Categories
ಸಿನಿ ಸುದ್ದಿ

ನಾರಾಯಣ್ ಹೊಸ ಚಿತ್ರದ ಟೈಟಲ್ ಲಾಂಚ್ ಮಾಡಿದ ದರ್ಶನ್

ಆದಿತ್ಯ ನಟನೆಯ ಚಿತ್ರಕ್ಕೆ 5 ಡಿ ಎಂಬ ಹೆಸರು ಫಿಕ್ಸ್

 

ಕನ್ನಡ ಚಿತ್ರರಂಗದಲ್ಲೀಗ ಹೊಸ ಸಿನಿಮಾಗಳ ಪರ್ವ. ಕಳೆದ ಹತ್ತು ತಿಂಗಳಿನಿಂದಲೂ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಹೊಸಬರ ಚಿತ್ರಗಳು ಸೆಟ್ಟೇರುತ್ತಿವೆ. ಹಾಗೆಯೇ ಸ್ಟಾರ್ಸ್ ಸಿನಿಮಾಗಳೂ ಮುಹೂರ್ತದ ಜೊತೆಗೆ ತಮ್ಮ ಹೊಸ ಚಿತ್ರಗಳನ್ನು ಘೋಷಿಸುತ್ತಿವೆ.

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಈಗ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅವರ ಸಿನಿಮಾಗೆ ಆದಿತ್ಯ ಹೀರೋ ಅನ್ನೋದೇ ವಿಶೇಷ.
ಅಂದಹಾಗೆ, ನಾರಾಯಣ್ ಮತ್ತು ಆದಿತ್ಯ ಅವರ ಕಾಂಬಿನೇಷನ್ ಸಿನಿಮಾಗೆ “5ಡಿ ” ಎಂದು ನಾಮಕರಣ ಮಾಡಿದ್ದಾರೆ.

 

ಜನವರಿ 1ರಂದು ತಮ್ಮ ನೂತನ ಸಿನಿಮಾದ ಟೈಟಲ್ ಲಾಂಚ್ ಮಾಡುವ ಮೂಲಕ ಹೊಸ ಚಿತ್ರ ಮಾಡುವ ಕುರಿತು ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿತು.
ಚಿತ್ರದ ಪೋಸ್ಟರ್ ವಿಭಿನ್ನವಾಗಿದೆ. ಪೋಸ್ಟರ್ ಒಳಗೆ ಒಂದು ಕೈ, ಅದರೊಳಗೆ ಒಂದಷ್ಟು ಮುಖಗಳು ಆಂಗ್ಲದಲ್ಲಿ ಬರೆದ ‘ಡಿ’ ಎಂಬ ಅಕ್ಷರ ಅನ್ನೋದರ ಹಿಂದೆ ಅಡಗಿರುವ ವಿಶೇಷತೆಗಳು ಸಾಕಷ್ಟಿದೆ.
ಇನ್ನು ಈ ಚಿತ್ರವನ್ನು ಸ್ವಾತಿ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

ಬಹಳ ದಿನಗಳ ಬಳಿಕ ನಾರಾಯಣ್ ಆಕ್ಷನ್‌ ಕಟ್ ಹೇಳುತ್ತಿರುವ ಸಿನಿಮಾ ಇದು. ನಾರಾಯಣ್ ಯಾವುದೇ ಸಿನಿಮಾ‌ ಮಾಡಿದರೂ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಇಲ್ಲೂ ಆ ವಿಶೇಷತೆ ನಿರೀಕ್ಷಿಸಬಹುದು. ಈ ಚಿತ್ರದಲ್ಲಿ ಆದಿತ್ಯ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ನಾರಾಯಣ್ ಸೆಂಟಿಮೆಂಟ್ ಹಾಗೂ ಹಾಸ್ಯ ಪ್ರಧಾನ ಸಿನಿಮಾಗಳಿಗೆ ಸೈ ಎನಿಸಿಕೊಂಡವರು. ಹಾಗಂತ ಮಾಸ್ ಸಿನಿಮಾಗಳಿಂದ ದೂರ ಇದ್ದಾರೆ ಅಂದುಕೊಳ್ಳುವಂತಿಲ್ಲ. ಕನ್ನಡ ಚಿತ್ರರಂಗಕ್ಕೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಎಸ್.ನಾರಾಯಣ್, ಈಗ ಮೊದಲ‌ ಸಸ್ಪೆನ್ಸ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಈ ಚಿತ್ರಕ್ಕೆ ಆದಿತ್ಯ ನಾಯಕರಾದರೆ, ಅದಿತಿ ಪ್ರಭುದೇವ ನಾಯಕಿ. ಟೈಟಲ್ ಲಾಂಚ್ ಮಾಡಿ ಮಾತನಾಡಿದ ದರ್ಶನ್ ಹೇಳಿದ್ದಿಷ್ಟು,’ಕಳೆದ ವರ್ಷ ಎಲ್ಲರೂ ಸಾಕಷ್ಟು ಸಮಸ್ಯೆ ಎದುರಿಸಿದ್ದುಂಟು. ಈ ವರ್ಷದ ಮೊದಲ ದಿನ ನಾರಾಯಣ್ ಸರ್ ಸಿನಿಮಾ ಮಾಡಿದ್ದಾರೆ. ಆದಿತ್ಯ ಗೆ ಒಳ್ಳೆಯದಾಗಲಿ. ಮೊದಲ ಬಾರಿಗೆ ಸಸ್ಪೆನ್ಸ್ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಮಾಡುವ ‌ಮೂಲಕ ನಮ್ಮವರಿಗೆ ಕೆಲಸ ಕೊಡುತ್ತಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ನಾರಾಯಣ್ ಮಾತನಾಡಿ, ‘ ಲಾಕ್ ಡೌನ್ ದಿನಗಳನ್ನು ಚೆನ್ನಾಗಿ ಬಳಸಿಕೊಂಡೆ ಒಳ್ಳೆಯ ಕಥೆ ಬರೆಯೋಕೆ ಕಾರಣವಾಯ್ತು. ನಾಲ್ಕು ಸ್ಕ್ರಿಪ್ಟ್ ಆಗಿದೆ. ಇವತ್ತು ಶುರುವಾಗಿದೆ. ಹೊಸ ಉತ್ಸಾಹವಿದೆ. ಸ್ವಾತಿ ಕುಮಾರ್ ನಿರ್ಮಾಣವಿದೆ. ರವಿಕುಮಾರ್ ಕಥೆ ಜೊತೆಗೆ ಆದಿತ್ಯ ಹೆಸರು ಹೇಳಿದರು. ‘ಚಂದ್ರ ಚಕೋರಿ’ ಕಥಾ ನಾಯಕ ಇವರೇ ಆಗಬೇಕಿತ್ತು. ಸ್ಕ್ರಿಪ್ಟ್ ವೇಳೆ ಆದಿತ್ಯ ಬರೋರು ಹೋಗೊರು. ಆದರೆ ಬೇರೆ ಸಿನಿಮಾಗೆ ಓಕೆ ಆಗಿದ್ದರು. ಬಹಳ ವರ್ಷಗಳ ಬಳಿಕ ಈಗ ಕೆಲಸ‌ಮಾಡ್ತಾ ಇದೀನಿ. ಖುಷಿ ಆಗಿದೆ. ಬಾಬು ಸರ್ ಪುತ್ರ ಎಂಬ ಹೆಮ್ಮೆ. ಪರಿಪೂರ್ಣ ಕಲಾಕುಟುಂಬ ಇದು. ಅದಿತಿ ಅಚಾನಕ್ ಆಗಿ ನಾಯಕಿಯಾಗಿ ಸಿಕ್ಕರು. ರೌಡಿ ಪಾತ್ರವದು. ದರ್ಶನ್ ಅವರು ಮೊದಲ ಸಲ ಬಂದು ತೃಪ್ತಿಯಿಂದ ಬಂದು ಹಾರೈಸಿದ್ದಾರೆ. ಬಹು ಭಾಷೆಯಲ್ಲಿ ಈ ಚಿತ್ರ ತಯಾರಾಗಲಿದೆ. ಹಲವು ಲುಕ್ ಇಲ್ಲಿರಲಿವೆ. ಹಂತ ಹಂತವಾಗಿ ಹೊರಬರಲಿವೆ ಎಂದರು.

