Categories
ಸಿನಿ ಸುದ್ದಿ

ಆ್ಯಂಕರ್ ಅನುಶ್ರೀಗೆ ಡ್ರಗ್ಸ್ ಕಂಟಕ; ನಶೆಯ ಸುಳಿಯಲ್ಲಿ ಸಿಲುಕ್ತಾರಾ ನಟಿ ಅನುಶ್ರೀ ?

ಕನ್ನಡದ ಖ್ಯಾತ ನಿರೂಪಕಿ ಕಮ್ ನಟಿ ಅನುಶ್ರೀಗೆ ಮತ್ತೆ ಕಂಟಕ ಎದುರಾಗಿದೆ. ಕಳೆದೊಂದು ವರ್ಷದ ಹಿಂದೆ ಡ್ರಗ್ಸ್ ಕೇಸ್ ಸಂಬಂಧ ಮಂಗಳೂರು ಪೊಲೀಸರ ಮುಂದೆ ಹಾಜರಾಗಿ ಸಿಸಿಬಿ ತನಿಖೆಯನ್ನ ಎದುರಿಸಿದ್ದರು. ಅದೇ ಡ್ರಗ್ಸ್ ಕೇಸ್ ಪ್ರಕರಣ ಇದೀಗ ಆಂಕರ್ ಕಮ್ ನಟಿ ಅನುಶ್ರೀಗೆ ಮುಳುವಾದಂತೆ ಕಾಣ್ತಿದೆ. ಪ್ರಕರಣದ ಎ2 ಆರೋಪಿಯಾಗಿರುವ ಡ್ಯಾನ್ಸರ್ ಕಿಶೋರ್ ಅಮನ್‌ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆ ನೀಡಿದ್ದು, ಮಂಗಳೂರು ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ. ಅಷ್ಟಕ್ಕೂ, ಕಿಶೋರ್ ಪೊಲೀಸರ ಮುಂದೆ ನೀಡಿರುವ ಹೇಳಿಕೆಗಳೇನು? ಚಾರ್ಜ್‌ ಶೀಟ್‌ ಯಾವೆಲ್ಲಾ ಅಂಶಗಳು ಉಲ್ಲೇಖಗೊಂಡಿವೆ ಎಂಬುದರ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ.

1 ಅನುಶ್ರೀ ಡ್ರಗ್ಸ್ ತಗೋತ್ತಾರೆ, ಅವರೊಟ್ಟಿಗೆ ನಾವು ಡ್ರಗ್ಸ್ ತಗೊಂಡಿದ್ದೇವೆ

2 ಡ್ರಗ್ಸ್ ಸೇವನೆ ಜೊತೆಗೆ ಸಾಗಾಟ ಕೂಡ ಮಾಡ್ತಾರೆ ಅನುಶ್ರೀ

3 ನಮ್ಮ ರೂಂಗೆ ಅನುಶ್ರೀ ಎಕ್ಸ್ಟೆಸಿ ಪಿಲ್ಸ್ ತರುತ್ತಿದ್ದರು

4 ಅನುಶ್ರೀ-ತರುಣ್ ಮತ್ತೆ ನಾನು ಮೂವರು ಸೇರಿ ಡ್ರಗ್ ಪಾರ್ಟಿ ಮಾಡ್ತಿದ್ದೆವು

5 ನನ್ನ ಸ್ನೇಹಿತ ತರುಣ್ ಕಡೆಯಿಂದ ಅನುಶ್ರೀ ಪರಿಚಯವಾಗಿತ್ತು

6 ಕುಣಿಯೋಣ ಬಾರ' ಡ್ಯಾನ್ಸ್ ಶೋನಲ್ಲಿ ತರುಣ್ ಮತ್ತು ನಾನು ಅನುಶ್ರೀಗೆ ಕೊರಿಯಾಗ್ರಫಿ ಮಾಡಿದ್ವಿ.

7 ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿವರೆಗೂ ಡ್ಯಾನ್ಸ್ ರಿಹರ್ಸಲ್ ನಡೆಯುತ್ತಿತ್ತು

8 ಡ್ಯಾನ್ಸ್ ರಿಹರ್ಸಲ್ ಮುಗಿಸಿದ್ಮೇಲೆ ಊಟಕ್ಕೂ ಮೊದಲು ಎಕ್ಸ್ಟೆಸಿ ಪಿಲ್ಸ್ ತೆಗೆದುಕೊಳ್ಳುತ್ತಿದ್ದೆವು

9 ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದರೆ ಅದರ ಕಿಕ್ಕೇ ಬೇರೆ ಎನ್ನುತ್ತಿದ್ದರು ಅನುಶ್ರೀ

10 ಕುಣಿಯೋಣ ಬಾರ’ ಶೋನಲ್ಲಿ ವಿನ್ ಆದ್ಮೇಲೆ ಡ್ರಗ್ಸ್ ಪಾರ್ಟಿ ಕೊಟ್ಟಿದ್ದರು


11 ಮಾದಕ ವಸ್ತು ಸೇವನೆ ಮಾಡಿ ಡ್ರಿಂಕ್ಸ್ ಪಾರ್ಟಿ ಮಾಡಿದ್ವಿ.

12 ಡ್ರಗ್ಸ್ ಎಲ್ಲಿಂದ ತರಿಸಿಕೊಳ್ಳುತ್ತಿದ್ದರು ಎಂಬ ಬಗ್ಗೆ ನನಗೇನು ಗೊತ್ತಿಲ್ಲ

13 ಬಹಳ ಸುಲಭವಾಗಿ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು, ಬಹುಷಃ ಅವರಿಗೆ ಡ್ರಗ್ಸ್ ಪೆಡ್ಲರ್‌ಗಳ ಪರಿಚಯ ಇರುತ್ತೆ

ಇದಿಷ್ಟು ಎ2 ಆರೋಪಿ ಕಿಶೋರ್ ಅಮನ್ ಶೆಟ್ಟಿ ಪೊಲೀಸರ ಮುಂದೆ ಕೊಟ್ಟಿರುವಂತಹ ಹೇಳಿಕೆಗಳು. ಈ ಎಲ್ಲಾ ಹೇಳಿಕೆಗಳನ್ನ ಆಧಾರವಾಗಿಟ್ಟುಕೊಂಡು ಮಂಗಳೂರು ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಆರೋಪಿ ಕಿಶೋರ್ ಶೆಟ್ಟಿ ಕೊಟ್ಟಿರುವ ಸ್ಟೇಟ್‌ಮೆಂಟ್ ಆಂಕರ್ ಕಮ್ ನಟಿ ಅನುಶ್ರೀಗೆ ಮುಳುವಾಗ್ಬೋದು ಎನ್ನುವ ಚರ್ಚೆ ಜೋರಾಗಿದೆ. ಕೋರ್ಟ್ ತನಿಖೆಗೆ ಆಗ್ರಹಿಸಿದರೆ ಕೇಸ್ ರೀ ಓಪನ್ ಆಗಲಿದೆ. ಕಿಶೋರ್ ಸ್ಟೇಟ್‌ಮೆಂಟ್‌ನಲ್ಲಿ ಒಂದ್ವೇಳೆ ಹುರುಳಿದ್ದರೆ ಅನುಶ್ರೀಗೆ ಡ್ರಗ್ಸ್ ಕಂಟಕ ಉರುಳಾಗಬಹುದು ಎನ್ನುವುದೇ ಕೂತೂಹಲ ಚರ್ಚಾ ಸಂಗತಿ.


ಕಿಶೋರ್ ಶೆಟ್ಟಿ ಹಾಗೂ ತರುಣ್ ಇಬ್ಬರು ಕೂಡ ಡ್ಯಾನ್ಸ್ ಕೊರಿಯಾಗ್ರಫರ್‌ಗಳು. ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ಗೆ ಸಂಬಂಧ ಬೆಂಗಳೂರು ಸಿಸಿಬಿ ಪೊಲೀಸರು ಸುಮಾರು 20ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆಗೆ ಒಳಪಡಿಸಿದ್ದರು.

ಅದರಲ್ಲಿ ಎ.15 ಆರೋಪಿ ಪ್ರತೀಕ್ ಶೆಟ್ಟಿ ಕೊಟ್ಟಂತಹ ಸುಳಿವಿನಿಂದ ಕಿಶೋರ್ ಶೆಟ್ಟಿ ಹಾಗೂ ತರುಣ್ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಬೆಂಗಳೂರು ಸಿಸಿಬಿ ಪೊಲೀಸರು, ಮಂಗಳೂರು ಸಿಸಿಬಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಕಿಶೋರ್ ಶೆಟ್ಟಿ ಹಾಗೂ ತರುಣ್‌ರನ್ನ ಬಂಧಿಸಿ ತನಿಖೆಗೆ ಒಳಪಡಿಸಿದ್ದರು. ಆಗ ಅವರುಗಳ ಕೊಟ್ಟ ಮಾಹಿತಿಯ ಮೇರೆಗೆ ಅನುಶ್ರೀಯವರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದರು.

