‌ ಅಭಿಮಾನಿ‌ಸಂಘಗಳಿಂದ ಆದೀತೆ ಅಂತ‌ಭಾಸ್ಕರ್ ಕುಟುಂಬ‌ಕೂಡ ಎದುರು‌ನೋಡುತ್ತಿದೆ. ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ 8495085291 ಕ್ಕೆ ಕರೆ ಮಾಡಬಹುದು.

..

Categories
ಸಿನಿ ಸುದ್ದಿ

ಬರ್ಕ್ಲಿ ಹಿಡಿದು ಬಂದ ನೋ ಸ್ಮೋಕಿಂಗ್‌ ಜಾಹೀರಾತಿನ ಹುಡುಗಿ- ಇದು ಸುಮನ್‌ ಕ್ರಾಂತಿ

ಸುಮನ್‌ ಕ್ರಾಂತಿ ನಿರ್ದೇಶನದ ʼಕಾಜಲ್‌ʼ ಚಿತ್ರ ಈಗ ʼಬರ್ಕ್ಲಿʼ ಎನ್ನುವ ಹೊಸ ಟೈಟಲ್‌ ಹೊತ್ತಿದೆ. ಈ ಹಿಂದೆ ಈ ಚಿತ್ರʼ ಕಾಜಲ್‌ ʼಹೆಸರಲ್ಲೇ ಸೆಟ್ಟೇರಿತ್ತು. ಆನೇಕಲ್‌ ಬಾಲರಾಜ್‌ ಇದಕ್ಕೆ ಬಂಡವಾಳ ಹೂಡಿದ್ದರು. ಅವರ ಪುತ್ರ ಸಂತೋಷ್‌ ಬಾಲರಾಜ್‌ ನಾಯಕರಾಗಿದ್ದರು. ಹೆಚ್ಚು ಕಡಿಮೆ ಎರಡು ವರ್ಷಳ ಹಿಂದೆಯೇ ಇದು ಸುದ್ದಿ ಮಾಡಿತ್ತು. ಕೊರೋನಾ ಕಾರಣಕ್ಕೆ ಇದುವರೆಗೂ ತೆರೆಮೆರೆಯಲ್ಲಿ ಉಳಿದಿದ್ದ ಈ ಚಿತ್ರ ಈಗ, ಬರ್ಕ್ಲಿ ಹೆಸರಲ್ಲಿ ಸದ್ದು ಮಾಡಲು ರೆಡಿಯಾಗಿದೆ.

ಸಿಮ್ರಾನ್ ನಟೇಕರ್ ಸ್ಯಾಂಡಲ್ ವುಡ್ ಅಂಗಳದಲ್ಲಿ ‌ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾಗಿರುವ ಮುಂಬೈ ಚೆಲುವೆ. ಮಾರ್ಚ್ 31 ರಂದು ಈ ಬೊಂಬಾಟ್ ಚೆಲುವೆಯ ಫಸ್ಟ್ ಲುಕ್‌‌ ರಿವೀಲ್‌‌ ಆಗಲಿದೆ. ಅರೆ, ಇದ್ರಲೇನು ಸ್ಪೆಷಲ್‌ ಅಂತ ನಿಮಗೂ ಅನಿಸಬಹುದು. ಯಾಕಂದ್ರೆ, ಹೊರರಾಜ್ಯದಿಂದ ಚಂದನವನಕ್ಕೆ ಬಂದು, ಇಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡು ಬೆಳ್ಳಿತೆರೆಯನ್ನು ಬೆಳಗೋದು ಹೊಸದೇನಲ್ಲ. ಅದರಲ್ಲಿ ಇವ್ರು ಒಬ್ಬರು ಅನ್ನೋದು ನಿಜ, ಆದ್ರೆ ಈ ಸಿಮ್ರಾನ್‌ ಗೊಂದು ಹಿನ್ನೆಲೆಇದೆ. ಅದೇ ಕಾರಣಕ್ಕೆ ಸ್ಯಾಂಡಲ್‌ ವುಡ್‌ಗೆ ಎಂಟ್ರಿ ಆಗಿದ್ದಾರೆ. ಅದೇ ಇಲ್ಲಿನ ವಿಶೇಷ. ಹಾಗಾದ್ರೆ ಈ ಸಿಮ್ರಾನ್‌ ಹಿನ್ನೆಲೆ ಏನು?

ತುಂಬಾ ವರ್ಷಗಳ ಹಿಂದೆ ಕಿರುತೆರೆ ಹಾಗೂ ಚಿತ್ರ ಮಂದಿರಗಳಲ್ಲಿ ಧೂಮಪಾನ ಜಾಗೃತಿ ಕುರಿತು ಒಂದು ಜಾಹೀರಾತು ಬಿತ್ತರಗೊಳ್ಳುತ್ತಿತ್ತು. ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದನ್ನು ಮನವರಿಕೆ ಮಾಡಿ ಕೋಡೋ ಜಾಹೀರಾತು ಅದು. ಒಬ್ಬ ಮನೆ ಯಜಮಾನ ಮನೆಯಲ್ಲಿಯೇ ತನ್ನ ಹೆಂಡತಿ ಮತ್ತು ಪುಟ್ಟ ಮಗಳೆದುರು ಸೀಗರೇಟು ಸೇದುವ ಸನ್ನಿವೇಶ ಅದು. ಕೊನೆಗೆ ಮಗಳು ಅದನ್ನು ಪ್ರತಿರೋಧಿಸುವ ಸಣ್ಣ ಸೂಚನೆಯೊಂದಿಗೆ ಆತ ಅಲ್ಲಿಗೆ ಸೀಗರೇಟ್‌ ಸೇವನೆ ನಿಲ್ಲಿಸುತ್ತಾನೆ. ಇಲ್ಲಿ ಆ ಜಾಹೀರಾತಿನೊಳಗೆ ಪುಟಾಣಿ ಬಾಲಕಿಯಾಗಿ ಕಾಣಿಸಿಕೊಂಡ ಹುಡುಗಿಯೇ ಸಿಮ್ರಾನ್‌ ನಟೇಕರ್.‌ ಇವತ್ತವರು ಬೆಳೆದು ದೊಡ್ಡವರಾಗಿದ್ದಾರೆ. ಬೇಬಿಡಾಲ್ ಗ್ಲಾಮರ್ ಬೊಂಬೆಯಾಗಿ ಬೆಳೆದು‌ನಿಂತಿದ್ದಾರೆ. ಮರಾಠಿ ಕಿರುತೆರೆಯಲ್ಲಿ‌ ಮಿನುಗಿ, ಹಿಂದಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.ಇದೀಗ ಅಲ್ಲಿಂದ ಸ್ಯಾಂಡಲ್ ವುಡ ಗೂ ಲಗ್ಗೆ ಇಟ್ಟಿದ್ದಾರೆ.

ನಿಮಗೆ ನೆನಪಿರಬಹುದು, ಎರಡು ವರ್ಷಗಳ ಹಿಂದೆ ಅಂದ್ರೆ 2019 ರಲ್ಲೇ ಸಿಮ್ರಾನ್ ಕನ್ನಡಕ್ಕೆ ಬರ್ತಾರೆ ಅಂತ ಸುದ್ದಿಯಾಗಿತ್ತು. ನಿರ್ದೇಶಕ ಸುಮನ್ ಕ್ರಾಂತಿ, ತಾವು ನಿರ್ದೇಶಿಸುತ್ತಿರುವ ʼಕಾಜಲ್‌ʼ ಹೆಸರಿನ ಚಿತ್ರದೊಂದಿಗೆ ನೋ‌ ಸ್ಮೋಕಿಂಗ್ ಸುಂದರಿಯನ್ನು ಹುಡುಕಿ ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ ಎನ್ನುವ ಸುದ್ದಿ ಸಿನಿಪ್ರಿಯರಿಗೆ ಕುತೂಹಲ ಮೂಡಿಸಿತ್ತು. ಅವರು ಹೇಳಿದಂತೆ ಸಿಮ್ರಾನ್‌ ಕನ್ನಡಕ್ಕೂ ಬಂದರು. ಶೂಟಿಂಗ್‌ ನಲ್ಲೂ ಭಾಗವಹಿಸಿದ್ದರು. ಮುಂದೇನು ಎನ್ನುವ ಹೊತ್ತಿಗೆ ಕೊರೋನಾ ಬಂತು, ಅಲ್ಲಿಂದ ಸೈಲೆಂಟ್‌ ಆಗಿದ್ದ ಚಿತ್ರ ತಂಡ ಈಗ ಹೊಸ ಹೆಸರಲ್ಲಿ ಸದ್ದು ಮಾಡಲು ಹೊರಟಿದೆ.

