Author: ವಿಜಯ್ ಭರಮಸಾಗರ
ರಿಯಲ್ ನಲ್ಲಿ ಕಾಣದ್ದು ರೀಲ್ ನಲ್ಲಿ ಕಂಡೆ !
ಎಲ್ಲೂ ಹೇಳದ ಕಾಕ್ರೋಚ್ ಸುಧಿಯ ಭಾವುಕ ಮಾತು
“ಒಂದು ಕಾಲದಲ್ಲಿ ಬಸ್ ಚಾರ್ಜ್ ಗೂ ನನ್ನ ಬಳಿ ಕಾಸಿರುತ್ತಿರಲಿಲ್ಲ. ಬೀದಿ ಬದಿಯ ಕಾಂಪೌಂಡ್, ಗೋಡೆ, ಬೋರ್ಡ್ ಮೇಲೆ ಅಕ್ಷರ ಬರೆಯುವ ಕಲಾವಿದನಾಗಿಯೇ ಒಂದಷ್ಟು ಬದುಕು ಕಟ್ಟಿಕೊಂಡಿದ್ದೆ. ಆದರೆ, ನನ್ ಲೈಫು ಇಷ್ಟೊಂದು ಕಲರ್ ಫುಲ್ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಈಗ ನನ್ನ ಬದುಕೇ ಬದಲಾಗಿದೆ. ಅದಕ್ಕೆ ಕಾರಣ ಈ ಕನ್ನಡ ಚಿತ್ರರಂಗ. ಸಿನಿಮಾ ಸುಂದರ ಬದುಕು ರೂಪಿಸಿದೆ”…
– ಹೀಗೆ ಹೇಳಿದ್ದು ಸುಧಿ. ಸುಧಿ ಅಂದರೆ ಬಹಳಷ್ಟು ಜನರಿಗೆ ಬೇಗ ಅರ್ಥವಾಗೋದು ಕಷ್ಟ. “ಟಗರು” ಖ್ಯಾತಿಯ ಕಾಕ್ರೋಚ್ ಅಂದರೆ, ಎಲ್ಲರಿಗೂ ನೆನಪಾಗುವ ಕಲಾವಿದ.
ಕನ್ನಡ ಚಿತ್ರರಂಗಕ್ಕೆ ಸುಧಿ ಕಾಲಿಟ್ಟು ಬರೋಬ್ಬರಿ ಆರೇಳು ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಸುಧಿ ಸರಿಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. “ಅಲೆಮಾರಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಧಿ ತರಹೇವಾರಿ ಪಾತ್ರಗಳ ಮೂಲಕ ತಾನೊಬ್ಬ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. “ದುನಿಯಾ’ ಸೂರಿ ನಿರ್ದೇಶನದ “ಟಗರು” ಸುಧಿಗೊಂದು ಟರ್ನಿಂಗ್ ಪಾಯಿಂಟ್ ಅಂದರೆ ತಪ್ಪಿಲ್ಲ. ಆ ಚಿತ್ರದ “ಕಾಕ್ರೋಚ್” ಪಾತ್ರವೇ ಇಂದು ಸುಧಿಯನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಈ ಮಾತನ್ನು ಸ್ವತಃ ಸುಧಿ ಕೂಡ ಒಪ್ಪುತ್ತಾರೆ.
ತಮ್ಮ ಸಿನಿಜರ್ನಿ ಬಗ್ಗೆ ಸಾಕಷ್ಟು ಹೇಳಿರುವ ಸುಧಿ, ಸಿನಿಜರ್ನಿ ಶುರುವಿಗೂ ಮುನ್ನ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಅದೇ ಈ ಹೊತ್ತಿನ ವಿಷಯ. ಹೌದು, ಸುಧಿ, ಸಿನಿಮಾ ರಂಗಕ್ಕೂ ಬರುವ ಮುನ್ನ, ಅವರೊಬ್ಬ ಸಾಧಾರಾಣ ಸೈನ್ ಬೋರ್ಡ್ ಕಲಾವಿದರಾಗಿದ್ದರು. ಬರವಣಿಗೆ ಕೆಲಸ ಸಿಕ್ಕ ಸಿಕ್ಕ ಕಡೆ ಊರೂರು, ರಸ್ತೆ ಬದಿ ಅಲೆದಾಡಿ ಒಂದು ರೀತಿ ಅಲೆಮಾರಿಯಂತೆಯೇ ಬದುಕು ಸಾಗಿಸಿದ ಸುಧಿ, ಕೊನೆಗೆ “ಅಲೆಮಾರಿ” ಸಿನಿಮಾ ಮೂಲಕವೇ ಚಿತ್ರರಂಗ ಪ್ರವೇಶಿಸಿದರು. ಅದು ಆಕಸ್ಮಿಕವಾಗಿ ಸಿಕ್ಕ ಅವಕಾಶವಾದರೂ ತುಂಬಾನೆ ಚೆನ್ನಾಗಿ ಕಲರ್ ಫುಲ್ ಲೋಕದೊಳಗಿನ ಬದುಕು ಕಟ್ಟಿಕೊಂಡರು. ಅಲ್ಲಿಂದ ಸುಧಿ ಇಂದಿಗೂ ತಿರುಗಿ ನೋಡಿಲ್ಲ ಅನ್ನೋದೇ ವಿಶೇಷ.
