Categories
ಸಿನಿ ಸುದ್ದಿ

ಕ್ರಿಸ್ಮಿ ಮೆಹಂದಿ ಸಂಭ್ರಮ

ಮದ್ವೆ ಸಡಗರದಲ್ಲಿ ಲವ್‌ ಮಾಕ್ಟೇಲ್‌ ಜೋಡಿ

ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಸುದ್ದಿ. ಹೌದು, ಲಾಕ್‌ಡೌನ್ ಶುರುವಾದಾಗಿನಿಂದ ದೊಡ್ಡ ಮಟ್ಟದ ಮನರಂಜನೆ ಸೇರಿದಂತೆ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಅದರಲ್ಲೂ ಸಿನಿಮಾ ರಂಗದಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿರಲಿಲ್ಲ. ಈಗ “ಲವ್‌ ಮಾಕ್ಟೇಲ್‌” ಜೋಡಿಯ ಮದ್ವೆ ಸುದ್ದಿ ಜೋರು ಸದ್ದು ಮಾಡುತ್ತಿದೆ.

ಹೌದು, ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮದುವೆ ಮೂಡ್‌ನಲ್ಲಿದ್ದಾರೆ. ಮಿಲನಾ ನಾಗರಾಜ್‌ ಹಾಗೂ ಕೃಷ್ಣ ಇಬ್ಬರೂ ಪ್ರೀತಿಸಿ ಮದ್ವೆಯಾಗುತ್ತಿದ್ದಾರೆ ಅನ್ನೋದು ವಿಶೇಷ. ಕನ್ನಡ ಸಿನಿಮಾರಂಗದಲ್ಲಿ ಹಾಗೊಮ್ಮೆ ಹಿಂದಿರುಗಿ ನೋಡಿದರೆ, ಬಹುತೇಕ ನಟ,ನಟಿಯರು ಲವ್‌ ಮಾಡಿಯೇ ಮದ್ವೆಯಾಗಿದ್ದಾರೆ. ಆ ಸಾಲಿಗೆ ಕೃಷ್ಣ ಹಾಗೂ ಮಿಲನಾ ಕೂಡ ಸೇರುತ್ತಿದ್ದಾರೆ.

ಇವರಿಬ್ಬರ ಪ್ರೀತಿಯ ಬಗ್ಗೆ ಸುದ್ದಿ ಇತ್ತಾದರೂ, ಎಲ್ಲೂ ಅವರು ಓಪನ್‌ ಆಗಿ ಹೇಳಿಕೊಂಡಿರಲಿಲ್ಲ. ಯಾವಾಗ “ಲವ್‌ ಮಾಕ್ಟೇಲ್‌” ಚಿತ್ರ ಗೆಲುವು ಕೊಟ್ಟಿತೋ, ಆ ಸಕ್ಸಸ್‌ನ ಸಂಭ್ರಮದಲ್ಲೇ ತಮ್ಮ ಪ್ರೀತಿ ವಿಷಯವನ್ನು ಹಂಚಿಕೊಂಡಿದ್ದಲ್ಲದೆ, ಮದ್ವೆ ಆಗುತ್ತಿರುವ ವಿಷಯವನ್ನೂ ಹೇಳಿಕೊಂಡಿದ್ದರು. ಅದರಂತೆ ಅವರು, ಚಿತ್ರರಂಗದ ಬಹುತೇಕರಿಗೆ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.


ಇನ್ನು, ಮದ್ವೆ ಫೆ.೧೪ರ ಪ್ರೇಮಿಗಳ ದಿನದಂದು ನಡೆಯಲಿದೆ. ಅಂದೇ ಸಂಜೆ ಅರತಕ್ಷತೆಯೂ ಇದೆ. ಸದ್ಯಕ್ಕೆ ಈ ಜೋಡಿ ಹಾಸನದ ಹೊರವಲಯದಲ್ಲಿರುವ ನಂದಗೋಕುಲ ಹಾಲ್‌ನಲ್ಲಿ ಅದ್ಧೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಮಿಲನಾ ನಾಗರಾಜ್ ಕೂಡ ಮೂಲತಃ ಹಾಸನದವರೆ ಆಗಿದ್ದು, ತನ್ನೂರಿನಲ್ಲಿಯೇ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಪ್ರೀತಿಸುತ್ತಲೇ ಜೊತೆಗೊಂದು ಸಕ್ಸಸ್‌ಫುಲ್‌ ಸಿನಿಮಾ ಕೊಟ್ಟ ಈ ಜೋಡಿ, ಬದುಕಲ್ಲೂ ಒಂದಾಗುತ್ತಿದೆ. ಸದ್ಯ ಅವರಿಬ್ಬರ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.

 

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಮಣಿರತ್ನಂ ಸಿನಿಮಾದಲ್ಲಿ ಶಾಲಿನಿ ಅಜಿತ್‌?

ಇಪ್ಪತ್ತು ವರ್ಷಗಳ ನಂತರ ಮತ್ತೆ ತೆರೆಗೆ!

ಎಂಬತ್ತರ ದಶಕದ ಜನಪ್ರಿಯ ಬಾಲನಟಿ ಶಾಲಿನಿ. ತಮಿಳು, ತೆಲುಗು ಮತ್ತು ಮಲಯಾಳಂನ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಬಾಲನಟಿಯಾಗಿ ಮಿಂಚಿದ್ದರು. 1997ರಲ್ಲಿ ಫಾಝಿಲ್ ನಿರ್ದೇಶನದ ‘ಅನಿಯಾಥು ಪಿರವು’ ಮಲಯಾಳಂ ಚಿತ್ರದೊಂದಿಗೆ ಅವರು ನಾಯಕಿಯಾದರು. ಈ ಸಿನಿಮಾ ‘ಕಾದಲುಕ್ಕು ಮರ್ಯಾದೈ’ ಶೀರ್ಷಿಕೆಯಡಿ ತಮಿಳಿಗೆ ರಿಮೇಕ್ ಆಯ್ತು. ವಿಜಯ್ ಹೀರೋ ಆಗಿ ನಟಿಸಿದ್ದ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು.

