Categories
ಸಿನಿ ಸುದ್ದಿ

ತೆಲುಗು ನಟ ವಿಜಯ್‌ ರಂಗರಾಜು ವಿರುದ್ದ ಕಿಡಿ ಕಾರಿದ ಕಿಚ್ಚ

ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಇರಲಿ- ಸುದೀಪ್‌ ಖಡಕ್ ವಾರ್ನಿಂಗ್

-‌ವಿಷ್ಣುವರ್ಧನ್‌ ಬಗ್ಗೆ ಮಾತಾಡಿದ್ದಕ್ಕೆ ಕನ್ನಡಿಗರ ಆಕ್ರೋಶ

ವಾಣಿಜ್ಯ ಮಂಡಳಿಗೆ ಅಭಿಮಾನಿಗಳ ದೂರು

ತೆಲುಗು ನಟ ವಿಜಯರಂಗರಾಜು ಡಾ.ವಿಷ್ಣುವರ್ಧನ್‌ ಅವರ ಕುರಿತಂತೆ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಒಳಗಾಗಿದ್ದು, ಕನ್ನಡ ಚಿತ್ರರಂಗವನ್ನು ಕೆರಳಿಸಿದೆ. ಅಷ್ಟೇ ಅಲ್ಲ, ಕನ್ನಡ ಚಿತ್ರಂಗದ ಕಲಾವಿದರು, ತಾಂತ್ರಿಕವರ್ಗದವರು, ಅಪಾರ ಅಭಿಮಾನಿಗಳು ನಟ ವಿಜಯರಂಗರಾಜು ವಿರುದ್ಧ ಗುಡುಗಿದ್ದಾರೆ. ನಟರಾದ ಜಗ್ಗೇಶ್‌, ಪುನೀತ್‌ ರಾಜಕುಮಾರ್‌, ಸುದೀಪ್‌ ಸೇರಿದಂತೆ ಹಲವರು ಟ್ವೀಟ್‌ ಮಾಡಿ, ವಿಜಯ ರಂಗರಾಜು ಅವರ ವಿರುದ್ಧ ಕಿಡಿಕಾರಿದ್ದಾರೆ. ಹಲವರು ವಿಜಯರಂಗರಾಜು ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

ನಡೆದದ್ದೇನು?
ಹಲವು ವರ್ಷಗಳ ಹಿಂದೆ “ಮುತ್ತೈದೆ ಭಾಗ್ಯ” ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಆ ಚಿತ್ರದಲ್ಲಿ ಪ್ರಭಾಕರ್‌ ಪ್ರಮುಖ ಅಕರ್ಷಣೆಯಾಗಿದ್ದರು. ವಿಷ್ಣುವರ್ಧನ್‌ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ ಒಂದು ಘಟನೆ ನಡೆದಿತ್ತು. ವಿಷ್ಣುವರ್ಧನ್‌ ಅವರು ನಟ ವಿಜಯರಂಗರಾಜು ಅವರನ್ನು ಹೊರಗೆ ಕಳುಹಿಸಿ ಎಂದಿದ್ದರು. ಯಾಕೆ ಹಾಗೆ ಹೇಳಿದ್ದರು ಎಂಬುದಕ್ಕೂ ಕಾರಣವಿತ್ತು. ಆಗಿನ ಘಟನೆ ಬಗ್ಗೆ ನಟ ವಿಜಯರಂಗರಾಜು ಅವರು, ಇತ್ತೀಚೆಗೆ ವಿಷ್ಣುವರ್ಧನ್‌ ಬಗ್ಗೆ ತುಂಬಾ ಕೆಟ್ಟದ್ದಾಗಿ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ. ಆ ವಿರುದ್ಧ ಕನ್ನಡಿಗರು ಧ್ವನಿ ಎತ್ತಿದ್ದು, ಎಲ್ಲೆಡೆ, ಆಕ್ರೋಶ ವ್ಯಕ್ತವಾಗುತ್ತಿದೆ. ಡಾ.ವಿಷ್ಣುವರ್ಧನ್‌ ಅವರು ಆದರ್ಶ ವ್ಯಕ್ತಿ. ಅವರ ಬಗ್ಗೆ ಈವರೆಗೆ ಯಾರೂ ಮಾತಾಡಿಲ್ಲ. ಆದರೆ, ತೆಲುಗು ನಟ ಹಾಗೆಲ್ಲಾ ಮಾತಾಡಿದ್ದಾರೆ. ಇದು ಸಹಜವಾಗಿಯೇ ಕನ್ನಡ ಸ್ಟಾರ್‌ ನಟರಿಗೂ ನೋವಾಗಿದೆ. ಹಾಗಾಗಿ ಒಂದಷ್ಟು ಮಂದಿ ಟ್ವೀಟ್‌ ಮಾಡಿದರೆ, ಒಂದಷ್ಟು ಜನರು ವಿಡಿಯೋ ಮಾಡಿದ್ದಾರೆ. ವಿಷ್ಣುವರ್ಧನ್‌ ಅವರ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಜಯರಂಗರಾಜು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದಾರೆ.


ಅತ್ತ, ಸುದೀಪ್‌ ವಿಡಿಯೋ ಮೂಲಕ ವಿಜಯ್‌ ರಂಗರಾಜುಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಪುನೀತ್‌ ಕೂಡ ಟ್ವೀಟ್‌ ಮಾಡಿದ್ದು, “ಒಬ್ಬ ಕಲಾವಿದನಾಗಬೇಕಾದರೆ, ಅವನಿಗರಬೇಕಾದ ಮೊದಲ ಅರ್ಹತೆ ತನ್ನ ಸಹೋದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿ ತೋರುವುದು. ಯಾವುದೇ ಭಾಷೆ ನಟರಾದರೂ, ಗೌರವ ಮೊದಲು. ನಮ್ಮ ನಾಡಿನ ಮೇರು ನಟರಾದ ವಿಷ್ಣು ಸರ್‌ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಕಲಾವಿದ ಕ್ಷಮೆ ಕೇಳಿ ತಮ್ಮ ಮಾತನ್ನು ಹಿಂಪಡೆಯಬೇಕು. ಭಾರತೀಯ ಚಿತ್ರಂರಂಗ ನಮ್ಮ ಮನೆ. ಎಲ್ಲಾ ಕಲಾವಿದರು ಒಂದು ಕುಟುಂಬ ಕಲೆಗೆ, ಕಲಾವಿದರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಮೊದಲು ಮಾನವನಾಗು” ಎಂದು ಟ್ವೀಟ್‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ಜೆಕೆ ಸಿನಿಮಾಕ್ಕೆ ಕಿಚ್ಚ ಸುದೀಪ್ ಸಾಥ್!

