Categories
ಸಿನಿ ಸುದ್ದಿ

ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನ ಕಟ್ಟಿಹಾಕಿದ ನಟಿ ಮಧುಬಾಲಾ ; ಬಾಲಿವುಡ್ ಮರ್ಲಿನ್ ಮನ್ರೋಗೆ ಸಿಎಂ ಮನಸೋತ ಕಥೆ ರಿವೀಲ್ ಆಯ್ತಲ್ಲಾ !

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನ ಬಾಲಿವುಡ್ ಜಗತ್ತು ಕಂಡ ಅತ್ಯಾದ್ಬುತ ನಟಿ ಮಧುಬಾಲ ಕಟ್ಟಿಹಾಕಿದ ಕಥೆ ಕೊನೆಗೂ ರಿವೀಲ್‌ ಆಗಿದೆ. ಅದು ಕಣ್ಣು ತಂಪಾಗಿಸುವ ಸೌಂದರ್ಯದಿಂದಲೋ ಅಥವಾ ಮನಸ್ಸು ಮುಟ್ಟುವ ಮನೋಜ್ಜ ಅಭಿನಯದಿಂದಲೋ ಎನ್ನುವ ರಹಸ್ಯ ಮಾತ್ರ ನಿಗೂಢವಾಗಿದೆ. ಆ ಗುಟ್ಟನ್ನು ಮಾತ್ರ ಸಿಎಂ ಬಿಟ್ಟುಕೊಟ್ಟಿಲ್ಲ. ಆದರೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ಆಲ್‌ ಟೈಮ್‌ ಫೆವರೀಟ್‌ ಮಧುಬಾಲಾ ಅಂತೆ !
ಎಲ್ಲಾ ನಟಿಮಣಿಯರು ಒಂದೇ ರೀತಿಯಾಗಿ ಇರುವುದಿಲ್ಲ. ಎಲ್ಲರ ಕಣ್ಣಿಗೆ ಒಂದೇ ತರನಾಗಿ ಕಾಣುವುದೂ ಇಲ್ಲ. ಕೆಲವು ನಟಿಯರು ಮಾದಕ ಮೈಮಾಟದಿಂದ ನೋಡುಗರನ್ನು ಅಟ್ರ್ಯಾಕ್ಟ್ ಮಾಡ್ತಾರೆ. ಇನ್ನೂ ಕೆಲವರು ಕಣ್ಣೋಟದಿಂದ ಕಟ್ಟಿಹಾಕ್ತಾರೆ. ಉಳಿದವರು ಅಭಿನಯದಿಂದ ನೋಡುಗರ ಮನಸೂರೆಗೊಳ್ತಾರೆ. ಆ ಮೂಲಕ ಆಲ್ ಟೈಮ್ ಫೇವರಿಟ್ ನಟಿಯಾಗಿ ಉಳಿದುಬಿಡ್ತಾರೆ. ಹೀಗೆ ಅಚ್ಚಳಿಯದ ಛಾಪು ಒತ್ತಿದ ಸುಂದರಿ ಮಧುಬಾಲರನ್ನು ಬೊಮ್ಮಾಯಿ ಸಾಹೇಬ್ರು ಖಾಸಗಿ ಮನರಂಜನೆ ವಾಹಿನಿಯ ಸ್ಪೆಷಲ್‌ ಕಾರ್ಯಕ್ರಮದಲ್ಲಿ ನೆನಪು‌ ಮಾಡಿಕೊಂಡಿದ್ದಾರೆ.

ಹೌದು, ರಂಭೆ- ಊರ್ವಶಿ- ಮೇನಕೆಗಿಂತ ಮಿಗಿಲು ಅಂತ ಸಿಎಂ ಸಾಹೇಬ್ರು ಬಾಯ್ಬಿಟ್ಟು ಹೇಳಿಲ್ಲ ಅಷ್ಟೇ ಆದರೆ, ಮಧುಬಾಲ ಆಲ್‌ಟೈಮ್ ಫೇವರಿಟ್ ಹೀರೋಯಿನ್ ಎನ್ನುವುದನ್ನು ಜೀ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಹುಡುಗರು ನಿಮ್ಮ ಫೇವರಿಟ್ ನಾಯಕಿ ಬಗ್ಗೆ ಹೇಳಿ ಅಂದಾಗ ಕನ್ನಡದಲ್ಲಿ ಕಲ್ಪನಾ, ಭಾರತಿ, ಜಯಂತಿ. ಹಿಂದಿಯಲ್ಲಿ ಮಧುಬಾಲ ಎಂದಿದ್ದಾರೆ. ಇದೇ ವೇಳೆ ಡಾ. ರಾಜ್ ಕುಮಾರ್ ಅವರನ್ನೂ ಕೂಡ ಸ್ಮರಿಸಿಕೊಂಡಿದ್ದಾರೆ. ಮಧುಬಾಲ ಬಾಲಿವುಡ್ ಚಿತ್ರರಂಗ ಕಂಡ ಅಮೋಘ ಸುಂದರಿ, ಅತ್ಯದ್ಭುತ ನಟಿ.‌ ಈ‌ ನಟಿಯ ಹೆಸರು ಕೇಳಿದರೆ ಇವತ್ತಿನ ಅಂಕಲ್ ಗಳು ಮಾತ್ರವಲ್ಲ 16 ರ ಹದಿಹರೆಯದ ಯುವಕರು ಕೂಡ ದಡಕ್ಕನೆ ಎದ್ದುಕೂಡ್ತಾರೆ‌. ಕಣ್ಣುಕುಕ್ಕುವ ಚೆಲುವಿನಿಂದ- ನಯನ ಮನೋಹರ ಅಭಿನಯದಿಂದ ಬಾಲಿವುಡ್ ಆಳಿದ ಅಭಿನೇತ್ರಿಯ ಬಗ್ಗೆ ತಿಳಿದುಕೊಳ್ಳುವುದಕ್ಕೆ ಉತ್ಸುಕರಾಗ್ತಾರೆ.‌ ಅಷ್ಟರ ಮಟ್ಟಿಗೆ ಮಧುಬಾಲ ತಮ್ಮ ಛಾಪು‌ ಮೂಡಿಸಿ ಹೋಗಿದ್ದಾರೆ. ‌ಮಹಲ್,ಥರಾನಾ, ಮೊಘಲ್ ಇ ಅಜಾಮ್, ಲಾಲ್ ದುಪ್ಪಟ್ಟ ಅನಾರ್ಕಲಿ ಸಿನಿಮಾ ಮೂಲಕ ಜೀವಂತವಾಗಿದ್ದಾರೆ.

ಮಧುಬಾಲ ಹಿಂದಿ ಚಿತ್ರರಂಗದ ಮೋಸ್ಟ್ ಬ್ಯೂಟಿಫುಲ್ ಆಕ್ಟ್ರೆಸ್.‌ ಬಾಲಿವುಡ್ ಮಲ್ರಿನ್ ಮನ್ರೋ‌ ಅಂತನೇ ಖ್ಯಾತಿಗಳಿಸಿಕೊಂಡ ಮಧುಬಾಲ, ಭರ್ತಿ 20 ವರ್ಷಗಳ‌ ಕಾಲ‌ ಬೆಳ್ಳಿ ತೆರೆಯನ್ನಾಳಿದರು. 70 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು. ರಾಜ್ ಕಪೂರ್, ದೇವಾನಂದ್, ದಿಲೀಪ್ ಕುಮಾರ್, ಅಶೋಕ್ ಕುಮಾರ್ ರಂತಹ ದಿಗ್ಗಜರೊಟ್ಟಿಗೆ ಕುಣಿದರು. ಕೋಟ್ಯಾಂತರ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟರು. ಅಟ್ ದಿ ಸೇಮ್ ಟೈಮ್ ಪಡ್ಡೆಹೈಕ್ಳು- ಹುಡುಗರು- ಅಂಕಲ್ ಗಳ ನಿದ್ದೆಗೆಡಿಸಿದರು.

ಬಾಲನಟಿಯಾಗಿ‌ ಬಣ್ಣದ ಜಗತ್ತಿಗೆ ಎಂಟ್ರಿಕೊಟ್ಟ ಮಧುಬಾಲ‌,‌ ಅತೀ ಚಿಕ್ಕ ಅವಧಿಯಲ್ಲಿ ಒಂದಿಡೀ ಜನ್ಮಕ್ಕಾಗುವಷ್ಟು ಹೆಸರು ಮಾಡಿದರು. ನೇಮ್- ಫೇಮ್- ಆಸ್ತಿ- ಅಂತಸ್ತು- ಐಶ್ವರ್ಯ ಎಲ್ಲವೂ ಸಂಪಾದಿಸಿದರು. ಲವ್ ಲೈಫ್ ನಲ್ಲಿ ಮುಳುಗಿ ಮುಳುಗಿ ಎದ್ದರು. ಎಷ್ಟು ಲವ್ವಾಯ್ತೋ ಅಷ್ಟೇ ಬ್ರೇಕಪ್ಸ್ ಆಯ್ತು.‌ ಕಿಶೋರ್ ಕುಮಾರ್ ಜೊತೆ ಸಂಸಾರವೂ ನಡೆಸಿದರು. ಕೊನೆಗೆ ಪರ್ಸನಲ್ ಲೈಫ್ ಕೂಡ ಚಿಂದಿ ಚಿತ್ರಾನ್ನ‌ ಆಗೋಯ್ತು. ಖಿನ್ನತೆಗೊಳಗಾದ ಮಧುಬಾಲ ಒಂಭತ್ತು ವರ್ಷಗಳ ಕಾಲ ಹಾಸಿಗೆಯಲ್ಲೇ ನರಳಿದರು.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲಿ ಬೆಂಡಾದರು. 36 ನೇ ವಯಸ್ಸಿಗೆ ಜಗತ್ತಿಗೆ ಗುಡ್ ಬೈ ಹೇಳುವಂತಾಯ್ತು. ಪ್ರೀತಿ ಪ್ರೇಮ ಪ್ರಣಯ ಅಂತ ಪದೇ ಪದೇ ಹಾರ್ಟ್ ನ ಸೇಲ್ ಗಿಟ್ಟಿದ್ದೇ ಬಿಟೌನ್ ಮಲ್ರಿನ್ ಮನ್ರೋ ಬಾಳಿಗೆ ಮುಳುವಾಯ್ತು. ದುರಂತ ಅಂತ್ಯಕಾಣುವಂತಾಯ್ತು. ಆದರೆ, ಮಧುಬಾಲ ಸದಾ ಜೀವಂತ ದಂತಕತೆ ಎನ್ನುವುದು ಮಾತ್ರ ಸತ್ಯಸ್ಯಸತ್ಯ. ಇಂತಹ ಚಿರಕಾಲದ ಜವ್ವನೆ ಮಧುಬಾಲ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಮನಸು ಗೆದಿದ್ದು ಕೂಡ ವಿಶೇಷ.

  • ಎಂಟರ್ ಟೈನ್ಮೆಂಟ್‌‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಸ್ಯಾಂಡಲ್‌ವುಡ್‌ಗೆ ‘ರೌಡಿ ಬೇಬಿ’ ಖ್ಯಾತಿಯ ನಟಿ ಬರ್ತಿರೋದು ನಿಜ, ಆದ್ರೆ ಅಬ್ಬಕ್ಕನಾಗಿ ಅಲ್ಲ , ಹಾಗಾದ್ರೆ ಯಾವ ಸಿನ್ಮಾಕ್ಕೆ ಗೊತ್ತಾ ?

ನಿರ್ದೇಶಕ ಮಂಸೋರೆ ಮತ್ತೊಂದು ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಆ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ ಗೆ ಸೌತ್‌ ಇಂಡಸ್ಟ್ರಿಯ ಫೇಮಸ್‌ ನಟಿ ಸಾಯಿ ಪಲ್ಲವಿ ಬರ್ತಿದ್ದಾರೆ. ಹಾಗಾದ್ರೆ ಆ ಸಿನಿಮಾ ಯಾವುದು? ಅದರಲ್ಲಿ ಸಾಯಿ ಪಲ್ಲವಿ ಕ್ಯಾರೆಕ್ಟರ್‌ ಏನು? ಆ ಡಿಟೈಲ್ಸ್‌ ಇಲ್ಲಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಮೊನ್ನೆಯಷ್ಟೇ ಮದುವೆಯಾದರು. ಅವರ ಮದುವೆಯ ಜತೆಗೆಯೇ ಮತ್ತೊಂದು ಕಾರಣಕ್ಕೂ ಸಿಕ್ಕಾಪಟ್ಟೆ ಸುದ್ದಿಯಾದರು. ಅದು ಸೌತ್‌ ನಟಿ, ಸಹಜ ಸುಂದರಿ ಸಾಯಿ ಪಲ್ಲವಿ ವಿಚಾರಕ್ಕೆ. ಹಾಗಂತ ಅದೇನಾದ್ರೂ ಮಂಸೋರೆ ಅವರ ಮದುವೆಗೆ ಲಿಂಕ್‌ ಇತ್ತಾ ಅಂತ ಕಿವಿ ಅರಳಿಸಬೇಡಿ, ಸಾಯಿ ಪಲ್ಲವಿ ವಿಚಾರ ಇಲ್ಲಿ ಸುದ್ದಿ ಆಗಿದ್ದು ಮಂಸೋರೆ ನಿರ್ದೇಶನದ ಹೊಸ ಸಿನಿಮಾಕ್ಕೆ ಸಂಬಂಧಿಸಿದಂತೆ. ಹೌದು, ಅವರ ಹೊಸ ಸಿನಿಮಾದ ಮೂಲಕ ʼಪ್ರೇಮ್ಂʼ ಚಿತ್ರದ ಖ್ಯಾತಿಯ ಸೌತ್‌ ನಟಿ, ಸಹಜ ಸುಂದರಿ ಸಾಯಿ ಪಲ್ಲವಿ ಸ್ಯಾಂಡಲ್‌ವುಡ್‌ಗೆ ಬರ್ತಿದ್ದಾರೆ. ಮಂಸೋರೆ ಸಿನಿಮಾ, ಸಾಯಿ ಪಲ್ಲವಿ ಎಂಟ್ರಿ ಅಂದಾಕ್ಷಣ ʼರಾಣಿ ಅಬ್ಬಕ್ಕʼ ಸಿನಿಮಾಕ್ಕಾ ಅಂತ ಕುತೂಹಲ ಮೂಡುವುದು ಇಲ್ಲಿ ಅಷ್ಟೇ ಸಹಜ. ಯಾಕಂದ್ರೆ ʼಆಕ್ಟ್‌ ೧೯೭೮ʼ ಚಿತ್ರದ ನಂತರ ನಿರ್ದೇಶಕ ಮಂಸೋರೆ ಅವರು ಅನೌನ್ಸ್‌ ಮಾಡಿದ ಸಿನಿಮಾ ʼರಾಣಿ ಅಬ್ಬಕ್ಕʼ.

