Categories
ಸಿನಿ ಸುದ್ದಿ

ಆಕ್ಟ್ 1978 ಅನ್ನೋದು ಅನುಭವದ ಕತೆ – ಮಂಸೋರೆ

ಐಟಂ ಸಾಂಗ್ ಇಲ್ಲ‌ ಅನ್ನೋದನ್ನ ಬಿಟ್ಟರೆ ಇದು ಪಕ್ಕಾ ಕಮರ್ಷಿಯಲ್ ಆ್ಯಂಡ್ ಮಾಸ್ ಸಿನಿಮಾ ಅಂದ್ರು ಅವಾರ್ಡ್ಸ್ ವಿನ್ನರ್ ಡೈರೆಕ್ಟರ್

ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗಮನ‌ಸೆಳೆದ ನಿರ್ದೇಶಕರ ಪೈಕಿ ಮಂಸೋರೆ ಕೂಡ ಒಬ್ಬರು. ಹರಿವು, ನಾತಿ ಚೆರಾಮಿ’ ಚಿತ್ರಗಳ ನಂತರ ಈಗ ವಿಭಿನ್ನ ಶೀರ್ಷಿಕೆ ಹಾಗೂ ವಿಶಿಷ್ಟ ಕಥಾ ಹಂದರದ ‘ಆಕ್ಟ್ 1978 ‘ ಚಿತ್ರದೊಂದಿಗೆ ಸುದ್ದಿಯಲ್ಲಿದ್ದಾರೆ. ಹಲವು ಕಾರಣಕ್ಕೆ ಈ ಚಿತ್ರ ಕುತೂಹಲ‌ ಮೂಡಿಸಿದೆ. ವಿಶೇಷವಾಗಿ ಈ ಚಿತ್ರ ಲಾಕ್ ಡೌನ್ ನಂತರ ತೆರೆ ಕಾಣುತ್ತಿರುವ ಮೊದಲ‌ಚಿತ್ರ ಎನ್ನುವುದು ದೊಡ್ಡ ಕ್ಯೂರಿಯಾಸಿಟಿ ಮೂಡಿಸಿದೆ. ನವೆಂಬರ್ 20 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಈ ಚಿತ್ರದ ವಿಶೇಷತೆ ಕುರಿತು ಅವರೊಂದಿಗೆ ‘ಸಿನಿ ಲಹರಿ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

– ಲಾಕ್ ಡೌನ್ ನಂತರ ತೆರೆ ಕಾಣುತ್ತಿರುವ ಮೊದಲ ಸಿನಿಮಾ ನಿಮ್ದು. ಇದೊಂಥರ ಸಾಹಸ. ಹಾಗೆಯೇ ಸವಾಲು. ಇದು ಯಾಕೆ, ಹೇಗೆ, ಅಷ್ಟು ಕಾನ್ಪಿಡೆನ್ಸ್ ಏನು ?

ಕಾನ್ಫಿಡೆನ್ಸ್ ಅಂದ್ರೆ ಸಿನಿಮಾ‌. ಅದರಾಚೆ ಸಾಹಸ, ಸವಾಲು ಎನ್ನುವುದಕ್ಕಿಂತ, ಇದೇ ನಮಗೆ ಸರಿಯಾದ ಸಮಯ. ಸೋಲೋ, ಗೆಲ್ಲವೋ ಇಂತಹ ಟೈಮ್ ಮತ್ತೆ ಸಿಗಲ್ಲ ಎನ್ನುವುದು ನನ್ನ ಭಾವನೆ. ಯಾಕಂದ್ರೆ ಹತ್ತಾರು ಸಿನಿಮಾಗಳ ನಡುವೆ ಬಂದು ಕಳೆದು ಹೋಗುವುದಕ್ಕಿಂತ ವಿಶಾಲವಾದ ಈ ಸಂದರ್ಭದಲ್ಲಿ ಬಂದು ಜನರನ್ನು ತಲುಪಲು ಪ್ರಮಾಣಿಕವಾಗಿ ಪ್ರಯತ್ನ ಮಾಡೋಣ ಎನ್ನುವುದು ನಮ್ಮ ಲೆಕ್ಕಚಾರ. ಗೊತ್ತಿಲ್ಲ, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಅಂತ‌. ಆದ್ರೆ ಇಲ್ಲಿ ತನಕ ಸಿಕ್ಕಿರುವ ರೆಸ್ಪಾನ್ಸ್ ನೋಡಿದ್ರೆ, ಪಾಸಿಟಿವ್ ವೈಬ್ರೇಷನ್ ಅಂತೂ ಇದ್ದೇ ಇದೆ.

ಆಕ್ಟ್ 1978 ಹೆಸರಲ್ಲಿ ಏನನ್ನು ಹೇಳಲು ಹೊರಟ್ಟಿದ್ದೀರಿ, ಇದು ಯಾರ ಮತ್ತು ಯಾವ ಕಾನೂನಿನ ಪರವಾದ ಸಿನಿಮಾ?

ಹೆಸರೇ ಹೇಳುವಂತೆ ಇದೊಂದು ಕಾನೂನಿನ ಸುತ್ತಲ ಕತೆ ಎನ್ನುವುದು ಸತ್ಯ, ಆದರೆ ಅದೇ ಚಿತ್ರದ ಪ್ರಧಾನ‌ಕತೆ ಅಲ್ಲ. ಒಂದು ಕಾನೂನಿನ ಸುತ್ತ ಬೇರೆಯದೇ ಆದ ಅನೇಕ ಸಂಗತಿಗಳಿವೆ. ಅವೆಲ್ಲವೂ ಹೊಸತಾದ ಅಂಶಗಳು. ಒಂದಂತೂ ಸತ್ಯ, ಇವೆಲ್ಲ ಜನರ ಮನಸ್ಸಿಗೆ ಹತ್ತಿರವಾದ ವಿಷಯ. ಒಂದಲ್ಲೊಂದು ರೀತಿಯಲ್ಲಿ ಸಾಮಾನ್ಯ ಜನರು ಅಧಿಕಾರಿ‌ಶಾಹಿ ವ್ಯವಸ್ಥೆಯಲ್ಲಿ ನಲುಗಿರುತ್ತಾರೆ. ಅವರಿಗೆ ಇದು ಬಹುಬೇಗ ಕನೆಕ್ಟ್ ಆಗುತ್ತದೆ ಎನ್ನುವ ನಂಬಿಕೆ ನಮ್ಮದು.

ಈ ಕತೆಗೆ ಸ್ಪೂರ್ತಿ ಏನು? ಇದನ್ನೇ ಸಿನಿಮಾ ಮಾಡ್ಬೇಕು ಅಂತೆನಿಸಿದ್ದು ಯಾಕೆ?

ಒಂದೇ ಮಾತಿನಲ್ಲಿ ಹೇಳುವುದಾದರೆ ಅಧಿಕಾರಿ ಶಾಹಿಯೇ ಈ ಕತೆಗೆ ಸ್ಪೂರ್ತಿ. ಈ ದೇಶದಲ್ಲಿ ಯಾರೆಲ್ಲ, ಹೇಗೆಲ್ಲ ಬದಲಾದರೂ ಅಧಿಕಾರಿ ಶಾಹಿ ಮಾತ್ರ ಬದಲಾಗದು. ಅವರೆಲ್ಲ ಜನರಿಗೆ ತಾವು ಸೇವಕರು ಎನ್ನುವುದಕ್ಕಿಂತ ಜನರೇ ತಮಗೆ ಸೇವಕರೆಂ ದುಕೊಂಡಿದ್ದಾರೆ. ಹೀಗಾಗಿ ಸಾಮಾನ್ಯ ಜನರು ಒಂದಲ್ಲೊಂದು ರೀತಿಯಲ್ಲಿ ಹಲವಾರು ವರ್ಷಗಳಿಂದ ಅಧಿಕಾರಿ ಶಾಹಿ ದೌರ್ಜನ್ಯದಡಿ ನಲುಗಿದವರೆ‌ . ಇಂತಹದೇ ಒಂದು ಅನುಭವ ನನಗೂ ಆಯಿತು. ತಂದೆಯವರ ಪೆನ್ಸೆಷನ್ ಗೆ ಅಂತ ಓಡಾಡುವಾಗ ಸಾಕಷ್ಟು ನೋವಿನ ಅನುಭವ ಆಯ್ತು‌. ನನ್ನಂತಹ ವಿದ್ಯಾವಂತ ಯುವಕನ ಸ್ಥಿತಿಯೇ ಹೇಗಾದರೆ, ಏನು ಅರಿಯದ ಸಾಮಾನ್ಯರ ಜನರ ಗತಿಯೇನು ಅಂತ ಯೋಚಿಸುತ್ತಿದ್ದೆ. ಆಗ ಹುಟ್ಟಿದ ಕತೆ ಇದು‌.

ಅನುಭವದ ಕತೆಗಳು ಕೆಲವೊಮ್ಮೆ ಡಾಕ್ಯುಮೆಂಟರಿ ರೂಪದಲ್ಲೇ ತೆರೆಗ ಬಂದು ಬಿಡುವ ಸಾಧ್ಯತೆಗಳೇ ಹೆಚ್ಚು. ಅದನ್ನು ಇದು ಮೀರಿ ರಂಜಿಸುವುದು ಹೇಗೆ?

ಹಾಗೆ ಆಗೋದಿಕ್ಕೆ ಇದನ್ನ ಬಿಟ್ಟಿಲ್ಲ. ಇದರ ಚಿತ್ರಕತೆ ಶೈಲಿಯೇ ವಿಭಿನ್ನ. ಅನೇಕ ಸಿನಿಮ್ಯಾಟಿಕ್ ರೂಪಗಳನ್ನು ಇಲ್ಲಿ ಅಳವಡಿಸಿಕೊಂಡಿದ್ದೇವೆ. ಥ್ರಿಲ್ಲರ್ ಶೈಲಿಯಾಗಿರ ಬಹುದು,ಪಾತ್ರಗಳನ್ನು ತಂದ ಬಗೆಯಾಗಲಿ, ಸಂಭಾಷಣೆಯಾಗಲಿ, ಎಲ್ಲವನ್ನು ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾದ ರೂಪದಲ್ಲೇ ತೆರೆಗೆ ತಂದಿದ್ದೇವೆ. ಅದೊಂದೇ ಕಾರಣಕ್ಕೆ ಇದೊಂದು ಪಕ್ಕಾ ಮಾಸ್ ಸಿನಿಮಾವೂ ಹೌದು. ಹಾಗೆಯೇ ಇದೊಂದು  ಹೊಸ್ಟೇಜ್ ಥ್ರಿಲರ್ ಕತೆ.

ಪೋಸ್ಟರ್ ಮೂಲಕ ಕುತೂಹಲ‌ಮೂಡಿದ್ದು ಇದೊಂದು ಮಹಿಳಾ ಪ್ರಧಾನ ಸಿನಿಮಾವೇ ಎನ್ನುವ ಬಗ್ಗೆ, ಇದು ಹೇಗೆ?