” ಸಿನಿಮಾ ನನ್ನ ಲೈಫು. ಇಡೀ ನನ್ನ ಬದುಕನ್ನೇ ಈ ಚಿತ್ರರಂಗ ರೂಪಿಸಿದೆ. ಕೊನೆಯ ಉಸಿರು ಇರೋವರೆಗೂ ನಾನು ಈ ಚಿತ್ರರಂಗಕ್ಕೆ ಚಿರಋಣಿಯಾಗಿರುತ್ತೇನೆ. ನಾನು ಸಿನಿಮಾಗೆ ಬರುವ ಮುನ್ನ ಸಾಕಷ್ಟು ಕಷ್ಟಪಟ್ಟಿದ್ದೇನೆ. ನಿಜ ಹೇಳುವುದಾದರೆ ಸಿನಿಮಾ ರಂಗ ನನಗೆ ಎಲ್ಲವನ್ನೂ ಕಲಿಸಿದೆ. ಹಾಗಾಗಿ ನನಗೆ ಸಿನಿಮಾನೇ ಎಲ್ಲವೂ ಆಗಿದೆ. ಸಿನಿಮಾ ಹೊರತು ನಾನಿಲ್ಲ ಎನ್ನುವಷ್ಟರ ಮಟ್ಟಿಗೆ ಸಿನಿಮಾ ಅಪ್ಪಿದ್ದೇನೆ ”
ಸಿನಿಮಾ ಬದುಕಿಗೂ ಮುನ್ನ ಇದ್ದಂತಹ ಬದುಕಿನ ಬಗ್ಗೆ “ಸಿನಿ ಲಹರಿ” ಜೊತೆ ಮಾತನಾಡಿದ ಸುಧಿ, “ನಿಜ ಹೇಳುವುದಾದರೆ, ಸಿನಿಮಾ ನನ್ನ ಲೈಫು. ಇಡೀ ನನ್ನ ಬದುಕನ್ನೇ ಈ ಚಿತ್ರರಂಗ ರೂಪಿಸಿದೆ. ಕೊನೆಯ ಉಸಿರು ಇರೋವರೆಗೂ ನಾನು ಈ ಚಿತ್ರರಂಗಕ್ಕೆ ಚಿರಋಣಿಯಾಗಿರುತ್ತೇನೆ. ನಾನು ಸಿನಿಮಾಗೆ ಬರುವ ಮುನ್ನ ಸಾಕಷ್ಟು ಕಷ್ಟಪಟ್ಟಿದ್ದೇನೆ. ನಿಜ ಹೇಳುವುದಾದರೆ ಸಿನಿಮಾ ರಂಗ ನನಗೆ ಎಲ್ಲವನ್ನೂ ಕಲಿಸಿದೆ. ಹಾಗಾಗಿ ನನಗೆ ಸಿನಿಮಾನೇ ಎಲ್ಲವೂ ಆಗಿದೆ. ಸಿನಿಮಾ ಹೊರತು ನಾನಿಲ್ಲ ಎನ್ನುವಷ್ಟರ ಮಟ್ಟಿಗೆ ಸಿನಿಮಾ ಅಪ್ಪಿದ್ದೇನೆ. ನಾನೊಬ್ಬ ಬರಹ ಕಲಾವಿದ. ಅಲ್ಲಿ ಕಾಣದೇ ಇರುವಂತಹ ಅಚ್ಚರಿಗಳನ್ನು ನಾನು ಸಿನಿಮಾರಂಗದಲ್ಲಿ ಕಂಡಿದ್ದೇನೆ. ಅನುಭವಿಸಿದ್ದೇನೆ. ನಾನು ನೋಡದೇ ಇರುವ, ಹಾಕದೇ ಇರುವ ಶೂಸ್ ನೋಡಿದ್ದೇನೆ, ನಾನು ಹಾಕದೇ ಇರುವಂತಹ ಬಟ್ಟೆ ಹಾಕಿದ್ದೇನೆ, ನೋಡದೇ ಇರುವಂತಹ ಸ್ಟಾರ್ಸ್ ಹೋಟೇಲ್ ನಲ್ಲಿ ಮಲಗಿದ್ದೇನೆ. ಹೆಸರು ಕೇಳದೇ ಇರುವಂತಹ ಊಟದ ಐಟಂ ಕೇಳಿದ್ದೇನೆ, ಒಂದು ಕಾಲದಲ್ಲಿ ಬಸ್ ಚಾರ್ಜ್ ಗೂ ಕಾಸಿರದ ನಾನು ಈ ಸಿನಿಮಾರಂಗದಿಂದ ಇದ್ದಬದ್ದ ಫ್ಲೈಟ್ ಗಳಲ್ಲಿ ಪ್ರಯಾಣ ಮಾಡಿದ್ದೇನೆ. ದೊಡ್ಡವರ ಮುಂದೆ ನಿಲ್ಲುವುದೇ ಕಷ್ಟ ಆಗಿದ್ದ ದಿನಗಳಲ್ಲಿ ಈಗ ದೊಡ್ಡ ವ್ಯಕ್ತಿಗಳ ಜೊತೆ ಕೂತು ಮಾತನಾಡುತ್ತಿದ್ದೇನೆ ಅಂದರೆ ಅದಕ್ಕೆಲ್ಲ ಈ ಸಿನಿಮಾ ಕಾರಣ’ ಎನ್ನುವುದು ಸುಧಿ ಮಾತು.
ಆಗೆಲ್ಲ ಬದುಕು ನಡೆಯುತ್ತಿದ್ದರೂ ಇಷ್ಟೊಂದು ಸುಂದರ ಬದುಕು ಇರಲಿಲ್ಲ. ಇದಕ್ಕೂ ಈ ಸಿನಿಮಾನೇ ಕಾರಣ. ಈಗ ನಾನೇನಾದರೂ ಒಂದು ಅಭಿಮಾನಿ ವರ್ಗವನ್ನು ಸಂಪಾದಿಸಿದ್ದೇನೆಂದರೆ ಅದಕ್ಕೂ ಈ ಚಿತ್ರರಂಗ ಕಾರಣ. ಇಲ್ಲಿವರೆಗಿನ ನನ್ನ ಸಿನಿಪಯಣದ ಜರ್ನಿಯೇ ಅದ್ಭುತ. ಸದ್ಯಕ್ಕಂತೂ ನಾನು ತೃಪ್ತಿ ಹೊಂದಿದ್ದೇನೆ. ಸಿನಿಮಾ ಬಿಟ್ಟರೆ ಬೇರೇನೂ ಬೇಡ ಅಂದುಕೊಂಡಿದ್ದೇನೆ. ಆದರೆ, ನನ್ನ ಮೂಲ ಕಸುಬು ಮಾತ್ರ ಬಿಡಲಾರೆ. ಇಲ್ಲಿ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತೇನೆ. ಶೂಟಿಂಗ್ ಇದ್ದಾಗ ಚಿತ್ರೀಕರಣ ಸೆಟ್ಗೆ ಹೋಗಿ ಬರುತ್ತೇನೆ. ಸಂಜೆ ಒಂದು ರೌಂಡ್ ನನ್ನ ಅಂಗಡಿಗೆ ಹೋಗಿ ಕೆಲಸ ಕಾರ್ಯ ನೋಡಿಕೊಂಡು ಮನೆಗೆ ಹೋಗುತ್ತೇನೆ. ನನ್ನದೇ ಆದ ಒಂದು ಹುಡುಗರ ಟೀಮ್ ಇದೆ. ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ. ಇದರ ಜೊತೆ ಜೊತೆಯಲ್ಲಿ ಸಿನಿಮಾ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ.ಸದ್ಯಕ್ಕೆ ನನ್ನ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಬಿಡುಗಡೆಗೆ ಒಂದಷ್ಟು ರೆಡಿಯಾಗಿವೆ. ಇನ್ನಷ್ಟು ಹೊಸ ಸಿನಿಮಾಗಳೂ ಬಂದಿವೆ. ಇದೆಲ್ಲದರ ಜೊತೆಗೆ ಜನವರಿಯಲ್ಲೊಂದು ಹೊಸ ಸುದ್ದಿ ಕೊಡುತ್ತೇನೆ ಎನ್ನುತ್ತಾರೆ ಸುಧಿ.