2020 ಸೆಪ್ಟೆಂಬರ್ 26 ರಂದು ಮಾಧ್ಯಮಗಳ ಮುಂದೆ ಹಾಜರಾಗಿದ್ದ ಅನುಶ್ರೀ, ಕಿಶೋರ್ ಶೆಟ್ಟಿ ಹಾಗೂ ತರುಣ್ ಇಬ್ಬರು ಕೂಡ `ಕುಣಿಯೋಣ ಬಾರ’ ಡ್ಯಾನ್ಸ್ ರಿಯಾಲಿಟಿ ಶೋಗೆ ಕೊರಿಯಾಗ್ರಫಿ ಮಾಡಿದ್ದರು. ಆದರೆ, ಸದ್ಯಕ್ಕೆ ಅವರೊಟ್ಟಿಗೆ ನನಗೆ ಒಡನಾಟ ಇಲ್ಲ. ಕಳೆದ ಹನ್ನೆರಡು ವರ್ಷಗಳ ಹಿಂದೆ ಕೊರಿಯಾಗ್ರಫಿ ಮಾಡಿದ್ದರು ಅನ್ನೋದು ಬಿಟ್ಟರೆ ಅವರೊಟ್ಟಿಗೆ ವೈಯಕ್ತಿಕವಾಗಿ ನಾನು ಸಂಪರ್ಕ ಇಟ್ಟುಕೊಂಡಿಲ್ಲ. ಕಿಶೋರ್ ಅವರ ಒಡೆತನದ ಡ್ಯಾನ್ಸ್ ಕ್ಲಾಸ್ ಉದ್ಘಾಟನೆ ಮಾಡಿಕೊಟ್ಟಿದ್ದೇನೆ ಬಿಟ್ಟರೆ ಮತ್ಯಾವ ನಂಟು ಕೂಡ ಅವರೊಂದಿಗಿಲ್ಲ ಎಂದು ಹೇಳಿಕೊಂಡಿದ್ದರು. ಇದನ್ನ ಕಿಶೋರ್ ಕೂಡ ಸಿಸಿಬಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ, ಡ್ರಗ್ಸ್ ತೆಗೆದುಕೊಳ್ಳುತ್ತಿದ್ದದ್ದು ಮಾತ್ರ ಸತ್ಯ ಎನ್ನುವ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಇದೊಂದೇ ಹೇಳಿಕೆ ಅನುಶ್ರೀಗೆ ಸಂಕಷ್ಟ ತಂದೊಡಿದೆ. ಮುಂದೇನಾಗಲಿದೆ ಈ ಕೇಸ್ ಕೂತೂಹಲದಿಂದ ಕಾಯಬೇಕು ಅಷ್ಟೇ.

Categories
ಸಿನಿ ಸುದ್ದಿ

ತಮಿಳು ನಾಡಿನಲ್ಲೂ ಸಲಗನ ಹವಾ

ಕನ್ನಡದಲ್ಲೀಗ ಸಿನಿಮಾ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ರೆಡಿಯಾಗಿವೆ.‌ಆ‌ ಸಾಲಿಗೆ ದುನಿಯಾ ವಿಜಯ್ ಅಭಿನಯದ ಸಲಗ ಕೂಡ ರೆಡಿಯಾಗಿದೆ.

ಸಲಗ ಆರಂಭದಿಂದಲೂ ಜೋರು ಸದ್ದು ಮಾಡುತ್ತಲೇ ಬಂದಿದೆ. ಈಗ ಹೊಸ ಸುದ್ದಿ ಅಂದರೆ ತಮಿಳುನಾಡಲ್ಲೂ ಸಲಗ ಸದ್ದು ಮಾಡುತ್ತಿದೆ.


ಹೌದು, ದುನಿಯಾ ವಿಜಯ್ ಅವರ ತಮಿಳು ಅಭಿಮಾನಿಗಳಿಂದ ವಿಜಯ್ ಅವರಿಗೆ ಜೈಕಾರ ಸಿಕ್ಕಿದೆ. ಇತ್ತೀಚೆಗೆ ತಮಿಳು ನಾಡಿಗೆ ದುನಿಯಾ ವಿಜಯ್ ಅವರು ಭೇಟಿ‌ ಕೊಟ್ಟ ಸಂದರ್ಭದಲ್ಲಿ ಅಲ್ಲಿನ ಅಭಿಮಾನಿಗಳು ಸಲಗ ಚಿತ್ರದ ಮೇಲಿಟ್ಟಿರೋ ಕ್ರೇಜ್ ಹಾಗೂ ವಿಜಯ್ ಅವರ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ರೀತಿ ಇದು.

Categories
ಸಿನಿ ಸುದ್ದಿ

ಸರಿಗಮಪ ಸಂಗೀತ ಮಹಾಯುದ್ಧ ; ಕಂಠದ ಜೊತೆ ಗೆದ್ದವರ ಕಾದಾಟ ! ವಿನ್ನರ್ಸ್ ಜೊತೆ ರನ್ನರ್ಸ್ ಇರ್ತಾರಾ?

ಜೀ‌ ಅಖಾಡದಲ್ಲಿ ಸರಿಗಮಪ ಮಹಾಯುದ್ಧಕ್ಕೆ ಕೌಂಟ್ ಡೌನ್ ಶುರುವಾಗಿದೆ. ದಿವ್ಯಮುಹೂರ್ತದಲ್ಲಿ ಸಂಗೀತ ಸಮರ ಏರ್ಪಡಿಸುವುದಕ್ಕೆ ಸಕಲ ಸಿದ್ದತೆ ನಡೆದಿದೆ. ಸರಿಗಮಪ ಸಿಂಗಿಂಗ್ ಶೋಗೆ ಹೊಸ ರೂಪ ಸಿಕ್ಕಿದ್ದು, ಸರಿಗಮಪ ಚಾಂಪಿಯನ್ ಶಿಪ್ ಅದ್ಧೂರಿಯಾಗಿ ಆರಂಭವಾಗ್ತಿದೆ.

ಸರಿಗಮಪ ಮನರಂಜನಾ ಲೋಕದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ. ಜೀ ಕನ್ನಡದ ಹೆಮ್ಮೆಯ ಸಂಗೀತ ಕಾರ್ಯಕ್ರಮ. ಇಲ್ಲಿವರೆಗೂ ಭರ್ತಿ ಹದಿನೇಳು ಸೀಸನ್ ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿರುವ ಸರಿಗಮಪ
ಕಾರ್ಯಕ್ರಮಕ್ಕೆ ಹೊಸ ರೂಪ ಸಿಕ್ಕಿದೆ. ಸರಿಗಮಪ‌ ಚಾಂಪಿಯನ್ ‌ಶಿಪ್ ಅದ್ಧೂರಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ರಿಲೀಸ್ ಆಗಿರುವ ಪ್ರೋಮೋ ಕೂತೂಹಲ ಮೂಡಿಸಿದೆ.

ಈ ಶೋ ಗಾಗಿ ಇಡೀ ಕರುನಾಡು ಕೂತೂಹಲದಿಂದ
ಕಾಯುತ್ತೆ. ಯಾಕಂದ್ರೆ, ಕರುನಾಡ ಮೂಲೆಮೂಲೆಯಲ್ಲಿ ಎಲೆಮರೆಕಾಯಿಯಂತಿದ್ದ ಪ್ರತಿಭೆಗಳನ್ನ ಕರೆತಂದು, ಕಂಠದೊಳಗಿದ್ದ ಕಸುವನ್ನ ಕನ್ನಡಿಗರ ಮುಂದೆ ಅನಾವರಣ ಮಾಡಿ ಕರುನಾಡ ಮಡಿಲಿಗೆ ಗಾನಕೋಗಿಲೆಗಳನ್ನ ಅರ್ಪಣೆ ಮಾಡ್ತಾರೆ. ಆದರೆ, ಈ‌ ಭಾರಿ ಸ್ವರಾನ್ವೇಷಣೆಗೆ ಬ್ರೇಕ್ ಹಾಕಿದ್ದಾರೆ. ಬದಲಾಗಿ, ಈಗಾಗಲೇ ಸರಿಗಮಪ ಸ್ವರಸಾಮ್ರಾಜ್ಯದಲ್ಲಿ ಕಂಠಕುಣಿಸಿ ಸೈ‌ ಎನಿಸಿಕೊಂಡು ಕಿರೀಟ ಮುಡಿಗೇರಿಸಿಕೊಂಡವರನ್ನು ಮತ್ತೆ ವೇದಿಕೆಗೆ ಕರೆತರುತ್ತಿದ್ದಾರೆ. ಸರಿಗಮಪ ಚಾಂಪಿಯನ್ ಶಿಪ್ ಅಂಗಳದಲ್ಲಿ ಬರೀ ವಿನ್ನರ್ಸ್ ಇರುತ್ತಾರಾ? ಅಥವಾ ರನ್ನರ್ ಅಪ್ಸ್ ಗಳಿಗೂ ಅವಕಾಶ ಕೊಡ್ತಾರಾ ಎನ್ನುವುದು ಸದ್ಯಕ್ಕಿರುವ ಕೂತೂಹಲ.

ಸರಿಗಮಪ ಕೇವಲ ಸಿಂಗಿಂಗ್ ಶೋ‌ ಅಲ್ಲ. ಕಲೆಯಿದ್ದು ಕತ್ತಲೆ ತುಂಬಿದ ಎಷ್ಟೋ ಜನರ ಬಾಳಿಗೆ ಬೆಳಕಾದ ದಿವ್ಯಕಾರ್ಯಕ್ರಮ. ಹೀಗಾಗಿಯೇ, ಕಣ್ಣಿಲ್ಲದ ಸಹೋದರಿಯರಾದ ರತ್ನಮ್ಮ- ಮಂಜಮ್ಮ ಸೇರಿದಂತೆ ಮೋನಮ್ಮ, ಸಂಗೀತವ್ವ, ರುಬೀನಾ, ಹಳ್ಳಿಹೈದ ಹನುಮಂತ, ಸುನೀಲ್, ಮೆಹಬೂಬ್ ಸಾಬ್, ಇವರಷ್ಟೇ ಅಲ್ಲ‌ ಬಹುತೇಕ ಗ್ರಾಮೀಣ ಪ್ರತಿಭೆಗಳ ಪರಿಚಯವಾಯ್ತು. ತಮ್ಮೊಳಗಿನ ಪ್ರತಿಭೆ ಅರವಿಟ್ಟ ಇವರೆಲ್ಲರೂ ಕೂಡ ಕರುನಾಡ ಅಂಗಳದಲ್ಲಿ ಮೆರವಣಿಗೆ ಹೋಗಿಬಂದರು. ಇವರಲ್ಲಿ ಗೆಲುವಿನ‌ ಗದ್ದುಗೆ ಏರಿದವರಿಗೆ ಮತ್ತೊಮ್ಮೆ ಅವಕಾಶ ಸಿಗುತ್ತಾ ಕಾದು ನೋಡಬೇಕು.