ಡಿಸೆಂಬರ್ 21 ಕ್ಕೆ ʼ ಐರಾವನ್‌ ʼ  ಟೀಸರ್ ಲಾಂಚ್

ಜೆಕೆ ಅಲಿಯಾಸ್‌ ಜಯರಾಂ ಕಾರ್ತಿಕ್‌ ಅಭಿನಯದ ʼಐರಾವನ್‌ʼ ಚಿತ್ರಕ್ಕೆ ನಟ ಕಿಚ್ಚ ಸುದೀಪ್‌ ಸಾಥ್‌ ನೀಡಿದ್ದಾರೆ. ಸದ್ಯಕ್ಕೆ ಸುಮಾರು ೪೫ ದಿನಗಳ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಈಗ ಟೀಸರ್‌ ಲಾಂಚ್‌ ಮಾಡಲು ಮುಂದಾಗಿದೆ.

ಡಿಸೆಂಬರ್‌ ೨೧ಕ್ಕೆ ಟೀಸರ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌ ಆಗಿದೆ. ಅವತ್ತು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್‌ ಚಿತ್ರ ತಂದೊಂದಿಗೆ ಟೀಸರ್‌ ಲಾಂಚ್‌ ಮಾಡಲು ಒಪ್ಪಿಕೊಂಡಿದ್ದಾರೆ.

ಟೀಸರ್‌ ಲಾಂಚ್‌ ಮಾಡಿಕೊಡುವ ಸಂಬಂಧ ಚಿತ್ರ ತಂಡ ಇತ್ತೀಚಿಗೆ ನಟ ಕಿಚ್ಚ ಸುದೀಪ್‌ ಅವರನ್ನು ಭೇಟಿ ಮಾಡಿತ್ತು, ಆ ಸಂದರ್ಭದಲ್ಲಿ ಚಿತ್ರ ತಂಡದೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಸಂತಸದಲ್ಲಿ ಮಾತನಾಡಿದ ಸುದೀಪ್‌, ಟೀಸರ್‌ ಲಾಂಚ್‌ ಮಾಡುವುದಾಗಿ ಭರವಸೆ ನೀಡಿದರು ಎನ್ನುವ ವಿಚಾರವನ್ನು ಚಿತ್ರ ತಂಡ ಮಾಧ್ಯಮದ ಜತೆಗೆ ಹಂಚಿಕೊಂಡಿದೆ.

ನಿರಂತರ ಪ್ರೊಡಕ್ಷನ್‌ ಮೂಲಕ ನಿರಂತರ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಈಗ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ. ಈಗಾಗಲೇ ಅರ್ಧದಷ್ಟು ಬೆಂಗಳೂರು, ಮಂಗಳೂರು ಮುಂತಾದ ಕಡೆ ಸುಮಾರು 45 ದಿನಗಳ ಚಿತ್ರೀಕರಣ ನಡೆದಿದೆ.

ಉಳಿದಂತೆ ರಾಮ್ಸ್‌ ರಂಗ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಈಗಾಗಲೇ ಅವರು ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಸ್ಪೆನ್ಸ್‌ ಥ್ಲಿಲ್ಲರ್‌ ಕಥೆ ಆಧಾರಿತ ಚಿತ್ರವಿದು. ಎಸ್.ಪದೀಪ್‌ ಸಂಗೀತ ನಿರ್ದೇಶನ ನೀಡಿದ್ದಾರೆ.

Categories
ಸಿನಿ ಸುದ್ದಿ

ಅಭಿಮಾನಿಗಳ ಬಯಕೆ ಇದು- ದಚ್ಚು-ಕಿಚ್ಚನ ಜೋಡಿ ಅಚ್ಚು-ಮೆಚ್ಚು

ಈ ಸ್ಟಾರ್ಸ್‌ ಒಂದಾಗಬೇಕೆಂಬ ಹಂಬಲ

ಅಭಿಮಾನಿಗಳ ಅಭಿಮಾನವೇ ಅಂಥದ್ದು. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ದರ್ಶನ್‌ ಹಾಗೂ ಸುದೀಪ್‌ ಅಭಿಮಾನಿಗಳಿಗೆ ತಮ್ಮ ಹೀರೋಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಈ ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದರು. ಆ ಬಳಿಕ ಇಬ್ಬರ ನಡುವೆ ಮುನಿಸು ಶುರುವಾಯಿತು. ಅದಾದ ಮೇಲೆ ಅವರವರ ಅಭಿಮಾನಿಗಳ ಮಧ್ಯೆಯೂ ಬಿರುಕು ಉಂಟಾಯಿತು. ಇದನ್ನು ಬಳಸಿಕೊಂಡ ಅನೇಕರು ವಿವಾದ ಹುಟ್ಟುಹಾಕುವ ಪ್ರಯತ್ನವನ್ನೂ ಮಾಡಿದರು. ಆ ನಂತರ ಅಭಿಮಾನಿಗಳ ಮಧ್ಯೆ ಆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಈ ಇಬ್ಬರು ನಟರು ಮುನಿಸು ಬಿಟ್ಟು, ಒಂದಾಗಬೇಕು ಅನ್ನೋದು ಹಲವರ ಬಯಕೆ. ಅದು ಚಿತ್ರರಂಗದ್ದೂ ಹೌದು, ಅಭಿಮಾನಿಗಳದ್ದೂ ಹೌದು. ಆದರೆ, ಅದೇನೋ ಗೊತ್ತಿಲ್ಲ. ಈ ಇಬ್ಬರು ನಟರು ಮೊದಲಿನಂತೆ ಇರಬೇಕೆಂಬ ಆಸೆ ಒಂದಷ್ಟು ಜನರಿಗಂತೂ ಇದೆ.