” ನಾನೊಬ್ಬ ಬರಹ ಕಲಾವಿದ. ಅಲ್ಲಿ ಕಾಣದೇ ಇರುವಂತಹ ಅಚ್ಚರಿಗಳನ್ನು ನಾನು ಸಿನಿಮಾರಂಗದಲ್ಲಿ ಕಂಡಿದ್ದೇನೆ. ಅನುಭವಿಸಿದ್ದೇನೆ. ನಾನು ನೋಡದೇ ಇರುವ, ಹಾಕದೇ ಇರುವ ಶೂಸ್ ನೋಡಿದ್ದೇನೆ, ನಾನು ಹಾಕದೇ ಇರುವಂತಹ ಬಟ್ಟೆ ಹಾಕಿದ್ದೇನೆ, ನೋಡದೇ ಇರುವಂತಹ ಸ್ಟಾರ್ಸ್ ಹೋಟೇಲ್ನಲ್ಲಿ ಮಲಗಿದ್ದೇನೆ. ಹೆಸರು ಕೇಳದೇ ಇರುವಂತಹ ಊಟದ ಐಟಂ ಕೇಳಿದ್ದೇನೆ, ಒಂದು ಕಾಲದಲ್ಲಿ ಬಸ್ ಚಾರ್ಜ್ ಗೂ ಕಾಸಿರದ ನಾನು ಈ ಸಿನಿಮಾರಂಗದಿಂದ ಇದ್ದಬದ್ದ ಫ್ಲೈಟ್ ಗಳಲ್ಲಿ ಪ್ರಯಾಣ ಮಾಡಿದ್ದೇನೆ. ದೊಡ್ಡವರ ಮುಂದೆ ನಿಲ್ಲುವುದೇ ಕಷ್ಟ ಆಗಿದ್ದ ದಿನಗಳಲ್ಲಿ ಈಗ ದೊಡ್ಡ ವ್ಯಕ್ತಿಗಳ ಜೊತೆ ಕೂತು ಮಾತನಾಡುತ್ತಿದ್ದೇನೆ ”
ಆರೇಳು ವರ್ಷ. ಇಷ್ಟು ವರ್ಷಗಳಲ್ಲಿನನಗೆ ಸಿಕ್ಕ ಅವಕಾಶಗಳೆಲ್ಲವೂ ವಿಲನ್ ಪಾತ್ರಗಳೇ. ಆ ಪಾತ್ರದಲ್ಲಿ ನಟಿಸಿದ್ದಕ್ಕೆ ನನಗೆ ಹೆಮ್ಮೆಯೂ ಇದೆ. ಯಾವುದೇ ಕಲಾವಿದ ಇರಲಿ, ಒಂದು ಆಸೆ ಇದ್ದೇ ಇರುತ್ತೆ. ಅಂತಹ ಆಸೆ ನನಗೂ ಇದೆ. “ಪೊಲ್ಲಾದವನ್” ಚಿತ್ರದಲ್ಲಿ ಡ್ಯಾನಿಯಲ್ ಬಾಲಾಜಿ ಅವರು ಮಾಡಿದಂತಹ ಪಾತ್ರ ನಾನು ಮಾಡಬೇಕು. ಅಂತಹ ಪಾತ್ರ ಎದುರು ನೋಡುತ್ತಿದ್ದೇನೆ. ಇಲ್ಲಿ ಸ್ಟಾರ್ ಸಿನಿಮಾ, ಹೊಸಬರ ಸಿನಿಮಾದಲ್ಲೂ ಸಾಕಷ್ಟು ಬಿಝಿಯಾಗಿದ್ದೇನೆ ಎಂದು ಹೇಳಲು ಖುಷಿಯಾಗುತ್ತಿದೆ. “ಸಲಗ’ ನನಗೆ ಇನ್ನೊಂದು ಹೊಸ ಮೈಲೇಜ್ ತಂದುಕೊಡಲಿದೆ. ಆ ಚಿತ್ರದ ಸಾವಿತ್ರಿ ಎಂಬ ಪಾತ್ರ ಹಿಂದಿನ ಎಲ್ಲಾ ಪಾತ್ರಗಳನ್ನೂ ಮರೆಸುವಂತಿದೆ. ದುನಿಯಾ ವಿಜಿಯಣ್ಣ ಅವರ ಮತ್ತೊಂದು ಹೊಸ ನಿರ್ದೇಶನದ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಸಿಕ್ಕ ಆವಕಾಶವನ್ನು ಬಳಸಿಕೊಂಡು ಇಲ್ಲೇ ಇನ್ನಷ್ಟು ಗಟ್ಟಿಜಾಗ ಮಾಡಿಕೊಳ್ಳುವ ಆಸೆಯಂತೂ ಇದೆ ಎನ್ನುತ್ತಾರೆ ಸುಧಿ. ಸುಧಿ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಆ ಲಿಸ್ಟ್ ಹೀಗಿದೆ.
ಸುಧಿ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಆ ಲಿಸ್ಟ್ ಹೀಗಿದೆ.
1 ರಾಬರ್ಟ್
2 ಯುವರತ್ನ
3 ಸಲಗ
4 ಏಕ್ ಲವ್ ಯಾ
5 ತ್ರಿಶೂಲಂ
6 ನಟ್ವರ್ ಲಾಲ್
7 ಚೆಕ್ ಮೇಟ್
8 ರಂಗ ಮಂದಿರ
9 ಚಾಂಪಿಯನ್
10ಸಕಲ ಕಲಾವಲ್ಲಭ
11 ಯಲ್ಲೋ ಬೋರ್ಡ್
12 ತಾಜ್ ಮಹಲ್ -2
13 ಯಾರ್ ಮಗ
14 ರಾಜ್ಬೀರ್
15 ಮಾರಿಗೋಲ್ಡ್,
16 ಉಗ್ರಾವತಾರ
17 ಗಲ್ಲಿ
ಕ್ರಾಂತಿವೀರನ ಹೊಸ ಫೋಟೋ ರಿಲೀಸ್
ಬಾಲ ಭಗತ್ ಸಿಂಗ್ ಪಾತ್ರದಲ್ಲಿ ನಿಶಾಂತ್
ಕನ್ನಡದಲ್ಲಿ ಈಗಾಗಲೇ “ಭಗತ್ ಸಿಂಗ್” ಜೀವನ ಚರಿತ್ರೆ ಕುರಿತಂತೆ “ಕ್ರಾಂತಿವೀರ” ಚಿತ್ರ ಬರುತ್ತಿರುವುದು ಎಲ್ಲರಿಗೂ ಗೊತ್ತು. ಇತ್ತೀಚೆಗಷ್ಟೇ ಚಿತ್ರತಂಡ ಪೊಸ್ಟರ್ ರಿಲೀಸ್ ಮಾಡಿತ್ತು. ಭಗತ್ ಸಿಂಗ್ ಪಾತ್ರದಲ್ಲಿ ಅಜಿತ್ ಜಯರಾಜ್ ನಟಿಸುತ್ತಿದ್ದಾರೆ. ಈ “ಕ್ರಾಂತಿವೀರ” ಚಿತ್ರದಲ್ಲಿ ಬಾಲ್ಯದ ದಿನಗಳಲ್ಲಿನ ಭಗತ್ ಸಿಂಗ್ ಕಥೆಯೂ ಇದೆ. ಜ್ಯೂನಿಯರ್ ಭಗತ್ ಸಿಂಗ್ ಪಾತ್ರದಲ್ಲಿ ನಿಶಾಂತ್ ಟಿ ರಾಠೋಡ್ ಕಾಣಿಸಿಕೊಂಡಿದ್ದಾರೆ. ಅ.22ರಂದು ಈ ಬಾಲನಟ ನಿಶಾಂತ್ ಟಿ.ರಾಠೋಡ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಿರ್ದೇಶಕರಾದ ಆದತ್ ಎಂ.ಪಿ. ಅವರು ನಿಶಾಂತ್ ಅವರ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಅಂದಹಾಗೆ, ಭಗತ್ಸಿಂಗ್ ಜೀವನ ಚರಿತ್ರೆ ಇರುವ ಈ ಚಿತ್ರದ ಚಿತ್ರೀಕರಣ ಮುಗಿದು, ಡಬ್ಬಿಂಗ್ ಕೂಡ ನಡೆಸುತ್ತಿದೆ.