 

ಆದಿತ್ಯ ಮಾತನಾಡಿ, ‘5ಡಿ ಒಂದೊಳ್ಳೆಯ ಸಿನಿಮಾ. ಬಹಳ ವರ್ಷಗಳ ಹಿಂದೆ ಮಾಡಲು ಆಗಲಿಲ್ಲ. ಮತ್ತೆ ಮಾಡುವ ಪ್ಲಾನ್ ಇತ್ತು ಆಗಲಿಲ್ಲ. ನಾರಾಯಣ್ ಸರ್ ಹೇಳಿದರು. ಕಥೆ ಕೇಳಲಿಲ್ಲ. ನಿಜವಾಗಲೂ ಅದ್ಭುತ ಕಥೆ ಮಾಡಿದ್ದಾರೆ. ಸಿನಿಮಾ ಜರ್ನಿಯಲ್ಲಿ ಈ ರೀತಿಯ ಜಾನರ್ ಕಥೆ ಮಾಡಿಲ್ಲ. ಕೆಲವರು ನಾರಾಯಣ್ ಹೆದರಿಸಿರಬೇಕಲ್ಲಾ ಅಂದ್ರು, ನಾರಾಯಣ್ ಸರ್ ಜೊತೆ ಕೆಲಸ‌ ಮಾಡಿದ್ದೇನೆ. ಮೊದಲು ಭಯ ಇತ್ತು ಆಮೇಲೆ ಸರಿ ಹೋಯ್ತು. ಆರ್ಟಿಸ್ಟ್ ಗಳನ್ನು ಚೆನ್ನಾಗಿ ಪಳಗಿಸುತ್ತಾರೆ. ತಂದೆ ಹೇಳಿದಂಗೆ ನಿರ್ದೇಶಕನ ನಟ ಆಗಿ ಕೆಲಸ‌ ಮಾಡ್ತೀನಿ.

ನಾನು ಬೊಂಬೆ ಅವರು ಹೇಳಿದಂತೆ ಕುಣಿತೀನಿ.‌ಡಿ ಫಾರ್ ದಾಸ, ಡಿ ಫಾರ್ ಡೆಡ್ಲಿ, ಡಿ ಅಂದರೆ ‌ದರ್ಶನ್, ಡಿ ಆಂದರೆ ದುಶ್ಯಂತ್ ಹಾಗಾಗಿ ‘5ಡಿ’ ಅಂದರು ಆದಿತ್ಯ. ಕುಮಾರ್ ಛಾಯಾಗ್ರಹಣವಿದೆ. ಬೆಂಗಳೂರು ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದೆ.  ಜ್ಯೋತಿ ರೈ, ರಾಜೇಂದ್ರಸಿಂಗ್ ‌ಬಾಬು, ಮಾಲೂರು ಶ್ರೀನಿವಾಸ್. ಇದ್ದರು

Categories
ಸಿನಿ ಸುದ್ದಿ

ಸಿಂಹದ ಜೊತೆ ವಸಿಷ್ಠ ಸಿಂಹ ! 8 ತಿಂಗಳ ಸಿಂಹದ ಮರಿ ದತ್ತು ಪಡೆದ ರಾಜಾಹುಲಿ ಖ್ಯಾತಿಯ ನಟ

ಸಿಂಹದ ಮರಿಗೆ ತಂದೆ ಹೆಸರಿಟ್ಟುಸಂಭ್ರಮಿಸಿದ ಸಿಂಹ

 

ಡಾ.ರಾಜಕುಮಾರ್‌ ಅವರು ಹುಟ್ಟಿದ ದಿನವೇ ಈ ಸಿಂಹದ ಮರಿ ಹುಟ್ಟಿದ್ದು…

ಸಿನಿಮಾ ನಟರಿಗೂ ಈ ಪ್ರಾಣಿಗಳಿಗೂ ಅವಿನಾಭಾವ ಸಂಬಂಧ. ಹೌದು, ಬಹುತೇಕ ನಟ, ನಟಿಯರು ಸಾಕು ಪ್ರಾಣಿಗಳ ಮೇಲೆ ಅತೀವ ಪ್ರೀತಿ ತೋರುತ್ತಲೇ ಇರುತ್ತಾರೆ. ಒಂದಷ್ಟು ನಟ,ನಟಿಯರು ಈಗಾಗಲೇ ನಾಯಿ ಮರಿ ಸೇರಿದಂತೆ ಒಂದಷ್ಟು ಪ್ರಾಣಿಗಳನ್ನು ದತ್ತು ಪಡೆದು ಅವುಗಳ ಯೋಗಕ್ಷೇಮ ವಿಚಾರಿಸುವಲ್ಲಿ ನಿರತರಾಗಿದ್ದಾರೆ. ಇದು ಕನ್ನಡದ ಮಟ್ಟಿಗೆ ಹೊಸದಲ್ಲದಿದ್ದರೂ, ಪ್ರಾಣಿಗಳ ಮೇಲೆ ಇರುವ ಪ್ರೀತಿಯೇ ಇಲ್ಲಿ ಮುಖ್ಯ ಎಂಬುದನ್ನು ಕಲಾವಿದರು ಸಾರಿ ಸಾರಿ ಹೇಳುತ್ತಿದ್ದಾರೆ. ಈಗ ಇಲ್ಲಿ ಹೇಳಹೊರಟಿರುವ ವಿಷಯವೆಂದರೆ, “ರಾಜಾಹುಲಿ” ಖ್ಯಾತಿಯ ನಟ ವಸಿಷ್ಡ ಸಿಂಹ ಅವರೂ ಕೂಡ ಒಂದು ಪ್ರಾಣಿ ದತ್ತು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಅವರೀಗ ಒಂದು ಸಿಂಹದ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅವರು ಮೂರು ತಿಂಗಳ ಸಿಂಹದ ಮರಿಯನ್ನು ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೊಸ ವರ್ಷಕ್ಕೊಂದು ಹೊಸ ನಿರ್ಧಾರ ಪ್ರಕಟಿಸಿರುವ ವಸಿಷ್ಠ ಸಿಂಹ, ಈಗ ಹೊಸ ವರ್ಷದ ಮೊದಲ ದಿನವೇ ಉದ್ಯಾನವನಕ್ಕೆ ಭೇಟಿ ಮಾಡಿ, ಅದಕ್ಕೆ ತಮ್ಮ ತಂದೆ ವಿಜಯ ನರಸಿಂಹ ಹೆಸರನ್ನೇ ನಾಮಕರಣ ಮಾಡುವ ಮೂಲಕ ಅಧಿಕೃತವಾಗಿಯೂ ಪ್ರಕಟಿಸಿದ್ದಾರೆ. ಬನ್ನೇರು ಘಟ್ಟದಲ್ಲಿಯೇ ಹುಟ್ಟಿರುವ ಸಿಂಹ ಇದಾಗಿದ್ದು, ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿರುವುದು ವಿಶೇಷ.

ಚಿತ್ರಂಗವನ್ನು ಮತ್ತು ಸಿನಿಮಾವನ್ನು ಅತಿಯಾಗಿ ಪ್ರೀತಿಸುವ ವಸಿಷ್ಠ ಸಿಂಹ, ಸದಾ ಹೊಸತನ್ನೇ ಎದುರು ನೋಡುತ್ತಿರುತ್ತಾರೆ, ಏನಾದರೊಂದು ಹೊಸದನ್ನೇ ಮಾಡಲು ಹಂಬಲಿಸುತ್ತಲೇ ಇರುತ್ತಾರೆ. ಈ ಹೊಸ ವರ್ಷಕ್ಕೆ ಅವರು ಸಿಂಹದ ಮರಿಯೊಂದನ್ನು ದತ್ತು ಪಡೆದು ಪ್ರೀತಿ ತೋರುತ್ತಿದ್ದಾರೆ. ಅದನ್ನು ಹೊಸ ವರ್ಷದ ಮೊದಲ ದಿನ‌ ಹೊಸ ರೀತಿಯಲ್ಲಿ ‌ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ.

