Categories
ಸಿನಿ ಸುದ್ದಿ

ಗೌಡ್ರಿಗೆ ಡಿ ಬಾಸ್ ವಿಶ್ ಮಾಡಿದ್ರಾ; ಡಬ್ಬಲ್ ಕಾಲ್‌ಶೀಟ್ ಕಥೆ ಏನಾಯ್ತು?

  • ವಿಶಾಲಾಕ್ಷಿ

ಇಡೀ ಗಾಂಧಿನಗರದ ಮಂದಿಯ ಕಣ್ಣು ಇವತ್ತು ಡಿ ಬಾಸ್ ಮೇಲಿದೆ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ. 25 ಕೋಟಿ ಮ್ಯಾಟರ್‌ಗೆ ಕ್ಲ್ಯಾರಿಟಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ ಆದರೆ, ಸಾರಥಿ ಹಾಗೂ ಉಮಾಪತಿಯ ನಡುವೆ ಎಲ್ಲವೂ ಚೆನ್ನಾಗಿದೆ ಎಂಬುದಕ್ಕಂತೂ ಕನ್‌ಕ್ಲೂಶನ್ ಸಿಗುತ್ತೆ ಅಂತ ಕಾಯ್ತಿದ್ದಾರೆ. ಆದರೆ, ಮಂಗಳವಾರ ಮಾರ್ನಿಂಗ್ ಮುಗಿದು ಮಧ್ಯಾಹ್ನ ಬಂದರೂ ಕೂಡ ಯಾವುದೂ ಸೂಚನೆ ಸಿಗುತ್ತಿಲ್ಲ. ಹೀಗಾಗಿ, ಕೆಲವರು ಕೇಕೆ ಹೊಡೆಯುತ್ತಿದ್ದಾರೆ ಇನ್ನೂ ಕೆಲವರು ಬೇಸರಪಟ್ಟಿಕೊಳ್ಳುತ್ತಿದ್ದಾರೆ.

ಸಾರಥಿ ಹಾಗೂ ಉಮಾಪತಿ ಒಂದಾಗಬೇಕು ಅಂತ ಎಷ್ಟು ಮಂದಿ ಬಯಸ್ತಿದ್ದಾರೋ ಅಷ್ಟೇ ಮಂದಿ ಇಬ್ಬರು ದೂರ ಆಗ್ಬೇಕು ಅಂತ ಬಯಸ್ತಿದ್ದಾರೆ. ಇದು ಗಾಂಧಿನಗರದ ಕೆಲವು ಮಂದಿಯ ಸಹಜ ಪ್ರಕ್ರಿಯೆ ಬಿಡಿ. ಆಕ್ಟರ್ ಆಕ್ಟರ್ ಆಗಿದ್ದರೆ, ಪ್ರೊಡ್ಯೂಸರ್ ಪ್ರೊಡ್ಯೂಸರ್ ಆಗಿದ್ದರೆ ಮಾತ್ರ ಸಹಿಸಿಕೊಳ್ತಾರೆ ಅದನ್ನು ಬಿಟ್ಟು ನಾವು ರಾಮ-ಲಕ್ಷ್ಮಣರಂತಿರ‍್ತೀವಿ ಅಂತ ಹೊರಟರೆ ಮುಗೀತು ಸಂಬಂಧ ಮುರಿಯೋಕೆ, ಸ್ನೇಹ ಸೇತುವೆಯನ್ನು ಉರುಳಿಸೋಕೆ ಕಾಯ್ತಾ ಇರ್ತಾರೆ. ಹೀಗೆ, ಯಾರೋ ಹಾಕಿದ ಗಾಳದಿಂದ ಸಾರಥಿ-ಉಮಾಪತಿ ಸಂಬಂಧದ ಸೇತುವೆ ಉರುಳುತ್ತಿದೆಯೋ ಅಥವಾ ಸದ್ದಿಲ್ಲದೇ ಗಟ್ಟಿಯಾಗ್ತಿದೆಯೋ ಗೊತ್ತಾಗ್ತಿಲ್ಲ.

ದಚ್ಚು ಹೆಸರಲ್ಲಿ 25 ಕೋಟಿ ದೋಖಾ ಪ್ರಕರಣ ಬೆಳಕಿಗೆ ಬಂದಾಗಿನಿಂದ ದರ್ಶನ್ ಹಾಗೂ ಉಮಾಪತಿಯವರ ನಡುವೆ ಮನಸ್ತಾಪ ಮೂಡಿರುವುದು ಮೇಲ್ನೋಟಕ್ಕೆ ಎದ್ದು ಕಾಣುವ ಸತ್ಯ. ಆರೋಪ-ಪ್ರತ್ಯಾರೋಪ ಏನೇ ಇದ್ದರೂ ಕೂಡ ಒಬ್ಬರನ್ನೊಬ್ಬರು ಬಿಟ್ಟುಕೊಡ್ತಿಲ್ಲ ಎಂಬುದು ಕೂಡ ಅಷ್ಟೇ ದಿಟ. ಮೊದಲು, 25 ಕೋಟಿ ವಂಚನೆಯ ಪ್ರಕರಣದ ಸತ್ಯಾಸತ್ಯತೆ ಆಚೆ ಬರಲಿ ಮುಂದೇನಾಗ್ಬೇಕೋ ಅದಾಗುತ್ತೆ ಅಂತ ಇಬ್ಬರು ತೀರ್ಮಾನ ಮಾಡಿದ್ದಾರೆ.

ಆದರೆ, ಅಲ್ಲಿವರೆಗೂ ತಾಳ್ಮೆಯಿಂದ ಕಾಯೋದಕ್ಕೆ ತಯ್ಯಾರಿಲ್ಲದ ಕೆಲವು ಮಂದಿ ಕಳೆದ ವರ್ಷ ರಾಬರ್ಟ್' ಪ್ರೊಡ್ಯೂಸರ್ ಬರ್ತ್ಡೇಗೆ ಡಿಬಾಸ್ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದರು. ಆದರೆ ಈ ವರ್ಷ ಉಮಾಪತಿಯವರ ಹುಟ್ಟುಹಬ್ಬಕ್ಕೆ ಶುಭಕೋರಿಲ್ಲ. ಹೀಗಾಗಿ, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗ್ತಿದೆಯೆಂದು ಮಾತನಾಡಿಕೊಳ್ತಿದ್ದಾರೆ. ಅಲ್ಲಾ ಗುರು ಡಿಬಾಸ್ ವಿಶ್ ಮಾಡುವುದು ಊರವರಿಗೆಲ್ಲಾ ಗೊತ್ತಾಗ್ಬೇಕು ಅಂತೇನಿಲ್ಲವಲ್ಲ, ನೇರವಾಗಿ ಫೋನ್ ಮಾಡಿ ಶುಭಾಷಯ ತಿಳಿಸಿರಬಹುದು.ನಿರ್ಮಾಪಕರೇ ತಂದಿಟ್ಟು ತಮಾಷೆ ನೋಡ್ತಿರುವವರು ಆದಷ್ಟು ಬೇಗ ತಗಲಾಕಿಕೊಳ್ಳಲಿ ಆ ಮೇಲೆ ಆಟ ಶುರುವಿಟ್ಟುಕೊಳ್ಳೋಣ’ ಹೀಗಂತ ಡಿಬಾಸ್ ಹೇಳಿದ್ದರೂ ಹೇಳಿರಬಹುದು ಯಾರಿಗೂ ಗೊತ್ತು ಸ್ವಾಮಿ.

ಸಾರಥಿ ಹಾಗೂ ಉಮಾಪತಿಯವರ ನಡುವಿನ ಸಂಬಂಧದ ಬಗ್ಗೆ ಸುಮ್‌ಸುಮ್ಮನೇ ಸುಳ್‌ಸುದ್ದಿ ಹಬ್ಬಿಸುವವರು ಹಳೆಯ ಇನ್ಸಿಡೆಂಟ್‌ನ ಒಮ್ಮೆ ರೀಕಾಲ್ ಮಾಡಿಕೊಳ್ಳಿ. ಪರಸ್ಪರ ಇಬ್ಬರು ಏನೇ ಆರೋಪ ಮಾಡಿದರೂ ಕೂಡ ಖಾಸಗಿ ಹೋಟೆಲ್ ನಲ್ಲಿ ಇಬ್ಬರು ಸಿಟ್ಟಿಂಗ್ ಕೂತು ಕ್ಯಾಮೆರಾಗೆ ಒಂದು ಫೋಸ್ ಕೊಟ್ಟರು. ನಮ್ಮ ನಿರ್ಮಾಪಕರು ನಿರ್ಮಾಪಕರೇ ಅಂತ ದಚ್ಚು ಸ್ಟೇಟ್‌ಮೆಂಟ್ ಕೊಟ್ಟರೆ, `ಸಿನಿಮಾ ಆಂಗಲ್‌ನಲ್ಲಿ ಹೇಳೋದಾದರೆ ದರ್ಶನ್ ಇಂಜಿನ್ ಇದ್ದ ಹಾಗೇ, ನಾವು ಹಿಂದೆ ಇರುವ ಭೋಗಿಗಳು.. ಅವರು ಮುಂದೆ ಹೋದರೆ ನಾನು ಹಿಂದೆ ಇರುವುದಾಗಿ ನಿರ್ಮಾಪಕ ಉಮಾಪತಿಯವರು ಹೇಳಿಕೊಂಡಿದ್ದಾರೆ.