ಚಿತ್ರವನ್ನು ಬಾಗಲಕೋಟೆ, ಶಿವಮೊಗ್ಗ, ಹುಬ್ಬಳ್ಳಿ, ಕೆಜಿಎಫ್ ಹಾಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋ ಸೇರಿದಂತೆ ಇತರೆಡೆ ಚಿತ್ರೀಕರಿಸಲಾಗಿದೆ. ಪ್ರತಾಪ್.ಎಸ್ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಆರ್ ಕೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆಚಂದ್ರಕಲಾ.ಟಿ.ರಾಠೋಡ್,ಮಂಜುನಾಥ್.ಹೆಚ್.ನಾಯಕ್ ಮತ್ತು ಆರ್ಜೂರಾಜ್ ನಿರ್ಮಾಪಕರು. ತ್ರಿವಿಕ್ರಮಸಾಪಲ್ಯ, ಪ್ರಶಾಂತ್ಕಲ್ಲೂರು, ಲೇಟ್ ಗೌರಿರಮನಾಥ್ ಅವರುನ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ.
ತ್ರಿಬಲ್ ರೈಡಿಂಗ್ ಹೊರಟ ಗಣಿ…
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹೊಸ ಚಿತ್ರ “ತ್ರಿಬಲ್ ರೈಡಿಂಗ್ “ಗೆ ಚಾಲನೆ ಸಿಕ್ಕಿದೆ. ಮಹೇಶ್ ಈ ಚಿತ್ರದ ನಿರ್ದೇಶಕರು.
ಚಂದನವನಕ್ಕೆ ಬಂದ ಚಂದನಾ
ರಮೇಶ ಸುರೇಶನಿಗೆ ಜೋಡಿ ಈ ಬಜಾರಿ ಹುಡುಗಿ
ಚಂದನಾ ಸೇಗು… ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಈ ಹೆಸರು ಓಡುತ್ತಿದೆ. ಅದಕ್ಕೆ ಕಾರಣ ಆಗಿರೋದು “ರಮೇಶ ಸುರೇಶ” ಎಂಬ ಚಿತ್ರ. ಹೌದು, ತೆಲುಗು ಕಿರುತೆರೆ ಇಂಡಸ್ಟ್ರಿಯಲ್ಲಿ ಜೋರು ಸದ್ದು ಮಾಡಿರುವ ಚಂದನಾ ಸೇಗು ಇದೀಗ ಸದ್ಯದ ಮಟ್ಟಿಗೆ ಎಲ್ಲರ ಹಾಟ್ ಫೇವರ್. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಮೆಲ್ಲನೆ ಗಟ್ಟಿ ಜಾಗ ಮಾಡಿಕೊಳ್ಳುತ್ತಿರುವ ನಟಿ.
ಆರಂಭದಲ್ಲಿ ಒಂದಷ್ಟು ಕಿರುತೆರೆಯಲ್ಲಿ ಮಿಂಚಿದ ಚಂದನಾ ಸೇಗು, ನಟಿ ಆಗುವ ಮುನ್ನ ಅವರು ಡಬ್ಬಿಂಗ್ ಕಲಾವಿದೆಯಾದವರು. ಈಗ “ರಮೇಶ ಸುರೇಶ” ಸಿನಿಮಾ ಮೂಲಕ ಒಂದಷ್ಟು ಸುದ್ದಿಯಾಗುತ್ತಿದ್ದಾರೆ. “ರಮೇಶ ಸುರೇಶ” ನಂತರ ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿರುವುದರಿಂದ ಸಹಜವಾಗಿಯೇ ಚಂದನಾ ಸೇಗು ಅವರಿಗೆ ಖುಷಿ ಇದೆ.
ತಮ್ಮ ಚಿತ್ರ “ರಮೇಶ ಸುರೇಶ” ಚಿತ್ರದ ಬಗ್ಗೆ ಹೇಳಿಕೊಳ್ಳುವ ಚಂದನಾ ಸೇಗು, “ಅದೊಂದು ಒಳ್ಳೆಯ ಕಥಾಹಂದರ ಇರುವಂತಹ ಚಿತ್ರ. ಪಾತ್ರ ಕೂಡ ಎಲ್ಲರಿಗೂ ಹಿಡಿಸುವಂಥದ್ದೇ. ಪಾತ್ರ ಕುರಿತು ಹೇಳುವುದಾದರೆ, ಅದೊಂದು ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಹುಡುಗಿ ಪಾತ್ರ. ಒಂದು ರೀತಿ ಹುಡುಗರಿಗೆ ರೇಗಿಸುವ ಬಜಾರಿ ಅವಳು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ತನ್ನಲ್ಲಿರುವ ದುಡ್ಡನ್ನು ಡಬಲ್ ಮಾಡಿಕೊಳ್ಳಬೇಕೆಂದು ಹಂಬಲಿಸುವ ಹುಡುಗಿಯ ಪಾತ್ರವದು.ಇಡೀ ಸಿನಿಮಾ ಹಾಸ್ಯಮಯವಾಗಿ ಸಾಗಿದರೂ, ಅಲ್ಲೊಂದು ವಿಶೇಷ ಸಂದೇಶವಿದೆ.
ಈಗಿನ ಜನರಿಗೆ ರುಚಿಸುವ ಕಥೆ ಇಲ್ಲಿದೆ. ಆ ಸಿನಿಮಾದಲ್ಲಿ ಕೆಲಸ ಮಾಡಿದ್ದು, ನನಗೆ ನಿಜಕ್ಕೂ ಖುಷಿ ಕೊಟ್ಟಿದೆ. ಒಳ್ಳೆಯ ಕಥೆ, ಎಲ್ಲದ್ದನ್ನೂ ಪೂರೈಸಿದ ಆರ್.ಕೆ.ಟಾಕೀಸ್ ಬ್ಯಾನರ್ನ ಕೃಷ್ಣ ಸರ್ ಹಾಗೂ ಶಂಕರ್ ಸರ್. ಎಲ್ಲರನ್ನೂ ಪ್ರೀತಿಯಿಂದ ನೋಡುವ ಚಿತ್ರತಂಡ ಮತ್ತು ನಿದರ್ೇಶಕರಾದ ನಾಗರಜಾಜ್ ಮಲ್ಲಿಗೇನಹಳ್ಳಿ, ರಘುರಾಜ್ ಗೌಡ. ಇಡೀ ತಂಡ ಹೊಸಬರಾದರೂ, ಎಲ್ಲೂ ಗೊಂದಲವಿಲ್ಲದೆ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಮಾತಿನ ಭಾಗ ಪೂರ್ಣಗೊಂಡಿದ್ದು, ಫೈಟ್ ಸೀನ್ ಮುಗಿಸಿದರೆ ಚಿತ್ರಕ್ಕೆ ಕುಂಬಳಕಾಯಿ” ಎನ್ನುತ್ತಾರೆ ಚಂದನಾ ಸೇಗು.