 

ಸದ್ಯಕ್ಕೆ ವಸಿಷ್ಠ ಸಿಂಹ ಸಾಕಷ್ಟು ಬಿಝಿಯಾಗಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲದೇ ಬೇರೆ ಭಾಷೆಗಳಲ್ಲೂ ಅವರೀಗ ಹೆಜ್ಜೆ ಇಟ್ಟಿದ್ದಾರೆ. ಕನ್ನಡದ ಮಟ್ಟಿಗೆ ಅವರೀಗ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅತ್ತ ತೆಲುಗು ಚಿತ್ರರಂಗದಲ್ಲೂ ಒಂದು ಗಟ್ಟಿ ಜಾಗ ಮಾಡಿಕೊಳ್ಳುವ ಉತ್ಸಾಹದಲ್ಲೂ ಇದ್ದಾರೆ. ಒಬ್ಬ ಕನ್ನಡದ ನಟ, ಬೇರೆ ಭಾಷೆಯ ಚಿತ್ರಗಳಲ್ಲಿ ಮಿಂಚುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಹೌದು.

Categories
ಸಿನಿ ಸುದ್ದಿ

ಬ್ಯಾಚುಲರ್‌ ಕೃಷ್ಣ! ಮಿಸ್ಟರ್‌ ಬ್ಯಾಚುಲರ್‌ – ಡಾರ್ಲಿಂಗ್‌ ಕೃಷ್ಣನ ಸಿನಿಮಾಗೆ ಟೈಟಲ್‌ ಫಿಕ್ಸ್

ಬ್ಯಾಚುಲರ್‌ ಜೊತೆ ಮಿಲನಾ , ನಿಮಿಕಾ   ಡಿಂಗುಡಾಂಗು

ಡಾರ್ಲಿಂಗ್‌ ಕೃಷ್ಣ , ಮಿಲನ ನಾಗರಾಜ್‌ ಹಾಗೂ ನಿಮಿಕಾ ರತ್ನಾಕರ್ ಅಭಿನಯದ ” ವರ್ಜಿನ್‌ʼ ಚಿತ್ರದ ಟೈಟಲ್‌ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡ ಟೈಟಲ್‌ ಬದಲಾವಣಿಗೆ ಮುಂದಾಗಿದ್ದು, ಹೊಸ ವರ್ಷದ ದಿನವೇ ಚಿತ್ರದ ಹೊಸ ಟೈಟಲ್‌ ಅನಾವರಣಗೊಂಡಿದೆ. ಹೌದು, “ಮಿಸ್ಟರ್‌ ಬ್ಯಾಚುಲರ್‌” ಎಂಬ ಶೀರ್ಷಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಲಾಕ್‌ ಡೌನ್‌ ಸಮಯದಲ್ಲೇ ಶುರುವಾದ ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣವೂ ಮುಗಿದಿದೆ.

ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಸದ್ಯಕ್ಕೆ ಈ ಚಿತ್ರದ ವಿಶೇಷತೆಗಳೇನು ಅನ್ನೋದು ರಿವೀಲ್‌ ಆಗಿಲ್ಲ. ಆದರೆ ಈ ಚಿತ್ರ ಟೈಟಲ್‌ ಮೂಲಕವೇ ದೊಡ್ಡ ವಿವಾದ ಸೃಷ್ಟಿಸಿತ್ತು. ʼವರ್ಜಿನ್‌ʼ ಎನ್ನುವ ಚಿತ್ರದ ಶೀರ್ಷಿಕೆಗೆ ಪ್ರೇಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಚಿತ್ರ ತಂಡವು “ಶೀಘ್ರಮೇವ ಕಲ್ಯಾಣ ಮಸ್ತುʼ ಎನ್ನುವ ಟೈಟಲ್‌ ಸೆಲೆಕ್ಟ್‌ ಮಾಡಿಕೊಂಡಿತ್ತು. ಆ ಹೆಸರಲ್ಲೇ ಚಿತ್ರೀಕರಣ ಮುಗಿಸಿಕೊಂಡು ಬಂತು. ಅದು ಕೂಡ ಚಿತ್ರದ ಕಥೆಗೆ ಸೂಕ್ತ ಎನಿಸದ ಕಾರಣ, ಈಗ “ಮಿಸ್ಟರ್‌ ಬ್ಯಾಚುಲರ್‌” ಶೀರ್ಷಿಕೆಯನ್ನು ಪಕ್ಕಾ ಮಾಡಿದೆ. ಚಿತ್ರಕ್ಕೆ ನಾಯ್ಡು ಬಂಡಾರ ನಿರ್ದೇಶಕರು. ಪೂರಿ ಜಗನ್ನಾಥ್‌ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಾಯ್ಡು ಬಂಡಾರ ಅವರಿಗೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ.

ನಿರ್ಮಾಪಕರೂ ಕೂಡ ಆಂಧ್ರ ಮೂಲದವರು. ಶ್ರೀನಿವಾಸ್‌ ಹಾಗೂ ಡಿ. ಸ್ವರ್ಣಲತಾ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸಹ ನಿರ್ಮಾಪಕರಾಗಿ ಚಲಪತಿ, ಕಿರಣ್‌ ಕುಮಾರ್‌ ಜೊತೆಯಾಗಿದ್ದಾರೆ.
ಕದ್ರಿ ಮಣಿಕಾಂತ್‌ ನಿರ್ದೇಶನ ಹಾಗೂ ಕ್ರೇಜಿ ಮೈಂಡ್ಸ್‌ ಛಾಯಾಗ್ರಹಣ ಚಿತ್ರಕ್ಕಿದೆ. ಇದೊಂದು ಕಾಮಿಡಿ ಡ್ರಾಮಾ, ಹಾಗೆಯೇ ಕ್ಯೂಟ್‌ ಲವ್‌ ಸ್ಟೋರಿ ಹೊಂದಿದೆ. ಇದು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಹೊರಬರಲಿದೆ ಎನ್ನಲಾಗುತ್ತಿದೆ.

Categories
ಸಿನಿ ಸುದ್ದಿ

ರೋರಿಂಗ್‌ ಮದಗಜನ ಅಬ್ಬರ ಶುರು – ತೆಲುಗು ಟೀಸರ್‌ಗೆ ಭರಪೂರ ಮೆಚ್ಚುಗೆ

ಗಂಟೆಗಳಲ್ಲೇ ಲಕ್ಷಾಂತರ ವೀಕ್ಷಣೆ- ಶ್ರೀಮುರಳಿ ಫ್ಯಾನ್ಸ್‌ ಫಿದಾ

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಮದಗಜ” ತೆಲುಗಿನಲ್ಲೂ ತಯಾರಾಗುತ್ತಿದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಈಗ ತೆಲುಗಿನಲ್ಲೂ “ರೋರಿಂಗ್‌ ಮದಗಜ” ಹೆಸರಲ್ಲಿ ರೆಡಿಯಾಗುತ್ತಿದ್ದು, ಹೊಸ ವರ್ಷಕ್ಕೆ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಕೆಲವೇ ಕ್ಷಣಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆ ಪಡೆದಿದೆ. ಸುಮಾರು ೧೫ ಸಾವಿರಕ್ಕೂ ಹೆಚ್ಚು ಜನರಿಂದ ಮೆಚ್ಚುಗೆ ಸಿಕ್ಕಿದೆ. ಸಾವಿರಾರು ಪಾಸಿಟಿವ್‌ ಕಾಮೆಂಟ್ಸ್‌ ಕೂಡ ಬಂದಿದೆ. ಇದರಿಂದಾಗಿ ಸಿನಿಮಾ ತಂಡ ಮತ್ತಷ್ಟು ಹುಮ್ಮಸ್ಸಿನಲ್ಲಿದೆ. ಅಷ್ಟೇ ಅಲ್ಲ, ಶ್ರೀಮುರಳಿ ಅವರೇ ತೆಲುಗಿನಲ್ಲೂ ಆ ಟೀಸರ್‌ಗೆ ವಾಯ್ಸ್‌ ನೀಡಿದ್ದಾರೆ. ಟೀಸರ್‌ನಲ್ಲಿರುವ ವಾಯ್ಸ್‌ ಸಖತ್‌ ಆಗಿದ್ದು, ಫ್ಯಾನ್ಸ್‌ ಖುಷಿಗೆ ಈಗ ಪಾರವೇ ಇಲ್ಲ.