ಈ ಮಧ್ಯೆ ದೊಡ್ಮನೆ ಆಸ್ತಿ ವಿಚಾರದ ಸಂಗತಿಯ ಹೇಳಿಕೆಯಲ್ಲಿ ಕೊಂಚ ಆಚೀಚೆ ಆಗಿದೆ ಅದೇನು ಎಂಬುದು ಅವರಿಬ್ಬರು ಕೂತ್ಕೊಂಡು ಬಗೆಹರಿಸಿಕೊಳ್ತಾರಾ ಅನ್ನೋದರ ಜೊತೆಗೆ ಇಬ್ಬರು ಒಂದಾಗಿ ಸಿನಿಮಾ ಮಾಡ್ತಾರಾ ಇಲ್ಲವಾ ಎಂಬುದು ಕೂಡ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ತಾಳ್ಮೆಯಲ್ಲಿ ಶ್ರೀರಾಮನಂತೆ ಕಾಯದೇ ಬೇರೆದಾರಿಯಿಲ್ಲ. ಕಾಯಿರಿ ಕಾದಷ್ಟು ಒಳ್ಳೆಯದೇ ಅಲ್ಲವಾ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಶಾರ್ದೂಲ ಹಾಡಿಗೆ ಮೆಚ್ಚುಗೆ; ಸಂಚಿತ್ ಹೆಗಡೆ ಕಂಠದಲ್ಲಿ ಲಿರಿಕಲ್‌ ವಿಡಿಯೊ ರಿಲೀಸ್

ತಮ್ಮ ಅಮೋಘ ಕಂಠದಿಂದ ಕೇಳುಗರ ಮನಗೆದ್ದಿರುವ ಸಂಚಿತ್ ಹೆಗಡೆ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ “ಶಾರ್ದೂಲ” ಚಿತ್ರದ “ಒಂದು ಸಣ್ಣ ತಪ್ಪನ್ನು ಮಾಡಿ ಬಿಡಲೇ ನಾನು” ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಅರವಿಂದ್ ಕೌಶಿಕ್ ಬರೆದಿರುವ ಈ ಹಾಡಿಗೆ ಸತೀಶ್ ಬಾಬು ಸಂಗೀತ ನೀಡಿದ್ದಾರೆ.


ಭೈರವ ಸಿನಿಮಾಸ್ ಮತ್ತು ಸಿ ವಿ ಆರ್ ಸಿನಿಮಾಸ್ ಬ್ಯಾನರ್‌ನಲ್ಲಿ ರೋಹಿತ್ ಶಾಂತಪ್ಪ ಹಾಗೂ ಕಲ್ಯಾಣ್ ಸಿ ನಿರ್ಮಿಸಿರುವ ಈ ಚಿತ್ರ ಆಗಸ್ಟ್ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ.
ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ.


ಈ ಹಿಂದೆ “ನಮ್ ಏರಿಯಾಲ್ಲೊಂದು‌ ದಿನ” “ತುಘಲಕ್” ಹಾಗೂ “ಹುಲಿರಾಯ” ಚಿತ್ರಗಳನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಅರವಿಂದ್ ಕೌಶಿಕ್‌, ಈ ಚಿತ್ರಕ್ಕೆ “ದೆವ್ವ ಇರಬಹುದಾ” ಎಂಬ ಅಡಿಬರಹ ಕೊಟ್ಟಿದ್ದಾರೆ.

ವೈ.ಜಿ.ಆರ್ ಮನು ಛಾಯಾಗ್ರಹಣವಿದೆ. ಸತೀಶ್ ಬಾಬು ಸಂಗೀತ ನೀಡಿದ್ದಾರೆ. ಶಿವರಾಜ್ ಮೇಹು ಸಂಕಲನ ಮಾಡಿದರೆ, ಮಾಸ್ ಮಾದ, ವೈಲೆಂಟ್ ವೇಲು ಮತ್ತು ಅಲ್ಟಿಮೇಟ್ ಶಿವು ಅವರ‌ ಸಾಹಸ ನಿರ್ದೇಶನವಿದೆ.

ಪಿ.ಯು.ಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚೇತನ್ ಚಂದ್ರ, ನಿರ್ದೇಶಕ, ನಟ ರವಿತೇಜ, ಕೃತಿಕ ರವೀಂದ್ರ, ಐಶ್ವರ್ಯ ಪ್ರಸಾದ್, ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ದುಬಾರಿ ಮೊತ್ತಕ್ಕೆ ಆರ್ ಆರ್ ಆರ್ ಆಡಿಯೋ ರೈಟ್ಸ್ ಸೇಲ್; ಕೆಜಿಎಫ್- 2 ದಾಖಲೆ ಮುರೀತು ರಾಜಮೌಳಿ ಚಿತ್ರ !

ಜಕ್ಕಣ್ಣ ಅಲಿಯಾಸ್ ರಾಜಮೌಳಿಯವರು ಇಂಡಿಯನ್ ಸಿನಿಮಾ ಇತಿಹಾಸದಲ್ಲಿ ಹಿಂದ್ಯಾರು ಬರೆಯದ ಐತಿಹಾಸಿಕ ದಾಖಲೆಯನ್ನು ಬರಿಬೇಕು ಅಂತ ಫಿಕ್ಸಾಗಿ ಫೀಲ್ಡ್ ಗೆ ಇಳಿಯುತ್ತಾರೆ ಅಂತ ಕಾಣುತ್ತೆ. ಬಾಹುಬಲಿ ಮೂಲಕ ಭಾರತೀಯ ಚಿತ್ರರಂಗದಲ್ಲಿ ನಯಾ ದಾಖಲೆ ಕೆತ್ತಿದ್ದು ನಿಮಗೆಲ್ಲ ಗೊತ್ತೆಯಿದೆ. ಇದೀಗ ಮೌಳಿ ಸಾರಥ್ಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ ಆರ್ ಆರ್ ಆರ್ ಹೊಸ ರೆಕಾರ್ಡ್ ಮಾಡಿದೆ. ಭಾರತೀಯ ಚಿತ್ರರಂಗದ ಐತಿಹಾಸಿಕ ಪುಟದಲ್ಲಿ ಯಾವೊಂದು ಚಿತ್ರವೂ ಬರೆಯದ ಇತಿಹಾಸಕ್ಕೆ ಆರ್ ಆರ್ ಆರ್ ಸಾಕ್ಷಿಯಾಗಿದೆ.

ಆರ್ ಆರ್ ಆರ್ ಇಡೀ ವಿಶ್ವವೇ ಕಣ್ಣರಳಿಸಿ ಕಾಯ್ತಿರುವ‌ ಚಿತ್ರ. ಸೆಟ್ಟೇರಿದಾಗಲೇ ಸುಂಟರಗಾಳಿ ಎಬ್ಬಿಸಿದ್ದ ಈ‌ಚಿತ್ರ ಮೇಕಿಂಗ್ ನಿಂದ ವಲ್ಡ್ ವೈಡ್ ಸುನಾಮಿ ಎಬ್ಬಿಸಿರುವುದು ಗೊತ್ತೆಯಿದೆ. ಇದೀಗ ಆಡಿಯೋ ರೈಟ್ಸ್ ವಿಚಾರಕ್ಕೆ ಭಾರತೀಯ ಚಿತ್ರರಂಗವೇ ಹಿಂತಿರುಗಿ ನೋಡುವಂತೆ ಮಾಡಿದೆ. ಆರ್ ಆರ್ ಆರ್ ಆಡಿಯೋ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಟಿ ಸಿರೀಸ್ ಹಾಗೂ ಲಹರಿ ಸಂಸ್ಥೆ ಭರ್ತಿ 25 ಕೋಟಿ ಕೊಟ್ಟು ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದೆ ಎನ್ನಲಾಗ್ತಿದೆ. ಫ್ರೆಂಡ್ ಶಿಪ್ ಡೇಯಂದು ಸ್ಪೆಷಲ್ ಸಾಂಗ್ ರಿಲೀಸ್ ಆಗಲಿದೆ.

ಇತ್ತೀಚೆಗೆ ಲಹರಿ ಸಂಸ್ಥೆ ಕೆಜಿಎಫ್‌ ಚಾಪ್ಟರ್ 2 ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿತ್ತು. 7.2 ಕೋಟಿಗೆ ಕೆಜಿಎಫ್ 2 ಆಡಿಯೋ ರೈಟ್ಸ್ ಸೇಲ್ ಆಗಿತ್ತು. ಈ‌ ಮೂಲಕ ಬಾಹುಬಲಿ 2 ಚಿತ್ರದ ಆಡಿಯೋ ದಾಖಲೆಯನ್ನ ಹಿಂದಿಕ್ಕಿ ಕೆಜಿಎಫ್ ಮುನ್ನುಗ್ಗಿತ್ತು. ಇದೀಗ, ಕೆಜಿಎಫ್ ರೆಕಾರ್ಡ್ ನ ಆರ್ ಆರ್ ಆರ್ ಬೀಟ್ ಮಾಡಿದೆ. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಆರ್ ಆರ್ ಆರ್ ಆಡಿಯೋ ಹಕ್ಕುಗಳನ್ನು ಟಿ ಸಿರೀಸ್ ಹಾಗೂ ಲಹರಿ ಸಂಸ್ಥೆ ಬಾಚಿಕೊಂಡಿದೆ. 25 ಕೋಟಿ ಸುರಿದು ಆಡಿಯೋ ರೈಟ್ಸ್ ಪಡೆದಿವೆ ಅಂದರೆ ನೀವೇ ಲೆಕ್ಕಹಾಕಿ
ಎಂ ಎಂ ಕೀರವಾಣಿ ಸಂಯೋಜಿಸಿರುವ ಹಾಡುಗಳು ಹೇಗಿರಬಹುದೆಂದು.

ಆರ್ ಆರ್ ಆರ್ ಐತಿಹಾಸಿಕ ಕಥಾಹಂದರವುಳ್ಳ ಸಿನಿಮಾ. ಕೋಮರಾಮ್ ಭೀಮ್ ಪಾತ್ರಕ್ಕೆ ಜೂನಿಯರ್ ಎನ್ ಟಿಆರ್ ಜೀವತುಂಬಿದರೆ, ಅಲ್ಲುರಿ ಸೀತರಾಮ ರಾಜು ಪಾತ್ರಕ್ಕೆ ರಾಮ್ ಚರಣ್ ತೇಜಾ ಬಣ್ಣ ಹಚ್ಚಿದ್ದಾರೆ.