ಕಡಲ ತಡಿಯ ಉಲ್ಲಾಳದ ರಾಣಿ ಅಬ್ಬಕ್ಕನ ಇತಿಹಾಸ ಕುರಿತು ಅವರು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅಬ್ಬಕ್ಕನ ಪಾತ್ರ ಅಂದ್ರೆ ಅದೊಂದು ಸಖತ್‌ ಪವರ್‌ ಫುಲ್‌ಕ್ಯಾರೆಕ್ಟರ್. ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಯೋಧೆ. ಹಾಗಾಗಿ ಅದನ್ನು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಬಾರದೇಕೆ ಅನ್ನೋ ಲೆಕ್ಕಚಾರದಲ್ಲಿ ಮಂಸೋರೆ ಇದ್ದಾರೆ. ಹಾಗಾಗಿ ಸೌತ್‌ ಸುಂದರಿ ಸಾಯಿ ಪಲ್ಲವಿ ಅವರನ್ನು ಸ್ಯಾಂಡಲ್‌ವುಡ್‌ಗೆ ಕರೆತರೋದಿಕ್ಕೆ ಹೊರಟಿರಬಹುದಾ ಎನ್ನುವ ಸುದ್ದಿಗಳು ಹರದಾಡಿದವು. ಯಾಕಂದ್ರೆ ʼರಾಣಿ ಅಬ್ಬಕ್ಕʼ ಅನ್ನೋದು ಬಿಗ್‌ ಪ್ರಾಜೆಕ್ಟ್.‌ ಹಾಗೆಯೇ ಬಿಗ್‌ ಬಜೆಟ್‌ ಸಿನಿಮಾ ಕೂಡ. ಮಂಸೋರೆ ಅವರೇ ಹೇಳಿಕೊಂಡ ಪ್ರಕಾರ, ಕಥೆ ಮತ್ತು ನಿರ್ಮಾಣದಲ್ಲಿ ದೊಡ್ಡ ಕ್ಯಾನ್ವಾಸ್‌ ಇರುವಂತಹ ಸಿನಿಮಾ. ಸದ್ಯಕ್ಕೆ ಅದೇ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆಯೇ ಅವರ ನಿರ್ದೇಶನದ ಸಿನಿಮಾಕ್ಕೆ ಸಾಯಿ ಪಲ್ಲವಿ ಬರ್ತಿದ್ದಾರೆ ಅಂದಾಗ ತಕ್ಷಣಕ್ಕೆ ಎಲ್ಲರಿಗೂ ನೆನಪಾಗಿದ್ದು ಮಂಸೋರೆ ಅವರ ಫ್ಯೂಚರ್‌ ಪ್ರಾಜೆಕ್ಟ್‌ ರಾಣಿ ಅಬ್ಬಕ್ಕ .

ಅಧಿಕೃತ ಮಾಹಿತಿ ಪ್ರಕಾರ ಸಾಯಿ ಪಲ್ಲವಿ ಮತ್ತೊಂದು ಹೊಸ ಸಿನಿಮಾಕ್ಕಾಗಿ. ಬರ್ತಿದ್ದಾರೆನ್ನುವುದು ಸುದ್ದಿ. ಆದರೆ ಅದೆನ್ನು ಮಾತುಕತೆ ಹಂತದಲ್ಲಿದೆ ಅನ್ನೋದು ನಿರ್ದೇಶಕ ಮಂಸೋರೆ ಹೇಳುವ ಮಾತು. ” ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಹೊತ್ತಿಗೆ ನಾನು ಈಗಾಗಲೇ ಅನೌನ್ಸ್‌ ಮಾಡಿದ್ದ ʼರಾಣಿ ಅಬ್ಬಕ್ಕʼ ಸಿನಿಮಾವೇ ಶುರುವಾಗಬೇಕಿತ್ತು. ಕಾರಣಾಂತರಗಳಿಂದ ಅದು ಒಂದಷ್ಟು ತಡವಾಗುತ್ತಿದೆ. ಹಾಗಾದ್ರೆ ಶುರುವಾಗೋದದ್ರು ಯಾವಾಗ, ಅದಿನ್ನುನನಗೂ ಅಂಂದಾಜು ಆಗುತ್ತಿಲ್ಲ. ಕೊರೋನಾ ಕಾರಣ ಮೊದಲು ಬಂದಿದ್ದ ನಿರ್ಮಾಪಕರು ಅಷ್ಟು ದೊಡ್ಡ ಪ್ರಾಜೆಕ್ಟ್‌ ಈಗ ಬೇಡ ಅಂತಿದ್ದಾರೆ. ಹಾಗಂತ ನಂಗೆ ಅದನ್ನು ಬಿಡೋದಿಕ್ಕೆ ಮನಸಿಲ್ಲ. ಅದೇ ಕಾರಣಕ್ಕೆ ಈಗ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜತೆಗೆ ಮಾತುಕತೆ ನಡೆದಿದೆ. ನಾನು ಹೋಗಿ ಅಪ್ರೋಚ್‌ ಮಾಡಿದ್ದೆ ಅನ್ನೋದಿಕ್ಕಿಂತ ಆ ಸಂಸ್ಥೆಯೇ ಆಸಕ್ತಿ ತೋರಿದೆ. ಇನ್ಸಿಯಲಿ ಒಂದಷ್ಟು ಮಾತುಕತೆ ನಡೆದಿದೆ. ಫೈನಲ್‌ ಅಂತ ಆಗಿಲ್ಲ. ಅದು ಯಾವಾಗೋ ನಂಗು ಗೊತ್ತಿಲ್ಲ. ಈ ನಡುವೆಯೇ ನಂಗೆ ಗೊತ್ತಿದ್ದ ನಿರ್ಮಾಪಕ ರೊಬ್ಬರು ಒಂದು ಆವರೇಜ್‌ ಬಜೆಟ್‌ ನಲ್ಲಿ ಒಂದೊಳ್ಳೆಯ ಸಿನಿಮಾ ಮಾಡೋಣ ಅಂತ ಬಂದರು. ಆಗಲೇ ಒಂದು ಕಥೆ ಸಿದ್ದಪಡಿಸಿ ಟ್ಟುಕೊಂಡಿದ್ದೆ. ಅದನ್ನೆ ಅವರಿಗೆ ಹೇಳಿದೆ. ಅದು ಮಹಿಳಾ ಪ್ರಧಾನ ಕಥೆ. ಅದಕ್ಕೆ ಸಾಯಿ ಪಲ್ಲವಿಯಾದ್ರೆ ಚೆನ್ನಾಗಿತ್ತಲ್ವೇ ಅಂತ ಅವರೇ ಹೇಳಿದ್ರು. ಆ ಮೂಲಕ ಸಾಯಿ ಪಲ್ಲವಿ ಅವರನ್ನು ಫೋನ್‌ ಮೂಲಕ ಸಂಪರ್ಕ ಮಾಡಿ, ಸ್ಕ್ರಿಫ್ಟ್‌ ಕಳುಹಿಸಿದ್ದೇನೆ. ಅವರಿಗೆ ಇಷ್ಟವೂಆಗಿದೆ. ಆದರೆ ಫೈನಲಿ ನಮಗೆ ಹೊಂದಾಣಿಕೆ ಆಗುವಂತಹ ಬಜೆಟ್‌ ನಲ್ಲಿ ಅವರು ಅಭಿನಯಸಲು ಒಪ್ಪಿಕೊಳ್ಳಬೇಕು ಅಲ್ವಾ? ಅದಷ್ಟೇ ಬ್ಯಾಲೆನ್ಸ್‌ ಇದೆ ಎನ್ನುತ್ತಾರೆ ನಿರ್ದೇಶಕ ಮಂಸೋರೆ.

ಅವರೇ ಹೇಳುವ ಹಾಗೆ ಒಂದು ಲೆಕ್ಕದಲ್ಲಿ ಸೌತ್‌ ಬ್ಯುಟಿ, ಸಹಜ ಸುಂದರಿ ಸಾಯಿ ಪಲ್ಲವಿ ಕನ್ನಡಕ್ಕೆ ಬರುವುದು ಗ್ಯಾರಂಟಿ ಇದೆ. ಈಗಾಗಲೇ ಮಲಯಾಳಂ ಜತೆಗೆ ತಮಿಳು, ತೆಲುಗು ಅಂತ ಸಿಕ್ಕಾಪಟ್ಟೆ ಸೌಂಡ್‌ ಮಾಡಿರುವ ಈ ನಟಿ, ಕನ್ನಡದಲ್ಲಿ ಹೇಗೆಲ್ಲ ಸಂಚಲನ ಸೃಷ್ಟಿಸಬಹುದು ಎನ್ನುವುದು ಮುಂದಿನ ದೊಡ್ಡ ಕ್ಯೂರಿಯಾಸಿಟಿಯ ಸಂಗತಿ. ಉಳಿದಂತೆ ಮಂಸೋರೆ ನಿರ್ದೇಶನದ ಈ ಹೊಸ ಸಿನಿಮಾಕ್ಕೆ ಇನ್ನು ಟೈಟಲ್‌ ಫಿಕ್ಸ್‌ ಆಗಿಲ್ವಂತೆ. ಟೆಕ್ನಿಷಿಯನ್‌ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಆಗಬೇಕಿದೆಯಂತೆ. ಇದೆಲ್ಲ ಆದರೆ, ಶೂಟಿಂಗ್‌ ಶುರುವಾಗುವುದು ಖಚಿತವಂತೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ
Categories
ಸಿನಿ ಸುದ್ದಿ

ದಸರಾ- ದೀಪಾವಳಿ ಹಬ್ಬಕ್ಕಿಂತ ಅದ್ಧೂರಿ ಕಿಚ್ಚನ ಹುಟ್ದಬ್ಬ ; ಮಾಣಿಕ್ಯನಿಗೆ ಅಭಿಮಾನಿ ದೇವರುಗಳಿಂದ ಬಿಗ್ ಸಪ್ರೈಸ್ !

ನಟ ಸುದೀಪ್‌ ಫ್ಯಾನ್ಸ್‌ ರೆಡಿ ಆಗಿದ್ದಾರೆ. ಈ ಬಾರಿ ತಮ್ಮ ನೆಚ್ಚಿನ ಕಿಚ್ಚ ಸುದೀಪ್‌ ಅವರ ಹುಟ್ಟು ಹಬ್ಬವನ್ನು ತುಂಬಾ ಡಿಫೆರೆಂಟ್‌ ಆಗಿ ಆಚರಿಸಲು ಸಿದ್ಧತೆ ನಡೆಸಿದೆ. ಅದು ಹೇಗೆ? ಇಲ್ಲಿದೆ ಫುಲ್‌ ಡಿಟೈಲ್ಸ್.

ಬಾದ್ ಷಾ ಎಷ್ಟು ಬ್ರಿಲಿಯಂಟ್ ಅಷ್ಟೇ ಕ್ಲೆವರ್ ಅವರ ಫ್ಯಾನ್ಸ್ ಅನ್ನೋದು ಮತ್ತೊಮ್ಮೆ ಪ್ರೂ‌ ಆಗಿದೆ.‌ ಕೊರೊನಾ ಅಟ್ಟಹಾಸ ಇನ್ನೂ ಕಮ್ಮಿಯಾಗದ ಕಾರಣ ಈ ವರ್ಷವೂ ಬರ್ತ್ ಡೇ ಆಚರಣೆ ಬೇಡ ಅಂತ ಕಿಚ್ಚ ಸುದೀಪ್ ಹೇಳುವ ಮೊದಲೇ ಅವರ ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದಾರೆ. ಗುಂಪು ಸೇರುವುದು ಬೇಡ, ಸರ್ಕಾರದ ನೀತಿ ನಿಯಮವನ್ನೂ ಉಲ್ಲಂಘಿಸುವುದು ಬೇಡ ಅಂತ ತೀರ್ಮಾನಕ್ಕೆ ಬಂದಿರುವ ಸಕಲ ಅಭಿಮಾನಿಗಳು ಮಾಣಿಕ್ಯನೇ ಹೆಮ್ಮೆ ಪಡುವಂತಹ ಕೆಲಸಕ್ಕೆ ಕೈಹಾಕಿದ್ದಾರೆ.

ಶಾಂತಿ ನಿವಾಸದ ಮುಂದೆ ಜಮಾಯಿಸೋಕೆ ಆಗಲ್ಲ, ಸಾಗರೋ ಪಾದಿಯಲ್ಲಿ ಜನ ಸೇರುವುದಕ್ಕೆ ಸರ್ಕಾರ ಪರ್ಮಿಷನ್ ಕೊಡಲ್ಲ. ದೀಪಣ್ಣನ ಹುಟ್ಟುಹಬ್ಬವನ್ನು ಆಚರಣೆ ಮಾಡೋದಕ್ಕೆ‌ ಅವಕಾಶ ಸಿಗಲ್ಲ. ಹಾಗಂತ, ಕೈಕಟ್ಟಿ ಕೂರೋದಕ್ಕೆ ಆಗುತ್ತಾ? ನೋ ವೇ ಚಾನ್ಸೇ ಇಲ್ಲ ಎಂದ ಬಾದ್ ಷಾ ಬಳಗ ಕರುನಾಡಿನ‌ ತುಂಬೆಲ್ಲಾ ಡಿಫೆರೆಂಟ್ ಆಗಿಮಾಣಿಕ್ಯನ ಹುಟ್ಟುಹಬ್ಬ ಆಚರಣೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದಾರೆ. ಜಿಲ್ಲೆ,ತಾಲೂಕು ಮಾತ್ರವಲ್ಲ ಪ್ರತಿ ಹಳ್ಳಿಯಲ್ಲೂ ರನ್ನ ಭೂಮಿಗೆ ಬಂದ ದಿನವನ್ನು ಸಂಭ್ರಮಿಸುವುದಕ್ಕೆ ಸಿದ್ದತೆ ಮಾಡಿಕೊ ಳ್ಳುತ್ತಿದ್ದಾರೆ‌.