ಮಹೇಶ್‌ ಕುಮಾರ್‌ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್‌ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ರವಿಬಸ್ರೂರ್‌ ಸಂಗೀತವಿದೆ. ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಜಗಪತಿಬಾಬು ಕೂಡ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆಯಾದ ಕನ್ನಡದ “ಮದಗಜ” ಚಿತ್ರದ ಟೀಸರ್‌ ನೋಡಿ ಮೆಚ್ಚುಗೆ ಸೂಚಿಸಿದ್ದ ಜಗಪತಿಬಾಬು, ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೂ ಶುಭಕೋರಿದ್ದರು.


ಸದ್ಯ ಶ್ರೀಮುರಳಿ “ಮದಗಜ” ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈಗ ತೆಲುಗಿನ “ರೋರಿಂಗ್‌ ಮದಗಜ” ಚಿತ್ರದ ಟೀಸರ್‌ ಹೊರಬಂದಿದೆ. ಸಂಕ್ರಾಂತಿಗೆ ಮತ್ತೊಂದು ವಿಶೇಷತೆ ಈ ಚಿತ್ರದಿಂದ ಹೊರಬರಲಿದೆ. ತಮಿಳಿನಲ್ಲೂ “ಮದಗಜ” ಮೂಡಿಬರಲಿದೆ ಎಂಬುದೇ ಆ ವಿಶೇಷ. ಸಂಕ್ರಾಂತಿ ಹಬ್ಬಕ್ಕೆ ಸರ್‌ಪ್ರೈಸ್‌ ಕೊಡುವ ಉತ್ಸಾಹದಲ್ಲಿದೆ ಚಿತ್ರತಂಡ.

ಉಮಾಪತಿ, ನಿರ್ಮಾಪಕ
ಮಹೇಶ್‌ ಕುಮಾರ್‌, ನಿರ್ದೇಶಕ
Categories
ಸಿನಿ ಸುದ್ದಿ

ಕಷ್ಟ ಕಾಲದಲ್ಲೂ ದಾಖಲೆ ಬರೆದರು,ಅದೃಷ್ಟ ಅವರ ಕೈ ಹಿಡಿಯಿತು!

ಕರಾಳ ಕಾಲದಲ್ಲೂ ಇತಿಹಾಸ ಬರೆದರು..

 

ಕನ್ನಡ ಚಿತ್ರರಂಗದ ಪಾಲಿಗೆ ಪಾಲಿಗೆ 2020 ಕರಾಳ ವರ್ಷ. ಸ್ಟಾರ್ ಸಿನಿಮಾಗಳು ಬರಲಿಲ್ಲ, ತೆರೆ ಮೇಲೆ ಸ್ಟಾರ್ ಕೂಡ ಕಾಣಿಸಿಕೊಳ್ಳಲಿಲ್ಲ.ಹಾಗೆಯೇ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಚಿತ್ರ ಮಂದಿರಕ್ಕೆ ಬಂದು ಹೋದವು. ಅಷ್ಟರಲ್ಲೂ ಅದೃಷ್ಟ ಎನ್ನುವುದು ಒಲಿದಿದ್ದು ಕೆಲವರಿಗೆ ಮಾತ್ರ. ಅದರಲ್ಲೂ ಗೆದ್ದು ದಾಖಲೆ ಬರೆದವರು ‘ಲವ್ ಮಾಕ್ಟೆಲ್ ‘ಹಾಗೂ’ ದಿಯಾ’ ಚಿತ್ರ ತಂಡದವರು. ಯಾರಿಗೆ ಯಾವ ಸಮಯದಲ್ಲಿ ಅದೃಷ್ಟ ಒಲಿದು ಬರುತ್ತೆ ಅಂತ ಗೊತ್ತೇ ಆಗೋದಿಲ್ಲ ನೋಡಿ, ಕೊರೋನಾ‌ಕಾಲದ ಕರಾಳ ದಿನಗಳಲ್ಲೂ ಅಂತಹ ಅದೃಷ್ಟ ಒಲಿದಿದ್ದು ಈ ಚಿತ್ರ ತಂಡಗಳಿಗೆ ಮಾತ್ರ. ಹಾಗಂತ ಇವರು ಕೊರೋನಾ ದಲ್ಲೂ ಗೆದ್ದರು ಅಂತಲ್ಲ, ಕೊರೋನಾ ಬರುವ ಮುನ್ನ ಚಿತ್ರ ರಿಲೀಸ್ ಮಾಡಿಕೊಂಡು ಗೆದ್ದರು.

ಇನ್ನೇನು‌ಮಾರ್ಚ್ ನಂತರ ಬರೋಣ ಎಂದವರು ಈಗಲೂ ಚಿತ್ರದ ಬಿಡುಗಡೆಗೆ ಒದ್ದಾಡುತ್ತಲೇ ಇದ್ದಾರೆ.ಹಾಗೆಯೇ ಕೊರೋನಾ ದ ನಡುವೆಯೇ ಗೆದ್ದವರು ‘ಆಕ್ಟ್ 1978 ‘ಚಿತ್ರ ತಂಡದವರು. ಇನ್ನೇನು ಚಿತ್ರಮಂದಿರಗಳು ಒಪನ್ ಆಗಿಯೂ ಜನ ಬರುತ್ತಿಲ್ಲ ಅಂದಾಗಲೂ ಈ ಚಿತ್ರ ಇಲ್ಲಿಗೆ ಯಶಸ್ವಿ 50 ದಿನದ ಪ್ರದರ್ಶನ ಕಂಡಿದೆ.ಅಲ್ಲಿಗೆ ಅದೃಷ್ಟ ಅವರಿಗೂ ಇದೆ.

Categories
ಸಿನಿ ಸುದ್ದಿ

ಹೊಸ ವರ್ಷಕ್ಕೆ ಲಾಂಚ್‌ ಆಗುತ್ತೆ ಸಲಗ ಸ್ಪೆಷಲ್‌ ಪೋಸ್ಟರ್‌

ಅಭಿಮಾನಿಗಳಲ್ಲಿ ಹುಟ್ಟಿದೆ ಭರ್ಜರಿ ಕಾತರ

ದುನಿಯಾ  ವಿಜಯ್‌ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ʼಸಲಗʼ ಚಿತ್ರ ಹೊಸ ವರ್ಷದಲ್ಲಿ ಭರ್ಜರಿಯಾಗಿಯೇ ಅಬ್ಬರಿಸಲು ಸಕಲ  ರೀತಿಯಲ್ಲೂ ಸಜ್ಜಾಗುತ್ತಿದೆ. ಸದ್ಯಕ್ಕೆ ಅದರ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿಲ್ಲ. ಆದರೆ ಫೆಬ್ರವರಿ ಅಥವಾ ಮಾರ್ಚ್‌ ನಲ್ಲಿ ಚಿತ್ರಮಂದಿರಕ್ಕೆ ʼಸಲಗʼಎಂಟ್ರಿ ಆಗುವುದು ಖಚಿತ ಅನ್ನುವ ಮಾತುಗಳು ಚಿತ್ರ ತಂಡದಿಂದ ಕೇಳಿಬರುತ್ತಿವೆ. ಒಟ್ಟಿನಲ್ಲಿ ಹೊಸ ವರ್ಷದ ಆರಂಭದಲ್ಲೇ ಚಿತ್ರವನ್ನು ತೆರೆಗೆ ತರಲು ಮುಂದಾಗಿರುವ ಚಿತ್ರತಂಡ ಅದಕ್ಕೆ ಪೂರಕವಾಗಿ ಹೊಸ ವರ್ಷದ ದಿನ ಚಿತ್ರದ ಸ್ಪೆಷಲ್‌  ಪೋಸ್ಟರ್‌ ಲಾಂಚ್‌ ಮಾಡುತ್ತಿದೆ.