ಇಲ್ಲ, ಇದು ಮಹಿಳಾ ಪ್ರಧಾನ ಸಿನಿಮಾ ಅಲ್ಲ. ಬದಲಿಗೆ ಮಹಿಳಾ ಕೇಂದ್ರಿತ ಸಿನಿಮಾ. ಸಾಮಾನ್ಯವಾಗಿ ಮಾಲಾಶ್ರೀ‌ಸಿನಿಮಾಗಳು, ತೆಲುಗಿನಲ್ಲಿ‌ವಿಜಯ ಶಾಂತಿ ಅಭಿನಯದ ಸಿನಿಮಾಗಳು ಹೇಗೆ ಹೆಣ್ಣಿನ ರೂಪದ ಗಂಡು ಸಿನಿಮಾಗಳಾಗಿ ಗಮನ ಸೆಳೆಯುತ್ತವೆಯೋ, ಹಾಗೆಯೇ ಇದು ಕೂಡ ಮಹಿಳಾ ಕೇಂದ್ರಿತ ಸಿನಿಮಾ‌.‌ನಟಿ ಯಜ್ಞಾ ಶೆಟ್ಟಿ ಇದರ ಕೇಂದ್ರ ಬಿಂದು‌. ಬಹುತೇಕ ಕತೆಗಳು ಹೀರೋ ಮೂಲಕ ತೆರೆದುಕೊಳ್ಳುವುದು ನಿಮಗೂ ಗೊತ್ತು. ನಾವ್ಯಾಕೆ ಒಬ್ಬ ಮಹಿಳೆಯ ಮೂಲಕ ಹೇಳಬಾರದು ಅಂತ ಯೋಚಿಸಿ, ಹಾಗೆ ಮಾಡಿದೆವು. ಅದರಲ್ಲೂ ಇನ್ನೊಂಚೂರು ವಿಶೇಷ ಇರಲಿ, ಅಂತ ಒಬ್ಬ ತುಂಬು ಗರ್ಭಿಣಿ ರೂಪ ತೊಡಿಸಿದ್ದೇವು. ಅದೇ ರೀತಿ ಸಿನಿಮಾ ಕೂಡ ತುಂಬು ಗರ್ಭಿಣಿ ಯ ಹಾಗೆ ಎಲ್ಲಾ ವಿಶೇಷತೆ ತುಂಬಿಕೊಂಡು ಆಕರ್ಷಣೆ ಮೂಡಿಸುತ್ತದೆ‌.

ಪಾತ್ರಗಳ ವಿಚಾರದಲ್ಲಿ ಇದೊಂದು ದೊಡ್ಡ ತಾರಾಗಣ ಇರುವ ಸಿನಿಮಾ.‌ಅಷ್ಟೂ ಪಾತ್ರಗಳ ಪ್ರಾಧಾನ್ಯತೆ ಹೇಗೆ?

ನನ್ನ ಹಿಂದಿನ ಸಿನಿಮಾ ನೋಡಿದವರಿಗೆ ಪಾತ್ರಗಳ ಸೃಷ್ಟಿಯ ವಿಚಾರದಲ್ಲಿ ನಾನು ತೆಗೆದುಕೊಳ್ಳುವ ಎಚ್ಚರ ಗೊತ್ತೇ ಇರುತ್ತೆ. ಚಿಕ್ಕದೊಂದು ಪಾತ್ರವೂ ಇಲ್ಲಿ ಅನವಶ್ಯಕ ಎನಿಸುವುದಿಲ್ಲ. ಪ್ರತಿ ಪಾತ್ರಕ್ಕೂ‌ ಅದರದ್ದೇಯಾದ ಪ್ರಾಮುಖ್ಯತೆ ಇರುತ್ತದೆ. ಆ ಕಾರಣಕ್ಕೂ ಇದೊಂದು ವಿಶೇಷವಾದ ಸಿನಿಮಾ. ಚಿತ್ರದ ನಾಯಕಿ ಯಜ್ಞಾ‌ಶೆಟ್ಟಿ ಅವರ ಪಾತ್ರಕ್ಕಿರುವ ಪ್ರಾಮುಖ್ಯತೆ ಸುರೇಶ್ ಸರ್, ವಿಜಯ್ ಸರ್, ಮೊದಲ್ಗೊಂಡು ಉಳಿದವರ ಪಾತ್ರಕ್ಕೂ ಇದೆ‌ . ಅದು ಈ ಸಿನಿಮಾ‌ದ ಸ್ಪೆಷಲ್. ಹಾಗೆಯೇ ಹಾಸ್ಟೆಜ್ ಥ್ರಿಲ್ಲರ್ ಇದರ ಇನ್ನೊಂದು ವಿಶೇಷ. ನಿಷ್ಕರ್ಷ ಸಿನಿಮಾದ ಶೈಲಿಯಲ್ಲಿ ಇದರ ಕಥಾ ಹಂದರವೂ ಇದೆ.ಆದರೆ ಇದು ವಿಭಿನ್ನ.‌ಅದು ಹೇಗೆ ಅನ್ನೋದಿಕ್ಕೆ ಸಿನಿಮಾ ನೋಡಬೇಕು.

ಇದೊಂದು ಪಕ್ಕಾ ಮಾಸ್ ಅಥವಾ ಕಮರ್ಷಿಯಲ್ ಸಿನಿಮಾ ಹೇಗೆ?

ಮೊದಲಿಗೆ ಅದಕ್ಕೆ ಪೂರಕವಾಗುವುದು ಕತೆ. ಇದೊಂದು ಥ್ರಿಲ್ಲರ್ ಸಿನಿಮಾ. ತುಂಬಾ ಅಪರೂಪಕ್ಕೆ ಇಂತಹ ಕತೆ ಕಾಣಲು ಸಾಧ್ಯ. ಜತೆಗೆ ಚಿತ್ರಕತೆ. ನನ್ನ ಹಿಂದಿನ ಸಿನಿಮಾಗಳಿಗಿಂತ ತುಂಬಾ ವಿಭಿನ್ನವಾದ ಶೈಲಿಯಲ್ಲಿ ಇದೆ ಇದರ ಚಿತ್ರಕತೆ. ವಾಸ್ತದ ಜತೆಗೆ ಸಿನಿಮ್ಯಾಟಿಕ್ ತುಂಬಾ ಇದೆ. ಐಟಂ ಸಾಂಗ್ ಇಲ್ಲ ಎನ್ನುವುದನ್ನು ಬಿಟ್ಟರೆ, ಅನೇಕ ಮಾಸ್ ಎಲಿಮೆಂಟ್ಸ್ ಚಿತ್ರದಲ್ಲಿವೆ.

Categories
ಸಿನಿ ಸುದ್ದಿ

ಅಂಬೇಡ್ಕರ್ ಎನ್ನುವ ಹೆಸರು ಟಿವಿ ಚಾನೆಲ್ ಗಳಿಗೆ ಬರೀ ಟಿಆರ್ ಪಿ ಸರುಕಾ?

ಒಂದು ಕಾಲದಲ್ಲಿ ಅಂಬೇಡ್ಕರ್ ಅವರನ್ನು ವಿರೋಧಿಸಿದ ಮನಸ್ಸು ಗಳೇ ಇವತ್ತು ಅವರನ್ನು ಕೊಂಡಾಡುತ್ತಿವೆ‌ . ಮತ್ತೊಂದಿಷ್ಟು ಮನಸ್ಸು ಗಳು ಅವರ ಹೆಸರನ್ನು ಟಿಆರ್ ಪಿ ಸರಕನ್ನಾಗಿ ಮಾಡಿಕೊಂಡಿವೆ. ಅವರ ಉದ್ದೇಶ ನಿಜಕ್ಕೂ ಅದಲ್ಲ ಎನ್ನುವುದಾದರೆ, ಅಂಬೇಡ್ಕರ್ ಹೆಸರಲ್ಲಿ ದಲಿತ ಸಮಯದಾಯಕ್ಕೆ ಮಹತ್ತರವಾದ ಒಂದು ಕೊಡುಗೆ ಯಾಕೆ ನೀಡಬಾರದು? ಕೊರೋನಾ‌ ನೆರವಿಗೆ 5 ಕೋಟಿ ನೀಡುವ ‘ಜೀ ‘ ಕನ್ನಡ, ರಾಜ್ಯದ ದಲಿತ ಸಮಯದಾಯಕ್ಕೆ ನೆರವು ಯಾಕೆ ನೀಡಿ, ಹೊಸ ದಾಖಲೆ ಯಾಕೆ ಮಾಡಬಾರದು?


ಕನ್ನಡ‌‌ ಕಿರುತೆರೆ ಮಟ್ಟಿಗೆ ಇತ್ತೀಚೆಗೆ ಹಲವು ಕೌತುಕಗಳು ಘಟಿಸಿವೆ. ವಿಶೇಷವಾಗಿ ‘ಜೀ ಕನ್ನಡ ‘ ವಾಹಿನಿಯ ‘ ಮಹಾನಾಯಕ’ ಧಾರಾವಾಹಿ ಮನೆ ಮಾತಾಗಿದ್ದು ಕನ್ನಡ ಕಿರುತೆರೆಯ ಮಟ್ಟಿಗೆ ಸಂಚಲನದ ಸುದ್ದಿ. ಇದರೊಂದಿಗೆ ‘ಜೀ ‘ಕನ್ನಡ ಹೊಸ ವೀಕ್ಷಕ ವರ್ಗವನ್ನೇ ತನ್ನ ಬುಟ್ಟಿಗೆ ಹಾಕಿಕೊಂಡಿದೆ.‌ ಒಂದೇ ಒಂದು ಘಟನೆಯ ಮೂಲಕ ರಾಜ್ಯದ ದಲಿತ ಸಮುದಾಯ ‘ಮಹಾನಾಯಕ ‘ಧಾರಾವಾಹಿ ತನ್ನದೇ ಕಾರ್ಯಕ್ರಮ‌ ಅನ್ನುಷ್ಟರ ಮಟ್ಟಿಗೆ ಅಪ್ಪಿ, ಒಪ್ಪಿ ,ಸ್ವೀಕರಿಸಿ ಮನೆ ಮಾತಾಗಿಸಿದೆ. ಇದಕ್ಕೆ ಪ್ರತಿಯಾಗಿ’ ಜೀ‌ ‘ ಕನ್ನಡ ಆ‌ ಸಮುದಾಯಕ್ಕೆ ಕೊಟ್ಟಿದ್ದೇನು ಎನ್ನುವ ಪ್ರಶ್ನೆ‌ ಸಹಜವಾಗಿಯೇ ಈಗ ಹುಟ್ಟಿಕೊಂಡಿದೆ.

ಇದು ಯಾಕೆ, ಹೇಗೆ ಎನ್ನುವ ಮುಂಚೆ’ ಜೀ ಕನ್ನಡದ ಹಿನ್ನೆಲೆ ಏನು ಅನ್ನೋದು ಒಂದಷ್ಟು ದಲಿತ ಸಮುದಾ ಯದ ಜನರಿಗೆ ತಿಳಿಯುವುದು ಒಳ್ಳೆಯದು. ‘ಜೀ’ ಕನ್ನಡ ಸದ್ಯಕ್ಕೆ ಕನ್ನಡ ಕಿರುತೆರೆಯ ಒಂಬರ್ ಒನ್ ಚಾನೆಲ್. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳ ಈಚೆಗೆ ಕನ್ನಡ ಕಿರುತೆರೆ ವೀಕ್ಷಕರ ಮುಂದೆ ಅದು ತಂದ ಕೆಲವು ರಿಯಾಲಿಟಿ ಶೋ‌ ಗಳು ಭಾರೀ ಜನ ಮೆಚ್ಚುಗೆ ಮೂಲಕ ಲಾಭದಾಯಕ ಕಾರ್ಯಕ್ರಮ‌ ಆಗಿವೆ.