“ರಮೇಶ ಸುರೇಶ” ಚಿತ್ರ ಒಪ್ಪಿಕೊಂಡ ಬಳಿಕ ನನಗೆ ಒಂದಷ್ಟು ಸಿನಿಮಾಗಳು ಹುಡುಕಿ ಬಂದಿದ್ದು ನಿಜ. ಹಾಗಂತ ಯಾವ ಚಿತ್ರವನ್ನೂ ಒಪ್ಪಿಲ್ಲ. ಮೊದಲು ಕಥೆ, ಪಾತ್ರ ನನಗೆ ಇಷ್ಟವಾಗಬೇಕು. ಆ ನಂತರ ತಂಡದ ಮೇಲೆ ನಂಬಿಕೆ ಬರಬೇಕು. ಹಾಗಿದ್ದರೆ ಮಾತ್ರ ಒಪ್ಪುತ್ತೇನೆ. ಇನ್ನು, ಲಾಕ್ಡೌನ್ ವೇಳೆಯೂ ಕಥೆ ಕೇಳಿದ್ದೆ. ಅದರ ಜೊತೆಯಲ್ಲಿ ಸೀರಿಯಲ್ ಕೂಡ ಅವಕಾಶ ಬಂದಿದ್ದುಂಟು.
ಸದ್ಯಕ್ಕೆ ನಾಲ್ಕು ಭಾಷೆಯಲ್ಲಿ ಮೂಡಿಬರುತ್ತಿರುವ ಧಾರಾವಾಹಿಯೊಂದರಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆದಿದ್ದು, ಆ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಇಷ್ಟರಲ್ಲೇ ಅದರ ಪ್ರೋಮೋ ಬಿಡುಗಡೆಯಾಗಲಿದೆ ಎಂಬುದು ಅವರ ಮಾತು.ಅಂದಹಾಗೆ, ಚಂದನಾ ಸೇಗು ಕನ್ನಡದಲ್ಲಿ ಒಳ್ಳೆಯ ಅವಕಾಶ ಎದುರು ನೋಡುತ್ತಿದ್ದಾರೆ.
ಯಂಗ್ ವಿಲನ್, ನ್ಯೂ ವಿಷನ್ !
ಅರ್ಧಸೆಂಚುರಿಯತ್ತ ಯಶ್ ಶೆಟ್ಟಿ ,ಕೈಯಲ್ಲೀಗ ಸಾಲು ಸಾಲು ಸಿನಿಮಾ
ಪದವಿಪೂರ್ವ ಸೇರಿದ ಯಶಾ ಶಿವಕುಮಾರ್
ಚಂದನವನಕ್ಕೆ ಎಂಟ್ರಿಯಾದ ಕರಾವಳಿಯ ಮತ್ತೊಬ್ಬಳು ಚೆಲುವೆ
ಹಾಸ್ಯದ ಚೇತೋಹಾರಿ… ಚೇತನ್ ಫ್ರಮ್ ದುರ್ಗ
ಸಿನಿಮಾನೇ ಹಾಗೆ. ಇಲ್ಲಿಗೆ ಒಂದು ಬಾರಿ ಬಂದು ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಮುಂದೆ ನಿಂತರೆ ಸಾಕು, ಕಲೆ ಆವರಿಸಿಕೊಂಡುಬಿಡುತ್ತೆ. ಎಷ್ಟೇ ಕಷ್ಟ ಬಂದರೂ ಬಣ್ಣದ ಮೇಲಿನ ಪ್ರೀತಿ
ಹೋಗುವುದಿಲ್ಲ. ಹೀಗೆ ಕಲೆಯೇ ನನ್ನುಸಿರು ಅಂದುಕೊಂಡು ಇಲ್ಲಿಗೆ ಬಂದಿರುವ ಅದೆಷ್ಟೋ ಮನಸ್ಸುಗಳು ಇಂದು ಅಂದುಕೊಂಡಿದ್ದನ್ನು ಸಾಧಿಸಿ ನಿಟ್ಟುಸಿರು ಬಿಟ್ಟಿವೆ. ಆ ಸಾಲಿಗೆ ಈಗ ಕೋಟೆ ನಾಡಿನ ಪ್ರತಿಭೆ ಕೂಡ ಸೇರಿದೆ.
ಹೆಸರು ಚೇತನ್. ಸದಾ ಉತ್ಸಾಹಿ. ಸಿಕ್ಕಾಪಟ್ಟೆ ಮಾತುಗಾರ. ಯಾವಾಗಲೂ ಒಂದಿಲ್ಲೊಂದು ಸಿನಿಮಾ ಚಟುವಟಿಕೆಗಳಲ್ಲಿರುವ ಅಪ್ಪಟ ದೇಸಿ ಪ್ರತಿಭೆ. ಮೊದಲೇ ಹೇಳಿದಂತೆ ಚೇತನ್ ಚಿತ್ರದುರ್ಗದ ಹುಡುಗ. ಚಿತ್ರದುರ್ಗ ಅಂದಾಕ್ಷಣ ನೆನಪಾಗೋದೇ “ನಾಗರಹಾವು”. ಹೀಗಾಗಿ ಆ ನೆಲದ ಬಹುತೇಕ ಹುಡುಗರು ಸಹಜವಾಗಿಯೇ ನಟನೆಯತ್ತ ವಾಲಿದ್ದುಂಟು. ಆ ಕಲೆಯ ನಂಟು ಈ ಚೇತನ್ಗೂ ಇದೆ. ಹೀಗಾಗಿಯೇ ಚೇತನ್ ತಮ್ಮ ಹೆಸರ ಮುಂದೆ “ದುರ್ಗ”ಹೆಸರು ಸೇರಿಸಿಕೊಂಡಿದ್ದಾರೆ. ಈ ಹೆಸರಲ್ಲೇ ಅವರು ಗುರುತಿಸಿಕೊಂಡಿರುವುದೂ ಉಂಟು. ಚೇತನ್ ದುರ್ಗ ಇದೀಗ ಸೋಶಿಯಲ್ ಮೀಡಿಯಾದಲ್ಲೇ ಹೆಚ್ಚು ಸುದ್ದಿಯಾಗಿರುವ ಪ್ರತಿಭೆ. ಫೇಸ್ಬುಕ್ ಹಿಡಿದವರಿಗೆ ಈ ಹುಡುಗನ ಪರಿಚಯ ಇದ್ದೇ ಇರುತ್ತೆ. ಚೇತನ್ ಮಾತುಗಳಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. ಹಾವ-ಭಾವದಲ್ಲೂ ನಗಿಸೋ ಗುಣ ಈ ಪ್ರತಿಭೆಯಲ್ಲಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಚೇತನ್ ದುರ್ಗ ಎಲ್ಲರ ಫೇವರೇಟ್.