ಕೋಟಿಗೊಬ್ಬ ಕಿಚ್ಚನ ಜನ್ಮದಿನವನ್ನು ಪ್ರತಿವರ್ಷ ಅವರ ಫ್ಯಾನ್ಸ್ ಅದ್ದೂರಿಯಾಗಿ ಸೆಲಬ್ರೇಟ್ ಮಾಡ್ತಾರೆ. ದಸರಾ ಹಾಗೂ ದೀಪಾವಳಿ ‌ಹೀಗೆ ಇರುತ್ತೆ ಅಂತ ಜಡ್ಜ್ ಮಾಡಬಹುದು‌ ಆದರೆ ವೀರಮದಕರಿಯ ಬರ್ತ್ ಡೇ ಹೀಗೆ ಇರುತ್ತೆ ಅಂತ ಜಡ್ಜ್ ಮಾಡೋದಕ್ಕೆ ಆಗಲ್ಲ. ಯಾಕಂ ದ್ರೆ ದೀಪಣ್ಣನ ಫ್ಯಾನ್ಸ್ ನಿರೀಕ್ಷೆಗೂ‌ ಮೀರಿದ ಪ್ರಿಪ್ರೇಷನ್ ಮಾಡಿಕೊಂ ಡಿರ್ತಾರೆ. ಹಳ್ಳಿ ಹಳ್ಳಿಯಲ್ಲಿ ಈ‌ ಭಾರಿ ಯಾವ ರೀತಿ ಆಚರಣೆ ಮಾಡ್ತಾರೋ ಗೊತ್ತಿಲ್ಲ. ಆದರೆ,‌ ಹಸಿದವರಿಗೆ-ನೊಂದವರಿಗೆ- ಕಷ್ಟದಲ್ಲಿರುವವರಿಗೆ ನೆರವಾಗುವುದಂತೂ ಸತ್ಯ.ಈ ಬಗ್ಗೆ ಕಿಚ್ಚನ ಅಭಿಮಾನಿ ಸಂಘದ ಮುಖ್ಯ ಅಧ್ಯಕ್ಷರಾಗಿರುವ ನವೀನ್ ಹಾಗೂ ಜಗದೀಶ್ ಈಗಾಗಲೇ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾದಿಂದ ಸಿನಿಮಾಗೆ ತನ್ನ ಅಭಿಮಾನಿಗಳಿಗೆ ಕಿಚ್ಚ ಸಪ್ರೈಸ್ ಕೊಡ್ತಾರೆ. ಅದರಂತೇ ತಮ್ಮ ಬಾಸ್ ಗೋಸ್ಕರ ಫ್ಯಾನ್ಸ್ ಕೂಡ ಸ್ಪೆಷಲ್ ಗಿಫ್ಟ್ ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ.‌ ಪ್ರತಿವರ್ಷ ಆರಾಧಕ ಸುದೀಪ್ ಹುಟ್ಟುಹಬ್ಬದಂದು ಫ್ಯಾನ್ಸ್ ಕಾಮನ್‌ ಡಿಪಿ ಡಿಸೈನ್ ಮಾಡಿಸ್ತಾರೆ.‌ ವಿಶೇಷ ಅತಿಥಿ ಕಡೆಯಿಂದ ಸಿಡಿಪಿ ರಿಲೀಸ್ ಮಾಡ್ಸಿ ಮಾಣಿಕ್ಯನಿಗೆ ಸಪ್ರೈಸ್ ಕೊಡ್ತಾರೆ. ಈ‌ಭಾರಿ ಕ್ರಿಕೆಟ್ ದಿಗ್ಗಜ ಅನಿಲ್‌ಕುಂಬ್ಳೆ ಅವ್ರಿಂದ ಕಾಮನ್‌ ಡಿಪಿ ಬಿಡುಗಡೆ ಮಾಡಿಸಲಿದ್ದಾರೆ. ಆಗಸ್ಟ್ 21 ರಂದು ಸೋಷಿಯಲ್ ಲೋಕದಲ್ಲಿ ಬಿಡುಗಡೆಯಾಗಲಿದ್ದು ವಿಕ್ರಾಂತ್ ರೋಣನ‌ ಕಾಮನ್ ಡಿಪಿ ಟ್ರೆಂಡ್ ಆಗಲಿದೆ.

ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬಕ್ಕೆ 12 ದಿನಗಳು ಬಾಕಿಯಿವೆ. ಸೆಪ್ಟೆಂಬರ್ 2 ರಂದು 49 ವರ್ಷ ಪೂರೈಸಲಿರುವ ಬಾದ್ ಷಾ, 50 ನೇ ವಸಂತಕ್ಕೆ ಕಾಲಿಡಲಿದ್ದಾರೆ. ದಸರಾ- ದೀಪಾವಳಿಯಷ್ಟೇ ರಂಗುರಂಗಾಗಿ ಬಚ್ಚನ್ ಬರ್ತ್ ಡೇ ನಡೆಯಲಿದೆ. ಮಾಣಿಕ್ಯ ಹೆಮ್ಮೆ ಪಡುವಂತಹ‌ ಕೆಲಸ ಕಾರ್ಯಗಳಿಗೆ ಅಭಿಮಾನಿ ದೇವರುಗಳು ಚಾಲನೆ ಕೊಡ್ತಾರೆ. ಇಡೀ ಸ್ಯಾಂಡಲ್ ವುಡ್ ತಿರುಗಿ‌ ನೋಡುವ ಕೆಲಸ ಮಾಡ್ತಾರೆ. ಸೋ ಸೆಪ್ಟೆಂಬರ್ 2 ರವರೆಗೂ ವೇಯ್ಟ್ ಅಂಡ್ ಸೀ.

  • ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಸಿಟ್‌ ರಾಜ ಸಿಟ್‌ : ವರಮಹಾಲಕ್ಷ್ಮಿ ದಿನ ಗಾಂಧಿ ನಗರದ ಮಂದಿನಾ ಬೆಚ್ಚಿ ಬೀಳಿಸಿದ ರಾಜಾಸೀಟ್‌ !

ಕಾಂತ ಕನ್ನಳ್ಳಿ, ಸ್ಯಾಂಡಲ್‌ ವುಡ್‌ನಲ್ಲಿ ಈ ಹೆಸರು ಕೇಳಿದಾಕ್ಷಣ ನೆನಪಾಗೋದು ʼಇರುವುದೆಲ್ಲವ ಬಿಟ್ಟುʼ ಚಿತ್ರ. ಯಾಕಂದ್ರೆ ಅವರು ನಿರ್ದೇಶನದ ಈ ಚಿತ್ರದಲ್ಲಿನ ಅಭಿನಯಕ್ಕೆ ಮೇಘನಾ ರಾಜ್‌ ಗೆ ಅತ್ಯುತ್ತಮ ನಟಿ ರಾಜ್ಯಪ್ರಶಸ್ತಿ ಬಂತು. ಆ ಚಿತ್ರದ ಒಂದಷ್ಟು ಗ್ಯಾಪ್‌ ನಂತರ ಯುವ ನಿರ್ದೇಶಕ ಕಾಂತ ಕನ್ನಳ್ಳಿ ಹೊಸದೊಂದು ಆಲೋಚನೆಯೊಂದಿಗೆ ಹೊಸದೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದಿಕ್ಕೆ ರೆಡಿಯಾಗಿದ್ದಾರೆ. ಹೊಸದೊಂದು ಪ್ರೊಡಕ್ಷನ್ ಹೌಸ್ ನಡಿ ಹೊಸಬರ ಜತೆಗೆ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಶುಕ್ರವಾರವಷ್ಟೇ ಲಾಂಚ್ ಆಗಿದೆ. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಇತ್ತು. ಅಂದು ಲಕ್ಷ್ಮಿ ಎಲ್ಲರ ಮನೆಗೆ ಬರ್ತಾಳೆ ಅನ್ನೋ ನಂಬಿಕೆ. ಶುಭ ದಿನ. ಅದೇ ಹಿನ್ನೆಲೆಯಲ್ಲಿ ಕಾಂತ ಕನ್ನಳ್ಳಿ ನಿರ್ದೇಶನದ ಹೊಸ ಸಿನಿಮಾದ ಫಸ್ಟ್ ಪೋಸ್ಟರ್ ರಿವೀಲ್ ಆಗಿದೆ.

ಚಿತ್ರದ ಹೆಸರು ʼರಾಜಾಸೀಟ್ʼ.‌ ನವರಸ ನಾಯಕ ಜಗ್ಗೇಶ್‌ ಅವರು ಈ ಪೋಸ್ಟರ್‌ ಲಾಂಚ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು ʼರಾಜಾಸೀಟ್‌ʼ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಮಡಿಕೇರಿಯ ರಾಜಾಸೀಟ್‌. ಕೊಡಗಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಇದು. ಹಾಗೆಯೇ ಇದಕ್ಕೆ ಹಿಸ್ಟ್ರಿಯ ಟಚ್‌ ಕೂಡ ಇದೆ. ಹಾಗಂತ ಈ ಚಿತ್ರ ತಂಡ ಅದೇ ʼರಾಜಾಸೀಟ್‌ʼ ಕುರಿತು ಸಿನಿಮಾ ಮಾಡ್ಲಿಕ್ಕೆ ಹೊರಟಿದೆಯಾ ? ಆ ಬಗೆಗಿನ ಕ್ಯೂರಿಯಾಟಿಸಿಗೆ ಇನ್ನು ಉತ್ತರ ಸಿಕ್ಕಿಲ್ಲ. ಆದರೆ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ನೋಡಿದರೆ ಮಡಿಕೇರಿ ʼರಾಜಾಸೀಟ್‌ʼಗೆ ಯಾವುದೇ ಕನೆಕ್ಷನ್‌ ಇದ್ದಂತೆ ಕಾಣುತ್ತಿಲ್ಲ. ಸುತ್ತಿಕೊಂಡಿರೋ ಕೈ, ಅದರಡಿ ಸಿಲುಕಿದ ಕಣ್ಣು, ಅಲ್ಲಿ ಗಮನ ಸೆಳೆಯುವ ನೀಲಿ ಆಕಾರದ ಕಣ್ಣು ಗುಡ್ಡೆ, ವಿಚಿತ್ರವಾಗಿರೋ ಅದರ ಲುಕ್ಕು….. ಹಾಗೆ ಸುಮ್ಮನ್ನೆ ಅದನ್ನೇ ದೃಷ್ಟಿಸಿ ನೋಡುತ್ತಾ ಹೋದರೆ ಒಂದು ಕ್ಷಣ ನಡುಕ ತರಿಸುವ ಹಾಗಿದೆ. ಇದೆಲ್ಲ ನೋಡಿದರೆ ಇದೊಂದು ಹಾರರ್‌ ಜಾನರ್‌ ಕಥೆ ಅನ್ನೋದು ನಿಮಗೂ ಅನ್ಸುತ್ತೆ. ಆ ಮಟ್ಟಿಗೆ ಈಗ ಸೋಷಲ್‌ ಮೀಡಿಯಾದಲ್ಲಿ ʼರಾಜಾಸೀಟ್‌ʼ ಚಿತ್ರದ ಪೋಸ್ಟರ್‌ ಸದ್ದು ಮಾಡುತ್ತಿದೆ.

ಎನ್‌ರೂಟ್‌ ಪ್ರೊಡಕ್ಷನ್‌ ಹೌಸ್‌ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಇದು. ಅಂದ ಹಾಗೆ ಎನ್‌ ರೂಟ್‌ ಪ್ರೊಡಕ್ಷನ್‌ ಹೌಸ್‌ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿರುವ ಹೊಸ ಸಂಸ್ಥೆ. ಮಾಧ್ಯಮ ಕ್ಷೇತ್ರದಲ್ಲಿಯೇ ಇದ್ದ ಶ್ರೀರಾಮ್‌ ಸೇರಿದಂತೆ ಎಳು ಜನ ಯುವಕರು ಇದರ ರೂವಾರಿಗಳು. ಸದ್ಯಕ್ಕೀಗ ಒಟಿಟಿ ನಲ್ಲಿ ಕನ್ನಡ ಸಿನಿಮಾಗಳ ಟ್ರೆಂಡ್‌ ಶುರುವಾಗಿದೆ. ಅದೇ ನಿಟ್ಟಿನಲ್ಲಿ ಒಟಿಟಿಗೆ ಅಂತಲೇ ರಾಜಾಸೀಟ್‌ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರಂತೆ. ಇನ್ನು ಸ್ಪೆಷಲ್‌ ಅಂದ್ರೆ ರಾಜಾಸೀಟ್‌ ಕಥೆ, ನಿರ್ಮಾಪಕರ ಶ್ರೀರಾಮ್‌ ಅವರದ್ದೇ. ನಿರ್ಮಾಣದ ಜತೆಗೆ ಈಗವರು ನಿರ್ದೇಶನಕ್ಕೂ ಬರುವ ಹಂಬಲ ಹೊತ್ತಿದ್ದಾರೆ. ಸದ್ಯಕ್ಕೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಯುವ ನಿರ್ದೇಶಕ ಕಾಂತ ಕನ್ನಳ್ಳಿಗೆ ಈ ಸಿನಿಮಾದ ನಿರ್ದೇಶನ ಜವಾಬ್ದಾರಿ ಹೊರಿಸಿದ್ದಾರಂತೆ.

ರಾಜಾಸೀಟ್‌ ಗೆ ಈಗ ಹೀರೋ ಮಾತ್ರ ಎಂಟ್ರಿ ಆಗಿದ್ದಾರೆ. ಆರವ್‌ ಗೌಡ ಅಲಿಯಾಸ್‌ ಆರವ್‌ ಲೋಕೇಶ್‌ ಈ ಚಿತ್ರದ ಮುಖ್ಯ ಮಾತ್ರಕ್ಕೆ ಸೆಲೆಕ್ಟ್‌ ಆಗಿದ್ದು, ಉಳಿದ ಕ್ಯಾರೆಕ್ಟರ್‌ ಗಳಿಗೆ ಇಷ್ಟರಲ್ಲಿಯೇ ಆರ್ಟಿಸ್ಟ್‌ ಸೆಲೆಕ್ಷನ್‌ ನಡೆಯಲಿದೆಯಂತೆ. ಬಹುತೇಕ ಹೊಸ ಆರ್ಟಿಸ್ಟ್‌ ಗಳನ್ನೇ ಪರಿಚಯಿ ಸುವ ಇರಾದೆ ಚಿತ್ರ ತಂಡಕ್ಕಿದೆ. ಟೆಕ್ನಿಷನ್‌ ಅಂತ ಬಂದಾಗ ಛಾಯಾಗ್ರ ಹಣಕ್ಕೆ ರಾಘವ್‌ ಎನ್ನುವವರನ್ನು ಸೆಲೆಕ್ಟ್‌ ಮಾಡಿಕೊಳ್ಳಲಾಗಿದೆ. ಇನ್ನು ಹದಿನೈದು ದಿನಗಳೊಳಗೆ ಚಿತ್ರಕ್ಕೆ ಬೇಕಾಗಿರುವ ಕಲಾವಿದರು ಹಾಗೂ ತಂತ್ರಜ್ಜರನ್ನು ಆಯ್ಕೆ ಮಾಡಿಕೊಂಡು, ಒಂದೇ ಶೆಡ್ಯೂಲ್‌ ನಲ್ಲಿ ಬೆಂಗಳೂರು, ಮೈಸೂರು ಹಾಗೂ ದುಬೈನಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ
Categories
ಸಿನಿ ಸುದ್ದಿ

ಅಭಿಮಾನಿ ದೇವರಿಗೆ ಶಿವಣ್ಣ ಕೊಟ್ಟರಲ್ಲ ಕಾಲ್ ಶೀಟ್ : ಸೆಂಚುರಿಸ್ಟಾರ್ 127 ಚಿತ್ರಕ್ಕೆ ಅಭಿಮಾನಿಯೇ ಆಕ್ಷನ್ ಕಟ್ !