ʼಬರ್ಕ್ಲಿʼ ಎನ್ನುವುದು ಸುಮನ್‌ ನಿರ್ದೇಶನದ ಹೊಸ ಚಿತ್ರದ ಹೆಸರು. ಅಂದ್ರೆ ಕಾಜಲ್‌ ಹೆಸರಲ್ಲಿ ಸೆಟ್ಟೇರಿ, ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರಕ್ಕೀಗ ʼಬರ್ಕ್ಲಿʼ ಎನ್ನುವ ಹೊಸ ಟೈಟಲ್‌ ಹೊತ್ತಿದೆ. ಅದನ್ನು ಶೀಘ್ರವೇ ಚಿತ್ರ ತಂಡ ರಿವೀಲ್‌ ಮಾಡುವ ಆಲೋಚನೆಯಲ್ಲಿದೆ. ಸದ್ಯಕ್ಕೆ ಈ ಚಿತ್ರದೊಂದಿಗೆ ಕನ್ನಡಕ್ಕೆ ಎಂಟ್ರಿಯಾಗುತ್ತಿರುವ ನೋ ಸ್ಮೋಕಿಂಗ್‌ ಹುಡುಗಿ ಸಿಮ್ರಾನ್‌ ನಟೇಕರ್‌ ಅವರನ್ನು ಹೊಸ ರೀತಿಯಲ್ಲೇ ಪರಿಚಯಿಸಲು ಹೊರಟಿದ್ದಾರೆ. ಮಾರ್ಚ್‌ 31ಕ್ಕೆ ಸ್ಪೆಷಲ್‌ ರಿವೀಲ್‌ ಈವೆಂಟ್‌ ಹಮ್ಮಿಕೊಂಡಿದ್ದಾರೆ. ಆ ಕಥೆ ಇರಲಿ, ಕಾಜಲ್‌ ಎನ್ನುವ ಟೈಟಲ್‌ ಈಗ ʼಬರ್ಕ್ಲಿʼ ಅಂತಾಗಿದ್ದೇಕೆ?

ಬರ್ಕಿಲಿ ಎಂದಾಕ್ಷಣ ಸಿಗರೇಟ್ ಮತ್ತೆ ಕಣ್ಮುಂದೆ ಬರುತ್ತೆ. ಅಲ್ಲಾ. ನೋ‌ ಸ್ಮೋಕಿಂಗ್ ಎಂದ‌ ಬೇಬಿ‌ಡಾಲ್‌ ಇದೀಗʼ ಬರ್ಕ್ಲಿʼ ಹಿಡಿದು ಬರ್ತಿದ್ದಾಳೆ. ಅಂದರೆ ಸಿಗರೇಟ್ ಆರೋಗ್ಯಕ್ಕೆ ಹಾನಿಕಾರ ಅಂತ ಮತ್ತೆ ಮೆಸೇಜ್ ಕೊಡ್ತಾಳಾ ಅಥವಾ ಸಿಗರೇಟ್ ಹೊತ್ತಿಸಿಕೊಂಡು ಗುಲಾಬಿ ತುಟಿಯ ಮೇಲಿಟ್ಟುಕೊಂಡು ಪಡ್ಡೆಹೈಕ್ಳಿಗೆ ಕಿಕ್ಕೇರಿಸ್ತಾಳಾ ? ಈ ಕೌತುಕದ ಕೊಶ್ವನ್ಗೆ ನೀವೆಲ್ಲರೂ 31 ರವರೆಗೆ ಕಾಯಬೇಕು. ಆದ್ರೆ, ಕೊರೊನಾ ಹಾವಳಿಯ ನಡುವೆ ನಿರ್ದೇಶಕ ಸುಮನ್ ಕ್ರಾಂತಿ ಟೈಟಲ್ ನಲ್ಲಿ ಕ್ರಾಂತಿ ಮಾಡಿದ್ದಾರೆ. ʼಬರ್ಕ್ಲಿʼ ಅಂತ ಹೊಸ ಹೆಸರಿಟ್ಟಿದ್ದಾರೆ. ಟೈಟಲ್ ನಿಂದಲೇ ನಶೇಯೇರಿಸೋ ಈ‌ ಚಿತ್ರಕ್ಕೆ ಅನೇಕಲ್ ಬಾಲರಾಜ್ ಬಂಡವಾಳ‌ ಸುರಿಯುತ್ತಿದ್ದಾರೆ. ʼಗಣಪ‌ʼಸಿನಿಮಾ ಖ್ಯಾತಿಯ ಸಂತೋಷ್ ಚಿತ್ರದ ನಾಯಕರಾಗಿದ್ದು, ನೋ ಸ್ಮೋಕಿಂಗ್ ಸುಂದರಿ ಸಿಮ್ರಾನ್ ನಟೇಕರ್ ಸಂತೋಷ್ ಗೆ ಜೊತೆಯಾಗಲಿದ್ದಾರೆ. ಶೀಘ್ರದಲ್ಲೇ “ಬರ್ಕ್ಲಿʼ ನಿಮ್ನೆಲ್ಲರಿಗೂ‌ ಕಿಕ್ಕೇರಿಸಲಿದೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ಬಾಲಿವುಡ್‌ ಗಾಯಕ- ಇವ್ರು ಕಿಚ್ಚ ಸುದೀಪ್‌ ಬಿಗ್‌ಫ್ಯಾನ್‌ !


ಅಲಿ ಕ್ವಿಲಿ ಮಿರ್ಜಾ, ಸದ್ಯಕ್ಕೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಹೆಸರು. ಗಾಯಕ ಕಮ್‌ ನಟ. ಹಿಂದಿ ಬಿಗ್‌ ಬಾಸ್‌ ನ ಮಾಜಿ ಕಂಟೆಸ್ಟೆಂಟ್‌ ಕೂಡ. ಈಗ ನಟನೆಯ ಜತೆಗೆ ಸಿಂಗರ್‌ ಆಗಿಯೇ ಹೆಚ್ಚು ಸದ್ದು ಮಾಡುತ್ತಿರುವ ಅಲಿ ಕ್ವಿಲಿ ಕನ್ನಡಕ್ಕೂ ಬರುತ್ತಿದ್ದಾರೆ. ʼಲವ್‌ಗುರುʼ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ರಾಜ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಲಿ ಕ್ವಿಲಿ ಮಿರ್ಜಾ ಅಭಿನಯಿಸುತ್ತಿದ್ದಾರೆಂಬ ಸುದ್ದಿಯಿದೆ. ಸದ್ಯ ಕ್ಕೆ ಈ ಸಿನಿಮಾದ ಕುರಿತು ಚಿತ್ರ ತಂಡದಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಬಾಲಿವುಡ್‌ ಗಾಯಕ ಅಲಿ ಕ್ವಿಲಿ ನಟರಾಗಿ ಕನ್ನಡಕ್ಕೆ ಬರುತ್ತಿರುವುದು ನೂರಕ್ಕೆ ನೂರಷ್ಟು ಸತ್ಯ. ಅದರಲ್ಲೂ ವಿಶೇಷ ಅಂದ್ರೆ ವಿಲನ್‌ ಅಗಿ ಅವರು ಕನ್ನಡಕ್ಕೆ ಎಂಟ್ರಿ ಆಗುತ್ತಿದ್ದಾರೆನ್ನುವುದು ಇನ್ನು ವಿಶೇಷ.