ಈಚೆಗೆ ಅದರ ಧಾರಾವಾಹಿಗಳೂ ಅಷ್ಟೇ ಜನಪ್ರಿಯತೆ ಪಡೆದಿರುವುದು ಕೂಡ ಗೊತ್ತಿರುವ ವಿಚಾರ. ಅದರ ನಡುವೆಯೇ ಮಹಾನಾಯಕ ಧಾರಾವಾಹಿಯೂ ಕೂಡ ಅದರ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾಗಿದ್ದು, ವಿಶೇಷ. ಅದಕ್ಕೆ ಕಾರಣ ಮಹಾ ನಾಯಕ ಅಂಬೇಡ್ಕರ್ ಅವರ ಮೇಲೆ ದಲಿತ ಸಮುದಾಯಕ್ಕಿದ್ದ ಅಭಿಮಾನ.

ಕನ್ನಡದ ಮಹಾನಾಯಕ ಧಾರಾವಾಹಿಯ ಮೂಲ ಹಿಂದಿ.‌ ಅಂಬೇಡ್ಕರ್ ಮೇಲಿನ ಅಭಿಮಾನಕ್ಕೆ ಉಜ್ವಲ್ ಸುಶೀಲ್ ಕುಮಾರ್ ಶಿಂಧೆ ಹಾಗೂ ಸ್ಮೃತಿ ಸುಶೀಲ್ ಕುಮಾರ್ ಶಿಂಧೆ ನೇತ್ವತ್ವದ ಸೊಬೋ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಮಹಾ ನಾಯಕ ಧಾರಾವಾಹಿ ಯನ್ನು ಹಿಂದಿಯ ‘ಜೀ’ ಟಿವಿಗೆ ನಿರ್ಮಾಣ ಮಾಡಿತ್ತು.

ಮಹಾರಾಷ್ಟ್ರವು ಮೊದಲೇ ಅಂಬೇಡ್ಕರ್ ಹುಟ್ಟಿದ ನೆಲ. ಇನ್ನು ಅಂಬೇಡ್ಕರ್ ಅವರ ಬದುಕು ಕಿರುತೆರೆ ಯಲ್ಲಿ ಬರುತ್ತದೆ ಅಂದರೆ, ನೋಡದೆ ಇರುತ್ತಾ? ನಿರೀಕ್ಷೆ ಯಂತೆ ಕಿರುತೆರೆಯಲ್ಲಿ ದೊಡ್ಡ ಬೆಂಬಲ ಸಿಕ್ಕಿತು. ಒಂದೆಡೆ ನಿರ್ಮಾಣ ಸಂಸ್ಥೆ , ಮತ್ತೊಂದೆಡೆ ಜೀ ಟಿವಿ ಇಬ್ಬರು ಅದ್ಬುತ ಲಾಭ ಪಡೆದರು.‌ಅದರ ರುಚಿ ಕಂಡ ‘ಜೀ ‘ಕನ್ನಡ ಕೂಡ ಮಹಾ ನಾಯಕ‌ ಧಾರಾವಾಹಿಯನ್ನು ಕನ್ನಡಕ್ಕೆ ತಂತು. ಅದಕ್ಕೆ ನೆಪವಾಗಿದ್ದು ಲಾಕ್ ಡೌನ್ .

ಕನ್ನಡಕ್ಕೆ ಬಂದ ಹಲವು ಧಾರಾವಾಹಿಗಳಿಗೆ ಲಾಕ್ ಡೌನ್ ಒಂದು ನೆಪವಾಯಿತು. ಮಹಾ‌ನಾಯಕ ಧಾರಾವಾಹಿ ಕನ್ನಡಕ್ಕೆ ಬಂದಿದ್ದು ಕೂಡ ಹಾಗೆಯೇ. ಅಂಬೇಡ್ಕರ್ ಅವರ ಮೇಲಿನ ದೊಡ್ಡ ಅಭಿಮಾನಕ್ಕಾಗಲಿ, ರಾಜ್ಯದ ದಲಿತ ಸಮುದಾಯಕ್ಕೆ ಅಂಬೇಡ್ಕರ್ ಅವರನ್ನ ಪರಿಚಯಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದಾಗಲಿ ಅಲ್ಲ. ಅದೊಂದು ಟಿಆರ್ ಪಿ ಧಾರಾವಾಹಿ. ಅದು ಕನ್ನಡದಲ್ಲೂ ಟಿಆರ್ ಪಿ ತರಬಲ್ಲದು ಎನ್ನುವ ಒಂದೇ ಉದ್ದೇಶದೊಂದಿಗೆ ಶುರುವಾದ ‘ಮಹಾನಾಯಕ’ ಧಾರಾವಾಹಿ ರಾತ್ರೋರಾತ್ರಿ ಮನೆ ಮಾತಾಗಿದ್ದು ಆ ಒಂದು ಘಟನೆಯ ಮೂಲಕ.

ಅದೆಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ, ಅವತ್ತು ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಮ್ಮ ಪೇಸ್ ಬುಕ್ ಖಾತೆಯಲ್ಲಿ ‘ಮಹಾನಾಯಕ’ ಧಾರಾವಾಹಿ‌‌ ನಿಲ್ಲಿಸುವಂತೆ ಬೆದರಿಕೆ ಕರೆ ಬರುತ್ತಿವೆ ಅಂದಿದ್ದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆ ಹೇಳಿಕೆ ದಲಿತ ಸಂಘಟನೆಗಳ ನಿದ್ದೆ ಗೆಡಿಸಿತು. ರಾಜ್ಯದ ದಲಿತ ಸಂಘಟನೆಗಳು ಎದ್ದು ಕುಳಿತವು. ಧಾರಾವಾಹಿಗೆ ಬೆಂಬಲಕ್ಕೆ ನಿಂತವು. ರಾಜ್ಯದ‌ ಮೂಲೆ ಮೂಲೆಗೂ ಧಾರಾವಾಹಿ ಪರವಾದ ಅಲೆ ಎದ್ದಿತು.

ಧಾರಾವಾಹಿ ಬೆಂಬಲಿಸಿ, ಬ್ಯಾನರ್, ಪೋಸ್ಟರ್ ಎದ್ದು ನಿಂತವು.‌ಮಹಾನಾಯಕ ಧಾರಾವಾಹಿ ತಮ್ಮದೇ ಕಾರ್ಯಕ್ರಮವೆಂದೇ ಸ್ವೀ’ಕರಿಸಿದರು.’ ಜೀ’ ಕನ್ನಡಕ್ಕೆ‌ ದಲಿ‌ತ ಸಮುದಾಯದ ಹೊಸ ವರ್ಗವೇ ಸಿಕ್ಕಿತು‌. ಎಂದೂ ಧಾರಾವಾಹಿ ನೋಡದ ಒಂದು ಸಮುದಾಯ’ ಜೀ’ ಕನ್ನಡ ದ ಪಾಲಾಯಿತು‌. ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸನ್ಮಾನ ಕಾರ್ಯಕ್ರಮಗಳು‌ ನಡೆದವು.

” ಅಂಬೇಡ್ಕರ್ ಅವರ ಬದುಕಿನ ಕುರಿತ ‘ಮಹಾನಾಯಕ’ ಧಾರಾವಾಹಿಯ ಮೂಲಕ ದಲಿತ ಸಮುದಾಯದ ಹೊಸ ವರ್ಗವನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಭಾರೀ ಲಾಭ ಮಾಡಿಕೊಂಡ ‘ಜೀ ಕನ್ನಡ’ ವಾಹಿನಿ, ಆ ಸಮುದಾಯದ ಪರ ನಿಜಕ್ಕೂ ಏನನ್ನಾದರೂ ಮಾಡಬೇಕಿತ್ತು ಅನ್ನೋದು ದಲಿತ ಮುಖಂಡರ ಮಾತು.” 

ಇದು ಧಾರಾವಾಹಿ ಮನೆ ಮಾತಾಗುವಂತೆ ಮಾಡಿತು.
ನಗರ, ಪಟ್ಟಣ, ಊರು ಹೀಗೆ ರಾಜ್ಯದ ಯಾವುದೇ ಮೂಲೆಗೂ ಹೋದರೂ ಇವತ್ತು ಮಹಾನಾಯಕ ಧಾರಾವಾಹಿ ಪರವಾಗಿ ದಲಿತ‌ ಸಂಘಟನೆಗಳು ಹಾಕಿರುವ ಬೃಹತ್ ಪ್ರಮಾಣದ ಬ್ಯಾನರ್ ಹಾಗೂ ಪೋಸ್ಟರ್ ಗಳು ನಿಮಗೆ ಕಾಣುತ್ತವೆ. ಎಲ್ಲಿಯಾ ಜೀ ಕನ್ನಡ, ಇನ್ನೆಲ್ಲಿಯಾ ದಲಿತ ಸಮುದಾಯ? ಟಿಆರ್ ಪಿ ದೃಷ್ಟಿಯಿಂದಲೂ ಜೀ ಕನ್ನಡ ದೊಡ್ಡ ಲಾಭ ಪಡೆಯಿತು.‌

ಇದೆಲ್ಲ ವೂ ಸಾಧ್ಯವಾಗಿದ್ದು ಅಂಬೇಡ್ಕರ್ ಹೆಸರು. ಅವರ ಮೇಲೆ ದಲಿತ ಸಮುದಾಯಕ್ಕಿರುವ ಅಭಿಮಾನ. ಹಾಗಾದರೆ ಅಂಬೇಡ್ಕರ್ ತಮ್ಮವರೇ ಎಂದು ಧಾರಾವಾಹಿ ಸ್ವೀಕರಿಸಿದ ದಲಿತ ಸಮುದಾಯಕ್ಕೆ ‘ಜೀ ‘ಕನ್ನಡ ಕೊಟ್ಟಿದ್ದೇನು ಅನ್ನೋದು ಸದ್ಯದ ಪ್ರಶ್ನೆ. ಮುಂದಾದರೂ ಇದಕ್ಕೆ ಉತ್ತರ ಸಿಗಬಹುದೇ

Categories
ಸಿನಿ ಸುದ್ದಿ

ರಾಜ್ಯದಲ್ಲಿ ‘ಆಕ್ಟ್ 1978’ ಜಾರಿಗೆ ಕ್ಷಣಗಣನೆ..!

  • ನಿರೀಕ್ಷೆಯಂತೆ ಈ ಸಿನಿಮಾ ಗೆದ್ದರೆ  ಹೊಸ ದಾಖಲೆ

ಮಂಸೋರೆ ನಿರ್ದೇಶನದ ‘ಆಕ್ಟ್ 1978’  ಹೊಸ ಮುನ್ನುಡಿ ಬರೆಯಲು ಇನ್ನೇನು‌ ಕೆಲವೇ ದಿನ ಬಾಕಿ ಇವೆ.ನಿರ್ದೇಶಕರ ಹಿನ್ನೆಲೆ, ದೊಡ್ಡ ತಾರಾಗಣ, ಸಮಕಾಲೀನ ಸಂಗತಿಯ ಕಥಾವಹಂದರ , ಜತೆಗೆ ವಿಭಿನ್ನ ಮಾದರಿಯ ಪ್ರಚಾರದೊಂದಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ಇದು.  ನಿರೀಕ್ಷೆಯಂತೆ‌ ಚಿತ್ರ ಮಂದಿರದಲ್ಲಿ ಸಿನಿಮಾ‌ ಗೆದ್ದರೆ ಹೊಸ ದಾಖಲೆ ಗ್ಯಾರಂಟಿ.