ಅಭಿಮಾನಿಗಳೇ ನಮ್ಮನೆ ದೇವರು ಅಂತ ಅಣ್ಣಾವ್ರು ಹೇಳಿಕೊಟ್ಟು ಹೋಗಿದ್ದಾರೆ. ಅಪ್ಪಾಜಿಯ ಮಕ್ಕಳು ಕೂಡ ಅಭಿಮಾನಿಗಳಲ್ಲಿ ದೇವರನ್ನು ಕಾಣ್ತಿದ್ದಾರೆ. ಅದರಂತೇ ಭಕ್ತ ಸಮೂಹ ಕೂಡ ದೊಡ್ಮನೆ ಯ‌‌ನ್ನು ಹಾಗೂ‌‌ ದೊಡ್ಮನೆಯ ಕಲಾವಿದರನ್ನು ಆರಾಧಿಸಿಕೊಂಡು ಪೂಜಿಸಿಕೊಂಡು‌ ಹೋಗ್ತಿದ್ದಾರೆ. ಈ ದಿವ್ಯ ಅನುಬಂಧದ ಪಯಣದಲ್ಲಿ ಅಭಿಮಾನಿ‌ಯೊಬ್ಬರಿಗೆ ಶಿವಣ್ಣನನ್ನು ಡೈರೆಕ್ಟ್ ಮಾಡುವ ಅವಕಾಶ ಸಿಕ್ಕಿದೆ. ಅಷ್ಟಕ್ಕೂ, ಆ ಅದೃಷ್ಟವಂತ ಅಭಿಮಾನಿ ಬೇರಾರು ಅಲ್ಲ ಮಮ್ಮಿ ಖ್ಯಾತಿಯ ಯುವ ನಿರ್ದೇಶಕ ಕಮ್ ಶಿವಣ್ಣನ ಅಪ್ಪಟ‌ ಅಭಿಮಾನಿ ಲೋಹಿತ್.

ಪ್ರತಿಯೊಬ್ಬ ಅಭಿಮಾನಿಗೂ ಒಂದೊಂದು‌ ಕನಸು ಇರುತ್ತೆ. ಅದರಂತೇ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನು ಆರಾಧಿಸುವ ಲೋಹಿತ್ ಗೂ ಒಂದು ಡ್ರೀಮ್ ಇತ್ತು. ಕರುನಾಡ ಚಕ್ರವರ್ತಿಗೆ ಆಕ್ಷನ್ ಕಟ್ ಹೇಳಬೇಕು ಎನ್ನುವ ದಿವ್ಯಕನಸಿತ್ತು. ಆ ಕನಸು ಇಷ್ಟು ಬೇಗ ನೆರವೇರುತ್ತೆ ಅಂತ ಸ್ವತಃ ಲೋಹಿತ್ ಕೂಡ ಊಹೆ ಮಾಡಿರಲಿಲ್ಲ. ನಿರೀಕ್ಷೆಗೂ ಮೀರಿದ, ಊಹೆಗೂ ನಿಲುಕದ ಘಟನೆ ನಡೆಯಿತು. ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷವಾಗಿ ಶಿವಣ್ಣ ಹಾಗೂ ಲೋಹಿತ್ ಕಾಂಬಿನೇಷನ್‌ನಲ್ಲಿ ʼಸತ್ಯಮಂಗಳʼ ಸಿನಿಮಾ ಅನೌನ್ಸ್ ಕೂಡ ಆಗಿದೆ.

‘ಸತ್ಯಮಂಗಳ’ ಅಲಿಯಾಸ್‌ ʼಸತ್ಯ ಮಂಗಲʼ ಅನ್ನೋದು ತಮಿಳು ನಾಡಿನ ಗಡಿಯಲ್ಲಿರುವಂತಹ ಒಂದು ಕಾಡು ಪ್ರದೇಶ. ಆ ಕಾಡಿನ‌ ಹೆಸರನ್ನೇ ಟೈಟಲ್ಲಾಗಿಸಿರುವ ನಿರ್ದೇಶಕ ಲೋಹಿತ್, ಥ್ರಿಲ್ಲರ್ ಜಾನ್ನರ್‌ ನಲ್ಲಿ ಸಿನಿಮಾ ಕಟ್ಟಿಕೊಡುವುದಕ್ಕೆ ಹೊರಟಂತಿದೆ. ದಟ್ಟ ಅಭಯಾರಣ್ಯ ಹಾಗೂ ಕರಿಚಿರತೆ ಇರುವ ಪೋಸ್ಟರ್ ನೋಡಿದರೆ ಇದೊಂದು ಫ್ಯಾಂಟ ಮ್ ರೀತಿಯ ಸಿನಿಮಾ ಎಂದೆನಿಸುತ್ತೆ. ಈ ಹಿಂದೆ ಹಾರರ್- ಥ್ರಿಲ್ಲರ್ ಸಿನಿಮಾ ಮಾಡಿ ಗೆದ್ದಿರುವ, ʼಮಮ್ಮಿ ಸೇವ್ ಮೀʼ ಹಾಗೂ ʼದೇವಕಿʼ ಚಿತ್ರ ಮಾಡಿ ಸೈ‌ ಎನಿಸಿಕೊಂಡಿರುವ ನಿರ್ದೇಶಕ ಲೋಹಿತ್ ‘ಸತ್ಯಮಂಗಳ’ ಸಿನಿಮಾ ಮೂಲಕ ಬೆಚ್ಚಿಬೀಳಿಸ್ತಾರಾ ಕಾದುನೋಡಬೇಕು.

ಇನ್ನೂ ʼಸತ್ಯಮಂಗಳ ʼಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡ್ತಿದ್ದಾರೆ. ಶಿವಣ್ಣನ 123 ನೇ ʼಬೈರಾಗಿʼ ಚಿತ್ರಕ್ಕೆ ಇವರೇ ನಿರ್ಮಾಪ ಕರು. ಇನ್ನೇನು ಸಿನಿಮಾ ಮುಗಿತ್ತಲ್ಲ ಮುಂದೆ ಯಾವ ಸಿನಿಮಾ ಮಾಡ್ತೀರಾ ಸಾರ್ಥಕ್ ಅಂತ ಸೆಟ್ ನಲ್ಲಿ‌ ಶಿವಣ್ಣ ಕೇಳಿದ್ರಂತೆ. ಆಗ ನಿರ್ದೇಶಕ ಲೋಹಿತ್ ಹೇಳಿದ್ದ ಒನ್ ಲೈನ್ ಸ್ಟೋರಿನಾ ಸಾರ್ಥಕ್ ಶಿವಣ್ಣನಿಗೆ ಹೇಳಿದ್ರಂತೆ. ಕಥೆ ಕೇಳಿ ಥ್ರಿಲ್ಲಾದ ಹ್ಯಾಟ್ರಿಕ್ ಹೀರೋ ಲೋಹಿತ್ ನ ಕರೆಸಿ ಮಾತನಾಡಿದ್ದಾರೆ. ಸ್ಪಾಟ್ ನಲ್ಲೇ ಕಾಲ್ ಶೀಟ್ ಕೊಟ್ಟು ಮೂವೀ ಅನೌನ್ಸ್ ಮಾಡೋದಕ್ಕೆ ಹೇಳಿದ್ದಾರೆ. ಹೀಗಾಗಿ, ವರಮಹಾಲಕ್ಷ್ಮಿ ಹಬ್ಬದಂದು ಶಿವಣ್ಣನ 127 ನೇ ಚಿತ್ರವಾಗಿ ʼಸತ್ಯಮಂಗಳʼ ಘೋಷಣೆಯಾಗಿದೆ.‌

ಇಷ್ಟೆಲ್ಲಾ ಹೇಳಿದ್ಮೇಲೆ ಈ ಮ್ಯಾಟರ್ ಹೇಳಲೇಬೇಕು. ನಿರ್ದೇಶಕ ಲೋಹಿತ್ ಗೆ ಬಾಲ್ಯದಿಂದಲೂ ಸಿನಿಮಾ ಮೇಲೆ ಹುಚ್ಚಿತ್ತು .ನಿಧಾನಕ್ಕೆ ಸಿನಿಮಾನೇ ಉಸಿರು ಎನ್ನುವಂತಾಯ್ತು. ಲೋಹಿತ್ ಇಷ್ಟರ ಮಟ್ಟಿಗೆ ಮೂವೀ ಮೇಲೆ ವ್ಯಾಮೋಹ ಬೆಳೆಸಿಕೊಳ್ಳಲಿಕ್ಕೆ, ಮಾಯಲೋಕದ ಕಡೆ ಆಕರ್ಷಿತರಾಗಲಿಕ್ಕೆ ಕಾರಣ ಮತ್ತದೇ ಶಿವಣ್ಣ. ಹ್ಯಾಟ್ರಿಕ್ ಹೀರೋ ಸಿನಿಮಾಗಳು ಲೋಹಿತ್ ಮೇಲೆ ಗಾಡ ಪರಿಣಾಮ ಬೀರಿವೆಯಂತೆ. ಮುತ್ತಣ್ಣನ ಮೂವೀ ನೋಡಲಿಕ್ಕೆ ಥಿಯೇಟರ್ ಗೆ ಹೋಗಿ ಗಂಟೆಗಟ್ಟಲೆ ಕಾದು ಟಿಕೆಟ್ ಪಡೆಯುತ್ತಿದ್ದರಂತೆ. ಈ ಸಂಗತಿಯನ್ನ ತಮ್ಮ ಸೋಷಿಯಲ್ ಪೇಜ್ ನಲ್ಲಿ ಬರೆದುಕೊಂಡಿರುವ ಡೈರೆಕ್ಟರ್ ಲೋಹಿತ್, ನನ್ನ ಮುಂದಿನ ಸಿನಿಮಾ ಸತ್ಯಮಂಗಳಕ್ಕೆ ಶಿವಣ್ಣನೇ ಹೀರೋ. ಇಂತಹ ಕ್ಷಣಕ್ಕಾಗಿಯೇ ಚಿತ್ರರಂಗಕ್ಕೆ ಬಂದಿದ್ದು. ಈ ಅದ್ಬುತ ಖುಷಿಯ ಕ್ಷಣವನ್ನು ವರ್ಣಿಸೋಕೆ ಪದಗಳಿಂದ ಸಾಧ್ಯವಿಲ್ಲ ಎಂದಿದ್ದಾರೆ. ಮಹದಾಸೆ ಈಡೇರಿಸಿದ ಶಿವಣ್ಣನಿಗೆ ಸಲಾಂ ಎಂದಿರುವ ಅಭಿಮಾನಿ ಲೋಹಿತ್, ʼಸತ್ಯಮಂಗಳʼ ಮೂಲಕ ಅದ್ಯಾವ ರೀತಿ ಸುನಾಮಿ ಎಬ್ಬಿಸ್ತಾರೆ ಅಂತ ವೇಯ್ಟ್ ಮಾಡಿ‌ ನೋಡಬೇಕು.
– ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮಾಯಬಜಾರ್ ಗೆ ನಯಾ‌ ‘ಸೂಪರ್ ಸ್ಟಾರ್’ ಎಂಟ್ರಿ; Class- mass ಅಷ್ಟೇ ಅಲ್ಲಮ್ಮಾ ಹೈಕ್ಲಾಸ್ M acho m an-ಸ್ಯಾಂಡಲ್ವುಡ್ ಸೆನ್ಸೇಷನ್ !

ಮುಖಕ್ಕೆ ಬಣ್ಣ ಹಚ್ಚಬೇಕು, ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಬೇಕು.‌ ಬೆಳ್ಳಿಪರದೆ ಮೇಲೆ ದಿಬ್ಬಣ ಹೊರಡಬೇಕು.‌ ಅಭಿಮಾನಿ ದೇವರುಗಳ ಹೃದಯಕ್ಕೆ ಲಗ್ಗೆ ಇಡಬೇಕು.‌ ಬಿಗ್ ಸ್ಕ್ರೀನ್ ಹೀರೋ ಆಗಿ ಧಗಧಗಿಸಬೇಕು‌ ಅನ್ನೋದು ಅದೆಷ್ಟೋ ಕಲಾವಿದರ ದಿವ್ಯಕನಸು. ಆ ಕನಸಿನ ಸಾಕಾರಕ್ಕಾಗಿ ಬೆವರಲ್ಲ ರಕ್ತ ಸುರಿಸುವುದಕ್ಕೂ ರೆಡಿಯಿರುತ್ತಾರೆ. ಇದೆಲ್ಲದಕ್ಕೂ ತಯಾರಾಗಿಯೇ ರಿಯಲ್ ಸ್ಟಾರ್ ಉಪೇಂದ್ರ ರ ಅಣ್ಣನ ಮಗ ನಿರಂಜನ್ ಸುಧೀಂದ್ರ ʼಸೂಪರ್‌ ಸ್ಟಾರ್‌ʼ ಆಗಿ ಅಖಾಡಕ್ಕೆ ಧುಮ್ಕಿದ್ದಾರೆ. ಮೊದಲ ನೋಟದಲ್ಲೇ‌ ನೋಡುಗರನ್ನ ಅಟ್ರ್ಯಾಕ್ಟ್ ಮಾಡಿದ್ದಾರೆ.

https://youtu.be/NEe5POu5qLQ

ಅಂದ ಹಾಗೆ ‘ಸೂಪರ್ ಸ್ಟಾರ್’ ಅನ್ನೋದು ನಿರಂಜನ್ ಸುಧೀಂದ್ರ ಅಭಿನಯದ ಎರಡನೇ ಚಿತ್ರ. ʼನಮ್ಮ ಹುಡುಗರುʼ ಸಿನಿಮಾ ಮೂಲಕ ಡೆಬ್ಯೂ ಮಾಡ್ತಿದ್ದಾರೆ. ಈ ಮಧ್ಯೆ ʼಸೂಪರ್ ಸ್ಟಾರ್ʼ ಆಗಿ ಫೀಲ್ಡಿಗಿಳಿದಿದ್ದು, ವರಮಹಾಲಕ್ಷ್ಮಿ ಹಬ್ಬ ಪ್ಲಸ್ ನಿರಂಜನ್ ಹುಟ್ಟುಹಬ್ಬದ ವಿಶೇಷವಾಗಿ ‘ ಸೂಪರ್ ಸ್ಟಾರ್’ ಟೀಸರ್ ರಿಲೀಸ್ ಆಗಿದೆ.‌ಕ್ಲ್ಯಾಸಿ ಲುಕ್ ನಲ್ಲಿ ಕನ್ನಡಕ್ಕೊಬ್ಬ ಕ್ಲ್ಯಾಸಿಕ್ ಸ್ಟಾರ್ ಥರ ಕಾಣುವ ನಿರಂಜನ್ ನ ನೋಡಿ ರಿಯಲ್ ಸ್ಟಾರ್ ಉಪ್ಪಿ ಫಿದಾ‌ ಆಗಿದ್ದಾರೆ.ಯಂಗ್ ರಿಯಲ್ ಸ್ಟಾರ್ ನಿರಂಜನ್ ಹೈಟ್- ಪರ್ಸನಾಲಿಟಿ ಪಕ್ಕಾಯಿದೆ. ಸ್ಟೈಲಿಷ್ ಲುಕ್ ನಲ್ಲಿ ಮ್ಯಾಚೋಮ್ಯಾನ್ ರೀತಿ‌ ಕಾಣುವ ನಿರಂಜನ್ ತಮ್ಮ ಕುಟುಂಬ ಮಾತ್ರವಲ್ಲ ಸಿನಿಪ್ರೇಮಿಗಳು ಕೂಡ ಕ್ಲೀನ್‌ಬೋಲ್ಡ್ ಆಗುವಂತೆ ಮಾಡಿದ್ದಾರೆ. ನಿರ್ದೇಶಕ ವೆಂಕಟೇಶ್ ಬಾಬು ನಿರಂಜನ್ ರನ್ನ ಹೈಕ್ಲಾಸ್ ಆಗಿ ತೋರಿಸಿದ್ದಾರೆ.