ಬಾಲಿವುಡ್‌ಮಟ್ಟಿಗೆ ಅಲಿ ಕ್ವಿಲಿ ಸಿಕ್ಕಾಪಟ್ಟೆ ಫೇಮಸ್.‌ ಗಾಯಕರಾಗಿ, ಜತೆಗೆ ನಟರಾಗಿಯೂ ಹೆಸರು ಮಾಡಿದವರು. ಅದಕ್ಕೂ ಮುನ್ನ ಹಿಂದಿಯ ಬಿಗ್‌ಬಾಸ್‌ನಲ್ಲೂ ಸಾಕಷ್ಟು ಹೆಸರು ಮಾಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅಲಿ ಸಿಂಗರ್‌ ಆಗಿಯೇ ಖ್ಯಾತಿ. ಮಿಕ್‌ಸಿಂಗ್‌ ಜೋಡಿಯಾಗಿ “ಇಸ್ಕಂʼ ವಿಡಿಯೋ ಆಲ್ಬಂ ಸಾಂಗ್‌ ಹೊರ ತಂದಿದ್ದಾರೆ. ಹಾಗೆಯೇ ʼಮಿರ್ಜಾಪುರ 2ʼ ವೆಬ್‌ ಸೀರಿಸ್‌ ನಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆಕ್ಟಿಂಗ್‌ ಹಾಗೂ ಸಿಂಗಿಂಗ್‌ ಎರಡರಲ್ಲೂ ಒಟ್ಟಿಗೆ ತೊಡಗಿಸಿಕೊಂಡಿರುವ ಅಲಿ ಕ್ವಿಲಿ, ಈಗ ಸೌತ್‌ ಇಂಡಸ್ಟ್ರಿ ಕಡೆ ಮುಖ ಮಾಡಿದ್ದಾರೆ. ಇದೇ ಉದ್ದೇಶದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಅಲಿ ಕ್ವಿಲಿ ಮಿರ್ಜಾ, ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಸಿನಿ ಲಹರಿ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡರು.

ಹಲೋ ಬೆಂಗಳೂರು ಅಂತಲೇ ಮಾತು ಶುರು ಮಾಡಿದ ಅಲಿ, ಬೆಂಗಳೂರು ಅಂದ್ರೆ ನಂಗೆ ತುಂಬಾ. ಅನೇಕ ಸಲ ಇಲ್ಲಿಗೆ ಬಂದಿದ್ದೇನೆ. ಅಫಿಸಿಯಲಿ ಅಂತ ಬಂದಿದ್ದು ಇದೇ ಮೊದಲು. ಒಂದು ಸಿನಿಮಾ ಉದ್ದೇಶಕ್ಕೆ ಇಲ್ಲಿಗೆ ಬಂದಿದ್ದೇನೆ. ಶೀಘ್ರದಲ್ಲಿಯೇ ಅದರ ವಿಚಾರ ರಿವೀಲ್‌ ಆಗಲಿದೆ ಅಂತ ಪರಿಚಯಿಸಿಕೊಂಡರು. ಕರ್ನಾಟಕ ಹಾಗೂ ಕನ್ನಡ ಇಂಡಸ್ಟ್ರಿ ಬಗ್ಗೆ ಮಾತನಾಡಿದ ಅಲಿ, ರಾಜ್‌ ಕುಮಾರ್‌ ನಂಗೊಂತ್ತು. ಅವರು ಹಾಡಿದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ಹಾಡು ನಂಗಿಷ್ಟ. ಹಾಗೆಯೇ ಎಸ್‌ ಪಿ ಬಿ ಕೂಡ ತುಂಬಾ ಇಷ್ಟ. ಇಬ್ಬರು ಈಗಿಲ್ಲ ಅನ್ನೋದು ತುಂಬಾ ನೋವಿನ ಸಂಗತಿ ಅಂತ ದುಃಖ ವ್ಯಕ್ತಪಡಿಸಿದರು ಅಲಿ ಕ್ವಿಲಿ.

ಸದ್ಯದ ಸ್ಯಾಂಡಲ್‌ ವುಡ್‌ ಸ್ಟಾರ್‌ ಗಳಲ್ಲಿ ಸುದೀಪ್‌ ಅಂದ್ರೆ ಅಲಿಗೆ ತುಂಬಾ ಇಷ್ಟ. ಅವರ ಬಿಗ್‌ ಫ್ಯಾನಂತೆ. ಆ ವಿಚಾರವನ್ನು ಸಂದರ್ಶನದಲ್ಲಿ ರಿವೀಲ್‌ ಮಾಡಿದರು. ” ನಾನು ಸುದೀಪ್‌ ಅವರ ಬಿಗ್‌ ಫ್ಯಾನ್.‌ ಹಿಂದಿಗೆ ಡಬ್‌ ಆಗಿ ಬಂದ ಅವರ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಸ್ಪೆಷಲ್‌ ಅಂದ್ರೆ ಅವರ ಈಗ ಸಿನಿಮಾ ನನ್ನ ಫೆವರೇಟ್‌ ಮೂವೀʼ ಅಂದ್ರು ಅಲಿ ಕ್ವಿಲಿ ಮಿರ್ಜಾ.
ಬಾಲಿವುಡ್‌ ಮಟ್ಟಿಗೆ ಮಿರ್ಜಾ ಸಿಕ್ಕಾಪಟ್ಟೆ ಬೇಡಿಕೆ ಇರುವ ನಟ ಹಾಗೂ ಸಿಂಗರ್.‌ ಇಷ್ಟಾಗಿಯೂ ಕಿಂಚಿತ್ತು ಅಹಂಕಾರ ಇಲ್ಲ ಅವರಿಗೆ ಹೆಚ್ಚು ಕಡಿಮೆ, ಅರ್ಧ ಗಂಟೆಗೂ ಹೆಚ್ಚು ಕಾಲ ಸಂದರ್ಶನದಲ್ಲಿ ಕಾಮಿಡಿ ಲವಲವಿಕೆಯಿಂದಲೇ ಮಾತನಾಡಿದರು. ಹಾಡುತ್ತಾ, ಮಿಮಿಕ್ರಿ ಮಾಡುತ್ತಾ, ನಗುತ್ತಾ, ಡೈಲಾಗ್‌ ಹೊಡೆಯುತ್ತಾ ಮಾತನಾಡಿದರು. ” ನಾನು ಕನ್ನಡಕ್ಕೆ ಬರುತ್ತಿದ್ದೇನೆ, ಖುಷಿಆಗುತ್ತಿದೆ. ನಿಮ್ಮೆಲ್ಲರ ಬೆಂಬಲ ಬೇಕಿದೆʼ ಅಂತ ಖಡಕ್‌ ವಿಲನ್‌ ಲುಕ್‌ ಕೊಟ್ಟರು.

Categories
ಸಿನಿ ಸುದ್ದಿ

ಮಗಳು ಚಾರಿತ್ರ್ಯಾ ಬರ್ತ್‌ ಡೇ ಗೆ ವಿಶೇಷವಾಗಿ ವಿಶ್‌ ‌ ಹೇಳಿದ ನಟ ಗಣೇಶ್‌

ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪುತ್ರಿ ಚಾರಿತ್ರ್ಯಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಮಗಳ ಹುಟ್ಟು ಹಬ್ಬದ ಸಂದರ್ಭದಲ್ಲೀಗ ” ಸಕತ್‌ʼ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಟ ಗಣೇಶ್‌, ವಿಡಿಯೋ ಮೂಲಕ ಮಗಳಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದು, ಆ ವಿಡಿಯೋ ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಾಗಂತ ಅವರು ವಿಶ್‌ ಮಾಡಿದ್ದಕ್ಕಷ್ಟೆ ಈ ವಿಡಿಯೋ ವೈರಲ್‌ ಆಗಿದೆ ಅಂತಲ್ಲ, ಪುತ್ರಿ ಚಾರಿತ್ಯ್ರಾ ಡಾನ್ಸ್‌ ಮಾಡುವ ವಿಡಿಯೋ ಹಾಕಿ, ಬರ್ತ್‌ ಡೇ ವಿಶ್‌ ಮಾಡಿದ್ದಾರೆ. ಚಾರಿತ್ರ್ಯಾ ಅಲ್ಲಿ ಸಖತ್‌ ಆಗಿಯೇ ಡಾನ್ಸ್‌ ಮಾಡಿದ್ದಾರೆ. ಗಣೇಶ್‌ ಅಭಿಮಾನಿಗಳಿಗೆ ಇದು ಸಖತ್‌ ಖುಷಿಕೊಟ್ಟಿದೆ.

