ಕನ್ನಡದಲ್ಲಿ ವಿಭಿನ್ನ ಕಥೆಯುಳ್ಳ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಮತ್ತೊಂದು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದರೆ, ಅದು “ವ್ಹೀಲ್ ಚೇರ್ ರೋಮಿಯೊ”. ಹೌದು, ಈ ಚಿತ್ರದ ಹಾಡೊಂದು ರಿಲೀಸ್ ಆಗಿದೆ. ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ “ರಂಗುರಾಟೆ” ಎಂಬ ಹಾಡು ಇದೀಗ ರಿಲೀಸ್ ಆಗಿದ್ದು, ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ವಿಭಿನ್ನ ಕಥಾಹಂದರ ಹೊಂದಿರುವ “ವ್ಹೀಲ್ ಚೇರ್ ರೋಮಿಯೋ” ಚಿತ್ರದ ಈ ಹಾಡಿಗೆ .ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಝೇಂಕಾರ್ ಮ್ಯೂಸಿಕ್ ಮೂಲಕ ಹಾಡು ರಿಲೀಸ್ ಆಗಿದೆ. ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತವಿದೆ. ಸದ್ಯದಲ್ಲೇ “ವ್ಹೀಲ್ ಚೇರ್ ರೋಮಿಯೋ” ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಕಲ ಚೇತನವೊಬ್ಬನ ಲವ್ಸ್ಟೋರಿ ಚಿತ್ರದ ಹೈಲೈಟ್. ಕಾಲು ಕಳೆದುಕೊಂಡಿರುವ ಹುಡುಗನ ಪಾತ್ರದಲ್ಲಿ ರಾಮ್ ಚೇತನ್ ಅಭಿನಯಿಸಿದ್ದಾರೆ. ಕಣ್ಣಿಲ್ಲದಿರುವ ಹುಡುಗಿಯ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ, ಗಿರೀಶ್ ಶಿವಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ತಂದೆ-ಮಗನ ಬಾಂಧವ್ಯದ ಸನ್ನಿವೇಶಗಳು ಚಿತ್ರದ ಮತ್ತೊಂದು ಹೈಲೈಟ್. .ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. .ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಸಂತೋಷ್ ಪಾಂಡಿ ಛಾಯಾಗ್ರಹಣ, ಕಿರಣ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕಂಬಿರಾಜು ನೃತ್ಯ ನಿರ್ದೇಶನವಿದೆ.
ಪ್ರಿಯಾಂಕ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಚಿತ್ರದ ಟ್ರೇಲರ್ ಅನ್ನು ನಟ ಸುದೀಪ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತಿಗಿಳಿದ ಸುದೀಪ್, “ನಾನು ಎರಡು ವರ್ಷಗಳಿಂದ ದೊಡ್ಡ ಪರದೆಯ ಮೇಲೆ ಚಿತ್ರವನ್ನಾಗಲಿ, ಟ್ರೇಲರ್ ಆಗಲಿ ನೋಡಿಲ್ಲ. ತುಂಬಾ ದಿನಗಳ ನಂತರ ಈ ಅವಕಾಶ ತಂದುಕೊಟ್ಟ ಚಿತ್ರತಂಡಕ್ಕೆ ಧನ್ಯವಾದ. ಚಿತ್ರದ ಬಿಡುಗಡೆ ವೇಳೆಗೆ ಈಗಿರುವ ಸಂಕಷ್ಟದ ಪರಿಸ್ಥಿತಿ ದೂರವಾಗಿ, ಜನರಿಂದ ಚಿತ್ರಮಂದಿರ ತುಂಬಿ ತುಳುಕುವಂತಾಗಲಿ ಎಂದು ಶುಭ ಕೋರಿದರು. ಇನ್ನು, ನಟ ಉಪೇಂದ್ರ ಕೂಡ ಈ ವೇಳೆ ಮಾತಿಗಿಳಿದರು. “ವಿಭಿನ್ನ ಕಥೆ ಇಟ್ಟುಕೊಂಡು, ನಿರ್ದೇಶಕರು ಹೊಸತನ್ನು ಹೇಳ ಹೊರಟ್ಟಿದ್ದಾರೆ. ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹರಸಿ ಅಂದರು.
ಅಂದು ನಟಿ ಪ್ರಿಯಾಂಕ ಉಪೇಂದ್ರ ಹೈಲೈಟ್ ಆಗಿದ್ದರು. ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್ ಹಾಗೂ ಉಪೇಂದ್ರ ಅವರಿಗೆ ಧನ್ಯವಾದ ಹೇಳಿದ ಪ್ರಿಯಾಂಕ, “ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ಪ್ಯಾರಲಲ್ ಯುನಿವರ್ಸಲ್ ನ ಈ ಕಥಾಹಂದರ ನೋಡುಗರ ಮನ ಗೆಲ್ಲಲಿದೆ. ಚಿತ್ರೀಕರಣದ ವೇಳೆ ಲಾಕ್ ಡೌನ್ ಮುಂತಾದ ಸಮಸ್ಯೆ ಎದುರಾದವು. ಇಲ್ಲದಿದ್ದರೆ ಕಳೆದ ಮೇನಲ್ಲಿ ಈ ಚಿತ್ರ ತೆರೆಗೆ ಬರಬೇಕಿತ್ತು. ಇದೇ ಅಕ್ಟೋಬರ್ ೧೫ ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹಾರೈಸಿ ಅನ್ನೋದು ಪ್ರಿಯಾಂಕ ಮಾತು.
“ನನ್ನ ಈ ಕಥೆಗೆ ಕೆಲವು ಇಂಗ್ಲೀಷ್ ಸಿನಿಮಾಗಳು ಸ್ಪೂರ್ತಿ ಎನ್ನಬಹುದು. ಪ್ಯಾರಲಲ್ ಯುನಿವರ್ಸಲ್ ಕಥೆ ಆಧಾರಿತ ಚಿತ್ರ ನನಗೆ ತಿಳಿದ ಮಟ್ಟಿಗೆ ಇದೇ ಮೊದಲು ಎನ್ನಬಹುದು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂಬ ಭರವಸೆ ಇದೆ. ಎಲ್ಲರ ಹಾರೈಕೆ ಇರಲಿ ಎಂಬುದು ನಿರ್ದೇಶಕ ರಾಜ್ ಕಿರಣ್ ಮಾತು. ನಟ ನಿರಂಜನ್ ಸುಧೀಂದ್ರ, ನಿರ್ಮಾಪಕ ಜಾಕ್ ಮಂಜು, ನಮ್ಮ ಫ್ಲಿಕ್ಸ್ ನ ವಿಜಯ ಕುಮಾರ್ ಇದ್ದರು. ಈ ಚಿತ್ರವನ್ನು ಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಪೂಜಾಶ್ರೀ ಹಾಗೂ ಸ್ವಾಮಿರಾಜ್ ನಿರ್ಮಿಸಿದ್ದಾರೆ. ಬಹುತೇಕ ಈ ಚಿತ್ರದ ಚಿತ್ರೀಕರಣ ಶನಿವಾರಸಂತೆ ಸುತ್ತಮುತ್ತ ನಡೆದಿದೆ. ಚಿತ್ರಕ್ಕೆ ರಾಜ್ ಕಿರಣ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಇತರರು ನಟಿಸಿದ್ದಾರೆ. ಚಿಂತನ್ ವಿಕಾಸ್ ಸಂಗೀತವಿದೆ. ಜೀವನ್ ಆಂತೋಣಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿದೆ.