ಹಾಗೆ ಶಾಲಿನಿ ನಾಯಕಿಯಾಗಿಯೂ ಗೆಲುವು ಕಂಡರು. ಸುಮಾರು ಹತ್ತು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಶಾಲಿನಿ ‘ಅಮರ್‌ ಕಲಂ’ ತಮಿಳು ಸಿನಿಮಾ ಸಂದರ್ಭದಲ್ಲಿ ನಟ ಅಜಿತ್‌ರ ಪ್ರೇಮದ ಬಲೆಗೆ ಸಿಲುಕಿದರು. 2000ನೇ ಇಸವಿಯಲ್ಲಿ ಅಜಿತ್‌ರನ್ನು ವರಿಸಿದ ಅವರು ಮುಂದೆ ಸಿನಿಮಾದಿಂದ ದೂರವೇ ಉಳಿದರು. ಈ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಅನೌಷ್ಕಾ ಮತ್ತು ಆದ್ಯಂತ್‌. 2001ರಲ್ಲಿ ತೆರೆಕಂಡ ಪ್ರಶಾಂತ್ ಜೊತೆಗಿನ ‘ಪಿರ್ಯಾತ ವರಂ ವೇಂಡಂ’ ಅವರು ನಾಯಕಿಯಾಗಿ ಕಾಣಿಸಿಕೊಂಡ ಕೊನೆಯ ಸಿನಿಮಾ.


ಇದೀಗ ಇಪ್ಪತ್ತು ವರ್ಷಗಳ ನಂತರ ಅವರು ತೆರೆಗೆ ಮರಳುವ ಸೂಚನೆ ಸಿಕ್ಕಿದೆ. ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್‌’ ತಮಿಳು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮಣಿರತ್ನಂ ನಿರ್ದೇಶನದ ಸೂಪರ್‌ಹಿಟ್‌ ‘ಅಲೈಪಾಯುತೆ’ ಚಿತ್ರದಲ್ಲಿ ಮಾಧವನ್‌ ಜೊತೆ ನಟಿಸಿದ್ದರು ಶಾಲಿನಿ. ಇದೀಗ ಮಣಿರತ್ನಂ ಅವರದೇ ಚಿತ್ರದೊಂದಿಗೆ ತೆರೆಗೆ ಮರಳಲಿದ್ದಾರೆ. ನಟ ಅಜಿತ್‌ ಕೂಡ ಈ ಬಗ್ಗೆ ಖುಷಿಯಾಗಿದ್ದು, ಅಧಿಕೃತ ಘೋಷಣೆ ಹೊರ ಬೀಳಬೇಕಿದೆ.

Categories
ಸಿನಿ ಸುದ್ದಿ

ಅಂಧನೊಬ್ಬನ ಭಾವುಕ ಪಯಣದಲ್ಲಿ ಮೌಲ್ಯ ಸಂದೇಶ

ಫೆ.13ಕ್ಕೆ ಕಣ್ತೆರೆದು ನೋಡು ಚಿತ್ರದ ಟೀಸರ್ ರಿಲೀಸ್

ಶಿವಪ್ಪ ಕುಡ್ಲೂರು

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ನೃತ್ಯ ನಿರ್ದೇಶಕರು ಒಂದೊಳ್ಳೆಯ ಕಥೆ ಮೂಲಕ ನಿರ್ದೇಶನ ಮಾಡಿದ್ದಾರೆ. ಈಗ ಆ ಸಾಲಿಗೆ
ನೃತ್ಯ ನಿರ್ದೇಶಕ ಎಂ.ಆರ್.ಕಪಿಲ್ ಕೂಡ ಸೇರಿದ್ದಾರೆ. ಕಪಿಲ್ ಈ ಹಿಂದೆಯೂ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಕಪಿಲ್ , ನಿರ್ದೇಶಕ

ಇದೀಗ “ಕಣ್ತೆರೆದು ನೋಡು”ವಂತಹ ಕೆಲಸ ಮಾಡಿದ್ದಾರೆ. ಹೌದು, ನಿರ್ದೇಶಕ ಕಪಿಲ್ ಈಗ ಫುಲ್ ಹ್ಯಾಪಿ ಮೂಡ್ ನಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ನಿರ್ದೇಶನದ “ಕಣ್ತೆರೆದು ನೋಡು” ಚಿತ್ರ ಶೂಟಿಂಗ್ ಮುಗಿದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದಕ್ಕೂ ಮುನ್ನ ಅವರು ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಾಗಿದ್ದಾರೆ.

ಕಳೆದ ನವೆಂಬರ್ 14ರಂದು “ಕಣ್ತೆರೆದು ನೋಡು” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಈಗ ಟೀಸರ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಫೆಬ್ರವರಿ13ರ ಶನಿವಾರ ಬೆಳಗ್ಗೆ 10.31ಕ್ಕೆ ಚಿತ್ರದ ಟೀಸರ್ ಅನಾವರಣಗೊಳ್ಳಲಿದೆ.
ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ನೃತ್ಯ ನಿರ್ದೇಶಕರಾಗಿರುವ ಎಂ.ಆರ್. ಕಪಿಲ್ ಅವರದೇ ಕಥೆ, ಚಿತ್ರಕಥೆ ಹೊಂದಿರುವ ಈ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದೆ.