ಆ ಮೂಲಕ ಮೂಲಕ ಚಿತ್ರದ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡುತ್ತಿದೆ. ಈಗಾಗಲೇ ಸಲಗ ಚಿತ್ರದ ಸಾಕಷ್ಟು ಲುಕ್‌, ಸ್ಟಿಲ್‌ ರಿವೀಲ್‌ ಆಗಿವೆ. ಆದರೆ ಈಗ ಚಿತ್ರ ತಂಡ ಅನಾವರಣ ಮಾಡುತ್ತಿರುವ ಪೋಸ್ಟರ್‌ ಸ್ಪೆಷಲ್‌ ಏನು ಎನ್ನುವುದು ನಿಗೂಢವಾಗಿದೆ. ನಿರ್ಮಾಪಕ ಶ್ರೀಕಾಂತ್‌, ಇದೊಂದು ವಿಶೇಷ, ವಿಭಿನ್ನ ಲುಕ್.‌ ಆ ಕಾರಣಕ್ಕಾಗಿಯೇ ಚಿತ್ರ ತಂಡವು ಸ್ಪೆಷಲ್‌ ಪೋಸ್ಟರ್‌ ಅಂತಲೇ ಲಾಂಚ್‌ ಮಾಡುತ್ತಿದೆ. ಅದು ಹೊರ ಬಂದಾಗ ಗೊತ್ತಾಗಲಿದೆ ಅದರ ವಿಶೇಷತೆ ಏನು ಅಂತ ಎನ್ನುವ ಮೂಲಕ ಪೋಸ್ಟರ್‌ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸುತ್ತಾರೆ. ಇದುವರೆಗೂ ನಾಯಕ ನಟರಾಗಿ, ನಿರ್ಮಾಪಕರಾಗಿ ಸದ್ದು ಮಾಡಿರುವ ದುನಿಯಾ ವಿಜಯ್‌ ಇದೇ ಮೊದಲು ನಿರ್ದೇಶಿಸಿದ ಸಿನಿಮಾ ಇದು. ಹಾಗೆಯೇ ಚಿತ್ರಕ್ಕೆ ಕತೆ, ಚಿತ್ರಕತೆ ಕೂಡ ಅವರದೇ. ಇದರ ಜತೆಗೆ ಚಿತ್ರದ ನಾಯಕ ನಟ ಕೂಡ ಅವರೆ.

ಉಳಿದಂತೆ ಅವರೊಂದಿಗೆ  ಸಂಜನಾ ಆನಂದ್‌ ನಾಯಕಿಯಾಗಿ ಕಾಣಿಸಿಕೊಂಡರೆ, ಡಾಲಿ ಧನಂಜಯ್‌, ಕಾಕ್ರೋಚ್‌ ಸುಧಿ, ಯಶ್‌ ಶೆಟ್ಟಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು ಇದೊಂದು ಫುಲ್‌ ಮಾಸ್‌ ಮೂವೀ. ಲವ್‌, ಸೆಂಟಿಮೆಂಟ್‌, ಆಕ್ಷನ್‌ ಜತೆಗೆ ಭರ್ಜರಿ ಮನರಂಜನೆ ಇಲ್ಲಿ ಗ್ಯಾರಂಟಿ. ಅದೇ ಕಾರಣಕ್ಕೆ ಸಲಗ ಸ್ಯಾ ಂಡಲ್‌ ವುಡ್‌ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದುನಿಯಾ ವಿಜಯ್‌ ಅಭಿಮಾನಿಗಳ ಜತೆಗೆ ಸಿನಿಮಾ ಪ್ರೇಕ್ಷಕರು ಬಹು ಕಾತರದಿಂದ ಕಾಯುತ್ತಿದ್ದಾರೆ.

Categories
ಸಿನಿ ಸುದ್ದಿ

ಮೂವರ ನಡುವಿನ ಮೈಂಡ್ ಗೇಮ್ – ಇದು ಖೇಲ್ ರಹಸ್ಯ

ಹೊಸ ವರ್ಷಕ್ಕೆ ಬಿಡುಗಡೆ ತಯಾರಿ

ಪೃಥ್ವಿ

ಕನ್ನಡದಲ್ಲಿ ಹೊಸಬರ ಕಲರವ ಕೊಂಚ ಹೆಚ್ಚೇ ಆಗುತ್ತಿದೆ. ಸದ್ಯಕ್ಕೆ ಹೊಸಬರ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಲು ತಯಾರಾಗಿವೆ. ಅವುಗಳ ಸಾಲಿಗೆ “ಖೇಲ್” ಎಂಬ ಸಿನಿಮಾವೂ ಇದೆ.


ಹೌದು, ಖೇಲ್ ಇದು ಹೊಸಬರ ಸಿನಿಮಾ. ಈ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ತುಂಬಿವೆ.
ಚಿತ್ರವನ್ನು ರಾಜೀವ್ ನಾಯಕ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಸತೀಶ್ ಎಚ್. ನಿರ್ಮಾಣ ಮಾಡಿದ್ದಾರೆ.

ದಿಲೀಪ್ ಪಿರಿಲಿಯಾ ಕ್ಯಾಮೆರಾ ಹಿಡಿದರೆ, ಬ್ಲೂ ಸ್ಟಾರ್ ಸಂತೋಷ್ ಅವರ ಸಾಹಸವಿದೆ. ಗಣೇಶ್ ಭಗವತ್ ಅವರು ಸಂಗೀತ ನೀಡಿದ್ದಾರೆ.
ಇದೊಂದು ಮೈಂಡ್ ಗೇಮ್ ಕುರಿತ ಸಿನಿಮಾ. ಇಲ್ಲಿ ನಾಯಕ, ನಾಯಕಿ ಮತ್ತು ವಿಲನ್ ನಡುವಿನ ಮೈಂಡ್ ಗೇಮ್ ಕಥೆ ಇದೆ.

ಇಲ್ಲಿ ಹೀರೋಗಿರುವಷ್ಟೇ ಜಾಗ ವಿಲನ್ ಗೂ ಇದೆ. ಚಿತ್ರದಲ್ಲಿ ಖಳನಾಯಕರಾಗಿ ಪೃಥ್ವಿ ನಟಿಸಿದ್ದಾರೆ.
ತಮ್ಮ ಚಿತ್ರದ ಬಗ್ಗೆ ಹೇಳುವ ಪೃಥ್ವಿ, “ಇದೊಂದು ಮೈಂಡ್ ಗೇಮ್ ಸಿನಿಮಾ. ಒಂದು ವಸ್ತು ಮೂಲಕ ಕಥೆ ಶುರುವಾಗುತ್ತೆ. ಇಡೀ ಸಿನಿಮಾದಲ್ಲೇ ಆ ವಸ್ತು ಹೈಲೈಟ್. ಅದನ್ನು ಈಗಲೇ ರಿವೀಲ್ ಮಾಡಿದರೆ ಕಥೆ ಓಪನ್ ಆಗುತ್ತೆ. ಒಟ್ಟಾರೆ, ಇದೊಂದು ಯೂಥ್ ಕಾನ್ಸೆಪ್ಟ್ ಸಿನಿಮಾ.