ಬಿಟೌನ್ ಬ್ಯೂಟಿ ಅಲಿಯಾ ನಾಯಕಿಯಾಗಿ ಮಿಂಚಿದ್ದಾರೆ. ಅಜಯ್ ದೇವಗನ್ ಮುಖ್ಯಪಾತ್ರದಲ್ಲಿದ್ದು ವಿದೇಶಿ ಕಲಾವಿದರು ಕೂಡ ಚಿತ್ರದಲ್ಲಿದ್ದಾರೆ. ಡಿ.ವಿ.ವಿ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ 400 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆರ್ ಆರ್ ಆರ್ ಚಿತ್ರ ಅಕ್ಟೋಬರ್ 13 ರಂದು ತೆರೆಗೆ ತರೋದಕ್ಕೆ ಸಕಲ ತಯ್ಯಾರಿ ನಡೀತಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪವರ್ ಪಕ್ಕದಲ್ಲಿ ನಿಲ್ಲೋಕೆ ತಮನ್ನಾ ರೆಡಿಯಿದ್ದಾರೆ; ನೋಡು ಯೋಚನೆ ಮಾಡು ತ್ರಿಷಾ !?

ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಪಕ್ಕದಲ್ಲಿ ನಿಲ್ಲಬೇಕು ಅಂತ ಕಾಯ್ತಿರುವವರು ಒಬ್ಬರಾ..ಇಬ್ಬರಾ…ಲೆಕ್ಕಾನೇ ಇಲ್ಲ ಬುಡು ಗುರು. ಅಪ್ಪು ಜೊತೆ ಆಕ್ಟ್ ಮಾಡೋದಕ್ಕೆ ಒಂದೇ ಒಂದು ಚಾನ್ಸ್ ಸಿಕ್ಕರೆ ಸಾಕು ಅಂತ ಅದೆಷ್ಟೋ ಹೀರೋಯಿನ್ಸ್ ಮನೆದೇವರಿಗೆ ಹರಕೆ ಬೇರೆ ಕಟ್ಟಿಕೊಂಡಿದ್ದಾರೆ. ಅಣ್ಣಾಬಾಂಡ್‌ಗೆ ಜೊತೆಯಾಗ್ಬೇಕು ಮುತ್ತಿನ ತೇರಲ್ಲಿ ದೊಡ್ಮನೆ ಹುಡುಗನ ಜೊತೆ ಮೆರವಣಿಗೆ ಹೊರಡಬೇಕು ಅಂತ ಕನಸು ಕಟ್ಟಿಕೊಂಡಿದ್ದಾರೆ. ಇಂತಹದ್ದೊಂದು ಕನಸಿನ ಸಾಕಾರಕ್ಕಾಗಿ ಜಿಮ್-ವರ್ಕೌಟ್-ಡಯಟ್ ಅಂತ ಫಿಗರ್‌ನ ಮೆಂಟೇನ್ ಮಾಡೋದಲ್ಲದೇ ಆಕ್ಟಿಂಗ್‌ನಲ್ಲಿ ಪರ್ಫೆಕ್ಟ್ ಆಗೋದಕ್ಕೆ ಬೆವರು ಸುರಿಸುತ್ತಿದ್ದಾರೆ. ಅಸಲಿಯತ್ತು ಹೀಗಿರುವಾಗ, ಯುವರತ್ನನ ಹವಾ ಹೃದಯ ಗೆದ್ದಿರುವಾಗ ಸೌತ್ ಸುಂದರಿ ನೋ ಅನ್ನೋದಕ್ಕೆ ಚಾನ್ಸ್ ಇದೆಯಾ ಸದ್ಯಕ್ಕಂತೂ ಗೊತ್ತಿಲ್ಲ.

ಕಳೆದ ಎರಡು ದಿನಗಳಿಂದ ಬಜಾರ್‌ನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿರುವ `ಪವರ್’ ಹೀರೋಯಿನ್ ಮ್ಯಾಟರ್ ನಿಮ್ಮೆಲ್ಲರಿಗೂ ಗೊತ್ತಾಗಿರುತ್ತೆ. ಪವರ್ ಕಾಂಬಿನೇಷನ್ ಮತ್ತೆ ಒಂದಾಗುವ ಸುದ್ದಿ ಕೇಳಿ ಅಪ್ಪು ಫ್ಯಾನ್ಸ್ ಮಾತ್ರವಲ್ಲ ಗಾಂಧಿನಗರದ ಮಂದಿ ಕೂಡ ಥ್ರಿಲ್ಲಾಗಿದ್ದಾರೆ. ಪವರ್ ಜೋಡಿಯನ್ನು ಮತ್ತೆ ಕಣ್ತುಂಬಿಕೊಳ್ಳೋದಕ್ಕೆ ಕಾತುರರಾಗಿದ್ದಾರೆ. ಆದರೆ, ದ್ವಿತ್ವ ಚಿತ್ರತಂಡ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಸೌತ್ ಸುಂದರಿ ಹೇಳಿದ್ದೇನು ಎಂಬದನ್ನು ಇನ್ನೂ ರಿವೀಲ್ ಮಾಡಿಲ್ಲ.

ಹೌದು, ದ್ವಿತ್ವ ಚಿತ್ರದ ನಾಯಕಿಯ ಬಗ್ಗೆ ಬಜಾರ್‌ನಲ್ಲಿ ಸಾಕಷ್ಟು ಚರ್ಚೆಗಳಾಗ್ತಿದೆ. ಸೌತ್ ಸುಂದರಿ ತ್ರಿಷಾ ಅಪ್ಪುಗೆ ಜೋಡಿಯಾಗಲಿದ್ದಾರೆ ಎನ್ನುವ ಸುದ್ದಿ ಟೂಪೀಸ್ ಧರಿಸಿಕೊಂಡು
ಸ್ಯಾಂಡಲ್‌ವುಡ್ ಅಂಗಳದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. `ಪವರ್’ ಚಿತ್ರದಲ್ಲಿ ಅಣ್ಣಾಬಾಂಡ್‌ಗೆ ಜತೆಯಾಗಿ ಕಿಕ್ಕೇರಿಸಿದ್ದ ತ್ರಿಷಾ ಮತ್ತೆ ದ್ವಿತ್ವ ಚಿತ್ರದಲ್ಲಿ ಅಪ್ಪು ಪಕ್ಕದಲ್ಲಿ ನಿಲ್ತಾರೆನ್ನುವ ಸುದ್ದಿ ಹಬ್ಬಿದೆ. ಅಂದ್ಹಾಗೇ, ತ್ರಿಷಾ ಜೊತೆ ಸಿಟ್ಟಿಂಗ್ ಕೂತು ಬೈಟು ಕಾಫಿ ಕುಡಿಯುತ್ತಾ ನಿರ್ದೇಶಕ ಪವನ್ ಕುಮಾರ್ ಕಥೆ ಹೇಳಿದ್ದಾರಂತೆ. ದ್ವಿತ್ವ ಕಥೆ ಕೇಳಿ ಥ್ರಿಲ್ಲಾಗಿರುವ ತ್ರಿಷಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರಂತೆ.

ಹಾಗಾದ್ರೆ ತ್ರಿಷಾ ಏನಂದ್ರು? ಓಕೆ ಅಂದರಂತಾ? ಪವರ್ ಬಗಲಲ್ಲಿ ನಿಲ್ತಾರಂತಾ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರವಿಲ್ಲ ಯಾಕಂದ್ರೆ ಚಿತ್ರತಂಡ ಎಲ್ಲವನ್ನೂ ಸಸ್ಪೆನ್ಸ್ ಆಗಿಯೇ ಇಟ್ಟಿದೆ. ಅಂದ್ಹಾಗೇ, ತ್ರಿಷಾ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ ಈ ಕಾರಣದಿಂದ ತ್ರಿಷಾ ಗ್ರೀನ್ ಸಿಗ್ನಲ್ ಕೊಡೋದಕ್ಕೆ ಹಿಂದೇಟು ಹಾಕ್ತಾರೋ ಅಥವಾ ಪವರ್‌ಗೋಸ್ಕರ ಜಿಗಿಜಿಗಿದು ಬರ‍್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ದೊಡ್ಮನೆ ಹುಡುಗನ ಪಕ್ಕದಲ್ಲಿ ನಿಲ್ಲೋದಕ್ಕೆ ನಾನ್ ಯಾವಾಗ್ಲೂ ರೆಡಿ ಅಂತ ಮಿಲ್ಕಿಬ್ಯೂಟಿ ತಮನ್ನಾ ಬಹಳ ದಿನದ ಹಿಂದೆಯೇ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಹೀಗಾಗಿ, ತ್ರಿಷಾ ನೋ ಅನ್ನೋದಕ್ಕೂ ಮೊದಲು ಕೊಂಚ ಯೋಚನೆ ಮಾಡಿದರೆ ಒಳ್ಳೆಯದು ಎಂಬುದು ಅಪ್ಪು ಫ್ಯಾನ್ಸ್ ಅಭಿಪ್ರಾಯ

ಉಳಿದಂತೆ ದ್ವಿತ್ವ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಫಸ್ಟ್ ಟೈಮ್ ಪವನ್‌ಕುಮಾರ್-ಪವರ್‌ಸ್ಟಾರ್ ಜೊತೆಯಾಗ್ತಿದ್ದಾರೆ. ಪೋಸ್ಟರ್‌ನಿಂದಲೇ ಸಾಕಷ್ಟು ಕೂತೂಹಲಕ್ಕೆ ಕಾರಣವಾಗಿರುವ ದ್ವಿತ್ವ ಈಗ ಸಿನಿಮಾ ನಾಯಕಿ ವಿಚಾರಕ್ಕೆ ಸಾಕಷ್ಟು ಸುದ್ದಿಮಾಡ್ತಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ಹೊರತುಪಡಿಸಿ ಉಳಿದ ತಾರಾಗಣದ ಬಗ್ಗೆ ಪವನ್ ಇನ್ನಷ್ಟೇ ರಿವೀಲ್ ಮಾಡ್ಬೇಕಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು `ದ್ವಿತ್ವ’ ಮೇಲೆ ನಿರೀಕ್ಷೆಗಳು ಗರಿಗೆದರಿವೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮಿನುಗುವ ನಕ್ಷತ್ರವೊಂದು ಜಾರಿಬಿದ್ದ ಸಂಕಟ, ತೆರೆ ಮೇಲಿನ ಒನಕೆ ಒಬವ್ವ ಈಗ ಬರೀ ನೆನಪು ಮಾತ್ರ !