ಅಂದಹಾಗೆ, ಕುಶಿಲ ಸಿನಿ ಪ್ರೊಡಕ್ಷನ್ಸ್ ನ ಮೊದಲ ನಿರ್ಮಾಣದ ಚಿತ್ರವಿದು. ಶಿವಪ್ಪ ಕುಡ್ಲೂರು ಈ ಚಿತ್ರದ ಕಥಾ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದು ಅಂಧನೊಬ್ಬನ ಕಥೆ ಹೊಂದಿದ್ದು, ಸಮಾಜಕ್ಕೊಂದು ಸಂದೇಶ ಸಾರುವ ಅಂಶವಿದೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು ಅಂಧ ಗಾಯಕರ ಧ್ವನಿ ಇರುವುದು ವಿಶೇಷ. ಚಿತ್ರಕ್ಕೆ ದಿನೇಶ್ ಈಶ್ವರ್ ಅವರ ಸಂಗೀತವಿದೆ.

ಚಿತದ ಪ್ರಮುಖ ಕಲಾವಿದ ಶಿವಪ್ಪ ಕುಡ್ಲೂರು,ಅವರಿಗೆ ಬಾಲ್ಯದಿಂದಲೇ ನಟನೆ ಆಸಕ್ತಿ ಇದ್ದುದರಿಂದ ಒಳ್ಳೆಯ ಸಿನಿಮಾ ಮೂಲಕ ಕಾಣಿಸಿಕೊಳ್ಳಬೇಕೆಂಬ ಆಸೆಗೆ “ಕಣ್ತೆರೆದು ನೋಡು” ಚಿತ್ರ ಸಿಕ್ಕಿದೆ. ಅವರಿಲ್ಲಿ ಅಂಧನೊಬ್ಬನ ಪಾತ್ರದಲ್ಲಿ ಗಮನಸೆಳೆಯುತ್ತಿದ್ದಾರೆ.

ಚಿತ್ರದಲ್ಲಿ ಇವರೊಂದಿಗೆ ಉಮೇಶ್, ಶಿವಕುಮಾರ್ ಜೀವರಾಜ್, ಡಾ.ದೊಡ್ಡರಂಗೇಗೌಡ, ವಿ.ಮನೋಹರ್,ಕೆ.ಎಂ.ಇಂದ್ರ,ಮೈಸೂರು ರಮಾನಾಥ್, ರೇಖಾದಾಸ್, ಶಂಕರ್ ಭಟ್ ಇತರರು ನಟಿಸಿದ್ದಾರೆ.

ಈ ಚಿತ್ರಕ್ಕೆ ಪುಷ್ಪಲತಾ ಕುಡ್ಲೂರು ನಿರ್ಮಾಪಕರು. ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ನಿರ್ದೇಶಕ ಕಪಿಲ್ ಹೆಣೆದ ಅಂಧನೊಬ್ಬನ‌ ಕಥೆಗೆ ಬಂಡವಾಳ ಹಾಕಿದ್ದಾರೆ.

ಸಿ.ನಾರಾಯಣ್ ಕ್ಯಾಮರಾ ಹಿಡಿದಿದ್ದಾರೆ. ಆರ್.ಡಿ.ರವಿ ಸಂಕಲನ ಮಾಡಿದ್ದಾರೆ. ಇನ್ನು ಚಿತ್ರದ ನಿರ್ಮಾಣದಲ್ಲಿ ಹರೀಶ್  ಹೆಬ್ಬಗೋಡು, ಡಾ. ಸಿ.ಬಿ.ಶಶಿಧರ್, ಶಿವಕುಮಾರ್ ಜೇವರಗಿ, ಸಿದ್ದು ಸಾಹುಕಾರ ಕಬಾಡಗಿ ಇತರರು ಸಾಥ್ ನೀಡಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಡ್‌ ಮ್ಯಾನರ್ಸ್‌ಗೆ ಇಬ್ಬರು ಬೆಡಗಿಯರು

ರಚಿತಾರಾಮ್‌ ಪ್ರಿಯಾಂಕ ಎಂಟ್ರಿ

ಅಭಿಷೇಕ್‌ ಅಂಬರೀಶ್ ಅಭಿನಯದ “ದುನಿಯಾ” ಸೂರಿ ನಿರ್ದೇಶನದ ”ಬ್ಯಾಡ್‌ ಮ್ಯಾನರ್ಸ್‌” ಚಿತ್ರದ ಚಿತ್ರೀಕರಣ ಈಗಾಗಲೇ ಜೋರಾಗಿ ನಡೆಯುತ್ತಿದೆ. ಈ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಇಲ್ಲಿ ಒಬ್ಬರಲ್ಲ, ಇಬ್ಬರು ನಾಯಕಿಯರು “ಬ್ಯಾಡ್‌ ಮ್ಯಾನರ್ಸ್‌”ಗೆ ಜೋಡಿಯಾಗಿದ್ದಾರೆ.

ಹೌದು, ರಚಿತಾರಾಮ್‌ ಮತ್ತು ಪ್ರಿಯಾಂಕ ಅವರು ಈ ಚಿತ್ರಕ್ಕೆ ನಾಯಕಿಯರಾಗಿದ್ದಾರೆ. ಪ್ರಿಯಾಂಕ ತಮಿಳು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ ಎಂಬುದು ವಿಶೇಷ. ಈಗಾಗಲೇ ಸಂಕ್ರಾಂತಿ ದಿನದಂದು ಚಿತ್ರಕ್ಕೆ ಜೋರು ಮುಹೂರ್ತ ನೆರವೇರಿತ್ತು.