ಅಂದ್ಹಾಗೇ, ಸರಿಗಮಪ ಚಾಂಪಿಯನ್ ಶಿಪ್ ಗೆದ್ದವರು ಮತ್ತೊಮ್ಮೆ ಗೆಲುವಿದ ಗದ್ದುಗೆಗಾಗಿ ಕಂಠದ ಜೊತೆ ಕಾದಾಡುವಂತಹ ಶೋ. ಸರಿಗಮಪ ಕಿರೀಟ ಮುಡಿಗೇರಿಸಿಕೊಂಡು ವಿಜೃಂಭಿಸಿದವರಿಗೆ ಮತ್ತೊಮ್ಮೆ ಸ್ವರಸಾಮ್ರಾಜ್ಯಕ್ಕೆ ಲಗ್ಗೆ ಇಡುವ ಅವಕಾಶ ಸಿಗುತ್ತಿದೆ. ಮಹಾಗುರುಗಳಾದ
ನಾದಬ್ರಹ್ಮ ಹಂಸಲೇಖ ಅವರೊಟ್ಟಿಗೆ ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಸಾರಥ್ಯದಲ್ಲಿ ಹಲವು ಸಂಗೀತ ದಿಗ್ಗಜರ ಸಮ್ಮುಖದಲ್ಲಿ ಚಾಂಪಿಯನ್ ಶಿಪ್ ಅದ್ದೂರಿ ಓಪನ್ನಿಂಗ್ ಪಡೆದುಕೊಳ್ಳಲಿದೆ. ಹೇಗಿರಲಿದೆ ಗೆದ್ದವರ ಸ್ವರಸಮರ ? ಕಣ್ಣರಳಿಸಿ ಕಾಯ್ತಾಯಿರಿ. ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ.

ಎಂಟರ್‌ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡಿಸೆಂಬರ್‌ನಲ್ಲಿ ಸಿನಿಮಾ ಮದ! ಪ್ರೇಕ್ಷಕರ ಮುಂದೆ ಬರಲು ಮದಗಜ ಜೋರು ತಯಾರಿ…


ಶ್ರೀಮುರಳಿ ಮತ್ತು ಮಹೇಶ್‌ ಕಾಂಬಿನೇಷನ್‌ನ ಮೊದಲ ಸಿನಿಮಾ. ಇನ್ನು, ಉಮಾಪತಿ ನಿರ್ಮಾಣದ ಸಿನಿಮಾ ಅಂದಮೇಲೆ, ಭರ್ಜರಿಯಾಗಿಯೇ ಇರುತ್ತೆ. ನಿರ್ದೇಶಕ ಮಹೇಶ್‌ ತಮ್ಮ ಮೊದಲ ಸಿನಿಮಾ “ಆಯೋಗ್ಯ”ದಲ್ಲೇ ಭರ್ಜರಿ ಸಕ್ಸಸ್‌ ಕಂಡವರು. ಅದೇ ಸಕ್ಸಸ್‌ ಉಳಿಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ “ಮದಗಜ” ಚಿತ್ರಕ್ಕೆ ಹಗಲಿರುಳು ಶ್ರಮಿಸಿದ್ದಾರೆ. ಒಂದೊಳ್ಳೆಯ ತಂಡ ಕಟ್ಟಿಕೊಂಡು ತಾವು ಅಂದುಕೊಂಡಂತೆಯೇ ಸಿನಿಮಾ ಮಾಡಿ ಮುಗಿಸಿದ್ದಾರೆ

ಮದಗಜ ಸದ್ಯದ ಮಟ್ಟಿಗೆ ಬಹು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ಈ ಚಿತ್ರ ಶೀರ್ಷಿಕೆ ಅನಾವರಣದಿಂದಲೇ ಸಾಕಷ್ಟು ಕುತೂಹಲ ಕೆರಳಿಸಿತ್ತು. ಚಿತ್ರೀಕರಣ ನಡೆಯುವ ಸಂದರ್ಭದಲ್ಲೂ ಆ ಕುತೂಹಲ ಉಳಿಸಿಕೊಂಡಿದ್ದು ಸುಳ್ಳಲ್ಲ. ಇತ್ತೀಚೆಗಷ್ಟೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಹೌದು, ಶ್ರೀಮುರಳಿ ಅವರ ಮತ್ತೊಂದು ನಿರೀಕ್ಷಿತ ಸಿನಿಮಾ ಇದು. ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಬಿಡುಗಡೆಯ ತಯಾರಿ ನಡೆಸುತ್ತಿದೆ.

ನಿರ್ದೇಶಕ ಮಹೇಶ್‌ ಅವರು, “ಮದಗಜ” ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಅದರಂತೆಯೇ ಅವರು ಯಶಸ್ವಿಯಾಗಿಯೇ ಚಿತ್ರೀಕರಣ ಮಾಡಿದ್ದಾರೆ. ಕನ್ನಡದಲ್ಲಿ ಮತ್ತೊಂದು ಅದ್ಧೂರಿ ಸಿನಿಮಾ ಇದು. ಅದರಲ್ಲೂ ಶ್ರೀಮುರಳಿ ಮತ್ತು ಮಹೇಶ್‌ ಕಾಂಬಿನೇಷನ್‌ನ ಮೊದಲ ಸಿನಿಮಾ. ಇನ್ನು, ಉಮಾಪತಿ ನಿರ್ಮಾಣದ ಸಿನಿಮಾ ಅಂದಮೇಲೆ, ಭರ್ಜರಿಯಾಗಿಯೇ ಇರುತ್ತೆ. ನಿರ್ದೇಶಕ ಮಹೇಶ್‌ ಅವರು ತಮ್ಮ ಮೊದಲ ಸಿನಿಮಾ “ಆಯೋಗ್ಯ”ದಲ್ಲೇ ಭರ್ಜರಿ ಸಕ್ಸಸ್‌ ಕಂಡವರು. ಅದೇ ಸಕ್ಸಸ್‌ ಉಳಿಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ “ಮದಗಜ” ಚಿತ್ರಕ್ಕೆ ಹಗಲಿರುಳು ಶ್ರಮಿಸಿದ್ದಾರೆ. ಒಂದೊಳ್ಳೆಯ ತಂಡ ಕಟ್ಟಿಕೊಂಡು ತಾವು ಅಂದುಕೊಂಡಂತೆಯೇ ಸಿನಿಮಾ ಮಾಡಿ ಮುಗಿಸಿದ್ದಾರೆ.

ಈಗ “ಮದಗಜ” ಜೋರು ಸದ್ದು ಮಾಡಾಗಿದೆ. ಪ್ರೇಕ್ಷಕರ ಮುಂದೆ ಬರುವುದಕ್ಕೂ ತಯಾರಿ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, “ಮದಗಜ” ಡಿಸೆಂಬರ್‌ನಲ್ಲಿ ದರ್ಶನ ನೀಡಲಿದ್ದಾನೆ. ಅದಕ್ಕಾಗಿ ಚಿತ್ರತಂಡ ಪ್ಲ್ಯಾನ್‌ ಮಾಡುತ್ತಿದೆ. ಈಗಾಗಲೇ ಒಂದು ಸುತ್ತಿನ ಚರ್ಚೆ ಕೂಡ ನಡೆಸಿರುವ ಚಿತ್ರತಂಡ, ಡಿಸೆಂಬರ್‌ ವೇಳೆಗೆ “ಮದಗಜ”ನನ್ನು ಪ್ರೇಕ್ಷಕರ ಮುಂದೆ ತರಬೇಕು ಎಂಬ ಮಾತುಕತೆ ನಡೆದಿದೆ. ಈ ಕಾರಣದಿಂದಲೇ ನಿರ್ದೇಶಕ ಮಹೇಶ್‌ ಅವರು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಇದೊಂದು ಭರ್ಜರಿ ಬಜೆಟ್‌ ಸಿನಿಮಾ. ಅಷ್ಟೇ ಮಾಸ್‌ ಎಲಿಮೆಂಟ್ಸ್‌ ಕೂಡ ಇಲ್ಲಿರಲಿವೆ.

ಶ್ರೀಮುರಳಿ ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್‌ ಕಾಣಿಸಿಕೊಂಡಿದ್ದಾರೆ. ಶ್ರೀಮುರಳಿ ಅವರೊಂದಿಗೆ ಮೊದಲ ಸಲ ತೆರೆ ಹಂಚಿಕೊಳ್ಳುತ್ತಿದ್ದಾರೆ ಆಶಿಕಾ. ಸದ್ಯ ಆಶಿಕಾ ಅವರ ಎರಡು ಲುಕ್‌ ಬಿಡುಗಡೆಯಾಗಿದ್ದು, ಅದೊಂದು ಹಳ್ಳಿ ಹುಡುಗಿಯ ಪಾತ್ರ ಎಂಬುದನ್ನು ಪೋಸ್ಟರ್‌ ಹೇಳಿದೆ. ಇನ್ನೊಂದು ಪೋಸ್ಟರ್‌ ಕೂಡ ಮಾಸ್‌ ಲುಕ್‌ನಲ್ಲಿದೆ. ಅದರಲ್ಲೂ ಆಶಿಕಾ ಅವರು ಕೈಯಲ್ಲಿ ಸಿಗರೇಟ್‌ ಹಿಡಿದು ಧಮ್‌ ಹೊಡಿತಿರೋ ಪೋಸ್ಟರ್‌ ಕೂಡ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ, ತೆಲುಗಿನ ಜಗಪತಿ ಬಾಬು ಅವರಿಲ್ಲಿ ವಿಲನ್‌ ಆಗಿ ನಟಿಸಿದ್ದಾರೆ. ಅವರ ಪಾತ್ರದ ಕುರಿತ ಒಂದು ಟೀಸರ್‌ ಕೂಡ ರಿಲೀಸ್‌ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದಿದೆ. ಮತ್ತೊಂದು ವಿಶೇಷವೆಂದರೆ,
ದಕ್ಷಿಣ ಭಾರತದ ಖ್ಯಾತ ನಟಿ ದೇವಯಾನಿ ‘ಮದಗಜ’ ಚಿತ್ರದ ಮೂಲಕ ಎರಡು ದಶಕದ ಬಳಿಕ ಎಂಟಿರಯಾಗಿದ್ದಾರೆ.

Categories
ಸಿನಿ ಸುದ್ದಿ

ಗಂಧರ್ವ ಲಾಡ್ಜ್- ಬಟ್ಟೆ ಬ್ಯಾಗ್ ಸೀಜ್? ಅಂದು ಸಾಹಿತಿ ನಮ್ ಋಷಿ ಭಾವುಕ- ಇಂದು ಖುಷಿಯ ಪುಳಕ !