ಇಲ್ಲಿ “ಖೇಲ್” ಅನ್ನೋದು ಮೂರು ಪಾತ್ರಗಳ ಕಥೆಯಲ್ಲಿ ಬರುವ ಪ್ರಮುಖ ಆಟ. ಕನ್ನಡದಲ್ಲಿ “ಆಟ” ಅಂತ ಹೆಸರಿಡಬಹುದಾಗಿತ್ತು. ಆದರೆ, ಆ ಶೀರ್ಷಿಕೆ ಇದ್ದುದರಿಂದ ಕಥೆಗೆ ಪೂರಕವಾಗಿ ಇರುತ್ತೆ ಎಂಬ ಕಾರಣಕ್ಕೆ “ಖೇಲ್” ಶೀರ್ಷಿಕೆ ಇಡಲಾಗಿದೆ. ಸಿನಿಮಾ ನೋಡಿದವರಿಗೆ ಶೀರ್ಷಿಕೆ ಪಕ್ಕಾ ಎನಿಸುತ್ತದೆ ಎನ್ನುತ್ತಾರೆ ಪೃಥ್ವಿ.
ಚಿತ್ರದಲ್ಲಿ ಅರವಿಂದ್, ಹಿಮಾ ಮೋಹನ್ ನಾಯಕ, ನಾಯಕಿಯಾದರೆ, ಪೃಥ್ವಿ ವಿಲನ್. ಪೃಥ್ವಿ ಈಗಾಗಲೇ ಕನ್ನಡದಲ್ಲಿ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಈ ” ಖೇಲ್” ಚಿತ್ರದಲ್ಲಿ ಪ್ರಮುಖ ಖಳನಾಯಕರಾಗಿದ್ದಾರೆ.

 

ಉಳಿದಂತೆ ಗೌತಮ್ ರೈ, ಶಿವರಾಜ್, ಸಂತೋಷ್, ರಾಜೇಶ್ ಇತರರು ಇದ್ದಾರೆ.
ಈಗಾಗಲೇ ಚಿತ್ರದ ಹಾಡುಗಳು ಹೊರಬಂದಿವೆ. ಇತ್ತೀಚೆಗೆ ಪುನೀತ್ ಅವರು ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಎರಡನೇ ಲುಕ್ ಗೆ ನಿರ್ದೇಶಕ ಶಿವಗಣೇಶ್ ಮಾಡಿ ಶುಭ ಹಾರೈಸಿದ್ದಾರೆ.


ಚಿಂತಾಮಣಿ ಸುತ್ತಮುತ್ತಲಿನ ತಾಣಗಳಲ್ಲಿ‌ ಶೂಟಿಂಗ್ ಮಾಡಲಾಗಿದೆ.
ಸದ್ಯಕ್ಕೆ ರಿಲೀಸ್ ಆಗಲು ತಯಾರಾಗಿದೆ. ಜನವರಿಯಲ್ಲಿ ಪ್ರೇಕ್ಷಕರ ಮುದೆ ತರುವ ಯೋಚನೆ ನಿರ್ದೇಶಕರದ್ದು.

Categories
ಸಿನಿ ಸುದ್ದಿ

ವಿಜಯನಗರದಲ್ಲಿ ವಿಷ್ಣು ಪುತ್ಥಳಿ ಅನಾವರಣ- ವಿಷ್ಣು ಸೇನಾ ಸಮಿತಿ ನೇತೃತ್ವ

ಪುಣ್ಯಸ್ಮರಣೆ ದಿನ ಅಭಿಮಾನಿಗಳ ಸಂಭ್ರಮ

ಇತ್ತೀಚೆಗಷ್ಟೇ ವಿಷ್ಣುವರ್ಧನ್‌ ಅವರ ಪ್ರತಿಮೆ ಭಗ್ನಗೊಳಿಸಿದ್ದ ಸುದ್ದಿ ಕೇಳಿ ಅಪಾರ ಅಭಿಮಾನಿಗಳು ಬೇಸರಗೊಂಡಿದ್ದರು. ಇಡೀ ಚಿತ್ರರಂಗವೇ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಡಿಸೆಂಬರ್‌ ೩೦ರಂದು ವಿಷ್ಣುವರ್ಧನ್‌ ಅವರ ಹನ್ನೊಂದನೇ ಪುಣ್ಯಸ್ಮರಣೆ ಅಂಗವಾಗಿ ಡಾ.ವಿಷ್ಣುವರ್ಧನ ಕನ್ನಡ ಸೇನಾ ಸಮಿತಿ ವತಿಯಿಂದ ವಿಜಯನಗರದಲ್ಲಿ ಇಂದು ಡಾ.ವಿಷ್ಣುವರ್ಧನ್ ಅವರ ಪುತ್ಥಳಿ ಅನಾವರಣ ಮಾಡುವ

ಮೂಲಕ ಅಪಾರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ವಿಜಯನಗರ ಶಾಸಕರಾದ ಕೃಷ್ಣಪ್ಪ, ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ, ಅಧ್ಯಕ್ಷರಾದ ಮೂರ್ತಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

Categories
ಸಿನಿ ಸುದ್ದಿ

ಇದು ಎಂಆರ್‌ ಅಲ್ಲ, ಡಿಆರ್‌! ಮುತ್ತಪ್ಪ ರೈ ಸಿನಿಮಾ ಮಾಡೋರು ಯಾರು?

 

ಮುತ್ತಪ್ಪ ರೈ  ಟೈಟಲ್‌  ವಿವಾದ-ಸಿನಿಮಾ ಗೊಂದಲಕ್ಕೆ ತೆರೆ?

ಎಂಆರ್…‌
ಕನ್ನಡ ಚಿತ್ರರಂಗದಲ್ಲಿ ಒಂದು ಮಟ್ಟಿಗೆ ಸಂಚಲನ ಮೂಡಿಸಿದ ಹೆಸರಿದು. ವಿಷಯವಿಷ್ಟೇ, ಇತ್ತೀಚೆಗಷ್ಟೇ ನಿರ್ದೇಶಕ ರವಿಶ್ರೀವತ್ಸ ಅವರು, ಮುತ್ತಪ್ಪ ರೈ ಅವರ ಕುರಿತ “ಎಂಆರ್”‌ ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದ್ದರು. ಅಷ್ಟೇ ಅಲ್ಲ, ಮುಹೂರ್ತ ಕೂಡ ನಡೆಸಿದ್ದರು. ನಿರ್ಮಾಪಕ ಶೋಭರಾಜಣ್ಣ ಅವರ ಪುತ್ರನನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಪರಿಚಯಿಸಿದ್ದರು. ಆದರೆ, ದಿಢೀರನೆ, ನಿರ್ಮಾಪಕ ಪದ್ಮನಾಭ್‌ ಅವರು, “ಎಂಆರ್‌” ಸಿನಿಮಾವನ್ನು ನಾನು ಮಾಡುತ್ತಿದ್ದೇನೆ. ಬೇರೆ ಯಾರೂ ಮಾಡುವಂತಿಲ್ಲ. ಆ ರೈಟ್ಸ್‌ ನನ್ನ ಬಳಿ ಇದೆ. ಈ ಹಿಂದೆಯೇ, ರೈಟ್ಸ್‌ ಪಡೆದಿದ್ದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದರು.