ಈ ನಿಟ್ಟಿನಲ್ಲಿ ಕಲಾವಿದ ಕರಣ್‌ ಆಚಾರ್ಯ ಅವರು ರಾಮ ಲಕ್ಷ್ಮಣರಂತೆ ಹೋಲುವ ಕಲಾಕೃತಿ ರಚಿಸಿದ್ದಾರೆ. ಅದೀಗ “ಚಾಲೆಂಜಿಂಗ್‌ ಸ್ಟಾರ್‌ ದರ್ಶನ್-ಅಭಿನಯ ಚಕ್ರವರ್ತಿ ಕಿಚ್ಚ” ಫ್ಯಾನ್ಸ್‌ ಗ್ರೂಪ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಕರಣ್‌ ಆಚಾರ್ಯ ಅವರ ಕಲಾಕೃತಿಯನ್ನು ಶೇರ್‌ ಮಾಡಿದ್ದಾರೆ. “ಈ ಅದ್ಭುತ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಕರಣ್‌ ಆಚಾರ್ಯ ಬ್ರದರ್‌, ನಮ್ಮ ದಚ್ಚು ಬಾಸ್, ಕಿಚ್ಚ ಬಾಸ್ ಇಬ್ಬರೂ ರಾಮ ಲಕ್ಷ್ಮಣ, ಸೂರ್ಯ, ಚಂದ್ರ ಇದ್ದ ಹಾಗೆ. ನಮ್ಮಂತಹ ಅಭಿಮಾನಿಗಳಿಗೆ ದೇವರುಗಳು” ಎಂದು ಬರೆದುಕೊಳ್ಳುವ ಮೂಲಕ ಅಭಿಮಾನದ ಪ್ರೀತಿ ತೋರಿದ್ದಾರೆ.


ಅದೇನೆ ಇರಲಿ, ಅಭಿಮಾನಿಗಳಿಗೆ ತಮ್ಮ ಸ್ಟಾರ್‌ಗಳು ಜೊತೆಯಾಗಬೇಕೆಂಬ ಬಯಕೆ ಇದೆ. ಇನ್ನೇನಿದ್ದರೂ ಈ ಸ್ಟಾರ್‌ಗಳು ಒಂದಾಗುವ ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಉತ್ಸಾಹ ಮೂಡಿಸಬೇಕಿದೆ. ಕೊರೊನೊ ಸಮಸ್ಯೆ ಬಳಿಕ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಟಾರ್‌ಗಳು ಕೂಡ ಒಂದಾಗುವ ಮೂಲಕ ತಮ್ಮ ಸಿನಿಮಾಗಳನ್ನು ಬೇಗನೇ ಬಿಡುಗಡೆ ಮಾಡಿಸುವ ಮೂಲಕವಾದರೂ, ಚೈತನ್ಯ ತುಂಬುವ ಕೆಲಸ ಮಾಡಬೇಕಿದೆ.

Categories
ಸಿನಿ ಸುದ್ದಿ

ಬರಲು ರೆಡಿಯಾಗುತ್ತಿದೆ ಬನಾರಸ್

ಬಸವನಗುಡಿ ದೊಡ್ಡ ಗಣಪತಿಯ ಮುಂದೆ ಚಿತ್ರೀಕರಣಕ್ಕೆ ಕುಂಬಳಕಾಯಿ

ಸಧಭಿರುಚಿಯ ಚಿತ್ರಗಳ ನಿರ್ದೇಶಕ ಜಯತೀರ್ಥ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ʼಬನಾರಸ್‌ʼ ಚಿತ್ರೀಕರಣ ಮುಗಿಸಿದೆ. ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಚಿತ್ರೀಕರಣ ಮುಗಿಸಿ, ಕುಂಬಳ ಕಾಯಿ ಒಡೆಯಿತು.

ಕನ್ನಡದ ಮಟ್ಟಿಗೆ ಬನಾರಸ್‌ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ. ಅದಕ್ಕೆ ಕಾರಣ ನಿರ್ದೇಶಕ ಜಯತೀರ್ಥ. ʼಬೆಲ್‌ ಬಾಟಮ್‌ʼಚಿತ್ರದ ಬಹುದೊಡ್ಡ ಸಕ್ಸಸ್‌ ನಂತರ ಜಯತೀರ್ಥಆಕ್ಷನ್‌ ಕಟ್‌ ಹೇಳಿದ ಸಿನಿಮಾ. ಹಾಗೆಯೇ ಇದರ ನಿರ್ಮಾಣ ಹಾಗೂ ತಾರಾಗಣವೂ ಕೂಡ ಸಾಕಷ್ಟು ಕುತೂಹಲ ಮೂಡಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಈಗಾಗಲೇ ಈ ಚಿತ್ರದ ಚಿತ್ರೀಕರಣದ ಹಂತದಲ್ಲೇ ಸಾಕಷ್ಟು ಸುದ್ದಿ ಮಾಡಿದೆ.ಶಾಸಕ ಜಮೀರ್‌ ಅಹಮದ್‌ ಖಾನ್‌ ಪುತ್ರ ಜೈದ್‌ ಖಾನ್‌ ಅಭಿನಯದ ಚೊಚ್ಚಲ ಚಿತ್ರ ಇದು. ಗ್ಲಾಮರಸ್‌ ನಟಿ ಸೋನಾಲ್‌ ಮಾಂತೆರೋ ಇದರ ನಾಯಕಿ.

 

ಇನ್ನು ಇದರ ಶೀರ್ಷಿಕೆಯೇ ವಿಶೇಷ. ಬನಾರಸ್‌ ಅಂದ್ರೆ ಕಾಶಿ. ಹಿಂದೂಗಳ ಪವಿತ್ರ ಕ್ಷೇತ್ರ ಕಾಶಿಗಿರುವ ಇನ್ನೊಂದು ಹೆಸರೇ ಬನಾರಸ್.‌ ಈ ಚಿತ್ರದ ಇದೇ ಹೆಸರಲ್ಲಿ ನಿರ್ಮಾಣಗೊಂಡು ತೆರೆಗೆ ಬರುತ್ತಿರುವುದರ ಜತೆಗೆ ಇದರ ಬಹುತೇಕ ಚಿತ್ರೀಕರಣ, ಕಾಶಿ ಸುತ್ತಮುತ್ತಲ ಪವಿತ್ರ ಜಾಗಗಳಲ್ಲಿ ನಡೆದಿದೆ.