ಬಹು ನಿರೀಕ್ಷಿತ “ದುನಿಯಾ” ಸೂರಿ ನಿರ್ದೇಶನದ ಔಟ್ ಅಂಟ್ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಚಿತ್ರ “ಬ್ಯಾಡ್ ಮ್ಯಾನರ್ಸ್”ಗೆ ಈಗ ಸಿಕ್ಕಾಪಟ್ಟೆ ಕುತೂಹಲ ಮೂಡಿದೆ. ಮಗನ ಎರಡನೇ ಚಿತ್ರಕ್ಕೆ ಸುಮಲತಾ ಅವರು ಕ್ಲಾಪ್‌ ಮಾಡಿ ಶುಭಹಾರೈಸಿದ್ದರು. ದರ್ಶನ್‌ ಕೂಡ ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು. ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಲಾಗಿದ್ದ ರಗಡ್‌ ಸೆಟ್ಟಲ್ಲಿ ಚಿತ್ರಕ್ಕೆ ಚಾಲನೆ ದೊರೆತಿತ್ತು.

Categories
ಸಿನಿ ಸುದ್ದಿ

ದಚ್ಚು ಟೆಂಪಲ್ ರನ್ !

ತಿಮ್ಮಪ್ಪನ ದರ್ಶನ ಪಡೆದ ದರ್ಶನ್‌

ಇತ್ತೀಚೆಗೆ ಸ್ಟಾರ್ ನಟರು ಸಿನಿಮಾದಲ್ಲಿ ಬಿಝಿಯಾಗುತ್ತಿದ್ದಾರೆ. ಅದರ ಜೊತೆ ಜೊತೆಯಲ್ಲೇ ಅವರು ಬೇರೆ ಚಟುವಟಿಕೆಗಳತ್ತವೂ ಗಮನ ಹರಿಸುತ್ತಿದ್ದಾರೆ. ಅವರಿಗೆ ಸಮಯ ಸಿಗೋದೇ ಅಪರೂಪ. ಅದರಲ್ಲೂ ತಮ್ಮ ವೈಯಕ್ತಿಕ ಬದುಕಲ್ಲಂತೂ ಸಮಯ ನಿಗದಿಪಡಿಸೋಕೆ ಹೆಣಗಾಡುತ್ತಲೇ ಇರುತ್ತಾರೆ. ಅದಕ್ಕೆ ಕಾರಣ, ಸಿನಿಮಾಗಳ ಚಿತ್ರೀಕರಣ. ಹೌದು, ಬಹುತೇಕ ಸ್ಟಾರ್‌ ನಟರು ದೇವರ ಮೊರೆ ಹೋಗುತ್ತಿರುವುದು ಹೊಸದೇನಲ್ಲ. ಈಗ ದರ್ಶನ್‌ ಕೂಡ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಬುಧವಾರ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು, ಪಾವನರಾಗಿದ್ದಾರೆ. ಇವರಷ್ಟೇ ಅಲ್ಲ, ನಿರ್ಮಾಪಕ ಉಮಾಪತಿ, ಹಾಗೂ ತೆಲುಗು ಸಿನಿಮಾ ವಿತರಕರು ಕೂಡ ದಚ್ಚು ಅವರಿಗೆ ಸಾಥ್‌ ನೀಡಿದ್ದಾರೆ. ಅಂದಹಾಗೆ, ದರ್ಶನ್‌ ಅವರು ವರ್ಷಗಳ ನಂತರ ಪವಿತ್ರ ಸ್ಥಳಕ್ಕೆ ಭೇಟಿಯಾಗಿದ್ದಾರೆ. ದರ್ಶನ ಪಡೆದ ಬಳಿಕ ಸ್ವತಃ ದರ್ಶನ್‌ ಅವರು ಖುಷಿಗೊಂಡಿದ್ದಾರೆ. ಇನ್ನು, ದರ್ಶನ್‌ ಅವರು ದೇವಾಲಯಕ್ಕೆ ತೆರಳಲು ಬಲವಾದ ಕಾರಣವೂ ಇದೆ. ಮಾರ್ಚ್‌ ೧೧ರಂದು “ರಾಬರ್ಟ್”‌ ರಿಲೀಸ್‌ ಆಗುತ್ತಿದೆ. ಕನ್ನಡದ ಜೊತೆಯಲ್ಲಿ ತೆಲುಗು ಭಾಷೆಯಲ್ಲೂ ಚಿತ್ರ ರಿಲೀಸ್‌ ಆಗುತ್ತಿದೆ. “ರಾಬರ್ಟ್” ಸಿನಿಮಾ ಪ್ರಚಾರಕ್ಕಾಗಿ ಹೈದರಾಬಾದಿಗೂ ತೆರಳುವ ಯೋಚೆಯಲ್ಲಿರುವ ದರ್ಶನ್ ಹಾಗೆಯೇ ದರ್ಶನ ಪಡೆದಿದ್ದಾರೆ.

 

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಬಾಗಿಲು ತಟ್ಟಲಿರುವ ಕಿಲಾಡಿ ನಯನಾ?