ಕಲಾವಿದರಿಗೆ ʼಸ್ಟಾರ್‌ʼ ಅಂತಾರೆ. ಸ್ಟಾರ್‌ ಅಂದ್ರೆ ಮಿನುಗುವ ನಕ್ಷತ್ರ ಅನ್ನೋದು ನಿಮಗೂ ಗೊತ್ತಿದೆ. ನಿಜವಾದ ನಕ್ಷತ್ರಗಳು ಆಗಸದಲ್ಲಿ ಮಿನುಗಿದರೆ, ಕಲಾವಿದರು ಬೆಳ್ಳಿಪರದೆ ಮೇಲೆ ಮಿನುಗುವ ನಕ್ಷತ್ರ ಗಳು.ಅಂತೆಯೇ ಸ್ಟಾರ್‌ ಎನಿಸಿಕೊಂಡ ಈಗಿನ ಕಲಾವಿದರೆಲ್ಲ ಅದೆಷ್ಟು ಮಿನುಗು ತ್ತಾರೋ ಗೊತ್ತಿಲ್ಲ, ಆದರೆ ಕನ್ನಡ ಚಿತ್ರರಂಗ ಕಂಡ ಅತ್ಯಾ ದ್ಭುತ ನಟಿ, ಅಭಿನಯ ಶಾರದೆ ಜಯಂತಿ ಅಂದ್ರೆ ಬೆಳ್ಳಿ ಪರದೆ ಮೇಲೆ ನಿರಂತರವಾಗಿ ಮಿನುಗಿದ ನಕ್ಷತ್ರ. ಅಂತಹ ಬೆಳ್ಳಿ ನಕ್ಷತ್ರವೇ ಈಗ ಕಳಚಿ ಬಿದ್ದಿದೆ. ಅವರಿನ್ನು ನೆನಪು ಮಾತ್ರ ಎನ್ನುವ ಸಂಕಟ ಇಡೀ ಸಿನಿಮಾ ರಸಿಕರಲ್ಲಿ ಮನೆ ಮಾಡಿದೆ.

ಹಿರಿಯ ನಟಿ ಜಯಂತಿ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟಿ. ಈಗಿನ ತಲೆಮಾರಿಗೆ ಇಂತಹ ನಟಿಯರನ್ನು ಇನ್ನೆಂದೂ ಕಾಣಲು ಸಾಧ್ಯವೇ ಇಲ್ಲ. ಪಂಡರಿಬಾಯಿ, ಲೀಲಾವತಿ, ಸರೋಜದೇವಿ, ಕಲ್ಪನಾ , ಭಾರತಿ ಹಾಗೂ ಜಯಂತಿ ಅವರೆಲ್ಲ ಆ ಕಾಲದಲ್ಲಿ ನಾಯಕಿಯರಾಗಿ ಕನ್ನಡ ಚಿತ್ರರಂಗ ಬಹುಕಾಲ ಆಳಿದವರು. ನಿರಂತರವಾದ ಅವರ ಅಳ್ವಿಕೆಗೆ ಕಾರಣವಾಗಿದ್ದೇ ನಟನೆಯ ಮೇಲಿದ್ದ ಅವರ ಆಸಕ್ತಿ ಮತ್ತು ಬದ್ಧತೆ. ನೇಮ್‌ ಅಂಡ್‌ ಫೇಮ್‌ ಎನ್ನುವುದಕ್ಕಿಂದ ನಟನೆಯ ಹಸಿವಿಗಾಗಿಯೇ ಅವರೆಲ್ಲ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದು ಇದೆ. ಈ ಕಾಲಕ್ಕೆ ಅದೆಲ್ಲ ಸಾಧ್ಯವೇ? ಅದೆಲ್ಲಕ್ಕಿಂದ ಮುಖ್ಯವಾಗಿ ಖಾಸಗಿ ಬದುಕಿನಲ್ಲಿ ಸಂತೋಷಕ್ಕಿಂತ ನೋವನ್ನೇ ಉಂಡ ನಟಿ ಜಯಂತಿ ಅವರಂತೂ ತಮ್ಮ ಇಡೀ ಜೀವನವನ್ನೂ ನಟನೆಗಾಗಿಯೇ ಮೀಸಲಿ ಟ್ಟಿದ್ದರೂ ಎನ್ನುವುದಕ್ಕೆ ಅವರು ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಸಾಕ್ಷಿ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ 5೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ ಮಹಾನಟಿ ಅವರು. ಸಿನಿಮಾ ಅಂದ್ರೆ ಆಗ ಒಂದಷ್ಟು ಮಡಿ, ಮೈಲಿಗೆಗಳು ಇದ್ದ ಕಾಲದಲ್ಲೇ ನಾಯಕಿ ಆಗಿ ಬಂದವರು ನಟಿ ಜಯಂತಿ. ಒಂದ್ರೀತಿ ಅವರ ಹಾದಿಯ ಆರಂಭವೇ ಸಂಪ್ರಾದಾಯಗಳನ್ನು ಧಿಕ್ಕರಿಸಿ ಬಂದಿದ್ದು. ಸಿನಿಮಾ ಅಂದ್ರೆ ಹೀಗೆಯೇ ಅಂತ ಬೇಲಿ ಹಾಕಿಕೊಂಡಿದ್ದಾಗ ಹದಿ ಹರೆಯದ ಯುವತಿಯೊಬ್ಬಳು ಕ್ಯಾಮೆರಾ ಮುಂದೆ ಈಜುಡುಗೆ ತೊಡುವುದೆಂದರೆ ಅದು ಅಷ್ಟು ಸುಲಭ ವೇನು ಆಗಿರಲಿಲ್ಲ, ಹಾಗೆಲ್ಲ ಮಾಡಿದರೆ ದೊಡ್ಡ ಪ್ರತಿರೋಧವೇ ವ್ಯಕ್ತವಾಗಲಿದ್ದ ಕಾಲವದು. ಅಂತಹ ದಿನಮಾನದಲ್ಲೇ ನಟಿ ಜಯಂತಿ ಅವರು ಮಿಸ್‌ ಲೀಲಾವತಿ ಚಿತ್ರದಲ್ಲಿಈಜುಡುಗೆ ತೊಟ್ಟು ಕ್ಯಾಮೆರಾ ಮುಂದೆ ನಿಂತಿದ್ದರು ಎನ್ನುವುದಕ್ಕೆ ನೇಮ್‌ ಅಂಡ್‌ ಫೇಮ್‌ ಕಾರಣ ಅಂತೆನ್ನಲಾಗದು.ಆ ಮೂಲಕ ದೊಡ್ಡ ಕ್ರಾಂತಿಗೆ ಕಾರಣವಾದರು ಅನ್ನೋ ದು ಈಗ ಸುಲಭವಾಗಿ ಹೇಳುವ ಮಾತಾದರೂ, ಆಗ ಅದನ್ನ ವರು ಅರಗಿಸಿಕೊಂಡಿದ್ದೇ ಬಹುದೊಡ್ಡ ಸಾಹಸ. ಪಾತ್ರ ಯಾವು ದದಾರೂ ಸರಿ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಜಯಂತಿ ಅವರಿಗೆ ನಟನೆಯೇ ಸಂಗಾತಿಯಂತಾಗಿತ್ತು. ಹಾಗಾಗಿ ಪಾತ್ರಗಳನ್ನ ಅರಸಿ, ಪರಭಾಷೆಗಳಿಗೂ ಹೋದರು. ಅಲ್ಲೂ ತಮ್ಮ ಮನೋಜ್ಜ ಅಭಿನಯದ ಮೂಲಕ ಮನೆ ಮಾತಾಗಿದ್ದರು ಎನ್ನುವುದು ಕನ್ನಡದ ಹೆಮ್ಮೆಯೇ ಹೌದು.

ಮಿಸ್‌ ಲೀಲಾವತಿ ಚಿತ್ರದಲ್ಲಿನ ಅವರ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂತು ಎನ್ನುವುದು ನಿಜವೇ ಆಗಿದ್ದರೂ, ಜಯಂತಿ ಅವರು ಕನ್ನಡಿಗರ ಮನೆ ಮಾತಾಗಿದ್ದು ನಾಗರಾಹಾವು ಚಿತ್ರದಲ್ಲಿನ ಒನಕೆ ಒಬವ್ವ ಪಾತ್ರದ ಮೂಲಕ. ಈಗಲೂ ಜಯಂತಿ ಅಂದ್ರೆ ಕನ್ನಡಿಗರ ಮನದಲ್ಲಿ ಚಿತ್ರದುರ್ಗದ ಕಲ್ಲಿನಕೋಟೆ, ಅಲ್ಲಿಗೆ ದೆಂಡೆತ್ತಿ ಬಂದಿದ್ದ ಹೈದರಾಲಿ ಸೈನ್ಯ, ಆ ಸೈನ್ಯವನ್ನು ಬಗ್ಗ ಬಡಿದ ವೀರ ವನಿತೆ ಒನಕೆ ಒಬವ್ವ ಳ ಪರಾಕ್ರ ಮವೇ ನದಿಯಂತೆ ಹರಿದುಹೋಗುತ್ತದೆ. ಅಂತಹದೊಂದು ಬೆಳ್ಳಿ ಪರದೆಯ ನಕ್ಷತ್ರವೇ ಈಗ ಕಳಚಿ ಬಿದ್ದಿದೆ.

Categories
ಸಿನಿ ಸುದ್ದಿ

ಅಂಬಿ ಮಾಮ ಎನ್ನುತ್ತಿದ್ದರು ಜಯಂತಿ ; ಹೀಗನ್ನುತ್ತಿದ್ದರು ಕರ್ಣ ?