ತಂದೆಯಂತೆಯೇ ಮಗಳು ಕೂಡ ಸಿನಿಮಾ ರಂಗಕ್ಕೆ ಬರುವುದು ಖಾತರಿ ಇದೆ ಅನ್ನೋದು ಈ ವಿಡಿಯೋ ವೈರಲ್‌ ಆಗೋದಿಕ್ಕೆ ಕಾರಣವಾಗಿದೆ. ಗಣೇಶ್‌ ಅಭಿಮಾನಿಗಳು ಚಾರಿತ್ರ್ಯಾಗೆ ಭರ್ಜರಿಯಾಗಿಯೇ ಬರ್ತ್‌ ಡೇ ವಿಶ್‌ ಮಾಡಿದ್ದಾರೆ. ಸದ್ಯಕ್ಕೀಗ ನಟ ಗಣೇಶ್‌ ʼ ಗಾಳಿ ಪಟ 2 ʼ ಹಾಗೂ ಸಖತ್‌ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ʼಗಾಳಿಪಟ 2ʼ ಚಿತ್ರೀಕರಣಕ್ಕಾಗಿ ಇತ್ತೀಚೆಗಷ್ಟೆ ಕಜಕಿಸ್ತಾನ್‌ ಗೂ ಹೋಗಿ ಬಂದಿದ್ದಾರೆ. ಈಗ ʼಸಕತ್‌ʼ ಚಿತ್ರೀಕರಣ ಭರದಿಂದ ಸಾಗಿದೆ. ಮುಂದೆ ಪ್ರಶಾಂತ್‌ ರಾಜ್‌ ನಿರ್ದೇಶನದ ಮತ್ತೊಂದು ಚಿತ್ರಕ್ಕೂ ಗಣೇಶ್‌ ನಾಯಕರಾಗಿದ್ದಾರೆನ್ನುವ ಸುದ್ದಿಯಿದೆ.

Categories
ಸಿನಿ ಸುದ್ದಿ

ಕಟಿಂಗ್‌ ಶಾಪ್‌ ನಲ್ಲಿ ಕಾಮಿಡಿ ಕಿಕ್-‌ ಹೊಸಬರ ಚಿತ್ರದ ಟೀಸರ್‌ ಗೆ ಭರ್ಜರಿ ರೆಸ್ಪಾನ್ಸ್‌ !

ಇದೇನು ಚಿತ್ರದ ಟೈಟಲ್‌ ಹೀಗಿದೆ ? ” ಕಟಿಂಗ್‌ ಶಾಪ್‌ʼ ಎನ್ನುವ ಚಿತ್ರದ ಟೈಟಲ್‌ ಕೇಳಿದವರಿಗೆ ತಕ್ಷಣಕ್ಕೆ ಹೀಗೆನಿಸುವುದು ಅಷ್ಟೇ ಸಹಜ. ಯಾಕಂದ್ರೆ, ಕಟಿಂಗ್‌ ಶಾಪ್‌ ಅಂದಾಕ್ಷಣ ನಮಗೆಲ್ಲ ತಕ್ಷಣಕ್ಕೆ ಕಣ್ಣ ಮುಂದೆ ಬರೋದೇ ಬೇರೆ. ಆದ್ರೆ ಇದು ಅದಲ್ಲ. ಅದಕ್ಕೂ ಈ ಚಿತ್ರಕ್ಕೂ ಯಾವುದೇ ಕನೆಕ್ಷನ್‌ ಕೂಡ ಇಲ್ಲ. ಇದು ಸಿನಿಮಾ ಸಂಕಲನಕಾರನೊಬ್ಬನ ಕಥೆ. ಸಿನಿ ದುನಿಯಾದಲ್ಲಿ ಇಲ್ಲಿ ತನಕ ನಿರ್ದೇಶಕರು, ಸಂಗೀತ ನಿರ್ದೇಶಕರು ಸೇರಿದಂತೆ ವಿವಿಧ ವಿಭಾಗಗಳಲ್ಲಿನ ವ್ಯಕ್ತಿಗಳ ಕುರಿತು ಸಿನಿಮಾ ಬಂದಿವೆ. ಆದ್ರೆ ಸಿನಿಮಾ ಇತಿಹಾಸದಲ್ಲೇ ಫಸ್ಟ್‌ ಟೈಮ್‌ ಸಿನಿಮಾ ಎಡಿಟರ್‌ ಮೇಲೊಂದು ಸಿನಿಮಾ ಮಾಡಿ ತೆರೆಗೆ ತರಲು ಹೊರಟಿದ್ದಾರೆ ಯುವ ನಿರ್ದೇಶಕ ಪವನ್‌ ಭಟ್. ಗುರುಪುರ ಕೆ. ಉಮೇಶ್‌ ಹಾಗೂ ಕೆ. ಗಣೇಶ ಐತಾಳ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

ಗುರುವಾರ ಸಂಜೆ ಈ ಚಿತ್ರದ ಟೀಸರ್‌ ಲಾಂಚ್‌ ಆಗಿದೆ. ಪಿಆರ್‌ಕೆ ಆಡಿಯೋ ಸಂಸ್ಥೆಯ ಮೂಲಕ ಇದು ಹೊರ ಬಂದಿದೆ. ಡಾಲಿ ಖ್ಯಾತಿಯ ನಟ ಧನಂಜಯ್‌ ಟೀಸರ್‌ ಲಾಂಚ್‌ ಮಾಡಿ, ಹೊಸಬರಿಗೆ ಶುಭ ಕೋರಿದ್ದಾರೆ. ಚಿತ್ರದ ಶೀರ್ಷಿಕೆಯ ಹಾಗೆಯೇ ಟೀಸರ್‌ ತುಂಬಾನೆ ಡಿಫೆರೆಂಟ್‌ ಆಗಿದೆ. ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್‌ ನೀಡುತ್ತಿದೆ. ಟೀಸರ್‌ ಪ್ರತಿ ಸೀನ್‌ ಮಜಾ ವಾಗಿದೆ.

ಸಿನಿಮಾ, ಪ್ರೇಮ, ಕಾಲೇಜು ಕತೆಗಳ ಸುತ್ತಲ ದೃಶ್ಯದ ತುಣುಕುಗಳು ಕಾಮಿಡಿಯ ಕಿಕ್ಕೋ ಕಿಕ್.‌ ಲಾಂಚ್‌ ಕೆಲವೇ ಗಂಟೆಗಳಲ್ಲಿ ಅದು ಸೋಷಲ್‌ ಮೀಡಿಯಾದಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿತ್ತು. ಇದು ಬಿಡಿ, ಟೀಸರ್‌ ಮಾಡಿದ ಸಂದರ್ಭವೇ ಡಿಫೆರೆಂಟ್‌ ಆಗಿತ್ತು. ಚಿತ್ರ ತಂಡ ಅವತ್ತು ನಟ ಧನಂಜಯ್‌ ಅವರನ್ನು ಭೇಟಿ ಮಾಡಿತ್ತು. ಹೋಗುವ ಮುನ್ನವೇ ಧನಂಜಯ್‌ ಅವರಿಂದ ಅಪಾಯಿಂಟ್‌ ಮೆಂಟ್‌ ಪಡೆದಿತ್ತು. ಹೋಗುವಾಗ ತಾವುಮಾಧ್ಯಮದವರು, ಸಂದರ್ಶನ ಬೇಕು ಅಂತ ಹೇಳಿತ್ತು. ಕೊನೆಗೆ ಧನಂಜಯ್‌ ಅವರನ್ನು ಭೇಟಿ ಮಾತಿಗೆ ಕುಳಿತಾಗ ತಾವೊಂದು ಸಿನಿಮಾ ಟೀಮ್‌ ಕಡೆಯಿಂದ ಬಂದಿದ್ದೇವೆ. ಕಟಿಂಗ್‌ ಶಾಪ್‌ ಅಂತ ಸಿನಿಮಾ ಅಂತಂದಾಗ ಧನಂಜಯ್‌ ಅವರೇ ಶಾಕ್.‌ ಹಾಗೊಂದು ಡಿಫೆರೆಂಟ್‌ ಸ್ಟೈಲ್‌ ನಲ್ಲಿʼ ಕಟಿಂಗ್‌ ಶಾಪ್‌ʼ ಟೀಸರ್‌ ಲಾಂಚ್‌ ಆಗಿದೆ.