ಕಳೆದ ವರ್ಷ ನಿರಂಜನ್ ಹುಟ್ಟಿದ ಹಬ್ಬಕ್ಕೆ ‘ ಸೂಪರ್ ಸ್ಟಾರ್’ ಟೈಟಲ್ ಜೊತೆಗೆ ಟೀಸರ್ ಲಾಂಚ್ ಮಾಡಲಾಗಿತ್ತು. ಯಶ್ ವಾಯ್ಸ್ ಕೊಟ್ಟಿದ್ದರು, ನಿರಂಜನ್ ತಮ್ಮ ಫಿಸಿಕ್ ನ ಎಕ್ಸ್ ಪೋಸ್ ಮಾಡಿದ್ದರು. ಆಗ ಎಲ್ಲರೂ ಕನ್ನಡಕ್ಕೆ ಮತ್ತೊಬ್ಬ ಮಾಸ್ ಹೀರೋ ಎಂಟ್ರಿ ಅಂತ ಮಾತನಾಡಿಕೊಂಡಿದ್ದರು. ಇಂದು ಅದೇ ಮಂದಿ‌ ನಿರಂಜನ್ ಕ್ಲಾಸ್ ಗೂ ಸೈ ಮಾಸ್ ಗೂ ಜೈ‌ ಮಟೀರಿಯಲ್ ಎನ್ನುತ್ತಿದ್ದಾರೆಸೂಪರ್ ಸ್ಟಾರ್ ಚಿತ್ರದಲ್ಲಿ ನಿರಂಜನ್ ಇಂಟರ್ ನ್ಯಾಷನಲ್ ಡ್ಯಾನ್ಸರ್ ಆಗಿ ಕಿಕ್ಕೇರಿಸಲಿದ್ದಾರೆ. ಮಾಡೆಲ್ ಕಮ್ ಸೋಷಿಯಲ್‌ ಮೀಡಿಯಾ ಸೆನ್ಸೇಷನ್ ಕ್ವೀನ್ ಜಾರಾ ಯಾಸ್ಮೀನ್ ನಿರಂಜನ್ ಗೆ ಜೋಡಿಯಾಗಿದ್ದಾರೆ. ಡ್ಯಾನ್ಸ್ ಧಮಾಕ- ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ – ಫ್ಯಾಮಿಲಿ ಸೆಂಟಿಮೆಂಟ್ ನ ಬ್ಲೆಂಡ್ ಮಾಡಿ ಒಂದೊಳ್ಳೆ ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಸಿನಿಮಾ ಮಾಡಲಿದ್ದಾರೆ. ಮೈಲಾರಿ ಎಂ ನಿರ್ಮಾಣದಲ್ಲಿ ಅದ್ದೂರಿಯಾಗಿಯೇ ಚಿತ್ರ ಮೂ ಡಿಬರಲಿದೆ. 50 ಪರ್ಸೆಂಟ್ ಚಿತ್ರೀಕರಣ ಮುಗಿದಿದ್ದು, ಸೆಪ್ಟೆಂಬರ್ ನಿಂದ ಮತ್ತೆ ಶೂಟಿಂಗ್ ಅಖಾಡಕ್ಕೆ ಧುಮ್ಕಲಿದ್ದಾರೆ.

ಕೊನೆಯಲ್ಲಿ ಒಂದು ಮಾತು, ಸಿನಿ ದುನಿಯಾದಲ್ಲಿ ಬೇಜಾನ್‌ ಸೈಕಲ್‌ ಹೊಡೆದು ಸಕ್ಸಸ್‌ ಆದ್ಮೇಲೆ ಕೆಲವು ಸೂಪರ ಸ್ಟಾರ್‌ ಆಗ್ತಾರೆ. ಆಗಿದ್ದಾರೆಯೂ ಕೂಡ. ಬಟ್‌ ಎಂಟ್ರಿಯಲ್ಲಿಯೇ ಸೂಪರ್‌ ಸ್ಟಾರ್‌ ಅಂತ ಫೋಸು ನೀಡಿದ್ದಾರೆ ನಿರಂಜನ್‌ ಸುಧೀಂದ್ರ. ಹಾಗಂತ, ಮಾಯಲೋಕದ ಮೇಲೆ ಆಕರ್ಷಣೆಗೊಳಗಾದ ಎಲ್ಲರಿಗೂ ‘ ಸೂಪರ್ ಸ್ಟಾರ್’ ಆಗಿ ಕಣಕ್ಕಿಳಿಯುವ ಅವಕಾಶ ಸಿಗೋದಿಲ್ಲ.‌ ಫೀಲ್ಡ್ ನಲ್ಲಿ ಬೇಜಾನ್ ಸೈಕಲ್ ಹೊಡಿಬೇಕಾಗುತ್ತೆ. ಒಂಟಿ ಸಲಗದಂತೆ ಹೋರಾಡಬೇಕಾಗುತ್ತೆ. ಆನಂತರವಷ್ಟೇ ಮಿನುಗುವ ಲೋಕದಲ್ಲಿ ಎಲ್ಲವೂ ಸಾಧ್ಯ.‌ ಆದರೆ ನಿರಂಜನ್‌ ವಿಚಾರದಲ್ಲಿ ಹಾಗಾಗಲಿಲ್ಲ ಚಿಕ್ಕಪ್ಪ ‌ರಿಯಲ್ ಸ್ಟಾರ್ ಆಗಿರೋದ್ರಿಂದ ‘ ಸೂಪರ್ ಸ್ಟಾರ್’ ಟೈಟಲ್ ಇಟ್ಟು ತೊಡೆತಟ್ಟುವುದಕ್ಕೆ ಸಾಧ್ಯವಾಗಿದೆ. ಅಟ್ ದಿ ಸೇಮ್ ಟೈಮ್ ನವತಾರೆ ನಿರಂಜನ್‌ ಗೂ ಜವಾಬ್ದಾರಿ ಹೆಚ್ಚಿಸಿದೆ ಅನ್ನೋದು ಕೂಡ ಅಷ್ಟೇ ಸತ್ಯ.

  • ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ‌ಸಿನಿಲಹರಿ

Categories
ಸಿನಿ ಸುದ್ದಿ

ಕೆಜಿಎಫ್ ಚಾಪ್ಟರ್ – 2 ಸ್ಯಾಟಲೈಟ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ; ಕನ್ನಡಕ್ಕಷ್ಟೇ ಅಲ್ಲ, ಇಂಡಿಯಾಕ್ಕೂ ಇದು ಹೊಸ ದಾಖಲೆ !

ಕೆಜಿಎಫ್‌ 2 ಯಾವಾಗ ಬರುತ್ತೆ ಎನ್ನುವ ಪ್ರೇಕ್ಷಕರ ದೊಡ್ಡ ಕುತೂಹಲದ ನಡುವೆ ಅದು ಆಡಿಯೋ ರೈಟ್ಸ್‌, ಸ್ಯಾಟಲೈಟ್ಸ್‌ ರೈಟ್ಸ್‌ ಮಾರಾಟದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಕನ್ನಡ ಚಿತ್ರೋದ್ಯಮ ಈ ತನಕ ಕೇಳರಿಯದಂತಹ ಮೊತ್ತಕ್ಕೆ ಈಗ ಈ ಚಿತ್ರದ ಸ್ಯಾಟಲೈಟ್ಸ್‌ ರೈಟ್ಸ್‌ ಸೇಲ್‌ ಆಗಿದೆ. ಅದನ್ನು ಖರೀದಿಸಿದ್ದು ಯಾರು, ಎಷ್ಟು ಮೊತ್ತಕ್ಕೆ ಆ ಕಥೆ ಇಲ್ಲಿದೆ.

ಕರ್ನಾಟಕ ಅಥವಾ ಭಾರತ ಮಾತ್ರವಲ್ಲ ಇಡೀ ಜಗತ್ತು ಕಣ್ಣರಳಿಸಿ ಕಾಯುತ್ತಿರುವ ಕನ್ನಡದ ಒನ್ ಅಂಡ್ ಓನ್ಲೀ ಸಿನಿಮಾ ಕೆಜಿಎಫ್ ಚಾಪ್ಟರ್ – 2. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೋತ್ತಿಗೆ ಈ ಸಿನಿಮಾ ತೆರೆ ಮೇಲೆ ಬಂದು ಮತ್ತೊಂದು ಹೊಸ ಇತಿಹಾಸ ಕ್ರಿಯೇಟ್‌ ಆಗುವುದು ಖಚಿತ ಇತ್ತೇನೋ, ಆದರೆ ಕೊರೋನಾ ಎಲ್ಲದಕ್ಕೂ ಅಡ್ಡಿ ಆಗಿದೆ. ಅದು ʼಕೆಜಿಎಫ್‌ 2ʼ ರಿಲೀಸ್‌ ಗೂ ತೊಂದರೆ ಉಂಟು ಮಾಡಿದೆ ಅನ್ನೋದು ನಿಮಗೂ ಗೊತ್ತು. ಆದರೂ ಅದರ ಮಾರ್ಕೆಟ್‌ ಹವಾ ಮಾತ್ರ ಒಂಚೂರು ಕಮ್ಮಿ ಆಗಿಲ್ಲ. ತೆರೆ ಮೇಲೆ ಬರೋದಿಕ್ಕೆ ಒಂದಷ್ಟು ದಿನ ಆಗ್ಬಬಹುದು ಅನ್ನೋದು ಬಿಟ್ಟರೆ ಸಿನಿಮಾ ಯಾವಾಗ ಬರುತ್ತೆ ಎನ್ನುವ ಪ್ರೇಕ್ಷಕರ ದೊಡ್ಡ ಕುತೂಹಲದ ನಡುವೆ ಆಡಿಯೋ ರೈಟ್ಸ್‌, ಸ್ಯಾಟಲೈಟ್‌ ರೈಟ್ಸ್‌ ಹಾಗೂ ಡಿಜಿಟಲ್‌ ರೈಟ್ಸ್‌ ಗಳ ಮಾರಾಟದಲ್ಲಿ ದಾಖಲೆ ಸೃಷ್ಟಿಸುತ್ತಲೇ ಬರುತ್ತಿರುವುದು ಮಾತ್ರ ರೋಚಕವೇ ಹೌದು.

ಸದ್ಯಕ್ಕೆ ‘ಕೆಜಿಎಫ್‌ 2’ ಸಿನಿಮಾಕ್ಕೆ ಸಂಬಂಧಿಸಿದಂತೆ ಆಡಿಯೋ ರೈಟ್ಸ್‌ ಹಾಗ ಸ್ಯಾಟಲೈಟ್ಸ್‌ ರೈಟ್ಸ್‌ ಅನ್ನು ಹೊಂಬಾಳೆ ಫಿಲಂಸ್‌ ಮಾರಾಟ ಮಾಡಿದೆ. ಅದರ ಆಡಿಯೋ ಹಕ್ಕುಗಳನ್ನು ಕನ್ನಡದ ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಖರೀದಿ ಮಾಡಿದೆ. ಅದು ಭಾರೀ ದೊಡ್ಡ ಮೊತ್ತಕ್ಕೆ ಸೇಲ್‌ ಆಗಿದೆಯಂತೆ. ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ಲಹರಿ ವೇಲು ಹೇಳುವ ಪ್ರಕಾರ ಕನ್ನಡದಲ್ಲಿ ದಾಖಲೆ ಆಗುವಂತಹ ಮೊತ್ತಕ್ಕೆ ‘ಕೆಜಿಎಫ್‌ 2’ ಆಡಿಯೋ ಹಕ್ಕುಗಳನ್ನು ಖರೀದಿಸಲಾಗಿ ದೆಯಂತೆ. ಅದೇ ರೀತಿ ಈಗ ‘ಕೆಜಿಎಫ್‌ 2 ‘ಚಿತ್ರದ ಸ್ಯಾಟಲೈಟ್ಸ್‌ ರೈಟ್ಸ್‌ ಕೂಡ ಜೀ ಕನ್ನಡದ ಪಾಲಾಗಿದ್ದು, ಅದು ಕನ್ನಡದಲ್ಲಿ ಹಿಂದೆಂದೂ ಕಾಣದಂತಹ ದೊಡ್ಡ ಮೊತ್ತಕ್ಕೆ ಸೇಲ್‌ ಆಗಿದೆಯಂತೆ. ಸದ್ಯಕ್ಕೆ ಈ ʼಮೊತ್ತʼ ಎಷ್ಟು ಎನ್ನುವುದನ್ನು ಹೊಂಬಾಳೆ ಫಿಲಂಸ್‌ ಆಗಲಿ ಅಥವಾ ಜೀ ನೆಟ್‌ ವರ್ಕ್‌ ಆಗಲಿ ಎಲ್ಲೂ ಬಹಿರಂಗ ಪಡಿಸಿಲ್ಲ, ಆದರೆ ಎರಡು ಸಂಸ್ಥೆಗಳ ನಡುವೆ ಒಪ್ಪಂದ ಆಗಿರುವುದು ಅಧಿಕೃತವಾಗಿದೆ.