ಅಭಿನಯ ಶಾರದೆ ಜಯಂತಿಯವರು ದೈಹಿಕವಾಗಿ ಮರೆಯಾಗಿರಬಹುದು ಅಷ್ಟೇ ಶತಶತಮಾನಗಳು ಉರುಳಿದರೂ ಕೂಡ ಪಾತ್ರಗಳ ಮೂಲಕ ಅಜರಾಮರವಾಗಿರುತ್ತಾರೆ. ಮುಖಕ್ಕೆ ಬಣ್ಣ ಹಚ್ಚಿದಾಗಿನಿಂದ ಬಣ್ಣದ ಲೋಕದಲ್ಲಿ ಅಭಿನೇತ್ರಿಯಾಗಿ ಮಿಂಚಿದ ಜಯಂತಿಯವರು ಕೋಟ್ಯಾಂತರ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಡಾ ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯ್‌ಕುಮಾರ್, ಎನ್‌ಟಿರಾಮ್‌ರಾವ್, ಜೆಮಿನಿ ಗಣೇಶನ್, ಎಂ.ಜಿ ರಾಮಚಂದ್ರನ್ ಸೇರಿದಂತೆ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ದಿಗ್ಗಜರೊಟ್ಟಿಗೆ ತೆರೆಹಂಚಿಕೊಂಡು ಸೈ ಎನಿಸಿಕೊಂಡವರು ಜಯಂತಿಯವರು. ಇಂತಿಪ್ಪ ಈ ಎವರ್‌ಗ್ರೀನ್ ನಾಯಕಿ ರೆಬೆಲ್‌ಸ್ಟಾರ್ ಅಂಬರೀಷ್ ಅವರೊಟ್ಟಿಗೂ ಸ್ಕ್ರೀನ್ ಶೇರ್ ಮಾಡಿದ್ದರು.
ವಜ್ರದ ಜಲಪಾತ, ಲೀಡರ್ ವಿಶ್ವನಾಥ್, ಹೊಸ ತೀರ್ಪು, ಮಸಣದ ಹೂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಂಬರೀಷ್ ಹಾಗೂ ಜಯಂತಿಯವರು ಒಟ್ಟಿಗೆ ನಟಿಸಿದ್ದರು.

ಮಂಡ್ಯದ ಗಂಡು ಅಂಬರೀಷ್‌ರನ್ನ ನಟಿ ಜಯಂತಿಯವರು ಅಂಬಿಮಾಮ ಎನ್ನುತ್ತಿದ್ದರು ಅನ್ನೋದು ಇಂಟ್ರೆಸ್ಟಿಂಗ್ ವಿಷ್ಯ. ಹೌದು, ಶೂಟಿಂಗ್ ಸೆಟ್‌ನಲ್ಲಿ ರೆಬೆಲ್‌ಸ್ಟಾರ್‌ನ ಜಯಂತಿಯವರು ಅಂಬಿಮಾಮ ಎನ್ನುತ್ತಿದ್ದರಂತೆ. ಇದಕ್ಕೆ ಅಂಬ್ರೀಶ್‌ಯವರು ನೀನು `ಜೇಡರಭಲೇ’ ಎಂದು ಪ್ರೀತಿಯಿಂದಲೇ ರೇಗಿಸುತ್ತಿದ್ದರಂತೆ ಈ ಸಂಗತಿಯನ್ನ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ಕೊಟ್ಟಾಗ ಸ್ವತಃ ಜಯಂತಿಯವರೇ ಬಿಚ್ಚಿಟ್ದಿದ್ದರು.

ಸಿನಿಮಾ ಹೊರತಾಗಿಯೂ ಅಂಬರೀಶ್ ಹಾಗೂ ಅವರ ಕುಟುಂಬದೊಟ್ಟಿಗೆ ಜಯಂತಿ ಅಮ್ಮನವರು ಆತ್ಮೀಯತೆ ಬೆಸೆದುಕೊಂಡಿದ್ದರು. ಅಭಿನಯ ಶಾರದೆಯ ಆರೋಗ್ಯ ಹದಗೆಟ್ಟಿದೆ ಎನ್ನುವ ಸುದ್ದಿ ತಿಳಿದರೆ ಸಾಕು ಅಂಬಿಯಣ್ಣ ಎಲ್ಲೇ ಇದ್ದರೂ ಓಡೋಡಿ ಬರುತ್ತಿದ್ದರು. ಆಸ್ಪತ್ರೆಗೆ ಭೇಟಿಕೊಟ್ಟು ಕಷ್ಟ-ಸುಖ ವಿಚಾರಿಸುತ್ತಿದ್ದರಲ್ಲದೇ ಜಯಂತಿ ಅಮ್ಮವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದರು. ಸುಮಲತಾ ಅಂಬರೀಷ್ ಕೂಡ ಅಮ್ಮನವರ ಕ್ಷೇಮ-ಸಮಾಚಾರ ವಿಚಾರಿಸಿಕೊಳ್ಳುತ್ತಿದ್ದರು. ಈಗ ಅಮ್ಮನವರ ಅಗಲಿಕೆಗೆ ಸುಮಲತಾ ಕೂಡ ಕಂಬನಿ ಮಿಡಿದಿದ್ದಾರೆ. `ಕನ್ನಡದ ಮೇರು ನಟಿ, ಅಭಿನಯ ಶಾರದೆ ಹಾಗೂ ನನ್ನ ನಲ್ಮೆಯ ಜಯಂತಿ ಅಮ್ಮನ ನಿಧನದ ಸುದ್ದಿ ಅತೀವ ದುಃಖ ತಂದಿದೆ. ದಶಕಗಳಿಂದ ಅವರು ನಮ್ಮ ಕುಟುಂಬದ ಸದಸ್ಯರೇ ಆಗಿದ್ದು, ನಮ್ಮ ಸುಖ ದುಃಖಗಳಲ್ಲಿ ಜೊತೆಗಿದ್ದರು. ಅವರ ನಿಧನದಿಂದ ಭಾರತದ ಚಿತ್ರರಂಗ ಒಂದು ಅಪೂರ್ವ ಅಭಿನೇತ್ರಿಯನ್ನು ಕಳೆದುಕೊಂಡು ಅನಾಥವಾಗಿದೆ’ ಎಂದು ಸುಮಲತಾ ಭಾವುಕರಾಗಿದ್ದಾರೆ.

Categories
ಸಿನಿ ಸುದ್ದಿ

ಚಿತ್ರನಟಿ ಜಯಂತಿ ನಿಧನಕ್ಕೆ ಸುನೀಲ್ ಪುರಾಣಿಕ್ ಕಂಬನಿ

ಅಭಿನಯ ಶಾರದೆ, ಖ್ಯಾತ ಅಭಿನೇತ್ರಿ ಜಯಂತಿ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕಂಬನಿ ಮಿಡಿದಿದ್ದಾರೆ. ಭಾರತೀಯ ಚಿತ್ರರಂಗದ ಮೇರು ನಟಿ ಜಯಂತಿ ಅವರು ಈ ಶತಮಾನ ಕಂಡ ಅತ್ಯಂತ ಜನಪ್ರಿಯ ಮತ್ತು ಮೋಹಕ ನಟಿ ಎಂದು ಹೆಸರು ಪಡೆದವರು.

ಮೂಲತಃ ಬಳ್ಳಾರಿಯವರಾದ ಅವರು 1963 ರಲ್ಲಿ ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.ಕಪ್ಪು ಬಿಳಿಪು ಚಿತ್ರದ ಕಾಲದಿಂದ ಇತ್ತೀಚಿನವರೆಗೂ ಅವರ ಚಿತ್ರರಂಗದ ಸಾಧನೆ ಅಪಾರ.ಡಾ.ರಾಜಕುಮಾರ್ ಅವರೊಂದಿಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ಹೆಗ್ಗಳಿಕೆ ಜಯಂತಿ ಅವರದು.ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಅವರ ಅಭಿನಯ ಸಾರ್ವಕಾಲಿಕ ಶ್ರೇಷ್ಠ ಅಭಿನಯ ಎಂದು ಪರಿಗಣಿಸಲ್ಪಟ್ಟಿದ್ದು,

ಜಯಂತಿ ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅದ್ಭುತ ಕಲಾವಿದೆಯನ್ನು ಕಳೆದು ಕೊಂಡಂತಾಗಿದೆ.ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗು ಜಯಂತಿಯವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಅಪಾರ ಅಭಿಮಾನಿಗಳು, ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಪುರಾಣಿಕ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಜೀವನ ಪಯಣ ಮುಗಿಸಿದ ಅಭಿನಯ ಶಾರದೆ- ಕಸ್ತೂರಿ ನಿವಾಸದ ಕಲಾವಿದೆಯ ಅಗಲಿಕೆಗೆ ಚಿತ್ರರಂಗ ಕಣ್ಣೀರು

ಕನ್ನಡ‌ ಚಿತ್ರರಂಗ ಕಂಡ ಅತ್ಯದ್ಭುತ ನಟಿ, ಅಭಿನಯ ಶಾರದೆ ಎಂತನೇ ಜನಪ್ರಿಯಗೊಂಡಿದ್ದ ಹಿರಿಯ‌ ನಟಿ ಜಯಂತಿಯವರು ಜೀವನ ಪಯಣ ಮುಗಿಸಿದ್ದಾರೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಅಮ್ಮ ಭಾನುವಾರ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯುಂಟಾಗಿ ಕೊನೆಯುಸಿರೆಳೆದಿದ್ದಾರೆ. ಅಭಿನಯ ಶಾರದೆಯ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

500 ಚಿತ್ರಗಳಲ್ಲಿ ಅಭಿನಯ ಶಾರದೆ ಮಿಂಚು

ಜೇನುಗೂಡು ಜಯಂತಿಯವರು ಬಣ್ಣ ಹಚ್ಚಿದ ಮೊದಲ‌ ಕನ್ನಡದ ಸಿನಿಮಾ.‌ ತಮ್ಮ ಎರಡನೇ ಚಿತ್ರ ಚಂದವಳ್ಳಿಯ ತೋಟದಲ್ಲಿ ಡಾ ರಾಜ್ ಕುಮಾರ್ ಗೆ ನಾಯಕಿಯಾದರು. ಅಣ್ಣಾವ್ರು ಹಾಗೂ ಅಭಿನಯ ಶಾರದೆಯ ಜೋಡಿ ಕೂಡ ಅಭಿಮಾನಿ ದೇವರುಗಳ ಮನಸ್ಸು ಗೆದ್ದಿತ್ತು. ಜಯಂತಿ ಯವರಿಗೆ ಡಾ ರಾಜ್ ಕುಮಾರ್ ಜೊತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಚಂದವಳ್ಳಿಯ ತೋಟ, ಮಿಸ್ ಲೀಲಾವತಿ, ಮಂತ್ರಾಲಯ ಮಹಾತ್ಮೆ, ಲಗ್ನ ಪತ್ರಿಕೆ, ಜೇಡರಭಲೇ, ಶ್ರೀ ಕೃಷ್ಣದೇವರಾಯ, ಪರೋಪಕಾರಿ, ಕಸ್ತೂರಿ ನಿವಾಸ, ದೇವರು ಕೊಟ್ಟ ತಂಗಿ, ಎಡಕಲ್ಲು ಗುಡ್ಡದ ಮೇಲೆ, ಮಸಣದ ಹೂ, ಚಿತ್ರಗಳಲ್ಲಿ ಜಯಂತಿ ಅಣ್ಣಾವ್ರಿಗೆ ಜೋಡಿಯಾಗಿದ್ದರು.