ಋಷಿ ಕಳೆದ ಎರಡು ವರ್ಷಗಳ ಹಿಂದೆ ಸಿನಿಮಾ ಸಲುವಾಗಿ ಗಂಧರ್ವ ಲಾಡ್ಜ್ ನಲ್ಲಿದ್ದರು. ಆಗ 300 ಕ್ಕೂ ಹೆಚ್ಚು ಹಾಡುಗಳನ್ನು ಹೋಟೆಲ್ ನಲ್ಲೇ ಗೀಚಿದ್ದರು. ಸಮಸ್ಯೆ ಯಿಂದಾಗಿ ಹೋಟೆಲ್ ಬಿಲ್ 15000 ಕೊಡಲಾಗಲಿಲ್ಲ. ಹಾಗಾಗಿ ಬ್ಯಾಗ್- ಪುಸ್ತಕದ ಬ್ಯಾಗ್ ಹೋಟೆಲ್ ನಲ್ಲಿ ಲಾಕ್ ಆಯ್ತು. ಎರಡು ವರ್ಷ ಅಲ್ಲೇ ಇತ್ತು. ರೂಮ್ ಬಾಯ್ ಋಷಿ ಸಾಹಿತ್ಯ ಮೆಚ್ಚಿ ಕರೆದು ತಮ್ಮ ವೇತನದಲ್ಲಿ ಬಿಲ್ ಕಟ್ಟಿ ಬಟ್ಟೆ, ಗೀತೆಗಳ ಪುಸ್ತಕ ಕೊಟ್ಟಿದ್ದಾನೆ...

ಗಂಧರ್ವ ಲಾಡ್ಜ್- ಬಟ್ಟೆ ಜೊತೆ ಬೆಲೆಕಟ್ಟಲಾಗದ ಸಾಹಿತ್ಯದ ಬ್ಯಾಗ್ ಸೀಜ್ ಕಥೆ ಹೇಳೋ ಮೊದಲು, ಋಷಿಯವರ ಬಗ್ಗೆ ಒಂದು ಸಾಲು. ಋಷಿ
‘ಒಳಿತು ಮಾಡು ಮನುಸ’ ಖ್ಯಾತಿಯ ಗೀತ ರಚನೆಕಾರರು. ಹೃದಯಲ್ಲಿ ಕಲ್ಲಿದ್ದವನಿಗೆ ಇದೆಲ್ಲ ಅಂಟಲ್ಲ ಎನ್ನುವವರೆಲ್ಲಾ ಬದಲಾಗುವಂತಹ ಹಾಡು ಕೊಟ್ಟವರು. ಋಷಿ ರಚಿಸಿದ, ಮಧುರ ನಾಯಿರಿ ಸಂಗೀತ ಸಂಯೋಜಿಸಿದ, ಸಿ. ಅಶ್ವಥ್ ಅವರು ಧ್ವನಿಯಾದ ‘ ಒಳಿತು ಮಾಡು ಮನಸು’ ಹಾಡು ಕೇವಲ ಹಾಡಲ್ಲ ಅದೊಂದು ಸ್ಪೂರ್ತಿಯ ಚಿಲುಮೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಅಷ್ಟಕ್ಕೂ, ಈ‌ ಹಾಡಿನ ಬಗ್ಗೆ ಮಾತನಾಡುವುದಕ್ಕೆ ಕಾರಣ
ಒಳಿತು ಮಾಡು ಮನುಸ ಋಷಿ ಈಗ ಖುಷಿಯಲ್ಲಿದ್ದಾರೆ. ಎರಡು ವರ್ಷಗಳ ನಂತರ ಐದು ಜೊತೆ ಬಟ್ಟೆಯ ಕೈಚೀಲ ಎಲ್ಲದಕ್ಕಿಂತ ಹೆಚ್ಚಾಗಿ ಬೆಲೆಯೇ ಕಟ್ಟಲಾಗದ ಸಾಹಿತ್ಯವಿದ್ದ ಬ್ಯಾಗ್ ಮರಳಿ ಸಿಕ್ಕಿರುವುದು. ಹೋಟೆಲ್ ನ ರೂಮ್ ಬಾಯ್ ಜೋಪಾನ ಮಾಡಿ ಪುನಃ ಋಷಿ ಅವರ ಕೈಗೆ ತಲುಪಿಸಿರುವುದು.

ಹೌದು, ಋಷಿ ಕಳೆದ ಎರಡು ವರ್ಷಗಳ ಹಿಂದೆ ಸಿನಿಮಾ ಸಲುವಾಗಿ ಗಂಧರ್ವ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಒನ್ ವೇ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಹೊತ್ತಿದ್ದ ಋಷಿಯವರು
ಗಂಧರ್ವ ಲಾಡ್ಜ್ ನಲ್ಲೇ ಕಥೆ- ಚಿತ್ರಕಥೆ ಅಂತ ಬ್ಯುಸಿಯಾಗಿದ್ದ ಋಷಿ ಸುಮಾರು 300 ಕ್ಕೂ ಹೆಚ್ಚು ಹಾಡುಗಳನ್ನೇ ಹೋಟೆಲ್ ನಲ್ಲೇ ಕುಳಿತು ಗೀಚಿದ್ದಾರೆ. ಆ ಎಲ್ಲಾ ಹಾಡುಗಳು ಕೂಡ ಒಳಿತು ಮಾಡು ಮನುಸ ಸ್ಟೈಲ್ ನಲ್ಲೇ ರಚನೆಯಾಗಿವೆ. ಆ ಬಗ್ಗೆ ಶೀಘ್ರದಲ್ಲೇ ಋಷಿ ಅವರೇ ಹೇಳ್ತಾರೆ.

ದುರಂತ ಅಂದರೆ ಋಷಿ ನಿರ್ದೇಶಿಸಿದ ಒನ್ ವೇ ಸಿನಿಮಾ ಬಿಡುಗಡೆಗೊಂಡು ನಷ್ಟವಾಯ್ತು. ಎಷ್ಟರ ಮಟ್ಟಿಗೆ ಅಂದರೆ ಉಳಿದುಕೊಂಡಿದ್ದ ಗಂಧರ್ವ ಹೋಟೆಲ್ ಬಿಲ್ ಕೊಡೋದಕ್ಕೆ ಆಗದೇ ಇರುವಷ್ಟು. ಸುಮಾರು 15000 ಕೊಡಬೇಕಿತ್ತು, ಹಣ ಕೊಡಲಿಕ್ಕೆ ಸಾಧ್ಯವಾಗದೇ ಇದ್ದಿದ್ದರಿಂದ ಬಟ್ಟೆ ಬ್ಯಾಗ್- ಪುಸ್ತಕದ ಬ್ಯಾಗ್ ಎಲ್ಲವೂ ಹೋಟೆಲ್ ನಲ್ಲಿ ಲಾಕ್ ಆಯ್ತು. ಎರಡು ವರ್ಷ ಕಳೆದರೂ ದುಡ್ಡು ಹೊಂದಿಸಿಕೊಳ್ಳೋದಕ್ಕೆ ಆಗಲಿಲ್ಲ. ಹೋಗಲಿ ಬಿಡು ಅಂತ ಸುಮ್ಮನಾಗಿದ್ದರು. ಆದರೆ, ಋಷಿ ಗೀಚಿದ್ದ ಸಾಹಿತ್ಯವನ್ನ ಕಣ್ಣಾಡಿಸಿದ ಹೋಟೆಲ್ ರೂಮ್ ಬಾಯ್ ಋಷಿ ಅವರನ್ನ ಮತ್ತೆ ಸಂರ್ಪಕ ಮಾಡಿದ್ದಾರೆ. ಸಾರ್ ಹದಿನೈದು ‌ಸಾವಿರ ನಾನು ಕಟ್ಟುತ್ತೇನೆ ನೀವು ಹೋಟೆಲ್ ಗೆ ಬನ್ನಿ ಎಂದು ಕರೆಸಿಕೊಂಡು ಅವರ ಬಟ್ಟೆ ಬ್ಯಾಗ್ ಜೊತೆಗೆ ಸಾಹಿತ್ಯದ ಹೊತ್ತಗೆಯನ್ನ ಋಷಿ ಅವರ ಕೈಗಿಟ್ಟಿದ್ದಾನೆ.

ಕಳೆದ ಎರಡು ವರ್ಷಗಳಿಂದ ಅದೇ ಹೋಟೆಲ್ ನಲ್ಲಿ ಬಟ್ಟೆ ಹಾಗೂ ಪುಸ್ತಕದ ಚೀಲ ಬಿಟ್ಟು ಕಣ್ಣೀರಾಕುತ್ತಲೇ ಹೊರನಡೆದಿದ್ದ ಋಷಿ ಇವತ್ತು ರೂಮ್ ಬಾಯ್ ಮೂರ್ತಿಯ ಸಹಾಯದಿಂದ
ಖುಷಿಖುಷಿಯಾಗಿ ಬ್ಯಾಗ್ ಸಮೇತ ಹೋಟೆಲ್ ನಿಂದ ಹೊರಬಂದಿದ್ದಾರೆ. ಬಹುಷಃ ಋಷಿ ಅವರ ಕೈಗೆ
ಕೋಟಿ ಕೊಟ್ಟಿದ್ದರೂ ಕೂಡ ಇಂತಹ ಖುಷಿ ಸಿಗುತ್ತಿರಲಿಲ್ಲ ಅನ್ಸುತ್ತೆ. ಸಾವು ಬಂದೇ ಬರುತ್ತೆ ಸಾಯೋದಕ್ಕೆ ಮುಂಚೆ ನಾಲ್ಕು‌ಮಂದಿಗೆ ಸಹಾಯ ಮಾಡಿ ಸಾಯಬೇಕು. ಆಗ ಬದುಕಿದ್ದಕ್ಕೂ ಸಾರ್ಥಕ ಎಂಬುದು ಸಾಹಿತಿ ಋಷಿಯವರ ಧ್ಯೇಯ. ಅದರಂತೇ ಅವರು ಬದುಕುತ್ತಿದ್ದಾರೆ. ಹತ್ತಾರು ಮಂದಿಗೆ ಅವರ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಆದರೆ, ಭಗವಂತ ಸಹಾಯ ಮಾಡುವವರ ಅಕೌಂಟ್ ಗೆ ಅಮೌಂಟ್ ಡೆಪಾಸಿಟ್ ಆಗದೇ ಇರೋ ಥರ ನೋಡಿಕೊಳ್ತಾನೆ. ದೇವರಿಗೆ ಒಳ್ಳೆಯವರ ಮೇಲೆ ಅದ್ಯಾಕಷ್ಟು ಹೊಟ್ಟೆ ಉರಿನೋ ಗೊತ್ತಿಲ್ಲ. ಇನ್ಮೇಲಾದರೂ ಹಲವರ ಬದುಕು ಬದಲಾಯಿಸಿದ ಸಾಹಿತಿ ಋಷಿ ಅವರ ಜೀವನವನ್ನೂ ಭಗವಂತ ಬದಲಾಯಿಸಲಿ. ಋಷಿಗೆ ಸರಸ್ವತಿ ಒಲಿದಂತೆ ಲಕ್ಷ್ಮಿಯೂ ಒಲಿದುಬರಲಿ..