ನವ ಪ್ರತಿಭೆ ಪವನ್‌ ಭಟ್‌ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಅವರು ಆಪರೇಷನ್‌ ಅಲಮೇಲಮ್ಮ, ಮಾಯಾ ಬಜಾರ್‌, ಅಳಿದು ಉಳಿದವರು, ರಾಂಚಿ ಸೇರಿದಂತೆ ಹಲವು ಚಿತ್ರಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯ ಕೂಡ ಬರೆದಿದ್ದಾರೆ. ಇದೇ ಮೊದಲು ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ ವುಡ್‌ ಗೆ ಎಂಟ್ರಿಯಾಗಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯದ ಜತೆಗೆ ನಿರ್ದೇಶನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವರಿಗೆ ಕೆ.ಬಿ. ಪ್ರವೀಣ್‌ ಕೂಡ ಸಾಥ್‌ ನೀಡಿದ್ದಾರೆ. ಹಾಗೆಯೇ ಪ್ರವೀಣ್‌ ಈ ಚಿತ್ರದಲ್ಲಿ ನಾಯಕನಟರಾಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲ ಸಂಗೀತ ನಿರ್ದೇಶನದ ಜವಾಬ್ದಾರಿಯೂ ಅವರದ್ದೇ. ಸ್ಕಂದ ರತ್ನ ಛಾಯಾಗ್ರಹಣ ಮಾಡಿದ್ದಾರೆ. ಸಾಗರ್‌ ಗಣೇಶ್‌ ಸಂಕಲನ ಈ ಚಿತ್ರಕ್ಕಿದೆ. ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ದೀಪಕ್ ಭಟ್, ಅಭಿಷೇಕ್ ಸಾವಳಗಿ, ನವೀನ್ ಕೃಷ್ಣ , ಹಿರಿಯ ನಿರ್ದೇಶಕ ಭಗವಾನ್‌, ಓಂ ಪ್ರಕಾಶ್‌ ರಾವ್‌ ಜತೆಗೆ ರಾಬರ್ಟ್‌ ಖ್ಯಾತಿಯ ನಿರ್ದೇಶಕ ತರುಣ್‌ ಸುಧೀರ್‌ ಕೂಡ ಇದ್ದಾರೆ. ಸದ್ಯಕ್ಕೆ ಚಿತ್ರ ತಂಡ ಟೀಸರ್‌ ಲಾಂಚ್‌ ಮೂಲಕ ಸದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಟ್ರೇಲರ್‌ ಮೂಲಕ ಸೌಂಡ್‌ ಮಾಡಲು ಸಿದ್ಧತೆ ನಡೆಸಿದೆ.

Categories
ಸಿನಿ ಸುದ್ದಿ

ತನ್ನ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕಿಸಲು ಸಜ್ಜಾದ ಹೊಂಬಾಳೆ ಫಿಲಂಸ್

‌ಕೊರೊನಾ ಎರಡನೇ ಅಲೆ ಈಗ ಆತಂಕ ಮೂಡಿಸಿದೆ. ಈಗಾಗಲೇ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಲಸಿಕೆಯೂ ಬಂದಿದೆ. ಒಂದಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದರೂ, ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಒಂದಷ್ಟು ಮಂದಿ ಸ್ವತಃ ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ಕೆಲ ಸಂಸ್ಥೆಗಳು ಕೂಡ ತಮ್ಮ ತಮ್ಮ ಸಿಬ್ಬಂದಿಗಳಿಗೆ ಲಸಿಕೆ ಹಾಕಿಸುವ ಕೆಲಸಕ್ಕೆ ಮುಂದಾಗಿವೆ. ಅದೇ ನಿಟ್ಟಿನಲ್ಲಿ, ಕನ್ನಡ ಚಿತ್ರರಂಗದಲ್ಲಿರುವ ಹೊಂಬಾಳೆ ಫಿಲಂಸ್‌ ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಆರೋಗ್ಯ ಹಿತದೃಷ್ಟಿಯಿಂದಾಗಿ ಕುಟುಂಬದವರಿಗೆ ಉಚಿತ ಕೊರೊನಾ ಲಸಿಕೆ ಹಾಕಿಸಲು ಸಜ್ಜಾಗಿದ್ದಾರೆ.
ತಮ್ಮ ಕಂಪೆನಿಯಲ್ಲಿ ದುಡಿಮೆ ಮಾಡುತ್ತಿರುವ ಉದ್ಯೋಗಿಗಳ ಆರೋಗ್ಯ ಮುಖ್ಯ ಎಂದು ಹೇಳಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರು, ಉಚಿತ ಕೊರೊನಾ ಲಸಿಕೆ ಹಾಕಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅವರೀಗ ಸರ್ಕಾರದ ಮಾರ್ಗಸೂಚಿಯಂತೆ ಕೊರೊನಾ ಲಸಿಕೆ ಹಾಕಿಸಲು ತಯಾರಿ ನಡೆಸಿದ್ದಾರೆ.

ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿರುವ ವಿಜಯ್‌ ಕಿರಗಂದೂರು, “ಕೊರೊನಾ ಮುಕ್ತ ಆಗಲು ಲಸಿಕೆ ಬಹಳ ಮುಖ್ಯ. ನೀವೆಲ್ಲರೂ ಸಹ ಲಸಿಕೆ ಹಾಕಿಸಿಕೊಳ್ಳಿ ಮತ್ತು ಆರೋಗ್ಯವಾಗಿರಿ’ ಎಂದು ಬರೆದುಕೊಂಡಿದ್ದಾರೆ. ಹೊಂಬಾಳೆ ಫಿಲಂಸ್‌ ಮೂಲಕ ಈ ಕಾರ್ಯಕ್ಕೆ ಮುಂದಾಗಿರುವ ವಿಜಯ್‌ ಕಿರಗಂದೂರು ಅವರ ನಿರ್ಧಾರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಗುತ್ತಿದೆ. ಸದ್ಯ ಈ ಹೊಂಬಾಳೆ ಫಿಲಂಸ್‌ ಸಂಸ್ಥೆ ಎರಡು ಬಿಗ್‌ಬಜೆಟ್‌ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಬಿಡುಗಡೆಗೆ ಎದುರು ನೋಡುತ್ತಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಹಾಗೂ “ಕೆಜಿಎಫ್-2” ಚಿತ್ರ ಬಿಡುಗಡೆ ದಿನ ಘೋಷಿಸಿವೆ. ತೆಲುಗಿನ ನಟ ಪ್ರಭಾಸ್ ಅವರ “ಸಲಾರ್” ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ.

Categories
ಸಿನಿ ಸುದ್ದಿ

ಹೊಸಬರಿಗೆ ಸಾಥ್‌ ನೀಡೋದ್ರಲ್ಲಿ ತಪ್ಪೇನಿದೆ ಅಂತ ? ಇದು ನಟ ಪ್ರೇಮ್‌ ಪ್ರಶ್ನೆ

ಹೊಸಬ್ರು ಯಾರೇ ಬರ್ಲಿ, ಅವ್ರೀಗೆ‌ ಸಂಪೋರ್ಟ್‌ ಮಾಡ್ಬೇಕು ಅನ್ನೋದು ನನ್‌ ಸೂತ್ರ. ಆದ್ರೆ ಇದು ಕೆಲವರಿಗೆ ಹಿಡಿಸಲ್ಲ. ಅವ್ರೀಗೆ ಒಂಥರ ಬೇಸರ. ಯಾಕೆ ನೀನು ಎಲ್ರಿಗೂ ಸಪೋರ್ಟ್‌ ಮಾಡ್ತೀಯಾ ಅಂತ ಕೇಳ್ತಾರೆ. ಅವ್ರ ಮಾತಲ್ಲಿ ಒಂಥರ ವ್ಯಂಗ್ಯ ಇರುತ್ತೆ. ಆದ್ರೆ ಅದಕ್ಕೆ ನಾನು ಎಂದಿಗೂ ತಲೆ ಕಡಿಸಿಕೊಂಡಿಲ್ಲ. ನಾನೇನ್‌ ಅನ್ಕೊಳ್ತೇನೋ ಅದ್ನ ಮಾಡೋಣ ಅನ್ನೋದು ನನ್‌ ಥಿಯೇರಿ…