ಪಟ್ಟಿಯಲ್ಲಿ ಹರಿದಾಡುತ್ತಿದೆ ಮಾತಿನಮಲ್ಲಿ ಹೆಸರು

“ಕಾಮಿಡಿ ಕಿಲಾಡಿಗಳು” ಖ್ಯಾತಿಯ ನಯನಾ ಬಿಗ್‌ಬಾಸ್‌ ಮನೆಗೆ ಕಾಲಿಡಲಿದ್ದಾರಾ?
ಹೀಗೊಂದು ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಹೌದು, ಸದ್ಯಕ್ಕೆ ಬಿಗ್‌ಬಾಸ್‌ ಸೀಸನ್‌-೮ ತಯಾರಿ ಜೋರಾಗಿಯೇ ಇದೆ. ಈಗಾಗಲೇ ಯಾರೆಲ್ಲಾ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡುತ್ತಾರೆ ಎಂಬ ಕೆಲವರ ಲಿಸ್ಟ್‌ ಕೂಡ ಹರಿದಾಡುತ್ತಿದೆ. ಆ ಲಿಸ್ಟ್‌ನಲ್ಲಿ “ಕಾಮಿಡಿ ಕಿಲಾಡಿ” ಖ್ಯಾತಿಯ ನಯನಾ ಅವರ ಹೆಸರು ಕೂಡ ಕೇಳಿಬರುತ್ತಿದೆ. ನಿಜವಾಗಿಯೂ ನಯನಾ ಹೆಸರು ಇದೆಯಾ? ಅವಕಾಶ ಸಿಕ್ಕರೆ ನಯನಾ ಬಿಗ್‌ಬಾಸ್‌ ಮನೆಗೆ ಹೋಗ್ತಾರಾ? ಇದು ಸದ್ಯಕ್ಕೆ ಗಿರಕಿ ಹೊಡೆಯುತ್ತಿರುವ ಪ್ರಶ್ನೆ.

ನಯನಾ ಹೆಸರು ಯಾಕೆ ಹರಿದಾಡುತ್ತಿದೆ ಎಂಬುದಕ್ಕೆ ಹಲವು ಕಾರಣಗಳಿವೆ. ನಯನಾ ಒಳ್ಳೆಯ ಮಾತುಗಾತಿ, ರಂಗಭೂಮಿ ಪ್ರತಿಭೆ, ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಏನಾದರೊಂದು ಸ್ಟೇಟಸ್‌ ಹಾಕುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಹಿಂದೆ ನಯನಾ ಸೋಶಿಯಲ್‌ ಮೀಡಿಯಾದಲ್ಲಿ ಇಂಗ್ಲೀಷ್‌ನಲ್ಲಿ ಒಂದು ಸ್ಟೇಟಸ್‌ ಹಾಕಿಕೊಂಡಿದ್ದರು. ಕನ್ನಡಿಗರ ಕಣ್ಣಿಗೆ ಅದು ಬಿದ್ದ ಕೂಡಲೇ ಸಾಕಷ್ಟು ಚರ್ಚೆ ಆಯ್ತು. ಕನ್ನಡಿಗರು ಬಾಯಿಗೆ ಬಂದಂತೆ ಮಾತಾಡಿದ್ದರು. ನಂತರ ನಯನಾ ಕೂಡ ಅವರಿಗೆ ತಮ್ಮ ಮಾತಲ್ಲೇ ಉತ್ತರ ಕೊಟ್ಟಿದ್ದರು. ಆ ನಯನಾ ಈಗ ಬಿಗ್‌ಬಾಸ್‌ ಮನೆಗೆ ಹೋಗ್ತಾರೆ ಎಂಬ ಸುದ್ದಿಯಂತೂ ಇದೆ. ಅದು ಎಷ್ಟರ ಮಟ್ಟಿಗೆ ನಿಜ ಅನನೋದಕ್ಕೆ ಬಿಗ್‌ಬಾಸ್‌ ಸೀಸನ್‌ -೮ ಶುರುವಾಗುವವರೆಗೆ ಕಾಯಲೇಬೇಕು. ಅಂದಹಾಗೆ, ಸುದೀ[ಪ್‌ ಅವರು ಈ ಕಾರ್ಯಕ್ರಮ ನಡೆಸಿಕೊಡಲು ಸಜ್ಜಾಗಿದ್ದಾರೆ.

Categories
ಸಿನಿ ಸುದ್ದಿ

ಹ್ಯಾಟ್ರಿಕ್ ಹೀರೋ ಕೈಗೆ ಗಾಯ- ಕ್ರಿಕೆಟ್‌ ಆಡುವಾಗ ಆಕಸ್ಮಿಕ ಪೆಟ್ಟು

ಮನೆ ಮುಂದೆ ಆಡುವಾಗ ನಡೆದ ಘಟನೆ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೀರೋಗಳು, ಕೈಗೆ, ಕಾಲಿಗೆ ಬ್ಯಾಂಡೇಜ್‌ ಕಟ್ಟಿಕೊಂಡಾಗ, ಅದೊಂದು ಸೀನ್‌ಗೆ ಅಗತ್ಯ ಅನಿಸುವುದು ಸಹಜ. ಆದರೆ, ಚಿತ್ರೀಕರಣ ಹೊರತಾಗಿಯೂ ಬ್ಯಾಂಡೇಜ್‌ ಇದ್ದರೆ? ಅದು ಎಲ್ಲರಿಗೂ ಒಂದೊಂದು ಪ್ರಶ್ನೆ ಮತ್ತು ಗಾಬರಿ. ಅಂಥದ್ದೊಂದು ಪ್ರಶ್ನೆ, ಗಾಬರಿ ಶಿವರಾಜಕುಮಾರ್‌ ಅವರ ತೋರು ಬೆರಳಿಗೆ ಆಗಿರುವ ಗಾಯ ಕಾರಣವಾಗಿದೆ. ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕೈ ಗಾಯವಾಗಿದೆ. ಅದಕ್ಕೆ ಕಾರಣ, ಕಳೆದ ಎರಡು ದಿನಗಳ ಹಿಂದೆ ಅವರು ತಮ್ಮ ಮನೆಯಲ್ಲಿ ಕ್ರಿಕೆಟ್ ಆಡುತ್ತಿರಬೇಕಾದರೆ, ಆಕಸ್ಮಿಕವಾಗಿ ತಮ್ಮ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಅವರು ಬ್ಯಾಂಡೇಜ್‌ ಮಾಡಿಸಿದ್ದಾರೆ.