ಇಂದಿರಾಗಾಂಧಿಯವರಿಂದ ಪ್ರಶಸ್ತಿ ಸ್ವೀಕಾರ !

ಮಿಸ್ ಲೀಲಾವತಿ ಚಿತ್ರದ ಜಯಂತಿ ಅವರ ಅಭಿನಯಕ್ಕೆ ರಾಜ್ಯಪ್ರಶಸ್ತಿ ಮುಡಿಗೇರಿತ್ತು. ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಜಯಂತಿ ಅವರಿಗೆ ರಾಷ್ಟ್ರ ಪ್ರಶಸ್ತಿ ಪ್ರಧಾನ ಮಾಡಿದ್ದರು. ʼಮಿಸ್ ಲೀಲಾವತಿ’ ನಟಿ ಜಯಂತಿಯವರ ಖ್ಯಾತಿಯನ್ನ ಉತ್ತುಂಗಕ್ಕೇರಿಸಿದ ಚಿತ್ರ. ಮಡಿ ವಂತಿ ಕೆಯ ಸಂಪ್ರದಾಯವನ್ನು ಮುರಿದು ಜಯಂತಿಯವರು ಮಾದಕ ನಟಿಯಾಗಿ ಮಿಂಚಿದ್ದೇ ಬಂತು ಸ್ಯಾಂಡಲ್ ವುಡ್ ಅಂಗಳ ದಲ್ಲಿ ಸುಂಟರಗಾಳಿ ಎಬ್ಬಿಸಿದರು. ಸ್ವಿಮ್ ಸೂಟ್ ಧರಿಸಿದ ಮೊದಲ ಕನ್ನಡದ ನಟಿ ಎನ್ನುವ ಖ್ಯಾತಿ ಗಳಿಸಿದರು. ಮೋಸ್ಟ್ ಬೋಲ್ಡ್ ಅಂಡ್ ಬ್ಯೂಟಿಫುಲ್ ನಾಯಕಿ ಪಟ್ಟಕ್ಕೇರಿ ತಮ್ಮದೇ ಆದ ನಯಾ ಮೇನಿಯಾ ಸೃಷ್ಟಿಸಿಕೊಂಡರು.

ಸ್ಕರ್ಟ್, ಟೀಶರ್ಟ್, ಸ್ವಿಮ್ ಸೂಟ್ ಈ ತರ ಮತ್ತೇರಿಸೋ ಕಾಸ್ಟ್ಯೂಮ್ ನಲ್ಲಿ ಕ್ಯಾಮೆರಾ ಮುಂದೆ ನಿಲ್ಲೋಕೆ ಅಂಜುತ್ತಿದ್ದ ಕಾಲವದು. ಅಂತಹ ಟೈಮ್ ನಲ್ಲಿ ನಟಿ ಜಯಂತಿಯವರು ಮನಸ್ಸನ್ನು ಬಿಗಿಯಾಗಿಸಿ ಕೊಂಡರು. ಯಾವುದೇ ಪಾತ್ರವಾದರೂ ಸರೀ ಲೀಲಾಜಾಲ ವಾಗಿ ಮಾಡಬಲ್ಲೇ ಎನ್ನುವಂತೆ ಯಾವುದೇ ಕಾಸ್ಟ್ಯೂಮ್ ಆದರೂ ಸರೀ ಅದನ್ನು ಧರಿಸಿ ಪಾತ್ರಕ್ಕೋಸ್ಕರ ಕ್ಯಾಮೆರಾ ಮುಂದೆ ನಿಲ್ಲಬಲ್ಲೇ ಎಂಬುದನ್ನು ಮಿಸ್ ಲೀಲಾವತಿ‌ ಚಿತ್ರದ ಮೂಲಕ ತೋರಿಸಿಕೊಟ್ಟರು. ಜಯಂತಿಯವರು ಕ್ಲಿಕ್ ಆದರೂ, ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯ್ತು.

ಅಭಿನಯ ಶಾರದೆ ಕನ್ನಡಕ್ಕಷ್ಟೇ ಅಲ್ಲ…

ಕನ್ನಡ, ತೆಲುಗು, ತಮಿಳು. ಮಲೆಯಾಳಂ, ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಮೇರುನಾಯಕಿಯಾಗಿ‌ ಮಿಂಚಿದರು. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಸಿನಿಮಾ ನಟನೆಗೆ ಏಳು ಭಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಎರಡು ಭಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡಿದ್ದರು. ಕನ್ನಡ ಚಿತ್ರರಂಗ ಕೊಟ್ಟ ಅಭಿನಯ ಶಾರದೆ ಎನ್ನುವ ಕಿರೀಟಕ್ಕೆ ಮುತ್ತಿಟ್ಟಿದ್ದರು.

ಒನಕೆ ಓಬ್ಬವ್ವಳಾಗಿ ಕರ್ನಾಟಕದ ಆರೂವರೆ ಕೋಟಿ ಮಂದಿಯ ಮನಸ್ಸು ಗೆದ್ದರು. ಕಮಲ‌ಕುಮಾರಿ ನಟಿ ಜಯಂತಿಯವರ ಹುಟ್ಟು ನಾಮಧೇಯ. ಚಿತ್ರರಂಗಕ್ಕೆ ಬಂದಮೇಲೆ ಜಯಂತಿ ಅಂತ ಹೆಸರು ಬದಲಾಯಿಸಿ ಕೊಂಡರು. ಹುಟ್ಟೂರು ಬಳ್ಳಾರಿ. ಬಾಲಸುಬ್ರಹ್ಮಣ್ಯಂ ಮತ್ತು ಸಂತಾನ ಲಕ್ಷ್ಮಿಯವರ ಸು ಪುತ್ರಿಯಾಗಿ ಜನಿಸಿದರು. ಈಗ ಪುತ್ರನನ್ನ ಅಗಲಿದ್ದಾರೆ. ಅಮ್ಮನ ಅಗಲಿಕೆಗೆ ಮಗ ಮಾತ್ರವಲ್ಲ ಇಡೀ ಸಿನಿಮಾ ಲೋಕ ಕಂಬನಿ‌ ಮಿಡಿಯುತ್ತಿದೆ

Categories
ಸಿನಿ ಸುದ್ದಿ

ತೋರ ಬಾರದ ಬೆಟ್ಟು ತೋರಿಸಿ ಬೆಪ್ಪಾದ ಚಂದ್ರಚೂಡ್ – ತಪ್ಪಾಯ್ತು ಬಿಡಿ ಸರ್, ಅಂದ್ರು ಬಿಡಲಿಲ್ಲ ಕಿಚ್ಚ ಸುದೀಪ್, ಮಾಡಿದ ತಪ್ಪಿಗೆ ಹೊರ ಬರ್ತಾರಾ ಚೂಡ್!

ಚಕ್ರವರ್ತಿ.. ಚಕ್ರವರ್ತಿ.. ಚಕ್ರವರ್ತಿ.. ಈ‌ ಹೆಸರಿಗೊಂದು ಘನತೆಯಿದೆ , ಗೌರವವಿದೆ , ಬೆಲೆಕಟ್ಟಲಾಗದ ಶಕ್ತಿಯಿದೆ. ಮಾತ್ರವಲ್ಲ ಶತಶತ ಮಾನ ಗಳಿಂದಲೂ ಚಕ್ರವರ್ತಿ ಎನ್ನುವ ಹೆಸರಿಗೆ ಒಂದು ವಿಶೇಷವಾದ ಸ್ಥಾನವಿದೆ. ಮಾನವಿದೆ. ಅದು ಇಡೀ ಮನುಕುಲಕ್ಕೆ ಗೊತ್ತಿರುವ ಸತ್ಯ.‌ ಆದರೂ ಈ ಚಕ್ರವರ್ತಿ ಮಾತ್ರ ಚಕ್ರವರ್ತಿ ಎನ್ನುವ ಹೆಸರಿಗೆ ಕಳಂಕವೇ? ಹೆಣ್ಣು ಅಂದ್ರೆ ಈ ಚಕ್ರವರ್ತಿಗೆ ಅದ್ಯಾಕೆ ಅಷ್ಟು ಕೋಪ? ಇಷ್ಟಕ್ಕೂ ನಾವ್ ಇಲ್ಲಿ ಹೇಳ್ತಿರೋದು ಅದ್ಯಾವ ಚಕ್ರವರ್ತಿ ಅಂತ ನೀವೇನು ಕನ್ ಪ್ಯೂಸ್ ಆಗೋದು ಬೇಡ.‌ನಾವಿಲ್ಲಿ ಹೇಳ್ತಿರೋದು ನಿರ್ದೇಶಕ, ಬರಹಗಾರ, ಪತ್ರಕರ್ತ ಹಾಗೂ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾ ಗಿರುವ ಚಕ್ರವರ್ತಿ ಚಂದ್ರಚೂಡ್ ಅವರ ಬಗ್ಗೆ.