ಬನಾರಸ್‌ ಎನ್ನುವ ಶೀರ್ಷಿಕೆ, ಕಾಶಿಯ ಸುತ್ತಮುತ್ತಲ ಜಾಗಗಳಲ್ಲಿಯೇ ಚಿತ್ರೀಕರಣ ಅಂದಾಕ್ಷಣ ಇದೊಂದು ಭಕ್ತಿ ಪ್ರಧಾನ ಚಿತ್ರವೇ ಎಂದೆನಿಸುವುದು ಸಹಜ. ಆದರೆ ಚಿತ್ರದ ಕತೆ ಅದಲ್ಲ. ವಿಭಿನ್ನ ಪ್ರೇಮಕಥೆಯ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಶಿಯಲ್ಲಿ ನಡೆದಿದೆ.‌‌ ಕಾಶಿಗೂ ಚಿತ್ರದ ಕಥೆಗೂ ಸಂಬಂಧವಿದೆ. ಹಾಗಾಗಿಯೇ ಸಹಜ ಸೌಂದರ್ಯದ ಕಾಶಿಯ ಎಲ್ಲಾ ಘಾಟ್ ನಲ್ಲೂ ಬನಾರಸ್ ಚಿತ್ರದ ಚಿತ್ರೀಕರಣ ನಡೆದಿದೆ. ಉಳಿದಂತೆ ಬೆಂಗಳೂರು, ಮೈಸೂರು, ಗೋವಾದಲ್ಲೂ ಚಿತ್ರೀಕರಣವಾಗಿದೆ. ಹೆಸರಾಂತ ಕಲಾವಿದರಾದ ದೇವರಾಜ್‌, ಅಚ್ಯುತ್‌ ಕುಮಾರ್‌, ಸುಜಯ್‌ ಶಾಸ್ತ್ರಿ, ಸ್ವಪ್ನ ರಾಜ್‌, ಬರ್ಕತ್‌ ಅಲಿ, ಚಿರಂತ್‌, ರೋಹಿತ್‌ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಚಿತ್ರದ ತಾಂತ್ರಿಕ ವರ್ಗವೂ ಇಲ್ಲಿ ಗಮನಾರ್ಹವೇ. ಚಿತ್ರದ ಸುಮಧುರ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡವಳ್ಳಿ ಸಂಭಾಷಣೆ ಅವರ ಸಂಭಾಷಣೆ ಹಾಗೂ ರಶ್ಮಿ ವಸ್ತ್ರವಿನ್ಯಾಸ ಮಾಡಿದ್ದಾರೆ. ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಈ ಚಿತ್ರಕ್ಕೆ ಮುಜಮ್ಲಿಲ್‌ ಅಹಮದ್ ಖಾನ್ ಅವರ ಸಹ ನಿರ್ಮಾಣವಿದೆ.

Categories
ಸಿನಿ ಸುದ್ದಿ

ಸಲಗ ಶಾಸನ ಬರೆದ ದುನಿಯಾ ಅಭಿಮಾನಿ! ರಿಲೀಸ್ ಮೊದಲೇ ಇತಿಹಾಸದ ಬರಹ

ಸಲಗ ತಂಡಕ್ಕೆ‌ಹೆಚ್ಚಿದ ಸಂಭ್ರಮ…

ಅಭಿಮಾನ ಅನ್ನೋದೇ ಹಾಗೆ. ಒಂದೊಂದ್ ಸಲ ತುಂಬಾನೇ ಮೆಚ್ಚಿಸುತ್ತೆ, ಅತಿಯಾಗಿ ಪ್ರೀತಿಸುವಂತೆ ಮಾಡುತ್ತೆ.
ಇಲ್ಲೀಗ ಹೇಳ ಹೊರಟಿರುವ ವಿಷಯ, ‘ದುನಿಯಾ’ ವಿಜಯ್ ಅವರ ಅಪ್ಪಟ ಅಭಿಮಾನಿಯೊಬ್ಬರ ಕುರಿತು. ಈಗಾಗಲೇ ಅನೇಕ ಸ್ಟಾರ್ ನಟರ ಬೆರಳೆಣಿಕೆಯಷ್ಟು ಅಭಿಮಾನಿಗಳು ಒಂದಲ್ಲ ಒಂದು ಸುದ್ದಿಯಲ್ಲಿದ್ದಾರೆ. ಆ ಸಾಲಿಗೆ ಈಗ ‘ದುನಿಯಾ’ ವಿಜಯ್ ಅಭಿಮಾನಿಯೂ ಸೇರಿದ್ದಾರೆ.

ಇಷ್ಟಕ್ಕೂ ಆ ಅಭಿಮಾನಿ ಬೇರಾರೂ ಅಲ್ಲ, ವೀರೇಶ್ ಆಚಾರ್. ಇವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆಂದರೆ, ಯಾರು ಮಾಡದೇ ಇರುವ ಒಂದು ಕೆಲಸವನ್ನ ಈ ವೀರೇಶ್ ಆಚಾರ್ ಮಾಡಿದ್ದಾರೆ. ಇವರು ‘ದುನಿಯಾ’ ವಿಜಯ್ ಅವರ ಅಪ್ಪಟ ಅಭಿಮಾನಿ. ಅಷ್ಟಕ್ಕೂ ವೀರೇಶ್ ಆಚಾರ್ ಮಾಡಿದ್ದೇನ್ ಗೊತ್ತಾ?