ಶಿವರಾಜ್‌ಕುಮಾರ್‌ ಅವರಿಗೆ ಕ್ರಿಕೆಟ್‌ ಅಂದರೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕರೆ,  ಹುಡುಗರಂತೆ ಅವರು ಬ್ಯಾಟ್‌ ಹಿಡಿದು ಫೀಲ್ಡ್‌ಗೆ ನಿಂತು ಬಿಡುತ್ತಾರೆ. ಒಂದಷ್ಟು ಹುಡುಗರನ್ನು ಕಟ್ಟಿಕೊಂಡು ಬ್ಯಾಟಿಂಗ್‌ ಮಾಡಲು ಹೊರಡುವ ಶಿವಣ್ಣ, ಮೊನ್ನೆ ಹಾಗೆ ಮಾಡಲು ಹೋಗಿ ಸದ್ಯ ತೋರು ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿರುವುದಂತೂ ನಿಜ.

Categories
ಸಿನಿ ಸುದ್ದಿ

ಅರೆಬೆತ್ತಲೆ ಫೋಟೋ- ನಟಿಯ ಅಕೌಂಟ್‌ ಡಿಲೀಟ್!

ಟ್ವಿಟರ್ ನಿಲುವಿಗೆ ನಟಿ ನಿಖಿತಾ ಗೋಖಲೆ ಕಿಡಿಕಿಡಿ

  • ಶಶಿಧರ ಚಿತ್ರದುರ್ಗ

ಖ್ಯಾತ ಮರಾಠಿ ನಟಿ ನಿಖಿತಾ ಗೋಖಲೆ ಟ್ವಿಟರ್‌ ಮೇಲೆ ಮುನಿಸಿಕೊಂಡು ಕಿಡಿಕಾರುತ್ತಿದ್ದಾರೆ. ಮೊನ್ನೆ ಅವರು ತಮ್ಮ ಫೋಟೋಗಳನ್ನು ಅವರು ಟ್ವಿಟರ್‌ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇವು ‘ಕಲಾತ್ಮಕ ಫೋಟೋಗಳು’ ಎನ್ನುವುದು ಅವರ ವಿವರಣೆ. ಆದರೆ ಇವು ಆಕ್ಷೇಪಾರ್ಹ ಫೊಟೋಗಳು ಎಂದು ನಟಿಯ ಸೋಷಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಮಾಡಿದೆ ಟ್ವಿಟರ್‌.


ಟ್ವಿಟರ್ ನಿಲುವಿನಿಂದ ನಟಿ ನಿಖಿತಾ ಮುನಿಸಿಕೊಂಡಿದ್ದಾರೆ. ಇದರಿಂದ ತಮ್ಮ ಅಭಿಮಾನಿಗಳಿಗೆ ನಿರಾಸೆಯಾಗಿದೆ ಎನ್ನುವುದು ಇದಕ್ಕೆ ಕಾರಣ. “ಶಾಕಿಂಗ್ ನ್ಯೂಸ್‌! ನಾನು ಎಂಟು ವರ್ಷದಿಂದ ನಿಭಾಯಿಸುತ್ತಿದ್ದ ಸೋಷಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಆಗಿದೆ. ನಾನು ಬೆತ್ತಲೆ ಫೋಟೋ ಹಾಕಿದ್ದೇನೆ ಎನ್ನುವ ವಿವರಣೆಯನ್ನು ಅವರು ಕೊಡುತ್ತಿದ್ದಾರೆ.  ಊಟ-ತಿಂಡಿಯ ಫೋಟೋ, ಕೆಲಸಕ್ಕೆ ಬಾರದ ಫೋಟೋಗಳೆಲ್ಲವನ್ನೂ ಹಾಕಬಹುದು. ಆದರೆ ಕಲಾತ್ಮಕತೆಯ ನನ್ನ ಫೋಟೋಗಳನ್ನು ಮಾತ್ರ ಹಾಕಬಾರದಂತೆ! ಇದೆಂಥ ನಿಯಮ” ಎಂದು ತಮ್ಮ ಕೋಪ ಹೊರ ಹಾಕಿದ್ದಾರೆ ಅವರು.

ಟ್ವಿಟರ್‌ ಖಾತೆ ಡಿಲೀಟ್‌ ಮಾಡಿದ್ದರಿಂದ ನಿರಾಸೆ ಹೊಂದಬೇಕಿಲ್ಲ ಎಂದು ನಿಖಿತಾ ಅಭಿಮಾನಿಗಳಿಗೆ ಅಭಯ ನೀಡಿದ್ದಾರೆ. “ನಾನು ಕೂಡ ಇನ್ನು ಮುಂದೆ ಸೋಷಿಯಲ್ ಮೀಡಿಯಾದಲ್ಲಿ ಊಟ-ತಿಂಡಿಯ ಫೊಟೋಗಳನ್ನು ಹಾಕುತ್ತೇನೆ. ನನ್ನ ಕಲಾತ್ಮಕ ಫೋಟೋಗಳನ್ನು ನನ್ನ ವೆಬ್‌ಸೈಟ್‌ನಲ್ಲಿ ಹಾಕಿಕೊಳ್ಳುತ್ತೇನೆ” ಎಂದಿದ್ದಾರೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಆಸ್ಕರ್ ರೇಸ್‌ನಿಂದ ಹೊರಬಿದ್ದ ‘ಜಲ್ಲಿಕಟ್ಟು’