ಚೇತನ್ ಸಿನಿ ಜರ್ನಿ
ಚೇತನ್ ದುರ್ಗ ಇಂಜಿನಿಯರಿಂಗ್ ಓದಿದ್ದಾರೆ. ಆದರೆ, ಎಲ್ಲರಂತೆ ಸಾಫ್ಟ್ವೇರ್ ಕಂಪೆನಿಯತ್ತ ಮುಖ ಮಾಡಬೇಕಿದ್ದ ಹುಡುಗ ಗಾಂಧಿನಗರದ ಕಡೆ ಮುಖ ಮಾಡಿದೆ. ಮೊದಲೇ ಹೇಳಿದಂತೆ ಕೋಟಿ ನಾಡಿನ ಹುಡುಗನಾಗಿದ್ದರಿಂದ ಅಲ್ಲಿ ರಾಮಾಚಾರಿಯ ಗಾಳಿ ತುಸು ಜೋರಾಗಿಯೇ ಬೀಸಿದೆ. ಆದ್ದರಿಂದಲೇ, ಅವರು ಕೆಲಸ ಪಕ್ಕಕ್ಕಿಟ್ಟು, ಧೈರ್ಯ ಮಾಡಿ ಸಿನಿರಂಗಕ್ಕೆ ಎಂಟ್ರಿಯಾದರು. ಮೊದಲು ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ. ಮಾಸ್ಟರ್ ಆನಂದ್ ನಿದರ್ೇಶನದಲ್ಲಿ ಮೂಡಿಬಂದ “ರೋಬೋ ಫ್ಯಾಮಿಲಿ” ಧಾರಾವಾಹಿಯಲ್ಲಿ ಇವರದು ಹಾಸ್ಯ ಪಾತ್ರ. ಆ ಮೂಲಕ ಭರವಸೆ ಮೂಡಿಸಿದ ಚೇತನ್ ದುರ್ಗ ಮೆಲ್ಲನೆ ಅವಕಾಶ ಗಿಟ್ಟಿಸಿಕೊಳ್ಳುತ್ತಾ ಹೋದರು.
ಆ ನಂತರದಲ್ಲಿ ಸಿನಿಮಾ ರಂಗ ಕೂಡ ಕೈ ಬೀಸಿ ಕರೆದಿದ್ದರಿಂದ ಅತ್ತ ಮುಖ ಮಾಡಿದರು. ನಿದರ್ೇಶನ ತಂಡದಲ್ಲೂ ಇವರು ಕೆಲಸ ಶುರುಮಾಡಿದರು. “ಲೈಫು ಸೂಪರ್”, “ಕನ್ನಡಕ್ಕಾಗಿ ಒಂದನ್ನು ಒತ್ತಿ”, “ಗೌಡ್ರು ಹೋಟೆಲ್”, “ವ್ಹೀಲ್ ಚೇರ್ ರೋಮಿಯೊ” ಚಿತ್ರದಲ್ಲಿ ಬರಹ ಕೆಲಸ ಮಾಡಿದರು. ಇನ್ನು, ಇವುಗಳ ಜೊತೆ ಜೊತೆಯಲ್ಲೇ ಹಲವು ಜಾಹಿರಾತು ಕಂಪೆನಿಗಳಲ್ಲಿ ಒಂದು ವರ್ಷ ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯ ಹಲವು ಪ್ರೋಮೋಗಳಿಗೂ ಚೇತನ್ ದುರ್ಗ ಸಹ ನಿದರ್ೇಶಕರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಚಿತ್ರಗಳಲ್ಲೂ ನಟನೆ ಶುರು ಮಾಡಿದ ಚೇತನ್ ದುರ್ಗ ಅಲ್ಲೂ ಎಲ್ಲರ ಮನಗೆದ್ದಿದ್ದಾರೆ. “ರಾಗ”, “ತಿರುಪತಿ ಎಕ್ಸ್ಪ್ರೆಸ್”, “ಟೆರರಿಸ್ಟ್” , “ಕನ್ನಡಕ್ಕಾಗಿ ಒಂದನ್ನು ಒತ್ತಿ”, “ಮೃಗಶಿರ” ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಅಭಿನಯಿಸಿರುವ “ಕಿರಾತಕ-2”, “ಖಾಸಗಿ ಪ್ರೇಮ ಕಥೆ”, “ದಿ ರಿಟನ್ಸರ್್ ಆಫ್ ಕರ್ಮ”, “ಗಜಾನನ ಅಂಡ್ ಗ್ಯಾಂಗ್” ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. “ಗಜಾನನ ಅಂಡ್ ಗ್ಯಾಂಗ್” ಚಿತ್ರದಲ್ಲಿ ಚೇತನ್ ದುರ್ಗ ಐವರಲ್ಲಿ ಇವರೂ ಒಬ್ಬರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಟ್ರೋಲ್ ವಿಡಿಯೋ ಕಿಂಗ್!
ಈಗಂತೂ ಎಲ್ಲೆಡೆ ಸೋಶಿಯಲ್ ಮೀಡಿಯಾದ್ದೇ ಹವಾ. ಅದರಲ್ಲೂ ಟ್ರೋಲ್ ವಿಡಿಯೊಗಳಿಂದ ಸಾಕಷ್ಟು ಸುದ್ದಿಯಾಗಿರುವ ಚೇತನ್ ದುರ್ಗ, ಮೆಚ್ಚುಗೆ ಪಡೆದುಕೊಂಡಿರುವುದೂ ಉಂಟು. ನೋಡದೇ ಇರೋರು, ಅವರ ಚೇತನ್ ದುರ್ಗ ಫೇಸ್ ಬುಕ್ ಪೇಜ್ಗೆ ಹೋಗಿ ನೋಡಿದರೆ, ಇವರೊಳಗಿರುವ ಹಾಸ್ಯ ಕಲಾವಿದನ ಬಗ್ಗೆ ತಿಳಿಯುತ್ತೆ. ಈಗಾಗಲೇ ಇವರ ಟ್ರೋಲ್ ವಿಡಿಯೋಗಳನ್ನು ನೋಡಿ, ನಟರಾದ ಧ್ರುವ ಸಜರ್ಾ, ಸಂಚಾರಿ ವಿಜಯ್, “ರಾಜಾಹುಲಿ” ಗಿರೀಶ್, ಸುಚೇಂದ್ರ ಪ್ರಸಾದ್, ನಿದರ್ೇಶಕರಾದ ಸಿಂಪಲ್ ಸನಿ, ಮಂಜು ಸ್ವರಾಜ್ ಮೆಚ್ಚಿದ್ದಾರೆ. ಸದ್ಯಕ್ಕೆ ನಟನಾಗಿ ಗುರುತಿಸಿಕೊಳ್ಳಬೇಕೆಂದಿರುವ ಚೇತನ್ ದುರ್ಗ, “ತಾರೆ” ಹೆಸರಿನ ವಿಡಿಯೊ ಆಲ್ಬಂನಲ್ಲೂ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಬಗೆಯ ಪಾತ್ರಗಳನ್ನು ಎದುರು ನೋಡುತ್ತಿರುವ ಚೇತನ್ ದುರ್ಗ ಅವರಿಗೆ ಇಲ್ಲಿ ಗಟ್ಟಿನೆಲೆ ಕಾಣುವ ಭವ್ಯಭರವಸೆಯಂತೂ ಇದೆ
ದಸರಾ ಹಬ್ಬಕ್ಕೆ ದಮಯಂತಿ ಧಮಾಕ!