ಮಧು ಮಂದಗೆರೆ ಈವರೆಗೆ ನಟಿಸಿರುವ 75 ಚಿತ್ರಗಳ ಪೈಕಿ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟುಮಸ್ತಾದ ದೇಹ ಅವರನ್ನು ಪೊಲೀಸ್ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡುವಂತಾಗಿದೆ. ಈಗ ಅವರು “ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ
ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳಿಗೇನು ಕೊರತೆ ಇಲ್ಲ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಕಾಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೂ ಇವೆ. ಒಂದಷ್ಟು ಸಿನಿಮಾಗಳು ಸದ್ದು ಮಾಡಿದ್ದೂ ಇದೆ. ಈಗ ಆ ಸಾಲಿಗೆ “ದನಗಳು’ ಎಂಬ ಚಿತ್ರವೂ ಸೇರಿದೆ ಅನ್ನೋದು ವಿಶೇಷ. ಹೌದು, ಇದು ಕಥೆಗಾರ ಡಾ.ಬಿ.ಎಲ್.ವೇಣು ಅವರ ಕಾದಂಬರಿ ಆಧರಿಸಿದ ಚಿತ್ರ. ಈ ಚಿತ್ರಕ್ಕೆ ಬಾಲಾಜಿ ಪೋಳ್ ನಿರ್ದೇಶಕರು. ಇದರೊಂದಿಗೆ ಅವರೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರದ ಮೂಲಕ ಮಧು ಮಂದಗೆರೆ ಅವರೂ ಹೀರೋ ಆಗಿ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಹಾಗೆ ನೋಡಿದರೆ, ಮಧು ಅವರಿಗೆ ಸಿನಿಮಾರಂಗ ಹೊಸದೇನೂ ಅಲ್ಲ, ಒಂದು ದಶಕಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾರಂಗವನ್ನು ಅರಿತಿರುವ ಮಧು ಮಂದಗೆರೆ, ಸಾಕಷ್ಟು ಹೀರೋಗಳ ಜೊತೆ ನಟಿಸಿದ್ದಾರೆ. ಈಗಿನ ಸ್ಟಾರ್ ನಟರ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಹಾಗೆ ಹೇಳುವುದಾದರೆ, ಮಧು ಮಂದಗೆರೆ ಅವರು ಇದುವರೆಗೆ ಸುಮಾರು ೭೫ ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನೋದು ಮತ್ತೊಂದು ವಿಶೇಷ.
ಹೌದು, ಮಧು ಮಂದಗೆರೆ ಈವರೆಗೆ ನಟಿಸಿರುವ ೭೫ ಚಿತ್ರಗಳ ಪೈಕಿ ಸುಮಾರು ೫0 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟುಮಸ್ತಾದ ದೇಹ ಅವರನ್ನು ಪೊಲೀಸ್ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡುವಂತಾಗಿದೆ. ಈಗ ಅವರು “ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದು ಕಲಾತ್ಮಕ ಚಿತ್ರ. ನೈಜ ಘಟನೆಯೊಂದನ್ನು ಲೇಖಕರು ಕಾದಂಬರಿಗೆ ಅಳವಡಿಸಿದ್ದು, ಅದನ್ನು ನೈಜವಾಗಿಯೇ ಚಿತ್ರೀಕರಿಸಿರುವ ಖುಷಿ ಚಿತ್ರ ನಿರ್ದೇಶಕರದ್ದು. “ದನಗಳು” ಚಿತ್ರ ಈಗ ರಿಲೀಸ್ಗೆ ರೆಡಿಯಾಗಿದೆ. ಸೆನ್ಸಾರ್ ಮುಗಿಸಿರುವ ಚಿತ್ರ, ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ಕೊರೊನಾ ಹಾವಳಿಯಿಂದಾಗಿ ಶೇ.೫೦ರಷ್ಟು ಆಸನ ಭರ್ತಿಗೆ ಅವಕಾಶ ಕೊಟ್ಟಿರುವುದರಿಂದ ರಿಲೀಸ್ಗೆ ತಡವಾಗುತ್ತಿದೆ. ಸರ್ಕಾರ ಶೇ.೧೦೦ ರಷ್ಟು ಆಸನ ಭರ್ತಿಗೆ ಅವಕಾಶ ಕೊಟ್ಟರೆ, ಚಿತ್ರ ಬಿಡುಗಡೆ ಮಾಡಲು ತಂಡ ತಯಾರಿ ಮಾಡಿಕೊಳ್ಳಲಿದೆ.
ಇನ್ನ, “ದನಗಳು” ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ರಾತ್ರಿ ವೇಳೆಯಲ್ಲಿ ದನ, ಹಸುಗಳನ್ನು ವಾಹನಗಳಲ್ಲಿ ಸಾಗಿಸುವ ಮೂಲಕ ಅವುಗಳನ್ನು ಕಸಾಯಿ ಖಾನೆಗೆ ತಳ್ಳುವ ಗುಂಪಿನ ಕಥೆಯೇ ಇದರ ಹೈಲೈಟು. ಆ ದುಷ್ಟ ಗುಂಪನ್ನು ಹಿಡಿದು, ಬಗ್ಗು ಬಡಿಯುವ ಪೊಲೀಸ್ ಅಧಿಕಾರಿ, ರೈತರ ಗೋವುಗಳನ್ನು ರಕ್ಷಣೆ ಮಾಡಿ ರೈತರಿಗೆ ಒಪ್ಪಿಸುವ ಕಥೆ ಇಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಕೆ.ಆರ್.ಪೇಟೆ, ಕಿಕ್ಕೇರಿ, ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ನಡೆದಿದೆ.
ಈಗಾಗಲೇ “ದನಗಳು’ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಇದೆ. ವಾಸ್ತವ ಸಂಗತಿಗಳನ್ನೂ ಇಲ್ಲಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ಹೀರೋ, ಮಧು ಮಂದಗೆರೆ ಅವರಿಗೆ ಈ ಸಿನಿಮಾ ಒಳ್ಳೆಯ ಅನುಭವ ನೀಡಿದೆಯಂತೆ. ಒಂದೊಳ್ಳೆಯ ಕಥಾಹಂದರ ಇರುವಂತಹ ಚಿತ್ರದಲ್ಲಿ ನಟಿಸಿದ್ದು, ಖುಷಿ ಕೊಟ್ಟಿದೆ ಎನ್ನುವ ಅವರು, “ದನಗಳು” ಚಿತ್ರ ಹೊರಬಂದರೆ, ನಿಜಕ್ಕೂ ಮೆಚ್ಚುಗೆ ಪಡೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ.
ಚಿತ್ರದಲ್ಲಿ ಮಧು ಮಂದಗೆರೆ ಅವರ ಜೊತೆ ಸಂಗೀತಾ ಜೋಡಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ವಿವನ್ಕೃಷ್ಣ, ಅಶೋಕ್ ಜಂಬೆ, ಸಂಪತ್, ಪ್ರಿಯಾ, ಚಂದ್ರು, ಹರಿಚರಣ ತಿಲಕ್, ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶ್ವನಾಥ್ ಛಾಯಾಗ್ರಹಣವಿದೆ. ಸ್ವಾಮಿ ಅವರ ಸಂಕಲನವಿದೆ. ಅರವ್ ರಿಶಿಕ್ ಸಂಗೀತವಿದೆ. ಮಧು ಮಂದಗೆರೆ ಅವರು ನಟಿಸಿರುವ “ಭಜರಂಗಿ ೨”, “ಅರ್ಜುನ್ ಗೌಡ”, “ಜಾಸ್ತಿ ಪ್ರೀತಿ”,” ಕಬ್ಜ”,” ಪ್ರಾರಂಭ”,” ಅಲ್ಲೇ ಡ್ರಾ ಅಲ್ಲೇ ಬಹುಮಾನ”, “ಫೈಟರ್” ಸೇರಿದಂತೆ ಒಂದಷ್ಟು ಚಿತ್ರಗಳಿವೆ.