ಅವರೆಡು ಸಂಸ್ಥೆಗಳ ನಡುವೆ ಆಗಿರುವ ಒಪ್ಪಂದಕ್ಕೆ ಸಾಕ್ಷಿಯಾಗಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಎನ್ನುವ ಹಾಗೆ ಹೊಂಬಾಳೆ ಫಿಲಂಸ್‌ ಮಾಧ್ಯಮಕ್ಕೆ ಅಧಿಕೃತ ಹೇಳಿಕೆ ರವಾನಿಸಿದೆ. ಹೊಂಬಾಳೆ ಫಿಲಂಸ್‌ ನ ಸಾರಥಿ ವಿಜಯ್‌ ಕಿರಗಂದೂರು ಹಾಗೂ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಜೊತೆಗಿನ ಫೋಟೋ ಕೂಡ ರಿವೀಲ್‌ ಆಗಿವೆ. ದೇಶದ ಮನರಂಜನಾ ವಲಯದ ಅತೀ ದೊಡ್ಡ ನೆಟವರ್ಕ್‌ ಆದ ಜೀ ನೆಟ್‌ ವರ್ಕ್‌ ಜತೆಗನ ಒಪ್ಪಂದ ನನಗೆ ಅತೀವ ಖುಚಷಿ ತಂದಿದೆ. ದಕ್ಷಿಣದ ನಾಲ್ಕು ಭಾಷೆಗೂ ‘ಕೆಜಿಎಫ್‌ 2’ ಸ್ಯಾಟಲೈಟ್ಸ್‌ ರೈಟ್ಸ್‌ ಅನ್ನು ಜೀ ನೆಟ್‌ ವರ್ಕ್‌ ತನ್ನದಾಗಿಸಿಕೊಂಡಿದೆ. ಜೀ ನಿರೀಕ್ಷೆಯಂತೆ ಅದು ತನ್ನ ವೀಕ್ಷಕರ ವಲಯಕ್ಕೆ ದೊಡ್ಡ ಮನರಂಜನೆ ನೀಡುವುದು ಗ್ಯಾರಂಟಿ ಆಗಿದೆ. ಕೆಜಿಎಫ್‌ ಮೊದಲ ಭಾಗದಂತೆಯೇ ಚಾಫ್ಟರ್‌ 2 ಕೂಡ ಭಾರತೀಯ ಚಿತ್ರ ರಂಗದಲ್ಲಿ ದೊಡ್ಡ ಮೈಲುಗಲ್ಲು ಆಗುವುದು ಖಚಿತ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಚಿತ್ರದ ನಾಯಕ ನಟ ಯಶ್‌ ಮತ್ತು ನಿರ್ದೇಶಕ ಪ್ರಶಾಂತ್‌ ನೀಲ್‌ ಕೂಡ ಜೀ ನೆಟ್‌ ವರ್ಕ್‌ ಜತೆಗಿನ ಒಪ್ಪಂದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಠಿತ ಮನರಂಜನಾ ಟಿವಿ ಚಾನೆಲ್ ಜೀ ಸಂಸ್ಥೆ ಕನ್ನಡ – ತೆಲುಗು- ತಮಿಳು- ಮಲೆಯಾಳಂ ಭಾಷೆಯ ಸ್ಯಾಟಲೈಟ್ ಹಕ್ಕುಗಳನ್ನ ಕೊಂಡು ಕೊಂಡಿದೆ. ವಲ್ಡ್ ವೈಡ್ ತುಂಬ ಮನೆಮನಕ್ಕೆ ಜೀ‌ ಸಂಸ್ಥೆ ಕೆಜಿಎಫ್ ಚಾಪ್ಟರ್ – 2 ಚಿತ್ರವನ್ನ ತಲುಪಿಸಲು ತುದಿಗಾಲ ಮೇಲೆ ನಿಂತಿದೆ. ಕೆಜಿಎಫ್‌ ೨ ತಮ್ಮ ಸಂಸ್ಥೆ ಪಾಲಾಗಿದ್ದಕ್ಕೆ ಜೀ ಕನ್ನಡ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಕೂಡ ಎಕ್ಸೈಟ್‌ ಆಗಿದ್ದು, ಜೀ ನೆಟ್‌ ವರ್ಕ್‌ ಜರ್ನಿಯಲ್ಲೂ ಇದೊಂದು ದೊಡ್ಡ ಮೈಲುಗ ಲ್ಲುಆಗುವ ದೊಡ್ಡ ಭರವಸೆ ತಮಗಿದೆ ಎಂದು ಅನಿಸಿಕೆ ಹಂಚಿಕೊಂ ಡಿದ್ದಾರೆ. ಇನ್ನು ಒಟಿಟಿ ಫ್ಲಾಟ್‌ ಫಾರ್ಮ್‌ ನಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಅಮೆಜಾನ್‌, ನೆಟ್‌ ಪ್ಲೆಕ್ಸ್‌ ಈಗ ಚಾತಕ ಪಕ್ಷಿಯಂತೆ ಕಾಯು ತ್ತಿವೆ. ಇದಕ್ಕಾಗಿ ಅವರು ನೂರಿನ್ನೂರು ಕೋಟಿ ಕೊಡುವುದಕ್ಕೂ ಸಿದ್ದವಿವೆ. ಆದರೆ 250 ಕೋಟಿ ಅಲ್ಲ 500 ಕೋಟಿ ಕೊಟ್ಟರೂ ಸಿನಿಮಾನ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಲ್ಲ. ಎಷ್ಟೇ ಟೈಮ್ ಹಿಡಿದರೂ ಪರವಾಗಿಲ್ಲ ಥಿಯೇಟರ್ ನಲ್ಲಿ ರಿಲೀಸ್ ಮಾಡ್ತೀವಿ ಅಂತ ಕೆಜಿಎಫ್ ೨ ಡಿಸೈಡ್‌ ಮಾಡಿದೆ. ಅದರಂತೆ ಬಿಗ್ ಸ್ಕ್ರೀನ್‌ನಲ್ಲಿ ರಿಲೀಸ್ ಆಗಲಿದೆ. ಯಾವಾಗ ? ಹೇಗೆ ಎನ್ನುವುದಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ , ಸಿನಿಲಹರಿ

Categories
ಸಿನಿ ಸುದ್ದಿ

ಕಾಂತಾರ-ವೈರಮುಡಿ ಕಥೆ ಏನಾಯ್ತು ? ಹ್ಯಾಟ್ರಿಕ್ ಹೀರೋ ಶಿವಣ್ಣನ ಮೀಟ್ ಮಾಡಿದ್ರು ರಿಷಬ್ ಶೆಟ್ಟಿ !?

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವ್ರನ್ನ ನಿರ್ದೇಶಕ ರಿಷಬ್ ಶೆಟ್ಟಿ ಭೇಟಿ ಮಾಡಿದ್ದಾರೆ. ಸದ್ದುಗದ್ದಲವಿಲ್ಲದೇ ಸೈಲೆಂಟಾಗಿ ಶಿವಣ್ಣನ್ನ ಮೀಟ್ ಮಾಡಿರುವ ರಿಷಬ್, ಮೊಬೈಲ್ ಕೈಗೆತ್ತಿಕೊಂಡು ಹಾಗೇ ಒಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಬ್ಯೂಟಿಫುಲ್ ಪೋಟೋ ಕ್ಯಾಪ್ಚರ್ ಮಾಡಿಕೊಂಡ ರಿಕ್ಕಿ ಡೈರೆಕ್ಟರ್ ಇಂದು ಬೆಳ್ಳಂಬೆಳಗ್ಗೆ ಶಿವಣ್ಣ ಅವರನ್ನು ಭೇಟಿ ಮಾಡುವ ಭಾಗ್ಯ ನನ್ನದಾಯ್ತು. ಹೊಸ ಹೆಜ್ಜೆಯೊಂದು ಇಡುವ ಬಗ್ಗೆ ಉತ್ಸುಕನಾ ಗಿದ್ದೇನೆ. ಹೀಗಂತ ಬರೆದುಕೊಂಡು ಫೋಟೋ ಸಮೇತ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದಾರೆ.

ಶೆಟ್ರು ಹಾಗೂ ಶಿವಣ್ಣರನ್ನ ಒಟ್ಟಿಗೆ ನೋಡಿದ್ಮೇಲೆ ಥ್ರಿಲ್ಲಾಗಲೆಬೇಕು ಅಟ್ ದಿ ಸೇಮ್ ಟೈಮ್ ತಲೆಗೆ ಹುಳಬಿಟ್ಟುಕೊಳ್ಳಲೆಬೇಕು. ಯಾಕಂದ್ರೆ, ಕಾಂತಾರ-ವೈರಮುಡಿಯ ಕನ್‌ಪ್ಯೂಶನ್ ಕಥೆಗೆ ಇನ್ನೂ ಕ್ಲ್ಯಾರಿಟಿ ಸಿಕ್ಕಿಲ್ಲವಲ್ಲ. ಕಳೆದ ಎರಡು ವಾರಗಳ ಹಿಂದೆ ಕಾಂತಾರ ವರ್ಸಸ್ ವೈರಮುಡಿ ಎನ್ನುವಂತಹ ಸಂದರ್ಭ ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿದ್ದು ನಿಮಗೆಲ್ಲ ಗೊತ್ತಿರುತ್ತೆ ಅನ್ಸುತ್ತೆ. ಜನಪ್ರಿಯ ನಿರ್ಮಾಣ ಸಂಸ್ಥೆ ಹೊಂಬಾಳೆಕಾಂತಾರ’ ಟೈಟಲ್ ಅನೌನ್ಸ್ ಮಾಡ್ತು. ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತ ರಿಷಬ್ ಶೆಟ್ಟಿ, ಜಟ್ಟಿ ವೇಷದಲ್ಲಿ ಕಾಣಸಿಕೊಂಡರು. ಕೋಣಗಳು ಓಟ ಕಿತ್ತಿರುವ ಪೋಸ್ಟರ್ ಮೂಲಕ ಶೆಟ್ಟರು ಕಣಕ್ಕಿಳಿದರು. ಆಗಲೇ ಸೋಷಿಯಲ್ ಲೋಕ ಕೆಂಡದಂತೆ ಧಗಧಗಿಸಿತು. ಪೈಲ್ವಾನ್ ಅವತಾರದಲ್ಲಿ ಹುಚ್ಚೆಬ್ಬಿಸಿದ್ದ ಶಿವಣ್ಣನ `ವೈರಮುಡಿ’ ಸಿನಿಮಾದ ಪೋಸ್ಟರ್ ಮತ್ತೆ ರಾರಾಜಿಸ್ತು. ಕಂಬಳದ ಕಥೆಯನ್ನೊಳಗೊಂಡು ವೈರಮುಡಿ ಚಿತ್ರ ತಯಾರಾಗುತ್ತಿದೆ ರಥಾವರ ಡೈರೆಕ್ಟರ್ ಎರಡು ವರ್ಷ ಬೆವರು ಸುರಿಸಿ ಕಥೆ ಮಾಡಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಡೇಟ್ ನೋಡಿಕೊಂಡು ಶೂಟಿಂಗ್ ಹೋಗೋದಕ್ಕೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಹೀಗಿರುವಾಗ ಶೆಟ್ಟರು ಯಾಕೇ ಕೋಣಗಳನ್ನು ಓಡಿಸಿಕೊಂಡು ಬಂದ್ರಪ್ಪ ಅಂತ ಚರ್ಚೆಯಾಯ್ತು.

ಕಿರಿಕ್ ಡೈರೆಕ್ಟರ್ ಕಂಬಳದ ಕಥೆಯನ್ನೇ ಕಾಂತಾರ' ಚಿತ್ರದಲ್ಲಿ ದಂತಕತೆ ಮಾಡೋದಕ್ಕೆ ಹೊರಟರಾ? ಹೀಗೊಂದು ಸಂಶಯ ಬಂದು ಶಿವಣ್ಣನ ಅಭಿಮಾನಿಗಳು ಹಾಗೂ ರಥಾವರ ನಿರ್ದೇಶಕರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು. ಸಿನಿಲಹರಿ ಜೊತೆ ಮಾತನಾಡುತ್ತಾ ವೈರಮುಡಿಗೋಸ್ಕರ ಪಟ್ಟ ಶ್ರಮದ ಬಗ್ಗೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಬಿಚ್ಚಿಟ್ಟರು.ಕಾಂತಾರ’ ಸಿನಿಮಾ ಕಂಬಳ ಕುರಿತಾಗಿದೆಯೋ ಅಥವಾ ಮತ್ಯಾವುದೋ ಕಥೆಯನ್ನೋ ಹೇಳಲಿದೆಯೋ ಗೊತ್ತಿಲ್ಲ. ಒಂದ್ವೇಳೆ ಕಾಂತಾರ' ಕರಾವಳಿಯ ಜಾನಪದ ಕ್ರೀಡೆ ಕಂಬಳದ್ದೇ ಕಥೆಯಾದರೆ ನಿಜಕ್ಕೂ ಕೃತಿಚೌರ್ಯವೇ ಅಂತ ಬಂಡಿಯಪ್ಪ ನೊಂದುಕೊಂಡರು. ಇದಾಗಿ ಹೆಚ್ಚುಕಮ್ಮಿ 13 ದಿನಗಳು ಕಳೆದಿವೆ ಆದರೆ ರಿಷಬ್ ಶೆಟ್ಟಿಯವರೇ ಆಗಲೀ, ಹೊಂಬಾಳೆ ಸಂಸ್ಥೆಯೇ ಆಗಲಿಕಾಂತಾರ’ ಸಿನಿಮಾದ ತಿರುಳಿನ ಬಗ್ಗೆ ಬಿಟ್ಟುಕೊಟ್ಟಿಲ್ಲ. ಇತ್ತ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಯಾವ ನಿರ್ಧಾರಕ್ಕೆ ಬಂದ್ರೋ ಗೊತ್ತಿಲ್ಲ. ಈ ಬಗ್ಗೆ ಶಿವಣ್ಣ ಜೊತೆಗೆ ಏನಾದರೂ ಮಾತುಕತೆ ನಡೆಸಿದ್ದಾರೋ ಏನೋ ಆ ಬಗ್ಗೆ ಹೆಚ್ಚಿನ ಡೀಟೈಲ್ಸ್ ಲಭ್ಯವಾಗಿಲ್ಲ. ಈ ಮಧ್ಯೆ ನಿರ್ದೇಶಕ ರಿಷಬ್ ಶೆಟ್ಟಿ ಹ್ಯಾಟ್ರಿಕ್ ಹೀರೋನಾ ಭೇಟಿ ಮಾಡಿ ಕೂತೂಹಲ ಕೆರಳಿಸಿದ್ದಾರೆ.

ನಿರ್ದೇಶಕ ರಿಷಬ್ ಶೆಟ್ಟಿ ಸೆಂಚುರಿಸ್ಟಾರ್ ಶಿವಣ್ಣರನ್ನು ಭೇಟಿ ಮಾಡಿರುವ ಉದ್ದೇಶ ಹೊಸ ಸಿನಿಮಾ. ಯಸ್, ದೊಡ್ಮನೆ ಸ್ಟಾರ್ ಶಿವಣ್ಣನಿಗೆ ಕಿರಿಕ್ ಡೈರೆಕ್ಟರ್ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಣ್ಣನ ಜೊತೆಗೆ ರಿಷಬ್ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಯಾವ ಸಿನಿಮಾ? ಪ್ರೊಡ್ಯೂಸರ್ ಯಾರು? ಶಿವಣ್ಣ ಯಾವಾಗ ಡೇಟ್ ಕೊಟ್ಟಿದ್ದಾರೆ? ಯಾವಾಗ ಸಿನಿಮಾ ಸೆಟ್ಟೇರುತ್ತೆ? ಇದ್ಯಾವ ಪ್ರಶ್ನೆಗೂ ಉತ್ತರ ಸಿಕ್ಕಿರಲಿಲ್ಲ. ಆ ಎಲ್ಲಾ ಕೂತೂಹಲದ ಪ್ರಶ್ನೆಗೆ ಶೆಟ್ರು ಹಾಗೂ ಶಿವಣ್ಣರ ಭೇಟಿಯಿಂದ ಉತ್ತರ ಸಿಕ್ಕಿದೆ. 124 ನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ನೀ ಸಿಗೋವರೆಗೂ ಸಿನಿಮಾದಲ್ಲಿ ಸದ್ಯ ಶಿವಣ್ಣ ಬ್ಯುಸಿಯಾಗಿದ್ದಾರೆ. 125 ನೇ ಚಿತ್ರವಾದ `ವೇದ’ದಲ್ಲಿಯೂ ತೊಡಗಿಸಿಕೊಳ್ಳಲಿದ್ದಾರೆ. ಈ ಎರಡು ಸಿನಿಮಾನ ಬ್ಯಾಲೆನ್ಸ್ ಮಾಡಿಕೊಂಡು ರಿಷಬ್ ಶೆಟ್ಟಿಯವರ ಅಖಾಡಕ್ಕೆ ಹ್ಯಾಟ್ರಿಕ್ ಹೀರೋ ಧುಮಕಲಿದ್ದಾರೆ.