ಎಲ್ಲರಿಗೂ ಗಿತ್ತಿರುವಂತೆ ‘ದುನಿಯಾ’ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿದ್ದಾರೆ. ಅವರ ಮೊದಲ ಚಿತ್ರ ‘ಸಲಗ’ ರಿಲೀಸ್ ಗೂ ಮೊದಲೇ ಸೆನ್ಸೇಷನ್ ಸೃಷ್ಟಿಸಿದೆ. ಈ ಚಿತ್ರದ ಫಸ್ಟ್ ಲುಕ್, ಮೋಷನ್ ಪೋಸ್ಟರ್, ಸಾಂಗ್ ಗೆ ಈಗಾಗಲೇ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಇದೇ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಶಾಸನ ರಚನೆ ಮಾಡಲಾಗಿದೆ ಅನ್ನೋದೇ ಈ ಹೊತ್ತಿನ ವಿಶೇಷ.
ಹೌದು, ಪುರಾತನ ಶಿಲಾ ಶಾಸನದ ಮಾದರಿಯಲ್ಲಿ ‘ಸಲಗ’ ಶಾಸನ ರಚನೆ ಮಾಡುವ ಮೂಲಕ ಅಭಿಮಾನಿ ವೀರೇಶ್ ಆಚಾರ್ ಈಗ ಎಲ್ಲರ ಮನ ಗೆದ್ದಿದ್ದಾನೆ.

‘ಸಲಗ’ ಚಿತ್ರದ ಶಾಸನ ಬರೆದು ಸ್ಥಬ್ಧ ಚಿತ್ರವನ್ನ ವಿನ್ಯಾಸ ಗೊಳಿಸುವ ಮೂಲಕ ಇಡೀ ಚಿತ್ರತಂಡಕ್ಕೆ ಖುಷಿ ತಂದಿದ್ದಾನೆ.
ಸಿನಿಮಾ ರಿಲೀಸ್ ಮುನ್ನವೇ ಮೊದಲೇ ಶತದಿನದ ಸಂಭ್ರಮದ ಶಾಸನ ಬರೆದು ಚಿತ್ರತಂಡಕ್ಕೆ ಸರ್ಪೈಸ್ ಗಿಫ್ಟ್ ಕೊಡುವ ಮೂಲಕ ಅಭಿಮಾನ ತೋರಿದ್ದಾನೆ.
ಅಂದಹಾಗೆ, ಜನವರಿಗೆ ‘ಸಲಗ’ ಪ್ರೆಕ್ಷಕರ ಮುಂದೆ ಬರುವ ತಯಾರಿ ನಡೆಸಿದೆ.

ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿರೋ ಸಲಗ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದೆ. ಕೆ.ಪಿ.ಶ್ರೀಕಾಂತ್ ಚಿತ್ರದ ನಿರ್ಮಾಪಕರು.

Categories
ಸಿನಿ ಸುದ್ದಿ

ಅಲ್ಲಮನಾಗಿ ಬಂದ ‘ಎನ್ ಕೌಂಟರ್ ದಯಾನಾಯಕ್ ‘ ! ಗನ್ ಹಿಡಿದ ಕೈ ಗೆ ವಚನ ರಚಿಸುವ ಶಕ್ತಿ ಇದೀಯಾ?

ಗನ್ ಹಿಡಿದ ಕೈ ಗೆ ವಚನ ರಚಿಸುವ ಶಕ್ತಿ ಇದೀಯಾ?

ಗನ್ ಹಿಡಿದ ಕೈಗೆ ವಚನ ಬರೆಯುವ ಶಕ್ತಿ ಇದೀಯಾ? ಈ ಪ್ರಶ್ನೆ‌ ಮೂಡಿದ್ದು ‘ಅಲ್ಲಮ‌ಪ್ರಭು ‘ಹೆಸರಿನ ಚಿತ್ರಕ್ಕೆ ಎನ್ ಕೌಂಟರ್ ದಯಾನಾಯಕ್ ಚಿತ್ರದ ಖ್ಯಾತಿಯ ನಟ ಸಚಿನ್ ಸುವರ್ಣ ನಾಯಕರಾಗಿರುವ ಕಾರಣ. ಹೌದು, ನಟ ಸಚಿನ್ ಸುವರ್ಣ ಮತ್ತೆ ಸ್ಯಾಂಡಲ್ ವುಡ್ ನತ್ತ ಮರಳಿದ್ದಾರೆ. ಹಾಗೆ ಬಂದವರು ಅವರೀಗ
ಅಲ್ಲಮನಾಗಿ ಕಾಣಿಸಿಕೊಂಡಿದ್ದಾರೆ.ವ್ಯೂಮಕಾಯ ಸಿದ್ದ ‘ಅಲ್ಲಮ‌ ಪ್ರಭು ‘ ಎನ್ನುವುದು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಚಿತ್ರದ‌ ಹೆಸರು.
‘ ಎನ್ ಕೌಂಟರ್ ದಯಾನಾಯಕ್ ‘ ಹಾಗೂ’ ಶ್ರೀ ಮೋಕ್ಷ ‘ಚಿತ್ರದ ನಂತರ ‘ ವ್ಯೂಮಕಾಯ ಸಿದ್ದ ಶ್ರೀ ಅಲ್ಲಮ‌ಪ್ರಭು’ ಚಿತ್ರದಲ್ಲಿ ಅವರು ಅಲ್ಲಮನಾಗಿ ಅಭಿನಯಿಸುತ್ತಿದ್ದಾರೆ. ಇದು ಡಿ.ಕೆ.‌ಶಿವರಾಜ್ ನಿರ್ದೇಶನದ ಚಿತ್ರ. ಮಹಾವೀರ ಪ್ರಭು ಹಾಗೂ ಮಾಧವಾನಂದ ಈ ಚಿತ್ರದ ನಿರ್ಮಾಪಕರು. ಇವರಿಗಿದು ಮೊದಲ ಸಿನಿಮಾ.‌ಮ ಹನ್ನೇರಡನೇ ಶತಮಾನದ ಶರಣ ಅಲ್ಲಮಪ್ರಭು ಮೇಲಿನ ಅಭಿಮಾನ ಹಾಗೂ ಭಕ್ತಿಯ ಕಾರಣಕ್ಕೆ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.ಈ ಚಿತ್ರದಕ್ಕೆ ಸಚಿನ್ ಸುವರ್ಣ ನಾಯಕರಾಗಿರುವುದು ವಿಶೇಷ.