ವಿಶಾಲಾಕ್ಷಿ ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮಂಜಣ್ಣ ಫ್ಯಾನ್ಸ್‌ ಕೇಳ್ತೌರೆ ಮ್ಯಾಟ್ರು ಕ್ಲಿಯರ್‌ ಮಾಡ್ಬುಡು!‌ ಇದು ರೀಲಾ? ರಿಯಲ್ಲಾ!?

ಇಲ್ಲಿಯವರೆಗೆ ಒಂದ್‌ ಲೆಕ್ಕ ಇವತ್ತಿಂದ ಇನ್ನೊಂದ್‌ ಲೆಕ್ಕ. ಇದು ಎಷ್ಟ್‌ ಪಕ್ಕಾನೋ ಗೊತ್ತಿಲ್ಲ. ಆದರೆ, ಬಿಗ್‌ಬಾಸ್‌ ವಿನ್ನರ್ ಮಂಜು ಪಾವಗಡ‌ ಮತ್ತು ದಿವ್ಯಾ ಸುರೇಶ್‌ ಅವರ ಈ ಹೊಸ ಫೋಟೋ ನಯಾ ಲೆಕ್ಕಾಚಾರವನ್ನೇ ಹೇಳುತ್ತಿದೆ. ಹೌದು, ಇವರಿಬ್ಬರ ಜೋಡಿ ಫೋಟೋ ನೋಡಿದವರಿಗಂತೂ ಸಿಕ್ಕಾಪಟ್ಟೆ ಕನ್‌ಫ್ಯೂಷನ್.‌ ಅದರಲ್ಲೂ ಮಂಜು ಪಾವಗಡ ಅಭಿಮಾನಿ ಬಳಗವಂತೂ ಕಕ್ಕಾಬಿಕ್ಕಿ. ಅರೇ ಇದೇನಪ್ಪಾ ವಿಷ್ಯ ಅಂದುಕೊಂಡ್ರಾ? ವಿಷ್ಯ ಇರೋದೇ ಈ ಫೋಟೋದಲ್ಲಿ ಸ್ವಾಮಿ.
ನಾರ್ಮಲ್‌ ಫೋಟೋ ಆಗಿದ್ದರೆ, ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ, ಇವರಿಬ್ಬರು ಕ್ಯಾಮೆರಾ ಮುಂದೆ ನವಜೋಡಿಯಂತೆ ಫೋಸು ಕೊಟ್ಟಿರುವುದರಿಂದ ಅವರ ಫ್ಯಾನ್ಸ್‌ ಸೇರಿದಂತೆ ಎಲ್ಲರೂ ಕೂಡ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದ ಜನ ಇವರಿಬ್ಬರು ಮದ್ವೆ ಆಗ್ತಿದಾರಾ ಅಥವಾ ಬರೀ ಫೋಟೋಗೆ ಫೋಸ್‌ ಕೊಟ್ಟು ಗೊಂದಲ ಸೃಷ್ಟಿಸುತ್ತಿದ್ದಾರಾ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಕೆಲವರು, ಇದು ಸಿನಿಮಾ ಫೋಟೋ ಶೂಟ್‌ ಇರಬಹುದು ಅಥವಾ ಇಬ್ಬರೂ ಸೇರಿ ಹೊಸ ಸೀರಿಯಲ್‌ ಮಾಡ್ತಾ ಇರಬಹುದೇನೋ ಅಂತೆಲ್ಲಾ ಚರ್ಚೆ ಆಗುತ್ತಿದೆ. ಈ ಎಲ್ಲಾ ಅನುಮಾನಕ್ಕೆ ಮತ್ತು ಚರ್ಚೆಗೆ ಇವರಿಬ್ಬರೇ ಉತ್ತರ ಕೊಡಬೇಕಿದೆ.

ಮಂಜು ಪಾವಗಡ ಮತ್ತು ದಿವ್ಯ ಸುರೇಶ್‌ ಇಬ್ಬರು ಸ್ನೇಹಿತರು. ಬಿಗ್‌ಬಾಸ್‌ ಮನೆಯಲ್ಲಿ ಸ್ನೇಹಿತರಾಗಿದ್ದವರು, ಅಲ್ಲಿಂದ ಹೊರ ಬಂದಮೇಲೂ ಸಹ ತಮ್ಮ ಸ್ನೇಹ ಸಂಬಂಧವನ್ನು ಮತ್ತಷ್ಟು ಬಿಗಿ ಮಾಡಿಕೊಂಡಿದ್ದಾರೆ. ದಿವ್ಯ ಸುರೇಶ್‌ ಅಂತೂ “ನನ್‌ ಮಂಜ” ಅಂತ ಊರ್‌ ತುಂಬ ಹೇಳ್ಕೊಂಡ್‌ ಬರ್ತಾ ಇದಾರೆ. ಈ ನನ್‌ ಮಂಜ ಅನ್ನುವುದರ ಒಳ ಮರ್ಮ ಏನೆಂಬುದು ಗೊತ್ತಿಲ್ಲ.

ಅತ್ತ ಮಂಜಣ್ಣ ಕೂಡ ಏನು ಹೇಳ್ತಾ ಇಲ್ಲ. ಹೀಗಾಗಿ ಅಂತೆಕಂತೆಗಳು ನಡೆಯುತ್ತಲೇ ಇವೆ. ಇವರಿಬ್ಬರ ಬಗ್ಗೆ ಜೋರಾದ ಸುದ್ದಿಗಳು ಹರಿದಾಡುತ್ತಲೇ ಇವೆ. ಇವರು ಕೊಟ್ಟಿರುವ ಫೋಟೋ ಫೋಸ್‌ ನೋಡಿಕೊಂಡು ಅದೇನು ಅಂತ ನೀವ್‌ ನೀವೆ ಡಿಸೈಡ್‌ ಮಾಡ್ಕೊಳ್ಳೋದ್‌ ಬಿಟ್ರೆ ಬೇರೆ ದಾರಿ ಇಲ್ಲ.

Categories
ಸಿನಿ ಸುದ್ದಿ

ದೇವರ ಮಗ ಸೂರ್ಯನ ಸಂಗೀತ ಚಿಕಿತ್ಸೆ: ಸೂರ್ಯಕಾಂತ್ ಗೆ ಸ್ವರ್ಗದಿಂದಲೇ ಹಾರೈಸಿರುತ್ತಾರೆ ಸ್ವರ ಭೀಷ್ಮ!

ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತಾರೇ. ಈ ಮಾತಿನಂತೆ ನಡೆದ ಕಾರಣಕ್ಕೆ ಸೂರ್ಯಕಾಂತ್ ಸೂರ್ಯನಂತೆಯೇ ಧಗಧಗಿಸುತ್ತಿದ್ದಾರೆ. ಸೂರ್ಯಕಾಂತ್ ನಂತೆಯೇ ಸಹಸ್ರಾರು ಪ್ರತಿಭೆಗಳು ಪಂಚಾಕ್ಷರಿ ಅಣ್ಣಿಗೇರಿಯವರ ಗರಡಿಯಲ್ಲಿ ಅಕ್ಷರಾಭ್ಯಾಸ ಮಾಡಿ ಸಂಗೀತ ಲೋಕದಲ್ಲಿ ಮಿನುಗುತ್ತಿದ್ದಾರೆ. ಪುಟ್ಟರಾಜ ಗವಾಯಿಗಳ ಗುರುಕುಲದಿಂದ ಲಕ್ಷ ಲಕ್ಷ ಪ್ರತಿಭೆಗಳು ಹೊರಬರುತ್ತಿದ್ದಾರೆ. ಸಂಗೀತ ಲೋಕವನ್ನು ಬೆಳಗುತ್ತಿದ್ದಾರೆ.

ಮೂರೇ ಮೂರು ವಾರಗಳ ಹಿಂದೆ ಸೂರ್ಯಕಾಂತ್ ಸಾಮಾನ್ಯ ಮತ್ತು ಸಾಮಾನ್ಯ ಅಷ್ಟೇ. ಆದರೆ ಅದೇ ಮೂರು ವಾರಗಳು ಕಳೆದು ನಾಲ್ಕನೇ ವಾರ ಶುರುವಾಗುವಷ್ಟರಲ್ಲಿ ಸೂರ್ಯಕಾಂತ್ ಕಲ್ಬುರ್ಗಿಯ ಹೆಮ್ಮೆಯ ಕುವರ, ಕರುನಾಡಿನ ಮನೆಮಗ, ಕೊನೆಗೀಗ ದೇವರ ಮಗ. ನಿಜಕ್ಕೂ ಸೂರ್ಯಕಾಂತ್ ದೇವರ ಮಗನೇ. ಮಾತು ಕೈಕೊಟ್ಟರೂ ಕೂಡ ಕಂಠಕ್ಕೆ ಕಿಚ್ಚು ಹಚ್ಚಿಕೊಂಡು ‘ ಎದೆತುಂಬಿ ಹಾಡುವೆನು’ ಅಖಾಡಕ್ಕೆ ಧುಮ್ಕಿರುವ ಸೂರ್ಯಕಾಂತ್, ಸಂಗೀತ ಲೋಕ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಇಡೀ ಕರುನಾಡ ಮಂದಿಯಿಂದ ಉಘೇ ಉಘೇ ಎನಿಸಿಕೊಂಡಿದ್ದಾರೆ.