ಲಾಕ್ ಡೌನ್ ತೆರವಾದ ನಂತರ ಚಿತ್ರ ಮಂದಿರಗಳಲ್ಲಿ ತೆರೆ ಕಾಣುತ್ತಿರುವ ಮೊಟ್ಟ ಮೊದಲ‌ ಕನ್ನಡ‌ ಸಿನಿಮಾ‌ ಇದು. ಇದು ಕನ್ನಡ ದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಮೊದಲು. ಹಾಗೊಂದು ದೊಡ್ಡ ಕುತೂಹಲ ‘ ಆಕ್ಟ್ 1978’
ಮೇಲಿದೆ. ಕೊರೋನಾ ಬಂದು ಈ ಬಾರಿಯ ದೀಪಾವಳಿಗೆ ಸ್ಯಾಂಡಲ್ ವುಡ್ ಕಳೆ ಕಳೆದುಕೊಂಡಿತು ಎನ್ನುವ ಆತಂಕದ‌ ನಡುವೆಯೇ  ಚಿತ್ರ ತಂಡ ದೊಡ್ಡ ಸವಾಲಿನೊಂದಿಗೆ ಇದು ತೆರೆ ಕಾಣುತ್ತಿದೆ. ಈ ಮೂಲಕ ರಾಜ್ಯದ  ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನದ ಮೆರವಣಿಗೆ ಶುರುವಾಗುತ್ತಿರುವುದು ಸದ್ಯದ ಕುತೂಹಲ.

ಲಾಕಡೌನ್ ನಂತರ ಅಕ್ಟೋಬರ್ 15  ರಿಂದಲೇ  ಚಿತ್ರ ಮಂದಿರಗಳ ಆರಂಭಕ್ಕೆ ಅನುಮತಿ ಸಿಕ್ಕಿದೆ. ಅಂತೆಯೇ ಮಲ್ಟಿಪ್ಲೆಕ್ಸ್ ಸೇರಿ ಹಲವೆಡೆ ಚಿತ್ರಮಂದಿರಗಳು ಒಪನ್ ಆಗಿದ್ದೂ ಕೂಡ‌ ನಿಮಗೆ ಗೊತ್ತು. ಆದರೆ ಚಿತ್ರಮಂದಿರಕ್ಕೆ‌ಜನ ಬರುವ ಯಾವುದೇ ಖಾತರಿ ಇಲ್ಲದ ಕಾರಣ, ರಿಲೀಸ್ ಆಗಿದ್ದ ಸಿನಿಮಾಗಳೇ ಮರು ಪ್ರದರ್ಶನ ಕಂಡವು.‌ ಪ್ರೇಕ್ಷಕ ರ ಬೆಂಬಲ ಸಿಗದ ಭಯಕ್ಕೆ ಹೊಸ ಸಿನಿಮಾಗಳೆ ಬಿಡುಗಡೆ ಆಗಿರಲಿಲ್ಲ‌ .ಆದರೆ ಈಗ  ಮಂಸೋರೆ ನಿರ್ದೇಶನದ ‘ ಆಕ್ಟ್ 1978 ‘  ಚಿತ್ರ ತಂಡ ದೊಡ್ಡ ಸವಾಲಿನೊಂದಿಗೆ ನವೆಂಬರ್ 20 ಕ್ಕೆ ಚಿತ್ರ ರಿಲೀಸ್ ಮಾಡಲು ಮುಂದಾಗಿದೆ.

ಲಾಕ್ ಡೌನ್ ನಂತರ ಬಿಡುಗಡೆ ಆಗುತ್ತಿರುವ ಕನ್ನಡದ ಮೊದಲು  ಸಿನಿಮಾ‌ ಎನ್ನುವುದು  ಇದಕ್ಕಿರುವ ಹೆಗ್ಗಳಿಕೆ . ಅದರ ಜತೆಗೆ ದೊಡ್ಡ ಕುತೂಹಲ‌. ಆದರೆ ಅದು ಅಂದುಕೊಂಡಷ್ಟು ಸುಲಭವೇನಿಲ್ಲ. ಇದೊಂದು ಕಡುಕಷ್ಟದ ಸವಾಲು.‌ ಆದರೂ‌ ಮಂಸೋರೆ ಆ್ಯಂಡ್ ಟೀಮ್ ಯಾಕಿಂತ ರಿಸ್ಕ್ ತೆಗೆದುಕೊಂಡಿತು ಅನ್ನೋದು ಹಲವರ ಪ್ರಶ್ನೆ. ಆದರೆ ಯಾರೇ ಆದರೂ ಒಬ್ಬರು ಇಂತಹ‌ ರಿಸ್ಕ್ ತೆಗೆದುಕೊಳ್ಳದಿದ್ದರೆ, ಕನ್ನಡ ಚಿತ್ರ ರಂಗದ ಗತಿಯೇನು?

ಪ್ರಚಾರಕ್ಕೆ ಚಿತ್ರ ತಂಡ ರೂಪಿಸಿದ ನವನವೀನ ಪೊಸ್ಟರ್

ಇದು ಚಿತ್ರ ತಂಡ ಮಾತು.ಅದಕ್ಕೆ ಪೂರಕವಾಗಿಯೇ ಚಿತ್ರ ತಂಡ ಸೋಷಲ್ ಮೀಡಿಯಾ ಮೂಲಕ ವಿಭಿನ್ನವಾದ ಪ್ರಚಾರ ನಡೆಸಿದೆ. ಅದರ ಜತೆಗೆ  ಮಂಸೋರೆ ಈಗ ಹೊಸ ಮಾದರಿ ಸಿನಿಮಾ‌ ಮಾಡಿದ್ದಾರೆನ್ನುವುದಕ್ಕೆ ಚಿತ್ರದ ಟ್ರೇಲರ್ ಗೆ ಸಿಕ್ಕ ದೊಡ್ಡ ಬೆಂಬಲವೇ ಸಾಕ್ಷಿ ಆಗಿದೆ. ಚಿತ್ರಮಂದಿರದಲ್ಲಿಇದು ಎಷ್ಟರ ಮಟ್ಟಿಗೆ ಫಲ‌ನೀಡುತ್ತೆ ಎನ್ನುವ ಕುತೂಹಲ‌ ಮನೆ‌ ಮಾಡಿದೆ.‌

Categories
ಸಿನಿ ಸುದ್ದಿ

ಅಂತೂ ಇಂತೂ ಅಸಿಸ್ಟೆಂಟ್ ಡೈರೆಕ್ಟರ್ ಗೆ ಪೇಮೆಂಟ್ ಸಿಕ್ತು..!

ಅಸಿಸ್ಟೆಂಟ್ ಡೈರೆಕ್ಟರ್ ಚಿತ್ರದ ಫಸ್ಟ್ ಲುಕ್ ರಿಲೀಸ್

ಅರೇ, ಹೀಗಂದಾಕ್ಷಣ ಕೊಂಚ ಅಚ್ಚರಿಯಾಗ ಬಹುದೇನೋ? ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಗಳಿಗೆ ಪೇಮೆಂಟ್ ಸಿಗೋದು ಸುಲಭವೇನಲ್ಲ. ಆದರೂ ಪೇಮೆಂಟ್ ಸಿಕ್ಕಿದೆ ಅಂದರೆ?ಹೌದು, ಪೇಮೆಂಟ್ ಸಿಕ್ಕಿರೋದು ನಿಜ. ಹಾಗಂತ ಕನ್ನಡ ಚಿತ್ರರಂಗದಲ್ಲಿರುವ ಅಸಿಸ್ಟೆಂಟ್ ಡೈರೆಕ್ಟರ್ ಗಳಿಗಲ್ಲ. ಕನ್ನಡದಲ್ಲಿ ‘ಅಸಿಸ್ಟೆಂಟ್ ಡೈರೆಕ್ಟರ್’ ಹೆಸರಿನ ಸಿನಿಮಾವೊಂದು ಶುರುವಾಗುತ್ತಿರೊದು ಗೊತ್ತೇ ಇದೆ. ಇದು ಕನ್ನಡ‌ ಮಾತ್ರವಲ್ಲದೆ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯಲ್ಲೂ ತಯಾರಾಗುತ್ತಿದೆ. ಚಿತ್ರದ ಶೀರ್ಷಿಕೆ ಹೇಳುವಂತೆ ಕನ್ನಡ ಸಿನಿಮಾರಂಗದಲ್ಲಿರುವ ಸಹ‌ ನಿರ್ದೇಶಕರ ಕಥಾಹಂದರ ಇರುವ ಸಿನಿಮಾನಾ? ಗೊತ್ತಿಲ್ಲ. ಆದರೆ, ಇದೊಂದು ಹೊಸಬರ ತಂಡ ಹುಟ್ಟು ಹಾಕುತ್ತಿರುವ ಸಿನಿಮಾ.

ದಿವಾಕರ ಡಿಂಡಿಮ, ನಿರ್ದೇಶಕ

ಈ ಚಿತ್ರದ ಮೂಲಕ ದಿವಾಕರ್ ಡಿಂಡಿಮ ನಿರ್ದೇಶಕರಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇವರ ಜೊತೆ ಒಂದೊಳ್ಳೆಯ ತಂಡವೂ ಜೊತೆ ಸೇರಿದೆ. ಸಿನಿಮಾ ಹಸಿವು ಇರುವ ಸಮಾನ ಮನಸ್ಸಿನ ಗೆಳೆಯರು ಕೈ ಜೋಡಿಸಿದ್ದಾರೆ.
ಸಂತೋಷ್ ಆಶ್ರಯ್ ಚಿತ್ರದ ಹೀರೋ. ಈ ಹಿಂದೆ ಹಲವು ಕಿರುಚಿತ್ರಗಳ ಮಾಡಿದ ಅನುಭವವಿದೆ. ಸಂತೋಷ್ ಆಶ್ರಯ್ ಅವರಿಗೆ ನಿಸರ್ಗ ಅಪ್ಪಣ್ಣ ನಾಯಕಿ. ವಿಹಾನ್ ಸಂಗೀತ ನೀಡಿದ್ದಾರೆ. ಪ್ರಸಾದ್ ಎಚ್.ಎಂ.ಛಾಯಾಗ್ರಹಣವಿದೆ.

ಸಿನಿಮಾ ನಿರ್ಮಾಪಕ, ನಟನ ಉದ್ಯಮವೇ?

ತಮ್ಮ ಚೊಚ್ಚಲ ಸಿನಿಮಾ ಕುರಿತು ನಿರ್ದೇಶಕ ದಿವಾಕರ್ ಡಿಂಡಿಮ ‘ಸಿನಿಲಹರಿ’ ಗೆಹೇಳುವುದಿಷ್ಟು.
‘ಸಮಾಜಕ್ಕೆ ಸಿನಿಮಾದವರ ಮೇಲಿನ ಒಂದಿಷ್ಟು ಅಭಿಪ್ರಾಯಗಳನ್ನೆಲ್ಲ ಕಲೆ ಹಾಕಿ ಅದನ್ನ ಒಂದು ಪ್ರಶ್ನೆಯಾಗಿಟ್ಟು ಅದಕ್ಕೆ ಉತ್ತರ ಕೊಡೋ ಸಣ್ಣದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದೇನೆ.
ಸಿನಿಮಾ ಅನ್ನೋದು ಕೇವಲ ನಿರ್ಮಾಪಕ ಮತ್ತು ನಟನಿಗೆ ಮಾತ್ರ ಒಂದು ಉದ್ಯಮವಾಗಿ ಬಳಕೆಯಾಗುತ್ತಿದೆ. ಒಬ್ಬ ಮೇರು ನಟನ ಚಿತ್ರ ಶುರುವಾಗುತ್ತಿದೆ. ಅಂದರೆ, ಉಳಿದ ಎಲ್ಲಾ ವಿಭಾಗಗಳಲ್ಲೂ ಉದ್ಯಮದ ವಾತಾವರಣ
ಬೆಳೆಯಬೇಕು. ಚಿತ್ರರಂಗಕ್ಕಾಗಿ ದುಡಿಯುವ ಪ್ರತಿಯೊಬ್ಬರಿಗೂ ಸರಿಯಾದ ಸ್ಥಾನಮಾನ, ಧನ ಸಿಗುವಂತಾಗಬೇಕು.