‘ಸುಮಾರು ಏಳೆಂಟು ತಿಂಗಳ‌ಹಿಂದೆಯೇ ಫಿಕ್ಸ್ ಆದ ಪಾತ್ರ.‌ಕೊರೋನಾ ಮುಂಚೆಯೇ ನಿರ್ಮಾಪಕ‌ ಮಹಾವೀರ ಪ್ರಭು ಅವರು ಭೇಟಿ ಮಾಡಿ‌ಚಿತ್ರದ ಬಗ್ಗೆ ಹೇಳಿದರು. ಪಾತ್ರದ ಬಗ್ಗೆಯೂ ವಿವರಿಸಿದರು. ಪಾತ್ರ ಒಪ್ಪಿಕೊಂಡೆ. ಆ ಪಾತ್ರಕ್ಕೆ ಹೇಗೆಲ್ಲ ಸಿದ್ದಯೆ ಮಾಡಿಕೊಂಡೆ, ಹೇಗೆಲ್ಲ ಅಭಿನಯಿಸಲಿದ್ದೇನೆ ಅನ್ನೋದು ಸಿನಿಮಾ‌ಕಂಪ್ಲೀಟ್ ಆದ್ಮೇಲೆ ಹೇಳುತ್ತೇನೆ’ಎಂದರು ಸಚಿನ್ ಸುವರ್ಣ. ಶುಕ್ರವಾರ ಸಂಜೆ‌ ಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಮುಹೂರ್ತ ಸಂದರ್ಭಕ್ಕೆ ಅನೇಕ ಮಠಾಧೀಶರು ಸಾಕ್ಷಿ ಯಾದರು.

Categories
ಸಿನಿ ಸುದ್ದಿ

ರೋರಿಂಗ್‌ ಸ್ಟಾರ್‌ ಬರ್ತ್‌ಡೇಗೆ ಸ್ಪೆಷಲ್‌ ಗಿಫ್ಟ್‌ – ಡಿಸೆಂಬರ್‌ 17ಕ್ಕೆ ಮದಗಜ ಫಸ್ಟ್‌ ಲುಕ್‌ ಟೀಸರ್‌

ಅನೌನ್ಸ್‌ಮೆಂಟ್‌ ವಿಡಿಯೋದಲ್ಲಿ ಕೆರಳಿದ ಕುತೂಹಲ!

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹೌದು, “ಮದಗಜ” ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ. ಚಿತ್ರದ ಶೀರ್ಷಿಕೆಯಲ್ಲೇ ಒಂದು ಫೋರ್ಸ್‌ ಇದೆ. ಮೊದಲ ಪೋಸ್ಟರ್‌ ಕೂಡ ಅಷ್ಟೇ ಮಜವಾಗಿತ್ತು. ಒಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿರುವ ಈ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಡಿಸೆಂಬರ್‌ 17 ರಂದು ಶ್ರೀಮುರಳಿ ಅವರ ಹುಟ್ಟುಹಬ್ಬ. ಅವರ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಯಾಗಲಿದೆ.

ಈಗಾಗಲೇ ಫಸ್ಟ್‌ ಲುಕ್‌ ಟೀಸರ್‌ ಅನೌನ್ಸ್‌ಮೆಂಟ್‌ ವಿಡಿಯೋ ಆನಂದ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ ಒಂದು ಲಕ್ಷ ವೀಕ್ಷಣೆ ಪಡೆದಿದೆ. ಹೌದು, ಕೇವಲ ೨೧ ಸೆಕೆಂಡ್‌ನಷ್ಟಿರುವ ಆ ವಿಡಿಯೋ ನೋಡಿದರೆ, ಸಾಕಷ್ಟು ಕುತೂಹಲ ಮೂಡಿಸುವಂತಿದೆ. ಯಾವುದೇ ದೃಶ್ಯಗಳಿಲ್ಲದೆ, ಕೇವಲ ಹಿನ್ನೆಲೆ ಸಂಗೀತ ಇಟ್ಟುಕೊಂಡು ಹರಿದಾಡುವ ಸ್ಮೋಕ್‌ನಲ್ಲೇ ಹೊಸದ್ದೊಂದು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕರು.

ಉಮಾಪತಿ, ನಿರ್ಮಾಪಕ

ಅದನ್ನು ನೋಡಿದವರಿಗೆ ಇನ್ನಷ್ಟು ಹೊತ್ತು ಇರಬೇಕಿತ್ತು ಎನಿಸದೇ ಇರದು. ಆದರೆ, ಅದು ಕೇವಲ ಅನೌನ್ಸ್‌ಮೆಂಟ್‌ ವಿಡಿಯೋ ಆಗಿರುವುದರಿಂದ ಡಿಸೆಂಬರ್‌ ೧೭ಕ್ಕೆ ಪೂರ್ಣಪ್ರಮಾಣದ ಟೀಸರ್‌ ಹೊರಬರಲಿದೆ. ಅಂದು ರೋರಿಂಗ್‌ ಸ್ಟಾರ್‌ ಬರ್ತ್‌ಡೇ. ಹಾಗಾಗಿ ಶ್ರೀಮುರಳಿ ಅವರ ಅಭಿಮಾನಿಗಳಿಗೊಂದು ಸ್ಪೆಷಲ್‌ ಗಿಫ್ಟ್‌ ಕೊಡಲು ವಿಶೇಷ ತಯಾರಿ ಮಾಡಿಕೊಂಡಿದೆ ಚಿತ್ರತಂಡ.


ಅಂದಹಾಗೆ, ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್‌ ಗೌಡ ನಿರ್ಮಾಪಕರು. ಎಸ್.‌ ಮಹೇಶ್‌ ಕುಮಾರ್‌ ನಿರ್ದೇಶನವಿದ್ದು, ಭರ್ಜರಿಯಾಗಿಯೇ ಸಿನಿಮಾವನ್ನು ನಿರ್ದೇಶಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದ್ದು, ಮೂರನೇ ಹಂತದ ಚಿತ್ರೀಕರಣ ಬಿನ್ನಿಮಿಲ್‌ನಲ್ಲಿ ಸಖತ್‌ ಸೆಟ್‌ನಲ್ಲಿ ನಡೆಯುತ್ತಿದೆ. ಡಿಸೆಂಬರ್‌ ೧೭ರಂದು ಬೆಳಗ್ಗೆ ೯. ೯ ಕ್ಕೆ ಬಿಡುಗಡೆಯಾಗಲಿದೆ.

ಮಹೇಶ್‌ ಕುಮಾರ್‌, ನಿರ್ದೇಶಕ
Categories
ಸಿನಿ ಸುದ್ದಿ

ಸಿರಿ ಕನ್ನಡಕ್ಕೆ ಎರಡರ ಸಂಭ್ರಮ!