ಮತ್ತೆ ರಿಲೀಸ್ ಆಗಲಿದೆ ರಾಧಿಕಾ ಚಿತ್ರ
ಕೊರೊನಾ ಆತಂಕದ ನಡುವೆಯೇ ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳು ಇದೀಗ ತಮ್ಮ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡುತ್ತಿವೆ. ಇದಕ್ಕೆ ಚಿತ್ರರಂಗವೂ ಹೊರತಲ್ಲ. ಈಗಾಗಲೇ ಸಿನಿಮಾರಂಗ ತನ್ನ ಕಾರ್ಯ ಚಟುವಟಿಕೆ ನಡೆಸುತ್ತಿದ್ದು, ಇದೀಗ ಸಿನಿಮಾ ಬಿಡುಗಡೆಗೂ ಮುಂದಾಗಿದೆ. ಅ.16ರಂದು ಮದರಂಗಿ ಕೃಷ್ಣ ಅಭಿನಯದ”ಲವ್ ಮಾಕ್ಟೇಲ್”, ಚಿರಂಜೀವಿ ಸರ್ಜಾ ಅಭಿನಯದ ” ಶಿವಾರ್ಜುನ” ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಅವುಗಳ ಜೊತೆಗೆ ಈಗೆ ರಾಧಿಕಾ ಕುಮಾರಸ್ವಾಮಿ ನಟನೆಯ “ದಮಯಂತಿ” ಚಿತ್ರ ಕೂಡ ಬಿಡುಗಡೆಗೆ ರೆಡಿಯಾಗಿದೆ.
ನಿರ್ದೇಶಕ ನವರಸನ್
ಈಗಾಗಲೇ ಬಿಡುಗಡೆ ಕಂಡು ಮೆಚ್ಚುಗೆ ಪಡೆದಿದ್ದ “ದಮಯಂತಿ” ಚಿತ್ರವನ್ನು ಪುನಃ ಬಿಡುಗಡೆ ಮಾಡಲು ನಿರ್ದೇಶಕ ಕಮ್ ನಿರ್ಮಾಪಕ ನವರಸನ್ ತಯಾರಿ ನಡೆಸಿದ್ದಾರೆ.
ಅಕ್ಟೊಬರ್ 23ರಂದು ರಾಜ್ಯಾದ್ಯಂತ “ದಮಯಂತಿ” ಚಿತ್ರವನ್ನು ಬಿಡುಗಡೆ ಮಾಡಲು ಅವರು ಮುಂದಾಗಿದ್ದಾರೆ.
ಮತ್ತೆ ಅಬ್ಬರಿಸಲು ಬರುತ್ತಿರುವ ” ದಮಯಂತಿ” ದಸರಾ ಹಬ್ಬಕ್ಕೆ ಮನರಂಜನೆ ನೀಡಲು ರೆಡಿಯಾಗಿದ್ದಾಳೆ.
ಕೊರೊನಾ ಹಿನ್ನೆಲೆಯಲ್ಲಿ ಮನರಂಜನೆಯೂ ಇರಲಿಲ್ಲ.ಈಗ ಮನರಂಜನೆ ಬಯಸುವ ಸಿನಿ ಪ್ರೇಮಿಗಳಿಗೆ ಹಬ್ಬವಂತೂ ಹೌದು.ಚಿತ್ರರಂಗ ಕೂಡ ಸರ್ಕಾರದ ಸೂಚನೆಯಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಚಿತ್ರಮಂದಿರಗಳನ್ನು ಸಜ್ಜುಗೊಳಿಸಿದೆ. ಅದೇನೆ ಇರಲಿ ಚಿತ್ರರಂಗ ಈಗ ಗರಿಗೆದರಿದೆ. ಪ್ರೇಕ್ಷಕನ ಮನ ತಣಿಸಲು ಸಿನಿಮಾ ಮಂದಿ ಕೂಡ ರೆಡಿಯಾಗಿದ್ದಾರೆ.
ಇವರು ಕತ್ತಲೆ ಗುಡ್ಡದ ಗೂಢಾಚಾರಿಗಳು!
ಬರಲಿದ್ದಾರೆ ರಮೇಶ್ ಸುರೇಶ್…
ಕನ್ಮಡ ಚಿತ್ರರಂಗ ಇದೀಗ ಗರಿಗೆದರಿದೆ. ಕೊರೊನಾ ಕಾಲಿಟ್ಟು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದು ಸುಳ್ಳಲ್ಲ. ಇದಕ್ಕೆ ಬಣ್ಣದ ಲೋಕವೂ ಹೊರತಲ್ಲ. ಈಗ ಮೆಲ್ಲನೆ ಸಿನಿಮಾ ಚಟುವಟಿಕೆಗಳು ಶುರುವಾಗಿವೆ. ಬಹುತೇಕ ಸ್ಟಾರ್ ಚಿತ್ರಗಳ ಚಿತ್ರೀಕರಣಕ್ಕೂ ಚಾಲನೆ ಸಿಕ್ಕಿದೆ. ಹೊಸಬರು ಕೂಡ ಉತ್ಸಾಹದಲ್ಲೇ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಾಲಿಗೆ “ರಮೇಶ್ ಸುರೇಶ್” ಚಿತ್ರವೂ ಸೇರಿದೆ.
ಕಳೆದ ವಾರದಿಂದ ಈ ಚಿತ್ರದ ಚಿತ್ರೀಕರಣ ಬಿರುಸಾಗಿಯೇ ಸಾಗಿದೆ.
ಬಹುತೇಕ ಹೊಸ ಪ್ರತಿಭೆಗಳೇ ತುಬಿರುವ ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಇಬ್ಬರು ನಿರ್ದೇಶಕರಿದ್ದಾರೆ. ಇಬ್ಬರು ನಿರ್ಮಾಪಕರಿದ್ದಾರೆ. ಹೀರೋಗಳಿಗೆ ಒಬ್ಬರೇ ನಾಯಕಿ ಅನ್ನೋದಷ್ಟೇ ವಿಶೇಷ.
ಅಂದಹಾಗೆ, ಈ ಚಿತ್ರಕ್ಕೆ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶ್ ರಾಜ್ ನಾಯಕರು. ಇವರಿಗೆ ಚಂದನಾ ಸೇಗು ನಾಯಕಿ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ನಿರ್ದೇಶಕರು. ಆರ್ ಕೆ ಟಾಕೀಸ್ ಬ್ಯಾನರ್ ಮೂಲಕ ಕೃಷ್ಣ ಹಾಗೂ ಶಂಕರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇವರೆಲ್ಲರಿಗೂ ಇದು ಮೊದಲ ಅನುಭವ.ಬಹುತೇಕ ಮಾತಿನ ಭಾಗದ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಸದ್ಯಕ್ಕೆ ಪುಟ್ಟಣ ಕಣಗಾಲ್ ಸ್ಟುಡಿಯೋದಲ್ಲಿ ಚಿತ್ತೀಕರಿಸುತ್ತಿದೆ. ಫೈಟ್ಸ್ ಮತ್ತು ಒಂದು ಐಟಂ ಸಾಂಗ್ ಚಿತ್ರೀಕರಿಸಿದರೆ ಚಿತ್ರಕ್ಕೆ ಕುಂಬಳಕಾಯಿ ಬೀಳಲಿದೆ.ಚಿತ್ರದ ಮತ್ತೊಂದು ಹೈಲೈಟ್ ಅಂದರೆ ಸಾಧುಕೋಕಿಲ ಮತ್ತು ತೆಲುಗಿನ ಖ್ಯಾತ ನಟ ಸತ್ಯ ಪ್ರಕಾಶ್. ಉಳಿದಂತೆ ಮೋಹನ್ ಜುನೇಜಾ ಹಾಗೂ ರಂಗಭೂಮಿ ಪ್ರತಿಭೆಗಳಿವೆ.