ಸಿನಿಮಾ ಮೇಲಿನ ಪ್ರೀತಿಯಿಂದ ಬಂದವರನ್ನು ಸುಖಾಸುಮ್ಮನೆ ದುರುಪಯೋಗಪಡಿಸಿಕೊಳ್ಳುವುದು ಮೊದಲು ನಿಲ್ಲಬೇಕು, ತನ್ನ ಕೆಲಸದ ಜೊತೆ ಜೊತೆಗೆ ಬೇರೆಲ್ಲಾ ವಿಭಾಗಗಳ ಕೆಲಸ ಮಾಡುವ ಏಕೈಕ ವ್ಯಕ್ತಿ ಅಂದರೆ ಅದು ಸಹಾಯಕ ನಿರ್ದೇಶಕ, ಆದರೆ ಚಿತ್ರರಂಗದ ಎಲ್ಲಾ ವಿಭಾಗಗಳಿಗಿಂತ ಅತೀ ಕಡಿಮೆ ಅಂದ್ರೆ ಸಂಭಾವನೆಯೇ ಇಲ್ಲದೇ ಬರೀ ತನ್ನ ಖರ್ಚಿಗಷ್ಟೇ ಹಣ ಪಡೆದು ಕೆಲಸ ಮಾಡುವಂತಾಗಿದೆ.


ಸಹಾಯಕ ನಿರ್ದೇಶಕರು ಏನೆಲ್ಲಾ ಮಾಡಬಲ್ಲರು ಎಂದು ತೋರಿಸುವುದೇ ನಮ್ಮ ಈ ‘ಅಸಿಸ್ಟೆಂಟ್ ಡೈರೆಕ್ಟರ್’ ಸಿನಿಮಾದ ಉದ್ದೇಶ. ಹಾಗಂತ ಇಲ್ಲಿ ಯಾರನ್ನೂ ತೆಗಳುವ ಉದ್ದೇಶವಿಲ್ಲ. ಸಿನಿಮಾ ಮೂಲಕ ಒಂದಷ್ಟು ಸತ್ಯವನ್ನು, ವಾಸ್ತವತೆಯನ್ನು ತೋರಿಸುವ ಪ್ರಯತ್ನಕ್ಕೆ ಹೊರಟಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ದಿವಾಕರ್ ಡಿಂಡಿಮ.

ಅದೇನೆ ಇರಲಿ, ಚಿತ್ರರಂಗದಲ್ಲಿರುವ ವ್ಯವಸ್ಥೆ ಅಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಗಳನ್ನು ನಡೆಸಿಕೊಳ್ಳುವ ರೀತಿ ಕುರಿತು ಒಂದಷ್ಟು ವಿಶೇಷತೆಗಳಿವೆ.
ನಿರ್ದೇಶಕನಾಗಬೇಕೆಂಬ
ಕನಸನ್ನ ಕಟ್ಟಿಕೊಂಡು ತಯಾರಿ ನಡೆಸುತ್ತಿರುವ ಸಹ ಹಾಗೂ ಸಹಾಯಕ ನಿರ್ದೇಶಕರ ನೋವು, ನಲಿವು ಬಗೆಗಿನ ಚಿತ್ರಣವನ್ನು‌ ಭಾವನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನ ಈ ಹೊಸಬರದು.

Categories
ಸಿನಿ ಸುದ್ದಿ

ಕಬ್ಜ ಮೋಷನ್ ಪೋಸ್ಟರ್ ಹುಟ್ಟಿಸಿದ ಹವಾ

 

ಆರ್.ಚಂದ್ರು ಮೋಡಿಗೆ ಉಪ್ಪಿ ಫ್ಯಾನ್ಸ್ ಫಿದಾ

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ಕಬ್ಜ’ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಈಗ ದೀಪಾವಳಿ ಹಬ್ಬಕ್ಕೆ ಮತ್ತೊಂದು ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.ಉಪೇಂದ್ರ ಅಭಿನಯದ ಈ ಚಿತ್ರವನ್ನು ಆರ್. ಚಂದ್ರು ನಿರ್ದೇಶನ ಮಾಡಿದ್ದಾರೆ.


ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ‘ಕಬ್ಜ’ ಭಾರತಾದ್ಯಂತ ಕ್ರೇಜ್ ಹೆಚ್ಚಿಸಿದೆ. ಈ ಕ್ರೇಜ್ ಗೆ ಕಾರಣ, ಈಗಾಗಲೇ‌ ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ ನಲ್ಲಿಬ’ಬ್ರಹ್ಮ’ ಮತ್ತು ‘ಐ ಲವ್ ಯು’ ಚಿತ್ರಗಳು ಹೊರಬಂದಿದ್ದು, ಅವುಗಳು ಕನ್ನಡ ಚಿತ್ರರಂಗ ಮಾತ್ರವಲ್ಲ, ಪರಭಾಷೆಯಲ್ಲೂ ಸದ್ದು ಮಾಡಿವೆ. ಈಗ ಅದೇ ಕಾಂಬಿನೇಷನ್ ನಲ್ಲಿ ‘ಕಬ್ಜ’ ತಯಾರಾಗುತ್ತಿದೆ. ಶುರುವಿನಿಂದಲೂ ‘ಕಬ್ಜ’ ಜೋರು ಸದ್ದು ಮಾಡಿದೆ. ಈಗ‌ ಹೊರಬಂದಿರುವ ಮೋಷನ್ ಪೋಸ್ಟರ್ ಗೂ ಸಖತ್ ಮೆಚ್ಚುಗೆ ಸಿಗುತ್ತಿದೆ. ಇನ್ನು ಚಿತ್ರಕ್ಕೆ ರವಿ ಬಸ್ರುರು ಅವರ ಸಂಗೀತವಿದೆ.


ಆರ್.ಚಂದ್ರು ಯಾವುದೇ ಚಿತ್ರ ಮಾಡಿದರೂ ಅಲ್ಲಿ ವಿಶೇಷತೆ ಇದ್ದೇ ಇರುತ್ತೆ. ಹಾಗೆಯೇ ‘ಕಬ್ಜ’ ಸಿನಿಮಾ‌ಕೂಡ ಆರಂಭದಲ್ಲೇ ಸುದ್ದಿ ಮಾಡುತ್ತಿದ್ದು, ಉಪೇಂದ್ರ ಅಭಿಮಾನಿಗಳಲ್ಲಿ ಮತ್ತಷ್ಟು ಕ್ರೇಜ್ ಹೆಚ್ಚಿಸಿರುವುದಂತೂ ನಿಜ.

Categories
ಸಿನಿ ಸುದ್ದಿ

ಬಳೆಪೇಟೆಯಲ್ಲಿ ನಿಂತ ಅನಿತಾಭಟ್

 

ಡಿ ಗ್ಲಾಮ್ ಪಾತ್ರದಲ್ಲಿ ಭಟ್ಟರು

ಕನ್ನಡದ ಗ್ಲಾಮರಸ್ ನಟಿ ಅನಿತಾಭಟ್ ಈಗ ಬಳೆಪೇಟೆಯಲ್ಲಿದ್ದಾರೆ. ಹಾಗಂತ ಬಳೆ ಖರೀದಿಗೆ ಬಳೆಪೇಟೆಯಲ್ಲಿ ನಿಂತಿಲ್ಲ. ‘ಬಳೆಪೇಟೆ’ ಅನ್ನೋದು ಅವರ ಹೊಸ ಚಿತ್ರದ ಹೆಸರು.
ದೀಪಾವಳಿ ಹಬ್ಬಕ್ಕೆ ಅವರ ‘ಬಳೆಪೇಟೆ’ ಚಿತ್ರದ ಫಸ್ಟ್ ಲುಕ್ ಹೊರಬಂದಿದೆ.


ಈ ಚಿತ್ರದ ಫಸ್ಟ್ ಲುಕ್ ನೋಡಿದರೆ, ಅದೊಂದು ಗ್ಯಾಂಗ್ ಸ್ಟೋರಿ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತೆ. ಇಲ್ಲೊಂದು ಗ್ಯಾಂಗ್ ಸ್ಟೋರಿ ಇದ್ದರೂ, ಹೆಣ್ಣೊಬ್ಬಳ ಅಸಹಾಯಕತೆ, ನೋವು, ತಲ್ಲಣ ಇತ್ಯಾದಿ ವಿಷಗಳನ್ನು ಹೊಂದಿದೆ.
ಈ ಚಿತ್ರಕ್ಕೆ ರಿಷಿಕೇಶ್ ನಿರ್ದೇಶಕರು. ಇದು ಇವರ ಚೊಚ್ಚಲ ಚಿತ್ರ. ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡಿದ್ದು, ಜೊತೆಗೆ ಕ್ಯಾಮೆರಾ ಹಿಡಿದಿದ್ದಾರೆ. ಸಂಕಲನವನ್ನು ಮಾಡಿದ್ದಾರೆ.


ಅನಿತಾಭಟ್ ಈ ಚಿತ್ರದ ಮುಖ್ಯ ಆಕರ್ಷಣೆ. ಪ್ರಮೋದ್ ಬೋಪಣ್ಣ, ಉಮೇಶ್ ಬಣಕಾರ್, ಮಯೂರ್ ಪಟೇಲ್ ಇತರರು ನಟಿಸಿದ್ದಾರೆ.
ಶಿವರಾಮ್ ನಿರ್ಮಾಣವಿದೆ. ಇವರಿಗೂ ಇದು ಮೊದಲ ಪ್ರಯತ್ನ.


ಅನಿತಾಭಟ್ ಈ ಚಿತ್ರದಲ್ಲಿ ಮೇಕಪ್ ಮಾಡಿಲ್ಲ ಎಂಬುದು ವಿಶೇಷ.‌ ‘ಬಳೆಪೇಟೆ’ ಚಿತ್ರ ನೈಜವಾಗಿಯೇ ಮೂಡಿಬರಬೇಕು ಎಂಬ ಉದ್ದೇಶದಿಂದ ನಿರ್ದೇಶಕರು ಚಿತ್ರೀಕರಣ ಸ್ಥಳ ಸೇರಿದಂತೆ ಕಲಾವಿದರನ್ನೂ ಹಾಗೆಯೇ ಆಯ್ಕೆ ಮಾಡಿದ್ದಾರೆ.