ಅಪ್ಪಟ ಕನ್ನಡಿಗರ ಪ್ರೀತಿಯ ವಾಹಿನಿ ಈಗ ಮೂರನೇ ಹೆಜ್ಜೆ

ಕನ್ನಡಿಗರ ಹೆಮ್ಮೆಯ ವಾಹಿನಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ “ಸಿರಿ ಕನ್ನಡ”  ವಾಹಿನಿಯು ಇದೀಗ ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ.  ಸಿನಿಮಾ ಮತ್ತು ಮನರಂಜನೆ ವಾಹಿನಿಯಾಗಿ ಇಲ್ಲಿನ ನೆಲದಲ್ಲಿ ಚಿಗುರೊಡೆದು ಹಂತ ಹಂತವಾಗಿ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೊಸದಾಗಿ ಆರಂಭವಾದರೂ ಎವರ್‌ಗ್ರೀನ್ ಕ್ಲಾಸಿಕ್ ಸಿನಿಮಾಗಳು ಮತ್ತು ಸಿನಿಮಾ ಆಧಾರಿತ ಸ್ಪೆಷಲ್ ಕಾರ್ಯಕ್ರಮಗಳೊಂದಿಗೆ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗಾಗಿ ಪ್ರಸ್ತುತ  ಸಂಪೂರ್ಣ ಮನರಂಜನಾ ವಾಹಿನಿಯಾಗಿ ತಲೆ ಎತ್ತಿ ನಿಂತಿದೆ.

ಕೋವಿಡ್ ಸಂದರ್ಭದಲ್ಲೂ ನೂತನ ಧಾರವಾಹಿಗಳು, ವಿಭಿನ್ನ ರಿಯಾಲಿಟಿ ಶೋಗಳು, ಹಬ್ಬದ ವಿಶೇಷ ಕಾರ್ಯಕ್ರಮಗಳು, ಹೊಸ ರೂಪದ ಭಕ್ತಿ ಪ್ರಧಾನ ಶೋಗಳನ್ನು ಕೊಡುತ್ತಾ ಮನ ಮನೆಗಳಿಗೆ ತಲುಪಿದೆ. ಈ ಹಂತದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತಿರಿಸಿಕೊಳ್ಳುತ್ತಾ ಇದೆ. ವೀಕ್ಷಕರು ಇಷ್ಟಪಟ್ಟಿರುವ ಮೆಗಾ ಧಾರವಾಹಿಗಳೊಂದಿಗೆ ಜನಪ್ರಿಯ ಶೋಗಳು ಹೊಸ ರೂಪದಲ್ಲಿ ನಿಮ್ಮನ್ನು ರಂಜಿಸಲಿವೆ. ಅಪಾರ ಜನಪ್ರಿಯತೆ ಪಡೆದ “ಕ್ಯಾಶ್ ಬಾಕ್ಸ್” ’ಸ್ಟಾರ್ ಆಫ್ ದಿ ವೀಕ್’ ದಲ್ಲಿ ವಿಜೇತರಿಗೆ ಇಪ್ಪತ್ತೈದು ಸಾವಿರ ಬಹುಮಾನ, ’ನಾರಿಗೊಂದು ಸೀರೆ’ ಕಾರ್ಯಕ್ರಮವು 120  ಕ್ಕೂ ಹೆಚ್ಚು ಸಂಚಿಕೆಗನ್ನು ಪೂರೈಸಿ, 500 ಕ್ಕೂ ಹೆಚ್ಚು ಸೀರೆಗಳನ್ನು ಮಹಿಳಾಮಣಿಗಳ ಬಳಿ ತರುತ್ತಿದೆ. ನಟಿ ಸುಜಾತ ನಿರೂಪಣೆಯ “ಸಿನಿ ಪಾಕ”ದಲ್ಲಿ ವೀಕ್ಷಕರಿಗೂ ಭಾಗವಹಿಸುವ ಅವಕಾಶ ಸಿಗಲಿದೆ. ರೀಲ್ ಹಿಂದಿನ ರಿಯಲ್ ಕಥೆ “ಟೂರಿಂಗ್ ಟಾಕೀಸ್” ಮತ್ತಷ್ಟು ವಿಭಿನ್ನವಾಗಿ ಮೂಡಿಬರುತ್ತದೆ ಎಂbuದು ವಾಹಿನಿಯ ಮುಖ್ಯಸ್ಥ ಸಂಜಯ್‌ ಶಿಂಧೆಯವರು ಸಂತಸ ಹಂಚಿಕೊಂಡಿದ್ದಾರೆ.
ಕನ್ನಡಿಗರಿಗಾಗಿಯೇ ರೂಪುಗೊಂಡ “ಸಿರಿ ಕನ್ನಡ” ನಾಡು ನುಡಿ ಸಂಸ್ಕೃತಿ ಬಿಂಬಿಸೋ, ಸ್ವಂತಿಕೆಯ ಸಂಭ್ರಮದ ಹೆಜ್ಜೆ ಇಡುತ್ತಿದೆ. ಮುಂದೆಯೂ ಕರುನಾಡಲ್ಲಿ “ನುಡಿ ಕನ್ನಡ, ನಡೆ ಕನ್ನಡ, ನೋಡ್ತಾ ಇರಿ ಸಿರಿ ಕನ್ನಡ” ಎನ್ನುವಂತಾಗಬೇಕು ಎಂಬುದೇ ವಾಹಿನಿಯ ಆಶಯವಾಗಿದೆ.