ನಟ ನೆನಪಿರಲಿ ಪ್ರೇಮ್‌, ಈ ಮಾತುಗಳನ್ನು ತುಂಬಾ ನಿಷ್ಟುರವಾಗಿಯೇ ಹೇಳಿದರು. ತಮ್ಮ ಮನಸ್ಸಿನಲ್ಲಿ ಏನೀತೊ ಅದನ್ನು ಹಿಂದು- ಮುಂದು ನೋಡದಯೇ ಹೊರ ಹಾಕಿದರು. ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ “ಅಕ್ಷಿʼ ಚಿತ್ರ ತಂಡ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಪ್ರೇಮ್‌ ಭಾಗವಹಿಸಿದ್ದರು. ಅದಕ್ಕೆ ಕಾರಣ ನಿರ್ಮಾಪಕ ಕಲಾ ದೇಗುಲ ಶ್ರೀನಿವಾಸ್.‌ ಪ್ರೇಮ್‌ ಹಾಗೂ ಶ್ರೀನಿವಾಸ್‌ ಇಬ್ಬರು ಹಲವು ವರ್ಷಗಳ ಸ್ನೇಹಿತರು. ಹಾಗಾಗಿಯೇ ʼಅಕ್ಷಿʼ ಗೆ ರಾಷ್ಟ್ರ ಪ್ರಶಸ್ತಿ ಬಂದ ವಿಚಾರ ಗೋತ್ತಾಗುತ್ತಿದ್ದಂತೆಯೇ ಆ ಚಿತ್ರ ತಂಡವನ್ನು ತಮ್ಮ ಮನೆಗೆ ಅಹ್ವಾನಿಸಿ, ಅಭಿನಂದನೆ ಹೇಳಿದ್ದರಂತೆ ಪ್ರೇಮ್. ಆದರೂ ಅವತ್ತು ಮಾಧ್ಯಮದ ಮುಂದೆ ಚಿತ್ರ ತಂಡವನ್ನು ಅಭಿನಂದಿಸಿ ಮಾತನಾ‌ ಡಿದರು.

” ಎಲ್ಲರೂ ಒಂದು ಸಮಯದಲ್ಲಿ ಇಲ್ಲಿಗೆ ಹೊಸಬರೇ. ನಾನೂ ಕೂಡ ಒಂದ್‌ ಟೈಮ್‌ ನಲ್ಲಿ ಇಲ್ಲಿಗೆ ಹೊಸಬನೇ ಅಗಿದ್ದೆ. ಆಗ ಸಾಕಷ್ಟು ಜನ ಇಲ್ಲಿ ನನ್ನನ್ನು ಬೆಂಬಲಿಸಿ, ಪ್ರೋತ್ಸಾಹಿಸಿದ್ದರ ಫಲವಾಗಿ ನಾನಿಲ್ಲಿ ನಟನಾಗಿ ಗುರುತಿಸಿಕೊಳ್ಳುವಂತಾಯಿತು. ಈಗ ಬರುವ ಹೊಸಬರು ಕೂಡ ಅಷ್ಟೆಯೇ. ಅವರಿಗೂ ಒಂದು ಬೆಂಬಲ, ಪ್ರೋತ್ಸಾಹ ಸಿಕ್ಕರೆ, ಅವರು ಕೂಡ ತಾವಂದು ಕೊಂಡಿದ್ದನ್ನು ಸಾಧಿಸಲು ಸಾಧ್ಯ. ಶ್ರೀನಿವಾಸ್‌, ಬೆಂಬಲ ಕೊಟ್ಟು ಸಿನಿಮಾ ಮಾಡದಿದ್ದರೆ ಮನೋಜ್‌ ಕುಮಾರ್‌ ಎಂಬ ಯುವಕ ಇವತ್ತು ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿ ಇಷ್ಟು ಸುದ್ದಿಯಲ್ಲಿ ಇರುತ್ತಿರಲಿಲ್ಲ. ಇವತ್ತು ಇವರನ್ನು ಇನ್ನಷ್ಟು ಪ್ರೋತ್ಸಾಹಿಸಿ, ಬೆಂಬಲಿಸಿದರೆ ಮುಂದೆ ಮತ್ತಷ್ಟು ಪ್ರಶಸ್ತಿ ಸಿನಿಮಾಗಳನ್ನು ಮಾಡಬಹುದುʼ ಅಂತ ಪ್ರೇಮ್‌ ಹೇಳಿದರು.

ʼ ಹೊಸಬರು ಯಾರೇ ಬರಲಿ ಅವರಿಗೆ ನಮ್ಮಿಂದಾದ ಬೆಂಬಲ, ಪ್ರೋತ್ಸಾಹ ನೀಡಬೇಕೆನ್ನುವುದು ನನ್ನ ಥಿಯೇರಿ. ಆದ್ರೆ ಇದು ಕೆಲವರಿಗೆ ಹಿಡಿಸಲ್ಲ. ಯಾಕೆ ಎಲ್ಲರಿಗೂ ನೀವು ಬೆಂಬಲ ನೀಡಿತ್ತೀರಿ ಅಂತ ಕೆಲವರು ಕೇಳುತ್ತಾರೆ. ಆದ್ರೂ ನಾನು ಅವರ ಮಾತಿಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಇದು ಚಿತ್ರ ರಂಗಕ್ಕೆ ಬಂದ ಹೊಸಬರಿಗೆ ನನ್ನಿಂದಾದ ಸಹಾಯ ಅಂತ ಹೊಸಬರ ಚಿತ್ರಗಳ ಟೀಸರ್‌, ಟ್ರೇಲರ್‌ ಲಾಂಚ್‌ ಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತೇನೆ. ಮುಂದೆಯೂ ಮಾಡುತ್ತೇನೆʼ ಎಂದರು ಪ್ರೇಮ್.‌ ಇನ್ನು ನಟ ಪ್ರೇಮ್‌ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಇಫ್ಟಾ ಬೀದಿ ನಾಟಕ ತಂಡದಿಂದ ಸಿನಿಮಾ ರಂಗಕ್ಕೆ ಬಣದವರು. ಈಗಲೂ ಒಂದಷ್ಟು ಬದ್ಧತೆ ಉಳಿಸಿಕೊಂಡೇ ಬಣ್ಣ ಹಚ್ಚುತ್ತಿದ್ದಾರೆ. ಸ್ಟಾರ್‌ ಅಂತ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಎಲ್ಲರನ್ನು ಒಳಗೊಳ್ಳುವ ಅವರ ಸ್ನೇಹಪರ ನಿಲುವೇ ವಿಶೇಷ.

Categories
ಸಿನಿ ಸುದ್ದಿ

ʼಅಕ್ಷಿʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬರಲು ವರನಟ ಡಾ. ರಾಜ್‌ ಕುಮಾರ್‌ ಅವರೇ ಕಾರಣವಂತೆ !!

ರಾಷ್ಟ್ರ ಪ್ರಶಸ್ತಿಗೆ ಕಾರಣ ನಾವಲ್ಲ, ನಮ್‌ ಪ್ರಕಾರ ಅದಕ್ಕೆ ಪರೋಕ್ಷವಾಗಿ ಕಾರಣವಾದವರು ವರನಟ ಡಾ. ರಾಜ್‌ ಕುಮಾರ್‌….

  • ಪ್ರಾದೇಶಿಕ ವಿಭಾಗದಲ್ಲಿ ಕನ್ನಡದಿಂದ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ ʼಅಕ್ಷಿʼ ಚಿತ್ರದ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌ ಹಾಗೂ ನಿರ್ದೇಶಕ ಮನೋಜ್‌ ಕುಮಾರ್‌ ಇಬ್ಬರು ಹೀಗೆ ಹೇಳಿ ಅಚ್ಚರಿ ಮೂಡಿಸಿದರು.
    ನಿಜಕ್ಕೂ ಒಂದು ಕ್ಷಣ ಅಲ್ಲಿ ಅಚ್ಚರಿಯೇ ಆಗಿದ್ದು. ಯಾಕಂದ್ರೆ ರಾಜ್‌ ಕುಮಾರ್‌ ಅವರು ಈ ಪ್ರಶಸ್ತಿಗೆ ಹೇಗೆ ಕಾರಣ ಆದ್ರೂ ಅಂತ. ಆ ಮೇಲೆ ಇಬ್ಬರು ವಿವರಣೆ ಕೊಟ್ಟರು. ಇದು ಆಗಿದ್ದು ಚಿತ್ರ ತಂಡ ಬಧುವಾರವಷ್ಟೇ ನಡೆಸಿದ ಪ್ರಶಸ್ತಿ ಸಂಭ್ರಮದ ಸುದ್ದಿಗೋಷ್ಟಿಯಲ್ಲಿ.

