ಓ ಮೈ ಲವ್‌ ಅಂದವರಿಗೆ ಸಾಥ್‌ ಕೊಟ್ಟ ಸಚಿವ ಶ್ರೀರಾಮುಲು

ನಟ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಗೆ ಸ್ಮೈಲ್‌ ಶೀನು ಆ್ಯಕ್ಷನ್‌ ಕಟ್

ಸದಾ ಕ್ರಿಯಾಶೀಲವಾಗಿ ಯೋಚಿಸುವ ನಿರ್ದೇಶಕ ಸ್ಮೈಲ್‌ ಶೀನು ಅವರೀಗ ಮತ್ತೊಂದು ಬಿಗ್‌ ಬಜೆಟ್‌ ಯೋಜನೆ ಯೊಂದಿಗೆ ಸುದ್ದಿಯಲ್ಲಿದ್ದಾರೆ. ʼತೂಫಾನ್‌ʼ, ʼಬಳ್ಳಾರಿ ದರ್ಬಾರ್‌ʼ ಹಾಗೂʼ 18 ಟು 25ʼ ಚಿತ್ರಗಳ ನಂತರವೀಗ ʼಓ ಮೈ ಲವ್‌ʼ ಹೆಸರಿನಲ್ಲೊಂದು ಸಿನಿಮಾ ಶುರು ಮಾಡಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಮುಹೂರ್ತವೂ ಮುಗಿದಿದೆ. ವಿಶೇಷ ಅಂದ್ರೆ, ಹಿರಿಯ ನಟ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಶಶಿ ಕುಮಾರ್‌ ಈ ಚಿತ್ರದ ಹೀರೋ. ಹಾಗೆಯೇ ಹೊಸ ಪ್ರತಿಭೆಗಳಾದ ಹುಬ್ಬಳ್ಳಿ ಹುಡುಗಿ ಕೀರ್ತಿ ಕಲ್ಕೇರಿ ಹಾಗೂ ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿಯರು. ಇನ್ನು ಬಳ್ಳಾರಿ ಮೂಲದ ಜಿ. ರಾಮಾಂಜನಿ ಈ ಚಿತ್ರದ ನಿರ್ಮಾಪಕರು.

ಮೊನ್ನೆಯಷ್ಟೇ ಚಿತ್ರಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಷಣ್ಮುಖ ಸ್ವಾಮಿ ದೇವಾಲಯದಲ್ಲಿ ಮುಹೂರ್ತ ನಡೆಯಿತು. ಸಚಿವ ಶ್ರೀರಾಮು ಚಿತ್ರದ ಫ್ರಥಮ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಾಗೆಯೇ ಚಿತ್ರ ತಂಡಕ್ಕೆ ಶುಭ ಕೋರಿದರು.

ಚಿತ್ರದ ನಿರ್ಮಾಪಕ ರಾಮಾಂಜಿನಿ ಅವರೇ ಚಿತ್ರಕ್ಕೆ ಕತೆ ಬರೆದಿದ್ದಾರಂತೆ. ಜೆಸಿಬಿ ಪ್ರೊಡಕ್ಷನ್ಸ್‌ ಮೂಲಕ ಈ ಚಿತ್ರವು ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಉದ್ಯಮಿಯಾಗಿದ್ದ ರಾಮಾಂಜಿನಿ ಅವರು, ತಾವು ಚಿತ್ರ ನಿರ್ಮಾಣಕ್ಕೆ ಬಂದ ಬಗೆಯನ್ನು ಹೇಳಿಕೊಂಡರು.” ಸಿನಿಮಾ ನನ್ನ ಆಸಕ್ತಿಯ ಕ್ಷೇತ್ರ. ಚಿಕ್ಕಂದಿನಿಂದಲೂ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಆಸೆ ಇತ್ತು. ಹಾಗೆಯೇ ತೆರೆ ಮೇಲೆ ಬರಬೇಕೆನ್ನುವ ತುಡಿತ ಇತ್ತು. ಅದೇ ನಾನಿಲ್ಲಿಗೆ ಬರಲು ಕಾರಣ. ಜತೆಗೆ ಕತೆ ಬರೆಯೂ ಹುಚ್ಚು ಕೂಡ ನನ್ನನ್ನು ಇಲ್ಲಿಗೆ ಸೆಳೆಯಿತು. ಚಿತ್ರದ ಶೀರ್ಷಿಕೆ ನೋಡಿದಾಗ ಇದೊಂದು ಬರೀ ಪ್ರೇಮಕತೆಯ ಚಿತ್ರ ಅತಂದುಕೊಂಡರೂ, ಇದು ಎಲ್ಲಾ ಅಂಶಗಳು ಇರುವಂತಹ ಪಕ್ಕಾ ಕಮರ್ಷಿಯಲ್‌ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್‌, ಆ್ಯಕ್ಷನ್‌, ರೋಮಾನ್ಸ್‌ ಜತೆಗೆ ಕಾಮಿಡಿ ಕೂಡ ಚಿತ್ರದಲ್ಲಿದೆʼ ಎನ್ನುತ್ತಾ ತಾವು ಇಲ್ಲಿಗೆ ಬಂದಿರುವುದರ ಕತೆ ಬಿಚ್ಚಿಟ್ಟರು.