Categories
ಸಿನಿ ಸುದ್ದಿ

ಪ್ರಶಾಂತ್ ಸಂಬರಗಿ ಅಂದ್ರೆ ಆಯಿಲ್ ಕುಮಾರ್ ಅಂತೆ! ರವಿ ಶ್ರೀವತ್ಸ ನಿರ್ದೇಶನ್ ಎಂಆರ್ ನಲ್ಲಿ ಸಂಬರಗಿಗೆ ಬಣ್ಣ

ಜನವರಿಯಲ್ಲಿ ಶೂಟಿಂಗ್‌ ಶುರು…

ವಿವಾದಾತ್ಮಕ ಹೇಳಿಕೆಗಳ ಮೂಲಕ ಸಾಕಷ್ಡು ಸುದ್ದಿಯಲ್ಲಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೊನೆಗೂ ನಟನೆಯತ್ತ ಮುಖ ಮಾಡಿದ್ದಾರೆ.ರವಿ ಶ್ರೀವತ್ಸ್ ನಿರ್ದೇಶನದ ‘ಎಂ ಆರ್’ ಚಿತ್ರದಲ್ಲಿ ರೌಡಿ ಆಯಿಲ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ನಟನಾಗುವುದಕ್ಕಾಗಿಯೇ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದು ಅಂತ ಹೇಳಿದ್ದ ಪ್ರಶಾಂತ್ ಸಂಬರಗಿ, ಈಗ ರೌಡಿ ಆಗಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ. ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮುಹೂರ್ತ ಮುಗಿಸಿರುವ ಚಿತ್ರ ತಂಡ ಅನೇಕ ಕುತೂಹಲಕಾರಿ ಮಾಹಿತಿ ಹೊರ ಹಾಕಿದೆ.

ಎಂ ಆರ್ ಅಂದ್ರೆ ಮುತ್ತಪ್ಪ ರೈ ಚಿತ್ರವೇ ಎನ್ನುವುದನ್ನು ರಹಸ್ಯವಾಗಿಟ್ಟುಕೊಂಡಿರುವ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ,ಈಗ ಪ್ರಶಾಂತ್ ಸಂಬರಗಿ ಈಗ ರೌಡಿ ಆಗಿರುವುದನ್ನು ರಿವೀಲ್ ಮಾಡಿದ್ದಾರೆ.’ ರವಿ ಶ್ರೀ ವತ್ಸ ಅವರೊಂದಿಗೆ ನನ್ನದು ೨೫ ವರ್ಷಗಳ ಒಡನಾಟ. ಅವರೀಗ ಭೂಗತ ಲೋಕದ ಒಂದು ಕತೆ ಇಟ್ಟುಕೊಂಡು ಸಿನಿಮಾ‌ಮಾಡಲು ಹೊರಟಿರುವುದುನನಗೂ ಕುತೂಹಲ ಹುಟ್ಟಿಸಿದೆ. ಈ ಚಿತ್ರದಲ್ಲಿ ಒಂದು ಪಾತ್ರ ಇದೆ ಮಾಡ್ಬೇಕು ಅಂದಾಗ ನಂಗೂ ಅಚ್ಚರಿ. ಯಾವ ಪಾತ್ರ ಅಂತ ನಾನೇನು ಕೇಳಲಿಲ್ಲ. ಕೊನೆಗೆ ಮಿಟ್ ಮಾಡಿ, ಪಾತ್ರದ ಬಗ್ಗೆ ಕೇಳಿದಾಗ ನೀವೇ ಆಯಿಲ್ ಕುಮಾರ್ ಅಂದ್ರು.‌‌ ಏನ್ ಸರ್ , ನಾನೀಗ ರೌಡಿನಾ ಅಂತ ತಮಾಷೆ ಮಾಡಿದೆ. ಕೊನೆಗೆ ಒಪ್ಪಿಕೊಂಡು ಅಭಿನಯಿಸುತ್ತಿದ್ದೇನೆ ಎನ್ನುತ್ತಾರೆ ಪ್ರಶಾಂತ್ ಸಂಬರಗಿ.

Categories
ಸಿನಿ ಸುದ್ದಿ

ನಾಳೆ ‘ಪ್ರಾರಂಭ’ ಟ್ರೇಲರ್‌ ಲಾಂಚ್‌

 

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನು ರವಿಚಂದ್ರನ್‌ ಅಭಿನಯದ ” ಪ್ರಾರಂಭ ” ಚಿತ್ರ ರಿಲೀಸ್‌ ಗೆ ರೆಡಿ ಆಗಿದೆ. ಸದ್ಯಕ್ಕೆ ರಿಲೀಸ್‌ ದಿನಾಂಕ ಇನ್ನು ಫಿಕ್ಸ್‌ ಆಗಿಲ್ಲ. ಆದರೆ ರಿಲೀಸ್‌ ಗೆ ಬರದ ಸಿದ್ಧತೆ ನಡೆಸಿರುವ ಚಿತ್ರ ತಂಡ ನಾಳೆ( ಡಿಸೆಂಬರ್‌ 11) ಚಿತ್ರದ ಅಧಿಕೃತ ಟ್ರೇಲರ್‌ ಲಾಂಚ್‌ ಮಾಡುತ್ತಿದೆ.

ಬುಧವಾರಬೆಳಗ್ಗೆ 12 ಗಂಟೆಗೆ ಆನಂದ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ ಮೂಲಕ ಟ್ರೇಲರ್‌ ಲಾಂಚ್‌ ಆಗುತ್ತಿದೆ. ʼಪ್ರಾರಂಭʼ ಹಲವು ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿದ ಸಿನಿಮಾ. ನಟ ರವಿಚಂದ್ರನ್‌ ಹಿರಿಯ ಪುತ್ರ ಮನು ರವಿಚಂದ್ರನ್‌ ಅಭಿನಯದ ಸಿನಿಮಾ ಎನ್ನುವುದರ ಜತೆಗೆ ಮನು ಕಲ್ಯಾಡಿ ನಿರ್ದೇಶನದ ಸಿನಿಮಾ ಎನ್ನುವುದು ಕೂಡ ಇದರ ಕುತೂಹಲದ ಅಂಶಗಳಲ್ಲಿ ಒಂದು.

ಈಗಾಗಲೇ ವಿಭಿನ್ನ ಕಾರಣಕ್ಕೆ ಸುದ್ದಿ ಮಾಡಿದ ಚಿತ್ರ ಇದು. ಈಗ ಟ್ರೇಲರ್‌ ಕೂಡ ಕುತೂಹಲ ಮೂಡಿಸಿದೆ. ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಚಿತ್ರದ ಟ್ರೇಲರ್‌ ಗೆ ಧ್ವನಿ ನೀಡಿದ್ದು, ಇನ್ನೇನು ಲಾಂಚ್‌ಗೆ ಕಾತರ ಹೆಚ್ಚಿದೆ.

error: Content is protected !!