ನಿರ್ಮಾಪಕ ಕಮ್‌ ನಿರೂಪಕ ಕಲಾದೇಗುಲ ಶ್ರೀನಿವಾಸ್‌ ಸೇರಿದಂತೆ “ಅಕ್ಷಿʼ ಚಿತ್ರ ತಂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಅದರಲ್ಲೂ ಶ್ರೀನಿವಾಸ್‌ ಅತೀವ ಸಂಭ್ರಮದಲ್ಲಿದ್ದಾರೆ. ರಾಷ್ಟ್ರ ಪ್ರಶಸ್ತಿಗೆ ಭಾಜನವಾದ ʼಅಕ್ಷಿʼ ಚಿತ್ರವು ಅವರ ನಿರ್ಮಾಣದ ಮೊಟ್ಟ ಮೊದಲ ಚಿತ್ರ. ಅದಕ್ಕೀಗ ೬೭ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆಯ ಪ್ರಾದೇಶಿಕ ವಿಭಾಗದಲ್ಲಿ ಕನ್ನಡದಿಂದ “ಅಕ್ಷಿʼ ಅತ್ಯುತ್ತಮ ಪ್ರಶಸ್ತಿಗೆ ಪಾತ್ರವಾಗಿದೆ. ಅವರಂತೆಯೇ ಇಡೀ ತಂಡ ಕೂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಅ ಖುಷಿ ಹಂಚಿಕೊಳ್ಳುವುದಕ್ಕಾಗಿಯೇ ಚಿತ್ರ ತಂಡ ಬಧುವಾರ ಮಾಧ್ಯಮದ ಮುಂದೆ ಬಂದಿತ್ತು.

ನಿರೂಪಕ ಕಮ್‌ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌ ಮೊದಲು ಮಾತು ಶುರು ಮಾಡಿದರು. ಆರಂಭದಲ್ಲಿ ನಮಗೆ ಒಂದು ಸದಭಿರುಚಿಯ ಚಿತ್ರ ಮಾಡ್ಬೇಕು ಅನ್ನೊದಷ್ಟೇ ಇತ್ತು. ಅದಕ್ಕೊಂದು ಒಳ್ಳೆಯ ಕಥೆ ಕೂಡ ಬೇಕು ಅಂತ ಯೋಚಿಸುತ್ತಿದ್ದಾಗ ಗೆಳೆಯರು ಆದ ನಿರ್ದೇಶಕ ಮನೋಜ್‌ ಕುಮಾರ್‌ ತಾವೇ ಬರೆದಿದ್ದ ಒಂದು ಕಥೆ ತಂದ್ರು. ಈ ಕಥೆ ಸಿನಿಮಾ ಮಾಡಿದ್ರೆ ಹೇಗೆ ಅಂತ ಹೇಳಿದ್ರು. ನನ್ನ ನಿರ್ಮಾಣದ ಮೊದಲ ಸಾಹಸಕ್ಕೆ ಇದೇ ಕಥೆ ಸೂಕ್ತ ಎನಿಸಿತು. ಆಗ ಶುರುವಾಗಿದ್ದು ʼಅಕ್ಷಿʼ ಚಿತ್ರ. ಇವತ್ತು ಅದೇ ಕಥೆಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಇದಕ್ಕೆ ನಿಜಕ್ಕೂ ಕಾರಣರು ನಾವಲ್ಲ. ಆ ಕಥೆ. ಆ ಕಥೆಯ ಪ್ರೇರಕರು ವರನಟ ಡಾ. ರಾಜ್‌ ಕುಮಾರ್.‌ ಅವರೇ ಈ ಪ್ರಶಸ್ತಿಗೆ ಕಾರಣ ಅಂದ್ರು ʼ ನಿರ್ಮಾಪಕ ಶ್ರೀನಿವಾಸ್.

‌ಅದು ಸರಿ, ರಾಜ್‌ಕುಮಾರ್‌ ಇಲ್ಲಿ ಹೇಗೆ ಪ್ರಶಸ್ತಿಗೆ ಕಾರಣರಾದ್ರು ? ಸುದ್ದಿಗೋಷ್ಟಿಯಲ್ಲಿ ಅದಕ್ಕೆ ಕಾರಣ ಕೊಟ್ಟರು ನಿರ್ದೇಶಕ ಮನೋಜ್‌ ಕುಮಾರ್.”‌ ಈ ಕಥೆ ಹುಟ್ಟಿದ್ದಕ್ಕೆ ಕಾರಣವೇ ರಾಜ್‌ ಕುಮಾರ್‌ ಅವರು. ನಂದು ಊರು ಹಾಸನ ಜಿಲ್ಲೆ ಬೇಲೂರು. ವರನಟ ರಾಜ್‌ ಕುಮಾರ್‌ ಅವರು ನಿಧನರಾದ ದಿನಗಳಲ್ಲಿ ನಾನಾಗ ಊರಲ್ಲಿದ್ದೆ. ಅವರು ಇನ್ನಿಲ್ಲ ಅಂತ ಜನ್ರು ದುಃಖ ಪಡುತ್ತಿದ್ದ ಹೊತ್ತಲೇ ಅವರು, ಕಣ್ಣನ್ನು ದಾನ ಮಾಡಿದ್ರಂತೆ ಅಂತ ಅಚ್ಚರಿ ವ್ಯಕ್ತಪಡಿಸುತ್ತಿದ್ರು. ಆ ಸಂಬಂಧ ಸಾಕಷ್ಟು ಸುದ್ದಿಗಳು ಬಂದಿದ್ದವು. ಅದು ನಂಗೆ ಒಂಥರ ಕಾಡ ತೊಡಗಿತು. ನೇತ್ರ ದಾನ ಅನ್ನೋದು ಹೇಗೆ ಇನ್ನೊಬ್ಬರ ಬದುಕಲ್ಲಿ ಬೆಳಕು ನೀಡುತ್ತದೆ ಅಂತ ಕುತೂಹಲ ಮೂಡಿಸಿತು. ಅದನ್ನೇ ಇಟ್ಟುಕೊಂಡು ನಾನು ಈ ಕಥೆ ಬರೆದೆ. ಮುಂದೆ ಶ್ರೀನಿವಾಸ್‌ ಅವರು ಒಂದೊಳ್ಳೆಯ ಸಿನಿಮಾ ಮಾಡೋಣ ಅಂತ ಹೊರಟಾಗ ಅವರಿಗೆ ಈ ಕಥೆ ಹೇಳಿದೆ. ಅವರಿಗೂ ಇಷ್ಟ ಆಯ್ತುʼ ಅಂತ ಪ್ರಶಸ್ತಿಗೆ ಅಣ್ಣಾವ್ರು ಕಾರಣವಾಗಿದ್ದರ ಹಿಂದಿನ ಸಂಗತಿ ರಿವೀಲ್‌ ಮಾಡಿದರು ಮನೋಜ್.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಕಿರಿತೆರೆಯ ಜನಪ್ರಿಯ ನಟಿ ಇಳಾ ವಿಟ್ಲಾ, ಬಾಲ ನಟರಾದ ಮಿಥುನ್‌, ನಾಗರಾಜ್‌ , ಕಸ್ತೂರಿ ಸೇರಿದಂತೆ ಮತ್ತಿತರರು ಚಿತ್ರದಲ್ಲಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಹಾಜರಿದ್ದ ಗೋವಿಂದೇಗೌಡ, ಇಳಾ ವಿಟ್ಲಾ ತಮ್ಮ ಪಾತ್ರಗಳ ಜತೆಗೆ ಚಿತ್ರೀಕರಣ ಅನುಭವ ಹಂಚಿಕೊಂಡರು. ಹಾಗೆಯೇ ರಾಷ್ಟ್ರ ಪ್ರಶಸ್ತಿ ಬಂದಿದ್ದು ತುಂಬಾನೆ ಖುಷಿ ಕೊಟ್ಟಿದೆ.ಹಾಗೆಯೇ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ ಅಂತಂದ್ರು. ಚಿತ್ರಕ್ಕೆ ಮುಕಲ್‌ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಶ್ರೀನಿವಾಸ್‌ ಜತೆಗೆ ರವಿ ಹಾಗೂ ರಮೇಶ್‌ ಬಂಡವಾಳ ಹಾಕಿದ್ದಾರೆ. ಅವರಿಗೂ ಈಗ ರಾಷ್ಟ್ರ ಪ್ರಶಸ್ತಿ ಬಂದಿರೋದು ಹೊಸ ಉತ್ಸಾಹ ತಂದಿದೆ. ಚಿತ್ರವನ್ನು ಇಷ್ಟರಲ್ಲಿಯೇ ಚಿತ್ರಮಂದಿರಕ್ಕೆ ತರಲು ಚಿತ್ರ ತಂಡ ಮುಂದಾಗಿದೆ. ಶ್ರೀನಿವಾಸ್‌ ಜತೆಗಿನ ಸ್ನೇಹದ ಕಾರಣಕ್ಕೆ ನಟ ನೆನಪಿರಲಿ ಪ್ರೇಮ್‌ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದು , ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