ಕನ್ನಡ ನಾಡಿನಲ್ಲಿ ಈ‌ ಪುಣ್ಯ ಭೂಮಿಯಲ್ಲಿ ಅದೆಷ್ಟೋ ಸೂರ್ಯಕಾಂತರಿದ್ದಾರೆ. ಅಷ್ಟು ಮಂದಿ ಸೂರ್ಯಕಾಂತ್ ರಲ್ಲಿ ಕಲ್ಬುರ್ಗಿಯ ಸೂರ್ಯಕಾಂತ್ ಬೆಳಕಿಗೆ ಬರುವುದಕ್ಕೆ, ಎದೆತುಂಬಿ ಹಾಡುವೆನು ಸಂಗೀತ ಸಾಮ್ರಾಜ್ಯದಲ್ಲಿ ಸ್ವರ ಕುಣಿಸುವುದಕ್ಕೆ, ಕರುನಾಡಿನ ಅಂಗಳದಲ್ಲಿ ಮೆರವಣಿಗೆ ಹೊರಡುವುದಕ್ಕೆ ಮೂಲ ಕಾರಣ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಗುರುಗಳಾದ ಪಂಚಾಕ್ಷರಿ ಅಣ್ಣಿಗೇರಿಯವರು. ಇವರು ಸೂರ್ಯಕಾಂತ್ ಕಂಠಕ್ಕಿರುವ ಶಕ್ತಿಯನ್ನ ಗಮನಿಸದೇ ಹೋಗಿದ್ದರೆ, ಹಸಿದ ಹೊಟ್ಟೆಗೆ ಅನ್ನಕೊಟ್ಟು ಸಂಗೀತಭ್ಯಾಸ ಮಾಡಿಸದೇ ಹೋಗಿದ್ದರೆ, ಇವತ್ತು ಸೂರ್ಯಕಾಂತ್
ಗಾನಭೀಷ್ಮ ಎಸ್ ಪಿ.ಬಿಯವರು ಹುಟ್ಟುಹಾಕಿದ ವೇದಿಕೆಗೆ ಬರುತ್ತಿರಲಿಲ್ಲ. ಮಾತು ಬಂದರೂ ಮೂಖರಾಗಿರುವವರಿಗೆ ಸ್ಪೂರ್ತಿಯಾಗುತ್ತಿರಲಿಲ್ಲ.

ಎಲ್ಲಾ ಇದ್ದು ಏನು ಇಲ್ಲವೆಂದು ಕೊರಗುತ್ತಿರುವ ಎಷ್ಟೋ ಮಂದಿಗೆ ಕಲ್ಬುರ್ಗಿಯ ಸೂರ್ಯಕಾಂತ್ ಸ್ಪೂರ್ತಿಯಾಗಿದ್ದಾರೆ. ಆತ್ಮವಿಶ್ವಾಸವೊಂದಿದ್ದರೆ ನ್ಯೂನತೆಗೆ ಮಾತ್ರವಲ್ಲ ದೇವರಿಗೆ ಸೆಡ್ಡುಹೊಡೆದು ಸಾಧನೆ ಮಾಡಬಹುದು ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ. ಮಾತು ಕೈ ಕೊಟ್ಟರೂ ಕಂಠವನ್ನ ಶಾರ್ಪ್ ಮಾಡಿಕೊಂಡಿರುವ ಸೂರ್ಯಕಾಂತ್, ತಮ್ಮ ಧ್ವನಿಯ ಮೂಲಕ ಕೇಳುಗರನ್ನ ಕಟ್ಟಿಹಾಕ್ತಾರೆ, ಮನಸ್ಸನ್ನ ಹಗುರಾಗಿಸ್ತಾರೆ, ಹೃದಯಕ್ಕೆ ಇಂಪು ಪ್ಲಸ್ ತಂಪು ನೀಡ್ತಾರೆ. ಜೊತೆಗೆ ಭಾವುಕರನ್ನಾಗಿ ಮಾಡುತ್ತಾರೆ.‌ ಹೀಗೆ ಸಂಗೀತದ ಚಿಕಿತ್ಸೆ ನೀಡುತ್ತಾ ಸವಾರಿ ಹೊರಟಿರುವ ಸೂರ್ಯಕಾಂತ್, ‘ ಪವಡಿಸು ಪರಮಾತ್ಮ ಶ್ರೀ ವೆಂಕಟೇಶಾ ಅಂತ ಹಾಡಿ ರಘು ದೀಕ್ಷಿತ್, ರಾಜೇಶ್ ಕೃಷ್ಣನ್, ಗುರುಕಿರಣ್ ರನ್ನ ಭಾವುಕರನ್ನಾಗಿಸಿದ್ದಾರೆ. ಹರಿದು ಹೋಗಿರುವ ನನ್ನ ಹೃದಯಕ್ಕೆ ಸಂಗೀತದ ಮೂಲಕ ಹೊಲಿಗೆ ಹಾಕಿಬಿಟ್ಟ. ಇನ್ಮೇಲೆ ಸೂರ್ಯಕಾಂತ್ ನನ್ನ ತಮ್ಮನಿದ್ದಂತೆ ಅವನ ಬೆನ್ನಿಗೆ ನಾನು‌ ನಿಲ್ತೇನೆ ಎಂದಿದ್ದಾರೆ ರಘು ದೀಕ್ಷಿತ್.

ಹಾಡು ಎಲ್ಲರೂ ಹಾಡ್ತಾರೆ. ಆದರೆ, ಭಾವಪರವಶರಾಗಿ ಹಾಡುವವರು ತುಂಬಾ ಅಪರೂಪ.‌ ಆ ಅಪರೂಪದವರಲ್ಲಿ ಸೂರ್ಯಕಾಂತ್ ಕೂಡ ಒಬ್ಬರು ಎನ್ನುವುದು ಪ್ರೂ ಆಗಿದೆ. ‘ಪವಡಿಸು ಪರಮಾತ್ಮ’ ಹಾಡಿನ ಮೂಲಕ ಸ್ವರಸಾಮ್ರಾಜ್ಯದ ದಿಗ್ಗಜರು‌ ಮಾತ್ರವಲ್ಲ ಸ್ವರ್ಗದಲ್ಲಿ ಕುಳಿತು ಎದೆತುಂಬಿ ಹಾಡುವೆನು ಕಾರ್ಯಕ್ರಮ ವೀಕ್ಷಿಸುತ್ತಿರುವ ಗಾನಗಾರುಡಿಗ, ಸ್ವರಭೀಷ್ಮ ಎಸ್. ಪಿ ಬಾಲಸುಬ್ರಹ್ಮಣ್ಯಂ
ಅವರು ಮೆಚ್ಚುವಂತೆ ಭಾವಪೂರ್ಣವಾಗಿ ಹಾಡಿದ್ದಾರೆ. ಇಷ್ಟೊಂದು ಭಾವ ಭಕ್ತಿ ಕಲಿಸಿದ್ದು ಪಂಚಾಕ್ಷರಿ ಅಣ್ಣಿಗೇರಿಯವರು. ಶಿಕ್ಷಕರ ದಿನಾಚರಣೆ ಅಂಗವಾಗಿ ಎದೆತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದರು.
ಗುರುಗಳು ಹಾರ್ಮೋನಿಯಂ ನುಡಿಸಿದರೆ, ಶಿಷ್ಯ ಸೂರ್ಯಕಾಂತ್ ಭಕ್ತಿಪೂರ್ವಕ ಹಾಡಿನ ಮೂಲಕ ಗುರುಭಕ್ತಿ‌ ತೋರಿಸಿದರು.

ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತಾರೇ. ಈ ಮಾತಿನಂತೆ ನಡೆದ ಕಾರಣಕ್ಕೆ ಸೂರ್ಯಕಾಂತ್ ಸೂರ್ಯನಂತೆಯೇ ಧಗಧಗಿಸುತ್ತಿದ್ದಾರೆ. ಸೂರ್ಯಕಾಂತ್ ನಂತೆಯೇ ಸಹಸ್ರಾರು ಪ್ರತಿಭೆಗಳು ಪಂಚಾಕ್ಷರಿ ಅಣ್ಣಿಗೇರಿಯವರ ಗರಡಿಯಲ್ಲಿ ಅಕ್ಷರಾಭ್ಯಾಸ ಮಾಡಿ ಸಂಗೀತ ಲೋಕದಲ್ಲಿ ಮಿನುಗುತ್ತಿದ್ದಾರೆ. ಪುಟ್ಟರಾಜ ಗವಾಯಿಗಳ ಗುರುಕುಲದಿಂದ ಲಕ್ಷ ಲಕ್ಷ ಪ್ರತಿಭೆಗಳು ಹೊರಬರುತ್ತಿದ್ದಾರೆ. ಸಂಗೀತ ಲೋಕವನ್ನು ಬೆಳಗುತ್ತಿದ್ದಾರೆ.