ಒಟ್ಟಾರೆ ‘ಬಳೆಪೇಟೆ’ ಒಂದು ಸೂಕ್ಷ್ಮತೆಯ ಸಿನಿಮಾ ಎಂಬುದು ಚಿತ್ರತಂಡದ ಹೇಳಿಕೆ.
ಅನಿತಾಭಟ್ ಅಬಿನಯದ ‘ಬೆಂಗಳೂರು 69’, ‘ಕಲಿವೀರ’,’ಕನ್ನೇರಿ’, ‘ಡಿಎನ್ಎ’, ‘ಜೂಟಾಟ’ ಮತ್ತು ‘ಪ್ರಭುತ್ವ’ ಚಿತ್ರಗಳಿವೆ. ಸದ್ಯ ರಿಲೀಸ್ ಗೆ ರೆಡಿ ಇರುವ ಸಿನಿಮಾಗಳ ಜೊತೆ ಈಗ ‘ಬಳೆಪೇಟೆ’ಯೂ ಇದೆ.

Categories
ಸಿನಿ ಸುದ್ದಿ

ಹಲವು ತಿರುವುಗಳ ರೂಮ್ ಬಾಯ್!

 

ಪ್ರತಿಭಾವಂತ ಹುಡುಗರ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್

ಇದು ದೀಪಾವಳಿ ಧಮಾಕ…

ಕನ್ನಡ ಚಿತ್ರರಂಗ ಮತ್ತೆ ಉತ್ಸಾಹದೊಂದಿಗೆ ತನ್ನ ಕಾರ್ಯಚಟುವಟಿಕೆಯಲ್ಲಿ ತೊಡಗಿದೆ. ಅದೇ ಉತ್ಸಾಹ ಮತ್ತು ಹುರುಪಿನೊಂದಿಗೆ ಚಿತ್ರಗಳು ಕೂಡ ಶುರುವಾಗುತ್ತಿವೆ. ಆ ಸಾಲಿಗೆ ಈಗ ‘ರೂಮ್ ಬಾಯ್’ ಚಿತ್ರ ಸೆಟ್ಟೇರುತ್ತಿದೆ. ಹೌದು ‘ರೂಮ್ ಬಾಯ್’ ಹೆಸರಲ್ಲೇ ಒಂದು ರೀತಿ ಮಜವಿದೆ. ಅಂತಹ ಮನರಂಜನೆಯ ಸಿನಿಮಾ ನಮನ ಎಂಬ ಉದ್ದೇಶದಿಂದ ಇಲ್ಲೊಂದು ಪ್ರತಿಭಾವಂತರ ತಂಡ ‘ರೂಮ್ ಬಾಯ್’ ಸಿನಿಮಾ ಕೈಗೆತ್ತಿಕೊಡಿದೆ. ದೀಪಾವಳಿ ಹಬ್ಬದಂದು ಚಿತ್ರತಂಡ ತನ್ನ ಫಸ್ಟ್ ಲುಕ್ ರಿಲೀಸ್ ಮಾಡಿದೆ.

ಲಿಖಿತ್ ಸೂರ್ಯ, ನಾಯಕ

ಸಿನಿಮಾದ ಶೀರ್ಷಿಕೆ ನೋಡಿದರೆ, ಇದು ಪಕ್ಕಾ ಪಡ್ಡೆ ಹುಡುಗರಿಗೆಂದೇ ಮಾಡುತ್ತಿರುವ ಸಿನಿಮಾ ಎನಿಸಿದರೂ, ಚಿತ್ರದಲ್ಲೊಂದು ವಿಶೇಷತೆ ಇದೆ. ಫೋರ್ಸ್ ಕೂಡ ಇದೆ.
ಅಂದಹಾಗೆ, ‘ರೂಮ್ ಬಾಯ್’ ಐ ಕ್ಯಾನ್ ಪ್ರೊಡಕ್ಷನ್ ಮೂಲಕ ಈ ಚಿತ್ರ ತಯಾರಾಗುತ್ತಿದೆ.
‘ರೂಮ್ ಬಾಯ್’ ಫಸ್ಟ್ ಲುಕ್ ನೋಡಿದವರಿಗೆ ಇದೊಂದು ಹೋಟೆಲ್ ವೊಂದರ ‘ರೂಮ್ ಬಾಯ್’ ಕಥೆ ಅನಿಸುತ್ತೆ. ಈ ಕಲರ್ ಫುಲ್ ಫಸ್ಟ್ ಲುಕ್ ಅನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಎಡಗೈಯಲ್ಲೊಂದು ವೈನ್ ತುಂಬಿದ ಗ್ಲಾಸ್ , ಬಲಗೈಯಲ್ಲೊಂದು ಕಬ್ಬಿಣದ ರಾಡು ಹಿಡಿದು ನಿಂತಿರುವ ಹೀರೋ ಕಾಣುತ್ತಾನೆ. ಆ ಕಬ್ಬಿಣದ ರಾಡನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಜಿನುಗುತ್ತಿರುವ ರಕ್ತದ ಹನಿಗಳು ಕಾಣುತ್ತವೆ. ಅಲ್ಲಿಗೆ ಅಲ್ಲೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಂಬುದನ್ನು‌ ಅರಿಯಬಹುದು. ಕನ್ನಡದಲ್ಲಿ ಈಗಾಗಲೇ ಸಸ್ಪೆನ್ಸ್ ಥ್ರಿಲ್ಲರ್ ಕಥೆಗಳಿಗೇನೂ ಬರವಿಲ್ಲ. ಅದೇ ಹಾದಿಯಲ್ಲಿ ಸಾಗಲಿರುವ ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳಿವೆ ಎಂಬುದು ಚಿತ್ರತಂಡದ ಹೇಳಿಕೆ.


ಈ ಚಿತ್ರಕ್ಕೆ ಲಿಖಿತ್ ಸೂರ್ಯ ಹೀರೋ. ಈ ಚಿತ್ರಕ್ಕೆ ರವಿ‌ ನಾಗಡದಿನ್ನಿ ನಿರ್ದೇಶಕರು.
ಲಿಖಿತ್ ಸೂರ್ಯ ಇಲ್ಲಿ ನಟನೆ ಜೊತೆಗೆ ಇದೇ ಮೊದಲ‌ ಸಲ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ತಮ್ಮ ಆಪ್ತ ಕೆಲ ಗೆಳೆಯರೂ ಕೂಡ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಲಿಖಿತ್ ಸೂರ್ಯ ಅವರಿಗೆ ಸಿನಿಮಾ ಹೊಸದಲ್ಲ. ಈ ಹಿಂದೆ ‘ಲೈಫು ಸೂಪರ್’ ಮತ್ತು ‘ಆಪರೇಷನ್ ನಕ್ಷತ್ರ’ ಚಿತ್ರ ಮಾಡಿದ್ದಾರೆ. ಇದರೊಂದಿಗೆ ತೆಲುಗಿಗೂ ಎಂಟ್ರಿಯಾಗಿರುವ ಲಿಖಿತ್ ಸೂರ್ಯ, ‘ರಾಮಾಪುರಂ’ ಹೆಸರಿನ ಚಿತ್ರದಲ್ಲೂ ಹೀರೋ ಆಗಿ ನಟಿಸಿದ್ದಾರೆ. ಸದ್ಯ ಎರಡನೇ ಹಂತದ ಚಿತ್ರೀಕರಣ ಮುಗಿದರೆ, ‘ರಾಮಾಪುರಂ’ ಪೂರ್ಣಗೊಳ್ಳಲಿದೆ. ಈಗ ಐ ಕ್ಯಾನ್ ಪ್ರೊಡಕ್ಷನ್ ಮೂಲಕ ‘ರೂಮ್‌ ಬಾಯ್’ ಮಾಡುತ್ತಿದ್ದಾರೆ.

ರವಿ ನಾಗಡದಿನ್ನಿ, ನಿರ್ದೇಶಕ

ಇನ್ನು ನಿರ್ದೇಶಕ ರವಿ ನಾಗಡದಿನ್ನಿ ಅವರಿಗೂ ಈ ‘ರೂಮ್ ಬಾಯ್’ ಮೊದಲ ಪ್ರಯತ್ನ. ಹಾಗಂತ ಇವರಿಗೆ ಸಿನಿಮಾ ರಂಗ ಹೊಸದಲ್ಲ. ನಿರ್ದೇಶಕನ ಕನಸು ಕಟ್ಟಿಕೊಂಡಿದ್ದ ರವಿ ನಾಗಡದಿನ್ನಿ ಸಾಫ್ಟ್ ವೇರ್ ಕೆಲಸವನ್ನೇ ಬಿಟ್ಟು ಈ ಕಲರ್ ಫುಲ್ ಲೋಕಕ್ಕೆ ಎಂಟ್ರಿಯಾದವರು.
ಹೌದು, ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ರವಿ, ಸಿನಿಮಾ ರಂಗದಲ್ಲಿ ಸಾಧಿಸಕೆಂಬ ಆಸೆ ಹುಟ್ಟಿದ್ದೇ ತಡ, ಕೆಲಸ ಬಿಟ್ಟು 2011 ರಲ್ಲಿ ಗಾಂಧಿನಗರ ಕಡೆ ಮುಖ ಮಾಡಿದವರು.
ಬಿಸಿಲೂರು ಎಂದೇ ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯ ನಾಗಡದಿನ್ನಿ ಎಂಬ ಸಣ್ಣ ಹಳ್ಳಿಯಲ್ಲಿದ್ದ ರವಿ
ಸಿನಿಮಾ ಪ್ರೀತಿ ಬೆಳೆಸಿಕೊಂಡು ಇತ್ತ ಮುಖ ಮಾಡಿದ್ದಾರೆ.
ಈ ಸಿನಿಮಾಗೂ ಮುನ್ನ ರವಿ ನಾಗಡದಿನ್ನಿ ಒಂದಿಷ್ಟು ಕಿರು ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ನಂತರದ‌ ದಿನಗಳಲ್ಲಿ ಸಂಭಾಷಣೆಗಾರ ಪ್ರಶಾಂತ ರಾಜಪ್ಪನವರ ಪರಿಚಯವಾಗಿ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿಂದ ‘ತಿರುಪತಿ ಎಕ್ಸಪ್ರೆಸ್ಸ್ ‘, ‘ಲೈಫು ಸೂಪರ್’ ಸಿನಿಮಾಗಳಿಗೆ ಇವರು‌ ಮಾತುಗಳನ್ನು ಪೋಣಿಸಿದ್ದಾರೆ.
‘ವೀಲ್ ಚೇರ್ ರೋಮಿಯೋ’, ‘ಮೃಗಶಿರ’ ಸೇರಿದಂತೆ ಕೆಲವು ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದಾರೆ.
ಅವರ ಕೆಲಸ‌ ನೋಡಿದ ಅನೇಕ ಸಿನಿಮಾ ಗೆಳೆಯರು ಬೆನ್ನೆಲಬಾಗಿ ನಿಂತಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಅವರು ಸಾಫ್ಟ್ ವೇರ್ ಕೆಲಸ‌ ಬಿಟ್ಟು ಸಿನಿಮಾ ಕಡೆ ವಾಲಿದಾಗ ಮನೆಯಲ್ಲಿ ಬೆಂಬಲಕ್ಕೆ ನಿಂತವರು ಸಹೋದರಿ ಅನ್ನಪೂರ್ಣ ಹಾಗು ಬಾವ ಬಲಬೀಮಾ. ಇವರೊಂದಿಗೆ ಗೆಳೆಯರಾದ ಸಂತೋಷ ಹೆಬ್ಬಾಳ ,ಬಂದೆ ನವಾಜ್ ಸಾಥ್‌ ಕೊಟ್ಟಿದ್ದನ್ನು ಸ್ಮರಿಸುತ್ತಾರೆ ನಿರ್ದೇಶಕ ರವಿ‌ ನಾಗಡದಿನ್ನಿ.