ಚಿತ್ರಕತೆ ಜತೆಗೆ ಸಂಭಾಷಣೆ ಬರೆದಿರುವ ನಿರ್ದೇಶಕ ಸ್ಮೈನ್‌ ಶೀನು, ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ” ಇದೊಂದು ಲವ್‌ ಸಬ್ಜೆಕ್ಟ್‌ ಸಿನಿಮಾ ಮಾತ್ರವಲ್ಲ, ಕತೆಯಲ್ಲೊಂದು ಒಳ್ಳೆಯ ಮೆಸೇಜ್‌ ಕೂಡ ಇದೆ. ಈ ಕಾಲದ ಹುಡುಗ-ಹುಡುಗಿಯರೆಲ್ಲ ವೈಫೈ ಪ್ರೀತಿಯ ಹಿಂದೆ ಬಿದ್ದಿದ್ದಾರೆ. ಮೊಬೈಲ್‌, ಇಂಟರ್ನೆಟ್‌ ಅಂತ ಮಾನವೀಯ ಸಂಬಂಧ ಮರೆಯುತ್ತಿದ್ದಾರೆ. ಅದೆಲ್ಲಕ್ಕಿಂತ ನಮ್ಮ ನಡುವಿವ ಸಂಬಂಧ , ಪ್ರೀತಿಯೇ ಮುಖ್ಯ ಎನ್ನುವುದನ್ನು ಕತೆ ಹೇಳುತ್ತದೆʼ ಎಂದರು ಸ್ಮೈಲ್‌ ಶೀನು.

ಚಿತ್ರಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಸದ್ಯಕ್ಕೆ ರಾಜ್ಯದ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಹಾಡುಗಳಿಗೆ ವಿದೇಶಕ್ಕೂ ಹೋಗುವ ಆಲೋಚನೆ ಚಿತ್ರ ತಂಡದಲ್ಲಿದೆ. ಟಾಲಿವುಡ್‌ ನ ಹೆಸರಾಂತ ನಟ ದೇವ್‌ ಗಿಲ್‌ ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಂತೆ. ಚಿತ್ರದ ಆರು ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದು, ಚರಣ್‌ ಅರ್ಜುನ್‌ ಸಂಗೀತ ನೀಡಿದ್ದಾರೆ. ಇಸ್ಮಾರ್ಟ್‌ ಶಂಕರ್‌, ಅಲಾ ವೈಕುಂಠಪುರಂಲೂ ಖ್ಯಾತಿಯ ರಿಯಲ್‌ ಸತೀಶ್‌ ಅ್ಯಕ್ಷನ್‌ ಡೈರೆಕ್ಷನ್‌ ಮಾಡುತ್ತಿರುವುದಾಗಿ ಚಿತ್ರ ತಂಡ ಹೇಳಿದೆ.

Related Posts

error: Content is protected !!