ಭಾರತೀಯ ಸಿನಿಮಾಗಳಿಗೇಕೆ ಇಲ್ಲ ಮನ್ನಣೆ?  ಗಿರೀಶ್‌ ಕಾಸರವಳ್ಳಿ ವಿಶ್ಲೇಷಣೆ ಇಲ್ಲಿದೆ

  • ಲೇಖನ- ಶಶಿಧರ ಚಿತ್ರದುರ್ಗ

ಲಿಜೋ ಜೋಸ್ ಪೆಲ್ಲಿಸ್ಸರಿ ನಿರ್ದೇಶನದ ‘ಜಲ್ಲಿಕಟ್ಟು’ ಮಲಯಾಳಂ ಸಿನಿಮಾ 93ನೇ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ನಾಮ ನಿರ್ದೇಶನಗೊಂಡಿತ್ತು. ಅತ್ಯುತ್ತಮ ಅಂತಾರಾಷ್ಟ್ರೀಯ ಫ್ಯೂಚರ್ ಸಿನಿಮಾ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿದ್ದ ಸಿನಿಮಾ ಅಂತಿಮ ಐದು ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗುವಲ್ಲಿ ವಿಫಲವಾಗಿದೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆಯುವ ಭಾರತೀಯರ ಕನಸು ಮತ್ತೊಮ್ಮೆ ಕಮರಿ ಹೋಗಿದೆ. ಹಾಗೆ ನೋಡಿದರೆ ‘ಜೆಲ್ಲಿಕಟ್ಟು’ ಚಿತ್ರದ ಬಗ್ಗೆ ಹಿರಿಯ ಸಿನಿಮಾ ತಂತ್ರಜ್ಞರು ಭಾರಿ ಭರವಸೆಯಿಟ್ಟಿದ್ದರು. ಈ ಚಿತ್ರದೊಂದಿಗೆ ಭಾರತಕ್ಕೆ ಆಸ್ಕರ್‌ ಗೌರವ ಸಿಗಲಿದೆ ಎಂದೇ ಹೇಳಲಾಗಿತ್ತು.

ಆದರೆ ನಿರೀಕ್ಷೆ ಹುಸಿಯಾಗಿದೆ. ಇಲ್ಲಿಯವರೆಗೆ ಆಸ್ಕರ್‌ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಅಂತಿಮ ಐದರ ಪಟ್ಟಿಗೆ ಹೋಗಿರುವುದು ಮೂರು ಸಿನಿಮಾಗಳಷ್ಟೆ. “ಮದರ್ ಇಂಡಿಯಾ” (1958), “ಸಲಾಂ ಬಾಂಬೆ” (1989) ಮತ್ತು “ಲಗಾನ್‌” (2001) ಅಂತಿಮ ಐದು ಚಿತ್ರಗಳ ಪಟ್ಟಿಗೆ ಹೋದರೂ ಆಸ್ಕರ್ ಪ್ರಶಸ್ತಿ ಗಳಿಸುವಲ್ಲಿ ವಿಫಲವಾಗಿದ್ದವು. ಭಾರತೀಯ ಸಿನಿಮಾಗಳು ವಿವಿಧ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸುವುದಿದೆ. ಆದರೆ ಆಸ್ಕರ್ ಸಂದರ್ಭದಲ್ಲಿ ಇದಾಗದು. ಕನ್ನಡದ ಹೆಮ್ಮೆಯ ಹಿರಿಯ ಚಿತ್ರನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ವಿಶ್ಲೇಷಿಸುವುದು ಹೀಗೆ –

ಗಿರೀಶ್‌ ಕಾಸರವಳ್ಳಿ

“ಈ ವಿಚಾರವನ್ನು ನಾವು ವಿವಿಧ ಆಯಾಮಗಳಲ್ಲಿ ಗಮನಿಸಬೇಕಾಗುತ್ತದೆ. ಅಲ್ಲಿನ ಮಾನ ದಂಡಗಳೇ ಬೇರೆ ಇರುತ್ತವೆ. ಅಲ್ಲಿ ಕತೆ ಹೇಳುವ ಕ್ರಮವೇ ಬೇರೆ ಇರುತ್ತದೆ. ನಾವು ನಮ್ಮನೆಯಲ್ಲಿ ಮಾಡಿದ ಅಡುಗೆಯೇ ಶ್ರೇಷ್ಠ ಎಂದುಕೊಳ್ಳಲಾಗದು. ಜೊತೆಗೆ ನಾವು ಅಲ್ಲಿಗೆ ರೆಕಮೆಂಡ್ ಮಾಡುವ ಸಿನಿಮಾಗಳು ಕೂಡ ಸರಿ ಇಲ್ಲದಿರಬಹುದು. ಆದರೆ ಈ ಬಾರಿಯ “ಜೆಲ್ಲಿಕಟ್ಟು” ಸಿನಿಮಾ ಉತ್ತಮ ಆಯ್ಕೆಯೇ ಆಗಿತ್ತು. ಆದಾಗ್ಯೂ ಅಲ್ಲಿನ ಜ್ಯೂರಿಗಳು ಚಿತ್ರದಲ್ಲಿ ಹುಡುಕುವ ವಸ್ತು ಬೇರೆಯದ್ದೇ ಆಗಿರುತ್ತದೆ. ಚಿತ್ರದಲ್ಲಿ ಪೊಲಿಟಿಕಲ್ ಟೋನ್‌, ಏಸ್ತಟಿಕ್ ಸೆನ್ಸ್ ನೋಡುತ್ತಾರೆ. ಹೀಗೆ ಹಲವು ಕಾರಣಗಳಿರುತ್ತವೆ. ಮುಖ್ಯವಾಗಿ ಅಲ್ಲಿ ವೋಟಿಂಗ್ ಇರುತ್ತದೆ. ಸಾಕಷ್ಟು ಹಣ ಖರ್ಚು ಮಾಡಿ ಜ್ಯೂರಿಗಳಿಗೆ ಸಿನಿಮಾ ತೋರಿಸಿ, ಅವರನ್ನು ಮೆಚ್ಚಿಸಬೇಕಾಗುತ್ತದೆ.