ಅದೊಂದು ರೀತಿ ಗೊಂದಲವೂ ಮೂಡಿಸಿತ್ತು. ಅದಕ್ಕೆ ಉತ್ತರವಾಗಿ, ರವಿಶ್ರೀವತ್ಸ ಅವರು ಸಹ ಒಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಚಿತ್ರ “ಎಂಆರ್‌” ಅಲ್ಲ, “ಡಿಆರ್”‌ ಎಂದು ಹೇಳಿಕೊಂಡಿದ್ದಾರೆ. ಹಿಂದೆ “ಎಂಆರ್‌” ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದ ಟೀಮ್‌ ಮತ್ತು ಕಲಾವಿದರೇ ಇಲ್ಲೂ ಕೆಲಸ ಮಾಡಲಿದ್ದಾರೆ. ಆದರೆ, ಇದು ಬ್ಯಾಂಕಾಕ್‌, ಮಂಗಳೂರು ಸುತ್ತಮುತ್ತಲ ಕಥೆಯಲ್ಲ. ಹಳೆಯ ತಂಡದ ಜೊತೆಗೆ ಈಗ “ಡಿಆರ್‌” ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಲ್ಲದೆ, ಪೋಸ್ಟರ್‌ವೊಂದನ್ನು ರಿಲೀಸ್‌ ಮಾಡಿದ್ದಾರೆ. ಆದರೆ, ಇದು ಮುತ್ತಪ್ಪ ರೈ ಅವರದೇ ಕಥೆನಾ? ಇದಕ್ಕೆ ಉತ್ತರವಿಲ್ಲ. ಆದರೂ ಇದು ಮುತ್ತಪ್ಪ ರೈ ಅವರ ಕುರಿತಾದ ಕಥೆಯೇ ಎಂದು ಹೇಳಲಾಗುತ್ತಿದೆ. ನಿರ್ದೇಶಕರು ಮಾತ್ರ, ಅದನ್ನು ರಿವೀಲ್‌ ಮಾಡದೆ, ಇದು ಎಂಆರ್‌ ಅಲ್ಲ, ಡಿಆರ್‌ ಎಂದಷ್ಟೇ ಹೇಳಿದ್ದಾರೆ.


ರವಿ ಶ್ರೀವತ್ಸ ಅವರ “ಎಂಆರ್” ಸಿನಿಮಾ ಸ್ಟಾಪ್ ಆಗಿದೆ. ಈಗವರು ಹೊಸ ಸಿನಿಮಾ ಶುರು ಮಾಡಿದ್ದು, ಹೊಸ ಟೈಟಲ್ ಪೋಸ್ಟರ್‌ ಲಾಂಚ್‌ ಮಾಡಿದ್ದಾರೆ. ಚಿತ್ರಕ್ಕೆ ದೀಕ್ಷಿತ್‌ ಹೀರೋ. ತಮ್ಮ ಸಿನಿಮಾ ಕುರಿತು ಅವರು ಹೇಳಿದ್ದಿಷ್ಟು. “ನೋವಾಗುತ್ತೆ, ತುಂಬಾ ಒಳ್ಳೆಯ ವೆಲ್‌ ಕಮ್‌ ಸಿಗುತ್ತೆ. ಅಂತ ಅಂದುಕೊಂಡಿದ್ದೆ. ನಂಗೆ ಗೊತ್ತಾಗಿದೆ‌. ಖಂಡಿತವಾಗ್ಲೂ ದೊಡ್ಡ ಮಟ್ಟಕ್ಕೆ ಹೆಸರು‌ಮಾಡ್ತೀವಿ” ಎಂದಿದ್ದಾರೆ.
ನಿರ್ಮಾಪಕ ಶೋಭಾ ರಾಜಣ್ಣ ಅವರು ಮಾತನಾಡಿ, “ಸಕ್ಸಸ್‌ ಆಗುತ್ತೆ ಅಂತಾಲೇ ಈ ಚಿತ್ರ ಮಾಡಬೇಕು ಅಂತ ಹೊರಟಿದ್ದೇವೆ. ಇಷ್ಟು ವರ್ಷ ಇಂಡಸ್ಟ್ರಿಯಲ್ಲಿದ್ದೇನೆ. ಯಾರೂ ನಿರ್ಮಾಪಕರಿಗೆ ಟಾರ್ಚರ್ ಕೊಡ್ಬೇಡಿ. ನಿಮ್ಮ ಮಕ್ಕಳ ಚಿತ್ರವಾಗಿದ್ದರೆ ಏನು ಮಾಡ್ತಾ ಇದ್ರಿ. ಅವರು ಮಾಡಲಿ, ಅವರು ಮಾಡಿದ ಬಳಿಕ ನಾವು ಮಾಡ್ತೀವಿ.


ಚಿತ್ರದಲ್ಲಿ ನಟಿಸುತ್ತಿರುವ ಪ್ರಶಾಂತ್ ಸಂಬರಗಿ ಮಾತನಾಡಿ,”ಇವತ್ತಿಗೂ ನಾವು ಲೀಗಲ್ ಆ್ಯಬಿಟ್‌ನಲ್ಲಿಯೇ ಇದ್ದೇವೆ‌ . ಮುತ್ತಪ್ಲ ರೈ ಪಾಪಿಗಳ ಲೋಕ ಆರು ತಿಂಗಳು ಓಡಾಡಿದ್ದೇನೆ ಎನ್ನುವ ಕಾರಣಕ್ಕೆ ಇದನ್ನ ಮಾಡಬಹುದು. ನಾವು ಅವರ ಬಗ್ಗೆ ರಿಸರ್ಚ್ ಮಾಡಿದ್ದೇವೆ. ಅವರನ್ನು ದೂರ ಇಟ್ಟಿದ್ದರು. ನಾವು ಅವರ ಬಗ್ಗೆ ಡೀಟೈಲ್‌ ಸ್ಟಡಿ ಮಾಡಿದ್ದೇವೆ ಎಂದರು.
ಚಂದ್ರ ಚೂಡ್ ಮಾತನಾಡಿ,” ಯಾವುದೇ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯ, ಸಿನಿಮಾ ಮಾಡಲು ಅಪ್ಪಣ ಬೇಕಿಲ್ಲ. ಶಾಂತವೇರಿ ಗೋಪಾಲ ಗೌಡ ಅವರ ಪ್ರಕರಣದಲ್ಲಿ ಹಿಂದೆ ಇದ್ದ ಇಂಜೆಕ್ಷನ್ ಆರ್ಡರ್ ಕ್ಯಾನ್ಸಲ್ ಆಗಿದೆ. ಕಾನೂನಾತ್ಮಕವಾಗಿ ಪರಿವರ್ತಿಸಲು ವ್ಯಕ್ತಿಗಳ ಅಪ್ಪಣೆ ಬೇಕಿಲ್ಲ. ದೊಣ್ಣೆ ನಾಯಕ‌ನ ಅನುಮತಿಯೂ ಬೇಕಿಲ್ಲ ಎಂದರು.
ನಿರ್ದೇಶಕ ರವಿ ಶ್ರೀವತ್ಸ ಮಾತನಾಡಿ, “ನಾಲ್ಕು ಸಿನಿಮಾಗಳು ಬ್ಯಾನ್ ಆದ ಜಾಗ ಇದು. ಕಟ್ಸ್ ಕೊಟ್ಟಿದ್ದು ಇಲ್ಲಿಯೇ. ನಾನು ಎಂಆರ್‌ ಬಗ್ಗೆ ಸ್ಟಡಿ ಮಾಡಿದ್ದೇನೆ. ಸಿಡ್ನಿಗೂ ಹೋಗಿ ಮಾಹಿತಿ ಕಲೆ ಹಾಕಿದ್ದೆ. ಆದರೆ ಆಗ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಆರ್‌ಜಿವಿ ಕಥೆಯಾದರೆ, ಸರ್ಕಾರಕ್ಕೆ ಡಾಕ್ಯುಂಎಂಟ್‌ ಆಗುತ್ತೆ ಎಂಬ ಭಯದಿಂದ ಮಾಡಲಾಗಲಿಲ್ಲ. ನಾನು ಸಿನಿಮಾ ಬಿಟ್ಟುಕೊಡ್ತೀನಿ. ಅವರು ಮಾಡಿ ರಿಲೀಸ್‌ ಮಾಡಿದ ಬಳಿಕ ನಾನು ಈ ಸಿನಿಮಾ ಮಾಡ್ತೀನಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಶೋಭರಾಜಣ್ಣ, ಪ್ರಶಾಂತ್‌ ಸಂಬರಗಿ, ಉಮೇಶ್‌ ಬಣಕಾರ್‌ ಇತರರು ಇದ್ದರು. ಅದೇನೆ ಇರಲಿ, ಪೋಸ್ಟರ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, “ಎಂಆರ್‌” ಶೀರ್ಷಿಕೆ ಬದಲಾಗಿ “ಡಿಆರ್”‌ ಎಂದು ಇಡಲಾಗಿದೆ ಎಂಬುದಂತೂ ಸ್ಪಷ್ಟವಾಗುತ್ತದೆ. ಎಲ್ಲದ್ದಕ್ಕೂ ಸಿನಿಮಾ ಮುಗಿದು ಹೊರಬಂದ ಮೇಲಷ್ಟೇ ಗೊತ್ತಾಗಲಿದೆ. ಹಾಗಾದರೆ, ಮುಂದಾ..? ಕಾದು ನೋಡಬೇಕು.