*ಹಾಸ್ಯದ ಹೊನಲು
ಸಿನಿಮಾ ಕುರಿತು ಹೇಳುವುದಾದರೆ ಚಿತ್ರದ ಟೈಟಲ್ ಇದೊಂದು ಹಾಸ್ಯಮಯ ಸಿನಿಮಾ ಎಂಬುದನ್ನು ಸಾರುತ್ತದೆ. ಕಥೆ ಕೂಡ ಹಾಸ್ಯವಾಗಿಯೇ ಸಾಗಲಿದೆ.
ಚಿತ್ರದಲ್ಲಿ ಬೆನಕ ಹಾಗೂ ಯಶುರಾಜ್ ಸೋಮಾರಿ ಹುಡುಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸವಿಲ್ಲದ ಆಲೆಮಾರಿ ಹುಡುಗರಾಗಿ ಕಾಣಿಸಿಕೊಂಡಿರುವ ಅವರು, ‘ಇಲ್ಲಿ ಕಥೆಯೇ ಹೀರೋ’ ಎನ್ನುತ್ತಾರೆ. ಹಾಸ್ಯದ ಜೊತೆಗೆ ಎಮೋಶನ್ಸ್ ಕೂಡ ಚಿತ್ರದಲ್ಲಿದೆ. ಸಿನಿಮಾ ಅಪ್ಟಟ ಮನರಂಜನೆಯ ಜೊತೆಗೆ ಸಂದೇಶವನ್ನು ಕೊಡಲಿದೆ ಎಂಬುದು ಚಿತ್ರ ತಂಡದ ಮಾತು.
ಇನ್ನು ನಾಯಕರಿಬ್ಬರಿಗೂ ಇದು ಚೊಚ್ಚಲ ಚಿತ್ರ. ಹೊಸಬರನ್ನು ನಂಬಿ ಅವರಿಗೆ ಉತ್ಸಾಹ ತುಂಬಿ ನಿರ್ಮಾಪಕದ್ವಯರಾದ ಕೃಷ್ಣ ಹಾಗೂ ಶಂಕರ್ ಅವರು ಅವಕಾಶ ಕೊಟ್ಟಿದ್ದಾರೆ. ಹೊಸ ಪ್ರತಿಭೆಗಳ ಮೇಲೆ ಭರವಸೆ ಇಟ್ಟು ನಿರ್ದೇಶಕರಾದ ನಾಗರಾಜ್ ಮತ್ತು ರಘರಾಜ್ ಗೌಡ ಕೂಡ ಹಗಲಿರುಳು ಕೆಲಸ ಮಾಡಿಸುತ್ತಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿವೆ. ಪ್ರಮೋದ್ ಮರವಂತೆ ಸಾಹಿತ್ಯವಿದೆ. ವಿಶ್ವಜಿತ್ ಛಾಯಾಗ್ರಹಣವಿದೆ. ಮೂರು ಭರ್ಜರಿ ಫೈಟ್ ಗಳಿಗೆ ಥ್ರಿಲ್ಲರ್ ಮಂಜು ಸಾಹಸವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.
ಹೊಸಬರ ಉತ್ಸಾಹ
ಈ ಚಿತ್ರದ ಮೂಲಕ ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಬೆನಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗ ಸದಾಶಿವ ಅವರ ಪುತ್ರ. ರಂಗಭೂಮಿ ಕುಟುಂಬದ ಹಿನ್ನೆಲೆ ಇರುವ ಬೆನಕ ಗುಬ್ಬಿ ವೀರಣ್ಣ, ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮನ್ಮಥ ವಿಜಯ’,”ರೂಪಾಂತರ’ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಮಾವನ ಮನೆ ರೊಟ್ಟಿ’ ಸೇರಿದಂತೆ ಹಲವು ನಾಟಕಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ ಬೆನಕ ಗುಬ್ಬಿ ವೀರಣ್ಣ, ಈಗ “ರಮೇಶ್ ಸುರೇಶ್” ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದಾರೆ.
ಮತ್ತೊಬ್ಬ ಹೀರೋ ಯಶ್ ರಾಜ್ ಕೂಡ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಸದ್ಯ ತುಮಕೂರಿನಲ್ಲಿ ವಿಜೆಯಾಗಿರುವ ಯಶ್ ರಾಜ್, ಕಾರ್ಯಕ್ರಮಗಳ ಮೂಲಕ ಸಾಕಷ್ಟು ಮಾನವೀಯ ಕೆಲಸಗಳಿಗೂ ಕಾರಣರಾಗಿದ್ದಾರೆ. ಕಲೆಯನ್ನೇ ನಂಬಿರುವ ಯಶ್ ರಾಜ್ ಗಾಂಧಿನಗರದಲ್ಲಿ ಗಟ್ಟಿನೆಲೆ ಕಂಡುಕೊಳ್ಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಒಬ್ಬ ನಟನಿಗೆ ಏನೆಲ್ಲಾ ಅರ್ಹತೆ ಬಿರಬೇಕೋ ಎಲ್ಲವನ್ನೂ ಕರಗತ ಮಾಡಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ ಯಶ್ರಾಜ್.
*ಅವಕಾಶ ಕೊಟ್ಟ ಅನ್ನದಾತರು
ಸಾಮಾನ್ಯವಾಗಿ ಹೊಸಬರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಸಿಗೋದು ತುಬಾನೇ ಕಷ್ಟ. “ರಮೇಶ್ ಸುರೇಶ್” ಚಿತ್ರದ ನಿರ್ದೇಶಕರಾದ ನಾಗರಾಜ್ ಹಾಗೂ ರಘುರಾಜ್ ಗೌಡ ಮತ್ತು ಹೀರೋಗಳಾದ ಬೆನಕ ಮತ್ತು ಯಶ್ ರಾಜ್ ಅವರಲ್ಲಿರುವ ಪ್ರತಿಭೆ ಹಾಗೂ ಶ್ರದ್ಧೆ ನೋಡಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕಥಾಹಂದರದಲ್ಲಿರುವ ಗಟ್ಟಿತನ ನೋಡಿ ನಿರ್ಮಾಪಕರಾದ ಕೃಷ್ಣ ಮತ್ತು ಶಂಕರ್ ಅವಕಾಶ ನೀಡಿದ್ದಾರೆ. ಈಗಾಗಲೇ ಚಿತ್ರದ ಕೆಲ ದೃಶ್ಯ ನೋಡಿ ಹಾಡು ಕೇಳಿರುವ ನಿರ್ಮಾಪಕರಿಗೆ ಕನ್ನಡದಲ್ಲಿ ಹೊಸ ಬಗೆಯ ಕಥೆ ಇರುವ ಚಿತ್ರ ಮಾಡಿರುವ ಖುಷಿ ಇದೆ. ಈಗಾಗಲೇ ಗಾಂಧಿನಗರದಲ್ಲಿ ಕೊಂಚ ಸುದ್ದಿಯಾಗಿರುವ “ರಮೇಶ್ ಸುರೇಶ್” ಚಿತ್ರ ಆದಷ್ಟು ಬೇಗ ತನ್ನ ಕೆಲಸ ಮುಗಿಸಿ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ.