Categories
ಟಾಲಿವುಡ್

ಅಮೇಜಾನ್ ಪ್ರೈಂನಲ್ಲಿ  ನಾನಿ ಸಿನಿಮಾ‌ ಸೆಪ್ಟೆಂಬರ್‌ ೫ ಕ್ಕೆ ಜಾಗತಿಕ ರಿಲೀಸ್

ನಾನಿ

ತೆಲುಗು ನಟ ನಾನಿ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ವಿ’ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗುತ್ತಿದ್ದು, ಸೆಪ್ಟೆಂಬರ್ 5ರಿಂದ ಜಾಗತಿಕ ಪ್ರದರ್ಶನ ಕಾಣುತ್ತಿದೆ.

ಮೋಹನಾ ಕೃಷ್ಣ ಇಂದ್ರಗಂಟಿಯವರು ಕಥೆ-ಚಿತ್ರಕಥೆ ಬರೆದು, ನಿರ್ದೇಶಿಸಿರುವ ಈ ಚಿತ್ರದಲ್ಲಿ ನಾನಿ ಜೊತೆ ಸುಧೀರ್ ಬಾಬು, ನಿವೇತಾ ಥಾಮಸ್ ಮತ್ತು ಆದಿತಿ ರಾವ್ ಹೈದರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೊರೊನಾ ವೈರಸ್ ಕಾರಣದಿಂದ ದೇಶಾದ್ಯಂತ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, 150ಕ್ಕೂ ಅಧಿಕ ದಿನಗಳು ಕಳೆದಿದೆ. ಇದುವರೆಗೂ ಥಿಯೇಟರ್ ತೆರೆಯಲು ಅನುಮತಿ ಸಿಕ್ಕಿಲ್ಲ. ಹೀಗಾಗಿ, ಸ್ಟಾರ್ ನಟರು ಆನ್‌ಲೈನ್ ಮೂಲಕ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ.

‘ವಿ’ ಚಿತ್ರದ ಜಾಗತಿಕ ಪ್ರದರ್ಶನದ ಬಗ್ಗೆ ನನಗೆ ಬಹಳ ಸಂತೋಷವಿದೆ. ಇದು ನನ್ನ 25ನೇ ಚಿತ್ರವಾಗಿದೆ. ಇಷ್ಟು ದಿನ ನನ್ನ ಸಿನಿಮಾ ನೋಡಲು ನೀವೆಲ್ಲ ಚಿತ್ರಮಂದಿರಕ್ಕೆ ಬರುತ್ತಿದ್ದೀರಿ. ಅದಕ್ಕಾಗಿ ನಿಮಗೆ ಧನ್ಯವಾದ ಹೇಳಲು ನಾನೇ ನಿಮ್ಮ ಮನೆಗೆ ಆಗಮಿಸುತ್ತಿದ್ದೇನೆ” ಎಂದು ನಾನಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

‘ವೈಯಕ್ತಿಕವಾಗಿ ನನಗೆ ಆಕ್ಷನ್ ಥ್ರಿಲ್ಲರ್ ಗಳನ್ನು ನೋಡಲು ಇಷ್ಟವಾಗುತ್ತದೆ, ‘ವಿ’ ಅದೇ ರೀತಿಯ ಚಿತ್ರವಾಗಿದ್ದು, ರೋಮಾಂಚನ, ಡ್ರಾಮಾ ಮತ್ತು ಆಕ್ಷನ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ. ಸುಧೀರ್ ಬಾಬು ಮತ್ತು ನನ್ನ ನಡುವಿನ ಇಲಿ-ಬೆಕ್ಕಿನ ಆಟವು ನೋಡಗರಿಗೆ ಭರಪೂರ ರಂಜನೆ ನೀಡಲಿದೆ’ ಎಂದು ನಾನಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರೈಂ ಸದಸ್ಯರು ವಿ ಚಿತ್ರವನ್ನು ಎಲ್ಲಿಯಾದರೂ, ಯಾವ ಸಮಯದಲ್ಲಾದರೂ, ಸ್ಮಾರ್ಟ್ ಟಿವಿ, ಮೊಬೈಲ್, ಫಿರ್ ಟಿವಿ, ಪೈಟ್ ಟಿವಿ ಸ್ಟಿಕ್, ಫೈರ್ ಟಾಬ್ಲೆಟ್, ಆಪಲ್ ಟಿವಿ, ಏರ್ಟೆಲ್, ವೊಡಾಫೋನ್ ಇತ್ಯಾದಿ ಪ್ರೈಂ ವೀಡಿಯೊ ಆಪ್ ಗಳಲ್ಲಿ ನೋಡಬಹುದು. ಪ್ರೈಂ ವೀಡಿಯೊ ಆಪ್ ನಲ್ಲಿ ಸದಸ್ಯರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಚಿಕೆಗಳನ್ನು ತಮ್ಮ ಮೊಬೈಲ್ ಉಪಕರಣಗಳಲ್ಲಿ ಡೌನ್ಲೋಡ್ ಮಾಡಿ ನೋಡಬಹುದು.ಭಾರತದಲ್ಲಿ ಪ್ರೈಂ ವೀಡಿಯೊ ವಾರ್ಷಿಕ ರೂ. 999 ಅಥವಾ ಮಾಸಿಕ ರೂ. 129 ಗೆ ಪ್ರೈಂ ಸದಸ್ಯತ್ವದಲ್ಲಿ ಲಭ್ಯವಿದೆ

Categories
ಸಿನಿ ಸುದ್ದಿ

ಹಾರಲು ರೆಡಿಯಾದ ಚಿಟ್ಟೆ

     ಎಸ್ಎಲ್ಎನ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿತವಾಗಿರುವ ‘ಚಿಟ್ಟೆ ಮ್ಯಾನ್’ ಚಿತ್ರ  ಗೌರಿ-ಗಣೇಶನ ಹಬ್ಬದ ಶುಭ ಸಂದರ್ಭದಲ್ಲಿ  ಇದೇ ಅ. 21 ರಂದು V4ಸ್ಟ್ರೀಮ್ OTT ನಲ್ಲಿ ವಿಶ್ವಾದ್ಯಂತ ತೆರೆ ಕಾಣುತ್ತಿದೆ.  ಸಮಾಜಘಾತುಕ ಮನಸುಳ್ಳ ವ್ಯಕ್ತಿಗಳು ನಮ್ಮ ಅಕ್ಕ ಪಕ್ಕದಲ್ಲೇ ಇದ್ದು ತಮ್ಮ  ಭವಿಷ್ಯವನ್ನು
ಹಾಳುಮಾಡಿಕೊಳ್ಳುವ  ಜೊತೆಗೆ  ಸಮಾಜದ ಮುಂದಿನ ಭವಿಷ್ಯ ರೂಪಿಸಬೇಕಾದ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಾರೆ. ಇಂತಹ ಕಿರಾತಕರನ್ನು ಸದೆಬಡೆಯಲು ಒಬ್ಬ ವ್ಯಕ್ತಿ ಚಿಟ್ಟೆಮ್ಯಾನ್ ಆಗಿ ರೂಪಾಂತರಗೊಂಡು ಅನ್ಯಾಯ ಅಕ್ರಮಗಳಿಗೆ ಅಡಿವಾಣ ಹಾಕುತ್ತಾನೆ ಇದು ಚಿಟ್ಟೆ ಮ್ಯಾನ್ ಚಿತ್ರದ ಕಥಾ ವಸ್ತುವಾಗಿದೆ ಎಂದು ತಿಳಿಸಿರುವ ನಿರ್ದೇಶಕ ಎಸ್ ಎಲ್ ಎನ್ ನರಸಿಂಹ ಸ್ವಾಮಿ ಅವರೇ ಚಿತ್ರ ನಿರ್ಮಾಣವನ್ನೂ ಮಾಡಿದ್ದಾರೆ. ಸಹಕಾರ ನಿರ್ದೇಶನ ಮುರಳಿ ಪ್ರಸಾದ್, ಹೆಚ್.ಪಿ. ನರಸಿಂಹಸ್ವಾಮಿ , ವೈಷ್ಣವಿ ತಿವಾರಿ , ನಿಸರ್ಗ , ಶಶಿ , ನಂದೀಶ್ ಮುಂತಾದವರು ನಟಿಸಿದ್ದಾರೆ. ಸುಮಾರು ೪೫ದಿನ ಬೆಂಗಳೂರು ಸುತ್ತಮುತ್ತ ಚಿಟ್ಟೆ ಮ್ಯಾನ್ ಚಿತ್ರವನ್ನು ಚಿತ್ರೀಕರಿಸಲಾಗಿದೆ.
Categories
ಸಿನಿ ಸುದ್ದಿ

ಅರೆರೆ…..ಅಕ್ಷರ!!!!

ಅಕ್ಷರ ಗೌಡ

ಅಚ್ಚರಿ ಹುಟ್ಟಿಸುವ ನಟಿ ಮಣಿಯರ ಈ ಬಗೆಯ ಗ್ಲಾಮರ್ ಲುಕ್ ಬಾಲಿವುಡ್, ಟಾಲಿವುಡ್ ನಲ್ಲಿ ಮಾತ್ರವೇ ಸಾಧ್ಯವೇ? ನೋ, ಹಾಗೊಂದು ಲೆಕ್ಕಚಾರ ತಲೆಕೆಳಗು ಆಗುವಂತೆ ಈ ಹಾಟ್ ಕೊಟ್ಟವಳು ಕನ್ನಡದ ನಟಿ. ಹೆಸರು ಅಕ್ಷರ ಗೌಡ. ಯೋಗರಾಜ್ ಭಟ್ಟರ ಪಂಚತಂತ್ರ ಸಿನಿಮಾ‌ ನೋಡಿದವರಿಗೆ  ಈಕೆ ಚಿರಪರಿಚಿತ.‌ಯಾಕಂದ್ರೆ ಅಲ್ಲಿ ಭರ್ಜರಿ ಕುಣಿದು ಕುಪ್ಪಳಿಸಿದ ಸುರ ಸುಂದರಾಂಗಿ. ಒಂದ್ ಕ್ಷಣ ಈ ಬೆಡಗಿಯ ಮಾದಕ ಮೈ ಮಾಟ ಒಂದ್ಸಲ ಕಣ್ತುಂಬಿಕೊಳ್ಳಿ.

Categories
ಸಿನಿ ಸುದ್ದಿ

ಅಭಿ ಮತ್ತು ಗ್ಯಾಂಗ್ ಗಜಾನನ ಹುಡುಗರ ಭರ್ಜರಿ ಲುಕ್

ನಮ್ ಗಣಿ ಬಿಕಾಂ ಪಾಸ್… ಈ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಒಂದೊಳ್ಳೆಯ ಸಂದೇಶ ಇರುವ ಚಿತ್ರ ಕೊಟ್ಟಿದ್ದು ಯುವ ನಿರ್ದೇಶಕ ಅಭಿಷೇಕ್ ಶೆಟ್ಟಿ.
ಹೌದು ನಟನೆ ಹಾಗೂ ನಿರ್ದೇಶನ‌ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ಕನಸುಗಾರ. ಅಭಿಷೇಕ್ ಶೆಟ್ಟಿ ಗಿರುವ ಸಿನಿಮಾ ಅಭಿಮಾನ, ಪ್ರೀತಿ ಎಂಥದ್ದು ಎಂಬುದಕ್ಕೆ ಸದ್ಯ ಅಮೆಜಾನ್ ಪ್ರೈಮ್ ವಿಡಿಯೊ ದಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆಯುತ್ತಿರುವ ಸಿನಿಮಾ ಸಾಕ್ಷಿ.
ಈಗ ಡಿಸ್ಟಿಂಕ್ಷನ್ ಪಡೆದ ನಮ್ ಗಣಿ ಹೊಸ ಸಿನಿಮಾ ಮಾಡುತ್ತಿರೋದು ಗೊತ್ತೇ ಇದೆ. ಗಜಾನನ‌ ಗ್ಯಾಂಗ್ ಕಟ್ಟಿಕೊಂಡು
ತಮ್ಮ ಮುಂದಿನ‌ ಸಾಹಸಕ್ಕೆ ಹೆಜ್ಜೆ ಇಟ್ಟಿದ್ದಾರೆ. ಇವರ ಭರವಸೆಯ ಪ್ರಯತ್ನಕ್ಕೆ ನಿರ್ಮಾಪಕ ನಾಗೇಶ್ ಕುಮಾರ್ ಮತ್ತದೇ ನಂಬಿಕೆಯಲ್ಲಿ ಹಣ ಹಾಕುತ್ತಿದ್ದಾರೆ. ಈ ಗಜಾನನ ಗ್ಯಾಂಗ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರ ಬಂದಿದೆ. ಮೊದಲ ಲುಕ್ ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ನಿರೀಕ್ಷೆ ಹೆಚ್ಚಿಸಿದ್ದಾರೆ. ಈಗಷ್ಟೇ ಗ್ಯಾಂಗ್ ಕಟ್ಟಿಕೊಂಡು ಹೋರಾಡೋಕೆ ಸಜ್ಜಾಗಿದ್ದಾರೆ. ಅವರ ಗ್ಯಾಂಗ್ ಪ್ರಯತ್ನ ಯಶಸ್ವಿಯಾಗಲಿ. ಇಲ್ಲೂ ಡಿಸ್ಟಿಂಕ್ಷನ್ ಪಡೆಯಲಿ.

Categories
ಎಡಿಟೋರಿಯಲ್

ಗರಿಗೆದರಿದ ಚಿತ್ರರಂಗ

  • ಕಳೆದ ಆರು ತಿಂಗಳಿಂದಲೂ ಸಂಪೂರ್ಣ ಮಂಕಾಗಿದ್ದ ಕಲರ್ ಪುಲ್ ದುನಿಯಾ ಇದೀಗ ರಂಗೇರಲು ಸಜ್ಜಾಗಿದೆ.
    ಹೌದು ಕೊರೊನಾ ಹಾವಳಿಯಿಂದ ಚಿತ್ರರಂಗ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗ ಆ ಸಮಸ್ಯೆಯಿಂದ
    ಮೆಲ್ಲನೆ ಹೊರ ಬರುತ್ತಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಸಿನಿಮಾ ಮಂದಿ ಆಶಾಭಾವನೆಯಲ್ಲಿದ್ದಾರೆ. ಚಿತ್ರೀಕರಣ ಇಲ್ಲವಾಗಿ ಕಂಗೆಟ್ಟಿದ್ದ ತಂತ್ರಜ್ಞರ ಮೊಗದಲ್ಲೀಗ ಮಂದಹಾಸ ಬೇರೂರಿದೆ. ಶ್ರಾವಣ ಸಂಭ್ರಮದ ಜೊತೆ ಜೊತೆಯಲ್ಲೇ ಸಿನಿಮಾ‌ ಚಟುವಟಿಕೆಗೂ ಚಾಲನೆ ಸಿಗುತ್ತಿರುವ ಖುಷಿಯಲ್ಲೇ ಸಿನಿಮಾ ಮಂದಿ ಅಚ್ಛಾದಿನ್ ನೋಡುವ ಹುಮ್ಮಸ್ಸಿನಲ್ಲಿದ್ದಾರೆ.
    ಕೇಂದ್ರ ಸರ್ಕಾರ ಸೆಪ್ಟೆಂಬರ್ ವೇಳೆಗೆ ಥಿಯೇಟರ್ ಆರಂಭಕ್ಕೆ ಹಸಿರು ನಿಶಾನೆ‌ ತೋರುವ ಉತ್ಸುಕತೆಯಲ್ಲಿದೆ. ಈಗಾಗಲೇ ಕೆಲ ಚಿತ್ರಗಳು ಚಿತ್ರೀಕರಣದಲ್ಲಿ ತೊಡಗಿವೆ. ಬಿಡುಗಡೆಗೆ ಸಜ್ಜಾಗಿದ್ದ ಸಿನಿಮಾಗಳು ಚಿತ್ರಮಂದಿರಗಳಿಲ್ಲದೆ ಸೊರಗಿದ್ದವು.‌ಈಗ ಚಿತ್ರಮಂದಿರಗಳು ಬಾಗಿಲು ತೆರೆಯುವ ಸೂಚನೆ ಸಿಕ್ಕಿದೆ. ಸ್ಟಾರ್ ಸಿನಿಮಾಗಳು ಮೊದಲು ಬಿಡುಗಡೆಯಾಗುವ ಮೂಲಕ ಸಿನಿ ಪ್ರೇಮಿಗಳನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡಬೇಕಿದೆ. ಆ ಬಳಿಕ ಸಾಲುಗಟ್ಟಿರುವ ಅನೇಕ ಹೊಸಬರು ಹಳಬರು ಚಿತ್ರಮಂದಿರಗಳತಗತ ಮುಖ ಮಾಡಲಿದ್ದಾರೆ. ಅದೇನೆ ಇರಲಿ, ಕೊರೊನಾ ದೂರವಾಗಿ ಜನರು ಎಂದಿನಂತೆ ಬದುಕು ಸಾಗಿಸಿದರೆ ಎಲ್ಲವೂ ತಾನಾಗಿಯೇ‌ ಸರಿಹೋಗಲಿದೆ. ಇದಕ್ಕೆ ಕಲರ್ ಫುಲ್ ದುನಿಯಾ ಕೂಡ ಹೊರತಲ್ಲ. ಆದಷ್ಟು ಬೇಗ ಚಿತ್ರಮಂದಿರಗಳಲ್ಲಿ ಸಿನಿಮಾಗಳು ಬಿಡುಗಡೆಯಾಗಿ ಜನರು ಕಿಕ್ಕಿರಿದು ಆಗಿನ‌ ಸಂಭ್ರಮ ಮರುಕಳಿಸಲು ದೊಡ್ಡ ಪಾತ್ರ ವಹಿಸಬೇಕಿದೆ.
Categories
ಸಿನಿ ಸುದ್ದಿ

ಫ್ಯಾಂಟಮ್ ಸೇರಿಕೊಂಡ ಮತ್ತೊಬ್ಬ ಚೆಲುವೆ

ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರಕ್ಕೆ ಹೊಸ ನಾಯಕಿ‌ ಎಂಟ್ರಿ ಕೊಟ್ಟಿದ್ದಾಳೆ. ಅಪರ್ಣ ಬಲ್ಲಾಳ್ ಎಂಬ ಪಾತ್ರದಲ್ಲಿ ಇದೇ ಮೊದಲ ಸಲ ನೀತು ಅಶೋಕ್ ಕಾಣಿಸಿಕೊಳ್ಳುತ್ತಿದ್ದಾರೆ. ಅದೊಂದು ಹಿಂದಿ ಮಿಶ್ರಿತ ಕನ್ನಡ ಮಾತನಾಡುವ ‌ಪಾತ್ರ. ಸದ್ಯಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಇದನ್ನು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಜೋರಾಗಿ ನಡೆಯುತ್ತಿದೆ.

 

 

Categories
ಸಿನಿ ಸುದ್ದಿ

ವಿಕ್ರಮ್ ಹುಟ್ಟು ಹಬ್ಬಕ್ಕೆ ಹೊರ ಬಂತು ತ್ರಿವಿಕ್ರಮ್ ಅಫೀಸಿಯಲ್ ಟೀಸರ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಗೆ ಗಮಭಾನುವಾರ ಹುಟ್ಟು ಹಬ್ಬಸ ಸಂಭ್ರಮ. ಅವರ ಹುಟ್ಟು ಹಬ್ಬದ ಗಿಫ್ಟ್ ಆಗಿ ವಿಕ್ರಮ್ ಚೊಚ್ಚಲ ಚಿತ್ರ ತ್ರಿವಿಕ್ರಮ್ ನ ಅಫೀಸಿಯಲ್ ಟೀಸರ್ ಹೊರ ಬಂದಿದೆ‌.ಅದು ಹೊರ ಬಂದ ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳ ಆಶೀರ್ವಾದ ದಿಂದ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅ ಟೀಸರ್ ಲಾಂಚ್ ಆದ ಕೇವಲ‌ಮೂರು ಗಂಟೆಗಳಲ್ಲಿ ಅದನ್ನು ನೋಡಿದವರ ಸಂಖ್ಯೆ ೫೦ ಸಾವಿರ ದಾಟಿತ್ತು.‌ಈ ಹೊತ್ತಿಗೆ ಅದು ಲಕ್ಷಾಂತರ ನೋಡುಗರನ್ನು ದಾಖಲಿಸುವುದು ಗ್ಯಾರಂಟಿ.‌ ಇದು ವಿಕ್ರಮ್ ಅಭಿನಯದ ಚೊಚ್ಚಲ ಚಿತ್ರ. ಚಿತ್ರದಲ್ಲಿ ಪಕ್ಕಾ ರಗಡ್ ಲುಕ್ ಮೂಕ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿರುವ ವಿಕ್ರಮ್ ಮಾಸ್ ಹೀರೊ ಆಗುವುದು ಖಚಿತ.‌ಹಾಗೆಯೇ‌ಲವರ್ ಬಾಯ್ ಕೂಡ. ಅಂತಹ ಅಂಶಗಳು ಚಿತ್ರದಲ್ಲಿ ಗಟ್ಟಿ ಆಗಿರುವುದಕ್ಕೆ ಟೀಸರ್ ಸುಳಿವು ನೀಡುತ್ತದೆ. ಸಹನಾ‌ಮೂರ್ತಿ ನಿರ್ದೇಶನದ ಈ ಚಿತ್ರಕ್ಕೆ ಸೋಮಶೇಖರ್ ಅಲಿಯಾಸ್ ಸೋಮಣ್ಣ ಬಂಡವಾಳ ಹಾಕಿದ್ದಾರೆ. ಮುಂಬೈ ಮೂಲದ ಚೆಲುವೆ ಆಕಾಂಕ್ಷಾ ಶರ್ಮಾ ನಾಯಕಿ ಆಗಿದ್ದಾರೆ. ಚಿತ್ರ ರಿಲೀಸ್ ಗೆ ರೆಡಿಯಾಗಿದೆ.‌ಕೊರೊನಾ ಕಾರಣಕ್ಕೆ ಸೂಕ್ತ ಸಮಯ ಎದುರು‌ನೋಡುತ್ರಿದೆ ಚಿತ್ರತಂಡ.‌ ಸದ್ಯಕ್ಕೀಗ ವಿಕ್ರಮ್ ಬರ್ತ್ ಡೇ ಗೆ ಟೀಸರ್ ಲಾಂಚ್ ಮಾಡಿ‌ಸುದ್ದಿ‌ಮಾಡಿದೆ.ಇದೇ ವೇಳೆ ‘ಪ್ರಾರಂಭ’ ಚಿತ್ರ ತಂಡ ಕೂಡ ವಿಕ್ರಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದೆ.

Categories
ಸಿನಿ ಸುದ್ದಿ

ಶ್ರೀ ಗಣೇಶಾಯ ನಮಃ ….

error: Content is protected !!