ಮೊದಲ ಪ್ರಯತ್ನ
ರವಿ ನಾಗಡದಿನ್ನಿ ಈಗ ತಮ್ಮ ನಿರ್ದೇಶನದ ಮೊದಲ ಸಿನಿಮಾ ‘ರೂಮ್ ಬಾಯ್’ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.
ಇನ್ನು ಅವರ ಈ ಪ್ರಯತ್ನಕ್ಕೆ ನಾಯಕ ಲಿಖಿತ್ ಸೂರ್ಯ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ನಾಯಕನ ಆಯ್ಕೆ ಮಾತ್ರ ಆಗಿದ್ದು, ಇಷ್ಟರಲ್ಲೇ ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯಲಿದೆ.
ಕಥೆ ಲಿಖಿತ್ ಸೂರ್ಯ ಬರೆದರೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ರವಿ ನಾಗಡದಿನ್ನಿ ಹೊತ್ತಿದ್ದಾರೆ. ಚಿತ್ರಕಥೆಗೆ ಇವರಿಬ್ಬರ ಶ್ರಮವೂ ಇದು.

ಇದು ಸೈಕಲಾಜಿಕಲ್ ಥ್ರಿಲ್ಲರ್

ಕಥೆ‌ ಬಗ್ಗೆ ಹೇಳುವ ನಿರ್ದೇಶಕರು, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆ. ಈಗಿನ ಟ್ರೆಂಡ್ ಜೊತೆಗೆ ವಿಭಿನ್ನ ಸಿನಿಮಾ ಕಟ್ಟಿ ಕೊಡುವ ಪ್ರಯತ್ನದಲ್ಲಿದ್ದಾರಂತೆ ನಿರ್ದೇಶಕರು.
ಅಂದಹಾಗೆ, ದೀಪಾವಳಿ ಹಬ್ಬದ ದಿನದಂದು‌ ಗೋಧೂಳಿ ಸಮಯದಂದು ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಡಿಸೆಂಬರ್ ತಿಂಗಳಿಂದ ಚಿತ್ರದ ಶೂಟಿಂಗ್ ಶರುವಾಗಲಿದೆ . ಸುಮಾರು 30 ದಿನಗಳ ಕಾಲ ಬೆಂಗಳೂರಲ್ಲಿ ಚಿತ್ರೀಕರಣ ನಡೆಯಲಿದೆ .


ಈ ಚಿತ್ರಕ್ಕೆ ರೋಣದ ಬಕ್ಕೇಶ್ ಸಂಗೀತ ನೀಡಿದರೆ, ಅರುಣ್ ಎಎನ್ ಆರ್ ಅವರ ಛಾಯಾಗ್ರಹಣವಿದೆ. ಕಿರಣ್ ಕುಮಾರ್ ಅವರ ಸಂಕಲನವಿದೆ. ಸದ್ಯ ‘ರೂಮ್ ಬಾಯ್ ‘ ಫಸ್ಟ್ ಲುಕ್ ಗೆ ಮೆಚ್ಚುಗೆ ಸಿಗುತ್ತಿದೆ.

Categories
ಸಿನಿ ಸುದ್ದಿ

ಸಂಚಾರಿಯ ಹೊಸ ಸಂಚಾರ… ಇದು ಅವಸ್ಥಾಂತರ ವಿಷಯ

ಹೊಸ ಚಿತ್ರ ಒಪ್ಪಿದ ಸಂಚಾರಿ ವಿಜಯ್ 

 

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಈಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಲಾಕ್ ಡೌನ್ ಬಳಿಕ ಸಂಚಾರಿ ವಿಜಯ್ ಒಂದೊಳ್ಳೆಯ ಕಥೆ ಮತ್ತು ಪಾತ್ರ ಮೆಚ್ಚಿಕೊಂಡು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ.

ಆ ಚಿತ್ರಕ್ಕೆ ‘ಅವಸ್ಥಾಂತರ’ ಎಂದು ನಾಮಕರಣ ಮಾಡಲಾಗಿದೆ. ಇನ್ನು ‘ ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಎಂಬ ಅಡಿಬರಹವೂ ಇದೆ. ಸದ್ಯಕ್ಕೆ ದೀಪಾವಳಿ ದಿನದಂದು ಚಿತ್ರದ ಫಸ್ಟ್ ಲುಕ್ ಹೊರಬಂದಿದೆ.

ದೀಪಕ್ , ನಿರ್ದೇಶಕ, ‌ನಿರ್ಮಾಪಕ

ಚಿತ್ರಕ್ಕೆ ಜಿ.ದೀಪಕ್ ಕುಮಾರ್ ನಿರ್ದೇಶಕರು. ಈ ಹಿಂದೆ ಇವರು ‘ಮಠ’ ಖ್ಯಾತಿಯ ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿದವರು. ಇದರೊಂದಿಗೆ ಮಲಯಾಳಂ ನ ಪ್ರಸಿದ್ಧ ನಟರಾದ ಮೋಹನ್ ಲಾಲ್ ಮತ್ತು ಮಮ್ಮುಟಿ ಅವರ ಕೆಲ ಚಿತ್ರಗಳಿಗೆ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದರೊಂದಿಗೆ ಸಾಕಷ್ಟು ಡಾಕ್ಯುಮೆಂಟರಿ ಮತ್ತು ಜಾಹಿರಾತು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಅವಸ್ಥಾಂತರ’ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ.

ಹದಿಹರೆಯದ ಯುವಕನೊಬ್ಬ ತನಗೆ ಅರಿವಿಲ್ಲದೆ ಹುಟ್ಟುವ ಬಯಕೆಗಳು, ಕಾಮನೆಗಳು ಹೇಗೆ ಆ ಹುಡಗನನ್ನು ಅತಂತ್ರ ಸ್ಥಿತಿಗೆ ತಳ್ಳುತ್ತದೆ ಮತ್ತು ಅದರಿಂದ ಏನೆಲ್ಲಾ ಪಜೀತಿ, ಅವಸ್ಥೆ, ಅನಾಹುತಗಳು ನಡೆಯುತ್ತವೆ ಎಂಬ ತಿಳಿ ಹಾಸ್ಯದ ಮೂಲಕ ಒಂದು ಸಂದೇಶ ಕಟ್ಟಿ ಕೊಡುವ ಪ್ರಯತ್ನ ಈ ಚಿತ್ರದ ಮೂಲಕ ಮಾಡಲಿದ್ದಾರೆ ನಿರ್ದೇಶಕರು. ಡಿಸೆಂಬರ್ ಕೊನೆಯ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಹೊರಬೀಳಲಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಮಮ್ಮಿ ಪ್ಲೀಸ್‌ ಮಮ್ಮಿ ಸಾಂಗ್ ಭರ್ಜರಿ ಸೌಂಡು!

ತ್ರಿವಿಕ್ರಮ ಲಿರಿಕಲ್‌ ವಿಡಿಯೋ ಸಾಂಗ್‌ ಹೊರಬಂತು

ಮಕ್ಕಳ ದಿನಾಚರಣೆಗೊಂದು ಸ್ಪೆಷಲ್‌ ಗಾನ

ಕನ್ನಡದಲ್ಲಿ ಸದ್ಯಕ್ಕೆ “ತ್ರಿವಿಕ್ರಮ” ಸಿನಿಮಾ ಜೋರು ಸುದ್ದಿ ಮಾಡುತ್ತಲೇ ಇದೆ. ಆರಂಭದಿಂದಲೂ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿರುವುದು ಗೊತ್ತೇ ಇದೆ. ಈಗಾಗಲೇ ಕ್ರೇಜಿಸ್ಟಾರ್‌ ಎರಡನೇ ಪುತ್ರ ವಿಕ್ರಮ್‌ ರವಿಚಂದ್ರನ್‌ “ತ್ರಿವಿಕ್ರಮ” ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ನಿರೀಕ್ಷೆ ಮೂಡಿಸಿರುವುದಂತೂ ನಿಜ. ಆ ನಿರೀಕ್ಷೆಗೆ ತಕ್ಕಂತೆಯೇ ಈಗಾಗಲೇ ಚಿತ್ರದ ಫಸ್ಟ್‌ ಲುಕ್‌ ಟೀಸರ್ , ಮೋಷನ್‌ ಪೋಸ್ಟರ್‌ ಎಲ್ಲವೂ ಮಾತಾಡುತ್ತಿದೆ. ಅಷ್ಟೇ ಯಾಕೆ, ಕಳೆದ ಮಹಲಾಕ್ಷ್ಮಿ ಹಬ್ಬದಂದೇ ವಿಕ್ರಮ್‌ ಅಭಿನಯದ ಈ “ತ್ರಿವಿಕ್ರಮ” ಚಿತ್ರದ ಆಡಿಯೋ ಹಕ್ಕು ದಾಖಲೆ ಮಟ್ಟಕ್ಕೆ ಮಾರಾಟ ಆಗಿದ್ದು ಎಲ್ಲರಿಗೂ ಗೊತ್ತಿದೆ. ಚಿತ್ರತಂಡ ಈಗ ಅದೇ ಖುಷಿಯಲ್ಲಿ ನವೆಂಬರ್‌ ೧೪ರಂದು ಮಕ್ಕಳ ದಿನಾಚರಣೆ ಅಂಗವಾಗಿ, ಸಖತ್‌ ಆಗಿರುವ ಹಾಡೊಂದನ್ನು ಬಿಡುಗಡೆ ಮಾಡಿದೆ.


ಹೌದು, ಮಕ್ಕಳ ದಿನಾಚರಣೆಯ ದಿನದಂದು ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುವ, ತಾಯಂದಿರಿಗೂ ಇಷ್ಟವಾಗುವ ಹಾಡು ಹೊರಬಂದಿದೆ. ಅರ್ಜುನ್‌ ಜನ್ಯಾ ಸಂಗೀತವಿರುವ ಈ ಹಾಡಿಗೆ ಗೀತ ಸಾಹಿತಿ ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯವಿದೆ. “ಮಮ್ಮಿ ಪ್ಲೀಸ್‌ ಮಮ್ಮಿ” ಎಂಬ ಹಾಡು ಈಗ ಹೊರಬಂದಿದೆ. ಈ ಹಾಡಿಗೆ ಗಾಯಕ ವಿಜಯಪ್ರಕಾಶ್‌ ಧ್ವನಿಯಾಗಿದ್ದಾರೆ.

ಅಮ್ಮನನ್ನು ಕಾಡುವ, ಬೇಡವ ಚಿನಕುರಳಿಯಂತಿರುವ ಹಾಡು ಕೇಳುವುದಕ್ಕೆ ಒಂದು ರೀತಿ ಮಜಾ ಇದೆ. ಈಗಾಗಲೇ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಚಿತ್ರದ ಹಾಡಿಗೆ ಭರಪೂರ ಮೆಚ್ಚುಗೆ ಸಿಕ್ಕಿದ್ದು, ಬಹುತೇಕ ಹುಡುಗರು ಹಾಡನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿಕೊಂಡು ಎಂಜಾಯ್‌ ಮಾಡುತ್ತಿದ್ದಾರೆ.