ಹಾಗಂತ ಅವರದೇನು ಕಥೆ ಅಂತ ವಿವರಿಸಿ ಹೇಳಬೇಕಿಲ್ಲ ಅನಿಸು ತ್ತೆ.ಬಿಗ್ ಬಾಸ್ ಮನೆಯಲ್ಲಿ ಒಂದು ಹೆಣ್ಣು ಮಗಳಿಗೆ ಆತ , ಕೋಪದಿಂದ ತೋರ ಬಾರದ ಬೆರಳು ತೋರಿಸಿದ ಕಾರಣಕ್ಕೆ ಆ ಯುವತಿ ನೊಂದು ಕೊಂಡಿದ್ದು ಅಷ್ಟಿಷ್ಟಲ್ಲ. ಅದನ್ನು ಇಡೀ ಕರುನಾಡೇ ಕಂಡು‌ ಕ್ಯಾಕರಿಸಿ ಉಗಿಯಿತು. ಸೋಷಲ್ ಮೀಡಿಯಾದಲ್ಲಿ ಆ ಏಪಿಸೋಡ್ ಗೆ ಬಂದ ಕಾಮೆಂಟ್ ನೋಡಿದ್ರೆ, ಅಬ್ಬಾ, ಚಕ್ರವರ್ತಿ ಚಂದ್ರಚೂಡ್ ಗೆ ಪಿಂಕಿ ಅಲಿಯಾಸ್ ಪ್ರಿಯಾಂಕಾ ಅವರ ಶಾಪ ಮಾತ್ರವಲ್ಲ ಸಕಲ ಹೆಣ್ಣು ಮಕ್ಕಳ ಶಾಪ ತಟ್ಟುವುದಂತೂ ಗ್ಯಾರಂಟಿ ಅಂತೆನಿಸಿ ದ್ದು ಹೌದು. ಅದೇನಾಗುತ್ತೋ ಗೊತ್ತಿಲ್ಲ, ಆದರೆ ಬಿಗ್ ಬಾಸ್ ನಿರೂಪಕರಾದ ಕಿಚ್ಚ ಸುದೀಪ್ ಮಾತ್ರ ಶಮಿವಾರ ಕೆಂಡಾಮಂಡ‌ಲ‌ ಆಗಿದ್ದನ್ನು ಕಂಡ ಕರುನಾಡು ಒಂದು ಕ್ಷಣ ಅಚ್ಚರಿಯಿಂದ ನೋಡಿದ್ದಂತೂ ಹೌದು. ಯಾಕಂದ್ರೆ ಚಂದ್ರ ಚೂಡ್ ಗೆ ನಟ ಸುದೀಪ್ ಕ್ಲಾಸ್ ತೆಗೆದುಕೊಂಡ ಪರಿಯೇ ಹಾಗಿತ್ತು.

ಶನಿವಾರ ಚಕ್ರವರ್ತಿಗೆ ಚಳಿಬಿಡಿಸಿರುವ ಕಿಚ್ಚ ಭಾನುವಾರ ಗೇಟ್ ಪಾಸ್ ಕೊಟ್ಟು ಕಳುಹಿಸೋದು ಖಚಿತ ಎನ್ನುವ ಮಾತು ಕೇಳಿಬರ್ತಿದೆ. ಅದಕ್ಕೆ ಕಾರಣ ಈ‌ ಘಟನೆಯಿಂದ ಚಂದ್ರಚೂಡ್ ಮೇಲೆ ಸುದೀಪ್ ಅವರಿಗಿರುವ ಕೋಪ ಅಂತ ಭಾವಿಸಬೇಕಿಲ್ಲ. ಯಾಕಂದ್ರೆ ಈ ವಾರ ನಾಮಿನೇಟ್ ಆದವರ ಪೈಕಿ ಚಂದ್ರಚೂಡ್ ಕೂಡ ಒಬ್ಬರು. ಶುಭಾಪುಂಜಾ, ಪ್ರಶಾಂತ್ ಸಂಬರ್ಗಿ, ಶಮಂತ್, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ ಈ ಐವರು ಈ ವಾರ ನಾಮಿನೇಟ್ ಆಗಿದ್ದಾರೆ. ಈ ಐವರಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರೇ ಕಿಕ್ ಔಟ್ ಆಗೋದು ಎನ್ನುವ ಸುದ್ದಿ ಹಲ್ ಚಲ್ ಎಬ್ಬಿಸುತ್ತಿದೆ. ಅದಕ್ಕೆ ಬೆಟ್ಟು ತೋರಿಸಿದ ವಿವಾದವೂ ಒಂದು.

ಅಂದ್ಹಾಗೇ ಚಕ್ರವರ್ತಿ ಚಂದ್ರಚೂಡ್ ಫಿನಾಲೆಗೆ ತಲುಪಲಿದ್ದ ಕ್ಯಾಂಡಿಡೇಟ್. ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಮಿಸ್ಸಾಗಬಹುದು. ಆದರೆ ಫೈನಲ್ ತಲುಪೋದು ಗ್ಯಾರಂಟಿ ಎನ್ನುವ ಮಾತು ಜನರ ಬಾಯಲ್ಲಿ ಬಂದಿತ್ತು. ಆದ್ರೀಗ, ಅದೇ ಜನರ ಬಾಯಲ್ಲಿ ಚಕ್ರವರ್ತಿಗೆ ಗೇಟ್ ಪಾಸ್ ಕೊಡಿಸುವ ಮಾತು ಕೇಳಿಬರ್ತಿದೆ. ಅದಕ್ಕೆ ಕಾರಣ ಪಿಂಕಿ ಅಲಿಯಾದ್ ಪ್ರಿಯಾಂಕಾ ತಿಮ್ಮೇಶ್ ಬಿಗ್ ಬಾಸ್ ನಿಂದ ಕಿಕ್ ಔಟ್ ಆದಾಗ ಚಕ್ರವರ್ತಿ ಮಧ್ಯದ ಬೆರಳನ್ನು ಅಶ್ಲೀಲವಾಗಿ ತೋರಿಸಿದ್ದಿರೆನ್ನುವುದೇ ಕಾರಣ. ಇಷ್ಟಕ್ಕೂ ಚಂದ್ರಚೂಡ್ ಅವರಿಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಅವರ ಮೇಲೆ ಅದ್ಯಾಕೆ ಅಷ್ಟು ಕೋಪವೋ ಗೊತ್ತಿಲ್ಲ. ಅವರನ್ನು ಕಂಡಾಗೆಲ್ಲ ಗುರ್ ಎನ್ನುತ್ತಿದ್ದರು. ಕೊನೆಗೆ ಆ ಸಿಟ್ಟು ತೋರಿಸಿಯೇ ಬಿಟ್ಟರು. ಆದರೆ ಅದರ ಪರಿಣಾಮ ಈಗ ಬೇರೆಯೇ ಆಗಿದೆ.

ಹೆಣ್ಣುಮಕ್ಕಳಿಗೆ ತುಂಬಾ ಗೌರವ ಕೊಡ್ತೀನಿ ಅಂತ ಗರ್ವದಿಂದ ಹೇಳಿಕೊಳ್ಳುವ ಚಕ್ರವರ್ತಿಯವರು ಅಶ್ಲೀಲ ಸನ್ನೆ ತೋರಿಸಿದ್ದಕ್ಕೆ ಹೆಣ್ಣು ಮಕ್ಕಳು ಮಾತ್ರವಲ್ಲ ರಾಜ್ಯದ ಜನರು ಕೆಂಡಾಮಂಡಲವಾದರು. ಬಿಗ್ ಬಾಸ್ ಕಿಚ್ಚ ಕೂಡ ಇದನ್ನ ಖಂಡಿಸಿದರು. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಕೊನೆಗೆ ಚಕ್ರವರ್ತಿಯವರು ನನ್ನಿಂದ ತಪ್ಪಾಯ್ತು ಅಂತ ಒಪ್ಪಿಕೊಂಡರು. ಆದರೆ, ರಾಜ್ಯದ ಜನರು‌ ಚಕ್ರವರ್ತಿಯವರ ಕ್ಷಮೆಯನ್ನ ಮನ್ನಿಸ್ತಾರಾ ? ಹೆಣ್ಣು ಮಕ್ಕಳ ಶಾಪದಿಂದ ಚಂದ್ರಚೂಡ್‌ ವಿಮುಕ್ತರಾಗುತ್ತಾರಾ? ಸದ್ಯಕ್ಕೆ ನಾಮಿನೇಟೆಡ್‌ ಆಗಿರುವ ಚಂದ್ರಚೂಡ್‌ ವಿಲಿಮಿನೇಟ್‌ ಆಗೋದ್ರಿಂದಲೂ ಈ ವಾರ ತಪ್ಪಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ಈ ವಾರ ಎಲಿಮಿನೇಟೆಡ್‌ ಪ್ರಕ್ರಿಯೆಯೇ ಇಲ್ಲ ಎನ್ನಲಾಗಿದೆ. ಆದರೆ ಮುಂದೆ?

ಈ‌ ನಡುವೆ ಕಿಚ್ಚನ ಅದೊಂದು ಮಾತು ಚಕ್ರವರ್ತಿ ಕಿಕ್ ಔಟ್ ಆಗೋ ದು ಪಕ್ಕಾ ಎನ್ನುವುದಕ್ಕೆ ರೆಕ್ಕೆ ಪುಕ್ಕ ಕಟ್ಟುತ್ತಿದೆ. ಮುಂದಿನ ವಾರ ನೀವಿದ್ದರೆ ಕ್ಲಿಪ್ಪಿಂಗ್ಸ್ ಸಮೇತ ತೋರಿಸ್ತೀನಿ ಅಂತ ಕಿಚ್ಚ ಹೇಳಿದ ಮಾತನ್ನ ಸೂಕ್ಷ್ಮವಾಗಿ ಗಮನಿಸಿದರೆ ಮುಂದಿನ‌ ವಾರ ಅಲ್ಲ ಇವತ್ತು ರಾತ್ರಿಯಿಂದಲೇ ಚಕ್ರವರ್ತಿಯವರಿಗೆ ದೊಡ್ಮನೆಯಲ್ಲಿ ಜಾಗವಿಲ್ಲ ಎನ್ನುವ ಅನುಮಾನ‌ ಮೂಡ್ತಿದೆ.‌ ಈ‌ ಅನುಮಾನ ಬರೀ ಅನುಮಾನ ವಾಗಿ ಉಳಿಯುತ್ತಾ? ಜಸ್ಟ್ ವೇಯ್ಟ್ ಅಂಡ್ ವಾಚ್.

Categories
ಸಿನಿ ಸುದ್ದಿ

ಆ ಜಾಗಕ್ಕೆ ಹೋಗಿ ಬಂದರೆ ದಾಸನಿಗೆ ನೆಮ್ಮದಿ; ಪ್ರತಿವರ್ಷ ಅಲ್ಲಿಗೆ ಭೇಟಿಕೊಡ್ತಾರೆ ದಚ್ಚು !

ಈ ಜಗತ್ತಲ್ಲಿ ದುಡ್ಡು ಕೊಟ್ಟರೇ ಏನ್ ಬೇಕಾದರೂ ಸಿಗುತ್ತೆ ಆದರೆ ಆ ಎರಡನ್ನು ಹೊರತುಪಡಿಸಿ. ಯಾವುದು ಆ ಎರಡು ಅಂದರೆ ಹೆತ್ತವರ ನಿಷ್ಕಲ್ಮಶ ಪ್ರೀತಿ ಮತ್ತು ನೆಮ್ಮದಿ. ಈ ವಿಚಾರ ನಿಮ್ಮೆಲ್ಲರಿಗೂ ಗೊತ್ತೆಯಿರುತ್ತೆ ಬಿಡಿ. ಅಷ್ಟಕ್ಕೂ, ನಾವ್ ಈಗ ಹೇಳೋದಕ್ಕೆ ಹೊರಟಿರುವುದು ದಚ್ಚು ನೆಮ್ಮದಿ ಅರಸಿ ಹೊರಟ ಜಾಗದ ಬಗ್ಗೆ

ಕಳೆದ ಕೆಲವು ದಿನಗಳಿಂದ ಸಾರಥಿಯ ನೆಮ್ಮದಿ ಕದಡುವಂತಹ ಘಟನೆಗಳು ನಡೆಯುತ್ತಲೇ ಇವೆ. ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ ಪ್ರಕರಣದಿಂದ ಶುರುವಾದ ವಿವಾದ ದೊಡ್ಮನೆ ಆಸ್ತಿ ಮೇಲೆ ದಾಸ ಕಣ್ಣುಹಾಕಿದ್ದರು ಎಂಬಲ್ಲಿಗೆ ಬಂದುನಿಂತಿರುವುದನ್ನು ಇಡೀ ಕರುನಾಡು ನೋಡಿದೆ. ಯಾವುದು ಸತ್ಯ-ಯಾವುದು ಸುಳ್ಳು ಎಂಬುದು ತಿಳಿಯುತ್ತಿಲ್ಲ. ಬರೀ ಆರೋಪ-ಪ್ರತ್ಯಾರೋಪಗಳೇ ನಡೆಯುತ್ತಿವೆ. ಈ ಮಧ್ಯೆ ಚಾಲೆಂಜಿಂಗ್ ಚಕ್ರವರ್ತಿಯ ಹೆಸರಿಗೆ ಮಸಿ ಬಳಿಯುವ ಹಾಗೂ ತೇಜೋವಧೆ ಮಾಡುವಂತಹ ಕೆಲಸ ಆಗ್ತಿದೆಯೆಂದು ದಾಸನ ಭಕ್ತರು ಕೆಂಡಾಮಂಡಲಗೊಂಡಿದ್ದಾರೆ. `ಸತ್ಯಾನಾ ಧಫನ್ ಮಾಡುವ ಕಫನ್ ಇನ್ನೂ ಯಾರೂ ಕಂಡುಹಿಡಿದಿಲ್ಲ’ ಎನ್ನುತ್ತಾ ಗರ್ಜಿಸಿರುವ ಜಗ್ಗುದಾದ, ನೆಮ್ಮದಿ ಅರಸಿ ಆ ದಿವ್ಯಜಾಗಕ್ಕೆ ಭೇಟಿಕೊಟ್ಟಿದ್ದಾರೆ

ದಾಸ ದೇವರ ಮಗ ಅಪ್ಪಟ ದೈವಭಕ್ತ ಎಂಬುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಕಷ್ಟ-ದುಃಖ-ನೋವು-ನಲಿವು-ಸುಖ-ಸಂಭ್ರಮ ಏನೇ ಇರಲಿ ತಾಯಿ ಚಾಮುಂಡೇಶ್ವರಿಯ ಸನ್ನಿಧಿಗೆ ಭೇಟಿಕೊಟ್ಟು ದೇವಿಯ ಆಶೀರ್ವಾದ ಬೇಡುವ ದಾಸ, ಬೆಂಗಳೂರಿನ ಬಂಡಿಮಹಾಕಾಳಮ್ಮ, ಮಂಜುನಾಥಸ್ವಾಮಿ, ತಿರುಪತಿ ತಿಮ್ಮಪ್ಪ, ರಾಘವೇಂದ್ರಸ್ವಾಮಿಯನ್ನು ಆರಾಧಿಸುತ್ತಾರೆ. ಅದರಂತೇ, ತಮಿಳುನಾಡಿನ ತಿರುನಲ್ಲಾರ್‌ನಲ್ಲಿರುವ ಶನಿಮಹಾರಾಜನಿಗೆ ನಡೆದುಕೊಳ್ಳುತ್ತಾರೆ. ಪ್ರತಿವರ್ಷ ಶನಿಮಹಾತ್ಮ ದೇಗುಲಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಶನಿಮಹಾರಾಜನ ಸನ್ನಿಧಿಗೆ ಸಾರಥಿ ಪ್ರತಿವರ್ಷ ಭೇಟಿ !

ಪ್ರತಿವರ್ಷದಂತೆ ಈ ವರ್ಷವೂ ಸಾರಥಿ ತಮಿಳುನಾಡಿನ ತಿರುನಲ್ಲಾರ್‌ನಲ್ಲಿರುವ ಶನಿಮಹಾತ್ಮನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಸ್ನೇಹಿತರ ಜೊತೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿರುವ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿವಾದಗಳು ಒಂದಾದ ಮೇಲೊಂದರಂತೆ ಸುತ್ತಿಕೊಳ್ಳುತ್ತಿರುವ ಈ ಹೊತ್ತಲ್ಲಿ ದಿವ್ಯದೇಗುಲಕ್ಕೆ ದಚ್ಚು ಭೇಟಿಕೊಟ್ಟಿರುವುದರಿಂದ ನೆಮ್ಮದಿ ಅರಸಿ ದಾಸ ಶನಿಮಹಾತ್ಮನ ಸನ್ನಿಧಿಗೆ ತೆರಳಿದ್ದಾರೆಂದು ಸುದ್ದಿಯಾಗ್ತಿದೆ.

ಶನಿಮಹಾರಾಜನ ದರ್ಶನ ಮಾಡಿದರೆ ಶನಿಭಾದೆ ಇರುವುದಿಲ್ಲ ಎಂಬ ನಂಬಿಕೆಯಿದೆ. ದೈವಶಕ್ತಿಯ ಮೇಲೆ ಅಪಾರ ನಂಬಿಕೆಯಿಟ್ಟಿರುವ ದೇವರ ಮಗ ದಾಸ, ಬಂದದ್ದೆಲ್ಲಾ ಬರಲಿ ನಿನ್ನ ದಯೆಯೊಂದು ಇರಲೆಂದು ಬೇಡಿಕೊಂಡರ‍್ತಾರೆ. ತನ್ನೊಟ್ಟಿಗೆ ತನ್ನ ಸುತ್ತಮುತ್ತಲಿನವರನ್ನು ಕಾಪಾಡೆಂದು ಸದಾ ಬೇಡುವ ಸಾರಥಿಗೆ ತಿರುನಲ್ಲಾರ್‌ನಲ್ಲಿರುವ ನೆಲೆಸಿರುವ ಶನಿಮಹಾರಾಜ ತಥಾಸ್ತು ಎನ್ನದಿರಲು ಸಾಧ್ಯವೇ ನೀವೇ ಹೇಳಿ.

ಆರೋಪಗಳಿಂದ ಮುಕ್ತಿ ಸಿಗಲಿ ಸಾರಥಿಗೆ

ಸದ್ಯಕ್ಕೆ ದಚ್ಚು ಮೇಲೆ ಕೇಳಿಬರುತ್ತಿರುವ ಆರೋಪಗಳು ಹುಸಿಯಾಗಲಿ. ದಾಸನ ಹೆಸರಲ್ಲಿ ೨೫ ಕೋಟಿ ಲಪಟಾಯಿಸೋಕೆ ಸ್ಕೆಚ್ ಹಾಕಿದವರು ಮೊದಲು ತಗಲಾಕಿಕೊಳ್ಳಲಿ.
ಸಾರಥಿ-ಉಮಾಪತಿ ನಡುವೆ ಹುಳಿಹಿಂಡೋಕೆ ಪ್ರಯತ್ನಪಟ್ಟವರು ಯಾರೆಂಬ ಸತ್ಯ ತಿಳಿಯಲಿ. ಉಮಾಪತಿಯವರು ದಚ್ಚು ಜೊತೆ ಮುಂದಿನ ಸಿನಿಮಾ ಅನೌನ್ಸ್ ಮಾಡಲಿ. ಪ್ರೇಮ್ ಅಂಡ್ ರಕ್ಷಿತಾ ಪ್ರೇಮ್ ಜೊತೆ ದಚ್ಚು ಪಾರ್ಟಿ ಮಾಡುವ ಟೈಮ್ ಬರಲಿ. ಮೈಸೂರಿನ ಸ್ನೇಹಿತರ ಜೊತೆ ಮೊದಲಿನಂತೆ ಕುಳಿತು ಫಾರ್ಮ್ಹೌಸ್‌ನಲ್ಲಿ ಬಿರಿಯಾನಿ ಸವಿಯಲಿ.ಇಂದ್ರಜಿಂತ್ ಲಂಕೇಶ್ ಅವರ ಆರೋಪದಲ್ಲಿ ಸತ್ಯವಿದ್ದರೆ ಕಾನೂನು ಅದನ್ನು ಸಾಬೀತುಮಾಡಲಿ ನಂತರ ಏನಾಗ್ಬೇಕೋ ಅದು ಆಗುತ್ತೆ ಅದನ್ನು ಯಾರು ತಪ್ಪಿಸೋದಕ್ಕೆ ಆಗಲ್ಲ. ಅಲ್ಲಿವರೆಗೂ ಗಾಳಿಲಿ ಗುಂಡು ಹಾರಿಸೋದನ್ನು ಕಡಿಮೆ ಮಾಡ್ಲಿ ಎಲ್ಲರೂ ಅನ್ನೋದೇ ಸಿನಿಲಹರಿ ಆಶಯ

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!