ಶುಭಕ್ಕ ಒಂದೇ ತರಹದ ಪಾತ್ರಕ್ಕೆ ಸ್ಟಿಕನ್ ಆಗಲಿಕ್ಕೆ ಬಯಸಲ್ಲ. ಗ್ಲಾಮರಸ್ ಪಾತ್ರಗಳ ಮೂಲಕ ಕ್ಯಾಮೆರಾ ಮುಂದೆ ಕಿಕ್ಕೇರಿಸುವುದಕ್ಕೆ ಇಷ್ಟಪಡುವುದಿಲ್ಲ. ಸಿನಿಮಾದಿಂದ ಸಿನಿಮಾಗೆ ಎಕ್ಸ್ ಪಿರಿಮೆಂಟ್ ಮಾಡೋದಕ್ಕೆ ಹಾತೊರೆಯುತ್ತಾರೆ. ಅಭಿನಯಕ್ಕೆ ಆದ್ಯತೆ ಇರುವ ಪಾತ್ರಗಳಿಗಾಗಿ ಹಂಬಲಿಸ್ತಾರೆ. ಕಲೆ ಮತ್ತು ಪಾತ್ರಕ್ಕಾಗಿ ಹಪಹಪಿಸುವ ಶುಭಕ್ಕನಿಗೆ ‘ಅಂಬುಜ’ ಹೆಸರಿನ ಸಿನಿಮಾ ಸಿಕ್ಕಿದೆ. ಮಹಿಳಾಪ್ರಧಾನ ಸಿನಿಮಾ ಇದಾಗಿದ್ದು, ಲಂಬಾಣಿ ಲುಕ್ ನಲ್ಲಿ ಶುಭಕ್ಕ ಧಗಧಗಿಸ್ತಿರುವ ಪೋಸ್ಟರ್ ಸಿನಿಲಹರಿಗೆ ಲಭ್ಯವಾಗಿದೆ
ಸ್ಯಾಂಡಲ್ ವುಡ್ ನ ಸೆಕ್ಸಿ ಸುಂದರಿ, ಪಡ್ಡೆಹೈಕ್ಳ ಮೋಹಕ ಮದನಾರಿ ಶುಭಪುಂಜಾ, ತಮ್ಮ ಮಾದಕ ನೋಟ ಹಾಗೂ ಮೈಮಾಟದಿಂದಲೇ ನೋಡುಗರ ಎದೆಗೆ ಕಿಚ್ಚು ಹಚ್ಚುತ್ತಾರೆ. ಬೋಲ್ಡ್ ಅಂಡ್ ಬೊಂಬಾಟ್ ಅಭಿನಯದ ಮೂಲಕ ಸಿನಿಪ್ರಿಯರ ಮನಸೂರೆಗೊಳ್ತಾರೆ. ಬೆಲ್ಲಿಡ್ಯಾನ್ಸ್ ಮಾಡುತ್ತಾ ಬೆಳ್ಳಿತೆರೆಯನ್ನ ಬೆಳಗುತ್ತಾರೆ. ಇಂತಿಪ್ಪ ನಟಿ ಶುಭಾ ಪುಂಜಾ ಈಗ ತಮ್ಮ ನಯಾ ಲುಕ್ ನಿಂದ ಚಿತ್ರಪ್ರೇಮಿಗಳನ್ನ ದಂಗುಬಡಿಸಿದ್ದಾರೆ. ಯಸ್, ನಟಿ ಶುಭಾ ಪುಂಜಾ ನಯಾ ಅವತಾರದಲ್ಲಿ ಮಿಂಚಿ ನೋಡುಗರನ್ನ ಬೆರಗುಗೊಳಿಸಿದ್ದಾರೆ. ಲಂಬಾಣಿ ಉಡುಗೆ ತೊಟ್ಟುಒಂದು ಕೈಯಲ್ಲಿ ಚೂಪಾದ ಚೂರಿ, ಇನ್ನೊಂದು ಕೈಯಲ್ಲಿ ತಲೆಬುರುಡೆ ಹಿಡ್ಕೊಂಡು ಕ್ಯಾಮರಾ ಕಣ್ಣಿಗೆ ಕೆಂಡದಂತಹ ಪೋಸ್ ಕೊಟ್ಟಿದ್ದಾರೆ. ಬದಲಾದ ಲುಕ್ ಗೆಟಪ್ ನಲ್ಲಿ ಮೊಗ್ಗಿನ ಮನಸ್ಸಿನ ಹುಡುಗಿಯನ್ನ ನೋಡಿದವರು ವಾರೆವ್ಹಾ ಶುಭಕ್ಕ ಅಂತ ಚಪ್ಪಾಳೆ ತಟ್ಟುತ್ತಿದ್ದಾರೆ.
ಅಂದ್ಹಾಗೇ, ಶುಭಕ್ಕ ಒಂದೇ ತರಹದ ಪಾತ್ರಕ್ಕೆ ಸ್ಟಿಕನ್ ಆಗಲಿಕ್ಕೆ ಬಯಸಲ್ಲ. ಗ್ಲಾಮರಸ್ ಪಾತ್ರಗಳ ಮೂಲಕ ಕ್ಯಾಮೆರಾ ಮುಂದೆ ಕಿಕ್ಕೇರಿಸುವುದಕ್ಕೆ ಇಷ್ಟಪಡುವುದಿಲ್ಲ. ಸಿನಿಮಾದಿಂದ ಸಿನಿಮಾಗೆ ಎಕ್ಸ್ ಪಿರಿಮೆಂಟ್ ಮಾಡೋದಕ್ಕೆ ಹಾತೊರೆಯುತ್ತಾರೆ. ಅಭಿನಯಕ್ಕೆ ಆದ್ಯತೆ ಇರುವ ಪಾತ್ರಗಳಿಗಾಗಿ ಹಂಬಲಿಸ್ತಾರೆ. ಕಲೆ ಮತ್ತು ಪಾತ್ರಕ್ಕಾಗಿ ಹಪಹಪಿಸುವ ಶುಭಕ್ಕನಿಗೆ ‘ಅಂಬುಜ’ ಹೆಸರಿನ ಸಿನಿಮಾ ಸಿಕ್ಕಿದೆ. ಮಹಿಳಾಪ್ರಧಾನ ಸಿನಿಮಾ ಇದಾಗಿದ್ದು, ಲಂಬಾಣಿ ಲುಕ್ ನಲ್ಲಿ ಶುಭಕ್ಕ ಧಗಧಗಿಸ್ತಿರುವ ಪೋಸ್ಟರ್ ಸಿನಿಲಹರಿಗೆ ಲಭ್ಯವಾಗಿದೆ.ಕುತೂಹಲಭರಿತ ಫಸ್ಟ್ ಲುಕ್ ಪೋಸ್ಟರ್ ಸಿನಿಮಾ ಪ್ರೇಮಿಗಳ ದಿಲ್ ಕದಿಯುತ್ತಿದೆ.
ನಟಿ ಶುಭಾ ಪೂಂಜಾ ಅವರ ಸಿನಿ ಕೆರಿಯರ್ ನಲ್ಲಿಯೇ ಇದೊಂದು ಸ್ಪೆಷಲ್ ಲುಕ್. ಲಂಬಾಣಿ ಪಾತ್ರ ಈ ಉಡುಗೆಯಲ್ಲಿ ಅವರು ಕಾಣಿಸಿಕೊಂಡಿದ್ದು ಇದೇ ಮೊದಲು. ಅವರಿಲ್ಲಿ ಹಾಕಿರುವ ಈ ಕಾಸ್ಟ್ಯೂಮ್ನ ತೂಕ ಬರೋಬ್ಬರಿ ೨೦ ಕೆಜಿ ಇದೆ. ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡದಲ್ಲಿ ಇದನ್ನು ನಾಲ್ಕು ತಿಂಗಳು ಸಮಯ ತೆಗೆದುಕೊಂಡು ತಯಾರು ಮಾಡಿಸಿದ್ದಾರಂತೆ ಶ್ರೀನಿ ಹನುಮಂತ ರಾಜು. ಅವರ ಪ್ರಕಾರ ಇದೊಂದು ವಿಶೇಷ ಕಥಾಹಂದರದ ಚಿತ್ರ. ʼ ಸಮಾಜದಲ್ಲಿ ಆಗುವ ಒಂದಷ್ಟು ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನ ಹಾಳು ಮಾಡುತ್ತದೆ, ಹಾಗೂ ಅವರು ಅನುಭವಿಸುವ ತೊಂದರೆಗಳೇನು ಎನ್ನುವುದರ ಜತೆಗೆ ಅವರ ಅಸಹಾಯಕತೆಯನ್ನು ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ ಎನ್ನುವುದರ ಒಟ್ಟು ಒಟ್ಟು ಚಿತ್ರಣ ಈ ಚಿತ್ರದಲ್ಲಿದೆ ಯಂತೆ.
ನಿರ್ದೇಶಕ ಶ್ರೀನಿ
‘ಅಂಬುಜ’ ನಾಯಕಿ ಪ್ರಧಾನ ಚಿತ್ರ. ಶ್ರೀನಿ ಹನುಮಂತರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ‘ಕೆಲವು ದಿನಗಳ ನಂತರ’ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ಶ್ರೀನಿಯವರು ‘ ಅಂಬುಜ’ ಸಿನಿಮಾದ ಮೂಲಕ ನಯಾ ಸವಾಲಿಗೆ ಸಿದ್ದರಾಗಿದ್ದಾರೆ.ನಟಿ ಶುಭಪುಂಜಾ ಕೇಂದ್ರಬಿಂದು. ಹಿರಿಯ ನಟಿ ಪದ್ಮಜಾ ರಾವ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಿರ್ದೇಶಕ ಶರಣಯ್ಯ, ಕಲಾವಿದ ಗೋವಿಂದೇ ಗೌಡ, ಸಂದೇಶ್ ಶೆಟ್ಟಿ, ಮಜಾ ಭಾರತದ ಪ್ರಿಯಾಂಕ ಕಾಮತ್, ಬೇಬಿ ಆಕಾಂಕ್ಷ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
ನಿರ್ಮಾಪಕ ಕಾಶೀನಾಥ್ ಮಡಿವಾಳರ್
ಸದ್ಯಕ್ಕೀತ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಅಕ್ಟೋಬರ್ ತಿಂಗಳಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಸಿದ್ದತೆ ನಡೆಸಿದೆ. ಬೆಂಗಳೂರು, ಗದಗ ಹಾಗೂ ಚಿಕ್ಕಮಂಗಳೂರಿನಲ್ಲಿ ಚಿತ್ರೀಕರಣಕ್ಕೆ ಲೋಕೆಷನ್ ಫಿಕ್ಸ್ ಆಗಿದೆ. ಇನ್ನು ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ಬಂಡವಾಳ ಹೂಡಿದ್ದಾರೆ. ವಿಶೇಷ ಅಂದ್ರೆ ಅವರೇ ಕಥೆ ಬರೆದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ ನಿರ್ದೇಶಕ ಶ್ರೀನಿ. ಹಾಗೆಯೇ ಚಿತ್ರದ ತಾಂತ್ರಿಕ ವರ್ಗದಲ್ಲಿ ಮುರುಳೀಧರ್ ಛಾಯಾಗ್ರಹಣ, ಪ್ರಸನ್ನ ಕುಮಾರ್ ಸಂಗೀತ, ಎಂಸ್ ತ್ಯಾಗರಾಜ್ ಹಿನ್ನೆಲೆ ಸಂಗೀತದ ಮಾಡುತ್ತಿದ್ಧಾರೆ.
“ರಕ್ತ ಚಿಮ್ಮುವ ಅಖಾಡದಲ್ಲಿ ನಿಷ್ಠೆಯ ನೂರು ತಲೆಗಳು ಬಿದ್ದರೂ, ಪ್ರತಿಷ್ಠೆಯ ತಲೆ ಮಾತ್ರ ಬೀಳಬಾರದು… ಮಾರ್ಕೆಟ್ನಲ್ಲಿ ಮಾರೋಕೆ ಏನ್ ತಂದಿದ್ದೇವೆ ಅನ್ನೋದರ ಮೇಲೆ ಬೆಲೆ..” ಇದಿಷ್ಟೇ ಡೈಲಾಗ್ ಆ ಟೀಸರ್ನಲ್ಲಿದೆ. ಅದರ ಮೇಕಿಂಗ್ ನೋಡಿದವರಿಗೆ ಅದೊಂದು ಪಕ್ಕಾ ಮಾಸ್ ಫೀಲ್ ಇರುವ ಸಿನಿಮಾ ಎನಿಸದೇ ಇರದು. ಅಷ್ಟರಮಟ್ಟಿಗೆ ನಿರ್ದೇಶಕ ತಾಯಿ ಲೋಕೇಶ್ ಕಟ್ಟಿಕೊಟ್ಟಿದ್ದಾರೆ. ಶೀರ್ಷಿಕೆ ಹೇಳುವಂತೆಯೇ, ಇದೊಂದು ಟೊಮೆಟೊ ಕಥೆ ಎನಿಸುತ್ತೆ. ಟೊಮ್ಯಾಟೊ ಕಲರ್ ರೆಡ್ ಆಗಿದ್ದರೂ, ಅದರಲ್ಲಿ ರೆಡ್ ಶೇಡ್ ಜಾಸ್ತೀನೆ ಇರಬಹುದಾ ಎಂಬ ಪ್ರಶ್ನೆ ಟೀಸರ್ ನೋಡಿದವರಿಗೆ ಗೊತ್ತಾಗುತ್ತೆ. ಇದು ವಾಸ್ತವತೆಗೆ ಹತ್ತಿರದ ಕಥೆ ಅನ್ನುವುದನ್ನು ಹೇಳುತ್ತದೆ
ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಸಿನಿಮಾಗಳು ಶುರುವಾಗುತ್ತಲೇ ಇವೆ. ಅದರಲ್ಲೂ ಹೊಸ ಪ್ರತಿಭಾವಂತರು ಅಂದರೆ ಸುಮ್ಮನೆ ಅಲ್ಲ ಬಿಡಿ. ಮೊದಲ ಪ್ರಯತ್ನದಲ್ಲೇ ಸುದ್ದಿಯಾಗಿಬಿಡುತ್ತಾರೆ. ಇಲ್ಲೀಗ ಹೇಳಹೊರಟಿರುವುದು ಹೊಸ ಸಿನಿಮಾದ ಫಸ್ಟ್ ಲುಕ್ ಕುರಿತು. ಅಷ್ಟೇ ಅಲ್ಲ, ಈಗಾಗಲೇ ಆ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಪ್ರತಾಪ್ ನಾರಾಯಣ್ ಅಭಿನಯದ ಈ ಚಿತ್ರದ ಫಸ್ಟ್ ಲುಕ್ ವಿಶೇಷವೆನಿಸಿದೆ. ಹೌದು, ಅ ಚಿತ್ರದ ಹೆಸರು. “ದಿ ಕಲರ್ ಆಫ್ ಟೊಮೆಟೊ” ಚಿತ್ರದ ಶೀರ್ಷಿಕೆಯೇ ವಿಭಿನ್ನ ಅಂದುಕೊಂಡರೆ, ಕಥೆ ಅದಕ್ಕಿಂತಲೂ ವಿಭಿನ್ನವಾಗಿರುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಡಿ.
ಯಾಕೆಂದರೆ, ಈ ಚಿತ್ರದ ಕಥೆ ಬರೆದಿರೋದು. ಕೋಟಿಗಾನಹಳ್ಳಿ ರಾಮಯ್ಯ. ಈ ಹೆಸರೇ ಸಾಕು ಅದ್ಭುತ ಕಥೆಗಾರ ಅನ್ನುವುದಕ್ಕೆ. ಈಗಾಗಲೇ “ಮೂಕ ಹಕ್ಕಿ” ಸಿನಿಮಾನೇ ಸಾಕು ಅವರ ಬರಹ ಎಂಥದ್ದು ಅಂತ ತಿಳಿಯೋಕೆ. ಅದಾಗಲೇ ಸಾಬೀತು ಮಾಡಿರುವ ಕೋಟಿಗಾನಹಳ್ಳಿ ರಾಮಯ್ಯ, ಈಗ ಮತ್ತೊಂದು ಸಿನಿಮಾ ಮೂಲಕ ಹೊಸ ವಿಷಯ ಹೇಳೋಕೆ ಬಂದಿದ್ದಾರೆ. ಅವರ ಬರಹದಲ್ಲಿ ಸಾಕಷ್ಟು ವಿಶೇಷತೆಗಳಿರುತ್ತವೆ ಎನ್ನುವುದನ್ನು ಹೆಚ್ಚೇನು ಹೇಳಬೇಕಿಲ್ಲ. ಇನ್ನೂ ಬಿಡುಗಡೆಯ ಹಂತದಲ್ಲಿರುವ ಕನ್ನೇರಿ ಸಿನಿಮಾಗೂ ಕೋಟಿಗಾನಹಳ್ಳಿ ರಾಮಯ್ಯ ಅವರದೇ ಬರವಣಿಗೆ ಇದೆ. ಈಗ “ದಿ ಕಲರ್ ಆಫ್ ಟೊಮೆಟೊ” ಸಿನಿಮಾಗೂ ಕಥೆ ಬರೆದಿದ್ದಾರೆ. ಈ ಸಿನಿಮಾಗೆ ಸ್ವಾತಿ ಕುಮಾರ್ ನಿರ್ಮಾಪಕರು. ತಾಯಿ ಲೋಕೇಶ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅದರೊಂದಿಗೆ ಟೀಸರ್ ಕೂಡ ರಿಲೀಸ್ ಮಾಡಲಾಗಿದೆ.
“ರಕ್ತ ಚಿಮ್ಮುವ ಅಖಾಡದಲ್ಲಿ ನಿಷ್ಟೆಯ ನೂರು ತಲೆಗಳು ಬಿದ್ದರೂ, ಪ್ರತಿಷ್ಟೇಯ ತಲೆ ಮಾತ್ರ ಬೀಳಬಾರದು… ಮಾರ್ಕೆಟ್ನಲ್ಲಿ ಮಾರೋಕೆ ಏನ್ ತಂದಿದ್ದೇವೆ ಅನ್ನೋದರ ಮೇಲೆ ಬೆಲೆ..” ಇದಿಷ್ಟೇ ಡೈಲಾಗ್ ಆ ಟೀಸರ್ನಲ್ಲಿದೆ. ಅದರ ಮೇಕಿಂಗ್ ನೋಡಿದವರಿಗೆ ಅದೊಂದು ಪಕ್ಕಾ ಮಾಸ್ ಫೀಲ್ ಇರುವ ಸಿನಿಮಾ ಎನಿಸದೇ ಇರದು.
ದಿ ಕಲರ್ ಆಫ್ ಟೊಮೆಟೊ ಟೀಸರ್
ಅಷ್ಟರಮಟ್ಟಿಗೆ ನಿರ್ದೇಶಕ ತಾಯಿ ಲೋಕೇಶ್ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆಯೇ, ಇದೊಂದು ಟೊಮ್ಯಾಟೊ ಕಥಾಹಂದರ ಹೊಂದಿರುವ ಸಿನಿಮಾ. ಟೊಮೆಟೊ ಕಲರ್ ರೆಡ್ ಆಗಿದ್ದರೂ, ಅದರಲ್ಲಿ ರೆಡ್ ಶೇಡ್ ಜಾಸ್ತೀನೆ ಇರಬಹುದಾ ಎಂಬ ಪ್ರಶ್ನೆ ಟೀಸರ್ ನೋಡಿದವರಿಗೆ ಗೊತ್ತಾಗುತ್ತೆ.
ಅದರಲ್ಲೂ, ಇದು ವಾಸ್ತವತೆಗೆ ಹತ್ತಿರವಾಗಿರುವ ಕಥೆ ಅನ್ನುವುದನ್ನು ಈ ಟೀಸರ್ ಹೇಳುತ್ತದೆ. ರೈತ ಇಂದು ಟೊಮೆಟೊ ಬೆಳೆಗೆ ಬೆಂಬಲ ಸಿಗದೆ ಪರದಾಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ರೈತ ರೊಚ್ಚಿಗೆದ್ದರೆ ರಕ್ತಪಾತವೂ ಗ್ಯಾರಂಟಿ ಅನ್ನೋದು ಯಾವಾಗಲೋ ಸಾಬೀತಾಗಿದೆ. ಅದೇನೆ ಇರಲಿ, ಇಲ್ಲಿ ನಿರ್ದೇಶಕ ತಾಯಿ ಲೋಕೇಶ್ ಏನು ಹೇಳೋಕೆ ಹೊರಟಿದ್ದಾರೋ ಗೊತ್ತಿಲ್ಲ. ಟೀಸರ್ ನೋಡಿದ ಮೇಲೆ, ಅದೊಂದು ಪಕ್ಕಾ ಮಾಸ್ ಎಲಿಮೆಂಟ್ಸ್ ಇರುವ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಟೀಸರ್ ಮೇಕಿಂಗ್ ಜೊತೆಗೆ ಹಿನ್ನೆಲೆ ಸಂಗೀತ ಇಲ್ಲಿ ಗಮನಸೆಳೆಯುತ್ತದೆ. ಅಲ್ಲೊಂದು ಕುತೂಹಲವೂ ಇದೆ. ಆ ಕುತೂಹಲ ಏನೆಂಬುದಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು.
ನಿರ್ದೇಶಕ ತಾಯಿ ಲೋಕೇಶ್ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಹಾಗಾಗಿ ಒಂದಷ್ಟು ಹೋರಾಟದ ಛಾಯೆ ಈ ಟೀಸರ್ನಲ್ಲೂ ಈಗಾಗಲೇ ಎದ್ದು ಕಾಣುತ್ತಿದೆ. ಸಾಂಸ್ಕೃತಿಕ ಲೋಕದ ಬಗ್ಗೆ ಅಪಾರ ಒಲವು ಇಟ್ಟುಕೊಂಡಿರುವ ತಾಯಿ ಲೋಕೇಶ್, ಹಲವು ಬೀದಿ ಬದಿಯ ಬದುಕನ್ನು, ಪಾತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ದಾಖಲಿಸಿದ್ದಾರೆ.
ದೊಡ್ಡವರ, ಚಿಂತಕರ ಒಡನಾಟವಿರಿಸಿಕೊಂಡಿರುವ ಅವರಿಗೆ ಸಿನಿಮಾ ಹುಚ್ಚು ಹೆಚ್ಚು. ಸಿನಿಮಾ ಕಥೆ ಬಗ್ಗೆ ಅಪಾರ ಆಸಕ್ತಿ ತೋರುವ ಅವರಿಗೆ ಸಿನೆಮಾವನ್ನು ಹೇಗೆ ಕಟ್ಟಬೇಕು ಎಂಬ ಕುರಿತು ಅರಿವಿದೆ. ಒಳ್ಳೆಯ ಆಲೋಚನೆಗಳೊಂದಿಗೆ “ದಿ ಕಲರ್ ಆಫ್ ಟೊಮೆಟೊ” ಸಿನಿಮಾ ಮಾಡಲು ಹೊರಟಿರುವ ಅವರ ತಂಡಕ್ಕೆ “ಸಿನಿಲಹರಿ” ಶುಭ ಹಾರೈಸಲಿದೆ.
ಹಬ್ಬಗಳು ಬಂದರೆ ಸಿನಿಮಾ ಮಂದಿಗೆ ಅದೊಂದು ರೀತಿ ದೊಡ್ಡ ಸಂಭ್ರಮ. ಕಾರಣ, ತಮ್ಮ ಸಿನಿಮಾಗಳ ಪೋಸ್ಟರ್, ಟೀಸರ್, ಟ್ರೇಲರ್, ಸಾಂಗ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರುವಿಟ್ಟುಕೊಳ್ಳುತ್ತಾರೆ. ಆ ಸಾಲಿಗೆ “ಬರ್ಕ್ಲಿʼ ಸಿನಿಮಾ ಕೂಡ ಸೇರಿದೆ. ಹೌದು, ಗೌರಿ-ಗಣೇಶ ಹಬ್ಬಕ್ಕೆ “ಬರ್ಕ್ಲಿ” ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆಗೂ ಪಾತ್ರವಾಗಿದೆ.
ಸಂತೋಷ್ ಬಾಲರಾಜ್ ಹೀರೋ ಆಗಿರುವ ಈ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ “ಬರ್ಕ್ಲಿ” ಚಿತ್ರದ ಲಿರಿಕಲ್ ಸಾಂಗ್ ಝೇಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಹದ್ದೂರ್ ಚೇತನ್ ಬರೆದಿರುವ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಇರುವ ಚಿತ್ರವನ್ನು ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್ನಲ್ಲಿ ಆನೇಕಲ್ ಬಾಲರಾಜ್ ನಿರ್ಮಿಸಿದ್ದಾರೆ. ಸದ್ಯ ಚಿತ್ರದ ಮೊದಲ ಪ್ರತಿ ಸಿದ್ಧವಾಗುತ್ತಿದೆ. “ಕರಿಯ”, “ಗಣಪ”, “ಕರಿಯ ೨”, ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದ ಮತ್ತೊಂದು ಅದ್ದೂರಿ ಚಿತ್ರ “ಬರ್ಕ್ಲಿ”. ಉತ್ತಮ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಗಣಪ, ಕರಿಯ ೨ ಚಿತ್ರಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ. ಬಹುಭಾಷ ನಟ ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಇತರರು ನಟಿಸಿದ್ದಾರೆ.
ಕನ್ನಡದಲ್ಲಿ ಈಗಾಗಲೇ ಭಾಗ-2 3 ಸಿನಿಮಾಗಳಿಗೆ ಲೆಕ್ಕವಿಲ್ಲ. ಪಾರ್ಟ್ 1, ಪಾರ್ಟ್ 2 ಮತ್ತು ಪಾರ್ಟ್ 3 ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಆ ಸಾಲಿಗೆ ಈಗ ರಮೇಶ್ ಅರವಿಂದ್ ಅಭಿಯದ ಸಿನಿಮಾ ಕೂಡ ಸೇರಿದೆ. ಹೌದು, ಕಳೆದ 2020ರಲ್ಲಿ ಬಿಡುಗಡೆಯಾಗಿದ್ದ “ಶಿವಾಜಿ ಸುರತ್ಕಲ್” ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಸ್ವತಃ ವಿತರಕರಿಂದಲೇ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿತ್ತು. ರಮೇಶ್ ಅರವಿಂದ್ ಅವರ ಈ ಚಿತ್ರವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದರು. ರೇಖಾ ಕೆ.ಎನ್ ಮತ್ತು ಅನೂಪ್ ಅವರು ನಿರ್ಮಿಸಿದ್ದರು. ಈಗ ಅದೇ ಶೀರ್ಷಿಕೆಯಲ್ಲಿ ಭಾಗ -2 ಮಾಡ ಹೊರಟಿರುವುದು ಗೊತ್ತೇ ಇದೆ.
ಕಥೆ, ಚಿತ್ರಕಥೆ ರೆಡಿ ಮಾಡಿ ಕೊಂಡಿರುವ ಚಿತ್ರತಂಡ, ಅಕ್ಟೋಬರ್ನಲ್ಲಿ ಚಿತ್ರೀಕರಿಸುವ ಯೋಜನೆ ರೂಪಿಸಿದೆ. ಶಿವಾಜಿಯಾಗಿ ರಮೇಶ್ ಅರವಿಂದ್ ಕಾಣಿಸಿಕೊಳ್ಳಲಿದ್ದು, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಭಾಗ-2ರಲ್ಲೂ ಮುಂದುವರಿಯಲಿದ್ದಾರೆ. ಉಳಿದಂತೆ ಚಿತ್ರದಲ್ಲಿ ಒಂದಷ್ಟು ಹೊಸ ಪ್ರತಿಭೆಗಳು ಕಾಣಿಸಿಕೊಳ್ಳಲಿವೆ. “ಶಿವಾಜಿ ಸುರತ್ಕಲ್” ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು.
ಆದರೆ, ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೇದಾರಿ ಕತೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಅಂಶಗಳು ಇಲ್ಲಿ ಹೈಲೈಟ್ ಆಗಿರಲಿವೆ. ಚಿತ್ರಕ್ಕೆ ಗುರುಪ್ರಸಾದ್ ಕ್ಯಾಮೆರಾ ಹಿಡಿಯಲಿದ್ದು, ಉಳಿದಂತೆ ತಾಂತ್ರಿಕ ತಂಡದ ಆಯ್ಕೆ ಇಷ್ಟರಲ್ಲೇ ನಡೆಯಲಿದೆ. “ಶಿವಾಜಿ ಸುರತ್ಕಲ್” ಚಿತ್ರದ ಯಶಸ್ಸು ಮತ್ತು ತಮಿಳು, ಮಲಯಾಳಂ, ತೆಲುಗಿಗೆ ರೀಮೇಕ್ ರೈಟ್ಸ್ ಮಾರಾಟವಾಗಿದ್ದರಿಂದ ಚಿತ್ರತಂಡ ಮತ್ತಷ್ಟು ಉತ್ಸಾಹದಿಂದ ಅದ್ದೂರಿಯಾಗಿ ಚಿತ್ರ ಮಾಡುವ ತಯಾರಿಯಲ್ಲಿದೆ.
‘ಕ್ರಾಂತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಸಿನಿಮಾ. ಗಣೇಶ ಹಬ್ಬದಂದು ವಿಶೇಷವಾಗಿ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಡಿ55 ಟೈಟಲ್ ಏನಿರಬಹುದು ಎನ್ನುವ ದರ್ಶನ್ ಭಕ್ತಗಣದ ಮಹಾ ನಿರೀಕ್ಷೆಗೆ ಕುಂಬಳಕಾಯಿ ಹೊಡೆದಾಗಿದೆ. ಟೈಟಲ್ ಅನೌನ್ಸ್ ಆದ ಒಂದೇ ಗಂಟೆಯಲ್ಲಿ ಟ್ರೆಂಡಿಂಗ್ ಆಗಿದೆ. ಇದು ದರ್ಶನ್ ಹೆಸರಿಗಿರುವ ಶಕ್ತಿ, ದಾಸನ ಅಭಿಮಾನಿ ಬಳಗಕ್ಕಿರುವ ತಾಕತ್ತು.
ಕಳೆದ ಒಂದು ತಿಂಗಳಿಂದ ದಚ್ಚು ಭಕ್ತರು ಒಂಟಿಕಾಲಿನಲ್ಲಿ ನಿಂತಿದ್ದರು. ಡಿ55 ಅನೌನ್ಸ್ ಆಗುವ ದಿವ್ಯಕ್ಷಣಕ್ಕಾಗಿ ಕಾತುರದಿಂದ ಕಾದಿದ್ದರು. ಆ ಸುಂದರ ಕ್ಷಣಕ್ಕೆ ಗಣೇಶನ ಹಬ್ಬ ಸಾಕ್ಷಿಯಾಗಿದೆ. ಗಜಾನನ ಆಶೀರ್ವಾದದೊಂದಿಗೆ ‘ ಕ್ರಾಂತಿ’ಗೆ ಕಿಕ್ ಸ್ಟಾರ್ಟ್ ಸಿಕ್ಕಿ ದೆ. ಇಂಟ್ರೆಸ್ಟಿಂಗ್ ಅಂದರೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕ್ರಾಂತಿ ಆಗ್ತಿರುವುದು.
ಬಜಾರ್ ನಲ್ಲಿ, ಬೆಳ್ಳಿತೆರೆ ಅಂಗಳದಲ್ಲಿ, ಬಾಕ್ಸ್ ಆಫೀಸ್ ಅಡ್ಡದಲ್ಲಿ ಚಾಲೆಂಜಿಂಗ್ ಚಕ್ರವರ್ತಿಯ ಸಿನಿಮಾಗಳು ಎಷ್ಟೆಲ್ಲಾ ಕ್ರಾಂತಿ ಮಾಡಿವೆ ಎನ್ನುವುದು ಇಡೀ ಕರ್ನಾಟಕ ಮಾತ್ರವಲ್ಲ ಪಕ್ಕದ ರಾಜ್ಯವೂ ಕಣ್ಣರಳಿಸಿ ನೋಡಿದೆ. ದಾಸ ಬರ್ತಾವ್ನೆ ಅಂದಾಗ ಬೆಳ್ಳಿತೆರೆ ಕುಣಿಯುತ್ತೆ, ಬಾಕ್ಸ್ ಆಫೀಸ್ ಪಟಾಕಿ ಕೇಕೆ ಹಾಕುತ್ತೆ. ಅದಕ್ಕೆ ಕಾರಣ ಚಿತ್ರಮಂದಿರ ಹೌಸ್ ಫುಲ್ ಮಾಡಿ, ಬಾಕ್ಸ್ ಆಫೀಸ್ ಡಬ್ಬದಲ್ಲಿ ಕೋಟಿಕೋಟಿ ಕುಣಿಯುವಂತೆ ಕ್ರಾಂತಿ ಮಾಡುವ ಪವರ್ ಚಕ್ರವರ್ತಿಗಿರುವುದಕ್ಕೆ. ಅಪ್ ಕೋರ್ಸ್ ಇದೆ. ಆ ಪವರ್ ಇರುವುದಕ್ಕೇನೇ ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟ ಸಿಕ್ಕಿರುವುದು.
ಅಷ್ಟಕ್ಕೂ, ಈ ಭಾರಿ ‘ಕ್ರಾಂತಿ’ ಟೈಟಲ್ ಇಟ್ಟುಕೊಂಡೇ ಫೀಲ್ಡಿಗಿಳಿಯುತ್ತಿರುವ ದರ್ಶನ್, ಯಾವ ಕ್ಷೇತ್ರದಲ್ಲಿ ರೆವಲ್ಯೂಷನ್ ತರುತ್ತಾರೆ ಎನ್ನುವ ಕೂತೂಹಲ ಹೆಚ್ಚಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕ್ರಾಂತಿಯಾಗಬಹುದಾ ಎನ್ನುವ ನಿರೀಕ್ಷೆಯ ಜೊತೆಗೆ ಫ್ರೀಡಂ ಫೈಟರ್ ಆಗಿ ತೊಡೆತಟ್ಟಲಿದ್ದಾರಾ ಯಜಮಾನ? ಈ ಮಹಾನಿರೀಕ್ಷೆಯ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಚಿತ್ರತಂಡವೇ ಉತ್ತರ ನೀಡಲಿದೆ.
ಕುಲಕೋಟಿ ಅಭಿಮಾನಿಗಳ ಒಡೆಯನನ್ನ ಕ್ರಾಂತಿಯ ಕಣಕ್ಕೆ ಇಳಿಸ್ತಿರುವುದು ಯಜಮಾನ ಸಿನಿಮಾ ತಂಡ. ನಿರ್ಮಾಪಕಿ ಶೈಲಜನಾಗ್ ಹಾಗೂ ಬಿ ಸುರೇಶ್ ಅವರು ದರ್ಶನ್ ಆಗಿದ್ದಾಗ್ಲೀ ಈ ಭಾರಿ ಕ್ರಾಂತಿ ಮಾಡೆಬಿಡೋಣ ಅಂತ ಸಜ್ಜಾಗಿದ್ದಾರೆ. ಸಾರಥಿಯ ಜೊತೆಜೊತೆಗೆ ಹೆಜ್ಜೆಹಾಕುತ್ತಿರುವ ವಿ ಹರಿಕೃಷ್ಣ ‘ ಕ್ರಾಂತಿ’ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಬಹುಭಾಷೆಯಲ್ಲಿ ಕ್ರಾಂತಿ ಮಾಡೋದಕ್ಕೆ ಹೊರಟಿರುವ ಫಿಲ್ಮ್ ಟೀಮ್ ಗಣೇಶನ ಹಬ್ಬಕ್ಕೆ ಟೈಟಲ್ ಅನೌನ್ಸ್ ಮಾಡಿ ಫ್ಯಾನ್ಸ್ ಗೆ ಹಬ್ಬದೂಟ ಹಾಕಿಸಿದೆ. ಯಜಮಾನ ತಂಡ ಮತ್ತೆ ಒಂದಾಗಿರುವುದಕ್ಕೆ ದಾಸನ ಭಕ್ತರಲ್ಲಿ ಮಾತ್ರವಲ್ಲ ಇಡೀ ಗಾಂಧಿನಗರದ ಮಂದಿಯಲ್ಲಿ ನಿರೀಕ್ಷೆ ಮುಗಿಲೆತ್ತರಕ್ಕೇರಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎ2 ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆಯನ್ನ ಆಧರಿಸಿ ಮಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆಂದು ಸುದ್ದಿಯಾಗಿದೆ. ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆ ನೀಡಿದ್ದಾರೆಂದು ಮೊದಲು ಸುದ್ದಿಯಾಯ್ತು. ಕೊನೆಗೆ ಕಿಶೋರ್ ಶೆಟ್ಟಿ ನಾನು ಅನುಶ್ರೀ ವಿರುದ್ದ ಹೇಳಿಕೆ ನೀಡಿಲ್ಲವೆಂದು ಡ್ರಗ್ಸ್ ಪಾರ್ಟಿ ಮಾಡಿಲ್ಲವೆಂದು ಕ್ಲ್ಯಾರಿಟಿ ಕೊಟ್ಟರು. ಅಷ್ಟಕ್ಕೂ, ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಎನ್ನುವುದು ಗೊಂದಲದ ಗೂಡಾಗಿದೆ. ಈ ನಡುವೆ ಕಿಶೋರ್ ಹೇಳಿಕೆ ಅನುಶ್ರೀಗೆ ಮುಳುವಾಗ್ಬೋದು, ನಶೆಯ ಸುಳಿಯಲ್ಲಿ ಸಿಲುಕಿ ಲಾಕ್ ಆಗ್ಬೋದು ಎನ್ನುವಂತಹ ಮಾತುಗಳು ಕೇಳಿಬಂದವು. ಎಲ್ಲಿ ಲಾಕ್ ಆಗ್ತೀನೋ ಎಂಬ ಭಯದಿಂದ ಆಂಕರ್ ಕಮ್ ನಟಿ ಅನುಶ್ರೀ ತಲೆಮರೆಸಿಕೊಂಡಿದ್ದಾರೆ, ಮುಂಬೈನಲ್ಲಿ ಅಡಗಿ ಕುಳಿತಿದ್ದಾರೆ ಅಂತೆಲ್ಲಾ ಚರ್ಚೆಯಾಯ್ತು. ಇದೆಲ್ಲದಕ್ಕೂ ಸ್ವತಃ ಅನುಶ್ರೀ ಫುಲ್ ಸ್ಟಾಪ್ ಹಾಕಿದ್ದಾರೆ. ವೃತ್ತಿ ನಿಮಿತ್ತ ಮುಂಬೈಗೆ ಹೋಗಿದ್ದು ನಿಜ ಆದರೆ ನಾನು ಓಡಿಹೋಗಿಲ್ಲ. ಎಂತಹದ್ದೇ ಸಂದರ್ಭ ಬಂದರೂ ಕೂಡ ಎದುರಿಸಿ ನಿಲ್ತೇನೆ ಹೊರೆತು ಈ ಕನ್ನಡ ನೆಲ ಬಿಟ್ಟು ಓಡಿಹೋಗೋದಿಲ್ಲ ಎಂದಿದ್ದಾರೆ.
ಅಷ್ಟಕ್ಕೂ, ಕಳೆದ ವರ್ಷ ಮಂಗಳೂರು ಸಿಸಿಬಿ ಪೊಲೀಸರು ನನ್ನ ಕರೆಸಿ ತನಿಖೆ ಮಾಡಿದ್ದು ನಾನು ಆರೋಪಿ ಅಥವಾ ಅಪರಾಧಿ ಎನ್ನುವ ಕಾರಣಕ್ಕೆ ಅಲ್ಲ. ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಇಬ್ಬರು ಕೂಡ ನನ್ನ ಡ್ಯಾನ್ಸ್ ರಿಯಾಲಿಟಿ ಶೋಗೆ ಕೊರಿಯಾಗ್ರಫಿ ಮಾಡಿದ್ದರು. ಹೀಗಾಗಿ ನನ್ನ ಕರೆಸಿ ತನಿಖೆ ನಡೆಸಿದ್ದರು. ನಾನು ತನಿಖೆಗೆ ಸ್ಪಂಧಿಸಿ ಅವರು ಏನೆಲ್ಲಾ ಪ್ರಶ್ನೆಗಳನ್ನ ಕೇಳಿದ್ದರೋ ಅದೆಲ್ಲದಕ್ಕೂ ಉತ್ತರಿಸಿ ಬಂದಿದ್ದೆ. ಈಗ, ಚಾರ್ಜ್ಶೀಟ್ನಲ್ಲಿ ನನ್ನ ಹೆಸರು ಕೇಳಿಬಂದಿದೆ ಎನ್ನುವ ಸುದ್ದಿ ಹರಿದಾಡ್ತಿದೆ. ಒಂದ್ವೇಳೆ ನನ್ನ ಹೆಸರು ಚಾರ್ಜ್ ಶೀಟ್ನಲ್ಲಿದ್ದು, ಆರೋಪಿ ಕಿಶೋರ್ ಶೆಟ್ಟಿ ನನ್ನ ವಿರುದ್ದ ಹೇಳಿಕೆ ನೀಡಿದ್ದರೆ, ಪೊಲೀಸರು ತನಿಖೆಗೆ ಕರೆದರೆ ನಾನು ಹಾಜರಾಗ್ತೀನಿ ಮತ್ತು ತನಿಖೆಗೆ ಸ್ಪಂಧಿಸ್ತೇನೆ ಎಂದಿದ್ದಾರೆ.
ನನ್ನ ವಿರುದ್ದ ನೂರು ಜನ ನೂರು ಮಾತನಾಡ್ತಿದ್ದಾರೆ ಮತ್ತು ಆರೋಪ ಮಾಡ್ತಿದ್ದಾರೆ. ಅವರೆಲ್ಲರ ಮಾತಿಗೆ ಹಾಗೂ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ. ಕಾನೂನಿದೆ, ಪೊಲೀಸರು ತನಿಖೆ ಮಾಡ್ತಿದ್ದಾರೆ ಮಾಡಲಿ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಹೀಗಾಗಿ ನಾನು ಕಾನೂನಿಗೆ ತಲೆಬಾಗ್ತೀನಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಬೆಂಗಳೂರಲ್ಲಿ ೪ ಕೋಟಿ ಮನೆಯಿದೆ, ಮಂಗಳೂರಲ್ಲಿ ೧೨ ಕೋಟಿ ಮನೆಯಿದೆ ಅಂತೆಲ್ಲಾ ಹೇಳಿಕೆ ಕೊಡ್ತಿದ್ದಾರೆ. ಕಳೆದ ೩ ವರ್ಷದಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿದ್ದೇನೆ. ಬ್ಯಾಂಕ್ನಲ್ಲಿ ಲೋನ್ ಪಡೆದು ಮಂಗಳೂರಿನಲ್ಲಿ ಮನೆ ಕಟ್ಟಿದ್ದೇನೆ. ಕಷ್ಟಪಟ್ಟು ಕೆಲಸ ಮಾಡಿ ದುಡಿದು ಬದುಕುತ್ತಿದ್ದೇನೆ. ಯಾವ ಪ್ರಭಾವಿಗಳ ಸಹಾಯವೂ ನನಗಿಲ್ಲ. ಯಾರ ಸಹಾಯವೂ ನನಗೆ ಬೇಕಾಗಿಲ್ಲ. ಏನೇ ಬಂದರೂ ಒಬ್ಬಳೇ ಎದುರಿಸುತ್ತೇನೆ. ಬೆಂಗಳೂರಿಗೆ ಒಬ್ಬಳೇ ಬಂದಿದ್ದೇನೆ, ಬದುಕು ಕಟ್ಟಿಕೊಂಡಿದ್ದೇನೆ. ಹಾಗೆಯೇ ಒಬ್ಬಳೇ ಮುಂದೆ ಸಾಗುತ್ತೇನೆ ಎಂದು ಹೆಮ್ಮೆಯಿಂದ ಮಾತನಾಡಿದ್ದಾರೆ ಆಂಕರ್ ಕಮ್ ನಟಿ ಅನುಶ್ರೀಯವರು
ಹರಿ ಸಂತೋಷ್ ಆ್ಯಕ್ಷನ್ ಕಟ್ ಹೇಳಿರುವ ‘ಬೈ ಟು ಲವ್’ ಸಿನಿಮಾ ತಂಡ, ನಟ ಧನ್ವೀರ್ ಬರ್ತ್ ಡೇ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ್ದ ಟೀಸರ್ ಗೆ ಎಲ್ಲೆಡೆಯಿಂದ, ಮೆಚ್ಚುಗೆ ಸಿಕ್ಕಿದೆ.ಪೋಸ್ಟರ್ ನೋಡಿದವರಿಗೆ ಫ್ಯಾಮಿಲಿ ಇದೊಂದು ಪಕ್ಕಾ ಸಿನಿಮಾ ಅನ್ನಿಸಿದೇ ಇರದು. ಇನ್ನು ರಿಲೀಸ್ ಆಗಿರುವ ಟೀಸರ್ ನೋಡಿದರೆ ಮಾಸ್ ಫೀಲ್ ಸಿನಿಮಾ ಅನ್ನುತ್ತಿದ್ದಾರೆ.
‘ಬಜಾರ್’ ಬಳಿಕ ಧನ್ವೀರ್ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಫಸ್ಟ್ ಲುಕ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿತ್ತು ಚಿತ್ರತಂಡ. ಧನ್ವೀರ್-ಶ್ರೀಲೀಲಾ ಹಾಗೂ ಪುಟ್ಟ ಮಗುವೊಂದು ಹಸೆಮಣೆ ಮೇಲೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್ ಆಗಿತ್ತು.ಸೆಪ್ಟೆಂಬರ್ 8ರಂದು ಚಿತ್ರದ ನಾಯಕ ಧನ್ವೀರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಖುಷಿಗೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಮೊದಲ ಚಿತ್ರದಲ್ಲಿ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದ ಧನ್ವೀರ್ಗಿಲ್ಲಿ ಲವರ್ ಬಾಯ್ ಪಾತ್ರ ಆಗಿದ್ದಾರೆ.
ಸುಮಾರು 70 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಸಲಾಗಿದೆ. ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕರ ಮಾತು. ಗಣೇಶ್ ನಟನೆಯ ಸಖತ್, ನಿಖಿಲ್ ಕುಮಾರ್ಸ್ವಾಮಿ ನಟನೆಯ ಹೊಸ ಸಿನಿಮಾ ಹಾಗೂ ಜೋಗಿ ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ‘ಬೈ ಟು ಲವ್’ಗೆ ಹಣ ಹಾಕಿದೆ.ಚಿತ್ರದ ಕಥೆ ಮೆಚ್ಚಿಕೊಂಡು ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಎರಡನೇ ಸಿನಿಮಾವಿದು. ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಯೋಗಾನಂದ್ ಸಂಭಾಷಣೆ ಈ ಚಿತ್ರಕ್ಕಿದೆ.