ಇನ್ನು, ವಿಕ್ರಮ್‌ ಅವರನ್ನ ಹೀರೋ ಮಾಡಿದ್ದು ನಿರ್ದೇಶಕ ಸಹನಾ ಮೂರ್ತಿ. ಈ “ತ್ರಿವಿಕ್ರಮ” ಎಂಬ ಅದ್ಧೂರಿ ಬಜೆಟ್‌ ಚಿತ್ರವನ್ನು ಗೌರಿ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ನಿರ್ಮಿಸಿರೋದು ಸೋಮಣ್ಣ. ವಿಕ್ರಮ್‌ ಅವರ ಲುಕ್‌ ಮತ್ತು ಮ್ಯಾನರಿಸಂಗೆ ತಕ್ಕ ಕಥೆ ಹೆಣೆದು ಸಿನಿಮಾ ಮಾಡಿದ್ದಾರೆ.

ಆರಂಭದಿಂದಲೂ ತುಂಬಾನೇ ಸ್ಪೆಷಲ್‌ ಆಗಿಯೇ ಸಿನಿಮಾವನ್ನು ರೆಡಿ ಮಾಡಿರುವ ನಿರ್ದೇಶಕ ಸಹನಾ ಮೂರ್ತಿ, ನಿರ್ಮಾಪಕ ಸೋಮಣ್ಣ ಅವರ ಪ್ರೋತ್ಸಾಹದಿಂದ ಈಗ ಸಿನಿಮಾವನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಈಗಾಗಲೇ ಹೊರಬಂದಿರುವ “ತ್ರಿವಿಕ್ರಮ” ಚಿತ್ರದ ಫಸ್ಟ್ ಲುಕ್ ಟೀಸರ್ ಸಾಕ್ಷಿಯಾಗಿದೆ.

ಸೋಮಣ್ಣ, ನಿರ್ಮಾಪಕ

ನಿರ್ಮಾಪಕ, ನಿರ್ದೇಶಕರ ಕಾಳಜಿಯ ವಿಕ್ರಮ!
ಸಿನಿಮಾ ಅಂದಮೇಲೆ ಪ್ರೀತಿ ಇರಬೇಕು. ಆ ಪ್ರೀತಿ ಇದ್ದಾಗ ಮಾತ್ರ ಒಳ್ಳೆಯ ಸಿನಿಮಾಗಳು ಹೊರಬರುತ್ತವೆ. ಆ ಸಾಲಿಗೆ “ತ್ರಿವಿಕ್ರಮ” ಸಿನಿಮಾ ಕೂಡ ಸೇರುವುದರಲ್ಲಿ ಎರಡು ಮಾತಿಲ್ಲ. ಕನಸುಗಾರನ ಮಗನನ್ನು ಸಖತ್‌ ಆಗಿಯೇ ತೋರಿಸುವ ಕನಸು ಕಂಡಿದ್ದ ನಿರ್ದೇಶಕ ಸಹನಾ ಮೂರ್ತಿ ಹಾಗೂ ನಿರ್ಮಾಪಕ ಸೋಮಣ್ಣ ಎಷ್ಟೇ ರಿಸ್ಕ್‌ ಇದ್ದರೂ ಸರಿ, ಅದ್ಭುತವಾಗಿಯೇ ಸಿನಿಮಾವನ್ನು ತೋರಿಸಬೇಕು ಎಂಬ ಉದ್ದೇಶದಿಂದ ಕೋಟಿಗಟ್ಟಲೆ ಹಣ ಹಾಕಿದ್ದಾರೆ. “ತ್ರಿವಿಕ್ರಮʼ ಸಿನಿಮಾ ಮೇಲೆ ಇವರಿಬ್ಬರಿಗೂ ತೃಪ್ತಭಾವವಿದೆ. ಈಗಾಗಲೇ ಈ ಅದ್ಧೂರಿಗೆ ಸಾಕ್ಷಿಯೆಂಬಂತೆ ಚಿತ್ರದ ಚಿತ್ರೀಕರಣ ಅದ್ಧೂರಿಯಾಗಿ ಮೂಡಿಬಂದಿರೋದು.

ಸಹನಾ ಮೂರ್ತಿ, ನಿರ್ದೇಶಕ

ಈಗಾಗಲೇ, 50 ಲಕ್ಷ ಮೊತ್ತಕ್ಕೆ ಎ೨ ಮ್ಯೂಸಿಕ್‌ ಸಂಸ್ಥೆ ಆಡಿಯೋ ಹಕ್ಕು ಕೂಡ ಮಾರಾಟವಾಗಿರುವುದು ಸಿನಿಮಾದ ಮೊದಲ ಗೆಲುವು ಎನ್ನಬಹುದು. ಹೀಗಾಗಿ ತ್ರಿವಿಕ್ರಮನಿಗೆ ಡಿಮ್ಯಾಂಡ್‌ ಇರೋದಂತು ನಿಜ. ಅಂದಹಾಗೆ, ತ್ರಿವಿಕ್ರಮ‌ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗು ಯೋಗರಾಜ್ ಭಟ್ ಅವರ ಸಾಹಿತ್ಯವಿದೆ. ಅರ್ಜುನ್ ಜನ್ಯ ಸಂಗೀತದ ಹಾಡೊಂದು ಈಗ ಹೊರಬಂದಿದ್ದು ಭರ್ಜರಿ‌ ಸೌಂಡು ಮಾಡುತ್ತಿದೆ.

ಆಕಾಂಕ್ಷ, ನಟಿ

ಪಕ್ಕಾ ಮಾಸ್‌ ಮತ್ತುಕ್ಲಾಸ್‌ ಸಿನ್ಮಾ
ಈ ಹಿಂದೆ “ರೋಜ್‌” ಹಾಗೂ “ಲೀಡರ್‌” ಸಿನಿಮಾವನ್ನು ಕಟ್ಟಿ ಕೊಟ್ಟ ನಿರ್ದೇಶಕ ಸಹನಾಮೂರ್ತಿ ಅವರು ನಿರ್ಮಾಪಕ ಸೋಮಣ್ಣ ಅವರ ಪ್ರೋತ್ಸಾಹದಿಂದಾಗಿ ಮಾಸ್‌ ಮತ್ತು ಕ್ಲಾಸ್‌ ಸಿನಿಮಾ ಮಾಡಿದ್ದಾರೆ. ಹಾಗೆಯೇ ಹಾಡುಗಳನ್ನೂ ಅದ್ಭುತವಾಗಿ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಅರ್ಜುನ್‌ ಜನ್ಯಾ ಬಳಿ ಸಂಗೀತ ಮಾಡಿಸಿದ್ದು, ಹಿರಿಯ ಗೀತ ಸಾಹಿತಿಗಳ ಬಳಿ ಹಾಡನ್ನು ಬರೆಸಿ, ಹಾಡಿಸಿದ್ದಾರೆ. ವಿಜಯಪ್ರಕಾಶ್‌ ಈಗ ” ಮಮ್ಮಿ ಪ್ಲೀಸ್‌ ಮಮ್ಮಿ” ಹಾಡು ಹೊಸ ಕ್ರೇಜ್‌ ಹುಟ್ಟಿಸಿದೆ. ಸಹಜವಾಗಿಯೇ ಚಿತ್ರತಂಡಕ್ಕೂ ಖುಷಿಯಾಗಿದೆ.

Categories
ಸಿನಿ ಸುದ್ದಿ

ವಿಂಡೋಸೀಟ್ ಟೀಸರ್ ಗೆ ಸುದೀಪ್‌ ಮೆಚ್ಚುಗೆ

ವಿಂಡೋಸೀಟ್‌ ಚಿತ್ರದ ಟೀಸರ್‌ ಬಂತು

ನಟ ಸುದೀಪ್‌ ಅವರು ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಈಗ ನಟಿ, ನಿರ್ದೇಶಕಿ ಶೀತಲ್‌ ಶೆಟ್ಟಿ ಅವರ ಹೊಸ ಸಿನಿಮಾಗೂ ಸಹ ಮೆಚ್ಚುಗೆ ಸೂಚಿ, ಶುಭ ಹಾರೈಸಿದ್ದಾರೆ.
ಹೌದು, ಶೀತಲ್ ಶೆಟ್ಟಿ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ‘ವಿಂಡೋಸೀಟ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸುದೀಪ್‌ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಟ್ವೀಟ್‌ ಮಾಡುವ ಮೂಲಕ ಶುಭಹಾರೈಸಿದ್ದಾರೆ. ತಮ್ಮ ಖಾತೆಯಲ್ಲಿ, ”ವಿಂಡೋ ಸೀಟ್‌’ನ ಟೀಸರ್ ಬಹಳ ಭರವಸೆಯಿಂದ ಕಾಣುತ್ತಿದೆ. ಪ್ರತಿ ಫ್ರೇಮ್ ಸಹ ಅಚ್ಚುಕಟ್ಟಾಗಿ ಹೆಣೆದಂತೆ ಕಾಣುತ್ತದೆ. ಖಂಡಿತವಾಗಿಯೂ ಚಿತ್ರತಂಡ ಶ್ರಮಿಸಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಈ ಚಿತ್ರವನ್ನು ನೋಡಲು ಎದುರು ನೋಡುತ್ತಿದ್ದೇನೆ” ಎಂದು ಸುದೀಪ್ ಟ್ವೀಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ವಿಂಡೋಸೀಟ್’ ಟೀಸರ್‌ ನೋಡಿದವರಿಗೆ ಅದೊಂದು ರೊಮ್ಯಾಂಟಿಕ್ ಅನುಭವದ ಕಥಾಹಂದರ ಎಂಬ ಫೀಲ್‌ ಕೊಡಲಿದೆ. ಅದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಎಂಬುದಕ್ಕೆ ಟೀಸರ್‌ನಲ್ಲಿ ಹಲವು ಅಂಶಗಳು ಕಾಣಸಿಗುತ್ತವೆ. ಇನ್ನು, “ವಿಂಡೋ ಸೀಟ್‌”ನಲ್ಲಿ ಒಂದೊಳ್ಳೆಯ ಪ್ರೇಮಕಥೆ ಹೈಲೈಟ್‌ ಆಗಿದೆ. ಸಾಕಷ್ಟು ಕುತೂಹಲ ಕೆರಳಿಸುವ ಅಂಶಗಳಿವೆ. ಈಗಾಗಲೇ ಟೀಸರ್‌ ನೋಡಿದವರಿಂದ ಸಾಕಷ್ಟು ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಚಿತ್ರದಲ್ಲಿ’ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿರುವದ್ದಾರೆ. ಈ ಹಿಂದೆ ಚಿತ್ರದ ಫಸ್ಟ್ ಲುಕ್ ಸಾಕಷ್ಟು ಸುದ್ದಿ ಮಾಡಿತ್ತು. ಈಗ ಟೀಸರ್‌ಗೂ ಅಂತಹ ಪ್ರತಿಕ್ರಿಯೆ ಸಿಗುತ್ತಿದೆಲ ಸದ್ಯಕ್ಕೆ’ವಿಂಡೋಸೀಟ್’ ನೋಡುಗರಿಗೆ ಮಜ ಕೊಡುವ ಸಿನಿಮಾ ಎಂಬ ಬಲವಾದ ನಂಬಿಕೆ ಚಿತ್ರತಂಡದ್ದು. ಈ ಚಿತ್ರದಲ್ಲಿ ನಿರೂಪ್‌ಗೆ ನಾಯಕಿಯಾಗಿ ಅಮೃತಾ ಅಯ್ಯಂಗರ್ ಮತ್ತು ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ.

error: Content is protected !!