ಹೌದು, 126 ನೇ ಸಿನಿಮಾವನ್ನು ಶಿವಣ್ಣ ರಿಷಬ್ ಜೊತೆಗೆ ಮಾಡಲಿದ್ದಾರೆ. ಶೆಟ್ಟರು ಹಾಗೂ ಶಿವಣ್ಣ ಕಾಂಬಿನೇಷನ್ ಸಿನಿಮಾಗೆ ಜನಪ್ರಿಯ ನಿರ್ಮಾಪಕರಾದ ಜಯ್ಯಣ್ಣ ಬಂಡವಾಳ ಹೂಡಲಿದ್ದಾರೆ. ಇವತ್ತು ಅನ್ನದಾತರಾದ ಜಯಣ್ಣರೊಟ್ಟಿಗೆ ಜೊತೆಗೆ ಕರುನಾಡ ಚಕ್ರವರ್ತಿ ಯನ್ನ ರಿಷಬ್ ಭೇಟಿಮಾಡಿದ್ದಾರೆ. ಫೋಟೋ ಸಮೇತ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಕೂಡ ಮಾಡಿದ್ದಾರೆ. ಅಲ್ಲಿಗೆ ಚಂದ್ರಶೇಖರ್ ಬಂಡಿಯಪ್ಪರೊಟ್ಟಿಗೆ ಸಿನಿಮಾ ಮಾಡುವ ಮೊದಲೇ ಶಿವರಾಜ್‌ ಕುಮಾರ್, ರಿಷಬ್ ಶೆಟ್ಟಿಯವರ ನಿರ್ದೇಶನದ ಸಿನಿಮಾದಲ್ಲಿ ಮಿಂಚಲಿದ್ದಾರೆ.ನಂತರವಷ್ಟೇ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶ ನದ ಸಿನಿಮಾದಲ್ಲಿ ಶಿವಣ್ಣ ಧಗಧಗಿಸಲಿದ್ದಾರೆ. ಏನಾಗಲಿದೆ 127 ನೇ ವೈರಮುಡಿಯ ಕಥೆ ಕಾದುನೋಡಬೇಕಿದೆ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಬರಲಿದೆ `ಡ್ರೋಣ್ ಪ್ರಥಮ್’ ಸಿನ್ಮಾ; ಪ್ರಥಮ್ ಜೊತೆ ಡ್ರೋಣ್ ಹಾರಿಸ್ತಾರೆ ಪೋರ್ನ್ ಬ್ಯೂಟಿ !

ಬಿಗ್‌ಬಾಸ್ ಸೀಸನ್ 4ರ ವಿನ್ನರ್.. ಒಳ್ಳೆಹುಡುಗ ಅಂತನೇ ಜನಪ್ರಿಯಗೊಂಡಿರುವ ಸ್ಯಾಂಡಲ್‌ವುಡ್ ಸೆನ್ಸೇಷನಲ್ ಆಕ್ಟರ್ ಪ್ರಥಮ್ ಆಗಾಗ ಬಿಗ್‌ಬ್ರೇಕಿಂಗ್ ನ್ಯೂಸ್‌ಗಳನ್ನ ಕೊಡ್ತಾ ಇ ರ‍್ತಾರೆ. ಕಳೆದ ಆರು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಡ್ರೋಣ್' ಹೆಸರಲ್ಲಿ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಪ್ರಥಮ್ ಪೇಜ್‌ನಲ್ಲಿ ಡ್ರೋಣ್ ಕಂಡಾಗಲೇ ಇದು ಪಕ್ಕಾಡ್ರೋಣ್ ಪ್ರತಾಪ್’ ಕುರಿತಾದ ಸಿನ್ಮಾ ಇರ‍್ಬೋದು ಅಂತ ಎಲ್ಲರೂ ನಿರೀಕ್ಷೆ ಮಾಡಿದ್ದರು. ಜನರ ನಿರೀಕ್ಷೆ ಕೊನೆಗೂ ನಿಜವಾಗಿದೆ ಒಳ್ಳೆಹುಡುಗ ಪ್ರಥಮ್ `ಡ್ರೋಣ್ ಪ್ರಥಮ್’ ಹೆಸರಲ್ಲೇ ಸಿನಿಮಾ ಮಾಡೋದಕ್ಕೆ ತೀರ್ಮಾನ ಮಾಡಿದ್ದಾರೆ. ಡ್ರೋಣ್ ಹಾರ‍್ಸೋಕೆ ಪ್ರಥಮ್ ಜೊತೆ ಪೋರ್ನ್ ಬ್ಯೂಟಿ ಕೈ ಜೋಡಿಸಲಿದ್ದಾರಂತೆ. ಆ ನೀಲಿರಾಣಿ ಯಾರು? ಸಿನಿಮಾದ ಕಂಪ್ಲೀಟ್ ಅಪ್‌ಡೇಟ್ ಏನು? ಆ ಬಗ್ಗೆ ತಿಳಿದುಕೊ ಳ್ಳುವುದಕ್ಕೂ ಮುನ್ನ ಸ್ವತಃ ಪ್ರಥಮ್ ಡ್ರೋಣ್ ಬಗ್ಗೆ ಹಿಂದೊಮ್ಮೆ ಬಿಚ್ಚಿಟ್ಟ ಕಥೆಯನ್ನೊಮ್ಮೆ ನೋಡ್‌ಬಿಡೋಣ.

ಮುಂದಿನ ಸಿನಿಮಾ ಹೆಸರು ಡ್ರೋಣ್.. ಒಂದು ಮಜವಾದ ಸಿನಿಮಾ.. ೧೫ ಕೆಜಿ ರೆಡ್ಯೂಸ್ ಆಗ್ತಿದ್ದೀನಿ.. ಟೀಸರ್ ನಿಮಗೆ ಬಂಪರ್..ಕೆಲವು ಟ್ರೋಲ್ ಪೇಜ್‌ರ ಮನವಿಯ ಮೇರೆಗೆ ಕಾಪಿ ರೈಟಿಂಗ್ ಬರದಂತೆ ಲೀಗಲ್ ಟೀಮ್ ಜೊತೆ ಪ್ರೊಸೀಡ್ ಮಾಡ್ತಿದ್ದೇವೆ ನಿರೀಕ್ಷಿಸಿ. ಹೀಗಂತ, ಪಿಂಕ್ ಲೆಟರ್‌ನಲ್ಲಿ ಅಕ್ಷರಗಳನ್ನ ಪ್ರಕಟಿಸಿದ್ದ ಪ್ರಥಮ್ ಅವರು. ಪ್ರಖ್ಯಾತ ನಿರ್ದೇಶಕರು ಡ್ರೋಣ್'ಚಿತ್ರ ನಿರ್ದೇಶನ ಮಾಡ್ತಾರೆ. ಗೌರಿಗಣೇಶ,ಉಂಡುಹೋದ ಕೊಂಡು ಹೋದ, ಯಾರಿಗೂ ಹೇಳ್ಬೇಡಿ ಶೈಲಿಯಲ್ಲಿ ಮೂಡಿಬರಲಿದೆ.ನಿಮ್ಗೆ ಡ್ರೋಣ್ ಅಂದ್ರೆ ಗೊತ್ತಲ್ವಾ? ನಿಮ್ಮತಲೆಯಲ್ಲಿ ಏನ್ ಬಂತೋ ಅದೇ ನಿಜ. ಅದೇ ಸಿನಿಮಾ ಆಗ್ತಿದೆ ಲೀಗಲ್ ಟೀಮ್ ಪ್ರೊಸಿಡಿಂಗ್‌ನಲ್ಲಿ ಇದೆ. ಕಾನೂ ನ್ಮಾತಕವಾಗಿ ಯಾವುದೇ ಸಮಸ್ಯೆಯಾಗದಂತೆ ನಿಮ್ಮನ್ನ ನಗಿಸೋ ಜೊತೆಗೆ ಕಾಡುವ ಸಿನಿಮಾ ಡ್ರೋಣ್..ಹೀಗಂತ ಸೋಷಿಯಲ್ ಪೇಜ್‌ನಲ್ಲಿ ಪ್ರಥಮ್ ಬರೆದುಕೊಂಡಿದ್ದರು. ಇದೀಗ ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿಡ್ರೋಣ್’ ಕಹಾನಿ ಮೇ ಟ್ವಿಸ್ಟ್ ನ ಬ್ರೇಕ್ ಮಾಡಿದ್ದಾರೆ.

ಡ್ರೋಣ್' ಸಿನಿಮಾ ಮಾಡ್ತೀನಿ ಅಂತ ಅನೌನ್ಸ್ ಮಾಡಿದ್ದೆ ಅದರಂತೇ ಡ್ರೋಣ್ ಹಾರ‍್ಸೋಕೆ ನಿರ್ಧಾರ ಮಾಡಿದ್ದೇನೆ.ಡ್ರೋಣ್ ಪ್ರಥಮ್’ ಹೆಸರಲ್ಲೇ ಮೂವೀ ಮಾಡ್ಬೇಕು ಅಂತ ತೀರ್ಮಾನಿಸಿದ್ದಾಗಿದೆ. ನಟನೆ ಮಾತ್ರ ಮಾಡೋಣ ಎಂದುಕೊಂಡಿದ್ದೇ ಅದ್ಯಾಕೋ ಗೊತ್ತಿಲ್ಲ ನಿರ್ದೇಶನಕ್ಕೂ ಕೈಹಾಕಿದ್ದೇನೆ. ಕಳೆದ ನಾಲ್ಕು ತಿಂಗಳಿಂದ ಡ್ರೋಣ್ ಪ್ರತಾಪ್' ಮೇಲೆ ಸ್ಟಡಿ ಮಾಡಿದ್ದೇನೆ. ಎಲ್ಲೆಡೆ ಆತ ಕೊಟ್ಟಿರುವ ಭಾಷಣ ಹಾಗೂ ಸಂದರ್ಶನಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹಾವ-ಭಾವವನ್ನು ತಿಳಿದುಕೊಂಡಿದ್ದೇನೆ ಎಂದಿದ್ದಾರೆ. ಡ್ರೋಣ್ ಬಾಯ್‌ಗೆ ಓವರ್‌ನೈಟ್ ಸಿಕ್ಕಂತಹ ಹೈಪ್, ಜೊತೆಗೆ ಪ್ರತಾಪ್ ಹಾರ‍್ಸಿದ್ದು ಡ್ರೋಣ್ ಅಲ್ಲ ಕಲರ್ ಕಾಗೆ ಎಂದಾಗ ವಲ್ ವೈಡ್ ಮೀಡಿಯಾದಲ್ಲಿ ಸೃಷ್ಟಿಯಾದ ಸಂಚಲನ ಹಾಗೂ ತಲ್ಲಣದ ಕಥೆಡ್ರೋಣ್ ಪ್ರಥಮ್’ ಸಿನಿಮಾದಲ್ಲಿರಲಿದೆಯಂತೆ.

ಮಂಡ್ಯಹೈದ ಪ್ರತಾಪ್ ವಿವಿಧ ರೀತಿಯ ಡ್ರೋಣ್ ತಯ್ಯಾರು ಮಾಡಿದ್ದೇನೆ ಅಲ್ಲದೇ ಕಷ್ಟಪಟ್ಟು ಹಾರ‍್ಸಿದ್ದೇನೆ. ದೇಶ-ವಿದೇಶಗಳ ಸ್ಪರ್ಧೆಯಲ್ಲಿ ಕಾಂಪಿಟ್ ಮಾಡಿ ಇಂಡಿಯಾದ ಕೀರ್ತಿಪತಾಕೆಯನ್ನ ಹಾರ‍್ಸಿದ್ದೇನೆ ಅಂತ ಹೇಳಿಕೊಂಡು ಯುವ ವಿಜ್ಞಾನಿ' ಎನಿಸಿಕೊಂ ಡಿದ್ದ.ದಿನಗಳು ಕಳೆದಂತೆ ಪ್ರತಾಪ್ ಕಳ್ಳಾಟ ಬಯಲಾಯ್ತು. ಹಾರ‍್ಸಿ ದ್ದು ಡ್ರೋಣ್ ಅಲ್ಲ ಕಲರ್ ಕಲರ್ ಕಾಗೆ ಎನ್ನೋದು ಬಟಾಬಯ ಲಾಯ್ತು. ಹಿಂಗಾಗಿದ್ದೇ ತಡ ನಿರ್ದೇಶಕರೊಬ್ಬರು ಡ್ರೋಣ್ ಪ್ರತಾಪ್ ಹಾಕಿಕೊಂಡು ಸಿನಿಮಾ ಮಾಡೋದು ಬೇಡ ಅಂತ ನಿರ್ಧರಿಸಿಬಿಟ್ಟರು. ಆದರೆ, ಪ್ರಥಮ್ ಅಂದೇ ಪ್ರತಾಪ್ ಕಥೆಯನ್ನ ಸಿನಿಮಾ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ರು ಅಂತ ಕಾಣುತ್ತೆ ಹೀಗಾಗಿಯೇ ಇಂದುಡ್ರೋಣ್ ಪ್ರಥಮ್’ ಹೆಸರಲ್ಲಿ ಸಿನಿಮಾ ಮಾಡ್ತಿದ್ದಾರೆ. ಸೀರಿಯಸ್ ಸಬ್ಜೆಕ್ಟ್ ನ ಹಾಸ್ಯ ರೂಪದಲ್ಲಿ ಕಟ್ಟಿಕೊಡು ವುದಕ್ಕೆ ನಿರ್ಧಾರ ಮಾಡಿದ್ದಾರೆ. ಡ್ರೋಣ್ ಹಾರ‍್ಸೋದಕ್ಕೆ ಪ್ರಥಮ್‌ಗೆ ಮುಂಬೈನ ಇಬ್ಬರು ನಾಯಕಿಯರು ಸಾಥ್ ಕೊಡಲಿದ್ದಾರಂತೆ. ಪೋರ್ನ್ ಸ್ಟಾರ್‌ವೊಬ್ಬರು ಪ್ರಥಮ್ ಪಕ್ಕದಲ್ಲಿ ನಿಲ್ಲಲಿದ್ದಾರಂತೆ. ಆ ನೀಲಿ ಸುಂದರಿ ಯಾರು ಅನ್ನೋದನ್ನ ಪ್ರಥಮ್ ಇನ್ನೂ ಬಿಟ್ಟುಕೊಟ್ಟಿಲ್ಲ.

