ಪ್ಯಾನ್‌ ಇಂಡಿಯಾ ಬಗ್ಗೆ ಮಾತಾಡಿದ ಜಗ್ಗೇಶ್‌ ವಿರುದ್ಧ ಟೀಕೆ

ಟ್ವಿಟ್ಟರ್‌ನಲ್ಲಿ ತಿರುಗೇಟು ನೀಡಿದ ನವರಸನಾಯಕ

ನವರಸನಾಯಕ ಜಗ್ಗೇಶ್‌ ಅವರು ತಮ್ಮ ಸಿನಿಬದುಕಿನ ೪೦ ವರ್ಷಗಳ ಪಯಣವನ್ನು ಮುಗಿಸಿರುವುದು ಎಲ್ಲರಿಗೂ ಗೊತ್ತಿದೆ. ಆ ಖುಷಿಗೆ ಅವರು ಇತ್ತೀಚೆಗೆ ಮಾಧ್ಯಮ ಮುಂದೆ ಬಂದು ತಮ್ಮ ಸಿನಿಜರ್ನಿ ಕುರಿತು ಮಾತನಾಡಿದ್ದರು. ಆ ಸಮಯದಲ್ಲಿ ಅವರು “ಪ್ಯಾನ್‌ ಇಂಡಿಯಾ” ಸಿನಿಮಾ ಬಗ್ಗೆಯೂ ಮಾತಾಡಿದ್ದರು. ಮೊದಲು ಕನ್ನಡದ ಬಗ್ಗೆ ಗಮನಹರಿಸಿ, ಕನ್ನಡಿಗರಿಗೆ ಕೆಲಸ ಕೊಡಿ ಎನ್ನುವುದು ಅವರ ಮನವಿಯಾಗಿತ್ತು. ಆದರೆ, ಅವರು ಆಡಿರುವ ಆ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ಮಾತಾಡಿದ ಜಗ್ಗೇಶ್‌ ಪರ ಅನೇಕರು ನಿಂತರೆ, ಒಂದಷ್ಟು ಮಂದಿ ಅವರ ವಿರುದ್ಧ ಟೀಕೆ ಮಾಡಲು ಶುರುಮಾಡಿದ್ದಾರೆ. ಆದರೆ, ಇವೆಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸಿರುವ ಜಗ್ಗೇಶ್‌ ಮಾತ್ರ, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಒಂದು ಸ್ಟೇಟಸ್‌ ಹಾಕಿ ಕೈ ಬಿಟಿದ್ದಾರೆ. ಅವರ ಟ್ವಿಟರ್‌ ಖಾತೆಯಲ್ಲಿ ಹೇಳಿರುವುದೇನು ಗೊತ್ತಾ?


“‘ಕನ್ನಡ ಚಿತ್ರರಂಗ, ಬೆಳೆಯುವ ಯುವನಟ ನಟಿಗಾಗಿ ಆಡಿದ ಮಾತಿಗೆ ಹೀಗಾ? ಪರವಾಗಿಲ್ಲಾ ಮಕ್ಕಳು ಎಷ್ಟೇ ಬೆಳೆದರು ತಂದೆಯ ಮುಂದೆ ಮಕ್ಕಳೆ ವಿನಃ ತಂದೆಯಾಗಲ್ಲಾ. ಶಿವಣ್ಣ, ಪುನೀತ್, ದರ್ಶನ್, ಗಣೇಶ್, ವಿಜಿ ಪ್ಯಾನ್ ಇಂಡಿಯಾ ನಂಬದೆ ಕನ್ನಡ ಕನ್ನಡಿಗರ ಸೀಮೆಯಲ್ಲೆ ಕನ್ನಡದ ಕಲಾವಿದ ತಂತ್ರಜ್ಞರ ಬೆಳಸಿ ತಾವು ಇದ್ದಾರೆ. offcorce ನಾನು ಇರುವೆ. ನಮಗೆ 100% ಕನ್ನಡ ಜನ ಸಾಕು” ಎಂದು ಹೇಳಿದ್ದಾರೆ.
ಅದೇನೆ ಇರಲಿ, ಜಗ್ಗೇಶ್‌ ಮಾತು ಈಗ ಭಾರೀ ವಿವಾದಕ್ಕೂ ಗುರಿಯಾಗಿದೆ. ಅದೇನೆ ಇದ್ದರೂ, ಪ್ಯಾನ್‌ ಇಂಡಿಯಾ ಚಿತ್ರಗಳ ಸಂಖ್ಯೆ ಕನ್ನಡದಲ್ಲೂ ಹೆಚ್ಚುತ್ತಿವೆ. ಜಗ್ಗೇಶ್‌ ಮಾತಲ್ಲಿ ತಪ್ಪಿಲ್ಲ. ಆದರೆ, ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಇಲ್ಲಿಯವರಿಗೂ ಕೆಲಸ ಸಿಗುತ್ತಿದೆಯಲ್ಲಾ ಅನ್ನೋದು ಕೆಲವರ ವಾದ.

Related Posts

error: Content is protected !!