Categories
ಸಿನಿ ಸುದ್ದಿ

ಒಳ್ಳೇ ಹುಡುಗ ಆದರೆ… ತಾಳ್ಮೆ ಕಳೆದುಕೊಂಡರೆ ಮಹಿಷಾಸುರ!

ಹೊಸಬರ ಮಹಿಷಾಸುರನ ಟ್ರೇಲರ್‌ ಹೊರಬಂತು‌

“ಮಹಿಷಾಸುರ…” ಇದು ಸಿನಿಮಾದ ಹೆಸರು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೂ ಸಜ್ಜಾಗಿದೆ. ಸಾಮಾನ್ಯವಾಗಿ ಯಾರೂನು ಹುಟ್ಟುವಾಗಲೇ ವಿಲನ್‌  ಆಗೋದಿಲ್ಲ. ಆದರೆ, ಕೆಲವರು ಮಹಿಷಾಸುರನಂತೆ ಮಾಡಿಬಿಡುತ್ತಾರೆ. ಪ್ರಸ್ತುತ ರಾಜಕಾರಣಿಗಳು ತಮ್ಮ ವೋಟ್‍ಬ್ಯಾಂಕ್‍ಗೋಸ್ಕರ ಯುವ ಜನರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದರ ಸುತ್ತ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ “ಮಹಿಷಾಸುರ” ಸಿನಿಮಾ  ಸೇರಿದೆ. ನಿರ್ದೇಶಕ ಉದಯ ಪ್ರಸನ್ನ ಅವರು ತಮ್ಮ ಈ ಚಿತ್ರದ ಮೂಲಕ ಒಂದಷ್ಟು ವಾಸ್ತವ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ.

ಸಂಜಯ್ ಕುಲಕರ್ಣಿ, ವಿಜಯಕುಮಾರ್ ಸೇರಿದಂತೆ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿರುವ ಉದಯ ಪ್ರಸನ್ನ ಅವರಿಗೆ ಇದು ಮೊದಲ ಪ್ರಯತ್ನ. ಇದೊಂದು ತ್ರಿಕೋನ ಪ್ರೇಮಾಕಥಾ ಹಂದರ ಇರುವ ಚಿತ್ರ. ಈಗಾಗಲೇ ಚಿತ್ರದ ಟ್ರೇಲರ್ ಡಿ-ಬೀಟ್ಸ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಈ ಚಿತ್ರದ ಆಡಿಯೋಗೆ ಸಾಹಿತಿ ನಿರ್ದೇಶಕ ಕವಿರಾಜ್ ಬಿಡುಗಡೆ ಮಾಡಿದ್ದರು. ಜನವರಿಯಲ್ಲಿ ಪ್ರೇಕ್ಷಕರ ಎದುರು ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ಮೇಲುಕೋಟೆ ಟೂರಿಂಗ್ ಟಾಕೀಸ್ ಮೂಲಕ  ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್‍ಕುಮಾರ್ ಹಾಗೂ ಪ್ರೇಮಾ ಚಂದ್ರಯ್ಯ ಅವರು ಈ ಚಿತ್ರದ ನಿರ್ಮಾಣಕರು.

ಚಿತ್ರಕ್ಕೆ ರಾಜ್ ಮಂಜು, ಸುದರ್ಶನ್  ನಾಯಕರಾಗಿ ಕಾಣಿಸಿಕೊಂಡಿದ್ದಾರೆ.  ಬಿಂದುಶ್ರೀ ನಾಯಕಿಯಾಗಿದ್ದಾರೆ. ತಮ್ಮ ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ಉದಯ ಪ್ರಸನ್ನ, “ಸಿನಿಮಾ ನಿರ್ದೇಶನ ಮಾಡಬೇಕೆಂಬ ನನ್ನ ಬಹುದಿನಗಳ ಕನಸು ಈ ಚಿತ್ರದ ಮೂಲಕ ನನಸಾಗಿದೆ, “ಮಹಿಷಾಸುರ ” ನನ್ನ ಮೊದಲ ಹೆಜ್ಜೆ. ಸಮಾಜಕ್ಕೆ ಒಂದು ಉತ್ತಮ ಸಂದೇಶ ಹೇಳುವ ಪ್ರಯತ್ನವಾಗಿ ಈ ಚಿತ್ರ ಮಾಡಿದ್ದೇನೆ. ಮನುಷ್ಯ ಒಳ್ಳೆಯವನೇ ಆಗಿದ್ದರೂ, ಆತ ತನ್ನ ತಾಳ್ಮೆ, ಸಹನೆ ಕಳೆದುಕೊಂಡಾಗ ಅಂತರಂಗದಲ್ಲಿರುವ ಅಸುರ ಮಹಿಷಾಸುರನ ರೂಪತಾಳುತ್ತಾನೆ. ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಚಿಕ್ಕಂದಿನಿಂದ ಒಟ್ಟಿಗೆ ಬೆಳೆದ ಯುವಕರಿಬ್ಬರು ಒಂದು ಹೆಣ್ಣಿಗೋಸ್ಕರ ಯಾವ ರೀತಿ ಅಸುರ ರೂಪ ತಾಳುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ.

ನನ್ನ ತಾಯಿಯ ಊರಿನ ಹತ್ತಿರ ನಡೆದ ನೈಜ ಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡ ಈ ಚಿತ್ರದ ಕಥಾಹಂದರ ಹೆಣೆದಿದ್ದೇನೆ. ದೊಡ್ಡ ಬಳ್ಳಾಪುರದ ಬಳಿಯ ಮೇಲುಕೋಟೆ, ಮಂಡ್ಯ, ಮೈಸೂರು ರಾಮನಗರ ಸೇರಿದಂತೆ ಒಟ್ಟು 60 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ ಎಂಬುದು ಅವರ ಮಾತು.


ನಾಯಕಿ ಬಿಂದುಶ್ರೀ ಈ ಚಿತ್ರದಲ್ಲಿ ಶ್ರೀಮಂತ ಕುಟುಂಬದ ಹುಡುಗಿಯಾಗಿ ನಟಿಸಿದ್ದು, ಮುಗ್ದೆ, ಇಬ್ಬರು ಯವಕರ ಪ್ರೀತಿಯ ಸುಳಿಯಲ್ಲಿ ಸಿಕ್ಕು, ಸ್ನೇಹಿತರಾಗಿದ್ದ ಅವರು ವಿರೋಧಿಗಳಾಗಲು ಕಾರಣಳಾಗುತ್ತಾಳೆ. ಕೊನೆಗೆ ನಾಯಕಿ ಯಾರಿಗೆ ದಕ್ಕುತ್ತಾಳೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು ಸುನಿಲ್ ಕೌಶಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವೇಣು ಅವರ ಸಾಹಿತ್ಯವಿದ್ದು, ಕೃಷ್ಣ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ.

error: Content is protected !!