ಕರ್ನಾಟಕದ ಅಳಿಯ ಸಿನಿಮಾದಲ್ಲಿ ಪ್ರಥಮ್ ಫುಲ್ ಬ್ಯುಸಿಯಾ ಗಿದ್ದಾರೆ. ನಿರ್ದೇಶಿಸಿ-ನಟಿಸಿರುವ ನಟ ಭಯಂಕರ ಸಿನಿಮಾ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಈ ನಡುವೆ `ಡ್ರೋಣ್ ಪ್ರಥಮ್’ ಸಿನಿಮಾದಲ್ಲಿ ತೊಡಗಿಸಿಕೊಳ್ಳೋದಕ್ಕೆ ಉತ್ಸುಕರಾಗಿದ್ದಾರೆ. ಶೀಘ್ರದಲ್ಲೇ ಮುಹೂರ್ತದ ದಿವ್ಯದಿನಾಂಕವನ್ನು ಅನೌನ್ಸ್ ಮಾಡ್ತಾರಂತೆ. ಪ್ರಥಮ್ ತಮ್ಮ ಚಿತ್ರದ ಲಾಂಚಿಂಗ್‌ಗೆ ರಾಜಕೀಯದ ಘಟಾನುಘಟಿ ನಾಯಕರನ್ನು ಕರೆಸುತ್ತಾರೆ. ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡ್ರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನ್ಯಾಷನಲ್ ಲೀಡರ್ ಎಲ್.ಕೆ ಅಡ್ವಾಣಿಯವರು ಪ್ರಥಮ್ ಸಿನಿಮಾಗೆ ಫಸ್ಟ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಡ್ರೋಣ್ ಪ್ರಥಮ್ ಸಿನಿಮಾಗೂ ಹೆಸರಾಂತ ರಾಜಕೀಯ ನಾಯಕ ಬರಲಿದ್ದಾರಂತೆ. ಯಾರು ಏನು ಅನ್ನೋದನ್ನು ಶಾರ್ಟ್ಲೀ ಅನೌನ್ಸ್ ಮಾಡಲಿದ್ದಾರೆ ಪ್ರಥಮ್. ಅಲ್ಲಿವರೆಗೂ ವೇಯ್ಟ್ ಅಂಡ್ ಸೀ.

-ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್‌,ಸಿನಿ ಲಹರಿ

Categories
ಸಿನಿ ಸುದ್ದಿ

ಕಾಲಿವುಡ್ ಗೆ ಮತ್ತೆ ಕಾಲಿಟ್ಟ ಹರಿಪ್ರಿಯಾ; ಸಸಿಕುಮಾರ್ ಗೆ ಜೋಡಿಯಾದ್ರು ಕನ್ನಡದ ಕುಮುದಾ !

ಕನ್ನಡದ ಮೋಸ್ಟ್‌ ಗ್ಲಾಮರಸ್‌ ನಟಿ ಹರಿಪ್ರಿಯಾ ಮತ್ತೆ ಕಾಲಿವುಡ್‌ ಗೆ ಕಾಲಿಟ್ಟಿದ್ದಾರೆ. ಒಂಭತ್ತು ವರ್ಷಗಳ ನಂತರ ಮತ್ತೆ ಅಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಶುರು ಹಚ್ಚಿಕೊಂಡಿರುವ ಹರಿಪ್ರಿಯಾ, ಸತ್ಯ ಶಿವ ಡೈರೆಕ್ಟ್ ಮಾಡ್ತಿರು ವ ಚಿತ್ರದಲ್ಲಿ ನಾಯಕಿಯಾಗಿ ಧಗಧಗಿಸಿದ್ದಾರೆ.

ಕನ್ನಡದ ಮೋಸ್ಟ್ ಗ್ಲಾಮರಸ್ ನಟಿ ಹರಿಪ್ರಿಯಾ ಮತ್ತೆ ಕಾಲಿವುಡ್ ಗೆ ಕಾಲಿಟ್ಟಿದ್ದಾರೆ. ಕಳೆದ 9 ವರ್ಷಗಳ ನಂತರ ತಮಿಳಿನಲ್ಲಿ ಮತ್ತೆ ಗ್ರಾಂಡ್ ಎಂಟ್ರಿ ಕೊಟ್ಟು, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಕನ್ನಡದ ಲ್ಲಿಯೇ ಸಾಕಷ್ಟು ಬ್ಯುಸಿ ಇದ್ದರೂ, ಅವರು ಮತ್ತೆ ಪರಭಾಷೆಗಳತ್ತ ಮುಖ ಮಾಡಿರುವುದಕ್ಕೆ ಪರ್ಫಾರ್ಮೆನ್ಸ್ ಒರಿಯೆಂಟೆಡ್ ಪಾತ್ರಗಳು ಈಗ ಅಲ್ಲೂ ಸಿಗುತ್ತಿರುವುದು ಕಾರಣವಂತೆ. ಸದ್ಯಕ್ಕೆ ಅದೇ ಕಾರಣದಿಂದ ಅವರೀಗ ‘ನಾಡೋಡಿಗಳ್’ ಚಿತ್ರದ ಖ್ಯಾತಿಯ ನಟ ಸಸಿಕುಮಾರ್ ಜೋಡಿಯಾಗಿ ಹೊಸದೊಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಅದಕ್ಕೆ ಮಾತಿನ ಭಾಗದ ಚಿತ್ರೀಕರಣವೂ ಕಂಪ್ಲೀಟ್ ಆಗಿದೆಯಂತೆ.

ಈ ಚಿತ್ರಕ್ಕಿನ್ನು ಟೈಟಲ್ ಫಿಕ್ಸ್ ಆಗಿಲ್ಲ. ಶೀಘ್ರದಲ್ಲಿಯೇ ಚಿತ್ರ ತಂಡ ಚಿತ್ರದ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆ ಇದೆ ಎನ್ನುವ ಸಂಗತಿ ಯನ್ನು ನಟಿ ಹರಿಪ್ರಿಯಾ ಅವರೇ ರಿವೀಲ್ ಮಾಡಿದ್ದಾರೆ. ಹಾಗೆಯೇ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಚಿತ್ರೀಕರಣದ ಅನುಭವ ವನ್ನು ಕೂಡ ಅವರು ‘ಸಿನಿ ಲಹರಿ’ಗೆ ತೆರೆದಿಟ್ಟರು.’ ತಮಿಳು ಚಿತ್ರರಂಗಕ್ಕೆ ನಾನು ಕಾಲಿಡದೇ ಹತ್ತು ವರ್ಷಗಳಾಗಿದ್ದವು. ಆರಂಭದಲ್ಲಿ ನಾನು ತಮಿಳು ಸೇರಿದಂತೆ ಪರಭಾಷೆ ಕಡೆ ಮುಖ ಮಾಡಿದ್ದಕ್ಕೆ ಕಾರಣ ಪರ್ಫಾಮೆನ್ಸ್ ಒರಿಯೆಂಟೆಡ್ ಪಾತ್ರಗಳ ಸಿಗುತ್ತಿಲ್ಲ ಅಂತ ಹೋಗ ಬೇಕಾಗಿ ಬಂತು. ಆದಾದ ನಂತರ ಕನ್ನಡದಲ್ಲಿಯೇ ಸಾಕಷ್ಟು ಸಿನಿಮಾ ಆಫರ್ ಬಂದವು. ನಾನೇನು ನಿರೀಕ್ಷೆ ಮಾಡುತ್ತಿದ್ದೇನೋ ಅಂತಹ ಪಾತ್ರಗಳೇ ಇಲ್ಲಿಯೇ ಸಿಕ್ಕವು. ಇಷ್ಟಾಗಿಯೂ ಇನ್ನಾಕೆ ತೆಲುಗು, ತಮಿಳು ಅಂತ ಸುಮ್ಮನಾಗಿದ್ದೆ. ಇಷ್ಟಾಗಿಯೂ ತೆಲುಗಿನಲ್ಲಿ ಸಿನಿಮಾ ಮಾಡುತ್ತಾ ಬಂದೆ. ಕಾರಣ ಅಲ್ಲಿ ನನಗೆ ಸಿಕ್ಕ ಪಾತ್ರಗಳು. ಅಂತಹ ಕ್ಯಾರೆಕ್ಟರ್ ತಮಿಳಿನಲ್ಲಿ ಸಿಗಲಿಲ್ಲ ಅಂತ ಸುಮ್ಮನಿದ್ದೆ. ಈಗ ನಾನು ಕನ್ನಡದಲ್ಲಿಯೇ ಬ್ಯುಸಿ ಆಗಿದ್ದರೂ, ಒಳ್ಳೆಯ ಪಾತ್ರಗಳು ತಮಿಳಿನಲ್ಲೂ ಬರುತ್ತಿವೆ. ಅದೇ ಕಾರಣಕ್ಕೆ ಈ ಸಿನಿಮಾ ಒಪ್ಪಿಕೊಂಡೆ ‘ಎನ್ನುತ್ತಾರೆ ಹರಿಪ್ರಿಯಾ.

ಅಂದ ಹಾಗೆ, ಸಸಿಕುಮಾರ್ ಹಾಗೂ ಪರಿಪ್ರಿಯಾ ಕಾಂಬಿನೇಷನ್ ಸಿನಿಮಾಕ್ಕೆ ಅಲ್ಲಿ ಆಕ್ಷನ್ ಕಟ್ ಹೇಳಿದ್ದು ಸತ್ಯಶಿವ. ಈ ಹಿಂದೆ ಇವರು ‘ಕಾಜುಗು’ ಸಿನಿಮಾ ನಿರ್ದೇಶಿಸಿದ್ದರು. ಹಾಗೆಯೇ ಕನ್ನಡದ ಬೆಲ್ ಬಾಟಮ್ ತಮಿಳು ರಿಮೇಕ್ ಗೂ ಸತ್ಯ ಶಿವ ನಿರ್ದೇಶಕರು. ಅದೇ ಕಾರಣಕ್ಕೆ ಅವರು ತಮ್ಮ ಹೊಸ ಸಿನಿಮಾಕ್ಕೆ ಕನ್ನಡದ ಗ್ಲಾಮರಸ್ ನಟಿ ಹರಿಪ್ರಿಯಾ ಅವರನ್ನೇ ಆಯ್ಕೆ ಮಾಡಿಕೊಂಡರಂತೆ.’ ನನ್ನ ಆಯ್ಕೆಗೆ ಬೆಲ್ ಬಾಟಮ್ ಚಿತ್ರದಲ್ಲಿನ ನನ್ನ ಪಾತ್ರವೇ ಕಾರಣ. ಅಲ್ಲಿ ನನ್ನ ಪರ್ ಫಾರ್ಮೆನ್ಸ್ ನೋಡಿದಾಗ ನಿರ್ದೇಶಕರಾದ ಸತ್ಯಶಿವ ಅವರಿಗೆ ತುಂಬಾ ಇಷ್ಟವಾಯಿತ್ತಂತೆ. ಅದೇ ಕಾರಣಕ್ಕೆ ಅವರು ನನ್ನನ್ನು ಭೇಟಿ ಮಾಡಿ, ಚಿತ್ರದಲ್ಲಿನ ಪಾತ್ರದ ಬಗ್ಗೆ ಹೇಳಿದಾಗ ನನಗೂ ಪಾತ್ರ ಇಷ್ಟವಾಯಿತು’ ಎಂದರು ಹರಿಪ್ರಿಯಾ.

‘ಕನಗವೇಲ್ ಕಾಕ’ ಹರಿಪ್ರಿಯಾ ನಟನೆಯ ಮೊದಲ ತಮಿಳು ಚಿತ್ರ. ವಲ್ಲಕೊಟ್ಟೈ ಎರಡನೇ ಮೂವೀ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಮುರಾನ್ ಎನ್ನುವ ಮತ್ತೊಂದು ತಮಿಳು ಸಿನಿಮಾಗೆ ನಾಯಕಿ ಯಾಗಿದ್ದರು.‌ ಜೊತೆಜೊತೆಗೆ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದರು. ಅದ್ಯಾವಾಗ ಉಗ್ರಂ ಚಿತ್ರಕ್ಕೆ ಬಣ್ಣ ಹಚ್ಚಿದರೋ ಫಿನೀಶ್ ಕನ್ನಡದಲ್ಲೇ ಹೆಚ್ಚು ಬ್ಯುಸಿಯಾಗಿಬಿಟ್ಟರು. ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದರು. ಇದೀಗ ಕನ್ನಡದ ಒಂಭತ್ತು ಚಿತ್ರಗಳಿಗೆ ಹರಿಪ್ರಿಯಾ ಬುಕ್ ಆಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಲಗಾಮ್, ರಿಷಬ್ ಶೆಟ್ಟಿ ಜೊತೆ ಬೆಲ್ ಬಾಟಮ್ 2, ಸತೀಶ್ ನಿನಾಸಂ ಅವರ ಪೆಟ್ರೋಮ್ನಿರ್ದೇಶಕ ಸೇರಿದಂತೆ ಒಂಭತ್ತು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹೀಗೆ ಬೇಡಿಕೆಯ ನಟಿಯಾಗಿರುವ ಹರಿಪ್ರಿಯಾ ಮತ್ತೆ ಕಾಲಿವುಡ್ ಗೆ ಜಿಗಿದಿದ್ದಾರೆ. ಸತ್ಯಶಿವ ಡೈರೆಕ್ಟ್ ಮಾಡ್ತಿರು ವ ಚಿತ್ರದಲ್ಲಿ ನೀರ್ ದೋಸೆ ಬೆಡಗಿ ನಾಯಕಿಯಾಗಿ ಧಗಧಗಿಸಿದ್ದಾರೆ. ಇನ್ನು ಟಿಡಿ ರಜ್ಹಾ ಈ ಚಿತ್ರದ ನಿರ್ಮಾಪಕರು. ಜಂಬವನ್, ಕಂಧಕುಟ್ಟೈ, ವಲ್ಲಕುಟ್ಟೈ ಸೇರಿದಂತೆ ಹಲವು ಸಿನಿಮಾ ನಿರ್ಮಾಣ ಮಾಡಿದ ಅನುಭವ ಅವರದು. ನಿವಾಸ್ ಕೆ ಪ್ರಸನ್ನ ಸಂಗೀತ ಹಾಗೂ ರಾಜಾಪಟ್ಟಚಾರ್ಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿ ಲಹರಿ

error: Content is protected !!