ಮಿತ ವೆಚ್ಚದಲ್ಲಿ ಸಿನಿಮಾ ಮಾಡುವ ನಮಗೆ ಅದೆಲ್ಲವೂ ಕೈಗೆಟುಕದು. ಬಹುಶಃ ಆ ಪ್ರಕ್ರಿಯೆಯಲ್ಲೂ ಭಾರತೀಯ ಸಿನಿಮಾಗಳು ಹಿಂದೆ ಉಳಿಯುವಂತಾಗುತ್ತದೆ. ಮೊದಲೆಲ್ಲಾ ಆಸ್ಕರ್‌ಗೆ ಹಾಡು, ಕುಣಿತದ ಸಾಕಷ್ಟು ಭಾರತೀಯ ಸಿನಿಮಾಗಳನ್ನು ಆಸ್ಕರ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಇಂತಹ ಚಿತ್ರಗಳನ್ನು ನೋಡಿರುವ ಜ್ಯೂರಿಗಳು ಭಾರತೀಯ ಸಿನಿಮಾಗಳ ಬಗ್ಗೆಯೇ ಒಂದು ಪೂರ್ವಾಗ್ರಹ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿರುತ್ತವೆ.
ಬೆಂಗಾಲಿ ನಿರ್ದೇಶಕ ಸತ್ಯಜಿತ್ ರೇ ಸಿನಿಮಾಗಳು ಆಸ್ಕರ್ ಗೌರವ ಪಡೆಯುವ ಯೂನಿವರ್ಸಲ್ ವಸ್ತು ಇದ್ದಂಥವು. ರೇ ಅವರ ‘ಚಾರುಲತ’ ಸೇರಿದಂತೆ ಮತ್ತೊಂದೆರೆಡು ಚಿತ್ರಗಳು ಅಂತಹ ಗುಣ ಹೊಂದಿದ್ದವು. ಆದರೆ ಅವರ ಚಿತ್ರಗಳನ್ನು ನಾಮನಿರ್ದೇಶನ ಮಾಡುವಲ್ಲಿ ಹಿಂದೆ ಉಳಿದರು. ಕೊನೆಗೆ ಆಸ್ಕರ್ ಕಮಿಟಿಯವರೇ ಬಂದು ಸತ್ಯಜಿತ್ ರೇ ಅವರ ಕೊನೆಗಾಲದಲ್ಲಿ ಅವರಿಗೆ ಗೌರವ ಸಲ್ಲಸಿದರು. ಬರ್ಲಿನ್‌, ಫ್ರಾನ್ಸ್ ಸೇರಿದಂತೆ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಸಿನಿಮಾ ಆಯ್ಕೆಯ ಮಾನದಂಡಗಳೇ ಬೇರೆಯಾಗಿರುತ್ತವೆ. ಆಸ್ಕರ್ ಕೂಡ ಇದಕ್ಕೆ ಹೊರತಲ್ಲ” ಎಂಬುದು ಅವರ ಮಾತು.

Categories
ಸಿನಿ ಸುದ್ದಿ

ಜಿಮ್‌ ರವಿ ಈಗ ಹೀರೋ

ಬಾಡಿಬಿಲ್ಡರ್‌  ಪುರುಷೋತ್ತಮ

ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಗಮನಸೆಳೆದಿದ್ದ ಜಿಮ್‌ ರವಿ ಈಗ ಹೀರೋ. ಹೌದು, ಜಿಮ್‌ ರವಿ ಅವರಿಗೆ ಸಿನಿಮಾ ಹೊಸದಲ್ಲ. ಕನ್ನಡ ಚಿತ್ರರಂಗದಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜಿಮ್ ರವಿ, ಪೋಷಕ ಪಾತ್ರಗಳಲ್ಲೇ ಜನಮನ ಗೆದ್ದವರು.


ಇವರಿಗೆ ಜಿಮ್‌ ರವಿ ಅನ್ನೋ ಹೆಸರಿನ ಬಗ್ಗೆ ಹೇಳುವುದಾದರೆ, ಇವರು ಅಂತರಾಷ್ಟ್ರೀಯ ಬಾಡಿ ಬಿಲ್ಡರ್. ಹಲವು ದೇಶಗಳಲ್ಲಿ ಸ್ಪರ್ಧಿಸಿ, ಗೆಲುವು ಕಂಡವರು. ಸಾಕಷ್ಟು ಪ್ರಶಸ್ತಿಗಳಿಗೂ ಕಾರಣರಾದವರು. ಸಣ್ಣಪುಟ್ಟ ಪಾತ್ರಗಳ ಮೂಲಕವೇ ಗಮನ ಸೆಳೆದಿದ್ದ ಜಿಮ್‌ ರವಿ ಅವರಿಗೆ ಸಿನಿಮಾ ಮೇಲೆ ಅಪಾರ ಪ್ರೀತಿ ಇದೆ. ಈಗ ನಾಯಕನಾಗಿ ವೀಕ್ಷಕರ ಮುಂದೆ ಬರುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ಸುದ್ದಿ.

ಹೌದು ಸ್ಯಾಂಡಲ್ವುಡ್ ನಲ್ಲಿ ಜಿಮ್ ರವಿ ಅವರೀಗ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಪುರುಷೋತ್ತಮ” ಎಂದು ನಾಮಕರಣ ಮಾಡಲಾಗಿದೆ. ರವೀಸ್ ಜಿಮ್ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರಕ್ಕೆ ಜಿಮ್ ರವಿ ಅವರೇ ನಾಯಕ ಅನ್ನೋದು ಸುದ್ದಿ. ಅಂದಹಾಗೆ, ಫೆ.೧೪ ರಂದು ಮುಹೂರ್ತ ನಡೆಯಲಿದೆ. ಈ ಚಿತ್ರವನ್ನು ಅಮರ್ನಾಥ್ ಎಸ್.ವಿ ನಿರ್ದೇಶಿಸುತ್ತಿದ್ದಾರೆ.

error: Content is protected !!