Categories
ಸಿನಿ ಸುದ್ದಿ

ಶಿವಣ್ಣ ಸಾಮಾಜಿಕ ಸಂದೇಶ- ಎಲ್ಲರೂ ಮಾಸ್ಕ್‌ ಧರಿಸುವಂತೆ ಮನವಿ

ಕೊರೊನಾ ಹಾವಳಿ ಕಡಿಮೆ ಆಯ್ತು ಅನ್ನುವ ಹೊತ್ತಲ್ಲೆ ಪುನಃ ಎರಡನೇ ಅಲೆ ಶುರುವಾಗಿದೆ. ಎಲ್ಲೆಡೆ ಮತ್ತೆ ಆತಂಕ ಮನೆ ಮಾಡಿದೆ. ಈಗಷ್ಟೇ ಎಲ್ಲಾ ಕ್ಷೇತ್ರಗಳು ತನ್ನ ಕಾರ್ಯ ಚಟುವಟಿಕೆಗಳಲ್ಲಿ ನಿರತವಾಗುತ್ತಿವೆ. ಕನ್ನಡ ಚಿತ್ರರಂಗ ಕೂಡ ಮೆಲ್ಲನೆ ಮೇಲೇಳುತ್ತಿದೆ. ಇದರ ಬೆನ್ನಲ್ಲೇ ಕೊರೊನಾ ಎರಡನೇ ಅಲೆ ಶುರುವಾಗುತ್ತಿದೆ ಎಂಬ ಸುದ್ದಿ ಜೋರಾಗಿಯೇ ಇದೆ. ಇತ್ತೀಚೆಗಷ್ಟೇ, ಚಿತ್ರಮಂದಿರಗಳತ್ತ ಪ್ರೇಕ್ಷಕರು ಮುಖ ಮಾಡುತ್ತಿದ್ದಾರೆ.

ಸ್ಟಾರ್‌ ಚಿತ್ರಗಳೂ ಸಹ ಬಿಡುಗಡೆ ಕಂಡು, ಹೊಸ ದಿಕ್ಕಿನತ್ತ ಸಾಗುತ್ತಿವೆ. ಕೊರೊನಾ ಎರಡನೇ ಅಲೆ ಸುದ್ದಿ ಜೋರಾಗುತ್ತಿದ್ದಂತೆಯೇ, ಅತ್ತ, ಚಿತ್ರಮಂದಿರಗಳಲ್ಲಿ ಅರ್ಧ ಭರ್ತಿ ಬಗ್ಗೆಯೂ ಪ್ರಸ್ತಾಪವಾಗಿತ್ತು. ಚಿತ್ರರಂಗ ಒಗ್ಗಟ್ಟಾಗಿ ಪೂರ್ಣ ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಗೆ ಸರ್ಕಾರ ಕೂಡ ಸ್ಪಂದಿಸಿದೆ. ಆದರೆ, ಜನರು ಮಾಸ್ಕ್‌ ಧರಿಸಿ, ಸ್ಯಾನಿಟೈಸ್‌ ಮಾಡಿಕೊಂಡು, ಅಂತರ ಕಾಪಾಡಿಕೊಂಡರೆ, ಯಾವದೇ ಭಯ ಇರೋದಿಲ್ಲ. ಈ ಕುರಿತು ಸರ್ಕಾರ ಮನವರಿಕೆ ಮಾಡುತ್ತಿದೆ. ಸ್ಟಾರ್‌ ನಟರುಗಳು ಕೂಡ ತಮ್ಮ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ. ಈ ಕುರಿತಂತೆ, ಸ್ಯಾಂಡಲ್‌ವುಡ್‌ ಸ್ಟಾರ್‌ ಶಿವರಾಜಕುಮಾರ್‌ ಕೂಡ ವಿಡಿಯೊ ಮೂಲಕ ಸಾಮಾಜಿಕ ಸಂದೇಶ ರವಾನಿಸಿದ್ದಾರೆ.

ಎಲ್ಲರೂ ಮಾಸ್ಕ್‌ ಧರಿಸುವಂತೆ ಮನವಿ ಮಾಡಿದ್ದಾರೆ.
ವಿಡಿಯೊವೊಂದರಲ್ಲಿ ಅವರು ಹೇಳಿಕೊಂಡಿರುವುದಿಷ್ಟು., “ಎಲ್ಲರಿಗೂ ನಮಸ್ಕಾರ, ನಿಮ್ಮೆಲ್ಲರಿಗೂ ಗೊತ್ತೇ ಇದೆ. ಕೊರೊನಾ ಎರಡನೇ ಅಲೆ ಸ್ಟಾರ್ಟ್‌ ಆಗ್ತಾ ಇರೋದು. ದಯವಿಟ್ಟು ಕೈ ಮುಗಿದು ಕೇಳಿಕೊಳ್ತಾ ಇದ್ದೇನೆ. ಪ್ರತಿಯೊಬ್ಬರೂ ಮಾಸ್ಕ್‌ ಹಾಕಿ, ಈ ಕೊರೊನಾ ಓಡಿಸಿ, ಮತ್ತೆ ಲಾಕ್‌ಡೌನ್‌ಗೆ ಒಳಗಾಗೋದು ಬೇಡ. ನಾನೇಕೆ ಮಾಸ್ಕ್‌ ಹಾಕೊಂಡ್ ಮಾತಾಡ್ತಿಲ್ಲ ಅಂದರೆ, ನಾನು ಹೇಳಿದ್ದು ನಿಮಗೆಲ್ಲರಿಗೂ ಕೇಳಬೇಕು. ನೀವೆಲ್ಲರೂ ಅದನ್ನು ಫಾಲೋ ಮಾಡ್ತೀರಿ ಅಂತ ನಂಬಿದ್ದೇನೆ. ದಯವಿಟ್ಟು, ಮರಿಬೇಡಿ ಮಾಸ್ಕ್‌ ಹಾಕ್ಕೊಳ್ಳಿ, ಸ್ಯಾನಿಟೈಸ್‌ ಮಾಡ್ಕೊಳ್ಳಿ, ಸೋಶಿಯಲ್‌ ಡಿಸ್ಟೆನ್ಸಗ್‌ ಇಟ್ಕೊಳ್ಳಿ ನಮಸ್ಕಾರ ಥ್ಯಾಂಕ್ಯು…” ಎಂದಿದ್ದಾರೆ. ಚಿತ್ರಮಂದಿರಗಳು ಭರ್ತಿಯಾಗುತ್ತಿವೆ. ಅತ್ತ, ಸಿನಿಮಾ ಮಂದಿ ಕೂಡ ಖುಷಿಯಲ್ಲಿದ್ದಾರೆ. ಈ ನಡುವೆ ಪ್ರೇಕ್ಷಕರು ಮಾಸ್ಕ್‌ ಧರಿಸಿ, ಸ್ಯಾನಿಟೈಸ್‌ ಮಾಡಿಕೊಂಡು ಅಂತರ ಕಾಪಾಡಿಕೊಂಡರೆ ಕೊರೊನಾ ಹಾವಳಿ ತಡೆಯಬಹುದು. ಈ ನಿಟ್ಟಿನಲ್ಲಿ ಫ್ಯಾನ್ಸ್‌ ತಮ್ಮ ಸ್ಟಾರ್‌ ನಟರ ಮನವಿಗೆ ಸ್ಪಂದಿಸಬೇಕಿದೆ.

error: Content is protected !!