ಕನ್ನಡ ನೆಲದಲ್ಲಿ ಅವಿತಿರುವ ಸಂಗೀತ ಪ್ರತಿಭೆಗಳು ಹೊರಬರಬೇಕು. ಕರುನಾಡಿನಲ್ಲಿ ಕನ್ನಡ ಕಂಠ ಮೊಳಗಬೇಕು ಮತ್ತು ಬೆಳಗಬೇಕು ಎನ್ನುವ ಮಹದಾಸೆಯಿತ್ತು. ಆ ದಿವ್ಯಕನಸಿನಂತೆ ಎಷ್ಟೋ ಪ್ರತಿಭೆಗಳು ಎದೆತುಂಬಿ ಹಾಡುವೆನು ವೇದಿಕೆಯಿಂದ ಬೆಳಕಿಗೆ ಬಂದರು. ಸಂಗೀತ ಲೋಕದಲ್ಲಿ ಮೆರವಣಿಗೆ ಹೊರಟರು. ಈಗ ಮತ್ತೊಂದು ತಂಡ ಸ್ವರಪರೀಕ್ಷೆ ಎದುರಿಸಿ ಕಂಠದ ಜೊತೆ ಕಾದಾಟಕ್ಕೆ ಇಳಿದಿದೆ. ದಕ್ಷಿಣ ಭಾರತದ ಅಗ್ರ ಸಂಗೀತ ಪರಂಪರೆ ಮುಂದುವರೆದಿದೆ. ಕನ್ನಡ ನಾಡಿನ ಪ್ರತಿಭೆಗಳನ್ನ ಪ್ರೋತ್ಸಾಹಿಸುವ, ಬೆಳೆಸುವ ಕಾಯಕ ಎಸ್ ಬಿಯವರ ಕನಸಿನಂತೆ ನೆರವೇರುತ್ತಿದೆ. ಮತ್ತಷ್ಟು ಮಗದಷ್ಟು ಗಾನ ಪ್ರತಿಭೆಗಳು ಕರುನಾಡಿಗೆ ಕೊಡುಗೆಯಾಗಿ ಸಿಗಲಿವೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಗಣೇಶ ಹಬ್ಬಕ್ಕೆ ದಚ್ಚು ಸರ್ಪ್ರೈಸ್!‌ ದರ್ಶನ್‌ ನಟನೆಯ ಹೊಸ ಸಿನಿಮಾದ ಟೈಟಲ್‌ ಅನೌನ್ಸ್‌ ಗುರು…

ಯಜಮಾನ ಸಿನಿಮಾದ ಯಶಸ್ಸಿನ ಬಳಿಕ ಮತ್ತದೇ ತಂಡ ಸೇರಿ ಹೊಸ ಸಿನಿಮಾ ಮಾಡುತ್ತಿರುವ ವಿಷಯ ಗೊತ್ತೇ ಇದೆ. ನಿರ್ಮಾಪಕಿ ಶೈಲಜಾ ನಾಗ್‌ ಅವರು ತಮ್ಮ ಮೀಡಿಯಾ ಹೌಸ್‌ ಸ್ಟುಡಿಯೋ ಬ್ಯಾನರ್‌ನಲ್ಲಿ ದರ್ಶನ್‌ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರವನ್ನು ವಿ.ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ. ಈಗ ಚಿತ್ರದ ಶೀರ್ಷಿಕೆ ಅನೌನ್ಸ್‌ ಮಾಡಲು ತಂಡ ಉತ್ಸಾಹದಲ್ಲಿದೆ. ಸೆಪ್ಟೆಂಬರ್‌ 10ರಂದು ಚಿತ್ರದ ಟೈಟಲ್‌ ಲಾಂಚ್‌ ಆಗುತ್ತಿದೆ. ಇದು ದಚ್ಚು ಫ್ಯಾನ್ಸ್‌ಗೆ ಡಬಲ್‌ ಧಮಾಕ!

ದರ್ಶನ್‌ “ರಾಬರ್ಟ್‌” ಮೂಲಕ ಅಬ್ಬರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಸಿನಿಮಾ ಬಳಿಕ ದರ್ಶನ್‌ ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವೂ ಆಗಲೇ ಸಿಕ್ಕಿತ್ತು. “ಯಜಮಾನ” ಸಿನಿಮಾ ನಿರ್ಮಿಸಿದ್ದ ಶೈಲಜಾನಾಗ್‌ ಅವರಿಗೆ ಮತ್ತೊಂದು ಕಾಲ್‌ ಶೀಟ್‌ ಕೊಟ್ಟಿದ್ದರು ದರ್ಶನ್.‌ ಈಗ ಮತ್ತೆ “ಯಜಮಾನ” ತಂಡವೇ ದರ್ಶನ್‌ ಅವರಿಗೆ ಹೊಸ ಸಿನಿಮಾ ಮಾಡುತ್ತಿದೆ. ಹೌದು, ದರ್ಶನ್‌ ನಾಯಕರಾಗಿ ನಟಿಸಲಿರುವ ಹೊಸ ಚಿತ್ರವನ್ನು ಶೈಲಜಾ ನಾಗ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಸುದ್ದಿ ಎಲ್ಲರಿಗೂ ಗೊತ್ತಿತ್ತು. ಆದರೆ, ಸಿನಿಮಾದ ಶೀರ್ಷಿಕೆ ಏನು ಅನ್ನೋದು ಗೌಪ್ಯವಾಗಿತ್ತು. ಅದಕ್ಕೆ ಈಗ ಸಮಯ ನಿಗದಿಯಾಗಿದೆ.

ದರ್ಶನ್‌ ಅವರು ಹೊಸ ಸಿನಿಮಾ ಮೂಲಕ ಭರ್ಜರಿ ಎಂಟ್ರಿಕೊಡಲು ತಯಾರಿ ನಡೆಸುತ್ತಿದ್ದಾರೆ. ದಚ್ಚು ಅಭಿನಯದ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಸೆಪ್ಟೆಂಬರ್‌ ೧೦ರಂದು ಉತ್ತರ ಸಿಗಲಿದೆ. ಅಂದು ಗಣೇಶ ಹಬ್ಬ. ಅಂದೇ ಡಿಬಾಸ್‌ ಹೊಸ ಸಿನಿಮಾದ ಟೈಟಲ್‌ ರಿವೀಲ್‌ ಆಗುತ್ತಿದೆ. ಈ ಸುದ್ದಿಯನ್ನು ಸ್ವತಃ ನಿರ್ಮಾಪಕಿ ಶೈಲಜಾನಾಗ್‌ ಅವರೇ ತಮ್ಮ ಮುಖಪುಟದಲ್ಲಿ ಹಂಚಿಕೊಂಡಿದ್ದಾರೆ. ಇದು ಸಹಜವಾಗಿಯೇ ದಚ್ಚು ಅಭಿಮಾನಿಗಳಿಗೆ ಸಾಕಷ್ಟು ಖುಷಿಕೊಟ್ಟಿದೆ. ಅಂದಹಾಗೆ, ಇದು ದರ್ಶನ್‌ ಅಭಿನಯದ 55ನೇ ಚಿತ್ರ. ಶೈಲಜಾ ನಾಗ್ ಮತ್ತು ಬಿ. ಸುರೇಶ ಅವರ ಮೀಡಿಯ ಹೌಸ್ ಸ್ಟುಡಿಯೋ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಮತ್ತೊಂದು ನಿರೀಕ್ಷೆಯ ಸಿನಿಮಾ. ನಿರ್ದೇಶಕ ವಿ.ಹರಿಕೃಷ್ಣ ನಿರ್ದೇಶನದ ಜೊತೆಗೆ ಸಂಗೀತವನ್ನೂ ನೀಡುತ್ತಿದ್ದಾರೆ. ಅದೇನೆ ಇರಲಿ, “ಯಜಮಾನ”ದಂತಹ ಸೂಪರ್‌ ಹಿಟ್‌ ಸಿನಿಮಾ ನೀಡಿರುವ ಈ ಟೀಮ್‌ ಮತ್ತೊಮ್ಮೆ ಮೋಡಿ ಮಾಡಲಿದೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ.

ವಿ.ಹರಿಕೃಷ್ಣ ಅವರು ದರ್ಶನ್‌ ಅವರ ಬಹುತೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. “ಯಜಮಾನ” ಮೂಲಕ ಅವರು ನಿರ್ದೇಶಕರಾದರು. ಈಗ ಮತ್ತೆ ದಚ್ಚು ಸಿನಿಮಾ ನಿರ್ದೇಶಿಸುತ್ತಿರುವುದು ವಿಶೇಷ. ಶೈಲಜಾನಾಗ್‌ ನಿರ್ಮಾಣದ ಹತ್ತನೇ ಚಿತ್ರವಿದು ಎಂಬುದು ಇನ್ನೊಂದು ವಿಶೇಷ. ಸದ್ಯ ಚಿತ್ರದ ಶೀರ್ಷಿಕೆ ರಿವೀಲ್‌ ಆಗುತ್ತಿದೆ. ಈ ಬಾರಿಯೂ ಮಜವೆನಿಸುವ ಸಿನಿಮಾ ಕಟ್ಟಿಕೊಡುವ ಉತ್ಸಾಹದಲ್ಲಿ ವಿ.ಹರಿಕೃಷ್ಣ ತಂಡವಿದೆ.

ಇನ್ನು, ನಿರ್ಮಾಪಕಿ ಶೈಲಜಾನಾಗ್‌ ಅವರು ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡಿದವರು. ಈ ಚಿತ್ರವನ್ನೂ ಸಹ ಭರ್ಜರಿಯಾಗಿಯೇ ನಿರ್ಮಿಸುವ ಯೋಚನೆಯಲ್ಲಿದ್ದಾರೆ. ಕೊರೊನಾ ಹಾವಳಿಗೆ ತತ್ತರಿಸಿರುವ ಕನ್ನಡ ಸಿನಿಮಾ ರಂಗ ಮತ್ತೆ ಚೇತರಿಸಿಕೊಳ್ಳುತ್ತಿದೆ. ಈ ಮಧ್ಯೆಯೇ ದಚ್ಚು ಅಭಿನಯದ ಹೊಸ ಸಿನಿಮಾದ ಶೀರ್ಷಿಕೆ ಗಣೇಶ ಹಬ್ಬದಂದು ಅನಾವರಣಗೊಳ್ಳುತ್ತಿರುವುದು ಖುಷಿಕೊಟ್ಟಿದ್ದು, ಚಿತ್ರರಂಗ ಗರಿಗೆದರುವಂತೆ ಮಾಡಿದೆ.

Categories
ಸಿನಿ ಸುದ್ದಿ

ಕಿಚ್ಚನ ಮೇಲಿನ ಅಭಿಮಾನ- ಅಭಿಮಾನಿಯ ಸ್ಟ್ಯಾಂಪ್‌ ಗಿಫ್ಟ್!

ಸುದೀಪ್‌ ಅವರಿಗೆ ದೇಶ ವಿದೇಶಗಳಿಂದಲೂ ಗೌರವ ಸಿಕ್ಕಿದೆ. ಇಡೀ ಭಾರತೀಯ ಚಿತ್ರರಂಗವೇ ಕಿಚ್ಚನ ನಟನೆಯನ್ನು ಕೊಂಡಾಡಿದೆ. ನಟನೆ ಮಾತ್ರವಲ್ಲ, ಮಾನವೀಯತೆ ಗುಣದಲ್ಲೂ ಸೈ ಎನಿಸಿಕೊಂಡಿರುವ ಸುದೀಪ್‌, ತಮ್ಮ ಬಣ್ಣದ ಲೋಕದ ಜೊತೆ ಜೊತೆಯಲ್ಲಿ ಅವರು ಸಾಮಾಜಿಕ ಕೆಲಸವನ್ನೂ ಮಾಡಿಕೊಂಡು ಬಂದವರು. ಈಗಾಗಲೇ ಸರ್ಕಾರ ಹಾಗೂ ಹಲವು ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿ, ಸತ್ಕರಿಸಿವೆ. ಈಗ ಇನ್ನೂ ಒಂದು ಗೌರವ ಸಂದಿದೆ. ಅದು ಅವರ ಪ್ರೀತಿಯ ಅಭಿಮಾನಿಯಿಂದ ಹೌದು, ಸುದೀಪ್‌ ಅಭಿಮಾನಿಯೊಬ್ಬ, ಭಾರತೀಯ ಅಂಚೆ ಇಲಾಖೆಯ ಅಂಚೆ ಚೀಟಿಯಲ್ಲಿ ಸುದೀಪ್‌ ಚಿತ್ರವನ್ನು ಮುದ್ರಿಸಿ, ಸ್ಟ್ಯಾಂಪ್‌ ಬಿಡುಗಡೆ ಮಾಡಿ ಅಭಿಮಾನ ತೋರಿದ್ದಾನೆ.‌


ಹೌದು, ಸುದೀಪ್‌ ಈಗ ಮತ್ತಷ್ಟು ಪ್ರೀತಿಗೆ ಪಾತ್ರರಾಗಿದ್ದಾರೆ. ಸುದೀಪ್‌ ಅವರ ನಟನೆ, ಸಾಮಾಜಿಕ ಕೆಲಸ ಎಲ್ಲವನ್ನೂ ನೋಡಿದ ಭಾರತೀಯ ಅಂಚೆ ಇಲಾಖೆ, ಅವರ ಭಾವಚಿತ್ರ ಇರುವ ಸ್ಟ್ಯಾಂಪ್‌ ಬಿಡುಗಡೆ ಮಾಡಿರುವುದು ವಿಶೇಷ. ಇದು ಅವರಿಗೆ ಸಂದ ಗೌರವ. ಅಂದಹಾಗೆ, ಸುದೀಪ್‌ ಅವರ ಅಭಿಮಾನಿಯೊಬ್ಬ ಸುದೀಪ್‌ ಅವರ ಹೆಸರಲ್ಲಿ ಭಾರತೀಯ ಅಂಚೆ ಇಲಾಖೆಯ “ಮೈ ಸ್ಟ್ಯಾಂಪ್‌ ಸರ್ವೀಸ್‌: ಬಳಸಿ ಸ್ಟ್ಯಾಂಪ್‌ ಮೇಲೆ ಸುದೀಪ್‌ ಚಿತ್ರ ಮುದ್ರಿಸಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾನೆ.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ರವಿ ಎಂಬುವವರು ಸುದೀಪ್‌ ಅವರ ಅಭಿಮಾನಿ. ಅವರು ಭಾರತೀಯ ಅಂಚೆ ಇಲಾಖೆ ನೀಡುವ ಮೈ ಸ್ಟ್ಯಾಂಪ್‌ ಸೇವೆ ಬಳಸಿಕೊಂಡು ಸ್ಟ್ಯಾಂಪ್‌ ಮೇಲೆ ಸುದೀಪ್‌ ಅವರ ಭಾವಚಿತ್ರ ಮುದ್ರಣಗೊಳ್ಳುವಂತೆ ಮಾಡಿದ್ದಾರೆ. ಅವರು ನೂರಕ್ಕೂ ಹೆಚ್ಚು ಸ್ಟ್ಯಾಂಪ್‌ಗಳನ್ನು ಮುದ್ರಿಸಿ ಅವರನ್ನು ನಟ ಸುದೀಪ್‌ ಅವರಿಗೆ ಉಡುಗೊರೆಯಾಗಿ ರವಿ ನೀಡಿದ್ದಾರೆ.
ಸುದೀಪ್‌ ಸದಾ ಹೊಸ ಪ್ರತಿಭೆಗಳನ್ನೂ ಪ್ರೋತ್ಸಾಹಿಸುತ್ತಲೇ ಬಂದವರು. ಇತ್ತೀಚೆಗಷ್ಟೇ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಖುಷಿಗೆ ಅಭಿಮಾನಿ ಈ ಸ್ಟ್ಯಾಂಪ್‌ ನೀಡಿದ್ದಾನೆ.

Categories
ಸಿನಿ ಸುದ್ದಿ

ಶ್ರುತಿ ಹರಿಹರನ್‌ ಮತ್ತೆ ಬಂದ್ರು! ಹೆಡ್‌ಬುಷ್‌ ಸಿನ್ಮಾದಲ್ಲಿ ಪ್ರಮುಖ ಪಾತ್ರ!!


ಮೊನ್ನೆಯಷ್ಟೇ “ಹೆಡ್‌ ಬುಷ್‌” ಸಿನಿಮಾಗೆ ಚಿಟ್ಟೆ ಎಂಟ್ರಿಯಾಗಿದ್ದು ಗೊತ್ತೇ ಇದೆ. ಈಗ ಮತ್ತೊಂದು ಸುದ್ದಿ ಚಿತ್ರತಂಡೆದಿಂದ ಹೊರಬಿದ್ದಿದೆ. ಹೌದು, “ಹೆಡ್‌‌ ಬುಷ್” ಸಿನಿಮಾದಲ್ಲಿ ಶ್ರುತಿಹರಿಹರನ್‌ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರುತಿಹರಿಹರನ್‌ ಅವರದು ಯಾವ ಪಾತ್ರ, ಆ ಪಾತ್ರ ಹೇಗಿರುತ್ತೆ ಅನ್ನೋದು ಸಸ್ಪೆನ್ಸ್.‌ ಅಗ್ನಿ ಶ್ರೀಧರ್‌ ಅವರ ಚಿತ್ರಕಥೆ ಈ ಚಿತ್ರಕ್ಕಿದೆ. ಹಾಗಾಗಿ, ಇಲ್ಲಿ ಬರುವ ಪ್ರತಿ ಪಾತ್ರಗಳು ವಿಭಿನ್ನವಾಗಿರುತ್ತವೆ ಎಂಬುದನ್ನಿಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ. ಶ್ರುತಿಹರಿಹರನ್‌ ಅವರು ಕಳೆದ ಎರಡು ವರ್ಷಗಳ ಹಿಂದೆ ಮೀಟು ಪ್ರಕರಣದಿಂದಾಗಿ ಜೋರು ಸದ್ದು ಮಾಡಿದ್ದರು. ಆದಾದ ಬಳಿಕ ಅವರು ಇಂಡಸ್ಟ್ರಿಯಿಂದಲೇ ದೂರ ಉಳಿದಿದ್ದರು. ಬಹುತೇಕ ಜನ ಶ್ರುತಿಹರಿಹರನ್‌ ಇನ್ಮುಂದೆ ಗಾಂಧಿನಗರದ ಕಡೆ ಮುಖ ಮಾಡೋದಿಲ್ಲ ಅನ್ನುತ್ತಿದ್ದರು. ಅದಕ್ಕೆ ಕಾರಣಗಳೂ ಕೂಡ ಹಲವಾರು ಇದ್ದವು.

ಈಗ ದಿಢೀರನೇ ಶ್ರುತಿಹರಿಹರನ್‌ ಅವ್ರು “ಹೆಡ್‌ ಬುಷ್”‌ ಸಿನಿಮಾಗೆ ಎಂಟ್ರಿಯಾಗುತ್ತಿದ್ದಾರೆ. ಹಾಗಂತ, ಇಲ್ಲಿ ಅವರು ಮರಸುತ್ತುವ ನಾಯಕಿ ಅಂದುಕೊಳ್ಳುವಂತಿಲ್ಲ. ಅಂತಹ ಸೀನ್‌ ಕೂಡ ಇಲ್ಲಿ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ, ಅಗ್ನಿಶ್ರೀಧರ್‌ ಅವರ ಬರಹ ಇಲ್ಲಿರುವುದರಿಂದ ಪ್ರತಿ ಪಾತ್ರಗಳಲ್ಲೂ ಒಂದು ರೀತಿ ರಗಡ್‌ ಆಗಿರುತ್ತೆ. ಶ್ರುತಿಹರಿಹರನ್‌ ಇಲ್ಲಿ ಯಾವ ಪಾತ್ರ ಮಾಡುತ್ತಾರೆ ಅನ್ನುವುದಕ್ಕೆ ಸಿನಿಮಾ ಬಂದ ಮೇಲಷ್ಟೇ ಗೊತ್ತಾಗಲಿದೆ.


ಅಂದಹಾಗೆ, ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್‌ ಬ್ಯಾನರ್‌ನಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೋ ಸೋಮಣ್ಣ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶೂನ್ಯ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಯೋಗಿ ಮತ್ತು ಡಾಲಿ ಧನಂಜಯ್‌ ಕಾಂಬಿನೇಷನ್‌ನಲ್ಲಿ ಚಿತ್ರೀಕರನ ನಡೆದಿದೆ. ಅದೇನೆ ಇರಲಿ, “ಹೆಡ್‌ ಬುಷ್‌” ಆಡೋಕೆ ಇನ್ನು ಯಾರೆಲ್ಲ ಬರ್ತಾರೋ ಅದನ್ನು ಕಾದು ನೋಡಬೇಕಿದೆ.

error: Content is protected !!